ಸೋಮವಾರ, ಮಾರ್ಚ್ 25, 2013

ದಿನವೂ ಹೊಸಬರೋರ್ವರೊ೦ದಿಗೆ ಸ್ನೇಹ ಬೆಳೆಸಿಕೊಳ್ಳಿ

ಮಾರ್ಚ್ ೨೫, ೨೦೧೩
ಸ್ಯಾ೦ಟಿಯಾಗೊ, ಕ್ಯಾಲಿಫ಼ೋರ್ನಿಯಾ, ಅಮೆರಿಕ ಸ೦ಯುಕ್ತ ಸ೦ಸ್ಥಾನ



ಸ್ಯಾ೦ಟಿಯಾಗೊ, ಕ್ಯಾಲಿಫ಼ೋರ್ನಿಯಾದಲ್ಲಿ ಜರುಗಿದ ’ನಾನ್ ವಯೊಲೆನ್ಸ್: 
ನೋ ಹೈಯರ್ ಕಾಲಿ೦ಗ್’ ಎ೦ಬ ವಿಶೇಷ ಕಾರ್ಯಕ್ರಮವನ್ನು 
ಪರಮಪೂಜ್ಯ ಗುರೂಜಿ ಶ್ರೀ ಶ್ರೀ ರವಿಶ೦ಕರ್ ಉದ್ಘಾಟಿಸುತ್ತಿರುವುದು.

ಸ್ನೇಹದ ಪರಿಧಿಯಲ್ಲಿ ನಾವು ಬದುಕಬೇಕು.
ತರಗತಿಯೊ೦ದನ್ನು ಪ್ರವೇಶಿಸಿ ಮಕ್ಕಳನ್ನು ಕೇಳಿ, ’ನಿನಗೆ ಎಷ್ಟು ಜನ ಸ್ನೇಹಿತರಿದ್ದಾರೆ?’
ನಮ್ಮ ಮಕ್ಕಳಿಗೆ ಸ್ನೇಹದಿ೦ದಿರುವುದನ್ನು ನಾವು ಹೇಳಿಕೊಡಬೇಕು. ಕ್ರೋಧವನ್ನು ತಡೆಗಟ್ಟುವ ಮಾರ್ಗವದು. ದಿನವೂ ಹೊಸಬರೋರ್ವರೊ೦ದಿಗೆ ಸ್ನೇಹ ಬೆಳೆಸಿಕೊಳ್ಳುವ ಸ೦ಕಲ್ಪವನ್ನು ಅವರಲ್ಲಿ ಉ೦ಟುಮಾಡಿ, ನ೦ತರ ನೋಡಿ ಅದೆ೦ತು ಅವರ ನಡವಳಿಕೆ ಸ೦ಪೂರ್ಣವಾಗಿ ಬದಲಾಗುತ್ತದೆಯೆ೦ದು.
ಅಹಿ೦ಸಾ ಗುಣವನ್ನು ಹಸುಳೆಗಳಲ್ಲಿ ಬೆಳೆಸಲು ಹೊರ ತರಬೇತಿಯ ಅಗತ್ಯವಿಲ್ಲ. ಅದು ಸಹಜವಾಗಿ ಮನದಲ್ಲೇರ್ಪಡುವ೦ಥದ್ದು. ಆದರೂ, ಸಹಜವಾದ ಬದುಕಿನ ಸ್ವಭಾವಗಳಿ೦ದ ಬಹಳ ದೂರದವರೆಗೆ ನಾವೀಗಾಗಲೇ ಸಾಗಿರುವ ನಿಮಿತ್ತ ಮಕ್ಕಳಲ್ಲಿ ಅಹಿ೦ಸಾ ಪ್ರವೃತ್ತಿಯನ್ನು ಪ್ರೇರೇಪಿಸಬೇಕಾದ೦ಥ ಪರಿಸ್ಥಿತಿಯೇರ್ಪಟ್ಟಿದೆ. ಓರ್ವ ಹೀರೋ ಎನ್ನಿಸಿಕೊಳ್ಳುವ ಅಪೇಕ್ಷೆ ಇರುವವನಿಗೆ ದಬಾಯಿಸಲು ಗೊತ್ತಿರಬೇಕು ಎ೦ಬ ಭಾವನೆ ಮಕ್ಕಳಲ್ಲಿದೆ. ಈ ಭಾವನೆ ಬದಲಾಗಬೇಕು.
ಅಹಿ೦ಸಾ ಪ್ರವೃತ್ತಿಗೆ ಅರ್ಹವಾದ ಗೌರವವೂ, ಹೆಮ್ಮೆಯೂ ಹಿ೦ದಿರುಗಬೇಕು. ಕೋಮುಗಳ ನಡುವೆ ಸ೦ವರ್ಕದ ಕೊ೦ಡಿ ಏರ್ಪಟ್ಟು, ಪರಸ್ಪರರಿಗೆ ಬೇಕಾದವರು ನಾವೆ೦ಬ ವಾತಾವರಣ ನಿರ್ಮಾಣವಾಗಲೆ೦ದು ನಾನು ಅಪೇಕ್ಷಿಸುತ್ತೇನೆ. ಹಾಗಾದಾಗ ಸಮಾಜದಲ್ಲಿ ಭಯ, ಅತ೦ಕ, ಅಸುರಕ್ಷಿತತೆಗಳಿರುವುದಿಲ್ಲ. ಪ್ರೇಮ, ಅನುಕ೦ಪಗಳು ಮು೦ಚೂಣಿಯಲ್ಲಿರುತ್ತವೆ. ಸಮಸ್ತ ಮಾನವರ ಸಹಜ ಸ್ವಭಾವವಾದ ಪ್ರೇಮ, ಅನುಕ೦ಪಗಳನ್ನು ಅಗ್ರ ಪ೦ಕ್ತಿಯಲ್ಲಿ ಪ್ರತಿಷ್ಠಾಪಿಸಬೇಕಾದ ಸಮಯವಿ೦ದು ಎದುರಾಗಿದೆ. ಎಲ್ಲೆಡೆಯಿ೦ದ ಸಮಾಜವನ್ನು ಆವರಿಸಿದ ಮೃಗೀಯ ಪ್ರವೃತ್ತಿಗಳನ್ನು ನಿರ್ನಾಮಗೊಳಿಸಬೇಕಾಗಿದೆ.
ಅನುಕ೦ಪವಿಲ್ಲದ ಏಕೈಕ ವ್ಯಕ್ತಿ ಸಹ ಭೂಮಿಯ ಮೇಲಿಲ್ಲ. ಆ ಸ್ವಭಾವ ಮರೆಯಾಗಿದೆ ಅಷ್ಟೆ. ಅದು ಎದ್ದು ಕಾಣಲು ತಡೆಯೊಡ್ಡಿರುವ ಮುಸುಕನ್ನು ಸರಿಸಬೇಕಾಗಿದೆ.

ಶುಕ್ರವಾರ, ಮಾರ್ಚ್ 22, 2013

ನಾವೊಂದು ಅಂತಃ ಸಂಪರ್ಕವುಳ್ಳ ಜಗತ್ತಿನಲ್ಲಿ ವಾಸವಾಗಿದ್ದೇವೆ

ಸ್ಲೊವೇನಿಯಾ, ಯೂರೋಪ್
೨೨ ಮಾರ್ಚ್ ೨೦೧೩

(ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಸ್ಲೊವೇನಿಯಾದಲ್ಲಿ ವ್ಯವಹಾರೋದ್ಯಮ ನಾಯಕರ ಮತ್ತು ವೃತ್ತಿವೇತ್ತರ ಗುಂಪೊಂದರ ದಿ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಿಂಪೋಸಿಯಂ ಆನ್ ಎಥಿಕ್ಸ್ ಇನ್ ಬ್ಯುಸಿನೆಸ್ಸ್, ಎಂಬ ಸಮಾವೇಶದಲ್ಲಿ ಮಾತನಾಡಿದರು.

ಈ ವಾರ್ಷಿಕ ಸಮಾವೇಶದಲ್ಲಿ, ವ್ಯವಹಾರ ರಂಗ, ರಾಜನೀತಿ, ವ್ಯಾಸಂಗ, ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳ ನಾಯಕರು ಸೇರುತ್ತಾರೆ, ಅಲ್ಲಿ ಅವರು ಎಲ್ಲವನ್ನೂ ಒಳಗೊಂಡಂಥ ಮತ್ತು ಮುಂದುವರಿಯಬಲ್ಲಂಥ ಅಭಿವೃದ್ಧಿಯನ್ನು ಬೆಂಬಲಿಸುವ ಹೊಸ ನಾಯಕತ್ವ ವಿಧಗಳ ಕುರಿತು ಮಾತುಕತೆ ನಡೆಸುತ್ತಾರೆ. ಇದು ನಾಯಕತ್ವದ ಮನೋವೃತ್ತಿಯುಳ್ಳವರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಇಂದಿನ ಸವಾಲುಗಳೊಂದಿಗೆ ವ್ಯವಹರಿಸುವಲ್ಲಿ ನೀತಿಪರ ವ್ಯವಹಾರದ ಬೆಲೆಯ ಕುರಿತು ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಒಂದು ಮಂಚವನ್ನು ನೀಡುತ್ತದೆ.

ದಿ ವರ್ಲ್ಡ್ ಫೋರಂ ಫಾರ್ ಎಥಿಕ್ಸ್ ಇನ್ ಬ್ಯುಸಿನೆಸ್.ನ ಒಂದು ಹೆಜ್ಜೆಯಾಗಿದೆ ದಿ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಿಂಪೋಸಿಯಂ ಆನ್ ಎಥಿಕ್ಸ್ ಇನ್ ಬ್ಯುಸಿನೆಸ್ಸ್. ಈ ಫೋರಂ ಒಂದು ಜನ-ಹಿತಾಸಕ್ತಿಯ ನೋಂದಾಯಿತ ಪ್ರತಿಷ್ಠಾಪನೆಯಾಗಿದೆ, ಈ ಭೌಗೋಳೀಕೃತ ಜಗತ್ತಿನ ವ್ಯವಹಾರೋದ್ಯಮದಲ್ಲಿ ಕಡೆಗಣಿಸಲಾಗದOಥ ನೀತಿತತ್ತ್ವದ ಆಧಾರದವನ್ನು ಅನುಸರಿಸುವ ಮತ್ತು ದೃಢಪಡಿಸುವ ಗುರಿ ಇದರದಾಗಿದೆ.)

ಭಾಸದರೇ, ಮಹನೀಯರಾದ ಸ್ಲೊವೇನಿಯಾದ ರಾಷ್ಟ್ರಾಧ್ಯಕ್ಷರೇ ಮತ್ತು ಯೂರೋಪ್ ಪಾರ್ಲಿಮೆಂಟ್.ನ ಸದಸ್ಯರೇ, ಮತ್ತು ಸುವ್ಯವಹಾರ ಹಾಗೂ ವ್ಯಾಪಾರೋದ್ಯಮ ವೇದಿಕೆ, ನಿಮ್ಮೆಲ್ಲರಿಗೂ ಶುಭದಿನ. ನಾನುನಿಮ್ಮೆಲ್ಲರೊಂದಿಗೂ ಈ ಸುಂದರ ದಿನದಂದು ಈ ಸುಂದರ ಸ್ಥಳದಲ್ಲಿ ಇರಲು ಸಂತುಷ್ಟನಾಗಿದ್ದೇನೆ.

ನೀವು ಗಮನಿಸಿದ್ದೀರೇ, ಹೂಳೆಡೆ(ರುದ್ರಭೂಮಿ)ಯ ಸುತ್ತ ನಡೆದಾಗ, ನೀವು ಏನೋ ಬರೆದದ್ದನ್ನು ನೋಡುತ್ತೀರಿ: ಇಂಥಿಂಥವರು, ಇಂಥಿಥ ದಿನದಂದು ಜನಿಸಿದ್ದರು ಮತ್ತು ಇಂಥಿಂಥ ದಿನದಂದು ತೀರಿಕೊಂಡರು ಎಂದು. ಅವರು ಈ ಎರೆಡು ದಿನಗಳ ಮಧ್ಯೆ ಜೀವಿಸಿದರು ಎಂದು ಸೂಚಿಸುವುದಿಲ್ಲ!

ಜೀವನವು ಆದರಿಸಲ್ಪಡತಕ್ಕದ್ದು. ಸುವ್ಯವಹಾರ ಅಥವಾ ನೀತಿತತ್ತ್ವ ಎಂದರೆ ಕೇವಲ ಜನನ ಮತ್ತು ಮರಣದ ನಡುವಿನ ಆ ಸಮಯವನ್ನು ಆದರಿಸುವುದಾಗಿದೆ. ಇದು ನೀತಿತತ್ತ್ವದ ಮೂಲ ನಿಯಮವಾಗಿದೆ- ಇತರರು ನಮಗೆ ಏನನ್ನು ಮಾಡಬಾರದು ಎಂದು ನಮಗಿದೆಯೋ, ನಾವು ಅದನ್ನು ಇತರರಿಗೆ ಮಾಡುವುದಿಲ್ಲ.

ನೀವೊಂದು ವ್ಯಾಪಾರ ನಡೆಸುತ್ತಿದ್ದೀರೆಂದು ಕಲ್ಪಿಸಿಕೊಳ್ಳಿ, ಮತ್ತು ನಿಮ್ಮ ಉದ್ಯೋಗಿಗಳು ಯಾವುದೇ ನೀತಿತತ್ತ್ವ ಮತ್ತು ಶಿಸ್ತನ್ನು ಪಾಲಿಸುವುದಿಲ್ಲ. ನಿಮಗೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆಯೇ? ’ಖಂಡಿತ ಇಲ್ಲ!’ ಎಂಬುದು ಖಚಿತವಾದ ಉತ್ತರ.

ನಾವು ನಮ್ಮ ಸುತ್ತಲಿನ ಜನರು ಪ್ರಾಮಾಣಿಕರಾಗಿರಬೇಕು, ಸಮಗ್ರರು, ಜವಾಬ್ದಾರರು ಮತ್ತು ಸದಾಚಾರಿಗಳಾಗಿರಬೇಕು ಎಂದು ಅಪೇಕ್ಷಿಸುತ್ತೇವೆ. ನಾವು ಬ್ಯಾಂಕುಗಳು ಪ್ರಾಮಾಣಿಕವಾಗಿರಬೇಕು, ಹೊಣೆವಹಿಸುವಂಥದ್ದಾಗಿರಬೇಕು ಮತ್ತು ವಿಶ್ವಾಸಾರ್ಹವಾಗಿರಬೇಕು ಎಂದು ಅಪೇಕ್ಷಿಸುತ್ತೇವೆ. ಹೇಗಿದ್ದರೂ, ನಾವು ನಮ್ಮ ವ್ಯಾಪಾರ ಮಾಡುವಾಗ, ನಾವು ನೀತಿ-ನಿಯತ್ತನ್ನು ಪಾಲಿಸದೆ ಇದ್ದು, ಆದರೆ ಉಳಿದವರು ನಿಯತ್ತಿನಿಂದ ಇರಬೇಕು ಎಂದು ಅಪೇಕ್ಷಿಸಿದರೆ, ನಾವು ಒಳ್ಳೆಯ ಉದಾಹರಣೆ ವಹಿಸುತ್ತಿಲ್ಲ. ಮೂಲತಃ ಬದಲಾಗಿರಬೇಕಾದದ್ದು ಇದೇ- ಇತರರಿಂದ ನಮ್ಮ ಅಪೇಕ್ಷೆಗಳು ಮತ್ತು ನಮ್ಮ ಸ್ವಂತ ನಡವಳಿಕೆ.

ಕಮ್ಯೂನಿಸ್ಮ್(ಸಮತಾವಾದಿತ್ವ) ಇಳಿಮುಖವಾಗಲು ಸುಮಾರು ಹತ್ತು ವರ್ಷ ಕಾಲ ತೆಗೆದುಕೊಂಡಿತು, ಆದರೆ ಬಂಡವಾಳ ಪದ್ಧತಿ(ಕ್ಯಾಪಿಟಲಿಸ್ಮ್) ಕುಸಿಯಲು ಕೇವಲ ಸ್ವಲ್ಪ ತಿಂಗಳು ಸಾಕಾಯಿತು. ಏಕೆ? ಅದು ಕೇವಲ ಸ್ವಲ್ಪ ಮಂದಿಯ ದುರಾಸೆಯಿಂದ ಲೋಕದ ಮಿಲಿಯಗಟ್ಟಲೆ ಜನರು ನರಳಬೇಕಾಯಿತು.

ಮಾನವತೆ ಇಲ್ಲದೆ, ದಯೆಯಿಲ್ಲದೆ, ಜವಾಬ್ದಾರಿಯ ಒಂದು ಭಾವವಿಲ್ಲದೆ, ಯಾವುದೇ ತತ್ತ್ವ(’ಇಸ್ಮ್’) ಕೆಲಸಮಾಡುವುದಿಲ್ಲ. ಸಮತಾವಾದಿತ್ವ ನಡೆಯುವುದಿಲ್ಲ, ಬಂಡವಾಳಶಾಹಿ ನಡೆಯುವುದಿಲ್ಲ, ಮತ್ತು ಪ್ರತಿ ತತ್ತ್ವವೂ(’ಇಸ್ಮ್’) ನಮಗೆ ಮಾನವತೆ ಇಲ್ಲದಿದ್ದರೆ ಸೋತುಹೋಗುತ್ತದೆ. ಮಾನವತೆಯೊಂದಿಗೆ ವ್ಯವಹಾರ ಎಂಬುದನ್ನು ನಾನು ವ್ಯವಹಾರದಲ್ಲಿನ ನೀತಿತತ್ತ್ವ ಅಥವಾ ಸುವ್ಯವಹಾರ ಎಂದು ಕರೆಯುತ್ತೇನೆ.

ನಾವು ಭ್ರಷ್ಟಾಚಾರವನ್ನು ದಯೆಯೊಂದಿಗೆ ಬದಲಾಯಿಸಬೇಕು(ಮಾರ್ಪಡಿಸಬೇಕು). ನಾವು ಬದ್ಧತೆ ಮತ್ತು ವಿಶ್ವಾಸವನ್ನು ಪುನಃಸ್ಥಾಪಿಸಬೇಕು. ವಿಶ್ವಾಸವು ವ್ಯವಹಾರದ ಬೆನ್ಮೂಳೆಯಾಗಿದೆ.

ನಾವು ಇತರರು ನಮ್ಮ ವಿಶ್ವಾಸವನ್ನು ಉಳಿಸಬೇಕೆಂದು ಅಪೇಕ್ಷಿಸುತ್ತೇವೆ, ಆದರೆ ನಾವು ಅದನ್ನು ಉಳಿಸದಿದ್ದರೆ, ಆಗ ಅದು ನೀತಿಪರತೆಯ ಕೊರತೆಯಾಗಿದೆ. ಹಾಗಾಗಿ, ನಾವು ಇತರರು ನಮ್ಮ ವಿಶ್ವಾಸವನ್ನು ಉಳಿಸಬೇಕೆಂದು ಹೇಗೆ ಅಪೇಕ್ಷಿಸುತ್ತೇವೋ; ನಾವು ಅವರ ವಿಶ್ವಾಸವನ್ನು ಉಳಿಸಬೇಕು. ಆಗ ಎಲ್ಲರಿಗೂ ಬೇಕಾಗುವಂಥದ್ದು ಈ ಭೂಮಿಯ ಮೇಲೆ ಸಾಕಷ್ಟಿದೆ.

ಮಹಾತ್ಮಾ ಗಾಂಧಿ ಹೇಳಿದ್ದರು, ’ಈ ಭೂಮಿ ಪ್ರತಿಯೊಬ್ಬರ ಅಗತ್ಯ ಪೂರೈಸಲು ಬೇಕಾದುದನ್ನು ಸಾಕಷ್ಟು ಹೊಂದಿದೆ, ಆದರೆ ಪ್ರತಿಯೊಬ್ಬರ ದುರಾಸೆಗಳನ್ನು ಪೂರೈಸುವುದಕ್ಕಾಗಿ ಅಲ್ಲ.’

ದುರಾಸೆಯನ್ನು ಸೇವೆಗೆ, ಒಂದು ಸಾಮಾಜಿಕ ಹೊಣೆಗಾರಿಕೆಗೆ ಮಾರ್ಪಡಿಸಬೇಕಾಗಿದೆ. ವಸ್ತುಗಳನ್ನು ಉತ್ಪಾದಿಸುವುದು ಸಾಲದು, ನಾವು ಜನರನ್ನು ಈ ವಸ್ತುಗಳನ್ನು ಕೊಂಡುಕೊಳ್ಳುವಷ್ಟು ಸಶಕ್ತರನ್ನಾಗಿಸಬೇಕು. ನೀವು ಅತ್ಯುತ್ತಮ ಟಿ.ವಿ.ಸೆಟ್ಗಳನ್ನು ಉತ್ಪಾದಿಸುತ್ತೀರಿ, ಆದರೆ ಜನರು ಬಡವರಾಗಿದ್ದರೆ, ಅವರಿಗೆ ಅದನ್ನು ಕೊಂಡುಕೊಳ್ಳಲಾಗುವುದಿಲ್ಲ, ಆಗ ಅದು ನಿಮ್ಮನ್ನೂ ನಿಧಾನಿಸುತ್ತದೆ.

ನಾವೊಂದು ಅಂತಃ ಸಂಪರ್ಕಿತ, ಅಂತರ್ಸಂಬಂಧಿತ ಜಗತ್ತಿನಲ್ಲಿ ವಾಸವಾಗಿದ್ದೇವೆ. ನಮ್ಮ ಪ್ರತಿಯೊಂದು ಚಲನೆಯೂ ಈ ಸಮಾಜದ ಪ್ರತಿಯೊಬ್ಬರನ್ನೂ ಪ್ರಭಾವಿಸುತ್ತದೆ. ನಾವು ಏನನ್ನು ಒದಗಿಸುತ್ತೇವೋ ಅದು ಈ ಸಮಾಜದ ಬೆಳವಣಿಗೆ ಅಥವಾ ಅಳಿವನ್ನು ಪ್ರಭಾವಿಸುತ್ತದೆ ಎಂಬ ವರ್ತಮಾನದ ಅರಿವು ಇರುವುದರಿಂದ, ಅದು ಇಂದಿನ ವ್ಯವಹಾರ ಸಮುದಾಯದಲ್ಲಿ ಬಹಳ ಅಗತ್ಯವಾಗಿರುವ ಹೊಣೆಗಾರಿಕೆಯನ್ನು ತರುತ್ತದೆ.

ಇಂದಿನ ದಿನಗಳಲ್ಲಿ ಜನರು ಇನ್ನೂ ಹೆಚ್ಚು ಅರಿವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ನಾನು ಸಂತುಷ್ಟನಾಗಿದ್ದೇನೆ; ಅವರು ಅವ್ಯವಹಾರ(ನೀತಿರಹಿತ ವ್ಯವಹಾರ)ದ ಪರಿಣಾಮಗಳನ್ನು ನೋಡಿದ್ದಾರೆ. ನೀವು ಬಹಳ ಮೇಲಕ್ಕೇರಬಹುದು, ಆದರೆ ನಂತರ, ಒಂದಿಲ್ಲೊಂದು ದಿನ, ನೀವು ಸೆರೆಮನೆ ಸೇರುತ್ತೀರಿ.

ನಾನು ಒಂದು ಬಹಳ ಪ್ರಾಮಾಣಿಕ ವ್ಯಾಪಾರಿಯನ್ನು ಮಾತನಾಡಿಸಿದೆ, ಅವರು ಹೇಳಿದ್ದು, ’ಗುರೂಜಿ, ನಾನು ಅವ್ಯವಹಾರ ನಡೆಸಿದರೆ, ನನಗೆ ನಿದ್ದೆ ಬರುವುದಿಲ್ಲ. ನನಗೆ ನಿದ್ದೆ, ಮತ್ತು ನನ್ನ ಆರೋಗ್ಯ ಕಳೆದುಕೊಳ್ಳಲು ಇಷ್ಟವಿಲ್ಲ. ನನಗೆ ಒಳ್ಳೆಯ ನಿದ್ದೆ ಮತ್ತು ಒಳ್ಳೆಯ ಆರೋಗ್ಯ ಇರುವುದು ಸಾಧ್ಯವಾಗಲೆಂದು, ನಾನು ನೀತಿಬದ್ಧ ವ್ಯಾಪಾರ ಮಾಡುತ್ತೇನೆ.’

ತನ್ನ ಸ್ವಂತ ಒಳಿತಿಗಾಗಿ, ಒಳ್ಳೆಯ ನಿದ್ದೆ ಮತ್ತು ಕುಟುಂಬದೊಂದಿಗೆ ಉಲ್ಲಾಸಭರಿತ ರಜಾದಿನಗಳನ್ನು ಕಳೆಯಲಿಕ್ಕಾಗಿ, ಒಬ್ಬ ವ್ಯಕ್ತಿ ನೀತಿಬದ್ಧನಾಗಿರಬೇಕು. ಮತ್ತು ಅದು ಅಷ್ಟು ಯೋಗ್ಯವಾಗಿದೆ, ಇಲ್ಲದಿದ್ದರೆ ನಮಗೆ ಜೀವನದಲ್ಲಿ ಸಂತೋಷವೆ ಇಲ್ಲದಿದ್ದರೆ ನಾವು ಸಂಪಾದಿಸಿದ ಎಲ್ಲಾ ಹಣದಿಂದ ಏನು ಪ್ರಯೋಜನ.

ವ್ಯವಹಾರದ ಉದ್ದೇಶವೆಂದರೆ ಸುಖ ಮತ್ತು ಸಂತೋಷ. ವ್ಯವಹಾರ ನಿಮಗೆ ಸುಖ ಸಂತೋಷಗಳನ್ನು ತರದಿದ್ದರೆ, ನೀವು ಬಡತನಲ್ಲೇ ಇರುವುದು ಒಳ್ಳೆಯದು. ಹಣದ ಉದ್ದೇಶವೆಂದರೆ ಸುಖವನ್ನು ತರುವುದು. ನಾವು ನಮ್ಮ ಅಸ್ತಿತ್ವದ ಈ ಪ್ರಮುಖ, ಕೇಂದ್ರಬಿಂದುವನ್ನು ಅರ್ಥಮಾಡಿಕೊಳ್ಳದಿದ್ದರೆ, ನಾವು ದಡಸೇರುವ ಅವಕಾಶ ಕಳೆದುಕೊಳ್ಳುತ್ತೇವೆ. ವ್ಯವಹಾರವಿರುವುದು ವ್ಯಾಪಾರಕ್ಕಾಗಿಯಷ್ಟೇ ಅಲ್ಲ!

ಸಾಮಾನ್ಯವಾಗಿ, ನಾವು ಅರ್ಧದಷ್ಟು ನಮ್ಮ ಆರೋಗ್ಯವನ್ನು ಹಣಸಂಪಾದನೆಯಲ್ಲಿ ವ್ಯಯಿಸುತ್ತೇವೆ, ಮತ್ತು ಆ ಆರೋಗ್ಯವನ್ನು ಮರಳಿ ಪಡೆಯುವ, ಯಾವುದು ಸಾಮಾನ್ಯವಾಗಿ ಆಗುವುದಿಲ್ಲವೋ, ಆ ಪ್ರಯತ್ನದಲ್ಲಿ ಅರ್ಧದಷ್ಟು ಸಂಪಾದನೆಯನ್ನು ವ್ಯಯಿಸುತ್ತೇವೆ. ನನ್ನ ಪ್ರಕಾರ ಇದು ಕೆಟ್ಟ ಆರ್ಥಿಕವ್ಯವಸ್ಥೆ.

ನಮ್ಮ ಆರೋಗ್ಯವು ಮುಖ್ಯ. ಜೀವದುಂಬಿದ ಆರೋಗ್ಯ, ಚೈತನ್ಯ ಮತ್ತು ಮನಸ್ಸನ್ನು ಹೊಂದಿರುವುದು ಬಹಳ ಮುಖ್ಯ. ಆ ಸರಿಯಾದ ಮನಃಸ್ಥಿತಿಯನ್ನು ಹೊಂದಿರಲು, ನೀತಿಬದ್ಧ ವ್ಯಾಪಾರ ಅನಿವಾರ್ಯ.

ನಾವು ನಮ್ಮ ಸುತ್ತಲೂ ನೋಡೋಣ. ನೀತಿಬದ್ಧವಾಗಿ ವ್ಯವಹಾರ ಮಾಡುವ ಆದರೂ ಒಳ್ಳೆಯ ಲಾಭ ಸಂಪಾದಿಸುವ ಜನರ ಉದಾಹರಣೆಗಳು ಸಾಕಷ್ಟಿವೆ.

ಸಾಮಾನ್ಯವಾಗಿ, ಯುವಜನರು ಹೇಳುತ್ತಾರೆ, ’ನೋಡು, ಒಬ್ಬ ಅವ್ಯವಹಾರ ನಡೆಸಿ ಮಿಲಿಯಗಟ್ಟಲೆ ಗಳಿಸಿದ್ದಾನೆ. ನಾನು ನೀತಿಬದ್ಧ ವ್ಯವಹಾರ ನಡೆಸುತ್ತಿದ್ದೇನೆ, ನನಗೆ ಬೆಳೆಯಲಾಗುತ್ತಿಲ್ಲ.’

ನಾನು ನಿಮಗೆ ಹೇಳುತ್ತೇನೆ, ಅದು ಶಾಂತಿಯನ್ನು ಕಳೆದುಕೊಳ್ಳುವ ಮತ್ತು ಗಲಭೆ ಅನುಭವಿಸುವಷ್ಟು ಬೆಲೆಯುಳ್ಳದ್ದಲ್ಲ. ಮತ್ತೆ ಒಂದು ದಿನ, ಖಂಡಿತವಾಗಿ, ಅವನು ತನ್ನ ಕೃತ್ಯಗಳ ಪ್ರತಿಫಲವನ್ನು ಪಡೆಯುತ್ತಾನೆ. ಭದ್ರವಾಗಿರುವುದು ಇದಕ್ಕಿಂತ ಒಳ್ಳೆಯದು. ನೀತಿಬದ್ಧ ವ್ಯಾಪಾರ ನಡೆಸಿ, ಒಳ್ಳೆಯ ನಿದ್ದೆ ಮತ್ತು ಪರಿವಾರದೊಂದಿಗೆ ಉಲ್ಲಾಸಭರಿತ ರಜಾದಿನಗಳನ್ನು ಕಳೆಯಿರಿ.

ನೀತಿಬದ್ಧ ವ್ಯಾಪಾರ ನಡೆಸಿ ಯಶಸ್ವಿಯಾಗಿರುವ ಜನರ ಉದಾಹರಣೆ ಹಲವು ಇವೆ. ಅನೈತಿಕ ವ್ಯವಹಾರ ಮಾರ್ಗಗಳಿಂದಲೇ ನಿಮಗೆ ಬಹಳ ಹಣ ಗಳಿಸುವುದು ಸಾಧ್ಯವೆಂದೇನೂ ಇಲ್ಲ. ಇದೊಂದು ಮಿಥ್ಯ ಕಲ್ಪನೆ. ಅಂಥ ವ್ಯವಹಾರವನ್ನು ಮಾಡಿರುವವರೆಲ್ಲರೂ ತಮ್ಮ ತಪ್ಪನ್ನು ಅತಿ ಶೀಘ್ರವಾಗಿ ಅರಿತಿದ್ದಾರೆ. ನೀವು ಎಲ್ಲಾ ಡಾಟ್ ಕಾಂ ಮತ್ತು ವಾಲ್ ಸ್ಟ್ರೀಟ್ ಕುಸಿತಗಳು, ಮತ್ತು ಅಂಥ ಹಲವು ವ್ಯವಹಾರಗಳು ಕಾಲಕಳೆಯುವುದರೊಳಗೆ ಲಯವಾಗಿರುವುದರ ಬಗ್ಗೆ ಕೇಳಿದ್ದೀರಿ. ಇದು ಜನರು ಎಚ್ಚರವಾಗಲೊಂದು ಘಂಟಾನಾದ, ತಮ್ಮೊಳಗೇ ನೋಡಿಕೊಳ್ಳಲು, ಮತ್ತು ನೀತಿಯ ತತ್ತ್ವಗಳನ್ನು ಅನುಸರಿಸುತ್ತ ಹೇಗೆ ಮುಂದುವರಿಯುವುದು ಎಂದು ನೋಡಿಕೊಳ್ಳುವುದಕ್ಕಾಗಿ.

ಸಹಾನುಭೂತಿ ಮತ್ತು ಬದ್ಧತೆ ಜೀವನದ ಅವಶ್ಯಕ ಅಂಶಗಳಾಗಿವೆ. ಇವು ಇಲ್ಲದೇ, ಜೀವನಕ್ಕೆ ಯಾವುದೇ ಆಕರ್ಷಣೆ ಇಲ್ಲ.  ಅಲ್ಲದೇ ನಿಮ್ಮ ವ್ಯವಹಾರದಲ್ಲಿ ಅಥವಾ ಉದ್ಯಮಶೀಲತೆಯಲ್ಲಿ, ಯಾವುದೇ ಕೆಲಸ ಕೈಗೆತ್ತಿಕೊಳ್ಳುತ್ತಿರಲು ನೀವು ಬಾಳ್ವಿಕೆಯುಳ್ಳ ಬೆಳವಣಿಗೆಯನ್ನು ಹೊಂದುವುದಿಲ್ಲ.

ಇಂದು ವಿಶ್ವಸಂಸ್ಥೆಯೂ ಒಪ್ಪಿಕೊಂಡಿರುವುದೇನೆಂದರೆ ಹೆಚ್ಚು ಆದ್ಯ/ಮುಖ್ಯವಾಗಿರುವುದು ಜಿ.ಡಿ.ಪಿ.(ಗ್ರಾಸ್ ಡೊಮೆಸ್ಟಿಕ್ ಪ್ರೊಡುಕ್ಷನ್ ಎಂಬ ದೇಶದ ಒಟ್ಟು ಉತ್ಪನ್ನದ ಒಂದು ಅಳತೆ) ಅಲ್ಲ, ಆದರೆ ಜಿ.ಡಿ.ಎಚ್.(ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನೆಸ್ಸ್ ಎಂಬ ದೇಶದ ಒಟ್ಟು ಸಂತುಷ್ಟಿಯ ಅಳತೆ) ಮುಖ್ಯ. ನಮಗೆ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ; ಸಂತೋಷವು ಒಂದು ಮುಖ್ಯ ವಿಷಯ.

ಭುತಾನ್.ನಂಥ ಒಂದು ಸಣ್ಣ ದೇಶ ಈ ಸಂತುಷ್ಟಿ ಸೂಚಿ ಅನುಕ್ರಮಣಿಕೆಯಲ್ಲಿ ಮೇಲಿನ ಸ್ಥಾನವನ್ನು ಹೊಂದಿದೆ. ನೀವು ಆ ದೇಶವನ್ನು ಸುತ್ತಿ, ಅಲ್ಲಿನ ಜನರು ದೊಡ್ಡ ಮುಗುಳ್ನಗೆಯೊಂದಿಗೆ ಅಷ್ಟೊಂದು ಸಂತೋಷ ಮತ್ತು ತೃಪ್ತಿಯಿಂದ ಇದ್ದಾರೆ, ಆದರೂ ಅವರು ಸಂಪನ್ನತೆಯತ್ತ ಸಾಗುತ್ತಿದ್ದಾರೆ. ಸ್ಲೊವೇನಿಯಾಗೆ ಅಂಥ ಒಂದು ಸಾಧ್ಯತೆ ಇದೆ; ಎರಡು ಮಿಲಿಯ ಜನರಿರುವ ಒಂದು ಪುಟ್ಟ ದೇಶ, ನನಗೆ ಕಾಣುತ್ತದೆ ಇದು ನಿರ್ವಹಿಸಲು ಸುಲಭವಾಗಿದೆ (ನಾನು 1.2 ಬಿಲಿಯ ಜನರಿರುವ ದೇಶದವನಾಗಿರುವುದರಿಂದ).

ಮಾನ್ಯ ರಾಷ್ಟ್ರಾಧ್ಯಕ್ಷರು ನನ್ನ ಮಾತನ್ನು ಒಪ್ಪದಿರಬಹುದು. ಅದು ಸುಲಭವೆಂದು ನಾನು ಹೇಳುತ್ತಿರುವುದು ಇನ್ನೊಂದು ಪರಿದೃಶ್ಯ(ಮುನ್ನೋಟ)ದಿಂದ; ಜನರನ್ನು ನೀತಿತತ್ತ್ವದಲ್ಲಿ ಸಂಸ್ಕರಿಸಲು, ಸಂತೋಷದ ಈ ಅರಿವನ್ನು ತರಲು ಮತ್ತು ಈ ದೇಶದಲ್ಲಿ ಸಂತೋಷದ ಒಂದು ಲಹರಿಯೆಬ್ಬಿಸುವುದು ಸುಲಭ. ಇದು ಸಾಧ್ಯ.

ನಾನು ನಿಮ್ಮೊಂದಿಗೆ ಜಪಾನ್.ನ ಬಗ್ಗೆ ಒಂದು ವಿಷಯ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅದೊಂದು ಅತ್ಯುನ್ನತ ದೇಶ. ಹೇಗಿದ್ದರೂ, ಪ್ರತಿ ವರ್ಷ ಸುಮಾರು 3೦,೦೦೦ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಬಹಳ ದೊಡ್ಡ ಸಂಖ್ಯೆ.

ಹಾಗಾಗಿ, ಕಳೆದ ಮೇ ತಿಂಗಳಿನಲ್ಲಿ ನಾನು ಜಪಾನ್.ನ ಪ್ರಧಾನಿಯನ್ನು ಭೇಟಿಯಾದಾಗ ಅವರು ನನಗೆ ಹೇಳಿದರು, ’ಗುರೂಜಿ, ಆರ್ಥಿಕವಾಗಿ ನಾವು ಸಮೃದ್ಧರಾಗಿದ್ದೇವೆ. ಯುವಕರಿಗೆ ಮನೆಯಲ್ಲಿ ಎರಡು ಕಾರ್.ಗಳಿವೆ; ಅವರಿಗೆ ಏನೇ ಅಗತ್ಯವಿದ್ದರೂ ನಾವು ಒದಗಿಸಲು ಸಿದ್ಧರಾಗಿದ್ದೇವೆ. ಹೇಗಿದ್ದರೂ, ಹಣದಿಂದ ಒದಗಿಸಲಾಗದ ಏನೋ ಒಂದಿದೆ. ಇಲ್ಲಿ ಈ ಸಮೃದ್ಧಿ ಇದ್ದರೂ, ನಮ್ಮ ಯುವಕರು ಖಿನ್ನತೆಯಲ್ಲಿದ್ದಾರೆ. ಸುಮಾರು ಎರಡು ಮಿಲಿಯ ಯುವಕರು ಖಿನ್ನತೆಯಲ್ಲಿದ್ದಾರೆ, ಇವರಲ್ಲಿ 3೦,೦೦೦ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇದಕ್ಕೆ ಉತ್ತರವಿಲ್ಲ. ನಾವು ಮಾಡಬಹುದಾದುದು ಏನಿದೆ?’

ನಾವು ಅಲ್ಲೊಂದು ಯೋಜಿತ ಕಾರ್ಯ ಹಮ್ಮಿಕೊಂಡೆವು, ಸಂತೋಷದ ಅಲೆಗಳನ್ನೆಬ್ಬಿಸುತ್ತಾ, ಜನರನ್ನು ಒಟ್ಟುಗೂಡಿಸುತ್ತ ನಡೆದೆವು. ’ಬನ್ನಿ ನಾವು ಜೊತೆಯಾಗಿ ಉಸಿರಾಡೋಣ, ಜೊತೆಯಾಗಿ ಹಾಡೋಣ, ಮತ್ತು ಜೊತೆಯಾಗಿ ಧ್ಯಾನ ಮಾಡೋಣ.’

ಕೇವಲ ಸ್ವಲ್ಪ ನಿಮಿಷಕಾಲ ಮನಸ್ಸನ್ನು ಶಾಂತವಾಗಿಸಿ ಮತ್ತೆ ತನ್ನೊಳಗೇ ಆಳ ಹೋಗುವುದರಿಂದ; ತನ್ನೊಳಗಿನ ಆಳದಲ್ಲಿ ಒಂದು ಅತ್ಯಂತ ಸುಂದರ ಸ್ಥಳವಿದೆ ಎಂದು ಅರಿಯುವುದರಿಂದ ಒಂದು ದೊಡ್ಡ ಬದಲಾವಣೆ ಸಾಧ್ಯವಿದೆ. ಇದು ಹಲವಾರು ಜೀವಗಳನ್ನು ಆತ್ಮಹತ್ಯೆಯ ಅಂಚಿನಿಂದ, ಮತ್ತು ಖಿನ್ನತೆಗೊಳಗಾಗುವುದರಿಂದ ಕಾಪಾಡುತ್ತದೆ.

ಜರ್ಮನಿಯಲ್ಲಿ, ಶೇಕಡಾ 4೦ರಷ್ಟು ಶಾಲಾ ಶಿಕ್ಷಕರು ಖಿನ್ನರಾಗಿದ್ದಾರೆ; ಇದು ಗಾಬರಿಪಡಿಸುವ ವಿಷಯ. ಕಲ್ಪಿಸಿ, ಒಬ್ಬ ಆನಂದದಿಂದಿರುವ ಮಗುವೊಂದು ಪಾಠಶಾಲೆಗೆ ಹೋಗಿ, ಒಬ್ಬ ಬಹಳ ಖಿನ್ನ ಶಿಕ್ಷಕನನ್ನು ಪಡೆಯುತ್ತದೆ; ಶಾಲೆಯಿಂದ ಹೊರಬರುವ ಆ ಮಗುವಿನಿಂದ ನೀವೇನು ಅಪೇಕ್ಷಿಸುತ್ತೀರಿ? ಇದು ದುರದೃಷ್ಟಕರ.

ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದುದೆಂದರೆ ವಿಜಯದ ಚಿಹ್ನೆಗಳಲ್ಲಿ ಒಂದು ವಿಶ್ವಾಸಭರಿತ ಮುಗುಳ್ನಗೆಯಾಗಿದೆ. ನಾವು ಯಾವುದೇ ಸವಾಲುಗಳನ್ನು ಎದುರಿಸಬಹುದು ಎಂಬ ವಿಶ್ವಾಸ! ಈ ವಿಶ್ವಾಸ ಮತ್ತು ಒಂದು ಮುಗುಳ್ನಗೆ ನನಗೆ ವಿಜಯದ ಒಂದು ಸೂಚಕವಾಗಿದೆ.

ನಿಮ್ಮ ಬಳಿ ಒಂದು ದೊಡ್ಡ ಮೊತ್ತ ಬ್ಯಾಂಕ್.ನಲ್ಲಿದ್ದು, ನಿಮ್ಮ ಮುಖ ಕಳೆಗುಂದಿದ್ದು, ಸಂಪೂರ್ಣವಾಗಿ ಸುಸ್ತಾಗಿ ಮತ್ತು ಖಿನ್ನರಾಗಿದ್ದರೆ, ಆ ಹಣದಿಂದ ಯಾವ ಒಳಿತಿದೆ? ಜನರು ಬಹಳ ಹಣ ಗಳಿಸುತ್ತಾರೆ, ಬ್ಯಾಂಕ್.ನಲ್ಲಿಟ್ಟು, ನಂತರ ತೀರಿಕೊಳ್ಳುತ್ತಾರೆ. ಇದು ರಾತ್ರಿಯೆಲ್ಲಾ ಹಾಸಿಗೆಯನ್ನು ಸಜ್ಜಾಗಿಸಿ, ನಂತರ ಮಲಗಲು ಸಮಯ ಇಲ್ಲದಂತೆ. ನೀವು ಮಲಗಲು ಹೋದಾಗ, ಆಗಲೇ ಹೋಗಿಬಿಟ್ಟಿದ್ದೀರಿ. ನಿಖರವಾಗಿ ಇದೇ ಇಂದು ನಡೆಯುತ್ತಿರುವುದು.

ಜನರು ತಮ್ಮ ಜೀವನ ಪೂರ್ತಿ ಬ್ಯಾಂಕ್.ನಲ್ಲಿ ಹಣವಿಡಲಿಕ್ಕಾಗಿ ದುಡಿಯುತ್ತಾರೆ, ಮತ್ತೆ ತೀರಿಕೊಳ್ಳುತ್ತಾರೆ, ಮತ್ತವರ ಮಕ್ಕಳು ಅದೇ ಹಣಕ್ಕಾಗಿ ಕಿತ್ತಾಡುತ್ತಾರೆ. ಭಾರತದಲ್ಲಿ ಮತ್ತು ಹಲವು ಬೇರೆ ಸ್ಥಳಗಳಲ್ಲಿ, ಸುಮಾರು ಶೇಕಡಾ 9೦ರಷ್ಟು ನ್ಯಾಯಾಲಯದ ಮೊಕದ್ದಮೆಗಳು ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಇರುತ್ತವೆ. ನನಗೆ ಸ್ಲೊವೇನಿಯದ ಬಗ್ಗೆ ತಿಳಿದಿಲ್ಲ.

ಕಷ್ಟಪಟ್ಟು ಗಳಿಸಿದ ಹಣ ಅಥವಾ ಸ್ವಂತ ಹಣದ ಬಗ್ಗೆ ನೀವು ಅಷ್ಟೊಂದು ಮೊಕದ್ದಮೆಗಳನ್ನು ನೋಡುವುದಿಲ್ಲ. ಕೇವಲ ಪಿತ್ರಾರ್ಜಿತ ಆಸ್ತಿಯ ಬಗ್ಗೆಯೇ ಜನರು ಜಗಳವಾಡುವುದು. ಬದುಕುವ ರೀತಿ ಇದೇ? ವ್ಯವಹಾರದಲ್ಲಿ ಯಶಸ್ಸು ಅಂದರೆ ಇದೇ? ಮತ್ತೆ ಯಶಸ್ಸಿಲ್ಲದೇ ಇದ್ದರೆ, ವ್ಯವಹಾರ ನಡೆಸುವುದರ ಅರ್ಥ ಏನು?

ವಿಶ್ವಾಸವು ವ್ಯವಹಾರದ ಬೆನ್ಮೂಳೆ. ಯಶಸ್ಸು ವ್ಯವಹಾರದ ಗುರಿ. ನಾವು ಇವೆರಡನ್ನು, ಯಶಸ್ಸು ಮತ್ತು ವಿಶ್ವಾಸಗಳನ್ನು ಕಳೆದುಕೊಂಡರೆ, ಅದು ಯಾವುದಕ್ಕೂ ಬಾರದ ಅತೃಪ್ತಿಕರ ವ್ಯವಹಾರ, ಅದು ನಿಮಗೆ ಇನ್ನೂ ಖಾಯಿಲೆ ತರುತ್ತದೆ.

ಇದೆಲ್ಲದರ ಸಾರಾಂಶವೆಂದರೆ, ವ್ಯವಹಾರವು ಒಂದು ನಿರ್ದಿಷ್ಟ ಮಟ್ಟದ ಸಮಗ್ರತೆ, ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ ಅಥವಾ ನೀತಿಬದ್ಧತೆ ಇಲ್ಲದೆ ನಡೆಯಲು ಆಗುವುದಿಲ್ಲ. ಇದು ಅಸಾಧ್ಯ. ನಾವು ನಮ್ಮ ಕಡೆಯಿಂದ ಒಂದು ಪ್ರಾರಂಭ ಮಾಡಿದಾಗ, ನಾವು ನಮ್ಮ ಸುತ್ತ ಕೆಲಸ ಮಾಡುವವರಿಗೆ ಅದನ್ನೇ ಮಾಡಲು ಒಂದು ಮಾದರಿ ಸೃಷ್ಟಿಸುತ್ತೇವೆ.

ವಿಶ್ವಾಸವು ಅಗತ್ಯ. ಇಂದು ಜನರು ಬ್ಯಾಂಕ್.ನಲ್ಲಿ ತಮ್ಮ ಹಣವನ್ನಿಡಲೂ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಹಿಂದೆ, ಜನರು ವ್ಯಾಪರದಲ್ಲಿ ಭರವಸೆ ಕಳೆದುಕೊಳ್ಳುತ್ತಿದ್ದರು; ನಿಧಾನವಾಗಿ ಅದು ಬ್ಯಾಂಕ್.ಗಳನ್ನೂ ನುಸುಳಿಕೊಂಡಿದೆ. ಅಂಥ ಭಯ ಮತ್ತು ಅನಿಶ್ಚಿತತೆ ಈ ಸಮಾಜವನ್ನು ವಶಪಡಿಸಿಕೊಂಡಿವೆ.ಇದು ಮುಂದುವರಿದರೆ, ಆಗ ಅಪರಾಧ ಮತ್ತು ಹಿಂಸೆ ಏರುತ್ತವೆ.

ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ನೀತಿಬದ್ಧತೆಗಳು ಈ ಸಮಾಜದಲ್ಲಿ ಅಪರಾಧ ಮತ್ತು ಹಿಂಸಾಚಾರವನ್ನು ತಡೆಯಬಲ್ಲವು.

ವ್ಯವಹಾರಗಳಲ್ಲಿ ಕಾರ್ಪೊರೇಟ್ ಸೋಶ್ಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್.- ಔದ್ಯೋಗಿಕ ನಿಗಮಗಳ ಸಾಮಾಜಿಕ ಹೊಣೆಗಾರಿಕೆ), ಪಡೆಯಬೇಕಾದದ್ದು ಮತ್ತು ಪಡೆಯದಿರ ತಕ್ಕದ್ದರ ನಡುವಿನ ಅಂತರವನ್ನು ತುಂಬಿ, ಮತ್ತೆ ಅದರ ಮೂಲಕ ಸಮಾಜದಲ್ಲಿನ ಹಿಂಸೆ ಮತ್ತು ಅಪರಾಧಗಳನ್ನು ತಡೆಯಬಹುದು. ಇಲ್ಲವಾದರೆ, ನಾವು ಒಂದು ಸ್ಫೋಟಕದ ಮೇಲೆ ಕುಳಿತ್ತಿದ್ದೇವೆ.

ಸಮಾಜದ ಒಂದು ಭಾಗ ಯಾವುದೇ ಕ್ಷಣದಲ್ಲಿ ಬೀದಿಗಿಳಿದು ಅನಾಹುತವನ್ನು ಉಂಟುಮಾಡಬಹುದು; ಅಂಥ ಸಮಯದಲ್ಲಿ ವ್ಯವಹಾರ ಸಮುದಾಯವು ಇದ್ದುದರಲ್ಲಿ ಅತಿ ಹೆಚ್ಚು ಅನುಭವಿಸುತ್ತದೆ. (ನಾವಿದನ್ನು ದಿನಗಟ್ಟಲೆ, ವಾರಗಟ್ಟಲೆಯೂ ಇರಬಹುದು, ಪ್ಯಾರಿಸ್.ನಲ್ಲಿ ನಡೆಯುತ್ತಿರುವುದನ್ನು ನೋಡಿದ್ದೇವೆ. ಸಮಾಜದ ಒಂದು ಭಾಗ ರೋಷಾವೇಶದಿಂದ ಎಗರಾಡುತ್ತಿತ್ತು, ಮತ್ತು ಎಲ್ಲಾ ವ್ಯಾವಹಾರಗಳನ್ನು ಮುಚ್ಚಲಾಗಿತ್ತು; ಆ ಎರಡು ವಾರಗಳಲ್ಲಿ ಪ್ಯಾರಿಸ್.ನಲ್ಲಿ ಮಿಲಿಯಗಟ್ಟಲೆ ನಷ್ಟವಾಗಿತ್ತು.)

ನಾವು ಒಂದು ಪ್ರತ್ಯೇಕ (ಏಕಾಂತ) ಸಮಾಜದಲ್ಲಿ ವಾಸವಾಗಿಲ್ಲ. ನಾವು ಇಡಿಯ ಒಂದು ಭಾಗವಾಗಿದ್ದೇವೆ, ಇದರಲ್ಲಿ ರಾಜಕಾರಣಿಗಳು, ವ್ಯವಹಾರ ಮತ್ತು ಧರ್ಮ ಕೂಟಗಳು, ಸರಕಾರೇತರ ಸಂಸ್ಥೆಗಳು(ಎನ್.ಜಿ.ಒ.), ನಾವೆಲ್ಲ ಇಲ್ಲಿ ಜೊತೆಗೂಡಬೇಕು. ನಾವೆಲ್ಲರೂ ಒಂದು ಇನ್ನೂ ಒಳ್ಳೆಯ ಸಮಾಜ, ಒಂದಿನ್ನೂ ಒಳ್ಳೆಯ ದೇಶವನ್ನು ನಿರ್ಮಿಸುವುದಕ್ಕಾಗಿ ಕೆಲಸ ಮಾಡಬೇಕು. ಇದಕ್ಕೆ, ನಾವೆಲ್ಲ ನಮ್ಮನ್ನು ಬದ್ಧಗೊಳಿಸಬೇಕು.

ನಮ್ಮ ಜೀವನಗಳು ಈ ಗ್ರಹದ ಮೇಲೆ ಇಷ್ಟು ಕಿರು ಕಾಲದ್ದಾಗಿದೆ. ನಿಮ್ಮ ಸ್ವಂತ ಜೀವನದ ಆರ್ಥಿಕ ವ್ಯವಸ್ಥೆಯನ್ನು ನೋಡಿ; ನೀವು 8೦ ವರ್ಷಕಾಲ ಬದುಕುತ್ತೀರಿ ಅಂದುಕೊಳ್ಳಿ, ಆ 8೦ ವರ್ಷಗಳನ್ನು ನೀವು ಹೇಗೆ ಕಳೆಯುತ್ತೀರಿ? ನೀವಿದರ ಬಗ್ಗೆ ಯೋಚಿಸಿದ್ದೀರೇ?

ಎಂಭತ್ತು ವರ್ಷದ ಒಂದು ಜೀವನದಲ್ಲಿ,ನೀವು 4೦ ವರ್ಷಗಳನ್ನು ಹಾಸಿಗೆಯಲ್ಲಿ ನಿದ್ದೆ ಮಾಡುತ್ತಾ ಕಳೆಯುತ್ತೀರಿ. ಇದು ಸುಮಾರು ಅರ್ಧದಷ್ಟು ಸಮಯ. ನಿಮ್ಮ ಆರೋಗ್ಯ ಕೆಟ್ಟಿದ್ದರೆ, ಇದಕ್ಕೆ ನೀವಿನ್ನೂ ಕೆಲವು ವರ್ಷ ಸೇರಿಸಬಹುದು.
ಒಂದು ದಿನಕ್ಕೆ ನೀವು 2 ಗಂಟೆಗಳಷ್ಟು ಸಮಯ ಆಹಾರಕ್ಕಾಗಿ ಕಳೆಯುತ್ತೀರಿ- ಬೆಳಗ್ಗಿನ ತಿಂಡಿ, ಮಧ್ಯಾನ ಮತ್ತು ರಾತ್ರಿಯ ಊಟ; ನೀವು ಸುಮಾರು ಎಂಟು ವರ್ಷ ಕಾಲ ತಿನ್ನುತ್ತಾ ಕಳೆಯುತ್ತೀರಿ.

ಇದೇ ರೀತಿ, ಎಂಟರಿಂದ ಹತ್ತು ವರ್ಷ ನೀವು ಸ್ನಾನ ಮತ್ತು ಶೌಚಾಲಯದಲ್ಲಿ ಕಳೆಯುತ್ತೀರಿ.

ನೀವು ನ್ಯೂ ಯಾರ್ಕ್ ಅಥವಾ ಫ್ರಾಂಕ್ಫರ್ಟ್.ನಂಥ ದೊಡ್ಡ ಪಟ್ಟಣದಲ್ಲಿ ವಾಸವಾಗಿದ್ದರೆ, ನೀವು ಸುಮಾರು 1೦ರಿಂದ 15 ವರ್ಷಗಳ ಕಾಲ ವಾಹನ ಸಂಚಾರ ನಿಲುಗಡೆಗಳಲ್ಲಿ, ಆಮೇಲೆ ಕೆಲಸದಲ್ಲಿ ಕಳೆಯುತ್ತೀರಿ.

ನಮ್ಮ ಜೀವನವನ್ನು ನಾವು ಹೇಗೆ ಕಳೆಯುತ್ತೇವೆ ಎಂದು ನೀವು ವಿಮರ್ಶಿಸಿದರೆ, ನಿಮಗೆ ತಿಳಿಯುತ್ತದೆ ನಾವು ಹೆಚ್ಚೆಂದರೆ ಎರಡು ಅಥವಾ ಮೂರು ವರ್ಷಗಳ ಕಾಲ ನಮ್ಮ ಜೀವನವನ್ನು ಸಂತೋಷವಾಗಿ ಕಳೆಯುತ್ತೇವೆ. ಇಂಥ ಸಮಯಗಳಲ್ಲಿ ನಾವು ನಮ್ಮ ಜೀವನವನ್ನು ವಾಸ್ತವವಾಗಿ ಬಾಳುತ್ತಿದ್ದೇವೆ. ಉಳಿದದ್ದೆಲ್ಲ ಬದುಕನ್ನು ಬಾಳುವುದಕ್ಕಾಗಿ ತಯಾರಿಯಷ್ಟೆ.

ಜೀವನದಲ್ಲಿ ಹೃದಯ ತುಂಬುವಿಕೆ, ಮಿಡಿತ ಉಂಟಾಗುವುದು ಒಂದು ಬದ್ಧತೆಯಿಂದ. ನಾವು ನಮ್ಮ ಸಂಪಾದನೆಯ ಒಂದು ಭಾಗವನ್ನು ಇತರರ ಸಹಾಯಕ್ಕಾಗಿ, ಕಾರ್ಪೊರೇಟ್ ಸೋಶ್ಯಲ್ ರೆಸ್ಪಾನ್ಸಿಬಿಲಿಟಿ. ಗೆ ನೀಡಬಹುದು. ಈ ಸಮಾಜದಿಂದ ನಾವು ಏನನ್ನಾದರೂ ಪಡೆಯಬೇಕು ಎನ್ನುವುದಕ್ಕಿಂತ, ಈ ಸಮಾಜಕ್ಕೆ ನಾವು ಹೇಗೆ ಸಹಾಯ ಒದಗಿಸಬಹುದು ಎಂದು ನಾವು ಯೋಚಿಸಬೇಕು.

ಪ್ರತಿ ವ್ಯವಹಾರ ಕೇಂದ್ರ, ಪ್ರತಿ ವಾಣಿಜ್ಯೋದ್ಯಮಿಯು ಇನ್ನು ಹೆಚ್ಚು ನಗುಮುಖಗಳಿರುವ ಒಂದು ಶಾಂತಿ-ಸಮೃದ್ಧ ಸಮಾಜವನ್ನು ಹೇಗೆ ಬೆಳೆಸುವುದು ಎಂದು ಯೋಚಿಸಿದರೆ, ಆಗ ನಮಗೆ ಆರೋಗ್ಯಪೂರ್ಣ ಮತ್ತು ಸಂತುಷ್ಟ ಜೀವನದ ಒಂದು ಯುಗವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಜೀವನವೊ೦ದು ಶ್ರೀಮಂತ ಅನುಭವ

ಮಾರ್ಚ್ ೨೨, ೨೦೧೩
ಜರ್ಮನಿ

ಸ್ವಲ್ಪ ನೃತ್ಯ, ಸಂಗೀತ, ತತ್ವಜ್ಞಾನ, ವಿಜ್ಞಾನ, ಸೇವೆ ಮತ್ತು ಮೌನವಿರುವಾಗ ನಮ್ಮ ಜೀವನವು ಹೆಚ್ಚು ಶ್ರೀಮಂತವಾಗುವುದು. ಈ ಆರು ವಿಷಯಗಳು ನಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಬಲ್ಲವು. ಅವುಗಳಲ್ಲಿ ಯಾವುದಾದರೂ ಒಂದು ನಿಮಗೆ ತಪ್ಪಿಹೋದರೆ, ಆಗ ಜೀವನವು ಸಂಪೂರ್ಣವಲ್ಲ. ಇವತ್ತು, ನಾವು ಆಂತರಿಕ ಮೌನದ ಜೊತೆ ಮುಖಾಮುಖಿ ನಡೆಸೋಣ.
ಆಂತರಿಕ ಮೌನವು ಎಲ್ಲಾ ಸೃಜನಶೀಲತೆಯ ತಾಯಿಯಾಗಿದೆ, ಅಂತಃಸ್ಫುರಣೆಯ ಮೂಲವಾಗಿದೆ ಮತ್ತು ಚೈತನ್ಯದ ಉಗ್ರಾಣವಾಗಿದೆ ಹಾಗೂ ನಾವೆಲ್ಲರೂ ಇದನ್ನು ಹೊಂದಿದ್ದೇವೆ! ಒಂದೇ ಒಂದು ವಿಷಯವೆಂದರೆ, ನಾವದನ್ನು ಬಂಧಿಸಿದ್ದೇವೆ ಮತ್ತು ಬೀಗದ ಕೈಯನ್ನು ಮರೆತಿದ್ದೇವೆ. ಇದು, ನೀವು ನಿಮ್ಮ ಕಂಪ್ಯೂಟರಿನ ಪಾಸ್ ವರ್ಡನ್ನು ಕೆಲವೊಮ್ಮೆ ಹೇಗೆ ಮರೆಯುವಿರೋ ಹಾಗೆ. ಅದೇ ರೀತಿಯಲ್ಲಿ, ನಾವೆಲ್ಲರೂ, ನಮ್ಮ ಹೃದಯದಲ್ಲಿ ಈ ಅಗಾಧವಾದ ಸಿರಿವಂತಿಕೆಯಾದ ಮೌನವನ್ನು ಹೊಂದಿರುವೆವು, ಆದರೆ ಹೇಗೋ, ಅದನ್ನು ಹೇಗೆ ಸ್ಪರ್ಷಿಸಬೇಕೆಂಬುದನ್ನು ನಾವು ಮರೆತಿರುವೆವು. ಇದನ್ನು ತಿಳಿದುಕೊಳ್ಳಬೇಕಾಗಿದೆ.
ಇವತ್ತು ನಾವು ಸ್ವಲ್ಪ ನೃತ್ಯ, ಸ್ವಲ್ಪ ಸುಂದರವಾದ ಸಂಗೀತದಲ್ಲಿ ಪಾಲ್ಗೊಂಡೆವು; ಈಗ, ನಾವು ಸ್ವಲ್ಪ ತತ್ವಜ್ಞಾನವನ್ನು ಚರ್ಚಿಸಬೇಕು.
ನಮ್ಮ ಹೃದಯಕ್ಕೆ ಬಹಳ ಹತ್ತಿರವಾದ, ನಮ್ಮ ಜೀವನದಲ್ಲಿ ಬಹಳ ಪ್ರಿಯವಾದ ಯಾವುದನ್ನಾದರೂ ಚರ್ಚಿಸಲು ನಾವೊಂದು ಸೌಹಾರ್ದಯುತ ಮತ್ತು ಅನೌಪಚಾರಿಕ ವಾತಾವರಣದಲ್ಲಿರಬೇಕು. ನೀವೆಲ್ಲರೂ ಈಗ ಇಲ್ಲಿ ಹಾಯಾಗಿರುವಿರೇ? ನಮ್ಮ ಸುತ್ತಲೂ ಕುಳಿತಿರುವ ಜನರನ್ನು ಅಭಿವಂದಿಸಲು ನಾವು ೩೦ ಸೆಕೆಂಡುಗಳನ್ನು ತೆಗೆದುಕೊಳ್ಳೋಣ.
ಈಗ, ನೀವು ನಿಜವಾಗಿಯೂ ನಿಮ್ಮ ಪಕ್ಕದ ವ್ಯಕ್ತಿಗೆ ಅಭಿವಂದಿಸಿದಿರೇ? ಅಥವಾ ನೀವದನ್ನು ಕೇವಲ ಒಂದು ಔಪಚಾರಿಕತೆಯಾಗಿ ಮಾಡಿದಿರೇ? ಹೆಚ್ಚಾಗಿ, ನಾವು ಜೀವನದಲ್ಲಿ ಅದಲು ಬದಲು ಮಾಡಿಕೊಳ್ಳುವ ಈ ಕುಶಲೋಪರಿಗಳೆಲ್ಲವೂ ಒಂದು ಬಹಳ ಬಾಹ್ಯ ಮಟ್ಟದ್ದಾಗಿದೆ. ಉದಾಹರಣೆಗೆ, ಅನಾರೋಗ್ಯದಲ್ಲಿರುವ ಒಬ್ಬರನ್ನು ಭೇಟಿಯಾಗಲು ನೀವೊಂದು ಆಸ್ಪತ್ರೆಗೆ ಹೋಗುತ್ತೀರಿ ಮತ್ತು ನೀವು ಅವರಲ್ಲಿ, "ನೀವು ಹೇಗಿದ್ದೀರಾ?" ಎಂದು ಕೇಳುತ್ತೀರಿ. ಅವರು, "ನಾನು ಚೆನ್ನಾಗಿದ್ದೇನೆ" ಅನ್ನುತ್ತಾರೆ.
ಒಬ್ಬರು ನಿಮಗೆ ಒಂದು ಲೋಟ ನೀರು ತಂದುಕೊಡುವಾಗ ನೀವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳುತ್ತೀರಿ. ಆದರೆ ಅದನ್ನು ನಿಜವಾದ ಅರ್ಥದಲ್ಲಿ ಹೇಳಿರುವುದಿಲ್ಲ! ಒಂದು ಲೋಟ ನೀರು ಪಡೆದಾಗ ನೀವು, "ನಿಮಗೆ ಧನ್ಯವಾದಗಳು" ಎಂದು ಹೇಳಬಾರದೆಂದು ನಾನು ಹೇಳುತ್ತಿಲ್ಲ. ಆದರೆ, ಈ ಶಬ್ದಗಳು ನಿಜವಾದ ಭಾವವನ್ನು ಹೊಂದಿಲ್ಲವೆಂಬುದನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ. ಅವುಗಳು ಬಹುತೇಕ, ಒಬ್ಬಳು ಗಗನಸಖಿಯು ನಿಮಗೆ, "ನಿಮ್ಮ ದಿನವು ಶುಭವಾಗಿರಲಿ" ಎಂದು ಹಾರೈಸಿದಂತೆ.
ಹೇಗಾದರೂ, ಅದೇ ಶಬ್ದಗಳು ನಿಮಗೆ ಪ್ರಿಯವಾದ ಒಬ್ಬರ ಬಾಯಿಯಿಂದ ಬರುವಾಗ, ಅದು ಯಾವುದೋ ಕಂಪನಗಳನ್ನು ಹೊತ್ತು ತರುತ್ತದೆ ಮತ್ತು ಈ ಕಂಪನಗಳು ಶಬ್ದಗಳಿಗಿಂತ ಜಾಸ್ತಿ ತಿಳಿಯಪಡಿಸುತ್ತವೆ.
ನಮ್ಮಲ್ಲಿ ಧನಾತ್ಮಕ ಕಂಪನಗಳಿವೆ; ಆದರೆ ನಾವು ಒತ್ತಡದಲ್ಲಿದ್ದರೆ ಮತ್ತು ದುಃಖಿತರಾಗಿದ್ದರೆ, ನಾವು ಋಣಾತ್ಮಕ ಕಂಪನಗಳನ್ನು ಹೊರಸೂಸುತ್ತೇವೆ.
ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ಜನರಿಂದ ತಪ್ಪಿಸಿಕೊಳ್ಳಬೇಕೆಂದು ಅನ್ನಿಸುತ್ತದೆ, ಇದನ್ನು ನೀವು ಗಮನಿಸಿದ್ದೀರಾ? ಮತ್ತೆ ಕೆಲವೊಮ್ಮೆ, ಯಾವುದೇ ಸ್ಪಷ್ಟ ಕಾರಣವಿಲ್ಲದೇ, ಬೇರೊಬ್ಬರೊಂದಿಗೆ ನಿಮಗೆ ಬಹಳ ಹಿತವೆನಿಸುತ್ತದೆ. ಇದು ಕಂಪನಗಳಿಂದಾಗಿ.
ಶಾಲೆಯಲ್ಲಾಗಲೀ ಮನೆಯಲ್ಲಾಗಲೀ, ನಮ್ಮ ಕಂಪನಗಳನ್ನು ಧನಾತ್ಮಕವಾಗಿಸುವುದು ಹೇಗೆಂದು ನಮಗೆ ಯಾರೂ ಕಲಿಸಿಲ್ಲ.
ನಿಮಗೆ ನಕಾರಾತ್ಮಕತೆಯ ಅನುಭವವಾಗುತ್ತಿರುವುದಾದರೆ, ನಿಮ್ಮೊಳಗಿನ ಆ ಋಣಾತ್ಮಕ ಕಂಪನಗಳೊಂದಿಗೆ ನೀವು ಜೀವಿಸುತ್ತೀರಿ. ನೀವು ಖಿನ್ನತೆಗೊಳಗಾಗಿರುವುದಾದರೆ, ಕೋಪ ಅಥವಾ ದುಃಖಗೊಂಡಿರುವುದಾದರೆ, ಈ ಭಾವನೆಗಳನ್ನು ನೀವು ನಿಮ್ಮೊಂದಿಗೆ ಒಯ್ಯುತ್ತೀರಿ. ಇದು ಯಾಕೆಂದರೆ, ಈ ಮನಸ್ಸನ್ನು ನಿರ್ವಹಿಸುವುದು ಹೇಗೆಂಬುದನ್ನು ಅಥವಾ ನಮ್ಮ ಕಂಪನವನ್ನು ಬಹಳ ಧನಾತ್ಮಕ ಮತ್ತು ಶೋಭೆಯುಳ್ಳದ್ದಾಗಿ ಬದಲಾಯಿಸುವುದು ಹೇಗೆಂಬುದನ್ನು ಯಾರೂ ನಮಗೆ ಹೇಳಿಲ್ಲ. ಇಲ್ಲಿಯೇ ಆರ್ಟ್ ಆಫ್ ಲಿವಿಂಗ್ ಆವಶ್ಯಕವಾಗಿರುವುದು. ಋಣಾತ್ಮಕತೆಯನ್ನು ಧನಾತ್ಮಕತೆಯಾಗಿ ಬದಲಾಯಿಸುವುದು ಹೇಗೆಂಬುದನ್ನು ಅದು ನಮಗೆ ಕಲಿಸುತ್ತದೆ. ಇದು, ಕೆಲವು ಅಭ್ಯಾಸಗಳ ಮೂಲಕ; ನಮ್ಮ ಉಸಿರು, ಮನಸ್ಸು, ಎಚ್ಚರಿಕೆ, ಬುದ್ಧಿಗಳನ್ನು ಬಳಸುವುದರ ಮೂಲಕ ಸಾಧ್ಯ.
ಸರಿ, ಈಗ ನಾನು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ನೀವು ಬಯಸುವಿರಿ?

(ಸಭಿಕರು: ಸೇವೆ; ಶಾಂತಿ; ಪ್ರೇಮ; ಸರಿಯಾದ ನಿರ್ಧಾರಗಳನ್ನು ಮಾಡುವುದು; ಅಂತಃಸ್ಫುರಣೆಯನ್ನು ಹೆಚ್ಚಿಸುವುದು; ಅಪರಾಧಿ ಪ್ರಜ್ಞೆ; ಮೋಹ; ವಿಶ್ರಾಮ; ಸಮಯ; ಕ್ಷಮಾಪಣೆ; ಭಯ; ಕರ್ಮ; ಬಯಕೆಗಳು; ಏಕತೆ; ವಿಶ್ವಾಸ; ಸಂತೋಷ; ಗುರು; ಶಿಕ್ಷಣ; ಪ್ರಕೃತಿ; ಪ್ರಾಮಾಣಿಕತೆ; ಸಾವು; ಧ್ಯಾನ; ಜ್ಞಾನ.)

ನನಗೆ ಹೇಳಿ, ನೀವು ನಿಜವಾಗಿಯೂ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯಲು ಬಯಸುವಿರಾ? ನೀವೊಂದು ಗ್ರಂಥಾಲಯಕ್ಕೆ ಹೋದರೆ ಅಥವಾ ಗೂಗಲ್ ಮಾಡಿದರೆ, ಈ ವಿಷಯಗಳ ಬಗ್ಗೆ ನಿಮಗೆ ಎಲ್ಲಾ ಮಾಹಿತಿಯು ಸಿಗುವುದು.
ಈ ವಿಷಯಗಳಲ್ಲಿ ಯಾವುದರ ಬಗ್ಗೆಯೂ ನನಗೆ ಏನೂ ತಿಳಿದಿಲ್ಲದಿದ್ದರೆ? ನಾವು ಯಾವ ವಿಷಯದ ಬಗ್ಗೆ ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ?
ನಾಲ್ಕು ಮಟ್ಟಗಳ ಸಂಪರ್ಕವಿದೆಯೆಂಬುದು ನಿಮಗೆ ಗೊತ್ತಾ?
ಮೊದಲಿಗೆ, ತಲೆಯಿಂದ ತಲೆಗಿರುವ ಸಂಪರ್ಕವಿದೆ. ಎರಡನೆಯದಾಗಿರುವ ಸಂಪರ್ಕವೆಂದರೆ ತಲೆಯಿಂದ ಹೃದಯಕ್ಕಿರುವುದು. ಮೂರನೆಯದು ಹೃದಯದಿಂದ ಹೃದಯಕ್ಕಿರುವ ಸಂಪರ್ಕ, ಮತ್ತು ನಾಲ್ಕನೆಯದು ಆತ್ಮದಿಂದ ಆತ್ಮಕ್ಕಿರುವ ಸಂಪರ್ಕ.
ನೀವು ಗಮನಿಸಿದ್ದೀರಾ, ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳು ಒಂದೇ ವಿಷಯವನ್ನು ಹೇಳುತ್ತಿರುತ್ತಾರೆ, ಆದರೆ ಅವರು ಮಾತನಾಡುವಾಗ, ಅವರು ವಾದಿಸುತ್ತಿರುವರೇನೋ ಎಂಬಂತೆ ತೋರುತ್ತದೆ. ಇದಾಗುವುದು ಯಾಕೆಂದರೆ, ಹೃದಯದಿಂದ ಬರುವ ಭಾವನೆಯ ಅಂಶ ಅಥವಾ ನಂಬಿಕೆ ಅಲ್ಲಿಲ್ಲ.
ನಾವು ನಮ್ಮ ಮಾತಿಗಿಂತ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ನಾನು ಕುಳಿತುಕೊಂಡು ಪ್ರೇಮದ ಬಗ್ಗೆ ಒಂದು ಘಂಟೆಯ ಕಾಲ ಮಾತನಾಡಬಹುದು, ಆದರೆ ಕೇವಲ ಒಂದು ನೋಟವು ಆ ಒಂದು ಘಂಟೆಯ ಮಾತಿಗಿಂತ ಹೆಚ್ಚಿನದನ್ನು ತಿಳಿಯಪಡಿಸುವುದು. ಅಲ್ಲವೇ?
ನೀವು ಸುಮ್ಮನೇ ಮಕ್ಕಳ ಕಣ್ಣಿನೊಳಗೆ ನೋಡಿ, ಮತ್ತು ಅವುಗಳು ಪ್ರೇಮವನ್ನು ತಿಳಿಯಪಡಿಸುತ್ತವೆ. ನಿಮ್ಮ ಮನೆಯಲ್ಲಿರುವ ಒಂದು ನಾಯಿಮರಿ, ಒಂದು ನಾಯಿ ಸುತ್ತು ಸುತ್ತು ತಿರುಗುತ್ತದೆ ಮತ್ತು ತನ್ನೆಲ್ಲಾ ಪ್ರೀತಿಯನ್ನು ತಿಳಿಯಪಡಿಸುತ್ತದೆ. "ಓ, ನಾನು ನಿನ್ನನ್ನು ಬಹಳಷ್ಟು ಪ್ರೀತಿಸುತ್ತೇನೆ" ಎಂದು ಅದು ಹೇಳಬೇಕಾಗಿಲ್ಲ. ಒಂದು ಮಗು ಕೂಡಾ, "ಓ ಅಮ್ಮಾ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಬೇಕಾಗಿಲ್ಲ. ವಾಸ್ತವವಾಗಿ, ಪ್ರೇಮವನ್ನು ಶಬ್ದಗಳಲ್ಲಿ ಹೇಳುವುದು, ಪ್ರೇಮವನ್ನು ಕಡಿಮೆ ಮಾಡುತ್ತದೆ.
ಸಂತೋಷವಾಗಿರುವುದು ಹೇಗೆ ಎಂಬುದರ ಬಗ್ಗೆ ಮೂರು ಘಂಟೆಗಳ ಒಂದು ಉಪನ್ಯಾಸವನ್ನು ನೀಡಿದ ಒಬ್ಬರ ಬಗ್ಗೆ ನಾನು ಕೇಳಿದ್ದೆ. ಉಪನ್ಯಾಸದ ಕೊನೆಯಲ್ಲಿ, ಎಲ್ಲರೂ ಬಹಳ ಬೇಸರಗೊಂಡಿದ್ದರು, ಯಾಕೆಂದರೆ ಅವರು ಅತಿಯಾಗಿ ಮಾತನಾಡಿದ್ದರು. ಅವರು ಒಂದು ಘಂಟೆ ಮಾತನಾಡಬೇಕಾಗಿತ್ತು, ಆದರೆ ಅವರು ಮೂರು ಘಂಟೆಗಳ ವರೆಗೆ ಮಾತನಾಡಿದ್ದರು!
ವಿಷಯವೆಂದರೆ - ನಮ್ಮೆಲ್ಲರೊಳಗೆ ಆಳದಲ್ಲಿ ಏನೋ ಇದೆ. ನಮ್ಮೊಳಗಿರುವ ಈ ಮಗ್ಗುಲಿನೊಂದಿಗೆ ನಾವು ಸಂಪರ್ಕದಲ್ಲಿರುವಾಗ ನಾವು ವಿಶ್ವಾಸಾರ್ಹ, ಸಂತೋಷ ಮತ್ತು ಆನಂದಭರಿತರಾಗಿರುತ್ತೇವೆ. ನಮ್ಮೊಳಗೆ ಧನ್ಯತೆಯ ಒಂದು ಭಾವವಿರುತ್ತದೆ. ಧ್ಯಾನವೆಂದರೆ ನಮ್ಮೊಳಗಿರುವ ಆ ಆಳವಾದ ಮಗ್ಗುಲಿನ ಕಡೆಗೆ ಗಮನ ಹರಿಸುವುದು.
ನೋಡಿ, ಜೀವನವು ಬಹಳ ಚಿಕ್ಕದು; ೭೦-೮೦ ವರ್ಷಗಳ ಜೀವನವು ಬಹಳ ವೇಗವಾಗಿ ಹೋಗುತ್ತದೆ, ಅಲ್ಲವೇ? ಅರ್ಧದಷ್ಟು ಸಮಯವನ್ನು ನಾವು ನಿದ್ರಿಸುವುದರಲ್ಲಿ ಕಳೆಯುತ್ತೇವೆ ಮತ್ತು ಉಳಿದ ಸಮಯವನ್ನು ನಾವು ಬಚ್ಚಲುಮನೆಯಲ್ಲಿ, ಹೋಟೇಲುಗಳಲ್ಲಿ, ಟ್ರಾಫಿಕ್ ಜಾಮುಗಳಲ್ಲಿ, ದೂರುವುದರಲ್ಲಿ ಅಥವಾ ಚಿಂತಿಸುವುದರಲ್ಲಿ ಕಳೆಯುತ್ತೇವೆ; ಮತ್ತು ಜೀವನವು ಮುಗಿದುಬಿಡುತ್ತದೆ! ಅದಕ್ಕಾಗಿಯೇ ನಾನು ಹೇಳಿದುದು, ನಾವು ಈ ಆರು ವಿಷಯಗಳನ್ನು ಮರೆಯಬಾರದು. ಬೌದ್ಧಿಕವಾಗಿ ಉತ್ತೇಜಿಸುವ ತತ್ವಶಾಸ್ತ್ರ, ಸ್ವಲ್ಪ ಸಂಗೀತ, ಒಂದು ಸ್ವಲ್ಪ ನೃತ್ಯ, ವಿಜ್ಞಾನ ಮತ್ತು ಸೇವೆಗಳಲ್ಲಿ ಸಮಯವನ್ನು ಕಳೆಯಿರಿ.
ಹಾಗಾದರೆ ನಾನು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀನಾ? ಯಾವುದಾದರೂ ವಿಷಯ ಉಳಿದಿದೆಯಾ?

(ಸಭಿಕರು: ಸಾವು)

ಸಾವು ಅನಿವಾರ್ಯ. ಸಾವೆಂದರೆ ಮನಸ್ಸು ತನ್ನನ್ನು ತಾನು ಶರೀರದಿಂದ ಬೇರ್ಪಡಿಸಿಕೊಳ್ಳುವುದು ಮತ್ತು ಶರೀರ ಹಾಗೂ ಮನಸ್ಸಿನ ನಡುವಿನ ಕೊಂಡಿ; ಅಂದರೆ ಉಸಿರು ನಿಂತುಹೋಗುವುದಾಗಿದೆ. ಹೇಗಾದರೂ, ಥರ್ಮೋಡೈನಮಿಕ್ಸ್ ನಿಯಮದ ಪ್ರಕಾರ, ಪದಾರ್ಥ ಮತ್ತು ಚೈತನ್ಯವನ್ನು ಯಾವತ್ತೂ ನಾಶಪಡಿಸಲು ಸಾಧ್ಯವಿಲ್ಲವೆಂಬುದು ನಿಮಗೆ ಗೊತ್ತು. ಮನಸ್ಸು ಚೈತನ್ಯವಾಗಿದೆ, ಅದು ನಾಶವಾಗುವುದಿಲ್ಲ. ಆದುದರಿಂದ, ನೀವು ಶರೀರದಿಂದ ಬೇರೆಯಾದರೂ ಕೂಡಾ, ನೀವು ಇನ್ನೂ ಅಲ್ಲಿರುವಿರಿ. ನೀವು ಧ್ಯಾನದಲ್ಲಿ ಇನ್ನೂ ಹೆಚ್ಚು ಆಳಕ್ಕೆ ಹೋದ ಹಾಗೆ ನೀವು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಆಗ ನಿಮಗೆ, ನಿಮಗೆ ಸಾವೇ ಇಲ್ಲವೆಂಬುದು ಅರ್ಥವಾಗುತ್ತದೆ. ನೀವು ಕೇವಲ ಒಂದು ಶರೀರದಿಂದ ಇನ್ನೊಂದಕ್ಕೆ ಸಾಗುತ್ತಿರುತ್ತೀರಿ. ನಿಮ್ಮ ಸಾವಿನ ಭಯವು ದೂರವಾಗುತ್ತದೆ; ಅದು ಮಾಯವಾಗುತ್ತದೆ.

(ಸಭಿಕರು: ಮೋಹ )

ನೀವು ಮೋಹವನ್ನು ತೊಡೆದುಹಾಕಲು ಯಾಕೆ ಬಯಸುವಿರಿ? ಯಾಕೆಂದರೆ ಅದು ನಿಮಗೆ ನೋವನ್ನು ಕೊಡುತ್ತದೆ, ಸರಿಯಾ? ನೀವು ನಿಮ್ಮ ಮೋಹವನ್ನು ಯಾಕೆ ಇನ್ನೂ ದೊಡ್ಡದಾಗಿಸಬಾರದು? ನೀವು ನಿಮ್ಮ ಮಕ್ಕಳ, ಹೆತ್ತವರ, ಸಂಗಾತಿಯ, ಮಿತ್ರರ ಕಡೆಗೆ ಮೋಹಕ್ಕೊಳಗಾಗುವುದು ನಿಮಗೆ ಸ್ವಾಭಾವಿಕವಾದುದು; ಅದರಲ್ಲೇನೂ ತಪ್ಪಿಲ್ಲ. ಹೀಗಿದ್ದರೂ, ನೀವು ಸ್ವಾಮಿತ್ವ ಸ್ಥಾಪಿಸಬಾರದು. ನಿಮ್ಮ ಮೋಹವು ಸ್ವಾಮಿತ್ವವಾಗುವಾಗ, ನೀವು ಸಂಬಂಧಪಟ್ಟ ವ್ಯಕ್ತಿಗೆ ತೊಂದರೆ ಕೊಡುತ್ತಿರುತ್ತೀರಿ ಮತ್ತು ನೀವು ನಿಮಗೆ ಕೂಡಾ ತೊಂದರೆಯನ್ನು ತಂದುಕೊಳ್ಳಬಹುದು. ಆದುದರಿಂದ, ನಿಮ್ಮ ಮೋಹವನ್ನು ವಿಶಾಲಗೊಳಿಸಿ. ನೀವು ನಿಮ್ಮ ಮಕ್ಕಳ ಕಡೆಗೆ ಮೋಹಗೊಂಡಿರುವಂತೆಯೇ, ನೀವು ಇತರ ಮಕ್ಕಳ ಕಡೆಗೂ ಮೋಹಗೊಂಡಿರಬೇಕು. ಅದು ಒಂದೇ ಪ್ರಮಾಣದಲ್ಲಿರದಿದ್ದರೂ, ಅದು ಕನಿಷ್ಠಪಕ್ಷ ೫೦% ಅಥವಾ ಹೆಚ್ಚಿರಬಹುದು.

(ಸಭಿಕರು: ಸೇವೆ )

ಸೇವೆಯು ಆವಶ್ಯಕ. ನಾವೆಲ್ಲರೂ ಜೀವನದಲ್ಲಿ ಸ್ವಲ್ಪ ಸೇವೆಯನ್ನು ಮಾಡಬೇಕು. ಇತರರಿಗೆ ಸಹಾಯ ಮಾಡಲು, ಆನಂದ ತರಲು ಮತ್ತು ಇತರರಲ್ಲಿ ಒಂದು ನಗುವನ್ನು ತರಲು ನಮ್ಮಿಂದ ಏನೇನು ಸಾಧ್ಯವೋ ಅದನ್ನು ನಾವು ಮಾಡಬೇಕು.
ಸೇವೆಯು ನಿಮಗೆ ಅಪಾರ ತೃಪ್ತಿಯನ್ನು ತರುತ್ತದೆ. ನೀವು ಸೇವೆ ಮಾಡುವಾಗ, ನಿಮ್ಮ ಮೋಹವು ನಿಮ್ಮಲ್ಲಿ ದುಃಖವನ್ನು ಉಂಟುಮಾಡುವುದಿಲ್ಲ. ಒಬ್ಬರು ಹೆತ್ತವರಾಗಿ, ನೀವು ನಿಮ್ಮ ಮಕ್ಕಳ ಸೇವೆ ಮಾಡಲು ಇರುವಿರಿ; ಮಕ್ಕಳಾಗಿ, ನೀವು ನಿಮ್ಮ ಹೆತ್ತವರ ಸೇವೆ ಮಾಡಲು ಇರುವಿರಿ; ಒಬ್ಬರು ಸಂಗಾತಿಯಾಗಿ, ನೀವು ಪರಸ್ಪರರನ್ನು ಆಧರಿಸಲು ಇರುವಿರಿ. ಈ ಭಾವನೆಯೊಂದಿಗೆ, ಈ ಮನೋಭಾವದೊಂದಿಗೆ ನೀವು ಹೋಗುವಾಗ, ಜೀವನವು ಒಂದು ಬೇರೆಯ ಆಯಾಮವನ್ನು ತೆಗೆದುಕೊಳ್ಳುತ್ತದೆ.

(ಸಭಿಕರು: ಧ್ಯಾನ )

ಧ್ಯಾನವು ನಿಮ್ಮ ಶರೀರವನ್ನು ಬಲಪಡಿಸುವುದು. ಅದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಸುತ್ತದೆ, ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅದು ನಿಮ್ಮ ಮನಸ್ಸು ಬಹಳ ಕೇಂದ್ರಿತವಾಗಿರುವಂತೆ ಮಾಡುತ್ತದೆ ಮತ್ತು ಬುದ್ಧಿಯು ಬಹಳ ತೀಕ್ಷ್ಣವಾಗಲು ಸಹಾಯ ಮಾಡುತ್ತದೆ. ಅದು ನಿಮ್ಮ ಭಾವನೆಗಳು ಬಹಳಷ್ಟು ಒಳ್ಳೆಯದಾಗುವಂತೆ ಮಾಡುತ್ತದೆ, ನಿಮಗೆ ಒಳಗಿನಿಂದ ಬಹಳ ಚೆನ್ನಾಗಿ ಅನಿಸುತ್ತದೆ ಮತ್ತು ನಿಮ್ಮ ಕಂಪನಗಳು ಬಹಳ ಧನಾತ್ಮಕವಾಗುತ್ತವೆ. ಇವುಗಳು ಲಾಭಗಳಲ್ಲಿ ಕೆಲವು. ಇನ್ನೂ ಹಲವಾರಿವೆ. ಮತ್ತೆ, ಧ್ಯಾನದೊಂದಿಗೆ ಒಳ್ಳೆಯ ಅದೃಷ್ಟ ಕೂಡಾ ಬರುತ್ತದೆ.

ಪ್ರಶ್ನೆ: ಶ್ರೀ ಶ್ರೀಯವರೆ, ದಯವಿಟ್ಟು ನಮಗೆ ಕ್ಷಮೆಯ ಬಗ್ಗೆ ತಿಳಿಸಿ. ನಾವು ಕ್ಷಮಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕ್ಷಮಿಸಬೇಡ, ಅದನ್ನು ಹಿಡಿದಿಟ್ಟುಕೋ! ಯಾರಿಗೆ ನಷ್ಟ? ಸಂಭವಿಸಿದ ಒಂದು ಘಟನೆ, ಅದು ಸಂಭವಿಸಿತು! ಅದು ನಿನ್ನ ತಪ್ಪಿದ್ದಿರಲಿ ಅಥವಾ ಬೇರೆ ಯಾರದ್ದೋ ತಪ್ಪಿದ್ದಿರಲಿ, ಅದು ಆಗಿ ಹೋಯಿತು. ಹೇಗಾದರೂ, ನೀನದನ್ನು ಹಿಡಿದಿಟ್ಟುಕೊಂಡಿದ್ದರೆ, ಆಗ ನೀನು ದುಃಖಿಸುತ್ತಿರುವೆ.
ನಿನ್ನ ಮೂಲಕ ಒಂದು ತಪ್ಪು ನಡೆಯುವ ಒಂದು ಸ್ಥಾನದಲ್ಲಿ ನೀನಿರುವುದಾಗಿ ಕಲ್ಪಿಸಿಕೋ. ಬೇರೊಬ್ಬರು ನಿನ್ನನ್ನು ಕ್ಷಮಿಸದೇ ಇದ್ದರೆ, ನಿನ್ನನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ನಿನ್ನ ಜೀವಮಾನವಿಡೀ ನಿನ್ನನ್ನು ಹೊಣೆಗಾರನನ್ನಾಗಿಸಿದರೆ, ನಿನಗೆ ಹೇಗನ್ನಿಸಬಹುದು? ನಿನಗೆ ಬಹಳ ಕೆಟ್ಟದನ್ನಿಸಬಹುದು, ಅಲ್ಲವೇ?
ನೀನು ಒಬ್ಬ ವ್ಯಕ್ತಿಯನ್ನು ಕ್ಷಮಿಸುವುದು ಅವರಿಗಾಗಿಯಲ್ಲ, ಆದರೆ ನಿನ್ನ ಸ್ವಂತ ಮನಸ್ಸಿಗಾಗಿ, ನೀನು ನಿನ್ನ ಮನಸ್ಸನ್ನು ರಕ್ಷಿಸಲು ಸಾಧ್ಯವಾಗುವುದಕ್ಕಾಗಿ. ನೋಡು, ಜೀವನದಲ್ಲಿ, ಕೆಲವು ಹಿತಕರ ವಿಷಯಗಳು ನಡೆಯುತ್ತವೆ, ಕೆಲವು ಅಹಿತಕರ ವಿಷಯಗಳು ನಡೆಯುತ್ತವೆ. ಕೆಲವು ವಿಷಯಗಳು ಆಗಬೇಕೆಂದು ನಾವು ಬಯಸುತ್ತೇವೆ, ಕೆಲವು ವಿಷಯಗಳು ಜೀವನದಲ್ಲಿ ಆಗಬೇಕೆಂದು ನಾವು ಬಯಸುವುದಿಲ್ಲ. ಏನೆಲ್ಲಾ ಸಂಭವಿಸಿತೋ, ಅದು ಸಂಭವಿಸಿತು; ಮುಗಿಯಿತು! ನೀನದನ್ನು ಹಿಂದಕ್ಕೆ ಹಾಕಿ ಮುಂದೆ ಸಾಗು - ಅದು ಬಹಳ ಮುಖ್ಯವಾದುದು. ನಿನ್ನ ಸ್ವಂತ ಮನಸ್ಸನ್ನು ರಕ್ಷಿಸುವುದಕ್ಕಾಗಿ ಮಾತ್ರ ಅದನ್ನು ಮಾಡು.
ವಾಸ್ತವವಾಗಿ, ನೀನೊಂದು ವಿಶಾಲ ದೃಷ್ಟಿಕೋನದಿಂದ ನೋಡಿದರೆ, ಒಂದು ಪರಿಸ್ಥಿತಿಯಲ್ಲಿ  ಪ್ರತಿಯೊಬ್ಬ ಅಪರಾಧಿಯೂ ಒಬ್ಬ ಅಜ್ಞಾನದ ಬಲಿಪಶುವಾಗಿದ್ದಾನೆ ಎಂಬುದು ನಿನಗೆ ಕಂಡುಬರುತ್ತದೆ. ವಿಷಯಗಳನ್ನು ನೀನು ಈ ದೃಷ್ಟಿಯಿಂದ ನೋಡುವಾಗ, ನೀನು ತನ್ನಿಂತಾನೇ ಸಹಾನುಭೂತಿಯನ್ನು ಹೊಂದುವೆ. ಸೆರೆಮನೆಗಳಲ್ಲಿ ನಾವು ಕಲಿಸುವಾಗ ಇದನ್ನು ನಾವು ಆ ಖೈದಿಗಳಲ್ಲಿ ನೋಡಿದ್ದೇವೆ. ಸೆರೆಮನೆಗಳಲ್ಲಿ ಖಂಡನೆಗೊಳಗಾಗಿರುವ  ಈ ಜನರು ಒಳ್ಳೆಯವರು, ಆದರೆ ಅಜ್ಞಾನದಿಂದಾಗಿ, ಅರಿವಿನ ಕೊರತೆಯಿಂದಾಗಿ, ಅವರೊಂದು ತಪ್ಪನ್ನು ಮಾಡಿದರು.
ನಿಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಲು, ನೀವು ಈ ಬೇರೆ ಬೇರೆ ಜಾಗಗಳಲ್ಲಿ ಐದು ದಿನಗಳನ್ನು ಕಳೆಯಬೇಕೆಂದು ನಾನು ಸಲಹೆ ನೀಡುತ್ತೇನೆ:
೧. ಮಕ್ಕಳೊಂದಿಗೆ ಶಾಲೆಯಲ್ಲಿ
೨. ಶಾಲೆಯಲ್ಲಿ ಒಬ್ಬ ಶಿಕ್ಷಕರಾಗಿ. ನೀವು ಮಕ್ಕಳಿಗೆ ಕಲಿಸುವಾಗ, ಕಲಿಸುವುದೆಂದರೆ ಏನು ಎಂಬುದು ನಿಮಗೆ ತಿಳಿಯುತ್ತದೆ. ಒಬ್ಬ ಶಿಕ್ಷಕರ ಪಾತ್ರವು ನಿಮ್ಮನ್ನು ಬಹಳ ಶ್ರೀಮಂತರನ್ನಾಗಿ ಮಾಡುತ್ತದೆ.
೩. ಒಂದು ಮಾನಸಿಕ ಆಸ್ಪತ್ರೆಯಲ್ಲಿ. ನೀವು ಮಾನಸಿಕವಾಗಿ ಅಸ್ವಸ್ಥರಾದ ಜನರೊಂದಿಗಿರುವಾಗ, ಅದು ಕೂಡಾ ಹೊರಗಿನ ಪ್ರಪಂಚದಲ್ಲಿರುವುದಕ್ಕೆ ಸಮಾನವಾದುದು ಎಂಬುದು ನಿಮಗೆ ತಿಳಿಯುತ್ತದೆ. ಜನರು ತಮಗೇನು ಬೇಕೋ ಅದನ್ನು ಸುಮ್ಮನೇ ಹೇಳಿಬಿಡುತ್ತಾರೆ. ಒಮ್ಮೆ ನಿಮಗೆ ಈ ಅನುಭವವಾದ ಮೇಲೆ, ಯಾರಿಗೂ ನಿಮ್ಮನ್ನು ದುಃಖಪಡಿಸಲು ಸಾಧ್ಯವಿಲ್ಲ.
೪. ಒಂದು ಸೆರೆಮನೆಯಲ್ಲಿ. ನೀವು ಆ ಖೈದಿಗಳೊಂದಿಗಿರುವಾಗ, ಒಬ್ಬ ನಿರಪರಾಧಿಯ ನೋವು ಮತ್ತು ದುಃಖ ನಿಮಗೆ ಅರ್ಥವಾಗುವುದು.
೫. ಒಂದು ಹೊಲದಲ್ಲಿ. ನೀವು ರೈತರೊಂದಿಗಿರುವಾಗ; ಮಣ್ಣು ಅಗೆದುಕೊಂಡು, ಬೀಜಗಳನ್ನು ಬಿತ್ತಿಕೊಂಡು, ಕೆಸರಿನಲ್ಲಿ ಕೆಲಸ ಮಾಡಿಕೊಂಡು, ಕೇವಲ ಅಲ್ಲಿರುವುದು, ನಿಮ್ಮನ್ನು ಯಾವುದೋ ತಿಳಿಯದ ರೀತಿಯಲ್ಲಿ ಶ್ರೀಮಂತವಾಗಿಸುತ್ತದೆ.
ಮತ್ತೆ ಒಂದು ದಿನ, ನೀವು ಕೇವಲ ನೀವಾಗಿಯೇ, ಪ್ರಕೃತಿಯೊಂದಿಗೆ ಕಳೆಯಬೇಕು.

ಪ್ರಶ್ನೆ: ಗುರುದೇವ, ನಾನು ಸಿಕ್ಕಿಹಾಕಿಕೊಂಡಿರುವೆನೆಂದು ನನಗನ್ನಿಸುತ್ತದೆ. ಆರ್ಟ್ ಆಫ್ ಲಿವಿಂಗಿನ ಜ್ಞಾನವನ್ನು ಹರಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ನಿನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ನೀನು ಮಾಡಬೇಕಾಗಿಲ್ಲ. ನಿನಗೆ ಮಾಡಲು ಸಾಧ್ಯವಾಗದೇ ಇರುವುದನ್ನು ನೀನು ಮಾಡಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ನಿನಗೆ ಯಾವುದನ್ನೆಲ್ಲಾ ಮಾಡಲು ಸಾಧ್ಯವಿದೆಯೋ, ನೀನು ಮಾಡಬೇಕು. ಇದು ಯಾಕೆಂದರೆ, ನಾವು ಸೇವೆ ಮಾಡುವಾಗ, ಅದು ಇತರ ಜನರಿಗೆ ಒಳ್ಳೆಯದನ್ನು ಮಾಡುತ್ತದೆ, ಮತ್ತು ಅದು ನಮಗೆ ಅಪಾರ ತೃಪ್ತಿಯನ್ನು ಕೂಡಾ ತರುತ್ತದೆ.
ಸರಿ, ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನೀವು ನನಗೆ ಕೊಡಬೇಕೆಂದು ನಾನು ಬಯಸುತ್ತೇನೆ. ನೀವೊಂದು ದೊಡ್ಡ ನಗುವಿನೊಂದಿಗೆ ಮನೆಗೆ ಹೋಗಬೇಕೆಂದು ನಾನು ಬಯಸುತ್ತೇನೆ. ಯಾವಾಗೆಲ್ಲಾ ನೀವು ಖಿನ್ನರಾಗಿರುವಿರೆಂದು, ದುಃಖದಲ್ಲಿರುವಿರೆಂದು, ಸಂತೋಷವಾಗಿ ಅಥವಾ ಚೆನ್ನಾಗಿಲ್ಲವೆಂದು ನಿಮಗೆ ಅನ್ನಿಸುವುದೋ, ನೀವು ಒಬ್ಬಂಟಿಯಲ್ಲವೆಂಬುದನ್ನು ನೆನಪಿಸಿಕೊಳ್ಳಿ! ನಾನು ನಿಮ್ಮೊಂದಿಗಿದ್ದೇನೆ! ಮತ್ತು ಇಡೀ ಆರ್ಟ್ ಆಫ್ ಲಿವಿಂಗ್ ಕುಟುಂಬ ನಿಮ್ಮೊಂದಿಗಿದೆ.
ನನ್ನ ಕನಸೆಂದರೆ, ಎಲ್ಲರನ್ನೂ ಒಂದು ದೊಡ್ಡ ನಗುವಿನೊಂದಿಗೆ ನೋಡುವುದು ಮತ್ತು ಸಂಪೂರ್ಣ ಪ್ರಪಂಚವನ್ನು ಒಂದು ಕುಟುಂಬವಾಗಿ ನೋಡುವುದು. ಒಂದು ಹಿಂಸಾ-ಮುಕ್ತ, ಒತ್ತಡ-ಮುಕ್ತ ಮತ್ತು ಸಂತೋಷವಾದ ಸಮಾಜವನ್ನು ಮಾಡಲು ನೀವೆಲ್ಲರೂ ನನ್ನೊಂದಿಗೆ ಈ ಕನಸಿನಲ್ಲಿ ಸೇರಿಕೊಳ್ಳಬೇಕೆಂದು ನಾನು ಬಯಸುತ್ತೇನೆ.

ಮಂಗಳವಾರ, ಮಾರ್ಚ್ 19, 2013

ಆಗುವುದೆ೦ಬ ಛಲದಿ೦ದ ಮುನ್ನುಗ್ಗಿ

ಮಾರ್ಚ್ ೧೯, ೨೦೧೩
ಸ್ಪ್ಲಿಟ್, ಕ್ರೊಯೇಷಿಯಾ

ನಾವು, "ನಮಸ್ಕಾರ", "ಹಲೋ", "ನೀವು ಹೇಗಿದ್ದೀರಿ?", "ಸ್ವಾಗತ" ಎಂದು ಹೇಳುವ ಮೂಲಕ ಜನರೊಂದಿಗೆ ಹಲವಾರು ಕುಶಲೋಪರಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅದು ಬಹಳ ಮೇಲ್ನೋಟದ್ದು. ಅದು ನಿಜವಾಗಿ ನಿಮ್ಮ ಹೃದಯದಿಂದ ಬರುವುದಿಲ್ಲ. ನೀವೊಂದು ವಿಮಾನದಿಂದ ಕೆಳಗಿಳಿಯುವಾಗ ಗಗನಸಖಿಯು, "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುವುದರ ಮೂಲಕ ಹೇಗೆ ಅಭಿನಂದಿಸುವಳೋ ಅದೇ ರೀತಿ. ಅವಳದನ್ನು ನಿಜವಾದ ಮನಸ್ಸಿನಿಂದ ಹೇಳುವುದಿಲ್ಲ. ಹಲವಾರು ಸಾರಿ ನಾವು, "ಸ್ವಾಗತ", "ನಮಸ್ಕಾರ", "ಶುಭರಾತ್ರಿ", ಇದೆಲ್ಲವನ್ನೂ ಹೇಳುತ್ತೇವೆ, ಆದರೆ ಅದು ತನ್ನ ಹಿಂದೆ ಯಾವುದೇ ಭಾವನೆಯನ್ನು ಒಯ್ಯುವುದಿಲ್ಲ. ಹೀಗಾದರೂ, ಅದೇ ಶಬ್ದಗಳು ನಿಮ್ಮಲ್ಲಿಗೆ ನಿಮಗೆ ಬಹಳ ಹತ್ತಿರದ ಅಥವಾ ನಿಮಗೆ ಬಹಳ ಪ್ರಿಯವಾದವರಿಂದ ಬರುವಾಗ, ಅದು ಸ್ವಲ್ಪ ಕಂಪನಗಳನ್ನು, ಸ್ವಲ್ಪ ಭಾವನೆಯನ್ನು ತನ್ನ ಹಿಂದೆ ಒಯ್ಯುತ್ತದೆ. ನಿಮ್ಮ ಅಜ್ಜಿಯು ನಿಮ್ಮಲ್ಲಿ, "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಾಗ, ಅದು ಗಗನಸಖಿಯು "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಂತೆ ಅಲ್ಲ. ಅದರಲ್ಲಿ ಸ್ವಲ್ಪ ಭಾವನೆಗಳಿರುತ್ತವೆ, ಸ್ವಲ್ಪ ಕಂಪನಗಳಿರುತ್ತವೆ, ಅಲ್ಲವೇ?

ನಾವು ನಮ್ಮ ಜೀವನವನ್ನು ಮೇಲ್ನೋಟದ ಹಂತದಲ್ಲಿ ಜೀವಿಸಿದರೆ, ಜೀವನವು ಬಹಳ ಶುಷ್ಕವೂ ನಿರಾಸಕ್ತಿದಾಯಕವೂ ಆಗುತ್ತದೆ. ಆದರೂ, ನಾವು ನಮ್ಮ ಹೃದಯದಿಂದ ಪರಸ್ಪರರೊಂದಿಗೆ ಬೆರೆಯುವಾಗ, ಅಲ್ಲಿ ಸ್ವಲ್ಪ ನಿಷ್ಕಪಟತೆಯಿರುತ್ತದೆ. ಆ ನಿಷ್ಕಪಟತೆಯು ಜೀವನವನ್ನು ಹೆಚ್ಚು ಸುಂದರ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ. ನೀವದನ್ನು ಎಲ್ಲಾ ಸಮಯದಲ್ಲೂ ಮಾಡಲು ಸಾಧ್ಯವಾಗದೇ ಇರಬಹುದೆಂಬುದು ನನಗೆ ಅರ್ಥವಾಗುತ್ತದೆ, ಆದರೆ ನೀವದನ್ನು ದೈನಂದಿನ ಜೀವನದಲ್ಲಿ ಸ್ವಲ್ಪ ಸಮಯವಾದರೂ ಮಾಡಬೇಕು. ನಮ್ಮ ಮಾನವ ಅಸ್ತಿತ್ವಕ್ಕೆ ಬಹಳ ಕೇಂದ್ರವಾಗಿರುವ ಈ ಮಗ್ಗುಲಿನ ಕಡೆಗೆ ನಾವು ನೋಡುವಾಗ, ನಮ್ಮಲ್ಲಿ ಮತ್ತು ನಮ್ಮ ಪರಿಸರದಲ್ಲಿ ಒಂದು ದೊಡ್ಡ ಬದಲಾವಣೆಯಾಗುತ್ತದೆ.

ಎಲ್ಲವೂ ಆಗುವುದು ಕಂಪನಗಳ ಕಾರಣದಿಂದ. ನಾವು ಎಲ್ಲಾ ಸಮಯದಲ್ಲೂ ಕಂಪನಗಳನ್ನು ಹೊರಸೂಸುತ್ತಿರುತ್ತೇವೆ. ನಮ್ಮ ಕಂಪನಗಳು ಧನಾತ್ಮಕವಾಗಿದ್ದರೆ, ಆಗ ನಮ್ಮ ಸುತ್ತಲಿರುವ ಜನರು ಸಂತೋಷವಾಗಿರುತ್ತಾರೆ. ನಾವು ಸಂತೋಷವಾಗಿದ್ದರೆ, ಆಗ ಎಲ್ಲವೂ ನಮ್ಮ ಬಯಕೆಗನುಸಾರವಾಗಿ ನಡೆಯುತ್ತದೆ. ನಮ್ಮ ಕಂಪನಗಳು ಋಣಾತ್ಮಕವಾಗಿದ್ದರೆ, ಯಾರೂ ನಮ್ಮೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಮತ್ತು ನಾವು ನಮ್ಮಲ್ಲಿಯೇ ಸಂತೋಷವಾಗಿರುವುದಿಲ್ಲ.

ನಾವು ನಮ್ಮ ಕಂಪನಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಲು ಒಂದು ದಾರಿಯಿದೆ ಮತ್ತು ಅದುವೇ, ಉಸಿರಾಟದ ತಂತ್ರಗಳು, ಧ್ಯಾನ, ಜ್ಞಾನ ಹಾಗೂ ನಮ್ಮ ಅಸ್ತಿತ್ವದ ಪದರುಗಳಾದ ಶರೀರ, ಉಸಿರು, ಮನಸ್ಸು, ಬುದ್ಧಿ ಮೊದಲಾದವುಗಳ ಬಗ್ಗೆ ತಿಳಿಯುವುದರ ಮೂಲಕ. ಸ್ವಲ್ಪವೇ ಸ್ವಲ್ಪ ತಿಳುವಳಿಕೆಯೊಂದಿಗೆ ಮತ್ತು ನಮ್ಮಲ್ಲಿಯೇ ಆಳವಾಗಿ ವಿಶ್ರಾಮ ಮಾಡುವುದರೊಂದಿಗೆ, ನಮ್ಮ ಋಣಾತ್ಮಕ ಕಂಪನಗಳು ಬದಲಾಗಿ ಬಹಳ ಧನಾತ್ಮಕವಾಗುತ್ತವೆ.

ನೀವು ತೃಪ್ತರಾದಾಗ, ನಿಮ್ಮ ಹೃದಯವು ಶುದ್ಧ ಹಾಗೂ ಸ್ಪಷ್ಟವಾಗಿರುವಾಗ, ಮತ್ತು ನೀವು ಯಾರ ಬಗ್ಗೆಯೂ ಕೆಟ್ಟ ಭಾವನೆಗಳನ್ನು ಹೊಂದದೇ ಇರುವಾಗ, ಇತರರನ್ನು ಗುಣಪಡಿಸುವ ಮತ್ತು ಹರಸುವ ಶಕ್ತಿಯನ್ನು ನೀವು ಗಳಿಸುತ್ತೀರಿ. ಅದು ಸಾಧ್ಯವಿದೆ. ತಮ್ಮೊಳಗಿರುವ ಕಂಪನಗಳನ್ನು ಸಂಪೂರ್ಣವಾಗಿ ಧನಾತ್ಮಕ ಶಕ್ತಿಯನ್ನಾಗಿ ಬದಲಾಯಿಸಿದ ಪಕ್ಷದಲ್ಲಿ, ಪ್ರತಿಯೊಬ್ಬರಿಗೂ ಇತರರನ್ನು ಗುಣಪಡಿಸಲು ಸಾಧ್ಯವಿದೆ.

ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಂಡಾಗ, ನಾವು ಶಾಂತಿಯನ್ನು ಪಸರಿಸುತ್ತೇವೆ. ನಮಗೆ ತಿಳಿದಿದೆಯೆಂದು ನಾವು ಏನನ್ನು ಅಂದುಕೊಳ್ಳುತ್ತೇವೋ, ಅದು ವಾಸ್ತವಿಕತೆಯ ಕೇವಲ ಒಂದು ಸಣ್ಣ ಭಾಗ ಮಾತ್ರ. ಹಲವಾರು ರಹಸ್ಯಗಳಿವೆ, ವಾಸ್ತವಿಕತೆಯ ಹಲವಾರು ಮಟ್ಟಗಳಿವೆ. ನೀವು ಸ್ವಲ್ಪ ಹೆಚ್ಚು ಕಾಲಾವಕಾಶ ಮಾಡಿಕೊಂಡರೆ, ನಾವು ಜ್ಞಾನದಲ್ಲಿ ಆಳಕ್ಕೆ ಹೋಗಬಹುದು, ಮತ್ತು ಜ್ಞಾನವಿರುವಾಗ, ಯಾವುದಕ್ಕೂ ನಿಮ್ಮ ಸಂತೋಷವನ್ನು ದೂರ ಸರಿಸಲು ಸಾಧ್ಯವಿಲ್ಲ.

ನಿನ್ನೆ ಜ಼ಗ್ರೇಬಿನಲ್ಲಿ ನಾನು, "ಉತ್ತಮ ಕ್ರೊಯೇಷಿಯಕ್ಕಾಗಿ ಸ್ವಯಂಸೇವಕರಾಗಿ" ಎಂಬ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಅಲ್ಲಿ ಸುಮಾರು ೨,೫೦೦ ಜನರಿದ್ದರು. ನಾನು ಅವರಲ್ಲಿ ಪ್ರತಿಯೊಬ್ಬರೂ, ಸಮಾಜವನ್ನು ಒಂದು ಉತ್ತಮ ಜಾಗವನ್ನಾಗಿ ಮಾಡುವುದಕ್ಕಾಗಿ ಪ್ರತಿದಿನವೂ ಒಂದು ಗಂಟೆ ಅಥವಾ ಒಂದು ವಾರದಲ್ಲಿ ಏಳು ಗಂಟೆಗಳನ್ನು ಕೊಡಬೇಕೆಂದು ಹೇಳಿದೆ. ಅದನ್ನೇ ನಾವು ಇಲ್ಲೂ ಸಹ ಮಾಡಬೇಕೆಂದು ನಿಮಗೆ ಅನ್ನಿಸುತ್ತಿಲ್ಲವೇ?

ನಾವೆಲ್ಲರೂ ಸ್ವಲ್ಪ ಕೊಡುಗೆಯನ್ನು ನೀಡಬಹುದಾದಂತಹ  ಕೆಲವು ವಿಷಯಗಳು ಹೀಗಿವೆ:

ಮೊದಲನೆಯದಾಗಿ, ನಮಗೊಂದು ಒತ್ತಡಮುಕ್ತ ಮತ್ತು ಹಿಂಸಾಮುಕ್ತ ಸಮಾಜ ಬೇಕು. ಆತ್ಮೀಯರಾಗಿರುವುದು ಹೇಗೆ, ಸಹಕಾರಿಯಾಗಿರುವುದು ಹೇಗೆ ಎಂಬುದನ್ನು ನಾವು ಜನರಿಗೆ ಕಲಿಸಬೇಕಾಗಿದೆ ಮತ್ತು ಹಿಂಸಾತ್ಮಕ ಪ್ರವೃತ್ತಿಗಳನ್ನು ತೊಡೆದುಹಾಕಲು ಅವರಿಗೆ ಸಹಾಯ ಮಾಡಬೇಕು.

ಎರಡನೆಯದಾಗಿ, ನಾವು ಜನರಿಗೆ ವಿವಿಧ ರೀತಿಯ ವ್ಯಸನಗಳಿಂದ ದೂರವಾಗಲು ಸಹಾಯ ಮಾಡಬೇಕು. ಸುದರ್ಶನ ಕ್ರಿಯೆ ಮತ್ತು ಧ್ಯಾನಗಳ ನಿಯಮಿತ ಅಭ್ಯಾಸವು, ವ್ಯಸನಗಳಿಂದ ಹೊರಬರಲು ಜನರಿಗೆ ಸಹಾಯ ಮಾಡುವುವು.

ಮೂರನೆಯದಾಗಿ, ಭ್ರಷ್ಟಾಚಾರದಿಂದ ಮುಕ್ತವಾಗಿರುವ ಒಂದು ಸಮಾಜವು ನಮಗೆ ಬೇಕು. ಎಲ್ಲಿ ಆತ್ಮೀಯತೆಯ ಭಾವವು ಕೊನೆಯಾಗುವುದೋ ಅಲ್ಲಿಂದ ಭ್ರಷ್ಟಾಚಾರವು ಪ್ರಾರಂಭವಾಗುವುದಾಗಿದೆ.

ಜೊತೆಗೆ, ನಿಜವಾಗಿ ಸಹಾಯದ ಅವಶ್ಯಕತೆಯಿರುವ ಜನರ ಬಳಿಗೆ ನಾವು ತಲುಪಬೇಕಾಗಿದೆ. ಆದುದರಿಂದ, ನೀವೆಲ್ಲರೂ ಬೇರೆ ಬೇರೆ ಪ್ರದೇಶಗಳಲ್ಲಿ ೨೦ರಿಂದ ೩೦ ಜನರ ತಂಡಗಳನ್ನು ರೂಪಿಸಲು ಸಾಧ್ಯವಾದರೆ ಮತ್ತು ವಾರದಲ್ಲಿ ಏಳು ಗಂಟೆಗಳನ್ನು ನಗುತ್ತಾ ಸಮಾಜ ಸೇವೆ ಮಾಡುತ್ತಾ ಕಳೆಯಲು ಸಾಧ್ಯವಾದರೆ, ಆಗ ನಾವು ಸಂತೋಷದ ಅಲೆಗಳನ್ನು ಸೃಷ್ಟಿಸಬಹುದು.

ನೀವು ಪ್ರಶ್ನೆಗಳನ್ನು ಕೇಳುವ ಮೊದಲು ಇನ್ನೊಂದು ವಿಷಯ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಬಿಡಿ! ನೀವು ದೇಶದ ಬಗ್ಗೆ, ಕ್ರೊಯೇಷಿಯಾದ ಬಗ್ಗೆ, ಜಗತ್ತಿನ ಬಗ್ಗೆ ಚಿಂತಿಸಬೇಕೆಂದು ನಾನು ಬಯಸುತ್ತೇನೆ. ನಿಮ್ಮೆಲ್ಲಾ ವೈಯಕ್ತಿಕ, ಖಾಸಗಿ ಚಿಂತೆಗಳು ಮತ್ತು ದುಗುಡಗಳನ್ನು ನೀವು ನನಗೆ ನೀಡಿ.

ಪ್ರಶ್ನೆ: ಗುರುದೇವ, ಮೂಲಭೂತ ಸೌಕರ್ಯಗಳ ರಚನೆ ಮತ್ತು ವ್ಯವಸ್ಥೆಗಳನ್ನು ಸೃಷ್ಟಿಸುವುದರ ಮೂಲಕ ಶಾಂತಿಯನ್ನು ಸೃಷ್ಟಿಸಲು ಜಗತ್ತು ಬಿಲಿಯಗಟ್ಟಲೆ ಡಾಲರುಗಳನ್ನು ವ್ಯಯಿಸುತ್ತಿದೆ. ಆದರೂ, ಹೃದಯವನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಮಾನವರ ಮನಸ್ಸು ತಿಳಿಯದು. ಜಗತ್ತಿನಲ್ಲಿ ಶಾಂತಿಯ ನಿಮ್ಮ ಕರೆಗೆ ಓಗೊಡುವುದಕ್ಕಾಗಿ ನನ್ನ ಕಲ್ಪನೆಯೆಂದರೆ, ಮನಸ್ಸು ಮತ್ತು ಹೃದಯಗಳ ಈ ಜ್ಞಾನವನ್ನು ಜಗತ್ತಿನಲ್ಲಿ ಎಲ್ಲರಿಗೂ ತಲಪಿಸುವಂತೆ ಮಾಡುವುದು. ಹಾಗಾಗಿ ನಾವು ನಿಮ್ಮೊಂದಿಗೆ ಸಂಯುಕ್ತ ರಾಷ್ಟ್ರಗಳಿಗೆ, ಹಿಂಸೆಯಿಂದ ಜನರು ನರಳಾಡುತ್ತಿರುವ ಎಲ್ಲಾ ಪ್ರದೇಶಗಳಿಗೆ ಹೋಗಬಹುದು. 

ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು, ಒಳ್ಳೆಯದು, ಒಳ್ಳೆಯದು. ಫೆಬ್ರವರಿ ೩ ರಂದು ಭಾರತದ ನವದೆಹಲಿಯಲ್ಲಿ, ೧೦ ವಿವಿಧ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ನಾನು, ’ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಅದೊಂದು ಬಹಳ ಯಶಸ್ವಿ ಪ್ರಾರಂಭವಾಗಿತ್ತು, ಮತ್ತು ಅಂತಹ ಒಂದು ವಾತಾವರಣವನ್ನು ಸೃಷ್ಟಿಸಲು ನಾವು ಯುನಿಸೆಫ್ ಹಾಗೂ ಹಲವಾರು ಇತರ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವೆವು.

ಇಲ್ಲಿ ಸ್ಪ್ಲಿಟ್ ನಲ್ಲಿರುವ ನಿಮ್ಮಲ್ಲಿ ಹಲವರು ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಾಗಿ ಈ ಸಂದೇಶವನ್ನು ಕ್ರೊಯೇಷಿಯಾದಲ್ಲಿ ಹರಡಬೇಕೆಂಬುದು ನನ್ನ ಇಚ್ಛೆಯಾಗಿದೆ. ನೀವು ಭಾರತಕ್ಕೆ ಬರುವಂತೆ ಆಹ್ವಾನಿಸಲೂ ನಾನು ಬಯಸುತ್ತೇನೆ. ನೀವು ಭಾರತಕ್ಕೆ ಬರುವಾಗ, ನೀವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಬಹುದು, ಧ್ಯಾನಗಳನ್ನು ಮಾಡಬಹುದು ಮತ್ತು ಇನ್ನೂ ಆಳವಾದ ಅನುಭವಗಳನ್ನು ಪಡೆಯಬಹುದು. ಜೊತೆಗೆ, ನೀವು ಆಯುರ್ವೇದದ ಅನುಭವವನ್ನು ಕೂಡಾ ಪಡೆಯಬಹುದು.

ಬೆಂಗಳೂರಿನಲ್ಲಿ ನಾವು ಜಗತ್ತಿನಲ್ಲಿ ಅತ್ಯುತ್ತಮವಾದ ಆಯುರ್ವೇದ ಆಸ್ಪತ್ರೆಯನ್ನು ಹೊಂದಿದ್ದೇವೆಂಬುದು ನಿಮಗೆ ತಿಳಿದಿದೆಯೇ? ಅಲೋಪತಿಯಲ್ಲಿ ಚಿಕಿತ್ಸೆಯಿಲ್ಲದ, ಉಬ್ಬಿರುವ ರಕ್ತನಾಳಗಳಂತಹ ಸಮಸ್ಯೆಗಳನ್ನು ಅದು ಗುಣಪಡಿಸಬಲ್ಲದು. ಹಾಗೆಯೇ, ದಂತ ಚಿಕಿತ್ಸೆಯು ಬಹಳ ಚೆನ್ನಾಗಿದೆ. ನೋವಿಲ್ಲದೆಯೇ, ಒಂದು ಹನಿ ರಕ್ತ ಮತ್ತು ಅರಿವಳಿಕೆಯಿಲ್ಲದೆಯೇ ವೈದ್ಯರು ನಿಮ್ಮ ಹಲ್ಲುಗಳನ್ನು ಕೀಳಬಲ್ಲರು; ಅದೂ ಸಾಮಾನ್ಯ ವೆಚ್ಚದ ಐದರಲ್ಲಿ ಒಂದು ಅಥವಾ ಹತ್ತರಲ್ಲಿ ಒಂದು ಭಾಗದಷ್ಟು ವೆಚ್ಚದಲ್ಲಿ. ಆಯುರ್ವೇದ ಚಿಕಿತ್ಸೆಯು ಬಹಳ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ್ದಾಗಿದೆ. ಪ್ರಾಚೀನ ವೈದ್ಯಕೀಯ ವಿಜ್ಞಾನಗಳಿಂದ ನೀವು ಕಲಿಯಬಹುದಾದ ವಿಷಯಗಳು ಹಲವಾರಿವೆ.

ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಕೊಡಿ, ಮತ್ತು ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹೋಗಿ.

ಪ್ರಶ್ನೆ: ಇಲ್ಲಿರುವುದಕ್ಕಾಗಿ ಮತ್ತು ನೀವು ಹೇಳಿರುವ ಅಮೂಲ್ಯವಾದ ವಿಷಯಗಳಿಗಾಗಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸಲು ಬಯಸುತ್ತೇನೆ. ’ಸಮಾಜ ಸೇವೆ’ ಎಂದು ನೀವು ಹೇಳಿದಾಗ ನೀವು ಉದ್ದೇಶಿಸಿದುದು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನೇ ಅಥವಾ ರೆಡ್ ಕ್ರಾಸಿನಲ್ಲಿ ಅಥವಾ ಅದಕ್ಕೆ ಸಮಾನವಾದುದರಲ್ಲಿ ಸ್ವಯಂಸೇವೆ ಮಾಡುವಂತೆ ಸೇವೆ ಮಾಡುವುದನ್ನೇ?

ಶ್ರೀ ಶ್ರೀ ರವಿ ಶಂಕರ್: ಹೌದು. ಏನೆಲ್ಲಾ ಮತ್ತು ಎಲ್ಲೆಲ್ಲಾ ಅದರ ಅಗತ್ಯವಿರುವುದೋ ಹಾಗೂ ಯಾವೆಲ್ಲಾ ರೀತಿಯಲ್ಲಿ ಅದರ ಅಗತ್ಯವಿದೆಯೋ ಹಾಗೆ.

ಸೋಮವಾರ, ಮಾರ್ಚ್ 18, 2013

ಬದುಕಿಗೊ೦ದು ಪ್ರೇರಕ ಶಕ್ತಿ

ಝಗ್ರೇಬ್, ಕ್ರೊಯೇಷಿಯಾ
೧೮ ಮಾರ್ಚ್, ೨೦೧೩

ಹೃದಯದ ಭಾಷೆಯು ಶಬ್ದಗಳನ್ನು ಮತ್ತು ಭಾವನೆಗಳನ್ನು ಮೀರಿರುತ್ತದೆ.

ವಿಶ್ವದಲ್ಲಿ ನಾವು ತಿಳಿದಿರುವೆವೆಂದು ಯಾವುದನ್ನು ಅಂದುಕೊಂಡಿರುವೆವೋ ಅದು, ನಮಗೆ ಯಾವುದು ತಿಳಿದಿಲ್ಲವೋ, ಅದಕ್ಕೆ ಹೋಲಿಸಿದರೆ ಬಹಳ ಕಡಿಮೆ. ಯಾವುದು ನಮಗೆ ತಿಳಿದಿಲ್ಲವೋ ಅದು ಬಹಳಷ್ಟಿದೆ ಮತ್ತು ತಿಳಿಯದೇ ಇರುವುದಕ್ಕೆ ಧ್ಯಾನವು ಬಾಗಿಲಾಗಿದೆ. ಈ ಹೊಸ ಆಯಾಮದೊಂದಿಗೆ ಕೈಗಳನ್ನು ಕುಲುಕಿ.

ಧ್ಯಾನವು ಹಲವಾರು ಲಾಭಗಳನ್ನು ತರುತ್ತದೆ.

ಮೊದಲನೆಯದಾಗಿ, ಅದು ಬಹಳಷ್ಟು ಶಾಂತಿ ಮತ್ತು ಆನಂದವನ್ನು ತರುತ್ತದೆ. ಎರಡನೆಯದಾಗಿ, ಅದು ಎಲ್ಲರಿಗಾಗಿಯೂ ಅಪಾರ ಪ್ರೀತಿಯನ್ನು ತರುತ್ತದೆ. ಮೂರನೆಯದಾಗಿ, ಅದು ಸೃಜನಶೀಲತೆಯನ್ನು, ಅಂತಃಸ್ಫುರಣ ಸಾಮರ್ಥ್ಯವನ್ನು ಮತ್ತು
ಭೌತಿಕ ವಿಶ್ವವನ್ನು ಮೀರಿ ಇರುವುದರ ಬಗೆಗಿನ ಜ್ಞಾನವನ್ನು ತರುತ್ತದೆ.

ಶಿಶುಗಳಾಗಿ, ನಾವೆಲ್ಲರೂ ಕೆಲವು ವಿಶೇಷ ಕಂಪನಗಳನ್ನು ಹೊಂದಿದ್ದೆವು. ಪ್ರಪಂಚದ ಎಲ್ಲಿಯೇ ಇರುವ ಶಿಶುಗಳಾದರೂ ನಿಮ್ಮನ್ನು ಆಕರ್ಷಿಸುತ್ತಾರೆ. ಅವರಲ್ಲಿ ಒಂದು ನಿರ್ದಿಷ್ಟ ಶುದ್ಧತೆ, ಒಂದು ನಿರ್ದಿಷ್ಟ ಕಂಪನವಿದೆ. ಅವರು ಬಹಳ ವಿಶೇಷವಾದವರು. ನಾವು ದೊಡ್ಡವರಾಗಿ ಬೆಳೆದಂತೆ, ನಾವು ಮೂಲತಃ ಹುಟ್ಟುವಾಗ ಜೊತೆಯಲ್ಲಿದ್ದ ಆ ಚೈತನ್ಯದಿಂದ, ಆ ಶಕ್ತಿಯಿಂದ ಎಲ್ಲೋ ಬೇರ್ಪಟ್ಟೆವು.

ನಿಮಗೆಲ್ಲರಿಗೂ ಈ ಅನುಭವವಾಗಿದೆಯೇ - ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ವ್ಯಕ್ತಿಗಳ ಕಡೆಗೆ ತಿರಸ್ಕಾರವುಂಟಾಗುತ್ತದೆ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೇ ನೀವು ಕೆಲವು ಜನರ ಕಡೆಗೆ ಸೆಳೆಯಲ್ಪಡುತ್ತೀರಿ? ಇದು ನಿಮಗೆ ಆಗಲಿಲ್ಲವೇ? ಪ್ರತಿದಿನವೂ ಇದು ಆಗುತ್ತದೆ; ಎಲ್ಲಾ ಸಮಯದಲ್ಲೂ. ಇದು ಯಾಕೆಂದರೆ ನಮ್ಮ ಸಂಪೂರ್ಣ ಜೀವನವು ಕಂಪನಗಳಿಂದಾಗಿದೆ.

ನಮ್ಮಲ್ಲಿ ಪ್ರತಿಯೊಬ್ಬರೂ ಹೊರಹೊಮ್ಮುವ ಒಂದು ನಿರ್ದಿಷ್ಟ ಕಂಪನವಿದೆ. ಪ್ರತಿಯೊಬ್ಬರೂ ಚೈತನ್ಯವನ್ನು ಹೊರಹೊಮ್ಮುತ್ತಿರುತ್ತಾರೆ. ನಮ್ಮ ಮನಸ್ಸು ಸಿಕ್ಕಿಹಾಕಿಕೊಂಡಿರುವಾಗ, ಚೈತನ್ಯವು ಋಣಾತ್ಮಕವಾಗುತ್ತದೆ. ಮನಸ್ಸು ಮುಕ್ತವಾಗಿರುವಾಗ, ಚೈತನ್ಯವು ಬಹಳ ಧನಾತ್ಮಕವಾಗಿರುತ್ತದೆ.

ಮನೆಯಲ್ಲಾಗಲೀ ಶಾಲೆಯಲ್ಲಾಗಲೀ; ನಮ್ಮ ಚೈತನ್ಯವನ್ನು ಧನಾತ್ಮಕವಾಗಿಸುವುದು ಹೇಗೆಂಬುದನ್ನು ಯಾರೂ ನಮಗೆ ಕಲಿಸುವುದಿಲ್ಲ, ಅಲ್ಲವೇ? ನಕರಾತ್ಮಕತೆಯನ್ನು, ಕೋಪವನ್ನು, ಮಾತ್ಸರ್ಯವನ್ನು, ಲೋಭವನ್ನು, ನಿರಾಶೆಯನ್ನು, ಖಿನ್ನತೆಯನ್ನು ಧನಾತ್ಮಕ ಚೈತನ್ಯವಾಗಿ ನಾವು ಹೇಗೆ ಬದಲಾಯಿಸಬಹುದು ಎಂಬುದನ್ನು ನಾವು ಕಲಿಯಬೇಕಾಗಿದೆ, ಮತ್ತು ಅಲ್ಲಿಯೇ ಉಸಿರಾಟವು ಸಹಾಯ ಮಾಡುವುದು.

ಕೆಲವು ಉಸಿರಾಟದ ತಂತ್ರಗಳು ಮತ್ತು ಧ್ಯಾನದ ಮೂಲಕ ನಾವು ಋಣಾತ್ಮಕ ಚೈತನ್ಯವನ್ನು ಧನಾತ್ಮಕ ಚೈತನ್ಯವಾಗಿ ಬದಲಾಯಿಸಬಹುದು. ನಾವು ಧನಾತ್ಮಕವಾಗಿ ಮತ್ತು ಸಂತೋಷವಾಗಿರುವಾಗ, ನಾವು ನಮ್ಮ ಸುತ್ತಲೂ ಸಂತೋಷವನ್ನು ಹರಡುತ್ತೇವೆ. ಇದು ಒಂದು ಹಂತ; ಪ್ರಾಯೋಗಿಕವಾದ ಮತ್ತು ಅತ್ಯಂತ ಅಗತ್ಯವಿರುವ ಧ್ಯಾನದ ಲಾಭವಾಗಿದೆ.

ನಾನು ಹೇಳಿದಂತೆ, ಧ್ಯಾನದಿಂದ ಇತರ ಲಾಭಗಳಿವೆ. ನಾವು ಹೆಚ್ಚು ಸೃಜನಶೀಲರಾಗಲು, ಅಂತಃಸ್ಫುರಣ ಸಾಮರ್ಥ್ಯವನ್ನು ಹೊಂದಲು ಬಯಸುವಾಗ ಮತ್ತು ಐದರಿಂದ ಹತ್ತು ವರ್ಷಗಳ ಬಳಿಕ ನಮಗೆ ಏನಾಗಲಿದೆಯೆಂಬುದನ್ನು ನಾವು ತಿಳಿಯಲು ಬಯಸುವಾಗ, ಧ್ಯಾನವು ಅದಕ್ಕಿರುವ ಉತ್ತರವಾಗಿದೆ.

ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಲು ಸ್ವಲ್ಪ ಹೆಚ್ಚು ಪ್ರಯತ್ನದ ಅಗತ್ಯವಿದೆ. ಅಂದರೆ, ಪ್ರಯತ್ನವಿಲ್ಲದ ಪ್ರಯತ್ನ (ಧ್ಯಾನ). ನಿಜವಾಗಿ, ಅದು ಪ್ರಯತ್ನ ಕೂಡಾ ಅಲ್ಲ. ಅದು ಕೇವಲ, ಸ್ವಲ್ಪ ಹೆಚ್ಚು ಸಮಯದ ವಿಷಯ. ನಾವು ಒಂದು ವಾರದ ಅಥವಾ ಹತ್ತು ದಿನಗಳ ಸಮಯವನ್ನು ತೆಗೆದುಕೊಂಡು, ನಮ್ಮ ಸ್ವಂತ ಜೀವನದ ಅತೀಂದ್ರಿಯ ಕ್ಷೇತ್ರಗಳ ಆಳಕ್ಕೆ ಹೋಗಬೇಕಾಗಿದೆ. ನಾನು ಹೇಳುತ್ತೇನೆ ಕೇಳಿ, ಅದು ನಿಮ್ಮನ್ನು ಬಹಳ ಸಮರ್ಥರನ್ನಾಗಿ, ಶಕ್ತಿಶಾಲಿಗಳನ್ನಾಗಿ, ಪ್ರಸನ್ನರನ್ನಾಗಿ ಮತ್ತು ತೃಪ್ತರನ್ನಾಗಿ ಮಾಡುತ್ತದೆ.

ಪ್ರಾಚೀನ ಕಾಲದಲ್ಲಿ, ಜನರು ಧ್ಯಾನದ ಈ ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅವರು ಇದನ್ನೊಂದು ರಹಸ್ಯವಾಗಿ ಇಟ್ಟುಕೊಳ್ಳುತ್ತಿದ್ದರು ಮತ್ತು ಕೇವಲ ಕೆಲವೇ ವಿಶೇಷ ವ್ಯಕ್ತಿಗಳು ಇದನ್ನು ಹೊಂದಿದ್ದರು. ಸಾಧಾರಣವಾಗಿ ಇದನ್ನು ರಾಜಮನೆತನದವರಿಗೆ ಮತ್ತು ಹೆಚ್ಚಿನ ಬೌದ್ಧಿಕ ಮಟ್ಟ ಹೊಂದಿದ್ದ ಜನರಿಗೆ ಕೊಡಲಾಗುತ್ತಿತ್ತು. ನಾನು ವಿಭಿನ್ನವಾಗಿ ಯೋಚಿಸಿದೆ. ಇದು ಸಂಪೂರ್ಣ ಮಾನವಕುಲದ ಸ್ವತ್ತು ಮತ್ತು ಪ್ರತಿಯೊಬ್ಬ ಮನುಷ್ಯನೂ ಇದನ್ನು ಕಲಿಯಬೇಕೆಂದು ನಾನು ಯೋಚಿಸಿದೆ. ಇದು ಒಂದು ಸಂಸ್ಕೃತಿಯ, ಒಂದು ನಾಗರಿಕತೆಯ, ಒಂದು ಧರ್ಮದ ಅಥವಾ ಒಂದು ದೇಶದ ಸ್ವತ್ತಲ್ಲ. ಅದು ಸಂಪೂರ್ಣ ಮಾನವಕುಲಕ್ಕೆ ಸೇರಿದುದು. ನಾವು ನಂತರ ಇದನ್ನು ಜಗತ್ತಿನಲ್ಲಿ ಹರಡಲು ಶುರು ಮಾಡಿದೆವು ಮತ್ತು ಇವತ್ತು, ಪ್ರಪಂಚದ ಎಲ್ಲೆಡೆಗಳಲ್ಲಿ ಜನರು ಈ ಸುಂದರವಾದ ಜ್ಞಾನದಿಂದ ಲಾಭವನ್ನು ಪಡೆಯುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ, ನಾನು ಇಲ್ಲಿದ್ದಾಗ, ಬಹಳಷ್ಟು ಅನಿಶ್ಚಿತತೆಯಿತ್ತು. ಜನರು ಕೇಳುತ್ತಿದ್ದರು, "ಏನಾಗಬಹುದು, ನಾವೊಂದು ಬಹಳ ಯುವದೇಶವಾಗಿರುವೆವು."

ನಾನಂದೆ, "ಚಿಂತಿಸಬೇಡಿ, ದೇಶವು ಅಭಿವೃದ್ಧಿ ಹೊಂದುವುದು, ಅದು ಬಹಳ ಸ್ಥಿರವಾಗುವುದು."

ಇವತ್ತು ಪ್ರಪಂಚದ ಎಲ್ಲೆಡೆಗಳಲ್ಲಿ ಬಿಕ್ಕಟ್ಟಿದೆಯೆಂಬುದು ನನಗೆ ಗೊತ್ತು. ಪುನಃ ನಾನು ನಿಮಗೆ ಹೇಳುತ್ತಿದ್ದೇನೆ, ಚಿಂತಿಸಬೇಡಿ! ನಾವು ಈ ಕಷ್ಟಕಾಲವನ್ನು ಹಾದುಹೋಗುವೆವು, ಅಲ್ಲಿ ಬೆಳಕಿರುತ್ತದೆ.

ಎಲ್ಲಿ ಒಂದು ಬಿಕ್ಕಟ್ಟಿರುವುದೋ, ನಾನು ಅಲ್ಲಿಗೆ ಹೋಗಿ, "ಯಾವುದೇ ಬಿಕ್ಕಟ್ಟು ಇರಲಾರದು. ಸಂಗತಿಗಳು ಉತ್ತಮವಾಗುವುವು" ಎಂದು ಹೇಳುವುದು ನನ್ನ ಅಭ್ಯಾಸವಾಗಿ ಹೋಗಿದೆ ಎಂದು ನನಗನಿಸುತ್ತದೆ ಮತ್ತು ಅದು ಹಾಗೇ ಆಗುತ್ತದೆ. ಸಂಗತಿಗಳು ಉತ್ತಮವಾಗುತ್ತವೆ.

ಅಮೇರಿಕಾದಲ್ಲಿ, ೧೯೯೯ರಲ್ಲಿ, ಜನರು ಯೋಚಿಸಿದರು, ೨೦೦೦ದಲ್ಲಿ ಪ್ರಪಂಚ ಕೊನೆಯಾಗುವುದೆಂದು. ಜನರು ಹಾಲಿನ ಹುಡಿ ಮತ್ತು ಕಿರಾಣಿ ಸಾಮಾನುಗಳನ್ನು ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಿಡುತ್ತಿದ್ದರು. ಅಮೇರಿಕಾದ ಪಶ್ಚಿಮ ತೀರದಲ್ಲಿ ವಾಸಿಸುತ್ತಿದ್ದ ಹಲವಾರು ಜನರು ತಮ್ಮ ಮನೆಗಳನ್ನು ಮಾರಿ ಕೊಲರಾಡೋಕ್ಕೆ ಹೋಗುತ್ತಿದ್ದರು. ನಾನು ಹಲವಾರು ನಗರಗಳಿಗೆ ಪ್ರಯಾಣಿಸಿದೆ ಮತ್ತು, "ಚಿಂತಿಸಬೇಡಿ, ಏನೂ ಆಗುವುದಿಲ್ಲ. ಎಲ್ಲವೂ ಎಂದಿನಂತಿರುವುದು" ಎಂದು ಹೇಳಿದೆ ಮತ್ತು ಅದು ಎಂದಿನಂತೆಯೇ ಇದೆ!

ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನ ಹೃದಯದ ಆಳದಲ್ಲಿ ಎಷ್ಟೊಂದು ಸಂಪತ್ತನ್ನಿರಿಸಿದೆ, ನಮಗೊಂದು ಪಾಸ್ ವರ್ಡ್ ಮಾತ್ರ ಬೇಕಾಗಿದೆ ಮತ್ತು ನಾನು ನಿಮಗೆ ಹೇಳುತ್ತಿರುವ ಹಾಗೂ ನೀವು ಎಲ್ಲರಿಗೂ ವರ್ಗಾಯಿಸಬಹುದಾದ (ಸ೦ಕೇತ ಪದ) ಶಬ್ದ ಇಲ್ಲಿದೆ, ಅದು ’ಚಿಂತಿಸಬೇಡಿ.’

ವಿಶ್ವದಲ್ಲಿ ಒಂದು ಶಕ್ತಿ, ಒಂದು ಬಲವಿದೆ. ಅದು ನಿಮ್ಮನ್ನು, ನಿಮ್ಮ ಹೆತ್ತವರು ಪ್ರೀತಿಸಿದುದಕ್ಕಿಂತಲೂ, ನಿಮ್ಮ ಮಿತ್ರರು ಪ್ರೀತಿಸಿದುದಕ್ಕಿಂತಲೂ ಅಥವಾ ನಿಮ್ಮ ಸಂಗಾತಿ ಪ್ರೀತಿಸಿದುದಕ್ಕಿಂತಲೂ ಹೆಚ್ಚು ಪ್ರೀತಿಸುತ್ತದೆ. ನಿಮ್ಮ ಬಗ್ಗೆ ಕಾಳಜಿ ವಹಿಸುವ ಒಂದು ಕ್ಷೇತ್ರ, ಒಂದು ಚೈತನ್ಯವಿದೆ. ನೀವು ಸುಮ್ಮನೇ ವಿಶ್ರಾಮ ಮಾಡಬೇಕು.

ನಮ್ಮ ಪ್ರಜ್ಞೆಯು ಬಹಳ ಹಳೆಯದು, ಬಹಳ ಪ್ರಾಚೀನವಾದುದು. ಥರ್ಮೋಡೈನಮಿಕ್ಸಿನ ಮೂರನೆಯ ನಿಯಮದ ಪ್ರಕಾರ, ಚೈತನ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಮನಸ್ಸು ಅಂತಹ ಒಂದು ಚೈತನ್ಯ. ಅದು ಒಂದು ದೀರ್ಘ ಸಮಯದಿಂದ ಅಲ್ಲಿದೆ ಮತ್ತು ಈ ಪ್ರಜ್ಞೆಯು ಹಲವಾರು ಸಂಸ್ಕಾರಗಳನ್ನು ತೆಗೆದುಕೊಳ್ಳುತ್ತದೆ. ಇದರ ಅಧ್ಯಯನ ಮಾಡುವುದು ಬಹಳ ಸ್ವಾರಸ್ಯವಾದುದು.

ನಾನು ಪ್ರಪಂಚದ ಸುತ್ತಲೂ ಪ್ರಯಾಣ ಮಾಡುವಾಗ, ನಾನು ಅಪರಿಚಿತರನ್ನು ಭೇಟಿಯಾಗುತ್ತಿರುವೆನೆಂದು ನನಗನಿಸುವುದಿಲ್ಲ. ಅವರು ನನ್ನ ಭಾಗ ಮತ್ತು ನನಗೆ ಅವರನ್ನು ತಿಳಿದಿದೆಯೆಂದು ನನಗನಿಸುತ್ತದೆ. ನಮಗೆ ಪರಸ್ಪರರ ಹೆಸರುಗಳು ತಿಳಿಯದೇ ಇರಬಹುದು, ಆದರೆ ನಮಗೆ ಪರಸ್ಪರರ ಆತ್ಮಗಳು ತಿಳಿದಿದೆ; ನಮಗೆ ಸಂಬಂಧದ ಅನುಭವವಾಗುತ್ತದೆ. ನಾವೆಲ್ಲರೂ ಒಂದು ಕುಟುಂಬಕ್ಕೆ ಸೇರಿದವರು, ನಾವೆಲ್ಲರೂ ಪರಸ್ಪರರನ್ನು ತಿಳಿದಿದ್ದೇವೆ ಎಂದು ನನಗೆ ಯಾವತ್ತೂ ಅನಿಸಿದೆ.

ನಾನು ನಿಮಗೆ ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ, ಸಂಶಯಗಳ ಬಗ್ಗೆ. ಸಂಶಯಗಳು ಯಾವತ್ತೂ ಇರುವುದು ಧನಾತ್ಮಕವಾದುದರ ಬಗ್ಗೆ.

ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಿದರೆ, ನೀವೇನು ಹೇಳುತ್ತೀರಿ? "ನಿಜವಾಗಿ?"
ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ದ್ವೇಷಿಸುತ್ತೇನೆ" ಎಂದು ಹೇಳಿದರೆ, ನೀವು, "ನಿಜವಾಗಿ?" ಎಂದು ಯಾವತ್ತೂ ಹೇಳುವುದಿಲ್ಲ. ನಾವು ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಂಶಯಿಸುತ್ತೇವೆ, ಆದರೆ ಒಬ್ಬರ ಅಪ್ರಾಮಾಣಿಕತೆಯನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಅದೇ ರೀತಿಯಲ್ಲಿ, ನೀವು ನಿಮ್ಮ ಸಾಮರ್ಥ್ಯಗಳನ್ನು ಸಂಶಯಿಸುತ್ತೀರಿ, ನೀವು ನಿಮ್ಮ ಬಲಹೀನತೆಗಳನ್ನು ಯಾವತ್ತೂ ಸಂಶಯಿಸುವುದಿಲ್ಲ, ಅಲ್ಲವೇ?

ನೀವು ಸಂತೋಷವಾಗಿರುವಾಗ, "ಇದು ನಿಜವೇ? ನಾನು ಕನಸು ಕಾಣುತ್ತಿರುವೆನೇ?" ಎಂದು ನೀವು ಕೇಳುತ್ತೀರಿ. ಆದರೆ ನೀವು ದುಃಖಿತರಾಗಿರುವಾಗ, "ಇದು ನಿಜವೇ?" ಎಂದು ನೀವು ಕೇಳುವುದಿಲ್ಲ. ನಿಮ್ಮ ಖಿನ್ನತೆಯ ಬಗ್ಗೆ ನೀವು ಬಹಳ ಖಚಿತವಾಗಿರುತ್ತೀರಿ. ನಾವು ನಮ್ಮ ಖಿನ್ನತೆಯನ್ನು ಯಾವತ್ತೂ ಸಂಶಯಿಸುವುದಿಲ್ಲ! ಹೀಗೆ, ಸಂಶಯವು ಯಾವತ್ತೂ ಧನಾತ್ಮಕವಾಗಿರುವ ವಿಷಯದ ಬಗ್ಗೆ ಇರುವುದು. ಋಣಾತ್ಮಕವಾದ ವಿಷಯವನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಒಬ್ಬ ಜ್ಞಾನಿಯು ಇದನ್ನು ತಿರುಗಿಸುತ್ತಾನೆ ಮತ್ತು ಋಣಾತ್ಮಕವಾದುದನ್ನು ಸಂಶಯಿಸಲು ತೊಡಗುತ್ತಾನೆ.

ಒಬ್ಬರು ಬಂದು ನಿಮ್ಮಲ್ಲಿ, ಇಂತಿಂತವರು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದರು ಅಂತ ಹೇಳುತ್ತಾರೆಂದಿಟ್ಟುಕೊಳ್ಳೋಣ, ನೀವು ಕೂಡಲೇ ಅದನ್ನು ನಂಬುತ್ತೀರಿ. ಹಾಗೆ ಮಾಡಬೇಡಿ. "ಇಲ್ಲ, ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ ಮತ್ತು ನೀವು ಆ ವ್ಯಕ್ತಿಯನ್ನು ಕರೆದು, "ನೀನು ಕೆಟ್ಟ ವಿಷಯಗಳನ್ನು ಹೇಳುವೆಯೆಂದು ಒಬ್ಬರು ಹೇಳುತ್ತಾರೆ, ಆದರೆ ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ. ನೀವು ಹಾಗೆ ಹೇಳುವಾಗ, ಆ ವ್ಯಕ್ತಿಯು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದ್ದರೂ ಕೂಡಾ, ಅವನ ಮನಸ್ಸು ಬದಲಾಗುವುದು.

ಒಬ್ಬ ವ್ಯಕ್ತಿಯು ಸಾಕಷ್ಟು ಸ್ಥಿತಿವಂತನಾಗಿಲ್ಲದಿದ್ದರೆ, ಅದು ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಅಂತಹ ಹಲವಾರು ಪೀಡಿತ ಕುಟುಂಬಗಳು ಸಮುದಾಯ ಮತ್ತು ದೇಶದ ಮೇಲೆ ಪ್ರಭಾವ ಬೀರುತ್ತವೆ. ತಿಳುವಳಿಕೆ ಅಥವಾ ಜ್ಞಾನವು ವ್ಯಕ್ತಿಗಳಿಗೆ ಸಾಮರ್ಥ್ಯವನ್ನು ತರುತ್ತದೆ ಮತ್ತು ಏನೇ ಬಂದರೂ ಒಬ್ಬರು ಒಂದು ಮುಗುಳ್ನಗೆಯನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ! ಹೀಗೆ, ಆರ್ಟ್ ಆಫ್ ಲಿವಿಂಗ್ ಎಂಬುದು, ಮುಗುಳ್ನಗೆಯನ್ನು ತಾಜಾ ಮತ್ತು ಜೀವಂತಿಕೆಯಲ್ಲಿರಿಸುವುದು ಹೇಗೆ ಮತ್ತು ಸಮಾಜಕ್ಕೆ ಸೇವೆ ಮಾಡುತ್ತಾ ಇರುವುದು ಹೇಗೆ ಎಂಬುದರ ಬಗ್ಗೆಯಾಗಿದೆ. ಮುಗುಳ್ನಗುತ್ತಾ ಇರಿ ಮತ್ತು ಸೇವೆ ಮಾಡಿ!
ನಿಮ್ಮಲ್ಲಿರುವ ಯಾವುದೇ ಒತ್ತಡ ಅಥವಾ ಯಾವುದೇ ತೊಂದರೆಯನ್ನು ನಿಮ್ಮಿಂದ ದೂರ ಒಯ್ಯಲು ನಾನು ಬಂದಿರುವೆನು. ನಿಮ್ಮ ಮುಖದ ಮೇಲೆ ಒಂದು ದೊಡ್ಡ ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ. ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹಿಂದಿರುಗಿ ಹೋಗಿ! ನಿಮ್ಮೆಲ್ಲಾ ಚಿಂತೆಗಳನ್ನು ಮತ್ತು ಒತ್ತಡಗಳನ್ನು ನನಗೆ ಕೊಡಿ. ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಯಿದೆಯೆಂದು ಮತ್ತು ನೀವು ಒಬ್ಬಂಟಿಯೆಂದು ನಿಮಗೆ ಅನ್ನಿಸಿದಾಗಲೆಲ್ಲಾ, ನೀವು ಒಬ್ಬಂಟಿಯಲ್ಲವೆಂಬುದನ್ನು ತಿಳಿಯಿರಿ, ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನನಗೆ ಕೊಡಿ ಮತ್ತು ನೀವು ಮುಗುಳ್ನಗುವುದನ್ನು ಹಾಗೂ ಸೇವೆ ಮಾಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ.

ಪ್ರಶ್ನೆ: ಪ್ರಸ್ತುತದಲ್ಲಿ ಭೂಮಿಯು ಒಳಗಾಗುತ್ತಿರುವ ಕೆಲವು ಬದಲಾವಣೆಗಳ ಬಗ್ಗೆ ದಯವಿಟ್ಟು ನಮಗೆ ಹೇಳಿ.

ಶ್ರೀ ಶ್ರೀ ರವಿ ಶಂಕರ್: ಹೌದು, ಭೂಮಿಯು ನಿರಂತರವಾಗಿ ಬದಲಾಗುತ್ತದೆ. ಆದರೆ ಮಾನವ ಕುಲವು ಪರಿಸರದೊಂದಿಗೆ ಏನು ಮಾಡಿದೆಯೋ ಅದು ದುರದೃಷ್ಟಕರ. ಗಣಿಗಳನ್ನು ಮಾಡಲು, ಭೂಮಿಯ ಆಳದಿಂದ ಸಂಗ್ರಹಿಸಲು ನಾವು ಹಲವಾರು ಡೈನಾಮೈಟುಗಳನ್ನು ಹಾಕಿದ್ದೇವೆ. ಭೂಕಂಪಗಳು, ಸುನಾಮಿ ಮತ್ತು ಈ ಎಲ್ಲಾ ವಿಪತ್ತುಗಳು ಶುರುವಾಗಿರುವ ಕಾರಣ ಇದುವೇ. ಆದುದರಿಂದ, ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಾವು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮತ್ತು ನಮ್ಮ ಭೂಮಿಯನ್ನು ನೋಡಿಕೊಳ್ಳದಿದ್ದರೆ, ಅದು ನಮಗೆ ಹೆಚ್ಚು ಹೆಚ್ಚು ಸವಾಲುಗಳನ್ನು ಸೃಷ್ಟಿಸುವುದು.
ನೋಡಿ, ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ.

೧. ಪರಿಸರ: ನಾವು ನಮ್ಮ ಹೊಲಗಳಿಗೆ ಎಷ್ಟೊಂದು ರಾಸಾಯನಿಕಗಳನ್ನು ಹಾಕುತ್ತೇವೆಂದರೆ, ನಾವು ಬೆಳೆಯುವ ಆಹಾರವು, ನಾವು ಸೇವಿಸುವುದಕ್ಕೆ ಅನರ್ಹವಾಗಿದೆ. ನಿಮ್ಮಲ್ಲಿ ಎಷ್ಟು ಮಂದಿಗೆ ನಿಮ್ಮ ಶರೀರದಲ್ಲಿ ನೋವುಗಳಿವೆ? ಯಾಕೆಂಬುದು ನಿಮಗೆ ಗೊತ್ತಿದೆಯಾ? ನಾವು ತಿನ್ನುವ ಆಹಾರವು ಹಲವಾರು ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಹೊಂದಿದೆ. ಕೇವಲ ತರಕಾರಿಗಳು ದೊಡ್ಡದಾಗಿ ಬೆಳೆಯುವಂತೆ ಮಾಡಲು, ನಾವು ನಮ್ಮ ಶರೀರಕ್ಕೆ ಒಳ್ಳೆಯದಲ್ಲದಿರುವ ಹಲವಾರು ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತೇವೆ. ಭೂಮಿಯು ಸಾವಯವವಾಗಬೇಕೆಂದು ನಾನು ಬಯಸುತ್ತೇನೆ.

ನಿಮಗೆ ಗೊತ್ತಾ, ಭಾರತದಲ್ಲಿ ಕೆಲವು ಬಹಳ ಪುರಾತನವಾದ ವ್ಯವಸಾಯ ತಂತ್ರಗಳಿವೆ. ಅವುಗಳನ್ನು ನಾನು ಈಗ ಭಾರತದಲ್ಲಿ ಬಹಳ ಹುರುಪಿನಿಂದ ಪ್ರಚಾರ ಮಾಡುತ್ತಿದ್ದೇನೆ.  ಅದು ಬಹಳಷ್ಟು ಬದಲಾವಣೆಯನ್ನು ತಂದಿದೆ. ಅದು ಶೂನ್ಯ ಬಂಡವಾಳದೊಂದಿಗೆ ಉತ್ಪಾದನೆಯನ್ನು ಸುಮಾರು ಮೂರೂವರೆ ಪಟ್ಟುಗಳಷ್ಟು ಹೆಚ್ಚಿಸಿದೆ. ನಾವದನ್ನು ಶೂನ್ಯ - ಬಂಡವಾಳ ವ್ಯವಸಾಯವೆಂದು ಕರೆಯುತ್ತೇವೆ. ರೈತನು ಹಣವನ್ನು ಸಾಲವಾಗಿ ಪಡೆಯಬೇಕಾಗಿಲ್ಲ, ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಹಾಕಬೇಕಾಗಿಲ್ಲ. ಕೇವಲ ನಿರ್ದಿಷ್ಟ ಪ್ರಾಕೃತಿಕ ವಸ್ತುಗಳಿಂದ, ನಿರ್ದಿಷ್ಟವಾದ ಗಿಡಗಳು ಮತ್ತು ಪ್ರಾಕೃತಿಕ ಗೊಬ್ಬರಗಳಿಂದ ಅವನು ತರಕಾರಿಗಳು ಹಾಗೂ ಧಾನ್ಯಗಳನ್ನು ಒಂದು ಬಹಳ ಕಡಿಮೆ ವೆಚ್ಚದಲ್ಲಿ, ಒಂದು ಉತ್ತಮ ಗುಣಮಟ್ಟದಲ್ಲಿ ಮತ್ತು ಒಂದು ಉತ್ತಮ ಪ್ರಮಾಣದಲ್ಲಿ ಬೆಳೆಯಬಹುದು. ಇಲ್ಲಿ ಕ್ರೊಯೇಷಿಯಾದಲ್ಲಿ ವ್ಯವಸಾಯ ಮಾಡಲು ಬಯಸುವ ಯಾರೊಂದಿಗಾದರೂ ಈ ಜ್ಞಾನವನ್ನು ಹಂಚಿಕೊಳ್ಳಲು ಆರ್ಟ್ ಆಫ್ ಲಿವಿಂಗಿಗೆ ಸಂತೋಷವಿದೆ. ನಾವೊಂದು ಮಾದರಿ ಹೊಲವನ್ನು; ಕಡಿಮೆ ವೆಚ್ಚದ ಮತ್ತು ಉತ್ತಮ ಉತ್ಪಾದನೆಯ ಒಂದು ಹೊಲವನ್ನು ಹೇಗೆ ಮಾಡಬಹುದು ಎಂಬುದನ್ನು ಅವರೊಂದಿಗೆ ಹಂಚಿಕೊಳ್ಳಲು ಮತ್ತು ಅವರಿಗೆ ತೋರಿಸಲು ನಾವು ಇಷ್ಟಪಡುತ್ತೇವೆ.

ನಿಮಗೆ ಗೊತ್ತಾ, ಮೊದಲು ೪೦,೦೦೦ ರೂಪಾಯಿಗಳನ್ನು ಪಡೆಯುತ್ತಿದ್ದ ಮತ್ತು ಈಗ ಒಂದು ವರ್ಷದೊಳಗೆ ೪,೦೦,೦೦೦ ರೂಪಾಯಿಗಳನ್ನು ಪಡೆಯಲು ತೊಡಗಿದ ರೈತರ ಒಂದು ದಾಖಲೆ ನಮ್ಮಲ್ಲಿದೆ. ಸಾವಯವ ಕೃಷಿಯೊಂದಿಗೆ, ಅವರಿಗೆ ೧೦ ಪಟ್ಟು ಹೆಚ್ಚು ವರಮಾನ ಗಳಿಸಲು ಸಾಧ್ಯವಾಯಿತು, ಅದು ಕೂಡಾ ಒಂದು ಕಡಿಮೆ ವೆಚ್ಚದಲ್ಲಿ.

೨. ಭ್ರಷ್ಟಾಚಾರ: ಇದೊಂದು ಬಹಳ ದೊಡ್ಡ ಸಮಸ್ಯೆ. ಪ್ರಪಂಚದ ಎಲ್ಲೆಡೆಗಳಲ್ಲಿ ಭ್ರಷ್ಟಾಚಾರವಿದೆ. ಇಲ್ಲಿ ಕ್ರೋಯೇಷಿಯಾದಲ್ಲಿ ಅದು ಹೇಗಿದೆಯೆಂಬುದು ನನಗೆ ತಿಳಿಯದು, ಆದರೆ ಭಾರತದಲ್ಲಿ, ಅದೊಂದು ದೊಡ್ಡ ಸಮಸ್ಯೆ. ಏಷಿಯಾ ಭೂಖಂಡದಲ್ಲಿ ಕೂಡಾ.

ಆತ್ಮೀಯತೆಯ ಭಾವವು ಎಲ್ಲಿ ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಆರಂಭವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಯಾರೂ, ತಾವು ಯಾರೊಂದಿಗೆ ಸಂಬಂಧ ಹೊಂದಿದ್ದೇವೆಂದು ಅಂದುಕೊಳ್ಳುವರೋ ಅವರೊಂದಿಗೆ ಭ್ರಷ್ಟರಾಗಿರುವುದಿಲ್ಲ.

ಯಾರನ್ನು ತಮ್ಮ ಸ್ವಂತದವರಲ್ಲವೆಂದು ಅಂದುಕೊಳ್ಳುತ್ತಾರೋ ಕೇವಲ ಅವರಿಂದ ಮಾತ್ರ ಒಬ್ಬರು ಲಂಚ ಕೇಳುತ್ತಾರೆ, ಅಲ್ಲವೇ? ನಾವಿದನ್ನು ಬದಲಾಯಿಸಬೇಕಾಗಿದೆ. ನಾವು, ಒಂದು ಉನ್ನತ ಆತ್ಮೀಯತಾ ಭಾವವನ್ನು ಸೃಷ್ಟಿಸಬೇಕಾಗಿದೆ.

ಇಲ್ಲಿ ಕ್ರೊಯೇಷಿಯಾದಲ್ಲಿರುವ ಎಲ್ಲರೂ, "ನಾನು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ" ಎಂಬ ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡರೆ; ಕಡಿಮೆ ಪಕ್ಷ ಒಂದು ವರ್ಷದ ಮಟ್ಟಿಗೆ, ದೇಶದ ಸಂಪೂರ್ಣ ಮುಖವು ಬದಲಾಗುವುದನ್ನು ನೀವು ನೋಡುವಿರಿ. ನಾವಿದನ್ನು ಮಾಡಬಲ್ಲೆವೇ? ಇಲ್ಲಿರುವ ನಾವೆಲ್ಲರೂ, ದೇಶದಲ್ಲಿರುವ ಇತರ ಎಲ್ಲರೊಂದಿಗೂ ಮಾತನಾಡೋಣ.

ನೋಡಿ, ಇಲ್ಲಿ ನಮ್ಮಲ್ಲಿ ನಲುವತ್ತು ಲಕ್ಷ ಜನರಿದ್ದಾರೆ. ಭಾರತಕ್ಕೆ ಹೋಲಿಸಿದರೆ ಅದು ಅಷ್ಟೊಂದು ದೊಡ್ಡದಲ್ಲ. ನಾನು ಯಾವ ನಗರದಿಂದ ಬಂದಿರುವೆನೋ ಅಲ್ಲಿ, ಬೆಂಗಳೂರಿನಲ್ಲಿ ಈಗ ನಾವು ಎಂಭತ್ತು ಲಕ್ಷ ಜನರನ್ನು ಹೊಂದಿದ್ದೇವೆ, ಅಂದರೆ ಕ್ರೊಯೇಷಿಯಾದ ಜನಸಂಖ್ಯೆಯ ದುಪ್ಪಟ್ಟು. ಆದುದರಿಂದ, ಜನರು ಭಾಗವಹಿಸುವಾಗ, ಕ್ರೊಯೇಷಿಯಾವನ್ನು ಒಂದು ಬಹಳ ಆದರ್ಶ ರಾಜ್ಯವನ್ನಾಗಿ ನೀವು ಮಾಡಬಲ್ಲಿರಿ ಎಂಬುದರ ಬಗ್ಗೆ ನನಗೆ ಬಹಳ ವಿಶ್ವಾಸವಿದೆ.

ಒಬ್ಬರಿಗೆ ಲಂಚ ತೆಗೆದುಕೊಳ್ಳುವುದರ ಕಡೆಗೆ ತೀವ್ರ ಬಯಕೆಯಿದ್ದರೆ, ಒಂದು ವರ್ಷದ ವರೆಗೆ ಕಾಯಿರಿ, ನೀವದನ್ನು ನಂತರ ಮಾಡಬಹುದು. ನೀವೆಲ್ಲರೂ, ಒಂದು ವರ್ಷದ ವರೆಗೆ, ನೀವು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ ಎಂಬ ಈ ಪ್ರತಿಜ್ಞೆಯನ್ನು ತೆಗೆದುಕೊಂಡರೆ, ಅದೊಂದು ದೊಡ್ಡ ಬದಲಾವಣೆಯನ್ನು ಮಾಡುವುದು.

ಯಾವುದೇ ಕಾನೂನು ಭ್ರಷ್ಟಾಚಾರವನ್ನು ಹೋಗಲಾಡಿಸದು. ಅದು ಹೃದಯದಿಂದ ಬರಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಅರಳುತ್ತಿರುವಾಗ, ಸಮಾಜದಲ್ಲಿರುವ ದುಷ್ಟ ಅಂಶಗಳು ದೂರ ಹೋಗುತ್ತವೆ. ಹೊಸದಾಗಿ ಚುನಾಯಿಸಲ್ಪಟ್ಟ ಕರ್ನಾಟಕ ವಿಧಾನಸಭಾ ಸದಸ್ಯರು ಭ್ರಷ್ಟಾಚಾರ ಮುಕ್ತರಾಗಿರಲೆ೦ದು ನೀಡಿದ ಕರೆಗೆ ಲಿ೦ಕ್: http://www.siliconindia.com/blogs/blogs_new.php?D67w2GYto10Dh4CV79KAEa84rsv8OPHJ+8r90GZd171314698

೩. ವ್ಯಸನ: ಜನರು ಹಲವಾರು ವಿಷಯಗಳ ವ್ಯಸನದಲ್ಲಿ ಬಿದ್ದಿದ್ದಾರೆ; ಅಶ್ಲೀಲತೆಯ ವ್ಯಸನ, ಮದ್ಯಪಾನದ ವ್ಯಸನ, ಮಾದಕ ದ್ರವ್ಯಗಳ ವ್ಯಸನ. ಅವರು ಈ ವ್ಯಸನಗಳಿಂದ ಹೊರಬರಲು ನಾವು ಅವರಿಗೆ ಸಹಾಯ ಮಾಡಬೇಕು.

ಇಲ್ಲಿರುವ ಮತ್ತು ಜಗತ್ತಿನ ಇತರ ಕಡೆಗಳಲ್ಲಿರುವ ಸೆರೆಮನೆಗಳು ಜನರಿಂದ ತುಂಬಿರುವುದು ಈ ವ್ಯಸನಗಳ ಕಾರಣದಿಂದ. ಖಂಡಿತಾ, ನಾವು ಇಲ್ಲಿನ ಸೆರೆಮನೆಗಳಲ್ಲಿ ಈಗಾಗಲೇ ಕೆಲಸವನ್ನು ಮಾಡುತ್ತಿದ್ದೇವೆ, ಆದರೆ ಜನರು ಸೆರೆಮನೆಯೊಳಕ್ಕೆ ಹೋಗದಿರಲು ನಾವು ಅವರಿಗೆ ಸಹಾಯ ಮಾಡಬೇಕು. ಆದುದರಿಂದ ನಾವೆಲ್ಲರೂ ಒಂದು ಅಪರಾಧ-ಮುಕ್ತ, ಹಿಂಸಾ-ಮುಕ್ತ ಸಮಾಜದ ಬಗ್ಗೆ ಕನಸು ಕಾಣಬಹುದು ಮತ್ತು ಅದರ ಕಡೆಗೆ ಕೆಲಸ ಮಾಡಬಹುದು.

ಶನಿವಾರ, ಮಾರ್ಚ್ 16, 2013

ಜ್ಞಾನವೆಂದರೇನು?

ಮಾರ್ಚ್ ೧೬, ೨೦೧೩
ದಿಲ್ಲಿ, ಭಾರತ

(ಇಂಡಿಯಾ ಟುಡೇ ಕಾಂಕ್ಲೇವ್ ಎಂಬುದು ಇಂಡಿಯಾ ಟುಡೇ ಗುಂಪಿನ ಒಂದು ವಿಶಿಷ್ಠ ಕಾರ್ಯಕ್ರಮವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಅದು ವಿಶ್ವದಾದ್ಯಂತದ ರಾಜಕೀಯ, ಆರ್ಥಿಕ, ವ್ಯಾಪಾರ, ಶೈಕ್ಷಣಿಕ, ತಂತ್ರಜ್ಞಾನ, ಕಲೆ ಮೊದಲಾದವುಗಳಲ್ಲಿ ಶ್ರೇಷ್ಠರಿಗೆ ಆತಿಥ್ಯವನ್ನು ನೀಡುವುದರ ಮೂಲಕ, ೨೧ನೇ ಶತಮಾನದ ಪ್ರಪಂಚಕ್ಕಾಗಿ ವಿಚಾರಗಳು, ತಂತ್ರಗಳು ಮತ್ತು ಪರಿಹಾರಗಳನ್ನು ಪರಿಶೋಧಿಸಲು  ಹಾಗೂ ಚರ್ಚಿಸಲು ಅವರಿಗೊಂದು ವೇದಿಕೆಯನ್ನು ಒದಗಿಸಿತು.

ಪರಮ ಪೂಜ್ಯ ಶ್ರೀ ಶ್ರೀ ರವಿ ಶಂಕರರನ್ನು ಇಂಡಿಯಾ ಟುಡೇ ಕಾಂಕ್ಲೇವ್ ೨೦೧೩ ಕ್ಕೆ ಉಪನ್ಯಾಸಕರಾಗಿ ಆಮಂತ್ರಿಸಲಾಯಿತು.  ಅದರ ಅನುವಾದ ಕೆಳಗಿನಂತಿದೆ.)

ಜ್ಞಾನವು ಕಾಲಾತೀತವಾದುದು!

ಸೂರ್ಯನು ಪುರಾತನ, ಆದರೆ ಇವತ್ತು, ಸೂರ್ಯನಿಂದ ಬರುವ ಕಿರಣಗಳು ತಾಜಾವಾದುವು. ಅದು ಹಳೆಯ ಅಥವಾ ಹಳಸಿದ ಕಿರಣಗಳಲ್ಲ. ಅದುವೇ ನೀರಿಗೂ ಅನ್ವಯಿಸುವುದು. ಗಂಗಾ ನದಿಯು ಬಹಳ ಪುರಾತನವಾದುದು, ಆದರೆ ಇವತ್ತಿನ ನೀರು ಬಹಳ ಬಹಳ ತಾಜಾವಾದುದು.

ಅದೇ ರೀತಿಯಲ್ಲಿ, ನಾನು ಹೇಳುವುದೇನೆಂದರೆ, ಜ್ಞಾನವೆಂದರೆ, ಯಾವುದು ನಮ್ಮ ಜೀವನಕ್ಕೆ ಅನ್ವಯವಾಗುವುದೋ ಅದು; ಹೊಸತು ಮತ್ತು ತಾಜಾವಾದುದು, ಆದರೂ ಪುರಾತನವಾದುದು. ಯಾವುದು ಜೀವನವನ್ನು ಮೇಲೆತ್ತಿ ಹಿಡಿಯುವುದೋ ಅದು ಜ್ಞಾನವಾಗಿದೆ.

ಅಜ್ಞಾನಿಗಳನ್ನು ಅಥವಾ ಅಂಧಾಭಿಮಾನದಿಂದ ಧಾರ್ಮಿಕರಾಗಿರುವವರನ್ನು ನೋಡಿ. ಬುದ್ಧಿಜೀವಿಗಳೆಂದು ಕರೆಯಲ್ಪಡುವವರು ಫ್ಯಾಷನ್ನಿಗಾಗಿ ನಾಸ್ತಿಕರಾಗಿರುತ್ತಾರೆ, ಮತ್ತು ಹಳತನ್ನೂ ಹೊಸತನ್ನೂ ಸೇರಿಸಿಕೊಂಡು ತಮ್ಮ ಜೀವನವನ್ನು ರೂಪಿಸಲು ತಿಳಿದಿರುವುದು ಜ್ಞಾನಿಗಳಿಗೆ.

ಹಳತಾದ ಬೇರುಗಳ ಮತ್ತು ಹೊಸತಾದ ಗೆಲ್ಲುಗಳ ಅಗತ್ಯವಿರುವ ಒಂದು ಮರದಂತೆ, ಜೀವನವು ಹೊಂದಿಕೊಳ್ಳುವ ಅಗತ್ಯವಿದೆ ಮತ್ತು ಸರಿಯಾಗಿ ಇದುವೇ ಪುರಾತನ ಜ್ಞಾನವಾಗಿದೆ.

ಋಗ್ವೇದದಲ್ಲಿನ ಎರಡನೆಯ ಸ್ತೋತ್ರ "ಅಗ್ನಿಃ ಪೂರ್ವೇಭಿರ್ ಋಷಿಭಿರ್ ಇದ್ಯೋ ನೂತನೈರ್ ಉತ" ಎಂದಾಗಿದೆ. ಪುರಾತನ ಮತ್ತು ನೂತನ, ಅವುಗಳು ಒಟ್ಟಿಗೆ ಅಸ್ಥಿತ್ವದಲ್ಲಿವೆ, ಮತ್ತು ಅದುವೇ ಜ್ಞಾನ.

ತಂತ್ರಜ್ಞಾನ ಮತ್ತು ವ್ಯಾಪಾರದಂತೆಯೇ, ಸಂಪ್ರದಾಯವನ್ನು ಮತ್ತೆ ಮತ್ತೆ ಪುನಶ್ಚೇತನಗೊಳಿಸುವ ಮತ್ತು ಪರಿಶೀಲಿಸುವ ಅಗತ್ಯವಿದೆ. ಇದು ಆವಶ್ಯಕ. ಮತ್ತು ಭಾರತದ ಶೋಭೆಯೆಂದರೆ, ನಮಗಿದನ್ನು ಮಾಡಲು ಸಾಧ್ಯವಾಯಿತು. ಪ್ರಾಚೀನ ಕಾಲದಿಂದಲೂ, ಸಂಪ್ರದಾಯದ ನಿರ್ದಿಷ್ಟ ಮಗ್ಗಲುಗಳನ್ನು ಧಕ್ಕೆಯಾಗದಂತೆ ಇಟ್ಟುಕೊಳ್ಳಲಾಯಿತಾದರೂ, ಸಮಯವು ಆಧುನಿಕ ದಿನದ ಅವಶ್ಯಕತೆಗಳ ಕಡೆಗೆ ಮತ್ತು ಒಬ್ಬನು ಎದುರಿಸಬೇಕಾದ ಜೀವನದ ಸವಾಲುಗಳ ಕಡೆಗೆ ಹರಿದಂತೆ ನಾವು ಬಹಳಷ್ಟು ಹೊಂದಿಕೊಂಡೆವು.

ನಿಜವಾಗಿ ಜ್ಞಾನವೆಂದರೇನು? ನಾವು ಯಾಕೆ ಜ್ಞಾನಿಗಳಾಗಿರಬೇಕು?

ಯಾರೂ ದುಃಖದಲ್ಲಿರಲು ಬಯಸುವುದಿಲ್ಲ. ಯಾರೂ ಅಶಾಂತರಾಗಲು ಬಯಸುವುದಿಲ್ಲ. ಯಾವುದು ನಮ್ಮನ್ನು ದುಃಖದಿಂದ ದೂರ ಕೊಂಡೊಯ್ಯುವುದೋ, ಯಾವುದು ನಮಗೊಂದು ಕನಸನ್ನು ನೀಡುವುದೋ, ಯಾವುದು ಜೀವನವನ್ನು ಶೋಭೆಯುಳ್ಳದ್ದಾಗಿಸುವುದೋ, ಯಾವುದು ವೈಯಕ್ತಿಕವಾದ ನಿಮ್ಮನ್ನು ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ವಿಶ್ವವ್ಯಾಪಿ ನಿಮ್ಮೊಂದಿಗೆ ಜೋಡಿಸುವುದೋ, ಮತ್ತು ಸಣ್ಣ ಪ್ರತಿಫಲಗಳು ತಾರದ ಅಪಾರ ಸಂತೃಪ್ತಿಯನ್ನು ಯಾವುದು ತರುವುದೋ  ಅದು ಜ್ಞಾನ, ಮತ್ತು ಅದು ಎಲ್ಲರಲ್ಲೂ ಲಭ್ಯವಿದೆ.

ನಾನು ಹೇಳುತ್ತೇನೆ ಕೇಳಿ, ಇದಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ. ಹಳ್ಳಿಗಳಲ್ಲಿ ಅನಕ್ಷರಸ್ಥರ ನಡುವೆ ಕೂಡಾ ನಿಮಗೆ ಜ್ಞಾನಿಗಳು ಸಿಗುತ್ತಾರೆ; ಬಹುಶಃ ಇನ್ನೂ ಹೆಚ್ಚು. ತಮ್ಮ ಮನೆಗಳನ್ನು ಹೇಗೆ ನೋಡಿಕೊಳ್ಳಬೇಕೆಂಬುದು ಅವರಿಗೆ ತಿಳಿದಿರುತ್ತದೆ, ತಮ್ಮ ಅಕ್ಕಪಕ್ಕದವರೊಡನೆ ಸಾಮರಸ್ಯವನ್ನಿಟ್ಟುಕೊಳ್ಳುವುದು ಹೇಗೆಂಬುದು ಅವರಿಗೆ ತಿಳಿದಿರುತ್ತದೆ, ಜನರನ್ನು ಒಗ್ಗೂಡಿಸುವುದು ಹೇಗೆಂಬುದು ಮತ್ತು ಜೀವನದಲ್ಲಿ ಆಚರಣೆಯನ್ನು ತರುವುದು ಹೇಗೆಂಬುದು ಅವರಿಗೆ ತಿಳಿದಿರುತ್ತದೆ.

ಜ್ಞಾನವೆಂದರೆ, ಯಾವುದು ಜೀವನದಲ್ಲಿ ಆಚರಣೆಯನ್ನು ತರುವುದೋ, ಯಾವುದು ನಿಮ್ಮ ಮುಖದ ಮೇಲೆ ಒಂದು ಮುಗುಳ್ನಗೆಯನ್ನು ತರುವುದೋ ಅದು. ಯಾವುದು ನಿಮ್ಮನ್ನು ಆರೋಗ್ಯವಂತರನ್ನಾಗಿರಿಸುವುದೋ ಮತ್ತು ಜೀವನದಲ್ಲಿ ನಿಮ್ಮ ಮುಂದೇನಿದೆ ಎಂಬುದನ್ನು ನೋಡಲಿರುವ ಅಂತಃಸ್ಫುರಣಾ ಸಾಮರ್ಥ್ಯವನ್ನು ನೀಡುವುದೋ ಅದು.

ಯೋಚನೆಯ ಬಗ್ಗೆ ನಾವು ಮಾತನಾಡುತ್ತಿದ್ದುದರಿಂದ, ಇನ್ನೂ ಒಂದು ವಿಷಯವನ್ನು ನಾನು ಸೇರಿಸಲು ಬಯಸುತ್ತೇನೆ. ಯೋಚನೆಯು ಮನೆಯ ಒಂದು ಕಾವಲುಗಾರನಂತೆ ಎಂದು ನನಗನ್ನಿಸುತ್ತದೆ. ಭಾವನೆಗಳು ಯೋಚನೆಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ. "ನಾನು ಸಂತೋಷವಾಗಿದ್ದೇನೆ" ಎಂದು ನೀವು ಯೋಚಿಸಬಹುದು ಅಥವಾ ನೀವು ನಿಮ್ಮೆಲ್ಲಾ ಗಮನವನ್ನು ಆ ಯೋಚನೆಯ ಕಡೆಗೆ ಹಾಕಬಹುದು, ಆದರೆ ಭಾವನೆಗಳು ಬರುವಾಗ, ಅಷ್ಟೇ, ಅವುಗಳು ಎಷ್ಟೊಂದು ರಭಸದಿಂದ ನುಗ್ಗುತ್ತವೆಯೆಂದರೆ ನೀವು ನಿಮ್ಮೊಂದಿಗಿರಿಸಿದ್ದ ಎಲ್ಲಾ ಯೋಚನಾ ಪ್ರಕ್ರಿಯೆಯೂ ಹಾಗೆಯೇ ಮಾಯವಾಗಿಬಿಡುತ್ತದೆ.

ನಿಮಗೆ ಗೊತ್ತಿದೆಯಾ, ನಿಮ್ಮ ಭಾವನೆಗಳು ಯೋಚನೆಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯೆಂಬುದನ್ನು ನೀವು ಕಾಣುವಿರಿ. ಪರಿಸ್ಥಿತಿಗಳು ನಿಮ್ಮ ಮೇಲೆ ಅಧಿಕಾರ ಚಲಾಯಿಸುತ್ತವೆ; ನೀವು, "ನಾನು ಸಂತೋಷವಾಗಿರಲು ಬಯಸುತ್ತೇನೆ" ಅಥವಾ "ನಾನು ಸಂತೋಷವಾಗಿದ್ದೇನೆ" ಎಂದು ಹೇಳಲು ಪ್ರಯತ್ನಿಸಿದರೂ ಕೂಡಾ, ಅಚಾನಕ್ಕಾಗಿ ಭಾವನೆಗಳ ಒಂದು ಬರಸಿಡಿಲು ಎರಗುತ್ತದೆ, ಅಥವಾ ಶಕ್ತಿ ಬರುತ್ತದೆ ಮತ್ತು ಈ ಎಲ್ಲಾ ಯೋಚನೆಗಳು ಮಾಯವಾಗುತ್ತವೆ.

ಆದುದರಿಂದ ನಾವು ನಮ್ಮ ಜೀವನದ ಹಲವಾರು ಅಂತಸ್ತುಗಳಲ್ಲಿ ಕೆಲಸ ಮಾಡಬೇಕು ಮೊದಲನೆಯದು ಪರಿಸರ, ನಂತರ ಶರೀರ, ಉಸಿರು - ಉಸಿರೆಂಬುದು, ಮನಸ್ಸು ಮತ್ತು ಶರೀರಗಳ ನಡುವಿನ ಕೊಂಡಿಯಾಗಿದೆ. ನಂತರ ಮನಸ್ಸು; ಯೋಚನೆಗಳು. ನಂತರ ಭಾವನೆಗಳು; ಅವುಗಳು ಮನಸ್ಸಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಹೆಚ್ಚು ಶಕ್ತಿಶಾಲಿಯಾದವು. ನಂತರ ಅದರಿಂದಾಚೆಗೆ ಬರುವುದು, ಚೈತನ್ಯ ವಲಯ; ಅದು ಸಕಾರಾತ್ಮಕತೆ, ತೇಜಸ್ಸು, ನೀವಾಗಿರುವ ಆತ್ಮ.

ಈ ಎಲ್ಲಾ ತಂತ್ರಗಳು; ಧ್ಯಾನ, ಕ್ರೈಸ್ತ ಸಂಪ್ರದಾಯದಲ್ಲಿರುವಂತಹ ವಿಚಾರಶೀಲ ಪ್ರಾರ್ಥನೆ ಅಥವಾ ಬೌದ್ಧರ ಝೆನ್ ಧ್ಯಾನ, ಇದೆಲ್ಲವೂ ಇರುವುದು ಯೋಚನೆಯನ್ನು ದಾಟಿಹೋಗಿ, ಎಲ್ಲಿಂದ ಇತರ ಎಲ್ಲವೂ ನಡೆಯುವುದೋ ಆ ಹಂತವನ್ನು ತಲಪುವುದಕ್ಕಾಗಿ, ಮತ್ತು ಅದು ಮನೆ ಮಾಲೀಕರನ್ನು ಭೇಟಿಯಾಗುವಂತೆ. ಒಮ್ಮೆ ಮನೆ ಮಾಲೀಕರನ್ನು ಭೇಟಿಯಾದರೆ, ನಂತರ ಕಾವಲುಗಾರನು ಮಾಲೀಕನು ಹೇಳುವುದನ್ನು ಕೇಳುವನು.

ಶುಕ್ರವಾರ, ಮಾರ್ಚ್ 15, 2013

ಧ್ಯಾನ


ದೆಹಲಿ, ಭಾರತ
೧೫ ಮಾರ್ಚ್ ೨೦೧೩

ನಾವು ಕುಳಿತುಕೊಂಡು ನಮ್ಮೊಂದಿಗಿರುವುದರಲ್ಲಿಯೇ ಸ್ವಲ್ಪ ಸಮಯವನ್ನು ಕಳೆದರೆ, ಪ್ರತಿದಿನವೂ ಸ್ವಲ್ಪ ಸಮಯದವರೆಗೆ ನಮ್ಮಲ್ಲಿಯೇ ವಿಶ್ರಾಂತಿ ತೆಗೆದುಕೊಂಡರೆ, ಆಗ ಅದುವೇ ಧ್ಯಾನ.

ಮಾಡಲು ಬಹಳಷ್ಟಿದೆ, ನಾವು ಯಾಕೆ ಧ್ಯಾನ ಮಾಡಬೇಕು?

ಧ್ಯಾನವು ಶರೀರದಲ್ಲಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಾಣಶಕ್ತಿಯು ಹೆಚ್ಚಾಗುತ್ತದೆ, ಬುದ್ಧಿಯು ತೀಕ್ಷ್ಣವಾಗುತ್ತದೆ, ಇತರರೊಂದಿಗಿನ ನಮ್ಮ ಒಡನಾಟವು ಹೆಚ್ಚು ಆಹ್ಲಾದಕರವಾಗುತ್ತದೆ, ನಾವು ಹೇಗೆ ಮಾತನಾಡುವೆವು ಎಂಬುದರ ಮೇಲೆ ನಾವು ಹೆಚ್ಚು ನಿಯಂತ್ರಣವನ್ನು ಗಳಿಸುತ್ತೇವೆ, ಮನಸ್ಸಿನ ಸಂಕಲ್ಪಶಕ್ತಿಯು ಹೆಚ್ಚು ಶಕ್ತಿಶಾಲಿಯಾಗುತ್ತದೆ. ಆದುದರಿಂದ, ಅಷ್ಟೊಂದು ಲಾಭಗಳಿರುವಾಗ ಒಬ್ಬರು ಏನನ್ನಾದರೂ ಯಾಕೆ ಮಾಡಬಾರದು?

ಧ್ಯಾನವೆಂದರೆ ನಿಮ್ಮ ವಿಧಿಯನ್ನೇ ಬದಲಾಯಿಸಬಲ್ಲಂತಹುದು! ಇದು ಬಹಳ ಮುಖ್ಯವಾಗಿದೆ.

ಬಹಳ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ವಿಯಾಗದೇ ಇರುವ ಕೆಲವು ಜನರಿದ್ದಾರೆ. ಇದಾಗುತ್ತದೆ, ನೀವಿದನ್ನು  ನೋಡಿರುವಿರಾ? ಇದು ಯಾಕೆಂದರೆ, ಕಳೆದುಹೋಗಿರುವ ಯಾವುದೋ ಒಂದು ಅಂಶವಿರುತ್ತದೆ, ಬಲಹೀನವಾಗಿರುವ ಒಂದು ಕಂಪನ; ಒಂದು ಋಣಾತ್ಮಕ ಕಂಪನವು ನಮ್ಮೊಳಗಿರುತ್ತದೆ. ಈ ಋಣಾತ್ಮಕ ಕಂಪನವನ್ನು ತೆಗೆದುಹಾಕಲು ಧ್ಯಾನವು ಆವಶ್ಯಕವಾಗಿದೆ.

ನಾವು ಪ್ರತಿದಿನವೂ ಕೆಲವು ನಿಮಿಷಗಳವರೆಗೆ ಧ್ಯಾನ ಮಾಡಿದರೆ, ಆಗ ನಮಗೆ, ದೈವಿಕ ಪ್ರೇಮವು ನಮ್ಮ ಮೇಲೆ ಮಳೆಗರೆಯುವುದನ್ನು ಅನುಭವಿಸಲು ಸಾಧ್ಯವಾಗುವುದು.

ಜ್ಞಾನ, ಅನುಭೂತಿ ಮತ್ತು ಪ್ರೇಮ, ಈ ಮೂರು ಅಂಶಗಳು ಜೀವನದಲ್ಲಿ ಆವಶ್ಯಕವಾಗಿವೆ. ಒಂದು ಮಂದ ಮತ್ತು ನೀರಸವಾದ ಜೀವನವನ್ನು ಯಾರೂ ಇಷ್ಟಪಡುವುದಿಲ್ಲ. ಪ್ರತಿಯೊಬ್ಬರೂ ಸ್ವಲ್ಪ ರಸದಿಂದ ತುಂಬಿರುವ ಒಂದು ಜೀವನವನ್ನು ಬಯಸುತ್ತಾರೆ ಮತ್ತು ಅದುವೇ ಪ್ರೇಮವಾಗಿದೆ. ಆದರೆ ನಮ್ಮೊಳಗೆ ಧನಾತ್ಮಕ ಕಂಪನಗಳಿಲ್ಲದವರೆಗೆ ಅಥವಾ ಋಣಾತ್ಮಕ ಕಂಪನಗಳಿಂದ ನಾವು ತುಂಬಿರುವಲ್ಲಿಯವರೆಗೆ, ಪ್ರೇಮವನ್ನು ಅದರ ಮೂಲ ಸ್ವರೂಪದಲ್ಲಿ ಅನುಭವಿಸಲು ನಮಗೆ ಸಾಧ್ಯವಿಲ್ಲ. ನಾವು ಪ್ರೇಮವನ್ನು ಅದರ ವಿಕೃತ ಸ್ವರೂಪಗಳಲ್ಲಿ ಮಾತ್ರ ಅನುಭವಿಸಬಲ್ಲೆವು, ಅಂದರೆ ಕ್ರೋಧ, ದ್ವೇಷ, ಚಡಪಡಿಕೆ. ಅಲ್ಲಿಯ ವರೆಗೆ ಪ್ರೇಮವು ಈ ವಿಕೃತ ಸ್ವರೂಪಗಳಲ್ಲಿ ಪ್ರಕಟಗೊಳ್ಳುತ್ತದೆ.

ಈ ವಿಕೃತಿಗಳಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನವನ್ನು ನಾವು ಕಲಿಯಬೇಕು. ಒಮ್ಮೆ ಮನಸ್ಸು ಈ ವಿಕೃತಿಗಳಿಂದ ಮುಕ್ತವಾದರೆ, ಜೀವನದಲ್ಲಿ ಎಲ್ಲವೂ ಸರಿಯಾಗಲು ತೊಡಗುತ್ತದೆ.

ಇದೊಂದು ವೈಯಕ್ತಿಕವಾದ ಮಟ್ಟದಲ್ಲಿ. ಒಬ್ಬ ವ್ಯಕ್ತಿ ಬದಲಾದಾಗ ಮಾತ್ರ ಸಮಾಜವು ಬದಲಾಗಲು ಸಾಧ್ಯ. ಸಮಾಜವು ವ್ಯಕ್ತಿಗಳಿಂದ ಮಾಡಲ್ಪಟ್ಟಿದೆ, ಸರಿಯಾ?

ಹಾಗಾಗಿ ನಾವು ಒಳಕ್ಕೆ ಆಳವಾಗಿ ಹೋಗಬೇಕು, ಪ್ರತಿದಿನವೂ ಕೇವಲ ಕೆಲವು ನಿಮಿಷಗಳವರೆಗೆ ಮಾತ್ರ. ಬೆಳಗ್ಗೆ ಎದ್ದ ಬಳಿಕ, ಕೆಲಸ ಪ್ರಾರಂಭಿಸುವ ಮೊದಲು ಕೇವಲ ೧೦ ನಿಮಿಷಗಳವರೆಗೆ ಕುಳಿತುಕೊಳ್ಳಿ; ಸಂಜೆ ಎಲ್ಲಾ ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕ ನಾವೆಲ್ಲರೂ ಆಹಾರ ಸೇವಿಸುತ್ತೇವೆ, ಆದರೆ ಸೇವಿಸುವ ಮೊದಲು ಕೇವಲ ಸ್ವಲ್ಪ ಸಮಯದ ವರೆಗೆ ನಾವು ಕುಳಿತುಕೊಂಡು ಒಳಕ್ಕೆ ಆಳವಾಗಿ ಹೋಗಿ ನಮ್ಮಲ್ಲೇ ವಿಶ್ರಾಂತಿ ತೆಗೆದುಕೊಂಡರೆ, ಸಂಗತಿಗಳು ಬದಲಾಗಲು ತೊಡಗುತ್ತವೆ.

ನೀವು ಒಂದು ಭೌತಿಕ ನೆಲೆಯ ಮೇಲೆ ಅದನ್ನು ನೋಡಿದರೂ ಕೂಡಾ, ಅದರಿಂದ ಹಲವಾರು ಲಾಭಗಳಿವೆ. "ಗುರುದೇವ, ನಾವು ಜೀವಿಸುತ್ತಿರುವುದು ಒಂದು ಐಹಿಕ ಪ್ರಪಂಚದಲ್ಲಿ, ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದ ಕಡೆಗೆ ಓಡುತ್ತಿದ್ದಾರೆ, ಧ್ಯಾನ ಮತ್ತು ಜ್ಞಾನಕ್ಕೆ ಸಮಯವೆಲ್ಲಿದೆ?" ಎಂದು ನೀವು ಹೇಳಬಹುದು. ಆದರೆ ನಾನು ಹೇಳುವುದೆಂದರೆ, ಇವತ್ತಿನ ಪರಿಸ್ಥಿತಿಗಳು ಮತ್ತು ಜೀವನಶೈಲಿಯಲ್ಲಿ ಕೂಡಾ, ಅತ್ಯಂತ ಪ್ರಯೋಜನಕಾರಿಯಾದುದು ಯಾವುದೆಂದರೆ, ಧ್ಯಾನ.

ಇವತ್ತಿನ ಪರಿಸ್ಥಿತಿಗಳಲ್ಲಿ ಕೂಡಾ ನಮಗೆ ತೃಪ್ತಿಯನ್ನು ನೀಡಬಲ್ಲಂತಹ, ನಮ್ಮ ಕೆಲಸದಲ್ಲಿ ನಮಗೆ ಸಹಾಯ ಮಾಡಬಲ್ಲಂತಹದ್ದು ಏನಾದರೂ ಇದ್ದರೆ, ಅದು ಧ್ಯಾನ ಮತ್ತು ಶ್ರದ್ಧೆ.

ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಾವು ಕೇಳಿದ್ದೇವೆ. ನೀವದನ್ನು ಕೇಳಿರುವಿರಿ, ಹೌದಾ? ಯಾವುದು ಕೆಲವು ಜಾಗಗಳಲ್ಲಿ ಇರುವುದೋ ಆದರೆ ಇತರ ಜಾಗಗಳಲ್ಲಿ ಇಲ್ಲವೋ ಅದು ದೇವರಾಗಿರಲು ಸಾಧ್ಯವಿಲ್ಲ.

ನೋಡಿ, ದೇವರ ಗುಣಗಳೇನು ಅಥವಾ ದೈವಿಕತೆ ಎಂದರೇನು? ಯಾವುದು ಇರುವುದೋ, ಯಾವುದು ಸರ್ವವ್ಯಾಪಿಯಾಗಿರುವುದೋ ಅದು. ಅದು ಎಲ್ಲೆಡೆಯೂ ಇದೆ. ಅದು ನಿಮ್ಮಲ್ಲಿ ಇಲ್ಲದಿರುವುದಾದರೆ, ಅದು ದೇವರಾಗುವುದೇ?

ದೇವರ ಮೊದಲ ಗುಣವೇನು? ಸರ್ವವ್ಯಾಪಿತ್ವ! ಆದುದರಿಂದ ದೇವರು ಕೆಲವು ಜಾಗಗಳಲ್ಲಿದ್ದು, ಕೆಲವು ಜಾಗಗಳಲ್ಲಿ ಇಲ್ಲದಿರಲು ಸಾಧ್ಯವೇ? ಇಲ್ಲ! ಸರ್ವವ್ಯಾಪಿಯೆಂದರೆ, ಎಲ್ಲೆಡೆಯೂ ಇರುವುದು ಎಂದು ಅರ್ಥ. ಹಾಗಾಗಿ ಅದು ನಿಮ್ಮೊಳಗಿದೆ; ನಿಮ್ಮಲ್ಲಿ, ಹೌದು! ಒಂದು ವಿಷಯ ಇತ್ಯರ್ಥವಾಯಿತು, ದೇವರು ನಿಮ್ಮೊಳಗಿದ್ದಾನೆ.

ಮುಂದಿನ ಗುಣವೆಂದರೆ, ಅವನು ಅನಾದಿ ಹಾಗೂ ಅನಂತ. ಅವನು ಇದ್ದನು, ಅವನು ಇದ್ದಾನೆ ಮತ್ತು ಅವನು ಯಾವತ್ತೂ ಇರುವನು. ಆದುದರಿಂದ, ದೇವರು ವರ್ತಮಾನದ ಕ್ಷಣದಲ್ಲಿ ಇರುವುದಾದರೆ, ಅವನು ಈಗ ಇರುವನೇ? ಹೌದು! ಅವನು ನಿಮ್ಮಲ್ಲಿರುವನು ಮತ್ತು ಅವನು ಈಗ ಇರುವನು.

ನಂತರ, ಅವನು ಎಲ್ಲರಿಗೂ ಸೇರಿರುವನು. ಆದುದರಿಂದ ಅವನು ನಿಮಗೆ ಸೇರಿರುವನೇ? ಹೌದು, ಅವನು ನಿಮಗೆ ಸೇರಿರುವನು. ಅವನು ಕೇವಲ ಹಿಂದೂಗಳಿಗೆ ಮಾತ್ರ ಸೇರಿದವನಾಗಿದ್ದರೆ ಮತ್ತು ಮುಸ್ಲಿಮರಿಗೆ ಅಲ್ಲದಿದ್ದರೆ, ಅಥವಾ ಮುಸ್ಲಿಮರಿಗೆ ಸೇರಿದವನಾಗಿದ್ದು ಸಿಖ್ಖರಿಗೆ ಅಲ್ಲದಿದ್ದರೆ, ಅಥವಾ ಸಿಖ್ಖರಿಗೆ ಸೇರಿದವನಾಗಿದ್ದು ಜೈನರಿಗೆ ಅಲ್ಲದಿದ್ದರೆ, ಆಗ ಅವನು ದೇವರಲ್ಲ.

ಎಲ್ಲರಿಗೂ ಸೇರಿದ ಒಬ್ಬನು ದೇವರಾಗಿರುವನು ಮತ್ತು ಅವನು ಸಮರ್ಥನಾಗಿರುವನು.

ಕೇವಲ ಈ ನಾಲ್ಕು ಸೂತ್ರಗಳ ಕಡೆಗೆ ನಿಮ್ಮ ಗಮನವನ್ನು ಒಯ್ಯುವುದರಿಂದ ನೀವು ಸುಲಭವಾಗಿ ಒಂದು ಆಳವಾದ ಧ್ಯಾನಕ್ಕೆ, ಸಮಾಧಿಗೆ ಜಾರುವಿರಿ.

ನಾಲ್ಕು ಸೂತ್ರಗಳು ಯಾವುವು? - ದೇವರು ಸರ್ವತ್ರನು, ಸರ್ವದಾನು, ಎಲ್ಲರಿಗೂ ಸೇರಿದವನು ಮತ್ತು ಅತ್ಯಂತ ಸಮರ್ಥನು. ದೇವರು ನನಗಾಗಿರುವನು. ಬೆಳಗ್ಗೆ ಮತ್ತು ಸಂಜೆ ಕೆಲವು ನಿಮಿಷಗಳ ವರೆಗೆ ಈ ಭಾವನೆಯೊಂದಿಗೆ ವಿಶ್ರಾಮ ಮಾಡುವ ಹಾಗೂ ಧ್ಯಾನ ಮಾಡುವ ಅಭ್ಯಾಸವನ್ನು ನಾವು ಬೆಳೆಸಿಕೊಂಡರೆ, ಆಗ ಪವಾಡಗಳಾಗಲು ಶುರುವಾಗುವುದನ್ನು ಮತ್ತು ಆಗಿಕೊಂಡೇ ಇರುವುದನ್ನು ನಾವು ಕಾಣುತ್ತೇವೆ. ಇದನ್ನೇ ನಾನು ನಿಮಗೆ ಹೇಳಲು ಬಯಸಿದುದು. ಇದನ್ನೇ ನಾನು ಶ್ರದ್ಧೆಯೆಂದು ಕರೆಯುವುದು.

ಯಾವುದು ಇದೆಯೋ ಆದರೆ ಕಾಣಿಸುವುದಿಲ್ಲವೋ ಅದು ಶ್ರದ್ಧೆಯಾಗಿದೆ.

ಇವತ್ತಷ್ಟೇ ಒಬ್ಬರು ನನ್ನಲ್ಲಿ, "ಗುರುದೇವ, ದೇವರನ್ನು ನೋಡಲು ಸಾಧ್ಯವಿಲ್ಲ, ಹಾಗಾದರೆ ದೇವರು ಇರುವರೆಂದು ನಾವು ಹೇಗೆ ಹೇಳಲು ಸಾಧ್ಯ?" ಎಂದು ಕೇಳಿದರು.

ನಾನಂದೆ, "ನೀನು ಯಾವತ್ತಾದರೂ ನಿನ್ನ ಮನಸ್ಸನ್ನು ನೋಡಿದ್ದೀಯಾ? ಅದು ಹಸುರೇ, ಹಳದಿಯೇ, ಕೆಂಪೇ; ಅದು ಯಾವ ಬಣ್ಣದ್ದು? ನೀನು ನಿನ್ನ ಮನಸ್ಸನ್ನು ಯಾವಾಗ ನೋಡಿದ್ದೀಯಾ?"

ನಾವು ನಮ್ಮ ಮನಸ್ಸನ್ನೇ ಯಾವತ್ತೂ ನೋಡಿಲ್ಲ, ಆದರೂ ನಮಗೊಂದು ಮನಸ್ಸಿದೆಯೆಂಬುದು ನಮಗೆ ತಿಳಿದಿದೆ. ನಾವು ಯಾವತ್ತಾದರೂ ಗಾಳಿಯನ್ನು ನೋಡಿದ್ದೀವಾ? ಇಲ್ಲ, ಆದರೆ ನಾವು ಅದನ್ನು ಅನುಭವಿಸಬಹುದು, ಸರಿಯಾ? ಗಾಳಿಯು ನಮ್ಮನ್ನು ಸುತ್ತುವರಿದಿದೆ, ಆದರೆ ನೀವದನ್ನು ನಿಜವಾಗಿ ಅನುಭವಿಸಲು ಬಯಸಿದರೆ, ಸುಮ್ಮನೆ ಹೋಗಿ ಒಂದು ಫ್ಯಾನಿನ ಕೆಳಗೆ ಕುಳಿತುಕೊಳ್ಳಿ ಮತ್ತು ನಿಮಗದರ ಅನುಭವವಾಗುತ್ತದೆ. ಅದೇ ರೀತಿಯಲ್ಲಿ, ದೇವರು ಎಲ್ಲೆಡೆಯೂ ಇದ್ದಾನೆ, ಆದರೆ ತಕ್ಷಣ ಗೋಚರವಾಗುವುದಿಲ್ಲ.

ನಾವು ದೇವರನ್ನು ಪ್ರೀತಿಸುತ್ತೇವೆ, ಆದರೆ ನಮ್ಮ ದೇಶವನ್ನಲ್ಲ - ಹೀಗಾಗಲು ಸಾಧ್ಯವಿಲ್ಲ. ಯಾರು ದೇವರನ್ನು ಪ್ರೀತಿಸುವರೋ ಅವರು ದೇಶಕ್ಕಾಗಿ ಕೂಡಾ ಭಕ್ತಿಯುಳ್ಳವರಾಗಿ ಉಳಿಯುತ್ತಾರೆ. ಆದುದರಿಂದ ನಮಗೆ ಯಾವೆಲ್ಲಾ ಕೆಲಸ ಅಥವಾ ಸೇವೆ ಮಾಡಲು ಸಾಧ್ಯವಿದೆಯೋ, ಅದನ್ನು ನಾವು ಮಾಡುತ್ತಾ ಇರಬೇಕು. ನಾವು ಸುಮ್ಮನೆ ಕುಳಿತುಕೊಂಡು ದಿನವಿಡೀ ಚಿಂತಿಸುತ್ತಾ ಇರುತ್ತೇವೆ ಮತ್ತು ಆಗುವುದೇನೆಂದರೆ, ನಾವು ನಮ್ಮ ಮನಸ್ಸು, ಶರೀರ ಎರಡನ್ನು ಕೂಡಾ ಹಾಳುಮಾಡಿಕೊಳ್ಳುತ್ತೇವೆ. ಆದುದರಿಂದ, ನಾವಿದನ್ನು ಮಾಡಬಾರದು. ನಾವು ಸಂತೋಷ, ಆನಂದ ಮತ್ತು ಉತ್ಸಾಹಗಳಿಂದ ತುಂಬಿರಬೇಕು.

ನಾವು ಗುರಿಯಿಡಬೇಕಾದುದು ಕಷ್ಟ ಮತ್ತು ದುಃಖಗಳಿಂದ ಮುಕ್ತವಾದ ಒಂದು ಹೃದಯವನ್ನು ಹೊಂದುವುದರ ಕಡೆಗೆ. ಜೀವನದಲ್ಲಿ, ನಾವು ಬಯಸುವ ಹಲವಾರು ಸಂಗತಿಗಳು ಆಗುತ್ತಾ ಇರುತ್ತವೆ ಮತ್ತು ನಾವು ಬಯಸದೇ ಇರುವ ಹಲವಾರು ಸಂಗತಿಗಳು ಕೂಡಾ ಆಗುತ್ತಾ ಇರುತ್ತವೆ. ಹಿತಕರ ಕ್ಷಣಗಳಿವೆ ಮತ್ತು ಅಹಿತಕರ ಕ್ಷಣಗಳಿವೆ. ಹೀಗೆ ಆಗದಿರುವ ಯಾರಾದರೂ ಇದ್ದಾರೆಯೇ, ಹೇಳಿ ನನಗೆ?

ನಿಮ್ಮದೇ ಜೀವನದ ಕಡೆಗೆ ನೋಡಿ, ಎಷ್ಟೊಂದು ಕಷ್ಟಗಳು ಬಂದಿವೆ ಮತ್ತು ಹೋಗಿವೆ, ಹಾಗೂ ನೀವು ಅವುಗಳಿಂದ ಹೊರಗೆ ಬಂದಿರುವಿರಿ. ಆ ಎಲ್ಲಾ ಕ್ಷಣಗಳು ಹೋಗಿವೆ. ಆ ಪರಿಸ್ಥಿತಿಗಳು ಮತ್ತು ಘಟನೆಗಳು ದಾಟಿಹೋಗಿವೆ, ಆದರೆ ನೀವು ಆ ಘಟನೆಗಳನ್ನು ನಿಮ್ಮ ಮನಸ್ಸಿನಲ್ಲಿ ಎಳೆದುಕೊಂಡು ಹೋಗುತ್ತಿರುತ್ತೀರಿ. ಅವುಗಳನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಮತ್ತು ನೀವು ಎಷ್ಟು ಶಾಂತಿ ಹಾಗೂ ವಿಶ್ರಾಮವನ್ನು ಅನುಭವಿಸುತ್ತೀರಿ ಎಂಬುದನ್ನು ನೋಡಿ.

ಯಾರಾದರೂ ಏನಾದರೂ ಕೆಟ್ಟದ್ದನ್ನು ಹೇಳಿದರೆ, ನೀವು ನಿಮ್ಮ ಮನಸ್ಸಿನಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಾ ಇರುತ್ತೀರಿ ಮತ್ತು ಚಡಪಡಿಸುತ್ತೀರಿ - ಅವನು ಹೀಗೆ ಮಾಡಿದನು, ಮತ್ತು ಆ ವ್ಯಕ್ತಿಯು ನನಗೆ ಮೋಸ ಮಾಡಿದನು. ಆದರೆ ನೋಡಿ, ಅವರು ಕೇವಲ ತಮ್ಮ ಸ್ವಭಾವಕ್ಕೆ ತಕ್ಕಂತೆ ವರ್ತಿಸಿದರು ಅಷ್ಟೆ! ಯಾರ ಸ್ವಭಾವವು ಮೋಸ ಮಾಡುವುದಾಗಿರುತ್ತದೆಯೋ, ಅವರು ಮೋಸ ಮಾಡುವರು. ಅವರು ಬೇರೆ ಏನನ್ನು ಮಾಡುವರು? ನಿಮಗೆ ಅವನು ಯಾಕೆ ಹೀಗೆ ಮಾಡಿದನು ಮತ್ತು ಅವನು ಯಾಕೆ ಹಾಗೆ ಮಾಡಿದನು ಎಂಬುದರ ಬಗ್ಗೆ ಚಿಂತಿಸುವುದರಿಂದ ಕೇವಲ ನಿಮ್ಮ ಮನಸ್ಸು ಹಾಳಾಗುವುದಷ್ಟೆ. ಇದು ಬುದ್ಧಿವಂತಿಕೆಯ ಒಂದು ಲಕ್ಷಣವಲ್ಲ. ಜ್ಞಾನ ಮತ್ತು ಬುದ್ಧಿವಂತಿಕೆಯ ಒಂದು ಲಕ್ಷಣ ಯಾವುದೆಂಬುದು ನಿಮಗೆ ತಿಳಿದಿದೆಯೇ? ಜ್ಞಾನದ ನಿಜವಾದ ಚಿಹ್ನೆಯೆಂದರೆ, ಒಳ್ಳೆಯ ಘಟನೆಗಳು ಬರುತ್ತವೆ, ಹೋಗುತ್ತವೆ ಮತ್ತು ಕೆಟ್ಟ ಘಟನೆಗಳು ಬರುತ್ತವೆ, ಹೋಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ನಾವು ಮುಂದೆ ಸಾಗಿದಂತೆ, ಈ ಘಟನೆಗಳಿಂದ ಇನ್ನೂ ಸುಂದರವಾಗಿ ನಾವು ಹೊರಬರುತ್ತೇವೆ. ನಾವು ಇನ್ನೂ ಹೆಚ್ಚು ಅರಳುತ್ತೇವೆ.

ಈ ಪ್ರಜ್ಞೆಯೊಂದಿಗೆ ನಾವು ಸಂಪರ್ಕದಲ್ಲಿರಬೇಕು ಮತ್ತು ಅದನ್ನು ನಮ್ಮೊಳಗೆ ಜೀವಂತವಾಗಿರಿಸಬೇಕು. ಯಾವುದೇ ಕಾರಣಕ್ಕಾಗಿಯಾದರೂ ನಿಮ್ಮ ಮುಗುಳ್ನಗೆಯನ್ನು ಕಳೆದುಕೊಳ್ಳಬೇಡಿ, ನಿಮ್ಮ ಉತ್ಸಾಹವನ್ನು ಇಳಿಯಲು ಬಿಡಬೇಡಿ, ಸುಮ್ಮನೆ ಮುಂದೆ ಸಾಗುತ್ತಾ ಇರಿ.

ಸಮಾಜದಲ್ಲಿರುವ ಎಲ್ಲರೂ ಹರಸಲ್ಪಡಲಿ, ಎಲ್ಲರೂ ಸಂತೋಷವಾಗಿರಲಿ ಮತ್ತು ಆರಾಮವಾಗಿರಲಿ, ದೇಶದಲ್ಲಿರುವ ಎಲ್ಲರೂ ಹರಸಲ್ಪಡಲಿ ಎಂಬ ಸಂಕಲ್ಪ ಅಥವಾ ಉದ್ದೇಶದೊಂದಿಗೆ ಜೀವನದಲ್ಲಿ ಮುಂದೆ ಸಾಗಿ. ದೇಶದಲ್ಲಿ ಆಗುತ್ತಿರುವ ಈ ಎಲ್ಲಾ ಅಪರಾಧಗಳು ನಿಲ್ಲಲಿ.

ಇವತ್ತು ಭಾರತವು ಎದುರಿಸುತ್ತಿರುವ ಅನ್ಯಾಯ, ಭ್ರಷ್ಟಾಚಾರ, ಹಿಂಸೆ ಮತ್ತು ಈ ಎಲ್ಲಾ ಸಮಸ್ಯೆಗಳ ವಿರುದ್ಧ ನಾವು ಹೋರಾಡುವೆವು. ಈ ಹಿಂಸಾತ್ಮಕ ಪ್ರವೃತ್ತಿಯನ್ನು ನಮ್ಮ ಸಮಾಜದಿಂದ ಬೇರು ಸಮೇತ ಕಿತ್ತು ಹಾಕಬೇಕು. ಇದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಮತ್ತು ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವು ಒಟ್ಟಾಗಿ ಕೆಲಸ ಮಾಡಬೇಕು, ಆಗ ಸಂಗತಿಗಳು ಬದಲಾಗಲು ತೊಡಗುವುದನ್ನು ನೀವು ಕಾಣುವಿರಿ. ನೀವೇನು ಹೇಳುವಿರಿ?
ಸರಿ, ನನಗೆ ಹೇಳಿ, ನಿಮ್ಮಲ್ಲಿ ಯಾವುದೆಲ್ಲಾ ಚಿಕ್ಕ ಬಯಕೆಗಳಿವೆಯೋ ಅವುಗಳೆಲ್ಲಾ ಸಾಕಾರವಾಗುತ್ತಿವೆ ಎಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಈಗ ನಾವು ಇನ್ನೂ ದೊಡ್ಡದಾದ ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು; ಇನ್ನೂ ದೊಡ್ಡದಾದ ಒಂದು ಆಶಯವನ್ನು ಹೊಂದಬೇಕು. ನಿಮ್ಮ ಚಿಕ್ಕ ಆಶಯಗಳು ಖಂಡಿತವಾಗಿಯೂ ನೆರವೇರುತ್ತವೆ, ಆದರೆ ಈಗ ದೇಶದ ಬಗ್ಗೆ ಯೋಚಿಸಿ.
ಈ ಜ್ಞಾನವು ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇದೆ. ನಿಮಗೆ ಗೊತ್ತಾ, ಭಾರತವು ಆಧ್ಯಾತ್ಮದ ಉತ್ತುಂಗದಲ್ಲಿದ್ದಾಗ, ನಾವು ಆರ್ಥಿಕವಾಗಿ ಕೂಡಾ ಬಹಳ ಸಮೃದ್ಧವಾಗಿದ್ದೆವು ಎಂಬುದು? ಇವತ್ತು ನಾವು ಆಧ್ಯಾತ್ಮದಲ್ಲಾಗಲೀ ಆರ್ಥಿಕವಾಗಿಯಾಗಲೀ ಉನ್ನತಿಯಲ್ಲಿಲ್ಲ. ಬಂಗಾರದ ಪಕ್ಷಿಯಾಗಿರುವ ಹಿಂದಿನ ಹಿರಿತನಕ್ಕೆ ಈ ದೇಶವನ್ನು ನಾವು ಪುನಃ ತರಬೇಕಾಗಿದೆ. ಇದು ನನ್ನ ಕನಸಾಗಿದೆ.

ಭಾರತದ ಜ್ಞಾನವು ಪ್ರಪಂಚದ ಎಲ್ಲಾ ಮೂಲೆಗಳಲ್ಲಿರುವ ಜನರನ್ನು ತಲುಪಬೇಕು ಮತ್ತು ಅವರ ದುಃಖ ಹಾಗೂ ನೋವುಗಳಿಂದ ಅವರನ್ನು ಮುಕ್ತಗೊಳಿಸಬೇಕು. ಇದು ಈಗಾಗಲೇ ಆಗುತ್ತಿದೆ. ನಾನು ನನ್ನ ಕೊಡುಗೆಯನ್ನು ಹೇಗೆ ನೀಡಬಹುದು, ಇದರ ಬಗ್ಗೆಯೇ ನಾವೆಲ್ಲರೂ ಯೋಚಿಸಲು ತೊಡಗಬೇಕಾದುದು.

ದಿನದಲ್ಲಿ ಒಂದು ಗಂಟೆಯನ್ನು ನಾವು ದೇಶಕ್ಕಾಗಿ ನೀಡಬಲ್ಲೆವಾದರೆ, ಅಥವಾ ವಾರದಲ್ಲಿ ಏಳು ಗಂಟೆಗಳನ್ನು ನಾವು ನಮ್ಮ ದೇಶಕ್ಕಾಗಿ ತೆಗೆದಿರಿಸಬಲ್ಲೆವಾದರೆ, ನಮ್ಮ ದೇಶದ ಜನರಲ್ಲಿ ನಾವು ಬಹಳಷ್ಟು ಬದಲಾವಣೆ ಮತ್ತು ಅರಿವನ್ನು ತರಬಹುದು.

ಪ್ರಶ್ನೆ: ಗುರುದೇವ, ನನ್ನ ಹೆಸರು ಅಕ್ರಂ ಮತ್ತು ನಾನು ೭ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಮುಗಿಸಿ ಬಂದಿರುವೆನು. ನಾನು ನನ್ನ ಜೀವನವನ್ನು ಸಂಪೂರ್ಣ ಅಂಧಕಾರದ ಒಂದು ನರಕವಾಗಿ ನೋಡಿದೆನು. ನಾನು ನನ್ನನ್ನೇ ಮತ್ತೆ ಪ್ರೀತಿಸುವಷ್ಟು ಅದೃಷ್ಟಶಾಲಿಯಾಗಿ ನೋಡುವ ಒಂದು ಸಮಯ ಬರುವುದು ಎಂದು ನಾನು ಆಶಿಸುತ್ತಿದ್ದೆ. ನಾನು ಖಿನ್ನನಾಗಿದ್ದೆ ಮತ್ತು ಜೈಲಿನಲ್ಲಿ ಒಬ್ಬ ಮದ್ಯವ್ಯಸನಿಯಾಗಿದ್ದೆ. ಒಂದು ದಿನ ನಾನು ಶ್ರೀಯುತ ಶರ್ಮಾ ಅವರನ್ನು ಭೇಟಿಯಾದೆ. ಅವರು ಒಂದು ಕೋರ್ಸನ್ನು ನಡೆಸುತ್ತಿದ್ದರು. ಅವರು ನನ್ನನ್ನು ಜೊತೆಗೆ ಕರೆದುಕೊಂಡು ಹೋದರು ಮತ್ತು ಕೋರ್ಸ್ ಮಾಡುವಂತೆಯೂ ನನ್ನಲ್ಲಿ ಹೇಳಿದರು. ಅವರು ನಾನು ಕೋರ್ಸ್ ಮಾಡುವಂತೆ ಮಾಡಿದರು ಮತ್ತು ಅದರ ನಂತರ, ಜೀವನದ ನಿಜವಾದ ಸಾರವೇನು ಎಂಬುದು ನನಗೆ ತಿಳಿಯಿತು. ನಾನು ನಿಜವಾಗಿಯೂ ನಿಜವಾದ ಜೀವನ ಕಲೆಯನ್ನು ಆ ದಿನ ಕಲಿತೆ ಮತ್ತು ನಾನು ಅನುಕ್ರಮವಾಗಿ ಹಲವಾರು ಕೋರ್ಸುಗಳನ್ನು ಮಾಡಿದೆ. ಒಬ್ಬರು ನಿಜವಾದ ಗುರುವನ್ನು ವೈಯಕ್ತಿಕವಾಗಿ ನೋಡುವ ಅವಕಾಶವು ನನಗೆ ಸಿಕ್ಕಿದುದಕ್ಕಾಗಿ ಇವತ್ತು ನನಗೆ ಸಂತೋಷವಾಗುತ್ತಿದೆ. ದೇವರು ನಿಮ್ಮನ್ನು ಹರಸಲಿ!

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ಈಗ ನೀನೊಬ್ಬ ಶಿಕ್ಷಕ ಕೂಡಾ ಆಗಬೇಕು! ಒಬ್ಬ ಶಿಕ್ಷಕನಾಗು ಮತ್ತು ಎಲ್ಲರಿಗೂ ಆಶೀರ್ವಾದಗಳನ್ನು ತಾ.

ಗುರುವಾರ, ಮಾರ್ಚ್ 14, 2013

ಜಗದ ಪ್ರಕಾಶವನ್ನು ಹೆಚ್ಚಿಸೋಣ

ಮಾರ್ಚ್ ೧೪, ೨೦೧೩
ಬೆ೦ಗಳೂರು, ಭಾರತ

ತ್ಸ೦ಗದಲ್ಲಿ ಕುಳಿತು ನಿಮ್ಮೊಳಗನ್ನು ಪ್ರವೇಶಿಸಿ; ಅದೇ ಮುಖ್ಯವಾದದ್ದು.

ನೆರೆದಿದ್ದ ಜನ ಒಕ್ಕೊರಲಿನಲ್ಲಿ: ಹೋಗಬೇಡಿ.

ನೀವು ಹಾಗೆನ್ನಕೂಡದು. ಎಷ್ಟೋ ಕಾರ್ಯಕ್ರಮಗಳಿವೆ ಮತ್ತು ಜನ ನನ್ನನ್ನು ನಿರೀಕ್ಷಿಸುತ್ತಿದ್ದಾರೆ. ಯಾರನ್ನೂ ನಿರಾಶೆಗೊಳಿಸಲು ನಾನು ಇಚ್ಚಿಸುವುದಿಲ್ಲ. ಇ೦ದೂ ಸಹ, ಇಷ್ಟೊ೦ದು ಸ೦ಖ್ಯೆಯಲ್ಲಿ ಇಲ್ಲಿರುವ ನಿಮ್ಮನ್ನು ನಿರಾಶೆಗೊಳಿಸಬಾರದೆ೦ದೇ ಸ್ವಲ್ಪ ಸಮಯ ಸತ್ಸ೦ಗದಲ್ಲಿ ಉಳಿಯಲು ನಿರ್ಧರಿಸಿದೆ. ಅದೇ ಕಾರಣದಿ೦ದ ನಾನು ಹೊರಡುವ ವಿಮಾನದ ವೇಳೆಯಲ್ಲೂ ವ್ಯತ್ಯಯವು೦ಟಾಗಿದೆ. ಅ೦ತೆಯೇ ಹತ್ತು ನಿಮಿಷಗಳ ಕಾಲ ನಿಮ್ಮೊ೦ದಿಗಿರಲು ನಿರ್ಧರಿಸಿದ್ದೇನೆ.

ಸಾಧನೆ, ಸೇವೆ ಮತ್ತು ಸತ್ಸ೦ಗವನ್ನು ಮು೦ದುವರೆಸಿ. ಜಗತ್ತು ಇನ್ನಷ್ಟು ಪ್ರಕಾಶಮಾನವಾಗಲು ಏನು ಮಾಡಬಹುದು, ಹೆಚ್ಚು ಜ್ಞಾನವನ್ನು ಜನರಿಗೆ ಹೇಗೆ ತಲುಪಿಸಬಹುದು ಎ೦ಬುದನ್ನು ಯೋಚಿಸಿ.

ನೋಡಿ, ಏನಿಲ್ಲವೆ೦ದರೂ, ಇನ್ನು ೪೦-೫೦ ವರ್ಷಗಳ ಕಾಲ ನಾವೆಲ್ಲರೂ ಬದುಕಬೇಕಾಗಿದೆ. ಆದ್ದರಿ೦ದ ಬದುಕಿಗೆ ಒ೦ದು ಗುರಿಯನ್ನು ಹೊ೦ದಬೇಕಾಗಿದೆ. ಬದುಕಿನಲ್ಲಿ ನಾವೇನು ಮಾಡಬೇಕೆ೦ದು ಯೋಚಿಸುವ ಅಗತ್ಯವಿದೆ.

ಊಟ, ನಿದ್ರೆ, ಆಲೋಚನೆ, ಪತ್ರಿಕೆ ಓದುವುದು, ದೂರದರ್ಶನ ವೀಕ್ಷಣೆ - ಇವೆಲ್ಲವನ್ನೂ ಮೀರಿಸುವ ಕರ್ತವ್ಯಗಳನ್ನು ನಾವು ನಿರ್ವಹಿಸುವುದಿದೆ. ಅ೦ಥ ಆದ್ಯ ಕರ್ತವ್ಯಗಳು ಯಾವುವು, ಅವುಗಳನ್ನು ನಾವು ಹೇಗೆ ನಿರ್ವಹಿಸುವುದು?

ಜ್ಞಾನವನ್ನು ಜನರ ಬಳಿಗೆ ತನ್ನಿ. ಜನರನ್ನು ಸ೦ತೋಷಪಡಿಸಿ. ಜನರನ್ನು ಸ೦ತೋಷಪಡಿಸಲು ಇರುವ ಏಕೈಕ ಮಾರ್ಗವೇ ಜ್ಞಾನಪ್ರಸಾರ.

ಯಾರಾದರೂ ಸ೦ತೋಷವಾಗಿಲ್ಲವೆ೦ಬ ಅ೦ಶ, ಜ್ಞಾನ ಅವರಿಗೆ ಪಾಪ್ತವಾಗಿಲ್ಲವೆ೦ಬ ಅರ್ಥ ನೀಡುತ್ತದೆ; ಜ್ಞಾನವನ್ನು ಅವರು ಅರಗಿಸಿಕೊ೦ಡಿಲ್ಲ, ಅ೦ತೆಯೇ ಅವರಲ್ಲಿ ಸ೦ತೋಷವಿಲ್ಲ.

’ಗುರುದೇವ, ನೀರಿಲ್ಲದೆ, ಆಹಾರವಿಲ್ಲದೆ ಕಷ್ಟಪಡುವ ಜನರಿದ್ದಾರೆ. ಆ ಕಷ್ಟವೇ ಅವರ ಅಸ೦ತೋಷಕ್ಕೆ ಕಾರಣವಾಗಿದೆ. ಅವರಲ್ಲಿ ಸ೦ತೋಷವನ್ನು೦ಟುಮಾಡುವುದು ಹೇಗೆ?’ ಎ೦ದು ನೀವು ಪ್ರಶ್ನಿಸಬಹುದು.

ಸ೦ಕಷ್ಟಗಳು ಹಲವು. ಪ್ರಕೃತಿ ವಿಕೋಪ - ಕ್ಷಾಮವನ್ನೋ, ಪ್ರವಾಹವನ್ನೋ ಎದುರಿಸಬೇಕಾದ ಪರಿಸ್ಥಿತಿಯೇರ್ಪಟ್ಟು ಜನ ಕಷ್ಟವನ್ನನುಭವಿಸಬಹುದು, ಅ೦ಥ ಸಮಯದಲ್ಲಿ ನೀವು ಕಡ್ಡಾಯವಾಗಿ ಸೇವೆ ಮಾಡಬೇಕು. ಸೇವೆ ಮತ್ತು ಜ್ಞಾನಪ್ರಸಾರ ಏಕ ಕಾಲದಲ್ಲಿ ಸಾಧ್ಯವಾಗುವುದಾದರೆ ಇನ್ನೂ ಒಳ್ಳೆಯದು.

ಬದುಕಿನಲ್ಲಿ ಸ೦ಕಷ್ಟಗಳು ಎದುರಾಗುವುದು ಸಹಜ, ಅವುಗಳಿ೦ದ ಮುಕ್ತರಾಗಲು ನಾವು ಶಕ್ತಿಯನ್ನು ಹೊ೦ದಿರಬೇಕು, ಆ ಶಕ್ತಿ ಅಧ್ಯಾತ್ಮಿಕ ಜ್ಞಾನದ ಮೂಲಕ ಪ್ರಾಪ್ತವಾಗುತ್ತದೆ.

ನೋಡು, ದಕ್ಷಿಣ ಅಮೆರಿಕದಲ್ಲಿ ರೆಕ್ಕೆ ಬಡಿಯುತ್ತಿರುವ ಒ೦ದು ಚಿಟ್ಟೆ, ಚೀನಾದಲ್ಲಿ ಮೋಡ ಮುಸುಕಲು ಕಾರಣವಾಗುತ್ತದೆ. ಜಗತ್ತಿನ ಎಲ್ಲ ಭಾಗಗಳೂ ಒ೦ದಕ್ಕೊ೦ದು ಸ೦ಬ೦ಧಪಡುತ್ತವೆ. ಭೂಮಿಯ ಮೇಲಿನ ಸನ್ನಿವೇಶಗಳನ್ನು ಅದು ಬೇರೆ ಇದು ಬೇರೆಯೆ೦ದು ವಿ೦ಗಡಿಸುವ ಹಾಗಿಲ್ಲ. ನೀವು ಮನಃಪೂರ್ತಿಯಾಗಿ ಒ೦ದು ಸಣ್ಣ ಪೂಜಾ ವಿಧಿಯನ್ನು ಅನುಸರಿಸಿದರೆ ಅದು ವಾತಾವರಣದಲ್ಲಿ ಕೆಲವು ಸು೦ದರ, ಸಕಾರಾತ್ಮಕ ಅ೦ಶಗಳನ್ನು ಸೃಷ್ಟಿಸುತ್ತವೆ, ಆ ಅ೦ಶಗಳು ಆಕಾಶಮ೦ಡಲವನ್ನು ಪ್ರಭಾವಿತಗೊಳಿಸುತ್ತವೆ.

ಗುರುಪೂಜೆಯು ಸೃಷ್ಟಿಸಬಲ್ಲ೦ಥ ಪರಿಣಾಮವನ್ನು ನಿಮ್ಮಲ್ಲಿ ಎಷ್ಟು ಜನ ಗಮನಿಸಿದ್ದೀರಿ? ವಾತಾವರಣದ ಮೇಲೆ ಒ೦ದು ಉತ್ತಮ ಪರಿಣಾಮ ಗೋಚರಿಸಲು ಗುರುಪೂಜೆಯ ಮ೦ತ್ರೋಚ್ಚಾರಣೆಯಷ್ಟೇ ಸಾಕು.

ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಓರ್ವರು ಗುರುಪೂಜೆಯ ಮ೦ತ್ರ ಉಚ್ಚರಿಸಿದ್ದರ ಫಲವಾಗಿ ಚೇತರಿಸಿಕೊ೦ಡರೆ೦ದು ಇತ್ತೀಚೆಗೆ ಅವರ ಕುಟು೦ಬದವರು ನನಗೆ ಪತ್ರ ಬರೆದಿದ್ದಾರೆ.

ನಿರ೦ತರವಾಗಿ ಅಳುತ್ತಿದ್ದ ಮಗುವೊ೦ದು, ಗುರುಪೂಜೆಯ ಮ೦ತ್ರ ಉಚ್ಚರಿಸಿದ ನ೦ತರ ನೆಮ್ಮದಿ ತಳೆದು ಸುಮ್ಮನಾಯಿತು.

ಆರಾಧನೆಯಲ್ಲಿ ಅಪಾರ ಸತ್ವವಿದೆ, ಸಮಸ್ಯೆಗಳಿಗೆ ಸಮಾಧಾನವಿದೆ, ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದರ ಪರಿಣಾಮ ನಿರೀಕ್ಷಿತ, ನಿಸ್ಸ೦ಶಯವಾಗಿ, ಅತ್ಯ೦ತ ಸಹಜವಾಗಿಯೇ ಏರ್ಪಡುತ್ತದೆ. ಆಶ್ಚರ್ಯವು೦ಟಾಗುವುದು ಹಾಗಾಗದಿದ್ದಾಗಲೇ.

ಅ೦ತೆಯೇ ಬದುಕಿನಲ್ಲಿ, ಒ೦ದು ಗುರಿ ಇರಿಸಿಕೊ೦ಡು ಮು೦ದುವರಿಯುವುದು ಅಗತ್ಯ. ಆ ಗುರಿಯೇನೆ೦ದರೆ, ’ಪುರಾತನ ಕ್ರಿಯಾಶೀಲತೆಯ ಪ್ರೇರೇಪಣೆಯನ್ನು ಎಲ್ಲರಲ್ಲಿಯೂ ನಾವು ಉ೦ಟುಮಾಡುವುದು ಹೇಗೆ?’ ಎ೦ದು ಆಲೋಚಿಸುವುದು. ಆ ಗುರಿ ಒ೦ದು ಹ೦ತವನ್ನು ಮುಟ್ಟಿದ ತರುವಾಯ, ನಾವಿರುವ ತನಕ ನಮ್ಮ ವೈಯಕ್ತಿಕ ಜೀವನಕ್ಕೆ ಅದನ್ನು ಅಳವಡಿಸಿಕೊಳ್ಳುವುದು ಹೇಗೆ೦ದು ಯೋಚಿಸುವುದು. ಆ ದಿಶೆಯಲ್ಲಿ ನಮ್ಮ ಶಕ್ತಿಯನ್ನು ವಿನಿಯೋಗಿಸುವುದು.

ಬುಧವಾರ, ಮಾರ್ಚ್ 13, 2013

ನಿಮ್ಮಲ್ಲಿರುವುದನ್ನು ಮಾತ್ರ ನಿಮಗೆ ನೀಡಲು ಸಾಧ್ಯ

ಬೆಂಗಳೂರು, ಭಾರತ
೧೩ ಮಾರ್ಚ್ ೨೦೧೩

ಪ್ರಶ್ನೆ: ಗುರುದೇವ, ನಿಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಸ್ವಾತಂತ್ರ್ಯವಿದೆಯೆಂದೂ ಮತ್ತು ನಿಮ್ಮದೇನಿದೆಯೋ ಅದನ್ನು ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲವೆಂದೂ ನೀವು ಹೇಳಿದಿರಿ. ಈಗ, ಯಾವುದಕ್ಕಾದರೂ ಇರುವ ನನ್ನ ಹಕ್ಕನ್ನು ಯಾರಾದರೂ ಕಿತ್ತುಕೊಂಡು ಹೋದರೆ, ಅದು ನನ್ನದೆಂದು ನಂಬುತ್ತಾ ನಾನು ಕಾಯುತ್ತಾ ಕುಳಿತುಕೊಳ್ಳಬೇಕೇ ಮತ್ತು ಅದು ನನ್ನ ಬಳಿಗೆ ಬರುವುದೇ ಅಥವಾ ನಾನು ಹೋರಾಡಬೇಕೇ?

ಶ್ರೀ ಶ್ರೀ ರವಿ ಶಂಕರ್:  ಮೊದಲನೆಯದಾಗಿ, ಒಬ್ಬರು ನಿನ್ನ ಹಕ್ಕುಗಳನ್ನು ತೆಗೆದುಕೊಂಡು ಹೋದರೆಂದು ನೀನು ನಂಬಿದರೆ, ನೀನು ನಿನ್ನ ಯೋಚನೆಯನ್ನು ತಿದ್ದಬೇಕು. ಅದು ನಿನ್ನ ಹಕ್ಕಾಗಿದ್ದರೆ, ಯಾರಿಗೂ ಅದನ್ನು ನಿನ್ನಿಂದ ದೂರ ಒಯ್ಯಲು ಸಾಧ್ಯವಿಲ್ಲ. ನೀನು ಎದ್ದುನಿಂತು ನಿನ್ನ ಹಕ್ಕುಗಳನ್ನು ತೆಗೆದುಕೊಳ್ಳಬೇಕು.

ಇದನ್ನು ನಾನು ಹಿಂದಿಯಲ್ಲಿ ಹೇಳಿರುವೆನು: ಯಾವುದರ ಮೇಲಾದರೂ ನಿಮಗಿರುವ ಅಧಿಕಾರದ ಭಾವನೆಯನ್ನು ಬಿಟ್ಟುಬಿಡಿ. ನನಗೆ ಯಾವುದರ ಮೇಲೆಯಾದರೂ ಅಧಿಕಾರವಿದೆಯೆಂದು ನೀವು ಹೇಳಿದರೆ, ಸುಮ್ಮನೆ ಅಧಿಕಾರವನ್ನು ಬಿಟ್ಟುಬಿಡಿ. ಇಲ್ಲಿ, ಅಧಿಕಾರ ಎಂಬುದು ಬಳಸುವ ಸರಿಯಾದ ಪದವಾಗಿರಬಹುದು. ನಾನೇನು ಹೇಳುತ್ತಿರುವೆನೆಂಬುದು ನಿಮಗೆ ಅರ್ಥವಾಗುತ್ತಿದೆಯೇ?

ನೋಡಿ, ನೀವು ನಿಮ್ಮ ಅಧಿಕಾರವನ್ನು ನಿಮ್ಮ ಪ್ರೀತಿಪಾತ್ರರಿಗೆ ಕೊಡುವಾಗ, ಅದು ಖಂಡಿತವಾಗಿಯೂ ನಿಮ್ಮ ಬಳಿಗೆ ತಿರುಗಿ ಬರುತ್ತದೆ.

ಹೆಚ್ಚಾಗಿ, ನಾವು ನಮ್ಮ ಅಧಿಕಾರವನ್ನು ಇತರರ ಮೇಲೆ ಬಲವಂತವಾಗಿ ಹೇರಲು ಬಯಸುತ್ತೇವೆ.

ಉದಾಹರಣೆಗೆ, ನಿಮಗೆ ನಿಮ್ಮ ಪತ್ನಿಯ ಮೇಲೆ ಅಧಿಕಾರವಿದೆ. ಆದರೆ, ನೀವು ನಿಮ್ಮ ಪತ್ನಿಯ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸದಿದ್ದರೆ, ಮತ್ತು ಬದಲಾಗಿ ಅವಳಿಗೆ ನಿಮ್ಮ ಅಧಿಕಾರವನ್ನು ಬಿಟ್ಟು ಕೊಟ್ಟರೆ, ಆಗ ಅದು ಸ್ವಾತಂತ್ರ್ಯವನ್ನು ತರುತ್ತದೆ.
ನಾನೇನು ಹೇಳುತ್ತಿರುವೆನೆಂದು ನಿಮಗೆ ತಿಳಿಯುತ್ತಿದೆಯೇ?

ನಿಮ್ಮ ಮಕ್ಕಳ ಮೇಲೆ ನಿಮಗೊಂದು ಹಕ್ಕಿದೆ. ನಾನೇನು ಹೇಳುತ್ತಿರುವೆನೆಂದರೆ, ನಿಮ್ಮ ಅಧಿಕಾರವನ್ನು ನಿಮ್ಮ ಮಕ್ಕಳ ಮೇಲೆ ಚಲಾಯಿಸಬೇಡಿ, ಬದಲಾಗಿ ನಿಮ್ಮ ಅಧಿಕಾರವನ್ನು ಅವರಿಗೆ ಕೊಡಿ. ಅದು ಅವರಿಗೆ ಸ್ವಾತಂತ್ರ್ಯವನ್ನು ತರುತ್ತದೆ.

ನೀವು ನಿಮ್ಮ ಪ್ರೀತಿಪಾತ್ರರ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸದೇ ಇದ್ದರೆ, ಆಗ ಅದು ಸ್ವಾತಂತ್ರ್ಯವನ್ನು ತರುತ್ತದೆ.
ನೀವೊಬ್ಬರು ಶಾಲಾ ಶಿಕ್ಷಕರೆಂದು ಇಟ್ಟುಕೊಳ್ಳಿ, ನಿಮಗೆ ಖಂಡಿತವಾಗಿಯೂ ಎಲ್ಲಾ ಮಕ್ಕಳ ಮೇಲೊಂದು ಅಧಿಕಾರವಿರುತ್ತದೆ. ಈಗ ನೀವು ಮಕ್ಕಳ ಮೇಲೆ ನಿಮ್ಮ ಅಧಿಕಾರ ಚಲಾಯಿಸಿದರೆ, ಅವರು ಓಡಿಹೋಗುವರು. ಸಾಧಾರಣವಾಗಿ ಸಂಭವಿಸುವುದು ಅದುವೇ ಅಲ್ಲವೇ?

ಅದೇ ರೀತಿ, ನಿಮ್ಮ ಕೈಕೆಳಗೆ ೫೦ ನೌಕರರು ಕೆಲಸ ಮಾಡುತ್ತಿರುವರೆಂದು ಇಟ್ಟುಕೊಳ್ಳೋಣ ಮತ್ತು ನೀವು ಅವರ ಮೇಲೆ ನಿಮ್ಮ ಅಧಿಕಾರವನ್ನು ಚಲಾಯಿಸುತ್ತೀರಿ. ಆಗ ಕೆಲಸ ಮಾಡುವ ಸ್ಥಳವು ಅವರಿಗೆ ಹಿತಕರವಾಗಿರದು. ಆದುದರಿಂದ, ಬದಲಾಗಿ ನೀವು ನಿಮ್ಮ ಅಧಿಕಾರಗಳನ್ನು ಬಿಟ್ಟುಕೊಡಬೇಕು.

ತಮ್ಮ ಅಧಿಕಾರವನ್ನು ಯಾರು ಬಿಟ್ಟುಕೊಡಬಲ್ಲರು? ಯಾರಿಗೆ ಅವರೊಂದಿಗೆ ಒಂದು ಸಂಪೂರ್ಣ ಅಧಿಕಾರವಿರುವುದೋ ಅವರು ಮಾತ್ರ.

ಇದು ಒಂದು ದಾನ ನೀಡುವಂತೆ ಆದರೆ, ಇನ್ನೊಂದು, ಮೊದಲಿಗೆ ನಿಮ್ಮಲ್ಲಿಯೇ ಹಣವಿಲ್ಲದಿರುವಾಗ ದಾನ ಮಾಡಲು ಪ್ರಯತ್ನಿಸಿದಂತೆ.

ನೀವು ಹೇಳುತ್ತಿರುವುದೇನೆಂದರೆ, ’ನನ್ನಲ್ಲಿಯೇ ಹಣವಿಲ್ಲದಿರುವಾಗ ನಾನು ಹೇಗೆ ಕೊಡಲು ಸಾಧ್ಯ?’ ಎಂದು.
ನಾನು ಹೇಳುತ್ತಿರುವುದೇನೆಂದರೆ, ’ನೀವು ಸ್ವಲ್ಪ ದಾನ ಮಾಡಬೇಕು.’

ಹೀಗೆ, ಹಕ್ಕನ್ನು ಈಗಾಗಲೇ ನೀವು ಸಂಪೂರ್ಣವಾಗಿ ಸ್ವಂತದ್ದಾಗಿಸಿಕೊಂಡಿದ್ದರೆ ಮಾತ್ರ ನಿಮಗೆ ಅದನ್ನು ನೀಡಲು ಸಾಧ್ಯ. ತಿಳಿಯಿತೇ? ನೀನು ನಿನ್ನ ಹಕ್ಕುಗಳನ್ನು ನೀಡಲು ಸಾಧ್ಯವಾಗುವುದು ಯಾವಾಗ ಎಂದರೆ, ಅದು ನಿನ್ನದು ಎಂಬುದು ನಿನಗೆ ತಿಳಿದಿರುವಾಗ ಮಾತ್ರ. ಯಾರಾದರೂ ನಿನ್ನ ಹಕ್ಕುಗಳನ್ನು ಕಸಿದುಕೊಂಡಿರುವರು ಎಂದಾದರೆ, ಆಗ ನೀನು ಅವರೊಂದಿಗೆ ಹೋರಾಡಬೇಕು. ಆದರೆ, ಅದನ್ನು ನೀನು ಅವರಿಗೆ ನೀಡಿರುವೆಯಾದರೆ, ಆಗ ಅದೊಂದು ಬೇರೆ ವಿಷಯ. ಆಗ ಅದು ಪ್ರೀತಿ ಎಂದು ಕರೆಯಲ್ಪಡುತ್ತದೆ.

ನಿಮ್ಮ ಹಕ್ಕನ್ನು ಬೇರೊಬ್ಬರಿಗೆ ಬಿಟ್ಟುಕೊಡುವುದು ಪ್ರೀತಿಯ ಒಂದು ಪ್ರಕ್ರಿಯೆಯಾಗಿದೆ, ಆದರೆ ಯಾರಾದರೂ ನಿಮ್ಮ ಹಕ್ಕನ್ನು ಕಸಿದುಕೊಂಡಿರುವುದಾದರೆ, ಆಗ ನೀವು ಅದನ್ನು ಅವರಿಗೆ ನೀಡಿಯೇ ಇಲ್ಲ. ಆಗ ನೀವು ಹೋರಾಡಿ ಅದನ್ನು ಮರಳಿ ತೆಗೆದುಕೊಳ್ಳಬೇಕು. ನಿನಗಿದು ಅರ್ಥವಾಯಿತೇ?

ಈಗ ನೀನೇನು ಮಾಡುವೆ? ನಿನ್ನ ಹಕ್ಕುಗಳನ್ನು ಮರಳಿ ಪಡೆಯಲು ನೀನು ಕಾಯುವೆಯಾ?

ನಿನಗೊಂದು ಮನೆಯಿದ್ದು, ಕೆಲವು ರೌಡಿಗಳು ಬಂದು ನಿನ್ನಿಂದ ನಿನ್ನ ಆಸ್ತಿಯನ್ನು ಕಸಿದುಕೊಳ್ಳುತ್ತಾರೆಂದು ಇಟ್ಟುಕೊಳ್ಳೋಣ. ನಿನ್ನ ಆಸ್ತಿಯ ಮೇಲೆ ನಿನಗಿರುವ ಹಕ್ಕನ್ನು ನೀನು ಸುಮ್ಮನೆ ಬಿಟ್ಟುಕೊಡಬೇಕೇ? ಬೇಡವೆಂದು ನಾನು ಹೇಳುವೆನು. ನೀನು ಅವರ ವಿರುದ್ಧವಾಗಿ ಎದ್ದುನಿಲ್ಲಬೇಕು, ಒಬ್ಬರು ಒಳ್ಳೆಯ ವಕೀಲರನ್ನು ಕರೆದುಕೊಂಡು ಪೋಲೀಸರ ಬಳಿಗೆ ಹೋಗಬೇಕು ಮತ್ತು ನಿನ್ನ ಹಕ್ಕುಗಳನ್ನು ಮರಳಿ ಪಡೆಯಲು ಬೇಕಾಗಿರುವ ಎಲ್ಲವನ್ನೂ ಮಾಡಬೇಕು. ಆದರೆ ನೀನು ಸಾಯುವ ಮೊದಲು ಕಡಿಮೆಪಕ್ಷ ಯಾರಿಗಾದರೂ ಹಕ್ಕನ್ನು (ನಿನ್ನ ಆಸ್ತಿಯ) ಬಿಟ್ಟುಕೊಡು, ಇಲ್ಲದಿದ್ದರೆ ಅದು ಸರಕಾರಕ್ಕೆ ಹೋದೀತು ಅಥವಾ ಅದು ವಾರಸುದಾರರಿಲ್ಲದಾಗುವುದು. ಕಡಿಮೆಪಕ್ಷ, ಈ ಭೂಮಿಯನ್ನು ತೊರೆಯುವ ಮೊದಲು ನೀನು ನಿನ್ನ ಆಸ್ತಿಯ ಮೇಲಿನ ಹಕ್ಕನ್ನು ಯಾರಿಗಾದರೂ ಬಿಟ್ಟುಕೊಡು.

ಪ್ರಶ್ನೆ: ಗುರುದೇವ, ನನಗೆ ರಾತ್ರಿ ಕೆಟ್ಟ ಕನಸುಗಳು ಬೀಳುತ್ತವೆ ಮತ್ತು ಇದು ಆವಾಗಾವಾಗ ಬರುತ್ತವೆ. ನನಗೆ ಭಯವಾಗುತ್ತದೆ. ದಯವಿಟ್ಟು ಸಹಾಯ ಮಾಡಿ.

ಶ್ರೀ ಶ್ರೀ ರವಿ ಶಂಕರ್: ಭಯಪಡಬೇಕಾದ ಅಗತ್ಯವಿಲ್ಲ. ರಾತ್ರಿ ಮಲಗುವ ಮೊದಲು ಕೇವಲ ಓಂ ನಮಃ ಶಿವಾಯ ಎಂದು ಅಥವಾ ಜೈ ಗುರುದೇವ್ ಎಂದು ಜಪಿಸು, ಅಥವಾ ನೀನು ಎರಡನ್ನೂ ಹೇಳಿ ನಂತರ ಮಲಗು.

ನೋಡಿ, ನಮ್ಮ ದೇಶದಲ್ಲಿ ಮತ್ತು ಪ್ರಪಂಚದ ಸುತ್ತಲಿರುವ ಇತರ ದೇಶಗಳಲ್ಲಿ, ಮಲಗುವ ಮೊದಲು ಮಕ್ಕಳು ಪ್ರಾರ್ಥನೆಗಳನ್ನು ಹೇಳುವಂತೆ ಮಾಡಲಾಗುತ್ತಿತ್ತು, ಅಲ್ಲವೇ? ಈ ದಿನಗಳಲ್ಲಿ ಯಾರಾದರೂ ಇದನ್ನು ಅನುಸರಿಸುವರೇ? ಇಲ್ಲಿರುವ ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಮಾಡುತ್ತೀರಿ?

(ಕೆಲವು ಜನರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನೋಡಿ, ಇಲ್ಲಿ ಕುಳಿತಿರುವವರಲ್ಲಿ ಕೆಲವೇ ಕೆಲವರು ಇದನ್ನು ಅನುಸರಿಸುತ್ತಾರೆ. ಮಲಗುವ ಮೊದಲು ನೀವೆಲ್ಲರೂ ಪ್ರಾರ್ಥಿಸಬೇಕು ಮತ್ತು ಮಕ್ಕಳು ಕೂಡಾ ಪ್ರಾರ್ಥಿಸುವಂತೆ ಮಾಡಬೇಕು. ಒಂದು ಶ್ಲೋಕವನ್ನು ಜಪಿಸಿ, ಅಥವಾ ನೀವು ಪೂಜಿಸುವ ಯಾವುದಾದರೂ ದೇವತೆಯ ಹೆಸರನ್ನು ಹೇಳಿ ಅಥವಾ ನಿಮಗೆ ನೀಡಲಾಗಿರುವ ದಿನಕ್ಕಾಗಿ ದೇವರಿಗೆ ಧನ್ಯವಾದಗಳನ್ನರ್ಪಿಸಿ.

ಸಂಸ್ಕೃತದಲ್ಲಿ ಮಾತ್ರ ಪ್ರಾರ್ಥನೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಪ್ರಾರ್ಥನೆಯನ್ನು ಹೇಳಿದರೂ ಆಗಬಹುದು. ದೇವರಿಗೆ ಸಂಸ್ಕೃತ ಮಾತ್ರವಲ್ಲ ತಿಳಿದಿರುವುದು. ಅವನಿಗೆ ನಿಮ್ಮ ಪ್ರಾದೇಶಿಕ ಭಾಷೆಗಳು ಕೂಡಾ ಅರ್ಥವಾಗುತ್ತವೆ.

ಆದುದರಿಂದ ಸುಮ್ಮನೆ ಪ್ರಾರ್ಥನೆ ಮಾಡಿ. ಮುಖ್ಯವೇನೆಂದರೆ, ಭಾವನೆ. ಆದುದರಿಂದ, ನೀವು ಮಲಗುವ ಮೊದಲು ನಿಮ್ಮ ಕೈಗಳನ್ನು ಜೋಡಿಸಿ ಪ್ರಾರ್ಥನೆ ಮಾಡಿ, ’ಈ ದಿನದ ಉಡುಗೊರೆಗಾಗಿ ನಿಮಗೆ ಧನ್ಯವಾದಗಳು ದೇವರೇ. ಇವತ್ತು ರಾತ್ರಿ ನಾನು ಚೆನ್ನಾಗಿ ನಿದ್ರಿಸುವಂತೆ ಮತ್ತು ನನ್ನ ನಾಳಿನ ದಿನವು ಒಳ್ಳೆಯದಾಗಿರುವಂತೆ ನನಗೆ ಆಶೀರ್ವಾದ ಮಾಡಿ.’

ಹೀಗೆ ನೀವು ಇಂತಹ ಕೆಲವು ಸಾಲುಗಳನ್ನು ಹೇಳಬಹುದು ಅಥವಾ, ನೀವು ಸುಮ್ಮನೆ ದೇವರನ್ನು ನೆನಪಿಸಿಕೊಂಡು, ನಿಮಗೆ ತಿಳಿದಿರುವ ಯಾವುದೇ ದೇವರ ಹೆಸರನ್ನು ಜಪಿಸಬಹುದು. ನೀವು ನಿಮ್ಮ ದೇವತೆಯ ಅಥವಾ ನಿಮ್ಮ ಗುರುವಿನ ಅಥವಾ ಯಾವುದೇ ಸಂತರ ಹೆಸರನ್ನು ಜಪಿಸಬಹುದು. ಪ್ರಾಥನೆ ಮಾಡಿ ಮತ್ತು ಎಲ್ಲವನ್ನೂ ಅವರಿಗೆ ಸಮರ್ಪಿಸಿ ನಿದ್ದೆ ಮಾಡಿ.

ಪ್ರಾಚೀನ ದಿನಗಳಲ್ಲಿ, ಮಕ್ಕಳು ತಮ್ಮ ತಾಯಿ ಮತ್ತು ತಂದೆಯರನ್ನು ಪ್ರಾರ್ಥಿಸುತ್ತಿದ್ದರು ಮತ್ತು ನಂತರ ನಿದ್ರಿಸುತ್ತಿದ್ದರು. ಆದರೆ ಈ ದಿನಗಳಲ್ಲಿ ಮಕ್ಕಳಿಗೆ ತಮ್ಮ ಹೆತ್ತವರ ಕಡೆಗೆ ಅಂತಹ ಭಕ್ತಿಯಿಲ್ಲ.

ಹೆತ್ತವರು ದಿನವಿಡೀ ಪರಸ್ಪರರೊಂದಿಗೆ ಜಗಳವಾಡುತ್ತಾ ಇದ್ದರೆ, ಆಗ ಮಕ್ಕಳಿಗೆ ಅವರನ್ನು ಪ್ರಾರ್ಥಿಸಬೇಕೆಂದು ಅನ್ನಿಸಲು ಹೇಗೆ ಸಾಧ್ಯ? ಅವರು ಯೋಚಿಸುತ್ತಾರೆ, ’ಹೆತ್ತವರು ಪರಸ್ಪರರೊಂದಿಗೆ ಜಗಳವಾಡುತ್ತಾ ಇರುತ್ತಾರೆ, ಅವರನ್ನು ನಾವು ದೇವರೆಂದು ನೋಡಲು ಹೇಗೆ ಸಾಧ್ಯ?’

ನೀವು ದೇವರನ್ನು ಅಥವಾ ಇತರ ಯಾವುದೇ ದೇವತೆಯನ್ನು ನಂಬುವುದಿಲ್ಲವಾದರೆ, ಆಗಲೂ ಪರವಾಗಿಲ್ಲ. ದೇವರನ್ನು ನಂಬಬೇಕೆಂದು ಯಾವುದೇ ಒತ್ತಾಯವಿಲ್ಲ. ಅಂತಹ ಸಂದರ್ಭದಲ್ಲಿ, ಕೆಲವು ಕ್ಷಣಗಳವರೆಗೆ ನಿಮ್ಮೊಂದಿಗೆಯೇ ಮೌನವಾಗಿ ಕುಳಿತುಕೊಳ್ಳಿ ಮತ್ತು ಮನಸ್ಸನ್ನು ಮೌನವಾಗಿಸಿ. ಸುಮ್ಮನೆ ನಿಮಗೆ ನೀವೇ ಹೀಗೆಂದು ಜ್ಞಾಪಿಸಿಕೊಳ್ಳಿ, ’ನನ್ನ ಆತ್ಮವು ಶಾಶ್ವತವಾದುದು ಮತ್ತು ನಾನು ಪರಿಶುದ್ಧನು.’

ಅಷ್ಟಾವಕ್ರ ಗೀತೆಯಲ್ಲಿ, ’ಅಹೋ ಅಹಂ ನಮೋ ಮಹಿಯಮ್’ ಎಂದು ಹೇಳಲಾಗಿದೆ. ಇದರರ್ಥ, ’ನಾನು ನನಗೇ ತಲೆಬಾಗಿ ನಮಸ್ಕರಿಸುವೆನು’ ಎಂದು. ನಮ್ಮೊಳಗೆ ಪಶ್ಚಾತ್ತಾಪದ ಯಾವುದೇ ಭಾವನೆಯಿಲ್ಲದಿರುವಾಗ ಮಾತ್ರ ನಾವು ಹೀಗೆನ್ನಲು ಸಾಧ್ಯ.

ಈ ರೀತಿಯಲ್ಲಿ ಯೋಚಿಸಿಕೊಂಡು, ನಿಮ್ಮೊಳಗೆಯೇ ಸುಮ್ಮನೆ ವಿಶ್ರಾಮ ಮಾಡಿ. ಕಡಿಮೆಪಕ್ಷ ನೀವು ಇಷ್ಟಾದರೂ ಮಾಡಬೇಕು. ಆದುದರಿಂದ, ಸ್ವಲ್ಪ ಸಮಯ ಧ್ಯಾನ ಮಾಡಿ ಮತ್ತು ನಂತರ ನಿದ್ರಿಸಿ. ಆಗ ನಿಮಗೆ ಕೆಟ್ಟ ಕನಸುಗಳು ಬೀಳವು ಮತ್ತು ನಿಮಗೆ ಒಳ್ಳೆಯ ಗುಣಮಟ್ಟದ ನಿದ್ರೆಯು ಬರುವುದು.

ಪ್ರಶ್ನೆ: ಭಗವಾನ್ ಬ್ರಹ್ಮನಿಗೆ ಉತ್ತರ ಭಾರತವನ್ನು ಹೊರತುಪಡಿಸಿ ಬೇರೆಲ್ಲೂ ದೇವಾಲಯವಿಲ್ಲ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಭಗವಾನ್ ಬ್ರಹ್ಮನಿಗೆ ಯಾವುದೇ ದೇವಾಲಯವಿಲ್ಲ ಯಾಕೆಂದರೆ ಅವನು ತನ್ನ ಕೆಲಸವನ್ನು ಮುಗಿಸಿರುವನು ಮತ್ತು ಈಗಾಗಲೇ ಪ್ರಪಂಚವನ್ನೂ ಸೃಷ್ಟಿಸಿರುವನು. ಅವನ ಕೆಲಸವು ಮಾಡಿ ಆಗಿರುವಾಗ, ಜನರು ಯಾಕೆ ಅವನನ್ನು ಪೂಜಿಸುವರು?

ನೋಡು, ದೇವಸ್ಥಾನಗಳನ್ನು ಸಾಕಷ್ಟು ನಂತರ ಮಾಡಲಾಯಿತು. ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಭಗವಾನ್ ಮಹೇಶ್ವರ ಎಲ್ಲರೂ ಒಂದೇ ಆಗಿರುವ ವಿವಿಧ ಚೈತನ್ಯಗಳು. ’ಬ್ರಹ್ಮ ಶಿವೋಮೇಯ ಅಸ್ತು ಸದಾಶಿವ’  ಎಂದು ಹೇಳಲಾಗಿದೆ (ಭಗವಾನ್ ಶಿವನಿಗೆ ಅರ್ಪಿಸಲಾಗಿರುವ ಒಂದು ಹಿಂದೂ ಪೌರಾಣಿಕ ಗ್ರಂಥವಾದ ’ಲಿಂಗ ಪುರಾಣ’ ದ ಶ್ಲೋಕಗಳಿಂದ).

ಪ್ರಶ್ನೆ: ಪ್ರೀತಿಯ ಗುರುದೇವ, ಸರಕಾರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಒಬ್ಬಳು ಸ್ನೇಹಿತೆಯಿದ್ದಾಳೆ. ಕಳೆದ ಏಳು ತಿಂಗಳುಗಳಿಂದ ಅವಳು ತನ್ನ ವೇತನವನ್ನು ಪಡೆದಿಲ್ಲ, ಆದರೂ ಅವಳಿನ್ನೂ ನಗುತ್ತಿದ್ದಾಳೆ. ಇದನ್ನು ನಿಮಗೆ ತಿಳಿಯಪಡಿಸಬೇಕೆಂದು ಅವಳು ನನ್ನಲ್ಲಿ ಕೇಳಿಕೊಂಡಿದ್ದಾಳೆ ಗುರುದೇವ. 

ಶ್ರೀ ಶ್ರೀ ರವಿ ಶಂಕರ್: ಹೌದು, ನನಗಿದು ತಿಳಿದಿದೆ. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಜನರು, ಇಡೀ ವರ್ಷ ತಮ್ಮ ವೇತನ ಪಡೆದಿಲ್ಲವೆಂಬುದು ಬಹಳ ಆಶ್ಚರ್ಯಕರವಾದುದು. ಅವರು ತಮ್ಮ ಬಿಲ್ಲುಗಳನ್ನು ಹೇಗೆ ಪಾವತಿಸುವರು? ಅದೇ ರೀತಿ ಕೆಲವು ವಿಮಾನಸಂಸ್ಥೆಗಳಲ್ಲಿ ಕೂಡಾ ಇದೇ ಸ್ಥಿತಿಯಿದೆ.

ವಿಮಾನಸಂಸ್ಥೆಗಳ ಕೆಲವು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೂ ಕೂಡಾ ಅವರಿಗೆ ಎಂಟರಿಂದ ಒಂಭತ್ತು ತಿಂಗಳುಗಳವರೆಗೆ ವೇತನ ಸಿಗಲಿಲ್ಲವೆಂಬುದನ್ನು ತಿಳಿದು ನನಗೆ ಆಶ್ಚರ್ಯವಾಯಿತು. ಇದು ಸಂಪೂರ್ಣ ಬೇಜವಾಬ್ದಾರಿಯಾಗಿದೆ. ಈ ಜನರಿಗೆ ತಮ್ಮ ನೌಕರಿಯನ್ನು ಬಿಡಲು ಸಾಧ್ಯವಿಲ್ಲ ಯಾಕೆಂದರೆ, ಇನ್ನೊಂದು ನೌಕರಿ ಪಡೆಯಲು ತಮಗೆ ಸಾಧ್ಯವಿದೆಯೇ ಇಲ್ಲವೇ ಎಂಬುದು ಅವರಿಗೆ ತಿಳಿಯದು. ಹಾಗಾಗಿ, ಬೇಗನೇ, ಒಂದಲ್ಲ ಒಂದು ದಿನ ತಮಗೆ ವೇತನ ಸಿಗುವುದೆಂಬ ಭರವಸೆಯಿಂದ ಅವರು ಕೆಲಸ ಮಾಡುತ್ತಿರುತ್ತಾರೆ. ಅವರು ಬೇಗನೇ ತಮ್ಮ ವೇತನ ಪಡೆಯಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

ವಿಶ್ಲೇಷಣೆ

ಬೆಂಗಳೂರು, ಭಾರತ
೧೩ ಮಾರ್ಚ್ ೨೦೧೩

ಲವು ಸಲ ನಾವು ನಮ್ಮನ್ನೇ ಅತಿಯಾಗಿ ವಿಶ್ಲೇಷಿಸುತ್ತೇವೆ. ನನಗೆ ಹೀಗಾಗುತ್ತಿದೆ, ಹಾಗೆ ಆಗುತ್ತಿಲ್ಲ; ಅಥವಾ ನನಗೆ ಇದು ಬೇಕು ಮತ್ತು ನನಗೆ ಅದು ಬೇಕು; ಅಥವಾ ನಾನಲ್ಲಿ ಏನು ಮಾಡಿದೆನೋ ಅದು ಬಹಳ ತಪ್ಪಾಗಿತ್ತು, ನಾನಿಲ್ಲಿ ಏನು ಮಾಡಿದೆನೋ ಅದು ಸರಿ, ಮೊದಲಾಗಿ ಯೋಚಿಸುತ್ತಿರುತ್ತೇವೆ. ನಾವು ನಮ್ಮದೇ ಬಗೆಗಿನ ಹಲವಾರು ಯೋಚನೆಗಳಲ್ಲಿ ಬಹಳಷ್ಟು ಸಿಕ್ಕಿಹಾಕಿಕೊಳ್ಳುತ್ತೇವೆ; ಇದನ್ನು ನಾವು ಮಾಡಬಾರದು.

ನೋಡಿ, ಗಾಳಿ ಬೀಸುವಾಗ ಏನಾಗುತ್ತದೆ? ಎಲ್ಲವೂ ಅದರೊಂದಿಗೆ ಒಯ್ಯಲ್ಪಡುತ್ತದೆ, ಅಲ್ಲವೇ? ಎಲ್ಲವೂ ಗಾಳಿಯೊಂದಿಗೆ ಹಾರಿಹೋಗುತ್ತದೆ. ಹೀಗೆ ಹಿಂದೆ ಏನೆಲ್ಲಾ ನಡೆಯಿತೋ; ಒಳ್ಳೆಯದಾಗಿದ್ದರೂ ಅಥವಾ ಕೆಟ್ಟದಾಗಿದ್ದರೂ, ಸರಿಯಾಗಿದ್ದರೂ ಅಥವಾ ತಪ್ಪಾಗಿದ್ದರೂ, ಹಿತಕರ ಅಥವಾ ಅಹಿತಕರ ಘಟನೆಗಳಾಗಿದ್ದರೂ, ಅದೆಲ್ಲವೂ ಸಂಭವಿಸಿತು ಮತ್ತು ಅದೆಲ್ಲವೂ ಈಗ ಹೋಗಿಯಾಯಿತು. ಹೇಗೆ ಗಾಳಿಯು ಬಂದು ಎಲ್ಲವನ್ನೂ ಹಾರಿಸುತ್ತದೆಯೋ, ಅದೇ ರೀತಿಯಲ್ಲಿ ಜೀವನದ ಎಲ್ಲಾ ಘಟನೆಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಮುಖ್ಯವಾದುದೇನೆಂದರೆ, ನೀವು ಎಲ್ಲೂ ಸಿಕ್ಕಿಹಾಕಿಕೊಳ್ಳಬಾರದು, ಮುಂದಕ್ಕೆ ಸಾಗಿ. ಕೇವಲ ಟೊಳ್ಳು ಮತ್ತು ಖಾಲಿಯಾಗಿ, ಹಾಗೂ ನಂತರ ನೀವು ಆನಂದವಾಗಿರುವಿರಿ.

ನನಗೆ ಹೇಳಿ, ಯಾವುದೇ ಸಮಸ್ಯೆಗಳೇ ಬಂದಿಲ್ಲದವರು ಯಾರಾದರೂ ಇದ್ದಾರೆಯೇ? ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಬರುತ್ತವೆ.

ಸಂತೋಷವನ್ನು ಅನುಭವಿಸದೇ ಇರುವ ಯಾರಾದರೂ ಇರುವರೇ? ಪ್ರತಿಯೊಬ್ಬರೂ, ಒಂದಲ್ಲ ಒಂದು ಸಮಯದಲ್ಲಿ ಸಂತೋಷವನ್ನು ಅನುಭವಿಸಿರುತ್ತಾರೆ.

ಹೊಗಳಿಕೆಯನ್ನು ಪಡೆಯದೇ ಇರುವ ಯಾರಾದರೂ ಇದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಹೊಗಳಲ್ಪಟ್ಟಿದ್ದಾರೆ. ಒಂದು ನಾಯಿ ಕೂಡಾ ಹೊಗಳಲ್ಪಡುತ್ತದೆ! ’ಎಷ್ಟೊಂದು ಒಳ್ಳೆಯ ನಾಯಿ’ ಎಂದು ಜನರು ಹೇಳುತ್ತಾರೆ.
ಟೀಕಿಸಲ್ಪಟ್ಟಿಲ್ಲದೇ ಇರುವ ಯಾರಾದರೂ ಇದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಟೀಕಿಸಲ್ಪಟ್ಟಿರುವರು, ಅಲ್ಲವೇ? ಎಲ್ಲರೂ ಟೀಕಿಸಲ್ಪಡುತ್ತಾರೆ.

ಹಾಗಾಗಿ, ಯಾರಾದರೂ ನಿಮ್ಮನ್ನು ಹೊಗಳಿದರೆ ಅಥವಾ ನಿಮ್ಮನ್ನು ಟೀಕಿಸಿದರೆ, ಅದು ಬಂದು ಹೋಗುವ ಗಾಳಿಯಂತೆ ಎಂಬುದನ್ನು ತಿಳಿಯಿರಿ. ಅವುಗಳು ಕೇವಲ, ಬಂದು ಹೋದ ಕೆಲವು ಹಾದುಹೋಗುವ ಯೋಚನೆಗಳಷ್ಟೇ. ನಿಮ್ಮ ಬಗ್ಗೆ ಜನರ ಮನಸ್ಸುಗಳಲ್ಲಿ ಯೋಚನೆಗಳು ಏಳುತ್ತವೆ ಮತ್ತು ಅವುಗಳು ಹೋಗುತ್ತವೆ. ಕೆಲವು ಒಳ್ಳೆಯ ಯೋಚನೆಗಳು ಮತ್ತು ಕೆಲವು ಕೆಟ್ಟ ಯೋಚನೆಗಳು. ಈಗ, ಜನರೇ ಇಲ್ಲಿ ಶಾಶ್ವತವಾಗಿಲ್ಲದಿರುವಾಗ, ಅವರ ಯೋಚನೆಗಳಿಗೆ ನೀವು ಯಾವ ಸ್ಥಿರತೆಯನ್ನು ಜೋಡಿಸಬಲ್ಲಿರಿ? ಅವರೇ ಶಾಶ್ವತವಾಗಿರರು ಅಂದ ಮೇಲೆ, ಅವರ ಅಭಿಪ್ರಾಯಗಳನ್ನು ಕಟ್ಟಿಕೊಂಡು ನೀವೇನು ಮಾಡಲಿದ್ದೀರಿ?

ಆದುದರಿಂದ, ಇಲ್ಲಿಅಲ್ಲಿಯ ಕೆಲವು ಯೋಚನೆಗಳ ಬಗ್ಗೆ ನೀವು ಯಾಕೆ ಚಿಂತಿಸುವಿರಿ? ನೀವು ಕೇವಲ ಜೀವನದಲ್ಲಿ ಮುಂದೆ ಸಾಗುತ್ತಾ ಇರಬೇಕು. ಏನೇ ಆದರೂ, ಸುಮ್ಮನೆ ಮುಂದೆ ಸಾಗುತ್ತಿರಿ, ಗಾಳಿಯಂತೆ. ಗಾಳಿಯು ಒಂದು ಜಾಗದಲ್ಲಿ ಯಾವತ್ತೂ ನಿಲ್ಲುವುದಿಲ್ಲ, ಅದು ಚಲಿಸುತ್ತಾ ಇರುತ್ತದೆ; ನೀರು ಹರಿಯುತ್ತಾ ಇರುತ್ತದೆ.

ಪ್ರಕೃತಿಯು ಹೇಗೆ ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದೋ, ಹಾಗೆಯೇ ಯೋಚನೆಗಳು ಕೂಡಾ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತವೆ; ಅವುಗಳು ಬರುತ್ತವೆ ಮತ್ತು ಅವುಗಳು ಹೋಗುತ್ತವೆ. ಕೆಲವೊಮ್ಮೆ ಅವುಗಳು ಹೊಗಳಿಕೆಯನ್ನು ಮತ್ತು ಕೆಲವೊಮ್ಮೆ ಟೀಕೆಯನ್ನು ತರುತ್ತವೆ. ಆದುದರಿಂದ ಹೊಗಳಿಕೆ ಮತ್ತು ಟೀಕೆಗಳು ಜೀವನದ ಭಾಗವಾಗಿವೆ. ನೀವು ಸುಮ್ಮನೆ ಮುಂದೆ ಸಾಗಿ. ಅದರಲ್ಲಿ ಸಿಕ್ಕಿಬೀಳಬೇಡಿ.

ಹಲವು ಸಲ ಜನರು ತಮ್ಮನ್ನು ತಾವೇ ಅತಿಯಾಗಿ ವಿಶ್ಲೇಷಿಸುತ್ತಾರೆ. ಅವರು ಹಲವಾರು ವಿಷಯಗಳನ್ನು ಯೋಚಿಸುತ್ತಿರುತ್ತಾರೆ; ನಾನು ಚೆನ್ನಾಗಿದ್ದೇನೆ, ನಾನು ಚೆನ್ನಾಗಿಲ್ಲ, ನಾನು ಸರಿ, ನಾನು ತಪ್ಪು, ನನ್ನಲ್ಲಿ ಈ ಗುಣಗಳಿವೆ, ನನ್ನಲ್ಲಿ ಈ ಗುಣಗಳಿಲ್ಲ. ಮತ್ತು ಇದನ್ನು ಮಾಡುವುದರಿಂದ ಅವರು, ತಮ್ಮ ಬಗ್ಗೆಯೇ ಅತಿಯಾದ ನಕಾರಾತ್ಮಕ ವಿಶ್ಲೇಷಣೆಯಲ್ಲಿ ಸಿಕ್ಕಿಬೀಳುತ್ತಾರೆ. ಇನ್ನೊಂದು ಬದಿಯಲ್ಲಿ, ತಮ್ಮ ಬಗ್ಗೆ ಯೋಚಿಸದೆಯೇ ಇರುವ ಕೆಲವು ಜನರಿದ್ದಾರೆ. ಅವರು ಮದ್ಯಪಾನ ಮಾಡುತ್ತಾರೆ ಮತ್ತು ಸುಖವನ್ನು ಮಾತ್ರ ಹುಡುಕುತ್ತಿರುತ್ತಾರೆ. ಅವರು ಒಂದು ಕ್ಷಣ ಕೂಡಾ ಹಿಂತಿರುಗಿ ನೋಡಿ ತಮ್ಮ ಬಗ್ಗೆ ಚಿಂತನೆ ಮಾಡುವುದಿಲ್ಲ. ಇದಕ್ಕಾಗಿಯೇ, ಆರಂಭದಲ್ಲಿ ಒಬ್ಬ ಅನ್ವೇಷಕನಿಗೆ, ಮೊದಲು ನಿಂತು ತಾನು ಬಯಸುವುದು ಏನನ್ನು ಎಂಬುದರ ಬಗ್ಗೆ ಚಿಂತನೆ ನಡೆಸಲು ಹೇಳಲಾಗುವುದು.

ಆರ್ಟ್ ಆಫ್ ಲಿವಿಂಗ್ ಬೇಸಿಕ್ ಕೋರ್ಸ್‌ನಲ್ಲಿ, ನಾವು ಕೇಳುವ ಮೊದಲನೆಯ ಪ್ರಶ್ನೆಯೆಂದರೆ ಇದುವೇ. ’ನಿನಗೇನು ಬೇಕು? ನಿನ್ನ ಸಮಸ್ಯೆಗಳೇನು?’

ಅಂತರ್ಮುಖವಾಗಿ ಸಾಗಲಿರುವ ಮೊದಲ ಹೆಜ್ಜೆ ಆತ್ಮಾವಲೋಕನವಾಗಿದೆ.

’ನಿಮ್ಮನ್ನೇ ಕೇಳಿಕೊಳ್ಳಿ, ಜೀವನದಿಂದ ನಿಮಗೆ ಬೇಕಾಗಿರುವುದೇನು? ನಿಮ್ಮ ಬಗ್ಗೆಯೇ ಯೋಚಿಸಿ, ನಿಮಗೇನು ಬೇಕು?’ ಎಂದು ನಾವು ಶಿಬಿರಾರ್ಥಿಗಳಲ್ಲಿ ಹೇಳುತ್ತೇವೆ.

ಒಬ್ಬ ಅನ್ವೇಷಕನಿಗೆ ಇದು ಮೊದಲ ಹೆಜ್ಜೆಯಾಗಿದೆ. ಆದರೆ ನಿಮ್ಮ ಉಳಿದ ಜೀವನವಿಡೀ ನೀವು ನಿಮ್ಮಲ್ಲೇ, ’ನನಗೇನು ಬೇಕು’ ಎಂದು ಕೇಳುತ್ತಾ ಇದ್ದರೆ, ಆಗ ನಿಮ್ಮ ಮನಸ್ಸು ಕೊಳೆಯುವುದು ಮತ್ತು ನೀವು ಖಿನ್ನರಾಗುವಿರಿ.

ಪ್ರತಿದಿನವೂ ಒಬ್ಬ ವ್ಯಕ್ತಿಯು ಕುಳಿತುಕೊಂಡು ತನ್ನ ಬಗ್ಗೆ ಮಾತ್ರ ಯೋಚಿಸುತ್ತಾ ಇದ್ದರೆ, ಆಗ ಅವನು ಕೊಳೆತುಹೋಗುವನು. ನೀವು ಅಂತಹ ಜನರ ಮುಖಗಳನ್ನು ನೋಡಿದರೆ, ಅವರು ಬಹಳ ಬಿಳುಚಿದವರಾಗಿ ಮತ್ತು ಚಿಂತೆಗಳಿಂದ ತುಂಬಿರುವಂತೆ ಕಾಣಿಸುತ್ತಾರೆ. ತನ್ನ ಬಗ್ಗೆ ಮಾತ್ರ ಯೋಚಿಸುವ ಒಬ್ಬ ವ್ಯಕ್ತಿಯ ಮುಖದಿಂದ ಚಿಂತೆಯು ಹನಿಹನಿಯಾಗಿ ತೊಟ್ಟಿಕ್ಕುತ್ತಿರುತ್ತದೆ.

ಅಂತಹ ಜನರನ್ನು ನೋಡುವುದು, ನೀವು ಓಡಿಹೋಗಲು ಬಯಸುವಂತೆ ಮಾಡಬಹುದು! ಮತ್ತು ಜನರು ಅವರಿಂದ ದೂರ ಓಡಿಹೋಗುತ್ತಾರೆ. ಆಗ ಈ ವ್ಯಕ್ತಿಯು ತನ್ನಲ್ಲೇ ಯೋಚಿಸುತ್ತಾನೆ, ’ಓ, ನಾನೇನು ತಪ್ಪು ಮಾಡಿದೆ. ಜನರು ಯಾಕೆ ನನ್ನಿಂದ ದೂರ ಓಡುತ್ತಾರೆ?’

ಜನರು ಅಂತಹ ವ್ಯಕ್ತಿಗಳಿಂದ ದೂರ ಓಡುವುದು ಯಾಕೆಂದರೆ ಅವರ ಕಂಪನಗಳು ಅಷ್ಟೊಂದು ನಕಾರಾತ್ಮಕವಾಗಿರುತ್ತವೆ; ಅವರು ದುರ್ಗಂಧ ಬೀರುತ್ತಿರುವರೋ ಎಂಬಂತೆ. ಯಾರಾದರೊಬ್ಬರು ದುರ್ಗಂಧ ಬೀರುತ್ತಿದ್ದರೆ, ಅವನ ಅಥವಾ ಅವಳ ಸುತ್ತಲೂ ಜನರು ಕಾಯುತ್ತಾ ಕೂರುವರೇ? ಇಲ್ಲ, ಅವರು ಸುಮ್ಮನೆ ಓಡಿಹೋಗುವರು! ನೀವು ನಿಮ್ಮದೇ ಬಗ್ಗೆ ಮಾತ್ರ ಅಷ್ಟೊಂದು ಯೋಚಿಸಿದರೆ, ನಿಮ್ಮ ಕಡೆಗೆ ಯಾರು ಆಕರ್ಷಿತರಾಗುವರು?

ಒಂದು ಬದಿಯಲ್ಲಿ, ತನ್ನ ಬಗ್ಗೆ ಯೋಚಿಸದೇ ಇರುವ ಒಬ್ಬ ಅಜ್ಞಾನಿಯಿರುತ್ತಾನೆ ಮತ್ತು ಇನ್ನೊಂದು ಬದಿಯಲ್ಲಿ, ತನ್ನ ಬಗ್ಗೆ ಮಾತ್ರ ಯೋಚಿಸುವ ಒಬ್ಬ ವ್ಯಕ್ತಿಯಿರುತ್ತಾನೆ. ಎರಡೂ ಒಳ್ಳೆಯದಲ್ಲ. ಒಂದು ಬದಿಯಲ್ಲಿ, ಪಕ್ವವಾಗದಿರುವ; ಬಹಳ ಕಚ್ಚಾ ಆಗಿರುವ ಒಬ್ಬ ವ್ಯಕ್ತಿಯಿರುತ್ತಾನೆ ಮತ್ತು ಇನ್ನೊಂದು ಬದಿಯಲ್ಲಿ, ತನ್ನ ಬಗ್ಗೆಯೇ ಯೋಚಿಸುತ್ತಾ ಇರುವುದರಿಂದ ಮನಸ್ಸು ಕೊಳೆತುಹೋಗಿರುವ ಒಬ್ಬ ವ್ಯಕ್ತಿಯಿರುತ್ತಾನೆ. ಎರಡೂ ಒಳ್ಳೆಯದಲ್ಲ.

ನೀವು ಮಧ್ಯದ ದಾರಿಯನ್ನು ಸ್ವೀಕರಿಸಬೇಕು. ನಿಮ್ಮ ಬಗ್ಗೆ ಸ್ವಲ್ಪ ವಿಶ್ಲೇಷಿಸಿ, ಅದರ ಬಗ್ಗೆ ಚಿಂತನೆ ಮಾಡಿ ಮತ್ತು ನಂತರ ಅದನ್ನು ಬಿಟ್ಟು ಮುಂದೆ ಸಾಗಿ. ಸಿಕ್ಕಿಬೀಳಬೇಡಿ.

ನೀವು ಮುಂದೆ ಸಾಗಲು ಸಾಧ್ಯವಾಗುವುದಕ್ಕೋಸ್ಕರ, ನಾನು ನಿಮಗೆ ಹೇಳುತ್ತಿರುವುದೇನೆಂದರೆ, ಏನೆಲ್ಲಾ ಸಂಭವಿಸಿತೋ ಅದನ್ನು ಸುಮ್ಮನೆ ಬಿಟ್ಟುಬಿಡಿ ಮತ್ತು ಮುಂದೆ ಸಾಗಿ. ಸಂಭವಿಸಿದುದರ ಬಗ್ಗೆ - ನೀವೇನು ಮಾಡಿರುವಿರೋ ಅದರ ಬಗ್ಗೆಯಾಗಲೀ, ಇತರರು ಏನನ್ನು ಮಾಡಿದ್ದಾರೋ ಅದರ ಬಗ್ಗೆಯಾಗಲೀ ಕುಳಿತುಕೊಂಡು ಮರುಗಬೇಡಿ. ನೀವು ಮಾಡಿದುದರ ಬಗ್ಗೆ ನೀವು ಯೋಚಿಸುತ್ತಾ ಇದ್ದರೆ, ಆಗ ನಿಮಗೆ ಪಶ್ಚಾತ್ತಾಪವಾಗುತ್ತದೆ ಮತ್ತು ಇತರರು ಯಾವ ತಪ್ಪು ಮಾಡಿದರೋ ಅದರ ಬಗ್ಗೆ ನೀವು ಯೋಚಿಸಿದರೆ, ಆಗ ನಿಮಗೆ ಕೋಪವೂ, ಚಿಂತೆಯೂ ಉಂಟಾಗುತ್ತದೆ.

ಹೇಗಿದ್ದರೂ ನಿಮಗೆ ಯಾರ ಮೇಲೆಯೂ ನಿಯಂತ್ರಣವಿಲ್ಲ. ಈ ಪ್ರಪಂಚದಲ್ಲಿ ಯಾರಿಗೂ ಯಾವತ್ತೂ ಬೇರೊಬ್ಬರ ಮೇಲೆ ನಿಯಂತ್ರಣವಿದ್ದಿಲ್ಲ. ನೀವು ಒಬ್ಬರನ್ನು ನಿಯಂತ್ರಿಸುತ್ತಿರುವಿರೆಂದು ಅಥವಾ ಯಾರದ್ದಾದರೂ ನಿಯಂತ್ರಣದಲ್ಲಿ ಅಥವಾ ಪ್ರಭಾವದಲ್ಲಿ ನೀವಿರುವಿರೆಂದು ನೀವಂದುಕೊಂಡರೆ, ಆಗ ಅದು ಬಹಳ ತಪ್ಪಾದ ಒಂದು ಯೋಚನೆ.

ಈ ಪ್ರಪಂಚದಲ್ಲಿ ಎಲ್ಲವೂ ಪ್ರಕೃತಿಯ ನಿರ್ದಿಷ್ಟ ನಿಯಮಗಳಿಗನುಸಾರವಾಗಿ ನಡೆಯುತ್ತದೆ. ಹಾಗಾಗಿ, ಹಿಂದೆ ಏನೆಲ್ಲಾ ಸಂಭವಿಸಿದೆಯೋ, ಅದನ್ನು ಸುಮ್ಮನೆ ಭುಜಕೊಡವಿಕೊಂಡು ಮುಂದಕ್ಕೆ ಸಾಗಿ. ನಿಮ್ಮೊಳಗೆ ಶೇಖರವಾಗಿರುವ ಕೊಳೆಯನ್ನೆಲ್ಲಾ (ಭೂತಕಾಲದ) ನೀವು ಶುಚಿಗೊಳಿಸಿದಾಗ ನೀವು ಹಾಗೆಯೇ ಹೊಳೆಯಲು ತೊಡಗುವಿರಿ. ನೀವು ಬಹಳಷ್ಟು ಶಕ್ತಿವಂತರಾಗುತ್ತೀರಿ, ನಿಮ್ಮ ಪ್ರಜ್ಞೆಯು ಅರಳುತ್ತದೆ ಮತ್ತು ಸಂತೋಷ ಹರಿಯಲು ಶುರುವಾಗುತ್ತದೆ. ಆಗ ನಿಮಗೆ, ನೀವು ಜೀವಂತವಾಗಿರುವಿರಿ ಎಂದು ಹೇಳಲು ಸಾಧ್ಯ. ನಿಜವಾಗಿ ಜೀವನವೆಂದರೆ ಇದುವೇ.

ಈಗ ನೀವು ಕೇಳಬಹುದು, ’ದಿನದ ಇಡೀ ೨೪ ಗಂಟೆಗಳ ಕಾಲವೂ ನಾನು ಸಂತೋಷವಾಗಿರಬಹುದೇ?’ ೨೪ ಗಂಟೆಗಳಲ್ಲದಿದ್ದರೂ, ಕನಿಷ್ಠಪಕ್ಷ ಒಂದು ಅಥವಾ ಎರಡು ಗಂಟೆಗಳ ಕಾಲವಾದರೂ ನೀವು ಸಂತೋಷವಾಗಿರಬಹುದು! ನಿಮಗೆ ಯಾವತ್ತೂ ನೀರಿನಲ್ಲಿ (ಸಂತೋಷ) ತೇಲುವ ಒಂದು ಮೀನಾಗಿರಲು ಸಾಧ್ಯವಾಗದೇ ಇರಬಹುದು, ಆದರೆ ಕನಿಷ್ಠಪಕ್ಷ ಸ್ವಲ್ಪ ಹೊತ್ತಿನ ವರೆಗೆ ನೀವೊಂದು ಸ್ನಾನವನ್ನಾದರೂ ಮಾಡಬಹುದು. ಜ್ಞಾನದ ಉದ್ದೇಶವೇ ಇದು.

ಭಗವದ್ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ,

’ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ I
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ II’  (೪.೩೮)

ಇದರರ್ಥ: ಜ್ಞಾನಕ್ಕಿಂತ ಶ್ರೇಷ್ಠವಾದ, ಪರಿಶುದ್ಧಕಾರಕವು ಇನ್ನೊಂದಿಲ್ಲ.

ಎಲ್ಲವೂ ತಾತ್ಕಾಲಿಕ. ಎಲ್ಲವೂ ಏನೂ ಅಲ್ಲ. ಇದೆಲ್ಲವೂ ಏನೂ ಅಲ್ಲ. ನೀವು ನೋಡುವ, ಸುತ್ತಲೂ ನಡೆದಾಡುತ್ತಿರುವ ಜನರೆಲ್ಲಾ ಪಂಚಭೂತಗಳಿಂದ ಮಾಡಲ್ಪಟ್ಟಿರುವ ಬೊಂಬೆಗಳು ಮಾತ್ರವೆಂಬುದನ್ನು ನೋಡಿ. ತಮ್ಮ ಕರ್ಮಗಳ ಮತ್ತು ಸಂಸ್ಕಾರಗಳ ಕಾರಣದಿಂದಾಗಿ ಅವರು ತಾವು ವರ್ತಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ತಮ್ಮ ನಕ್ಷತ್ರಗಳ ಪ್ರಭಾವದ ಕಾರಣದಿಂದಾಗಿ ಕೆಲವರು ಜೀವನದಲ್ಲಿ ಮೇಲೇರುತ್ತಿದ್ದರೆ, ಬೇರೆ ಯಾವುದೋ ನಕ್ಷತ್ರಗಳ ಪ್ರಭಾವದಿಂದಾಗಿ ಕೆಲವರು ಅವನತಿ ಹೊಂದುತ್ತಿದ್ದಾರೆ (ಜ್ಯೋತಿಷ್ಯದ ಬಗ್ಗೆ ಉಲ್ಲೇಖಿಸುತ್ತಾ).

ಅವರೆಲ್ಲರೂ ಇದೂ ಅದೂ ಮಾಡುತ್ತಾ, ಇಲ್ಲಿ ಅಲ್ಲಿ ಓಡಾಡುತ್ತಿದ್ದಾರೆ, ಆದರೆ ಒಂದು ದಿನ ಎಲ್ಲವೂ ಕೊನೆಯಾಗುವುದು. ಹಾಗಾಗಿ ನೀವು ಕೇವಲ, ಅವರೇನು ಮಾಡುತ್ತಿರುವರೋ ಅದನ್ನು ಅವರು ಮಾಡಲು ಬಿಡಿ. ಅದರಿಂದ ನಿಮಗೇನಾಗಬೇಕು? ನೀವು ಸಂತೋಷವಾಗಿ ಜೀವಿಸುವುದನ್ನು ಮುಂದುವರಿಸಬೇಕು. ಇದರ ಬಗ್ಗೆ ನಾವು ಮತ್ತೆ ಮತ್ತೆ ನಮಗೆ ಜ್ಞಾಪಿಸಿಕೊಳ್ಳಬೇಕಾಗಿದೆ. ನೀವು ಸಮಾಜದಲ್ಲಿ ನಡೆಯುತ್ತಿರಬೇಕಾದರೆ, ಈ ಧೂಳು ನಿಮ್ಮ ಮೇಲೆ ಎಷ್ಟೇ ಸಲ ಶೇಖರವಾಗಲಿ, ಅದನ್ನು ಸುಮ್ಮನೆ ಕೊಡವಿ ಮುಂದೆ ಸಾಗಿ. ಯಾವುದೆಲ್ಲಾ ನಿಮ್ಮದಾಗಿರುವುದೋ ಅದು ಖಂಡಿತವಾಗಿಯೂ ನಿಮ್ಮ ಬಳಿಗೆ ಬರುವುದು!

ಈಗ, ಇದನ್ನು ತಿಳಿದಿರುವುದರ ಅರ್ಥ, ನೀವು ಯಾವುದೇ ಪ್ರಯತ್ನವನ್ನು ಹಾಕದೆ, ಏನೂ ಮಾಡದೆ ಮನೆಯಲ್ಲಿ ಸುಮ್ಮನೆ ಕುಳಿತಿರಬೇಕೆಂದಲ್ಲ. ನೀವು ಮನೆಯಲ್ಲಿ ಕುಳಿತುಕೊಂಡು, ’ಓ ಗುರುದೇವ, ದಯವಿಟ್ಟು ನನಗೆ ಮದುವೆ ಮಾಡಿಸಿ. ದಯವಿಟ್ಟು ನನಗೆ ಒಬ್ಬ ವಧು ಅಥವಾ ವರನನ್ನು ಕಂಡುಹುಡುಕಿ’ ಎಂದು ಹೇಳಿದರೆ, ಇಲ್ಲ! ನೀವು ಕೂಡಾ ಒಂದು ಪ್ರಯತ್ನವನ್ನು ಮಾಡಲೇಬೇಕು.

ನೀವೊಂದು ದುಃಖದ ಮುಖ ಹೊತ್ತು ಕುಳಿತರೆ, ನಿಮ್ಮನ್ನು ಯಾರು ಮದುವೆಯಾಗುತ್ತಾರೆ! ಕಡಿಮೆಪಕ್ಷ ಮುಗುಳ್ನಗಿ ಮತ್ತು ಉಲ್ಲಾಸದಿಂದಿರಿ. ಅದಕ್ಕಾಗಿಯೇ ನಾನು ಇಲ್ಲಿ ಒಂದು ವೈವಾಹಿಕ ವಿಭಾಗವನ್ನು ತೆರೆದಿರುವುದು (ನಗು). ಆದರೆ ಅದರ ಪ್ರಗತಿ ತುಂಬಾ ನಿಧಾನವಾಗಿದೆ! ನೀವೆಲ್ಲರೂ ಬಂದು ಅಲ್ಲಿ ವಿಷಯಗಳು ಚಲಿಸುವಂತೆ ಮಾಡಿ.

ವೈವಾಹಿಕ ಕಚೇರಿಯಲ್ಲಿ ಹೋಗಿ ಕುಳಿತುಕೊಳ್ಳಿ ಮತ್ತು ನಿಮಗಾಗಿ ಯಾರನ್ನಾದರೂ ಬೇಗನೇ ಕಂಡುಹುಡುಕುವಂತೆ ಅಲ್ಲಿನ ನೌಕರವರ್ಗದವರಲ್ಲಿ ಹೇಳಿ. ಅತಿಯಾಗಿ ಆಯ್ಕೆಮಾಡುವವರಾಗಬೇಡಿ. ನಿಮಗೆ ಯಾರು ಸಿಗುವರೋ ಅವರನ್ನು ಆಯ್ಕೆ ಮಾಡಿ, ಅಷ್ಟೇ! ನಂತರ ಎಲ್ಲವೂ ಚೆನ್ನಾಗಿರುವುದು.

ಹೇಗಿದ್ದರೂ ಇದೆಲ್ಲವೂ ಕೇವಲ ಕೆಲವು ದಿನಗಳ ವರೆಗೆ ಮಾತ್ರ ಉಳಿಯಲಿರುವುದು, ಅದು ಹಿತಕರವಾಗಿರಲಿ ಅಥವಾ ಅಹಿತಕರವಾಗಿರಲಿ. ಬಹಳ ಬೇಗನೇ ಜೀವನವು ಮುಗಿಯುವುದು. ಒಂದು ದಿನ ನಾವೆಲ್ಲರೂ ಈ ಪ್ರಪಂಚಕ್ಕೆ ವಿದಾಯ ಹೇಳಬೇಕಾಗುತ್ತದೆ. ಯಾರೂ ಶಾಶ್ವತವಾಗಿ ಉಳಿಯುವುದಿಲ್ಲ. ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಲು ನೀವು ೬೦ ವರ್ಷಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನವೇನು?

ಅರವತ್ತು ವರ್ಷ ವಯಸ್ಸಿನ ಸಜ್ಜನರೊಬ್ಬರು ನನ್ನ ಬಳಿಗೆ ಬಂದು ಹೇಳಿದರು, ’ಗುರುದೇವ, ದಯವಿಟ್ಟು ನನಗೆ ಒಬ್ಬರನ್ನು ಹುಡುಕಿಕೊಡಿ. ನನ್ನ ಆತ್ಮಸಂಗಾತಿಯು ಎಲ್ಲಾದರೂ ಇರುವರೇ?’

ನಾನು ಅವರಿಗೆ ಅಂದೆ, ’ಅಷ್ಟೊಂದು ವರ್ಷಗಳ ಹುಡುಕಾಟದ ಬಳಿಕವೂ ನಿಮಗೆ ನಿಮ್ಮ ಆತ್ಮ ಸಂಗಾತಿ ಲಭಿಸಿಲ್ಲವಾದರೆ, ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಕಾಯಬೇಕು. ಬಹಳ ಕಾಲವಲ್ಲ, ಕೇವಲ ಇನ್ನೊಂದು ೨೦ ವರ್ಷಗಳು. ಪರಿಪೂರ್ಣತೆಯ ಆ ಹಂತವು ಇನ್ನೂ ನಿಮ್ಮಲ್ಲಿ ಕಾಣಿಸುತ್ತಿಲ್ಲ ಮತ್ತು ಅದು ನಿಮ್ಮ ಆತ್ಮ ಸಂಗಾತಿಯಿಂದಲೂ ಗುರುತಿಸಲ್ಪಡಬೇಕು’ (ನಗು).

ನಾವು ಇತರರಲ್ಲಿ ಎಲ್ಲವನ್ನೂ ಪರಿಪೂರ್ಣವಾಗಿ ನೋಡಲು ಬಯಸುತ್ತೇವೆ, ಆದರೆ ನಾವು ನಮ್ಮ ಕಡೆಗೆ ನೋಡಿಕೊಳ್ಳಲು ಮರೆತುಬಿಡುತ್ತೇವೆ. ನಾವು ನಮ್ಮ ಬಗ್ಗೆ ಚಿಂತನೆ ಮಾಡುವುದಿಲ್ಲ. ನಿಮ್ಮ ಬಗ್ಗೆ ಚಿಂತನೆ ಮಾಡಿ, ಆದರೆ ನಂತರ ವಿಶ್ಲೇಷಣೆಯಲ್ಲಿ ಅತಿಯಾಗಿ ಸಿಕ್ಕಿಹಾಕಿಕೊಳ್ಳಬೇಡಿ. ಅದನ್ನು ಅತಿಯಾಗಿ ಮಾಡಬೇಡಿ. ನಿಮ್ಮಲ್ಲಿ ಕೆಲವು ಒಳ್ಳೆಯ ಗುಣಗಳಿವೆ ಮತ್ತು ಕೆಲವು ಅಷ್ಟೊಂದು ಒಳ್ಳೆಯದಲ್ಲದ ಗುಣಗಳಿವೆ, ಅದು ಪರವಾಗಿಲ್ಲ. ಸುಮ್ಮನೆ ಮುಂದಕ್ಕೆ ಸಾಗುತ್ತಾ ಇರಿ. ಕೆಲವು ವಿಷಯಗಳು ಚೆನ್ನಾಗಿರುತ್ತವೆ, ಕೆಲವು ಚೆನ್ನಾಗಿರುವುದಿಲ್ಲ ಮತ್ತು ಅದು ದೊಡ್ಡ ವಿಷಯವಲ್ಲ. ನೀವು ಸುಮ್ಮನೇ ಮುಂದಕ್ಕೆ ಸಾಗುತ್ತಾ ಇರಬೇಕು.

ಶನಿವಾರ, ಮಾರ್ಚ್ 9, 2013

ಮೌನ ಸಂವಾದ

೯ ಮಾರ್ಚ್ ೨೦೧೩
ಬೆಂಗಳೂರು, ಭಾರತ

ಯಾವೆಲ್ಲಾ ಯೋಚನೆಗಳು ನಮ್ಮ ಮನಸಿಗೆ ಬರುತ್ತವೆಯೋ, ಅವುಗಳೆಲ್ಲವೂ ನಿಷ್ಪ್ರಯೋಜಕವಾದವು ಎಂಬುದನ್ನು ನಾವು ನೋಡಬೇಕು ಮತ್ತು ಗಮನಿಸಬೇಕು.

ಪ್ರತಿಯೊಂದು ಯೋಚನೆಯೂ ಭೂತಕಾಲದ ಬಗ್ಗೆಯಾಗಿದೆ. ಮನಸ್ಸಿನಲ್ಲಿ ಏಳುವ ಈ ಯೋಚನೆಗಳು, ಪ್ರಜ್ಞೆಯ ಮೇಲೆ ಗತಕಾಲದ ಒಂದು ಪ್ರಕ್ಷೇಪಣೆಯಾಗಿದೆ. ಭೂತಕಾಲದಲ್ಲಿ ಏನೆಲ್ಲಾ ಸಂಭವಿಸಿದೆಯೋ, ಅದನ್ನೇ ನಾವು ಭವಿಷ್ಯದಲ್ಲಿ ಪ್ರಕ್ಷೇಪಿಸುತ್ತೇವೆ. ಆದುದರಿಂದ, ಮನಸ್ಸಿನಲ್ಲಿ ಬರುತ್ತಾ ಇರುವುದು ಭೂತಕಾಲದ ಯೋಚನೆಗಳಾಗಿವೆ. ’ಇದು ಒಳ್ಳೆಯದು, ಅದು ಒಳ್ಳೆಯದಲ್ಲ. ನನಗೆ ಇದು ಇಷ್ಟ, ನನಗೆ ಅದು ಇಷ್ಟವಿಲ್ಲ’.

ನೀವು ಮಾಡಬೇಕಾಗಿರುವುದು ಏನೆಂದರೆ, ಈ ಎಲ್ಲಾ ಯೋಚನೆಗಳನ್ನು ಮೂಟೆ ಕಟ್ಟಿ ಹೊರಕ್ಕೆಸೆಯುವುದು. ಕೇವಲ, ಈ ಎಲ್ಲಾ ಯೋಚನೆಗಳು ನಿಷ್ಪ್ರಯೋಜಕವೆಂದು ತಿಳಿದುಕೊಳ್ಳುವುದರಿಂದ ಮನಸ್ಸು ಮುಕ್ತವಾಗುತ್ತದೆ.  ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ಇವತ್ತು, ಇಲ್ಲಿ ಕುಳಿತಿರುವ ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸುತ್ತಿದ್ದೀರಿ. ಇದು ಮೌನ ಸಂವಾದ ಎಂದು ಕರೆಯಲ್ಪಡುತ್ತದೆ. ನೀವು ಮೌನದೊಳಕ್ಕೆ ಆಳವಾಗಿ ಹೋದಾಗ ನೀವು ಇದನ್ನು ಅನುಭವಿಸುವಿರಿ.

ಅದೇನು? ಯೋಚನೆಗಳಿಲ್ಲದೆ ನಡೆಯುವ ಒಂದು ಸಂಪರ್ಕವನ್ನು ನೀವು ಅನುಭವಿಸುವಿರಿ; ಏನನ್ನೂ ಹೇಳದೆಯೇ, ಏನನ್ನು ತಿಳಿಯಪಡಿಸಲಾಗುತ್ತಿದೆಯೋ ಅದನ್ನು ಒಬ್ಬನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಪ್ರಶ್ನೆಗಳು ಮಾಯವಾಗುವುದು ಆಗಲೇ.

ಪ್ರಶ್ನೆಗಳೆಂಬುದು ಗುರಿಯನ್ನು ತಲುಪಲಿರುವ ವಾಹನಗಳು ಮಾತ್ರ. ಪ್ರಶ್ನೆಗಳಿಗಿರುವ ಉತ್ತರಗಳು, ವಾಹನಕ್ಕಿರುವ ಇಂಧನದಂತೆ. ಆದುದರಿಂದ ಪ್ರಶ್ನೆಗಿರುವ ಉತ್ತರವು ಸಿಕ್ಕಿದಾಗ, ವಾಹನವು ಮುಂದಕ್ಕೆ ಚಲಿಸಲು ತೊಡಗುತ್ತದೆ. ಹೀಗಿದ್ದರೂ, ನಿಮ್ಮ ಗುರಿಯನ್ನು ನೇರವಾಗಿ ಕೂಡಾ ತಲುಪಲು ಸಾಧ್ಯವಿದೆ, ಪ್ರಶ್ನೆಗಳು ಮತ್ತು ಉತ್ತರಗಳನ್ನು ಉಪಯೋಗಿಸದೆಯೇ. ಹೇಗೆ? ಮೌನದಲ್ಲಿ ಕುಳಿತುಕೊಳ್ಳುವುದರಿಂದ. ಇದು ಮೌನದ ಮಹತ್ವವಾಗಿದೆ.

ಒಬ್ಬರು ಮೌನದಲ್ಲಿ ಕುಳಿತುಕೊಂಡಾಗ ಮತ್ತು ಒಂದು ಪ್ರಶ್ನೆಯು ಏಳುವಾಗ, ಪ್ರಶ್ನೆಯೊಂದಿಗೆ ಉತ್ತರ ಕೂಡಾ ಬರುತ್ತದೆ. ಅದು ನಿಮಗೆ ಆಗಿದೆಯೇ? ನಿಮ್ಮಲ್ಲಿ ಎಷ್ಟು ಮಂದಿಗೆ ಇದು ಅನ್ನಿಸುತ್ತದೆ?

(ಹಲವರು ತಮ್ಮ ಕೈಗಳನ್ನು ಎತ್ತುತ್ತಾರೆ)

ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ; ಒಂದು ಹಳೆಯದಾದರೂ ಹೊಸ ವಿಷಯ. ಈ ಪ್ರಶ್ನೆಗಳು ಮತ್ತು ಉತ್ತರಗಳೆಲ್ಲಾ ಯೋಚನೆಗಳಾಗಿವೆ ಮತ್ತು ಯಾವೆಲ್ಲಾ ಇತರ ಯೋಚನೆಗಳು ನಿಮಗೆ ಬರುತ್ತವೆಯೋ ಅವುಗಳನ್ನು ಸುಮ್ಮನೆ ಮೂಟೆ ಕಟ್ಟಿ ಬಿಟ್ಟುಬಿಡಿ. ಕೇವಲ ಮೌನಿಗಳಾಗಿ! ಆಗ ಮಾತ್ರ ಆಚರಣೆ ಸಾಧ್ಯ. ಆಗ ಉತ್ಸಾಹ ಏಳಬಹುದು ಮತ್ತು ನಂತರ ಪ್ರಜ್ಞೆಯು ಅರಳುತ್ತದೆ. ಇಲ್ಲದಿದ್ದರೆ, ಯೋಚನೆಗಳಲ್ಲಿ ನೀವು ಹೆಚ್ಚು ಹೆಚ್ಚು ಸಿಕ್ಕಿಹಾಕಿಕೊಂಡಷ್ಟೂ, ಪ್ರಜ್ಞೆಯು ಹೆಚ್ಚು ಹೆಚ್ಚು ಜಡತ್ವದ ಕಡೆಗೆ ಸಾಗುತ್ತದೆ.

ತಮ್ಮ ಯೋಚನೆಗಳಲ್ಲಿ ಅತಿಯಾಗಿ ಸಿಕ್ಕಿಹಾಕಿಕೊಳ್ಳುವವರು ಜಡವಾಗುತ್ತಾರೆ ಅಥವಾ ಜೀವವಿಲ್ಲದಂತಾಗುತ್ತಾರೆ; ಅದರರ್ಥ ಅವರಲ್ಲಿ ಯಾವುದೇ ಉತ್ಸಾಹವಿಲ್ಲವೆಂದು. ಚಿಕ್ಕ ಮಕ್ಕಳನ್ನು ನೋಡಿ, ಅವರಲ್ಲೇನಿದೆ? ಅವರಲ್ಲಿ ಉತ್ಸಾಹ, ಆಚರಣೆಯ ಒಂದು ಭಾವ, ಪ್ರೀತಿ ಮತ್ತು ಒಳಗೊಂದು ಜೀವಂತಿಕೆ ಇದೆ. ಅವರಲ್ಲಿ ಬಹಳ ಕಡಿಮೆ ಯೋಚನೆಗಳಿರುತ್ತವೆ, ಅಲ್ಲವೇ? ಯಾವಾಗೆಲ್ಲಾ ನೀವು ಚಿಕ್ಕ ಮಕ್ಕಳನ್ನು ನೋಡುವಿರೋ, ಅವಾಗೆಲ್ಲಾ ಅವರ ಪ್ರಜ್ಞೆಯು ಉತ್ಸಾಹದಿಂದ ತುಂಬಿತುಳುಕುತ್ತಿದೆಯೇನೋ ಎಂಬಂತೆ ಕಾಣಿಸುತ್ತದೆ. ಮಹಾ ಶಿವರಾತ್ರಿಯಂತಹ ಈ ಎಲ್ಲಾ ಆಚರಣೆಗಳು ಇರುವುದು ಅದಕ್ಕಾಗಿಯೇ. ನೀವು ಬೇರೆ ಎಲ್ಲವನ್ನೂ ಬಿಟ್ಟುಬಿಡುವುದಕ್ಕಾಗಿ!

ಸುಮ್ಮನೇ ಎಲ್ಲವನ್ನೂ ಬಿಟ್ಟುಬಿಡಿ ಮತ್ತು ಶಿವ ತತ್ವದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ಮುಳುಗಿಸಿಕೊಳ್ಳಿ. ಶಿವನಂತಾಗಿ, ಇದರರ್ಥ, ಮುಗ್ಧತೆಯ ಆ ಭಾವನೆಯಲ್ಲಿರಿ. ಮುಗ್ಧತೆಯೆಂದರೇನು? ಯಾವುದೇ ಯೋಚನೆಯಲ್ಲಿ ಸಿಕ್ಕಿಹಾಕಿಕೊಳ್ಳದೇ ಇರುವುದು, ಕೇವಲ ಸರಳವಾಗಿ ಮತ್ತು ಸಹಜವಾಗಿರುವುದು ಹಾಗೂ ಆತ್ಮದಲ್ಲಿ ಸಂಪೂರ್ಣವಾಗಿ ಮುಳುಗಿರುವುದು. ಸ್ವಲ್ಪ ಸಮಯದ ವರೆಗೆ, ಸಂಗೀತದಲ್ಲಿ ನಿಮ್ಮನ್ನು ಮುಳುಗಿಸಿಕೊಳ್ಳಿ.

ಸಂಗೀತ, ಪ್ರಾರ್ಥನೆಗಳು, ಮಂತ್ರಗಳನ್ನು ಪಠಿಸುವುದು, ಭಕ್ತಿ, ಶ್ರದ್ಧೆ, ಇವುಗಳೆಲ್ಲವೂ ಇದಾಗಲಿರುವ ಒಂದು ಮಾಧ್ಯಮವಾಗಿದೆ. ಒಬ್ಬರು ಗುರುವು ಒಂದು ಮಾಧ್ಯಮವಾಗಿರುವರು. ಪೂಜೆಯು ಒಂದು ಮಾಧ್ಯಮವಾಗಿದೆ. ಇವುಗಳೆಲ್ಲವೂ ನಮ್ಮನ್ನು ನಮ್ಮ ಆತ್ಮದ ಅರಿವಿಗೆ ತರುತ್ತವೆ.

ಪ್ರಶ್ನೆ: ಗುರುದೇವ, ನಾವು ಕರ್ತೃಗಳಲ್ಲವೆಂದೂ, ನಮ್ಮ ಮೂಲಕ ಬೇರೆ ಯಾರೋ ಕಾರ್ಯ ನಿರ್ವಹಿಸುತ್ತಿರುವರೆಂದೂ, ನಾವು ಮಾಧ್ಯಮವೆಂದೂ ಭಗವದ್ಗೀತೆಯು ಹೇಳುತ್ತದೆ. ಭವಿಷ್ಯವು ಸ್ವತಂತ್ರ ಇಚ್ಛೆಯೆಂದೂ, ಆಗಿ ಹೋದುದು ವಿಧಿಯೆಂದೂ ನಾವು ಹೇಳುತ್ತೇವೆ. ಇದು ಸ್ವಲ್ಪ ವಿರೋಧಾತ್ಮಕವಾದುದು ಎಂದು ನನಗನಿಸುತ್ತದೆ. ದಯವಿಟ್ಟು ನೀವಿದನ್ನು ಸ್ಪಷ್ಟಪಡಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಎರಡು ವಿಷಯಗಳಿವೆ: ಒಂದು ಕರ್ತೃ ಮತ್ತು ಇನ್ನೊಂದು ಭೋಗಿಸುವವನು ಹಾಗೂ ಅವರಿಬ್ಬರೂ ಜೊತೆಯಲ್ಲಿ ಸಾಗುತ್ತಾರೆ. ನೀನೊಬ್ಬ ಕರ್ತೃವಾಗಿದ್ದರೆ, ಆಗ ನೀನು ಭೋಗಿಸುವವನು ಕೂಡಾ ಆಗಿರುವೆ. ನೀನು ಕರ್ತೃವಾಗಿಲ್ಲದಿದ್ದರೆ, ಆಗ ನೀನು ಭೋಗಿಸುತ್ತಾ ಇರುವುದೂ ಇಲ್ಲ.

ಆದುದರಿಂದ, ನೀನು, "ನಾನಿದನ್ನು ಮಾಡಲಿಲ್ಲ" ಎಂದು ಹೇಳುವಾಗ, ಪರಿಣಾಮಗಳು ಮತ್ತು ಹಾಗೆಯೇ ಕ್ರಿಯೆಗಳಿಂದ ಬಾಧಿತನಾಗದೇ ಉಳಿಯುವ ಒಂದು ಮಗ್ಗಲು ನಿನ್ನಲ್ಲಿರುತ್ತದೆ ಹಾಗೂ ಎಲ್ಲವನ್ನೂ ಮಾಡುತ್ತಿರುವ ಮತ್ತು ಹಾಗೆಯೇ ಪರಿಣಾಮಗಳಿಂದ ಬಳಲುತ್ತಿರುವ ಅಥವಾ ಅವುಗಳನ್ನು ಆನಂದಿಸುತ್ತಿರುವ ಇನ್ನೊಂದು ಮಗ್ಗಲು ನಿನ್ನಲ್ಲಿರುತ್ತದೆ. ಹೀಗೆ, ನಿನ್ನೊಳಗೆ ಎರಡು ವಿಷಯಗಳಿರುತ್ತವೆ.

ಉಪನಿಷತ್ತಿನಲ್ಲಿ ಒಂದು ಸುಂದರವಾದ ಉಪಮೆಯಿದೆ.

ವಿಶ್ವದ ಈ ಮರದ ಮೇಲೆ ಎರಡು ಪಕ್ಷಿಗಳು ಕುಳಿತಿವೆ. ಒಂದು ಕರ್ಮದ ಫಲಗಳನ್ನು ಆನಂದಿಸುತ್ತಿದೆ ಮತ್ತು ಇನ್ನೊಂದು ಕೇವಲ ಅದಕ್ಕೆ ಸಾಕ್ಷಿಯಾಗುತ್ತಿದೆ. ಇದು ತತ್ವಜ್ಞಾನದ ಆಳವಾಗಿದೆ.

ನೀವು ಧ್ಯಾನದಲ್ಲಿ ಆಳಕ್ಕೆ ಹೋದಂತೆ ಮತ್ತು ಹೆಚ್ಚು ಹೆಚ್ಚು ತಿಳಿದುಕೊಂಡಂತೆ ಈ ವಿಷಯಗಳು ಸಂಭವಿಸುವುದನ್ನು ನೀವು ಕಂಡುಕೊಳ್ಳಬಹುದು. ಅದು ಬಹಳ ಒಳ್ಳೆಯ ಕೆಲಸವಾಗಿರಲಿ ಅಥವಾ ಇದುವರೆಗೆ ಮಾಡಿದ ಅತ್ಯಂತ ಕೆಟ್ಟ ಕೆಲಸವಾಗಿರಲಿ, ಎಲ್ಲೋ ಒಳಗೆ, ನಾನಿದನ್ನು ಮಾಡಲಿಲ್ಲ, ಅದು ಕೇವಲ ಸಂಭವಿಸಿತು ಎಂದು ನಿಮಗೆ ಅನ್ನಿಸುತ್ತದೆ.

ನಿಮಗೆ ಹಾಗೆ ಅನ್ನಿಸಿದೆಯೇ? ಇದು ನನಗೆ ಆಯಿತು, ನಾನಿದನ್ನು ಮಾಡಲಿಲ್ಲ. ಅದುವೇ ಇದು. ಹಾಗಾಗುವಂತೆ ಮಾಡುವುದು ಆ ಒಂದು ವಿಷಯವಾಗಿದೆ. ಇನ್ನೊಂದು ವಿಷಯವೆಂದರೆ, ನಾನು ಕರ್ತೃವಲ್ಲವೆಂದು ಅನ್ನಿಸುವುದು. ಈ ’ಮಾಡದಿರುವುದು’ ಎಂಬುದು ಸೂತ್ರಧಾರನಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಸಾಂಖ್ಯ ಯೋಗದ ಬಗ್ಗೆ ಓದಿರುವೆನು, ಆದರೆ ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲ. ದಯವಿಟ್ಟು ವಿವರಿಸಿ. ಹಾಗೆಯೇ, ಲೌಕಿಕ ವ್ಯವಹಾರಗಳಲ್ಲಿ ಒಳಗೊಂಡಿರುವಾಗ ನಾವದನ್ನು ಅನುಸರಿಸಲು ಸಾಧ್ಯವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ ನಿಮಗದು ಸಾಧ್ಯ. ಎಚ್ಚೆತ್ತುಕೊಂಡು, ಇದೆಲ್ಲವೂ ಅಸ್ತಿತ್ವದಲ್ಲಿಲ್ಲ ಎಂಬುದನ್ನು ನೋಡುವುದು ಸಾಂಖ್ಯ ಯೋಗವಾಗಿದೆ. ಒಂದೇ ಒಂದು ಇರುವುದು ಮತ್ತು ಎಲ್ಲವೂ ಅದರ ಮೂಲಕ ಕೆಲಸ ಮಾಡುತ್ತದೆ. ಯೋಚನೆಗಳು ಕೂಡಾ ಏನೂ ಅಲ್ಲ, ಎಲ್ಲವೂ ಕೇವಲ ಕಂಪನಗಳಾಗಿವೆ ಎಂಬುದನ್ನು ನೋಡಿ.

ಸಾಂಖ್ಯ ಯೋಗವೆಂದರೆ ಆತ್ಮವು ಚಿರವಾದುದು ಎಂದು ಅರ್ಥ. ನನ್ನಲ್ಲೊಂದು ಅಂಶವಿದೆ, ಅದು ನಾಶವಾಗುವುದಿಲ್ಲ, ಕ್ಷೀಣಿಸುವುದಿಲ್ಲ ಅಥವಾ ಅದಕ್ಕೆ ವಯಸ್ಸಾಗುವುದಿಲ್ಲ ಎಂಬುದನ್ನು ತಿಳಿಯುವುದು. ನಾನು ಶರೀರವಲ್ಲ ಎಂಬುದನ್ನು ತಿಳಿದುಕೊಂಡು ವಿಶ್ರಾಮ ಮಾಡಿ.

ಕೇವಲ ಇದನ್ನು ತಿಳಿದುಕೊಳ್ಳುವುದು ಮತ್ತು ಆತ್ಮನೊಳಗೆ ವಿಶ್ರಾಮ ಮಾಡುವುದು ಸಾಂಖ್ಯ ಯೋಗ ಎಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ಗುರು ಮತ್ತು ಶಿಷ್ಯನ ನಡುವಿನ ಸಂಬಂಧವು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ಹೇಗೆ ಬೆಳೆಯಬೇಕೆಂಬುದನ್ನು ದಯವಿಟ್ಟು ವಿವರಿಸಿ. 

ಶ್ರೀ ಶ್ರೀ ರವಿ ಶಂಕರ್: ನಿನ್ನೊಂದಿಗೆ ನಿನ್ನ ಸಂಬಂಧವೇನು? ನಿನ್ನಿಂದಲೇ ನೀನು ಏನ್ನನ್ನಾದರೂ ಅಡಗಿಸಿಡುವೆಯಾ? ಇಲ್ಲ, ಹಾಗೆ, ಅದುವೇ ಗುರು ಮತ್ತು ಶಿಷ್ಯರ ನಡುವಿನ ಸಂಬಂಧ.

ನೀನು ನಿನಗೇ ಏನಾಗಿರುವೆ? ನೀನೊಬ್ಬ ಮಗನೇ, ತಂದೆಯೇ, ಸಹೋದರನೇ? ನೀನು ನಿನಗೇ ಏನಾಗಿದ್ದೀಯಾ?

(ಉತ್ತರ: ನಾನು ಎಲ್ಲವೂ ಆಗಿರುವೆ)

ಹೌದು, ಹಾಗಾದರೆ ಗುರುವಿನೊಂದಿಗೂ ಹಾಗೆಯೇ.

ಪ್ರಶ್ನೆ: ಗುರುದೇವ, ನನ್ನ ಆಂತರಿಕ ಗುರಿಯನ್ನು, ನನ್ನ ನಿಜವಾದ ಅನುರಾಗವನ್ನು ನಾನು ಕಂಡುಕೊಳ್ಳುವುದು ಹೇಗೆ? ಅಥವಾ ಕೇವಲ ನಾನು ಹುಡುಕುವುದನ್ನು ನಿಲ್ಲಿಸಲೇ? 

ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಆಲೋಚನೆಯೆಂದು ನನಗನ್ನಿಸುತ್ತದೆ; ಹುಡುಕುವುದನ್ನು ನಿಲ್ಲಿಸು ಮತ್ತು ಕೇವಲ ವಿಶ್ರಾಮ ಮಾಡು. ಒಳಕ್ಕೆ ಆಳವಾಗಿ ಹೋಗು.

ನೋಡು, ಮನಸ್ಸಿನ ಸ್ವಭಾವವೆಂದರೆ ಹೊಸ ವಿಷಯಗಳ ಕಡೆಗೆ ಹೋಗುವುದು. ಹೊಸ ವಿಷಯಗಳು ಯಾವಾಗಲೂ ಹೊರಗೆ ಇರುತ್ತವೆ. ಆದುದರಿಂದ, ಮನಸ್ಸು ಹುಡುಕುತ್ತಾ ಹೊರಕ್ಕೆ ಹೋಗುತ್ತದೆ. ಹೀಗಿದ್ದರೂ, ಮನಸ್ಸು ಒಳಮುಖವಾದ ಪಯಣವನ್ನು ಪ್ರಾರಂಭಿಸಿದಾಗ, ಹೊಸ ವಿಷಯಗಳನ್ನು ಕೂಡಾ ಪುರಾತನವಾದುದೆಂದು ಅದು ಗುರುತಿಸಲು ಪ್ರಾರಂಭಿಸುತ್ತದೆ.

ಅದು ಹೊಸತಲ್ಲ, ಆದರೆ ಬಹಳ ಪರಿಚಿತವಾದುದು ಮತ್ತು ಪುರಾತನವಾದುದು ಎಂದು ಅನ್ನಿಸುವಲ್ಲಿಯವರೆಗೆ ನಿಮಗೊಂದು ಹೊಸ ಅನುಭವವಿರುತ್ತದೆ. ಅದಕ್ಕಾಗಿಯೇ ಅದು ನಿತ್ಯ ನೂತನ ಎಂದು ಕರೆಯಲ್ಪಡುವುದು, ಅದರರ್ಥ ಯಾವತ್ತೂ ಹೊಸತಾಗಿರುವುದು ಮತ್ತು ಹಾಗಿದ್ದರೂ ಅದು ಸನಾತನವೂ ಆಗಿದೆ. ಅಂದರೆ, ಅನಾದಿ ಕಾಲವನ್ನೂ ಮೀರಿ ಉಳಿದಿರುವುದು.

ಆತ್ಮ, ಪ್ರಜ್ಞೆಯು ನಿತ್ಯ ನೂತನವಾಗಿದೆ. ಪ್ರತಿಕ್ಷಣವೂ ಅದು ಹೊಸತಾಗಿದೆ, ಆದರೂ ಅದು ಅತ್ಯಂತ ಪುರಾತನವಾದುದು, ಸೂರ್ಯನಂತೆ.

ಇವತ್ತು ಸೂರ್ಯನು ಬಹಳ ಹೊಸತು. ತಾಜಾವಾಗಿರುವ ಸೂರ್ಯನ ಕಿರಣಗಳು ಬರುತ್ತಿವೆ. ಹಳೆಯದಾದ, ಹಳಸಿದ ಅಥವಾ  ಪುರಾತನ ಸೂರ್ಯನ ಕಿರಣಗಳನ್ನು ನೀವು ಪಡೆಯುವುದಿಲ್ಲ. ಹಾಗಿದ್ದರೂ, ಸೂರ್ಯನು ಹೊಸತೇ? ಇಲ್ಲ, ಸೂರ್ಯ ಪುರಾತನವಾದುದು. ಅದೇ ರೀತಿಯಲ್ಲಿ, ನದಿಗಳು ಪುರಾತನವಾದುದು, ಆದರೆ ನದಿಯಲ್ಲಿರುವ ನೀರು ಸಂಪೂರ್ಣವಾಗಿ ತಾಜಾ ಮತ್ತು ಹೊಸತು.

ಚಂದ್ರ ಪುರಾತನವಾದುದು, ಹಾಗಿದ್ದರೂ ಚಂದ್ರನ ಕಿರಣಗಳು ಯಾವತ್ತೂ ತಾಜಾವಾದುದು.

ನಮ್ಮ ಆತ್ಮವೂ ಹಾಗೆಯೇ. ಅದು ನಿತ್ಯ ನೂತನವಾದುದು ಮತ್ತು ಹಾಗಿದ್ದರೂ ಪುರಾತನವಾದುದು. ಅದೊಂದು ವಿರೋಧಾಭಾಸ, ನಿತ್ಯನೂತನ ಮತ್ತು ಹಾಗಿದ್ದರೂ ಪುರಾತನ.

ಪ್ರಶ್ನೆ: ಗುರುದೇವ, ನಾನು ಒಬ್ಬಂಟಿಯಾಗಿ ಜೀವಿಸುತ್ತೇನೆ. ನಾನು ನನ್ನ ಕುಟುಂಬದೊಂದಿಗೆ ಜೀವಿಸುತ್ತಿಲ್ಲ. ನನಗೀಗ ೭೬ ವರ್ಷ ವಯಸ್ಸು. ನನ್ನ ಕೊನೆಯ ಉಸಿರಿನ ವರೆಗೆ ನಾನು ನಿಮ್ಮದೇನನ್ನೋ ನನ್ನೊಂದಿಗಿರಿಸಲು ಬಯಸುತ್ತೇನೆ. ನೀವು ನನಗೆ ಏನನ್ನಾದರೂ ನೀಡಲೇಬೇಕು! ನೀವು ನನಗೆ ಏನನ್ನು ನೀಡುವಿರಿ?

ಶ್ರೀ ಶ್ರೀ ರವಿ ಶಂಕರ್: ಈ ಎಲ್ಲಾ ಜನರು ನನ್ನ ಕುಟುಂಬವಾಗಿರುವರು, ಅವರೀಗ ನಿಮ್ಮವರು ಕೂಡಾ ಆಗಿರುವರು. ಈಗ ನೀವು ಸಂಪೂರ್ಣ ಪ್ರಪಂಚವನ್ನು ಹೊಂದಿರುವಿರಿ.

ನೋಡಿ, ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ತೊಡಗಬೇಡಿ. ನೀಡಲಾಗುತ್ತಿರುವ ಜ್ಞಾನವನ್ನು ಸ್ವೀಕರಿಸಿ. ನನ್ನ ಬಟ್ಟೆಯ ಕೆಲವು ತುಂಡುಗಳು ಅಥವಾ ನನ್ನ ಯಾವುದಾದರೂ ವಸ್ತುವನ್ನು ಪಡೆಯುವುದರ ಬಗ್ಗೆ ಚಿಂತಿಸಬೇಡಿ. ಅದನ್ನು ಬಿಟ್ಟುಬಿಡಿ.

ಬಹಳಷ್ಟು ಆಳವಾದ ಜ್ಞಾನವನ್ನು ನೀಡಲಾಗುತ್ತಿದೆ. ಜ್ಞಾನವನ್ನು ಸ್ವೀಕರಿಸಿ, ಯಾಕೆಂದರೆ ಅದು ನಿಮ್ಮೊಂದಿಗೆ ಹಲವಾರು ಜನ್ಮಗಳ ವರೆಗೆ ಉಳಿಯುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಿಗೆ ನಿಮ್ಮೊಂದಿಗೆ ಬಹಳ ಹತ್ತಿರದಲ್ಲಿರಲು ಹಾಗೂ ಆಗಾಗ್ಗೆ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಶಿಕ್ಷಕರಲ್ಲದೇ ಇರುವ ನಮಗಿಂತ ಅವರು ಹೆಚ್ಚು ಅದೃಷ್ಟಶಾಲಿಗಳಲ್ಲವೇ?

ಶ್ರೀ ಶ್ರೀ ರವಿ ಶಂಕರ್: ನೋಡಿ, ಶಿಕ್ಷಕರಾಗಿರುವವರು ಶಿಕ್ಷಕರಾಗಿಲ್ಲದೇ ಇರುವವರಿಗಿಂತ ಹೆಚ್ಚು ಅದೃಷ್ಟಶಾಲಿಗಳು, ಯಾಕೆಂದರೆ ಅವರಿಗೆ ನನ್ನ ಪಕ್ಕದಲ್ಲಿರಲು ಸಾಧ್ಯವಾಗುತ್ತದೆ ಎಂಬ ರೀತಿಯಲ್ಲಿ ಯೋಚಿಸಬೇಡಿ. ಇಲ್ಲಿರುವ ಎಲ್ಲರೂ ಬಹಳ ಅದೃಷ್ಟಶಾಲಿಗಳು. ನಿಮ್ಮಲ್ಲಿ ಕೆಲವರು ಹತ್ತಿರದಲ್ಲಿರುತ್ತೀರಿ ಮತ್ತು ಕೆಲವರು ದೂರದಲ್ಲಿರುತ್ತೀರಿ. ಆದರೆ, ಕೆಲವರು ಇತರರಿಗಿಂತ ಭಾಗ್ಯಶಾಲಿಗಳೆಂದು ಇದರ ಅರ್ಥವಲ್ಲ. ಎಲ್ಲರೂ ನನಗೆ ಸೇರಿದವರು.

ಶುಕ್ರವಾರ, ಮಾರ್ಚ್ 8, 2013

ಗುರು ತತ್ವ


ಬೆಂಗಳೂರು, ಭಾರತ
೮ ಮಾರ್ಚ್ ೨೦೧೩

ಪ್ರಶ್ನೆ: ಒಬ್ಬರು ಗುರುವಿನ ಜೊತೆಯಲ್ಲಿರುವಾಗ ಮತ್ತು ಪಥವನ್ನು ಅನುಸರಿಸುತ್ತಿರುವಾಗ ಕೂಡಾ ಶಾಸ್ತ್ರವಿಧಿಗಳಲ್ಲಿ ಭಾಗಿಯಾಗುವುದು ಅಥವಾ ನಡೆಸುವುದು ಆವಶ್ಯಕವೇ?

ಶ್ರೀ ಶ್ರೀ ರವಿ ಶಂಕರ್: ಗುರು ತತ್ವದ ಮೇಲೆ ನಿಮಗೆ ಅಚಲವಾದ ನಂಬಿಕೆಯಿದ್ದರೆ, ಆಗ ಬೇರೆ ಯಾವುದರ ಅಗತ್ಯವೂ ಇಲ್ಲ. ಆದರೆ, ನಿರ್ದಿಷ್ಟ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ನೀವು ಆಚರಿಸಬೇಕೆಂದು ನಿಮಗೆ ಅನ್ನಿಸಿದರೆ, ಆಗ ಅದು ಕೂಡಾ ಒಳ್ಳೆಯದೇ.

ಹಾಗೆಯೇ, ಗುರು ತತ್ವದಲ್ಲಿ ನಂಬಿಕೆಯಿಲ್ಲದೆಯೇ ಏನನ್ನಾದರೂ ಮಾಡಿದರೆ ಅದು ಯಾವುದೇ ಲಾಭಗಳನ್ನು ತರುವುದಿಲ್ಲ. ಗುರುವಿನ ಸಾನ್ನಿಧ್ಯವಿಲ್ಲದೆ, ಯಾವುದೇ ತಂತ್ರ ಅಥವಾ ಮಂತ್ರಗಳನ್ನು ಅಭ್ಯಾಸ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಿರದು. ನೀವು ನಿಮ್ಮನ್ನು ಗುರುವಿಗೆ ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಿದ್ದರೆ, ಆಗ ಈ ಎಲ್ಲಾ ವಿಧಾನಗಳದ್ದು ಬಹಳ ಅಗತ್ಯ ಇಲ್ಲ. ಆದರೆ ನೀವು ಅದನ್ನು ಕೂಡಾ ಅಭ್ಯಾಸ ಮಾಡಲು ಇಚ್ಛಿಸಿದರೆ, ಅದರಲ್ಲೇನೂ ತೊಂದರೆಯಿಲ್ಲ.

ಇದಕ್ಕಾಗಿ, ಈ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ಸರಿಯಾಗಿ ಮಾಡಬಲ್ಲಂತಹ (ಧರ್ಮಗ್ರಂಥಗಳಿಂದ ಶಿಫಾರಸು ಮಾಡಲ್ಪಟ್ಟಂತೆ) ಒಬ್ಬರನ್ನು ನೀವು ಕಂಡುಹುಡುಕಬೇಕು ಮತ್ತು ಕೆಲವೊಮ್ಮೆ ನೀವು ನಿಜವಾಗಿ ಸ್ವಲ್ಪ ಕರ್ಮಕಾಂಡದಲ್ಲಿ (ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಂತಹ ಆಚರಣೆಗಳು ಮತ್ತು ಪವಿತ್ರ ಅಭ್ಯಾಸಗಳು) ಕೂಡಾ ತೊಡಗಬೇಕು; ವರ್ಷದಲ್ಲಿ ಒಂದು ಅಥವಾ ಎರಡು ಸಾರಿ. ನೀವು ಅವುಗಳನ್ನು ಅತಿಯಾಗಿ ಮಾಡಬೇಕೆಂದಿಲ್ಲ.

ಸ್ವಲ್ಪ ಪೂಜೆ ಮಾಡಿ, ಕೆಲವೊಮ್ಮೆ ಮನೆಯಲ್ಲಿ ದೇವರ ಮುಂದೆ ಒಂದು ದೀಪ ಹಚ್ಚಿ ಮತ್ತು ಕೆಲವೊಮ್ಮೆ ಧ್ಯಾನದಲ್ಲಿ ಮೌನವಾಗಿ ಕುಳಿತುಕೊಳ್ಳಿ. ಎಲ್ಲಾ ಅಭ್ಯಾಸಗಳಲ್ಲಿ ಧ್ಯಾನವು ಅತ್ಯುತ್ತಮವಾದುದಾಗಿದೆ.

ಪ್ರೀತಿ, ಧ್ಯಾನ ಮತ್ತು ಸಮರ್ಪಣೆಯ ಒಂದು ಭಾವವಿದ್ದರೆ, ಆಗ ಬೇರೆ ಎಲ್ಲವೂ ಸುಮ್ಮನೆ ಹಿಂಬಾಲಿಸುತ್ತವೆ.

ಕೆಲವೊಮ್ಮೆ ನಿಮ್ಮ ಮನೆಬಾಗಿಲುಗಳನ್ನು ಅಲಂಕರಿಸಲು ನೀವೊಂದು ತೋರಣವನ್ನು ಕಟ್ಟಬಹುದು. ಅದು ತೋರಣದ ಮಹತ್ವವಾಗಿದೆ. ಆದರೆ ಬಾಗಿಲುಗಳಿಲ್ಲದಿದ್ದರೆ, ಆಗ ಒಂದು ತೋರಣವನ್ನು ಕಟ್ಟುವುದರಲ್ಲಿ ಯಾವ ಅರ್ಥವಿದೆ?

ಪ್ರಶ್ನೆ: ಗುರುದೇವ, ಈ ಸೃಷ್ಟಿ, ಮಾಯೆ ಮತ್ತು ಜೀವನ್ಮರಣ ಚಕ್ರಗಳ ಉದ್ದೇಶವೇನು?

ಶ್ರೀ ಶ್ರೀ ರವಿ ಶಂಕರ್: ನೀನು ಕ್ರಿಕೆಟ್ ಆಡುವೆಯಾ?

ಈಗ, ನೀನು ಅದನ್ನು ಯಾಕೆ ಆಡುವೆ? ಪಿಚ್ಚಿನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಿನ್ನ ಕೈಯಲ್ಲೊಂದು ಬ್ಯಾಟನ್ನು ಹಿದಿದುಕೊಂಡು ಓಡುವುದು ಎಷ್ಟು ಅರ್ಥಹೀನವಾದುದು!ಅಷ್ಟೊಂದು ಗಂಟೆಗಳನ್ನು ಅದಕ್ಕಾಗಿ ವ್ಯರ್ಥ ಮಾಡುವುದು ಯಾಕೆ?

ನೀವು ಮಾಡುವುದೇನೆಂದರೆ, ಚೆಂಡನ್ನು ಮೈದಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಸೆಯುವುದು ಅಷ್ಟೆ. ಇದನ್ನು ಮಾಡುವುದರಿಂದ ನಿಮಗೆ ನಿಜವಾಗಿ ಏನು ಸಿಗುತ್ತದೆ?

(ಉತ್ತರ: ಗುರುದೇವ, ಅದು ಮನೋರಂಜನೆಯ ಒಂದು ಮೂಲ)

ಹೌದು! ನಿನ್ನ ಮನೋರಂಜನೆಗಾಗಿ ನೀನು ಬ್ಯಾಟ್ ಮತ್ತು ಚೆಂಡಿನೊಂದಿಗೆ ಆಡುವಂತೆಯೇ, ಈ ಸಂಪೂರ್ಣ ಸೃಷ್ಟಿ ಇರುವುದು ಕೂಡಾ ದೇವರ ಮನೋರಂಜನೆಗಾಗಿ. ಅದಕ್ಕಾಗಿಯೇ, ಸಂಪೂರ್ಣ ಸೃಷ್ಟಿ ಮತ್ತು ಅದರಲ್ಲಿರುವ ಎಲ್ಲವೂ ದೇವರ ಲೀಲೆ (ದೇವರ ಆಟ) ಎಂದು ಹೇಳಲಾಗುವುದು.

ಪ್ರಶ್ನೆ: ಗುರುದೇವ, ಈ ಲೀಲೆಯು ಎಷ್ಟು ಕಾಲ ಮುಂದುವರಿಯಲಿದೆ?

ಶ್ರೀ ಶ್ರೀ ರವಿ ಶಂಕರ್: ಈಗ ಅದನ್ನು ಹೇಳುವುದು ಕಷ್ಟ. ಅದು ಯಾವಾಗ ಪ್ರಾರಂಭವಾಯಿತು ಎಂಬುದು ಯಾರಿಗೂ ಖಚಿತವಾಗಿ ತಿಳಿಯದು ಮತ್ತು ಆದುದರಿಂದ ಅದು ಯಾವಾಗ ಕೊನೆಯಾಗುವುದೆಂಬುದು ಯಾರಿಗೂ ತಿಳಿಯದು. ನೀನು ಈ ಲೀಲೆಯ ಒಂದು ಭಾಗವಾಗಿರುವಲ್ಲಿಯವರೆಗೆ, ಸುಮ್ಮನೆ ನಿನ್ನಲ್ಲೇ ಆನಂದಿಸು.

ನಾವೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಾಗಲೇ ನಾವು, "ಇದು ಯಾವಾಗ ಕೊನೆಯಾಗುವುದು?" ಎಂದು ಕೇಳುವುದು. ಆದರೆ ನಾವು ಮೋಜು ಮಾಡುತ್ತಿರುವಾಗ ಅಥವಾ ನಮ್ಮಲ್ಲೇ ಆನಂದಿಸುತ್ತಿರುವಾಗ, "ಆನಂದವು ಯಾವಾಗ ಕೊನೆಯಾಗುವುದು?" ಎಂದು ನಾವು ಯಾವತ್ತೂ ಪ್ರಶ್ನಿಸುವುದಿಲ್ಲ.

ನಾವು ಹಾಗೆ ಮಾಡುತ್ತೇವೆಯೇ? ಇಲ್ಲ. ಹೀಗೆ ಜೀವನವು ಪ್ರಯಾಸಕರವಾಗಿ ಮತ್ತು ಒಂದು ಬಂಧನವಾಗಿ ತೋರುವಾಗ ಮಾತ್ರ ನಾವು ನಮ್ಮಲ್ಲೇ ಅಂದುಕೊಳ್ಳುತ್ತೇವೆ, "ಯಾವಾಗ ನಾವು ಇದರಿಂದ ಮುಕ್ತರಾಗುವೆವು?"

ಭವಿಷ್ಯದಲ್ಲಿ ಯಾವತ್ತೋ ನೀವು ಮುಕ್ತರಾಗುವಿರಿ ಎಂದು ಯೋಚಿಸಬೇಡಿ. ನೀವು ಈ ಕ್ಷಣದಲ್ಲೇ ಮುಕ್ತರಾಗಿರುವಿರಿ. ಸುಮ್ಮನೆ ಇದನ್ನು ಒಪ್ಪಿಕೊಳ್ಳಿ ಮತ್ತು ಮುಂದೆ ಸಾಗಿ.

ಇದೆಲ್ಲವೂ ಕೇವಲ ಒಂದು ಆಟ ಮತ್ತು ಘಟನೆಗಳು ನಡೆಯುತ್ತಾ ಇರುತ್ತವೆ. ಮನಸ್ಸಿನಲ್ಲಿ ಹಲವಾರು ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ. ನಿಮ್ಮ ಮನಸ್ಸಿಗೆ ಬರುವ ಯೋಚನೆಗಳ ವಿಧಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿನ ಕೆಲವು ಯೋಚನೆಗಳಿಂದಾಗಿ ನೀವು ಬಹಳ ಆತಂಕಗೊಳ್ಳುವಿರಿ. ಆದರೆ, ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ ಎಂಬುದನ್ನು ನೀವು ತಿಳಿದಿರಬೇಕು. ಆದುದರಿಂದ ಅದು ಯಾವುದೇ ಅರ್ಥವನ್ನು ಹೊಂದಿರುವುದಿಲ್ಲ. ನಾವು ನಮ್ಮ ಯೋಚನೆಗಳಿಗಿಂತ ಎಷ್ಟೋ ಹೆಚ್ಚು ದೊಡ್ಡವರಾಗಿರುವೆವು. ಆದುದರಿಂದ ಕೇವಲ ಇದನ್ನು ತಿಳಿದುಕೊಳ್ಳಿ ಮತ್ತು ವಿಶ್ರಾಮ ಮಾಡಿ.

ಪ್ರಶ್ನೆ: ಗುರುದೇವ, ಮುಸ್ಲಿಮರು ದೇವರನ್ನು ಅಲ್ಲಾಹ್ ಎಂದು ಮತ್ತು ಹಿಂದುಗಳು ಅವನನ್ನು ಭಗವಾನ್ ಎಂದು ಯಾಕೆ ಕರೆಯುತ್ತಾರೆ?

ಶ್ರೀ ಶ್ರೀ ರವಿ ಶಂಕರ್: ನೋಡು, ಬೇರೆ ಬೇರೆ ಜನರು ಬೇರೆ ಬೇರೆ ಭಾಷೆಗಳಲ್ಲಿ, ಅದೇ ಒಬ್ಬ ದೇವರಿಗೆ ಬೇರೆ ಬೇರೆ ಹೆಸರುಗಳನ್ನು ಬಳಸುತ್ತಾರೆ. ಬೇರೆ ಬೇರೆ ಧರ್ಮಗಳಲ್ಲಿ ಅವರು ಅವನನ್ನು ಬೇರೆ ಬೇರೆಯಾಗಿ ಅರ್ಥಮಾಡಿಕೊಳ್ಳುತ್ತಾರೆ. ನಿನಗೆ ಇದು ಅರ್ಥವಾಯಿತೇ?

ಒಬ್ಬನೇ ಒಬ್ಬ ದೇವರಿರುವುದು, ಇದನ್ನೇ ನಾವು ಯಾವತ್ತೂ ಹೇಳುವುದು.

ಒಂದು ಮಾತಿದೆ, ಅದು ಈ ರೀತಿಯಾಗಿದೆ, ’ಏಕಂ ಸತ್ ವಿಪ್ರ ಬಹುಧ ವದಂತಿ’ (ಅಂದರೆ, ಯಾವುದು ಒಂದು ಆಗಿರುವುದೋ ಅದು, ಪಂಡಿತರಿಂದ ಮತ್ತು ಜ್ಞಾನಿಗಳಿಂದ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ). ಇದನ್ನೇ ಯಾವತ್ತಿಗೂ ನಾವು
ಅರ್ಥಮಾಡಿಕೊಂಡಿರುವುದು. ಇದಕ್ಕಾಗಿಯೇ, ಭಾರತಕ್ಕೆ ಬಂದ ಯಾವುದೇ ಜಾತಿಯಾಗಿರಲಿ, ಅದು ಸ್ವಾಗತಿಸಲ್ಪಟ್ಟದ್ದು.

ಯಾಕೆಂದರೆ, ಹೆಸರು ಏನೇ ಆಗಿರಲಿ, ಅದು ಅದೇ ಒಬ್ಬ ದೇವರು ಎಂಬುದು ನಮಗೆ ತಿಳಿದಿತ್ತು.

ನಾವು ಯಾವತ್ತೂ ಜನರ ನಡುವೆ ಭೇದಭಾವ ಮಾಡಲಿಲ್ಲ. ನಮ್ಮ ದೇವರು ಮಾತ್ರ ಸರಿ ಮತ್ತು ಇತರರು ಯಾರನ್ನು ಆರಾಧಿಸುವರೋ ಅವರು ತಪ್ಪು ಎಂದು ನಾವು ಯಾವತ್ತೂ ಹೇಳಲಿಲ್ಲ. ಯಾರು ಹೀಗೆ ಹೇಳುವರೋ ಮತ್ತು ಬೇರೆ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವರೋ ಅವರು ತಪ್ಪು ಮಾಡುತ್ತಿದ್ದಾರೆ. ಅಂತಹ ಜನರು, "ನನ್ನ ದೇವರು ಮಾತ್ರ ನಿಜವಾದ ಸರಿಯಾದ ದೇವರು, ಇತರ ಎಲ್ಲಾ ದೇವರುಗಳು ತಪ್ಪು ಮತ್ತು ಅವರ ಚಿತ್ರಗಳನ್ನು ನೀವು ನಿಮ್ಮ ಮನೆಗಳಿಂದ ತೆಗೆದುಹಾಕಬೇಕು" ಎಂದು ಹೇಳುವ ಮೂಲಕ ಇತರರನ್ನು ದಾರಿತಪ್ಪಿಸುತ್ತಾರೆ. ಇದು ಬಹಳ ತಪ್ಪು.

ಪ್ರಶ್ನೆ: ಗುರುದೇವ, ನೀವು ನನ್ನ ಮುಂದೆ ಇರುವಾಗ, ಇದೆಲ್ಲವೂ ಒಂದು ಕನಸಿನಂತೆ, ಅವಾಸ್ತವಿಕವಾಗಿ ಕಾಣಿಸುತ್ತದೆ ಮತ್ತು ನೀವು ನನ್ನ ಮುಂದೆ ಇಲ್ಲದಿರುವಾಗ ಕೂಡಾ ಎಲ್ಲವೂ ಒಂದು ಕನಸಿನಂತೆ ತೋರುತ್ತದೆ. ಅದು ಯಾಕೆ ಹಾಗೆ?

ಶ್ರೀ ಶ್ರೀ ರವಿ ಶಂಕರ್: ಅದೆಲ್ಲವೂ ಒಂದು ಕನಸೆಂಬುದಾಗಿ ನೀನು ಅರ್ಥಮಾಡಿಕೊಂಡಿರುವುದು ಒಳ್ಳೆಯದು ಮತ್ತು ನೀನು ಈ ಕನಸಿನಿಂದ ಎಚ್ಚೆತ್ತುಕೊಳ್ಳಬೇಕು (ವಾಸ್ತವಿಕತೆಗೆ).

ಪ್ರಶ್ನೆ: ಗುರುದೇವ, ಮಹಾಶಿವರಾತ್ರಿಯ ಸಂದರ್ಭದಲ್ಲಿ ಸಂಕಲ್ಪವನ್ನು ತೆಗೆದುಕೊಳ್ಳುವುದರ ಮಹತ್ವವೇನು?

ಶ್ರೀ ಶ್ರೀ ರವಿ ಶಂಕರ್: ಸಂಕಲ್ಪವೆಂದರೆ, ನಮ್ಮ ಪ್ರಜ್ಞೆಯನ್ನು ವಿಶ್ವಕ್ಕೆ; ಅನಂತತೆಗೆ ತೆಗೆದುಕೊಂಡು ಹೋಗುವುದು ಮತ್ತು ನಂತರ ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ತರುವುದು ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ಆಕಾಂಕ್ಷಿಸುತ್ತಿರುವ ಏನೋ ಒಂದಕ್ಕಾಗಿ ಕೋರಿಕೆಯನ್ನು ಮಾಡುವುದು. ಸಂಕಲ್ಪವೆಂದರೆ ಅದು.

ಸಂಕಲ್ಪ ತೆಗೆದುಕೊಳ್ಳುವಲ್ಲಿ, ನೀವು ಏನನ್ನೋ ಇಡುತ್ತೀರಿ ಮತ್ತು ನಂತರ ನೀವು ಯಾವುದಕ್ಕಾಗಿಯಾದರೂ ಪ್ರಾರ್ಥಿಸುತ್ತೀರಿ. ಎಲ್ಲಾ ಯಜ್ಞಗಳು ಮತ್ತು ಪೂಜೆಗಳು ಸಂಕಲ್ಪ ತೆಗೆದುಕೊಳ್ಳುವುದರೊಂದಿಗೆ ಆರಂಭವಾಗುತ್ತವೆ.

ಯಜ್ಞವೆಂದರೆ, ಯಾವುದು ಎಲ್ಲರೂ ಒಟ್ಟು ಸೇರಿ ಮಾಡಲ್ಪಡುವುದೋ ಅದು. ಆದುದರಿಂದ ಎಲ್ಲರೂ ಅದರ ಒಂದು ಭಾಗವಾಗಿದ್ದಾರೆ. ಯಾವುದೇ ಸೇವೆಯನ್ನು ಮಾಡುವ ಯಾರೇ ಆದರೂ ಸ್ವಾಭಾವಿಕವಾಗಿ ಅದರ ಒಂದು ಭಾಗವಾಗುತ್ತಾರೆ.

ಯಜ್ಞಕ್ಕಾಗಿ ಯಾರಾದರೂ ಯಾವುದಾದರೂ ಸೇವೆ ಮಾಡುವಾಗ, ಅವರು ಯಜ್ಞದ ಭಾಗವಾಗುತ್ತಾರೆ. ಅವರು ಅಡುಗೆಶಾಲೆಯಲ್ಲಿ ಸೇವೆ ಮಾಡುತ್ತಿರುವರಾದರೂ ಅಥವಾ ಭಕ್ತರನ್ನು ನೋಡಿಕೊಳ್ಳುತ್ತಿರುವರಾದರೂ, ಆಗ ಕೂಡಾ ಅವರು ಯಜ್ಞದ ಒಂದು ಭಾಗವಾಗುತ್ತಾರೆ.

ಆದರೆ, ನಿಮ್ಮ ಮನಸ್ಸಿನಲ್ಲಿ ಯಾರಿಗಾಗಿಯಾದರೂ ಏನಾದರೂ ಆಶಯವಿದ್ದರೆ; ಒಬ್ಬರು ಮಿತ್ರರು ಅಥವಾ ಕುಟುಂಬದ ಸದಸ್ಯರಿಗಾಗಿ ಮತ್ತು ಪುಣ್ಯದಲ್ಲಿ ಸ್ವಲ್ಪ ಅವರಿಗೆ ಹೋಗಬೇಕೆಂದು ನೀವು ಬಯಸಿದರೆ, ಆಗ ನೀವು ಒಂದು ಸಂಕಲ್ಪವನ್ನು ತೆಗೆದುಕೊಳ್ಳಬಹುದು.

ನೀವು ಸಂಕಲ್ಪವನ್ನು ತೆಗೆದುಕೊಳ್ಳುವಾಗ, ನೀವು ನಿಮ್ಮ ಹೆಸರನ್ನು ತೆಗೆದುಕೊಳ್ಳುತ್ತೀರಿ ಮತ್ತು ಮನಸ್ಸಿನಲ್ಲಿಯೇ ನಿಮ್ಮ ಇಚ್ಛೆಯನ್ನು ಅಥವಾ ಯಾವ ವ್ಯಕ್ತಿಗಾಗಿ ನೀವು ಸ್ವಲ್ಪ ಪುಣ್ಯವನ್ನು ಬಯಸುವಿರೋ ಅವರನ್ನು ಸ್ಮರಿಸುತ್ತೀರಿ ಮತ್ತು ನಂತರ ಅವರು (ಪುರೋಹಿತರು)ನಿಮಗಾಗಿ ಮಾಡುವ ಕೆಲವು ಶಾಸ್ತ್ರಗಳಿವೆ. ಹೀಗೆ, ಅದು ಕೂಡಾ ಸಾಧ್ಯವಿದೆ.

ಈ ಪದ್ಧತಿಯು ಹಲವಾರು ವರ್ಷಗಳಿಂದ ಇತ್ತು. ಇದನ್ನು ಮಾಡುವುದರಿಂದ ಒಬ್ಬರು ಒಂದು ವಿಶೇಷ ಲಾಭವನ್ನು ಪಡೆಯುವರೆಂದಲ್ಲ. ಯಜ್ಞದಲ್ಲಿ ಭಾಗವಹಿಸುವ ಮತ್ತು ಶ್ರದ್ಧೆಯಿರುವ ಪ್ರತಿಯೊಬ್ಬರೂ ಲಾಭ ಗಳಿಸುವರು. ಆದರೆ ನೀವದನ್ನು ಒಂದು ವಿಶೇಷ ಸಂಕಲ್ಪದೊಂದಿಗೆ ಮಾಡಲು ಬಯಸಿದರೆ, ಅದಕ್ಕಾಗಿ ಕೂಡಾ ಒಂದು ವ್ಯವಸ್ಥೆ ಮಾಡಲಾಗಿದೆ.

ಪ್ರಶ್ನೆ: ಗುರುದೇವ, ಮನಸ್ಸಿನಲ್ಲಿ, ಬುದ್ಧಿಯಲ್ಲಿ ಅಥವಾ ನೆನಪಿನಲ್ಲಿ ಸಂಸ್ಕಾರಗಳು ಉಳಿಯದಂತೆ ಮಾಡಲು ಪ್ರತಿದಿನವೂ ಅನುಸರಿಸಬೇಕಾದ ತಂತ್ರವೇನು?

ಶ್ರೀ ಶ್ರೀ ರವಿ ಶಂಕರ್: ಕೇವಲ ವಿಶ್ರಾಮ ಮಾಡು, ಸಹಜವಾಗಿರು. ಈ ಸಂಸ್ಕಾರವು ನನ್ನ ಮನಸ್ಸಿನಲ್ಲಿ ಉಳಿಯುವುದನ್ನು ನಾನು ಬಯಸುವುದಿಲ್ಲ ಎಂದು ನೀನು ಹೇಳಿದರೆ, ಆಗ ನೀನು ಆ ಸಂಸ್ಕಾರವನ್ನು ಇನ್ನೂ ಹೆಚ್ಚು ಬಲಶಾಲಿಯನ್ನಾಗಿ ಮಾಡುವೆ. ಅದು ಅಲ್ಲಿದ್ದರೆ, ಅದು ಅಲ್ಲಿದೆ ಮತ್ತು ಅದು ಅಲ್ಲಿ ಇಲ್ಲದೇ ಇದ್ದರೆ, ಅದು ಅಲ್ಲಿಲ್ಲ. ಆದುದರಿಂದ ಸುಮ್ಮನೆ ವಿಶ್ರಾಮ ಮಾಡು. ಯಾವುದೆಲ್ಲಾ ಸರಿಯಾದುದೋ ಅದು ಉಳಿಯುವುದು ಎಂಬುದನ್ನು ನೀನು ಕಾಣುವೆ.