ಶುಕ್ರವಾರ, ಆಗಸ್ಟ್ 30, 2013

ಸೂಕ್ತವಲ್ಲದ್ದನ್ನು ಸರಿದೂಗಿಸಿಕೊಳ್ಳುವ ಕೌಶಲ್ಯ

ಅಗಸ್ಟ್ ೩೦, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ನಾವು ನಿರಂತರವಾದ ದೂಷಣೆಯನ್ನು ವ್ಯಗ್ರತೆಯಿಲ್ಲದೆ ಸಹಿಸಿಕೊಳ್ಳುವುದು (ವಿಶೇಷವಾಗಿ ಓರ್ವ ಪ್ರೀತಿಪಾತ್ರನು ಅಂತು ವರ್ತಿಸುತ್ತಿರಲು) ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೋಡು, ನಿರಂತರವಾದ ಯಾವುದಾದರೂ ನಿನಗೆ ವಾಡಿಕೆಯಾಗಿಬಿಡುತ್ತದೆ (ನಗು). ಹಾಗಾಗಿ ಅದರ ಬಗ್ಗೆ ಚಿಂತಿಸಬೇಡ. ಯಾರಾದರೂ ನಿನ್ನನ್ನು ನಿರಂತರವಾಗಿ ದೂಷಿಸುತ್ತಿರುವುದಾದರೆ, ಆಗ ಅದರ ಬಗ್ಗೆ ಲಕ್ಷ್ಯ ಕೊಡಬೇಡ. ಇದು ಹೆಚ್ಚಾಗಿ ಸಂಭವಿಸುತ್ತದೆ, ತಾಯಂದಿರು ತಮ್ಮ ಮಕ್ಕಳನ್ನು ನಿರಂತರವಾಗಿ ದೂಷಿಸುವಾಗ ಮಕ್ಕಳು, ತಮ್ಮ ತಾಯಂದಿರು ಏನು ಹೇಳುತ್ತಿರುವರೋ ಅದರ ಬಗ್ಗೆ ಲಕ್ಷ್ಯ ಕೊಡುವುದನ್ನು ನಿಲ್ಲಿಸುತ್ತಾರೆ. ಇದು ಯಾಕೆಂದರೆ, ಪ್ರತಿದಿನವೂ ಅವಳು ಅದೇ ವರ್ತನೆಯನ್ನು ಮುಂದುವರಿಸಲಿದ್ದಾಳೆ ಎನ್ನುವುದು ಅವರಿಗೆ ತಿಳಿದಿರುತ್ತದೆ, ಸರಿಯಾ?  
ಯಾವತ್ತಿಗೂ ದೂರದೇ ಇರುವವರೊಬ್ಬರು ಇದ್ದಕ್ಕಿದ್ದಂತೆ ದೂರಿದಾಗ ಸಮಸ್ಯೆಯುಂಟಾಗುತ್ತದೆ. ಯಾವತ್ತಿಗೂ ನಿಷ್ಠುರವಾಗಿರದಿರುವವರು ಇದ್ದಕ್ಕಿದ್ದಂತೆ ನಿಷ್ಠುರವಾದಾಗ, ಅದು ನಿಮಗೆ ಹೆಚ್ಚು ತೊಂದರೆಯನ್ನುಂಟುಮಾಡುತ್ತದೆ, ಅಲ್ಲವೇ?
ಒಂದೋ ನೀವು ಸಮಸ್ಯೆಯನ್ನು ಶಾಶ್ವತವಾಗಿಸುತ್ತೀರಿ ಅಥವಾ ಏನಾಗುತ್ತಿರುವುದೋ ಅದನ್ನು ನಿರ್ವಹಿಸಲಿರುವ ಕುಶಲತೆಯ ಕೊರತೆ ನಿಮ್ಮಲ್ಲಿರುತ್ತದೆ. ಇದಕ್ಕಿರುವ ಗುಣಗಳೆಂದರೆ ಇವುಗಳೆರಡೇ. ಹಾಗಾಗಿ ಈ ಪರಿಸ್ಥಿತಿಗಳನ್ನು ಕುಶಲತಾಪೂರ್ಣವಾಗಿ ನಿರ್ವಹಿಸು ಮತ್ತು ಅವುಗಳನ್ನು ಶಾಶ್ವತವಾಗಿಸಬೇಡ. 
 
ಸ್ವಲ್ಪ ಅಪರಿಪೂರ್ಣರಾಗಿರಲು ಪ್ರತಿಯೊಬ್ಬರಿಗೂ ಹಕ್ಕಿದೆ. ನೀವು ಇತರರ ಕುಂದುಕೊರತೆಗಳನ್ನು ಮತ್ತು ಹಾಗೆಯೇ ನಿಮ್ಮದೇ ಕುಂದುಕೊರತೆಗಳನ್ನು ಕೂಡಾ ಸ್ವೀಕರಿಸಬೇಕು. ನೀವು ಜನರ ಅಪರಿಪೂರ್ಣತೆಗಳನ್ನು ಸ್ವೀಕರಿಸದೇ ಇರುವಾಗ, ನೀವು ಕೋಪಗೊಳ್ಳುತ್ತೀರಿ. ಮತ್ತು ನೀವು ನಿಮ್ಮದೇ ಅಪರಿಪೂರ್ಣತೆಗಳನ್ನು ಸ್ವೀಕರಿಸದೇ ಇರುವಾಗ ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ ಮತ್ತು ನಂತರ ನೀವು ನಿಮ್ಮ ಮೇಲೆಯೇ ಕೋಪಗೊಳ್ಳುತ್ತೀರಿ. ಎರಡೂ ಪರಿಸ್ಥಿತಿಗಳು ನಿಮಗೆ ಆರೋಗ್ಯಕರವಲ್ಲ ಮತ್ತು ಒಳಿತಲ್ಲ. ಹಾಗಾಗಿ, ಅಪರಿಪೂರ್ಣತೆಗಳಿಗಾಗಿ ನೀವು ಜೀವನದಲ್ಲಿ ಸ್ವಲ್ಪ ಜಾಗವಿರಿಸಬೇಕು ಮತ್ತು ಸುಮ್ಮನೇ ಮುಂದುವರಿಯಬೇಕು. ಭೂತಕಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ.

ಪ್ರಶ್ನೆ: ಗುರುದೇವ, ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು ಅರ್ಜುನನಿಗೆ ಪ್ರಕಟಪಡಿಸಿದನು. ನೀವು ಯಾವಾಗ ನಿಮ್ಮ ವಿಶ್ವರೂಪವನ್ನು ಪ್ರಕಟಪಡಿಸುವಿರಿ ಮತ್ತು ಯಾರಿಗೆ?
ಶ್ರೀ ಶ್ರೀ ರವಿ ಶಂಕರ್: ನೋಡು, ಸಂಪೂರ್ಣ ಸೃಷ್ಟಿಯು ಭಗವಂತನ ಸ್ವರೂಪ. ವಿಶ್ವರೂಪ ದರ್ಶನ ಎಂಬುದರ ಅರ್ಥ ಇದುವೇ. ಅದರರ್ಥ, ಒಬ್ಬ ಭಗವಂತನನ್ನು ನಿನ್ನ ಸುತ್ತಲಿರುವ ಎಲ್ಲದರಲ್ಲೂ ನೋಡುವುದು; ಅದು ನದಿಗಳಾಗಿರಲಿ, ಬೆಟ್ಟಗಳಾಗಿರಲಿ, ಕಲ್ಲುಗಳಾಗಿರಲಿ, ಮನುಷ್ಯರಾಗಿರಲಿ ಅಥವಾ ಪ್ರಾಣಿಗಳಾಗಿರಲಿ.

ದೇವರೆಂದರೆ ಪ್ರೇಮ. ನೀವು ಮೊದಲು ಈ ವಿಶೇಷ ದೃಷ್ಟಿಯನ್ನು ಪಡೆದುಕೊಳ್ಳಬೇಕು, ನಂತರ ಮಾತ್ರವೇ ನಿಮಗೆ ಭಗವಂತನ ವಿಶ್ವರೂಪ ದರ್ಶನ ಪಡೆಯಲು ಸಾಧ್ಯ.
ಯಾವ ಸಂಕುಚಿತ ದೃಷ್ಟಿಯಿಂದ ನೀವು ಪ್ರಪಂಚವನ್ನು ಗ್ರಹಿಸುವಿರೋ ಅದು ಸಹಾಯ ಮಾಡದು. ಅದು ಯಾಕೆಂದರೆ, ’ಓ ಈ ವ್ಯಕ್ತಿ ಹೀಗೆ ಮತ್ತು ಆ ವ್ಯಕ್ತಿ ಹಾಗೆ’ ಎಂದು ನೀವು ಯೋಚಿಸುತ್ತಾ ಇರುತ್ತೀರಿ. ನಿಮ್ಮ ದೃಷ್ಟಿಯು ರಾಗ ದ್ವೇಷಗಳಿಂದ ಅಷ್ಟೊಂದು ಮಸುಕಾಗಿರುವಾಗ ನಿಮಗೆ ಭಗವಂತನ ವಿಶ್ವರೂಪವನ್ನು ಗ್ರಹಿಸಲು ಸಾಧ್ಯವಿಲ್ಲ. ಮೊದಲು ನೀವು ಈ ವಿಶಾಲವಾದ, ಎಲ್ಲವನ್ನೊಳಗೊಂಡ, ಪ್ರೇಮದ ದೃಷ್ಟಿಯನ್ನು ಪಡೆದುಕೊಳ್ಳಬೇಕು. ಅದನ್ನು ನಾನು ಹೇಗಿದ್ದರೂ ನಿಮಗೆ ಕೊಡುತ್ತಿದ್ದೇನೆ. ಒಮ್ಮೆ ನೀವು ಇದನ್ನು ಹೊಂದಿದ ಬಳಿಕ, ನಿಮಗೆ ತನ್ನಿಂತಾನಾಗಿಯೇ ಭಗವಂತನ ವಿಶ್ವರೂಪವನ್ನು ನೋಡಲಿಕ್ಕೆ ಸಾಧ್ಯವಾಗುವುದು.
ಪ್ರಶ್ನೆ: ಗುರುದೇವ, ಮಾನವ ಜನ್ಮ ಅಮೂಲ್ಯವಾದುದು ಮತ್ತು ಒಬ್ಬನು ಈ ಜನ್ಮವನ್ನು ೮೪ ಲಕ್ಷ ಯೋನಿಗಳ ಮೂಲಕ ಹಾದುಹೋದ ಬಳಿಕ ಪಡೆಯುತ್ತಾನೆ ಎಂದು ನೀವು ಹೇಳುತ್ತೀರಿ. ಆದರೆ ಇವತ್ತಿನ ಮಾನವರು ಬೆಳಗ್ಗೆ ಬೇಗ ಏಳಬೇಕು, ಸ್ಕೂಟರಿನಲ್ಲಿ ಅಥವಾ ಒಂದು ಲೋಕಲ್ ರೈಲಿನಲ್ಲಿ ಕೆಲಸಕ್ಕೆ ಧಾವಿಸಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕು. ಇದೆಲ್ಲಾ ಮಾಡಿ ಸಿಗುವುದು, ಕೇವಲ ಸುಸ್ತಾಗಿ ಮನೆಗೆ ಮರಳಿ ನಿದ್ರಿಸುವುದು. ಕೆಲವೊಮ್ಮೆ ಒಬ್ಬರಿಗೆ ಒತ್ತಡದಿಂದಾಗಿ ನಿದ್ರಿಸಲೂ ಸಾಧ್ಯವಾಗುವುದಿಲ್ಲ. ಇದೆಲ್ಲವನ್ನು ಎದುರಿಸಲು ೮೪ ಯೋನಿಗಳ ಮೂಲಕ ಹಾದುಹೋಗಬೇಕಿತ್ತೇ ಎಂದು ನಾನು ಯೋಚಿಸುತ್ತಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಯೋಚನೆ. ಹಿಂದಿಯಲ್ಲಿ ಒಂದು ಮಾತಿದೆ, ’ಅಜ್‌ಗರ್ ಕರೇ ನ ಚಾಕ್ರಿ, ಪಂಛಿ ಕರೇ ನ ಕಾಮ್. ದಾಸ್ ಮಲುಕಾ ಕೆಹ್ ಗಯೇ, ಸಬ್ ಕಾ ದಾತಾ ರಾಮ್’ (ಒಬ್ಬನು ಯಾವುದಕ್ಕಾಗಿಯೂ ಪ್ರಯತ್ನಗಳನ್ನು ಮಾಡಬೇಕಾಗಿಲ್ಲ, ಯಾಕೆಂದರೆ ದೇವರು ಪ್ರತಿಯೊಬ್ಬರಿಗೂ ಎಲ್ಲವನ್ನೂ ನೀಡುತ್ತಾನೆ).
ಎಲ್ಲರಿಗೂ ಎಲ್ಲವನ್ನೂ ಕೊಡುವುದು ದೇವರು ಎಂಬ ಈ ನಂಬಿಕೆಯಿರುವಾಗ, ಏನೇ ಬರಲಿ, ನೀವು ಯಾವತ್ತಿಗೂ ನಿಮ್ಮ ಉತ್ಸಾಹವನ್ನು ಕಳಕೊಳ್ಳಲಾರಿರಿ. ನೀವು ಆಫೀಸಿಗೆ ಹೋಗುವಾಗ ಅಥವಾ ಲೋಕಲ್ ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೇ ನಿಮ್ಮ ಸುತ್ತಲೂ ನೋಡಿ, ತಮ್ಮ ದೈನಂದಿನ ದಿನಚರಿಗಳನ್ನು ಮಾಡುತ್ತಾ ಹೋಗುತ್ತಿರುವಂತೆ, ಅಂತಹ ಒಳ್ಳೆಯ ಮತ್ತು ಸಕಾರಾತ್ಮಕ ಯೋಚನೆಗಳನ್ನು ಹೊಂದಿದ ಹಲವಾರು ಒಳ್ಳೆಯ ಜನರಿದ್ದಾರೆ.
ಕೆಲಸದ ಬಗ್ಗೆ ಚಿಂತೆ ಮಾಡುವುದರಿಂದ ಅದು ಮಾಡಿ ಮುಗಿಯುವುದಿಲ್ಲ. ಬುದ್ಧಿವಂತ ಯೋಚನೆ ಮತ್ತು ಕುಶಲತೆಯ ಮೂಲಕ ಅದನ್ನು ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಮ್ಮ ಮನಸ್ಸು ಪ್ರಶಾಂತವಾಗಿಯೂ ಸಂತೋಷವಾಗಿಯೂ ಇರಬೇಕಾಗುತ್ತದೆ. ಮತ್ತು ಕೆಲಸದಲ್ಲಿ ಅಷ್ಟೊಂದು ಕಷ್ಟಗಳಿರುವಾಗ ನೀವು ನಿಮ್ಮ ಮನಸ್ಸಿಗೆ ಆ ಪ್ರಶಾಂತತೆಯನ್ನೂ ಸಂತೋಷವನ್ನೂ ತರುವುದು ಹೇಗೆ? ಅದು, ನನಗೆ ಬೇಕಾಗಿರುವ ಎಲ್ಲವನ್ನೂ ನೀಡಲು ಮತ್ತು ನನ್ನನ್ನು ನೋಡಿಕೊಳ್ಳಲು ದೇವರಿದ್ದಾರೆ ಎಂಬ ಆ ನಂಬಿಕೆಯನ್ನು ಹೊಂದುವ ಮೂಲಕ.
ನನಗೆ ಹೇಳಿ, ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ನೀವು ಏನನ್ನೆಲ್ಲಾ ಬಯಸುವಿರೋ ಅದೆಲ್ಲವೋ ಈಡೇರುತ್ತದೆಯೆಂದು ಅನ್ನಿಸುತ್ತದೆ?
(ಸಭಿಕರಲ್ಲಿರುವ ಹಲವಾರು ಭಕ್ತರು ಕೈಗಳನ್ನೆತ್ತುತ್ತಾರೆ).
ಪ್ರಶ್ನೆ: ನನಗೆ ಯಾವುದನ್ನೂ ಸ್ಥಿರವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಗುಣವನ್ನು ನಾನು ನನ್ನಲ್ಲಿ ಹೇಗೆ ಬೆಳೆಸಬಹುದು?
ಶ್ರೀ ಶ್ರೀ ರವಿ ಶಂಕರ್: ಇದನ್ನು ನೀನಾಗಿಯೇ ತಿಳಿದುಕೊಳ್ಳಬೇಕು. ನಿನಗೆ ಯಾವುದನ್ನೂ ಸ್ಥಿರವಾಗಿ  ಮಾಡಲು ಸಾಧ್ಯವಿಲ್ಲವೆಂದು ನೀನು ಹೇಗೆ ಹೇಳುವೆ? ನೀನು ಯಾಕೆ ನಿನಗೆ ಹಾಗೆ ಲೇಬಲ್ ಹಚ್ಚುವೆ?
ಮೊದಲನೆಯದಾಗಿ, ನಿನಗೆ ಸರಿಯಾಗಿ ನಿನ್ನನ್ನೇ ತಿಳಿಯದು ಎಂಬುದನ್ನು ನೀನು ಒಪ್ಪಿಕೊಳ್ಳಬೇಕು. ನಿನಗೆ ನಿನ್ನನ್ನೇ ತಿಳಿಯದಿರುವಾಗ, ನಿನ್ನೊಳಗೆ ಎಷ್ಟೊಂದು ಶಕ್ತಿಯಿದೆಯೆಂಬುದು ನಿನಗೆ ತಿಳಿದಿರುವುದಿಲ್ಲ. ನೀನು ಎಷ್ಟೆಲ್ಲಾ ವಿಷಯಗಳನ್ನು ಮಾಡಬಲ್ಲೆಯೆಂಬುದರ ಬಗ್ಗೆ ನಿನಗೆ ಕಲ್ಪನೆಯೇ ಇಲ್ಲ. ಹಾಗಾಗಿ ಮೊದಲನೆಯದಾಗಿ ನೀನು, ’ಇದನ್ನು ಸ್ಥಿರವಾಗಿ ಮಾಡಲು ನನಗೆ ಸಾಧ್ಯವಿಲ್ಲ’ ಎಂಬ ಈ ಲೇಬಲನ್ನು ಸುಮ್ಮನೇ ತೆಗೆದುಹಾಕಬೇಕು. ಅದು ಭೂತಕಾಲವಾಗಿತ್ತು. ಈ ಕ್ಷಣ ನೀನು ಭಿನ್ನವಾಗಿರುವೆ. ಪ್ರತಿಕ್ಷಣವೂ ನೀನು ಹೊಸತು ಮತ್ತು ನೀನು ಮೊದಲಿದ್ದುದಕ್ಕಿಂತ ವಿಭಿನ್ನವಾಗಿರುವೆ.
ನಮ್ಮ ಜೀವನವು ಒಂದು ನದಿಯಂತೆ. ನೀನು ಅದೇ ನೀರಿಗೆ ಎರಡು ಸಲ ಇಳಿಯಲು ಸಾಧ್ಯವಿಲ್ಲ. ಹಾಗಾಗಿ ಜೀವನವು ಒಂದೇ ಸಮಯಕ್ಕೆ ನೂತನ ಮತ್ತು ಪುರಾತನ, ಎರಡೂ ಆಗಿದೆ. ನಿನ್ನ ಚೇತನವು ಕಲ್ಲುಗಳಿಗಿಂತ, ನದಿಗಳಿಗಿಂತ, ಬೆಟ್ಟಗಳಿಗಿಂತ ಮತ್ತು ವಿಶ್ವದಲ್ಲಿರುವ ಬೇರೆಲ್ಲದಕ್ಕಿಂತಲೂ ಹಳೆಯದಾಗಿದೆ. ವಾಸ್ತವವಾಗಿ, ಅದು ಸಾಕಷ್ಟು ಹಳೆಯದು, ಸೂರ್ಯನು ಅಷ್ಟೊಂದು ಹಳೆಯದಾಗಿರುವಂತೆಯೇ; ಅದು ಸುಮಾರು ೧೯ ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೂ ಪ್ರತಿದಿನವೂ ಸೂರ್ಯನ ಕಿರಣಗಳು ಹೊಸತು ಮತ್ತು ತಾಜಾವಾಗಿವೆ. ನಿನಗೆ ಯಾವತ್ತಿಗೂ ಅದೇ ಕಿರಣಗಳು ನಾಳೆ ಸಿಗುವುದಿಲ್ಲ.

ಪ್ರಶ್ನೆ: ಗುರುದೇವ, ನಾನು ನನ್ನ ಜೀವನವನ್ನು ಅದರ ಸಂಪೂರ್ಣ ಶಕ್ತಿಗನುಸಾರವಾಗಿ ಹೇಗೆ ಜೀವಿಸಬಹುದು?
ಶ್ರೀ ಶ್ರೀ ರವಿ ಶಂಕರ್: ಅದನ್ನೇ ನೀನು ಇಲ್ಲಿ (ಆರ್ಟ್ ಆಫ್ ಲಿವಿಂಗ್‌ನಲ್ಲಿ) ಕಲಿಯುತ್ತಿರುವುದು. ಅದು ಜೀವನದಲ್ಲಿ ವಿರೋಧಾಭಾಸಗಳನ್ನು ನಿಭಾಯಿಸುವ ಸಾಮರ್ಥ್ಯ: ಕ್ರಿಯೆಯೊಂದಿಗೆ ವಿರಮಿಸುವುದು. ನೀನು ಎಲ್ಲಾ ಸಮಯದಲ್ಲೂ ಕೇವಲ ಕ್ರಿಯಾಶೀಲನಾಗಿದ್ದರೆ, ಅದು ಕೆಲಸ ಮಾಡದು. ನೀನು ಕೇವಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ, ಆಗ ಕೂಡಾ ಅದು ಕೆಲಸ ಮಾಡದು. ನೀನು ಎರಡನ್ನೂ ಹಿಡಿದು ನಡೆಯಬೇಕು. ತಿಳಿಯಿತೇ?
ಅದೇ ರೀತಿಯಲ್ಲಿ, ನೀನು ಮೋಜುಪ್ರಿಯನಾಗಿದ್ದು ಯಾವತ್ತೂ ಮೋಜು ಮಾಡುತ್ತಾ ಇರಲು ಸಾಧ್ಯವಿಲ್ಲ. ನೀನು ಯಾವತ್ತೂ ಗಂಭೀರವಾಗಿರಲು ಕೂಡಾ ಸಾಧ್ಯವಿಲ್ಲ. ನಿನ್ನಲ್ಲಿ ಮೋಜುತನ ಮತ್ತು ಗಂಭೀರತೆಗಳಿರಬೇಕು.
ಅದೇ ರೀತಿಯಲ್ಲಿ, ನೀನು ವಿವೇಕಿಯಾಗಿ ಮತ್ತು ಸಂವೇದನಾಶೀಲನಾಗಿ ಇರಬೇಕು. ವಿವೇಕಿಗಳಾಗಿರುವವರು ಸಂವೇದನಾಶೀಲರಾಗಿರುವುದಿಲ್ಲ, ಮತ್ತು ಸಂವೇದನಾಶೀಲರಾಗಿರುವವರು ವಿವೇಕಿಗಳಾಗಿರುವುದಿಲ್ಲ. ನಿಮಗೆ ಎರಡೂ ಬೇಕು. ನೀವು ನೇರವಾಗಿರಬೇಕು, ಆದರೂ ನೀವು ವಿನಮ್ರರಾಗಿಯೂ ಕೂಡಾ ಇರಬೇಕು. ನೇರವಾಗಿರುವ ಜನರು ಹೆಚ್ಚಾಗಿ ತಾವು ನಿಷ್ಠುರವಾಗಿರುವುದಾಗಿ ಲೇಬಲ್ ಹಚ್ಚಿಸಿಕೊಳ್ಳುತ್ತಾರೆ ಮತ್ತು ವಿನಮ್ರರಾಗಿರುವವರು ಹಲವು ಸಲ ದುರ್ಬಲರಾಗಿಯೂ ಸೌಮ್ಯರಾಗಿಯೂ ಪರಿಗಣಿಸಲ್ಪಡುತ್ತಾರೆ. ನಮಗೆ ಎರಡರ ಒಂದು ಸಂಯೋಗದ ಅಗತ್ಯವಿದೆ: ನೇರವಾಗಿ ಮತ್ತು ವಿನಮ್ರರಾಗಿರುವುದು.

ಪ್ರಶ್ನೆ: ಗುರುದೇವ, ಪುರುಷೋತ್ತಮ ಯೋಗವನ್ನು ಪ್ರತಿಪಾದಿಸುವಾಗ, ಶ್ರೀಕೃಷ್ಣ ಪರಮಾತ್ಮನು ಮೂರು ತರಹದ ಪುರುಷರು: ಕ್ಷರ, ಅಕ್ಷರ ಮತ್ತು ಉತ್ತಮ ಪುರುಷರ ಬಗ್ಗೆ ಮಾತನಾಡುತ್ತಾನೆ. ದಯವಿಟ್ಟು ಇದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿ.
ಶ್ರೀ ಶ್ರೀ ರವಿ ಶಂಕರ್: ಕ್ಷರವೆಂದರೆ ಯಾವುದು ಬದಲಾಗುತ್ತಾ ಇರುವುದೋ ಅದು. ಸಂಪೂರ್ಣ ಜಗತ್ತು ಮತ್ತು ಅದರಲ್ಲಿರುವ ಎಲ್ಲವೂ ಬದಲಾಗುತ್ತಾ ಇರುತ್ತದೆ. ಹೀಗೆ ಯಾವುದು ನಿರಂತರವಾಗಿ ಬದಲಾಗುತ್ತಾ ಇರುವುದೋ ಅದು ಒಂದು ರೀತಿಯ ಪುರುಷ.

ಸುಮ್ಮನೇ ನಿಮ್ಮನ್ನು ಗಮನಿಸಿ,  ನಿಮ್ಮ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಏಳುತ್ತವೆ ಮತ್ತು ನಿಮ್ಮಲ್ಲಿ ಹಲವಾರು ಭಾವನೆಗಳು ಏಳುತ್ತವೆ. ನಿಮ್ಮ ಶರೀರ, ನಿಮ್ಮ ಯೋಚನೆಗಳು ಮತ್ತು ನಿಮ್ಮ ಭಾವನೆಗಳು, ಅವುಗಳೆಲ್ಲವೂ ನಿರಂತರವಾಗಿ ಬದಲಾಗುತ್ತಾ ಇರುತ್ತವೆ. ಈಗ, ಯಾವುದು ಬದಲಾಗುವುದಿಲ್ಲವೋ ಅದು ಅಕ್ಷರವೆಂದು ಕರೆಯಲ್ಪಡುವುದು. ಮತ್ತು ಈ ಎರಡು ಪ್ರಕಾರಗಳನ್ನು ಮೀರಿರುವ, ಅತ್ಯಂತ ಸೂಕ್ಷ್ಮ ಹಾಗೂ ಮೂಲಭೂತ ತತ್ವವನ್ನೇ ನಾವು ಪರಮ ಪುರುಷ ಎಂದು ಕರೆಯುವುದು.
 
ಪ್ರಶ್ನೆ: ಗುರುದೇವ, ನಮ್ಮ ಪ್ರಾಚೀನ ವಿದ್ವಾಂಸರು ಯಾವತ್ತಿಗೂ ನಮ್ಮ ಪವಿತ್ರ ಧರ್ಮಗ್ರಂಥಗಳನ್ನು, ಒಂದು ನಿರ್ದಿಷ್ಟ ಸ್ಥಳ ಅಥವಾ ಕಾಲಕ್ಕೆ ಮಾತ್ರ ಸೀಮಿತವಾಗಲು ಅಥವಾ ಪ್ರಸಕ್ತವಾಗಲು ಬಿಡಲಿಲ್ಲ ಎಂದು ನೀವು ಹೇಳಿರುವಿರಿ. ಹಾಗಾದಲ್ಲಿ, ಈ ಧರ್ಮಗ್ರಂಥಗಳು ಕೇವಲ ಈ ವಿದ್ವಾಂಸರಿಂದ ಹೇಳಲ್ಪಟ್ಟ ಕಥೆಗಳು ಮಾತ್ರವೇ ಅಥವಾ ಅವುಗಳು ನೈಜ ಜೀವನದ ಘಟನೆಗಳೇ?
ಶ್ರೀ ಶ್ರೀ ರವಿ ಶಂಕರ್: ಅವುಗಳೆಲ್ಲವೂ ಸತ್ಯ ಘಟನೆಗಳು. ಆದರೆ ಈ ನೈಜ ಘಟನೆಗಳ ಬಗ್ಗೆ ಬರೆಯುವಾಗ ಕೂಡಾ ನಮ್ಮ ವಿದ್ವಾಂಸರು, ನಿರೂಪಣೆಗಳು ಒಂದು ಜಾಗಕ್ಕೆ ಅಥವಾ ಕಾಲಕ್ಕೆ ಮಾತ್ರ ನಿಶ್ಚಿತವಾಗಲು ಅಥವಾ ಪ್ರಸಕ್ತವಾಗಲು ಬಿಡಲಿಲ್ಲ. ಇದು ನಮ್ಮ ಧರ್ಮಗ್ರಂಥಗಳ ವಿಶೇಷತೆಯಾಗಿದೆ.
ಇದು, ಎಲ್ಲಾ ಕಾಲಕ್ಕೂ ಸರಿಯಾಗುವಂತೆ ಮತ್ತು ಎಲ್ಲೆಡೆಯೂ ಪ್ರಸಕ್ತವಾಗುವಂತೆ ಒಂದು ಕವಿತೆಯನ್ನು ಬರೆಯಬೇಕೆಂದು ಒಬ್ಬರಲ್ಲಿ ಹೇಳಿದರೆ ಹೇಗೆಯೋ ಹಾಗೆ. ನೀವೊಂದು ಕವಿತೆಯನ್ನು ಕೇವಲ ಒಂದು ನಿರ್ದಿಷ್ಟ ಘಟನೆ ಅಥವಾ ದೀಪಾವಳಿ, ಹೋಳಿಯಂತಹ ಹಬ್ಬಕ್ಕಾಗಿ ಬರೆದರೆ, ಆಗ ನೀವು ಆ ಕವಿತೆಯನ್ನು ಆ ಸಮಯದಲ್ಲಿ ಮಾತ್ರ ಹಾಡಬಹುದು.

ಹೋಳಿಗಾಗಿರುವ ಹಾಡುಗಳನ್ನು ಬೇರೆ ಯಾವುದೇ ಹಬ್ಬದ ಸಮಯದಲ್ಲಿ ನೀವು ಹಾಡಲು ಸಾಧ್ಯವಿಲ್ಲ, ಅಲ್ಲವೇ? ಅಂತಹ ಹಾಡುಗಳು ವಿಶೇಷ ಸಮಯಗಳಿಗಾಗಿ ಮತ್ತು ನಿರ್ದಿಷ್ಟ ಸಂದರ್ಭಗಳಿಗಾಗಿರುತ್ತವೆ.
ಆದರೆ ಕೆಲವು ಹಾಡುಗಳು ಹೇಗಿರುತ್ತವೆಯೆಂದರೆ, ಅವುಗಳನ್ನು ಯಾವುದೇ ಕಾಲದಲ್ಲಾದರೂ ಹಾಡಬಹುದು. ಆದುದರಿಂದ, ಎಲ್ಲೆಡೆಯೂ ಮತ್ತು ಎಲ್ಲಾ ಕಾಲಗಳಲ್ಲೂ ಪ್ರಸಕ್ತವಾಗಿರಬೇಕೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಧರ್ಮಗ್ರಂಥಗಳು ಬರೆಯಲ್ಪಟ್ಟವು.

ಪ್ರಶ್ನೆ: ಗುರುದೇವ, ಎರಡು ದಿನಗಳ ಹಿಂದೆ ನೀವು, ’ಎಲ್ಲಾ ಅಸ್ತವ್ಯಸ್ತತೆಗಳ ನಡುವೆ, ಆಂತರಿಕ ಸ್ಥಿರತೆಯೊಂದಿಗೆ ಆಚರಿಸಿ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಆಳವಾದ ವಿಶ್ರಾಂತಿಯಲ್ಲಿರುವ ಪುಟ್ಟ ಕೃಷ್ಣನನ್ನು ಎಚ್ಚರಿಸಿ, ಯಾಕೆಂದರೆ ಇದು ವಿನೋದಪೂರ್ಣರಾಗುವ ಸಮಯ, ನಿಜವಾಗಿಯೂ! ಜ್ಞಾನವನ್ನು ವಿನೋದಪೂರ್ವಕವಾಗಿ ಬೋಧಿಸಿ’ ಎಂದು ಟ್ವೀಟ್ ಮಾಡಿದ್ದಿರಿ. ದಯವಿಟ್ಟು ಇದರ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿ ಶಂಕರ್: ಹೌದುಹೊರಗಿನ ಎಲ್ಲಾ ಅಸ್ತವ್ಯಸ್ತತೆಗಳ ನಡುವೆ, ಆಂತರಿಕ ಸ್ಥಿರತೆಯೊಂದಿಗೆ ಆಚರಿಸಿ. ಹೀಗೆ, ಹೊರಗೆ ಅಸ್ತವ್ಯಸ್ತತೆಯಿರುವಾಗ, ನೀವು ಆ ಆಂತರಿಕ ಸ್ಥಿರತೆಯನ್ನು ಪಡೆಯುವಿರಿ.
ಜ್ಞಾನವು ತಲೆಯ ಮೇಲೊಂದು ಹೊರೆಯಾಗಬಾರದು. ಅದು ಬಹಳ ಸಹಜವಾಗಿರಬೇಕು. ಹಾಗಾಗಿ ನೀವು ಜ್ಞಾನದ ಮೂಲಕ ವಿನೋದಪೂರ್ಣರಾಗಬೇಕು. ತಿಳಿಯಿತೇ?

ಪ್ರಶ್ನೆ: ಗುರುದೇವ, ನಾನು ಬಹಳಷ್ಟು ಪ್ರೀತಿಸುವ ಮತ್ತು ಗೌರವಿಸುವ ಒಬ್ಬರೆದುರು ಬುದ್ಧಿವಂತಿಕೆಯಿಂದ ಅಥವಾ ಜಾಣತನದಿಂದ ವರ್ತಿಸಲು ನನಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾನು ಹಲವಾರು ತಿಳಿಗೇಡಿ ವಿಷಯಗಳನ್ನು ಮಾಡುತ್ತೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಚಿಂತಿಸಬೇಡ, ಅದು ಪರವಾಗಿಲ್ಲ. ಮೂರ್ಖತನದಿಂದ ವರ್ತಿಸುವುದರಲ್ಲಿ ಕೂಡಾ ಸ್ವಲ್ಪ ಸೌಂದರ್ಯವಿದೆ. ಆ ತಿಳಿಗೇಡಿ ವರ್ತನೆ ಕೂಡ ಜನರನ್ನು ರಂಜಿಸುತ್ತದೆ.
ಕೆಲವೊಮ್ಮೆ ತನ್ನ ರೀತಿಗಳಿಂದಾಗಿ ಒಬ್ಬ ಮೂರ್ಖ ವ್ಯಕ್ತಿಯು ನೀಡುವ ಆನಂದ ಮತ್ತು ರಂಜನೆಯನ್ನು ಒಬ್ಬ ಬುದ್ಧಿವಂತ ವ್ಯಕ್ತಿಯು ನೀಡಲಾರನು. 

ಗುರುವಾರ, ಆಗಸ್ಟ್ 29, 2013

ದೈವವು ವ್ಯಕ್ತಿಯಲ್ಲ, ಶಕ್ತಿ

ಅಗಸ್ಟ್ ೨೯, ೨೦೧೩
ಬೆಂಗಳೂರು, ಭಾರತ


 ಇವತ್ತು ಆಚರಣೆಯ ಒಂದು ಸಮಯವಾಗಿದೆ. ನಮ್ಮ ಸ್ವಯಂಸೇವಕರಿಂದ ೧೧೦೦ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗಿದೆ (ಅನ್ನಕೂಟ ಅಥವಾ ಗೋವರ್ಧನ ಪೂಜೆ: ಶ್ರೀಕೃಷ್ಣ ಪರಮಾತ್ಮನು ಗೋವರ್ಧನ ಪರ್ವತವನ್ನು ಎತ್ತಿ ಇಂದ್ರ ದೇವನನ್ನು ಪರಾಜಯಗೊಳಿಸಿದ ದಿನವನ್ನು ನೆನಪಿಸುವ ಸಂದರ್ಭವನ್ನು ಉಲ್ಲೇಖಿಸುತ್ತಾ). ನಾವು ಜ್ಞಾನದಲ್ಲಿ ಇನ್ನೂ ಆಳಕ್ಕೆ ಹೋದಾಗ, ಪ್ರತಿದಿನವೂ ಒಂದು ಆಚರಣೆಯಾಗುತ್ತದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳಿರುವ ಕೆಲವು ವಿಷಯಗಳನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.

ಶ್ರೀಕೃಷ್ಣ ಪರಮಾತ್ಮನು ಹೇಳಿರುವ ಮೊದಲನೆಯ ವಿಷಯವೆಂದರೆ, ’ಬಾ, ನನ್ನಲ್ಲಿ ಪೂರ್ಣ ಶರಣಾಗತಿಯನ್ನು ಪಡೆದುಕೋ ಮತ್ತು ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳು ಹಾಗೂ ನಕಾರಾತ್ಮಕತೆಗಳಿಂದ ಮುಕ್ತಗೊಳಿಸುವೆನು. ನೀನು ನಿನ್ನ ಸ್ವಂತ ಪ್ರಯತ್ನಗಳಿಂದ ನಿನ್ನನ್ನು ನಿನ್ನ ಪಾಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ’.

ಅವನು ಹೇಳಿರುವ ಎರಡನೆಯ ವಿಷಯವೆಂದರೆ, ’ಎಲ್ಲರನ್ನೂ ನನ್ನಲ್ಲಿ ನೋಡು ಮತ್ತು ಎಲ್ಲರಲ್ಲೂ ನನ್ನನ್ನು ಮಾತ್ರ ನೋಡು’. ಇದರರ್ಥ, ಎಲ್ಲರನ್ನೂ ಮತ್ತು ಎಲ್ಲವನ್ನೂ ಶ್ರೀಕೃಷ್ಣ ಪರಮಾತ್ಮನ ಒಂದು ಪ್ರಕಟನೆಯಾಗಿ ನೋಡುವುದೆಂದು. ಗೀತೆಯಲ್ಲಿ ಅವನು ಅರ್ಜುನನಿಗೆ ಹೀಗೆಂದು ಹೇಳುತ್ತಾನೆ, ’ನಾನೊಬ್ಬ ವ್ಯಕ್ತಿಯಲ್ಲ (ಈ ಸೀಮಿತ ಭೌತಿಕ ಶರೀರಕ್ಕೆ ಸೀಮಿತವಾಗದ). ನಾನೊಂದು ಶಕ್ತಿ; ನಾನು ಆನಂದ. ನಾನು ಎಲ್ಲರಲ್ಲೂ ವಾಸಿಸುತ್ತೇನೆ, ಹಾಗಾಗಿ ನಿನ್ನ ಸುತ್ತಲಿರುವ ಎಲ್ಲರಲ್ಲೂ ನನ್ನನ್ನು ನೋಡು’.

ನಾವು ಕೇವಲ ಈ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಆಗ ಅದು ಸಾಕು. ಒಂದು ಅಂಶವು ಅರ್ಜುನನಿಗೆ ಸಂಬಂಧಿಸಿದುದು, ಎರಡನೆಯದ್ದು ರಾಧಾ ದೇವಿಗೆ. ಅರ್ಜುನನು ಶರಣಾಗತನಾಗಿ ಪರಮಾತ್ಮನ ಆಶ್ರಯ ಪಡೆಯಬೇಕಾಯಿತು, ಆದರೆ ರಾಧಾ ದೇವಿಗೆ ಹಾಗೆ ಮಾಡಬೇಕಾಗಿ ಬರಲಿಲ್ಲ ಯಾಕೆಂದರೆ, ಅವಳು ಶ್ರೀಕೃಷ್ಣ ಪರಮಾತ್ಮನನ್ನು ಎಲ್ಲೆಡೆಯೂ, ತನ್ನ ಸುತ್ತಲಿರುವ ಎಲ್ಲದರಲ್ಲೂ ನೋಡುತ್ತಿದ್ದಳು. ಅವಳಿಗೆ ಬೇರೇನನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಈ ಎರಡನ್ನೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಶ್ರೀಕೃಷ್ಣ ಪರಮಾತ್ಮನು ಬೃಹತ್ತಾದ ಗೋವರ್ಧನ ಪರ್ವತವನ್ನು ಹೇಗೆ ಸಂಪೂರ್ಣವಾಗಿ ತನ್ನ ಕಿರುಬೆರಳಿನ ಮೇಲೆ ಎತ್ತಿಕೊಂಡನು ಎಂಬ ಕಥೆಯನ್ನು ನೀವೆಲ್ಲರೂ ಕೇಳಿರಬೇಕು. ’ಗೋ’ ಎಂದರೆ ಜ್ಞಾನ ಮತ್ತು ಜ್ಞಾನವು ಒಂದು ಬೃಹತ್ತಾದ ಪರ್ವತದಂತೆ ಬಹಳ ಅಗಾಧವಾಗಿದೆ. ಆದರೆ ಜ್ಞಾನದಲ್ಲಿ ಅರಳಿರುವವರೊಬ್ಬರು ಒಂದು ಬೃಹತ್ತಾದ ಪರ್ವತವನ್ನು ಕೂಡಾ ಬಹಳ ಸುಲಭವಾಗಿ ಮತ್ತು ಅನಾಯಾಸವಾಗಿ, ಕೇವಲ ತಮ್ಮ ಕಿರುಬೆರಳನ್ನುಪಯೋಗಿಸಿ ಎತ್ತಬಲ್ಲರು. ನಿಮ್ಮ ಕಿರುಬೆರಳಿನಿಂದ ನೀವು ಏನನ್ನಾದರೂ ಎತ್ತಬಲ್ಲಿರೇ? ಕಿರುಬೆರಳನ್ನುಪಯೋಗಿಸಿ ನೀವು ನಿಜವಾಗಿ ಏನನ್ನೂ ಎತ್ತಲು ಸಾಧ್ಯವಿಲ್ಲ, ಅಲ್ಲವೇ? ಆದರೆ ಇಲ್ಲಿ, ಶ್ರೀಕೃಷ್ಣ ಪರಮಾತ್ಮನು ತನ್ನ ಕಿರುಬೆರಳನ್ನುಪಯೋಗಿಸಿ ಇಡೀ ಗೋವರ್ಧನ ಪರ್ವತವನ್ನು ಎತ್ತಿದನು. ಗೋವರ್ಧನ ಎಂಬ ಪದದ ಅರ್ಥವೇನೆಂದರೆ, ಯಾವುದು ನಮ್ಮ ಜ್ಞಾನವನ್ನು ವರ್ಧಿಸುವುದೋ ಮತ್ತು ಹೆಚ್ಚು ಮಾಡುವುದೋ ಅದು. ಹೀಗಾಗಿ ನಾವು ಜ್ಞಾನದ ಚೌಕಟ್ಟಿನಲ್ಲಿ ನಿಲ್ಲುವಾಗ, ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದ (ದುಃಖ ಮತ್ತು ಯಾತನೆಗಳನ್ನು ಸೂಚಿಸುತ್ತಾ) ನಾವೊಂದು ಸಂರಕ್ಷಣೆಯನ್ನು, ಒಂದು ಕವಚವನ್ನು ಪಡೆಯುತ್ತೇವೆ. ಪ್ರಪಂಚದ ದುಃಖಗಳಿಂದ ಆಶ್ರಯ ಪಡೆದುಕೊಳ್ಳಲು, ನೀವು ಗೋವರ್ಧನ ಪರ್ವತದ (ಜ್ಞಾನ) ಸಂರಕ್ಷಣೆಯಡಿಗೆ ಬರಬೇಕು, ಮತ್ತು ಹೀಗೆ ಮಾಡುವುದರಿಂದ ನೀವು ಅರಳುವುದು ಮುಂದುವರಿಯುತ್ತದೆ ಹಾಗೂ ಜ್ಞಾನದಲ್ಲಿ ಹೆಚ್ಚು ಹೆಚ್ಚು ಪ್ರಗತಿ ಹೊಂದುವಿರಿ.

’ಗೋ’ ಎಂಬ ಪದಕ್ಕೆ ನಾಲ್ಕು ಬೇರೆ ಬೇರೆ ಅರ್ಥಗಳಿವೆ: ಜ್ಞಾನ, ಗಮನ, ಪ್ರಾಪ್ತಿ ಮತ್ತು ಮೋಕ್ಷ. ಗಮನವೆಂದರೆ, ಜೀವನದಲ್ಲಿ ಮುಂದಕ್ಕೆ ಸಾಗುತ್ತಾ ಇರುವುದು ಮತ್ತು ಭೂತಕಾಲದ ಕಡೆಗೆ ಹಿಂದಿರುಗಿ ನೋಡದಿರುವುದು. ಪ್ರಾಪ್ತಿಯೆಂದರೆ ನೀವು ಪಡೆದಿರುವ ಎಲ್ಲದರ ಕುರಿತು ವಿಚಾರ ಮಾಡುವುದು. ನೀವು ನಿಮ್ಮ ಜೀವನದ ಕಡೆಗೆ ತಿರುಗಿ ನೋಡಿ, ನೀವು ಏನನ್ನು ಪಡೆದಿರುವಿರಿ ಎಂಬುದರ ಕುರಿತು ವಿಚಾರ ಮಾಡುವಾಗ, ನಿಮ್ಮ ಜೀವನದಲ್ಲಿ ನೀವು ಜ್ಞಾನವಲ್ಲದೆ ಬೇರೇನನ್ನೂ ಪಡೆದಿಲ್ಲವೆಂಬುದು ನಿಮಗೆ ಮನದಟ್ಟಾಗುವುದು (ಅರ್ಥ: ಜೀವನದಲ್ಲಿ ಪಡೆದಿರುವ ಬೇರೆ ಎಲ್ಲವೂ ಕ್ಷಣಿಕ ಅಥವಾ ತಾತ್ಕಾಲಿಕವಾದುದು). ನಿಮ್ಮ ಮುಂದೆ ಸಾವು ಬರುವಾಗ, ನಿಮಗೆ ನೀವೇ ಉತ್ತರ ಕೊಡಬೇಕಾದಂತಹ ಎರಡೇ ಎರಡು ಪ್ರಶ್ನೆಗಳಿರುವುವು: ಒಂದನೆಯದು, ನೀವು ಎಷ್ಟು ಜ್ಞಾನವನ್ನು ಪಡೆದಿರುವಿರಿ ಎಂಬುದು ಮತ್ತು ಎರಡನೆಯದು, ನಿಮ್ಮ ಸುತ್ತಲಿರುವ ಎಲ್ಲರಿಗೂ ನೀವು ಎಷ್ಟು ಪ್ರೀತಿಯನ್ನು ನೀಡಿರುವಿರಿ ಎಂಬುದು. ಜೀವನದಲ್ಲಿ ಕೊಡುವ ಮತ್ತು ಪಡೆಯುವ ಪ್ರಕ್ರಿಯೆ ಇರುವುದು ಇಷ್ಟೇ. ಪಡೆಯುವುದರಲ್ಲಿ, ನೀವು ಎಷ್ಟು ಜ್ಞಾನವನ್ನು ಪಡೆದಿರುವಿರಿ ಎಂಬುದರ ಬಗ್ಗೆ ವಿಚಾರ ಮಾಡಬೇಕು ಹಾಗೂ ಕೊಡುವುದರಲ್ಲಿ, ಎಲ್ಲರೊಂದಿಗೂ ನೀವು ಎಷ್ಟು ಪ್ರೀತಿಯನ್ನು ಹಂಚಿಕೊಂಡಿರುವಿರಿ ಎಂಬುದನ್ನು ನೀವು ನೋಡಬೇಕು. ಅಂತಹ ಜ್ಞಾನವು ನಿಮ್ಮ ಜೀವನದಲ್ಲಿ ಹೆಚ್ಚಾದಾಗ, ಅದುವೇ ಪ್ರಾಪ್ತಿ. ಹೀಗೆ, ಪರಮಾತ್ಮನು ತನ್ನ ಕಿರುಬೆರಳಿನಿಂದ ಸುಲಭವಾಗಿ ಎತ್ತಿದ ಗೋವರ್ಧನದ ಸಂರಕ್ಷಣೆಯಲ್ಲಿ ನೀವಿರುವಾಗ ಈ ಎಲ್ಲಾ ನಾಲ್ಕು: ಜ್ಞಾನ, ಗಮನ, ಪ್ರಾಪ್ತಿ ಮತ್ತು ಮೋಕ್ಷಗಳು ನಿಮ್ಮ ಬಳಿ ಬರುತ್ತವೆ.

ಶ್ರೀಕೃಷ್ಣ ಪರಮಾತ್ಮನು ಪರ್ವತವನ್ನು ಎತ್ತಿದಾಗ, ಅವನ ಇತರ ಎಲ್ಲಾ ಗೊಲ್ಲರು ಕೂಡಾ ಪರ್ವತದ ಕೆಳಗೆ ಅವನೊಂದಿಗೆ ನಿಂತರು ಮತ್ತು ಪರ್ವತಕ್ಕೆ ಆಧಾರ ನೀಡಲು ತಮ್ಮ ಬಿದಿರಿನ ಕೋಲುಗಳನ್ನು ಇಟ್ಟರು. ತಾವು ಕೂಡಾ ಇದರ ಒಂದು ಭಾಗವಾಗಿರುವೆವೆಂದು ಹಾಗೂ ಯಾವುದೋ ಒಂದು ರೀತಿಯಲ್ಲಿ ತಾವು ಕೊಡುಗೆಯನ್ನು ನೀಡುತ್ತಿರುವೆವೆಂದು ಭಾವಿಸಲು ಅವರು ಬಯಸಿದ್ದರು. ತಮ್ಮಲ್ಲಿನ ಕರ್ತೃತ್ವದ ಆ ಭಾವವನ್ನು ತೃಪ್ತಗೊಳಿಸಲು ಅವರು ಕೂಡಾ ಬಯಸಿದ್ದರು. ಇದರಿಂದ ಅರ್ಥವಾಗುವುದೇನೆಂದರೆ: ದೇವರು ಎಲ್ಲವನ್ನೂ ಮಾಡುವನಾದ್ದರಿಂದ, ನಾವು ಯಾವುದೇ ಪ್ರಯತ್ನವನ್ನು ಯಾಕೆ ಮಾಡಬೇಕು ಎಂದು ನಾವು ಯೋಚಿಸಬಾರದು. ಇಲ್ಲ, ನೀವು ಕೂಡಾ ನಿಮ್ಮ ಪ್ರಯತ್ನಗಳನ್ನು ಮಾಡಬೇಕು ಮತ್ತು ಇತರರೊಂದಿಗೆಯೇ ನಿಮ್ಮ ಕೋಲನ್ನು ಹಾಕಬೇಕು (ಪರ್ವತವನ್ನು ಎತ್ತಿಹಿಡಿಯುವಲ್ಲಿ ಕೊಡುಗೆ ನೀಡಲು). ದೇವರು ಹೇಗಿದ್ದರೂ ಎಲ್ಲವನ್ನೂ ಮಾಡುತ್ತಿದ್ದಾರೆ, ಆದರೆ ಅದರರ್ಥ ನೀವು ಏನನ್ನೂ ಮಾಡದೆಯೇ ಸುಮ್ಮನಿರಬೇಕೆಂದಲ್ಲ. ಇಲ್ಲ, ನೀವು ಕೂಡಾ ನಿಮ್ಮ ಪ್ರಯತ್ನಗಳನ್ನು ಕೊಡುಗೆಯಾಗಿ ನೀಡಬೇಕು ಮತ್ತು ನಿಮ್ಮ ಕೋಲನ್ನು ಪರ್ವತದ ಕೆಳಗೆ ಇಡಬೇಕು. ಹೀಗೆ ಇಲ್ಲಿನ ಆಳವಾದ ಅರ್ಥವೇನೆಂದರೆ, ನಾವು ನಮ್ಮ ಕರ್ತವ್ಯವನ್ನು ಮತ್ತು ನಾವೇನನ್ನು ಮಾಡಬೇಕೋ ಅದನ್ನು ಮಾಡಬೇಕು.

ಆಲಸಿಯಾಗಿ ಮತ್ತು  ನಿರ್ಲಕ್ಷ್ಯವಾಗಿ ಇರುವುದಕ್ಕೆ ಬದಲಾಗಿ, ನಾವು ಮುನ್ನೆಚ್ಚರಿಕೆಯಿಂದಿರಬೇಕು ಮತ್ತು ಜವಾಬ್ದಾರರಾಗಬೇಕು. ಇದನ್ನು ಮಾಡುವುದು, ಕರ್ಮ, ಜ್ಞಾನ ಮತ್ತು ಭಕ್ತಿ ಈ ಮೂರನ್ನೂ ಒಗ್ಗೂಡಿಸುತ್ತದೆ.

ಅದು ಹೇಗೆ ಹಾಗೆ? ತನ್ನನ್ನು ದುಃಖ ಮತ್ತು ಯಾತನೆಗಳಿಂದ ಕಾಪಾಡಿಕೊಳ್ಳಲಿಕ್ಕಾಗಿ ಒಬ್ಬನು ಸುರಕ್ಷತೆಗಾಗಿ, ಪ್ರೇಮ ಮತ್ತು ನಂಬಿಕೆಗಳ ಒಂದು ಭಾವ; ಅಂದರೆ ಭಕ್ತಿಯಿಂದ ದೇವರನ್ನು ಕೂಗುತ್ತಾನೆ. ನಿಮ್ಮದೇ ಕೋಲನ್ನು ಪರ್ವತದ ಕೆಳಗೆ ಇಡುವುದು (ಒಬ್ಬನು ತನ್ನ ಪ್ರಯತ್ನಗಳನ್ನು ಮಾಡುವುದು ಅಥವಾ ತನ್ನ ಕರ್ತವ್ಯವನ್ನು ಮಾಡುವುದು) ಕರ್ಮ ಯೋಗವಾಗಿದೆ, ಮತ್ತು ದೇವರು ಎಲ್ಲವನ್ನೂ ಎತ್ತಿಹಿಡಿಯುತ್ತಾನೆ ಹಾಗೂ ನಿಗಾ ವಹಿಸುತ್ತಾನೆ ಎಂದು ತಿಳಿದಿರುವುದು ಜ್ಞಾನವಾಗಿದೆ. ಜೀವನದಲ್ಲಿ ಎಲ್ಲಾ ಮೂರೂ ಮುಖ್ಯವಾಗಿವೆ.

ಪ್ರಶ್ನೆ: ಗುರುದೇವ, ಶ್ರೀಕೃಷ್ಣ ಪರಮಾತ್ಮನು ಇತರರ ಮನೆಗಳಲ್ಲಿದ್ದ, ಬೆಣ್ಣೆಯಿಂದ ತುಂಬಿದ ಮಡಕೆಗಳನ್ನು ಒಡೆಯಲು ಪ್ರಾರಂಭಿಸಿದನು ಯಾಕೆಂದರೆ, ಆ ಸಮಯದಲ್ಲಿ ಮಕ್ಕಳಿಗೆ ಸಾಕಷ್ಟು ಹಾಲು ಮತ್ತು ಬೆಣ್ಣೆ ಸಿಗುತ್ತಿರಲಿಲ್ಲ. ಇಂದು ಕೂಡಾ ಅದೇ ಪರಿಸ್ಥಿತಿಯು ಪ್ರಚಲಿತವಾಗಿದೆ. ನಾವೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್:
ಬೆಣ್ಣೆಯನ್ನು ಮಡಕೆಗಳಲ್ಲಿ ಸಂಗ್ರಹಿಸಿ, ಎತ್ತರದಲ್ಲಿ ಮಕ್ಕಳಿಗೆ ಸಿಗದಂತೆ ಇಡಲಾಗುತ್ತಿತ್ತು. ಅದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು ಹತ್ತಿ ಮಡಕೆಗಳನ್ನು ಒಡೆಯುತ್ತಿದ್ದನು. ಈ ಕಥೆಯು ಒಂದು ರೀತಿಯಲ್ಲಿ ಸಾಂಕೇತಿಕವೂ ಆಗಿದೆ. ಇವತ್ತು ಮಕ್ಕಳಿಗೆ ಏನು ಬೇಕೋ ಅದನ್ನು ಅವರಿಗೆ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಪ್ರಶ್ನೆ: ಗುರುದೇವ, ಇವತ್ತಿನ ಕಾಲಕ್ಕೆ ಶ್ರೀಕೃಷ್ಣ ಪರಮಾತ್ಮನ ಯಾವ ರೂಪವು ಹೆಚ್ಚು ಮುಖ್ಯವಾಗಿದೆ: ಸುದರ್ಶನ ಚಕ್ರವನ್ನು ಹಿಡಿದಿರುವ ರೂಪವೇ; ಕೊಳಲನ್ನು ಹಿಡಿದಿರುವ ರೂಪವೇ; ಅಥವಾ ಒಂದು ರಥದ ಚಕ್ರವನ್ನು ತನ್ನ ಕೈಗಳಿಂದ ಎತ್ತಿಹಿಡಿದಿರುವ ರೂಪವೇ?

ಶ್ರೀ ಶ್ರೀ ರವಿ ಶಂಕರ್:
ಅವುಗಳಲ್ಲಿ ಎಲ್ಲವೂ ಇವತ್ತಿಗೆ ಮುಖ್ಯವೂ ಪ್ರಸಕ್ತವೂ ಆಗಿವೆ. ಜೀವನದಲ್ಲಿ ಕೊಳಲಿಲ್ಲದಿದ್ದರೆ (ಅಂದರೆ ಸಂಗೀತ, ಗಾಯನ, ಮೊದಲಾದವು ಇಲ್ಲದಿದ್ದರೆ), ಆಗ ಜೀವನವು ಬಹಳ ಶುಷ್ಕವೂ, ರುಚಿಯಿಲ್ಲದ್ದೂ ಆಗುತ್ತದೆ. ಮತ್ತು ಒಬ್ಬನಲ್ಲಿ ಧೈರ್ಯ ಹಾಗೂ ಪರಾಕ್ರಮ ಇಲ್ಲದಿದ್ದರೆ, ಆಗ ಕೂಡಾ ಅವನಿಗೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಅದೇ ಸಮಯದಲ್ಲಿ, ಸಮಾಜವು ಅಡೆತಡೆಯಿಲ್ಲದೆ ನಡೆಯುತ್ತಾ ಇರಬೇಕು. ಸಮಾಜವು ಸರಿಯಾಗಿ ಕೆಲಸ ಮಾಡುವುದು ನಿಂತಾಗ ದೇಶದಲ್ಲಿರುವ ಎಲ್ಲವೂ ಕೂಡಾ ನಿಶ್ಚಲವಾಗುತ್ತದೆ. ಇವತ್ತು ಎಲ್ಲಾ ಉದ್ಯಮಿಗಳು ದುಃಖಿತರಾಗಿದ್ದಾರೆ. ತಮ್ಮ ಉದ್ಯಮಗಳು ಮತ್ತು ವ್ಯವಹಾರಗಳು ನಷ್ಟದಲ್ಲಿವೆಯೆಂದೂ, ನಿಂತುಹೋಗಿವೆಯೆಂದೂ ಹಲವು ಕೈಗಾರಿಕೋದ್ಯಮಿಗಳು ದೂರುತ್ತಾರೆ.

ಹೀಗಾಗಬಾರದು. ಅವುಗಳು ಕೂಡಾ ಅಡೆತಡೆಯಿಲ್ಲದೆ ಕೆಲಸ ಮಾಡುತ್ತಿರಬೇಕು. ಹೀಗೆ ಅದು ಅಡೆತಡೆಯಿಲ್ಲದೆ ನಡೆಯುವಂತೆ ಮಾಡಲು ನಿಮಗೆ ಯಾರಾದರೂ ಬೇಕು. ಮತ್ತು ಸುದರ್ಶನ ಚಕ್ರವು ಬಹಳ ಮುಖ್ಯವಾಗಿದೆ. ಇವತ್ತು ನಮ್ಮ ಸಮಾಜದಲ್ಲಿ ಹಲವಾರು ದುಶ್ಯಾಸನರು ಮತ್ತು ಶಕುನಿಯರು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆ. ಸಮಾಜದಲ್ಲಿ ಮತ್ತೊಮ್ಮೆ ಅವರಿಗೆ ಅವರ ಸರಿಯಾದ ಜಾಗವನ್ನು ತೋರಿಸಬೇಕಾಗಿದೆ. ಇವತ್ತು ನಮ್ಮ ದೇಶದಲ್ಲಿ ಹಲವಾರು ಶಿಶುಪಾಲರಿದ್ದಾರೆ. ಹಾಗಾಗಿ ಇವತ್ತಿನ ಕಾಲದಲ್ಲಿ ಸುದರ್ಶನ ಚಕ್ರವು ಬಹಳಮಟ್ಟಿಗೆ ಆವಶ್ಯಕವಾಗಿದೆ.

ಪ್ರಶ್ನೆ: ಗುರುದೇವ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅನನ್ಯ ಶರಣ ಭಾವದ ಬಗ್ಗೆ ಮಾತನಾಡಿರುವನು. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಹೆಚ್ಚು ಮಾತನಾಡಿ. ಹಾಗೆಯೇ ಗೋಪಿ ಭಾವವೆಂದರೇನು ಎಂಬುದರ ಬಗ್ಗೆ ದಯವಿಟ್ಟು ವಿವರಿಸಿ. 

ಶ್ರೀ ಶ್ರೀ ರವಿ ಶಂಕರ್:
ಗೋಪಿ ಭಾವವೆಂದರೆ ಮುಗ್ಧತೆ ಮತ್ತು ಆಳವಾದ ಪ್ರೇಮದ ಒಂದು ಭಾವನೆ. ಗೋಪಿ ಎಂಬ ಪದದ ಅರ್ಥವೇನೆಂದರೆ, ಜ್ಞಾನವನ್ನು ಅಷ್ಟೊಂದು ಪೂರ್ತಿಯಾಗಿ ಮತ್ತು ಸಂಪೂರ್ಣವಾಗಿ, ಬೇರೇನೂ ಉಳಿಯದಂತೆ, ನೆನೆಸಿಟ್ಟು ಕುಡಿದಿರುತ್ತಾರೋ ಅವರು. ಒಬ್ಬರು ಜ್ಞಾನದಲ್ಲಿ ಬಹಳ ಆಳವಾಗಿ ಮುಳುಗಿರುವಾಗ, ಪ್ರೇಮ ಮಾತ್ರ ಉಳಿಯುತ್ತದೆ. ಹೀಗೆ ಅಂತಹ ಒಂದು ಆಳವಾದ ಮತ್ತು ಉನ್ನತ ಸ್ಥಿತಿಯಲ್ಲಿ ವ್ಯಕ್ತಗೊಳಿಸಲ್ಪಡುವುದು ಆ ಅತೀವ ಪ್ರೇಮವಾಗಿದೆ. ಜೀವನದಲ್ಲಿ ಪ್ರೇಮದ ಅಂತಹ ಒಂದು ಸುಂದರವಾದ ಮತ್ತು ತೀವ್ರವಾದ ಭಾವನೆಯು ಉದಯಿಸುವಾಗ, ಅದು ಗೋಪಿ ಭಾವ ಎಂದು ಕರೆಯಲ್ಪಡುತ್ತದೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

Focus on responsibility of this day, this moment

ಬುಧವಾರ, ಆಗಸ್ಟ್ 28, 2013

ಯೋಗಃ ಕರ್ಮಸು ಕೌಶಲಂ

೨೮ನೇ ಆಗಸ್ಟ್ ೨೦೧೩
 ಬೆಂಗಳೂರು, ಭಾರತ
ಮ್ಮೊಳಗೆ ಕುಶಲತೆಯು ಅರಳಿದಾಗ ಅದನ್ನು ಯೋಗ ಎನ್ನುವರು. ‘ಯೋಗಃ ಕರ್ಮಸು ಕೌಶಲಂ’ ಎನ್ನುತ್ತಾರೆ. ನಾವು ಯಾವುದಾದರೊಂದು ಕೆಲಸ ಮಾಡಬೇಕಾದರೆ, ‘ಇದು ನಡೆಯುತ್ತದೆಯೋ ಇಲ್ಲವೋ’ ಅಥವಾ ‘ಅರ್ಧದಷ್ಟೇ ನಡೆಯುವುದೋ’ ಅಥವಾ ‘ತುಂಬಾ ಸಮಯ ತೆಗೆದುಕೊಳ್ಳುವುದೇನೋ’ ಇತ್ಯಾದಿ ಯೋಚಿಸುತ್ತಾ ಅರೆಮನಸ್ಸಿನಿಂದ ಮಾಡುವುದಿಲ್ಲ. ಒಮ್ಮೆ ಕೆಲಸವೊಂದನ್ನ್ನು ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಅದನ್ನು ಮಾಡಿಬಿಡಿ. ಕೇವಲ ಆಲೋಚನಾ ಮಾತ್ರದಿಂದಲೇ ಕಾರ್ಯಗಳು ಪೂರ್ಣಗೊಂಡರೆ, ಅಂತಹ ಸಾಮರ್ಥ್ಯವನ್ನು ಸಿದ್ಧಿ ಎನ್ನುವರು. ಸಿದ್ಧಿಯನ್ನು ಪಡೆಯುವುದೇ ಮಾನವ ಜೀವನದ ಉದ್ದೇಶ. ಕೇವಲ ಲೌಕಿಕ ಸುಖ-ಭೋಗಗಳನ್ನು ಪಡೆಯುವುದಷ್ಟೇ ಅಲ್ಲ.

ಶ್ರೀಕೃಷ್ಣನ ವಿನಾ ಭಾರತವು ಭಾರತವೆನಿಸದು ಹಾಗೂ ರಾಮಾಯಣ ಮತ್ತು ಮಹಾಭಾರತವೂ ಇರುತ್ತಿರಲಿಲ್ಲ. ಇವೆರಡು ಮಹಾಕಾವ್ಯಗಳು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ, ಒಟ್ಟಾಗಿ ಇತಿಹಾಸವೆನ್ನುವರು. ಇದು ಯಾವುದೋ ಒಂದು ಧರ್ಮ ಅಥವಾ ಒಂದು ಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ಇಡೀ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ.

ನಮ್ಮ ದೇಶದ ಪ್ರತಿ ಹಳ್ಳಿಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಓದುತ್ತಾರೆ, ಚರ್ಚಿಸುತ್ತಾರೆ. ಈ ಮಹಾಕಾವ್ಯಗಳ ವಿಶಿಷ್ಟತೆಯೆಂದರೆ ಯಾವುದೋ ಒಂದು ಕಾಲದಲ್ಲಿ ಸಂಭವಿಸಿದ್ದು, ಈಗ ನಡೆಯುತ್ತಿಲ್ಲವೆಂದಲ್ಲ. ಇವು ಈಗಲೂ ಜೀವಂತವಾಗಿವೆ, ಇಂದಿಗೂ ನಡೆಯುತ್ತಿವೆ.  ಪ್ರತಿಯೊಬ್ಬರ ಜೀವನದಲ್ಲೂ ಪ್ರತಿನಿತ್ಯ ಮಹಾಭಾರತ ನಡೆಯುತ್ತಿದೆ. ಪ್ರತಿದಿನ ಗೀತಾ ಪ್ರವಚನ ನಡೆಯುತ್ತಿದೆ.

ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಜನ್ಮದಿನವೆಂದು ಆಚರಿಸುತ್ತೇವೆ. ಕೃಷ್ಣನು ಆನಂದದ ಪ್ರತೀಕ. ಸಂತೋಷವನ್ನು ಆಚರಿಸುವುದರ ಮೂಲಕ ಅಭಿವ್ಯಕ್ತಪಡಿಸುತ್ತೇವೆ. ಆದ್ದರಿಂದಲೇ ಆನಂದದ ಜನ್ಮವನ್ನು ಆಚರಿಸುವುದು. (ದಿವ್ಯ) ಆನಂದವು ಜನ್ಮಾಷ್ಟಮಿಯಂದು ಆವಿರ್ಭವಿಸಿದ ದಿನ. ನಿಜವಾಗಿಯೂ, ಇಲ್ಲಿ ‘ಜನ್ಮ’ ಎನ್ನುವ ಪದದ ಬಳಕೆ ಸರಿಯಲ್ಲ. ಶ್ರೀಕೃಷ್ಣನು ಎಂದೂ ಜನಿಸಿರಲಿಲ್ಲ. ಆ (ದಿವ್ಯ) ಆನಂದವು ಚಿರಸ್ಥಾಯಿಯಾಗಿರುವುದು, ಆದರೆ ಈ ದಿನ ಸ್ಪಷ್ಟವಾಗಿ ಪ್ರತ್ಯಕ್ಷಗೊಂಡಿರುವನು. ಶ್ರೀಕೃಷ್ಣನ್ನನ್ನು ಎಲ್ಲಿ ಕಾಣುವಿರಿ? ಎಲ್ಲೆಡೆಯೂ!  ಕೃಷ್ಣನು ಹೇಳುತ್ತಾನೆ – ಯಾರು ನನ್ನನ್ನು ಸರ್ವತ್ರ, ಸರ್ವರಲ್ಲಿಯೂ ಕಾಣುವನೋ ಮತ್ತು ಸರ್ವರನ್ನೂ ನನ್ನಲ್ಲಿ ಕಾಣುವನೋ ಅವನೇ ನಿಜವಾದ ಪ್ರಾಜ್ಞ. ಈಗ ಜಗತ್ತಿನಲ್ಲಿ ಯಾರೂ ದಡ್ಡರಾಗಲು ಬಯಸುವುದಿಲ್ಲ. ಪ್ರತಿಯೊಬ್ಬರೂ ಬುದ್ಧಿವಂತರಾಗಲು ಬಯಸುವರು. ಆದ್ದರಿಂದ ಯಾರು ಪರಮಾತ್ಮನ್ನನ್ನು ಇಡೀ ಸೃಷ್ಟಿಯಲ್ಲಿ ಆವಿರ್ಭವಿಸಿರುವ ಆನಂದ ತತ್ವವೆಂದು ಗುರುತಿಸುವರೋ ಅವರೇ ನಿಜವಾಗಲೂ ಬುದ್ಧಿವಂತರು. ಎಲ್ಲವೂ ಆನಂದತತ್ವದಿಂದ ಜನಿಸಿದೆ.ಇದೇ ಜನ್ಮಾಷ್ಟಮಿಯ ವಿಶೇಷ ಸಂದೇಶ. ಇದರ ಅವಶ್ಯಕತೆಯೇನು?

ಆಂತರ್ಯದಲ್ಲಿ ಮುಗ್ಧನಾಗುವ ಅವಶ್ಯಕತೆಯಿದೆ. ನಿಮ್ಮಲ್ಲಿ ಮಗುವಿನಂತಹ ಮುಗ್ಧತೆಯಿರಬೇಕು. ‘ಭೋಲೇ ಭಾವ್ ಮಿಲೇ ರಘುರಾಯಿ’ಎಂದು ಹೇಳುತ್ತಾರೆ (ಮುಗ್ಧ ಹಾಗೂ ಪವಿತ್ರ ಭಾವನೆಗಳಿಂದ ದೇವರನ್ನು ಪಡೆಯಬಹುದು).

ಇವತ್ತಿನ ಜ್ಞಾನ: ತೀವ್ರವಾಗಿ ಆನಂದಿಸುವ ಹಾಗೂ ಆಚರಿಸುವ ಸಮಯ ಬಂದಿದೆ! (ನಗೆ) ಆಳವಾದ ವಿಶ್ರಾಮದಿಂದ ಮಾತ್ರ ಶ್ರೀಕೃಷ್ಣನ ಸಾಕ್ಷಾತ್ಕಾರವಾಗುವುದು. ನಿಮ್ಮ ಕಷ್ಟ ಹಾಗೂ ಪರಿಶ್ರಮಗಳಿಂದ ಕೃಷ್ನನ ಸಾಕ್ಷಾತ್ಕಾರವನ್ನು ಪಡೆಯಬಹುದು. ಯಾವಾಗ ಈ ಆಳವಾದ ವಿಶ್ರಾಮವಾಗುವುದು? ನಿಮ್ಮ ಮನಸ್ಸು ಯಾವಾಗ ಚಡಪಡಿಕೆಯಿಲ್ಲದೇ, ಜ್ವರಪೀಡಿತ ಆಸೆಗಳಿಂದ ಬಂಧಿತವಾಗಿಲ್ಲವೋ ; ಬಯಕೆ ಹಾಗೂ ಹೇವರಿಕೆಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲವೋ ಆಗ ವಿಶ್ರಾಮವಾಗುವುದು. ಆ ಗಹನವಾದ ವಿಶ್ರಾಮದಲ್ಲಿ ಕೃಷ್ಣನ ಜನ್ಮಕ್ಕೆ ಸಾಕ್ಷಿಯಾಗಬಹುದು (ದಿವ್ಯ ಆನಂದದ ಜನ್ಮ).

ಶ್ರೀಕೃಷ್ಣನ ಜನ್ಮವನ್ನು ಆಧ್ಯಾತ್ಮದ ದೃಷ್ಟಿಯಿಂದ ನೋಡಬೇಕು. ದೇವಕಿ (ಕೃಷ್ಣನ ತಾಯಿ) ದೇಹವನ್ನು ಪ್ರತಿನಿಧಿಸಿದರೆ, ವಾಸುದೇವ (ಕೃಷ್ಣನ ತಂದೆ) ಪ್ರಾಣಶಕ್ತಿಯನ್ನು ಪ್ರತಿನಿಧಿಸುತ್ತಾನೆ. ದೇಹದಲ್ಲಿ ಪ್ರಾಣಶಕ್ತಿಯು ಸಂಚರಿಸಿದಾಗ ಆನಂದದ (ಕೃಷ್ಣನ) ಜನನವಾಗುತ್ತದೆ. ಆದರೆ ಆ ಸಮಯದಲ್ಲಿ ಅಹಂ (ಕೃಷ್ಣನ ಮಾವ ಕಂಸ) ಆನಂದವನ್ನು ಹಾಳು ಮಾಡಲು ಬಯಸುತ್ತದೆ. ಎಲ್ಲಿ ಆನಂದವಿರುವುದೋ ಅಲ್ಲಿ ಅಹಂ ಇರಲು ಸಾಧ್ಯವಿಲ್ಲ. ಆನಂದದಿಂದ ತುಂಬಿರುವ ವ್ಯಕ್ತಿಯು ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ಇತರರಿಗೆ ತೊಂದರೆ ನೀಡಿ, ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಇತರರಿಗೆ ತೊಂದರೆ ನೀಡುವವನೇ ಸ್ವತಃ ಕಷ್ಟದಲ್ಲಿದ್ದು, ನೋವು ಅಥವಾ ಹಾನಿಯುಂಟಾಗಿರುತ್ತದೆ. ಅಂಥವರೇ ಸುತ್ತಮುತ್ತಲಿನವರಿಗೆ ತೊಂದರೆ ನೀಡುವುದು. ಯಾರಿಗೆ ಅನ್ಯಾಯವಾಗಿದೆಯೋ ಅವನೇ ಇತರರಿಗೆ ಅನ್ಯಾಯ ಮಾಡುವನು. ತುಷ್ಟ ಹಾಗೂ ತೃಪ್ತನಾದ ವ್ಯಕ್ತಿ ಯಾರಿಗೂ ತೊಂದರೆ ನೀಡುವುದಿಲ್ಲ; ಯಾರ ವಸ್ತುವನ್ನು ಕದಿಯುವುದಿಲ್ಲ. ಆದ್ದರಿಂದ ಜ್ಞಾನ, ಸಂತೋಷ ಮತ್ತು ಪ್ರೀತಿ, ಅಹಂನ ದೊಡ್ಡ ವೈರಿ. ಕೃಷ್ಣನು ಪ್ರೀತಿ ಮತ್ತು ಆನಂದದ ಚಿಹ್ನೆ. ಪ್ರೀತಿಯಿರುವಲ್ಲಿ ಅಹಂ ಇರಲು ಹೇಗೆ ಸಾಧ್ಯ?

ಅಹಂಗೆ ಪ್ರೀತಿಯ ಭಯವಷ್ಟೇ, ಬೇರೇನೂ ಇಲ್ಲ. ಇದಕ್ಕೆ ಕಾರಣ ಪ್ರೀತಿಯ ಮುಂದೆ ಅಹಂ ತಲೆ ಬಾಗಲೇಬೇಕು. ಎಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ತನ್ನ ಮಗುವಿನ ಪ್ರೀತಿಯ ಮುಂದೆ ಕರಗಲೇಬೇಕು. ಮಗುವಿಗೆ ಆರೋಗ್ಯ ಸರಿಯಿಲ್ಲದಾಗ, ಎಷ್ಟೇ ಧೈರ್ಯ ಹಾಗೂ ಶಕ್ತಿವಂತನಾಗಿದ್ದರೂ ತನ್ನ ಮಗುವಿನ ಆರೋಗ್ಯಕ್ಕಾಗಿ, ಪ್ರೀತಿ ಮತ್ತು ಕಾಳಜಿಯ ಮೇರೆಗೆ ಕರಗಿಬಿಡುವನು. ಸಹಜವಾಗಿಯೇ ಚಿಂತಿತನಾಗುವನು. ಆದ್ದರಿಂದ ಅಹಂನ ದೊಡ್ಡ ವೈರಿ - ಪ್ರೀತಿ, ಸಂತೋಷ ಮತ್ತು ಸಹಜತೆ. ಕೃಷ್ಣನು ಯಾವುದನ್ನು ಪ್ರತಿನಿಧಿಸುತ್ತಾನೆ? ಅವನು ಸುಖ-ಸಂತೋಷ ಮತ್ತು ಸಹಜವಾಗಿರುವುದುರ ಸಂಕೇತ; ಆನಂದದ ಮೂಲ.

ಈ ಕಾರಣದಿಂದಲೇ ಅಹಂ ಮತ್ತು ಪ್ರೀತಿಯ ನಡುವೆ ಯುದ್ಧವಿರುವುದು, ಏಕೆಂದರೆ ಪ್ರೀತಿಯು ಉದಯಿಸುವುದರಿಂದ ಅಹಂ ಕರಗಿ, ಮಾಯವಾಗುತ್ತದೆ. ಕಂಸನು ಅಹಂ ಅನ್ನು ಪ್ರತಿನಿಧಿಸುತ್ತಾನೆ ಮತ್ತು ಶರೀರದ ಜನನದೊಂದಿಗೆ ಅಹಂ ಜನಿಸುತ್ತದೆ.

ದೇವಕಿಯು (ದೇಹ) ಕಂಸನ ಸಹೋದರಿ. ಕೃಷ್ಣನು ಕಾರಾಗೃಹದಲ್ಲಿ ಜನಿಸಿದಾಗ ಕಾವಲುಗಾರರೆಲ್ಲ ಮಲಗಿದ್ದರು. ಸಂತೋಷ (ಕೃಷ್ಣ) ಇಲ್ಲದಿದ್ದಾಗ ದೇಹವು ಜೈಲಿನಂತೆ ಭಾಸವಾಗುವುದು. ಈ ಸೆರೆಮನೆಯಲ್ಲಿ (ದೇಹ) ಪ್ರೀತಿಯು (ಕೃಷ್ಣ) ಜನಿಸಿದಾಗ, ಇಂದ್ರಿಯಗಳೆಲ್ಲವೂ (ಸೆರೆಮನೆಯ ಕಾವಲುಗಾರರು) ಮಲಗಿದ್ದವು. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ ಎಲ್ಲವೂ ದೇಹದ ಕಾವಲುಗಾರರು, ಸಂತೋಷವನ್ನು ಬಾಹ್ಯದಲ್ಲೇ ಹುಡುಕುತ್ತವೆ. ಅವೆಲ್ಲ ಕಂಸ (ಅಹಂ) ನ ಕಾವಲುಗಾರರು. ನಾವು ಅಂತರ್ಮುಖಿಯಾದಾಗ, ಸಂತೋಷದ ಮೂಲ, ಆನಂದ (ಕೃಷ್ಣ) ಜನಿಸುವೆಡೆಗೆ ತಿರುಗಿದಾಗ ಕಾವಲುಗರರೆಲ್ಲರೂ ಮಲಗುತ್ತಾರೆ. ಕೃಷ್ಣನು ಜನಿಸಿದ ಮೇಲೆ, ಕಂಸನಿಂದ ರಕ್ಷಣೆ ಹಾಗೂ ಸುರಕ್ಷತೆಗಾಗಿ ಬೇರೆ ಕಡೆಗೆ ಸ್ಥಳಾಂತರಿಸಬೇಕಾಗಿತ್ತು. ಆದ್ದರಿಂದ ಬೃಂದಾವನದ ನಂದ ಮತ್ತು ಯಶೋದೆಯರ ಮನೆಗೆ ಕೃಷ್ಣನನ್ನು ತಂದುಬಿಡಲಾಯಿತು. ಹೀಗೆ ಈ ಕಥೆಗಳನ್ನೆಲ್ಲ ಆಳವಾಗಿ ಯೋಚಿಸಿದಾಗ ಅವುಗಳ ಆಧ್ಯಾತ್ಮಿಕ ತಾತ್ಪರ್ಯ ಮತ್ತು ಮೌಲ್ಯಗಳ ಅರಿವಾಗುವುದು. ಈ ಕಥೆಗಳ ಮತ್ತು ಸನ್ನಿವೇಶಗಳ ನೀತಿ ಮತ್ತು ಪ್ರಾಮುಖ್ಯತೆಯು ಒಂದು ಸ್ಥಳ ಅಥವಾ ಕಾಲಕ್ಕೆ ಸೀಮಿತವಾಗಿಲ್ಲ; ರಾಮಾಯಣ ಅಥವಾ ಮಹಾಭಾರತವನ್ನೇ ತೆಗೆದುಕೊಳ್ಳಿ.

ಕೃಷ್ಣನು ತನ್ನ ಕಿರೀಟದಲ್ಲಿ ನವಿಲು ಗರಿಯನ್ನು ಏಕ್ಕೆ ಸಿಕ್ಕಿಸಿಕೊಂಡಿರುವನೆಂದು ನಿಮಗೆ ಗೊತ್ತೇ? ಇದರ ಹಿಂದಿನ ರಹಸ್ಯ ಎಷ್ಟು ಜನರಿಗೆ ತಿಳಿದಿಲ್ಲ? ಕೃಷ್ಣನು ಎಂದಿಗೂ ನೇರವಾಗಿ ನಿಲ್ಲುವುದಿಲ್ಲ ಅಥವಾ ನಡೆಯುವುದಿಲ್ಲ. ಒಂದು ಕಾಲು ಸಂಪೂರ್ಣವಾಗಿ ಭೂಸ್ಪರ್ಶ ಮಾಡುತ್ತಿದ್ದು ಇನ್ನೊಂದು ಭೂಮಿಯ ಮೇಲಿದ್ದು, ಕೇವಲ ಕಾಲ್ಬೆರಳುಗಳ ಮೇಲೆ ವಿಶ್ರಮಿಸಿದ್ದಾನೆ. ಓರೆಯಾಗಿ ನಿಲ್ಲುತಾನೆ ಆದರೆ ನೇರವಾಗಿ ಮಾತನಾಡುತ್ತಾನೆ. ಕಿರೀಟದಲ್ಲಿ ನವಿಲು ಗರಿಯೇಕೆ?

ಸಾಮಾನ್ಯವಾಗಿ ಕಿರೀಟವು ಭಾರವಾಗಿದ್ದು, ಜವಾಬ್ದಾರಿಯ ಚಿಹ್ನೆಯಾಗಿದೆ.  ಕಿರೀಟಧಾರಿಯು ಇಡೀ ಸಮಾಜಕ್ಕೆ ಜವಾಬ್ದಾರಿಯುತನಾಗಿರುವನು. ಆದ್ದರಿಂದ ಯಾರು ಕಿರೀಟವನ್ನು ಧರಿಸುವರೋ ಅವರಿಗೆ ಅತಿ ಹೊರೆಯಾಗಬಹುದು.

ಸಮಾಜದಲ್ಲಿ ತಪ್ಪುಗಳು ನಡೆದಾಗ ಯಾರನ್ನು ಹೊಣೆ ಮಾಡುತ್ತೀರ? ರಾಜನನ್ನು  ತಾನೆ?  ಆದ್ದರಿಂದ ರಾಜನ ಕಿರೀಟ ಆತನು ಹೊತ್ತಿರುವ ಜವಾಬ್ದಾರಿಯ ಹೊರೆಯನ್ನು ಸೂಚಿಸುತ್ತದೆ. ಆದರೆ ನಿಮ್ಮೆಲ್ಲ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನವಿಲು ಗರಿಯಂತೆ ಹಗುರವಾಗಿ ಮತ್ತು ಶ್ರಮರಹಿತವಾಗಿ ನಿರ್ವಹಿಸಿದರೆ ಯಾವ ಹೊರೆಯೂ ಅನಿಸದು. ಇದೇ ಶ್ರೀಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯು ಸೂಚಿಸುವುದು. ಇದು ಅನೇಕ ಜವಾಬ್ದಾರಿಗಳನ್ನು, ಹೊರೆಯೆನಿಸದೆ, ಹೊರಲು ಶಕ್ಯವಾಗಿವಾಗಿರುವುದರ ಸಂಕೇತ.

ಭಗವಂತನಿಗೆ ತನ್ನ ಸೃಷ್ಟಿಯು ಎಂದಿಗೂ ಹೊರೆಯೆನಿಸದು. ತಾಯಿಗೆ ತನ್ನ ಮಗುವು ಎಂದೂ ಹೊರೆಯೆನಿಸದು. ಹಾಗೆಯೇ ಯೋಗೀಶ್ವರನೆಂದು ಕರೆಯಲ್ಪಡುವ ಶ್ರೀಕೃಷ್ಣನಿಗೆ ಯಾವುದೇ ಜವಾಬ್ದಾರಿಯು ಎಂದೂ ಹೊರೆಯೆನಿಸದು. ಪ್ರತಿಯೊಂದು ಜವಾಬ್ದಾರಿಯೂ ಹಗುರ ಮತ್ತು ಸುಲಭವೆಂದೆನಿಸುವುದು.  ಆದ್ದರಿಂದಲೇ ಅವನ ಕಿರೀಟ ನವಿಲುಗರಿಯಿಂದ ಅಲಂಕೃತವಾಗಿದೆ. ನವಿಲು ಗರಿಯು ಬಣ್ಣ-ಬಣ್ಣಗಳಿಂದ ತುಂಬಿರುವಂತೆ ಅವನಿಗೆ ಅನೇಕ ಜವಾಬ್ದಾರಿಗಳಿವೆ, ಆದರೆ ಅವೆಲ್ಲವೂ ಹೊರೆಯಾಗಿಲ್ಲ. ಎಲ್ಲವೂ ಲೀಲೆಯಂತೆ ತೋರುತ್ತದೆ.

ಕೃಷ್ಣನ ಅನೇಕ ಹೆಸರುಗಳಲ್ಲಿ ಮಾಕನ್ ಚೋರ್ (ಬೆಣ್ಣೆ ಕಳ್ಳ ಅಥವಾ ನವನೀತ  ಚೋರ) ಕೂಡ ಒಂದು. ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆಯನ್ನು ಪಡೆಯುತ್ತೇವೆ. ಹಾಲು ದ್ರವ ಪದಾರ್ಥವಾಗಿದ್ದು, ಪೌಷ್ಟಿಕವಾಗಿರುತ್ತದೆ. ಅದರಿಂದ ಗಟ್ಟಿಯಾದ ಸಂಸ್ಕರಿಸಿದ ಮೊಸರು ದೊರೆಯುತ್ತದೆ. ಮೊಸರನ್ನು ಕಡೆದಾಗ ಬೆಣ್ಣೆ ದೊರೆಯುತ್ತದೆ. ಪಾತ್ರೆಯಲ್ಲಿ ಬೆಣ್ಣೆಯು ಮುಳುಗದೇ, ತೇಲುತ್ತದೆ. ಆದ್ದರಿಂದ ಬೆಣ್ಣೆ ಹಗುರ ಮತ್ತು ಅತ್ಯಂತ ಪೌಷ್ಟಿಕವಾದುದು. ಹೀಗೆ ಬೆಣ್ಣೆಯಂತೆ ನಮ್ಮ ಬುದ್ಧಿಶಕ್ತಿಯು ಪರಿಷ್ಕೃತ ಮತ್ತು ಪ್ರೌಢವಾದಾಗ ಮತ್ತು ಜ್ಞಾನದಲ್ಲಿ ಅರಳಿದಾಗ, ಸ್ಥಿತಪ್ರಜ್ಞರಾಗುವೆವು, ಅಂದರೆ ಸದಾ ಕಾಲದಲ್ಲಿಯೂ ಸಮಚಿತ್ತತೆಯನ್ನು ಹೊಂದಿರುವುದು.  ಆದರೆ ಅತ್ಯಂತ ಸಮಚಿತ್ತತೆಯುಳ್ಳವರ ಮನಸ್ಸು ಹಾಗೂ ಹೃದಯಗಳನ್ನೂ ಕದಿಯಬಲ್ಲವನೇ ಕೃಷ್ಣ! ಕೃಷ್ಣನೆಂದರೆ ಶುದ್ಧ ಆಕರ್ಷಣೆ. ಅತ್ಯಂತ ಮೇಧಾವಿ ಮತ್ತು ಜ್ಞಾನಿಯಾದವನ್ನನ್ನು ಆಕರ್ಷಿಸುವ ಸಾಮಥ್ರ್ಯವಿರುವುದು ಕೃಷ್ಣನಿಗೆ ಮಾತ್ರ. ಅತ್ಯಂತ ವಿರಕ್ತ ಹಾಗೂ ನಿರ್ಲಿಪ್ತ ಸಾಧು-ಸನ್ಯಾಸಿಗಳನ್ನು ಆಕರ್ಷಿಸಬಲ್ಲವನು ಕೃಷ್ಣ. ಜ್ಞಾನ ಹಾಗೂ ವಿವೇಕದಲ್ಲಿ (ಬೆಣ್ಣೆಯಂತೆ) ಪಕ್ವವಾಗಿರುವವನೇ ಪ್ರಾಜ್ಞ ಸನ್ಯಾಸಿ. ಆದರೆ ಅಂತಹ ಸನ್ಯಾಸಿಯ ಮನಸ್ಸು-ಹೃದಯಗಳನ್ನೂ ಕದಿಯಬಲ್ಲವನೆಂದರೆ ಕೃಷ್ಣ. ಆದ್ದರಿಂದಲೇ ಅವನ್ನನ್ನು ಮಾಕನ್ ಚೋರ್ ಎನ್ನುವುದು. ಅತ್ಯಂತ ವಿರಕ್ತ ಹಾಗೂ ಜ್ಞಾನಿಯ ಹೃದಯವನ್ನು ಕರಗಿಸುವ, ಮನಸ್ಸನ್ನು ಕದಡಬಲ್ಲವನು ಕೃಷ್ಣನೊಬ್ಬನೇ. ಇದನ್ನು ಹೇಗೆ ಮಾಡುವನು? ಪ್ರೀತಿಯಿಂದ.

ಸರಿ, ನೀವೆಲ್ಲರೂ ‘ಕ’ (ಕೃಷ್ಣನ ಹೆಸರಿನ ಮೊದಲ ಅಕ್ಷರ) ವನ್ನು ‘ಅ’ ‘ಅ’ ಸ್ವರ ಪ್ರಯೋಗಿಸದೆ ಉಚ್ಚರಿಸಬಲ್ಲಿರಾ? ಒಮ್ಮೆ ಪ್ರಯತ್ನಿಸಿ. (ಸಭಿಕರು ಪ್ರಯತ್ನಿಸಿ ಬಿಟ್ಟುಬಿಡುವರು). ನೋಡಿ, ನೀವೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲವಲ್ಲವೇ?

ಆದ್ದರಿಂದ ‘ಕ’ ಶಬ್ದವನ್ನು ಉಚ್ಚರಿಸಲು ಯತ್ನಿಸಿದಾಗ ಆ ಶಬ್ದದ ಮೂಲಕ್ಕೆ ಸೆಳೆದೊಯ್ಯುತ್ತದೆ, ಅದೇ ಬ್ರಹ್ಮನ್. ಅದು ಧ್ವನಿ ಹಾಗೂ ಶಬ್ದ ಪ್ರತಿಫಲಿಸುವ ಆಕಾಶವಾಗಿದೆ, ಏಕೆಂದರೆ ಬ್ರಹ್ಮನ್ ಅಥವಾ ಆತ್ಮ ತತ್ವವನ್ನು ಧ್ವನಿ ಅಥವಾ ಶಬ್ದಗಳಿಂದ ತಲುಪಲು ಸಾಧ್ಯವಿಲ್ಲ. ಬ್ರಹ್ಮನ್ ಆಕಾಶತತ್ವದಲ್ಲಿ ಹರಟುವ ಮನಸ್ಸು ವಿಶ್ರಮಿಸುವುದು, ಧ್ವನಿ ಅಥವಾ ಶಬ್ದವಿರದು, ಆಳವಾದ ಪ್ರಶಾಂತತೆಯ ಅನುಭವವಾಗುವುದು. ಆ ಸ್ಥಿತಿಯಲ್ಲಿ ಗಾಢವಾದ ಧ್ಯಾನಕ್ಕಿಳಿದು ಆತ್ಮನೊಂದಿಗೆ ಒಂದಾಗುವಿರಿ.

ಆದ್ದರಿಂದ ‘ಅ’ ಕಾರವನ್ನುಚ್ಚರಿಸದೇ ‘ಕ’ ಶಬ್ದವನ್ನು ಉಚ್ಚರಿಸಲು ಯತ್ನಿಸುವುದು ಧ್ಯಾನವೇ ಸರಿ. ನೀವೆಲ್ಲರೂ ಇದನ್ನೊಮ್ಮೆ ಪ್ರಯತ್ನಿಸಬೇಕು, ಮಲಗುವ ಮುನ್ನ ಅಥವಾ ಬೆಳಿಗ್ಗೆ ಎದ್ದ ನಂತರ ಅಥವಾ ದಿನದ ಯಾವ ವೇಳೆಯಲ್ಲಾದರೂ ಸರಿ ಇದನ್ನು ಪ್ರಯತ್ನಿಸಿ ಹಾಗೂ ನಿಮ್ಮ ಮನಸ್ಸು -ಬುದ್ಧಿಗಳಲ್ಲಿನ ಸಂವೇದನೆಯನ್ನು ಗಮನಿಸಿ. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಂಭೀಭೂತವಾಗಿ, ಗಾಢ ಮೌನ ಆವರಿಸುವುದು. ಇಂತಹ ಸ್ಥಿತಿಯಲ್ಲಿ ವಿಸ್ಮಯದಿಂದ ಆಳಕ್ಕಿಳಿಯುತ್ತೀರ, ಸುಂದರವಾದ ಮುಗ್ಧತೆ ನಿಮ್ಮೊಳಗೆ ಉದಯಿಸುವುದು. ನೀವು ಚಿಕ್ಕವರಿದ್ದಾಗ ಮುಗ್ಧತೆಯಿಂದ ಕೇಳುತ್ತಿದ್ದ ಎಲ್ಲ ಪದಗಳನ್ನು ಪುನರುಚ್ಚರಿಸುತ್ತಿದ್ದಿರಿ. ಆ ಮುಗ್ಧತೆಯ ಸ್ಥಿತಿಗೆ ನೀವು ಮರಳಬೇಕು. ಅದು ಎಲ್ಲ ಶಬ್ದ ಮತ್ತು ಧ್ವನಿಗಳು ಹುಟ್ಟುವ ಮೂಲಕ್ಕೆ ಕರೆದೊಯ್ಯುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ:

ಪೂರ್ವಾಭ್ಯಾಸೇನ ತೇನೈವ ಹ್ರಿಯತೆ ಹ್ಯವಶೊ-ಅಪಿ ಸಃ |
ಜಿಜ್ಞಾಸುರ್-ಅಪಿ ಯೋಗಸ್ಯ ಶಬ್ದ-ಬ್ರಹ್ಮಾತಿವರ್ತತೆ || (೬.೪೪)


‘ಯೋಗದ ಬಗ್ಗೆ ಜಿಜ್ಞಾಸೆಯಿರುವ ಜ್ಞಾನಿಯೂ ಕೂಡ ಕಡೆಯಲ್ಲಿ ಶಬ್ದಾತೀತವಾದ ಮೂಲವನ್ನು (ಬ್ರಹ್ಮವನ್ನು) ತಲುಪುತ್ತಾನೆ.’
ಇಂದು ವಿಶ್ವದಾದ್ಯಂತ ಜನರೆಲ್ಲರು ಸಂಪರ್ಕ ಹೊಂದಿದ್ದು, ಸಾವಿರಾರು ಆರ್ಟ್ ಆಫ್ ಲಿವಿಂಗ್ ಕೇಂದ್ರಗಳು ಜನ್ಮಾಷ್ಟಮಿಯನ್ನು ಆಚರಿಸುತ್ತಿರುವುದನ್ನು ಎಲ್ಲರು ವೀಕ್ಷಿಸುತ್ತಿದ್ದಾರೆ. ಆದ್ದರಿಂದ ನಾವು ವಿಶ್ವದೆಲ್ಲೆಡೆಯಿಂದ ನೆರೆದಿರುವುದು ಜನ್ಮಾಷ್ಟಮಿಯನ್ನು (ಆನಂದದ ಉತ್ಸವ) ಆಚರಿಸಲು. ಇವತ್ತು ಸಮಾಜದಲ್ಲಿ ಅಂತಹ ಆನಂದದ ಅಲೆಯನ್ನು ತರಬೇಕು. ಇದು ನಮ್ಮೆಲ್ಲರ ಕರ್ತವ್ಯ.

ಪ್ರ: ಗುರೂಜೀ, ಶ್ರೀಕೃಷ್ಣನು ಕಾಲದ ಪರೀಕ್ಷೆಯಲ್ಲಿ ಹೇಗೆ ಯಶಸ್ವಿಯಾಗಿದ್ದಾನೆ (ಶಾಶ್ವತವಾಗಿದ್ದಾನೆ)? ಇಷ್ಟು ಕಾಲ ಕಳೆದ್ದಿದ್ದರೂ ಹೇಗೆ ಕೃಷ್ಣನು ಜನರ ಹೃದಯದಲ್ಲಿ ನಿವಾಸನಾಗಿದ್ದಾನೆ?


ಶ್ರೀಶ್ರೀ:
ಹೌದು, ಆ ರಹಸ್ಯವನ್ನು ನಿಮ್ಮ ಹೃದಯದಲ್ಲೇ ಪರಿಹರಿಸಿರಿ. ನೀವೇ ಅನ್ವೇಷಿಸಬೇಕು. ಕಡೆಯಲ್ಲಿ ಸತ್ಯಕ್ಕೇ ಸದಾ ಗೆಲುವು. ಸತ್ಯವು ಸನಾತನವಾದುದು. ಅದನ್ನೆಂದಿಗೂ ನಾಶಪಡಿಸಲಾಗದು. ಆದ್ದರಿಂದಲೇ ೫೧೦೦ ವರ್ಷಗಳು ಉರುಳಿದರೂ ಶ್ರೀಕೃಷ್ಣನು ಜೀವಂತವಾಗಿರುವುದು. ಇದೇಕೆ ಹೀಗೆಂದರೆ ಆತನು ಯಾವುದೇ ಒಂದು ನಿರ್ದಿಷ್ಟ ಸ್ಥಳ ಅಥವಾ ಕಾಲಕ್ಕೆ ಸೀಮಿತವಾಗಿಲ್ಲ.

ಕೃಷ್ಣನು ಸನಾತನನು. ಅನಾದಿ ಮತ್ತು ಅನಂತವಾದುದನ್ನು ಸನಾತನ ಎನ್ನುವರು. ಇದರ ಅರ್ಥ ಸದಾ ಅಸ್ತಿತ್ವದಲ್ಲಿರುವುದು ಮತ್ತು ಸದಾ ಉಪಸ್ಥಿತವಾಗಿರುವುದೆಂದು. ಎಲ್ಲಿಂದ ಆರಂಭವಾಯಿತೆಂದು ಯಾರಿಗೂ ತಿಳಿಯದು. ಅಂತಹ ಜ್ಞಾನವನ್ನು ಕೃಷ್ಣನು ನೀಡಿದ್ದಾನೆ.

ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ – ‘ನಾನು ಮತ್ತು ನೀನು ಅನೇಕ ಜನ್ಮಗಳನ್ನು ಪಡೆದಿದ್ದೇವೆ, ಆದರೆ ಅವೆಲ್ಲವೂ ನನಗೆ ಸ್ಮರಣೆಯಲ್ಲಿದೆ, ನಿನಗಿಲ್ಲ.  ನಾವಿಬ್ಬರೂ ಅನಾದಿ - ಎಷ್ಟು ಬಾರಿ ಜನ್ಮ ತಳೆದಿದ್ದೇವೆಂದು ಯಾರಿಗೂ ತಿಳಿಯದು . ನಾವು ಈ ಭೂಮಿಗೆ ಬರುತ್ತೇವೆ, ತೆರಳುತ್ತೇವೆ, ಪುನಃ ಬರುತ್ತೇವೆ.’

ಪ್ರ: ಗುರೂಜೀ, ಭಗವದ್ಗೀತೆಯ ೧೪ನೇ ಅಧ್ಯಾಯ ೨೭ನೇ ಶ್ಲೋಕದಲ್ಲಿ ಶ್ರೀಕೃಷ್ಣನು ಪರಬ್ರಹ್ಮದ ಕಾರಣಕರ್ತನೂ ತಾನೇ ಮತ್ತು ಅದರ ಅಸ್ತಿತ್ವವೂ ತಾನೇ ಎಂದು ಹೇಳುತ್ತಾನೆ. ಇದು ಅನೇಕ ಪಂಡಿತರಲ್ಲಿ ಗೊಂದಲವನ್ನುಂಟು ಮಾಡಿದೆ. ಇದನ್ನು ಓದಿದಾಗ ಆದಿ ಶಂಕರಾಚಾರ್ಯರೂ ಗೊಂದಲಗೊಂಡಿದ್ದರು. ದಯವಿಟ್ಟು ಇದರ ಬಗ್ಗೆ ತಿಳಿಸುವಿರಾ?

ಶ್ರೀಶ್ರೀ:
ಕೃಷ್ಣನು ಮೂರು ರೀತಿಯಲ್ಲಿ ಜ್ಞಾನವನ್ನು ನೀಡಿದನು: ಪ್ರಥಮ ಪುರುಷ, ಮಧ್ಯಮ ಪುರುಷ ಮತ್ತು ಉತ್ತಮ ಪುರುಷ (ನಿರ್ಲಿಪ್ತ ಜ್ಞಾನಿ ಅಥವಾ ಸ್ವಯಂ). ಆದ್ದರಿಂದ ಕೃಷ್ಣನು ಕೆಲವೊಮ್ಮೆ ದೇವರನ್ನು ‘ಅವನನ್ನು’ ಅಥವಾ ‘ಅದು’ ಅಥವಾ ‘ಅವನು’ ಇನ್ನು ಕೆಲವೊಮ್ಮೆ, ‘ನೀನು’ ಅಥವಾ ‘ನಿನ್ನ’ ಎಂದು ಸಂಬೋಧಿಸಿದ್ದಾನೆ; ಆತ್ಮವನ್ನು ಕುರಿತು ದೇವರ ಬಗ್ಗೆ ಮಾತನಾಡುವಾಗ, ‘ನಾನು’ ಅಥವಾ ‘ನನಗೆ’ ಎಂದು ಸಂಬೋಧಿಸಿದ್ದಾನೆ.

ಆದ್ದರಿಂದಲೇ ನಾವು ‘ತತ್ ತ್ವಂ ಅಸಿ’ (ಅದು ನೀನೇ) ಮತ್ತು ‘ಸರ್ವಂ ಖಲ್ವಿದಂ ಬ್ರಹ್ಮಾಸಿ’ (ಎಲ್ಲವೂ ಬ್ರಹ್ಮವೇ’) ಎನ್ನುತ್ತೇವೆ. ‘ತತ್ ತ್ವಂ ಅಸಿ’ ಎಂದರೆ ಅದು ನೀನೇ, ಅದು (ಆತ್ಮ ಅಥವಾ ಚೇತನ) ನಿನ್ನೊಳಗೇ ಇದೆ.  ಇನ್ನು ‘ಅಹಂ ಬ್ರಹ್ಮಾಸ್ಮಿ’ ಎಂದೂ ಹೇಳುತ್ತೇವೆ; ಅದರ ಅರ್ಥ ‘ನಾನು ಬ್ರಹ್ಮ’. ಹೀಗೆ ಕೆಲವು ಬಾರಿ ಕೃಷ್ಣನು ‘ಬನ್ನಿ, ನನ್ನನ್ನು ಆಶ್ರಯಿಸಿ’ ಎಂದರೆ, ಇನ್ನು ಕೆಲವು ಬಾರಿ ‘ದೇವರನ್ನು ಆಶ್ರಯಿಸಿ’ ಎನ್ನುತ್ತಾನೆ. ಹೇಳಿರುವ ರೀತಿಯಲ್ಲಿ ಎರಡೂ ಸರಿಯಾಗಿದೆ. ಒಬ್ಬ ವ್ಯಕ್ತಿಯನ್ನು ಆತನಿರುವ ಪಥದಿಂದ ಮುಂದಕ್ಕೆ ಕರೆದುಕೊಂಡು ಹೋಗುವುದು ಗುರುವಿನ ಕರ್ತವ್ಯ. ಕೃಷ್ಣನು ತನ್ನ ವಿಶ್ವರೂಪ ದರ್ಶನವನ್ನು ನೀಡುವ ಮೊದಲು ಅರ್ಜುನನಿಗೆ ಹೀಗೆ ಹೇಳುತ್ತಾನೆ:

ಈಶ್ವರಃ ಸರ್ವ ಭೂತಾನಾಂ ಹೃದೇ-ದೇಶೇ ಅರ್ಜುನ ತಿಷ್ಠತಿ  |
ಭ್ರಾಮಯನ್ ಸರ್ವ-ಭೂತಾನಿ ಯಂತ್ರಾರೂಢಾನಿ ಮಾಯಯಾ  || (೧೮.೬೧)


ಎಲ್ಲರ ಹೃದಯದಲ್ಲೂ ಭಗವಂತನು ವಾಸವಾಗಿದ್ದಾನೆಂದು ಹೇಳುತ್ತಾನೆ. ನಂತರ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿ ತನ್ನೊಳಗೇ ಸರ್ವವೂ ಆವಾಸವಾಗಿದೆಯೆಂದು ತೋರಿಸುತ್ತಾನೆ, ನಂತರ ‘ಎಲ್ಲವನ್ನೂ ಸಮರ್ಪಿಸಿ ನನ್ನನ್ನೇ ಆಶ್ರಯಿಸು’ ಎನ್ನುತ್ತಾನೆ.

ಗೀತೆಯನ್ನು ಸಾವಿರಾರು ಬಗೆಯಲ್ಲಿ ವಿಶ್ಲೇಷಿಸಿ ಹೇಳಿರುವುದನ್ನು, ಟೀಕೆ ಎನ್ನುತ್ತಾರೆ. ಆದರೆ ಮುಖ್ಯವಾಗಿ ತಿಳಿಯಬೇಕಾಗಿರುವುದು, ಸತ್ಯವು ಒಂದೇ, ಆದರೆ ಅದನ್ನು ವಿವಿಧ ರೀತಿಯಲ್ಲಿ ಕಾಲಕ್ಕೆ ತಕ್ಕಂತೆ (ಆ ಕಾಲದ ಮಾನವನ ಸ್ಥಿತಿ ಮತ್ತು ಅಗತ್ಯಕ್ಕೆ ತಕ್ಕಂತೆ) ವಿವರಿಸಿದ್ದಾರೆ. ಗೀತೆಯಲ್ಲಿ ಮೊದಲಿನಿಂದ ಕೊನೆಯವರೆಗೂ ವಿರೋಧಾರ್ಥಕವಾಗಿದೆ. ಸ್ವಯಂ ಅರ್ಜುನನೇ ಕೃಷ್ಣನ್ನನ್ನು ಕೇಳುತ್ತಾನೆ, ‘ಹೇ ದೇವ! ಕಷ್ಟಗಳಿಂದ  ಮುಕ್ತವಾಗಿರಲು ನಿಶ್ಚಿತ ಮಾರ್ಗ ಯಾವುದೆಂದು ತಿಳಿಸು.  ಅನೇಕ ಮಾರ್ಗಗಳನ್ನು ಕೇಳಿ ಗೊಂದಲ ಗೊಂಡಿದ್ದೇನೆ. ಒಮ್ಮೆ ಒಂದು ಮಾರ್ಗವನ್ನು ಸೂಚಿಸಿ, ಇನ್ನೊಮ್ಮೆ ಇನ್ನೊಂದನ್ನು ತಿಳಿಸಿರುವೆ.  ಈಗಾಗಲೇ ಗೊಂದಲದಲ್ಲಿದ್ದು, ಖಿನ್ನನಾಗಿದ್ದೇನೆ, ಇನ್ನೂ ನನ್ನನ್ನೇಕೆ ಗೊಂದಲಗೊಳಿಸುತ್ತಿರುವೆ?’ ನೋಡಿ, ಭಗವದ್ಗೀತೆಯು ದಿವ್ಯತೆಯ ಕಡೆಗೆ, ಆತ್ಮನೆಡೆಗೆ ಹಂತ-ಹಂತವಾಗಿ ಏರಲು ಅನನ್ಯವಾದ ಮಾರ್ಗವನ್ನು ತೋರಿಸಿರುವುದು. ಗೀತೆಗೆ ಸಮನಾದ ಗ್ರಂಥವು ಬೇರೊಂದಿಲ್ಲ. ವಿರೋಧದ ನಂತರ ವಿರೋಧ, ಅದರ ಮೂಲಕ ಸತ್ಯದೆಡೆಗೆ ಕರೆದುಕೊಂಡು ಹೋಗುವಂತಹ ಗ್ರಂಥ- ಗೀತೆಯ ವಿನಾ ಬೇರೊಂದಿಲ್ಲ.

ಪ್ರ: ಗುರೂಜೀ, ರಾಮಾಯಣದಲ್ಲಿ ರಾವಣನು ಸೀತಾದೇವಿಯನ್ನು ಅಪಹರಿಸಿದನು ಮತ್ತು ಮಹಾಭಾರತದಲ್ಲಿ ರುಕ್ಮಿಣಿಯು ಶಿಶುಪಾಲನ್ನನ್ನು ವಿವಾಹವಾಗಲು ಒತ್ತಡವಿದ್ದಾಗ, ಶ್ರೀಕೃಷ್ಣನು ರುಕ್ಮಿಣಿಯನ್ನು ಅಪಹರಿಸಿದನು. ಭಗವಂತನು ಶ್ರೀಕೃಷ್ಣನ ಅವತಾರವೆತ್ತಿದಾಗ, ರಾವಣನು ಶಿಶುಪಾಲನಾಗಿ, ಸೀತಾದೇವಿಯು ರುಕ್ಮಿಣೀದೇವಿಯಾಗಿ ಅವತಾರವೆತ್ತಿದರು. ಆದ್ದರಿಂದ ಇಲ್ಲಿಯೂ ಕರ್ಮ ಬಂಧನವಿರುವುದೇ?

ಶ್ರೀಶ್ರೀ: ‘ಗಹನೋ ಕರ್ಮಣೋ ಗತಿಃ’
(ಕರ್ಮದ ಆಳವನ್ನು ಅರಿಯಲಾಗದು) ಎನ್ನುತ್ತಾರೆ. ಕರ್ಮದ ಗತಿ ಮತ್ತು ರೀತಿ ರಹಸ್ಯಮಯವಾದುದು ಮತ್ತು ಅದರ ಆಳವನ್ನು ಅರಿಯಲಾಗದು. ಯಾರೂ ಅರಿಯಲಾರರು.

ಪ್ರ: ಗುರೂಜೀ, ‘ಇಂದು ಬಹಳ ಮಂದಿ ದುಃಶಾಸನರು ಮತ್ತು ಶಕುನಿಯರಿದ್ದಾರೆ. ಸಮಾಜದಲ್ಲಿ ಅವರಿಗಿರುವ ಯೋಗ್ಯವಾದ ಸ್ಥಳವನ್ನು ತೋರಿಸಬೇಕು’ ಎಂದು ಟ್ವೀಟ್ ಮಾಡಿದ್ದೀರ. ಇವತ್ತಿನ ದುಃಶಾಸನರು ಮತ್ತು ಶಕುನಿಯರು ಯಾರು ಮತ್ತು ಅವರ ಅರ್ಹ ಸ್ಥಳ ಯಾವುದು?

ಶ್ರೀಶ್ರೀ:
ಅದನ್ನು ನೀವೇ ಊಹಿಸಲು ಬಿಡುವೆನು. ಅವರ ಅರ್ಹ ಸ್ಥಳ ಕೃಷ್ಣನ ಜನ್ಮಸ್ಥಳ (ಸೆರೆಮನೆ). ಗೊತ್ತಾಯಿತೇ? ಎಲ್ಲ ದುಃಶಾಸನ ಮತ್ತು ಶಕುನಿಯರು ಸೆರೆಮನೆಗೆ ಹೋಗಬೇಕು. ಅಲ್ಲವೇ?

ಮಂಗಳವಾರ, ಆಗಸ್ಟ್ 27, 2013

ಹರ್ಷ ಚಿತ್ತದಲ್ಲಿ ಸಹಜತೆಯಿದೆ

ಆಗಸ್ಟ್ ೨೭, ೨೦೧೩
ಬೆಂಗಳೂರು, ಭಾರತ

ಪ್ರ: ಗುರುದೇವ, ಬೌದ್ಧ ಮತೀಯರು ದೇವರನ್ನು ನಂಬುವುದಿಲ್ಲ ಎನ್ನುತ್ತಾರೆ. ಭಗವಾನ್ ಬುದ್ಧನೂ ನಾವು ಮೂರ್ತಿ ಪೂಜೆ ಮಾಡಬಾರದು ಎಂದು ಹೇಳಿದ್ದರು. ಈಗ ಅವರೂ ಒಬ್ಬ ಪ್ರಬುದ್ಧ ಜೀವಿ, ಅವರು ಯಾವ ಅರ್ಥದಿಂದ ಹಾಗೆ ನುಡಿದರು?

ಶ್ರೀ ಶ್ರೀ:
ಭಗವಾನ್ ಬುದ್ಧ ಎಂದೂ ದೇವರ ಬಗ್ಗೆ ಮಾತನಾಡಲಿಲ್ಲ. ಅವರು ದೇವರ ಕುರಿತು ಸಂವಾದಗಳಿಗೆ ಎಂದೂ ಆಸ್ಪದ ನೀಡಲಿಲ್ಲ. ಅವರು ಹೇಳಿದ್ದೇನೆಂದರೆ-ಮೊದಲನೆಯದಾಗಿ ದುಃಖವಿರುವುದನ್ನು ಮನಗಾಣಿ. ಜನರು ದುಃಖವನ್ನು ನಿರಾಕರಿಸುತ್ತಾ ಇರುತ್ತರೆ, ಹಲವಾರು ಜನ ಅದನ್ನು ಗುರುತಿಸುವುದೂ ಇಲ್ಲ. ಬಹಳ ಸಲ ನೀವು ಅಸ್ವಸ್ಥ ವ್ಯಕ್ತಿಯನ್ನು ಮಾತನಾಡಿಸಿದಾಗ ಅವನು ಹೇಳುವುದು "ನಾನು ಆರಾಮವಾಗಿದ್ದೇನೆ ಹಾಗೂ ಆರೋಗ್ಯದಿಂದಿದ್ದೇನೆ". ಅಹಂ ಹೆಚ್ಚಿದ್ದಷ್ಟು ಆ ವ್ಯಕ್ತಿಯು ಜಾಸ್ತಿ ನಿರಾಕರಿಸುತ್ತಾನೆ.

ಬಹಳ ಸಲ ಜನರು ಒಳಗಿನಿಂದ ದುಃಖಿಗಳಾಗಿರುತ್ತಾರೆ, ಆದರೆ ಅವರು ಲವಲವಿಕೆಯ ಮುಖವಾಡ ಧರಿಸುತ್ತಾರೆ ಅಥವಾ ಬಾಹ್ಯವಾಗಿ ಆತ್ಮ ವಿಶ್ವಾಸದ ಹಾಗೂ ಆಳ್ವಿಕೆಯ ಸ್ವಭಾವದವರಂತೆ ನಡೆದುಕೊಳ್ಳುತ್ತಾರೆ. ಅವರು ಎಲ್ಲವೂ ಸರಿಯಾಗಿರುವಂತೆ ನಟಿಸುತ್ತಲೇ ಇರುತ್ತಾರೆ, ಆದರೂ ದುಃಖ ಅವರ ಮುಖದಿಂದ ತೊಟ್ಟಿಕ್ಕುತ್ತಿರುವುದನ್ನು ನೀವು ನೋಡಬಹುದು. ಅವರ ಶರೀರದ ಪ್ರತಿ ಅಂಗವು ಕ್ರೋಧ, ಕಹಿತನ, ದ್ವೇಷ ಹಾಗೂ ದುಃಖವನ್ನು ಪ್ರತಿಬಿಂಬಿಸುತ್ತದೆ. ಭಗವಾನ್ ಬುದ್ಧ ಹೇಳಿರುವುದು ಇದನ್ನೇ- ದುಃಖ ಇದೆ ಎಂದು. ಅದನ್ನು ಗುರುತ್ತಿಸಿ, ಮತ್ತು ಆಗ ಅದಕ್ಕೆ ಪರಿಹಾರೋಪಾಯಗಳಿವೆ. ಯಾರಾದರೂ ದುಃಖಿಯಾಗಿರುವುದು ನನ್ನ ಸ್ವಭಾವ ಎಂದು ಹೇಳಿದರೆ, ಅದರ ಬಗ್ಗೆ ಯಾರಿಗೂ ಏನು ಮಾಡಲೂ ಸಾಧ್ಯವಿಲ್ಲ, ಸಾಕ್ಷಾತ ಆ ಭಗವಂತನಿಂದಲೂ ಸಾಧ್ಯವಿಲ್ಲ. ಹಾಗಾಗಿ ದುಃಖವು ನಮ್ಮ ಸ್ವಭಾವವಲ್ಲ, ಅದು ಸಂಸ್ಕಾರದಿಂದಾಗಿ ಅಥವ ಕರ್ಮದಿಂದಾಗಿ ಬರುವುದು. ಹಾಗೂ ಇದನ್ನು ಬೇರೆ ಸಂಸ್ಕಾರಗಳಿಂದ ತೆಗೆಯಬಹುದು. ಇದಕ್ಕೆ ಒಂದು ಪರಿಹಾರವೆಂದರೆ ಪ್ರತ್ಯಾಹಾರ(ಅಷ್ಟಾಂಗ ಯೋಗಗಳಲ್ಲಿ ಒಂದು, ಪ್ರತ್ಯಾಹಾರವೆಂದರೆ ಇಂದ್ರಿಯ ನಿಗ್ರಹ ಹಾಗೂ ಅವುಗಳ ಅಂತರ್ಮುಖತೆ). ಇದಕ್ಕೆ ಇನ್ನೊಂದು ಪರಿಹಾರವೆಂದರೆ ಧ್ಯಾನ. ಹಾಗಾಗಿ ಧ್ಯಾನ, ಪ್ರಾಣಾಯಾಮ ಮತ್ತು ಸತ್ಸಂಗಗಳ ಮೂಲಕ ನಾವು ವ್ಯಸನಗಳಿಂದ(ದುಃಖ) ಮುಕ್ತರಾಗಬಹುದು. ನಮ್ಮ ಸ್ವಭಾವ ಎಂಬುದು ಸಂತೋಷ ಹಾಗೂ ಪರಮಾನಂದ ಎಂದು ಆಗ ನಾವು ಅರಿತುಕೊಳ್ಳುವುದು. ಬೆಳಕು ಕತ್ತಲನ್ನು ನಿರ್ಮೂಲನಗೊಳಿಸಿದಂತೆ ನಮ್ಮ ಆತ್ಮ ಶಕ್ತಿಯು(ಜಾಗೃತ ಚೈತನ್ಯ) ದುಃಖವನ್ನು ನಿರ್ಮೂಲನಗೊಳಿಸುತ್ತದೆ. ಸಾಧನೆಯ ಪಥದಲ್ಲಿ, ಎಲ್ಲಾ ಋಣಾತ್ಮಕತೆ ಹಾಗೂ ವಿಕಾರಗಳಾಗಿರುವ ಭಯ, ಸಿಟ್ಟು ಇತ್ಯಾದಿ ಕುಸಿದು ಹೋಗುತ್ತವೆ. ಸಾಧನೆಯ ಗುರಿಯೆಂದರೆ ನಮ್ಮ ಮೂಲ ಸ್ವಭಾವದ ಅಂಗವೇ ಆಗಿರುವ ಆ ಅವರ್ಣನೀಯ ಪರಮಾನಂದದಲ್ಲಿ ಲೀನರಾಗುವುದು.

ಭಗವಾನ್ ಬುದ್ಧ ಉಪನಿಷತ್ತುಗಳಲ್ಲಿರುವ ವಿಷಯಗಳನ್ನೇ ಹೇಳಿದ್ದರು. ಒಂದು ಶ್ಲೋಕ ಹೀಗಿದೆ:

ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತ ತ್ವಮನಸುಃ |
ಪರೇನ ನಕಂ ನಿಹಿತಂ ಗುಹ್ಯಂ ವಿಭ್ರಾತೇ ಯದ್ಯತಯೋ ವಿಷಂತಿ ||
(ಸನ್ಯಾಸ ಸೂಕ್ತ, ಮಹಾ ನಾರಾಯಣೋಪನಿಷತ್, ೪.೧೨)


ಅನ್ವಯಾರ್ಥ: ನಮ್ಮ ಕರ್ಮಗಳಿಂದಾಗಲಿ, ಅಥವಾ ಉತ್ತಮ ಸಂತಾನದಿಂದಾಗಲಿ, ಅಥವಾ ಧನ ಸಂಪತ್ತಿನಿಂದಾಗಲಿ ನಮಗೆ ಪರಮಾತ್ಮನನ್ನು ಹೊಂದುವುದು ಸಾಧ್ಯವಿಲ್ಲ. ಕೇವಲ ತ್ಯಾಗ ಅಥವಾ ವಿರಕ್ತಿಯಿಂದ ನಮಗೆ ಅಮರತ್ವವನ್ನು ಹೊಂದಲು ಸಾಧ್ಯ. ಭಗವಾನ್ ಬುದ್ಧ ಹೇಳಿರುವುದೂ ಇದನ್ನೇ. ನೀವು ಉಪನಿಷತ್ತುಗಳನ್ನು ಗಮನಿಸಿ ಆನಂತರ ಭಗವಾನ್ ಬುದ್ಧ ಹೇಳಿರುವುದನ್ನು ಓದಿದರೆ, ಅವೆರಡೂ ಒಂದೇ ಎಂದು ನೀವು ತಿಳಿದುಕೊಳ್ಳುತ್ತೀರಿ. ಅವುಗಳಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ.

ಆದ್ದರಿಂದಲೇ ಶ್ರೀ ಆದಿ ಶಂಕರಾಚಾರ್ಯರನ್ನು ’ಪ್ರಚ್ಚನ್ನ ಬೌದ್ಧ’(ಅರ್ಥ: ಸುಪ್ತ ಅಥವ ಅಪ್ರಕಟಿತ ಬುದ್ಧ) ಯಾಕೆಂದರೆ, ಅವರು ಏನೇ ಹೇಳಿದ್ದರೂ ಅದು ಬೌದ್ಧ ಗ್ರಂಥಗಳಲ್ಲಿ ಹೇಳಿರುವುದಕ್ಕೆ ಅಷ್ಟೊಂದು ಹೋಲುತ್ತದೆ. ಹಾಗಾಗಿ ಸನಾತನ ಧರ್ಮ(ಹಿಂದೂ ಧರ್ಮದ ಇನ್ನೊಂದು ಹೆಸರು) ಹಾಗೂ ಬೌದ್ಧ ಧರ್ಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ತತ್ತ್ವಗಳು ಸುಮಾರಾಗಿ ಒಂದೇ ಆಗಿವೆ. ಅವೆರಡೂ ಚಾಚೂ ತಪ್ಪದಷ್ಟು ಒಂದೇ ಆಗಿವೆ ಎಂಉ ನಾನು ಹೇಳುವುದಿಲ್ಲ, ಆದರೆ ಅವು ತತ್ತ್ವತಃ ಬಹಳ ಸಮೀಪವಾಗಿವೆ. ಬೌದ್ಧ ಧರ್ಮೌ ಶೂನ್ಯವಾದವನ್ನು ಪ್ರತಿಪಾದಿಸುತ್ತದೆ("ಎಲ್ಲವೂ ಏನೂ ಅಲ್ಲ" ಎಂಬ ಅರಿವು; ಸಂಸ್ಕೃತದಲ್ಲಿ ಶೂನ್ಯ ಎಂದರೆ ಸೊನ್ನೆ ಅಥವಾ ಇಲ್ಲದಿರುವುದು), ಹಾಗೂ ವೇದಾಂತವು ಪೂರ್ಣವಾದವನ್ನು(ಎಲ್ಲವೂ ಒಂದು ಮತ್ತು ಸಂಪೂರ್ಣ ಎಂಬ ಪ್ರಧಾನ ನಂಬಿಕೆ) ಪ್ರತಿಪಾದಿಸುತ್ತದೆ. ಬೌದ್ಧ ಧರ್ಮದಲ್ಲಿ ಮೊದಲ ಮುಖ್ಯ ಹೆಜ್ಜೆ ಎಂದರೆ ದುಃಖದ ಅರಿವು, ಅಂತೆಯೇ ವೇದಾಂತದಲ್ಲಿ ಹೇಳುವುದೇನೆಂದರೆ ಯಾವುದೇ ದುಃಖವಿಲ್ಲ ಎಂದು. ಅವರು ಹೇಳುವುದು - "ಎಚ್ಚೆತ್ತು ನೋಡು! ನೀನು ಸಂಪೂರ್ಣ ಆನಂದದಿಂದ ತುಂಬಿರುವೆ(ಆತ್ಮವು ಪರಮಾನಂದ)".

ಹೀಗೆ, ಬೌದ್ಧ ಮತದಲ್ಲಿ ಅದೃಶ್ಯವಾದಾಗ ಆನಂದವನ್ನು ಕಾಣಲಾಗುತ್ತದೆ ಹಾಗೂ ವೇದಾಂತದಲ್ಲಿ (ಆತ್ಮದ) ಆನಂದವನ್ನು ಮನಗಂಡಾಗ, ದುಃಖವು ತಾನಾಗಿಯೇ ಕಾಣೆಯಾಗುತ್ತದೆ. ಹಾಗೆ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ, ಇವು ಎರಡು ವಿವಿಧ ದೃಷ್ಟಿಕೋನಗಳು. ಆದರೆ ಗುರಿಯು ಒಂದೇ ಆಗಿದೆ. ವೇದಾಂತದಲ್ಲಿಯೂ, ಮೂರ್ತಿ ಪೂಜೆಯನ್ನು ಅಗತ್ಯವಾಗಿ ಮಾಡಲೇಬೇಕು ಎಂದು ಹೇಳಿಲ್ಲ. ಆತ್ಮ ದೇವತೆಯನ್ನು(ಶರೀರ ಎಂಬ ದೇವಾಲಾದಲ್ಲಿ ವಾಸವಾಗಿರುವ ಆತ್ಮ ಎಂಬ ಭಗವಂತ ) ಆರಾಧಿಸುವುದು ಅತ್ಯುನ್ನತ ಬಗೆಯ ಆರಾಧನೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಪ್ರಾರಂಭಿಕವಾಗಿ, ಆರಾಧನೆಯ ಆ ಮಟ್ಟವನ್ನು ತಲುಪುವುದಕ್ಕೆ ಯುಕ್ತವಾದ ಪರಿಸರ ಹಾಗೂ ವಾತಾವರಣ ಅಗತ್ಯ. ಇದಕ್ಕಾಗಿಯೇ ಪೂಜೆ ಇರುವುದು. ಆತ್ಯಂತಿಕವಾಗಿ/ಮೂಲಭೂತವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನೀವು ಅರಿಯುವುದೇನೆಂದರೆ ಎಲ್ಲವೂ ನಿಮ್ಮಾತ್ಮನದೇ ವಿಸ್ತಾರವಾಗಿದೆ, ಎಲ್ಲವೂ ಆ ಒಂದು ಆತ್ಮನ ವ್ಯಕ್ತರೂಪವಾಗಿ ಕಂಡುಬರುತ್ತದೆ. ಈ ಜಗತ್ತು ಹಾಗೂ ಮರಗಳಲ್ಲಿ, ವಿಗ್ರಹಗಳಲ್ಲಿ, ಭೂಮಿಯಲ್ಲಿ, ನೀರಿನಲ್ಲಿ, ಆಗಸದಲ್ಲಿ, ಎಲ್ಲೆಲ್ಲೂ ಇರುವ ಆತ್ಮನ(ಬ್ರಹ್ಮ) ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅರಿತಾಗ; ಆ ಹಂತದಲ್ಲಿ ಯಾವುದನ್ನಾದರೂ ಹಾಗೂ ಎಲ್ಲಾದರೂ ಆರಾಧನೆ ಮಾಡಬಹುದು.(ಅರ್ಥ: ಎಲ್ಲವೂ ಒಬ್ಬ ಪರಮಾತ್ಮನ ವ್ಯಕ್ತರೂಪವಾಗಿವೆ ಎಂದು ಮನಗಾಣುವ ಸ್ಥಿತಿಯನ್ನು ತಲುಪುವುದು).

ರುದ್ರ ಪೂಜೆಯಲ್ಲೂ ಇರುವ ಒಂದು ನಿಯಮ ಹೀಗೆ "ನ ರುದ್ರಂ ರುದ್ರಂ ಅರ್ಚಯತಿ" , ಅಂದರೆ ನೀವು ತಾನೂ ಭಗವಾನ್ ಶಿವನಾಗುವ ತನಕ(ನಿಮ್ಮ ಸ್ವಂತ ನೈಜ ದೈವೀ ಸ್ವಭಾವವನ್ನು ಅರಿಯುವ ತನಕ), ನೀವು ಭಗವಂತನನ್ನು ಆರಾಧಿಸುವಂತಿಲ್ಲ. ಹಾಗಾಗಿ ನೀವು ಮೊದಲು ಭಗವಂತನಾಗಬೇಕು ಆನಂತರ ಅವನನ್ನು ಆರಾಧಿಸಬೇಕು. ಇದರ ಅರ್ಥ ಎಂದರೆ ಆತ್ಮನಲ್ಲಿ ಸ್ಥಿರವಾಗಿರುವುದು. ಹಾಗಾಗಿ ಭಗವಂತನಾದ ಬಳಿಕ, ಆತ್ಮನಲ್ಲಿ ಸ್ಥಿತರಾಗಿರುವಾಗ ಭಗವಂತನನ್ನು ಆರಾಧಿಸಿ ಎಂದು ಹೇಳಲಾಗಿದೆ. ಪೂಜೆ ಎಂದರೆ ಕೇವಲ ಒಂದು ಆಟ, ಒಂದು ಲೀಲೆ, ಆರಾಧನೆಯ ಈ ಆಳವಾದ ಭಾವನೆಯನ್ನು ವ್ಯಕ್ತ ಪಡಿಸುವ ಒಂದು ರೀತಿ.

ಪ್ರ: ಗುರುದೇವ, ನೀವು ಹೇಳುವುದು ’ಸುಖಸ್ಯ ದುಃಖಸ್ಯ ನಕೋಪಿ ದಾತಾ’(ನಮ್ಮ ಮನಸ್ಸನ್ನು ಹೊರತು ಯಾರೂ ನಮಗೆ ಸುಖ ಅಥವಾ ದುಃಖವನ್ನು ಕೊಡುವುದಿಲ್ಲ). ಹಾಗಾದರೆ ನಮ್ಮ ಕ್ರಿಯೆಗಳಿಂದ ಬೇರೆಯವರ ಮೇಲೆ ಯಾವ ಪರಿಣಾಮವೂ ಇಲ್ಲವೇ?

ಶ್ರೀ ಶ್ರೀ:
ನಾವೇನು ಮಾಡುತ್ತೇವೋ ಅದು ಬೇರೆಯವರ ಮೇಲೆ ಅವರು ತೆಗೆದುಕೊಳ್ಳುವಷ್ಟು ಪರಿಣಾಮ ಮಾತ್ರ ಬೀರುತ್ತದೆ(ಅಂದರೆ ಅವರು ಅದನ್ನು ಸ್ವೀಕರಿಸುವಷ್ಟು ಅಥವಾ ಅದರ ಪ್ರಭಾವಕ್ಕೊಳಗಾಗಲು ಇಚ್ಚಿಸಿದಷ್ಟು ಮಾತ್ರ). ಅವರು ಅದನ್ನು ಸ್ವೀಕರಿಸದಿದ್ದರೆ, ಒಳ್ಳೆಯದಿರಲಿ ಕೆಟ್ಟದಿರಲಿ ಅದು ಅವರನ್ನು ಏನಾದರೂ ಪರಿಣಮಿಸುವುದೇ ಇಲ್ಲ. ಡಯೋಜೆನೆಸ್ ಎಂಬ ಒಬ್ಬ ಸನ್ಯಾಸಿ ಅಲೆಕ್ಸಾಂಡರನಿಂದ ಬಂಧಿಸಲ್ಪಟ್ಟಿದ್ದ. ಅಲೆಕ್ಸ್ಂಡರನು ಅವನನ್ನು ಸರಪಳಿಗಳಿಂದ ಸುತ್ತಿ ಕೈಬೇಡಿ ಕಟ್ಟಿದ್ದ.  ಅವನನ್ನು ಆಳನ್ನಾಗಿ ಮಾರುಕತ್ತೆಯಲ್ಲಿ ನಿಲ್ಲಿಸಿದಾಗ ಅವನೆಷ್ಟು ವಿಷ್ವಾಸ ಹಾಗೂ ಗಟ್ಟಿಯಾಗಿದ್ದನೆಂದರೆ ಅವನನ್ನು ಕಟ್ಟಿ ಹಾಕಿದವರು ಆಳುಗಳಂತೆ ತೋರುತ್ತಿದ್ದರು. ಡಯೋಜೆನಿಸ್ ಒಬ್ಬ ಆಳಿನಂತೆ ತೋರುತ್ತಲೇ ಇರಲಿಲ್ಲ. ಹಾಗಾಗಿ ನಾವೇನೇ ಮಾಡಿದರೂ ಅದನ್ನು ಜನರು ಸ್ವೀಕರಿಸಿದಷ್ಟೇ ಅದು ಅವರನ್ನು ಪ್ರಭಾವಿಸುತ್ತದೆ.

ನೀವು ಯಾರ ಮೇಲಾದರೂ ಬೈಗುಳನ್ನು ಹೇರಿದಾಗ ಅವರು ಅದನ್ನು ಕೇಳಿಸಿಕೊಳ್ಳದೇ ಅದರ ಬದಲು ನೀವು ಬೇರೆ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ ಎಂದು ಯೋಚಿಸಿದರೆ ಅಥವಾ ಈವು ಅವರನ್ನು ಹೊಗಳುತ್ತಿದ್ದೀರಿ ಎಂದು ಯೋಚಿಸಿದರೆ, ಆಗ ನಿಮ್ಮ ಮಾತುಗಳು ಅವನ ಮೇಲೆ ಎಷ್ಟು ಪ್ರಭಾವ ಬೀರಬಹುದು? ನೀವು ಏನೋ ಬಹಳ ವಿವೇಕಯುಕ್ತವಾದದ್ದನ್ನು ಮಾತನಾಡುತ್ತಿದ್ದೀರಿ ಎಂದು ಹೇಳೋಣ, ನೀವೇನೋ ಜ್ಞಾನಯುಕ್ತವಾದ ಸಲಹೆ ನೀಡುತ್ತಿರಬಹುದು ಆದರೆ ಆ ಇನ್ನೊಬ್ಬ ವ್ಯಕ್ತಿ ನಿಮ್ಮ ಮಾತನ್ನು ಸ್ವಲ್ಪವೂ ಕೇಳದೇ ಕಲ್ಲಿನಂತೆ ಕುಳಿತಿರಬಹುದು, ಆಗ ನಿಮ್ಮ ಮಾತು ಅವನ ಮೇಲೆ ಏನು ಪ್ರಭಾವ ಉಂಟುಮಾಡುತ್ತದೆ? ಆ ವ್ಯಕ್ತಿಯು ನೀವಿ ಹೇಳುತಿರುವುದನ್ನು ಗ್ರಹಿಸಿಕೊಂಡು ಅದನ್ನು ತನ್ನೊಳಗೆ ಸ್ವೀಕರಿಸಲು ನಿರ್ಧರಿಸುವ ತನಕ, ಅವನು ಅದರಿಂದ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪ್ರಭಾವಿತವಾಗುವುದಿಲ್ಲ.

ಇದರ ಅರ್ಥ ನೀವು ಜನರಿಗೆ ದುಃಖ ಅಥವಾ ಕಷ್ಟ ಕೊಡಬೇಕೆಂದಲ್ಲ. ’ಸುಖಸ್ಯ ದುಃಖಸ್ಯ ನ ಕೋಪಿ ದಾತಾ’ ಎಂದರೆ ಬೇರೆಯವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಕಷ್ಟ ಕೊಡುತ್ತಿರಬೇಕೆಂದಲ್ಲ. ನೀವು ಬೇರೆಯವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೂಕ್ಷ್ಮವಾಗಿರಬೇಕು. ನಿಮಗಾಗುವುದು ಯಾವುದು ನಿಮಗ್ಷ್ಟವಿಲ್ಲವೋ, ನೀವದನ್ನು ಬೇರೆಯವರಿಗೆ ಯಾಕೆ ಮಾಡಬೇಕು? ಇದು ಧರ್ಮ. ಹಾಗೆ, ಯಾರಾದರೂ ನಮ್ಮನ್ನು ನಿಂದಿಸಿದರೆ ನಾವು ದುಃಖ ಪಡುತ್ತೇವೆ. ಹೀಗಿರುವಾಗ, ನಾವೂ ಇತರರನ್ನು ನಿಂದಿಸಬಾರದು. ಮತ್ತು ನಮ್ಮಿಂದ ಜನರು ಕದಿಯುದನ್ನು ನಾವು ಇಷ್ಟಪಡದಿರುವಾಗ, ನಾವೂ ಇತರರಿಂದ ಕದ್ದುಕೊಳ್ಳಬಾರದು. ಹೀಗೆ, ನಮಗೆ ಯಾವುದೆಲ್ಲಾ ಇಷ್ಟವಾಗುವುದಿಲ್ಲವೋ, ನಾವು ಅದನ್ನು ಇತರರಿಗೆ ಉಂಟುಮಾಡಬಾರದು. ಈ ಸರಳ ಭಾವನೆಯು ಧರ್ಮದ ಸಾರಾಂಶ-ನಮ್ಮ ಕರ್ತವ್ಯದ ಜ್ಞಾನ.

ಪ್ರ: ಗುರೂಜಿ, ರಾಧೆ ಮತ್ತು ಕೃಷ್ಣರ ನಡುವಿನ ಸಂಬಂಧ ಎಂತಹುದು? ಕೃಷ್ಣನ ಪತ್ನಿಗೂ ರಾಧೆಯ ದೊರೆತ ಸ್ಥಾನ ದೊರೆಯಲಿಲ್ಲ, ಅವರ ಸಂಬಂಧದ ಅಂಥ ವೈಶಿಷ್ಟ್ಯವೇನು?

ಶ್ರೀ ಶ್ರೀ:
ನಾನು ಶ್ರೀಮದ್ಭಾಗವತಂ ದಿಲ್ಲವಾದರೂ, ಅದರಲ್ಲಿ ಎಲ್ಲಿಯೂ ರಾಧೆಯ ಉಲ್ಲೇಖವಿಲ್ಲ ಎಂದು ನಾನು ಕೇಳಿದ್ದೇನೆ. ’ರಾಧೆ’ ಎಂಬ ಪದದ ಅರ್ಥವೇ ನಿಮ್ಮ ಮೂಲಕ್ಕೆ ಮರಳುವುದು. ’ಧಾರಾ’ ಎಂದರೆ ಮೂಲದಿಂದ ಬರುವಂಥದ್ದು, ಅಂತೆಯೇ ’ರಾಧ್’ ಎಂದರೆ ಮೂಲಕ್ಕೆ ಮರಳುವಂಥದ್ದು. ಹೀಗೆ ರಾಧಾ ಒಂದು ಶಕ್ತಿ (ದೈವೀ ಶಕ್ತಿ). ನಾವು ನಮ್ಮ ಮೂಲಕ್ಕೆ ಮರಳುವ ತನಕ ನಾವು ಭಗವಾನ್ ಶ್ರೀ ಕೃಷ್ಣನನ್ನು ಅನುಭವಿಸಲು ಆಗುವುದಿಲ್ಲ. ಯಾಕೆ ಹೀಗೆ? ಯಾಕೆಂದರೆ ಭಗವಾನ್ ಕೃಷ್ಣನು ಮೂಲ ಮತ್ತು ರಾಧೆಯು ಮೂಲಕ್ಕೆ ದಾರಿ ಅಥವಾ ಮಾರ್ಗ. ಹಾಗಾಗಿ ನೀವು ರುಕ್ಮಿಣಿಯೋ ಅಥವಾ ಸತ್ಯಭಾಮೆಯೋ ಆಗಿದ್ದರೂ (ಶ್ರೀ ಕೃಷ್ಣನ ಪ್ರಮುಖ ಭಾರ್ಯೆಯರು), ನೀವು ರಾಧೆಯಾಗುವ ತನಕ, ನೀವು ಆ ಮೂಲಕ್ಕೆ ಮರಳುವ ತನಕ, ನೀವು ಭಗವಾನ್ ಕೃಷ್ಣನನ್ನು ಪಡೆಯಲು ಸಾಧ್ಯವಿಲ್ಲ. ಇದು ಈ ಸಾಂಕೇತಿಕತೆಯ ಹಿಂದೆ ಅಡಗಿರುವ ಅರ್ಥ.

ಪ್ರ: ಗುರೂಜಿ, ಕೆಲವೊಮ್ಮೆ ಯೋಗದ ಪಥದಲ್ಲಿ ಸಿದ್ಧಿ ಹೊಂದುತ್ತೇವೆ, ಈ ಸಿದ್ಧಿಗಳು ಕೆಲವೊಮ್ಮೆ ನಮ್ಮನ್ನು ಆಕರ್ಷಿಸಿ ದಾರಿ ತಪ್ಪಿಸುವುದು ಸಾಧ್ಯ. ನಾವು ಈ ಸಿದ್ಧಿಗಳಿಂದ ದೂರ ಓಡದೇ ಅವುಗಳನ್ನು ಹೇಗೆ ನಿಭಾಯಿಸುವುದು?

ಶ್ರೀ ಶ್ರೀ:
ಅದರ ಬಗ್ಗೆ ಜಾಸ್ತಿ ಗಮನವಹಿಸುವುದು ಬೇಡ. ಅದರ ಹಿಂದೆ ಓಡಬೇಡಿ. ಈ ಮಾರ್ಗದಲ್ಲಿ ನಿಮಗೆ ಅಂಥ ಹಲವು ವಿಷಯಗಳು ಒದಗುತ್ತವೆ. ನಿಮ್ಮಲ್ಲಿ ಹಲವು ಮಂದಿಯೂ ಇದನ್ನು ಅನುಭವಿಸಿರಬೇಕು. ಅದಕ್ಕೆ ಅಧಿಕ ಪ್ರಾಮುಖ್ಯವನ್ನು ನೀಡಬೇಡಿ. ನೀವೊಂದು ಸ್ಥಳಕ್ಕೆ ಹೋದಾಗ ಒಬ್ಬರು ನಿಮ್ಮ ಭೇಟಿ ಪತ್ರ(ವಿಸಿಟಿಂಗ್ ಕಾರ್ಡ್) ಕೇಳಿದರೆ ಅವರಿಗೊಂದು ಚೀಟಿ ನೀಡುವಿರಿ ಆದರೆ ನೀವು ಆ ಪರಿಚಯ ಚೀಟಿಯಲ್ಲ. ಹಾಗಾಗಿ ಆತ್ಮನಲ್ಲಿ, ತನ್ನಲ್ಲಿ ಸ್ಥಿರವಾಗಿ ಇರಿ. ಅದು ಗುರಿ.

ಪ್ರ: ಗುರೂಜಿ, ನನಗೆ ನನ್ನ ಸನಿಹದವರ ಪ್ರೀತಿಪಾತ್ರರ ಮರಣದ ಭಯವಿದೆ. ದಯವಿಟ್ಟು ಈ ಭಯವನ್ನು ಹೇಗೆ ಮೀರುವುದು ಎಂದು ತಿಳಿಹೇಳಿ.


ಶ್ರೀ ಶ್ರೀ:
ಈ ಲೋಕದಲ್ಲಿ ಯಾರಾದರೂ ನಿಮಗೆ ಸೇರದವರು ಇದ್ದಾರೆಯೇ? ನಿಮಗೆ ಯಾರು ಪರಕೀಯ? ಸುಮನೆ ಗಮನಿಸಿ. ಭಗವಂತನ ಮೇಲಿನ ನಿಮ್ಮ ವಿಶ್ವಾಸ ಇಲ್ಲಿ ಮುಖ್ಯವಾದುದು. ಸುಮ್ಮನೆ ದೇವರನ್ನು ನಂಬಿ, ಅವನಿದ್ದಾನೆ ಮತ್ತು ಅವನು ನಿಮಗಾಗಿ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ತಿಳಿದಿರಿ. ಅವನು ನಿಮ್ಮನ್ನು ಎಲ್ಲಾ ಕಾಲಗಳಲ್ಲೂ ನೋಡಿಕೊಳ್ಳುತ್ತಾನೆ. ಭಗದ್ಗೀತೆಯಲ್ಲಿ ಭಗವಾನ್ ಕೃಷ್ಣನು ಹೇಳುತ್ತಾನೆ:

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೆ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗ-ಕ್ಷೇಮಂ ವಹಾಮ್ಯಹಂ || (೯.೨೨)


ಭಗವಾನ್ ಕೃಷ್ಣ ಹೇಳುತ್ತಾನೆ, ಒಮ್ಮೆ ನೀವು ಭಗವಂತನಿಗೆ ಶರಣಾದ ಮೇಲೆ, ಒಮ್ಮೆ ನೀವು ಅವನಲ್ಲಿ ಆಶ್ರಯ ಪಡೆದ ಮೇಲೆ, ಆಗ ಅವನು ನಿಮಗ್ ಅಗತ್ಯ ಇರುವ ಎಲ್ಲವನ್ನೂ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ, ಜೊತೆಗೇ ನಿಮ್ಮಲ್ಲಿ ಆಗಲೇ ಇರುವುದನ್ನು ನೋಡಿಕೊಳುವುದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಭಗವಾನ್ ಕೃಷ್ಣ ’ಯೋಗ-ಕ್ಷೇಮಂ ವಹಾಮ್ಯಹಂ’ ಎಂದು ಹೇಳುವುದು ಇದಕ್ಕಾಗಿಯೇ. ಇಲ್ಲಿ ಯೋಗ ಎಂದರೆ ನಿಮಗೆ ಇನ್ನೂ ದೊರೆತಿಲ್ಲದುದನ್ನು ಒದಗಿಸುವುದು, ಮತ್ತು ಕ್ಷೇಮ ಎಂದರೆ ನಿಮಗೆ ಆಗಲೇ ದೊರೆತಿರುವುದನ್ನು ರಕ್ಷಿಸುವುದು. ಎರಡೂ ಭಗವಂತನ ಜವಾಬ್ದಾರಿ, ಭಗವಾನ್ ಕೃಷ್ಣನು ಇದನ್ನು ಸ್ಪಷ್ಟವಾಗಿ ಹೇಳುತ್ತಾನೆ. ಹಾಗಾಗಿ ಇಷ್ಟನ್ನು ಸುಮ್ಮನೆ ತಿಳಿದಿರಿ ಮತ್ತು ವಿಶ್ರಮಿಸಿ.

ಪ್ರ: ಗುರೂಜಿ, ನೀವು ಎಲ್ಲರನ್ನೂ ಂದ್ ರೀತಿಯಾಗಿ ಕಾಣುತ್ತೀರಿ, ಆದರೆ ಯಾರಾದರೂ ನಿಮ್ಮನ್ನು ಅವನ/ಅವಳ ಗುರು ಎಂದು ಹೇಳಿದಾಗ ನನಗೆ ಬಹಳ ಮಾತ್ಸರ್ಯ ಉಂಟಾಗುತ್ತದೆ. ನೀವು ನಮ್ಮೆಲ್ಲರಿಗೂ ಸೇರಿದವರು ತಾನೆ? ಹಾಗಾದರೆ ನಾನು ಇದನ್ನು ನನ್ನ ಮನಸ್ಸಿಗೆ ಹೇಗೆ ತಿಳಿಹೇಳುವುದು? ನನಗೆ ಎಲ್ಲರೊಂದಿಗೂ ಎಲ್ಲವನ್ನೂ ಹಂಚಿಕೊಳ್ಳುವುದು ಸಾಧ್ಯ, ಆದರೆ ನಾನು ನಿಮ್ಮನ್ನು ಬೇರೆಯವರೊಂದಿಗೆ ಹೇಗೆ ಹಂಚಿಕೊಳ್ಳುವುದು?

ಶ್ರೀ ಶ್ರೀ:
ಯಾರಾದರೂ ’ಗುರೂಜಿ ನನ್ನವರು’ ಎಂದು ಹೇಳಿದರೆ, ನೀವು ಅವರು ನನ್ನವರು ಕೂಡ ಎಂದು ಹೇಳಿ! ಹಾಗೆ ಮಾಡುವುದರಿಂದ ನಿಮ್ಮನ್ನು ತಡೆದವರು ಯಾರು? ಅವರು ಒಮ್ಮೆ ಹೇಳಿದರೆ, ನೀವು ಎರಡು ಬಾರಿ ಹೇಳಿ(ನಗು). ನೋಡಿ ನೀವು ನಿಮ್ಮ ಮನೆಯ ಕಿಟಕಿಯನ್ನು ತೆರೆದಾಗ, ಅದರಿಂದ ಸೂರ್ಯನ ಬೆಳಕು ನಿಮ್ಮ ಮನೆಯೊಳಗೆ  ಸಂಪೂರ್ಣವಾಗಿ ಬರುತ್ತದೆಯಲ್ಲವೆ? ಮತ್ತೊಬ್ಬರು ತಮ್ಮ ಮನೆಯ ಕಿಟಕಿಯನ್ನು ತೆರೆದರೆ, ಸುಯನ ಬೆಳಕು ಅಲ್ಲಿಯೂ ಸಂಪೂರ್ಣವಾಗಿ ಬರುತದೆ. ಸೂರ್ಯನ ಬೆಳಕು ನಿಮ್ಮ ಮನೆಯ ಕಿಟಕಿಯಲ್ಲಿ ಕಮ್ಮಿ, ನಿಮ್ಮ ನೆರೆಮನೆಯ ಕಿಟಕಿಯಲ್ಲಿ ಹೆಚ್ಚು ಬೆಳಗಿದ್ದು ಎಂದಾದರೂ ಉಂಟಾಗಿದೆಯೇ? ಗಾಳಿಯೂ ಹೀಗೆಯೇ. ಗಾಳಿ ಎಂದಾದರೂ ಭೇದದಿಂದ ಹೋಗಿ ಒಂದು ಮನೆಯಲ್ಲಿ ಹೆಚ್ಚು ಇನ್ನೊಂದು ಮನೆಯಲ್ಲಿ ಕಮ್ಮಿ ಬೀಸಿದ್ದುಂಟೇ? ಹೊರಗೆ ಬಿಸಿಯಾಗಿರುವಾಗ, ಒಂದು ಮನೆ ಇನ್ನೊಂದು ಮನೆಗಿಂತ ಹೆಚ್ಚು ಶಾಖ ಪಡೆದದ್ದುಂಟೇ? ಇಲ್ಲ, ಪ್ರಕೃತಿಯು ಎಲ್ಲರನ್ನೂ ಒಂದೇ ರೀತಿಯಾಗಿ ನೋಡಿಕೊಳ್ಳುತ್ತದೆ. ಒಂದು ವೇಳೆ ನೀವು ಪೂರ್ಣ ಚಂದ್ರನನ್ನು ನೋಡುತ್ತಿದ್ದರೆ, ಇತರ ನಗರಗಳಲ್ಲಿನ ಜನರಿಗೂ ಚಂದ್ರನು ಪೂರ್ಣವಾಗಿ ಕಾಣುತ್ತಾನೆ. ಅದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಚ್ಚು ಅಥವಾ ಕಮ್ಮಿ ಕಾಣುವುದಿಲ್ಲ. ಪೂರ್ಣಚಂದ್ರನು ನೀವು ಎಲ್ಲೇ ಹೋದರೂ ಪೂರ್ಣ ಚಂದ್ರನಾಗಿಯೇ ಕಾಣುವನು. ನೀವು ನಾಲ್ಕು ಮಕ್ಕಳ ತಾಯಿ ಅಂದುಕೊಳ್ಳಿ. ಇಂದು ಎರಡು ಮಕ್ಕಳಿರುವುದು ಹಚ್ಚು ಸಾಮಾನ್ಯ. ಆಗ ಯಾರೇ ಏನೇ ಅಂದರೂ ನೀವು ಎಲ್ಲಾ ಮಕ್ಕಳನ್ನೂ ಒಂದೇ ಆಗಿ ನೋಡುವುದಿಲ್ಲವೇ? ನೀವು ಒಂದೇ ಮಗುವಿಗೆ ಊಟ ಬಡಿಸಿ ಇನ್ನೊಂದು ಮಗುವನ್ನು ಉಪವಾಸ ಇಡುತ್ತೀರೇ? ಒಬ್ಬ ತಾಯಿ ಇದನ್ನು ಎಂದೂ ಮಾಡಲಾರಳು.

ಪ್ರ: ಗುರೂಜಿ, ನಾನು ಒಬ್ಬ ವ್ಯಕ್ತಿಯೊಡನೆ ಆಳವಾಗಿ ಪ್ರೀತಿಸುತ್ತಿದ್ದೇನೋ ಅಥವಾ ಅದು ಕೇವಲ ಮೋಹವೇ ಎಂದು ಹೇಗೆ ತಿಳಿಯುವುದು?


ಶ್ರೀ ಶ್ರೀ:
ಕಾಲ ತಿಳಿಸುತ್ತದೆ. ಪ್ರೀತಿಯಲ್ಲಿ ಒಂದು ತ್ಯಾಗ ಭಾವವಿದೆ ಎಂದು ಯಾವತ್ತೂ ತಿಳಿದಿರಿ, ಅಲ್ಲದೇ ಮೋಹವು ಕೇವಲ ದುಃಖವನ್ನು ತರುತ್ತದೆ. ಪ್ರೀತಿಯ ಹೆಸರಿನಲ್ಲಿ, ನೀವು ಮೋಹ ಅಥವ ವ್ಯಾಮೋಹದಲ್ಲಿ ಬಿದ್ದರೆ, ನಿಮಗೆ ಕೇವಲ ದುಃಖ ಉಂಟಾಗುತ್ತದೆ. ಆದರೆ ನಿಜವಾದ ಪ್ರೀತಿಯಲ್ಲಿ, ತ್ಯಾಗವೂ ಸಂತುಷ್ಟಿಯನ್ನು ತರುತ್ತದೆ. ಪ್ರೀತಿಯು ತ್ಯಾಗ ಹಾಗೂ ತೃಪ್ತಿಯನ್ನು ತರುತ್ತದೆ, ಆದರೆ ಮೋಹ ಹಾಗೂ ಜ್ವರತೆ ಕೇವಲ ದುಃಖವನ್ನು ತಂದುಕೊಡುತ್ತದೆ.

ಪ್ರ: ಗುರೂಜಿ, ನಮ್ಮ ಚೈತನ್ಯಕ್ಕೆ ಯಾವುದು ಸರಿ ಯಾವುದು ತಪ್ಪು ಎಂಬ ಅರಿವಿದೆ. ಅದನ್ನು ತಿಳಿದಿದ್ದರೂ, ನಾವು ನಮ್ಮ ಅಂತರ್ನುಡಿಯಂತೆ ನಡೆಯುವುದಿಲ್ಲ. ನಮ್ಮ ಆತ್ಮಸಾಕ್ಷಿಯನ್ನು ಕೇಳದಂತೆ ನಮ್ಮನ್ನು ತಡೆಯುದು ಯಾವುದು ಮತ್ತು ನಾವಿದನ್ನು ಹೇಗೆ ಮೀರುವುದ್ದು? 

ಶ್ರೀ ಶ್ರೀ:
ಅದು ಹಳೇ ಅಭ್ಯಾಸಗಳಿರಬಹುದು ಅಥವಾ ಬೇರೇನನ್ನೋ ಮಾಡಿದರೆ ಆನಂದ ಸಿಗುವುದು ಎಂಬ ಭ್ರಮೆ ಇರಬಹುದು. ಈ ಎರಡರ ಹೊರತು ಬೇರಾವುದೂ ಇಲ್ಲ.

ಪ್ರ: ನಿಮ್ಮೊಂದಿಗೆ ಸಂಪರ್ಕ ಹೊಂದಿ ಕೇವಲ ಕೆಲವು ತಿಂಗಳಷ್ಟೇ ಆಗಿವೆ, ಆಗಲೇ ನೀವು ನನ್ನನ್ನು ನಿಮ್ಮ ಪ್ರೀತಿಯಲ್ಲಿ ಮತ್ತೇರಿಸಿದ್ದೀರಿ. ಈ ಹಿಂದಿನ ವರ್ಷಗಳಲ್ಲಿ ನಾನು ಕಳೆದುಕೊಂಡಂಥ ಪ್ರೇಮವನ್ನು ಮತ್ತೆ ಪಡೆಯುವುದು ಸಾಧ್ಯವೇ? ನಾನು ಈ ಬಾಕಿಯನ್ನು ತೀರಿಸಿಕೊಳ್ಳಲು ಇಚ್ಚಿಸುತ್ತೇನೆ.

ಶ್ರೀ ಶ್ರೀ:
ನಮ್ಮ ಪ್ರೇಮದ ಅನುಬಂಧ ಪುರಾತನವಾದುದು. ಹೃದಯವು ಪ್ರಾಚೀನವಾದುದರ ಬಗ್ಗೆ ಹೆಮ್ಮೆಪಡುತ್ತದೆ. ಅದು ಹಳೆಯದರ ಹಿಂದೆ, ಪುರಾತನವಾದುದರ ಹಿಂದೆ ಓಡುತ್ತದೆ, ಅಂತೆಯೇ ಮನಸ್ಸು ಹೊಸತರಿಂದ ಆಕರ್ಷಿತವಾಗುತ್ತದೆ. ಉದಾಹರಣೆಗೆ ನಮ್ಮ ಮನಸ್ಸು ಅತ್ಯಾಧುನಿಕ ಉಡುಪು, ಅತ್ತ್ಯಾಧುನಿಕ ವೈಜ್ಞಾನಿಕ ಅವಿಷ್ಕಾರಗಳತ್ತ ಆಕರ್ಷಿತವಾಗುತ್ತದೆ. ಇದರಿಂದಲೇ ವಿಜ್ಞಾನವೂ ಹೊಸ ಅವಿಷ್ಕಾರಗಳು ಮತ್ತು ನೂತನಸೃಷ್ಟಿಗಳನ್ನು ತೊಡಗಿಸುವುದರಲ್ಲೇ ಇರುತ್ತದೆ. ಹಾಗಾಗಿ ನಮ್ಮ ಮನಸ್ಸು, ನಮ್ಮ ಬುದ್ಧಿ ಯಾವತ್ತೂ ಹೊಸತರೆಡೆಗೆ ಮೋಡಿಗೊಳ್ಳುತ್ತದೆ. ಆದರೆ ಹೃದಯ ಹಾಗಲ್ಲ. ನಾವು ಯಾರನ್ನಾದರೂ ಪ್ರೀತಿಸಿದ್ದರೆ, ನಾವು ಅವರನ್ನು ಎರಡು ದಿನಗಳಿಗೆ ಅಥವಾ ಎರಡು ವಾರಗಳಿಗೆ ಪ್ರೀತಿಸಿದ್ದೇವೆ ಎಂದು ಹೇಳುವುದಿಲ್ಲ, ನಾವವರನ್ನು ಕಾಲಗಟ್ಟಲೆ ಪ್ರೀತಿಸುತ್ತಿದ್ದೇವೆ, ಜನ್ಮಾಂತರಗಳಿಂದ ಪ್ರೀತಿಸುತ್ತಿದ್ದೇವೆ ಎಂದು ಭಾವಿಸುತ್ತೇವೆ! ಇದು ಹೃದಯದ ಗುಣ, ಪುರಾತನ ಹಾಗೂ ಪರಿಚಿತವಾದುದಕ್ಕಾಗಿ ಹಂಬಲಿಸುವುದು. ನಮ್ಮ ಜೀವನವು ಪುರಾತನಹಾಗೂ ನೂತಬವಾದುದರ ಸಂಘಟನೆ. ನಾವು ಅವುಗಳನ್ನು ಜೊತೆಯಲ್ಲಿ ತೆಗೆದುಕೊಳ್ಳಬೇಕು.

ನೀವು ಸಂದಿಗ್ಧತೆ ಅಥವಾ ಭಾಂತಿಯಲ್ಲಿದ್ದಾಗ, ಅಥವಾ ನಿಮ್ಮ ಬುದ್ಧಿ ಹಾಗು ಹೃದಯ ವಿರೋಧಾಭಾಸದಲ್ಲಿದ್ದಾಗ, ಎಲ್ಲಾ ರೀತಿಯ ಜಗಳಗಳು ಹಳೆಯ ವಸ್ತುಗಳ ಬಗ್ಗೆ ಇರುತ್ತವೆ. ನಮ್ಮ ಎಲ್ಲಾ ಆಸೆ ಹಾಗು ವಿರಸಗಳು ಹಿಂದಿನ ವಸ್ತು ಹಾಗೂ ಘಟನೆಗಳ ಕುರಿತಾಗಿ ಇರುತ್ತವೆ. ನಾನು ೨೦ ವರ್ಷಗಳ ಹಿಂದೆ ನಿಮ್ಮ ಮದುವೆಗೆ ಬಂದಿದ್ದಾಗ ನೀವು ನನ್ನನ್ನು ಸರಿಯಾಗಿ ಮಾತನಾಡಿಸಲಿಲ್ಲ. ನೀವು ನನಗೆ ಸಾಕಷ್ಟು ಉಡುಗೊರೆ - ಸಿಹಿತಿನಿಸುಗಳನ್ನು ನೀಡಲಿಲ್ಲ. ನೀವು ನನ್ನೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ನಿಮ್ಮ ತಂದೆ ತಾಯಿ ಹೀಗೆ ಮಾಡಿದರು, ಹಾಗೆ ಮಾಡಿದರು.’ ಜನರು ೨೦ ವರ್ಷಗಳ ನಂತರವೂ ಆ ಕಹಿತನವನ್ನು ಮನಸ್ಸಿನಲ್ಲಿ ಪೋಷಿಸುತ್ತಾ ಇರುತ್ತಾರೆ. ಜನರು ಇದರಲೆಲ್ಲಾ ಕಗ್ಗಂಟಿಗೊಳಗಾಗುವುದು ಅವಿವೇಕದಿಂದಾಗಿ. ಹಾಗಾಗಿ ನೀವು ಇದರ ಕುರಿತೆಲ್ಲಾ ನಿಮ್ಮ ವಿವೇಕವನ್ನುಪಯೋಗಿಸಿ ಜಾಗೃತರಾಗಬೇಕು. ಹಿಂದಿನದನ್ನೆಲ್ಲಾ ಬಿಟ್ಟು ಬಿಡಿ. ಯಾಕೆ? ನಿಮ್ಮ ಮನಸ್ಸು ಅಥವಾ ಬುದ್ಧಿ ನಡೆದುಹೋದುದರ ಬಗ್ಗೆ ಗೊಣಗಾಡುತ್ತಿದ್ದಾಗ, ಅದು ಋಣಾತ್ಮಕತೆಯಲ್ಲಿ ಸಿಕ್ಕಿಕೊಂಡು ಕೊಳೆತುಕೊಳ್ಳಲು ಆರಂಭವಾಗುತ್ತದೆ. ಹಾಗೂ ಹೃದಯವು ಹೊಸತರೆಡೆಗೆ(ಆಕರ್ಷಣೆ) ಓಡುತ್ತಿರಲು, ಅದು ಅಸ್ಥಿರವಾಗುತ್ತದೆ. ಹಾಗಾಗಿ ಎಲ್ಲವನ್ನು ಸರಿಯಾದ ಸ್ಥಾನದಲ್ಲಿ ಇಡುವುದು ವಿವೇಕ. ಸ್ವಸ್ಥವಾಗಿ ಬಾಳಲು ಒಬ್ಬರಲ್ಲಿ ಬುದ್ಧಿ ಹಾಗೂ ಭಾವನೆಗಳು ಎರಡೂ ಅವಶ್ಯಕ. ಪ್ರತಿಯೊಬ್ಬರ ಜೀವನದಲ್ಲೂ ಬುದ್ಧಿ ಹಾಗೂ ಭಾವನೆಗಳು ಎರಡೂ ಮುಖ್ಯವಾಗಿವೆ. ವ್ಯವಹಾರವನ್ನು ಬುದ್ಧಿಯಿಂದ ಮಾಡಿ ಹಾಗೂ ಜೀವನವನ್ನು ಭಾವನೆಗಳಿಂದ(ಹೃದಯ) ಬಾಳಿ. ನೀವು ನಿಮ್ಮ ಮನೆಯಲ್ಲಿ ಬುದ್ಧಿವಂತರಾಗಿ, ವ್ಯವಹಾರದಲ್ಲಿ ಭಾವುಕರಾಗಿ ಇದ್ದರೆ, ಆಗ ಎರಡೂ ತೊಂದರೆಯಲ್ಲಿರುತ್ತವೆ.

ಪ್ರ: ಗುರೂಜಿ, ರೂಪಾಯಿಯ ಬೆಲೆ ಕುಸಿಯುತ್ತಿದೆ; ಧರ್ಮಾತೀತತೆಯ ಹೆಸರಿನಲ್ಲಿ ನಾನು ನನ್ನ ಧರ್ಮದಿಂದ ದೂರ ಮಾಡಲ್ಪಡುತ್ತಿದ್ದೇನೆ. ಈಜಿಪ್ಟಿನಲ್ಲಿ(ಇತ್ತೀಚೆಗಿನ ಜನಾಂಗ ಯುದ್ಧ ಹಾಗೂ ಸಾರ್ವಜನಿಕ ಅಶಾಂತಿಯನ್ನು ಕುರಿತು ಮಾತನಾಡುತ್ತ) ಆಗುತ್ತಿರುವುದು ಇಲ್ಲಿ ಆದರೆ ಮಾತ್ರ ನಾವು ಉದ್ಧಾರವಾಗುವುದೇ?


ಶ್ರಿ ಶ್ರೀ:
ದೇವರ ದಯೆಯಿಂದ ಅದು ಎಂದೂ ಇಲ್ಲಿ ನಮ್ಮ ದೇಶದಲ್ಲಿ ಆಗದಿರಲಿ. ಈಜಿಪ್ಟ್ ಹಾಗೂ ಸಿರಿಯಾದಲ್ಲಿ ನಡೆಯುತ್ತಿರುವುದು ಯಾವುದೇ ದೇಶದಲ್ಲಿ ಆಗಬಾರದು. ಇಲ್ಲಿ ಭಾರತದಲ್ಲಿ ಧರ್ಮಾತೀತತೆಯ ಹೆಸರಿನಲ್ಲಿ ಯಾವುದೇ ಅನ್ಯಾಯ ನಡೆಯುತ್ತಿದರೆ, ಆಗ ಅದಕ್ಕೆ ನೀವೊಬ್ಬರೇ ಹೊಣೆ, ಇನ್ಯಾರೂ ಅಲ್ಲ. ಹೀಗಾಗುವುದು ಯಾಕೆಂದರೆ ನಾವೆಲ್ಲರೂ ಈ ವಿಷಯಗಳ ವಿರುದ್ಧವಾಗಿ ಒಗ್ಗತ್ತಾಗಿ ನಿಲ್ಲುವುದಿಲ್ಲ. ನಾವು ನಮ್ಮದೇ ಆದ ಧರ್ಮವನ್ನು ಗೌರವಿಸುವುದಿಲ್ಲ, ಹಾಗಿದ್ದರೆ ಇನ್ಯಾರಾದರೂ ಹೇಗೆ ಗೌರವಿಸುತ್ತಾರೆ? ಇನ್ನೊಬ್ಬರನ್ನು ದೂರಿ ಬೆರಳುತೋರಿಸಬೇಡಿ. ನಾವು ನಮ್ಮದೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದು ಬಹಳ ಜಾತಿವಾದ ಹಾಗೂ ಧರ್ಮಭೇದ ನಡೆಯುತ್ತಿದೆ. ನಾವು ಜಾತಿಯ ಹೆಸರಿನಲ್ಲಿ ಬಹಳ ಬೇರ್ಪಡೆಯಾಗಿದ್ದೇವೆ. ನಾವು ಇದನ್ನು ಮೀರಿ ಮೇಲಕ್ಕೇಳಬೇಕು ಹಾಗೂ ಎಲ್ಲರನ್ನೂ ಪ್ರೀತಿ ಹಾಗೂ ದಯೆಗಳಿಂದ ಒಗ್ಗೂಡಿಸಬೇಕು. ನಾವು ಕ್ರಿಯಾತ್ಮಕ ಹಾಗೂ ಜವಾಬ್ದಾರ ಪ್ರಜೆಗಳಾಗಬೇಕು. ಏನೂ ಅಲ್ಲದಿದ್ದರೆ, ಕನ್ನಿಷ್ಠ ತಿಂಗಳಿಗೆ ಒಂದು ಸಲವಾದರೂ ಎಲ್ಲರಂದು ಒಟ್ಟಾಗಿ ಸೇರಿಸಲು ಪ್ರಯತ್ನ ಮಾಡಿ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೋ. ನಾವಿದನ್ನು ಹಳ್ಳಿಗಳಲ್ಲೂ ಮಾಡಬೇಕು. ನಾವು ಹಬ್ಬಗಳನ್ನು ಆಚರಿಸುವಾಗ, ನಾವು ಅದನ್ನು ಆಯೋಜಿಸಿ ಎಲ್ಲರೂ ಜೊತೆಯಾಗಿ ಒಗ್ಗಟ್ಟಿನಿಂದ ಆಚರಿಸುವಂತೆ ಮಾಡುವ ಪ್ರಯತ್ನ ಮಾಡುವುದಿಲ್ಲ. ಎಲ್ಲರಿಗೂ ತಮ್ಮದೇ ಪ್ರತ್ಯೇಕ ಆಚರಣೆ ಬೇಕು. ನಮ್ಮಲ್ಲಿ ಗಣೇಶ ಚತುರ್ಥಿ ಅಥವಾ ಜನ್ಮಾಷ್ಟಮಿಯಂಥ ಹಬ್ಬಗಳಿದ್ದಾಗಾ ನಾವುಒಂದು ಸ್ಥಳದಲ್ಲಿ ಜೊತೆಯಾಗಿ ಆಚರಿಸುವುದಿಲ್ಲ. ಅದರ ಬದಲಾಗಿ ನಾವು ಒಂದೊಂದಾಗಿ ಪ್ರತ್ಯೇಕ ಆಚರಣೆಯನ್ನು ನಮ್ಮ ಕೇರಿಯಲ್ಲೋ ಓಣಿಯಲ್ಲೋ ನೆರವೇರಿಸುತ್ತೇವೆ. ಇದೆಲ್ಲಾ ಅಹಂನ ಆಟ - ಎಲ್ಲರೂ ಕೇವಲ ’ನಾನು’, ’ನನ್ನದು’, ’ನಾನೊಬ್ಬ’ ಎಂದು ಯೋಚಿಸುತ್ತಾರೆ. ಇದು ಭಾರತದ ಒಂದು ಬಹಳ ದೊಡ್ಡ ದುರಂತ. ನಾವು ಇಷ್ಟೊಂದು ಬೇರಪಟ್ಟವರಾಗಿರುವೆವು ಹಾಗು ಒಂದೇ ಜನಾಂಗವಾಗಿ ಎದ್ದು ನಿಲ್ಲುತ್ತಿಲ್ಲ ಎಂಬುದು ನಮ್ಮ ದುರದೃಷ್ಟ. ನಾವು ಭಾಷೆ, ಜನಾಂಗ, ಜಾತಿ, ದೇಶ, ರಾಜ್ಯ, ಸ್ಥಳದ ಆದಾರದಲ್ಲಿ ಬೇರ್ಪಟ್ಟಿದ್ದೇವೆ; ರಾಜಕೀಯ ಗುಂಪಿನ ಇತ್ಯಾದಿಗಳ ಆದಾರದಲ್ಲೂ ಬೇರ್ಪಟ್ಟಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಒಂದಾದಾಗ, ಧರ್ಮವು(ನ್ಯಾಯನಿಷ್ಠತೆ) ಮೇಲೆದ್ದು ಉನ್ನತಿ ಹೊಂದುತ್ತದೆ. ಆಗ ಯಾರು ನಿಮ್ಮನ್ನು ನೋಯಿಸುತ್ತಾರೆ ಅಥವಾ ನಿಮ್ಮನ್ನು ಕೆಳಕ್ಕಿಳಿಸುತ್ತಾರೆ? ಆದ್ದರಿಂದಲೇ ಹೇಳುವುದು - "ಸಂಘ ಶಕ್ತಿ ಕಲಿಯುಗೇ" (ಒಳ್ಳೆಯವರ ಹಾಗೂ ಸದ್ಗುಣವಂತರ ಸಹವಾಸ ಅಥವಾ ಸಂಘವು, ದುಷ್ಟ ಹಾಗೂ ಕತ್ತಲ ಕಾಲದಲ್ಲಿ, ಒಂದು ಏಕೈಕ ಶಕ್ತಿಯಾಗಿದೆ).

ಇಂದು ಬಹಳ ಜನರು ಅನ್ಯಾಯದಿಂದ ಬಳಲಿದ್ದರೆ ಎಂದು ಹೇಳುತ್ತಾರೆ. ಜಮ್ಮು ಕಾಶ್ಮೀರದಲ್ಲಿ, ಕೇರಳದಲ್ಲಿ ಜನರು ತಮ್ಮದೇ ದೇಶ ಮತ್ತು ರಾಜ್ಯಗಳಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಅನುಭವವಾಗುತ್ತದೆ ಎಂದು ಹೇಳುತ್ತಾರೆ. ಪೂರ್ವೋತ್ತರ ಭಾರತ ಹಾಗೂ ಆಂಧ್ರ ಪ್ರದೇಶದಲ್ಲೂ ಜನರು ವೇದನಶೂನ್ಯತೆ ಹಾಗೂ ಅನ್ಯಾಯಗಳುಂಟಾಗುತ್ತಿವೆ, ಯಾರೂ ಗಮನಕೊಡುವುದಿಲ್ಲ ಎನ್ನುತ್ತಾರೆ. ನಾನು ಇಂಥ ಹಲವು ವಿಷಯಗಳನ್ನು ಕೇಳಿದ್ದೇನೆ ಹಾಗೂ ಬಹಳ ಜನರು ಬಂದು ಆಗಾಗ ನನಗೆ ಹೇಳುತಾರೆ. ಪಶ್ಚಿಮ ಬಂಗಾಲದಲ್ಲಿ ಅಧಿಕಸಂಖ್ಯಾತ ಮತೀಯರೊಡನೆ ಬಹಳ ಚಿಂತನಾರ್ಹ ಅನ್ಯಾಯ ಹಾಗೂ ಅಕಾರ್ಯ ನಡೆಯುತ್ತಿದೆ. ಜನರು ಬಂದು ಇದರ ಬಗ್ಗೆ ನನ್ನ ಮುಂದೆ ಅಳುತ್ತಾರೆ. ನಾನ್ನು ಹೇಳುತ್ತೇನೆ, "ನೀವೆಲ್ಲರೂ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಒಂದಾಗಿ ನಿಲ್ಲಬೇಕು. ನಿಮ್ಮ ಕಾಲಿನ ಮೇಲೆ ನಿಂತುಕೊಳ್ಳಿ. ನೀವು ನಿಮ್ಮೊಳಗೇ ಬೇರ್ಪಟ್ಟು ದೂರ ದೂರದಲ್ಲಿದ್ದಷ್ಟು ಸಮಯ, ಇನ್ನೊಬ್ಬ ಯಾರಾದರು ಅದರ ಉಪಯೋಗ ಪಡಿಸಿಕೊಳ್ಳುತ್ತಾರೆ. ನಾವು ಒಗ್ಗಟ್ಟಾಗುವ ಬದಲು, ಇನೊಬ್ಬರ ಮೇಲೆ ದೂರುತ್ತೇವೆ. ನೋಡಿ ಎಲ್ಲರಿಗೂ ತಮ್ಮದೇ ಸಂಘವನ್ನು ರೂಪಿಸುವ ಹಾಗೂ ಮುನ್ನಡೆಉವ ಹಕಿದೆ. ಹೀಗೆ ಯಾರಾದರೂ ಮುನ್ನಡೆಯುತ್ತಿದ್ದರೆ ನಾವು ಅವರನೇಕೆ ಕೆಳಕ್ಕೆಳೆಯಬೇಕು? ಅವರೂ ಜಯಿಸಲಿ ಹಾಗೂ ನಾವೂ ಜಯಿಸುವ ಪ್ರಯತ್ನ ಮಾಡೋಣ. ಈ ಆಲೋಚನೆ ನಮ್ಮೊಳಗೆ ಹುಟ್ಟಬೇಕು. ನಾನು ಪಂಜಾಬಿಗೆ ಹೋದಾಗ ಅಲ್ಲಿನ ಜನರು ಅದನ್ನೇ ಹೇಳಿದರು - ಅಲ್ಲಿ ಅವರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಲಾಗುತ್ತದೆ ಎಂದು. ಇದೊಂದು ಬಹಳ ದುರದೃಷ್ಟಕರ ಸಂಗತಿ. ನಮ್ಮ ದೇಶದ ಆರ್ಥಿಕ ರಂಗದಲ್ಲೂ ಇದೇ ಆಗುತ್ತಿದೆ.

ಇಂದು ಒಂದು ಚಿಕ್ಕ ಪಟ್ಟಣದಲ್ಲೂ ಹತು ವಿವಿಧ ದೇವಸ್ಥಾನಗಳು ಕಟ್ಟಲ್ಪಟ್ಟಿವೆ. ಈಗ ಹತ್ತು ದೇವಸ್ಥಾನಗಳಿರುವುದು ಒಂದು ಕೆಟ್ಟ ಸಂಗತಿಯಲ್ಲವೇ ಅಲ್ಲ. ಆದರೆ ಏನಾಗುವುದೆಂದರೆ, ಅವರೆಲ್ಲರಲ್ಲೂ ಒಂದು ಪೈಪೋಟಿಯ ಭಾವವಿದೆ. ಆಮೇಲೆ ಒಂದೇ ದೇವಸ್ಥಾನದ ಆಡಳಿತ ಮಂಡಳಿಯವರ ನಡುವೆ ಸಣ್ಣಪುಟ್ಟ ವಿಷಯಗಳ ಬಗ್ಗೆ ವಾದಗಳಾಗುತ್ತವೆ. ಇದೆಲ್ಲವೂ ಅವಿವೇಕ. ಮತ್ತೆ ಅವರು "ನಮ್ಮೊಂದಿಗೆ ಯಾರೂ ಸರಿಯಾಗಿ ವರ್ತಿಸುವುದಿಲ್ಲ, ನಮಗೆ ಬೇಕಾಗಿರುವುದು ಆಗುತ್ತಿಲ್ಲ". ಜೀವನದ ಪ್ರತಿ ಆಯಾಮದಲ್ಲಿ, ಅದು ಧಾರ್ಮಿಕವಾಗಿರಬಹುದು ಅಥವಾ ರಾಜನೈತಿಕ ಅಥವಾ ಆರ್ಥಿಕವಾಗಿರಬಹುದು, ವಿವೇಕವು ಅಗತ್ಯವಾಗಿದೆ. ಇದೆಲ್ಲಕ್ಕೂ ಒಂದು ಪರಿವರ್ತನೆ ಅಗತ್ಯ ಹಾಗೂ ನಮ್ಮ ಯುವಕರು ಈ ಸಂಕುಚಿತ-ದೃಷ್ಟಿಕೋನದಿಂದ ಹೊರಬಂದು ಈ ಪರಿವರ್ತನೆಯನ್ನು ತರುತ್ತಾರೆ ಎಂದು ನನಗೆ ಭರವಸೆಯಿದೆ. ಅವರು ಜೊತೆಗೂಡಿ ಒಳ್ಳೆ ಕೆಲಸ ಮಾಡಬೇಕು.

ಪ್ರ: ಗುರುದೇವ, ಬ್ಲೂ ಸ್ಟಾರ್ ಎಂದರೇನು? ಆನು ಅದರ ಬಗ್ಗೆ ಬಹಳ ಕೇಳಿದ್ದೇನೆ. ದಯವಿಟ್ಟು ವಿವರಿಸಿ.

ಶ್ರೀ ಶ್ರೀ:
ನೀವಿನ್ನೊಬ್ಬ ಯಾರನ್ನಾದರೂ ಏಕೆ ಕೇಳಬಾರದು? ನಿಮಗೆ ನಕ್ಷತ್ರಗಳು ಆಕಾಶದಲ್ಲಿ ಕಾಣುವವೇ ಹೊರತು ನೆಲದ ಮೇಲಲ್ಲ. ಆದರೆ ಯಾರಾದರೂ ನೆಲಕ್ಕಿಳಿಯದೇ ಆಕಾಶದ ಮೇಲೆ ನಡೆಯುವಂತೆ ನಡೆದರೆ(ಅರ್ಥ: ಮೂರ್ಖ ಅಥವಾ ಕಾರ್ಯಸಾಧ್ಯವಲ್ಲದ ಮನೋಭಾವ ಹೊಂದಿದ್ದರೆ), ಆಗ ಆ ವ್ಯಕ್ತಿಯನ್ನು ಬ್ಲೂ ಸ್ಟಾರ್ ಎಂದು ಕರೆಯುತ್ತಾರೆ(ನಗು). ಅದು ಅದರ ಅರ್ಥ. ಆಯಿತೇ? ಆಶ್ರಮದಲ್ಲಿ ಒಬ್ಬ ವ್ಯಕ್ತಿ ಕಾರ್ಯಸಾಧ್ಯ ದೃಷ್ಟಿಕೋನದಿಂದ ಮಾರ್ಗಾಂತರಿಸಿದರೆ, ಜನರು ಆ ವ್ಯಕ್ತಿ ಬ್ಲೂ ಸ್ಟಾರ್ ಆಗಿದ್ದನೆ ಎನ್ನುತ್ತಾರೆ. ಅವನು ಏನು ಹೇಳುತ್ತಾನೆ ಅಥವಾ ಮಾಡುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಅದಕ್ಕೂ ಪರಿಹಾರವಿದೆ!

ಭಾನುವಾರ, ಆಗಸ್ಟ್ 25, 2013

ಸಮರ್ಪಣ, ಶಿವಧ್ಯಾನ

ಅಮೃತಬಿ೦ದು’ ಸರಣಿಯ ಬರಹಗಳು

ಹತ್ತೊಂಭತ್ತನೆಯ ಕ೦ತು

ಅನುದಿನವೂ ಮನನ ಮಾಡಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೭.೦೮.'೧೩ರಂದು ಪ್ರಕಟವಾಗಿತ್ತು)

ಶಿವಸೂತ್ರಗಳು ಮೂಲತಃ ಸಂಸ್ಕತದಲ್ಲಿದೆ. ಮನುಷ್ಯ ತನ್ನ ಜೀವನದಲ್ಲಿ ಗುರಿಯನ್ನು ಸೇರುವುದಕ್ಕೆ ಅಗತ್ಯವಾದ, ಚಿಂತೆಯಿಂದ ಪಾರಾಗುವುದಕ್ಕೆ ಬೇಕಾಗುವಂಥ ಅಪಾರವಾದ ಜ್ಞಾನವು ಸೂತ್ರಗಳ ರೂಪದಲ್ಲಿ, ಇದರಲ್ಲಿ ಅಡಕವಾಗಿದೆ. ಬೇರೆ ಬೇರೆ ರೀತಿಯ ಹಲವಾರು ಸೂತ್ರಗಳ ಮೂಲಕ ನಮ್ಮನ್ನು ಮತ್ತೆ ಮತ್ತೆ ದಾರಿಗೆ ತರುವುದಕ್ಕೆ ಶಿವಸೂತ್ರಗಳಲ್ಲಿ ಮಹಾನ್ ಪ್ರಯತ್ನ ನಡೆದಿದೆ. ಇದನ್ನು ಮತ್ತೆ ಮತ್ತೆ ಪಾರಾಯಣ ಮಾಡಬೇಕು.

ಹೀಗೆ ಪುನರುಕ್ತಿ ಮಾಡಿದಾಗ ನಮ್ಮ ಚಿತ್ತದಲ್ಲಿರತಕ್ಕಂಥ ಬೇರೆ ಬೇರೆ ಕಣಗಳಿಗೆ, ಬೇರೆ ಬೇರೆ ಜೀವದ ಅಂಶಕ್ಕೆ ಜ್ಞಾನ ಒದಗುತ್ತದೆ. ಒಂದು ಸಮಾಜದಲ್ಲಿ ಸಾವಿರಾರು ಜನರು ಇರುವ ಹಾಗೆ, ನಿಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತಿತ್ವವಿಲ್ಲ; ನೂರಾರು, ಸಾವಿರಾರು ವ್ಯಕ್ತಿತ್ವವಿದೆ. ಒಂದು ಹಳ್ಳಿಯಲ್ಲಿರುವ ಎಲ್ಲರು ಸುಶಿಕ್ಷಿತರು ಎನ್ನಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು ತಾನೆ? ಹಾಗೆ ನಾವು ಪೂರ್ಣ ಜ್ಞಾನವಂತರಾಗಲು ನಮ್ಮ ತಲೆಯಲ್ಲಿರುವ ಎಲ್ಲಾ ಅಣುಗಳಿಗೂ ಜ್ಞಾನದ ಬೋಧೆ ಉಂಟಾಗಬೇಕು.

ನಮ್ಮಲ್ಲಿರುವ ಅಣುಗಳೆಲ್ಲವೂ ಬೇರೆ ಬೇರೆ ಸಮಯದಲ್ಲಿ, ಸರದಿಯಲ್ಲಿ ಫ್ಯಾಕ್ಟರಿ ಶಿಫ್ಟ್ ತರಹ ಕೆಲಸ ಮಾಡುತ್ತದೆ. ಒಂದು ದಿನ ಅಭ್ಯಾಸ, ಸಾಧನೆ ಬಿಟ್ಟು ಬಿಟ್ಟರೆ ಅಂದಿನ ಸರದಿಯಲ್ಲಿರುವ ಅಣುಗಳ ಸರದಿ ಮತ್ತೆ ಬರಲು ಒಂದು ವರ್ಷ ಬೇಕಾಗುತ್ತದೆ!  ಅಭ್ಯಾಸ, ಪುನರುಕ್ತಿ ಮಾಡಿದಾಗ ನಮ್ಮ ತಲೆಯಲ್ಲಿರುವ ಕೋಟ್ಯಾಂತರ ಜೀವಾಣುಗಳೆಲ್ಲವೂ ಸುಶಿಕ್ಷಿತವಾಗುತ್ತವೆ.

ಇಷ್ಟೆಲ್ಲಾ ಜ್ಞಾನ ತಿಳಿದುಕೊಂಡ ನಂತರ, ಏನು ಮಾಡಲು ಹೇಳ್ತಾರೆ? ನಾಳೆ ತಿಳಿದು ಕೊಳ್ಳೋಣ.

* * * * *

ತೃಪ್ತಿಯಿಂದ ಸಮರ್ಪಸಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೮.೦೮.'೧೩ರಂದು ಪ್ರಕಟವಾಗಿತ್ತು)

ಹಿಂದಿನ ಸೂತ್ರಗಳಲ್ಲಿ ನಾವು ವಿಚಾರ ಮಾಡಿದ್ದೆವು - ನಮ್ಮ ಜ್ಞಾನ ಎಲ್ಲಿದೆ? ವಸ್ತುವಿನಲ್ಲಿದೆಯಾ? ಕಣ್ಣಿನಲ್ಲಿದೆಯಾ?

ಎಲ್ಲಿದೆ?.. ನಮ್ಮ ಮನಸ್ಸಿನಲ್ಲಿದೆ, ನಮ್ಮ ಚೇತನದಲ್ಲಿದೆ. ಈ ಚೇತನಕ್ಕೆ ಮತ್ತೆ ಮತ್ತೆ ಜ್ಞಾನದ ಪೋಷಣೆ ಬೇಕು. ಇಷ್ಟೆಲ್ಲಾ ಜ್ಞಾನ ತಿಳಿದು ಕೊಂಡ ನಂತರ, ಕಡೆಗೆ ಎಲ್ಲವನ್ನೂ. ಜ್ಞಾನವನ್ನೂ ಸಹ ಸಮರ್ಪಣೆ ಮಾಡಲು ಹೇಳುತ್ತಾರೆ.

ನೀನೇ ಜ್ಞಾನ ಸ್ವರೂಪನಾಗಿರು. ‘ಜ್ಞಾನಾತ್ ಧ್ಯಾನಂ ವಿಶಿಷ್ಯತೇ’… ಧ್ಯಾನದಲ್ಲಿ ಕುಳಿತುಕೊಂಡು ನಾನೇ ಜ್ಞಾನ ಸ್ವರೂಪನಾಗಿದ್ದೇನೆ ಅಂದುಕೊ. ಧ್ಯಾನದಿಂದ ಪಡೆಯುವುದು ಉತ್ತಮವಾದ, ಶುದ್ಧವಾದ, ದೋಷರಹಿತವಾದ ಜ್ಞಾನ  ಆ ತರಹ ಜ್ಞಾನದಿಂದ ತೃಪ್ತಿ ಸಿಗುತ್ತೆ. ಜ್ಞಾನ, ತೃಪ್ತಿ, ಎರಡೂ ಜೊತೆ ಜೊತೆಯಾಗಿಯೇ ಇರುತ್ತೆ. ಎಷ್ಟು ಜ್ಞಾನ ಇದೆಯೋ ಅಷ್ಟು ತೃಪ್ತಿ ಇರುತ್ತೆ; ಎಷ್ಟು ಅಜ್ಞಾನ ಇರುತ್ತೋ ಅಷ್ಟು ಅತೃಪ್ತಿ ಇರುತ್ತೆ.

ಹಾಗೇ ನಾವು ಕೃತಜ್ಞರಾದಷ್ಟೂ ತೃಪ್ತರಾಗುತ್ತೀವಿ. ತೃಪ್ತರಾದಷ್ಟೂ ಬೇರೆಯವರಿಗೆ ಉಪಕಾರಿಗಳಾಗುತ್ತೀವಿ. ಅತೃಪ್ತನಾದ ಮನುಷ್ಯ ಬೇರೆಯವರಿಗೆ ಉಪಕಾರಿ ಆಗುವುದಕ್ಕೆ ಸಾಧ್ಯವಿಲ್ಲ.

ಯಾವುದದರಿಂದ ತೃಪ್ತಿ ಸಿಗುತ್ತೆ ನಿಮಗೆ? ಯಶಸ್ಸು ತೃಪ್ತಿ ಕೊಡುತ್ತಾ? ಸಂಪತ್ತು ಕೊಡುತ್ತಾ ತೃಪ್ತಿ? ಇಲ್ಲ! ತೃಪ್ತಿ ಯಾವಾಗ ಬರ ಬೇಕು ನಿಮಗೆ? ನಾಳೆ? ನಾಡಿದ್ದು? ಹತ್ತು ವರುಷ ಆದ ಮೇಲೆ?

‘ಅದು’ ಆದ ಮೇಲೆ, ‘ಇದು’ ಆದ ಮೇಲೆ ತೃಪ್ತಿಯಾಗಿರ್ತಿನಿ ಅಂದುಕೋಬೋಡಿ. ನಾನು ‘ಈಗಲೇ’ ತೃಪ್ತನಾಗಿದೀನಿ. ನನ್ನ ಸ್ವಭಾವವೇ ತೃಪ್ತಿ ಅಂತ ತಿಳಿದುಕೊಳ್ಳಬೇಕು. ತೃಪ್ತಿಯಿಂದ ಭಕ್ತಿಯಿಂದ ಭಗವಂತನಿಗೆ ಎಲ್ಲವನ್ನೂ ಸಮರ್ಪಿಸಿ, ಮನಸ್ಸನ್ನು ಖಾಲಿ ಮಾಡಿಕೊಂಡಾಗ ಚೇತನ ಅರಳುತ್ತದೆ. ಅನಂತದಲ್ಲಿ ವಿಸ್ತಾರವಾಗುತ್ತದೆ.

* * * * *

ಶಿವನಿಗೆ ಎಲ್ಲವೂ ಅರ್ಪಣೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯.೦೮.'೧೩ರಂದು ಪ್ರಕಟವಾಗಿತ್ತು)

“ಶಿವಾರ್ಪಣಮಸ್ತು”.

ಇದು ಶಿವಸೂತ್ರದ ಕೊನೆಯ, ಅಮೂಲ್ಯವಾದ ಸೂತ್ರ. ಸರ್ವೇಶ್ವರನಾದ ಶಿವನಿಗೆ ಅರ್ಪಿತವಾಗಲಿ. ಯಾವುದನ್ನು ಅರ್ಪಣೆ ಮಾಡುತ್ತೀರ? ಮಾಡುವುದಕ್ಕೇನಿದೆ? ಕೂಲಂಕುಷವಾಗಿ ನೋಡೋಣ

ಶಿವನ ಮೊದಲ ಹೆಸರು ಪಶುಪತಿ. ಪಶು ಎಂದರೆ ಈ ಶರೀರ, ಎಂದರೆ ಇದರ ವೃತ್ತಿ ಪ್ರವೃತ್ತಿಗಳು ಪ್ರಕೃತಿ ನಿಯಮಕ್ಕೆ ಅನುಸಾರವಾಗಿ ತನ್ನಷ್ಟಕ್ಕೆ ತಾನೆ ನಡೆದುಕೊಂಡು ಹೋಗುತ್ತವೆ. ಇದರ ಅಧಿಪತಿ ಶಿವ.

ನಂತರ ಪ್ರಾಣಶಕ್ತಿ: ನಮ್ಮ ಪ್ರಾಣಕ್ಕೆ ಯಾರು ಅಧಿಪತಿ? ಶಿವ ಅಧಿಪತಿ. ಕೆಲವು ಸಲ ವೇದನೆಯ, ನೋವಿನ ಕ್ಷಣಗಳಲ್ಲಿ ಈ ಪ್ರಾಣ ದಹಿಸುತ್ತದೆ, ನೊಂದು ಬೆಂದುಹೋಗಿರುತ್ತೆ. ಪ್ರಾಣದ ಉರಿಯುವಿಕೆ ನಮಗೆ ಗೊತ್ತಾಗುವಾಗ ನಾವು ‘ಪಶು’ವಿನಿಂದ ಜೀವ ಭಾವ ದಕಡೆಗೆ ಬಂದಿರುತ್ತೇವೆ. ಉರಿಯುತ್ತಿರುವ ಈ ಪ್ರಾಣಕ್ಕೆ ಯಾರು ಅಧಿಪತಿ? ಶಿವ ಅಧಿಪತಿ, ಸಮರ್ಪಣೆ ಮಾಡಿಬಿಡು.

ಇದಾದ ಮೇಲೆ ಸೋಮನಾಥ: ಸೋಮ ಎಂದರೆ ಮನಸ್ಸು, ಮನೋತತ್ವ. ನಮ್ಮ ಮನಸ್ಸಿನಲ್ಲಿರುವ ಸದ್ವಿಚಾರ, ದುರ್ವಿಚಾರ ಎಲ್ಲಾದಕ್ಕೂ ಯಾರು ಅಧಿಪತಿ? ಶಿವ ಅಧಿಪತಿ, ಮನಸ್ಸನ್ನು ಸಮರ್ಪಣೆ ಮಾಡಿಬಿಡು.

ಮನಸ್ಸಿನ ನಂತರ? ಬುದ್ಧಿ. ಗೌರಿತತ್ವವೇ ಬುದ್ಧಿ. “ ಆತ್ಮಾತ್ವಂ ಗಿರಿಜಾಮತಿ:……….” ಶಿವ ಮಾನಸ ಪೂಜೆಯಲ್ಲಿ ಹೇಳ್ತಾರೆ ಬುದ್ಧೀನೇ ಗೌರೀ ಅಂತ. ಬುದ್ಧಿಗೆ ಅಧಿಪತಿ? ಗೌರೀ ಪತಿ, ಶಿವ, ಮತ್ತೆ ಅರ್ಪಣೆ ಮಾಡು.

ನಂತರ ಆತ್ಮಪತಿ – ಈಶ್ವರ ಅಂದರೆ ಆತ್ಮನಾಥ ಈಶ್ವರನಿಗೆ ಅರ್ಪಣೆ ಮಾಡು. ಆತ್ಮಾರ್ಪಣೆ ಮಾಡು. ‘ಆತ್ಮಾತ್ಮಂ’ ಎಂದರೆ ಶಿವೋಹಂ. ಒಂದು ರೀತಿಯಲ್ಲಿ ಶಿವೋಹಂ, ಶಿವಾರ್ಪಣಂ ಎರಡೂ ಒಂದೇ. ಶಿವಾರ್ಪಣವಾದಾಗ ಏನು ಪ್ರಕಾಶಕ್ಕೆ ಬರುತ್ತದೆ? ‘ಶಿವೋಹಂ, ಶಿವೋಹಂ!’

“ಶಿವಾರ್ಪಣಮಸ್ತು”

* * * * *

ಗೋಕುಲಾಷ್ಟಮಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೦.೦೮.'೧೩ರಂದು ಪ್ರಕಟವಾಗಿತ್ತು)

ಶ್ರೀ ಕೃಷ್ಣ ಜನಿಸಿದ ದಿನವನ್ನು ಗೋಕುಲಾಷ್ಟಮಿ ಎನ್ನುತ್ತೀವಿ. ಶ್ರೀ ಕೃಷ್ಣನ ಜನ್ಮ ಆದದ್ದು ಮಥುರಾದಲ್ಲಿ ಅಲ್ಲವಾ? ಯಾಕೆ ಮಥುರಾಷ್ಟಮಿ ಅನ್ನುವುದಿಲ್ಲ?

ಸಾಧಾರಣವಾಗಿ ಅಷ್ಟಮಿಯ ದಿನ ಯಾವ ಶುಭಕಾರ್ಯವನ್ನೂ ಮಾಡುವುದಿಲ್ಲ. ಆದರೆ ಗೋಕುಲಕ್ಕೆ ಅಷ್ಟಮಿ ತುಂಬಾ ಒಳ್ಳೆಯದೇ ಆಯಿತು. ಗೋ ….. ಎಂದರೇನು? ಸಂಸ್ಕ್ರತದಲ್ಲಿ ‘ಜ್ಞಾನ’ ಎಂದೂ ಅರ್ಥವಿದೆ. ಗೋಕುಲ ಅಂದರೆ ಜ್ಞಾನದ ಕುಲ.

ಜ್ಞಾನಕ್ಕೆ, ಆಧ್ಯಾತ್ಮಿಕಕ್ಕೆ ಅಷ್ಟಮಿ ತುಂಬಾ ಶ್ರೇಷ್ಠ. ಕೃಷ್ಣನ ಜನನವಾಯಿತು ಅಂದರೆ ಜ್ಞಾನದ ಕಿರಣದ ಉದಯವಾಯಿತು. ಆ ದಿನ ಜ್ಞಾನದ ಆವಿರ್ಭಾವವಾಯಿತು. ಜ್ಞಾನದ ಕುಲಕ್ಕೆ ಒಳ್ಳೆಯದಾಯ್ತು.

ಗೋಕುಲಕ್ಕೆ ಕೃಷ್ಣ ಬಂದ ತಕ್ಷಣ ಅಲ್ಲಿ ಆನಂದದ ಉದಯವೇ ಆಯ್ತು. ಎಲ್ಲೆಡೆಯೂ ಸಂಭ್ರಮ, ಉಲ್ಲಾಸ, ಉತ್ಸಾಹದ ಉತ್ಸವ ತಾನೇ ತಾನಾಯ್ತು! ಅದಕ್ಕೆ ಗೋಕುಲಾಷ್ಟಮಿ ಅಂತ ಹೇಳುತ್ತೀವಿ.

ಎಲ್ಲಾ ಜ್ಞಾನದ ಸಾರ ಭಗವದ್ಗೀತೆ.  ಅಷ್ಟಮಿಯ ದಿನ ಜ್ಞಾನದ ಕುಲಕ್ಕೆ ದೀಪ ಹಚ್ಚಿದ ಹಾಗೆ ಬೆಳಕು ಉಂಟಾಯಿತು.

ಯೋಗೀಶ್ವರ. ಜಗದ್ಗುರು ಎನಿಸಿದ ಗೀತಾಚಾರ್ಯರಾದ ಶ್ರೀ ಕೃಷ್ಣನ ಆಗಮನವಾಯ್ತು. ಅವತಾರವಾಯ್ತು.

* * * * *

ಪೂರ್ಣಾವತಾರ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೧.೦೮.'೧೩ರಂದು ಪ್ರಕಟವಾಗಿತ್ತು)

ನಂದ ಕಂದ ಮುಕುಂದನ ಆಗಮನದಿಂದ ಗೋಕುಲವು ಸಂಭ್ರಮಿಸುತ್ತಿದ್ದರೆ, ಅಲ್ಲಿ, ಮಥುರಾನಗರಿಯಲ್ಲಿ ಭಯದ ವಾತಾವರಣ ಉಂಟಾಯಿತು.

ಕೃಷ್ಣ ಹುಟ್ಟುವ ಎಷ್ಟೋ ಮುಂಚೆಯೇ, ಅವನು ಹುಟ್ಟುತ್ತಾನೆ ಅಂತ ಗೊತ್ತಾದ ತಕ್ಷಣವೇ ಅವನ ಅಪ್ಪ, ಅಮ್ಮನನ್ನು ಜೈಲಿಗೆ ಹಾಕಿಬಿಟ್ಟರು. ಆಮೇಲೆ ಹುಟ್ಟಿದ. ತಕ್ಷಣ ತಂದೆ ತಾಯಿಯಿಂದ ದೂರ ಆಗಬೇಕಾಯಿತು. ಚಿಕ್ಕಮಗು ಆಗಿದ್ದಾಗಿಂದಲೇ ಎಂಥೆಂಥ ಅಸುರರನ್ನೆಲ್ಲಾ ಕೊಲ್ಲಬೇಕಾಯ್ತು!

ಕೃಷ್ಣ ಹೋದಲೆಲ್ಲಾ ಒಂದಲ್ಲ ಒಂದು ಜಂಜಡ, ಪರದಾಟ, ಸಮಸ್ಯೆ. ಶ್ರೀ ಕೃಷ್ಣನ ಜೀವನದ ದುಃಖವನ್ನು, ಕಷ್ಟಗಳನ್ನು ಬೇರೆ ಯಾವ ಜೀವಿಯೂ ಸಹಿಸಲು ಸಾಧ್ಯವೇ ಇಲ್ಲ. ಆದರೂ ಅ ಸಮಸ್ಯೆಗಳ, ಸಂಕಷ್ಟಗಳ ಮಧ್ಯದಲ್ಲಿಯೇ ನಸುನಗುತ್ತಾ, ಪ್ರಸನ್ನನಾಗಿ, ಸಂತೋಷವನ್ನು, ಆನಂದವನ್ನು ಅಭಿವ್ಯಕ್ತಿಸುತ್ತಿದ್ದ. ಪ್ರೇಮ ಸ್ವರೂಪನಾದ ಪರಮಾತ್ಮ.

ಅದಕ್ಕೇ ಕೃಷ್ಣನನ್ನು ಪೂರ್ಣಜ್ಞಾನಿ ಎನ್ನುವುದು. ಪೂರ್ಣಾವತಾರ ಎನ್ನುವುದು. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಶ್ರೀಕೃಷ್ಣ ಪರಿಪೂರ್ಣನಾಗಿದ್ದಾನೆ. ಸರ್ವವ್ಯಾಪ್ತವಾದ ಆ ಚೇತನವು ನಮ್ಮಲ್ಲಿಯೂ ಇದೆ. ಅದು ಬೆಳಗುವಂತೆ ಮಾಡಿಕೊಳ್ಳಬೇಕಷ್ಟೇ.

* * * * *

ಕೃಷ್ಣ ತತ್ವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೨.೦೮.'೧೩ರಂದು ಪ್ರಕಟವಾಗಿತ್ತು)

ಕೃಷ್ಣ ಎಂದರೆ ಅತ್ಯಂತ ಆಕರ್ಷಣೀಯ ಎಂದರ್ಥ. ಯಾವುದೇ ಆಕರ್ಷಣೆಯು ಎಲ್ಲೇ ಉಂಟಾದರೂ ಅದು ಕೃಷ್ಣನಿಂದಲೇ, ಅದೇ ಕೃಷ್ಣ ತತ್ವ. ಅದು ಸರ್ವವ್ಯಾಪಿ. ಕೃಷ್ಣನು ಆ ನಿರಾಕಾರವಾದ ತತ್ವದ ಕೇಂದ್ರ. ಅವನೇ ದೈವತ್ವ.

ಸಾಮಾನ್ಯವಾಗಿ ಜನರು ಯಾವುದರಿಂದ ಆಕರ್ಷಿತರಾದಾಗಲೂ ಆ ಆಕರ್ಷಣೆಯ ಹಿಂದಿರುವ ದೈವೀ ಚೇತನವನ್ನು ಗುರುತಿಸುವುದಿಲ್ಲ. ಆಕರ್ಷಣೆಗೆ ಕಾರಣವನ್ನು ವ್ಯಕ್ತಿಯಲ್ಲಿಯೋ, ವಸ್ತುವಿನಲ್ಲಿಯೋ, ಪರಿಸ್ಥಿತಿಯಲ್ಲಿಯೋ ಕಂಡುಕೊಳ್ಳುತ್ತಾರೆ.

ಇದು ತಿರುಳನ್ನು ಬಿಟ್ಟು ಬಿಟ್ಟು ಹೊರಗಿನ ಸಿಪ್ಪಯನ್ನು ಹಿಡಿದುಕೊಂಡ ಹಾಗೆ. ಆಗ ಪರಿಣಾಮವಾಗಿ ನಿಮ್ಮ ಕೈಯಲ್ಲಿ ಸಿಪ್ಪೆ ಮಾತ್ರವೇ ಉಳಿಯುವುದು!

ರಾಧೆಯ ಹಾಗೆ ಚತುರರಾಗಬೇಕು. ‘ಕೃಷ್ಣಮಯಿ’ಯಾದ ಆ ರಾಧೆಯ ಜಗತ್ತೆಲ್ಲವೂ ಕೃಷ್ಣಮಯವೇ ಆಗಿತ್ತು! ಆಕರ್ಷಣೆ ಇರುವ ಕಡೆಯಲ್ಲೆಲ್ಲಾ ಕೃಷ್ಣನನ್ನೇ ಕಾಣಲು ನಿಮಗೆ ಸಾಧ್ಯವಾದರೆ ನೀವು ರಾಧೆಯೇ ಆಗುವಿರಿ. ಆಗ ನೀವು ಯಾವಾಗಲೂ ನಿಮ್ಮ ಕೇಂದ್ರದಲ್ಲಿಯೇ ಇರುತ್ತೀರ.

ಸೌಂದರ್ಯ, ಸಂತೋಷ, ಸತ್ಯಗಳಿರುವ ಕಡೆಗೇ ಓಡುವುದು ಮನಸ್ಸಿನ ಸ್ವಭಾವ. ಅದಕ್ಕೇ ಕೃಷ್ಣ ಅರ್ಜುನನಿಗೆ – ‘ಸುಂದರವಾಗಿರುವುದರಲ್ಲಿ ಸೌಂದರ್ಯ, ಬಲಿಷ್ಠವಾಗಿರುವುದರಲ್ಲಿ ಬಲ, ಹಾಗೂ ಜ್ಞಾನಿಯಲ್ಲಿರುವ ವಿವೇಕವೇ ನಾನು’ – ಎಂದು ಹೇಳ್ತಾನೆ. ಹೀಗೆ ಅವನು ಮನಸ್ಸನ್ನು ಆಕರ್ಷಿಸಿ ತನ್ನಿಂದ ಅದು ದೂರ ಸರಿಯದಂತೆ ಮಾಡುತ್ತಾನೆ.

* * * * *

ಅಸೂಯಾ – ಅನಸೂಯಾ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೪.೦೮.'೧೩ರಂದು ಪ್ರಕಟವಾಗಿತ್ತು)

ರ್ಜುನನು ಅಸೂಯಾರಹಿತನಾಗಿರುವುದರಿಂದಲೇ ಅವನಿಗೆ ‘ರಾಜಗುಹ್ಯ’ ಎಂದರೆ ಉತ್ಕಷ್ಟವಾದ ರಹಸ್ಯವನ್ನು ತಿಳಿಸುತ್ತಿರುವುದಾಗಿ ಕೃಷ್ಣ ಹೇಳುತ್ತಾನೆ.

ಅಸೂಯೆ ಎಂದರೆ, ದೋಷವನ್ನು ಹುಡುಕುವ ಹಾಗೂ ಎಲ್ಲದರಲ್ಲೂ, ಉತ್ತಮವಾಗಿರುವುದರಲ್ಲಿಯೂ ದುರುದ್ದೇಶವನ್ನು ಕಾಣುವ ಮನಃಸ್ಥಿತಿ.

ಈಗ ನಿಮಗೊಂದು ಗೆಳೆತನವಿರುತ್ತೆ. ಹತ್ತು ವರ್ಷಗಳ ನಂತರ ಎನೋ ದೋಷ ಕಂಡುಬರುತ್ತೆ. ಆ ಸ್ನೇಹದಿಂದ ದೂರವಿರಲು ನಿರ್ಧರಿಸುತ್ತೀರಿ. ಈಗ ನೀವು ಆ ಸಮಗ್ರ ಬಾಂದವ್ಯದಲ್ಲಿ ಒಳ್ಳೆಯದೇನನ್ನೂ ಕಾಣಲಾರಿರಿ. ಅಸೂಯೆ ಎಂದರೆ ಇದೇ. ಆಧ್ಯಾತ್ಮ ಮಾರ್ಗದಲ್ಲಿ ಇದ್ದುದೆಲ್ಲವೂ ದೋಷಯುಕ್ತವೆಂದು ಭಾವಿಸುತ್ತೀರಿ. ಇದೇ ಅಸೂಯೆ.

ಜ್ಞಾನವು ಪ್ರಜ್ಞೆಯ ಬೇರೆ ಬೇರೆ ಸ್ತರಗಳಲ್ಲಿ ಭಿನ್ನ ಭಿನ್ನವಾಗಿರುತ್ತೆ. ನೀವು ಒಂದು ನಿರ್ಧಿಷ್ಟವಾದ ಪ್ರಜ್ಞೆಯ ಮಟ್ಟದಲ್ಲಿ, ಅರಿವಿನ ಹಂತದಲ್ಲಿ ‘ಅನಸೂಯ’ರಾಗುತ್ತೀರಿ. ‘ಅನಸೂಯ’ ಎಂದರೆ ದೋಷವನ್ನರಸುವ ದೃಷ್ಟಿಯಿಂದ ಮುಕ್ತರಾಗುವುದು ಎಂದು ಅರ್ಥ.

ತಪ್ಪು ಕಂಡುಹಿಡಿಯುವ ದೃಷ್ಟಿಯಿಂದ ಪೂರ್ಣವಾಗಿ ಮುಕ್ತರಾಗದಿದ್ದಾಗ, ಜ್ಞಾನವನ್ನು ಪಡೆಯುವುದರಿಂದ ಪ್ರಯೋಜನ ಆಗುವುದಿಲ್ಲ. ಅದು ಅರಳಲು ಸಾಧ್ಯವಾಗುವುದಿಲ್ಲ.

ಕನ್ನಡಿಯ ಮೇಲೆ ಧೂಳಿದ್ದರೆ ಅದನ್ನು ಒರೆಸಬಹುದು. ಕಣ್ಣಿನಲ್ಲಿಯೇ ಪೊರೆ ಬಂದಿದ್ದರೆ? ಆಗ ಪೊರೆಯನ್ನು ನಿವಾರಿಸಬೇಕು. ಈ ಜಗತ್ತು ಮಂಕಾಗಿ ಕಾಣುತ್ತಿರುವುದು ಕೇವಲ ನನ್ನ ದೃಷ್ಟಿಯಿಂದ ಮಾತ್ರ ಎಂದು ಅರಿಯುತ್ತದೆ. ಅನಸೂಯ, ಅಲ್ಲಿಗೆ ಸಮಸ್ಯೆಯ ಅರ್ಧಭಾಗ ಪರಿಹಾರವಾದಂತೆಯೇ!

* * * * *