ಸೋಮವಾರ, ಏಪ್ರಿಲ್ 30, 2012

ಮಾನವರು ಬುದ್ಧಿವಂತಿಕೆಯಲ್ಲಿ ಅತಿ ಹೆಚ್ಚಿನ ಮುನ್ನಡೆ ಹೊ೦ದಿರುತ್ತಾರೆ

ನಾರ್ವೆ

ನಿಮಗೆ ಗೊತ್ತಾ, ನಾವು ಪದಾರ್ಥ ಮತ್ತು ಚೈತನ್ಯ ಎರಡರಿಂದಲೂ ಮಾಡಲ್ಪಟ್ಟಿದ್ದೇವೆ. ನಮ್ಮ ಶರೀರವು ಕಾರ್ಬೋಹೈಡ್ರೇಟ್, ಖನಿಜಗಳು, ಪ್ರೊಟೀನ್ ಮುಂತಾದವುಗಳಿಂದ ಮಾಡಲ್ಪಟ್ಟಿದೆ ಮತ್ತು ಆತ್ಮವು ಶುದ್ಧ ಚೈತನ್ಯದಿಂದ ಮಾಡಲ್ಪಟ್ಟಿದೆ; ಪ್ರೀತಿ, ದಯೆ, ಕಾಂತೀಯತೆ - ಇವುಗಳೆಲ್ಲಾ ಚೈತನ್ಯದ ಸ್ವಭಾವಗಳು. ಪ್ರಾಚೀನ ಕಾಲದಲ್ಲಿ ಅದನ್ನು ಎರಡು ಶಬ್ದಗಳನ್ನುಪಯೋಗಿಸಿ ಕರೆದರು; ಪ್ರಕೃತಿ ಮತ್ತು ಪುರುಷ (ಅಂದರೆ ಶಕ್ತಿ); ಎರಡು ವಿಷಯಗಳು, ಪ್ರಜ್ಞೆ ಮತ್ತು ಪದಾರ್ಥ. ಆದರೆ ನಂತರ ಒಂದು ಹೆಜ್ಜೆ ಮುಂದೆ ಹೋಗಿ ಅವರಂದರು, "ಎರಡಿಲ್ಲ, ಇದೆಲ್ಲಾ ಒಂದೇ". ಚೈತನ್ಯ ಮತ್ತು ಪದಾರ್ಥಗಳು ಎರಡು ಬೇರೆ ಬೇರೆಯಾದವುಗಳಲ್ಲ, ಆದರೆ ಪ್ರಜ್ಞೆಯು ನಾಲ್ಕು ರೀತಿಗಳಲ್ಲಿ ಕೆಲಸ ಮಾಡುತ್ತದೆ; ಒಂದು ಪ್ರಜ್ಞೆಗೆ ನಾಲ್ಕು ಕೆಲಸಗಳಿವೆ: ಒಬ್ಬ ವ್ಯಕ್ತಿಯಂತೆ, ಒಬ್ಬ ವ್ಯಕ್ತಿಯು ಕಛೇರಿಗೆ ಹೋಗುವಾಗ ಅವನು ಅಧಿಕಾರಿಯಾಗಿರುತ್ತಾನೆ, ಅದೇ ವ್ಯಕ್ತಿಯು ಮಾರ್ಕೆಟಿಗೆ ಹೋಗುವಾಗ ಅವನು ಕೊಂಡುಕೊಳ್ಳುವವನು ಅಥವಾ ಮಾರುವವನಾಗಿರುತ್ತಾನೆ ಮತ್ತು ಅದೇ ವ್ಯಕ್ತಿಯು ಒಂದು ಕ್ಲಾಸಿನಲ್ಲಿ ಕುಳಿತಿರುವಾಗ ವಿದ್ಯಾರ್ಥಿಯಾಗಿರುತ್ತಾನೆ. ಸರಿಯಾ? ಮತ್ತು ಮನೆಯಲ್ಲಿ ಅವನೊಬ್ಬ ತಂದೆ ಅಥವಾ ಒಬ್ಬ ಗಂಡ ಅಥವಾ ಒಬ್ಬ ಮಗ, ಏನಾದರೂ ಆಗಿರುತ್ತಾನೆ. ಅವನು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾನೆ. ಅದೇ ರೀತಿಯಲ್ಲಿ, ಈ ಒಂದು ಪ್ರಜ್ಞೆ, ಅದು ನಾಲ್ಕು ಪ್ರಧಾನ ಪಾತ್ರಗಳನ್ನು ನಿರ್ವಹಿಸುತ್ತದೆ. ಅವುಗಳಲ್ಲಿ ಒಂದು ಪಾತ್ರವೆಂದರೆ ಮನಸ್ಸು. ನೀವೆಲ್ಲರೂ ಇಲ್ಲಿದ್ದೀರಾ? ಕೇಳುತ್ತಿದ್ದೀರಾ? ನೀವಿಲ್ಲಿದ್ದು ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದರೆ, ನಿಮಗೆ ಕೇಳಲು ಸಾಧ್ಯವಿಲ್ಲ. ನಿಮ್ಮ ಕಿವಿಗಳು ತೆರೆದಿರುತ್ತವೆ, ಆದರೆ ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದರೆ, ನಿಮಗೆ ಕೇಳಲು ಸಾಧ್ಯವಿಲ್ಲ. ನೀವು ನನ್ನ ಕಡೆಗೆ ನೋಡುತ್ತಿದ್ದೀರಾ? ನೀವಿಲ್ಲಿದ್ದುಕೊಂಡು, ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದಾಗ, ನಿಮ್ಮ ಕಣ್ಣುಗಳು ನನ್ನನ್ನು ನೋಡುತ್ತಿದ್ದರೂ ಸಹಾ, ನೀವು ನನ್ನನ್ನು ನೋಡುತ್ತಿಲ್ಲ. ಆದುದರಿಂದ ಮನಸ್ಸೆಂದರೆ, ಜ್ಞಾನೇಂದ್ರಿಯಗಳು ಯಾವುದರ ಮೂಲಕ ಗ್ರಹಿಸುತ್ತವೆಯೋ ಮತ್ತು ಅನುಭವಿಸುತ್ತವೆಯೋ, ಪ್ರಜ್ಞೆಯ ಆ ಒಂದು ರೂಪ. ಇದು ಎಲ್ಲಾ ಜೀವಿಗಳಲ್ಲೂ ಇದೆ. ಒಂದು ಜಿರಳೆಯಲ್ಲಿ ಕೂಡಾ, ಮನಸ್ಸು ಅದರ ಮೀಸೆಯಲ್ಲಿಯೂ ಇರುತ್ತದೆ. ಅವುಗಳಿಗೆ ಉದ್ದನೆಯ ಮೀಸೆಗಳಿರುತ್ತವೆ. ಅವುಗಳ ಮೂಲಕ ಜಿರಳೆಗಳು ಗ್ರಹಿಸುತ್ತವೆ. ಅವುಗಳು ಮೀಸೆಗಳ ಮೂಲಕ ಅನುಭವವನ್ನು ಪಡೆಯುತ್ತವೆ. ನಾನು ಮೊದಲೇ ಹೇಳಿದಂತೆ, ಮನಸ್ಸು ಶರೀರದ ಒಳಗಿಲ್ಲ, ಶರೀರವು ಮನಸ್ಸಿನ ಒಳಗಿದೆ. ಮೇಣದ ಬತ್ತಿಯಲ್ಲಿ ಜ್ಯೋತಿಯು ಬತ್ತಿಯ ಸುತ್ತಲಿರುವಂತೆ, ಅಲ್ಲವೇ? ಶರೀರವು ಮೇಣದ ಬತ್ತಿಯ ಬತ್ತಿಯಂತೆ, ಮನಸ್ಸು ಜ್ಯೋತಿಯಂತೆ. ಕೆಲವು ಸಾರಿ ಕರ್ಲಿಯನ್ ಮತ್ತು ಇತರ ಛಾಯಾಗ್ರಹಣಗಳ ಮೂಲಕ ನೀವು ಪ್ರಭೆಯನ್ನು ಕೂಡಾ ನೋಡಬಹುದು. ಆದುದರಿಂದ ಮನಸ್ಸು ಶರೀರದ ಸುತ್ತಲೂ ಹಾಗೂ ಶರೀರದ ಒಳಗೆ ಇದೆ. ಹಾಗಿದ್ದರೂ ಮನಸ್ಸೆಂಬುದು ಗ್ರಹಿಸುವುದು; ಕಿವಿಗಳ ಮೂಲಕ, ಕಣ್ಣುಗಳ ಮೂಲಕ, ಸ್ಪರ್ಶದ ಮೂಲಕ, ವಾಸನೆಯ ಮೂಲಕ; ಆಗ ಅದನ್ನು ನಾವು ಮನಸ್ಸೆಂದು ಕರೆಯುತ್ತೇವೆ. ನಂತರ ಅದೇ ಪ್ರಜ್ಞೆಯು, ಇದನ್ನು ಗ್ರಹಿಸಿದ ನಂತರ, ಅದಕ್ಕೆ ಒಂದು ಲೇಬಲ್ ಕೊಡುತ್ತದೆ, ಇದು ಒಳ್ಳೆಯದು, ಇದು ಒಳ್ಳೆಯದಲ್ಲ, ಇದು ಸುಂದರವಾಗಿದೆ, ಇದು ಸುಂದರವಾಗಿಲ್ಲ, ಇದು ಸರಿ, ಇದು ತಪ್ಪು. ಇದು ಬುದ್ಧಿ - ಪ್ರಜ್ಞೆಯ ಒಂದು ತುಂಬಾ ಪ್ರಧಾನವಾದ ಕೆಲಸ. ಒಂದು ಗ್ರಹಿಸುವಿಕೆ ಮತ್ತು ಇನ್ನೊಂದು ಅರ್ಥ ಮಾಡಿಕೊಳ್ಳುವಿಕೆ, ಅಂದರೆ ಬುದ್ಧಿ: ತೂಗುವುದು, ವ್ಯತ್ಯಾಸ ತಿಳಿಯುವುದು, ಅರ್ಥ ಮಾಡಿಕೊಳ್ಳುವುದು. ನೀವೀಗ ಹೌದು ಎಂದು ಹೇಳುತ್ತಿದ್ದೀರಾ? ಆದು ಬುದ್ಧಿ. ನೀವು ಇಲ್ಲ, ನಾನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೀರಾ? ಪರವಾಗಿಲ್ಲ. ನೀವು ಹೇಳಬಹುದು, ನಾನು ಒಪ್ಪುವುದಿಲ್ಲ, ಆದರೆ ನೀವು ಹಾಗೆ ಹೇಳುತ್ತಿದ್ದೀರೆಂಬುದು ನಿಮಗೆ ತಿಳಿದಿದ್ದರೆ, ಅದು ಬುದ್ಧಿ ಮತ್ತು ಇದು ಎರಡನೆಯ ತುಂಬಾ ಪ್ರಧಾನವಾದ ಕೆಲಸ. ಮಾನವರಿಗೆ ಅತೀ ಹೆಚ್ಚು ಮುಂದುವರಿದ ಬುದ್ಧಿಯಿದೆ. ಇದೊಂದು ಕೊಡುಗೆ. ಪ್ರಾಚೀನ ಕಾಲದ ಅತೀ ಪವಿತ್ರ ಮಂತ್ರಗಳಲ್ಲೊಂದಾದ ಗಾಯತ್ರಿ ಮಂತ್ರವು ಹೇಳುತ್ತದೆ, ಈ ಬುದ್ಧಿಯು ಬುದ್ಧಿಗಿಂತ ಆಚೆಗಿರುವ ಏನೋ ಒಂದರಿಂದ, ದೈವಿಕತೆಯಿಂದ ಸ್ಫೂರ್ತಿಗೊಳ್ಳಲಿ. ಆದು ಪ್ರಾರ್ಥನೆ, ನನ್ನ ಬುದ್ಧಿಯು ದೈವಿಕತೆಯಿಂದ ಸ್ಫೂರ್ತಿಗೊಳ್ಳಲಿ. ಆದರರ್ಥ, ನಾನು ಮಾಡುವುದೆಲ್ಲವೂ ಸಂಪೂರ್ಣವಾಗಲು ಶುದ್ಧವಾದ ಯೋಚನೆಗಳು ಬರಲಿ, ನನ್ನ ಬುದ್ಧಿಯ ಮೂಲಕ ಸರಿಯಾದ ನಿರ್ಣಯಗಳು ಬರಲಿ, ನನ್ನಲ್ಲಿ ಅಂತಃಸ್ಫುರಣವು ಅಭಿವೃದ್ಧಿಯಾಗಲಿ. ಒಂದು ತಡೆಯಾಗುವುದು ಬುದ್ಧಿಯೇ; ಸಂಶಯವನ್ನು ಸೃಷ್ಟಿಸುವುದು ಬುದ್ಧಿಯೇ; ಅದುವೇ ನಿಮಗೆ ತಪ್ಪು ಕಲ್ಪನೆಗಳನ್ನು ಕೊಡುವುದು ಮತ್ತು ಅಂತಃಸ್ಫುರಣವನ್ನು ಆವರಿಸುವುದು. ನಿಮಗೆ ಒಂದು ಒಳ್ಳೆಯ ಅಂತಃಸ್ಫುರಣವಿದೆಯೆಂದಿಟ್ಟುಕೊಳ್ಳಿ ಮತ್ತು ನೀವು ಸ್ವೀಡನ್ನಿನಲ್ಲಿ ಒಬ್ಬರನ್ನು ಭೇಟಿಯಾಗಬೇಕೆಂದು ಹೇಳುತ್ತೀರಿ. ನೀವು ಹೇಳುತ್ತೀರಿ, ಸರಿ, ನಾನು ಆ ವ್ಯಕ್ತಿಯನ್ನು ಭೇಟಿಯಾಗುತ್ತೇನೆ. ನಿಮಗೊಂದು ಒಳ್ಳೆಯ ಉದ್ದೇಶವಿರುತ್ತದೆ ಆದರೆ ಬುದ್ಧಿಯು ಬಂದು ಹೇಳುತ್ತದೆ, ಇಲ್ಲ, ಅದು ಸಾಧ್ಯವಾಗಲಿಕ್ಕಿಲ್ಲ. ನಮಗೆ ಅದನ್ನು ಮಾಡಲು ಸಾಧ್ಯವಾಗದು. ಆದುದರಿಂದ ನಿಮ್ಮ ಬುದ್ಧಿಯು ಅಂತಃಸ್ಫುರಣವನ್ನು ಮುಚ್ಚುತ್ತದೆ ಮತ್ತು ಅದರ ಮನಸ್ಸನ್ನು ಹಾಕುತ್ತದೆ ಮತ್ತು ಆಗಲೇ ನಾವು ತಪ್ಪುಗಳನ್ನು ಮಾಡುವುದು. ನೀವಂದುಕೊಳ್ಳುತ್ತೀರಿ ಈ ವ್ಯಕ್ತಿಯು ಒಳ್ಳೆಯವನಲ್ಲ, ಅಥವಾ ಆ ವ್ಯಕ್ತಿಯು ಒಳ್ಳೆಯವನೆಂದು. ಬುದ್ಧಿಯು ಅಂತಃಸ್ಫುರಣದಿಂದ ಅಥವಾ ಆಂತರಿಕ ಪ್ರಜ್ಞೆಯಿಂದ ಬಿಡಿಸಿಕೊಂಡರೆ, ಈ ಎಲ್ಲಾ ನಿರ್ಣಯಗಳು ವಾಸ್ತವವಾಗಿರಬೇಕೆಂದೇನೂ ಇಲ್ಲ. ಆದನ್ನು ಚಿತ್ತ ಎಂದು ಕರೆಯುತ್ತಾರೆ, ಪ್ರಜ್ಞೆ. ಮನಸ್ಸು, ಬುದ್ಧಿ, ಮತ್ತು ನಂತರ ಬರುವುದು ನೆನಪು. ನಮ್ಮ ಮನಸ್ಸು ಹೆಚ್ಚಾಗಿ ನೆನಪುಗಳಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ನೀವು ಯಾವುದಾದರೂ ಒಳ್ಳೆಯದನ್ನು ನೋಡಿದರೆ, ನಿಮಗೆ ಹಿಂದೆ ನೋಡಿದ ಏನೋ ಒಂದು ನೆನಪಾಗುತ್ತದೆ. ಯಾವುದಾದರೂ ಕೆಟ್ಟದನ್ನು ನೀವು ನೋಡಿದರೆ, ನಿಮಗೆ ಹಿಂದಿನ ಏನೋ ಒಂದು ಕೆಟ್ಟದು ನೆನಪಿಗೆ ಬರುತ್ತದೆ. ಆದುದರಿಂದ ಮನಸ್ಸು ನೆನಪಿನೊಳಗೆ ಕೂಡಿ ಹಾಕಲ್ಪಡುತ್ತದೆ, ಅಥವಾ ನಿಮ್ಮ ನೆನಪು ಅಧಿಕಾರ ನಡೆಸುತ್ತಿದ್ದರೆ, ಅದುವೇ ಆಗುವುದು. ನೆನಪು ಪ್ರಧಾನವಾದುದು. ಇದು ಮೂರನೆಯ ಕೆಲಸ. ನಂತರ ಇರುವುದು ಅಹಂಕಾರ - ನಾನು, ಅದು ನಾಲ್ಕನೆಯ ಕೆಲಸ. ಇವುಗಳು ಒಂದು ಪ್ರಜ್ಞೆಯ ನಾಲ್ಕು ವಿಭಿನ್ನ ಕೆಲಸಗಳು. ಆದರೂ ಪ್ರಜ್ಞೆಯು ಆ ಎಲ್ಲಾ ನಾಲ್ಕಕ್ಕಿಂತಲೂ ಆಚಿನದು. ಆದುದರಿಂದಲೇ ಅದು ಮಹತ್ ಎಂದು ಕರೆಯಲ್ಪಡುವುದು; ಅದರರ್ಥ ಮಹತ್ತಾದುದು ಎಂದು. ಆದುದರಿಂದ ನೀವು ಅಹಂಕಾರವನ್ನು ದಾಟಿ ಹೋಗಲು ಸಾಧ್ಯವಾದರೆ, ಆಗ ನಿಮ್ಮಲ್ಲಿ ಬದಲಾಗದೇ ಇರುವ ಆ ಏನೋ ಒಂದು, ಯಾವುದು ಎಲ್ಲಾ ಕಡೆಯೂ ಇದೆಯೋ ಆದರೆ ಎಲ್ಲೂ ಇಲ್ಲವೋ; ನೀವು ಅದನ್ನು ಅನುಭವಿಸುತ್ತೀರಿ ಮತ್ತು ನೀವು ಮಹತ್ತಾಗುತ್ತೀರಿ. ನೀವು ಮಹಾತ್ಮರಾಗುತ್ತೀರಿ. ನೀವು ಮಹಾತ್ಮಾ ಗಾಂಧಿಯ ಬಗ್ಗೆ ಕೇಳಿದ್ದೀರಾ? ಮಹಾತ್ಮಾ ಎಂಬುದು ಗಾಂಧಿಗೆ ಜನರು ನೀಡಿದ ಒಂದು ಬಿರುದು. ಪ್ರತಿಯೊಬ್ಬ ಸಂತನೂ ಮಹಾತ್ಮಾ ಎಂದು ಕರೆಯಲ್ಪಡುತ್ತಾನೆ, ಅಂದರೆ ಅವನು ಅಹಂಕಾರವನ್ನು ದಾಟಿ ಹೋಗಿದ್ದಾನೆ. ಅವನು ಮನಸ್ಸು, ಬುದ್ಧಿ, ನೆನಪು, ಅಹಂಕಾರದಿಂದ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ, ಮಹತ್; ಅಂದರೆ, ಅವನು ಎಲ್ಲರೊಂದಿಗೂ ನಿಸ್ಸಂಕೋಚದಿಂದುರುತ್ತಾನೆ. ಅದು ಆತ್ಮಸಾಕ್ಷಾತ್ಕರ- ನೀವು ಎಲ್ಲರೊಂದಿಗೂ ಅನಾಯಾಸವಾಗಿ ಬೆರೆಯುವಿರಿ; ನಿಮಗೆ ಬೇರೆಯವರು ಎಂದಿಲ್ಲ. ನೀವು ಪುನಃ ಮಕ್ಕಳಂತಾಗುತ್ತೀರಿ ಮತ್ತು ಆ ಕ್ಷಣದಲ್ಲಿ ಜೀವಿಸುತ್ತೀರಿ. ಯಾವುದೂ ನಿಮಗೆ ನೋವುಂಟುಮಾಡುವುದಿಲ್ಲ; ಎಲ್ಲವೂ ನಿಮ್ಮ ಭಾಗವಾಗಿರುತ್ತದೆ, ಉದಾರತೆ ಮತ್ತು ಸಂಪೂರ್ಣ ಶಾಂತಿ. ನೀವು ಶರೀರ ನನ್ನದೆಂದು ಮಾತ್ರ ಹೇಳುವುದಿಲ್ಲ ಆದರೆ ಆ "ನಾನು" ಎಲ್ಲಾ ಕಡೆಯೂ ಇರುತ್ತದೆ. ಇದು ಕೇವಲ ಒಂದು ಶಬ್ದ ಪ್ರಯೋಗ. ನೋಡಿ, ಟಿವಿಯಲ್ಲಿ ನೀವು ಒಂದು ಚ್ಯಾನೆಲ್ಲನ್ನು ನೋಡುತ್ತೀರಿ ಅಥವಾ ನೀವು ಬಿಬಿಸಿ ಯನ್ನು ನೋಡುತ್ತಿರುತ್ತೀರಿ. ನೀವು ಬಿಬಿಸಿ ಯನ್ನು ಆ ಚಿಕ್ಕ ಪೆಟ್ಟಿಗೆಯಲ್ಲಿ ನೋಡುತ್ತಿದ್ದರೂ ಸಹಾ, ಬಿಬಿಸಿಯು ಆ ಪೆಟ್ಟಿಗೆಯಲ್ಲಿ ಮಾತ್ರವೇ ಇರುವುದೇ? ಈಲ್ಲ, ಬಿಬಿಸಿ ಚ್ಯಾನೆಲ್, ಆ ಕಂಪನ, ಆ ತರಂಗವು ಕೋಣೆಯಲ್ಲೆಲ್ಲ್ಲಾ ಇದೆ, ಅದು ಎಲ್ಲೆಡೆಯೂ ಇದೆ. ನೀವು ಟಿವಿಯನ್ನು ನಿಲ್ಲಿಸಿದರೂ, ಆಗಲೂ ಬಿಬಿಸಿ ತರಂಗಗಳು ಎಲ್ಲೆಡೆಯೂ ಇರುತ್ತವೆ. ಆದರೆ ಟಿವಿಯು ಅದನ್ನು ಅಭಿವ್ಯಕ್ತಗೊಳಿಸುತ್ತದೆ ಮತ್ತು ಅದನ್ನು ತುಂಬಾ ಚೆನ್ನಾಗಿ ಪ್ರದರ್ಶಿಸುತ್ತದೆ. ಅದೇ ರೀತಿಯಲ್ಲಿ ನಮ್ಮ ಶರೀರಗಳು ಕೇವಲ ಟಿವಿ ಪೆಟ್ಟಿಗೆಗಳು. ನೀವು ನನ್ನೊಂದಿಗಿದ್ದೀರಾ? ನಿಮ್ಮ ಶರೀರವು ಒಂದು ಟಿವಿ ಸೆಟ್. ನಿಮ್ಮ ಪ್ರಜ್ಞೆಯು ಆ ತರಂಗ. ಆದುದರಿಂದ, ಇದು ಹೇಗೆಂದರೆ, ನೀನು ಬಿಬಿಸಿ, ಅವಳು ಸಿ.ಯನ್.ಯನ್, ಮತ್ತು ಆ ವ್ಯಕ್ತಿಯು ಎಫ್.ಒ.ಎಕ್ಸ್ ಮತ್ತು ಇನ್ನೊಬ್ಬರು ಮನರಂಜನಾ ಚ್ಯಾನೆಲ್. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮದೇ ಆದ ಫ್ರೀಕ್ವೆನ್ಸಿಯಿದೆ, ಆದರೆ ಅದರರ್ಥ ನಾವು ಇಲ್ಲಿಯೇ ಸಿಕ್ಕಿಹಾಕಿಕೊಂಡಿದ್ದೇವೆಂದಲ್ಲ. ಇದು ಕೇವಲ ಒಂದು ಪಡೆಯುವ ಸೆಟ್ ಅಥವಾ ಕಳುಹಿಸುವ ಸೆಟ್. ಆದರೆ ತರಂಗಗಳು ಎಲ್ಲೆಡೆಯಿವೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಆದುದರಿಂದ ನಮ್ಮ ಪ್ರಜ್ಞೆಯು ಎಲ್ಲೆಡೆಯಿದೆ. ನಾನು ನಿನ್ನೆ ಹೇಳಿದಂತೆ, ಶುದ್ಧ ವಿಜ್ಞಾನ ಮತ್ತು ಅನ್ವಯಿಸಲಾದ ವಿಜ್ಞಾನ ಎಂದಿವೆ. ನಮ್ಮಲ್ಲಿ ಎರಡೂ ಇರಬೇಕು. ಅವುಗಳು ಪರಸ್ಪರ ಪೂರಕವಾಗಿವೆ. ಶುದ್ಧ ವಿಜ್ಞಾನವೆಂದರೆ, ಈ ಒಂದು ಪ್ರಜ್ಞೆಯನ್ನು ತಿಳಿಯುವುದು - "ನಾನು ಅದು" ಮತ್ತು ಆರಾಮವಾಗಿರುವುದು, ವಿಶ್ರಾಂತಿ ತೆಗೆದುಕೊಳ್ಳುವುದು - ಅದು ಧ್ಯಾನ ಮತ್ತು ಅದು ಯೋಗ. ನಿಮ್ಮೊಂದಿಗೇ ಪುನಃ ಒಂದುಗೂಡುವುದು ಯೋಗ. ಅದು, ನೀವಲ್ಲದ ಏನೋ ಒಂದರ ಜೊತೆ ಒಂದುಗೂಡುವುದಲ್ಲ. ಅದು ಕೇವಲ ನಿಮ್ಮ ಕಡೆಗೆ ಬಗ್ಗುವುದು - ಪುನಃ ಒಂದುಗೂಡುವುದು. ಆ ವೃತ್ತವನ್ನು ಪೂರ್ಣಗೊಳಿಸುವುದೇ ಯೋಗ. ಮಕ್ಕಳಾಗಿ ನೀವೆಲ್ಲರೂ ಯೋಗಿಗಳಾಗಿದ್ದಿರಿ. ಪ್ರತಿಯೊಂದು ಮಗುವೂ ಒಂದು ಯೋಗಿ. ನಾವು ಎಲ್ಲಾ ಯೋಗಾಸನಗಳನ್ನು ಮಾಡಿದ್ದೆವು, ನಾವು ವರ್ತಮಾನದ ಕ್ಷಣದಲ್ಲಿ ಜೀವಿಸಿದ್ದೆವು ಮತ್ತು ಒಂದು ಮಗುವಾಗಿ ನಮ್ಮ ಮನಸ್ಸು ತಾಜಾ ಹಾಗೂ ಜೀವಂತಿಕೆಯಿಂದ ಕೂಡಿತ್ತು. ನಾವು ತುಂಬಾ ಜೋಡಲ್ಪಟ್ಟ ಭಾವನೆಯನ್ನು ಹೊಂದಿದ್ದೆವು ಮತ್ತು ಹಾಯಾಗಿದ್ದೆವು, ತುಂಬಾ ಪ್ರೀತಿಯಿಂದ ತುಂಬಿದ್ದೆವು. ಎಲ್ಲೋ ಸಾಲಿನಲ್ಲಿ ಒಂದು ಕಡೆ ನಾವು ಹೊರಗೆ, ಹೊರಗೆ ಮತ್ತು ಹೊರಗೆ ಹೋಗಲು ಶುರು ಮಾಡಿದೆವು. ಉಪನಿಷತ್ತುಗಳಲ್ಲೊಂದರಲ್ಲಿ ಋಷಿಗಳೊಬ್ಬರು ಹೇಳುತ್ತಾರೆ, "ಇಂದ್ರಿಯ ಜ್ಞಾನಗಳು ಹೊರಗೆ ಮಾತ್ರ ಹೋಗುವಂತೆ ಮಾಡಿ ದೇವರು ಒಂದು ದೊಡ್ಡ ಪ್ರಮಾದ ಮಾಡಿದ್ದಾರೆ. ನಮ್ಮ ಇಂದ್ರಿಯ ಜ್ಞಾನಗಳು ಹೊರಗಡೆ ಮಾತ್ರ ಹೋಗುತ್ತವೆ. ಆದರೆ, ಒಂದೊಂದು ಸಾರಿ ಕೆಲವು ಧೈರ್ಯವಂತ ಜನರು ಇಂದ್ರಿಯ ಜ್ಞಾನಗಳನ್ನು ಒಳಮುಖವಾಗಿ ತಿರುಗಿಸಿಕೊಂಡು ವಾಸ್ತವ ಸತ್ಯವನ್ನು ಕಂಡುಹಿಡಿಯುತ್ತಾರೆ", ಮತ್ತು ಅದು ಯೋಗವೆಂದು ಅವರು ಹೇಳುತ್ತಾರೆ. ಅದು ತುಂಬಾ ಸತ್ಯ! ನಮ್ಮ ಮನಸ್ಸು ಹೊರಗೆ ಹೋಗುವಂತೆ ಮಾಡಲಾಗಿದೆ. ಆದರೆ ಕೆಲವು ಸಾರಿ ನೀವು ಅದನ್ನು ಒಳಮುಖವಾಗಿ ತಿರುಗಿಸಬೇಕು. ಈಗ ಹೆಚ್ಚು ಹೆಚ್ಚು ಜನರು ಕಲಿಯುತ್ತಿದ್ದಾರೆ ಮತ್ತು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಅಂತರ್ಮುಖಿಗಳಾಗಿ ಅಲ್ಲಿ ಶಾಂತಿಯನ್ನು ಪಡೆಯುವುದು ಹೇಗೆಂದೂ, ಅದು ಹೊರಗಡೆಯಿಂದ ಸಿಗುವಂತಹದ್ದಲ್ಲವೆಂದೂ ತಿಳಿದಿದ್ದಾರೆ. ಆದುದರಿಂದ ಪ್ರತಿಯೊಂದು ಮಗುವೂ ಒಂದು ಯೋಗಿಯಾಗಿದೆ ಮತ್ತು ನಾವು ಹುಟ್ಟು-ಯೋಗಿಗಳಾಗಿದ್ದೇವೆ. ಎಲ್ಲೋ ನಾವು ಆ ಮುಗ್ಧತೆಯನ್ನು ಕಳೆದುಕೊಂಡಿದ್ದೇವೆ. ಅದಕ್ಕೆ ಮರಳಿ ಹೋಗಲು, ಆ ಸರಳತೆಯನ್ನು, ನಾವಾಗಿರುವ ಆ ಮುಗ್ಧತೆಯನ್ನು ಪುನಃ ಪಡೆಯಲು ನಾವು ಈ ಎಲ್ಲಾ ವ್ಯಾಯಾಮಗಳನ್ನು, ಧ್ಯಾನವನ್ನು ಮಾಡುತ್ತೇವೆ. ಈಗ, ಅದನ್ನು ಸಾಧಿಸಲು ಹಲವಾರು ಮಾರ್ಗಗಳಿವೆ. ನಾನು ಅವುಗಳನ್ನು ವಿವರಿಸಲು ಹೋಗುವುದಿಲ್ಲ. ಒಬ್ಬ ಆರಂಭಿಗನ ಮೇಲೆ ಪರಿಣಾಮ ಬೀರುವುದೆಂದರೆ, ಖಂಡಿತವಾಗಿ, ಪರಿಸರ - ಒಂದು ಉತ್ತಮ ಶಾಂತ ವಾತಾವರಣದಲ್ಲಿರುವುದು ಒಳ್ಳೆಯದು ಮತ್ತು ಆಹಾರದ ಬಗ್ಗೆಯೂ ಗಮನ ಕೊಡುವುದು ಒಳ್ಳೆಯದು. ಆಹಾರವು ಕೂಡಾ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆಯುರ್ವೇದವೆಂಬುದು, ಯಾವ ರೀತಿಯ ಜನರಿಗೆ ಯಾವ ರೀತಿಯ ಆಹಾರ ಸರಿ ಹೋಗುತ್ತದೆ ಎಂದು ಹೇಳುವ ಒಂದು ಉತ್ತಮ ವಿಜ್ಞಾನ. ನಿಮ್ಮ ವಾತ, ಪಿತ್ತ ಮತ್ತು ಕಫಗಳೇನು ಮತ್ತು ಯಾವ ರೀತಿಯ ಆಹಾರ ನಿಮಗೆ ಒಳ್ಳೆಯದು - ಇದರ ಬಗ್ಗೆ ಒಂದು ಸಂಪೂರ್ಣ ವಿಜ್ಞಾನವಿದೆ. ಜೈನ ಪದ್ಧತಿ ಕೂಡಾ ಆಹಾರದ ಬಗ್ಗೆ ಬಹಳ ಸಂಶೋಧನೆ ಮಾಡಿದೆ. ಆದರೆ ಅದು ಅಂತ್ಯವಿಲ್ಲದುದು. ನೀವು ಅದನ್ನು ವಿವರವಾಗಿ ತಿಳಿಯಲು ಹೋದರೆ, ನೀವು ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಆದುದರಿಂದ ನಾನು ಹೇಳುವುದೆಂದರೆ, ನಾವು ಇದನ್ನು ಅತಿಯಾಗಿ ಮಾಡಬಾರದು. ನಾವು ಸಮತೋಲನವುಳ್ಳವರಾಗಿರಬೇಕು. ಒಂದು ಕಡೆಯಲ್ಲಿ ತಾವೇನು ತಿನ್ನುತ್ತಿರುವರೆಂಬುದರ ಬಗ್ಗೆ ಕಾಳಜೆ ವಹಿಸದ ಜನರಿದ್ದಾರೆ ಮತ್ತು ಅವರು ಸುಮ್ಮನೇ ಎಲ್ಲವನ್ನೂ ಹೊಟ್ಟೆಗೆ ತುಂಬಿಸಿ ನರಳುತ್ತಾರೆ. ಇನ್ನೊಂದು ಕಡೆಯಲ್ಲಿ, ಎಲ್ಲಾ ಸಮಯದಲ್ಲೂ ಹೆಕ್ಕಿ, ಆಯ್ಕೆ ಮಾಡುವ ಜನರಿದ್ದಾರೆ, ಎಲ್ಲಾ ಸಮಯದಲ್ಲೂ ಹೆಕ್ಕುವುದು, "ಓ, ಇದು ಸಕ್ಕರೆ, ನಾನು ಇದನ್ನು ತಿನ್ನಲು ಸಾಧ್ಯವಿಲ್ಲ ಮತ್ತು ನಾನು ಅದನ್ನು ತಿನ್ನಲು ಸಾಧ್ಯವಿಲ್ಲ" ಮತ್ತು ಹಗಲು ರಾತ್ರಿ ಅವರು ತಮ್ಮ ಆಹಾರದ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಅದು ಕೂಡಾ ಒಳ್ಳೆಯದಲ್ಲ ಯಾಕೆಂದರೆ ನಿಮ್ಮ ಶರೀರಕ್ಕೆ ಅನಂತವಾದ ಬಗ್ಗುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಆದುದರಿಂದ ನೀವು, ಕೆಲವು ಅಹಾರಗಳು ನಿಮಗೆ ಒಳ್ಳೆಯದಲ್ಲ ಎಂದು ಯೋಚಿಸಿದರೆ ಮತ್ತು ನೀವು ಅವುಗಳನ್ನು ತಿನ್ನದಿದ್ದರೆ, ಆಗ ನಿಮ್ಮ ಶರೀರವು ಅದೇ ರೀತಿ ಕೆಲಸ ಮಾಡುತ್ತದೆ. ಅದು ಅದರ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ ನೀವು ಎಲ್ಲಾ ಸಮಯದಲ್ಲೂ ತುಂಬಾ ಪೂರಕ (ಸಪ್ಲಿಮೆಂಟ್)ಗಳನ್ನು ಬಳಸುತ್ತಿದ್ದರೆ ಅದು ಕೂಡಾ ಒಳ್ಳೆಯದಲ್ಲ! ಪೂರಕಗಳು ಕೆಲವು ಸಲ ಬಳಸಲು ಒಳ್ಳೆಯದು. ನಿಮಗೆ ಗೊತ್ತಿದೆಯಾ, ಜನರು ನನಗಾಗಿ ಹಲವಾರು ಪೂರಕಗಳನ್ನು ತರುತ್ತಾರೆ. ನೀವು ನನ್ನ ಪೆಟ್ಟಿಗೆಯನ್ನು ನೋಡಿದರೆ, ಅಲ್ಲಿ ಹಲವಾರು ಪೂರಕಗಳಿರುತ್ತವೆ, ಆದರೆ ನಾನು ಪೂರಕಗಳನ್ನು ತೆಗೆದುಕೊಳ್ಳುವುದರಲ್ಲಿ ಹಿಂದೆ. ನಾನು ಅದನ್ನು ಪ್ರತಿದಿನವೂ ಉಪಯೋಗಿಸುವುದಿಲ್ಲ. ಕೆಲವೊಮ್ಮೆ ನಾನು ಈ ಪೂರಕಗಳನ್ನು ಮತ್ತು ಕೆಲವೊಮ್ಮೆ ಆ ಪೂರಕಗಳನ್ನು ತೆಗೆದುಕೊಳ್ಳುತ್ತೇನೆ. ಜನರನ್ನುತ್ತಾರೆ, ಕಿಣ್ವಗಳು ಒಳ್ಳೆಯದು, ಖನಿಜಗಳು ಒಳ್ಳೆಯದೆಂದು. ಹೌದು, ಅವುಗಳು ಒಳ್ಳೆಯದು ಆದರೆ ನನಗನಿಸುತ್ತದೆ, ನಾವು ಅತಿಯಾಗಿ ಪೂರಕಗಳನ್ನು ತೆಗೆದುಕೊಳ್ಳಬಾರದೆಂದು. ಪೂರಕಗಳು ಅಗತ್ಯವಾಗಿವೆ ಯಾಕೆಂದರೆ ಇವತ್ತು ಅಹಾರವನ್ನು ಬೆಳೆಯುವ ರೀತಿಯು ಬಹಳ ವ್ಯತ್ಯಸ್ತವಾಗಿದೆ. ಆಹಾರವನ್ನು ಬೆಳೆಯುವ ಮೂಲ ರೀತಿ ಇದಾಗಿರಲಿಲ್ಲ. ನಾನೆಲ್ಲೋ ಓದಿದ್ದೇನೆ, ಇವತ್ತಿನ ಬಾಳೆಹಣ್ಣುಗಳಲ್ಲಿ, ೧೯ನೆಯ ಶತಮಾನದ ಆರಂಭದಲ್ಲಿದ್ದ ಬಾಳೆಹಣ್ಣುಗಳಲ್ಲಿದ್ದುದರ ಹನ್ನೆರಡರಲ್ಲಿ ಒಂದು ಭಾಗದಷ್ಟು ಮಾತ್ರ ಪೋಷಕಾಂಶಗಳಿವೆಯೆಂದು. ಆದುದರಿಂದ, ಈ ಎಲ್ಲಾ ತರಕಾರಿ ಮತ್ತು ಹಣ್ಣುಗಳು ಹೆಚ್ಚು ಬೆಳೆದು ದೊಡ್ಡದಾಗಿ ಕಾಣಿಸುತ್ತಿದ್ದರೂ ಕೂಡಾ, ಪೌಷ್ಟಿಕತೆಯು ತುಂಬಾ ಕಡಿಮೆಯಾಗಿದೆ. ಅವುಗಳು ಸಾವಯವವಲ್ಲ, ಯಾಕೆಂದರೆ ಮಣ್ಣು ಸವಕಳಿಗೊಂಡಿದೆ. ನೋಡಿ, ನಾವೆಲ್ಲರೂ ತಿನ್ನುವ ಹೊಸ ಗೋಧಿಬೀಜದಲ್ಲಿ, ಹಳೆ ಗೋಧಿಯಲ್ಲಿರುತ್ತಿದ್ದಷ್ಟು ಫೋಲಿಕ್ ಆಸಿಡ್ ಇಲ್ಲ. ಭಾರತದ ಪಂಜಾಬಿನಲ್ಲಿ ಡಾಕ್ಟರ್ ಒಬ್ಬರು ಸಂಶೋಧನೆ ಮಾಡಿದ್ದರು. ಅವರು ಕೆಲವು ಹಳೆಯ ಗೋಧಿಗಳನ್ನು ಪರೀಕ್ಷಿಸಿದರು, ಮೂಲ ಗೋಧಿ ಮತ್ತು ಅದರಲ್ಲಿ ತುಂಬಾ ಫೋಲಿಕ್ ಆಸಿಡ್ ಇದೆಯೆಂದು ಹೇಳಿದರು. ಇವತ್ತು ಜನರು ಹೃದಯದ ತೊಂದರೆ ಮತ್ತು ಇಂತಹ ಇತರ ಸಮಸ್ಯೆಗಳಿಂದ ನರಳುತ್ತಿದ್ದಾರೆ ಯಾಕೆಂದರೆ, ಅವರು ತಿನ್ನುವ ಆಹಾರಗಳಲ್ಲಿ ಬೇಕಾದಷ್ಟು ಫೋಲಿಕ್ ಆಸಿಡ್ ಇಲ್ಲ. ಆದುದರಿಂದ ಪೂರಕಗಳು ಅವಶ್ಯವಾಗಿವೆ. ಆದರೆ ಪುನಃ, ಅದಕ್ಕೇ ಗಂಟು ಬೀಳುವುದು, ಅದರ ಬಗ್ಗೆ ತುಂಬಾ ಚಿಂತೆ ಮಾಡುವುದು ಒಳೆಯದಲ್ಲ. ನಮ್ಮ ಮೆದುಳು, ನಮ್ಮ ವ್ಯವಸ್ಥೆಯು ಹಲವಾರು ಪದಾರ್ಥಗಳನ್ನು ಸ್ವಂತವಾಗಿ ಉತ್ಪಾದಿಸಬಲ್ಲದು. ಆದುದರಿಂದ ಆಹಾರವು ಪ್ರಭಾವ ಬೀರುತ್ತದೆ, ಆದರೆ ನಿಮ್ಮ ಪ್ರಜ್ಞೆಯು ಆಹಾರಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ. ಪ್ರಶ್ನೆ: ಗುರೂಜಿ, ಈ ವಿಶ್ವದ ಸರ್ವೋಚ್ಛ ಶಕ್ತಿ ಯಾವುದು? ಶ್ರೀ ಶ್ರೀ ರವಿಶಂಕರ್: ಸರ್ವೋಚ್ಛ ಶಕ್ತಿಯು ಸರಳವಾದ ಶಕ್ತಿಯಾಗಿದೆ. ನೋಡಿ, ಪರಮಾಣು ಎಲ್ಲೆಡೆಯೂ ಇದೆ, ಸರಿಯಾ? ಇಡಿಯ ವಿಶ್ವವು ಪರಮಾಣುಗಳಿಂದ ಆವರಿಸಲ್ಪಟ್ಟಿದೆ. ಏಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿವೆ, ಆದರೆ ಒಂದು ಪರಮಾಣು ಶಕ್ತಿ ಕೇಂದ್ರವು ವ್ಯತ್ಯಸ್ತವಾದುದು. ಅದೇ ರೀತಿಯಲ್ಲಿ, ಸರ್ವೋಚ್ಛ ಶಕ್ತಿಯು ಎಲ್ಲದಕ್ಕಿಂತ ಸರಳವಾದುದು, ತುಂಬಾ ಸುಲಭವಾಗಿ ಸಿಗುವಂತಹುದು, ಅತೀ ಕಡಿಮೆ ಬೆಲೆಯ ಪದಾರ್ಥವಾಗಿದೆ. ನೀವಿದನ್ನು ಪದಾರ್ಥವೆಂದು ಕೂಡಾ ಕರೆಯುವಂತಿಲ್ಲ; ಅದು ಸಂಪೂರ್ಣ ಅಸ್ಥಿತ್ವದ ಅಡಿಪಾಯವಾಗಿದೆ. ಆದು ಅಲ್ಲಿ ಮೇಲೆಲ್ಲೋ ಇಲ್ಲ. ಆದು ಆಕಾಶದಂತೆ, ಕ್ಷೇತ್ರದಂತೆ. ಭೂಮಿಯ ಕಾಂತೀಯ ಕ್ಷೇತ್ರವೆಲ್ಲಿದೆಯೆಂದು ನೀವು ನನ್ನನ್ನು ಕೇಳಿದರೆ, ಅದು ಎಲ್ಲೆಡೆಯೂ ಇದೆ! ಅದು ಎಲ್ಲಾ ಕಡೆಯೂ ಇರುವ ಕಾಂತೀಯ ಕ್ಷೇತ್ರಕ್ಕಿಂತಲೂ ಹೆಚ್ಚು ಸೂಕ್ಷ್ಮವಾದುದು, ಅದೂ ಎಲ್ಲಾ ಸಮಯದಲ್ಲೂ ಮತ್ತು ಒಂದೇ ತೀವ್ರತೆಯೊಂದಿಗೆ. ಅದು, ಸರ್ವೋಚ್ಛ ಶಕ್ತಿಯು ಅಲ್ಲೆಲ್ಲಿಯೋ ಇದೆ ಎಂದಲ್ಲ. ಆದನ್ನು ಸರ್ವೋಚ್ಛ ಶಕ್ತಿಯೆಂದು ಕರೆಯುವುದರ ಬದಲು ನಾವು ಅದನ್ನು ಮೂಲಭೂತಶಕ್ತಿ, ಅಸ್ಥಿತ್ವ ಎಂದು ಹೇಳಬೇಕು. ಪ್ರಾಚೀನ ಜನರು ಅದನ್ನು ಕರೆದುದು ಹಾಗೆಯೇ - ಅಸ್ಥಿತ್ವ. 'ಸತ್' ಯಾವುದು ಇದೆಯೋ ಮತ್ತು 'ಚಿತ್ತ' - ಯಾವುದು ಪ್ರಜ್ಞೆಯಾಗಿದೆಯೋ ಮತ್ತು ಪರಮಸುಖವಾಗಿದೆಯೋ ಅದು. ನೀವು ಆ ಸರ್ವೋಚ್ಛ ಶಕ್ತಿಯ ಅಥವಾ ವಿಶ್ವದ ತಳಹದಿಯ ಪರಮಸುಖವನ್ನು ಅನುಭವಿಸುವುದು ಹೇಗೆ? ಮೌನವಾಗಿದ್ದುಕೊಂಡು ನಿಮ್ಮ ಮನಸ್ಸನ್ನು ಒಳಮುಖವಾಗಿ ತಿರುಗಿಸಿಕೊಳ್ಳುವ ಮೂಲಕ. ಆಭ್ಯಾಸದ ಮೂಲಕ ಪರಮಸುಖವು ಮೇಲ್ಮೈಗೆ ಬರುತ್ತದೆ. ಪ್ರಶ್ನೆ: ಗುರೂಜಿ, ಚಂದ್ರ, ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆಯೇ? ಹೌದಾದರೆ, ಹೇಗೆ? ಶ್ರೀ ಶ್ರೀ ರವಿಶಂಕರ್: ಹೌದು. ಚಂದ್ರನ ಪ್ರಭಾವವು ಸಮುದ್ರದ ಮೇಲಿದೆಯೆಂಬುದು ನಿಮಗೆ ತಿಳಿದಿದೆಯೇ? ಹುಣ್ಣಿಮೆಯ ದಿನ ಅಲೆಗಳು ಎತ್ತರಕ್ಕೇರುತ್ತವೆ. ಚಂದ್ರನು ಭೂಮಿಯ ಮೇಲೆ ಪ್ರಭಾವ ಬೀರುತ್ತಾನೆ - ಇದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಶರೀರವು ನೀರಿನಿಂದ ಮಾಡಲ್ಪಟ್ಟಿದೆ. ನಮ್ಮ ಶರೀರದ ೬೦% ಕ್ಕೆ ಹತ್ತಿರದಷ್ಟು ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಸಮುದ್ರದಂತೆ ಅದರಲ್ಲಿ ಉಪ್ಪಿನಂಶವಿದೆ. ಆದುದರಿಂದ ನಿಮ್ಮ ಶರೀರವು ಸಮುದ್ರ ನೀರಿನ ಒಂದು ಚಿಕ್ಕ ಕ್ಯಾಪ್ಸೂಲ್ ನಂತೆ. ನೀವೊಂದು ಪೊಟ್ಟಣ. ನಿಮ್ಮ ಶರೀರದಿಂದ ದ್ರವಾಂಶವನ್ನು ಹೊರಗೆ ತೆಗೆದರೆ, ನೀವು ಕುಗ್ಗುತ್ತೀರಿ. ನೀವು ಸಮುದ್ರ ನೀರಿನ ಒಂದು ಪೊಟ್ಟಣ ಕೆಲವು ಕಡೆ ಕೆಂಪು, ಕೆಲವು ಕಡೆ ನೀಲಿ, ಕೆಲವು ಕಡೆ ವಿಭಿನ್ನ ಬಣ್ಣಗಳು, ಎಲ್ಲವೂ ಒಂದು ಪೊಟ್ಟಣದೊಳಗೆ. ಆದುದರಿಂದ ನಿಮ್ಮ ಶರೀರವು ೬೦% ನೀರು. ಆದುದರಿಂದ ಚಂದ್ರನ ಪ್ರಭಾವವು ಶರೀರದ ಮೇಲಿದೆ. ಯಾವುದು ಶರೀರದ ಮೇಲೆ ಪ್ರಭಾವ ಬೀರುತ್ತದೋ ಅದು ಮನಸ್ಸಿನ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಆದುದರಿಂದ ಮನಸ್ಸಿನ ಮೇಲೆ ಚಂದ್ರನ ಪ್ರಭಾವವಿದೆ. ಆದುದರಿಂದಲೇ ಹುಚ್ಚು ಹಿಡಿದ ಜನರನ್ನು ಲ್ಯುನಾಟಿಕ್ಸ್ (ಲೂನಾರ್= ಚಂದ್ರನಿಗೆ ಸಂಬಂಧಿಸಿದ) ಎಂದು ಕರೆಯುವುದು. ಆ ಶಬ್ದವೇ ಲ್ಯುನಾಟಿಕ್ಸ್ ಎಂದು ಹೇಳುತ್ತದೆ. ಅದೇ ರೀತಿಯಲ್ಲಿ ಇತರ ಆಕಾಶಕಾಯಗಳೂ ಕೂಡಾ ನಮ್ಮ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತವೆ. ನೋಡಿ, ಚೈತನ್ಯದ ಕ್ಷೇತ್ರವು ತುಂಬಾ ಆಸಕ್ತಿದಾಯಕವಾದುದು. ನೀವೊಂದು ಟ್ರಾನ್ಸಿಸ್ಟರ್ ರೇಡಿಯೋದ ಒಳಗೆ ನೋಡಿದರೆ, ಅಲ್ಲಿ ಒಂದು ಲೋಹದ ತುಂಡಿನ ಮೇಲೆ ಕೆಲವು ತಂತಿಗಳನ್ನು ರೇಖಾಚಿತ್ರಾಕಾರದಲ್ಲಿ ಹಾಕಿರುತ್ತಾರೆ ಮತ್ತು ಅದು ಎಷ್ಟೊಂದು ದೊಡ್ಡ ಬದಲಾವಣೆಯನ್ನು ತರುತ್ತದೆ ನೋಡಿ! ಅಲ್ಲವೇ? ಒಂದು ಸೆಲ್ ಫೋನಿನೊಳಗಿರುವ ಚಿಪ್ ನೋಡಿದ್ದೀರಾ? ಅದರಲ್ಲೊಂದು ನಿರ್ದಿಷ್ಟ ರೇಖಾಚಿತ್ರವಿರುತ್ತದೆ. ಸೆಲ್ ಫೋನಿನ ಚಿಪ್ ಭಿನ್ನವಾಗಿದ್ದರೆ, ಅದು ಬೇರೆ ನಂಬರಿಗೆ ಹೋಗುತ್ತದೆ. ಪ್ರತಿಯೊಂದು ಚಿಕ್ಕ ರೇಖಾಚಿತ್ರವು ಕೂಡಾ ಒಂದು ನಿರ್ದಿಷ್ಟ ವಿದ್ಯುನ್ಮಾನ (ಎಲೆಕ್ಟ್ರೋನಿಕ್) ಶಕ್ತಿಯನ್ನು, ನಿರ್ದಿಷ್ಟ ಕಂಪನಗಳನ್ನು ಗ್ರಹಿಸುತ್ತದೆ. ಅದೇ ರೀತಿಯಲ್ಲಿ ನಮ್ಮ ಶರೀರವು ಒಂದು ಎಲೆಕ್ಟ್ರೋನಿಕ್ ಸರ್ಕ್ಯೂಟು ಮತ್ತು ಇಡಿಯ ಬ್ರಹ್ಮಾಂಡದೊಂದಿಗೆ ತುಂಬಾ ಸಂಬಂಧ ಹೊಂದಿದೆ. ಬ್ರಹ್ಮಾಂಡದಲ್ಲಿರುವ ಪ್ರತಿಯೊಂದೂ ಪರಸ್ಪ ಜೋಡಲ್ಪಟ್ಟಿವೆ ಮತ್ತು ಪರಸ್ಪರ ಸಂಬಂಧ ಹೊಂದಿವೆ. ಪ್ರಾಚೀನ ಜನರಿಗೆ ಇದು ತಿಳಿದಿತ್ತು. ಆವರು ಪರಮಾಣು ಮತ್ತು ಬ್ರಹ್ಮಾಂಡಗಳನ್ನು ಹೇಗೆ ಜೋಡಿಸಿದರೆಂಬುದು ತುಂಬಾ ಬೆರಗಾಗಿಸುವ ವಿಷಯ. ಸೂರ್ಯನ ಸಂಬಂಧ ಕಣ್ಣುಗಳೊಂದಿಗಿದೆ. ಮನಸ್ಸು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಮಂಗಳ ಗ್ರಹದ ಸಂಬಂಧ ಪಿತ್ತಕೋಶದೊಂದಿಗಿದೆ. ಶನಿ ಗ್ರಹವು ಹಲ್ಲುಗಳೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ಶರೀರದ ಬೇರೆ ಬೇರೆ ಭಾಗಗಳು ಗ್ರಹಗಳ ಬೇರೆ ಬೇರೆ ತರಂಗಾಂತರಗಳೊಂದಿಗೆ ಅಥವಾ ಫ್ರೀಕ್ವೆನ್ಸಿಗಳೊಂದಿಗೆ ಸಂಬಂಧ ಹೊಂದಿವೆ. ಅವುಗಳು ಯಾವುದರ ಜೊತೆ ಸಂಬಂಧ ಹೊಂದಿವೆ? ಅವುಗಳು ಒಂದು ನಿರ್ದಿಷ್ಟ ಕಾಳಿನೊಂದಿಗೆ, ಒಂದು ಬಣ್ಣದೊಂದಿಗೆ ಮತ್ತು ಒಂದು ಪಕ್ಷಿ ಅಥವಾ ಒಂದು ಜೀವಿಯೊಂದಿಗೆ ಕೂಡಾ ಸಂಬಂಧ ಹೊಂದಿವೆ. ಮಂಗಳ ಗ್ರಹವು ನಿಮ್ಮ ಪಿತ್ತಕೋಶದೊಂದಿಗೆ ಸಂಬಂಧ ಹೊಂದಿರುವ ರೀತಿಯಲ್ಲಿ ಅದು ಕುರಿ ಮತ್ತು ಕಡಲೆಕಾಳಿನೊಂದಿಗೆ ---- ಸಂಬಂಧ ಹೊಂದಿದೆ. ಕಡಲೆಕಾಳುಗಳು, ಮಂಗಳ ಗ್ರಹ, ಕುರಿ, ಮೇಕೆ ಮತ್ತು ಪಿತ್ತಕೋಶ ಎಲ್ಲವೂ ಜೋಡಲ್ಪಟ್ಟಿವೆ. ಆದುದರಿಂದ ಅವರು ಈ ಎಲ್ಲಾ ವಸ್ತುಗಳ ನಡುವೆ ಒಂದು ಸಂಬಂಧವನ್ನು ಕಂಡುಕೊಂಡರು; ಪರಮಾಣುವಿನಿಂದ ಬ್ರಹ್ಮಾಂಡದ ವರೆಗೆ. ಇದು ತುಂಬಾ ಆಸಕ್ತಿಕರವಾದ ವಿಜ್ಞಾನ; ಸಂಪೂರ್ಣವಾಗಿ ಆಸಕ್ತಿಕರ ಮತ್ತು ಅತ್ಯಾಕರ್ಷಕ. ನೀವು ಆ ಸಂಶೋಧನೆಯಲ್ಲಿ ಆಳವಾಗಿ ಹೋಗಬೇಕು. ಅದೇ ರೀತಿಯಲ್ಲಿ ಶನಿಯು ಎಳ್ಳಿನೊಂದಿಗೆ ಸಂಬಂಧವನ್ನು ಹೊಂದಿದೆ; ಅದು ಕಾಗೆಗಳು ಮತ್ತು ನಿಮ್ಮ ಹಲ್ಲುಗಳೊಂದಿಗೆ ಸಂಬಂಧವನ್ನು ಹೊಂದಿದೆ. ಅದು ಆಸಕ್ತಿಕರ! ನಾನು ಹೇಳುತ್ತೇನೆ, ತುಂಬಾ ಆಸಕ್ತಿಕರ! ನೀವು ಚಿಟ್ಟೆಗಳ ಪ್ರಭಾವದ ಬಗ್ಗೆ ಕೇಳಿರಬಹುದು. ದಕ್ಷಿಣ ಅಮೆರಿಕಾದ ಮಳೆಕಾಡು ಪ್ರದೇಶದಲ್ಲಿ ತನ್ನ ರೆಕ್ಕೆಗಳನ್ನು ಬಡಿಯುವ ಒಂದು ಚಿಟ್ಟೆಯು, ಚೈನಾದಲ್ಲಿರುವ ಮೋಡಗಳ ಮೇಲೆ ಪ್ರಭಾವ ಬೀರುತ್ತದೆ! ಒಂದು ಚಿಟ್ಟೆಯ ಚಲನೆಯು ಹೇಗೆ ಚೈನಾದ ಮೋಡಗಳ ಮೇಲೆ ಪರಿಣಾಮ ಬೀರುತ್ತದೆ, ತುಂಬಾ ಆಸಕ್ತಿಕರ. ಆದುದರಿಂದಲೇ ಸಂಸ್ಕೃತದಲ್ಲಿ ಒಂದು ಮಾತಿದೆ, ’ಯತ್ ಪಿಂಡೆ ತತ್ ಬ್ರಹ್ಮಾಂಡೆ’, ಅಂದರೆ ವಿಶ್ವದಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಒಂದು ಕ್ಯಾಪ್ಸೂಲ್ ರೂಪದಲ್ಲಿದೆ. ನಿಮ್ಮ ಶರೀರವು ಒಂದು ಚಿಕ್ಕ ವಿಶ್ವ ಯಾಕೆಂದರೆ ಅದು ಅಲ್ಲಿರುವ ಎಲ್ಲದರೊಂದಿಗೂ ಜೋಡಲ್ಪಟ್ಟಿದೆ. ನೀವೊಂದು ದ್ವೀಪವಲ್ಲ. ನೀವು ಸಮಾಜದೊಂದಿಗೆ ಜೋಡಲ್ಪಟ್ಟಿದ್ದೀರಿ ಮತ್ತು ಕೇವಲ ಸಮಾಜದೊಂದಿಗಲ್ಲ, ಸಂಪೂರ್ಣ ಗೋಳದೊಂದಿಗೆ! ನೀವು ಜೋಡಲು ಬಯಸದೆಯೇ ನೀವು ಆಗಲೇ ಜೋಡಲ್ಪಟ್ಟಿದ್ದೀರಿ. ನೀವು ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಜೋಡಲ್ಪಟ್ಟಿದ್ದೀರಿ. ನೀವು ಅದನ್ನು ಅರ್ಥ ಮಾಡಿಕೊಳ್ಳುತ್ತೀರೋ, ಅದಕ್ಕೆ ಮನ್ನಣೆ ನೀಡುತ್ತೀರೋ ಇಲ್ಲವೋ ಅದು ವಿಷಯವಲ್ಲ. ನೀವು ಈಗಾಗಲೇ ಜೋಡಲ್ಪಟ್ಟಿದ್ದೀರಿ. ಪ್ರಶ್ನೆ: ಗುರೂಜಿ, ದಯವಿಟ್ಟು ನೀವು ಅವಿದ್ಯೆ ಮತ್ತು ಮಾಯೆಯ ಪರಿಕಲ್ಪನೆಯ ಬಗ್ಗೆ ವಿವರಿಸುತ್ತೀರಾ? ಶ್ರೀ ಶ್ರೀ ರವಿಶಂಕರ್: ಮಾಯೆಯೆಂದರೆ ಯಾವುದನ್ನೆಲ್ಲಾ ಅಳತೆ ಮಾಡಲು ಸಾಧ್ಯವಿದೆಯೋ ಅದು. ಇಂಗ್ಲೀಷಿನ ಮೆಶರ್ (=ಅಳೆಯು) ಎಂಬ ಶಬ್ದವು ಸಂಸ್ಕೃತದ ಮಾಯಾ ಎಂಬ ಶಬ್ದದಿಂದ ಬಂದಿದೆ. ’ಮಿಯತೆ ಅನಯ ಇತಿ ಮಾಯಾ’. ಮಿಯತೆ ಎಂದರೆ ಅಳೆಯಲ್ಪಡಬೇಕಾಗಿರುವುದು. ಅಳೆಯಲ್ಪಡಬಹುದಾದುದೆಲ್ಲ ಮಾಯೆ. ಪಂಚಭೂತಗಳನ್ನು ಅಳೆಯಬಹುದು. ಪೃಥ್ವಿ, ಜಲ, ಅಗ್ನಿ, ವಾಯು, ಈಥರ್; ಅವುಗಳನ್ನೆಲ್ಲಾ ಅಳೆಯಬಹುದು. ಆದುದರಿಂದ ಪಂಚಭೂತಗಳಿಂದ ಮಾಡಲ್ಪಟ್ಟ ಪ್ರಪಂಚವೆಲ್ಲಾ ಮಾಯೆಯಾಗಿದೆ, ಯಾಕೆಂದರೆ ಅವುಗಳನ್ನೆಲ್ಲಾ ಅಳೆಯಬಹುದು. ಯಾವುದನ್ನು ಅಳೆಯಲು ಸಾಧ್ಯವಿಲ್ಲ? ದಯೆ, ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ಈ ವ್ಯಕ್ತಿಯಲ್ಲಿ ಮೂರು ಔನ್ಸ್ ಪ್ರೀತಿಯಿದೆ ಮತ್ತು ಆ ವ್ಯಕ್ತಿಯಲ್ಲಿ ಐದು ಔನ್ಸ್ ಪ್ರೀತಿಯಿದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಸತ್ಯವನ್ನು ಅಳೆಯಲು ಸಾಧ್ಯವಿಲ್ಲ, ಸೌಂದರ್ಯವನ್ನು ಅಳೆಯಲು ಸಾಧ್ಯವಿಲ್ಲ. ಈ ಮಹಿಳೆಯಲ್ಲಿ ಐದು ಘಟಕಗಳಷ್ಟು ಸೌಂದರ್ಯವಿದೆ ಮತ್ತು ಆ ಮಹಿಳೆಯಲ್ಲಿ ಮೂರು ಘಟಕಗಳಷ್ಟು ಸೌಂದರ್ಯವಿದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಸೌಂದರ್ಯವು ಅಳೆಯಲು ಸಾಧ್ಯವಿಲ್ಲದುದು. ಪ್ರೀತಿ, ಸೌಂದರ್ಯ, ದಯೆ, ಸತ್ಯ, ಸಮಗ್ರತೆ, ಪ್ರಾಮಾಣಿಕತೆ; ಆತ್ಮದ ಈ ಎಲ್ಲಾ ಗುಣಗಳು ಅಳೆಯಲು ಸಾಧ್ಯವಿಲ್ಲದುದು. ಆದುದರಿಂದ, ಅವುಗಳು ಮಾಯೆಯಲ್ಲ. ಅವುಗಳು ಮಹೇಶ್ವರ - ಆತ್ಮದ ಸ್ವಭಾವ. ಮಾಯೆಯೆಂದರೆ ಯಾವುದೆಲ್ಲಾ ಬದಲಾಗುತ್ತದೆಯೋ ಮತ್ತು ಯಾವುದನ್ನು ಅಳೆಯಬಹುದೋ ಅದು ಎಂಬ ಅರ್ಥವೂ ಇದೆ; ಮತ್ತು ಅಳತೆಗಳು ಬದಲಾಗುತ್ತವೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ಬದಲಾವಣೆಗೆ ಒಳಗಾಗುತ್ತದೆ. ಆದುದರಿಂದ ಮಾಯೆಯೆಂಬುದರ ಒಂದು ಅರ್ಥವೆಂದರೆ, ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ಬದಲಾಗುತ್ತಿರುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅಳೆಯಬಹುದು, ಇದು ಇನ್ನೊಂದು ಅರ್ಥ. ಯಾವುದು ಬದಲಾಗುವುದಿಲ್ಲವೋ ಮತ್ತು ಯಾವುದನ್ನು ಅಳೆಯಲು ಸಾಧ್ಯವಿಲ್ಲವೋ ಅದು ಪ್ರಜ್ಞೆ, ಆತ್ಮ, ಬ್ರಹ್ಮ ಅಥವಾ ವಿಶ್ವ ಚೈತನ್ಯ. ಅವಿದ್ಯೆಯೆಂದರೆ ಈ ಬದಲಾವಣೆಯ, ವಸ್ತುಗಳನ್ನು ಅಳೆಯುವ ಅಧ್ಯಯನ. ಎರಡು ವಿಷಯಗಳಿವೆ: ವಿದ್ಯೆ ಮತ್ತು ಅವಿದ್ಯೆ. ವಿದ್ಯೆಯೆಂದರೆ ಪ್ರಜ್ಞೆಯ ಅಧ್ಯಯನ ಮತ್ತು ಅವಿದ್ಯೆಯೆಂದರೆ ಪ್ರಪಂಚದ, ಚಿಕ್ಕ ವಸ್ತುಗಳ ಅಧ್ಯಯನ. ಪ್ರಶ್ನೆ: ಗುರೂಜಿ, ಮುಕ್ತಿಯೆಂದರೇನು? ಜನರು ಅದನ್ನು ಯಾಕೆ ಹುಡುಕುತ್ತಾರೆ, ಮತ್ತು ಜನರು ಯಾವುದರಿಂದ ಮುಕ್ತಿಯನ್ನು ಹುಡುಕುತ್ತಾರೆ? ಶ್ರೀ ಶ್ರೀ ರವಿಶಂಕರ್: ನಿನ್ನನ್ನು ಒಂದು ಕುರ್ಚಿಯ ಮೇಲೆ ೧೦ ಗಂಟೆ ಕೂರಿಸುತ್ತಾರೆ ಮತ್ತು ನಿನಗೆ, "ನೀನು ಕುರ್ಚಿಯಿಂದ ಏಳಬಾರದು" ಎಂಬ ಆಜ್ಞೆಯನ್ನು ಕೊಡಲಾಗುತ್ತದೆ ಎಂದಿಟ್ಟುಕೋ. ನೀನು ಹೇಳುತ್ತಿ, "ದಯವಿಟ್ಟು, ನನ್ನ ಕಾಲುಗಳು ಮಲಗಿವೆ. ದಯವಿಟ್ಟು ಅವುಗಳನ್ನು ನಾನು ಎಬ್ಬಿಸಬಹುದೇ?" ನೀವಿದನ್ನು ಹೇಳುತ್ತೀರೇ ಇಲ್ಲವೇ? ಅದು ಮುಕ್ತಿಯನ್ನು ಹುಡುಕುವುದು. ನೀವು ಮಕ್ಕಳನ್ನು ಅವರ ಪರೀಕ್ಷೆಗಳು ಮುಗಿದ ದಿನ ಸುಮ್ಮನೇ ಕೇಳಿ, "ನಿನಗೆ ಹೇಗನ್ನಿಸುತ್ತಿದೆ?" ಅವರು ಮನೆಗೆ ಬರುತ್ತಾರೆ, ಅವರ ಪುಸ್ತಕಗಳನ್ನು ಸೋಫದ ಮೇಲೆ ಎಸೆದು, ಸೋಫದ ಮೇಲೆ ಕುಳಿತುಕೊಂಡು ಟಿವಿ ನೋಡುತ್ತಾರೆ. ನೀವು, "ನಿನಗೆ ಹೇಗೆ ಅನ್ನಿಸುತ್ತಿದೆ?" ಎಂದು ಕೇಳುತ್ತೀರಿ. ಅವರು, "ಆಹ್! ಮುಕ್ತಿ ಸಿಕ್ಕಿತು! ಮುಗಿಯಿತು!" ಎಂದು ಹೇಳುತ್ತಾರೆ. ಮುಕ್ತಿಯೆಂದರೆ, "ನನಗೆ ಮಾಡಿಯಾಯಿತು! ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದೆ, ಮುಗಿಯಿತು!" ಎಂಬ ಭಾವನೆ. ಸಂಪೂರ್ಣ ತೃಪ್ತಿ; ಸಂಪೂರ್ಣ ಸ್ವಾತಂತ್ರ್ಯ; ಅಲ್ಲಿ ಇನ್ನೂ ಮಾಡಲು ಏನೂ ಇಲ್ಲ, ಯಾವುದನ್ನೂ ಬಲವಂತವಾಗಿ ಮಾಡಬೇಕಾದುದಿಲ್ಲ. "ನನಗೆ ಏನು ಬೇಕೋ ಅದನ್ನು ನಾನು ಸಾಧಿಸಿದ್ದೇನೆ. ಒಳಗಡೆ ನಾನು ಸ್ವಾತಂತ್ರವನ್ನು ಅನುಭವಿಸುತ್ತಿದ್ದೇನೆ". ಮುಕ್ತಿಯು ಯಾವಾಗಲೂ ಬಂಧನದೊಂದಿಗೆ ಜೋಡಿರುತ್ತದೆ. ಬಂಧನವಿರುವಾಗ, ಆ ಬಂಧನದಿಂದ ಪಾರಾಗಲು ಅಲ್ಲಿ ಮುಕ್ತಿಯಿದೆ. ನಾವು ನಮ್ಮದೇ ಮನಸ್ಸಿನಿಂದ, ನಮ್ಮದೇ ಆಸೆಗಳಿಂದ, ನಮ್ಮದೇ ಬಯಕೆಗಳಿಂದ, ನಮ್ಮ ತಿರಸ್ಕಾರಗಳಿಂದಾಗಿ ಹುಟ್ಟುತ್ತೇವೆ. ಬಯಕೆಗಳು ಮತ್ತು ತಿರಸ್ಕಾರಗಳು ಇಲ್ಲವಾದಾಗ ನೀವು ಒಳಗಿನಿಂದ ಆ ಮುಕ್ತಿಯನ್ನು, ಆ ಸರಳತೆಯನ್ನು ಅನುಭವಿಸುತ್ತೀರಿ! ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಸ್ವಲ್ಪ ಮಟ್ಟಿಗೆ ಮುಕ್ತಿಯನ್ನು ಅನುಭವಿಸಿದ್ದಾರೆ. ಆದರೆ ಅದು ಜೀವನದಲ್ಲಿನ ಒಂದು ಖಾಯಂ ವಾಸ್ತವವಾದಾಗ, ನಿಮ್ಮ ಸಂಪೂರ್ಣ ಚೈತನ್ಯವು ಬದಲಾಗುತ್ತದೆ ಮತ್ತು ಯಾವುದೂ ನಿಮಗೆ ತೊಂದರೆಯನ್ನುಂಟು ಮಾಡುವುದಿಲ್ಲ. ಯಾರಿಗೂ ನಿಮ್ಮಿಂದ ನಿಮ್ಮ ನಗುವನ್ನು ದೂರ ಮಾಡಲು ಸಾಧ್ಯವಿಲ್ಲ. ಯಾರಿಗೂ ನಿಮ್ಮನ್ನು ಯಾವುದೇ ಉತ್ತೇಜಕಗಳಿಂದ ಬದಲಾಯಿಸಲು ಸಾಧ್ಯವಿಲ್ಲ. ಯಾರಿಗೂ ನಿಮ್ಮನ್ನು ಕಿರಿಕಿರಿಗೊಳಿಸಲು ಸಾಧ್ಯವಿಲ್ಲ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಕಿರಿಕಿರಿಗೊಳಿಸಲು ಏನೂ ಉಳಿದಿರುವುದಿಲ್ಲ. ಅಲ್ಲವಾದರೆ, ಜೀವನದಲ್ಲಿ ನಮ್ಮ ಗುಂಡಿಗಳು ಚಿಕ್ಕ ಚಿಕ್ಕ ವಿಷಯಗಳಿಂದ ಒತ್ತಲ್ಪಡುತ್ತಾ ಇರುತ್ತವೆ. ಒಂದು ಚಿಕ್ಕ ವಿಷಯ ಸರಿಯಾಗದೇ ಹೋದರೆ, ಅಷ್ಟೇ ಮತ್ತೆ! ಪ್ರಶ್ನೆ: ಗುರೂಜಿ, ನನ್ನ ಗೆಳೆಯ ತುಂಬಾ ಅಸೂಯೆ ಪಡುತ್ತಾನೆ. ನಾನು ಅವನನ್ನು ಉಸಿರಾಟದ ಕಲೆಗೆ ಪರಿಚಯಿಸಿದೆ ಆದರೆ ನಂತರ ಅವನು ಪುನಃ ತುಂಬಾ ಅಸೂಯೆ ಪಟ್ಟ. ಒಂದು ರಾತ್ರಿ ಅವನು ನನಗೆ ಹೊಡೆದ ಬಳಿಕ ನಾನು ದೂರ ಹೋದೆ ಮತ್ತು ಒಂದು ತಿಂಗಳು ಅವನಲ್ಲಿ ಮಾತನಾಡುವುದನ್ನು ನಿಲ್ಲಿಸಿದೆ. ಈಗ ಅವನನ್ನುತ್ತಿದ್ದಾನೆ, ಕ್ರಿಯೆಯನ್ನು ಪ್ರತಿದಿನವೂ ಮಾಡಿದ ಬಳಿಕ ಅವನು ಬದಲಾಗಿದ್ದಾನೆಂದು. ಅವನು ಇಲ್ಲಿ ಮೌನ ಶಿಬಿರದಲ್ಲಿ ಕೂಡಾ ಇದ್ದಾನೆ. ಅವನು ಬದಲಾದಂತೆ ಕಾಣುತ್ತಿದ್ದಾನೆ. ನಾನು ಅವನಿಗೆ ಇನ್ನೊಂದು ಅವಕಾಶ ಕೊಡಬೇಕೆಂದು ಅವನು ಬಯಸುತ್ತಾನೆ. ನಾನು ಏನು ಮಾಡಬೇಕು? ಶ್ರೀ ಶ್ರೀ ರವಿಶಂಕರ್: ಹೌದು, ನೀನು ಖಂಡಿತವಾಗಿ ಅವನಿಗೆ ಒಂದು ಅವಕಾಶವನ್ನು ಕೊಡಬೇಕು ಮತ್ತು ಈ ಶಿಬಿರವು ನಿಜವಾಗಿ ಒಂದು ಬದಲಾವಣೆಯನ್ನು ಮಾಡಿರಬಹುದು. ನೋಡು, ಎಲ್ಲರಲ್ಲೂ ಒಳ್ಳೆಯತನವು ಅಡಗಿರುತ್ತದೆ. ಆ ಒಳ್ಳೆಯತನವನ್ನು ಆವರಿಸಿರುವುದು ಒತ್ತಡ ಮತ್ತು ಅಜ್ಞಾನ. ಆದುದರಿಂದ, ಈ ಕೋಣೆಯಲ್ಲಿ, ಟೊಳ್ಳು ಮತ್ತು ಖಾಲಿ ಧ್ಯಾನ ಹಾಗೂ ಎಲ್ಲಾ ಧ್ಯಾನಗಳೊಂದಿಗೆ ನಾವು, ಒಳ್ಳೆಯತನವು ಮೇಲೆ ಬರಲು ಅದನ್ನು ತೆರೆಯುತ್ತಿದ್ದೇವೆ. ಅದು ಅರಳುತ್ತದೆ, ಹೂಬಿಡುತ್ತದೆ. ಪ್ರಶ್ನೆ: ನಾನು ನನ್ನ ತಂದೆಗೆ ಅವರ ಋಣಾತ್ಮಕ ಭಾವನೆಗಳ ನಿರ್ವಹಣೆಯನ್ನು ಕಲಿಯುವುದರಲ್ಲಿ ಸಹಾಯ ಮಾಡುವುದು ಹೇಗೆ? ಹಾಗೂ, ಕೆಲಸದಲ್ಲಿ ಅವರು ಮಾಡುವ ಅಸ್ತವ್ಯಸ್ತತೆಗಳನ್ನು ಸ್ವೀಕರಿಸುವುದು ಹೇಗೆ, ಯಾಕೆಂದರೆ ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ. ಶ್ರೀ ಶ್ರೀ ರವಿಶಂಕರ್: ಅದೊಂದು ಕಷ್ಟಕರ ಕೆಲಸ. ಬೇರೆ ಬೇರೆ ತಲೆಮಾರಿನವರು ಕೆಲಸ ಮಾಡುವ ಶೈಲಿ ಬೇರೆ ಬೇರೆಯಾಗಿರುತ್ತದೆ. ಅವರೊಂದಿಗೆ ಸಂಪರ್ಕಿಸುವಾಗ ನಿನ್ನಲ್ಲಿ ತುಂಬಾ ತಾಳ್ಮೆ ಮತ್ತು ಕುಶಲತೆಯಿರಬೇಕು. ಕೆಲವೊಮ್ಮೆ ಹಿರಿಯ ತಲೆಮಾರಿನವರಿಗೆ ಕೆಲಸವನ್ನು ನಿಯೋಜಿಸುವುದು ಹೇಗೆಂದು ತಿಳಿದಿರುವುದಿಲ್ಲ. ಅವರು ಪರಿಪೂರ್ಣತೆಯಲ್ಲಿ ಎಷ್ಟು ನಂಬುತ್ತಾರೆಂದರೆ, ಎಲ್ಲವನ್ನೂ ತಾವೇ ಮಾಡಲು ಬಯಸುತ್ತಾರೆ. ಅದು ಕಿರಿಯ ತಲೆಮಾರಿನವರಿಗೆ ಒಂದು ಸಮಸ್ಯೆಯಾಗಿ ಪರೊಣಮಿಸುತ್ತದೆ. ಆದುದರಿಂದ ಒಂದು ಕೆಲಸ ಮಾಡು, ಅವರು ಋಣಾತ್ಮಕವಾದಾಗ, ನೀನು ಸುಮ್ಮನೇ ಮೌನವಾಗಿ ಅಲ್ಲಿಂದ ದೂರ ಜಾರು. ವಾದಿಸಬೇಡ. ಅಲ್ಲಿ ವಾದವು ಕೆಲಸ ಮಾಡುವುದೇ ಇಲ್ಲ. ನೀನು ಏನು ಹೇಳುತ್ತೀಯೋ ಅದೆಲ್ಲಾ ಸರಿಯಿದ್ದರೂ ಅವರು ಅದನ್ನು ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ಸ್ಥಾನಕ್ಕೆ ಗಂಟುಬಿದ್ದಿರುತ್ತಾರೆ ಮತ್ತು ಅವರು ಅದನ್ನು ಬಿಡುವುದಿಲ್ಲ. ಅದು ಕಷ್ಟ, ಆದರೆ ಕುಶಲತೆಯಿಂದ ನೀನು ನಿನ್ನ ಆಲೋಚನೆಗಳನ್ನು ಮುಂದಿಡಬೇಕು. ಅಲ್ಲಿ ನಿನಗೆ ತುಂಬಾ ತಾಳ್ಮೆಯ ಅಗತ್ಯವಿದೆ ಮತ್ತು ಮೌನವೆಂಬುದು ಎಲ್ಲಾ ಕುಶಲತೆಗಳ ತಾಯಿ. ನೋಡಿ, ನೀವು ನನ್ನನ್ನು ಕೇಳಬಹುದು, "ನಾನು ಬಂದು ಮೂರು ದಿನಗಳವರೆಗೆ ಮೌನವಾಗಿ ಯಾಕೆ ಇರಬೇಕು ಗುರೂಜಿ, ಅದರಿಂದ ಪ್ರಯೋಜನವೇನು? ನನಗೆ ಮಾತನಾಡಲು ಬಿಡಿ". ನೀವು ಮೌನವಾಗಿರುವಾಗ, ನೀವು ಕುಶಲತೆಗಳ ಮೂಲವನ್ನು ತಟ್ಟುತ್ತೀರಿ ಮತ್ತು ಆ ಕುಶಲತೆಗಳು ನಿಮ್ಮಲ್ಲಿ ಮೇಲೇಳುತ್ತವೆ. ಪ್ರಶ್ನೆ: ಸಕಾರಗೊಳಿಸುವಿಕೆ (ಮ್ಯಾನಿಫೆಸ್ಟೇಶನ್) ಯ ಹಿಂದಿರುವ ರಹಸ್ಯವೇನು? ಧ್ಯಾನ ಮಾಡುವಾಗ, ನನ್ನ ತಲೆಯು ಮುಂದಕ್ಕೆ ಬಾಗುತ್ತದೆ ಮತ್ತು ಕೆಲವೊಮ್ಮೆ ನನ್ನ ಇಡಿಯ ಶರೀರ ಮುಂದಕ್ಕೆ ಬಾಗುತ್ತದೆ. ಅದು ಪರವಾಗಿಲ್ಲವೇ ಅಥವಾ ನಾನು ಅದನ್ನು ತಡೆದು ಪುನಃ ನೇರವಾಗಿ ಕುಳಿತುಕೊಳ್ಳಬೇಕೇ? ಶ್ರೀ ಶ್ರೀ ರವಿಶಂಕರ್: ನಾವು ನೇರವಾಗಿ ಕುಳಿತುಕೊಳ್ಳುತ್ತೇವೆ ಮತ್ತು ನಂತರ ನಾವು ಬಿಟ್ಟು ಬಿಡುತ್ತೇವೆ. ಧ್ಯಾನದಲ್ಲಿ ನಿಮ್ಮ ತಲೆ ಕೆಳಗೆ ಬಂದರೆ ಅಥವಾ ನಿಮ್ಮ ಶರೀರ ಕೆಳಕ್ಕೆ ಬಾಗಿದರೆ, ಚಿಂತಿಸಬೇಡಿ, ಅದು ಪರವಾಗಿಲ್ಲ, ಅದು ಒಳ್ಳೆಯದು. ಈಗ, ನಾನು ಸಾಕಾರಗೊಳಿಸುವುದು ಹೇಗೆ? ನೀನು ನಿನ್ನ ಆಶಯವನ್ನು ಹಾಕಿದಾಗ, ಅದು ಖಂಡಿತವಾಗಿ ಸಾಕಾರಗೊಳ್ಳುತ್ತದೆ. ಒಂದು ಆಶಯ ಮತ್ತು ಅದರ ಮೇಲೆ ಸ್ವಲ್ಪ ಗಮನ, ಆಗ ಅದು ಸಾಕಾರವಾಗುತ್ತದೆ. ಇದು ಸಂಕಲ್ಪವೆಂದು ಕರೆಯಲ್ಪಡುತ್ತದೆ. ನಿಮಗೆ ಜೀವನದಲ್ಲಿ ಬೇಕಾಗಿರುವುದು ಏನು? ಅದನ್ನು ನಿಮ್ಮ ಮನಸ್ಸಿನಲ್ಲಿ ದೃಢ ಮಾಡಿಕೊಳ್ಳಿ ಮತ್ತು ಅದರ ಮೇಲೆ ಒಂದು ಸೌಮ್ಯವಾದ ಆಶಯವನ್ನು ಹಾಕಿ. ಅದಕ್ಕಾಗಿ ಹಂಬಲಿಸಬೇಡಿ ಅಥವಾ ಅದಕ್ಕೇ ಗಂಟು ಬೀಳಬೇಡಿ. ನಿಮ್ಮಲ್ಲಿ ಒಂದು ಆಶಯವಿಟ್ಟು, ನಂತರ ಅದನ್ನು ಸುಮ್ಮನೇ ಬಿಟ್ಟು ಬಿಡಿ ಮತ್ತು ಆರಾಮವಾಗಿರಿ. ಅದು ಪ್ರಕಟಗೊಳ್ಳುತ್ತದೆ. ಆಶಯ ಮತ್ತು ಬಯಕೆಗಳ ನಡುವೆ ಒಂದು ವ್ಯತ್ಯಾಸವಿದೆ. ಬಯಕೆಯೆಂದರೆ ಅದಕ್ಕೇ ಗಂಟು ಬೀಳುವುದು. ನೀವು ಇಲ್ಲಿಂದ ಗೋತನ್ ಬರ್ಗ್ ಗೆ ಹೋಗಬೇಕು ಎಂದಿಟ್ಟುಕೊಳ್ಳೋಣ. ನೀವು, "ನಾನು ಗೋತನ್ ಬರ್ಗ್ ಗೆ ಹೋಗಬೇಕು, ನಾನು ಹೋಗಬೇಕು, ನಾನು ಹೋಗಬೇಕು" ಎಂದು ಹೇಳುತ್ತಾ ಇದ್ದರೆ, ನೀವು ಇಂತಹ ಚಡಪಡಿಕೆಯೊಂದಿಗೆ ಕಾರು ಚಲಾಯಿಸಿದರೆ ನೀವು ಗೋತನ್ ಬರ್ಗ್ ಗೆ ತಲಪುವುದಿಲ್ಲ, ನೀವು ಬೇರೆಲ್ಲಿಗಾದರೂ ತಲಪುವಿರಿ. ಆದರೆ ನಿಮ್ಮಲ್ಲಿ ಸುಮ್ಮನೇ ಒಂದು ಆಶಯವಿದ್ದರೆ, ನಾನು ಗೋತನ್ ಬರ್ಗ್ ಗೆ ಹೋಗುತ್ತಿದ್ದೇನೆ, ಅಷ್ಟೆ; ನೀವು ಕಾರು ಚಲಾಯಿಸುತ್ತೀರಿ, ನೀವು ಇಲ್ಲಿ ಅಲ್ಲಿ ನಿಲ್ಲಿಸುತ್ತೀರಿ, ಪುನಃ ಚಲಾಯಿಸುತ್ತೀರಿ ಮತ್ತು ತಲಪುತ್ತೀರಿ. ಇದು ಆಶಯ. ಬಯಕೆಯೆಂದರೆ ನಿರಂತರವಾಗಿ ಅದರ ಮೇಲಿರುವುದು ಮತ್ತು ಅದು ನಿರಾಶೆಯನ್ನು ಮಾತ್ರ ತರುತ್ತದೆ. ಪ್ರಶ್ನೆ: ನೀವು ಬಳಿಯಿರುವಾಗ ಇಷ್ಟೊಂದು ಭಿನ್ನ ಭಾವನೆಗಳು ಯಾಕಿವೆ? ನಾನು ಶಾಂತಿ ಮತ್ತು ಚಡಪಡಿಕೆಯನ್ನು ಹಾಗೂ ಪ್ರೀತಿ ಮತ್ತು ಮಾತ್ಸರ್ಯವನ್ನು ಒಂದೇ ಸಮಯದಲ್ಲಿ ಅನುಭವಿಸುತ್ತೇನೆ. ಶ್ರೀ ಶ್ರೀ ರವಿಶಂಕರ್: ಅಷ್ಟೆ! ಮಾನವ ಜೀವನವೆಂಬುದು ಭಾವನೆಗಳ ಒಂದು ರೋಲರ್ ಕೋಸ್ಟರ್. ಈ ಎಲ್ಲಾ ಭಾವನೆಗಳು ಬರುತ್ತವೆ. ಭಾವನೆಗಳು ಮೇಲಕ್ಕೇರುವಾಗ ಅವುಗಳು ಧನಾತ್ಮಕ ಮತ್ತು ಅವುಗಳು ಕೆಳ ಬರಲು ಶುರುವಾಗಿವಾಗ ಅವುಗಳು ಋಣಾತ್ಮಕ. ಆದರೆ, ಅವುಗಳೆಲ್ಲಾ ಬರುತ್ತವೆ ಮತ್ತು ಹೋಗುತ್ತವೆಯೆಂಬುದನ್ನು ನೀನು ಅರ್ಥ ಮಾಡಿಕೊಂಡಿದ್ದೀಯಾ, ಅದು ಒಳ್ಳೆಯದು. ನೀನು ಕೇವಲ ಒಂದು ಸಾಕ್ಷಿಯಾಗಿರು. ಪ್ರಶ್ನೆ: ನಾವು ಕೇವಲ ಯೋಜನೆ ಹಾಕುವುದರ ಮತ್ತು ಮಾತನಾಡುವುದರ ಬದಲು, ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುವುದು ಹೇಗೆ? ಶ್ರೀ ಶ್ರೀ ರವಿಶಂಕರ್: ಒಳ್ಳೆಯದು, ನೀನು ಮುಂದಾಳು, ನೀನು ಮುನ್ನಡೆಸು. ಒಬ್ಬ ಮುಂದಾಳುವು ಕ್ರಿಯಾಶೀಲವಾಗಿರಲು ಬಯಸುತ್ತಾನೆ, ಕೇವಲ ಮಾತನಾಡುವುದನ್ನಲ್ಲ. ಆದುದರಿಂದ ನೀನು ಏಳು ಮತ್ತು ಮುನ್ನಡೆಸಲು ಶುರು ಮಾಡು. ಎಲ್ಲರೂ ಚಲಿಸುವಂತೆ ಮಾಡು. ಜನರನ್ನು ಗುಂಪಿಗೆ ಸೇರಲು ಹೇಳು. ಅವರು ಸೇರದಿದ್ದರೆ, ಆಗ ನೀನು ಒಬ್ಬಂಟಿಯಾಗಿ ನಡೆ. ಇದು ನಮ್ಮ ನೀತಿಯಾಗಿರಬೇಕು - ನಾವು ಎಲ್ಲರನ್ನೂ ಜೊತೆಯಲ್ಲಿ ಬರಲು ಮತ್ತು ಜೊತೆಯಲ್ಲಿ ಸಾಗಲು ಹೇಳುವುದು, ಆದರೆ ಯಾರೂ ಬರಲಿಲ್ಲವೆಂದಿಟ್ಟುಕೊಳ್ಳಿ, ಚಿಂತಿಸಬೇಡಿ, ನೀವು ಬಿಡಬೇಡಿ, ನೀವು ಒಬ್ಬಂಟಿಯಾಗಿ ನಡೆಯಿರಿ. ಆಗ, ಅಚಾನಕ್ಕಾಗಿ ನೀವು ಹಿಂದೆ ತಿರುಗಿ ನೋಡಿದಾಗ, ಹಲವರು ನಿಮ್ಮ ಜೊತೆ ನಡೆಯುತ್ತಿರಬಹುದು. ಪ್ರಶ್ನೆ: ದಯವಿಟ್ಟು ನೀವು ಕರ್ಮದ ಪರಿಕಲ್ಪನೆಯ ಬಗ್ಗೆ ನಮಗೆ ತಿಳಿಸುವಿರಾ? ಇದರ ಬಗ್ಗೆ ಆಳವಾಗಿ ತಿಳಿಯಲು ನಾವು ಯಾವುದನ್ನು ಓದಬಹುದು? ಶ್ರೀ ಶ್ರೀ ರವಿಶಂಕರ್: ಈಗ, ಕರ್ಮವೆಂದರೇನು? ನೀವು ಕರ್ಮದ ಬಗ್ಗೆ ಬಹಳಷ್ಟು ಕೇಳಿದ್ದೀರಿ. ಕರ್ಮದ ನಿಜವಾದ ಅರ್ಥವೆಂದರೆ ಕ್ರಿಯೆ. ಕ್ರಿಯೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು: ಭೂತ, ವರ್ತಮಾನ ಮತ್ತು ಭವಿಷ್ಯ. ಹಿಂದಿನ ಕ್ರಿಯೆಗಳು ಅಚ್ಚೊತ್ತಿರುತ್ತವೆ, ಭವಿಷ್ಯದ ಕ್ರಿಯೆಗಳು ಕೂಡಾ ಅಚ್ಚುಗಳು ಮತ್ತು ವರ್ತಮಾನದ ಕ್ರಿಯೆಗಳು ಕರ್ಮವಾಗಿದೆ. ಅದು ನಿಮಗೆ ಈಗ ಫಲಗಳನ್ನು ಕೊಡುತ್ತಿದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಆದುದರಿಂದ ಕರ್ಮವೆಂದರೆ ಭೂತಕಾಲದ ವಾಸನೆಗಳು (ಅಚ್ಚುಗಳು). ಅದು ಭವಿಷ್ಯದಲ್ಲಿ ಅದೇ ರೀತಿಯ ಪರಿಸ್ಥಿತಿಗಳನ್ನು ಸೆಳೆಯುತ್ತದೆ ಮತ್ತು ಅದು ಭವಿಷ್ಯ ಕರ್ಮ. ನೀವು ಮಾಡುತ್ತಿರುವ ವರ್ತಮಾನದ ಕ್ರಿಯೆಯು ನಿಮ್ಮ ಮನಸ್ಸಿನಲ್ಲಿ ಒಂದು ವಾಸನೆಯನ್ನು ಸೃಷ್ಟಿಸುತ್ತದೆ ಮತ್ತು ಅದು ಕೂಡಾ ಕರ್ಮವೆಂದು ಕರೆಯಲ್ಪಡುತ್ತದೆ. ನೀವು ಆತ್ಮೀಯರಿಗೊಂದು ಕಿವಿಮಾತು ಪುಸ್ತಕವನ್ನು ತೆಗೆದುಕೊಂಡರೆ, ನಾನು ಮಾಡಿದ ಮೊದಲನೆಯ ಜ್ಞಾನದ ಹಾಳೆಯೇ ಕರ್ಮದ ಬಗ್ಗೆ. ಹೇಗೆ, ನಾವು ಬದಲಾಯಿಸಬಹುದಾದಂತಹ ನಿರ್ದಿಷ್ಟ ಕರ್ಮಗಳಿವೆ, ನೀವು ಬದಲಾಯಿಸಲು ಸಾಧ್ಯವಿಲ್ಲದಂತಹ ಮತ್ತು ನೀವು ಅನುಭವಿಸಬೇಕಾದಂತಹ ನಿರ್ದಿಷ್ಟ ವಾಸನೆಗಳಿವೆ. ನಾನು ನಿಮಗೊಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ. ನಿಮ್ಮಲ್ಲಿ ಎಷ್ಟು ಮಂದಿಗೆ ಬೆಳಗ್ಗೆ ಮೊದಲನೆಯದಾಗಿ ಕಾಫಿ ಕುಡಿಯುವ ಅಭ್ಯಾಸವಿದೆ? ನಿಮ್ಮಲ್ಲಿ ಎಷ್ಟು ಮಂದಿಗೆ ಕಾಫಿ ಕುಡಿಯದಿದ್ದರೆ ತಲೆನೋವಾಗುತ್ತದೆ? (ಹಲವರು ಕೈ ಮೇಲೆತ್ತುತ್ತಾರೆ) ನೋಡಿ, ಇದು ಕಾಫಿ ಕರ್ಮ. ನೀವು ಕಾಫಿ ಕುಡಿಯುತ್ತಾ ಇದ್ದ ಕಾರಣ, ಅದು ಪ್ರಜ್ಞೆಯಲ್ಲಿ ನಿರ್ದಿಷ್ಟ ಅಚ್ಚುಗಳನ್ನು ಮಾಡಿದೆ ಮತ್ತು ಒಂದು ದಿನ ನೀವು ಕಾಫಿ ಕುಡಿಯದಿದ್ದರೆ, ನಿಮಗೆ ತಲೆನೋವಾಗುತ್ತದೆ. ಅದು ಕಾಫಿ ಕರ್ಮ. ಇದರಿಂದ ಹೊರಬರಲು ಎರಡು ಮಾರ್ಗಗಳಿವೆ. ಒಂದನೆಯದು, ನೀವು ಕಾಫಿ ಕುಡಿಯಿರಿ ಮತ್ತು ತಲೆನೋವಿನಿಂದ ಪಾರಾಗಿ, ಅಥವಾ, ನೀವು ಅದನ್ನು ತಡೆಯಿರಿ. ನೀವು ಹೇಳಿ, "ಅದು ನೋವಾಗುತ್ತಿದ್ದರೆ ಪರವಾಗಿಲ್ಲ, ನೋವಾಗಲಿ", ಮತ್ತು ನೀವು ಅದರ ಮೂಲಕ ಸಾಗಿ. ಎರಡು ಅಥವಾ ಮೂರು ದಿನಗಳ ವರೆಗೆ ನೋವಾಗಬಹುದು ಮತ್ತು ನಂತರ ನೋವಾಗುವುದು ನಿಲ್ಲುತ್ತದೆ, ಯಾಕೆಂದರೆ ಕರ್ಮಗಳು ಯಾವಾಗಲೂ ಸಮಯಕ್ಕೆ ಕಟ್ಟು ಬಿದ್ದಿರುತ್ತವೆ. ನಿಮಗೆ ಒಂದು ಅಪಘಾತದ ಕರ್ಮವಿದೆಯೆಂದಿಟ್ಟುಕೊಳ್ಳೋಣ. ಅದು ಕೇವಲ ಸಮಯಕ್ಕೆ ಕಟ್ಟುಬಿದ್ದಿರುತ್ತದೆ. ನೀವು ಆ ಸಮಯವನ್ನು ದಾಟಿದರೆ, ಆಗ ಆ ಕ್ರಿಯೆಯು ದೂರ ಹೋಗುತ್ತದೆ. ನಿಮಗೆ ಬೆಳಗ್ಗೆ ಕಾಫಿ ಕುಡಿಯದೆ ಬಂದಂತಹ ತಲೆನೋವಿನಂತೆ. ಅದು ಕೆಲವು ಗಂಟೆಗಳ ವರೆಗೆ ನೋಯುತ್ತದೆ, ನಂತರ ನೀವು ನೀರು ಕುಡಿಯುತ್ತೀರಿ, ತಿನ್ನುತ್ತೀರಿ ಮತ್ತು ಬೇರೆ ಏನನ್ನಾದರೂ ಮಾಡುತ್ತೀರಿ ಹಾಗೂ ತಲೆನೋವು ಮಾಯವಾಗುತ್ತದೆ. ನಿಮಗೆ ಅರ್ಥವಾಗುತ್ತಿದೆಯೇ? ಇದು, ಕರ್ಮದ ಬಗ್ಗೆ ಮಾತನಾಡಲು ನಾವು ಉಪಯೋಗಿಸಬಹುದಾದ ಒಂದು ಸರಿಯಾದ ಉದಾಹರಣೆ. ಅದೇ ರೀತಿಯಲ್ಲಿ ಜೀವನದಲ್ಲಿ, ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ನೀವು ತುಂಬಾ ಚಡಪಡಿಕೆಯನ್ನು ಅನುಭವಿಸುತ್ತೀರಿ ಅಥವಾ ನೀವೇನು ಮಾಡಿದರೂ ನಿಮಗೆ ಸಂತೋಷವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನೀವೇನೇ ಮಾಡುತ್ತಿದ್ದರೂ ನೀವು ತುಂಬಾ ಸಂತೋಷವನ್ನು ಅನುಭವಿಸುತ್ತೀರಿ. ಇದು ನಿಮಗಾಗಿಲ್ಲವೇ? ನೀವು ಗಮನಿಸಿದರೆ, ಒಂದು ವರ್ಷದ ಚಕ್ರದಲ್ಲಿ, ಫೆಬ್ರುವರಿಯಲ್ಲಿರಬಹುದು ಅಥವಾ ಡಿಸೆಂಬರ್ ನಲ್ಲಿರಬಹುದು ಅಥವಾ ಜನವರಿಯಲ್ಲಿರಬಹುದು, ಎಲ್ಲೋ ಕೆಲವು ಕಾಲಚಕ್ರದಲ್ಲಿ , ಒಂದು ನಿರ್ದಿಷ್ಟ ವಾರ ಅಥವಾ ಒಂದು ತಿಂಗಳು ಅಥವಾ ಒಂದು ಪಕ್ಷ ನೀವು ದುಃಖವನ್ನನುಭವಿಸುತ್ತೀರಿ ಮತ್ತು ನಂತರ ಒಂದು ನಿರ್ದಿಷ್ಟ ಚಕ್ರದಲ್ಲಿ ನೀವು ತುಂಬಾ ಸಂತೋಷವನ್ನು ಅನುಭವಿಸುತ್ತೀರಿ ಯಾಕೆಂದರೆ, ಮನಸ್ಸು, ಸಮಯ ಮತ್ತು ಕರ್ಮ, ಇವುಗಳೆಲ್ಲಾ ಜೋಡಲ್ಪಟ್ಟಿವೆ. ಆದುದರಿಂದ ಆ ಸಮಯದಲ್ಲಿ ಏನು ಮಾಡಬೇಕು? ಕೇವಲ ಅದನ್ನು ತಿಳಿಯುವುದರಿಂದಲೇ ನೀವು ಅದರಿಂದ ಮೇಲೆತ್ತಲ್ಪಡುತ್ತೀರಿ ಎಂದು ಹೇಳುತ್ತಾರೆ. "ಓಹ್, ಇದು ಫೆಬ್ರುವರಿ, ಪ್ರತಿ ವರ್ಷವೂ ಈ ತಿಂಗಳಿನಲ್ಲಿ ನನಗಿದು ಆಗುತ್ತಾ ಇದೆ. ಹೇಗಿದ್ದರೂ, ನಾನಿದನ್ನು ದಾಟಿ ಹೋಗುತ್ತೇನೆ. ನಾನು ಹೆಚ್ಚು ಧ್ಯಾನ, ಸತ್ಸಂಗಗಳು ಮತ್ತು ಹಾಡುವುದನ್ನು ಮಾಡುತ್ತೇನೆ". ಯೋಗ ಮಾಡುವುದು, ಜ್ಞಾನದ ಚರ್ಚೆಗಳಲ್ಲಿ ಕುಳಿತುಕೊಳ್ಳುವುದು, ಇವುಗಳೆಲ್ಲಾ ಈ ಶಕ್ತಿಯನ್ನು ಬದಲಾಯಿಸುತ್ತವೆ. ಇದೆಲ್ಲಾ ಸಮಯಕ್ಕಿಂತ ಮೇಲಿದೆ ಮತ್ತು ಅದಕ್ಕಾಗಿಯೇ ಸಾಧನೆ - ಯಾವುದು ನಿಜವಾದ ಸಂಪತ್ತು ಎಂದು ಕರೆಯಲ್ಪಡುತ್ತದೋ ಅದು - ನಿಮ್ಮನ್ನು ಆಕಾಶ, ಸಮಯ ಮತ್ತು ಕರ್ಮ ಸಂಕೀರ್ಣದಿಂದ ಮೇಲಕ್ಕೊಯ್ಯುತ್ತದೆ. ಆದುದರಿಂದಲೇ ಸಾಧನೆಯ ಮೂಲಕ ಕರ್ಮವನ್ನು ಕಡಿಮೆ ಮಾಡಬಹುದು, ಸಮಯದ ಕೆಟ್ಟ ಪರಿಣಾಮಗಳನ್ನು ಇಲ್ಲವಾಗಿಸಬಹುದು ಮತ್ತು ನಿಮ್ಮ ಚೈತನ್ಯವನ್ನು ಉದ್ಧರಿಸಬಹುದು. ಅದಕ್ಕಾಗಿಯೇ ಅದು ಸಾಧನೆಯೆಂದು ಕರೆಯಲ್ಪಡುತ್ತದೆ. ಆದರೆ ವಿಷಯವೇನೆಂದರೆ ನೀವು ಅದನ್ನು ಆ ಸಮಯದಲ್ಲಿ ಮಾಡಲು ಬಯಸುವುದಿಲ್ಲ! ನಿಮಗೆ ನಿಜವಾಗಿ ಅದರ ಅಗತ್ಯವಿರುವಾಗ ನೀವು ಅದನ್ನು ಮಾಡಲು ಬಯಸುವುದಿಲ್ಲ. ಇದು ತುಂಬಾ ಸಂಕೀರ್ಣವಾದುದು. ಅದು ಹೇಗೆಂದರೆ, ಒಬ್ಬರಿಗೆ ರೋಗ ಬಂದಿರುತ್ತದೆ ಮತ್ತು ಆ ಸಮಯದಲ್ಲೇ ಅವರು ಔಷಧಿಯನ್ನು ತೆಗೆದುಕೊಳ್ಳಲು ಬಯಸದೆ ಇರುವುದು. ಒಬ್ಬರಿಗೆ ತುಂಬಾ ಛಳಿಯಾಗುತ್ತಿರುತ್ತದೆ ಮತ್ತು ನೀವು ಅವರಿಗೆ ಹೇಳುತ್ತೀರಿ, "ಬಾ, ಇದು ತುಂಬಾ ಒಳ್ಳೆಯ ಉಣ್ಣೆಯ ಜಾಕೆಟ್". ಅವರನ್ನುತ್ತಾರೆ, "ಇಲ್ಲ, ನಾನು ಅದನ್ನು ಧರಿಸಲು ಬಯಸುವುದಿಲ್ಲ, ನನಗೆ ಛಳಿಯಾಗುತ್ತಿದೆ". ಆಗ ನೀವು ಅವರಿಗೆ ಏನು ಹೇಳಲು ಸಾಧ್ಯ?! ಇದು ಕರಾರುವಕ್ಕಾಗಿ ಹೀಗೆಯೇ ಇರುವುದು. ನಮಗೆ ನಿಜವಾಗಿ ಅದರ ಅಗತ್ಯವಿರುವಾಗ, ನಮ್ಮ ಮನಸ್ಸು ತಡೆಯೊಡ್ಡುತ್ತದೆ. ಆದುದರಿಂದ ನಮ್ಮ ಮನಸ್ಸು ನಮ್ಮ ಉತ್ತಮ ಸ್ನೇಹಿತ ಮತ್ತು ಕೆಟ್ಟ ವೈರಿ. ನಿಮಗೆ ಹೊರಗೆ ಯಾವುದೇ ವೈರಿಯಿಲ್ಲ, ಅದು ಕೇವಲ ಇಲ್ಲಿದೆ. ಆದುದರಿಂದ ನಿಮ್ಮದೇ ಮನಸ್ಸಿನೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳಿ ಮತ್ತು ಅದನ್ನೇ ನಾವಿಲ್ಲಿ ಮಾಡುತ್ತಿರುವುದು, ಅದಕ್ಕೆ ಹೊಳಪು ಕೊಡುತ್ತಿರುವುದು. ಪ್ರಶ್ನೆ: ನಾನು ಈ ಪಥದಲ್ಲಿ ಹತ್ತು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇದ್ದೇನೆ ಮತ್ತು ನಾನು ಇದರಿಂದ ತುಂಬಾ ಸಂತೋಷಗೊಂಡಿದ್ದೇನೆ. ಹೀಗೇ ಯೋಚಿಸುತ್ತಿದ್ದೆ, ನಿಜವಾಗಿ ತುಂಬಾ ಸಮಯ ಇರುವಂತೆ ತೋರುವ ತಡೆಗಳನ್ನು ಏನು ಮಾಡುವುದು? ನನ್ನ ಕೆಳ ಚಕ್ರದಲ್ಲಿನ ಶಕ್ತಿಯು ಕಡಿಮೆಯಿದೆ. ವಿಷಯಗಳು ಒಳ್ಳೆಯದಾಗಲು ಇನ್ನೂ ಅವಕಾಶವಿದೆಯೇ? ಶ್ರೀ ಶ್ರೀ ರವಿಶಂಕರ್: ಹೌದು, ಖಂಡಿತವಾಗಿ. ನೀನು ಸಂತೋಷವಾಗಿದ್ದರೆ, ಆಗ ವಿಷಯಗಳು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ. ಕೆಳಗಿನ ಚಕ್ರವು ಹೆಚ್ಚು ಸಕ್ರಿಯವಾಗುವುದರ ಬಗ್ಗೆ ಚಿಂತಿಸಬೇಡ. ಅದನ್ನು ಹೆಚ್ಚು ಸಕ್ರಿಯವಾಗಿಸಲು ಯಾಕೆ ಬಯಸುತ್ತೀಯಾ? ಸುಮ್ಮನೇ ಅದನ್ನು ಹಾಗೇ ಇರಲು ಬಿಡು, ಅದನ್ನು ಪ್ರಕೃತಿಗೆ ನೋಡಿಕೊಳ್ಳಲು ಬಿಡು. ಪ್ರಶ್ನೆ: ನಾವು ಜೀವನ ಕಲೆಯಲ್ಲಿ ಮಾಡುತ್ತಿರುವುದೆಲ್ಲವೂ, ಎಚ್ಚೆತ್ತು ಸಾಕ್ಷಾತ್ಕಾರ ಪಡೆದುಕೊಳ್ಳಲಿರುವುದೇ ಅಥವಾ ಕೇವಲ ಹಿತವನ್ನನುಭವಿಸಲೇ? ವೈಯಕ್ತಿಕವಾಗಿ, ನಾನು ಎಚ್ಚೆತ್ತುಕೊಳ್ಳಲು ಇಷ್ಟ ಪಡುತ್ತೇನೆ. ಶ್ರೀ ಶ್ರೀ ರವಿಶಂಕರ್: ಇಲ್ಲಿ, ಇದೊಂದು ಸಮುದ್ರವಿದ್ದಂತೆ, ಎಲ್ಲವೂ ಲಭ್ಯವಿದೆ. ನೀನು ಕೇವಲ ಸಮುದ್ರ ತೀರದಲ್ಲಿ ನಡೆಯಲು ಬಯಸಿದರೆ, ನಿನಗೆ ಸ್ವಾಗತ. ನೀನು ಆಳಕ್ಕೆ ಹೋಗಿ ಎಣ್ಣೆಯನ್ನು ಹುಡುಕಲು ಬಯಸಿದರೆ, ಅದೂ ಲಭ್ಯವಿದೆ. ಈ ಪಥವು ಒಂದು ಸಮುದ್ರದಂತೆ, ನೀವು ಉಪ್ಪನ್ನು ತೆಗೆದುಕೊಳ್ಳಬಹುದು, ನೀವು ಎಣ್ಣೆಯನ್ನು ತೆಗೆದುಕೊಳ್ಳಬಹುದು, ನೀವು ಮೀನು ಹಿಡಿಯಲು ಹೋಗಬಹುದು ಮತ್ತು ನೀವು ದಶಲಕ್ಷ ಕಾರಣಗಳಿಗಾಗಿ ಹೋಗಬಹುದು. ಖಂಡಿತವಾಗಿ, ಆತ್ಮ ಸಾಕ್ಷಾತ್ಕಾರವು ತಳದಲ್ಲಿದೆ. ನೀನು ಅದನ್ನು ಪಡೆಯಲು ಬಯಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಜನರು ಅದನ್ನು ಪಡೆಯಲು ಹೋಗಬೇಕೆಂದು ನಾನು ಬಯಸುತ್ತೇನೆ. ನಿನಗೆ ಇದು ಬೇಕೆಂಬ ಬಯಕೆಯಿರುವುದು ನನಗೆ ತುಂಬಾ ಇಷ್ಟವಾಗಿದೆ; ನೀನು ಇಲ್ಲಿರುವುದು ಕೇವಲ ಸೌಕರ್ಯಕ್ಕಾಗಿಯಲ್ಲ. ಅದು ತುಂಬಾ ಒಳ್ಳೆಯದು. ಬನ್ನಿ, ನಮಗೆ ಮಾಡಲು ತುಂಬಾ ಕೆಲಸಗಳಿವೆ.

ಭಾನುವಾರ, ಏಪ್ರಿಲ್ 29, 2012

ಆಧ್ಯಾತ್ಮದ ಮೂಲಕ ನಿಮ್ಮನ್ನು ನೀವು ಅರಿಯಿರಿ


ನಾರ್ವೆ


ನೋಡಿ ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ನಿಮ್ಮನ್ನು ನೀವೇ ತುಂಬಾ ತೂಗಿ ನೋಡಬೇಡಿ. ನಮ್ಮಲ್ಲಿ ಈ ಪ್ರವೃತ್ತಿಯಿದೆ, ನಾವು ನಮ್ಮನ್ನೇ ತುಂಬಾ ತೂಗಿ ನೋಡುತ್ತೇವೆ  ಅಥವಾ ಇತರರನ್ನು ತೂಗಿ ನೋಡುತ್ತೇವೆ. ಒಂದೋ ನೀವು ನಿಮ್ಮನ್ನೇ ದೂಷಿಸಲು ತೊಡಗುತ್ತೀರಿ, ಅಥವಾ ಬೇರೆ ಯಾರನ್ನಾದರೂ ದೂಷಿಸುತ್ತೀರಿ. ಒಂದೋ ನೀವು ಸರಿಯಿಲ್ಲವೆಂದು ಅಂದುಕೊಳ್ಳುತ್ತೀರಿ, ಅಥವಾ ಬೇರೆ ಯಾರದರೂ ಸರಿಯಿಲ್ಲವೆಂದು ಅಂದುಕೊಳ್ಳುತ್ತೀರಿ. ನೀವು ಎಚ್ಚೆತ್ತುಕೊಳ್ಳಬೇಕು ಮತ್ತು ತೂಗಿ ನೋಡುವುದನ್ನು ನಿಲ್ಲಿಸಬೇಕು.
ನಿಮ್ಮ ಮೇಲೇ ನೀವೇ ತುಂಬಾ ಕಠಿಣವಾಗಿ ವರ್ತಿಸಬೇಡಿ. ನೀವು ಆಗುಹೋಗುಗಳ ಒಂದು ಭಾಗ. ಮರಗಳಿರುವಂತೆ, ನದಿಗಳಿರುವಂತೆ, ಪಕ್ಷಿಗಳಿರುವಂತೆ ನೀವು ಕೂಡಾ ಇಲ್ಲಿದ್ದೀರಿ. ಹಲವಾರು ಪಕ್ಷಿಗಳು ಹುಟ್ಟುತ್ತಿವೆ, ಹಲವಾರು ಪಕ್ಷಿಗಳು ಸಾಯತ್ತಿವೆ, ಅಲ್ಲವೇ? ಹಲವಾರು ಮರಗಳು ಮೇಲೇಳುತ್ತವೆ ಮತ್ತು ಅವುಗಳೆಲ್ಲಾ ಮಾಯವಾಗುತ್ತವೆ. ಈ ರೀತಿಯಲ್ಲಿ, ಹಲವಾರು ಜನರು, ಹಲವಾರು ಶರೀರಗಳು ಬಂದಿವೆ ಮತ್ತು ಅವುಗಳೆಲ್ಲಾ ಮಾಯವಾಗುತ್ತವೆ. ನಂತರ ಹೊಸ ಜನರು ಬರುತ್ತಾರೆ ಮತ್ತು ಅವರು ಮಾಯವಾಗುತ್ತಾರೆ.
ಈ ಭೂಮಿಯು ಕೋಟ್ಯಾಂತರ ವರ್ಷಗಳಿಂದ ಇದೆ. ನಿಮ್ಮ ಜೀವನವನ್ನು ಒಂದು ದೊಡ್ಡ ಹಿನ್ನೆಲೆಗೆ ಹೋಲಿಸಿ ನೋಡಿ, ಆಗ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸುವಿರಿ. ಆಧ್ಯಾತ್ಮಿಕ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸಬೇಕು. ಯಾಕೆಂದರೆ, ನೀವು ಯಾರನ್ನು ದೂಷಿಸುತ್ತೀರೋ ಅವರೊಂದಿಗಿರಲು ನೀವು ಇಷ್ಟಪಡುತ್ತೀರಾ? ನಿಮಗೆ ಯಾರ ಬಗ್ಗೆ ಅಸಮಾಧಾನವಿದೆಯೋ ಅವರೊಂದಿಗಿರಲು ನೀವು ಇಷ್ಟಪಡುತ್ತೀರಾ? ಇಲ್ಲ! ಆದುದರಿಂದ, ನೀವು ನಿಮ್ಮನ್ನೇ ದೂಷಿಸಿಕೊಂಡರೆ, ನಿಮಗೆ ನಿಮ್ಮೊಂದಿಗಿರಲು ಸಾಧ್ಯವಿಲ್ಲ. ಆಧ್ಯಾತ್ಮವೆಂದರೆ, ನಿಮ್ಮೊಂದಿಗೆ ನಿಮ್ಮದೇ ಭೇಟಿ. ಆದುದರಿಂದ ಆಧ್ಯಾತ್ಮಿಕ ಪಯಣ ಅಥವಾ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸುವುದು. ಈಗ, "ಓಹ್! ಅದರರ್ಥ ನಾನೀಗ ಇತರರನ್ನು ದೂಷಿಸಬಹುದು" ಎಂದು ಹೇಳಬೇಡಿ. ಇಲ್ಲ! ಪ್ರತಿ ಸಲವೂ ನೀವು ಯಾರನ್ನಾದರೂ ದೂಷಿಸಿದಾಗ, ನೀವು ಅವರನ್ನು ಯಾಕೆ ದೂಷಿಸಿದಿರೆಂದು ಒಂದು ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ಅದು ತಪ್ಪೆಂದು ಮತ್ತು ಅದು ನಿಷ್ಪ್ರಯೋಜಕವಾದುದೆಂದು ನಿಮಗೆ ತಿಳಿಯುತ್ತದೆ. ಈಗ, ನಿಮ್ಮ ನಿರ್ಣಯಗಳು ತಪ್ಪೆಂಬುದು ನಿಮಗೆ ತಿಳಿದಾಗ, ಕೂಡಲೇ ನೀವು ನಿಮ್ಮನ್ನೇ ದೂಷಿಸಲು ತೊಡಗಬಹುದು. ಆದುದರಿಂದ, ಇತರರನ್ನು ದೂಷಿಸಬೇಡಿ ಎಂದು ನಾನು ನಿಮಗೆ ಹೇಳುವುದು. ಯಾಕೆಂದರೆ, ನೀವು ಇತರರನ್ನು ದೂಷಿಸಿದರೆ, ಅದು ನಿಮ್ಮ ಮೇಲೆ ತಿರುಗಿ ಬೀಳಲಿದೆ. ನೀವು ಯಾರನ್ನೂ ದೂಷಿಸಬಾರದು. ಈ ಇಡೀ ೫೬ ವರ್ಷಗಳಲ್ಲಿ ನಾನು ಯಾರಿಗೂ ಒಂದೇ ಒಂದು ಕೆಟ್ಟ ಶಬ್ದವನ್ನು ಹೇಳಿಲ್ಲ. ನನ್ನ ಬಾಯಿಯಿಂದ ಹೊರಬಂದ ಅತೀ ಕೆಟ್ಟ ಶಬ್ದವೆಂದರೆ "ಮೂರ್ಖ", ಇದಕ್ಕಿಂತ ಹೆಚ್ಚಿನದೇನೂ ಅಲ್ಲ. ನಾನು ಯಾವತ್ತೂ ಯಾರನ್ನೂ ದೂಷಿಸಿಲ್ಲ ಅಥವಾ ಯಾವತ್ತೂ ಯಾವುದೇ ಕೆಟ್ಟ ಶಬ್ದಗಳನ್ನು ಹೇಳಿಲ್ಲ. ಅದು ನನ್ನಿಂದ ಬರಲೇ ಇಲ್ಲ. ಹಾಗಾಗಲು ನಾನೇನೂ ಮಾಡಿಲ್ಲ; ಇದು ಪ್ರಾರಂಭದಿಂದಲೇ ಸ್ವಾಭಾವಿಕವಾಗಿ ಹಾಗಿತ್ತು. ನನಗೆ ಯಾರನ್ನೂ ನಿಂದಿಸಲು ಆಗುತ್ತಿರಲಿಲ್ಲ; ಮಾತಿನಿಂದ  ಅಥವಾ ಇತರ ಯಾವುದೇ ರೀತಿಯಲ್ಲಿ. ನೀವು ಇದರ ಬಗ್ಗೆ ಗಮನ ಕೊಟ್ಟಾಗ, ನೀವು ಕೆಟ್ಟ ಪದಗಳನ್ನುಪಯೋಗಿಸುವುದನ್ನು ನಿಲ್ಲಿಸಿದಾಗ, ನಿಮ್ಮ ಮಾತಿಗೆ ಆಶೀರ್ವದಿಸುವ ಶಕ್ತಿ ಸಿಗುತ್ತದೆ ಮತ್ತು ನಿಮ್ಮ ಆಶೀರ್ವಾದಗಳು ಕೆಲಸ ಮಾಡುತ್ತವೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ಆದುದರಿಂದ, ನಿಮ್ಮನ್ನು ನೀವೇ ದೂಷಿಸುವುದನ್ನು ನಿಲ್ಲಿಸಿ ಮತ್ತು ಇತರರನ್ನು ದೂಷಿಸುವುದನ್ನು ನಿಲ್ಲಿಸಿ. ಎಲ್ಲವೂ ಅವುಗಳಿರುವ ರೀತಿಯಲ್ಲೇ ಇವೆ, ಕೇವಲ ಮುಂದೆ ಸಾಗಿ ಮತ್ತು ಅಷ್ಟೆ.
ಕೆಲವೊಮ್ಮೆ ಜನರನ್ನುತ್ತಾರೆ, "ಓಹ್! ಇವನೊಬ್ಬ ಮೋಸಗಾರ. ಅವನು ಪ್ರಾಮಾಣಿಕನಲ್ಲ". ಆದರೆ, ಯಾವುದು ಪ್ರಾಮಾಣಿಕತೆ ಯಾವುದು ಮೋಸ ಎಂದು ಹೇಳಲು ಒಬ್ಬರಲ್ಲಿ ಏನಾದರೂ ಮಾನದಂಡಗಳಿರಬೇಕು. ಹಲವು ಸಲ, ಒಬ್ಬರ ಬಗ್ಗೆ ನಿರ್ಣಯಿಸಲು ನಿಮ್ಮಲ್ಲಿ ಯಾವುದೇ ಮಾನದಂಡ ಕೂಡಾ ಇರುವುದಿಲ್ಲ, ನೀವು ಸುಮ್ಮನೇ ಒಬ್ಬರನ್ನು ದೂಷಿಸುತ್ತೀರಿ, "ಓಹ್! ಅವನೊಬ್ಬ ಮೋಸಗಾರ" ಮತ್ತು ಅಷ್ಟೆ, ಮುಗಿಯಿತು.
ಇತರರನ್ನು ಮತ್ತು ತಮ್ಮನ್ನು ತಾವೇ ದೂಷಿಸುವುದು ಹಾಗೂ ನಂತರ ಅದರ ಬಗ್ಗೆ ತಪ್ಪಿತಸ್ಥ ಅಭಿಪ್ರಾಯ ಪಡುವುದು - ಇದು ಸಮಾಜದಲ್ಲಿ ಬೆಳೆದಿರುವ ಒಂದು ಪ್ರಜ್ಞೆಯಿಲ್ಲದ ಪ್ರವೃತ್ತಿ. ಆಧ್ಯಾತ್ಮ ಪಯಣವಿರುವುದು ಇದನ್ನು ತೆಗೆದುಹಾಕಿ ಇದಕ್ಕೆ ವ್ಯತಿರಿಕ್ತವಾದುದನ್ನು ಮಾಡಲು. ಇದು ಅಷ್ಟೊಂದು ಸೂಕ್ಷ್ಮ ಸಂಗತಿ. ಇದರರ್ಥ ನೀವು ಮಾಡಿದ ತಪ್ಪುಗಳನ್ನೆಲ್ಲಾ ನೀವು ಸರಿಯೆಂದು ಸಾಧಿಸಬಹುದೆಂದಲ್ಲ. ನೀವು ಏನಾದರೂ ತಪ್ಪು ಮಾಡಿದಾಗ, ನೀವು, "ಓಹ್, ನಾನು ಆಧ್ಯಾತ್ಮಿಕ ಪಥದಲ್ಲಿದ್ದೇನೆ, ನಾನು ನನ್ನ ತಪ್ಪನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ನಾನು ನನ್ನನ್ನೇ ದೂಷಿಸಲು ಸಾಧ್ಯವಿಲ್ಲ. ಆದುದರಿಂದ ನಾನು ಮಾಡಿದ್ದೆಲ್ಲಾ ಸರಿ" ಎಂದು ಹೇಳುತ್ತೀರಿ, ಇಲ್ಲ! ಅದು ಅಷ್ಟೊಂದು ಸೂಕ್ಷ್ಮ ಸಮತೋಲನ. ಅದು ನಿಮ್ಮ ತಪ್ಪನ್ನು ಸರಿಯೆಂದು ಸಾಧಿಸುವುದಲ್ಲ ಆದರೆ ನಿಮ್ಮ ತಪ್ಪನ್ನು ಗುರುತಿಸಿ, ಅದೇ ಸಮಯದಲ್ಲಿ  ನಿಮ್ಮನ್ನು ನೀವೇ ದೂಷಿಸದಿರುವುದು.
ನೀವು ನಿಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳನ್ನು ಗುರುತಿಸದಿದ್ದರೆ ನಿಮ್ಮಲ್ಲಿ ಸುಧಾರಣೆಯಾಗಲು ಸಾಧ್ಯವಿಲ್ಲ. ಅಲ್ಲಿಗೆ ಕಥೆ ಮುಗಿಯಿತು. ಅದೇ ಸಮಯದಲ್ಲಿ, ನೀವು ನಿಮ್ಮ ತಪ್ಪನ್ನು ಗುರುತಿಸಿ, ತುಂಬಾ ತಪ್ಪಿತಸ್ಥ ಅಭಿಪ್ರಾಯ ಪಟ್ಟು, ನಿಮ್ಮನ್ನು ನೀವೇ ದೂಷಿಸುತ್ತಾ ಇದ್ದರೆ, ಆಗ ಕೂಡಾ ಅದೊಂದು ನಿರಾಶಾದಾಯಕ ವಿಷಯವಾಗುತ್ತದೆ. ಆದುದರಿಂದ ನಿಮ್ಮಲ್ಲಿ ಆ ಬಹಳ ಸೂಕ್ಷ್ಮ ಸಮತೋಲನವಿರಬೇಕಾದ ಅಗತ್ಯವಿದೆ. ಬ್ಲೇಡಿನ ಮೊನೆಯಲ್ಲಿ ನಡೆಯಬೇಕು, ಈ ಬದಿಯೂ ಅಲ್ಲ ಆ ಬದಿಯೂ ಅಲ್ಲ.
ಪ್ರಶ್ನೆ: ನಾವು ಮುಖ್ಯವಲ್ಲದಿದ್ದರೆ, ಈ ಶಿಬಿರದಲ್ಲಿ ನಮಗಾಗಿ ಇಷ್ಟೊಂದು ಹಣ, ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಉಪಯೋಗಿಸುತ್ತಿರುವುದು ಯಾಕೆ? ನಮ್ಮಲ್ಲಿ ಪ್ರತಿಯೊಬ್ಬರೂ ಲೆಕ್ಕಕ್ಕಿಲ್ಲದಿದ್ದರೆ, ನಾವು ಆಧ್ಯಾತ್ಮಿಕರೆಲ್ಲಾ ಯಾಕಾಗಬೇಕು? ಇತರರು ಲೆಕ್ಕಕ್ಕಿಲ್ಲದಿದ್ದರೆ, ನಾವು ಒಳ್ಳೆಯವರಾಗಿರುವ ಮೂಲಕ ಯಾರಿಗೆ ಸಹಾಯ ಮಾಡುತ್ತಿದ್ದೇವೆ?
ಶ್ರೀ ಶ್ರೀ ರವಿಶಂಕರ್:
ನಿನಗೆ ಈ ಪ್ರಶ್ನೆಗೆ ಉತ್ತರ ಬೇಕಾ? ಅದೂ ಲೆಕ್ಕಕ್ಕಿಲ್ಲ! ನೀನು ಈ ಪ್ರಶ್ನೆಯ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿದ್ದೀಯಾ? ಅದು ಒಂದು ವಿಷಯವಲ್ಲ!
ಕೇಳು; ಅಸ್ಥಿತ್ವದಲ್ಲಿ ಹಲವಾರು ಮಟ್ಟಗಳಿವೆ, ಆದರೆ ಜ್ಞಾನದ ಎರಡು ಮಟ್ಟಗಳಿವೆ. ಒಂದು ಅನ್ವಯಿಸುವ ಜ್ಞಾನ ಮತ್ತು ಇನ್ನೊಂದು ಶುದ್ಧ ಜ್ಞಾನ. ಶುದ್ಧ ವಿಜ್ಞಾನ (ಪ್ಯೂರ್ ಸಯನ್ಸ್) ಮತ್ತು ಅನ್ವಯಿಸುವ ವಿಜ್ಞಾನ (ಅಪ್ಲೈಡ್ ಸಯನ್ಸ್). ಶುದ್ಧ ವಿಜ್ಞಾನವೆಂದರೇನು? ಈ ಕೋಣೆಯಲ್ಲಿ ಎಲ್ಲವೂ ಮರದಿಂದ ಮಾಡಲ್ಪಟ್ಟಿದೆ. ಸೋಫವು ಮರ, ಮೇಜು ಮರ ಮತ್ತು ಬಾಗಿಲು ಮರವಾಗಿದೆ. ಆದುದರಿಂದ ಇದೆಲ್ಲವೂ ಮರ. ಇನ್ನೂ ಹೆಚ್ಚು ನಿಖರವಾಗಿ ಹೇಳಬೇಕಾದರೆ ಎಲ್ಲವೂ ಪರಮಾಣುಗಳು! ಏನದು? ಎಲ್ಲವೂ ಪರಮಾಣುಗಳು! ಆದುದರಿಂದ ಎಲ್ಲವೂ ಮರದಿಂದ ಮಾಡಲ್ಪಟಿವೆ ಅಥವಾ ಎಲ್ಲವೂ ಪರಮಾಣುಗಳು - ಇದು ಶುದ್ಧ ವಿಜ್ಞಾನ. ಎಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿದ್ದರೂ ಕೂಡಾ, ನೀವು ಸೋಫವನ್ನು ಬಾಗಿಲಾಗಿ ಅಥವಾ ಬಾಗಿಲನ್ನು ಸೋಫವಾಗಿ ಉಪಯೋಗಿಸಲು ಸಾಧ್ಯವಿಲ್ಲ. ನಿಮಗೆ ಅರ್ಥವಾಯಿತಾ?
ನೋಡಿ, ವಜ್ರ ಮತ್ತು ಇದ್ದಿಲುಗಳು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿವೆ. ಅವುಗಳು ವಸ್ತುತಃ ಒಂದೇ. ಆದರೆ ಇದ್ದಿಲನ್ನು ನೀವು ನಿಮ್ಮ ಕಿವಿಗಳಲ್ಲಿ ನೇತಾಡಿಸಲು ಸಾಧ್ಯವಿಲ್ಲ ಮತ್ತು ವಜ್ರವನ್ನು ಒಲೆಯಲ್ಲಿ ಹಾಕಲು ಸಾಧ್ಯವಿಲ್ಲ, ಸರಿಯಾ?!
ಆದುದರಿಂದ, ಒಂದು ಹಂತದಲ್ಲಿ ಅವುಗಳು ಬೇರೆ ಬೇರೆ. ಅದು, ಮಂಜುಗಡ್ಡೆ ಮತ್ತು ನೀರು ಒಂದೇ ಎಂದು ಹೇಳುವಂತೆ, ಅದು ಕೇವಲ H2O. ಆದರೆ ನೀವು ನೀರಿನಿಂದ ಚಾ ತಯಾರಿಸಬಹುದು, ಮಂಜುಗಡ್ಡೆಯಿಂದ ಚಾ ತಯಾರಿಸಲು ಸಾಧ್ಯವಿಲ್ಲ. ಮಂಜುಗಡ್ಡೆಯು ನೀರಾಗಬೇಕು, ಆಮೇಲೆ ಮಾತ್ರವೇ ನೀವು ಅದರಿಂದ ಚಾ ತಯಾರಿಸಬಹುದು. ಅಲ್ಲವೇ? ಆದುದರಿಂದ ಅದು ಅನ್ವಯಿಸಿದ ಜ್ಞಾನ.
ಆದುದರಿಂದ, ಶುದ್ಧ ಜ್ಞಾನದಲ್ಲಿ, ನೀವು ಮುಖ್ಯವಲ್ಲ ಎಂದು ಹೇಳಲಾಗಿದೆ. ಯಾಕೆ? ಯಾಕೆಂದರೆ, ಅಚಾನಕ್ಕಾಗಿ ನೀವು ನಿಮ್ಮ ಜೀವನವನ್ನು ವಿಶ್ವಕ್ಕೆ ಹೋಲಿಸಿ ನೋಡುತ್ತೀರಿ. ಅದರರ್ಥ ನೀವು ತಿನ್ನಬಾರದೆಂದಲ್ಲ. ನೀವು ಮುಖ್ಯವಲ್ಲದಿದ್ದರೆ, ಮತ್ತೆ ಯಾಕೆ ಅಸ್ಥಿತ್ವದಲ್ಲಿರಬೇಕು? ಯಾಕೆ ತಿನ್ನಬೇಕು? ಯಾಕೆ ನಿದ್ರಿಸಬೇಕು? ಏನನ್ನಾದರೂ ಯಾಕೆ ಮಾಡಬೇಕು? ಸರಿಯಾ?! ನೀವು ಅದೆಲ್ಲವನ್ನೂ ಮಾಡಬೇಕು, ಮತ್ತು ಆದುದರಿಂದ ನೀವು ಶಿಬಿರದಲ್ಲಿ ಕೂಡಾ ಇರಬೇಕು. ತಿಳಿಯಿತಾ?
ಇಲ್ಲಿರುವುದರಿಂದ ಏನಾಗುತ್ತದೆ? ಮನಸ್ಸು ಶಕ್ತಿಯುತವಾಗುತ್ತದೆ, ಶರೀರ ಶಕ್ತಿಯುತವಾಗುತ್ತದೆ ಮತ್ತು ಜ್ಞಾನವು ನಿಮ್ಮಲ್ಲಿ ಮನೆಮಾಡುತ್ತದೆ. ಹಲವಾರು ಸಂಗತಿಗಳು ಆಗುತ್ತವೆ.
ಪ್ರಶ್ನೆ: ಧ್ಯಾನ ಮಾಡುವಾಗ ಮತ್ತು ವಿಶ್ರಾಂತಿ ತೆಗೆದುಕೊಳ್ಳುವಾಗ ಅಳುವುದು ಸರಿಯೇ?
ಶ್ರೀ ಶ್ರೀ ರವಿಶಂಕರ್:
ಅತ್ತರೆ ಪರವಾಗಿಲ್ಲ. ಒಂದು ಅಥವಾ ಎರಡು ಸಲ ಪರವಾಗಿಲ್ಲ ಆದರೆ ಎಲ್ಲಾ ಸಮಯದಲ್ಲೂ ಆ ಅಭ್ಯಾಸವನ್ನು ಪ್ರೋತ್ಸಾಹಿಸಬೇಡ. ವಿಶೇಷವಾಗಿ, ಎಲ್ಲರೂ ಧ್ಯಾನ ಮಾಡುತ್ತಿರುವಾಗ ಮತ್ತು ಅಲ್ಲಿ ನಿಶ್ಯಬ್ದತೆಯಿರುವಾಗ, ಆ ಸಂವೇದನೆಗಳನ್ನು ಗಮನಿಸಿ ಅವುಗಳನ್ನು ಹೋಗಲು ಬಿಡುವುದು ಒಳ್ಳೆಯದು.
ಪ್ರಶ್ನೆ: ಹಗಲು ಹೊತ್ತಿನಲ್ಲಿ ಒಂದು ಹಗುರವಾದ ನಿದ್ರೆ ಮಾಡುವುದು ಸರಿಯೇ?
ಶ್ರೀ ಶ್ರೀ ರವಿಶಂಕರ್:
ನೀವು ೪೫ ವರ್ಷ ವಯಸ್ಸನ್ನು ದಾಟಿದ್ದರೆ ಸರಿ, ಆದರೆ ಅದರ ಮೊದಲಲ್ಲ.
ಪ್ರಶ್ನೆ: ನನಗೆ ಏನೂ ಅನ್ನಿಸದೇ ಇದ್ದರೆ ಏನು?
ಶ್ರೀ ಶ್ರೀ ರವಿಶಂಕರ್:
  ನಿನಗೆ ಖಾಲಿತನ ಅನುಭವವಾಗುತ್ತಿದೆಯೇ? ಅದೂ ಏನೋ ಒಂದು! ಕೆಲವೊಮ್ಮೆ ನೀವು ಅನುಭವಿಸಲು ಬಯಸುತ್ತೀರಿ. ನೀವು ಇತರರ ಅನುಭವಗಳ ಬಗ್ಗೆ ಕೇಳುತ್ತೀರಿ ಮತ್ತು ಕುಳಿತುಕೊಂಡು ಅವುಗಳನ್ನು ಅನುಭವಿಸಲು ಬಯಸುತ್ತೀರಿ ಹಾಗೂ ಆಗಲೇ ಅದು ಆಗದಿರುವುದು. ಏನಾದರೂ ಅನುಭವಿಸಬೇಕೆಂದಿರುವ ಬಯಕೆಯನ್ನು ಬಿಟ್ಟು ಬಿಡಿ. ನೀವು ನನ್ನೊಂದಿಗಿದ್ದೀರಾ?
ನೋಡಿ, ಒಂದು ನಿರೀಕ್ಷೆ ಅಥವಾ ಅತೀ ಹೆಚ್ಚಿನ ಜಾಗರೂಕತೆಯು ನಿಮ್ಮನ್ನು ಮೆದುಳಿನ ಮುಂಭಾಗದ ಹಾಲೆಯಲ್ಲಿರಿಸುತ್ತದೆ ಮತ್ತು ನೀವು ತುಂಬಾ ಜಾಗರೂಕರಾಗಿರುತ್ತೀರಿ. ಆ ಸಮಯದಲ್ಲಿ, ನಿಮಗೆ ನಿದ್ರೆ ಮಾಡಲು ಸಾಧ್ಯವಿಲ್ಲ, ನಿಮಗೆ ಆರಾಮವಾಗಿರಲು ಸಾಧ್ಯವಿಲ್ಲ ಮತ್ತು ನಿಮಗೆ ಆಳಕ್ಕೆ ಹೋಗಿ ಏನನ್ನಾದರೂ ಅನುಭವಿಸಲು ಕೂಡಾ ಸಾಧ್ಯವಿಲ್ಲ. ಆದುದರಿಂದ ಅದು ಒಂದು ಸಾಧ್ಯತೆ.
ಎರಡನೆಯದು, ನಿಮ್ಮಲ್ಲಿ ಹಲವರು ಕೇಳಿದ್ದೀರಿ, "ನಾನು ಏನು ಮಾಡಲಿ, ಎಲ್ಲಾ ಸಮಯವೂ ನಾನು ನಿದ್ರಿಸುತ್ತೇನೆ". ನಾವು ನಮ್ಮ ವ್ಯವಸ್ಥೆಯನ್ನು, ಅದಕ್ಕೆ ಅಗತ್ಯವಿದ್ದ ನಿದ್ರೆಯಿಂದ ವಂಚಿಸಿರಬೇಕು ಮತ್ತು ಆದುದರಿಂದ ಶರೀರವು ಅದನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಸಕ್ಕರೆಯ ಅಂಶವು ಕಡಿಮೆ ಅಥವಾ ಹೆಚ್ಚಿದ್ದರೆ, ನೀವು ಆಗಾಗ್ಗೆ ನಿದ್ದೆ ಹೋಗುವಿರಿ, ಇದು ಒಂದನೆಯ ಅಂಶ. ಎರಡನೆಯದು, ಶರೀರದಲ್ಲಿ ಬೇಕಾದಷ್ಟು ಪ್ರಾಣವಿಲ್ಲದಿದ್ದರೆ, ಆಗ ಕೂಡಾ ನೀವು ನಿದ್ದೆ ಹೋಗುವಿರಿ. ಆದುದರಿಂದ ಸ್ವಲ್ಪ ಪ್ರಾಣಾಯಾಮವು ಸಹಾಯಕವಾಗಬಹುದು. ಧ್ಯಾನಕ್ಕಿಂತ ಸ್ವಲ್ಪ ಮೊದಲು ಕೆಲವು ದೀರ್ಘ ಶ್ವಾಸಗಳನ್ನು ತೆಗೆದುಕೊಳ್ಳುವುದು ಸಹಾಯವಾಗಬಹುದು ಮತ್ತು ಖಂಡಿತವಾಗಿ ಶರೀರದಲ್ಲಿರುವ ಖನಿಜಗಳು ಮತ್ತು ಸಕ್ಕರೆ ಪ್ರಮಾಣಗಳ ಬಗ್ಗೆ ಗಮನವಿರಿಸಿ. ಕೆಲವೊಮ್ಮೆ ನಿಮ್ಮಲ್ಲಿ ಅವುಗಳ ಕೊರತೆಯಿರುವಾಗಲೂ ನೀವು ಆ ಪೆಚ್ಚುತನವನ್ನು ಅನುಭವಿಸುತ್ತೀರಿ ಮತ್ತು ನಿದ್ದೆ ಹೋಗುತ್ತೀರಿ. ಇನ್ನೊಂದು ಸಾಧ್ಯತೆಯೆಂದರೆ ಶರೀರವು ತುಂಬಾ ಸುಸ್ತಾಗಿರುವುದು. ನಿಮಗೆ ಆಯಾಸವಾಗಿರುವ ಹಾಗೂ ನಿದ್ದೆ ಬರುವಂತಾಗುವ ಕೆಲವು ಸಮಯಗಳಿವೆ. ಕೆಲವು ಸಲ ನಿಮಗೆ ಆಯಾಸವಾಗಿರುತ್ತದೆ ಮತ್ತು ನಿಮಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ? ನಿಮಗೆ ಆಯಾಸವಾಗುತ್ತದೆ ಆದರೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಧ್ಯಾನದಲ್ಲಿ ಈ ಸಂಗತಿಗಳು ತದ್ವಿರುದ್ಧವಾಗುತ್ತವೆ ಮತ್ತು ಅದು ನೀವು ಧ್ಯಾನದ ಸಮಯದಲ್ಲಿ ಹಾಗೇ ನಿದ್ದೆ ಹೋಗಲು ಒಂದು ಕಾರಣ. ಆದರೆ ಚಿಂತಿಸಬೇಡಿ.
ಪ್ರಶ್ನೆ: ನನ್ನ ತಲೆಯು ಯಾಕೆ ಯಾವಾಗಲೂ ಹಾಡುತ್ತಿರುತ್ತದೆ?
ಶ್ರೀ ಶ್ರೀ ರವಿಶಂಕರ್:
ಯಾವಾಗಲೂ ಎಂದು ಹೇಳಬೇಡ. ಅದು ಯಾವಾಗಲೂ ಹಾಡುತ್ತಿರುತ್ತದೆಯೆಂದು ನನಗನಿಸುವುದಿಲ್ಲ. ನೀನು ನಿನ್ನ ಮೆದುಳಿನ ಆ ಭಾಗವನ್ನು ಜಾಸ್ತಿ ಉಪಯೋಗಿಸಿರಬೇಕು; ಅಂದರೆ ನಿನ್ನ ಮೆದುಳಿನ ಬಲ ಭಾಗವನ್ನು. ಆದುದರಿಂದ ನಿನಗೆ ಸಂಗೀತವು ಸಹಜವಾಗಿ ಬರುತ್ತದೆ.
ಇನ್ನೊಂದು ಪರ್ಯಾಯವೆಂದರೆ ಒಗಟುಗಳನ್ನು ಬಿಡಿಸುವುದರಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದು, ಪದಬಂಧದಂತಹದು, ಆಗ ನೀನು ಮೆದುಳಿನ ಇನ್ನೊಂದು ಭಾಗವನ್ನು ಉಪಯೋಗಿಸುತ್ತಿ. ನೀನು ಕುಳಿತುಕೊಂಡು ಸಂಖ್ಯೆಗಳನ್ನು ಎಣಿಸಬಹುದು; ಸ್ವಲ್ಪ ಲೆಕ್ಕ ಮಾಡು ಅಥವಾ ಹಣವನ್ನು ಎಣಿಸು. ಮೆದುಳಿನ ಇನ್ನೊಂದು ಭಾಗವನ್ನು ಸರಿದೂಗಿಸಬಲ್ಲ ಚಟುವಟಿಕೆಗಳನ್ನು ಮಾಡು ಅಥವಾ ಏನಾದರೂ ಓದು ಅಥವಾ ಜ್ಞಾನದ ಮಾತು ಕೇಳು. ಈಗ ನೀನು ಜ್ಞಾನದ ಮಾತನ್ನು ಕೇಳಿಸುತ್ತಿದ್ದೀಯಾ ಮತ್ತು ನಿನ್ನ ಮನಸ್ಸು ಹಾಡುತ್ತಿಲ್ಲ. ಆದುದರಿಂದ ಓದುವುದು, ಕೇಳುವುದು, ಲೆಕ್ಕ ಹಾಕುವುದು ಇವುಗಳೆಲ್ಲಾ ನಿಮಗೆ ಎಡ ಮೆದುಳನ್ನು ಕೂಡಾ ಕ್ರಿಯಾತ್ಮಕವಾಗಿಸಲು ಸಹಾಯ ಮಾಡುತ್ತವೆ.
ಪ್ರಶ್ನೆ: ನಾವೆಲ್ಲರೂ ಉಸಿರಿನೊಂದಿಗೆ ಮತ್ತು ಎಲ್ಲಾ ಜ್ಞಾನದೊಂದಿಗೆ ಹುಟ್ಟಿದ್ದೇವೆ. ಹಾಗಾದರೆ, ಎಲ್ಲರೂ ನಿಮ್ಮಂತೆ ಗುರುಗಳಲ್ಲ ಯಾಕೆ? ಜ್ಞಾನವನ್ನುಪಯೋಗಿಸಿ ನೀವು ಗುರುವಾದದ್ದು ಯಾಕೆ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಒಂದು ದೊಡ್ಡ ವಿನ್ಯಾಸದ ಪ್ರಕಾರ ನಾವೆಲ್ಲರೂ ಇಲ್ಲಿಗೆ ಒಂದು ದೊಡ್ಡ ಯೋಜನೆಯೊಂದಿಗೆ ಬಂದಿದ್ದೇವೆ. ಇದು ಹೇಗೆಂದರೆ - ನೀನು ಇದನ್ನು ಮಾಡು, ನೀನು ಇದನ್ನು ಮಾಡು ಮತ್ತು ನೀನು ಅದನ್ನು ಮಾಡು. ನೋಡಿ, ಈ ಕಟ್ಟಡ ಕಟ್ಟುವಾಗ, ಎಲ್ಲಾ ವಸ್ತುಗಳನ್ನು ಎಲ್ಲೋ ಇಡಲಾಗಿತ್ತು. ಆದರೆ ಆಗ ಆರ್ಕಿಟೆಕ್ಟ್ ಹೇಳಿದರು, "ಕಿಟಿಕಿಯು ಇಲ್ಲಿ ಬರುತ್ತದೆ ಮತ್ತು ಅಲ್ಲಿ ಬಾಗಿಲು ಬರುತ್ತದೆ ಮತ್ತು ಅದು ಮಾಡಾಗಲಿದೆ". ಆರ್ಕಿಟೆಕ್ಟ್ ಎಲ್ಲವನ್ನೂ ಯೋಜಿಸಿದರು ಮತ್ತು ಎಲ್ಲವನ್ನೂ ಅಲ್ಲಿ ಹಾಕಿದರು, ಸರಿಯಾ? ಅದೇ ರೀತಿಯಲ್ಲಿ, ನಮ್ಮೆಲ್ಲರ ಜೀವನವಿರುವುದು ಹಾಗೆಯೇ! ಒಂದು ದೊಡ್ಡ ಯೋಜನೆಯು ಹೇಳಿತು, "ನೀನು ಅಲ್ಲಿ ಹುಟ್ಟುತ್ತಿ ಮತ್ತು ನೀನು ಅಲ್ಲಿ ಹುಟ್ಟುತ್ತಿ ಮತ್ತು ನೀನು ಇಲ್ಲಿ ಹುಟ್ಟುತ್ತಿ". ಆದುದರಿಂದ, ನಾವೆಲ್ಲರೂ ಪ್ರಪಂಚದ ವಿವಿಧ ಭಾಗಗಳಲ್ಲಿ ಹುಟ್ಟುತ್ತೇವೆ ಮತ್ತು ಒಂದು ನಿರ್ದಿಷ್ಟ ಸಮಯದಲ್ಲಿ ನಾವೆಲ್ಲರೂ ಇಲ್ಲಿ ಜೊತೆಗೂಡುತ್ತೇವೆ.
ವಾಸ್ತವಕ್ಕೆ ಇಣುಕಿ ನೋಡುವುದು ತುಂಬಾ ಆಕರ್ಷಕವಾದುದು. ಅದು ನಾವು ಈ ಪ್ರಪಂಚದಲ್ಲಿ ಪರಿಗಣಿಸುವುದಕ್ಕಿಂತ ಎಷ್ಟೋ ಹೆಚ್ಚಿನದು. ನಾವು ಇಲ್ಲಿ ನೋಡುತ್ತಿರುವುದು ಹಿಮಗುಡ್ಡದ ಕೇವಲ ಒಂದು ತುದಿಯಷ್ಟೆ ಮತ್ತು ನಾವಂದುಕೊಳ್ಳುತ್ತೇವೆ ಇದುವೇ ಇಡಿಯ ಪ್ರಪಂಚವೆಂದು. ನಾವು, ಬಾವಿಯಲ್ಲಿ ಕುಳಿತುಕೊಂಡು ಅದನ್ನೇ ಇಡಿಯ ಸಮುದ್ರವೆಂದು ಅಂದುಕೊಳ್ಳುವ ಕಪ್ಪೆಯಂತೆ. ನಾವು ಅದನ್ನು ಬಹಳವಾಗಿ ಹೋಲುವ ಜೀವನವನ್ನು ಜೀವಿಸುತ್ತೇವೆ. ನಾವು ಎಚ್ಚೆತ್ತುಕೊಂಡು, ಪ್ರಪಂಚವು ಬಾವಿಗಿಂತಲೂ ಆಚಿನದು ಎಂಬುದನ್ನು ತಿಳಿದುಕೊಂಡರೆ, ಆಗ ಹಲವು ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ ಮತ್ತು ಹಲವು ವಿಷಯಗಳು ಅರ್ಥವಾಗಲು ತೊಡಗುತ್ತವೆ. ಆದುದರಿಂದ, ಸೂಕ್ಷ್ಮ ಪ್ರಪಂಚದಲ್ಲಿ ಎಲ್ಲಾ ಯೋಜನೆಗಳು ಈಗಾಗಲೇ ಮಾಡಿಯಾಗಿದೆ. ಯಾರಾದರೊಬ್ಬರು ವೈದ್ಯರಾಗಬೇಕಿದ್ದಲ್ಲಿ, ಅದು ಆಗಲೇ ಆಗಿದೆ. ಈಗ ನೀವು ನನ್ನನ್ನು ಕೇಳಬಹುದು, "ಹಾಗಾದರೆ ಮುಕ್ತ ಆಯ್ಕೆಯೇ ಇಲ್ಲವೇ?". ಹೌದು, ಇದೆ! ಜೀವನವೆಂಬುದು ಒಂದು ಸ್ಥಿರವಾದ ವಿಧಿ ಮತ್ತು ಸ್ವಲ್ಪ ಮುಕ್ತ ಆಯ್ಕೆಗಳ ಒಂದು ಸಂಯೋಗ.
ಪ್ರಶ್ನೆ: ನನ್ನ ಸಹೋದರಿಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಅವಳು ನಮ್ಮ ಶಕ್ತಿಯನ್ನು ಇಳಿಸಿ ನಮ್ಮನ್ನು ಕಂಗೆಡಿಸುತ್ತಾಳೆ. ನನಗೆ ಸಾಧ್ಯವಾದಷ್ಟೂ ನಾನು ಅವಳಿಂದ ದೂರವಿರುತ್ತೇನೆ. ಆದರೆ ಅವಳು ಬಹಳ ಏಕಾಂಗಿ. ಇತರರ ಕಡೆಗಿರುವ ಜವಾಬ್ದಾರಿ ಮತ್ತು ತನ್ನದೇ ಕಡೆಗಿರುವ ಜವಾಬ್ದಾರಿಯ ಮಧ್ಯೆ ಸಮತೋಲನವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಒಬ್ಬರು ರೋಗಿಗಳೆಂದು ನಿಮಗೆ ತಿಳಿದಿರುವಾಗ ನೀವು ಅವರು ಹೇಳುವುದನ್ನು ಕೇಳಬೇಡಿ. ಕಿವಿಗೆ ಬೆಣೆ (ಪ್ಲಗ್) ಹಾಕಿಕೊಂಡು ಅವರೊಂದಿಗಿರಿ. ನೀವು ಕಂಗೆಡುವುದು ಯಾಕೆಂದರೆ, ನೀವು ಅವರ ಮಾತುಗಳನ್ನು ಮತ್ತು ವರ್ತನೆಗಳನ್ನು ನಿಮ್ಮ ತಲೆಯೊಳಕ್ಕೆ ತೆಗೆದುಕೊಳ್ಳುತ್ತೀರಿ. ನೀವು ಇತರರಿಂದ ವಿಷಯಗಳನ್ನು ಹೀರಿಕೊಳ್ಳದಂತೆ ನಿಮ್ಮ ತಲೆಯನ್ನು ಮೂರ್ಖ-ನಿರೋಧಕವನ್ನಾಗಿಸಬೇಕು ಹಾಗೂ ಸಾಧ್ಯವಾದಾಗಲೆಲ್ಲಾ ಅವರಿಗೆ ಸಹಾಯ ಮಾಡಬೇಕು.
ಒಂದು ಪ್ರಾಚೀನ ಗಾದೆಯಿದೆ, "ಸುಖ ಅಥವಾ ನೋವನ್ನು ಕೊಡುವವರು ಯಾರೂ ಇಲ್ಲ". ನೀವು ನೋವಿನಿಂದ ನರಳುತ್ತಿದ್ದರೆ, ಅದು ನಿಮ್ಮಿಂದಲೇ ಆದುದು; ಅದನ್ನು ಯಾರೋ ನಿಮಗೆ ಕೊಟ್ಟಿದ್ದಲ್ಲ ಮತ್ತು ನೀವು ಮೋಜು ಮಾಡುತ್ತಾ ಇದ್ದರೆ, ಸಂತೋಷವಾಗಿದ್ದರೆ, ಆ ಸಂತೋಷವನ್ನು ಕೂಡಾ ತರುವುದು ನಿಮ್ಮದೇ ಯೋಗ್ಯತೆಗಳು. ನೀವು ಇದನ್ನು ತಿಳಿದುಕೊಂಡಾಗ, ನಿಮ್ಮ ಸಂತೋಷ ಅಥವಾ ದುಃಖಕ್ಕೆ ನೀವು ಇತರರನ್ನು ಹೊಣೆಯಾಗಿಸುವುದಿಲ್ಲ. ಯಾಕೆಂದರೆ, ನೀವು ಯಾರಿಂದಲೋ ಸಂತೋಷವನ್ನು ಪಡೆದರೆ, ನಿಮಗೆ ಬೇಕಾದಾಗಲೆಲ್ಲಾ ಅವರು ಅದನ್ನು ಕೊಡದೆ ಇದ್ದಾಗ ನೀವು ಅವರನ್ನು ದೂಷಿಸುತ್ತೀರಿ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ?
ಪ್ರೀತಿಯು ದ್ವೇಷವಾಗಿ ಯಾಕೆ ಬದಲಾಗುತ್ತದೆ? ಯಾಕೆಂದರೆ ನೀವು ಒಬ್ಬರನ್ನು ಪ್ರೀತಿಸುತ್ತೀರಿ, ಅವರು ನಿಮಗೆ ಬಹಳ ಸಂತೋಷವನ್ನು ನೀಡುತ್ತಾರೆ ಮತ್ತು ನಂತರ ನೀವು ಅವರ ಮೇಲೆ ಕೋಪಗೊಳ್ಳುತ್ತೀರಿ ಯಾಕೆಂದರೆ ನೀವು ಆ ಸಂವೇದನೆಗೆ ಒಂದು ರೀತಿಯಲ್ಲಿ ದಾಸರಾಗಿರುತ್ತೀರಿ. ಆದುದರಿಂದ ಅವರು ನಿಮಗೆ ಆ ಸಂತೋಷವನ್ನು ಕೊಡದಿರುವಾಗ ನೀವು ಅವರನ್ನು ದೂಷಿಸುತ್ತೀರಿ, ಅವರ ಮೇಲೆ ಕೋಪಿಸುತ್ತೀರಿ, ಅವರನ್ನು ದ್ವೇಷಿಸುತ್ತೀರಿ ಮತ್ತು ಇಡಿಯ ಸಂಬಂಧವು ಹಾಳಾಗುತ್ತದೆ. ಅಲ್ಲವೇ? ಆದುದರಿಂದ, ನಿಮ್ಮ ಆನಂದ, ನಿಮ್ಮ ಸಂತೋಷ ನಿಮ್ಮ ಬಳಿಗೆ ಬರುವುದು ನಿಮ್ಮದೇ ಯೋಗ್ಯತೆಯಿಂದ ಎಂಬುದನ್ನು ತಿಳಿಯಿರಿ. ಇತರರು ಕೇವಲ ಅಂಚೆಯವರಂತೆ ಅದನ್ನು ನಿಮಗೆ ತಲುಪಿಸುತ್ತಾರೆ. ಅವರಿಗೆ ಧನ್ಯವಾದವನ್ನು ಅರ್ಪಿಸಿ! ಆಗ ಸುತ್ತಲಿರುವವರೊಂದಿಗೆಲ್ಲಾ ನಿಮ್ಮ ಸಂಬಂಧವು ಯಾವತ್ತೂ ಒಳ್ಳೆಯದಾಗಿರುತ್ತದೆ.
ಪ್ರಶ್ನೆ: ದಯವಿಟ್ಟು ಜೀವನದಲ್ಲಿ ನನ್ನ ದಾರಿಯನ್ನು ಕಂಡುಕೊಳ್ಳಲು ನನಗೆ ಆಶೀರ್ವಾದ ಮಾಡಿ.
ಶ್ರೀ ಶ್ರೀ ರವಿಶಂಕರ್:
  ನೀನು ಈಗಾಗಲೇ ನಿನ್ನ ಪಥದಲ್ಲಿದ್ದೀಯಾ! ನೀನು ಸರಿಯಾದ ಜಾಗದಲ್ಲಿದ್ದೀಯಾ. ನಾನು ಹೇಳುತ್ತೇನೆ, ಆರಾಮವಾಗಿರು!
ನೋಡಿ, ನೀವು ಒಂದು ರೈಲು ಅಥವಾ ವಿಮಾನ ಹತ್ತುವಲ್ಲಿ ವರೆಗೆ ಮಾತ್ರ ಪ್ರಯತ್ನ ಪಡಬೇಕಾಗಿರುವುದು. ಒಮ್ಮೆ ನೀವು ವಿಮಾನದ ಒಳಹೋದ ಮೇಲೆ, ಅದರೊಳಗೆ ಆಚೆ ಈಚೆ ಓಡುವುದರಲ್ಲಿ ಅರ್ಥವಿಲ್ಲ. ವಿಮಾನವು ಅದಕ್ಕಿಂತ ವೇಗವಾಗಿ ತಲುಪಲು ಸಾಧ್ಯವಿಲ್ಲ. ಕಲ್ಪನೆ ಮಾಡಿ ನೋಡಿ, ಒಬ್ಬರು ರೈಲಿನೊಳಗೆ ಹತ್ತಿ ತಮ್ಮ ಚೀಲಗಳನ್ನು ಹಿಡಿದುಕೊಂಡು, "ನಾನು ಎಲ್ಲರಿಗಿಂತ ಮೊದಲು ತಲುಪ ಬಯಸುತ್ತೇನೆ" ಎಂದು ಹೇಳುತ್ತಾ ಓಡುತ್ತಾರೆ. ಆರಾಮವಾಗಿರಿ! ನಿಮ್ಮ ಚೀಲಗಳನ್ನು ಕೆಳಗಿಡಿ. ನೀವು ಪಥದಲ್ಲಿದ್ದೀರಿ, ನೀವು ಧ್ಯಾನ ಮಾಡುತ್ತೀರಿ.
ನೀವು ಸಹಜ ಸಮಾಧಿ ಧ್ಯಾನವನ್ನು ಕಲಿತಿಲ್ಲದಿದ್ದರೆ, ಅದನ್ನು ಕಲಿಯಿರಿ. ಅಷ್ಟಾವಕ್ರ ಗೀತಾ ವನ್ನು ಕೇಳಿರಿ. ಇಲ್ಲಿ ಎಷ್ಟು ಮಂದಿ ಅಷ್ಟಾವಕ್ರ ಗೀತಾವನ್ನು ಕೇಳಿದ್ದೀರಿ? ಅದು ನಿಮ್ಮ ಜೀವನದಲ್ಲಿ ಒಂದು ಬದಲಾವಣೆಯನ್ನು ತಂದಿದೆಯೇ? ಉಳಿದವರು, ಯಾರು ಅದನ್ನು ಕೇಳಿಲ್ಲವೋ ಅವರು ಅದನ್ನು ಕೇಳಿ. ನೀವು ಅದನ್ನು ಕೇಳಬೇಕು, ಅದರ ಬಗ್ಗೆ ಚರ್ಚೆ ಮಾಡಬೇಕು ಮತ್ತು ಅದರಲ್ಲೇ ನೆಲೆಸಿರಬೇಕು. ಪ್ರತಿದಿನವೂ ಜ್ಞಾನದಲ್ಲಿ ಕೆಲವು ನಿಮಿಷಗಳನ್ನು ಕಳೆಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮಲ್ಲಿ, ಮೌನದ ಮಾರ್ದನಿ ಮತ್ತು ಆತ್ಮೀಯರಿಗೊಂದು ಕಿವಿ ಮಾತು ಪುಸ್ತಕಗಳಿವೆ. ಈ ಪುಸ್ತಕಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳ ಪುಟ ತಿರುಗಿಸುತ್ತಾ ಇರಿ. ಅದು ನಿಮ್ಮ ಚಿಂತನೆಯ ಮಾರ್ಗವನ್ನು ಮತ್ತು ಸಮಸ್ಯೆಗಳನ್ನು ನೀವು ನಿಭಾಯಿಸುವ ಮಾರ್ಗವನ್ನು ಹಾಗೆಯೇ ಬದಲಾಯಿಸುತ್ತದೆ. ಅದು ಖಂಡಿತಾ ನಿಮಗೆ ಸಹಾಯಕವಾಗುತ್ತದೆ.
ಪ್ರಶ್ನೆ: ನಾನು ಒಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರಲು ಇಚ್ಛಿಸುವುದಿಲ್ಲವಾದರೆ, ನಾನು ಅವರೊಂದಿಗಿನ ಸಂಪರ್ಕವನ್ನು ಕಡಿಯುವುದು ಅಥವಾ ಅವರಿಗೆ ನೋವುಂಟುಮಾಡದೆ, ಆದರೆ ಸ್ಪಷ್ಟವಾಗಿ, ಪ್ರೀತಿಯಿಂದ, ಕಾಳಜಿಯಿಂದ ಅವರಿಗೆ ಇದನ್ನು ತಿಳಿಯಪಡಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
  ನಿನಗೆ ಬೇಕಾದಾಗ ನೀನು ಯಾವಾಗ ಬೇಕಿದ್ದರೂ ಅದನ್ನು ಮಾಡಬಹುದು. ಅದೊಂದು ದೊಡ್ಡ ವಿಷಯವಲ್ಲ. ನೀನು ಅದನ್ನು ತುಂಬಾ ನವಿರಾಗಿ ಹೇಳಬಹುದು.
ನೀವು ಎಲ್ಲವನ್ನೂ ಶಬ್ದಗಳ ಮೂಲಕ ಹೇಳಬೇಕೆಂದಿಲ್ಲ. ಜೀವನವು ತುಂಬಾ ವೇಗವಾಗಿ ಚಲಿಸುತ್ತದೆ. ನೀವು ಯಾಕೆ ಹಪ ಹಪಿಸುತ್ತೀರಿ? ನನಗಿವತ್ತು ಹೀಗನ್ನಿಸುತ್ತಿದೆ; ನನಗೆ ನಿನ್ನೆ ಹಾಗನ್ನಿಸಿತು. ನಿಮ್ಮ ಅನ್ನಿಸಿಕೆಗಳ ಬಗ್ಗೆ ಯಾರು ಕೇಳುತ್ತಾರೆ? ನಿಮ್ಮ ಸಂತೋಷದ ಬಗ್ಗೆ ಯಾರು ಕೇಳುತ್ತಾರೆ? ಜೀವನವು ಅಷ್ಟೊಂದು ವೇಗದ ಗತಿಯಲ್ಲಿ ಚಲಿಸುತ್ತಿದೆ. ಭೂಮಿಯು ಅಷ್ಟೊಂದು ವೇಗವಾಗಿ ತಿರುಗುತ್ತಿದೆ, ಅದು ಸೂರ್ಯನ ಸುತ್ತಲೂ ಅಷ್ಟೊಂದು ವೇಗವಾಗಿ ಸುತ್ತುತ್ತಿದೆ.
ಎಲ್ಲವೂ ಬದಲಾಗುತ್ತಿದೆ. ಎಲೆಗಳು ಉದುರುತ್ತಿವೆ ಮತ್ತು ಹೊಸ ಎಲೆಗಳು ಬರುತ್ತಿವೆ. ಒಂದು ಮರದಿಂದ ಎಷ್ಟು ಎಲೆಗಳು ಉದುರಿವೆಯೆಂದು ಯಾರು ಲೆಕ್ಕ ಹಾಕುತ್ತಾರೆ? ಆದುದರಿಂದ ನಿಮಗೇನನ್ನಿಸುತ್ತಿದೆ ಮತ್ತು ನಿಮಗೇನನ್ನಿಸುತ್ತಿಲ್ಲವೆಂಬುದರ ಬಗ್ಗೆ ನೀವು ಯಾಕೆ ಚಿಂತಿಸುತ್ತೀರಿ? ನೀವು ನಿಮ್ಮೆಲ್ಲಾ ಅನ್ನಿಸಿಕೆಗಳನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಎಸೆಯಬೇಕು ಮತ್ತು ಆರಾಮವಾಗಿರಬೇಕು. ಯಾರು ಕೇಳುತ್ತಾರೆ?! ನಿಮ್ಮ ಭಾವನೆಗಳು ಎಲ್ಲಾ ಸಮಯದಲ್ಲೂ ಬದಲಾಗುತ್ತಿರುತ್ತವೆ. ಅದು ಹಾಗಲ್ಲವೇ?
ನಿಮ್ಮ ಭಾವನೆಗಳು ಎಷ್ಟು ಸಲ ಬದಲಾಗಿವೆ? ಎಷ್ಟು ಸಮಯಕ್ಕೊಮ್ಮೆ ಅವುಗಳು ಬದಲಾಗಿವೆ? ಅದರಲ್ಲಿ ದೊಡ್ಡ ಸಂಗತಿಯೇನಿದೆ? ನಾವು ನಮ್ಮ ಭಾವನೆಗಳನ್ನು ತುಂಬಾ ದೊಡ್ಡ ವಿಷಯ ಮಾಡುತ್ತೇವೆ. ನನಗೆ ಹೀಗೆ ಅನ್ನಿಸುತ್ತದೆ, ನನಗೆ ಹಾಗೆ ಅನ್ನಿಸುತ್ತಿದೆ. ಯಾರಿಗೆ ಬೇಕು? ಸುಮ್ಮನೇ ಎದ್ದು ನಿಲ್ಲಿ! ನೀವು ಈ ಪ್ರಪಂಚದಲ್ಲಿ ಏನು ಮಾಡಲು ಬಯಸುತ್ತೀರೋ, ಸುಮ್ಮನೇ ಅದನ್ನು ಮಾಡಿ ಮತ್ತು ಅದನ್ನು ಮುಗಿಸಿ. ಅಷ್ಟೆ. ಸಮಯವು ಹಾಗೆ ಓಡುತ್ತದೆ.
ಜೀವನ ಕಲೆಗೆ ೩೦ ವರ್ಷಗಳಾಯಿತು. ನಾವು ಜೀವನ ಕಲೆಯನ್ನು ೧೯೮೨ ರಲ್ಲಿ ಪ್ರಾರಂಭಿಸಿದೆವು, ಆದರೆ ನಾವು ನಮ್ಮ ಸಂಸ್ಥೆಯನ್ನು ಅದಕ್ಕಿಂತ ಕೆಲವು ತಿಂಗಳುಗಳ ಮೊದಲು ಶುರು ಮಾಡಿದೆವು. ನಾವು ನಮ್ಮ ವೇದ ವಿಜ್ಞಾನ ಮಹಾ ವಿದ್ಯಾಪೀಠ, ಬೆಂಗಳೂರು ಆಶ್ರಮವನ್ನು ೧೩ ನವೆಂಬರ್ ೧೯೮೧ ರಲ್ಲಿ ನೋಂದಾಯಿಸಿದೆವು. ಏನಾಯಿತು? ಆಗಲೇ ೩೦ ವರ್ಷಗಳು ಉರುಳಿದವು. ಮಾರ್ಚ್ ೧೯೮೨ ರಲ್ಲಿ ನಾವು ಮೊದಲ ಬೇಸಿಕ್ ಕೋರ್ಸನ್ನು ಪ್ರಾರಂಭಿಸಿದೆವು. ನಾವು ಈಗಾಗಲೇ ೩೦ ನೆಯ ವರ್ಷಕ್ಕೆ ಕಾಲಿರಿಸಿದ್ದೇವೆ. ಸಮಯವು ಕಳೆಯಿತು! ನನಗನಿಸುತ್ತದೆ ಇದು ಈ ತಿಂಗಳಿನಲ್ಲಿ ನನ್ನ ೧೪ನೆಯ ನಿಲ್ದಾಣವೆಂದು. ಎಪ್ರಿಲ್ ೧ ರಿಂದ ಇವತ್ತಿನ ವರೆಗೆ ನಾನು ಪ್ರಪಂಚದ ೧೪ ನಗರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲ ಕಡೆಗಳಲ್ಲಿಯೂ ಬಹಳ ಸಂತೋಷ ಮತ್ತು ಉತ್ಸಾಹಗಳನ್ನು ನಾನು ನೋಡುತ್ತಿದ್ದೇನೆ.
ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ನಮ್ಮ ಜೀವನವನ್ನು ವ್ಯಕ್ತಪಡಿಸಲು ಸಮಯವಿಲ್ಲ, ಕುಳಿತುಕೊಂಡು ನಮಗೆ ಹೇಗನಿಸುತ್ತದೆ ಮತ್ತು ಹೇಗನಿಸುತ್ತಿಲ್ಲವೆಂದು ಚಿಂತಿಸಲು ಸಮಯವೆಲ್ಲಿದೆ? ಪ್ರಪಂಚದಲ್ಲಿ ಮಾಡಲು ಬೇಕಾದಷ್ಟಿದೆ ಮತ್ತು ಆದರೂ ಮಾಡಲು ಏನೂ ಇಲ್ಲ. ಅವುಗಳು ಜೊತೆಯಲ್ಲಿ ಸಾಗುತ್ತವೆ. ಮಾಡಲು ಬೇಕಾದಷ್ಟಿದೆ ಮತ್ತು ಆದರೂ ನೀವು ಮಾಡಬೇಕಾದುದು ಏನೂ ಇಲ್ಲ. ಅದನ್ನೆಲ್ಲಾ ಮಾಡಿಯಾಗಿದೆ; ಸಂಪೂರ್ಣ ತೃಪ್ತಿ.
ಪ್ರಶ್ನೆ: ಆತ್ಮವು, ಅಸ್ಥಿತ್ವದ ಇತರ ಆರು ಪದರಗಳಿಲ್ಲದೆಯೇ ಅಸ್ಥಿತ್ವದಲ್ಲಿರಬಲ್ಲದೇ?
ಶ್ರೀ ಶ್ರೀ ರವಿಶಂಕರ್:
ಹೌದು, ಖಂಡಿತವಾಗಿ! ಇತರ ಎಲ್ಲಾ ಆರು ಪದರಗಳು ಅದರದ್ದೇ ಬಿಂಬ. ಜೇಡನಂತೆ - ಅದು ಇಡೀ ಬಲೆಯನ್ನು ತನ್ನ ಎಂಜಲಿನಿಂದ ಹೆಣೆಯುತ್ತದೆ. ಆದರೆ, ಜೇಡನು ತನ್ನ ಬಲೆಯಿಲ್ಲದೆಯೂ ಇರಬಹುದು. ಒಂದು ಪ್ರಜ್ಞೆಯು ಎಲ್ಲಾ ಪದರಗಳನ್ನು ಸೃಷ್ಟಿಸಿದೆ, ಆದರೂ ಅದು ಅವುಗಳಲ್ಲಿ ಯಾವುದೇ ಪದರಗಳಿಲ್ಲದೆಯೂ ಅಸ್ಥಿತ್ವದಲ್ಲಿರಬಹುದು.
ಪ್ರಶ್ನೆ: ಮೌನವು ನನ್ನ ಬ್ಯಾಟರಿಗಳನ್ನು ತುಂಬಿಸಲು ಇರುಂತಹುದು ಎಂದು ನನಗೆ ತಿಳಿದಿದೆ. ಆದರೆ, ನನಗೆ ಈ ಏಕಾಂಗಿತನದ ಅನುಭವ ಯಾಕಾಗುತ್ತದೆ? ಹಲವಾರು ಜನರೊಂದಿಗೆ ಎಷ್ಟೊಂದು ಹಂಚಿಕೊಳ್ಳಲಿದೆ!
ಶ್ರೀ ಶ್ರೀ ರವಿಶಂಕರ್: ಈ ಏಕಾಂಗಿತನದ ಅನುಭವವು ಕೇವಲ ಒಂದು ತಾತ್ಕಾಲಿಕವಾದ, ಮಧ್ಯೆ ಬರುವಂತಹ ಘಟ್ಟ. ನೀವು ಈ ಪ್ರಪಂಚಕ್ಕೆ ಬಂದಾಗ ನಿಮಗೆ ಏಕಾಂಗಿತನದ ಅನುಭವವಾಗಲಿಲ್ಲ. ನೀವು ಒಬ್ಬಂಟಿಯಾಗಿ ಬಂದಿರಿ. ನೀವು ಅವಳಿ ಜವಳಿಯಾಗಿ ಬಂದಿದ್ದರೂ ಸಹ, ಆಗಲೂ ಅದು ನೀವು ಈ ಪ್ರಪಂಚಕ್ಕೆ ಒಬ್ಬಂಟಿಯಾಗಿ ಬಂದಂತೆಯೇ. ನಾವು ಹೋಗುವಾಗ, ಇಲ್ಲಿಂದ ನಾವು ಒಬ್ಬಂಟಿಯಾಗಿಯೇ ಹೋಗುತ್ತೇವೆ. ನೀವು ಕುಳಿತುಕೊಂಡು, "ನನಗೆ ಒಬ್ಬಂಟಿಯನ್ನಿಸುತ್ತಿದೆ, ನನಗೆ ಒಬ್ಬಂಟಿಯನ್ನಿಸುತ್ತಿದೆ" ಎಂದು ಹೇಳುತ್ತಾ ಇದ್ದರೆ, ಇಲ್ಲ! ಅದನ್ನು ಬಿಟ್ಟುಬಿಡಿ. ಇನ್ನೊಂದು ಎಂಬುದಿಲ್ಲ ಎಂಬ ಭಾವನೆಯ ಒಳಗೆ ಆಳಕ್ಕೆ ಹೋಗಿ.
ಪ್ರಶ್ನೆ: ಗುರೂಜಿ, ನಾನು ಯಶಸ್ವಿಯಾಗುವುದು ಮತ್ತು ಸಂತೋಷ ಹೊಂದುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಯಶಸ್ವಿಯಾಗಲು ನಿಮಗೆ ಮೂರು ವಿಷಯಗಳ ಅವಶ್ಯಕತೆಯಿದೆ.
೧. ಕುಶಲತೆ
೨. ಶಕ್ತಿ, ಮತ್ತು
೩. ಕ್ರಿಯಾಶೀಲತೆ
ನಿಮ್ಮಲ್ಲಿ ಕುಶಲತೆಯಿದ್ದರೆ, ನಿಮ್ಮಲ್ಲಿ ಶಕ್ತಿಯಿದ್ದರೆ ಮತ್ತು ನೀವು ಏನನ್ನೂ ಮಾಡದೇ ಇದ್ದರೆ, ಆಗ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ನೀವು, ಕುಶಲತೆಯಿಲ್ಲದೆ ಸುಮ್ಮನೇ ಕೆಲಸಗಳನ್ನು ಮಾಡುತ್ತಾ ಇದ್ದರೆ, ಆಗಲೂ ಅದು ಪ್ರಯೋಜನವಾಗುವುದಿಲ್ಲ. ಅದರಂತೆಯೇ, ನಿಮ್ಮಲ್ಲಿ ಕುಶಲತೆ ಮತ್ತು ಕ್ರಿಯಾಶೀಲತೆಗಳಿದ್ದು, ಶಕ್ತಿಯಿಲ್ಲದಿದ್ದರೆ, ಆಗಲೂ ಕೂಡಾ ಯಶಸ್ಸು ಬರುವುದಿಲ್ಲ. ಯಶಸ್ಸು ಬರಲು ಅಗತ್ಯವಿರುವುದೆಂದರೆ, ಕುಶಲತೆ, ಶಕ್ತಿ ಮತ್ತು ಕ್ರಿಯಾಶೀಲತೆ. ನೀವು ಕ್ರಿಯಾಶೀಲರಾಗಿರಬೇಕು. ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಎಲ್ಲಾ ಮೂರು ವಿಷಯಗಳ ಅಗತ್ಯವಿದೆ!
ಕೆಲವು ಜನರು ಕುಳಿತುಕೊಂಡು ಯೋಜನೆ ಹಾಕುತ್ತಾರೆ, ಹಾಕುತ್ತಾರೆ. ಅವರು ತಮ್ಮ ಜೀವನವನ್ನೆಲ್ಲಾ ಯೋಜನೆ ಹಾಕುವುದರಲ್ಲೇ ಕಳೆಯುತ್ತಾರೆ ಆದರೆ ಏನೂ ಮಾಡುವುದಿಲ್ಲ. ಸುಮಾರು ೧೫ರಿಂದ ೨೦ ವರ್ಷಗಳ ಮೊದಲು ಒಬ್ಬ ಯುವಕನು ಬೆಂಗಳೂರಿನಲ್ಲಿ ನಮ್ಮ ಸತ್ಸಂಗಕ್ಕೆ ಬರುತ್ತಿದ್ದ. ಅವನು ಪ್ರತಿ ತಿಂಗಳೂ, ಯಶಸ್ವಿಯಾಗುವುದು ಹೇಗೆ ಮತ್ತು ಹಣ ಮಾಡುವುದು ಹೇಗೆ ಎಂಬುದರ ಬಗ್ಗೆಯಿರುವ ಸುಮಾರು ೨೫ ಪತ್ರಿಕೆ (ಮ್ಯಾಗಜಿನ್)ಗಳನ್ನು ಕೊಂಡುಕೊಳ್ಳುತ್ತಿದ್ದ, ಅವುಗಳನ್ನು ಓದುತ್ತಲಿದ್ದ ಮತ್ತು ಯೋಜನೆಗಳನ್ನು ಹಾಕುತ್ತಾ ಇದ್ದ. ಅವನು ಪ್ರತಿ ಸಲವೂ ಬಂದು ಹೇಳುತ್ತಿದ್ದ, "ನನ್ನಲ್ಲಿ ಈ ಒಳ್ಳೆಯ ಪತ್ರಿಕೆ ಇದೆ, ನನಗೆ ಈ ಒಳ್ಳೆಯ ಕಲ್ಪನೆ ಬಂದಿದೆ. ದಯವಿಟ್ಟು ನನ್ನನ್ನು ಆಶೀರ್ವದಿಸಿ". ನಾನು ಹೇಳಿದೆ, "ಸರಿ! ಹೋಗಿ ಅದನ್ನು ಮಾಡು". ಮುಂದಿನ ವಾರ ಅವನು ಇನ್ನೊಂದು ಪತ್ರಿಕೆಯೊಂದಿಗೆ ಬರುತ್ತಿದ್ದ ಮತ್ತು ಅದೇ ರೀತಿಯ ಆಶೀರ್ವಾದವನ್ನು ಕೇಳುತ್ತಿದ್ದ. ಒಂದು ವರ್ಷ ಕಳೆಯಿತು; ನಾನೂ ತಾಳ್ಮೆಯಲ್ಲಿದ್ದೆ ಮತ್ತು ಯೋಚಿಸಿದೆ, ಒಂದು ದಿನ ಅವನು ಏನನ್ನಾದರೂ ಶುರು ಮಾಡಬಹುದು ಎಂದು. ಆದರೆ ಅವನು ಏನನ್ನೂ ಶುರು ಮಾಡಲೇ ಇಲ್ಲ. ಅವನು ಕೇವಲ ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಲಿದ್ದ, ನನ್ನನ್ನು ಸಲಹೆಗಾಗಿ ಕೇಳುತ್ತಾ ಇದ್ದ ಮತ್ತು ದೊಡ್ಡ ಯೋಜನೆಗಳನ್ನು ಹಾಕುತ್ತಾ, ಅವುಗಳನ್ನೆಲ್ಲಾ ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತಾ ಇದ್ದ, ಅಷ್ಟೆ.
ನಮಗೆ ಬೆಂಗಳೂರು ಆಶ್ರಮದಲ್ಲಿ ಬೇಸಾಯಕ್ಕೆಂದು ೧೦೦ ಎಕ್ರೆ ಜಮೀನಿದೆ. ಈ ಮತ್ತೊಬ್ಬ ವ್ಯಕ್ತಿ, ಅವನು ಕಂಪ್ಯೂಟರಿನಲ್ಲಿ ಕುಳಿತುಕೊಂಡು, ಅವನು ಎಲ್ಲೆಲ್ಲಿ ಯಾವ ಯಾವ ಬೀಜಗಳನ್ನು ಬಿತ್ತುವನೆಂದೂ ಮತ್ತು ಹೇಗೆ ಬೆಳೆ ಬೆಳೆಸುವನೆಂದೂ ಯೋಜನೆಗಳನ್ನು ಹಾಕುತ್ತಿದ್ದ. ಅವನು ತೋಟಗಾರಿಕೆ ವಿಭಾಗಕ್ಕೆ ಮುಖ್ಯಸ್ಥನಾಗಿದ್ದ. ಆಶ್ರಮದಲ್ಲಿದ್ದ ಇತರ ಎಲ್ಲರೂ ಹೇಳುತ್ತಿದ್ದರು, "ಅವನು ಬೇಸಾಯ ಮಾಡುವುದು ಕಂಪ್ಯೂಟರಿನಲ್ಲಿ ಮಾತ್ರ". ಅವನು ಕೋಣೆಯಲ್ಲಿ ಕುಳಿತುಕೊಂಡು ಯೋಜನೆ ಹಾಕುತ್ತಿದ್ದ. ಬೀಜವನ್ನು ಬಿತ್ತಲು ಗದ್ದೆಗೆ ಹೋಗಲೇ ಇಲ್ಲ.
ಅದೇ ರೀತಿಯಲ್ಲಿ, ಒಬ್ಬನು ಎಲ್ಲಾ ಪತ್ರಿಕೆಗಳನ್ನು ಕೊಂಡು ಓದುತ್ತಿದ್ದನು. ಒಂದು ದಿನ ನಾನು ಅವನನ್ನು ಕರೆದು ಹೇಳಿದೆ, "ನೋಡು, ಇನ್ನು ಆಶೀರ್ವಾದ ಮಾಡುವುದಿಲ್ಲ. ನಾನು ನನ್ನ ಆಶೀರ್ವಾದಗಳು ವ್ಯರ್ಥವಾಗಿ ಹೋಗುವುದನ್ನು ಬಯಸುವುದಿಲ್ಲ. ನೀನು ಪ್ರಯತ್ನ ಬಂದಾಗ ಮಾತ್ರ ಆಶೀರ್ವಾದಗಳು ಕೆಲಸ ಮಾಡುತ್ತವೆ. ಆದುದರಿಂದ ನೀನು ಆ ಎಲ್ಲಾ ಪತ್ರಿಕೆಗಳನ್ನು ಬದಿಗಿರಿಸು. ಇನ್ನು ಪತ್ರಿಕೆಗಳನ್ನು ಕೊಂಡುಕೊಳ್ಳಬೇಡ ಮತ್ತು ಓದಬೇಡ. ಒಂದು ವಿಷಯವನ್ನು ತೆಗೆದುಕೊಂಡು ಅದರ ಮೇಲೆ ಕೆಲಸ ಮಾಡು ಮತ್ತು ನೀನು ಯಶಸ್ವಿಯಾಗುತ್ತಿ".
ನಾನು ಇದನ್ನು ಯಾಕೆ ಹೇಳಿದೆನೆಂದರೆ, ಕೆಲವೊಮ್ಮೆ ಒಳ್ಳೆಯ ಕಲ್ಪನೆಯಿರುವ ಜನರು ಅದನ್ನು ಪ್ರಾಯೋಗಿಕ ಕ್ಷೇತ್ರಕ್ಕೆ ತರುವುದಿಲ್ಲ ಮತ್ತು ಇನ್ನು ಕೆಲವರಿದ್ದಾರೆ, ಅವರು ಸರಿಯಾಗಿ ಯೋಚಿಸದೆ ಹಾಗೂ ಯೋಜನೆ ಹಾಕಿಕೊಳ್ಳದೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಕೂಡಾ ಯಶಸ್ವಿಯಾಗಲು ಸಾಧ್ಯವಿಲ್ಲ. ಆದುದರಿಂದ ನೀವು ಎರಡನ್ನೂ ಮಾಡಬೇಕು.
ಆಶೀರ್ವಾದಗಳಿಲ್ಲದೆ ವಿಷಯಗಳು ಮುಂದಕ್ಕೆ ಹೋಗುವುದಿಲ್ಲ, ನನಗೆ ತಿಳಿದಿದೆ. ಆಶೀರ್ವಾದಗಳು ಅಗತ್ಯ, ಆದರೆ ಆಶೀರ್ವಾದಗಳು ಮಾತ್ರ ಕೆಲಸ ಮಾಡುವುದಿಲ್ಲ, ಯಾಕೆಂದರೆ ಒಬ್ಬರು ಕೆಲಸ ಕೂಡಾ ಮಾಡಬೇಕಾಗುತ್ತದೆ. ಹೌದು! ಆಶೀರ್ವಾದಗಳೊಂದಿಗೆ ಕೆಲಸ, ಇದು ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ನಾನು ಹೇಳುವುದೇನೆಂದರೆ, ನೀವು ಶ್ರಮಪಟ್ಟು ಕೆಲಸ ಮಾಡಿ ಯಶಸ್ಸನ್ನು ಪಡೆದ ಬಳಿಕ ಕೂಡಾ, ನಿಜವಾದ ಯಶಸ್ಸು ಇರುವುದು ನಿಮ್ಮ ವಿಶ್ವಾಸದಲ್ಲಿ. ನಿಜವಾದ ಯಶಸ್ಸೆಂಬುದು ನೀವೆಷ್ಟು ವಿಶ್ವಾಸ ಹೊಂದಿದ್ದೀರಿ, ನೀವೆಷ್ಟು ನಗು ನಗುತ್ತಾ ಇರುತ್ತೀರಿ ಮತ್ತು ನೀವೆಷ್ಟು ದೈರ್ಯವಾಗಿ ನಡೆಯಬಲ್ಲಿರಿ ಎಂಬುದರ ಮೇಲಿದೆ. ಅದು ನಿಮ್ಮ ಯಶಸ್ಸನ್ನು ಸೂಚಿಸುತ್ತದೆ.
ಪ್ರಶ್ನೆ: ನಾನು, ಪಾರ್ಟ್ ೧ ಕೋರ್ಸ್ ಮತ್ತು ಎರಡು ಸಾರಿ ಮೌನ ಶಿಬಿರವನ್ನು ಮಾಡಿದ್ದೇನೆ. ಕಳೆದ ಒಂದು ವರ್ಷದಿಂದ ನಾನು ನನ್ನ ಸ್ಥಳದಲ್ಲಿ ಸೇವೆ ಮಾಡುತ್ತಿದ್ದೇನೆ. ನನ್ನ ಸ್ಥಳದಲ್ಲಿ ಶಿಕ್ಷಕರಿಲ್ಲ, ಆದುದರಿಂದ ನಾನು ಒಬ್ಬ ಶಿಕ್ಷಕನಾಗಬಹುದೇ?
ಶ್ರೀ ಶ್ರೀ ರವಿಶಂಕರ್:
ಖಂಡಿತಾ! ನನಗೆ ಈಗ ಇನ್ನೂ ಹೆಚ್ಚು ಹೆಚ್ಚು ಶಿಕ್ಷಕರ ಅಗತ್ಯವಿದೆ. ಎಷ್ಟು ಸಾಧ್ಯವೋ ಅಷ್ಟು ಶಿಕ್ಷಕರು ಯಾಕೆಂದರೆ ನಾವು ಬಹಳ ಜನರನ್ನು ತಲಪಬೇಕು. ನಿಮ್ಮಲ್ಲಿ ಎಷ್ಟು ಮಂದಿ ಶಿಕ್ಷಕರಾಗಲು ಬಯಸುತ್ತೀರಿ? ಹೌದು, ನೀವೆಲ್ಲರೂ ಶಿಕ್ಷಕರಾಗಬೇಕು. ನೀವು ಸುತ್ತಲಿರುವ ಜನರಿಗಾಗಿ ಬಹಳಷ್ಟು ಮಾಡಬಹುದು. ತುಂಬಾ ಒಳ್ಳೆಯದು!

ಶನಿವಾರ, ಏಪ್ರಿಲ್ 28, 2012

ಶಾ೦ತಿ ಪಥದಲ್ಲಿ ಆರ೦ಭದ ಹೆಜ್ಜೆಯಿಟ್ಟು ದೇವನೊಲುಮೆಯನ್ನು ಸ೦ಪಾದಿಸಿ


28
2012............................... ಬಾಡ್ ಆಂತೋಗಾಸ್ತ್, ಜರ್ಮನಿ
Apr

ಪ್ರಶ್ನೆ ಬುಟ್ಟಿಯಲ್ಲಿನ ಪ್ರಶ್ನೆಗಳನ್ನು ನೋಡುತ್ತಾ ಶ್ರೀಶ್ರೀಗಳು ಹೇಳುತ್ತಾರೆ, ’ಆರಂಭಿಸಲು ಉತ್ತಮವಾದ ಪ್ರಶ್ನೆಯೊಂದನ್ನು ಹುಡುಕುತ್ತಿದ್ದೇನೆ”.
ಎಲ್ಲ ಪ್ರಶ್ನೆಗಳೂ ಒಂದೇ. ವಾಸ್ತವವಾಗಿ, ಸರಿಯಾದ ಉತ್ತರ ಕೇಳಿದಾಗ, ಪ್ರತಿಯೊಂದು ಪ್ರಶ್ನೆಯು ಒಂದೇ ಪರಿಣಾಮವನ್ನುಂಟು ಮಾಡುತ್ತದೆ.
ಸರಿಯಾದ ಉತ್ತರ ಆಲಿಸಿದಾಗ, ಏನು ಹೇಳುವಿರಿ? ‘ಹೌದು, ನಾನು ಒಪ್ಪುತ್ತೇನೆ.’
ಸರಿಯಲ್ಲದಿದ್ದರೆ, ‘ಹೌದು, ನಾನು ಒಪ್ಪುತ್ತೇನೆ’ ಎಂದು ನೀವು ಹೇಳಲಾಗುವುದಿಲ್ಲ, ನೀವೇನೆನ್ನುವಿರಿ, ‘ಇಲ್ಲ, ಅದು ತಪ್ಪು ಉತ್ತರ’ ಎಂದು.
ಆದರೆ ಎಂದಾದರೂ ನಿಮಗೆ ಉತ್ತರ ದೊರೆತರೆ ಏನೆನ್ನುವಿರಿ? ‘ಹೌದು’ ಎನ್ನುವಿರಿ.
ಆದ್ದರಿಂದ, ಅದು ಸರಿಯಾದ ಉತ್ತರವಾಗಿದ್ದರೆ, ಪ್ರತಿಯೊಂದು ಉತ್ತರವೂ ‘ಹೌದು’ ಎನ್ನುವ ಮನಸ್ಸನ್ನು ಕರೆತರಬೇಕು. ಆದರೆ ಪ್ರತಿಯೊಂದು ಉತ್ತರವೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದರೆ, ಆಗ ಅದು ಅಂತ್ಯವಿಲ್ಲದ ಪ್ರಯಾಣವಾಗುವುದು.
ಒಂದು ರೀತಿಯಲ್ಲಿ, ಇದು ಒಳ್ಳೆಯದೇ ಏಕೆಂದರೆ ಇದೊಂದು ಬೌದ್ಧಿಕ ಕಸರತ್ತು, ಆದರೆ ಅದರಿಂದಾಚೆಗೆ ಏನೂ ಇಲ್ಲ. ಸ್ವಲ್ಪ ಮನೋರಂಜನೆಯಷ್ಟೇ, ಇನ್ನೇನೂ ಇಲ್ಲ.
ಆದರೆ ಪ್ರಶ್ನೆಗಳೇ ಇರಬಾರದೇ? ಇಲ್ಲ, ಅದರ ಅವಶ್ಯಕತೆಯಿದೆ. ಬೌದ್ಧಿಕ ಪ್ರಚೋದನೆ ಅತ್ಯಗತ್ಯ. ಬುದ್ಧಿಯು ಬಹು ಮುಖ್ಯವಾದ ಭಾಗ. ಅತ್ಯಂತ ಪುರಾತನ ಗ್ರಂಥವಾದ ಭಗವದ್ಗೀತೆಯಲ್ಲೂ ಶ್ರೀಕೃಷ್ಣನು ಜ್ಞಾನವನ್ನೆಲ್ಲಾ ನೀಡಿದ ಮೇಲೆ ಕೊನೆಯಲ್ಲಿ ಹೇಳುತ್ತಾನೆ, ‘ನಿಮಗೆ ಯಾವುದು ಉತ್ತಮವೆಂದು ಯೋಚಿಸಿ, ವಿವೇಚಿಸಿ ಮತ್ತು ನಿರ್ಣಯಿಸಿ.’
ನಂತರ ಭಗವಂತನು ನುಡಿಯುತ್ತಾನೆ, ’ಆದರೆ ಒಂದು ವಿಷಯ ನೆನಪಿನಲ್ಲಿಡಿ, ನಿಮಗೆ ಯಾವುದು ಒಳ್ಳೆಯದೋ ಅದನ್ನೇ ತಿಳಿಸುವೆ, ನಾನು ಹೇಳುವುದನ್ನೇ ನೀವು ಸ್ವೀಕರಿಸಿ’
ಗುರು ಮತ್ತು ಶಿಷ್ಯರ ನಡುವಿನ ಈ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಸಲವಾದರೂ ಇದನ್ನು ಓದಬೇಕು.
ಐನ್ ಸ್ಟೀನ್ನ್ನೊಳಗೊಂಡಂತೆ ಜಗತ್ತಿನಲ್ಲಿರುವ ಮಹಾನ್ ವಿಜ್ಞಾನಿಗಳು ಇದನ್ನು ಓದಿದಾಗ ಅವರ ಜೀವನ ಪರಿವರ್ತಿತವಾಯಿತೆಂದು ಹೇಳಿದರು, ಏಕೆಂದರೆ ಪ್ರಶ್ನೆಗಳನ್ನು ಕೇಳಬಾರದೆಂದು ಅವರಿಗೆ ಸದಾ ಹೇಳಲಾಗಿತ್ತು. ಧರ್ಮ ಮತ್ತು ಶ್ರದ್ಧೆ ಯಾವಾಗಲೂ ಪ್ರಶ್ನೆಗಳನ್ನು ಕೇಳಬಾರದೆಂದು ಉದ್ದೇಶ ಹೊಂದಿದ್ದು, ಅಂಧಶ್ರದ್ಧೆಯಂತೆ ಅನುಸರಿಸಲು ಸೂಚಿಸಲಾಗಿದೆ. ಆದರೆ ಯೋಗ ವೇದಾಂತ ಶಾಸ್ತ್ರವು ಹೀಗೆ ಹೇಳುವುದಿಲ್ಲ. ಅದು ಬುದ್ಧಿಯನ್ನು ತೊರೆಯುವುದಿಲ್ಲ. ಅದರಲ್ಲಿ ಹೀಗೆ ತಿಳಿಸಿದೆ, ‘ಬುದ್ಧಿಯನ್ನು ಬಳಸಿ. ಸಂಪೂರ್ಣವಾಗಿ ಉಪಯೋಗಿಸಿ, ಆದರೆ ಬುದ್ಧಿಯೇ ಸರ್ವಸ್ವವಲ್ಲ ಎಂಬ ಅರಿವಿರಲಿ. ಸತ್ಯವು ಅದಕ್ಕೆ ಅತೀತವಾದುದು; ಒಂದು ಹೆಜ್ಜೆ ಮುಂದಿರುವುದು.’
ಆದ್ದರಿಂದ ಬುದ್ಧಿಯಲ್ಲಿ ಸಿಕ್ಕಿಹಾಕಿಹೊಳ್ಳಬೇಡಿ, ಹಾಗೆಯೇ ಖಂಡಿತವಾಗಲೂ ಬುದ್ಧಿಯನ್ನು ಪ್ರಕಾಶಗೊಳಿಸಿ. ಬುದ್ಧಿಯನ್ನು ತೃಪ್ತಿ ಪಡಿಸುವ ಮೂಲಕ ಅದನ್ನು ಮೀರಿ ಸಾಗುವುದೇ ಭಕ್ತಿ ಮತ್ತು ಪ್ರೀತಿ.
ಪ್ರ: ಅನೇಕ ಜನರು ಚಿಕ್ಕ ವಯಸ್ಸಿನಲ್ಲೇ ವೈದ್ಯರು, ಇಂಜಿನಿಯರ್, ಅಧ್ಯಾಪಕರು ಇತ್ಯಾದಿಯಾಗುವ ಹಂಬಲದ ಬಗ್ಗೆ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಹೊಂದಿರುತ್ತಾರೆ ಹಾಗೂ ಅದಕ್ಕೆ ಬದ್ಧರಾಗಿರುತ್ತಾರೆ. ದುರಾದೃಷ್ಟಕರವೆಂದರೆ, ನನಗೆ ಆ ರೀತಿಯ ಸ್ಪಷ್ಟತೆಯಿಲ್ಲ. ನಾನಿನ್ನೂ ಯುವಕನಲ್ಲ ಮತ್ತು ಮಾರ್ಗದರ್ಶನದ ಕೊರತೆಯು ಭಯಗೊಳಿಸುತ್ತದೆ. ನಾನೇನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಚಿಂತಿಸಬೇಡಿ. ಜೀವನವೆಲ್ಲವೂ ರೂಪುಗೊಂಡಿದೆ.
ಏನು ಮಾಡಬೇಕೆಂದು ಸ್ಪಷ್ಟತೆಯಿಲ್ಲದಿದ್ದರೆ, ಧ್ಯಾನ ಮಾಡಿ ಮತ್ತು ನಿಮ್ಮ ಅಂತರ್ದೃಷ್ಟಿಯಂತೆ ಮುನ್ನಡೆಯಿರಿ.
ಎಲ್ಲಾ ವೃತ್ತಿಗಳೂ ಒಂದೇ ಎಂದು ನಮ್ಮ ಅಭಿಪ್ರಾಯ. ಯಾವ ಉದ್ದಿಮೆಯಲ್ಲಿರುವವರೂ ಸಂತೋಷವಾಗಿಲ್ಲ.  ವೈದ್ಯರನ್ನು ನೋಡಿ, ಅವರೆಷ್ಟು ಸಂಕಟಪಡುತ್ತಾರೆ, ಏಕೆಂದರೆ ಜೀವನವಿಡೀ ರೋಗಿಗಳೊಡನೆ ಕಳೆಯಬೇಕು. ದಿನದ ೧೫ ಗಂಟೆಗಳ ಕಾಲ ಅಸ್ವಸ್ಥರೊಡನೆ ಕಳೆದು, ಅವರ ಎಲ್ಲ್ಲಾ ತೊಂದರೆಗಳನ್ನು ಆಲಿಸಬೇಕಾಗುತ್ತದೆ, ಹಾಗೂ ಅವರಿಗೆ ಚಿಕಿತ್ಸೆ ನೀಡಿದರೂ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಾರೆ.
ಯಾರಿಗದರೂ ನಿಮಗೆ ಯಾವ ರೋಗವೂ ಇಲ್ಲ, ಸ್ವಸ್ಥರಾಗಿದ್ದೀರ ಎಂದು ಹೇಳಿದರೆ, ಆಗಲೂ ಅವರು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವರು. ಅದಕ್ಕಾಗಿ ವೈದ್ಯರು ನೀವು ಆರೋಗ್ಯವಾಗಿದ್ದರೂ, ‘ಇಲ್ಲ, ನೀವು ಆರೋಗ್ಯವಾಗಿಲ್ಲ’ ಎನ್ನಬೇಕಾಗುತ್ತದೆ. ಅದರಿಂದ ಅವರಿಗೆ ಸಂತೋಷವಾಗುತ್ತದೆ. ಆಗ ಈ ವೈದ್ಯರು ಸರಿಯಾದ ವೈದ್ಯರೆಂದು ಅಭಿಪ್ರಾಯಪಡುತ್ತೀರ. ಅವರಿಗೆ ನನ್ನ ಸಮಸ್ಯೆ ತಿಳಿದಿದೆ, ಸರಿಯಗಿ ತಪಾಸಣೆ ಮಾಡಿದ್ದಾರೆ.
ವೈದ್ಯರ ಪರಿಸ್ಥಿತಿಯೂ ಆರಾಮದಾಯಕವಾಗಿಲ್ಲ; ರಜೆ ತೆಗೆದುಕೊಂಡು ಹೊರಗಡೆ ಹೋಗುವುದು ಸಾಧ್ಯವಿಲ್ಲ. ಮಧ್ಯರಾತ್ರಿಯಲ್ಲಿ ಭೇಟಿ ನೀಡಬೇಕಾಗುತ್ತದೆ. ಊಹಿಸಿ ಔಷಧಿಯನ್ನು ಕೊಡಬೇಕಾಗುತ್ತದೆ. ನಂತರ ಇಡೀ ರಾತ್ರಿ ಅಧೀರರಾಗಿರುತ್ತಾರೆ. ಇವೆಲ್ಲ ಆ ವೃತ್ತಿಯ ರಹಸ್ಯಗಳು. ನಿಮಗೆ ತಲೆನೋವಿದ್ದರೆ, ಆಸ್ಪ್ರಿನ್ ಕೊಡಬಹುದು, ಆದರೆ ಎಲ್ಲಾ ಸಮಸ್ಯೆಗಳಿಗೆ ಯಾವ ಔಷಧವನ್ನು ನಿರ್ದೇಶಿಸಬೇಕೆಂದು ಸದಾ ತಿಳಿದಿರುವುದಿಲ್ಲ. ಕೆಲವೊಮ್ಮೆ ಊಹಿಸಬೇಕಾಗುತ್ತದೆ.
ಇಂಜಿನಿಯರ್ ರನ್ನು ನೋಡಿ. ಹಗಲು ರಾತ್ರಿ ಯಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಾ ಅವರೂ ಯಂತ್ರದಂತೆ ಆಗಿರುತ್ತಾರೆ. ಆಗಲೇಬೇಕು. ಅವರೇ ಹೇಳುತ್ತಾರೆ, ನಾನು ಹೇಳುವುದಲ್ಲ. ಸ್ವತಃ ಇಂಜಿನಿಯರ್ ಗಳೇ ಹೇಳುತ್ತಾರೆ, ‘ಓಹ್, ಎಷ್ಟು ಬೇಸರವಾಗುತ್ತದೆ. ದಿನವಿಡೀ ಯಂತ್ರಗಳು, ಯಂತ್ರಗಳು ಮತ್ತು ಯಂತ್ರಗಳು.’ ಕನಸಿನಲ್ಲೂ ಯಂತ್ರಗಳನ್ನೇ ಕಾಣುತ್ತಾರೆ.
ಕಾರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ ಗಳನ್ನೇ ಕನಸಿನಲ್ಲಿ ಕಾಣುತ್ತಾರೆ. ಜನರಹಿತ ಚಲಿಸುತ್ತಿರುವ ಕಾರ್ ಗಳನ್ನು ಕಾಣುತ್ತಾರೆ.
ಇಲ್ಲಿ ಕಾರ್ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವವರೊಬ್ಬರು ಹೇಳಿದರು, ‘ಪ್ರತಿದಿನ ರಾತ್ರಿ ಕನಸಿನಲ್ಲಿ ಕನ್ ವೇಯರ್ ಬೆಲ್ಟ್ ಮೇಲೆ ಅಥವಾ ಟ್ರಕ್ ನಲ್ಲಿ ಚಲಿಸುತ್ತಿರುವ ಕಾರ್ ಗಳನ್ನು ಕಾಣುತ್ತೇನೆ. ಅದರಲ್ಲಿ ಜನರಿರುವುದಿಲ್ಲ!’
ವಕೀಲರು; ಅವರ ಸ್ಥಿತಿಯನ್ನು ಕೇಳುವುದಕ್ಕೇ ಆಗದು. ಬದುಕುವುದಕ್ಕಾಗಿ ಎಲ್ಲದೠ ಏನದೠ ಸಮಸ್ಯೆಯುಂಟಾಗಲು ಹುಡುಕುತ್ತಿರುತ್ತಾರೆ. ಎಲ್ಲವೂ ಶಾಂತಿಯುತವಾಗಿದ್ದರೆ, ವಕೀಲರಿಗೆ ಬದುಕಲು ಸಾಧ್ಯವಿಲ್ಲ. ಅಣ್ಣ ತಮ್ಮಂದಿರಲ್ಲಿ ಜಗಳವಾದರೆ, ವಕೀಲರಿಗೆ ತುಂಬಾ ಸಂತೋಷವಾಗುತ್ತದೆ, ನಗುತ್ತಿರುತ್ತಾರೆ. ‘ಆಗಲಿ, ಅವರು ನನ್ನ ಹತ್ತಿರ ಬರಲಿ, ನಾನು ಹಣ ಸಂಪಾದಿಸಬಹುದು.’ ಅದೃಷ್ಟವಶಾತ್, ಅವರೇನೂ ಹೆಚ್ಚು ಚಿಂತಿಸಬೇಕಾಗಿಲ್ಲ ಏಕೆಂದರೆ ಪ್ರಪಂಚದಲ್ಲಿ ಈಗಾಗಲೇ ಸಾಕಷ್ಟು ಕದನಗಳು ನಡೆಯುತ್ತಿವೆ. ಎಲ್ಲರೂ ಅವರ ಬಳಿಗೇ ಹೋಗಬೇಕಾಗಿದೆ. ‘ಬನ್ನಿ, ನಾನು ನಿಮ್ಮ ಸಮಸ್ಯೆಯನ್ನು ಬಗೆಹರಿಸುವೆನು’ ಎನ್ನುವರು. ಅದರೆ ಅದು ಬೇಗನೆ ಬಗೆಹರಿಯುವುದಿಲ್ಲ. ಅದನ್ನು ಮುಂದೂಡುತ್ತಾರೆ. ಯಾವ ವಕೀಲನೂ ಬೇಗನೇ ಕೇಸುಗಳನ್ನು  ಪರಿಹರಿಸುವುದಿಲ್ಲ. ಏಕೆ ಮಾಡುತ್ತಾರೆ? ಕೇಸು ದೀರ್ಘ ಕಾಲ ಮುಂದೆ ಹೋದಷ್ಟು ಅವರಿಗೇ ಒಳಿತು. ಪ್ರತಿಯೊಂದು ಹಾಜರಿಯನ್ನೂ ಕಕ್ಷಿದಾರರಿಗೆ ಚಾರ್ಜ್ ಮಾಡಬಹುದು. ಕೇಸು ಹಾಗೆಯೇ ಹೊರಟು ಹೋಗುವಂತೆ ಮಾಡಲು ಅವರೇನು ದಡ್ಡರಲ್ಲ.
ಯಾವುದೇ ವೃತ್ತಿಯನ್ನು ತೆಗೆದುಕೊಂಡರೂ ಅದರಲ್ಲಿ ನ್ಯೂನತೆಗಳು ಇರುವುದು.
ಧಾರ್ಮಿಕ ವ್ಯಕ್ತಿಗಳು, ಅವರ ಸಮಸ್ಯೆ ಮತ್ತಷ್ಟು ದೊಡ್ಡದು.
ರಾಮಾಯಣದಲ್ಲಿ ಒಂದು ಕತೆಯಿದೆ, ಅದನ್ನು ಕೇಳುತ್ತೀರ?
ಅದೊಂದು ಬೀದಿ ನಾಯಿ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಯಾರೋ ಅದರತ್ತ ಒಂದು ಕಲ್ಲು ಹೊಡೆದು, ಅದನ್ನು ಅಟ್ಟಿಸಿಕೊಂಡು ಹೋದರು. ಹೀಗಾಗಿ ಆ ನಾಯಿಯು ನ್ಯಾಯಾಲಯಕ್ಕೆ ಹೋಯಿತು.
ಶ್ರೀರಾಮನ ಆಸ್ಥಾನದಲ್ಲಿ ಎಲ್ಲರಿಗೂ ನ್ಯಾಯ ದೊರಕುತ್ತಿತ್ತು, ಪ್ರಾಣಿಗಳಿಗೂ ಸಹ ಎಂದು ಹೇಳುತ್ತಾರೆ.
ರಸ್ತೆಯು ಎಲ್ಲರಿಗಾಗಿ ಇರುವುದೆಂದು ನಾಯಿಯು ಹೇಳಿತು. ಅದು, ’ರಸ್ತೆಯಲ್ಲಿ ಎಲ್ಲೂ, ಇಲ್ಲಿ ನಾಯಿಗಳಿಗೆ ಪ್ರವೇಶವಿಲ್ಲವೆಂದು ಬರೆದಿಲ್ಲ.  ನಾನು ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ, ಈ ಮನುಷ್ಯ ನನಗೆ ಏಟು ಮಾಡಿದ; ಇವನಿಗೆ ಶಿಕ್ಷೆ ನೀಡಬೇಕು’ ಎಂದು ಹೇಳಿತು.
ಶ್ರೀರಾಮನು ಅದು ನಿಜವೇ ಎಂದು ಆ ಮನುಷ್ಯನನ್ನು ಕೇಳಿದನು. ಅವನು ಸುಳ್ಳು ನುಡಿಯಲಾರದೆ ತಾನು ಆ ನಾಯಿಯನ್ನು ಹೊಡೆದುದಾಗಿ ಒಪ್ಪಿಕೊಂಡನು.
ಆ ಕಾಲದಲ್ಲಿ ದೋಷಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ನೊಂದವನನ್ನೇ ಕೇಳುತ್ತಿದ್ದರು.
ಆದ್ದರಿಂದ ಆ ನಾಯಿಯನ್ನು, ಅದಕ್ಕೆ ಕಲ್ಲಿನಿಂದ ಹೊಡೆದ ಆ ಮನುಷ್ಯನಿಗೆ ಯಾವ ಶಿಕ್ಷೆಯನ್ನು ನೀಡುವುದೆಂದು ಕೇಳಿದಾಗ, ಅದು, ’ಮಠಾಧೀಶನನ್ನಾಗಿ ಮಾಡಿ. ಆಶ್ರಮವೊಂದರ ಗುರುಗಳನ್ನಾಗಿ ನೇಮಿಸಿ’ ಎಂದಿತು.
ಇದನ್ನು ಜನರು ವಿಚಿತ್ರ ಶಿಕ್ಷೆಯೆಂದು ಭಾವಿಸಿದರು.
ನಾಯಿಯು ಹೇಳಿತು, ’ಏಕೆ ಕೇಳುತ್ತಿದ್ದೀರಿ? ಹಾಗೆ ನೇಮಿಸಿ ಆಷ್ಟೇ. ಹಿಂದಿನ ಜನ್ಮದಲ್ಲಿ ನಾನೂ ಸಹ ಒಬ್ಬ ಗುರುವಾಗಿದ್ದೆನು. ಈಗ ನೋಡಿ ಏನಾಗಿದೆಯೆಂದು! ಬಳಿಕ ಸಾಯುವ ಮೊದಲು ನಾನು ಯೋಚಿಸಿದೆ, ಗುರುವಾಗುವ ಬದಲು ಬೀದಿ ನಾಯಿಯಾಗಿದ್ದರೆ ಎಷ್ಟೋ ಮೇಲಾಗುತ್ತಿತ್ತು. ನೋಡಿ, ಅದಕ್ಕೇ ನಾನು ಬೀದಿ ನಾಯಿಯಾಗಿದ್ದೇನೆ. ಅನೇಕ ತೊಂದರೆಗಳಿದ್ದವು. ಇವನೂ ಕೂಡ ಆಶ್ರಮದ ಗುರುವಾಗಬೇಕು, ನಂತರ ಜೀವನದಲ್ಲಿ ಕಷ್ಟಗಳೆಂದರೇನು, ನೋವು ಮತ್ತು ದುಃಖವೆಂದರೇನೆಂದು ಅನುಭವವಾಗುವುದು.
ಈ ಭೂಮಿಯಲ್ಲಿ ಪ್ರತಿಯೊಂದು ಕೆಲಸ, ಪ್ರತಿಯೊಂದು ವೃತ್ತಿಯೂ ಸುಲಭವಲ್ಲ. ಪ್ರತಿಯೊಂದು ವೃತ್ತಿಯೂ ಕಠಿಣವಾಗಿಯೇ ಇರುತ್ತದೆ. ಯಾವ ಕೆಲಸವೂ ಸುಲಭವಲ್ಲ. ಧಾರ್ಮಿಕ ಸಂಸ್ಥೆಯ ಪೀಠಾಧಿಕಾರಿಯಾದರೆ ಇನ್ನೂ ಕಷ್ಟಕರವಾದುದು ಏಕೆಂದರೆ ಎಲ್ಲರ ಬಗ್ಗೆಯೂ ಗಮನಹರಿಸಬೇಕು.
ಯಾರನ್ನಾದರು ನೋಡಲಿಲ್ಲವೆಂದರೆ, ಆ ವ್ಯಕ್ತಿಯು ನನ್ನನ್ನು ನೀವು ನೋಡಲಿಲ್ಲವೆಂದು ದೂರು ನೀಡುವನು. ನೆನ್ನೆ ನೀವು ನನಗೆ ಬೇಜಾರು ಮಾಡಿದಿರಿ. ಎಲ್ಲರನ್ನೂ ಖುಷಿಪಡಿಸಬೇಕೆಂದು ಬಂದಿರಿ ಆದರೆ ಆ ಸಂದರ್ಭದಲ್ಲಿ ಯಾರನ್ನೋ ದುಃಖಗೊಳಿಸಿದಿರಿ.
ನೀವು ಅವರ ಕಡೆಗೆ ನೋಡಿದಾಗ ಅವರಿನ್ನೆಲ್ಲೋ ನೋಡುತ್ತಿರುತ್ತಾರೆ, ಆದರೆ ಅವರು ನಿಮ್ಮತ್ತ ನೋಡಿದಾಗ ಮಾತ್ರ ನೀವು ಅವರ ಕಡೆಗೆ ನೋಡಬೇಕೆಂದು ಅಪೇಕ್ಷಿಸುತ್ತಾರೆ; ಇಲ್ಲದಿದ್ದರೆ ಅವರು ದುಃಖಿತರಾಗುವರು! ಏನು ಮಾಡುವುದು? ತಾಂತ್ರಿಕತೆಯು ಮತ್ತಷ್ಟು ಹದಗೆಡಿಸಿದೆ! ನನಗೆ ಎಷ್ಟು ಇ-ಮೇಲ್ ಗಳು ಸ್ವೀಕೃತವಾಗಿದೆಯೆಂದು ಬಲ್ಲಿರಾ? ಈ ಕೆಲವು  ವಾರಗಳಲ್ಲಿ ೧೦೧,೦೦೦, ಎಲ್ಲವನ್ನೂ ಓದಬೇಕು.  ವಾರಕ್ಕೆ ೧೦,೦೦೦ ಇ-ಮೇಲ್ ಗಳು ಬರುತ್ತವೆ. ಕೆಲವೊಮ್ಮೆ ೮,೦೦೦ ಇನ್ನು ಕೆಲವು ಬಾರಿ ೨,೦೦೦, ಏರುಪೇರಾಗುತ್ತಿರುತ್ತದೆ, ಆದರೆ ಎಲ್ಲವೂ ಸೇರಿ ರಾಶಿಯಾಗಿರುತ್ತದೆ.
ಆದ್ದರಿಂದ ಯಾವ ವೃತ್ತಿಯ ಬಗ್ಗೆಯೂ ಚಿಂತಿಸಬೇಡಿ. ಎಲ್ಲವೂ ಒಂದೇ. ನಿಮ್ಮ ಜೀವನ ಜೀವಂತವಾಗಿರುವಂತೆ ಯಾವುದಾದರೊಂದು ಕೆಲಸವನ್ನು ಹುಡುಕಿರಿ. ದುರಾಸೆಪಡಬೇಕಾಗಿಲ್ಲ ಮತ್ತು ಕೊರತೆಯ ಭಾವ ಬೇಡ. ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ  ಸಮೃದ್ಧಿಯ ಭಾವವಿರಬೇಕು. ಹಣವು ಎಂದಿಗೂ ಸಾಕೆಂದೆನಿಸುವುದಿಲ್ಲ.
ನೋಡಿ, ಬಿಲಿಯನೇರ್ ಗಳೂ ಕೂಡ ತಮ್ಮ ಹಣವನ್ನು ಹೇಗೆ ಎರಡು ಪಟ್ಟು, ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುವುದೆಂದು ಯೋಚಿಸುತ್ತಿರುತ್ತಾರೆ. ಈ ಓಟ ಎಂದಿಗೂ ಅಂತ್ಯ ಕಾಣದು.
ಈ ವರ್ಷ ಡಾವೋಸ್ ನಗರದಲ್ಲಿದ್ದೆ. ಅಲ್ಲಿ ಎಲ್ಲ ಮಲ್ಟಿ-ಬಿಲಿಯನೇರ್ ಗಳು ಸೇರಿದ್ದರು. ಅವರ ಕಣ್ಣು ಹಾಗು ಮುಖಗಳನ್ನು ನೋಡಿ, ಅಲ್ಲಿ ತೃಪ್ತಿಯಿಲ್ಲ, ಸಂತೋಷವಿಲ್ಲ, ಸಮಾಧಾನವಿಲ್ಲ ಮತ್ತು ಉನ್ನತ ಭಾವವಿಲ್ಲ.
ನಾನು ಹೇಳುತ್ತಿರುವುದು ತಿಳಿಯುತ್ತಿದೆಯೇ? ಒಂದು ಚಿಕ್ಕ ಗುಡಿಸಿಲಿನಲ್ಲಿ ಮುಗುಳ್ನಗೆಯನ್ನು ಕಾಣಬಹುದು, ಆದರೆ ಅದನ್ನು ಅರಮನೆಯಲ್ಲಿ ಕಾಣಲು ಸಾಧ್ಯವಾಗದೇ ಇರಬಹುದು. ಪ್ರಶಾಂತವಾದ ಮನಸ್ಸನ್ನು ನೀವು ಅರಮನೆಯಲ್ಲಿ ಕಾಣದೇ ಇರಬಹುದು.
ಪ್ರ: ನಮ್ಮ ದುಷ್ಕರ್ಮಗಳನ್ನು ಹೇಗೆ ತೊಡೆದುಹಾಕುವುದು? ನಾನು ತುಂಬಾ ಸ್ವಯಂ-ತೀರ್ಮಾನಿಸುವಂತೆ ಭಾಸವಾಗುತ್ತದೆ. ನನ್ನನ್ನು ನಾನು ಪ್ರೀತಿಸಲು ಹೇಗೆ ಕಲಿಯಲಿ?ಶ್ರೀ ಶ್ರೀ ರವಿಶಂಕರ್: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ ನೀವು ನಿಮ್ಮ ಕರ್ಮಗಳನ್ನು ಕಳೆಯಲು ಸಾಧ್ಯವಿಲ್ಲ. ನಾನು ನಿಮಗಾಗಿ ಅದನ್ನು ಮಾಡುತ್ತೇನೆ.
ನೀವು ನಿಮ್ಮ ಕೆಲಸವನ್ನು ಮಾಡಿ. ನಿಮ್ಮ ದುಷ್ಕರ್ಮದ ಬಗ್ಗೆ ಚಿಂತಿಸಬೇಡಿ. ಅದಕ್ಕೆಂದೇ ಗುರುವಿದ್ದಾರೆ. ಹಿಂದಿನ ದುಷ್ಕರ್ಮಗಳನ್ನು ತೊಡೆಯುವುದರ ಬಗ್ಗೆ ಚಿಂತಿಸಬೇಡಿ. ನೀವು ಜ್ಞಾನದಲ್ಲಿದ್ದರೆ, ಸತ್ಸಂಗದಲ್ಲಿದ್ದರೆ, ಧ್ಯಾನದಲ್ಲಿದ್ದರೆ ಮತ್ತು ಸುದರ್ಶನ ಕ್ರಿಯೆ ಮಾಡುತ್ತಿದ್ದರೆ, ಅದು ತಾನಾಗಿಯೇ ಕಳೆಯುವುದು.
ಇವೆಲ್ಲವನ್ನು ಏಕೆ ಮಾಡುತ್ತೀರಿ? ಇವೆಲ್ಲವೂ ನಿಮ್ಮ ದುಷ್ಕರ್ಮವನ್ನು ತೊಡೆದುಹಾಕುವುದು. ದುಷ್ಕರ್ಮವೆಂದರೇನು? ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಸಂಸ್ಕಾರಗಳು; ಪ್ರಜ್ಞೆಯಲ್ಲಿರುವ ಕೆಟ್ಟ ಸಂಸ್ಕಾರಗಳು. ಆದರೂ ನಿಮಗೆ ಗೊಂದಲವಾಗುತ್ತಿದ್ದರೆ, ’ಗುರೂಜೀ, ಈ ಸಮಸ್ಯೆಗಳನ್ನು ನಿಮಗೆ ಕೊಡುತ್ತೇನೆ. ದಯವಿಟ್ಟು ಇವುಗಳನ್ನು ನೋಡಿಕೊಳ್ಳಿ’ ಎಂದು ಹೇಳಿ. ಅವೆಲ್ಲವೂ ಹೊರಟುಹೋಗುವವು, ಸರಿಯೇ!
ಪ್ರ: ನಿಮಗಿಷ್ಟೊಂದು ಕರುಣೆಯೇಕೆ? ಅದೇ ತಪ್ಪನ್ನು ಪುನರಾವರ್ತಿಸಿ ನಿಮ್ಮನ್ನು ನಿರಾಸೆಗೊಳಿಸಿದ್ದರೂ ನನ್ನ ಮೇಲೆ ನಿಮಗೇಕೆ ಕೋಪ ಬರುವುದಿಲ್ಲ. ನನ್ನ ಮೇಲೆ ನನಗೇ ಬೇಸರವಾಗಿದೆ.ಶ್ರೀ ಶ್ರೀ ರವಿಶಂಕರ್: ಚಿಂತಿಸಬೇಡಿ. ಕಳೆದುಹೋದುದರ ಬಗ್ಗೆ ಕುಳಿತು ಆಲೋಚಿಸುವುದು ಬೇಡ.
ನೋಡಿ, ಮಗುವು ನಡೆಯಲು ಆರಂಭಿಸಿದಾಗ ಅನೇಕ ಸಲ ಬೀಳುವುದು. ಆದರೆ ಹತ್ತು ಸಲ ಬಿದ್ದ ಮಾತ್ರಕ್ಕೆ ಅದು ನಿಂತುಕೊಳ್ಳುವುದನ್ನು ಬಿಡುವುದಿಲ್ಲ. ನಿಂತುಕೊಳ್ಳುವ ತನಕ ಅದು ತನ್ನ ಪರಿಶ್ರಮವನ್ನು ಬಿಡುವುದಿಲ್ಲ.
ಆದ್ದರಿಂದ ನಾನು ಹೇಳುವುದೇನೆಂದರೆ ನೀವು ಸಮರ್ಪಕವಾಗಿ  ನಡೆಯುತ್ತಿದ್ದೀರ, ಹಾಗೆಯೇ ನಡೆಯುತ್ತಿರಿ. ನಿಮ್ಮ ತಪ್ಪಿನ ನೋವಾದರೂ ನಿಮಗಿದೆ; ಇದು ನಿಮ್ಮನ್ನು ಮತ್ತೆ ಮತ್ತೆ ತಪ್ಪು ಮಾಡುವುದನ್ನು ತಪ್ಪಿಸುತ್ತದೆ.
ನೀವು ತಪ್ಪು ಮಾಡುವುದೇಕೆಂದು ಗೊತ್ತೇ? ಅದಕ್ಕೆ ಕಾರಣ ಅದರಿಂದ ಏನೋ ಸುಖವನ್ನು  ಪಡೆಯುತ್ತಿರುವಿರಿ. ಮಾದಕ ವಸ್ತುಗಳ ಸೇವನೆ, ಮದ್ಯಪಾನ ಅಥವಾ ಧೂಮಪಾನ ಸೇವನೆ ಕೆಟ್ಟದ್ದು ಹಾಗೂ ಹಾನಿಕಾರಕ ಆದರೂ ಸೇವಿಸುತ್ತೀರಿ, ಏಕೆ? ಏಕೆಂದರೆ ಅದರಿಂದೇನೋ ಸುಖ ಸಿಗುತ್ತಿದೆಯೆಂಬ ಭಾವನೆಯಿಂದ. ಹಾಗೆ ನೋಡಿದರೆ, ಅದು ನಿಮಗೆ ಸುಖ ನೀಡುವುದಿಲ್ಲ, ಕೇವಲ ಸುಖದ ಆಶ್ವಾಸನೆಯನ್ನಷ್ಟೇ ನೀಡುವುದು.
ಇನ್ನೊಂದು ಕತೆಯಿದೆ. ಸಜ್ಜನರೊಬ್ಬರು ಮಾರುಕಟ್ಟೆಗೆ ಹೋಗಿ ಒಬ್ಬ ಸಾಧುವಿನಿಂದ ಒಂದು ಶಂಖವನ್ನು ಆಶೀರ್ವಾದವಾಗಿ ಪಡೆದರು. ಅದೊಂದು ವಿಶಿಷ್ಠವಾದ ಶಂಖ, ನೀವು ಏನ್ನನ್ನದರೂ ಬೇಡಿದರೆ, ಅದನ್ನು ದಯಪಾಲಿಸುತ್ತಿತ್ತು.
ಈ ಸಜ್ಜನರ ಸ್ನೇಹಿತರೊಬ್ಬರು ಶಂಖವನ್ನು ನೋಡಿ ಅತ್ಯುತ್ಸಾಹಗೊಂಡರು. ಅವರಿಗೂ ಅಂತಹ ಶಂಖ ಬೇಕೆನಿಸಿತು.
ಎಷ್ಟೋ ಸಾರಿ ನಿಮಗೆ ಅಗತ್ಯವಿದೆಯೆಂದು ವಸ್ತುವನ್ನು ಕೊಳ್ಳುವುದಿಲ್ಲ, ಬೇರೆಯವರ ಬಳಿಯಿದೆಯೆಂಬ ಕಾರಣಕ್ಕಾಗಿ ಕೊಳ್ಳುವಿರಿ. ನಿಮ್ಮ ಸ್ನೇಹಿತರು ಕೊಂಡುಕೊಂಡರು ಅದಕ್ಕೋಸ್ಕರ ನಿಮಗೂ ಅದನ್ನು ಪಡೆಯುವ ಇಚ್ಛೆ. ನಿಮ್ಮ ಸ್ನೇಹಿತರು ಆಡಿ ಅಥವಾ ಬೆಂಜ್ ಕಾರ್ ಕೊಂಡರೆ, ನಿಮಗೂ ಆಡಿ ಅಥವಾ ಬೆಂಜ್ ಕೊಳ್ಳುವ ಆಸೆ. ಅದರಿಂದುಟಾಗುವ ವ್ಯತ್ಯಾಸವಾದರೂ ಏನು? ನಿಮಗೆ ಓಡಾಡಲು ಒಂದು ಕಾರ್ ಬೇಕು, ಅಷ್ಟೇ.
ಆದರೆ ನಿಮ್ಮ ಸ್ನೇಹಿತರು ಒಂದು ದೊಡ್ಡ ಕಾರ್ ಕೊಂಡಿರುವುದರಿಂದ ನೀವೂ ಒಂದು ಉತ್ತಮ ಕರ್ ಕೊಳ್ಳಲು ಬಯಸುವಿರಿ.
ಆದ್ದರಿಂದ ಅವನು ಶಂಖ ಕೊಳ್ಳಲು ಮಾರುಕಟ್ಟೆಗೆ ಹೋದನು. ಅಂಗಡಿಯವನು ಶಂಖವೊಂದನ್ನು ತೋರಿಸಿ, ಏನು ಕೇಳಿದರೂ ಅದರ ಎರಡರಷ್ಟನ್ನು ನೀಡುವುದೆಂದು ಅದರ ವಿಶಿಷ್ಠತೆಯನ್ನು ತಿಳಿಸಿದನು.
ಒಂದು ವೇಳೆ ನಿಮಗೆ ಒಂದು ಕಾರ್ ಬೇಕೆನಿಸಿದರೆ, ಶಂಖವು ಒಂದೇ ಏಕೆ, ಎರಡು ತೆಗೆದುಕೊಳ್ಳಬಹುದು ಎಂದು ಹೇಳುವುದು.
ಯಾರಾದರೂ ಈ ಕತೆಯನ್ನು ಕೇಳಿದ್ದೀರ? ಇಲ್ಲವೇ? ನನ್ನ ಪುಸ್ತಕಗಳನ್ನು ಓದುತ್ತಿಲ್ಲ ಅಥವಾ ನನ್ನ ಟೇಪುಗಳನ್ನು ಕೇಳುತ್ತಿಲ್ಲ?!
ಆದ್ದರಿಂದ ಅವನು ಆ ಶಂಖವನ್ನು ಕೊಂಡು ಮನೆಗೆ ಹೋದನು. ಆ ಶಂಖದ ಬಳಿ ಒಂದು ಕೇಜಿ ಚಿನ್ನ ಬೇಡಿದನು. ಆ ಶಂಖವು, ’ಒಂದು ಕೇಜಿ ಏಕೆ, ಎರಡು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಸರಿ, ನನಗೆ ಎರಡು ಕೇಜಿ ಕೊಡು’ ಎಂದನು.
ಶಂಖವು,’ ’ಎರಡು ಕೇಜಿ ಏಕೆ, ನಾಲ್ಕು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಆಗಲಿ, ನಾಲ್ಕು ಕೇಜಿ ಕೊಡು’ ಎಂದನು.
ಶಂಖವು,’ ’ನಾಲ್ಕು ಕೇಜಿ ಏಕೆ, ಎಂಟು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಆಗಲಿ, ನನಗೆ ಎಂಟು ಕೇಜಿ ಕೊಡು, ಅದಕ್ಕಿಂತ ಹೆಚ್ಚಿಗೆ ಬೇಡ’ ಎಂದನು.
ಶಂಖವು,’ ’ಎಂಟು ಕೇಜಿ ಏಕೆ, ಹದಿನಾರು ತೆಗೆದುಕೋ’ ಎಂದಿತು.
ಅದು ಗುಣಿಸುತ್ತಾ ಹೋಯಿತು ಆದರೆ ಏನನ್ನೂ ಕೊಡಲಿಲ್ಲ. ’ಏನಾದರು ಕೊಡು’ ಎಂದು ಕೇಳಿದನು.
ಅದಕ್ಕೆ ಆ ಶಂಖವು,’ಏನಾದರು ಏಕೆ, ಬಹಳಷ್ಟು ತೆಗೆದುಕೋ’ ಎಂದಿತು. ಅದಕ್ಕೆ ಅವನು ತನ್ನ ಕಿವಿಗಳನ್ನು ಎಳೆದು, ’ವಾವ್!’ ಎಂದನು.
ಚಟಗಳು ನಿಮಗೆ ಇದನ್ನೇ ನೀಡುವುದು. ಅದು ನಿಮಗೆ ಕೇವಲ ಸುಖದ ಆಶ್ವಾಸನೆಯನ್ನು ನೀಡುತ್ತದೆ, ಆದರೆ ಎಂದೂ ಸುಖವನ್ನು ನೀಡುವುದಿಲ್ಲ.
ದುಶ್ಚಟಗಳನ್ನು ಹೊಡೆದೋಡಿಸಲು ನಿಮಗೆ ಈ ಮೂರರಲ್ಲಿ ಒಂದರ ಅವಶ್ಯಕತೆಯಿರುತ್ತದೆ – ಪ್ರೀತಿ, ಭಯ ಮತ್ತು ದುರಾಸೆ.
ಯಾವುದರ ಮೇಲಾದರೂ ಗಾಢವಾದ ಪ್ರೀತಿ ಅಥವಾ ಪ್ರೀತಿಪಾತ್ರರಿಗೆ ಆ ಹಾದಿಯನ್ನೆಂದೂ ಹಿಡಿಯುವುದಿಲ್ಲವೆಂಬ ಭರವಸೆ ನಿಮ್ಮನ್ನು ದುಶ್ಚಟಗಳಿಂದ ಹೊರತರುವುದು.
ವೈದ್ಯರು ನೀವು ಮದ್ಯಪಾನ ಮಾಡಿದರೆ ನಿಮ್ಮ ಪಿತ್ತಕೋಶ ಕೆಟ್ಟು, ನೀವು ಸಾಯುವಿರೆಂದು ಹೇಳಿದಾಗ ನೀವು ಅದನ್ನು ಮುಟ್ಟುವುದಿಲ್ಲ.
ಅದೇ ಯಾರಾದರೂ ನೀವು ೪೦ ದಿನಗಳವರೆಗೆ ಮದ್ಯಪಾನ ಮಾಡದ್ದಿದ್ದರೆ ಒಂದು ಮಿಲಿಯನ್ ಡಾಲರ್ ಗಳನ್ನು ಕೊಡುವರೆಂದು ಹೇಳಿದರೆ, ನೀವು, ’೪೦ ದಿನಗಳೇಕೆ, ಯಾವುದಕ್ಕೂ ಮುಂಜಾಗ್ರತೆ ವಹಿಸಿ ೪೫ ದಿನಗಳವರೆಗೆ  ಅದರಿಂದ ದೂರವಿರುತ್ತೇನೆ’ ಎನ್ನುವಿರಿ.
ಆದ್ದರಿಂದ ದುರಾಸೆ, ಭಯ ಅಥವಾ ಪ್ರೀತಿ ನಿಮ್ಮನ್ನು ದುಶ್ಚಟಗಳಿಂದ ಬಿಡುಗಡೆಗೊಳಿಸುವುದು.
ನನ್ನ ಸ್ವಭಾವವು ಕರುಣಾಮಯಿಯಾಗಿ ಇರಬೇಕಾದುದೇ. ಇಷ್ಟು ವರ್ಷ, ಎಂದರೆ ಸುಮಾರು ೫೬ ವರ್ಷಗಳಿಂದ ಯಾರಿಗೂ ಒಂದು ಕೆಟ್ಟ ಮಾತನ್ನಾಡಿಲ್ಲ. ಅದು ಸಾಧನೆಯೇನಲ್ಲ. ಈ ಶರೀರ ಹಾಗೆ ಮಾಡಲ್ಪಟ್ಟಿದೆ. ನಾನು ಹಾಗೆ ಮಾಡಲ್ಪಟ್ಟಿರುವೆ.
ನಾನು ಪ್ರಕ್ಷುಬ್ಧಗೊಂಡಿದ್ದರೂ ಕೆಟ್ಟ ಮಾತುಗಳನ್ನು ಆಡಲಾಗುವುದಿಲ್ಲ. ಕೇವಲ, ’ಏ ಮೂರ್ಖ’ ಎನ್ನಬಹುದು, ಇದಕ್ಕಿಂತ ಹೆಚ್ಚಿಗೆಯಿಲ್ಲ.
ಅದನ್ನೂ ಕೇವಲ ಏಳು ಅಥವಾ ಎಂಟು ಬಾರಿ ಹೇಳಿರಬಹುದು; ಬೆರಳೆಣಿಸಬಹುದು. ಪರರನ್ನು ಬಯ್ಯುವುದು, ಶಪಿಸುವುದು ಅಥವಾ ನಿಂದಿಸುವುದು ನನ್ನಿಂದ ಸಾಧ್ಯವಿಲ್ಲ. ನಾನೆಂದಿಗೂ ಹಾಗೆ ಮಾಡಿಲ್ಲ. ಎಂದಿಗೂ ಯಾರನ್ನೂ ಕೆಟ್ಟ ಮಾತುಗಳಿಂದ ನೋಯಿಸಿಲ್ಲ. ಆದರೂ ಕೆಲವರಿಗೆ ನನ್ನಿಂದ ನೋವಾಗಿದ್ದರೆ, ಅದು ಅವರ ಸಮಸ್ಯೆ, ನಾನೇನು ಮಾಡಲು ಸಾಧ್ಯ?
ಪ್ರ: ನನ್ನ ಜೊತೆಯಲ್ಲಿ ನಾಲ್ಕು ವರ್ಷಗಳಿಂದಿರುವ ನನ್ನ ಪ್ರಿಯತಮೆಯು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ಹೇಳುತ್ತಿದ್ದಾಳೆ. ಅವನನ್ನು ಐದು ತಿಂಗಳ ಹಿಂದೆ ಭೇಟಿ ಮಾಡಿದ್ದಳು. ನಾನೇನು ಮಾಡಲಿ? ಅವಳನ್ನು ತುಂಬಾ ಪ್ರೀತಿಸುತ್ತೇನೆ, ಅವಳನ್ನು ಕಳೆದುಕೊಳ್ಳಲಾರೆ. ಅವಳು ಯೋಚಿಸಿ ನಿರ್ಧರಿಸುವ ತನಕ ನನಗೆ ಕಾಯಬೇಕೆಂದು ಹೇಳಿದ್ದಾಳೆ. ಅವಳಿಗಾಗಿ ನಾನು ಕಾಯುವುದೆ ಅಥವಾ ಅವಳನ್ನು ಬಿಟ್ಟುಬಿಡುವುದೇ?ಶ್ರೀ ಶ್ರೀ ರವಿಶಂಕರ್: ಒಂದು ವಿಧದಲ್ಲಿ ನಿನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಇನ್ನೊಂದು ವಿಧದಲ್ಲಿ ಇದರ ಬಗ್ಗೆ ನನಗೆ ಯಾವ ಅನುಭವವೂ ಇಲ್ಲ. ಆದ್ದರಿಂದ ನಿನಗೆ ನಾನು ಉಪದೇಶಿಸಲಾರೆ.
ಸ್ವಲ್ಪ ಸಮಯ ತೆಗೆದುಕೊಂಡು, ಮೌನವಾಗಿರು ಎಂದು ಹೇಳಬಹುದಷ್ಟೆ. ನಿನ್ನ ಜೀವನದ ಬಗ್ಗೆ ಯೋಚಿಸು, ಹಿಂದೆ ಹೇಗಿತ್ತೆಂದು ಆಲೋಚಿಸು.
ಆ ವ್ಯಕ್ತಿಯು ನಿನ್ನ ಜೀವನದಲ್ಲಿ ಇಲ್ಲದ್ದಿದ್ದಾಗಲೂ ನೀನು ಸಂತೋಷವಾಗಿದ್ದೆಯಲ್ಲವೇ? ಅವಳೇನಾದರೂ ನಿನ್ನ ಜೀವನದಲ್ಲಿ ಮಿಂಚೊಂದನ್ನು ಹೊತ್ತಿಸಿದ್ದರೆ, ಪ್ರೀತಿಯನ್ನು ಅನುಭವಿಸುವಂತೆ ಮಾಡಿದ್ದರೆ, ಕೃತಜ್ಞತೆಯನ್ನು ಅರ್ಪಿಸು. ಭವಿಷ್ಯದಲ್ಲಿ ಅವಳಿಲ್ಲದಿದ್ದರೂ ನಿನ್ನ ಬದುಕು ಮುಂದುವರೆಯುವುದು.
ನೀನು ಮೇಲೇರುವಿಯೆಂದು ನಾನು ಹೇಳುವೆ. ಆ ವ್ಯಕ್ತಿಯು ಹೊರಟು ಹೋದರೆ ಅವಳಿಗಿಂತ ಉತ್ತಮ ವ್ಯಕ್ತಿ ನಿನಗೆ ಸಿಗುವಳು. ಇದು ಖಂಡಿತ. ನೀನು ಕೇಂದ್ರಬಿಂದುವೆಂದು ತಿಳಿ, ಸರಿಯೇ!
ಇನ್ನೊಬ್ಬರಲ್ಲಿ ನಿನ್ನ ಆತ್ಮವನ್ನು ಸ್ಥಾಪಿಸಡಬೇಡ, ನಿನ್ನೊಳಗೇ ಇರಿಸಿಕೋ. ಆ ವ್ಯಕ್ತಿಯೇನಾದರೂ ಮತ್ತೆ ಬಂದರೆ, ಒಳ್ಳೆಯದು, ಇಲ್ಲದಿದ್ದರೆ ಮುಂದೆ ಸಾಗು.
ಈ ಜ್ಞಾನವು, ಪ್ರೀತಿಯನ್ನು ದ್ವೇಷಕ್ಕೆ ತಿರುಗದಂತೆ ಸಹಕಾರಿಯಾಗಿದೆ.
ಅನೇಕ ಬಾರಿ ಜನರು ಇನ್ನೊಬ್ಬರನ್ನು ಪ್ರೀತಿಸುತ್ತಾರೆ, ಅದು ಎಂತಹ ಕಹಿ ಮತ್ತು ದ್ವೇಷಕ್ಕೆ ಮಾರ್ಪಾಡಾಗುವುದೆಂದರೆ ನಂಬಲಾರ್ಹವಾದುದು. ಆದ್ದರಿಂದ ಹಾಗಾಗದಂತೆ ನೋಡಿಕೊಳ್ಳಿ.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಬಿಟ್ಟುಬಿಡಿ. ಅದು ನಿಮ್ಮದಾಗಿದ್ದರೆ, ಹಿಂದಿರುಗಿ ಬರುತ್ತದೆ. ಅದು ಹಿಂದಿರುಗದ್ದಿದ್ದರೆ, ಅದೆಂದೂ ನಿಮ್ಮದಾಗಿರಲಿಲ್ಲ. ಇದನ್ನರಿತು ಮುಂದೆ ನಡೆಯಿರಿ.
ಪ್ರ: ದೇವರು ಜೀವಂತವಾಗಿಲ್ಲವೆಂಬ ಪರಿಕಲ್ಪನೆಯೊಡನೆ ನಾನು ಬೆಳೆದಿರುವೆ. ಈಗ ತಮ್ಮನ್ನು ಭೇಟಿ ಮಾಡಿರುವೆನು, ಸುಂದರವಾದ ಜ್ಞಾನವನ್ನು ಆಲಿಸಿರುವೆನು ಹಾಗೂ ಒಬ್ಬ ಜೀವಂತ ದೇವರನ್ನು ಕಂಡಂತೆ ಭಾಸವಾಗುತ್ತಿದೆ.
ಆದರೂ ದೇವರು ಜೀವಂತವಾಗಿರಲಾರ. ನನ್ನ ಮನಸ್ಸಿಗೆ ಅರ್ಥವಾಗುತ್ತಿಲ್ಲ. ಜ್ಞಾನ ಹಾಗೂ ಪ್ರೀತಿಯ ಮೂಲಕ ನೀವಿರುವಿರೆಂದು ತಿಳಿದಿದ್ದೇನೆ, ಆದರೂ ನೀವು ವ್ಯಕ್ತಿ ಸ್ವರೂಪನಾಗಿರುವವರೆಗೂ ನಿಮ್ಮನ್ನು ಸಂಪೂರ್ಣವಾಗಿ ಸ್ವೀಕರಿಸಲಾರೆ.
ದೈವೀಕತೆಯನ್ನು ನೋಡಬಹುದಾಗಿದೆ, ಅನುಭವಿಸಬಹುದಾಗಿದೆ, ನೋವೂ ಉಂಟಾಗುತ್ತಿದೆ. ಆದರೆ ನನಗೆ ಅರ್ಥವಾಗುತ್ತಿಲ್ಲ.
ದಯವಿಟ್ಟು ಉಪದೇಶಿಸಿ.
ಶ್ರೀ ಶ್ರೀ ರವಿಶಂಕರ್: ದೇವರೇ ಪ್ರೀತಿ, ಪ್ರೀತಿಯೇ ದೇವರು. ಅವನು ನಮ್ಮೆಲ್ಲರಲ್ಲೂ ಇದ್ದಾನೆ. ದೇವರು ಇಲ್ಲವೆನ್ನುವ ವಸ್ತುವೇ ಇಲ್ಲ ಏಕೆಂದರೆ ಇಡೀ ಸೃಷ್ಠಿಯೇ ಪ್ರೀತಿಯಿಂದ ರಚಿಸಲ್ಪಟ್ಟಿದೆ. ಆದ್ದರಿಂದ ದೇವರು ವ್ಯಕ್ತಿಯಲ್ಲ, ಅದೊಂದು ಕ್ಷೇತ್ರ. ಅದು ಎಲ್ಲೆಡೆಯೂ ಇದೆಯೆಂದರೆ ನಿಮ್ಮಲ್ಲೂ  ಇರುವುದು. ಸದಾ ಕಾಲ ಅದು ಇರುವುದಾದರೆ, ಈಗ ಇಲ್ಲಿಯೂ ಇರುವುದು.
ನೀವು ಸರಿಯಾಗಿ ಹೇಳಿದಿರಿ; ಕೆಲವರು ದೇವರನ್ನು ಯಾರೋ ಸ್ವರ್ಗದಲ್ಲಿರುವನೆಂದು ತಿಳಿದಿದ್ದಾರೆ. ಎಲ್ಲವನ್ನೂ ಸೃಷ್ಠಿಸಿ ಈಗ ಸತ್ತು ಹೋಗಿದ್ದಾನೆ. ಮೃತರಾದವರಿಗೆ ನೀವು ಕೃತಜ್ಞತೆಗಳನ್ನು ಅರ್ಪಿಸುವಂತೆ, ದೇವರನ್ನು ಅಳಿದವನಂತೆ ಭಾವಿಸಿ, ಕೃತಜ್ಞತೆಗಳನ್ನು ಸಮರ್ಪಿಸುತ್ತೀರ.
ಜನರಿಗೆ ಅರ್ಥವಾಗುವುದಿಲ್ಲ; ದೇವರು ಸಜೀವ ಸನ್ನಿಧಾನ, ಈಗ ಮತ್ತು ಇಲ್ಲಿಯೇ ಜೀವಂತವಾಗಿರುವನು. ಮೌನದ ಆಳದಲ್ಲಿ ಮಾತ್ರ ಇದನ್ನು ಅನುಭವಿಸಲು ಸಾಧ್ಯ.
ಮನಸ್ಸು ಶಾಂತವಾಗಿದ್ದಾಗ ಮತ್ತು ’ನನಗೇನೂ ಬೇಡ’ ಎಂದಾಗ ಎಲ್ಲವೂ ನೀವೇ ಆಗುವಿರಿ. ಈ ಭಾವದೊಂದಿಗೆ ನೀವು ಧ್ಯಾನಕ್ಕೆ ಕುಳಿತಾಗ, ಇಲ್ಲಿ ಮತ್ತು ಈಗ ಇರುವ ಆ ಶಕ್ತಿ, ಮೌನ ಹಾಗು ಪ್ರೀತಿಯನ್ನು ಅನುಭವಿಸುವಿರಿ.
ಆದ ಕಾರಣ ಜನರು ಬುದ್ಧನ ಬಳಿಗೆ ಹೋದಾಗ ದೇವರ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವನು ಏನನ್ನೂ ಹೇಳಲಿಲ್ಲ, ಮೌನವಾಗಿದ್ದನು.
ದೇವರ ಬಗ್ಗೆ ಬುದ್ಧನು ಎಂದೂ ಮಾತನಾಡಲಿಲ್ಲ. ಅವನ ಸತ್ಸಂಗದಲ್ಲಿ ಜನರು ದೇವರ ಕುರಿತು ಪ್ರಶ್ನೆಗಳನ್ನು ಕೇಳಬಾರದೆಂಬ ನಿಯಮವೊಂದಿತ್ತು.
ಹನ್ನೊಂದು ಪ್ರಶ್ನೆಗಳು ಅಲ್ಲಿ ಬಹಿಷ್ಕೃತವಾಗಿತ್ತು. ದೇವರ ಕುರಿತ ಪ್ರಶ್ನೆ ಅದರಲ್ಲೊಂದಾಗಿತ್ತು. ನೀವು ಕೇಳಿದರೂ ಅವನು ಉತ್ತರಿಸುತ್ತಿರಲಿಲ್ಲ, ಏಕೆಂದರೆ ಜನರಿಗೆ ಪರಿಕಲ್ಪನೆಗಳಿರುತ್ತವೆ ಹಾಗೂ ದೇವರ ಬಗ್ಗೆ ತಮಗೆ ತುಂಬಾ ತಿಳಿದಿದೆಯೆಂದು ಯೋಚಿಸುತ್ತಾರೆ. ತಮಗೆ ತಿಳಿದಿದೆಯೆಂದುಕೊಂಡು ವಾದ ಮಾಡುತ್ತಾರೆ.
ದೇವರನ್ನು ಅವನ ಪಾಡಿಗೆ ಅವನನ್ನು ಬಿಡುವುದು ಉತ್ತಮ. ಅವನಿಗೆ ವಿರಾಮದ ಅಗತ್ಯವಿದೆ. ಸ್ವಲ್ಪ ವಿಶ್ರಾಮವನ್ನು ಬಯಸುತ್ತಾನೆ. ಭಾರತದಲ್ಲಿ ದೇವರು ಹಾವಿನ ಮೇಲೆ ಆನಂದದಿಂದ ವಿಶ್ರಮಿಸುತ್ತಿರುವಂತೆ ಹಾಗೂ ಸೃಷ್ಠಿಯು ಮುಂದುವರೆಯುವುದೆಂದು ವರ್ಣಿಸುತ್ತಾರೆ.
ಆದ್ದರಿಂದ ಒಳ್ಳೆಯ ಮನುಷ್ಯರಾಗಿ ಮತ್ತು ಆಗಾಗ್ಗೆ ಮೌನವಾಗಿದ್ದು ಆಂತರ್ಯದ ಶಾಂತಿಯನ್ನು ಅನುಭವಿಸಿ. ರಹಸ್ಯಗಳಲ್ಲಿ ರಹಸ್ಯವಾದುದನ್ನು ಕಾಣುವಿರಿ; ಬಾಗಿಲುಗಳು ಸಹಜವಾಗಿ ತೆರೆದುಕೊಳ್ಳುವವು. ಆಗ ನಿಮಗೆ ಅರಿವಾಗುವುದು ಎಲ್ಲ ಕಡೆಯೂ ಜನರು ಯಾವುದರ ಬಗ್ಗೆ ಮಾತನಾಡುತ್ತಿದ್ದರೆಂದು; ಇದನ್ನೇ ಎಲ್ಲ ಧರ್ಮಗ್ರಂಥಗಳಲ್ಲಿ ಹೇಳಿರುವುದು. ಬೈಬಲ್, ಖುರಾನ್ ಅಥವಾ ವೇದಗಳು ಎಲ್ಲದರಲ್ಲೂ ಇದನ್ನೇ ಹೇಳುವುದು. ಇದು ಸತ್ಯ, ಅದು ಇಲ್ಲೇ ಮತ್ತು ಈಗಲೇ ನಿನ್ನಲ್ಲಿರುವುದು; ಆ ಅರಿವು.
ಪುನಃ ಒಂದು ದಿನ ಅರಿವುಂಟಾಗುವುದೆಂದು ಆಲೋಚಿಸಬೇಡಿ. ಅದು ಈಗಲೇ ಇದೆ! ಶಾಂತರಾಗಿ. ದೇವರ ಕಡೆಗೆ ಮೊದಲ ಹೆಜ್ಜೆ ಶಾಂತಿ. ಎರಡನೆಯದು ಸುಖ ಮತ್ತು ಸಂತೋಷ. ಮೂರನೆಯದು ಪ್ರೀತಿ. ದೇವರ ಆಲಯಕ್ಕೆ ಇವೇ ಮೂರು ಹೆಜ್ಜೆಗಳು.

ಶುಕ್ರವಾರ, ಏಪ್ರಿಲ್ 27, 2012

ದ್ವೇಷ ಸಲ್ಲದು

27
2012............................... ಬಾಡ್ ಆಂತೋಗಾಸ್ತ್, ಜರ್ಮನಿ
Apr

ಜ್ಞಾನದಲ್ಲಿ ನೀವು ಹಾಡಿ, ಕುಣಿದು, ನೆಲೆಗೊಳ್ಳಬೇಕು. ಜ್ಞಾನವೆಂದರೆ ಕೇವಲ ಮಾಹಿತಿಯಲ್ಲ, ಪುಸ್ತಕವನ್ನೋದಿ ಮಾಹಿತಿ ಪಡೆಯುವಂತಹುದಲ್ಲ. ಅದು ಜ್ಞಾನವಲ್ಲ. ಜ್ಞಾನವೆಂದರೆ ವಾಸ್ತವಾಂಶವನ್ನು ಹಾಗೆಯೇ ಅನುಭವಿಸುವುದು. ಜ್ಞಾನವು ನಮ್ಮ ಪ್ರಜ್ಞೆಯಲ್ಲಿ ಅಚಲವಾಗಿ ಸ್ಥಾಪಿತವಾದಾಗ ವಿವೇಕ ಎನ್ನುವರು. ವಿವೇಕವೆಂದರೆ ಆತ್ಮನಲ್ಲಿ ಜ್ಞಾನವು ಉತ್ತಮವಾಗಿ ನೆಲೆಗೊಂಡಿರುವುದು. ಅದು ನಿಮ್ಮನ್ನು ವಿವೇಕಿಗಳನ್ನಾಗಿಸುತ್ತದೆ. ಎಲ್ಲರಿಗೂ ವಿವೇಕವಿದೆ. ಕೆಲವರಿಗೆ ಸ್ವಲ್ಪ, ಕೆಲವರಿಗೆ ಹೆಚ್ಚು. ಜೀವನವು ನಿಮ್ಮನ್ನು ಅಲ್ಪ ವಿವೇಕದಿಂದ ಅಧಿಕ ವಿವೇಕಕ್ಕೆ ಕರೆದೊಯ್ಯಲು ಹೆಚ್ಚು ಸಮಯ ಬೇಕಿಲ್ಲ.
ಪದಗಳು ವ್ಯರ್ಥವೆನಿಸುವುದು. ಆದರೂ ಕೆಲವು ಸಾರಿ ಉಪಯೋಗಿಸಬೇಕಾದುದರಿಂದ ಉಪಯೋಗಿಸುತ್ತೇವೆ. ಆಸ್ಪತ್ರೆಗೆ ಹೋಗುತ್ತೀರ, ’ಹೇಗಿದ್ದೀರ?’ ಎಂದು ಯಾರನ್ನೋ ಕೇಳುತ್ತೀರ. ಅವರಿಗೆ ಹುಷಾರಿಲ್ಲವೆಂದು ತಿಳಿದ್ದಿದ್ದರೂ ಕೇಳುವಿರಿ, ’ಹೇಗಿದ್ದೀರ?’ ಎಂದು. ’ಚೆನ್ನಾಗಿದ್ದೇನೆ’ ಎನ್ನುವರು. ಅವರಿಗೂ ತಾವು ಚೆನ್ನಾಗಿಲ್ಲವೆಂದು ತಿಳಿದ್ದಿದ್ದರೂ, ’ಚೆನ್ನಾಗಿದ್ದೇನೆ’ ಎನ್ನುವರು. ನೀವೆಲ್ಲರೂ ಇಲ್ಲಿ ಎಷ್ಟು ಸಂತೋಷವಾಗಿದ್ದೀರ, ಆದರೂ, ನೀವು ಚೆನ್ನಾಗಿದ್ದೀರ?’ ಎಂದು ಕೇಳುವೆನು. ನಿಮ್ಮ ಮುಖಗಳಲ್ಲಿ ತುಂಬಾ ಸಂತೋಷ ಹಾಗೂ ಕಾಂತಿಯನ್ನು ನಾವು ನೋಡಬಹುದಾಗಿದೆ. ಇದು ಇನ್ನೊಂದು ಮಟ್ಟದ ಸಂವಾದದಲ್ಲಿ ತೊಡಗಲು ಸಹಕಾರಿಯಷ್ಟೇ.
ವಿವೇಕಿಗಳು ಮೊದಲು ಹೃದಯದಿಂದ ಹಾಗೂ ಆತ್ಮನಿಂದ, ನಂತರ ಬಾಹ್ಯ ಮಟ್ಟದ ಸಂವಾದದಲ್ಲಿ ತೊಡಗುತ್ತಾರೆ, ಕೇವಲ ಸಂಪರ್ಕವನ್ನು ಹೊಂದಿರಲು. ಅಜ್ಞಾನಿಗಳು ಬಾಹ್ಯ ಮಟ್ಟದ ಸಂಪರ್ಕವನ್ನು ಆಶ್ರಯಿಸಿರುತ್ತಾರೆ. ತಾಯಿ ಮತ್ತು ಮಗುವಿನ ನಡುವೆ, ಮಗು ಏನು ಮಾತನಾಡಿದರೂ, ಅದು ಅಮುಖ್ಯ, ಏಕೆಂದರೆ ಮಗುವು ಭಾಷೆಯನ್ನೇ ಕಲಿತಿರುವುದಿಲ್ಲ. ಆದರೆ ತಾಯಿಯು ಮಗುವಿನೊಂದಿಗೆ ಆಳವಾದ ಮಟ್ಟದಲ್ಲಿ ಸಂವಾದಿಸುತ್ತಾಳೆ. ಭಾಷೆ ಕಲಿಯುವುದಕ್ಕಿಂತ ಮೊದಲೇ ನೀವು ನಿಮ್ಮ  ತಾಯಿಯೊಂದಿಗೆ ಸಂವಾದಿಸಲು ಪ್ರಾರಂಭಿಸುತ್ತೀರ ಮತ್ತು ನಿಮ್ಮ ತಾಯಿಯೂ ನಿಮ್ಮೊಂದಿಗೆ ಸಂವಾದಿಸಲು ತೊಡಗುತ್ತಾಳೆ. ಇದು ಆಳವಾದ ಸಂಪರ್ಕದ ಮಟ್ಟ.
ಹಾಗೆಯೇ, ನೀವು ನಾಯಿ ಅಥವಾ ಬೆಕ್ಕುಗಳೊಡನೆ ಮಾತನಾಡಬೇಕಾದರೆ ಅತ್ಯಂತ ಸೂಕ್ಷ್ಮ ಮಟ್ಟದಲ್ಲಿ , ಗಾಢವಾದ ಮಟ್ಟದಲ್ಲಿ ತೊಡಗುತ್ತೀರ. ಇದು ಭಾಷೆಯಲ್ಲ. ಆಮೇಲೆ ಅದರ ತಲೆಯಲ್ಲಿ ಸ್ವಲ್ಪ ಭಾಷೆಯನ್ನು ತುಂಬಲು ಎಷ್ಟೊಂದು ಸಾಹಸಪಡುತ್ತೀರ. ಅವುಗಳಿಗೆ ಭಾಷೆಯ ಅಗತ್ಯವಿಲ್ಲ. ಶಬ್ದ ಮಾಡಿದರೆ ಸಾಕು ನಿಮ್ಮ ಹತ್ತಿರ ಬರುತ್ತವೆ. ನೀವೇನು, ’ಬಾ, ಬಾ, ಬಾ’ ಎನ್ನುವ ಅವಶ್ಯಕತೆಯಿಲ್ಲ. ಯಾವುದಾದರೊಂದು ಶಬ್ದ ಮಾಡಿದರೆ, ಅವು ಬರುತ್ತವೆ.
ಭಾಷೆಯೊಂದಿಗೆ ನಿಮ್ಮನ್ನು ಗುರುತಿಸುವುದಿಲ್ಲ.
ಇದರಂತೆ ಸಂಪೂರ್ಣ ಸೃಷ್ಠಿಯು ನಿಮ್ಮೊಂದಿಗೆ ಸಂಬಂಧ ಕಲ್ಪಿಸುತ್ತಿದೆ; ಮರಗಳು, ಗಾಳಿ; ಎಲ್ಲ ಜೀವ-ಜಂತುಗಳು ನಿಮ್ಮ ಜೊತೆ ಸಂಪರ್ಕಿಸುತ್ತಿವೆ. ಸೂಕ್ಷ್ಮ ಮಟ್ಟದಲ್ಲಿ, ಗಾಢವಾದ ಮಟ್ಟದಲ್ಲಿ ಖಚಿತವಾದ ಸಂವಾದವುಂಟಾಗುತ್ತಿದೆ.
ಸಂಸ್ಕೃತದಲ್ಲಿ ಒಂದು ಗಾದೆಯಿದೆ, ’ವಕಾರಂಭನಾರ್ಹ ವಿಕಾರೋ ನಾಮಧೇಯ’, ಎಂದರೆ ಮಾತುಗಳು ಸತ್ಯದ ವಿಕೃತ ರೂಪ. ಈಗಾಗಲೇ ಒಂದು ಸಂವಾದ ನಡೆಯುತ್ತಿದೆ. ಮಾತುಗಳಿಂದ ಅದನ್ನು ಸ್ವಲ್ಪ ವಿಕೃತಗೊಳಿಸುತ್ತಿದ್ದೀರ.
ಪದಗಳನ್ನು ಬಳಸಲೇಬಾರದೆಂದು ನಾವು ಹೇಳುತ್ತಿಲ್ಲ. ಅವುಗಳ ಅಗತ್ಯವಿದೆ. ಆದರೆ ಪದಗಳ ಹಿಂದೆ ಆ ಭಾವವಿರಬೇಕು. ನೀವು ಯಾರಿಗೋ, ’ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!’ ಎಂದು ಹೇಳಬಹುದು. ಆದರೆ ಅದರ ಹಿಂದೆ ಆ ಭಾವವಿರಬೇಕು.
ಸುಮ್ಮನೆ ಬಹಿರ್ಮುಖವಾಗಿ, ’ಓಹ್, ನಾನು ನಿಮ್ಮನು ತುಂಬಾ ಪ್ರ‍ೀತಿಸುತ್ತೇನೆ’ ಎನ್ನಬೇಡಿ.
ಆದ್ದರಿಂದ ಜ್ಞಾನಿಗಳು ಯಾವಾಗಲೂ ಸೂಕ್ಷ್ಮ ಮಟ್ಟದಲ್ಲಿ ಸಂಭಾಷಿಸುತ್ತಾರೆ, ನಂತರ ಅದಕ್ಕೆ ಪೂರಕವಾಗಿ ಪದಗಳನ್ನು ಬಳಸುತ್ತಾರೆ. ಆದರೆ ಅಜ್ಞಾನಿಗಳು ಬಾಹ್ಯ ಸಂವಾದವನ್ನು ಅವಲಂಬಿಸಿರುತ್ತಾರೆ. ಆದ್ದರಿಂದಲೇ ಬದುಕಿನಲ್ಲಿ ತಪ್ಪು ಗ್ರಹಿಕೆಗಳು ಬರುತ್ತವೆ. ಏಕೆ ಈ ತಪ್ಪು ಗ್ರಹಿಕೆಗಳು ತಲೆದೋರುತ್ತವೆ? ಕಾರಣ ಆಂತರ್ಯದ ಸಂಪರ್ಕ ಹೊಂದಿಲ್ಲದೇ ಇರುವುದು. ನೀವೇನೋ ಹೇಳುತ್ತೀರ, ಅದನ್ನು ಇತರರು ಮತ್ತೊಂದು ರೀತಿಯಲ್ಲಿ ಅರ್ಥೈಸುತ್ತಾರೆ.
ಒಮ್ಮೆ ನೀವು ನಿಮ್ಮ ಸ್ವಂತ ಜೀವನವನ್ನು ಹಿಂತಿರುಗಿ ನೋಡಿ. ನೀವು ನಿರ್ಣಯಿಸುತ್ತಿದ್ದಿರಿ,  ನಿರ್ಣಯಿಸುತ್ತಿದ್ದಿರಿ ಮತ್ತು ನಿರ್ಣಯಿಸುತ್ತಿದ್ದಿರಿ. ಅವರ ಬಗ್ಗೆ, ಇವರ ಬಗ್ಗೆ ಕೆಟ್ಟದ್ದನ್ನು  ಆಲೋಚಿಸುತ್ತಾ, ಆ ಕೋಪ ಎಷ್ಟು ತೀವ್ರವಾಗಿತ್ತು. ಸ್ವಲ್ಪ ಕಾಲದ ನಂತರ, ಕೆಲವು ತಿಂಗಳು ಅಥವಾ ಒಂದು ವರ್ಷವಾದ ತರುವಾಯ, ನಿಮ್ಮ ಮೇಲೆ ನಿಮಗೇ ನಗು ಬರಲು ಶುರುವಾಗುತ್ತದೆ, ’ಓಹ್, ನಾನೇಕೆ ಇಷ್ಟೊಂದು ಚಿಂತಿಸುತ್ತಿದ್ದೆ! ಇದೆಲ್ಲ  ವ್ಯರ್ಥ. ಅನವಶ್ಯಕವಾಗಿ ಚಿಂತಿಸುತ್ತಿದ್ದೆನಲ್ಲ.’
ಒಂದು ದಿನ ಮಹಿಳೆಯೊಬ್ಬಳು ಬಂದು, ’ಓಹ್, ನನ್ನ ಸಂಬಂಧವು ತುಂಬಾ ಹದಗೆಟ್ಟಿದೆ. ನನ್ನ ಪ್ರಿಯತಮನು ಕೋಪಗೊಂಡಿದ್ದು ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ. ನಾನು ಅತ್ಯಂತ ತಳಮಳಗೊಂಡಿದ್ದೇನೆ’ ಎಂದು ಹೇಳಿದಳು. ಅವಳು ಅಳುತ್ತಲೇ ಇದ್ದಳು.
ಅದೇ ಮಹಿಳೆಯು ಎರಡು ತಿಂಗಳ ಬಳಿಕ, ’ಓಹ್, ಅದು ಅಂತ್ಯಗೊಂಡಿದ್ದು ಒಳ್ಳೆಯದೇ ಆಯಿತು. ನಾನೆಷ್ಟು ಕುರುಡಿಯಾಗಿದ್ದೆ. ಅವನಿಂದ ಬಂಧಿತಳಾಗಿದ್ದೆ. ಈಗ ಆ ಸಂಬಂಧವು ಇನ್ನೆಂದಿಗೂ ಇಲ್ಲ, ನಾನು ಸಂತೋಷವಾಗಿದ್ದೇನೆ.’
ಆದ್ದರಿಂದ, ಎಷ್ಟೋ ಬಾರಿ ನಮಗೇನು ಬೇಕು ಮತ್ತು ಯಾವ ಆಶೀರ್ವಾದವನ್ನು ಕೇಳಬೇಕೆಂದು ನಮಗೇ ತಿಳಿದಿರುವುದಿಲ್ಲ. ಅದಕ್ಕಾಗಿಯೇ, ಸದಾ ಅಲ್ಲದ್ದಿದ್ದರೂ, ಒಮ್ಮೊಮ್ಮೆಯಾದರೂ ಹಿಂತಿರುಗಿ ನಿಮ್ಮ ಮನಸ್ಸು ಎಲ್ಲಿ ಸ್ಥಾಪಿತವಾಗಿತ್ತು ಮತ್ತು ಹೇಗೆ ಚಲಿಸುತ್ತಿದೆಯೆಂದು ಪರಿಶೀಲಿಸಿ.
ಹೀಗೆ ಪದೇ ಪದೇ ಹಿಂದೆ ತಿರುಗಿ ನಿಮ್ಮ ಮನಸ್ಸನ್ನು ಶೋಧಿಸಿದರೆ ಎಂತಹ ತೃಪ್ತಿ ಮತ್ತು ಸಮಾಧಾನ ದೊರೆಯುವುದು. ಒಂದು, ಭೂತದಿಂದ ಏನ್ನನ್ನೋ ಕಲಿತಿರುವಿರೆಂದು ಸಮಾಧಾನ ಮತ್ತು ಎರಡನೆಯದಾಗಿ, ಏನು ಆಗಿದೆಯೋ ಅದು ಒಂದು ಕಾರಣದಿಂದಾಗಿದೆ. ಅದು ನಿಮ್ಮನ್ನು ಹೆಚ್ಚು ಸಂಪನ್ನಗೊಳಿಸಿದೆ, ಬುದ್ಧಿವಂತರನ್ನಾಗಿಸಿದೆ ಮತ್ತು ಗಾಢತೆಯನ್ನು ನೀಡಿದೆ. ಕನಿಷ್ಠ ಪಕ್ಷ ಈ ತಿಳುವಳಿಕೆಯಾದರೂ ನಿಮ್ಮಲ್ಲಿ ಮೂಡುವುದು.
ನೀವೇನು ಹೇಳುವಿರಿ? ಎಷ್ಟು ಜನರಿಗೆ ಹೀಗೆ ಅನಿಸುತ್ತದೆ?
ಮತ್ತೆ ಮತ್ತೆ ಕಳೆದುಹೋದ ಘಟನೆಗಳನ್ನು ನಾವು ಹಿಂತಿರುಗಿ ನೋಡದಿದ್ದರೆ, ಆಗ ಅದೇ ತಪ್ಪುಗಳನ್ನು ಮುಂದುವರೆಸುತ್ತೇವೆ, ಅದರಿಂದ ಏನನ್ನೂ ಕಲಿಯುವುದಿಲ್ಲ.
ಜೈನ ಸಂಪ್ರದಾಯದಲ್ಲಿ ಇದನ್ನು ’ಪ್ರತಿಕ್ರಮಣ’ ಎನ್ನುತ್ತಾರೆ, ಅಂದರೆ, ಪುನಃ ಹೋಗುವುದು, ಆ ಕರ್ಮಗಳನ್ನು ತೊಡೆದುಹಾಕುವುದು ಹಾಗೂ ಅದರಿಂದ ಕಲಿತು ಮುನ್ನಡೆಯುವುದು.
ಜೈನ ಸಾಧುಗಳು ದಿನನಿತ್ಯ ಕೆಲವು ಗಂಟೆಗಳ ಕಾಲ ಕುಳಿತು ಆತ್ಮಶೋಧನೆಯಲ್ಲಿ ನಿರತರಾಗುತ್ತರೆ. ನಿಜವಾಗಿಯೂ ಅವರಿಗೆ ಅಷ್ಟೊಂದು ಶೋಧನೆಯ ಅಗತ್ಯವಿಲ್ಲ ಏಕೆಂದರೆ ಅವರು ಅಷ್ಟಾಗಿ ಕೆಲಸ-ಕಾರ್ಯಗಳಲ್ಲಿ ತೊಡಗುವುದಿಲ್ಲ. ಯಾರು ಹೆಚ್ಚು ಕೆಲಸ-ಕಾರ್ಯಗಳಲ್ಲಿ ತೊಡಗಿರುತ್ತಾರೋ ಅವರು ಇದನ್ನು ಹೆಚ್ಚು ಹೆಚ್ಚು ಮಾಡಬೇಕು. ಪ್ರತಿದಿನ ಕನಿಷ್ಠ  ಹತ್ತು ನಿಮಿಷಗಳಾದರೂ ಕುಳಿತು ವೀಕ್ಷಿಸಬೇಕು – ನಾನೇನು ಮಾಡಿದೆ? ಜೀವನದಿಂದ ಏನನ್ನು ಕಲಿತಿರುವೆ? ಈ ದಿನ ಹೇಗಿತ್ತು? ನಡೆದ ಘಟನೆಯಿಂದ ಏನನ್ನು ಕಲಿಯಬಹುದಾಗಿದೆ?
ಪುನಃ ನೀವು ಏನನ್ನು ಕಲಿತಿರುವಿರೋ ಅದನ್ನೇ ಹಿಡಿದುಕೊಳ್ಳಬೇಕಾಗಿಲ್ಲ. ಕೆಲವು ಸಾರಿ ನೀವು ಯಾವುದನ್ನು ಕಲಿತಿರುವಿರೋ ಅದು ಸರಿಯಾಗಿ ಇರಬೇಕೆಂದೇನಿಲ್ಲ. ಆದ್ದರಿಂದಲೇ ಪೊಳ್ಳು ಮತ್ತು ಖಾಲಿಯಾಗಿರುವುದು ಅತಿ ಮುಖ್ಯ. ಎಲ್ಲ ಪರಿಕಲ್ಪನೆಗಳನ್ನು ಕೊನೆಗೊಳಿಸಿ ನಿಮ್ಮನ್ನು ಮುಕ್ತರನ್ನಾಗಿಸುತ್ತದೆ.
ಪ್ರ: ಪ್ರೀತಿಯ ಗುರೂಜೀ, ರಕ್ತದಾನ ಮಾಡುವುದು ಒಳ್ಳೆಯದೇ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಒಳ್ಳೆಯದು. ೨೪ ಗಂಟೆಗಳಲ್ಲಿ ಚೇತರಿಸಿಕೊಳ್ಳುವಿರಿ. ನಮ್ಮ ಶರೀರವು ಒಂದು ರಕ್ತ ತಯಾರಿಸುವ ಯಂತ್ರ. ರಕ್ತದಾನದಿಂದ ಜೀವಗಳನ್ನು ಉಳಿಸಬಹುದು.
ಪ್ರ: ಪ್ರೀತಿಯ ಗುರೂಜೀ, ತಾಳೆಗರಿ ನಾಡಿಶಾಸ್ತ್ರದ ಕುರಿತು ದಯವಿಟ್ಟು ಮಾತನಾಡುವಿರಾ?ಶ್ರೀ ಶ್ರೀ ರವಿಶಂಕರ್: ಪ್ರಾಚೀನ ಭಾರತದಲ್ಲಿ ಋಷಿಗಳು ಅತೀಂದ್ರಿಯರಿಗೆ ತರಬೇತಿ ನೀಡಲು ಶಾಲೆ ಅಥವಾ ವಿಶ್ವವಿದ್ಯಾನಿಲಯಗಳಿದ್ದವು. ಅತೀಂದ್ರಿಯನೆಂದರೆ ಭವಿಷ್ಯವನ್ನು ನೋಡುವವನು ಎಂದು. ಆದ್ದರಿಂದ ಹನ್ನೆರಡು ಇಲ್ಲವೇ ಹದಿಮೂರು ವರ್ಷಗಳ ಕಾಲ ಅಲ್ಲಿಯೇ ಉಳಿದುಕೊಂಡು, ಧ್ಯಾನದಲ್ಲಿ ಆಳವಾಗಿ ಹೋದಾಗ ಗುರುಗಳು ಅವರಿಗೆ ಒಂದು ಕೆಲಸವನ್ನು ಕೊಡುತ್ತಿದ್ದರು. ಅವರು ಹೇಳುತ್ತಿದ್ದರು, ’೨೦೧೫ರಲ್ಲಿ ಇಂತಹ ದಿನ ಇಂತಹ ನಿಮಿಷ ಯಾರೋ ಜನಿಸುವರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲೆಕ್ಕ ಹಾಕಿ ಅವರ ಜೀವನ ಹೇಗಿರುವುದೆಂದು ತಿಳಿಸಿರಿ.’
ಇದು ಎರಡು ವಿಚಾರಗಳನ್ನು ಒಳಗೊಂಡಿದೆ – ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳು ಮತ್ತು ಆಕಾಶ ಹಾಗೂ ಕಾಲದ ಅಂತರ್ದೃಷ್ಟಿ. ಇದನ್ನೇ ಅವರು ಮಾಡುತ್ತಿದ್ದುದು.
ಆದರೂ ಸಹ ಇದನ್ನು ಶಿಷ್ಯರು ಬರೆದಿರುವುದರಿಂದ, ನೂರು ಪ್ರತಿಶತ ನಿಜವೆಂದು ನಂಬಲು ಸಾಧ್ಯವಿಲ್ಲ. ಶಿಷ್ಯರು ತಪ್ಪುಗಳನ್ನು ಮಾಡಬಹುದು. ಎಪ್ಪತ್ತು ಅಥವಾ ಎಂಬತ್ತು ಪ್ರತಿಶತ ಸರಿಯಿರಬಹುದು. ಕೆಲವು ಸಂಗತಿಗಳು ಭವಿಷ್ಯದಲ್ಲಿ ನಿಜವಾಗಲಾರದು. ಇದೊಂದು ಸಾಧ್ಯತೆಯಿದೆ. ಎರಡನೆಯದಾಗಿ, ಹೀಗೆ ಆಗಬಹುದು ಎಂದು ಸಾಧ್ಯತೆಯನ್ನು ನೀಡಬಹುದು ಅಷ್ಟೆ. ನೀವು ಧ್ಯಾನ ಮಾಡುವವರಾಗಿದ್ದು, ಆಧ್ಯಾತ್ಮದ ಹಾದಿಯಲ್ಲಿದ್ದರೆ ನಿಮ್ಮ ವಿಧಿಯನ್ನು ಬದಲಾಯಿಸುತ್ತಿರುತ್ತೀರ, ಏಕೆಂದರೆ ನಿಮ್ಮ ಜೀವನದಲ್ಲಿ ಹೆಚ್ಚು ಧನಾತ್ಮಕತೆಯನ್ನು ಕರೆತರುತ್ತೀರ.
ಈ ತಿಂಗಳ (ಏಪ್ರಿಲ್ ೨೦೧೨ರ) ಮೂರನೇ ತಾರೀಖು ಏನು ನಡೆಯಿತೆಂಬುದನ್ನು ನಿಮಗೆ ಹೇಳಬೇಕು. ಚೀನಾದಿಂದ ಒಬ್ಬ ಸನ್ಯಾಸಿ ಬಂದಿದ್ದರು. ಅವರು ಮಹಾನ್ ಅತೀಂದ್ರಿಯ ಪ್ರಜ್ಞೆಯುಳ್ಳವರು. ದಿನನಿತ್ಯ ಅವರ ಬಳಿ ಎರಡರಿಂದ ಮೂರು ಸಾವಿರ ಜನ ಹೋಗುವರು.
ನಾನು ಇಂಡೋನೇಷಿಯಾದಲ್ಲಿದ್ದಾಗ ಅವರು ನಮ್ಮ ಕಾರ್ಯಕರ್ತರೊಬ್ಬರನ್ನು ಕರೆದು ಗುರೂಜೀಯವರ ಬಳಿ ಬಂದು ಆಶೀರ್ವಾದ ಪಡೆಯಲು ಬಯಸುತ್ತೇನೆ ಎಂದರು.  ಅವರು, ’ಜ್ಞಾನೋದಯವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.  ನಾನು ಬೌದ್ಧ ಧರ್ಮದವನು. ಆದರೆ ಅದು ಗಣನೆಗೆ ಬರುವುದಿಲ್ಲ. ಗುರೂಜೀಯವರು ಈ ಭೂಮಿಗೆ ಬಂದಿರುವುದು ಮತ್ತು ಅನೇಕ ಜನರಿಗೆ ಅವರಿಂದ ಲಾಭವಾಗುವುದೆಂದು ನನಗೆ ತಿಳಿದಿದೆ. ಅವರ ಆಶೀರ್ವಾದ ಪಡೆಯಲು ನಾನು ಬಯಸುತ್ತೇನೆ. ತುಂಬಾ ಸಮಯದ ನಂತರ ಬಂದಿದ್ದಾರೆ; ಅನೇಕ ಸಾವಿರ ವರ್ಷಗಳಾಗಿವೆ. ನನಗೆ ಖಂಡಿತವಾಗಿ ಅವರ ಆಶೀರ್ವಾದದ ಅವಶ್ಯಕತೆಯಿರುವುದು.
ಅವರು ಅತ್ಯಂತ ಸ್ನೇಹಪರರು, ಸಭ್ಯ ಆತ್ಮ. ಅವರು ಬಂದು, ಸ್ವಲ್ಪ ಸಮಯ ಮೌನವಾಗಿ ಕುಳಿತಿದ್ದು, ಆಶೀರ್ವಾದ ತೆಗೆದುಕೊಂಡು ಮುಂದಿನ ಫ್ಲೈಟ್ನಲ್ಲಿ ಹೊರಟುಹೋದರು.
ಕುತೂಹಲ ಸ್ವಭಾವದವರಾದ ಅಭಿಮಾನಿಯೋಬ್ಬರು, ‘ಆರ್ಟ್ ಆಫ್ ಲಿವಿಂಗ್ ಮತ್ತು ಗುರೂಜೀಯವರಿಗೆ ಮುಂದೆ ಏನಾಗುವುದೆಂದು ಭವಿಷ್ಯ ನುಡಿಯಬೇಕು.’
ಅವರು ಹೇಳಿದರು, ’ಇಲ್ಲ, ನನ್ನಿಂದ ಸಾಧ್ಯವಿಲ್ಲ. ಮುಕ್ತರಾದವರ ಬಗ್ಗೆ ನನ್ನಿಂದ ಭವಿಷ್ಯ ಹೇಳಲು ಆಗುವುದಿಲ್ಲ. ಮನಸ್ಸು ಬಂಧನಕ್ಕೆ ಸಿಲುಕ್ಕಿದ್ದರೆ ಮಾತ್ರ ಭವಿಷ್ಯ ತಿಳಿಸಬಹುದು. ಮನಸ್ಸೇ ಇಲ್ಲದವರ (no mind) ಬಗ್ಗೆ ತಿಳಿಸಲಾರೆ.’
ನನಗೂ ಅನಿಸಿತು ಏನು ನಡೆಯುವುದೆಂದು ನಾನೂ ಕೇಳೋಣ ಎಂದು.
ಅವರು ಹೀಗೆಂದರು, ‘ಎಲ್ಲಿ ಮನಸ್ಸಿನ ಅಸ್ಥಿತ್ವವೇ ಇಲ್ಲವೋ (no mind), ಅಲ್ಲಿ ಕೇವಲ ಆಕಾಶವೊಂದೇ ಇರುವುದು, ನನ್ನಿಂದ ಭವಿಷ್ಯ ಹೇಳಲಾಗದು. ಗುರೂಜೀಯವರು ಕೇವಲ ಆಕಾಶದಿಂದ ಕೂಡಿರುವರು, ನನ್ನಿಂದ  ಭವಿಷ್ಯ ನುಡಿಯಲಾಗದು.’
ನೀವು ಜಪ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಿದ್ದರೆ, ನಿಮ್ಮ ಇಚ್ಛಾ ಸ್ವಾತಂತ್ರ್ಯ ಹೆಚ್ಚುತ್ತದೆ. ಜೀವನದಲ್ಲಿ ಕೆಲವು ಘಟನೆಗಳಿಂದ ಬಂಧಿತರಾಗುವುದಿಲ್ಲ.
ಹೀಗೆ ಹೇಳುತ್ತಾರೆ, ‘ಇಂತಹ ಸಮಸ್ಯೆಗಳು ಬರಬಹುದು, ಆದ್ದರಿಂದ ಜಾಗೃತರಾಗಿರಿ.’
ವೈದ್ಯರು ಹೇಳುವ ಹಾಗೆ, ‘ನಿಮಗೆ ತುಂಬಾ ಕೊಲೆಸ್ಟ್ರಾಲ್ ಇದೆ, ಗಮನವಹಿಸಿ, ವ್ಯಾಯಾಮ ಮಾಡಿ.’ ಎಂದು. ಹಾಗೆಯೇ, ನಿಮಗೆ ಮಧುಮೇಹವಿದ್ದರೆ, ನೀವು ಜಾಗ್ರತೆವಹಿಸಬೇಕು.
ಅವರ ಸಲಹೆಗಳು ನಿಮಗೆ ಯಾವ ವೈದ್ಯಕೀಯ ಸಮಸ್ಯೆಯಿದೆಯೆಂಬುದರ ಮೇಲೆ ಆಧರಿಸಿದ್ದು, ಅದಕ್ಕೆ ಔಷಧಿಯನ್ನು ನೀಡುವರು – ಇದನ್ನು ನೀವು ಮಾಡಿದರೆ ತೊಂದರೆಯಾಗುವುದಿಲ್ಲ.
ಅದರಂತೆ, ಜ್ಯೋತಿಷಿಗಳೂ ಕೂಡ ಹೇಳುತ್ತಾರೆ, ‘ಓಹ್, ಎಂಟನೆಯ ಮನೆಗೆ ಗುರು ಬರುವುದರಿಂದ ನಿಮ್ಮ ಮನಸ್ಸು ಅಸ್ತವ್ಯಸ್ತವಾಗುವುದು. ನಿಮ್ಮ ನಂಬಿಕೆ-ವಿಶ್ವಾಸಗಳೆಲ್ಲವೂ ಹೊರಟು ಹೋಗುವವು. ನಿಮ್ಮ ಮೇಲೆ ನಿಮಗೇ ವಿಶ್ವಾಸವಿರುವುದಿಲ್ಲ, ಯಾರ ಮೇಲೂ ವಿಶ್ವಾಸವಿರುವುದಿಲ್ಲ, ನೀವು ಮಾಡುವ ಕೆಲಸ ಬಗ್ಗೆ ವಿಶ್ವಾಸವಿರುವುದಿಲ್ಲ. ನೀವು ಚಿಂತೆಗೊಳಗಾಗುವಿರಿ. ಒಂದು ಪೂರ್ಣ ವರ್ಷ ಹೀಗೆಯೇ ಮುಂದುವರೆಯುವುದು, ಆದರೆ ಈ ನಾಲ್ಕರಿಂದ ಐದು ತಿಂಗಳು ಅತ್ಯಂತ ಕಷ್ಟಕರವಾಗಿರುವುದು. ಆದ್ದರಿಂದ ನೀವು ಧ್ಯಾನ, ಪ್ರಾಣಾಯಾಮ ಮತ್ತು ಪ್ರಾರ್ಥನೆಗಳನ್ನು ನಿತ್ಯ ಪೂರೈಸುವುದರಿಂದ ಈ ಹಂತವನ್ನು ದಾಟಲು ಸಹಾಯವಾಗುವುದು. ಹಾಗೂ ಈ ಸಮಯದಲ್ಲಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ.’
ಹೀಗೆ ಮನೋಗತಿಯ ಬಗ್ಗೆ ಕೆಲವು ಮುನ್ನೆಚರಿಕೆಗಳನ್ನು ಹೇಳುವರು.
ಪ್ರ: ನನ್ನ ಪ್ರಶ್ನೆಯೇನೆಂದರೆ ಈ ಭೂಮಿಗೆ ನಾನು ಬಂದಿರುವ ಉದ್ದೇಶವೇನು? ಯಾವ ಕೆಲಸವನ್ನು ಮಾಡಬೇಕು? ನನಗೆ ತುಂಬಾ ಗೊಂದಲವಾಗಿದೆ. ನನಗೆ ಅನೇಕ ಸಾಮರ್ಥ್ಯಗಳಿವೆ ಆದರೆ ನನ್ನ ಸಾಮರ್ಥ್ಯಗಳ ಬಗ್ಗೆ ನನಗೆ ವಿಶ್ವಾಸವಿಲ್ಲ. ಈಗ ನಾನು ಯೋಚಿಸುತ್ತಿದ್ದೇನೆ, ’ಯಾರು ಈ ಪ್ರಶ್ನೆಯನ್ನು ಕೇಳುತ್ತಿರುವುದು?’ ಪುನಃ ನನಗೆ ತಿಳಿಯದು. ಈ ಅರಿವಿಲ್ಲದೇ ಇರುವ ಬಗ್ಗೆ ನನಗೆ ಬೇಸರವಾಗಿದೆ.ಶ್ರೀ ಶ್ರೀ ರವಿಶಂಕರ್: ಈಗ ನಾನೇನಾದರು ನಿನಗೆ ಉತ್ತರಿಸಿದರೆ, ಅದಕ್ಕೂ, ’ಯಾರು ಕೇಳುತ್ತಿರುವುದು?’ ಎಂದು ಅಚ್ಚರಿಪಡುವೆ. ತುಂಬಾ ಸ್ವಯಂ ಪರೀಕ್ಷೆ ಬೇಡ. ಇದೊಂದು ಗೀಳಾಗಬಹುದು. ಸದಾ ಕಾಲ, ’ಯಾರು ಕೇಳುತ್ತಿರುವುದು? ಯಾರು ಸಾಕ್ಷಿಯಾಗಿರುವುದು? ನಾನು ಸಾಕ್ಷಿಯಾಗಿದ್ದರೆ, ಆ ನಾನು ಯಾರು? ಯಾರು ಮಾತನಾಡುತ್ತಿರುವುದು?’ ಈ ಸ್ವಯಂಶೋಧನೆ ಒಳ್ಳೆಯದು. ಸ್ವಯಂಶೋಧನೆಯ ಅಗತ್ಯವಿದೆ, ಆದರೆ ಅದು ಅತಿಯಾದರೂ ನಿಮ್ಮನ್ನು ಅನಗತ್ಯ ಗೊಂದಲಕ್ಕೀಡು ಮಾಡುತ್ತದೆ ಮತ್ತು ಅಶಾಂತರನ್ನಾಗಿಸುತ್ತದೆ. ನೀವು ಶಿಬಿರದಲ್ಲಿದ್ದಾಗ ಅಥವಾ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಂಡಾಗ ಮಾತ್ರ ಈ ಶೋಧವನ್ನು ಮಾಡಬೇಕು. ನಂತರ ನೀವು ಕೇಳಬಹುದು, ‘ನಾನು ಯಾರು? ವಿಶ್ವವೆಂದರೇನು? ೨೪ ಗಂಟೆಯೂ ಸ್ವಯಂಶೊಧನೆಯು ಸಾಧ್ಯವಿಲ್ಲ. ಇಲ್ಲದಿದ್ದರೆ ಜಗತ್ತಿನಲ್ಲಿ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಸ್ನಾನದ ಹಾಗೆ ಇದು. ೨೪ ಗಂಟೆಯೂ ಸ್ನಾನ ಮಾಡಲಾಗದು. ಆಗ ನೀವು ನೀರಿನಲ್ಲಿರುವ ಮೀನಾಗಬೇಕಾಗುತ್ತದೆ! ಆದ್ದರಿಂದ, ನೀವು ಹೀಗೆ ಪ್ರತಿ ಹೆಜ್ಜೆಗೂ ಪರಿಶೀಲಿಸುತ್ತಲೇ, ಪರೀಕ್ಷಿಸುತ್ತಲೇ ಇದ್ದರೆ, ನೀರಿನಿಂದಾಚೆಯಿರುವ ಮೀನಿನ ಹಾಗಾಗುತ್ತೀರ.
ನಿಮ್ಮ ಕೆಲಸ ಮಾಡಿ. ಯಾವ ಕೆಲಸ ಮಾಡುತ್ತೀರೆಂಬುದು ಮುಖ್ಯವಲ್ಲ. ಜೀವನೋಪಾಯಕ್ಕಾಗಿ ಯಾವ ಕೆಲಸವನ್ನಾದರೂ ಮಾಡಿ. ಬದುಕಲು ಯಾವ ಕೆಲಸವಾದರೂ ಸರಿ, ಯಾವ ಕೆಲಸವು ಚೆನ್ನಾಗಿ ಹಣ ನೀಡುವುದೋ ಅದು.
ಈಗ ನಿಮಗೆ ತಿಳಿದಿರಬಹುದು, ನಿಮ್ಮ ಕೆಲಸ ಬೇರೆ, ಸೇವೆ ಬೇರೆ ಮತ್ತು ಮನೋರಂಜನೆ ಅಥವಾ ಹವ್ಯಾಸ ಬೇರೆ. ಇವೆಲ್ಲವನ್ನೂ ಒಂದುಗೂಡಿಸಲು ಯತ್ನಿಸಿದರೆ, ಆಗ ಅದು ಸವಾಲಾಗಿ ಪರಿಣಮಿಸುತ್ತದೆ. ನಿಮ್ಮ ಕೆಲಸವನ್ನು ಹವ್ಯಾಸವನ್ನಾಗಿ ಪರಿವರ್ತಿಸುವುದಾದರೆ, ಅದನ್ನೇ ಅನೇಕರು ಮಾಡುವುದು, ಅವರು ಕೆಲಸ ಕಳೆದುಕೊಳ್ಳುವರು!
ನಿಮ್ಮ ಮನೋರಂಜನೆಯನ್ನು ಕೆಲಸವನ್ನಾಗಿ ಮಾರ್ಪಾಡಿಸಿಕೊಳ್ಳಬೇಕಾದರೆ, ಸಾಕಷ್ಟು ಹಣ ಮಾಡಿಕೊಳ್ಳಲಾರಿರಿ ಹಾಗೂ ಸದಾ ಕೊರತೆಯ ಭಾವವಿರುವುದು. ಹಣದ ಅಭಾವವಿರುವುದು. ಆದ್ದರಿಂದ ನಿರ್ಧಾರ ಮತ್ತು ವಿವೇಕ ಎರಡೂ ನಿಮಗಿರಬೇಕು.
ಜೀವನದಲ್ಲಿ ಜವಾಬ್ದಾರಿಗಳಿದ್ದಾಗ, ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯಿದ್ದಾಗ, ಸ್ಥಿರವಾದ, ಸಾಕಷ್ಟು ಹಣ ಮತ್ತು ಸಮಯವನ್ನು ನೀಡುವ ಕೆಲಸವನ್ನು ಆಯ್ಕೆ ಮಾಡಿರಿ. ಒಮ್ಮೆ ಇದನ್ನು ನಿರ್ವಹಿಸಿದ ನಂತರ ಮತ್ತೆ ಅದರ ಬಗ್ಗೆ ಚಿಂತಿಸಬೇಡಿ. ಆದರೆ ಅದಕ್ಕಿಂತ ಉತ್ತಮವಾದುದು ಸಿಕ್ಕರೆ, ಅದಕ್ಕೆ ಹೋಗಬಹುದು, ತೊಂದರೆಯಿಲ್ಲ.
ನಂತರ, ಸ್ವಲ್ಪ ಸಮಯ ತೆಗೆದುಕೊಂಡು ಸಮಾಜಸೇವೆ ಮಾಡಿ. ನಿಮ್ಮ ಜೀವನವಿಡೀ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದರೆ, ಬದುಕು ನಿರರ್ಥಕವೆನಿಸುವುದು.
ಏನು ಮಾಡುತ್ತೀರ? ಸಂಪಾದಿಸು, ಸಂಪಾದಿಸು, ಸಂಪಾದಿಸು ಮತ್ತು ಒಂದು ಆಡಿ ಅಥವಾ ಬೆಂಜ್ ಕಾರ್ ಕೊಳ್ಳುವುದು. ಮನೆ ಮತ್ತು ಒಡವೆಯನ್ನು ಕೊಳ್ಳುವಿರಿ, ಅಷ್ಟೇ! ಇದರಿಂದ ತೃಪ್ತಿ ಸಿಗುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಯಾವುದಾದರೂ ಸಮಾಜಸೇವೆಯಲ್ಲಿ ನಿರತರಾಗಿ. ಬನ್ನಿ, ಆರ್ಟ್ ಆಫ್ ಲಿವಿಂಗ್ ಪರಿವಾರದ ಸದಸ್ಯರಾಗಿ.
ಒಬ್ಬರೇ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹತ್ತು ಅಥವಾ ಹದಿನೈದು ಜನ ಸೇರಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಿ. ನಿಮ್ಮ ಸಹಾಯದ ಅಗತ್ಯವಿರುವ ಮಕ್ಕಳಿದ್ದಾರೆ. ನಿಮಗೆ ಸಮಯ ನೀಡಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲೊಂದು ಡಬ್ಬಿಯಿಟ್ಟು, ಕೆಲವು ಯೂರೋಗಳನ್ನು, ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನು ಅದರೊಳಗೆ ಹಾಕಿ. ಅದು ಯಾವುದಾದರೊಂದು ಸಮಾಜಸೇವೆಗೆ ವಿನಿಯೋಗವಾಗುವುದು.
ಜರ್ಮನಿ ಮತ್ತು ಇತರ ಯೂರೋಪಿಯನ್ ದೇಶಗಳಿಂದ ಅನೇಕ ಜನರು ಶಾಲೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಸದ್ಯಕ್ಕೆ ಭಾರತದಲ್ಲಿ ೧೮೫ ಶಾಲೆಗಳನ್ನು ನಡೆಸುತ್ತಿದ್ದೇವೆ. ಪ್ರತಿದಿನ ಒಂದು ಯೂರೋ ದಾನದಿಂದ ಸುಮಾರು ೨೫,೦೦೦ ಮಕ್ಕಳು ಒಳ್ಳೆಯ ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವನ್ನು ಪಡೆಯುತ್ತಿದ್ದಾರೆ.
ಹೀಗೆ ಯಾವುದಾದರೂ ಸಮಾಜ ಸೇವೆಯಲ್ಲಿ ನಿರತರಾಗಿ. ಅದರಿಂದ ತೃಪ್ತಿ ದೊರೆಯುವುದು, ‘ಓಹ್, ನಾನು ಈ ಕಾರ್ಯಕ್ಕಾಗಿ ನೆರವು ನೀಡುತ್ತಿದ್ದೇನೆ. ನಾನೊಂದು ಯೋಜನೆಯ ಭಾಗವಾಗಿದ್ದೇನೆ.’
ನೀವೊಂದು ಯೋಜನೆಯನ್ನು ನಡೆಸುತ್ತಿದ್ದರೆ, ಒಳ್ಳೆಯದು. ನೀವು ನಡೆಸಲಾಗದಿದ್ದರೆ, ಕನಿಷ್ಠ ಅದರ ಒಂದು ಭಾಗವಾದರೂ ಆಗಬಹುದು. ಕಟ್ಟಡದ ಒಂದು ಇಟ್ಟಿಗೆಯಾಗಬಹುದು. ಒಂದು ಇಟ್ಟಿಗೆಗೆ ನೆರವು ನೀಡಿ. ಅದು ತೃಪ್ತಿ ಕೊಡುತ್ತದೆ.
ನಂತರ, ಧ್ಯಾನ ಮಾಡಲು ಮತ್ತು ನಿಮ್ಮ ಆತ್ಮೋನ್ನತಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ, ಈಗ ಸಮಯ ತೆಗೆದುಕೊಂಡಿರುವ ಹಾಗೆ (ಶಿಬಿರದಲ್ಲಿ ಭಾಗವಹಿಸುತ್ತಿರುವವರನ್ನು ಉದ್ದೇಶಿಸಿ). ನೀವು ಹಿಂದಿರುಗಿದ ಮೇಲೆ ಸಂಪೂರ್ಣವಾಗಿ ಲವಲವಿಕೆಯಿಂದ ಕೂಡಿರುತ್ತೀರ. ಎಷ್ಟು ಜನರಿಗೆ ಹಿಂದಿರುಗಿದ ನಂತರ ಚೈತನ್ಯದಾಯಕವೆನಿಸುತ್ತದೆ? ಇದನ್ನು ಅನುಭವಿಸಿದ್ದೀರಾ?
ವರ್ಷಕ್ಕೆ ಎರಡು ಬಾರಿಯಾದರೂ ಮಾನಸಿಕ ಮತ್ತು ಚೈತನ್ಯದ ಪುನರುಜ್ಜೀವನಕ್ಕೆ ಒಳ್ಳೆಯದು. ಅದು ತುಂಬಾ ಮುಖ್ಯ.
ಇದನ್ನು ಮಾಡಿ, ನಂತರ ನಲವತ್ತು, ಐವತ್ತು ಅಥವಾ ಅರವತ್ತು ವರ್ಷಗಳಾದ ಮೇಲೆ ನಿವೃತ್ತರಾಗಿ ಬನ್ನಿ, ಸಂಪೂರ್ಣವಾಗಿ  ಜ್ಞಾನದಲ್ಲಿರಿ. ಉನ್ನತ ಜ್ಞಾನಕ್ಕಾಗಿ, ಉನ್ನತ ವಿವೇಕದ ಸಲುವಾಗಿ ಅಥವಾ ಸಮಾಜ ಸೇವೆಗಳಿಗಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಿರಿ. ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ. ಆಮೇಲೆ ಜೀವ ಹೊರಟುಹೋಗಿರುವುದು! ಒಂದು ದಿನ ನೀವು ತೆರಳುವಿರಿ (ಬೆರಳಿನಿಂದ ಚಿಟಿಕೆ ಹಾಕುತ್ತಾ), ನಿಮಗೆ ಗೊತ್ತೇ ಆಗುವುದಿಲ್ಲ! ಇತರರು ನಿಮ್ಮ ದೇಹವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡುತ್ತಾರೆ. ಮುಗಿಯಿತು!
ಒಂದು ದಿನ, (ಕೈಗಳನ್ನು ಜೋಡಿಸುತ್ತಾ) ‘ಅವರ ಆತ್ಮವು ಶಾಂತಿಯಿಂದ ನೆಲೆಸಲಿ’  ಎಂದು ಸ್ಮರಣಾರ್ಥಕ ಕಾರ್ಯಗಳನ್ನು ಮಾಡುವರು. ಅಷ್ಟರೊಳಗಾಗಲೇ ನೀವು ಶಾಂತಿಯಿಂದ ನೆಲೆಸಿರುವಿರಿ! ಅವರ ಹಾರೈಕೆಯು ನಂತರ ಬರುವುದು.
ಒಮ್ಮೆ ನಮ್ಮ ಶರೀರವನ್ನು ಬಿಟ್ಟ ಮೇಲೆ ಶಾಂತರಾಗಿರುವೆವು, ಆಗ ವಿನೋದವಿರುವುದಿಲ್ಲ. ಬದುಕಿರುವಾಗಲೇ ಶಾಂತರಾಗಿರಬೇಕು ಹಾಗೂ ನಮ್ಮ ನೆರೆಹೊರೆಯವರಿಗೆ ಸಹಾಯಕರಾಗಿರಬೇಕು. ಏನೆನ್ನುತ್ತೀರಿ? ಅಲ್ಲವೇ?
ಅದೇ ವಿವೇಕ. ವಿವೇಕದಿಂದ ಈಗ ಮತ್ತು ಇಲ್ಲಿಯೇ ಸಂತೋಷ ಸಿಗುವುದು.
‘ಹತ್ತು ದಿನ ಅಥವಾ ಹತ್ತು ವರ್ಷ ಯಾವುದನ್ನೋ ಮಾಡಿ ನಂತರ ಒಂದು ದಿನ ನಿಮಗೆ ಸಂತೋಷ ದೊರೆಯುವುದೆಂದು ಹೇಳುತ್ತಿಲ್ಲ.’
ಹಾಗಿದೆಯೇ? ಇಲ್ಲ.
ನಮ್ಮ ಬಳಿ ಎರಡು ಅಸ್ತ್ರಗಳಿವೆ – ಸೋ ಹಮ್ ಮತ್ತು ಸೋ ವಾಟ್ (ಆದರೇನು). ಎಲ್ಲವೂ ಬದಲಾಗುತ್ತಿರುತ್ತದೆ.
ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಸ್ನೇಹಿತರು ಶತ್ರುಗಳಾಗುವರು ಮತ್ತು ಶತ್ರುಗಳು ಸ್ನೇಹಿತರಾಗುವರು. ಇದೇ ಪ್ರಪಂಚದಲ್ಲಿ ನಡೆಯುವುದು, ಅಲ್ಲವೇ?
ಯಾರು, ‘ನಿನ್ನನ್ನು ಬಿಟ್ಟಿರಲಾರೆ’ ಎನ್ನುವರೋ ಅವರೇ ತರುವಾಯ, ‘ನಿನ್ನನ್ನು ಸಹಿಸಿಕೊಳ್ಳಲಾಗದು’ ಎನ್ನುವರು.
ಇದು ಅನೇಕ ಸಲ ನಡೆಯುವಂತಹುದು. ಒಂದು ಬಾರಿಯಲ್ಲ, ಆದರೆ ಎರಡು, ಮೂರು, ನಾಲ್ಕು ಬಾರಿಯಾಗುವುದು.
ಪ್ರೀತಿಯು ಹೇಗೆ ಕೆಲಸ ಮಾಡುವುದೆಂದು ಒಬ್ಬ ಮಹಿಳೆಯು ವಿಚಾರಗೋಷ್ಠಿಯಲ್ಲಿ ತಿಳಿಸುತ್ತಿದ್ದಳು. ಆ ಮಹಿಳೆಯು ಏಳು ಬಾರಿ ವಿಚ್ಛೇದಿತಳಾಗಿದ್ದಳು! ನಾನು ಹೇಳಿದೆ, ‘ಅವಳು ಅತ್ಯಂತ ಅರ್ಹಳು ಏಕೆಂದರೆ ಏಳು ಬಾರಿ ಅದು ಹೇಗೆ ಕೆಲಸ ಮಾಡಲಿಲ್ಲವೆಂದು ತಿಳಿದಿದ್ದಾಳೆ. ಈಗ ಅದನ್ನು ಹಂಚಿಕೊಳ್ಳಬಹುದು!’ ಎಂದು.
ನೋಡಿ, ಪ್ರಪಂಚದಲ್ಲಿ ಸ್ನೇಹಿತರನ್ನು ಹುಡುಕಲು  ಹೊರಟಾಗ ನಮಗೆ ಒಬ್ಬ ಒಳ್ಳೆಯ ಸ್ನೇಹಿತ ಸಿಗುವುದಿಲ್ಲ. ಆದರೆ, ನಿಮ್ಮೊಳಗೇ  ಹುಡುಕಲು ಪ್ರಾರಂಭಿಸಿದರೆ, ನಿಮ್ಮ ಉನ್ನತ ಆತ್ಮದೊಂದಿಗೆ, ನಿಮ್ಮ ಆಂತರ್ಯದೊಂದಿಗೆ ಸ್ನೇಹ ಬೆಳೆಸಿದರೆ, ಸಹಜವಾಗಿಯೇ ನಿಮ್ಮೊಳಗಿನಿಂದ ಸ್ನೇಹ ಹೊರಹೊಮ್ಮುವುದು.
ನೀವು ಸ್ನೇಹಮಯಿಯಾಗಿದ್ದಾಗ, ಇಡೀ ಜಗತ್ತು ನಿಮ್ಮ ಸ್ನೇಹಿತರಾಗುವುದು. ಎಲ್ಲರೂ ನಿಮ್ಮತ್ತ ಧಾವಿಸುವರು. ನಿಮ್ಮ ಶತ್ರುಗಳೂ ಕೂಡ ನಿಮ್ಮೆದುರು ಸ್ನೇಹಿತರಂತೆ ವರ್ತಿಸುವರು. ನೀವು ಹೋದ ಮೇಲೆ ನೀವು ಅವರ ಶತ್ರುವೆಂದು ತಿಳಿಯಬಹುದು.
ಹೃದಯಪೂರ್ವಕವಾಗಿ ಯಾರೊಡನೆಯೂ ದ್ವೇಷವನ್ನು ಸಾಧಿಸಬೇಡಿ. ಅದು ನನ್ನ ನೀತಿ. ನನ್ನ ಕಡೆಯಿಂದ, ನನಗೆ ಯಾರೂ ಶತ್ರುಗಳಿಲ್ಲ.
ನಾನು ಚಿಕ್ಕವನಾಗಿದ್ದಾಗ, ವೇದದಿಂದ ಒಂದು ಸಂಸ್ಕೃತ ಶ್ಲೋಕವನ್ನು ಕಲಿತಿದ್ದೆ, ’ಅಜಾತಶತ್ರು ಅಜರಸ್ವರ್ವರ್ತಿ.’ ಅಂದರೆ ’ನಾನೆಂದೂ ವೃದ್ಧನಾಗುವುದಿಲ್ಲ ಏಕೆಂದರೆ ನಾನು ನನ್ನ ಆಂತರ್ಯದಲ್ಲಿ ನೆಲೆಸಿದ್ದೇನೆ. ನನಗೆ ಆಗ ಹತ್ತು ಅಥವಾ ಹನ್ನೆರಡು ವರ್ಷವಿರಬಹುದು. ಹತ್ತು ಸಾವಿರ  ಶ್ಲೋಕಗಳಲ್ಲಿ ಈ ಶ್ಲೋಕ ನನ್ನ ಗಮನ ಸೆಳೆಯಿತು.
ನೀವು ನಿಮ್ಮ ಆಂತರ್ಯದಲ್ಲಿ ನೆಲೆಸಿದ್ದರೆ, ಎಂದಿಗೂ ವೃದ್ಧರಾಗುವುದಿಲ್ಲ. ವಯಸ್ಸಾಗುವುದೆಂದರೆ ಸುಸ್ತಾಗುವುದು, ನಿರುತ್ಸಾಹ, ಯಾವುದೂ ಸರಿಯಿಲ್ಲವೆಂದೆನಿಸುವುದು, ನಿರಾಶಾದಾಯಕ ಭಾವ; ಮನಸ್ಸಿನಲ್ಲಿ ಋಣಾತ್ಮಕ ಸಂವಾದಗಳು, ’ಓಹ್, ನನಗೆಲ್ಲ ಗೊತ್ತಿದೆ. ನಾನೆಲ್ಲ ನೋಡಿದ್ದೇನೆ’ – ಈ ರೀತಿಯ ಮನೋಭಾವ. ನವೀನತೆಯಿಲ್ಲ, ಜೀವಂತಿಕೆಯಿಲ್ಲ.
ಅಜರ  ಎಂದರೆ ಜೀರ್ಣವಾಗದಿರುವುದು ಅಥವಾ ವೃದ್ಧನಾಗದಿರುವುದು. ನಿಮಗೆ ಗೊತ್ತಿದೆಯೇ, ಅತ್ಯಂತ ಉತ್ಸಾಹ ಹಾಗೂ ಚಟುವಟಿಕೆಯಿಂದಿರು ವೃದ್ಧರಿದ್ದಾರೆ.
ನಾನು ತೈವಾನ್ ಗೆ ಹೋಗಿದ್ದೆ. ೮೦೦೦ ಜನರಿಂದ ತುಂಬಿರುವ ಕ್ರೀಡಾಂಗಣದಲ್ಲಿ ಮಹಾಸತ್ಸಂಗವಿತ್ತು. ಜನರು ತುಂಬಾ ಸಂತೋಷವಾಗಿದ್ದರು. ನಂತರ ನನ್ನ ವಸತಿಗೆ ಹಿಂದಿರುಗಿದಾಗ, ೮೦ ವರ್ಷದ ವೃದ್ಧ ಸಜ್ಜನರು ಬಂದರು. ಅತ್ಯಂತ ಉತ್ಸಾಹವುಳ್ಳವರಾಗಿದ್ದರು. ಅವರೆಂದರು, ’ಇದು ಮಹತ್ತರವಾದುದು! ನಾನು ಸ್ವಲ್ಪ ಕೆಲಸ ಮಾಡಲು  ಬಯಸುತ್ತೇನೆ. ಈ ಜ್ಞಾನವನ್ನು ಹರಡಲು ಬಯಸುತ್ತೇನೆ. ಚೀನಾದ ಮುಖ್ಯಪ್ರದೇಶದಲ್ಲಿ ಅನೇಕ ಮಿಲಿಯನ್ ಜನರು ಕ್ಯಾನ್ಸರ್ ಮತ್ತಿತರ ರೋಗಗಳಿಂದ ಬಳಲುತ್ತಿದ್ದಾರೆ. ಗುರೂಜೀ, ನಾನು ನಿಮ್ಮನ್ನು ಚೀನಾದ ಮುಖ್ಯಪ್ರದೇಶಕ್ಕೆ ಕರೆದುಕೊಂಡು ಹೋಗಲು ಬಯಸುತ್ತೇನೆ. ಅದಕ್ಕೆ ಏರ್ಪಾಡು ಮಾಡುತ್ತೇನೆ..’
ಅವರಿಗೆ ೮೦ರ ಪ್ರಾಯ, ಎಲ್ಲಿಗಾದರೂ ಪ್ರಯಾಣ ಮಾಡಲು ಸಿದ್ಧರಿದ್ದಾರೆ. ನೋಡಲು ದುರ್ಬಲರಂತೆ ಕಂಡರೂ, ಅವರ ಉತ್ಸಾಹ ಎಷ್ಟು ಅಧಿಕವಾಗಿದೆ! ಅವರಷ್ಟೇ ಪ್ರಾಯದ ತಮ್ಮ ಸ್ನೇಹಿತರೊಬ್ಬರನ್ನು ಕರೆದುಕೊಂಡು ಬಂದರು. ಅವರೆಂದರು, ’ನಾವು ನಿಮ್ಮ ಸೈನಿಕರು!’ ಮೊದಲನೇ ಸಲ ನನ್ನನ್ನು ನೋಡುತ್ತಿದ್ದರು.
ಹಾಗೆಯೇ, ಜಪಾನಿನಲ್ಲಿ ಸುಮರು ೭೮ ವರ್ಷದ ವೃದ್ಧರು ತುಂಬು ಉತ್ಸಾಹಿಗಳಾಗಿದ್ದರು. ನಾನು ಮಾತನಾಡಲು ಕಾರ್ಯಕ್ರಮವೊಂದನ್ನು ಏರ್ಪಡಿಸಿದರು ಮತ್ತು ಅನೇಕ ಜನರನ್ನು ಆಹ್ವಾನಿಸಿದರು. ಅವರು, ’ಓಹ್, ನನಗೆ ವಯಸ್ಸಾಗಿದೆ. ನಾನೇನು ಮಾಡಲು ಸಾಧ್ಯವಿಲ್ಲ’ ಎನ್ನಲಿಲ್ಲ. ಇಲ್ಲ, ಆ ರೀತಿ ಹೇಳಲಿಲ್ಲ, ಬದಲಿಗೆ ಅವರು ಅತ್ಯಂತ ಉತ್ಸಾಹಿಗಳಾಗಿದ್ದರು.
’ಇಡೀ ಜಪಾನಿಗೆ ಈ ಜ್ಞಾನದ ಅವಶ್ಯಕತೆಯಿದೆ’ ಎಂದು ಘೋಷಿಸಿದರು. ಅವರು ಅತ್ಯಂತ ಯಶಸ್ವಿಯಾದ ಸಜ್ಜನರು.
ಪ್ರತಿ ವರ್ಷ ಜಪಾನಿನಲ್ಲಿ  ಮೂವತ್ತು ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದು ಭಾರೀ ಸಂಖ್ಯೆಯಾಯಿತು. ಇಂದು ಸಂತೋಷದ ಅಲೆಯೊಂದರ ಅವಶ್ಯಕತೆಯಿದೆ. ಜಪಾನಿನಲ್ಲಿ ಜಿಡಿಪಿ ಅತಿ ಹೆಚ್ಚಿದೆ. ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಐವತ್ತು ಡಾಲರ್ ಗಳನ್ನು ರಸ್ತೆ ತೆರಿಗೆಗಾಗಿ ವೆಚ್ಚ ಮಾಡಬೇಕಾಗಿದೆ. ಊಹಿಸಲು ಸಾಧ್ಯವೇ? ಎರಡು ಬಾರಿ ಹೋಗಿ ಬಂದರೆ, ನೀವಾಗಲೇ ಇನ್ನೂರು ಡಾಲರ್ ಗಳನ್ನು  ವೆಚ್ಚ ಮಾಡಿರುತ್ತೀರಿ. ಯಾರನ್ನೋ ವಿಮಾನ ನಿಲ್ದಾಣದಿಂದ ಕರೆತರಲು ಹೋಗಿದ್ದು, ನಂತರ ಅವರನ್ನು ಇಳಿಸಲು, ನೂರು ಡಾಲರ್ ಗಳನ್ನು ಖರ್ಚು ಮಾಡಿರುತ್ತೀರ. ಅಷ್ಟು ದೂರದಲ್ಲಿರುತ್ತದೆ. ಅಲ್ಲಿ ಬದುಕುವುದು ತುಂಬಾ ದುಬಾರಿ. ಜಪಾನಿನಲ್ಲಿ ಬದುಕುವುದು ಅಮೇರಿಕನ್ನರಿಗೆ ದುಬಾರಿಯೆನಿಸುವುದು. ಜನರು ಹಣ ಸಂಪಾದಿಸುತ್ತಾರೆ ಆದರೆ ಸುಖವಿಲ್ಲ.
ಕೇವಲ ಜಪಾನ್ ಒಂದೇ ಅಲ್ಲ. ಇಂದು ಜಗತ್ತಿನಲ್ಲಿ ಅನೇಕ ದೇಶಗಳು ಈ ರೀತಿಯ ಲಕ್ಷಣಗಳನ್ನು ತೋರುತ್ತಿವೆ, ಸುಖವಿಲ್ಲ. ನಗುವುದಿಲ್ಲ ಮತ್ತು ಶಾಂತಿಯಿಲ್ಲ. ಆನಂದದ ಅಲೆಯೊಂದನ್ನು ಸೃಷ್ಠಿಸುವ ಅವಶ್ಯಕತೆಯಿದೆ, ಅದು ಕೇವಲ ವಿವೇಕ, ಜ್ಞಾನ ಮತ್ತು ಜೀವನದ ಬಗ್ಗೆ ವಿಸ್ತಾರವಾದ  ದೃಷ್ಠಿಕೋನದಿಂದ ಸಾಧ್ಯ. ಅದುವೇ ಆರ್ಟ್ ಆಫ್ ಲಿವಿಂಗ್.
ಆರ್ಟ್ ಆಫ್ ಲಿವಿಂಗ್ ಎಂಬುದು ಒಂದು ಸಿದ್ಧಾಂತವಲ್ಲ. ಒಂದು ಪರಿಕಲ್ಪನೆಗಳ ಸಮೂಹ ಅಥವಾ ಕೆಲವು ಅಭ್ಯಾಸಗಳಲ್ಲ. ಆರ್ಟ್ ಆಫ್ ಲಿವಿಂಗ್ ಎಂದರೆ ಜೀವನದ ದೃಷ್ಠಿಕೋನವನ್ನು ವಿಸ್ತಾರಗೊಳಿಸುವುದು ಮತ್ತು ಜೀವನವನ್ನು ಸಂಭ್ರಮದಿಂದ ಆಚರಿಸುವುದು.  ಇದೇ ಮೂಲ ಉದ್ದೇಶ.
ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ, ’ಜನರ ಹೃದಯದಲ್ಲಿ ಸಂತೋಷವನ್ನುಂಟು ಮಾಡುವುದೇ ದೇವರಿಗೆ ನಿಜವಾದ ಪೂಜೆ.’ ಯೇನ ಕೇನ ಪ್ರಕರೇಣ ಯಸ್ಯ ಕಸ್ಯಾಪಿ ದೇಹಿನಃ │ ಸಂತೋಷಂ ಜಾನಯೇತ್ ಪ್ರಾಜ್ಞ್ಯಾ ತದೇವೇಶ್ವರಪೂಜನಮ್ – ಜನರ ಹೃದಯದಲ್ಲಿರುವ ಆನಂದವೇ ದೈವದ ನಿಜವಾದ ಪೂಜೆ.
ಹಿಂದಿನ ಕಾಲದಲ್ಲಿ ಎಷ್ಟು ಮಹತ್ತರವಾದ ಜ್ಞಾನ, ಎಂತಹ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅದಕ್ಕಾಗಿಯೇ ಅದು ಕಾಲಾತೀತ ಜ್ಞಾನ. ಯಾರು ಬರೆದಿದ್ದಾರೆಂದು ತಿಳಿಯುವುದಿಲ್ಲ. ಅದರಲ್ಲಿ ಅವರ ಸಹಿಯನ್ನು ಹಾಕಿಲ್ಲ ಆದರೆ ನಮ್ಮ ಜೀವನಕ್ಕೆ ಈ ರತ್ನಗಳನ್ನು ನೀಡಿದ್ದಾರೆ. ಇದು ಆರ್ಟ್ ಆಫ್ ಲಿವಿಂಗ್; ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸುವುದು, ಭವಿಷ್ಯದಲ್ಲಿ ಆಧುನಿಕ ವಿಜ್ಞಾನದತ್ತ ದೃಷ್ಠಿ ಹರಿಸುವುದು ಮತ್ತು  ಇವೆರಡನ್ನೂ ಒಟ್ಟಾಗಿ ಪರಿಗ್ರಹಿಸುವುದು.
ವಿಜ್ಞಾನ ಮತ್ತು ಆಧ್ಯಾತ್ಮ ಎಂದಿಗೂ ವಿರುದ್ಧವಾಗಿಲ್ಲ. ಅವೆರಡೂ ಒಟ್ಟಿಗೆ ಸಾಗುತ್ತವೆ. ಬಹಳ ದೀರ್ಘ ಕಾಲದಿಂದಲೂ ಧರ್ಮ ಮತ್ತು ವಿಜ್ಞಾನ ಘರ್ಷಣೆಯಲ್ಲಿದೆ, ಆದರೆ ಅದರ ಪ್ರಾಯೋಗಿಕ ಭಾಗವಾದ ಆಧ್ಯಾತ್ಮವಲ್ಲ. ಆದ್ದರಿಂದಲೇ ನಾನು ಹೇಳುವುದು ವೈಜ್ಞಾನಿಕ ಮನಸ್ಸು ಮತ್ತು ಪುರಾತನ ಹೃದಯದಿಂದ ವೀಕ್ಷಿಸಬೇಕೆಂದು; ಒಂದು ತಾಜಾ ಮನಸ್ಸು ಮತ್ತು ಪ್ರೀತಿಸುವ ಹೃದಯ.
ಇದು ನಮಗೆ ಬೇಕು. ಹಾಗೆನಿಸುವುದಿಲ್ಲವೇ?
ಜಗತ್ತು ತುಂಬಾ ಕೌತುಕವಾದುದು! ಆದ್ದರಿಂದ ಈ ಜಗತ್ತಿನಲ್ಲಿರಿ, ಆನಂದಿಸಿರಿ ಆದರೆ ಬಂಧಿತರಾಗದೇ ಇಲ್ಲವೇ ಮುಳುಗದೇ. ನಿಮ್ಮನ್ನು ನೀವು ಸ್ವಲ್ಪ ದೂರದಲ್ಲಿ ನೆಲೆಗೊಳಿಸಿ.   ಬಾಹ್ಯ ಘಟನೆಗಳಿಂದ ಪ್ರಭಾವಿತರಾಗದೇ ನಿಮ್ಮ ಆತ್ಮವನ್ನು ರಕ್ಷಿಸಿಕೊಳ್ಳಿ, ನಿಮ್ಮ ಮನಸ್ಸನ್ನು ರಕ್ಷಿಸಿಕೊಳ್ಳಿ, ನಿಮ್ಮ ಚೈತನ್ಯವನ್ನು ರಕ್ಷಿಸಿಕೊಳ್ಳಿ ಹಾಗೂ ನಿಮ್ಮ ಆನಂದವನ್ನು ರಕ್ಷಿಸಿಕೊಳ್ಳಿ. ಪ್ರಾಪಂಚಿಕ ಘಟನೆಗಳಿಂದ ಗೊಂದಲಕ್ಕೊಳಗಾಗಬೇಡಿ, ನಾನು ಹೇಳುತ್ತಿರುವುದು ತಿಳಿಯುತ್ತಿದೆಯೇ?
ಇತರರು ಅಥವಾ ಯಾವುದೇ ಘಟನೆಯು ನಿಮ್ಮ ಸ್ವಾತಂತ್ರ್ಯ, ಸಂತೋಷ ಮತ್ತು ಆಂತರ್ಯದ  ನೆಮ್ಮದಿಯನ್ನು ಕಸಿದುಕೊಳ್ಳಲು ಬಿಡಬೇಡಿ. ಇದು ಆರ್ಟ್ ಆಫ್ ಲಿವಿಂಗ್.
ಇದು ಮಹತ್ತರವಾದ ಕಾರ್ಯ. ಇದೊಂದು ಸವಾಲು. ಅಷ್ಟು ಸುಲಭವಲ್ಲ. ಸುಲಭವೆಂದು ನಾನು ಹೇಳುತ್ತಿಲ್ಲ. ಹೂವಿನಂತೆ, ಬೆಣ್ಣೆಯಂತೆ ಇಲ್ಲ! ಜೀವನ ಹೂವಿನಂತಿಲ್ಲ, ಬೆಣ್ಣೆಯಂತಿಲ್ಲ. ಅನೇಕ ಸವಾಲುಗಳಿವೆ, ಆದರೆ ವಿವೇಕ ಅಥವಾ ಜ್ಞಾನ ಸವಾಲುಗಳನ್ನೆದುರಿಸಲು ಸಜ್ಜುಗೊಳಿಸುತ್ತದೆ.
ಜೀವನದಲ್ಲಿ ಸವಾಲುಗಳೇ ಇರಬಾರದೆಂದು ಯೋಚಿಸಿದರೆ ಕಷ್ಟವಾಗುವುದು. ಆಗ ಸವಾಲುಗಳು ಮತ್ತಷ್ಟು ದೊಡ್ಡದೆಂದೆನಿಸುವುದು. ಜೀವನದಲ್ಲಿ ಸವಾಲುಗಳಿರುತ್ತವೆ, ಆದರೆ ಜ್ಞಾನವು ಅವುಗಳನ್ನು ಎದುರಿಸಲು ಸಿದ್ಧಪಡಿಸುತ್ತದೆ.

ಭಾನುವಾರ, ಏಪ್ರಿಲ್ 22, 2012

ಸಮಾಧಿಯ ಕ್ಷಣವೊ೦ದರಲ್ಲಿ ದಶಲಕ್ಷ ವರ್ಷಗಳ ವಿಶ್ರಾ೦ತಿಯಿದೆ

ಧ್ಯಾನದ ರಹಸ್ಯಗಳು - ದಿನ ೩
೨೨ ಎಪ್ರಿಲ್ ೨೦೧೨
ನಾವು ಕಳೆದೆರಡು ದಿನಗಳಲ್ಲಿ ಏನೆಲ್ಲಾ ಮಾಡಿದೆವೋ ಅದನ್ನು ಮರುಸಮೀಕ್ಷೆ ಮಾಡೋಣ, ಧ್ಯಾನವು ವಿವಿಧ ರೀತಿಗಳಲ್ಲಿ ಹೇಗೆ ಆಗುತ್ತದೆಂದು.
ಧ್ಯಾನವೆಂಬುದು ಒಂದು ಆಗುವಿಕೆ, ಇದು ಮೊದಲನೆಯ ಅಂಶ.
ಎರಡನೆಯದು, ಧ್ಯಾನವು ಪ್ರಯತ್ನವಿಲ್ಲದೆ ಆಗುವುದು. ಧ್ಯಾನ ಮಾಡಲು ಪ್ರಮುಖವಾದುದೆಂದರೆ ಪ್ರಯತ್ನ ಪಡದಿರುವುದು. ಅದು ಏನನ್ನಾದರೂ ಮಾಡುವುದಲ್ಲ ಆದರೆ ಏನೂ ಮಾಡದಿರುವುದು ಮತ್ತು ಅದು ಧ್ಯಾನ. ನೀವು ನಿಜವಾಗಿ ಏನೂ ಮಾಡದಿರಲು ಸಾಧ್ಯವಾಗುವ ಒಂದು ಪರಿಸ್ಥಿತಿಯನ್ನು ಸೃಷ್ಟಿಸುವುದರ ಬಗ್ಗೆ ತಿಳಿಯುವುದೇ ತುಂಬಾ ಮುಖ್ಯವಾದುದು. ಹಾಗಾದರೆ ಇದು ಹೇಗೆ ಆಗಲು ಸಾಧ್ಯ? ನಾವು ಹಲವಾರು ವಿಧಾನಗಳನ್ನು ಅಥವಾ ಹಲವಾರು ಮಾರ್ಗಗಳನ್ನು ನೋಡಿದೆವು.
ಆಸನಗಳ ಮೂಲಕ, ಯೋಗ, ತೈ-ಚಿ, ಇವುಗಳೆಲ್ಲಾ ನಿರ್ದಿಷ್ಟ ಪ್ರಮಾಣದಲ್ಲಿ ಮನಸ್ಸಿಗೆ ಶಾಂತಿಯನ್ನು ತರಬಹುದು. ವ್ಯಾಯಾಮ ಮತ್ತು ಆಸನಗಳಿಂದ ಸಂಪೂರ್ಣವಾಗಿಯಲ್ಲದಿದ್ದರೂ ಒಂದು ನಿರ್ದಿಷ್ಟ ಪ್ರಮಾಣದ ಧ್ಯಾನಾವಸ್ಥೆಯು ಬರಬಹುದು.
ಎರಡನೆಯದು ಪ್ರಾಣಾಯಾಮ. ಇದು ಇನ್ನೂ ಹೆಚ್ಚು ಮುಖ್ಯವಾದುದು ಯಾಕೆಂದರೆ ನಮಗೆ ಐದು ಶರೀರಗಳಿವೆ (ಪಂಚಕೋಶ). ಒಂದನೆಯದು ಭೌತಿಕ ಶರೀರ, ನಂತರ ಪ್ರಾಣ ಶರೀರ; ಇದು ಜೈವಿಕ ಲಯಬದ್ಧ ಶಕ್ತಿ ಅಥವಾ ಜೈವಿಕ ವಿದುತ್ಕಾಂತೀಯ ಶಕ್ತಿ. ನಂತರ ನಮ್ಮಲ್ಲಿರುವುದು ಮನಸ್ಸು ಅಥವಾ ಪ್ರಜ್ಞೆ, ನಂತರ ಅಂತಃಸ್ಫುರಣ ಶರೀರ; ಇದು ಇನ್ನೂ ಸಂಸ್ಕರಿಸಲ್ಪಟ್ಟ ಪ್ರಜ್ಞೆ ಮತ್ತು ನಂತರ ಪರಮ ಸುಖದ ಶರೀರ. ಸಾಧಾರಣವಾಗಿ ನಾವು, ಮನಸ್ಸು ಶರೀರದ ಒಳಗಡೆಯಿದೆಯೆಂದು ಯೋಚಿಸುತ್ತೇವೆ ಆದರೆ ಅದು ಇದಕ್ಕೆ ವಿರುದ್ಧವಾಗಿರುವುದು. ಶರೀರವು ಮನಸ್ಸಿನ ಒಳಗಿದೆ. ನಾನು ಸಾಧಾರಣವಾಗಿ ಫ್ಯಾಂಟಮ್ ಆರ್ಮ್ ನ ಉದಾಹರಣೆಯನ್ನು ಕೊಡುತ್ತೇನೆ. ಕೈಯನ್ನು ಕತ್ತರಿಸಿ ತೆಗೆಯಲಾಗಿದ್ದರೂ ಆ ವ್ಯಕ್ತಿಯು, ಕೈಯು ಇನ್ನೂ ಅಲ್ಲೇ ಇರುವಂತೆ ಅನುಭವಿಸುತ್ತಾನೆ; ಅಂದರೆ ಆ ಸೂಕ್ಷ್ಮ ಶರೀರವು ಇನ್ನೂ ಅಲ್ಲೇ ಇರುತ್ತದೆ. ಆದುದರಿಂದ ಉಸಿರಾಟದ ತಂತ್ರಗಳು ಮತ್ತು ಉಸಿರಾಟದ ವ್ಯಾಯಾಮಗಳ ಮೂಲಕ ಮನಸ್ಸು ತುಂಬಾ ಶಾಂತ ಮತ್ತು ಸಂತೋಷಗೊಳ್ಳುತ್ತದೆ.
ನಂತರ, ಐದು ಇಂದ್ರಿಯ ಜ್ಞಾನಗಳಲ್ಲಿ ಯಾವುದಾದರೂ ಒಂದರ ಮೂಲಕ ಮನಸ್ಸು ಧ್ಯಾನಕ್ಕೆ ಹೋಗಬಹುದು. ರುಚಿ, ವಾಸನೆ, ದೃಷ್ಟಿ, ಶಬ್ದ ಮತ್ತು ಸ್ಪರ್ಶ.
ನಂತರ ಭಾವನೆಗಳ ಮೂಲಕ; ಉನ್ನತವಾದ ಸಂಸ್ಕರಿಸಲ್ಪಟ್ಟ ಭಾವನೆಗಳು. ಪ್ರೀತಿ, ದಯೆ, ಸೇವಾ ಭಾವನೆ ಇವುಗಳೆಲ್ಲವೂ ಮನಸ್ಸಿಗೆ ಒಂದು ನಿರ್ದಿಷ್ಟ ಪ್ರಮಾಣದ ಪ್ರಶಾಂತತೆಯನ್ನು ತರಬಲ್ಲವು. ಮನಸ್ಸು ತುಂಬಾ ಶಾಂತ ಮತ್ತು ಧ್ಯಾನಸ್ಥವಾಗುತ್ತದೆ. ಭಾವನೆಗಳ ಮೂಲಕ ನಿಮಗೆ ಅದೇ ರೀತಿಯ ಧ್ಯಾನಾವಸ್ಥೆಯನ್ನು ಹೊಂದಬಹುದು.
ನಂತರ, ಬೌದ್ಧಿಕ ತಿಳುವಳಿಕೆಯ ಮೂಲಕ. ನಾನು ನೀಡಿದ ಒಂದು ಉದಾಹರಣೆಯೆಂದರೆ, ನೀವು ಒಂದು ಬಾಹ್ಯಾಕಾಶ ವಸ್ತು ಸಂಗ್ರಹಾಲಯಕ್ಕೆ ಹೋದಾಗ ಅಥವಾ ಬಾಹ್ಯಾಕಾಶ ಸಿನೆಮಾವನ್ನು ನೋಡಿದಾಗ, ನೀವು ವಿಶ್ವದ ಮುಂದೆ ಭೂಮಿಯನ್ನು ಹೋಲಿಸಿ ನೋಡಿದಾಗ, ಈ ಭೂಮಿಯು ಎಷ್ಟು ಚಿಕ್ಕದೆಂದು ಹಾಗೂ ನೀವೆಲ್ಲಿರುವಿರೆಂದೂ, ಈ ವಿಶ್ವವೆಂದರೇನೆಂದೂ ತಿಳಿಯುತ್ತೀರಿ. ಬುದ್ಧಿಯ ಆ ಪ್ರಚೋದನೆಯು ಜೀವನಕ್ಕೆ ಒಂದು ವಿಭಿನ್ನ ಅರ್ಥವನ್ನು ತೋರಿಸುತ್ತದೆ ಮತ್ತು ಮನಸ್ಸನ್ನು ಧ್ಯಾನಸ್ಥವಾಗಿಸುತ್ತದೆ. ಆ ಚಿಕ್ಕ, ಹರಟೆ ಮಾಡುವ ಮನಸ್ಸು ಹಾಗೆಯೇ ನಿಂತು ಬಿಡುತ್ತದೆ. ಮನಸ್ಸು ಎಲ್ಲಾ ಸಮಯದಲ್ಲೂ ಹರಟುತ್ತಿರುತ್ತದೆ; ಇತರರಲ್ಲಿ ಅಥವಾ ತನ್ನಲ್ಲೇ ತಪ್ಪು ಹುಡುಕುತ್ತಾ ಇರುತ್ತದೆ ಮತ್ತು ಅಚಾನಕ್ಕಾಗಿ, ವಿಶ್ವದ ಮತ್ತು ಈ ಅಸ್ಥಿತ್ವದ ವೈಶಾಲ್ಯತೆಗೆ ಹೋಲಿಸಿದರೆ ಈ ಎಲ್ಲಾ ಸಂಗತಿಗಳು ಮುಖ್ಯವಲ್ಲವೆಂಬುದು ನಿಮಗೆ ತಿಳಿಯುತ್ತದೆ. ಈ ಅಸ್ಥಿತ್ವದ ಬಗೆಗಿನ ತಿಳುವಳಿಕೆಯು ಕೂಡಲೇ ನಿಮ್ಮನ್ನು ಪ್ರಶಾಂತತೆಯ, ನಿಶ್ಚಲತೆಯ ಇನ್ನೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ. ಆದುದರಿಂದ ಬೌದ್ಧಿಕ ಪ್ರಚೋದನೆಯ ಮೂಲಕ ಕೂಡಾ ಧ್ಯಾನವಾಗುತ್ತದೆ.
ಪ್ರಶ್ನೆ: ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ ಅಹಂಕಾರವನ್ನು ಭಕ್ತಿಯು ಹೇಗೆ ಪರಿವರ್ತನೆಗೊಳಿಸಬಲ್ಲದು ಎಂಬುದರ ಬಗ್ಗೆ ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿಶಂಕರ್
: ಕೇಳಿ, ಭಕ್ತಿಯೆಂದರೇನು? ಅದು ಪ್ರೀತಿಯ ಒಂದು ಸ್ಥಿತಿ. ಅಹಂಕಾರವೆಂದರೇನು? ಅದು ಬೇರ್ಪಡಿಕೆಯ ಮತ್ತು ಒಂದು ಸೀಮೆಯ; ಒಂದು ಗೋಡೆಯ; ಒಂದು ಭಿನ್ನ ಗುರುತಿನ ಭಾವನೆ. ಪ್ರೀತಿಯು ಗುರುತನ್ನು ಕರಗಿಸಲು ನೋಡುತ್ತದೆ, ಪ್ರೀತಿಯು ವಿಲೀನಗೊಳ್ಳಲು ನೋಡುತ್ತದೆ. ಅಹಂಕಾರವು ಏಕಪಕ್ಷೀಯತೆಯನ್ನು ಪಾಲಿಸಲು ನೋಡುತ್ತದೆ. ಆದುದರಿಂದ ಅವುಗಳು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತವೆ ಮತ್ತು ಅವುಗಳು ಬೇರೆ ಬೇರೆ ಸಮಯಗಳಲ್ಲಿ ಜೊತೆಯಲ್ಲಿರಬಹುದು. ಆದುದರಿಂದ ಪ್ರೀತಿಯಿರುವ ಕ್ಷಣದಲ್ಲಿ ಅಹಂಕಾರವಿರುವುದಿಲ್ಲ ಮತ್ತು ಅಹಂಕಾರವಿರುವ ಕ್ಷಣದಲ್ಲಿ ಪ್ರೀತಿಯಿರುವುದಿಲ್ಲ. ನೀವೊಂದು ಸವಾಲನ್ನು ಸ್ವೀಕರಿಸಬೇಕಾದಾಗ, ಪ್ರೀತಿಯು ಕೆಲಸ ಮಾಡುವುದಿಲ್ಲ, ಅಹಂಕಾರವು ಕೆಲಸ ಮಾಡುತ್ತದೆ. ಅಹಂಕಾರವು ಸವಾಲುಗಳನ್ನು ಸ್ವೀಕರಿಸಬಲ್ಲದು ಆದರೆ ನೀವು ವಿಶ್ರಾಂತಿ ತೆಗೆದುಕೊಂಡು ಮೋಜು ಮಾಡಲು ಬಯಸುವಾಗ, ಆ ಸಮಯದಲ್ಲಿ, ಅಹಂಕಾರವು ಕೆಲಸ ಮಾಡುವುದಿಲ್ಲ, ಪ್ರೀತಿಯು ಕೆಲಸ ಮಾಡುತ್ತದೆ. ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ತಿಳಿಯುತ್ತಿದೆಯೇ? ಅದಕ್ಕಾಗಿಯೇ ಪ್ರಕೃತಿಯು ಎರಡನ್ನೂ ನಿಮ್ಮಲ್ಲಿ ಹಾಕಿರುವುದು, ಅದು ಪ್ರೀತಿಯನ್ನೂ ಹಾಕಿದೆ ಮತ್ತು ಅಹಂಕಾರವನ್ನು ಕೂಡಾ ಹಾಕಿದೆ. ಆದರೆ ನೀವು ಅಹಂಕಾರದಲ್ಲಿ ಸಿಕ್ಕಿಹಾಕಿಕೊಂಡರೆ, ಅದು ನೀವು ನಿಮ್ಮ ಬೂಟ್ಸಿನಲ್ಲಿ ಯಾವಾಗಲೂ ಸಿಕ್ಕಿಹಾಕಿಕೊಂಡಂತೆ. ನಿಮಗೆ ಅದನ್ನು ನಿಮ್ಮ ಕಾಲುಗಳಿಂದ ಹೊರತೆಗೆಯುವುದು ಹೇಗೆಂದು ತಿಳಿಯದು. ನಂತರ ನೀವು ಅವುಗಳನ್ನು ಹಾಕಿಕೊಂಡೇ ಸ್ನಾನ ಮಾಡುತ್ತೀರಿ, ಅವುಗಳನ್ನು ಹಾಕಿಕೊಂಡೇ ಮಲಗುತ್ತೀರಿ. ನಿಮ್ಮ ಬೂಟ್ಸನ್ನು ಯಾವಾಗ ತೆಗೆದು ಆರಾಮವಾಗಿರಬೇಕು ಎಂಬುದು ನಿಮಗೆ ತಿಳಿದಿರಬೇಕು.
ಪ್ರೀತಿಯೆಂಬುದು ಜೀವನದಲ್ಲಾದ ಮೊದಲ ಸಂಗತಿ. ಒಂದು ಮಗುವು ಹುಟ್ಟಿ ಅದರ ಕಣ್ಣುಗಳನ್ನು ತೆರೆದು ತನ್ನ ತಾಯಿಯ ಕಡೆಗೆ ನೋಡಿದ ಕೂಡಲೇ ಅಲ್ಲಿ ಪ್ರೀತಿಯಿರುತ್ತದೆ. ಆ ಮೊದಲ ನೋಟದಲ್ಲೇ ಅದು ತಾಯಿಯಿಂದ ಪ್ರೀತಿಯನ್ನು ಪಡೆಯುತ್ತದೆ ಮತ್ತು ತಾಯಿಗೆ ಪ್ರೀತಿಯನ್ನು ಕೊಡುತ್ತದೆ. ಆದರೆ ಅಹಂಕಾರವು ಬರುವುದು ಮೂರನೆಯ ವಯಸ್ಸಿನಲ್ಲಿ. ಮೂರನೆಯ ವರ್ಷದ ನಂತರ ಗುರುತು ತುಂಬಾ ಶಕ್ತಿಯುತವಾಗುತ್ತದೆ ಮತ್ತು ನಂತರ ಅದು ಬೆಳೆಯುತ್ತದೆ. ಕೆಲವೊಮ್ಮೆ ಒಬ್ಬನು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ನಿಮಗೆ ತುಂಬಾ ವಯಸ್ಸಾದಾಗ; ಹಲವು ಹಿರಿಯ ನಾಗರಿಕರನ್ನು ನೀವು ನೋಡಿದರೆ, ಅವರಲ್ಲಿ ಅಹಂಕಾರವಿರುವುದಿಲ್ಲ. ಅವರು ಪುನಃ ಮಗುವಿನಂತಾಗುತ್ತಾರೆ. ೯೦ ವರ್ಷಗಳ ಬಳಿಕ ಅಹಂಕಾರವನ್ನು ಉಳಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಮೂರು ವರ್ಷ ವಯಸ್ಸಿನ ಮೊದಲು ಅದು ನಿಮ್ಮಲ್ಲಿರಲು ಸಾಧ್ಯವಿಲ್ಲ ಮತ್ತು ತೊಂಭತ್ತು ವರ್ಷ ವಯಸ್ಸಿನ ಬಳಿಕ ಅದು ನಿಮ್ಮಲ್ಲಿರಲು ಸಾಧ್ಯವಿಲ್ಲ. ಅದು ಬಹುತೇಕ ಸಂಭೋಗದಂತೆ; ಅದಕ್ಕೊಂದು ವಯಸ್ಸಿದೆ, ಅದರ ನಂತರ ಸಾಧ್ಯವಿಲ್ಲ ಮತ್ತು ಅದರ ಮೊದಲೂ ಸಾಧ್ಯವಿಲ್ಲ. ಆದರೆ ಅವುಗಳೆಲ್ಲದಕ್ಕೂ ಅವುಗಳದ್ದೇ ಆದ ಪಾತ್ರವಿದೆ.
ಪ್ರಶ್ನೆ: ನಮಸ್ಕಾರ ಶ್ರೀ ಶ್ರೀಯವರೇ, ನನ್ನ ಕೆಲವು ಸ್ನೇಹಿತರ ಅನ್ನಿಸಿಕೆಯ ಪ್ರಕಾರ, ಅತಿಜನಸಂಖ್ಯೆ ಮತ್ತು ಸಾಗರ, ಮಳೆಕಾಡು ಪ್ರದೇಶಗಳಂತಹ ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಈ ಭೂಮಿಯು ಅಧಃಪತನ ಹೊಂದಿದೆ. ಹಲವಾರು ಜನರು ಹತಾಶರಾಗಿದ್ದಾರೆ. ಎಲ್ಲಾ ಅಸ್ತವ್ಯಸ್ತತೆಗಳ ನಡುವೆ ಒಂದು ಸಂಪೂರ್ಣ ದೈವಿಕ ನಿಯಮ ಇದೆಯೆಂದು ನಾನು ಅವರಿಗೆ ಹೇಳುತ್ತೇನೆ. ಆದುದರಿಂದ ನನ್ನ ಪ್ರಶ್ನೆಯೇನೆಂದರೆ, ನಾನು ಯಾವುದೇ ಆಧಾರವಿಲ್ಲದೆಯೇ ಅತಿಶಯೋಕ್ತಿ ಮಾಡುತ್ತಿದ್ದೇನೆಯೇ ಅಥವಾ ಭೂಮಿ ಮತ್ತು ಜನಸಂಖ್ಯೆಯು ಚೆನ್ನಾಗಿರಬಹುದೆಂದು ನಿಮಗನಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್: ಕಳಕಳಿಯಿಂದಿರುವುದು ಒಳ್ಳೆಯದು ಆದರೆ ಭ್ರಮೆಯಿಂದಿರುವುದಲ್ಲ. ಅಲ್ಲಿ ಒಂದು ವ್ಯತ್ಯಾಸವಿದೆ. ನೀವು ಭ್ರಮೆಗೊಳಗಾದರೆ ನಿಮಗೆ ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಮತ್ತು ನೀವು ನಿಮ್ಮ ಮನಃಶಾಂತಿಯನ್ನು ಕಳೆದುಕೊಳ್ಳುತ್ತೀರಿ. ಆದರೆ ಅದೇ ಸಮಯದಲ್ಲಿ, "ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ನಾವು ಮಾಡುತ್ತಿರುವುದನ್ನು ಮುಂದುವರಿಸಿಕೊಂಡು ಹೋಗೋಣ" ಎಂದು ಕೂಡಾ ನೀವು ಹೇಳಲು ಸಾಧ್ಯವಿಲ್ಲ. "ನಾವು ಈ ಭೂಮಿಯನ್ನು ಇನ್ನು ಸ್ವಲ್ಪ ಹೆಚ್ಚು ಶೋಷಣೆ ಮಾಡಿದರೂ ದೇವರು ನಮಗೆ ಎಲ್ಲವನ್ನೂ ಒದಗಿಸುತ್ತಾನೆ, ಪ್ರಕೃತಿಯು ಹೇಗಾದರೂ ಮಾಡಿ ಹೆಚ್ಚು ಒದಗಿಸುತ್ತದೆ" ನೀವು ಈ ರೀತಿ ಹೇಳುವಂತಿಲ್ಲ. ನಾವು ಖಂಡಿತವಾಗಿಯೂ ಭೂಮಿಯ ಬಗ್ಗೆ ಕಾಳಜಿ ವಹಿಸಬೇಕು. ನೋಡಿ, ಅಧಃಪತನದತ್ತ ತಲಪುತ್ತಿದ್ದಂತೆ, ಇದರ ಬಗ್ಗೆ ಕಳಕಳಿಯೂ ಬಂದಿದೆ. ಪ್ರಕೃತಿ ಅಥವಾ ಆ ದೊಡ್ಡ ಮನಸ್ಸು ಲಕ್ಷಾಂತರ ಜನರ ಮನಸ್ಸಿನಲ್ಲಿ ಈ ಕಳಕಳಿಯನ್ನು ಹಾಕಿದೆ.
ಇವತ್ತು ಹೆಚ್ಚು ಹೆಚ್ಚು ಜನರು ಮೊದಲೆಂದೂ ಇರದಂತೆ ಪರಿಸರದ ಬಗ್ಗೆ ಕಳಕಳಿ ಹೊಂದಿದ್ದಾರೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಇವತ್ತು ಚಿಕ್ಕ ಹಳ್ಳಿಗಳಲ್ಲಿರುವ ಜನರು ಕೂಡಾ ಕಳಕಳಿ ಹೊಂದಿದ್ದಾರೆ. ಪ್ರಪಂಚದ ದೂರದ ಮೂಲೆಗಳಲ್ಲಿ ಅವರು ಭೂಮಿಯನ್ನು ಉಳಿಸುವ ಬಗ್ಗೆ, ಸಾವಯವ ಕೃಷಿಯ ಬಗ್ಗೆ ಮತ್ತು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದೆ ಇರುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕಳಕಳಿಯು ದೂರದ ಪ್ರದೇಶಗಳಲ್ಲಿ ಇವತ್ತು ಅಂತರ್ವ್ಯಾಪಿಸಿದೆ. ಅದೇ ಸಮಯದಲ್ಲಿ ಜನರು ಇದರ ಬಗ್ಗೆ ತುಂಬಾ ಭ್ರಮೆಗೊಳಗಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಕಳವಳಗೊಂಡಿದ್ದಾರೆ; "ಓಹ್, ನಾವು ಭೂಮಿಯನ್ನು ನಾಶಗೊಳಿಸುತ್ತಿದ್ದೇವೆ". ನಾನು ಹೇಳುವುದೇನೆಂದರೆ, ಆರಾಮವಾಗಿರಿ. ಭ್ರಮೆಗೊಳಗಾಗಬೇಡಿ ಆದರೆ ಕಳಕಳಿಯಿಂದಿರಿ.
ಪ್ರಶ್ನೆ: ಸಮಾಧಿಯೆಂದರೇನು?
ಶ್ರೀ ಶ್ರೀ ರವಿಶಂಕರ್:
"ಧಿ" ಎಂದರೆ ತಿಳಿದುಕೊಳ್ಳುವ ಶಕ್ತಿ ಮತ್ತು "ಸಮಾಧಿ" ಎಂದರೆ ಎಲ್ಲಿ ಮನಸ್ಸು ಸಂಪೂರ್ಣ ಸ್ಥಿಮಿತದಲ್ಲಿರುತ್ತದೋ; ಎಲ್ಲಿ ನಿಮ್ಮ ಇಡಿಯ ವ್ಯವಸ್ಥೆಯು ಸಂಪೂರ್ಣ ಸಮತೋಲನದಲ್ಲಿರುತ್ತದೋ ಅದನ್ನು ಸಮಾಧಿಯೆಂದು ಕರೆಯುತ್ತಾರೆ. ಶರೀರ, ಮನಸ್ಸು, ಆತ್ಮ ಎಲ್ಲವೂ ಅಷ್ಟೊಂದು ಸಹಕಾರದಿಂದ ಮತ್ತು ಪ್ರಶಾಂತವಾಗಿ ಇರುತ್ತವೆ.
ವಿವಿಧ ರೀತಿಯ ಸಮಾಧಿಗಳಿವೆ. ಒಂದು ಲಯ ಸಮಾಧಿ ಎಂದು ಕರೆಯಲ್ಪಡುತ್ತದೆ. ಅದು, ಯಾವುದಾದರೂ ಸಂಗೀತ ಕೇಳುತ್ತಿರುವಾಗ ನೀವು ಅದರಲ್ಲೇ ಸಂಪೂರ್ಣವಾಗಿ ಕರಗಿ ಹೋಗುವಂತೆ. ನೀವಿದ್ದೀರೆಂದು ನಿಮಗೆ ತಿಳಿದಿರುತ್ತದೆ ಆದರೆ ನೀವು ಎಲ್ಲಿದ್ದೀರೆಂದು ನಿಮಗೆ ತಿಳಿದಿರುವುದಿಲ್ಲ.
ನಂತರ ಪ್ರಜ್ಞಾ ಸಮಾಧಿ, ಅಸಂಪ್ರಜ್ಞಾತ ಸಮಾಧಿ ಮೊದಲಾದವುಗಳಿವೆ ಹಾಗೂ ಯೋಚನೆಗಳಿರುವ, ಕಲ್ಪನೆಗಳಿರುವ ಆದರೆ ನೀವು ತುಂಬಾ ಶಾಂತವಾಗಿರುವ ಒಂದು ಸಮಾಧಿಯಿದೆ. ಇನ್ನೊಂದು ಸಮಾಧಿಯಿದೆ, ಅಲ್ಲಿ ಯಾವುದೇ ಯೋಚನೆಗಳಿರುವುದಿಲ್ಲ, ಕೇವಲ ಒಂದು ಭಾವನೆಯಿರುತ್ತದೆ. ಹಾಗೆ, ಹಲವಾರು ವಿಭಿನ್ನ ರೀತಿಯ ಸಮಾಧಿಗಳಿವೆ.
ಸಮಾಧಿಯಲ್ಲಿರುವ ಆನಂದವು ಈ ರೀತಿ ವಿವರಿಸಲ್ಪಟ್ಟಿದೆಯೆಂದು ಹೇಳಲಾಗಿದೆ - ಒಂದು ಕ್ಷಣದ ಸಮಾಧಿಯಲ್ಲಿ ಕೋಟಿ ವರ್ಷಗಳ ವಿಶ್ರಾಂತಿಯಿದೆ. "ಕೋಟಿ ಕಲ್ಪ ವಿಶ್ರಾಮ್" - ಒಂದು ಕ್ಷಣದಲ್ಲಿ ಕೋಟಿ ವರ್ಷಗಳ ವಿಶ್ರಾಂತಿ. ಅದು ಸಮಾಧಿ. ಒಂದು ಕ್ಷಣದ ಸಮಾಧಿಯಲ್ಲಿ ಸಿಗುವ ಸುಖವು, ಒಂದು ಸಾವಿರ ಘಟಕಗಳಷ್ಟು ಸಂಭೋಗದಿಂದ ಸಿಗುವ ಸುಖಕ್ಕೆ ಸಮಾನವಾದುದೆಂದು ಕೂಡಾ ವಿವರಿಸಲಾಗುತ್ತದೆ. ಆದುದರಿಂದ ಒಬ್ಬ ಯೋಗಿಗೆ ಬ್ರಹ್ಮಚರ್ಯವು ಸ್ವಾಭಾವಿಕವಾಗಿ ಆಗುತ್ತದೆ. ಬ್ರಹ್ಮಚಾರಿಯಾಗಲು ನೀವು ಪ್ರಯತ್ನ ಪಡಬೇಕೆಂದಿಲ್ಲ; ಭಾವಪರವಶರಾಗಲು, ನಿಮ್ಮನ್ನು ಉಜ್ಜಿಕೊಳ್ಳಲು ನಿಮಗೆ ಇನ್ನೊಂದು ಶರೀರದ ಅಗತ್ಯವಿಲ್ಲ. ನೀವು ಕೇವಲ ಕುಳಿತುಕೊಂಡರೆ ಸಾಕು ಮತ್ತು ಉನ್ನತವಾದ ಆನಂದ ಹಾಗೂ ಪರಮಸುಖವು ನಿಮ್ಮೊಳಗೆ ತುಂಬುತ್ತದೆ. ಆದುದರಿಂದಲೇ ಬ್ರಹ್ಮಚರ್ಯವೆಂಬುದು ನೀವು ಮಾಡುವಂತಹ ಒಂದು ಅಭ್ಯಾಸವಲ್ಲ; ನಿಮ್ಮ ಶರೀರದ ಪ್ರತಿಯೊಂದು ಕೋಶವೂ ಪುಳಕ ಮತ್ತು ಪರಮಸುಖದ ಸ್ಥಿತಿಯಲ್ಲಿರುವ ಒಂದು ಆಗುವಿಕೆ ಮತ್ತು ಪರಮಸುಖವನ್ನೇ ಸಂಭೋಗದಲ್ಲಿ ಗಳಿಸಲು ನೀವು ಪ್ರಯತ್ನಿಸುವುದು. ನಾನು ಕೇಳಿರುವ ಪ್ರಕಾರ ಕೆಲವೊಮ್ಮೆ ಒಬ್ಬರಿಗೆ ಆ ಪರಮಸುಖವು ಸಿಗುತ್ತದೆ ಮತ್ತು ಕೆಲವೊಮ್ಮೆ ಸಿಗುವುದಿಲ್ಲ, ಆದರೆ ಜನರಿಗೆ ಆಯಾಸವಂತೂ ಆಗುತ್ತದೆ. ಅದು ನಾನು ಕೇಳಿರುವುದು. ಆದರೆ ಸಮಾಧಿಯಲ್ಲಿ ಆನಂದದ ಆಳವಾದ ಅನುಭವವಾದರೂ ನಿಮಗೆ ಆಯಾಸವಾಗುವುದಿಲ್ಲ. ಅಲ್ಲಿ ಉದ್ರೇಕವಿಲ್ಲ, ಆತಂಕವಿಲ್ಲ, ಆಯಾಸವಿಲ್ಲ ಆದರೆ ನಿಮ್ಮನ್ನು ಪ್ರತಿಕ್ಷಣವೂ ಚೈತನ್ಯಗೊಳಿಸುವಂತಹ ಒಂದು ಮೇಲೆತ್ತುವಿಕೆ ಇರುತ್ತದೆ. ಅದಕ್ಕೇ ಬ್ರಹ್ಮಚರ್ಯ ಆಗುವುದು.
ಪ್ರಶ್ನೆ: ಅತೀ ಹತ್ತಿರದವರೊಬ್ಬರು ತೀರಿಕೊಂಡಾಗ ಒಬ್ಬರು ದುಃಖದಿಂದ ಹೊರಬರಲು ಧ್ಯಾನವು ಸಹಾಯ ಮಾಡುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಸಹಾಯ ಮಾಡುತ್ತದೆ. ಅತೀ ಹತ್ತಿರದವರೊಬ್ಬರು ಇನ್ನೊಂದು ಬದಿಗೆ ದಾಟಿ ಹೋದಾಗ ದುಃಖದಿಂದ ಹೊರಬರಲು ಧ್ಯಾನವು ಖಂಡಿತಾ ಸಹಾಯ ಮಾಡುತ್ತದೆ. ನೋಡಿ, ಸಾವೆಂಬುದು ತುಂಬಾ ಖಚಿತವಾದ ಸಂಗತಿ. ಕಂಡಿತವಾಗಿಯೂ ಸಾವಿಗಿಂತ ಹೆಚ್ಚು ಖಚಿತವಾದುದು ಯಾವುದೂ ಇಲ್ಲ. ನೀವು ನಿಮ್ಮ ಜೀವನವನ್ನು ಹೇಗೇ ಜೀವಿಸಿದ್ದರೂ, ನೀವು ಸಾಯುತ್ತೀರಿ. ಯಶಸ್ವಿಯಾಗಿದ್ದರೂ ಯಶಸ್ವಿಯಾಗಿಲ್ಲದಿದ್ದರೂ, ನೀವು ಸಾಯುತ್ತೀರಿ. ಖ್ಯಾತರಾಗಿದ್ದರೂ ಕುಖ್ಯಾತರಾಗಿದ್ದರೂ, ನೀವು ಸಾಯುತ್ತೀರಿ. ಶ್ರೀಮಂತರಾಗಿದ್ದರೂ ಬಡವರಾಗಿದ್ದರೂ, ನೀವು ಸಾಯುತ್ತೀರಿ. ಆರೋಗ್ಯವಂತರಾಗಿದ್ದರೂ ರೋಗಿಷ್ಠರಾಗಿದ್ದರೂ, ನೀವು ಸಾಯುತ್ತೀರಿ. ರೋಗಿಗಳಾಗಿರುವ ಜನರು ಮಾತ್ರವಲ್ಲ ಸಾಯುವುದು, ಆರೋಗ್ಯವಂತ ಜನರೂ ಸಾಯುತ್ತಾರೆ. ಪ್ರತಿಯೊಬ್ಬರೂ ಒಂದು ದಿನ ಸಾಯುತ್ತಾರೆ. ಆದುದರಿಂದ ಸಾವೆಂಬುದು ತುಂಬಾ ಖಚಿತವಾದುದು. ಈ ಸತ್ಯವನ್ನು, ವಾಸ್ತವವನ್ನು ನೀವು ಸ್ವೀಕರಿಸಿಕೊಂಡು, "ಓ, ನೀನು ಹೋಗಿಬಿಟ್ಟೆ, ಈಗ ವಿದಾಯ ಹೇಳುತ್ತೇನೆ. ನಾನು ನಿನ್ನನ್ನು ಕೆಲವು ದಿನಗಳ ನಂತರ ನೋಡುತ್ತೇನೆ" ಎಂದು ಹೇಳಬಹುದು. ಧ್ಯಾನವು, ದುಃಖದಿಂದ ಹೊರಬರಲು ಖಂಡಿತಾ ನಿಮಗೆ ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ, ನೀವು ಧ್ಯಾನ ಮಾಡುವಾಗ ಕಂಪನಗಳು ಅವರನ್ನು ತಲಪುತ್ತವೆ ಮತ್ತು ಅವರು ಶಾಂತಿಯನ್ನು ಅನುಭವಿಸುತ್ತಾರೆ.


ಪ್ರಶ್ನೆ: ಒಂದು ಕಷ್ಟಕರ ಸನ್ನಿವೇಶವಿರುವಾಗ, ನಾನು ಅದನ್ನು ಹಾಗೇ ಸ್ವೀಕರಿಸಬೇಕೇ ಅಥವಾ ಹೋರಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನಿನಗೆ ಅನ್ನಿಸಿದರೆ ಹೋರಾಡು. ನೀನು ನಿನ್ನ ೧೦೦% ಮಾಡಿದ್ದೀಯೆಂದು ನಿನಗನ್ನಿಸಿದರೆ ಮತ್ತು ನೀನು ಯಾವುದೇ ರೀತಿಯಲ್ಲಿ ಹೋರಾಡಲು ಸಾಧ್ಯವಿಲ್ಲವಾದರೆ, ಆಗ ಪ್ರಾರ್ಥನೆ ಮಾಡು. ಸಹಾಯಕ್ಕಾಗಿ ಪ್ರಾರ್ಥನೆ ಮಾಡು! ಮೊದಲು ನೀನು ಆ ಸನ್ನಿವೇಶವನ್ನು ಅದು ಇದ್ದಂತೆಯೇ ಸ್ವೀಕರಿಸು ಮತ್ತು ನಂತರ ಹೋರಾಡು. ಹೋರಾಡಿದ ಬಳಿಕ ಪುನಃ ಸ್ವೀಕರಿಸು. ಒಂದು ಹೋರಾಟವು ಸ್ವೀಕಾರಗಳ ನಡುವೆ ಸ್ಯಾಂಡ್ ವಿಚ್ ಆಗಿರಬೇಕು ಮತ್ತು ಇದುವೇ ಯೋಗದ ಸಾರ. ಯೋಗವೆಂದರೇನು? ಸ್ವೀಕಾರ ಮತ್ತು ಪ್ರಶಾಂತತೆಯೊಂದಿಗೆ ಕಾರ್ಯ ನಿರ್ವಹಿಸುವುದು; ಸಂಪೂರ್ಣ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸುವುದು.
ಪ್ರಶ್ನೆ: ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಅದು ಪುನಃ ತಿರುಗಿ ಬರಲು ಸಿದ್ಧವಾಗುತ್ತದೆ. ಅದು ಹೋಗಿ ಇನ್ನೊಂದು ಶರೀರಕ್ಕಾಗಿ ಸಾಲಿನಲ್ಲಿ ನಿಲ್ಲುತ್ತದೆ. ಭೂಮಿಗೆ ತಿರುಗಿ ಬರಲು ಕೋಟ್ಯಾಂತರ ಆತ್ಮಗಳು ಕಾಯುತ್ತಿವೆ. ಅದಕ್ಕಾಗಿಯೇ, ಆತ್ಮಹತ್ಯೆ ಪ್ರವೃತ್ತಿಯಿರುವವರಿಗೆ ಮತ್ತು ತಮ್ಮನ್ನೇ ಕೊಲ್ಲಲು ಬಯಸುವವರಿಗೆ ಅದನ್ನು ಮಾಡಬಾರದೆಂದು ನಾನು ಹೇಳುವುದು. ಒಂದು ಶರೀರ ಸಿಗಲು ನೀವು ತುಂಬಾ ಸಮಯ ಮತ್ತು ಉದ್ದದ ಸಾಲಿನಲ್ಲಿ ಕಾದಿದ್ದೀರಿ, ಆದುದರಿಂದ ಅದನ್ನು ನಾಶ ಮಾಡಬೇಡಿ. ಅದು ತುಂಬಾ ಅಮೂಲ್ಯವಾದುದು.
ಪ್ರಶ್ನೆ: ಈ ಶರೀರಕ್ಕೆ ಬರುವ ಮೊದಲು ನಾನು ಎಲ್ಲಿದ್ದೆ?
ಶ್ರೀ ಶ್ರೀ ರವಿಶಂಕರ್:
ತುಂಬಾ ಒಳ್ಳೆಯ ಪ್ರಶ್ನೆ! ಈ ಶರೀರ ಸಿಗುವ ಮೊದಲು ನಾನೆಲ್ಲಿದ್ದೆ? ಪ್ರಜ್ಞೆಯು ತುಂಬಾ ಪುರಾತನವಾದುದು; ಮನಸ್ಸು ಕಲ್ಲುಗಳಿಗಿಂತ ಹಳೆಯದು. ನಾನು ಹೇಳುವುದೇನೆಂದರೆ, ಈ ಪ್ರಶ್ನೆಯನ್ನು ಇಟ್ಟುಕೋ. ಇದು ತುಂಬಾ ಮುಖ್ಯವಾದ ಪ್ರಶ್ನೆ. ಉತ್ತರ ಪಡೆಯಲು ಅವಸರ ಮಾಡಬೇಡ. ಈ ಪ್ರಶ್ನೆಯಲ್ಲೇ ನಿನಗೆ ಉತ್ತರ ಸಿಗಬಹುದು ಮತ್ತು ನೀನು ಧ್ಯಾನದಲ್ಲಿ ಆಳಕ್ಕೆ ಹೋಗುವಿ ಮತ್ತು ಇನ್ನೂ ಬಹಳವಿದೆ. ನಾನು ಈಗ ಇಲ್ಲಿದ್ದೇನೆ, ಆದರೆ ಎಲ್ಲಾ ಕಡೆಗಳಲ್ಲಿಯೂ ಇದ್ದೇನೆ.
ಪ್ರಶ್ನೆ: ಧ್ಯಾನದಿಂದ ಹೊರಬರಲು ಅಲಾರ್ಮ್ ಇಡಬೇಕಾದ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಸಾಧಾರಣವಾಗಿ ಇಲ್ಲ ಯಾಕೆಂದರೆ ಅದು ತುಂಬಾ ಕರ್ಕಶವಾಗಬಹುದು. ಆದರೆ ನೀವು, ನಾನು ೨೦ ನಿಮಿಷ ಅಥವಾ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ ಎಂಬ ಉದ್ದೇಶವನ್ನು ಇರಿಸಿಕೊಂಡರೆ, ಆಗ ನಿಮ್ಮ ಕಣ್ಣುಗಳು ತೆರೆಯುತ್ತವೆ. ನಿಮ್ಮೊಳಗೆ, ನಿಮ್ಮ ಸಂಕಲ್ಪದೊಂದಿಗೆ ಕೆಲಸ ಮಾಡುವ ಒಂದು ಗಡಿಯಾರವಿದೆ. ನೀವೆಲ್ಲರೂ ಈ ಒಳಗಿನ ಯಾಂತ್ರಿಕ ವ್ಯವಸ್ಥೆಯನ್ನು ಪ್ರಯತ್ನಿಸಿ ನೋಡಿದ್ದೀರಾ? ನಾನು ಬೆಳಗ್ಗೆ ೫ ಗಂಟೆಗೆ ಏಳಬೇಕೆಂಬ ಒಂದು ಸಂಕಲ್ಪವನ್ನು ನಿಮ್ಮ ಮನಸ್ಸಿನಲ್ಲಿ ಹಾಕಿನೋಡಿ ಮತ್ತು ಸರಿಯಾಗಿ ಬೆಳಗ್ಗೆ ೫ ಗಂಟೆಗೆ ನಿಮ್ಮ ಕಣ್ಣುಗಳು ತೆರೆಯುತ್ತವೆ. ನಿಮ್ಮ ಒಳಗಡೆ ಒಂದು ಗಡಿಯಾರವಿದೆ, ಅದನ್ನು ಉಪಯೋಗಿಸಿ!
ಧ್ಯಾನ ಮಾಡಲು ೨೦ ನಿಮಿಷ ಕುಳಿತುಕೊಳ್ಳಿ. ತುಂಬಾ ಮೊದಲಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ, ಧ್ಯಾನದಿಂದ ಹೊರಬಂದಾಗ ನಿಮಗೆ ನಿಮ್ಮ ಮನೆಯೆಲ್ಲಿದೆ ಮತ್ತು ನಿಮ್ಮ ಕಾರಿನ ಕೀಗಳು ಎಲ್ಲಿವೆ ಎಂಬುದು ಮರೆತು ಹೋಗಬಹುದು! ಆದುದರಿಂದ ನಾನು, ಮೊದಲಲ್ಲಿ ೨೦ ನಿಮಿಷಗಳು ಅಥವಾ ಅರ್ಧ ಗಂಟೆ ಧ್ಯಾನ ಮಾಡಲು ಶಿಫಾರಸು ಮಾಡುತ್ತೇನೆ, ಅದಕ್ಕಿಂತ ಹೆಚ್ಚಲ್ಲ. ಅದಕ್ಕಿಂತ ಹೆಚ್ಚು ಕಾಲ ಕುಳಿತುಕೊಳ್ಳಲು ಸಾಧ್ಯವೂ ಇಲ್ಲ. ನೀವು ತುಂಬಾ ಹೊತ್ತು ಕುಳಿತುಕೊಂಡರೆ, ತನ್ನಿಂತಾನೇ ನಿಮ್ಮ ಕಣ್ಣುಗಳು ತೆರೆಯುತ್ತವೆ ಮತ್ತು ಚಡಪಡಿಕೆಯಾಗಲು ಶುರುವಾಗುತ್ತದೆ. ತುಂಬಾ ಹೊತ್ತು ಕುಳಿತುಕೊಳ್ಳಲು ನಿಮಗೆ ನೀವೇ ಬಲವಂತ ಮಾಡಬೇಡಿ; ೨೦ ನಿಮಿಷ ಕನಿಷ್ಠ ಮತ್ತು ಅರ್ಧ ಗಂಟೆ ಗರಿಷ್ಠ.
ಪ್ರಶ್ನೆ: ನಾನು ಧ್ಯಾನ ಮಾಡುವಾಗ ನನಗೆ ನೋವಾದ ಅನುಭವ ಯಾಕಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ನಿನಗೆ ನೋವಿನ ಅನುಭವ ಯಾಕಾಗುತ್ತದೆಯೆಂದು ಗೊತ್ತಾ? ಯಾಕೆಂದರೆ ಧ್ಯಾನವು ನಿನ್ನೊಳಗಿರುವ ಪ್ರೀತಿಯ ಜಾಗವನ್ನು ಪ್ರಚೋದಿಸುತ್ತದೆ. ಅದು ನಿನ್ನೊಳಗೆ ಆಳದಲ್ಲಿರುವ ಪ್ರೀತಿಯನ್ನು ಮೇಲೆ ತರುತ್ತಿರುತ್ತದೆ. ಪ್ರೀತಿಯು ನೋವಿನೊಂದಿಗೆ ಸಂಬ್ಬಂಧ ಹೊಂದಿದೆ; ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ತಿಳಿಯುತ್ತಿದೆಯೇ? ಆದುದರಿಂದ ನಿಮಗೆ ದುಃಖದ ಅನುಭವವಾಗಬಹುದು, ಕೆಲವು ಭಾವನೆಗಳು ಮೇಲೆ ಬಂದು ಕಣ್ಣೀರು ತುಂಬಿದ ಅನುಭವವಾಗಬಹುದು. ಅವುಗಳ ಬಗ್ಗೆ ಆ ಸಮಯದಲ್ಲಿ ತೀರ್ಮಾನಿಸಬೇಡಿ, ಅವುಗಳೊಂದಿಗೆ ಹಾಗೇ ಇರಿ. ಅದು ತುಂಬಾ ಸಹಿಸಲಸಾಧ್ಯವಾದರೆ, ಆಗ ಕೆಲವು ದೀರ್ಘ ಉಸಿರನ್ನು ತೆಗೆದುಕೊಳ್ಳಿ. ಆ ಸಮಯದಲ್ಲಿ ಸ್ವಲ್ಪ ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಮಾಡಿ ಮತ್ತು ಆಗ ಹಿತವಾಗುತ್ತದೆ.
ಪ್ರಶ್ನೆ: ಒಂದು ಸದುದ್ದೇಶಕ್ಕಾಗಿ ಕೆಲಸ ಮಾಡುವಾಗ ಜೀವನವನ್ನು ಸಮತೋಲನವಾಗಿರಿಸುವುದು ಹೇಗೆ
ಶ್ರೀ ಶ್ರೀ ರವಿಶಂಕರ್:
ಹೌದು, ಅದೊಂದು ಸವಾಲು. ನೀವು ಅದನ್ನು ಸಂಕಲ್ಪಿಸಿದಾಗ, ಅದರ ಬಗ್ಗೆ ಯೋಚಿಸಿದಾಗ ಮತ್ತು ಎರಡನ್ನೂ ಮಾಡಬಲ್ಲೆ ಎಂದು ಹೇಳಿದಾಗ, ಅವುಗಳು ಪರಸ್ಪರ ವಿರೋಧಾತ್ಮಕವಾಗಿವೆಯೆಂದು ಕಂಡುಬಂದರೂ, ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ಸದುದ್ದೇಶದಲ್ಲಿ ಯಶಸ್ವಿಯಾಗುತ್ತೀರಿ. "ನನ್ನ ನೌಕರಿಗಿಂತ ಶ್ರೇಷ್ಠವಾದ ಒಂದು ಧ್ಯೇಯ ನನಗಿದೆ", ಇದನ್ನು ನೀವು ತಿಳಿದುಕೊಂಡಾಗ ನೀವು ಎರಡನ್ನೂ ಮಾಡಬಲ್ಲಿರಿ. ಧ್ಯೇಯದ ಕಡೆಗಿರುವ ನಿಮ್ಮ ಅನುರಾಗವು ನೌಕರಿಯ ಕಡೆಗಿರುವ ಕಳಕಳಿಯನ್ನು ಹಿಂದಿಕ್ಕಿದರೆ ನೀವು ಹೇಳುವಿರಿ, "ಇಲ್ಲ, ನಾನು ನನ್ನ ನೌಕರಿಯನ್ನು ದೂರ ಬಿಸಾಕುತ್ತೇನೆ, ನಾನು ನನ್ನ ಧ್ಯೇಯವನ್ನು ಮುಂದುವರಿಸುತ್ತೇನೆ". ಇದು ನಡೆಯಲು ಒಂದು ಕಷ್ಟಕರವಾದ ದಾರಿ ಆದರೆ ಅದು ಹಲವಾರು ಫಲಗಳನ್ನು ಕೊಡುತ್ತದೆ. ಆ ನಿಟ್ಟಿನಲ್ಲಿ ಇದು ಹೆಚ್ಚು ತೃಪ್ತಿಕರ. ಯಾವುದೇ ದೊಡ್ಡ ಸಾಧನೆಯಲ್ಲಿ ಎಲ್ಲಾದರೂ ಸ್ವಲ್ಪ ತ್ಯಾಗದ ಅವಶ್ಯಕತೆಯಿರುತ್ತದೆ. ನೀವು ಒಂದು ಸೌಕರ್ಯ ವಲಯದಲ್ಲಿರಲು ಬಯಸುವುದಾದರೆ ಎರಡು ಕೊನೆಗಳನ್ನೂ ಸಮತೋಲನವಾಗಿರಿಸಿ. ಆದರೆ ನೀವು, "ನಾನು ಸೌಕರ್ಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇದು ನನ್ನ ಬಲವಾದ ಅನುರಾಗ ಮತ್ತು ನಾನೊಂದು ಮಹತ್ತಾದ ಧ್ಯೇಯವನ್ನು ಹೊಂದಲು ಬಯಸುತ್ತೇನೆ" ಎಂದು ಹೇಳಿದರೆ, ಆಗ ನೀವು ಅದಕ್ಕೆ ಜಿಗಿಯಬೇಕು. 
ಪ್ರಶ್ನೆ: ಹಾಡುವಿಕೆಯು ಧ್ಯಾನಕ್ಕೆ ಹೇಗೆ ಸಹಾಯಕವಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಹಾಡುವಿಕೆಯು ಸಹಾಯ ಮಾಡುತ್ತದೆ. ಹಾಡುವಿಕೆಯು ಒಂದು ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಪ್ರಾಣವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಧ್ಯಾನದಲ್ಲಿ ಆಳಕ್ಕೆ ಹೋಗಲು ಸಹಾಯ ಮಾಡುತ್ತದೆ. ಆದುದರಿಂದ ಹಾಡುವಿಕೆಯು ಧ್ಯಾನಕ್ಕೊಂದು ಸಹಾಯಿ. ಇಂಗ್ಲಿಷ್ ಭಾಷೆಯ ೭೦% ಸಂಸ್ಕೃತವೆಂದು ನಿಮಗೆ ಗೊತ್ತಿದೆಯಾ? ನಿಮ್ಮಲ್ಲಿ ಎಷ್ಟು ಮಂದಿ ಇದರ ಬಗ್ಗೆ ಕೇಳಿದ್ದೀರಿ? ’ಸಿಸ್ಟರ್’ ಎಂದರೆ ಸ್ವಸ; ’ಡಾಟರ್’ ಎಂದರೆ ದುಹಿತ; ’ಗೋ’ ಎಂದರೆ ಗಚ್ಛಾ. ಇಂಗ್ಲಿಷ್ ಭಾಷೆಯ ಮೂಲವು ಸಂಸ್ಕೃತವಾಗಿದೆ.
ಪ್ರಶ್ನೆ: ಅವನು ಜೀವನವನ್ನು ಯಾಕೆ ಸೃಷ್ಟಿಸಿದನು?
ಶ್ರೀ ಶ್ರೀ ರವಿಶಂಕರ್:
ಅವನು ಜೀವನವನ್ನು ಯಾಕೆ ಸೃಷ್ಟಿಸಬಾರದು? ನೀನು ಈ ಪ್ರಶ್ನೆಯನ್ನು ಕೇಳಲಿಯೆಂದೇ ಅವನು ಜೀವನವನ್ನು ಸೃಷ್ಟಿಸಿದನು. ಅವನು ಸೃಷ್ಟಿಸಿದ್ದಿಲ್ಲವಾದರೆ, ನೀನು ಈ ಪ್ರಶ್ನೆಯನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ! ನನಗೆ ತಿಳಿಯದು, ನನಗೆ ಕಲ್ಪನೆಯೇ ಇಲ್ಲ. ದೇವರಿಗೆ ಉತ್ತಮ ಸಲಹೆಗಾರರ ಅಗತ್ಯವಿದೆಯೆಂದು ನನಗನಿಸುತ್ತದೆ. ಅವನು ವಿಷಯಗಳನ್ನು ತುಂಬಾ ಸಂಕೀರ್ಣವಾಗಿ ಮಾಡಿದ್ದಾನೆ.
ಪ್ರಶ್ನೆ: ವರ್ತಮಾನದ ಕ್ಷಣವನ್ನು ಸ್ವೀಕರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಈಗಿನಂತೆ, ಈ ಕ್ಷಣ ನಾನು ನಿನ್ನ ಪ್ರಶ್ನೆಯನ್ನು ಸ್ವೀಕರಿಸಿದ್ದೇನೆ ಮತ್ತು ನಾನೀಗ ಇಲ್ಲಿದ್ದೇನೆ. ತಿಳಿಯಿತಾ? ಅದು ಸ್ವಯಂ-ಪ್ರಚೋದಿತ. ವರ್ತಮಾನದ ಕ್ಷಣವು ಅನಿವಾರ್ಯವಾದುದು. ಅಸ್ಥಿತ್ವದಲ್ಲಿರುವುದೆಲ್ಲಾ ವರ್ತಮಾನದ ಕ್ಷಣದಲ್ಲಿರುವುದು. ಒಂದು ಭವಿಷ್ಯದ ಯೋಚನೆಯೂ ಕೂಡಾ ವರ್ತಮಾನದ ಕ್ಷಣದಲ್ಲಿರುವುದು. ನಿಮ್ಮ ಭವಿಷ್ಯದ ಚಿಂತೆಯು ಭವಿಷ್ಯಕಾಲದಲ್ಲಿಲ್ಲ, ಅದು ವರ್ತಮಾನ ಕಾಲದಲ್ಲಿದೆ. ಹಿಂದಿನ ನೆನಪುಗಳು ಕೂಡಾ ವರ್ತಮಾನದಲ್ಲಿದೆ. ನೀವು ವರ್ತಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭೂತಕಾಲದ ಬಗೆಗಿನ ನಿಮ್ಮ ಚಿಂತೆಯೂ ಕೂಡಾ ವರ್ತಮಾನದಲ್ಲಿದೆ. ನೀವು ಕೇವಲ ಎದ್ದು ನೋಡಬೇಕು, ವರ್ತಮಾನವು ಅನಿವಾರ್ಯವಾದುದೆಂದು, ಅಷ್ಟೆ.
ಪ್ರಶ್ನೆ: ಕೋಪವು ಒಳ್ಳೆಯದೇ?
ಶ್ರೀ ಶ್ರೀ ರವಿಶಂಕರ್:
ನೀವು ಕೋಪವನ್ನು ಯಾವುದಕ್ಕಾದರೂ ಉಪಯೋಗಿಸಲು ಬಯಸಿದರೆ ಮತ್ತು ಅದು ನಿಮ್ಮ ನಿಯಂತ್ರಣದಲ್ಲಿದ್ದರೆ, ಆಗ ಅದು ಒಳ್ಳೆಯದು. ಕೋಪವು ನಿಮ್ಮನ್ನು ನಿಯಂತ್ರಿಸಿದರೆ, ಆಗ ನೀವು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯಾ? ನೀವು ಕೋಪವನ್ನು ಒಂದು ಸಲಕರಣೆಯಾಗಿ ಉಪಯೋಗಿಸಬಹುದು ಆದರೆ ಕೋಪವು ನಿಮ್ಮನ್ನು ಉಪಯೋಗಿಸಲು ತೊಡಗಿದರೆ, ಆಗ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ; ಸದುದ್ದೇಶವೂ ನಾಶವಾಗುತ್ತದೆ. ಹೆಚ್ಚಿನ ಜನರು ಇದನ್ನು ಮಾಡುತ್ತಾರೆ, ಅವರು ಅನ್ಯಾಯದ ವಿರುದ್ಧ  ಹೋರಾಡಬೇಕಾದಾಗ, ತಮ್ಮ ಉದ್ದೇಶವನ್ನು ಕಳಕೊಳ್ಳುತ್ತಾರೆ ಮತ್ತು ಯಾವ ಕಾರಣಕ್ಕಾಗಿ ಅವರು ಹೋರಾಡುತ್ತಾರೋ ಅದು ಸೋಲುತ್ತದೆ.
ತೃತೀಯ ಜಗತ್ತಿನ ದೇಶಗಳಲ್ಲಿ ಮತ್ತು ಪ್ರಪಂಚದ ಎಲ್ಲೆಡೆಗಳಲ್ಲಿ ಬಸ್ಸುಗಳನ್ನು ಹೊತ್ತಿಸುತ್ತಾರೆ, ರೈಲುಗಳನ್ನು ಹೊತ್ತಿಸುತ್ತಾರೆ ಮತ್ತು ತುಂಬಾ ಹಾನಿಯನ್ನುಂಟುಮಾಡುತ್ತಾರೆ. ಪ್ರತಿಯೊಂದು ಗಲಭೆಯ ಹಿಂದೆ, ಅವರು ತಾವು ಅನ್ಯಾಯದ ವಿರುದ್ಧ ಹೋರಾಡುತ್ತಿರುವುದೆಂದು ಯೋಚಿಸುತ್ತಾರೆ; ಯಾವುದೇ ಗಲಭೆಯಿರಲಿ, ಪ್ರಪಂಚದಲ್ಲಿ ಎಲ್ಲಿಯೇ ಇರಲಿ. ಯುದ್ಧ ಎಂಬುದಕ್ಕೆ ನನ್ನ ವ್ಯಾಖ್ಯಾನವೆಂದರೆ - ಕಾರಣಕ್ಕಿರುವ ಕೆಟ್ಟ ಕ್ರಿಯೆ (ಡಬ್ಲ್ಯೂ.ಎ.ಆರ್. (ವಾರ್=ಯುದ್ಧ) - ವರ್ಸ್ಟ್ ಆಕ್ಟ್ ಆಫ್ ರೀಸನ್). ನೀವು ಯುದ್ಧ ಮಾಡಲು ಹೋಗುವುದಕ್ಕೆ ಒಂದು ಕಾರಣವಿರುತ್ತದೆ. ಯುದ್ಧಕ್ಕೆ ಹೋಗುವ ಯಾರೇ ಆದರೂ ಅದನ್ನು ಸಮರ್ಥಿಸುತ್ತಾರೆ. ಆದರೆ ಅದು ಬಹಳ ಹಾನಿಯನ್ನುಂಟುಮಾಡುತ್ತದೆ ಮತ್ತು ನಿಮಗೆ ಏನನ್ನೂ ಕೊಡುವುದಿಲ್ಲ. ಆದುದರಿಂದಲೇ ಒಬ್ಬನು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅಗತ್ಯವಿದೆ. ಶಾಂತಿಯುತವಾದ, ಅಹಿಂಸಾ ರೀತಿಯ ಪ್ರದರ್ಶನವು ಉತ್ತಮವಾದುದು, ಗಾಂಧಿಯ ತತ್ವಗಳಂತೆ. ಇದನ್ನು ನಾವು ಭಾರತದಲ್ಲಿ ಈಗ ಅಗಸ್ಟ್ ನಲ್ಲಿ ಮಾಡಿದೆವು. ನೀವು ವಾರ್ತಾಪತ್ರಿಕೆಗಳಲ್ಲಿ ಇದರ ಬಗ್ಗೆ ಕೇಳಿರಬಹುದು. ಐ.ಎ.ಸಿ. - ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಭ್ರಷ್ಟಾಚಾರದ ವಿರುದ್ಧ ಭಾರತ), ನಾವು ಇದರ ಸಂಸ್ಥಾಪಕ ಸದಸ್ಯರು. ನಾವು ಈ ಚಳುವಳಿಯನ್ನು ದೇಶದಲ್ಲೆಲ್ಲೂ ಒಂದೇ ಒಂದು ಹಿಂಸಾ ಕೃತ್ಯ ಅಥವಾ ಗಲಭೆಯಿಲ್ಲದೆಯೇ ಮಾಡಿದೆವು. ಜೀವನ ಕಲೆಯು ಪ್ರಧಾನ ಪೋಷಕ, ಪ್ರಧಾನ ಮೂಲವಾಗಿತ್ತು ಹಾಗೂ ನಮ್ಮೆಲ್ಲಾ ಸ್ವಯಂ-ಸೇವಕರು, ಯಾವುದೇ ಸಮಾಜ-ವಿರೋಧಿ ಅಂಶಗಳು ಈ ಭ್ರಷ್ಟಾಚಾರ-ವಿರೋಧಿ ಚಳುವಳಿಯನ್ನು ಪ್ರವೇಶಿಸದಂತೆ ಜಾಗರೂಕತೆ ವಹಿಸಿದರು. ಭ್ರಷ್ಟಾಚಾರ ಮತ್ತು ಹಿಂಸೆಯ ವಿರುದ್ಧ ಎದ್ದು ನಿಲ್ಲುವುದು - ಇದು ವೈಪರೀತ್ಯಕ್ಕೆ ತಿರುಗುವ ಸಾಧ್ಯತೆಯಿತ್ತು. ಜನರು ಮನೆಗಳನ್ನು ಹೊತ್ತಿಸಿರುತ್ತಿದ್ದರು ಅಥವಾ ಎಲ್ಲಾ ರೀತಿಯ ತೊಂದರೆಗಳನ್ನು ಮಾಡಿರುತ್ತಿದ್ದರು. ಆದರೆ ಇಲ್ಲ, ಅವರು ಅಹಿಂಸೆಗೆ ಬದ್ಧರಾಗಿದ್ದರು ಮತ್ತು ಅಚಾನಕ್ಕಾಗಿ ಇಡಿಯ ಸಮಯದಲ್ಲಿ, ದೇಶದಲ್ಲಿನ ಅಪರಾಧದ ಪ್ರಮಾಣವು ಕಡಿಮೆಯಾಗಿತ್ತು. ಪ್ರತಿಯೊಬ್ಬರೂ ಒಂದು ಸದುದ್ದೇಶಕ್ಕಾಗಿ ಎದ್ದು ನಿಂತಿದ್ದರು.
ಪ್ರಶ್ನೆ: ಪಾಪವೆಂದರೇನು?
ಶ್ರೀ ಶ್ರೀ ರವಿಶಂಕರ್:
ಪಾಪವೆಂದರೆ, ಯಾವುದು ನಿಮಗೆ ಹಾಗೂ ಇತರರಿಗೆ ದೀರ್ಘಕಾಲೀನ ಬಳಲುವಿಕೆಯನ್ನು ತಂದೊಡ್ಡುತ್ತದೋ ಅದು. ಯಾವುದು ನಿಮಗೆ ಅಲ್ಪಾವಧಿಯ ಸುಖವನ್ನು ಕೊಡುತ್ತದೆಯೋ ಆದರೆ ನಿಮ್ಮ ಉಳಿದ ಜೀವಮಾನದಲ್ಲಿ ಬಳಲುವಿಕೆಯನ್ನು ತಂದೊಡ್ಡುತ್ತದೆಯೋ ಅದು ಪಾಪ. ಆದರೆ ಯಾವುದು ಮೊದಲಿಗೆ ನೋವಿನಂತೆ ಕಾಣಿಸಿಕೊಂಡರೂ ದೀರ್ಘಾವಧಿಯಲ್ಲಿ ನಿಮ್ಮನ್ನು ಮೇಲೆತ್ತುತ್ತದೆಯೋ ಅದು ಪುಣ್ಯ.
ಪ್ರಶ್ನೆ: ಧ್ಯಾನದ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್:
ಮೂರು ರೀತಿಯ ಆಕಾಶಗಳಿವೆ. ಒಂದನೆಯದು ಎಲ್ಲಾ ನಾಲ್ಕು ತತ್ವಗಳಿರುವ ಬಾಹ್ಯ ಆಕಾಶ. ಎರಡನೆಯ ರೀತಿಯ ಆಕಾಶವೆಂದರೆ, ಆಲೋಚನೆಗಳು ಮತ್ತು ಭಾವನೆಗಳು ಉದ್ಭವಿಸುವಂತಹ ಒಳಗಿನ ಆಕಾಶ; ಇದು ಚಿತ್ ಆಕಾಶ ಎಂದು ಕರೆಯಲ್ಪಡುತ್ತದೆ ಮತ್ತು ಮೂರನೆಯ ರೀತಿಯ ಆಕಾಶವಿದೆ, ಅಲ್ಲಿ ಪರಮಸುಖ ಮಾತ್ರವಿದೆ. ಈ ಮೂರು ಆಕಾಶಗಳು ಜೋಡಲ್ಪಟ್ಟಿವೆ - ಬಾಹ್ಯಾಕಾಶ, ಯೋಚನೆಗಳ ಮಧ್ಯವರ್ತಿ ಆಕಾಶ ಅಥವಾ ಸೂಕ್ಷ್ಮ ಶರೀರ ಹಾಗೂ ಪರಮಸುಖ ಮತ್ತು ಪ್ರೀತಿಯ ಕಾರಣಾರ್ಥಕ ಶರೀರ. ಆದುದರಿಂದ, ಪ್ರತಿ ಸಮಯದಲ್ಲೂ ನೀವು ಸ್ವಲ್ಪ ಪ್ರೀತಿ ಅಥವಾ ಸ್ವಲ್ಪ ಸಂತೋಷ ಅಥವಾ ಸ್ವಲ್ಪ ಶಾಂತಿಯನ್ನು ಅನುಭವಿಸುವಾಗ, ನೀವು ಆ ಆಂತರಿಕ ಆಕಾಶದೊಂದಿಗೆ ಸಂಪರ್ಕದಲ್ಲಿರುತ್ತೀರಿ. ನೀವು ಕೇವಲ ಅದನ್ನು ಸ್ಪರ್ಶಿಸಿ ಹೋದರೂ ಅದು ನಿಮ್ಮೊಳಗೆ ಆ ಚೈತನ್ಯವನ್ನು ತುಂಬುತ್ತದೆ. ಆದುದರಿಂದ, ಚೈತನ್ಯದ ವರ್ಧನೆಯಾದಂತೆ ಧ್ಯಾನವು ಆಗುತ್ತದೆ ಮತ್ತು ಧ್ಯಾನವು ಕೂಡಾ ಚೈತನ್ಯವನ್ನು ವರ್ಧಿಸುತ್ತದೆ, ಅದು ಒಂದಕ್ಕೊಂದು ಪೂರಕ. ನಿಮ್ಮ ಚೈತನ್ಯವು ಮೇಲಕ್ಕೆತ್ತಲ್ಪಟ್ಟಾಗ ಧ್ಯಾನವಾಗುತ್ತದೆ.
ಪ್ರಶ್ನೆ: ನಮಗೆ ನಾವೇ ಸಹಾನುಭೂತಿ ತೋರುವುದು ಒಂದು ಸವಾಲಾಗುತ್ತದೆ, ಯಾಕೆ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನಮ್ಮಲ್ಲಿ ನಮ್ಮನ್ನೇ ದೂಷಿಸುವ ಪ್ರವೃತ್ತಿಯಿದೆ. ಆಧ್ಯಾತ್ಮಿಕ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನಿಮ್ಮನ್ನು ನೀವೇ ದೂಷಿಸುವುದನ್ನು ನಿಲ್ಲಿಸಬೇಕು. ಇದೊಂದು ನಿಯಮ. ನೀವು ಈ ನಿಯಮವನ್ನು ಪಾಲಿಸಿದರೆ, ಆಗ ನೀವು ಆಧ್ಯಾತ್ಮಿಕ ಪಥದಲ್ಲಿ ಬಹಳ ಚೆನ್ನಾಗಿ ಪ್ರಗತಿ ಹೊಂದುತ್ತೀರಿ. ನೋಡಿ, ಆಧ್ಯಾತ್ಮವೆಂದರೇನು? ಆಧ್ಯಾತ್ಮಿಕ ಪಥವೆಂದರೇನು? ಅದು ನಿಮ್ಮೊಂದಿಗೆ, ನಿಮ್ಮ ಮೂಲದೊಂದಿಗೆ ನೀವು ಸಂಪರ್ಕಿಸುವುದು. ನಿಮ್ಮೊಂದಿಗೆ ಸಂಪರ್ಕಿಸಲು ಒಳಗೆ ಹೋಗುವುದು. ನೀವು ನಿಮ್ಮನ್ನೇ ದೂಷಿಸುತ್ತಾ ಇದ್ದರೆ, ನೀವು ನಿಮ್ಮ ಸಮೀಪಕ್ಕೆ ಹೋಗಲು ಹೇಗೆ ಸಾಧ್ಯ? ದೂಷಿಸುವ ಒಬ್ಬರ ಜೊತೆಯಿರಲು ನೀವು ಬಯಸಲಾರಿರಿ. ಧ್ಯಾನಕ್ಕಿರುವ ಅತ್ಯಂತ ದೊಡ್ಡ ಅಡ್ಡಿಯೆಂದರೆ ಸ್ವಯಂ-ದೂಷಣೆ. ನೀವು ನಿಮ್ಮನ್ನೇ ದೂಷಿಸಿಕೊಳ್ಳುವಾಗ ನಿಮಗೆ ಶಾಂತವಾಗಿರಲು ಸಾಧ್ಯವಿಲ್ಲ, ನಿಮಗೆ ಒಳಗೆ ಧುಮುಕಲು ಸಾಧ್ಯವಿಲ್ಲ ಮತ್ತು ನಿಮಗೆ ಮುಂದುವರಿಯಲು ಸಾಧ್ಯವಿಲ್ಲ. ಆದುದರಿಂದ ನಿಮ್ಮನ್ನು ನೀವೇ ದೂಷಿಸಬೇಡಿ.
ಪ್ರಶ್ನೆ: ನೃತ್ಯವು ಯಾವುದನ್ನು ವ್ಯಕ್ತಪಡಿಸುತ್ತದೆ?
ಶ್ರೀ ಶ್ರೀ ರವಿಶಂಕರ್:
ಹೌದು, ನೀವು ಸಂತೋಷವಾಗಿರುವಾಗ, ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ಒಂದು ನೃತ್ಯವಾಗುತ್ತದೆ. ನೀವು ನೃತ್ಯ ಮಾಡುತ್ತಾ ನಿಮ್ಮ ಜೀವನದ ಮೂಲಕ ಸಾಗುತ್ತೀರಿ. ಜ್ಞಾನವು, ನೀವು ಎಲ್ಲಾ ಸಂದರ್ಭಗಳನ್ನೂ ನೃತ್ಯ ಮಾಡುತ್ತಾ ಹಾದು ಹೋಗುವಂತೆ ಮಾಡುತ್ತದೆ. ಲಯದಲ್ಲಿ ವಿಸ್ತರಿಸಲ್ಪಟ್ಟ ಒಂದು ಚಲನೆಯು ನೃತ್ಯವಾಗಿದೆ. ಲಯದಲ್ಲಿ ವಿಸ್ತರಿಸಲ್ಪಟ್ಟ ಶಬ್ದವು ಸಂಗೀತವಾಗಿದೆ. ವಿಸ್ತರಿಸಲ್ಪಟ್ಟ ಜೀವನವು ಆಚರಣೆಯಾಗಿದೆ!
ಪ್ರಶ್ನೆ: ಏಕ-ಸರಕಾರ ಪ್ರಪಂಚ ಮತ್ತು ಏಕ-ಕುಟುಂಬ ಪ್ರಪಂಚಗಳ ಬಗ್ಗೆ ನಿಮ್ಮ ವಿಚಾರಗಳೇನು?
ಶ್ರೀ ಶ್ರೀ ರವಿಶಂಕರ್:
ಈಗ ಅತೀ ಹೆಚ್ಚು ಪ್ರಾಯೋಗಿಕವಾಗಿರುವುದು ಏಕ-ಕುಟುಂಬ ಪ್ರಪಂಚ. ಏಕ-ಸರಕಾರ ಪ್ರಪಂಚದ ಬಗ್ಗೆ ಚಿಂತಿಸುವುದನ್ನು ನಾನು ರಾಜಕಾರಣಿಗಳಿಗೆ ಬಿಡುತ್ತೇನೆ. ಅವರು ವರ್ಲ್ಡ್ ಬ್ಯಾಂಕನ್ನು ಸ್ಥಾಪಿಸಿದ್ದಾರೆ, ಆದರೆ ಈಗಿನ ಪ್ರಕಾರ ಒಂದು ಏಕ-ಸರಕಾರ ಪ್ರಪಂಚಕ್ಕೆ ಯಾವುದೇ ರಾಜಕಾರಣಿಯು ಸಿದ್ಧರಾಗುವರೆಂದು ನನಗನಿಸುವುದಿಲ್ಲ. ಆದರೆ ಕನಿಷ್ಠಪಕ್ಷ ಸಂಯುಕ್ತ ದೇಶಗಳು, ಹಿಂದೆ ಉಳಿಯುವ ಬದಲಾಗಿ, ಹೆಚ್ಚು ಬಲಶಾಲಿ ಮತ್ತು ಹೆಚ್ಚು ಜಾಗೃತವಾದರೆ ಅದು ಭೂಮಿಗೆ ಒಳ್ಳೆಯದು.
ಪ್ರಶ್ನೆ: (ಪ್ರೇಕ್ಷಕರಲ್ಲೊಬ್ಬರು ಮೈಕ್ ಹಿಡಿಯದೇ ಅಚಾನಕ್ಕಾಗಿ ಒಂದು ಪ್ರಶ್ನೆಯನ್ನು ಕೇಳಿದರು ಮತ್ತು ಪ್ರಶ್ನೆ ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಕೇಳು, ನೀನು ಉಸಿರಾಡುತ್ತಿದ್ದೀಯಾ? ಹೌದು, ನೀನು ಉಸಿರಾಡುತ್ತಿದ್ದಿ! ಖಂಡಿತಾ. ನಿನಗೆ ಅದು ಗೊತ್ತಿದೆ, ನನಗೆ ಅದು ಗೊತ್ತಿದೆ ಮತ್ತು ಎಲ್ಲರಿಗೂ ಅದು ಗೊತ್ತಿದೆ. ಏನಗುತ್ತಿದೆ? ಗಾಳಿಯು ನಿನ್ನ ಶರೀರವನ್ನು ಪ್ರವೇಶಿಸುತ್ತಿದೆ ಮತ್ತು ಅದೇ ಗಾಳಿಯು ನಿನ್ನ ಶರೀರದಿಂದ ಹೊರಗೆ ಹೋಗಿ ಇಡೀ ಪ್ರಪಂಚವನ್ನು ಸುತ್ತುತ್ತಿದೆ. "ಇದು ನನ್ನ ಗಾಳಿ" ಎಂದು ನಿನಗೆ ಹೇಳಲು ಸಾಧ್ಯವೇ? ಸೂಕ್ಷ್ಮವಾಗಿ ಹೋದಷ್ಟೂ ನೀನು ಅದನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಅದನ್ನು ಸ್ವಂತದ್ದಾಗಿಸಿಕೊಳ್ಳಲು ಸಾಧ್ಯವಿಲ್ಲ. ಸ್ಥೂಲದ ಮಟ್ಟದಲ್ಲಿ ನೀನು ಹೇಳಬಹುದು, "ಇದು ನನ್ನ ಶರೀರ", ಖಂಡಿತಾ! ಆಗಲೂ ಕೂಡಾ, ನಿಮ್ಮ ಶರೀರವು ಎಲ್ಲಾ ಸಮಯದಲ್ಲೂ ಕಂಪನಗಳನ್ನು ಅಥವಾ ಚೈತನ್ಯವನ್ನು ಹೊರಸೂಸುತ್ತಿರುತ್ತದೆ. ನೀವು ಬ್ರಹ್ಮಾಂಡದಿಂದ ಚೈತನ್ಯವನ್ನು ಪಡೆಯುತ್ತಿರುತ್ತೀರಿ ಮತ್ತು ಕಳೆದುಕೊಳ್ಳುತ್ತಿರುತ್ತೀರಿ. ಅಲ್ಲೊಂದು ನಿರಂತರವಾದ ಪ್ರವಾಹವಿರುತ್ತದೆ ಮತ್ತು ನಿಮ್ಮ ಶರೀರದಲ್ಲಿರುವ ಪ್ರತಿಯೊಂದು ಕೋಶವೂ ಬದಲಾಗುತ್ತಿರುತ್ತದೆ. ನೀವು ಎಲ್ಲಾ ಸಮಯದಲ್ಲೂ ಚೈತನ್ಯವನ್ನು ಅದಲು ಬದಲು ಮಾಡುತ್ತಿರುತ್ತೀರಿ. ನೀವೊಂದು ನಿರ್ದಿಷ್ಟ ಕಂಪನ, ಒಂದು ತರಂಗ, ಒಂದು ಫ್ರೀಕ್ವೆನ್ಸಿ (ಆವರ್ತನ) ಅಲ್ಲದೆ ಬೇರೇನೂ ಅಲ್ಲ. ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಸೂಸನ್ ಎಂದು ಕರೆಯಲ್ಪಡುತ್ತದೆ, ಇನ್ನೊಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಜೆಫ್ರಿ ಎಂದು ಕರೆಯಲ್ಪಡುತ್ತದೆ ಮತ್ತು ಇನ್ನೊಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಮೈಕೆಲ್ ಎಂದು ಕರೆಯಲ್ಪಡುತ್ತದೆ. ನೀವು ಬಹುತೇಕ ಒಂದು ನಿರ್ದಿಷ್ಟ ಟಿವಿ ಚ್ಯಾನೆಲ್ ನಂತೆ. ಅದು, ಒಂದು ಗೋಪುರದಿಂದ ವಿಭಿನ್ನ ಚ್ಯಾನೆಲ್ ಗಳು ಪ್ರಸಾರವಾಗುವಂತೆ ಮತ್ತು ಯಾರದ್ದೇ ಮನೆಯಲ್ಲಿರುವ ಯಾವುದೇ ಟಿವಿಯಿಂದ ಆ ಚ್ಯಾನೆಲ್ ಗಳನ್ನು ಹಿಡಿಯಲು ಸಾಧ್ಯವಾಗುವಂತೆ. "ಬಿಬಿಸಿ ಯು ನನ್ನ ಟಿವಿಯಲ್ಲಿ ಬರುತ್ತಿದೆ, ಅದು ಪಕ್ಕದ ಮನೆಯವರ ಟಿವಿಯಲ್ಲಿ ಬರಲು ಹೇಗೆ ಸಾಧ್ಯ?" ಎಂದು ನೀವು ಹೇಳಲು ಸಾಧ್ಯವಿಲ್ಲ. ಅವುಗಳು ಅದೇ ತರಂಗಗಳು.
ನಿಮ್ಮ ಪ್ರಜ್ಞೆ ಕೂಡಾ ಒಂದು ತರಂಗ ಮತ್ತು ಅದಕ್ಕೆ ಹಲವಾರು ಸಾಧ್ಯತೆಗಳಿವೆ, ಹಲವಾರು ದಾರಿಗಳಿವೆ. ಅದು ಸೂರ್ಯನಂತೆ. ಸೂರ್ಯನು ಸಂಪೂರ್ಣವಾಗಿ ನಿಮ್ಮ ಕಿಟಿಕಿಯೊಳಗೆ ಬಂದಾಗ ನೀವು, "ಓ, ಸೂರ್ಯನು ನನ್ನ ಕಿಟಿಕಿಯೊಳಗೆ ಬಂದಿದ್ದಾನೆ, ನಾನು ಸೂರ್ಯನನ್ನು ಹಿಡಿದಿದ್ದೇನೆ!" ಎಂದು ಹೇಳುವಂತಿಲ್ಲ. ಇಲ್ಲ, ಅದೇ ಸೂರ್ಯನು ಪಕ್ಕದ ಮನೆಯವರ ಕಿಟಿಕಿಯಲ್ಲಿ ಹಾಗೂ ಪ್ರಪಂಚದೆಲ್ಲೆಡೆಗಳಲ್ಲೂ ಕೂಡಾ ಸಂಪೂರ್ಣವಾಗಿ ಇರುತ್ತಾನೆ. ಇದು ಗೋಳಾತ್ಮಕ ಚಿಂತನೆ. ನಾವು ರೇಖಾತ್ಮಕ ಚಿಂತನೆಯಲ್ಲಿ ತರಬೇತಿ ಪಡೆದಿದ್ದೇವೆ. ಏನಾದರೊಂದು ಹುಟ್ಟಿದರೆ ಅದು ಸಾಯಲೇಬೇಕು - ಇದು ರೇಖಾತ್ಮಕ ಚಿಂತನೆ. ಗೋಳಾತ್ಮಕವಾಗಿ ಚಿಂತಿಸಿ. ವೇದಾಂತವು ನಿಮಗೆ ಗೋಳಾತ್ಮಕ ಚಿಂತನೆಯನ್ನು ನೀಡುತ್ತದೆ. ಪ್ರಾಚೀನ ಜನರು ಗೋಳಾತ್ಮಕ ಚಿಂತನೆಯನ್ನು ಅರಿತಿದ್ದರು ಮತ್ತು ಅದಕ್ಕೇ ಅವರು ’ಬಹುಶಃ’ ಎಂಬ ಪದವನ್ನು ಬಳಸುತ್ತಿದ್ದರು; ಬಹುಶಃ ಇದು ಮತ್ತು ಬಹುಶಃ ಅದು. ಜೈನ ಧರ್ಮ ಮತ್ತು ಜೈನ ತತ್ವಜ್ಞಾನದಲ್ಲಿ ಕೂಡಾ ’ಬಹುಶಃ’ ಎಂಬುದನ್ನು ಬಳಸುತ್ತಾರೆ. ಇದು ತಿಳಿಯಲು ಒಂದು ತುಂಬಾ ಆಸಕ್ತಿಕರ ವಿಷಯ. ಗೋಳಾತ್ಮಕ ಚಿಂತನೆಯೊಂದಿಗೆ ಬುದ್ಧಿಯು ಪ್ರಚೋದಿಸಲ್ಪಡುತ್ತದೆ ಮತ್ತು ಅದು ಸೀಮಿತವಾದುದರ ಆಚೆಗೆ ಹೋಗಿ ಸತ್ಯವನ್ನು ಅರಿಯಲು ಶಕ್ತಿಯನ್ನು ಪಡೆಯುತ್ತದೆ.
ಆದುದರಿಂದ ಸೂರ್ಯನು ಇಲ್ಲಿ ಸಂಪೂರ್ಣವಾಗಿದ್ದಾನೆ ಮತ್ತು ಅಲ್ಲಿಯೂ ಸಂಪೂರ್ಣವಾಗಿದ್ದಾನೆ ಹಾಗೂ ನೀವು ಕೇವಲ ಒಂದು ಕಂಪನ. ಶರೀರವಾಗಿ ನೀವು ಎಲ್ಲಾ ಕಡೆಗಳಲ್ಲೂ ಇರಲಾರಿರಿ, ಆದರೆ ಪ್ರಜ್ಞೆಯಾಗಿ ನೀವು ಹಲವು ಜಾಗಗಳಲ್ಲಿ ಇರಬಲ್ಲಿರಿ. ನೀವೊಂದು ಹೂವನ್ನು ಸ್ಪರ್ಶಿಸಿದರೆ, ನಿಮ್ಮ ಕಂಪನಗಳು ಆ ಹೂವಿಗೆ ಹೋಗುತ್ತವೆ. ನೀವು ಬಯೋಮೆಟ್ರಿಕ್ ಬೀಗಗಳ ಬಗ್ಗೆ ಕೇಳಿದ್ದೀರಾ? ಅವುಗಳು, ನೀವು ಅವುಗಳನ್ನು ಮುಟ್ಟಿದಾಗ ಮಾತ್ರ ತೆರೆಯುವ ಬೀಗಗಳು. ಈ ಬೀಗಗಳ ಬಗ್ಗೆ ನೀವು ೨೦ ರಿಂದ ೨೫ ವರ್ಷಗಳ ಮೊದಲು ಮಾತನಾಡಿದ್ದರೆ, ಜನರು ನಿಮ್ಮನ್ನು ನೋಡಿ ನಗುತ್ತಿದ್ದರು ಮತ್ತು ನಿಮಗೆ ತಲೆ ಸರಿಯಿಲ್ಲವೆಂದು ಅಂದುಕೊಳ್ಳುತ್ತಿದ್ದರು. ಎಲ್ಲವೂ ಸಾಧ್ಯವಿದೆ.
ಆದುದರಿಂದ ಎಲ್ಲವೂ ಕೇವಲ ಒಂದು ತರಂಗ ಕ್ರಿಯೆ. ಇಡಿಯ ವಿಶ್ವವು ಒಂದು ತರಂಗ; ಪ್ರಜ್ಞೆಯ ಒಂದು ಕ್ಷೇತ್ರ.
ಪ್ರಶ್ನೆ: ಔಷಧೋಪಚಾರವನ್ನು ನಿರಾಕರಿಸುವುದನ್ನು ಆತ್ಮಹತ್ಯೆಯೆಂದು ಪರಿಗಣಿಸಲಾಗುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ! ಯಾರಾದರೂ ಔಷಧೋಪಚಾರವನ್ನು ನಿರಾಕರಿಸಿ, ಶರೀರವು ಅದರ ನೈಸರ್ಗಿಕ ನಿಯಮವನ್ನು ಅನುಸರಿಸಲಿ ಎಂದು ಬಯಸಿದರೆ ಅದು ಆತ್ಮಹತ್ಯೆಯಲ್ಲ. ಅದು ಪರವಾಗಿಲ್ಲ. ಆದರೆ ಯಾರಾದರೂ ಕ್ಲೇಶದಿಂದ ತಮ್ಮನ್ನು ತಾವೇ ಕುತ್ತಿಗೆ ಹಿಸುಕಲು ಪ್ರಯತ್ನ ಪಟ್ಟು ತಮ್ಮ ಜೀವನವನ್ನು ಕೊನೆಗೊಳಿಸಿದರೆ, ನನ್ನ ದೃಷ್ಟಿಯಿಂದ ಆಗ ಅದು ಆತ್ಮಹತ್ಯೆ. ಅದನ್ನು ನಾನು ಆತ್ಮಹತ್ಯೆಯೆಂದು ಕರೆಯುತ್ತೇನೆ. ಕೆಲವೊಮ್ಮೆ ಕೋಮದಲ್ಲಿರುವವರಿಗೆ ಬಲವಂತವಾಗಿ ಆಹಾರ ತಿನ್ನಿಸಲಾಗುತ್ತದೆ ಅಥವಾ ದೀರ್ಘಕಾಲದ ವರೆಗೆ ಅವರನ್ನು ಒಂದು ಯಂತ್ರದಲ್ಲಿರಿಸಲಾಗುತ್ತದೆ. ಅಂಥಹವರಿಗೆ ನಾನು ಹೇಳುವುದೇನೆಂದರೆ, ಅವರನ್ನು ಸಹಜವಾಗಿ ಹೋಗಲು ಬಿಡಿ, ಅವರಿಗೆ ಬಲವಂತವಾಗಿ ಉಣ್ಣಿಸಬೇಡಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಬ್ಬರು ಬದುಕುಳಿಯಲಾರರು ಮತ್ತು ಮೊದಲಿನ ಸಹಜ ಸ್ಥಿತಿಗೆ ಬರಲಾರರು ಎಂದು ನಿಮಗೆ ತಿಳಿದಿರುವಾಗ ಅವರನ್ನು ಒಂದು ತರಕಾರಿಯಂತೆ ಜೀವಂತವಾಗಿರಿಸುವುದರಲ್ಲಿ ಅರ್ಥವಿಲ್ಲ. ನಾನು ಹೇಳುವುದೇನೆಂದರೆ, ಎಲ್ಲಾ ಕೊಳವೆಗಳನ್ನು ತೆಗೆದುಬಿಡಿ ಮತ್ತು ಪ್ರಕೃತಿಗೆ ಅದರ ಕಾರ್ಯವನ್ನು ಮುಂದುವರಿಸಲು ಬಿಡಿ.