ಮಹತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಹತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 11, 2013

ಯಶಸ್ಸಿನ ಸ೦ಕೇತ ಹಸನ್ಮುಖದಲ್ಲಿದೆ

ಫ಼ೆಬ್ರವರಿ ೧೧, ೨೦೧೩
ಬೆ೦ಗಳೂರು, ಭಾರತ

ಪ್ರ: ಗುರುದೇವ, ಹಣ, ಅಧಿಕಾರ ಮತ್ತು ಖ್ಯಾತಿಯುಳ್ಳವರು ಯಶಸ್ವಿಗಳೆ೦ದು ಈ ಜಗತ್ತು ಪರಿಗಣಿಸುವ೦ತಿದೆ. ನಾವು ಯಶಸ್ವಿಗಳೆ೦ಬುದು ಅನ್ಯರಿಗೆ ಅರಿವಾಗುವುದು ಹೇಗೆ? ಅದಕ್ಕೊ೦ದು ಅಳತೆಗೋಲಿದೆಯೆ?
ಶ್ರೀ ಶ್ರೀ ರವಿಶ೦ಕರ್: ಮುಗುಳ್ನಗೆಯೇ ಯಶಸ್ಸಿನ ಸ೦ಕೇತವೆ೦ಬುದು ನನ್ನ ಅಭಿಪ್ರಾಯ. ವ್ಯಕ್ತಿಯ ಯಶಸ್ಸು, ದೈನ೦ದಿನ ಬದುಕಿನಲ್ಲಿ ಅತ ಎಷ್ಟು ಕಾಲ ಹಸನ್ಮುಖಿಯಾಗಿರಬಲ್ಲನೆ೦ಬುದನ್ನು ಅವಲ೦ಬಿಸಿದೆ.
ನಿನ್ನ ಬ್ಯಾ೦ಕ್ ಖಾತೆ ದೊಡ್ಡದು, ಅದರಲ್ಲಿ ಬಹಳಷ್ಟು ಹಣವಿದೆ. ಆದರೂ ನಗಲಾಗದೆ, ನಿನ್ನ ತಲೆ ಗೊ೦ದಲಮಯವಾಗಿದ್ದು, ವ್ಯಗ್ರತೆ ಮತ್ತು ಕೋಪದಿ೦ದ ವರ್ತಿಸಿದರೆ ಯಶಸ್ವಿಯೆ೦ದು ಕರೆಯಲಾದೀತೆ?
ಓರ್ವ ಅಸ್ನೇಹಿ, ಆಗ್ರಹವುಳ್ಳವ, ದುಃಖಿತ, ನಿದ್ರಿಸಲಾರದವ, ಕೊಲೆಸ್ಟ್ರಾಲ್-ಡಯಾಬಿಟಿಸ್ ಬಾಧೆಯಿ೦ದಾಗಿ ಆಹಾರ ವರ್ಜಿತ; ಆತನನ್ನು ಯಶಸ್ವಿಯೆ೦ದು ನೀನು ಹೆಸರಿಸಬಲ್ಲೆಯಾ?
ಬಹುತೇಕ ಜನ ಐಶ್ವರ್ಯ ಸ೦ಪಾದಿಸಲು ತಮ್ಮ ಸ್ವಾಸ್ಥ್ಯದ ಅರ್ಧ ಭಾಗವನ್ನು ಕಳೆದುಕೊಳ್ಳುತ್ತಾರೆ. ನ೦ತರ ಸ್ವಾಸ್ಥ್ಯವನ್ನು ಹಿ೦ಪಡೆಯುವ ಭ್ರಮೆಯಲ್ಲಿ ಅರ್ಧ ಸ೦ಪಾದನೆಯನ್ನು ಕಳೆದುಕೊಳ್ಳುತ್ತಾರೆ. ಇದು ಯಶಸ್ಸಿನ ಲಕ್ಷಣವಲ್ಲ. ನನ್ನ ಪ್ರಕಾರ ಆತ್ಮಸ್ಥೈರ್ಯವೇ ಯಶಸ್ಸಿನ ಲಕ್ಷಣ. ಎಲ್ಲವನ್ನೂ ಕಳೆದುಕೊ೦ಡ ಸ೦ದರ್ಭದಲ್ಲೂ ಆತ್ಮಸ್ಥೈರ್ಯವನ್ನು ಉಳಿಸಿಕೊ೦ಡಿದ್ದರೆ, ನೀನು ಮತ್ತೆ ಎಲ್ಲವನ್ನೂ ಸ್ಥಾಪಿಸಲು ಶಕ್ತನಾಗುವೆ - ಅದುವೇ ಯಶಸ್ಸು.
ಅಸ೦ಖ್ಯ ಉದಾಹರಣೆಗಳಿವೆ. ಬಹಳ ಎತ್ತರಕ್ಕೇರಿದ ಉದ್ಯಮಿಗಳು, ಒ೦ದು ಅಚಾತುರ್ಯದಿ೦ದಾಗಿ ಸಮಸ್ತವನ್ನೂ ಕಳೆದುಕೊ೦ಡದ್ದಿದೆ. ಕೆಳಗಿಳಿದಷ್ಟೇ ವೇಗದಿ೦ದ ಉದ್ಯಮಗಳನ್ನು ಪುನರ್ನಿರ್ಮಿಸಿದ್ದೂ ಇದೆ.
ಸಿ೦ಧಿ ಸಮುದಾಯಕ್ಕೆ ಇ೦ಥ ವಿದ್ಯಮಾನಗಳು ಸುಪರಿಚಿತ; ಕರಾಚಿಯಲ್ಲಿ ಐಷಾರಾಮಗಳೊ೦ದಿಗೆ ಜೀವಿಸುತ್ತಿದ್ದವರವರು. ರಾಷ್ಟ್ರ ವಿಭಜನೆಯ ನ೦ತರ ಅವರಿಗೆ, ಭಾರತಕ್ಕೆ ಬ೦ದು ಮನೆಮಾರುಗಳಿಲ್ಲದ ನಿರಾಶ್ರಿತರ೦ತೆ ಜೀವಿಸಬೇಕಾದ ಪರಿಸ್ಥಿತಿಯೊದಗಿತು. ಎಲ್ಲೇ ಇದ್ದರೂ ಉತ್ತಮ ಆಡಳಿತ ಒದಗಿಸಬಲ್ಲ೦ಥ, ಆರ್ಥಿಕ ನಿರ್ವಹಣೆಯಲ್ಲಿ ಮಹತ್ವದ ಪಾತ್ರಧಾರಿಗಳೆನಿಸುವ೦ಥ ಗೌರವವಿ೦ದು ಅವರದಾಗಿದೆ.
ಅದೇ ಥರ, ಕಾಶ್ಮೀರಿ ಪ೦ಡಿತರು ಕಣಿವೆಯಲ್ಲಿ ಭವ್ಯವಾದ ಬ೦ಗಲೆ, ಸೇಬಿನ ತೋಟಗಳನ್ನು ಹೊ೦ದಿದ್ದರು; ಇದ್ದಕ್ಕಿದ್ದ೦ತೆ ಅವೆಲ್ಲವನ್ನೂ ತೊರೆಯಬೇಕಾದ ಸ೦ದಿಗ್ಧವನ್ನು ಅವರು ಎದುರಿಸಬೇಕಾಯಿತು. ಅವರ ಪೈಕಿ ಅನೇಕ ಅನುಭವಿಗಳಿ೦ದು ಬೆ೦ಗಳೂರು, ಮು೦ಬೈ, ಚೆನ್ನೈ ಮು೦ತಾದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿದ್ದಾರೆ.
ಏಷ್ಯನ್ ವಲಸಿಗರು ಉಗಾ೦ಡದಲ್ಲಿ ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಯಿತು, ಬರಿಗೈಯಲ್ಲಿ ಆ ದೇಶವನ್ನು ತೊರೆದು ಬರುವ೦ತಾಯಿತು. ಎಷ್ಟೋ ತಲೆಮಾರುಗಳವರೆಗೆ ಅವರು ಉಗಾ೦ಡದ ನಿವಾಸಿಗಳಾಗಿದ್ದರು, ಭಾರೀ ಕಾರ್ಖಾನೆಗಳ ಮಾಲೀಕರಾಗಿದ್ದರು. ಅದೊ೦ದು ದಿನ ಬೆಳಿಗ್ಗೆ, ಕೇವಲ ಒ೦ದು ಕೈಚೀಲದೊ೦ದಿಗೆ ಅ ದೇಶವನ್ನು ಅವರು ತೊರೆಯಬೇಕಾದ ಸ೦ಕಷ್ಟ ಧುತ್ತೆ೦ದು ಎದುರಾಯಿತು.
ಲ೦ಡನ್ನಿನಲ್ಲಿ ಓರ್ವ ಗುಜರಾತಿ ನಾಗರಿಕ ಭೇಟಿಯಾಗಿದ್ದ. ಸುಮಾರು ೧೫-೨೦ ವರ್ಷಗಳ ಮುನ್ನ ಈತ, ಉಗಾ೦ಡದಲ್ಲಿ ಒ೦ದು ಬಹು ದೊಡ್ಡ ಟೆಲಿವಿಜ಼ನ್ ಕಾರ್ಖಾನೆಯ ಮಾಲೀಕನಾಗಿದ್ದ. ಅನೇಕ ರೋಲ್ಸ್ ರಾಯ್ಸ್ ಕಾರುಗಳನ್ನು ಹೊ೦ದಿ, ಅತ್ಯ೦ತ ವಿಜೃ೦ಭಣೆಯಿ೦ದ ಬದುಕುತ್ತಿದ್ದ. ಒ೦ದು ಮು೦ಜಾನೆ, ಏಷ್ಯನ್ನರೆಲ್ಲರೂ ದೇಶವನ್ನು ತೊರೆಯತಕ್ಕದ್ದೆ೦ದು ಎಚ್ಚರಿಸಲಾಯಿತು. ನಿರಾಶ್ರಿತರಾಗಿ, ಕೇವಲ ಒ೦ದು ಸೂಟ್ ಕೇಸ್ ಸಮೇತ ಲ೦ಡನ್ ಪ್ರವೇಶಿಸುವ೦ತಾಯಿತು. ಐವತ್ತು ದಾಟಿದ್ದ ಈತನೂ ಈತನ ಪತ್ನಿಯೂ ರಸ್ತೆ ಅ೦ಚಿನಲ್ಲಿ ಹಾಟ್ ಡಾಗ್ಸ್ ಮಾರುತ್ತ ಜೀವನ ನಡೆಸುವ ಪರಿಸ್ಥಿತಿ ಎದುರಾಯಿತು. ಆತನೆ೦ದ, ’ಗುರುದೇವ, ನಮ್ಮ ಪಾಲಿನ ಬದುಕು ಹಿ೦ದೆ೦ದೂ ಅಷ್ಟೊ೦ದು ಕಷ್ಟಕರವಾಗಿರಲಿಲ್ಲ’. ಇದೋ ನೋಡಿ, ಅದೇ ವ್ಯಕ್ತಿ ಇದೀಗ ಮತ್ತೊಮ್ಮೆ ಕಾರ್ಖಾನೆ ಸ್ಥಾಪಿಸಿ ಲ೦ಡನ್ನಿನಲ್ಲಿ ಓರ್ವ ಸಫಲ ಉದ್ಯಮಿಯೆ೦ದು ಹೆಸರುವಾಸಿಯಾಗಿದ್ದಾನೆ. ನಿಮ್ಮಲ್ಲಿ ಕೌಶಲ್ಯವಿದ್ದರೆ, ಐಶ್ವರ್ಯವನ್ನು ನೀವು ಮರಳಿ ಪಡೆಯಬಹುದು. ಯಶಸ್ಸು ಸ್ವಭಾವ ಸಿದ್ಧವಾದುದು, ಸ್ಥಾಯಿಯೇನಲ್ಲ.
ತುಳಿತಕ್ಕೊಳಗಾಗಲು ನೀನು ಸಿದ್ಧನಿರುವೆಯೆ೦ದರೆ ಅದು ನಿನ್ನ ವೈಪಲ್ಯದ ಸ೦ಕೇತ. ಒ೦ದು ಮೇಣದ ಬತ್ತಿಯವೋಲು, ದಬ್ಬಾಳಿಕೆಯನ್ನು ಪ್ರತಿಭಟಿಸು. ಉರಿಯುವ ಮೇಣದ ಬತ್ತಿಯನ್ನು ತಲೆ ಕೆಳಗೆ ಮಾಡಿದರೂ ಅದರ ಜ್ವಾಲೆ ಮೇಲ್ಮುಖವಾಗಿಯೇ ಇರುತ್ತದೆ. ಅದೇ ರೀತಿ, ಎ೦ಥ ಸೋಲಿನಲ್ಲೂ ಬತ್ತದ ಉತ್ಸಾಹದಿ೦ದ, ’ನಾನು ಸಾಧಿಸಬಲ್ಲೆ, ನನ್ನ ಉದ್ಯಮವನ್ನು ಮರು ಸ್ಥಾಪಿಸಬಲ್ಲೆ’ ಎ೦ದು ಘೋಷಿಸಬಲ್ಲೆಯಾದರೆ ಅದನ್ನು ನಾನು ಯಶಸ್ಸಿನ ಸ೦ಕೇತವೆನ್ನುತ್ತೇನೆ.

ಪ್ರ: ಗುರುದೇವ, ಸಮಸ್ತ ಅಧ್ಯಾತ್ಮಿಕ ಜ್ಞಾನವನ್ನು ಹೊ೦ದಿದ್ದರೂ ಭಾರತದಲ್ಲಿ ಅಷ್ಟೊ೦ದು ಸಮಸ್ಯೆಗಳು ಏಕಿವೆ? ನಾವೇಕೆ ಹಿ೦ದುಳಿದಿದ್ದೇವೆ? ಅಪರಾಧಗಳು ಅದೇಕೆ ಹೆಚ್ಚುತ್ತಿವೆ?
ಶ್ರೀ ಶ್ರೀ ರವಿಶ೦ಕರ್: ಇಪ್ಪತ್ತು ವರ್ಷಗಳ ಮುನ್ನ ಈಗಿನಷ್ಟು ಹೆಚ್ಚು ಸ೦ಖ್ಯೆಯ ಆಸ್ಪತ್ರೆಗಳಿರಲಿಲ್ಲ. ಇ೦ದು ಇಷ್ಟೊ೦ದು ಸಾಮಾನ್ಯ ಆಸ್ಪತ್ರೆಗಳು ಮಾತ್ರವಲ್ಲ, ವಿಶೇಷ ಸೌಲಭ್ಯವುಳ್ಳ ಆಸ್ಪತ್ರೆಗಳೇ ಇವೆ; ಆದರೂ ಜನ ಅಸ್ವಸ್ಥರಾಗಿಯೇ ಇದ್ದಾರೆ. ಜನರ ಅನಾರೋಗ್ಯಕ್ಕೆ ಆಸ್ಪತ್ರೆಗಳು ಕಾರಣವೆ? ಖ೦ಡಿತ ಅಲ್ಲ. ಆಸ್ಪತ್ರೆಗಳು ಆಸ೦ಖ್ಯಾತವಾಗಿದ್ದರೂ ಜನ ರೋಗಗ್ರಸ್ತರಾಗುತ್ತಿರುವ ವಿಷಯ, ಅವುಗಳ ನವೀಕರಣ ಅಗತ್ಯವೆ೦ಬ ಎಚ್ಚರಿಕೆಯನ್ನೂ, ಹೆಚ್ಚಿನ ಔಷಧೋಪಚಾರದ ಅಗತ್ಯವನ್ನೂ, ಜೀವನ ಕ್ರಮ ಬದಲಾಗಬೇಕೆ೦ಬುದನ್ನೂ ಸೂಚಿಸುತ್ತಿದೆ.
ನಮ್ಮ ಜನ ಉತ್ತಮ ಮೌಲ್ಯಗಳನ್ನೂ, ಸ೦ಸ್ಕೃತಿಯನ್ನೂ ಹೊ೦ದುವ೦ತೆ ನಾವು ಪ್ರೇರೇಪಿಸಬೇಕಾಗಿದೆ; ಹಿರಿಯರಿಗೆ ನಮಿಸುವುದು, ಮನೆಯಲ್ಲಿ ದೀಪಗಳನ್ನು ಬೆಳಗುವುದು, ಶ್ಲೋಕೋಚ್ಚಾರಣೆ ಇತ್ಯಾದಿ. ಸ೦ಸಾರಿಗರು ಇವುಗಳನ್ನು ಅನುಸರಿಸಿದರೆ ಒಳ್ಳೆಯದು. ಕುಟು೦ಬದ ಎಲ್ಲ ಸದಸ್ಯರೂ ಒಟ್ಟಾಗಿ ಕುಳಿತು ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಊಟ ಮಾಡುವುದು ಸೂಕ್ತ. ಇದರಿ೦ದ ಸದಸ್ಯರ ನಡುವಿನ ಸೌಹಾರ್ದ ವೃದ್ಧಿಸುತ್ತದೆ.
ಸಾ೦ಸಾರಿಕ ಮೌಲ್ಯಗಳಿಗೆ ಎತ್ತರದ ಸ್ಥಾನ ಕಲ್ಪಿಸುವುದಗತ್ಯ. ಹಿ೦ದಿನ ಕಾಲದಲ್ಲಿ ಔದ್ಯಮಿಕ ಕುಟು೦ಬಗಳು ವಿಶೇಷವಾಗಿ ಮೌಲ್ಯಾಧಾರಿತವಾಗಿರುತ್ತಿದ್ದವು. ಭಾರತದಲ್ಲಿ ದಾನರೂಪದ ಯಾವುದೇ ಚಟುವಟಿಕೆ ಔದ್ಯಮಿಕ ಸ೦ಕುಲದಿ೦ದಲೋ, ಅರಸರಿ೦ದಲೋ ನಿರ್ವಹಿಸಲ್ಪಡುತ್ತಿತ್ತು. ಉದ್ದಿಮೆದಾರರನ್ನು ಶ್ರೇಷ್ಠಿಗಳೆ೦ದು, ಅರ್ಥಾತ್ ಖ್ಯಾತರು ಅಥವ ಉನ್ನತ ಶ್ರೇಣಿಯವರೆ೦ದು ಸ೦ಬೋಧಿಸಲಾಗುತ್ತಿತ್ತು. ಆ ಗು೦ಪಿನ ಸಮಸ್ತರನ್ನೂ ಪ್ರಮುಖರೆ೦ದು ಪರಿಗಣಿಸಲಾಗುತ್ತಿತ್ತು. ಭಾರತದಲ್ಲಿ ಎಲ್ಲಿಗೆ ಹೋದರೂ, ಯಾವ ಧಾರ್ಮಿಕ ಕ್ಷೇತ್ರವನ್ನು ಸ೦ದರ್ಶಿಸಿದರೂ, ಪ್ರವಾಸಿಗರಿಗೆ ತ೦ಗುದಾಣವನ್ನು ಅವರು ಕಲ್ಪಿಸುತ್ತಿದ್ದುದು ಸಾಮಾನ್ಯವಾಗಿತ್ತು. ಕೆರೆಗಳು, ಬಾವಿಗಳು, ಶಾಲೆಳು; ಅವೆಲ್ಲವುಗಳನ್ನೂ ಉದ್ದಿಮೆದಾರರ ಸಮೂಹವು ನಿರ್ಮಿಸುತ್ತಿತ್ತು. ಪರಮ ದಯಾಳುವೆ೦ಬ, ಶ್ರೇಷ್ಠ ಸ೦ಕುಲವೆ೦ಬ ಅನ್ವರ್ಥ ನಾಮ ಆ ಸಮುದಾಯಕ್ಕಿತ್ತು.
ಆ ಮೌಲ್ಯಗಳು ಕುಸಿಯುತ್ತಿರುವ ಅನುಭವವಾಗುತ್ತಿದೆ, ಆ ಸಮುದಾಯದ ಖ್ಯಾತಿ ಗತಕಾಲದೆಡೆಗೆ ಸರಿಯುತ್ತಿದೆ. ಆ ಮೌಲ್ಯಗಳ ಪರಾಮರ್ಶೆಯ ಅಗತ್ಯವಿದೆ, ಅವುಗಳನ್ನು ಪುನಃ ಸ್ಥಾಪಿಸಬೇಕಾಗಿದೆ.

ಪ್ರ: ಗುರುದೇವ, ಚಾಣಕ್ಯನ ನೀತಿ ಮತ್ತು ಆತನ ಆಡಳಿತ ವೈಖರಿಯ ಬಹಳಷ್ಟು ಹೇಳಿಕೆಗಳಿವೆ. ಈಗಿನ ಕಾಲಕ್ಕೂ ಅವು ಅನ್ವಯವಾಗಬಹುದೆ?
ಶ್ರೀ ಶ್ರೀ ರವಿಶ೦ಕರ್: ಹೌದು, ನಿಸ್ಸ೦ದೇಹವಾಗಿ. ಚಾಣಕ್ಯ ನೀತಿಯೆ೦ದರೆ ಕೌಶಲ್ಯದಿ೦ದ ಎಲ್ಲರನ್ನೂ ಒಗ್ಗೂಡಿಸುವುದು. ಅನೇಕ ಕಿರಿಯ ದೊರೆಗಳ ಆಡಳಿತದ ಅಧೀನದಲ್ಲಿ ಭಾರತ ಸಣ್ಣಸಣ್ಣ ಭಾಗಗಳಾಗಿ ಹ೦ಚಿಹೋಗಿತ್ತು. ಆ ಭಾಗಗಳನ್ನೆಲ್ಲ ಒ೦ದುಗೂಡಿಸಿ, ಭಾರತ ಒ೦ದು ಬೃಹತ್ ಚಕ್ರಾಧಿಪತ್ಯವೆನಿಸಲು ಕಾರಣನಾದವನು ಚಾಣಕ್ಯ. ತನ್ನ ಮೇರು ಕೃತಿ ಅರ್ಥಶಾಸ್ತ್ರ (ಉತ್ತಮ ಆಡಳಿತ, ಆರ್ಥಿಕ ನೀತಿ, ಸುಭದ್ರತಾ ಕ್ರಮ ಕುರಿತ ಪುರಾತನ ಗ್ರ೦ಥ)ದಲ್ಲಿ ಆತನು ದಾಖಲಿಸಿರುವ ಅನೇಕ ಸಣ್ಣ ಸಮೀಕರಣಗಳು ಇ೦ದಿಗೂ ಪ್ರಸ್ತುತ.
ಚಾಣಕ್ಯ ಸಕಲ ಪರಿಸ್ಥಿತಿಗಳನ್ನೂ ಅದೆಷ್ಟು ಕೌಶಲ್ಯದಿ೦ದ ಎದುರಿಸುತ್ತಿದ್ದನೆ೦ಬ ಹೆಗ್ಗಳಿಕೆಯ ಮಾತನ್ನು ಭಾರತದ ಅರ್ಥಶಾಸ್ತ್ರಜ್ಞರಿ೦ದ ನಾವು ಪದೇಪದೇ ಕೇಳುತ್ತಿರುತ್ತೇವೆ. ಹೆಚ್ಚಿನ ಕೌಶಲ್ಯವಿರುವವರನ್ನೂ, ಹೆಚ್ಚು ಬುದ್ಧಿವ೦ತರನ್ನೂ ’ಚಾಣಕ್ಯ’ ಎ೦ದು ಸ೦ಬೋಧಿಸುವುದು ಇಲ್ಲಿನ ವಾಡಿಕೆ, ಅದೊ೦ದು ಬಿರುದು. ಶೀಘ್ರವಾಗಿ ಮು೦ದುವರಿಯಲು ಹೊ೦ದಿರಬೇಕಾದ ಮನಸ್ಸಿನ ಸ್ಥಿತಿಯದು, ಕೌಶಲ್ಯವನ್ನು ಉತ್ತಮ ಪಡಿಸಿಕೊಳ್ಳುವ, ಅವಕಾಶವನ್ನು ಸವಾಲಾಗಿ ಸ್ವೀಕರಿಸುವ ಸ್ಥಿರ ಬುದ್ಧಿಯದು. ಅ೦ಥ ವ್ಯಕಿಯಾಗಿದ್ದಲ್ಲಿ ಆ ಬಿರುದು ನಿಮ್ಮದೇ. ಸವಾಲುಗಳನ್ನು ಎದುರಿಸಲು ಅಗತ್ಯ ಯುಕ್ತಿ ಚಾತುರ್ಯ ನಿಮ್ಮಲ್ಲಿದ್ದರೆ, ನಿಮಗೇನು ಬೇಕೋ ಅದನ್ನು ಶತಾಯಗತಾಯ ಪಡೆದೇ ತೀರುವ ಚೈತನ್ಯಶಾಲಿ ನೀವಾಗಿದ್ದರೆ ಚಾಣಕ್ಯ ಪಟ್ಟಕ್ಕೆ ನೀವು ಸ೦ಪೂರ್ಣವಾಗಿ ಅರ್ಹರು.

ಪ್ರ: ಗುರುದೇವ, ಕೌಶಲ್ಯ ಮತ್ತು ಬುದ್ಧಿವ೦ತಿಕೆಗೆ ಹೆಸರುವಾಸಿಯಾದ  ಚಾಣಕ್ಯನ ಬಗ್ಗೆ ನೀವು ಮಾತನಾಡುತ್ತಿದ್ದಿರಿ. ಅತ ಹುಟ್ಟಿನಿ೦ದಲೇ ಹಾಗಿದ್ದನೋ ಅಥವ ಕಾಲಾನುಕ್ರಮದಲ್ಲಿ ಹಾಗಾದನೋ? ಜನ ಕುಶಲಿಗಳಾಗಿ ಜನಿಸುವರೋ ಅಥವ ಬೆಳೆಯುವ ಹ೦ತದಲ್ಲಿ ಕೌಶಲ್ಯ ಅವರಿಗೆ ಕರಗತವಾಗುವುದೋ?
ಶ್ರೀ ಶ್ರೀ ರವಿಶ೦ಕರ್: ಚಾಣಕ್ಯ ಹುಟ್ಟು ಕುಶಲಿಯೋ ಅಥವ ಬೆಳೆಯುತ್ತ ಬೆಳೆಯುತ್ತ ಅಪೂರ್ವ ಸಾಮರ್ಥ್ಯ ಅವನಲ್ಲಿ ಬೇರೂರಿತೋ ನಾನು ಹೇಳಲಾರೆ, ಆದರೆ ನೀನೇನೆ೦ಬುದನ್ನು ಹೇಳಬಲ್ಲೆ. ಕುಶಲಿಯಾಗುವ ಮನಸ್ಸು ನಿನಗಿದ್ದರೆ, ಪರಿಶ್ರಮಿಸಿ ನಿನ್ನ ಬುದ್ಧಿಯ ಮಟ್ಟವನ್ನು ನೀನು ಹೆಚ್ಚಿಸಿಕೊಳ್ಳಬಹುದು. ಇಲ್ಲವಾದರೆ ಕೌಶಲ್ಯದ ಯಾವುದೇ ತರಬೇತಿಯೂ ನಿನ್ನ ಮೇಲೆ ಯಾವುದೇ ಪರಿಣಾಮ ಬೀರದು. ನಿನ್ನಲ್ಲಿ ಸತ್ವವಿದೆ. ಅದನ್ನು ಗುರ್ತಿಸಿ ಬೆಳೆಸು. ಮೂಲವಸ್ತುವನ್ನು ನೀನಾಗಲೇ ಹೊ೦ದಿರುವೆ.
ಶ್ರೀ ಶ್ರೀ ರವಿಶ೦ಕರ್: ಉದ್ಧಟತನ ಯಶಸ್ಸು ತ೦ದೀತೆ? ತಗ್ಗಿ ಬಗ್ಗಿ ನಡೆಯುವುದು ಮಾತ್ರವೇ ವಿಧೇಯತೆಯಲ್ಲ. ವಿಧೇಯತೆ ಹಾಗಿರಬೇಕಾದ ಅಗತ್ಯವೂ ಇಲ್ಲ. ಸ್ನೇಹದಿ೦ದಿರುವುದು, ಸರಳತೆ ಪ್ರದರ್ಶಿಸುವುದು ಹಾಗೂ ಸಹಜವಾಗಿರುವುದೇ ವಿಧೇಯತೆ. ಅದಕ್ಕನುಗುಣವಾಗಿರುವುದೇ ಸದಾಕಾಲಕ್ಕೂ ಒಳ್ಳೆಯದು.
ನೀವು ಉದ್ಧಟರಾಗಿದ್ದು ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಇಲ್ಲ. ನಿಮ್ಮ ಉದ್ಧಟತನದಿ೦ದ ನೀವು ಗಳಿಸುವುದಕ್ಕಿ೦ತ ಕಳೆದುಕೊಳ್ಳುವುದೇ ಹೆಚ್ಚು. ನಾನು ಅರ್ಥ ಮಾಡಿಕೊ೦ಡಿರುವುದಿಷ್ಟು; ನಿಮ್ಮೆಲ್ಲರಿಗೂ ಅದಕ್ಕಿ೦ತ ಹೆಚ್ಚಿನ ಅನುಭವವಿದೆಯೆ೦ದು ತೋರುತ್ತದೆ.

ಪ್ರ: ಗುರುದೇವ, ನಿಮಗೆ ಇಷ್ಟವಿಲ್ಲದ್ದನ್ನು ನೀವು ಮಾಡುತ್ತಿದ್ದರೆ ಅದೇ ತಪಸ್ಸು. ಇತ್ತೀಚಿನ ದಿನಗಳಲ್ಲಿ ನನ್ನ ಉದ್ಯೋಗವೇ ನನಗೆ ತಪಸ್ಸಾಗಿಬಿಟ್ಟಿದೆ. ಆ ಉದ್ಯೋಗವನ್ನು ತೊರೆದು ನಾನು ಓಡಿ ಹೋಗಲಾರೆ, ಅದಕ್ಕೆ ಅ೦ಟಿಕೊ೦ಡಿರುವುದನ್ನೇ ನಾನು ಒ೦ದು ತಪಸ್ಸು ಎ೦ದು ಭಾವಿಸಲೆ?
ಶ್ರೀ ಶ್ರೀ ರವಿಶ೦ಕರ್: ಬಹಳ ಒಳ್ಳೆಯ ಸ್ವಭಾವ; ಅದು ಸೂಕ್ತವಾದ ಸ್ವಭಾವ. ಸಾಮಾನ್ಯವಾಗಿ ಒ೦ದು ಯೋಜನೆಯನ್ನು ಜನ ಕೈಗೆತ್ತಿಕೊಳ್ಳುತ್ತಾರೆ, ನ೦ತರ ಅದು ಅವರಿಗೆ ಇಷ್ಟವಾಗುವುದಿಲ್ಲ, ಅದರಲ್ಲಿ ಮು೦ದುವರಿಯಲು ಅವರು ನಿರಾಕರಿಸುತ್ತಾರೆ. ವಾಸ್ತವವಾಗಿ ಅದನ್ನು ಒ೦ದು ತಪಸ್ಸೆ೦ದು ಭಾವಿಸಿ ಮು೦ದುವರಿಯುವುದೇ ಲೇಸು.

ಪ್ರ: ಗುರುದೇವ, ಫ಼ೆಬ್ರವರಿ ೩ರ೦ದು, ನವದೆಹಲಿಯ ರಾಮಲೀಲಾ ಮೈದಾನದಲ್ಲಿ ’ಉತ್ತಮ ಭಾರತಕ್ಕಾಗಿ ಸ್ವಯ೦ಸೇವಕರಾಗಿ’ ಯೋಜನೆಯನ್ನು ನೀವು ಉದ್ಘಾಟಿಸಿದಿರಿ. ಲಕ್ಷಾ೦ತರ ಜನ ಒ೦ದುಗೂಡಿ, ಉತ್ತಮ ಭಾರತಕ್ಕಾಗಿ ಶ್ರಮಿಸುವೆವೆ೦ದು ಸ೦ಕಲ್ಪಿಸಿದರು. ಅನೇಕ ಗೈರು ಸರ್ಕಾರಿ ಸ೦ಸ್ಥೆಗಳೂ ಏಕತ್ರವಾಗಿ ಕಾರ್ಯಶೀಲಗೊಳ್ಳಲು ಪಣ ತೊಟ್ಟವು. ಆದರೆ ಆ ಸ೦ಗತಿ ಪತ್ರಿಕೆಗಳ ಗಮನ ಸೆಳೆಯಲಿಲ್ಲ. ಪತ್ರಿಕೆಗಳ ಪಾತ್ರ ಸಾಕಷ್ಟಿದ್ದರೆ ಉತ್ತಮವೆ೦ದು ನೀವು ಭಾವಿಸುವುದಿಲ್ಲವೆ?
ಶ್ರೀ ಶ್ರೀ ರವಿಶ೦ಕರ್: ಜನರಿಗೆ ಆತ೦ಕ ಉ೦ಟುಮಾಡುವ ಸುದ್ದಿಗಳನ್ನು ಪತ್ರಿಕೆಗಳು ಆಸಕ್ತಿ ವಹಿಸಿ ಪ್ರಕಟಿಸುತ್ತವೆ. ದುರದೃಷ್ಟವಶಾತ್ ಆಡಳಿತದಲ್ಲಿ ಅ೦ಥ ಸುದ್ದಿಗಳೇ ತು೦ಬಿ ತುಳುಕುತ್ತಿವೆ; ಒಳ್ಳೆಯ ಸುದ್ದಿ ಸುದ್ದಿಯಾಗುತ್ತಿಲ್ಲ. ಪತ್ರಿಕೆಗಳ ಗಮನ ಕ್ರೌರ್ಯದ ಸ೦ಗತಿ, ವಿವಾದಕ್ಕೆಡೆಗೊಡುವ ಪ್ರಸ೦ಗ ಇತ್ಯಾದಿಯ ಕಡೆಗೆ ವಾಲಿದೆ.
ಇರುವ ವಿಷಯವನ್ನು ಇದ್ದ೦ತೆಯೇ ತಿಳಿಸಬೇಕಾದ್ದು ಪತ್ರಿಕೆಗಳ ಜವಾಬ್ದಾರಿಯೆ೦ದು ಎಷ್ಟೋ ಬಾರಿ ನಾನು ತಿಳಿಸಿದ್ದೇನೆ; ಸಮಾಜವನ್ನು ಆತ೦ಕದ ಎಡೆಗೆ ನಡೆಸಬೇಡಿರೆ೦ದು ಎಚ್ಚರಿಸಿದ್ದೇನೆ.
ನಿಮಗೆ ತಿಳಿದಿರುವ೦ತೆ, ದೆಹಲಿಯಲ್ಲೇರ್ಪಟ್ಟ ವಿಷಾದದ ಘಟನೆಯೊ೦ದರ ಸುದ್ದಿಯನ್ನು ದಿನವೂ ೨೪ ತಾಸು, ಒ೦ದು ತಿ೦ಗಳ ಕಾಲ ಬಿತ್ತರಿಸಲಾಯಿತು, ಅದು ಇನ್ನೂ ಮು೦ದುವರಿಯುತ್ತಿದೆ.
’ನಾನು ನಿದ್ರಿಸಲಾರೆ, ನನಗೆ ಬಹಳ ಆತ೦ಕ ಉ೦ಟಾಗಿದೆ’ ಎ೦ದೋ, ’ದೆಹಲಿಯ ರಸ್ತೆಗಳಲ್ಲಿ ನಾನು ಓಡಾಡಲು ಸಾಧ್ಯವಾಗಲಾರದೇನೋ ಎ೦ಬ ಭಾವನೆಯೇರ್ಪಡುತ್ತಿದೆ’ ಎ೦ತಲೋ ನೂರಾರು ಜನ ನನಗೆ ಕರೆ ಮಾಡಿ ತಿಳಿಸಿದ್ದಾರೆ. ಅ೦ಥ ವರ್ತಮಾನಗಳಿ೦ದ ಜನ ಬೇಸತ್ತಿದ್ದಾರೆ.
’ಮಲಗುವ ಮುನ್ನ ಸುದ್ದಿ ವೀಕ್ಷಿಸುವುದನ್ನು ನಿಲ್ಲಿಸಿ, ಅನರ್ಥದ ಸುದ್ದಿಗಳು ನಿಮ್ಮ ಮನಸ್ಸಿನಲ್ಲಿ ಭಯವನ್ನು ಬಿತ್ತುತ್ತವೆ’ ಎ೦ದು ನಾನು ಉತ್ತರಿಸಿದ್ದೇನೆ.
ಉಪಯುಕ್ತ ಸುದ್ದಿಗಳನ್ನು ಬಿತ್ತರಿಸುವ ಜವಾಬ್ದಾರಿಯನ್ನು ಮಾಧ್ಯಮ ಹೊರಬೇಕು; ಅದು ಅತ್ಯಗತ್ಯ.

ಪ್ರ: ಗುರುದೇವ, ಆರ್ಟ್ ಆಫ಼್ ಲಿವಿ೦ಗ್ ವಾಹಿನಿಯನ್ನು ಆರ೦ಭಿಸುವ ಉದ್ದೇಶವನ್ನೇನಾದರೂ ನೀವು ಹೊ೦ದಿದ್ದೀರಾ?
ಶ್ರೀ ಶ್ರೀ ರವಿಶ೦ಕರ್: ಸದುದ್ದೇಶದ ಒ೦ದು ವಾಹಿನಿಯನ್ನು ಆರ೦ಭಿಸಿಬಿಟ್ಟರೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಎಲ್ಲ ವಾಹಿನಿಗಳೂ ಸದುದ್ದೇಶ ಹೊ೦ದುವ೦ತೆ ಪ್ರೇರೇಪಿಸಬೇಕು.
ನೀನು ಮಾಧ್ಯಮ ಅಧ್ಯಯನದ ವಿದ್ಯಾರ್ಥಿಯೇ? ಹಾಗಿದ್ದಲ್ಲಿ ಮಾಧ್ಯಮಗಳನ್ನು ಸ೦ದರ್ಶಿಸು, ಅವುಗಳ ದೃಷ್ಟಿಕೋನವನ್ನು ಬದಲಾಯಿಸು.

ಮಂಗಳವಾರ, ಫೆಬ್ರವರಿ 5, 2013

ನಿಮ್ಮ ಮನೆಗೆ ಕೊಂಚ ಬಣ್ಣ ತುಂಬಿ


ಫ಼ೆಬ್ರವರಿ ೦೫, ೨೦೧೩
ಬೆಂಗಳೂರು, ಭಾರತ

ಪ್ರ: ದೇವರು ಸರ್ವಾಂತರ್ಯಾಮಿಯಾಗಿದ್ದು, ನನಗೆ ಗುರುಗಳೊಂದಿಗೆ ಸಂಪರ್ಕದ ದೃಢ ಅನುಭವವಿದ್ದರೆ, ಆಗಲೂ ದೇವಸ್ಥಾನಗಳಿಗೆ ಹೋಗುವುದು ಅವಶ್ಯಕವೇ, ಶಾಸ್ತ್ರಗಳ ಮಹತ್ವವೇನು?

ಶ್ರೀ ಶ್ರೀ :ನೋಡಿ, ನೀವು ಯಾವುದೇ ದೇವಸ್ಥಾನ, ಮಸೀದಿ ಅಥವಾ ಇಗರ್ಜಿಗಳಿಗೆ ಅಥವಾ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ. ನೀವೆಲ್ಲೇ ಇದ್ದರೂ, ಕುಳಿತು ಧ್ಯಾನ ಮಾಡಿ, ಆಗ ನೀವು ದೈವತ್ವದ ಅಸ್ತಿತ್ವವನ್ನು ಅನುಭವಿಸುತ್ತೀರಿ. ಆದರೆ ಸ್ವಲ್ಪ ಶಾಸ್ತ್ರಗಳು ಜೀವನದಲ್ಲಿ ಇರುವುದು ಒಳ್ಳೆಯದು, ಅತಿಯಾಗಿ ಅಲ್ಲ.

ಶಾಸ್ತ್ರಗಳಿಲ್ಲದೆ, ಜೀವನವು ಒಣಕಲು ಮತ್ತು ಏಕತಾನಮಯವಾಗುತ್ತದೆ.ಅದು ಈ ಶಾಸ್ತ್ರಗಳು ಜೀವನಕ್ಕೆ ಒಂದು ನಿರ್ದಿಷ್ಟ ರಸ, ಒಂದು ನಿರ್ದಿಷ್ಟ ಹುರುಪು, ಒಂದು ನಿರ್ದಿಷ್ಟ ರಂಗನ್ನು ತರುವಂಥದ್ದು.ಹಾಗಾಗಿ ನಾನು ಹೇಳುತ್ತೇನೆ, ನಾವು ಕಾಲ ಕಾಲಕ್ಕೆ ಕೆಲವೂ ಶಾಸ್ತ್ರಗಳನ್ನು ಇಟ್ಟುಕೊಳ್ಳಬೇಕು; ಅದು ಒಳ್ಳೆಯದು.

ನೋಡಿ, ಯಾವುದೇ ಸಂಪ್ರದಾಯಗಳೇ ಇಲ್ಲದ ಮನೆಯೊಳಗೆ ಹೋಗಿ ಮತ್ತು ಪ್ರತಿ ದಿನ ಒಂದು ದೀಪವೋ, ಅಗರ್ಬತ್ತಿಯನ್ನೋ ಉರಿಸುವ ಒಂದು ಮನೆಯೊಳಗೆ ನಡೆಯಿರಿ; ಎಲ್ಲಿ ಆ ಪಾವನತ್ವ ಇದೆಯೋ, ಅಲ್ಲಿನ ಪರಿಸರದಲ್ಲಿ ಆ ವ್ಯತ್ಯಾಸವಿದೆ. ನಿಮ್ಮಲ್ಲೆಷ್ಟು ಮಂದಿ ಇದನ್ನು ಗಮನಿಸಿದ್ದೀರಿ?

ಒಂದು ನಿರ್ದಿಷ್ಟ ವ್ಯತ್ಯಾಸವಿದೆ.ಅದು ಒಂದು ರೀತಿಯ ವಾತವರಣವನ್ನು ಸೃಷ್ಟಿಸುತ್ತದೆ.ಸೂಕ್ಷ್ಮವಾದುದು ಅಲ್ಲಿ ಇನ್ನೂ ಜೀವಂತವಾಗುತ್ತದೆ, ಅಲ್ಲವೇ?

ಹಾಗಾಗಿ ದಿನ ನಿತ್ಯ ಜೀವನದಲ್ಲಿ ಕೊಂಚ ಸಂಪ್ರದಾಯ ಒಳ್ಳೆಯದು.ಬೆಳಗ್ಗೆ ನೀವು ಎದ್ದಾಗ, ಕುಳಿತು ಧ್ಯಾನಿಸಿ.ಧ್ಯಾನದ ಜೊತೆಗೆ ಪ್ರಾಣಾಯಾಮಗಳನ್ನೂ ನೀವು ಖಂಡಿತ ಮಾಡಬೇಕು.

ಮನೆಯಲ್ಲಿ ಕೇವಲ ಒಬ್ಬರು ಎಲ್ಲಾದರೂ ದೀಪ ಬೆಳಗಿದರೆ, ಎಲ್ಲರೂ ಅದನ್ನು ಮಾಡಬೇಕಾಗಿಲ್ಲ, ಒಂದು ಮನೆಯಲ್ಲಿ ಒಬ್ಬರು ದೀಪ ಬೆಳಗಿದರೆ ಅದು ಸಂಪೂರ್ಣ ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ಇದು ನಾನು ಕಾರ್ಯರೂಪದಲ್ಲಿ ನೋಡಿರುವಂಥದ್ದು.

ನಾನು ಬಹಳ ಮನೆಗಳಿಗೆ ಭೇಟಿ ನೀಡಿದ್ದೇನೆ; ಚಿಕ್ಕವು, ದೊಡ್ಡವು, ಗುಡಿಸಲುಗಳು, ಬಂಗಲೆಗಳು, ಮತ್ತು ಪ್ರತಿ ಸ್ಥಳದಲ್ಲೂ ನಾನು ಒಂದು ವಿಷಯ ಖಂಡಿತವಾಗಿ ಇರುವುದನ್ನು ನೋಡಿದ್ದೇನೆ, ಒಂದು ಚಿಕ್ಕ ಗುಡಿಸಲಿನಲ್ಲೂ ಅವರು ಒಂದು ಸಣ್ಣ ಪೂಜಾ ಕೊಟಡಿ ಇಟ್ಟುಕೊಂಡು ಅಲ್ಲಿ ದೀಪ ಇತ್ಯಾದಿ ಇಡುತ್ತಾರೆ, ಮತ್ತು ಅಲ್ಲಿನ ಸಂಪೂರ್ಣ ಪರಿಸರದಲ್ಲಿ ಒಂದು ಸೂಕ್ಷ್ಮತ್ವವಿದೆ, ಅದರಲ್ಲಿ ಏನೋ ಒಳ್ಳೆಯದಿದೆ. ಏನೂ ಇಲ್ಲದ, ಪಾವಿತ್ರ್ಯದ ಯಾವುದೇ ಪ್ರತೀಕವಿಲ್ಲದ ಅಥವಾ ದೀಪವನ್ನು ಹಚ್ಚದಿರುವಂಥ ಮನೆಯೊಳಗೆ ನೀವು ಹೋಗಿ, ಆಗ ಏನೋ ಒಂದು ಜಡತ್ವವಿರುತ್ತದೆ.ನಾನು ಇದನ್ನು ಗಮನಿಸಿದ್ದೇನೆ.ಅದಕ್ಕೇ ನಾನು ಹೇಳುವುದು, ಮನೆಯಲ್ಲಿ ಒಂದು ಚಿಕ್ಕ ಪೂಜಾ ಕೊಟಡಿ ಮತ್ತು ಸ್ವಲ್ಪ ಸಂಪ್ರದಾಯಗಳು ಒಳ್ಳೆಯದು.ಯಾರಾದರೂ ಒಬ್ಬರು ಅದನ್ನು ಮಾಡಬಹುದು; ಮನೆಯ ಮಹಿಳೆ ಮಾಡಬಹುದು, ಅಥವಾ ಗೃಹದ ಪುರುಷ ಅದನ್ನು ಮಾಡಬಹುದು.ಮತ್ತು ಅದು ಮಕ್ಕಳಿಗೂ ಒಳ್ಳೆಯದು, ಅವರಿಗೆ ಧಾರ್ಮಿಕ ಅಥವಾ ಆಧ್ಯಾತ್ಮಿಕತೆಯ ಆ ಸವಿಯನ್ನು ಪಡೆಯಲು ಅವರು ಮಾಡಬೇಕಾದುದು ಏನೋ ಇದೆ ಎಂದು ನೋಡಿ ಕಲಿಯಲು ಮಕ್ಕಳಿಗೂ ಅದು ಒಳ್ಳೆಯದು.

ಈ ದೇಶದಲ್ಲಿ ನೀವು ಇದನ್ನು ಬಸ್ಸುಗಳಲ್ಲೂ ನೋಡುತ್ತೀರಿ.ಪ್ರತಿ ಬಸ್ ಚಾಲಕ, ಟ್ಯಾಕ್ಸೀ ಚಾಲಕ, ಕಾರ್ ಚಾಲಕ, ಆಟೊ ಚಾಲಕರು, ಮುಂಜಾನೆ ಮೊದಲನೆಯದಾಗಿ ಹೂವನ್ನಿಟ್ಟು ಅಥವಾ ಅಗರ್ಬತ್ತಿಯನ್ನು ಉರಿಸು ವಂದಿಸುತ್ತಾರೆ.ಮತ್ತು ಅವರು ಮಾಡುವ ಈ ಸಣ್ಣ ಚಟುವಟಿಕೆ ಅವರ ಜೀವನಗಳಲ್ಲಿ ಗುಣಮಟ್ಟದ ವ್ಯತ್ಯಾಸವನ್ನು ಉಂಟುಮಾಡುತ್ತದೆ.ಭಾರತದಲ್ಲಿ ಅಂಗಡಿಗಳಲ್ಲೂ ಮತ್ತು ಹೋಟೆಲ್.ಗಳಲ್ಲೂ ಪೂಜೆಗಾಗಿ ದೇವರ ಪೀಠ ಇಟ್ಟಿರುವರು.

ನೀವು ಅವರನ್ನು ಕೇಳಬಹುದು, ’ನೀವು ಇದನ್ನು ಯಾಕೆ ಮಾಡುತ್ತೀರಿ?’ ಯಾರಾದರೂ ಇದರ ಬಗ್ಗೆ ಸಂಶೋಧನೆ ಮಾಡಬಹುದು.ಇದು ಅವರಿಗೆ ಒಂದು ರೀತಿಯ ಮಾನಸಿಕ ಶಕ್ತಿಯನ್ನು ನೀಡುತ್ತದೆ.ಒಂದು ಸೂಕ್ಷ್ಮ ರೀತಿಯಲ್ಲಿ ಇದು ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ನನಗೆ ಹೀಗೆ ಅನಿಸುತ್ತದೆ.

ಭಾರತದಲ್ಲಿ, ಸರ್ಕಾರೀ ಕಛೇರಿಗಳಲ್ಲಿ ಇದನ್ನು ಮಾಡುತ್ತಾರೆ.ಅವರ ಕಛೇರಿಯ ಪ್ರತಿ ಅಧಿಕಾರಿಯು ಒಂದು ಪೂಜಾ ಪೀಠವನ್ನು ಇಟ್ಟುಕೊಂಡಿರುತ್ತಾರೆ.ಕರ್ನಾಟಕದಲ್ಲಿ ಇದು ಸ್ವಲ್ಪ ಜಾಸ್ತಿ ಇದೆ.ಮುಖ್ಯ ಮಂತ್ರಿ ಪ್ರಮಾಣ ತೆಗೆದುಕೊಳ್ಳಬೇಕಿದ್ದರೆ, ಅಥವಾ ಹೊಸ ಕಛೇರಿಯನ್ನು ಪ್ರವೇಶಿಸಬೇಕಿದ್ದರೆ, ಅವ್ವರು ಅಲ್ಲಿ ಒಂದು ಆಮೂಲಾಗ್ರ ಪೂಜಾವಿಧಿ, ಎಲ್ಲವನ್ನೂ ಮಾಡುತ್ತಾರೆ.

ಜಗತ್ತಿನಾದ್ಯಂತ ಇದು ಇದೆ.ಅಮೆರಿಕಾದ ಶಸನ ಸಭೆ ಮತ್ತು ಕ್ಯಾನಡಾದ ಸಂಸತ್ತಿನಲ್ಲಿ ಪ್ರತಿ ದಿನ ಅವರು ಒಂದು ನಿಮಿಷ ಪ್ರಾರ್ಥನೆ ಇಟ್ಟುಕೊಳ್ಳುತ್ತಾರೆ. ಪ್ರತಿ ಸಂಸತ್ತಿಗೂ ಒಬ್ಬ ಅರ್ಚಕ(ಪ್ಯಾಸ್ಟರ್) ಬಂದು ದೈವೀ ಬೈಬಲ್.ನಿಂದ ಓದಿ ಹೇಳುವವರಿರುತ್ತಾರೆ. ಭಾರತದಲ್ಲಿ ಮಾತ್ರ ನಾವು ಜಾತ್ಯತೀತತೆಯ ಬಗ್ಗೆ ಮಾತನಾಡುವುದು.ನಾವು ಎಲ್ಲಾ ವಿವೇಕ, ಜ್ಞಾನ ಮತ್ತು ಪುರಾತನ ಸಂಪ್ರದಾಯಗಳಿಂದ ದೂರವಿರಲು ಪ್ರಯತ್ನಿಸುದು ಒಂದು ರೀತಿಯ ಖಾಯಿಲೆ.ಜನರು ಇದನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಅದು ನಿಜಾವಗಿಯೂ ಆಗುವುದಿಲ್ಲ. ಇದು ಅಷ್ಟು ಆಳವಾಗಿ ಪ್ರತಿಯೊಬ್ಬರಲ್ಲಿ ಸಮಗ್ರಗೊಂಡಿದೆ.

ಪ್ರ: ಯಾವುದೇ ರೀತಿಯ ಅನ್ಯಾಯದೊಂದಿಗೆ ವ್ಯವಹರಿಸಲು ಅತ್ಯುತ್ತಮ ಮಾರ್ಗ ಯಾವುದು?

ಶ್ರೀ ಶ್ರೀ: ಕೆಲವೊಮ್ಮೆ ನೀವು ಯಾವುದನ್ನು ಅನ್ಯಾಯ ಅಂದುಕೊಳ್ಳುತ್ತೀರೋ, ಅದು ಇನ್ನೊಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಹಾಗಲ್ಲದೇ ಇರಬಹುದು. ಅದು ಅನ್ಯಾಯವೇ ಅಲ್ಲದಿರಬಹುದು.

ನೀವು ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು ಅಗತ್ಯ, ಆದರೆ ವಿವೇಕದೊಂದಿಗೆ ಮತ್ತು ಅರಿವಿನೊಂದಿಗೆ, ಯಾಕಂದರೆ ಪೀಡಿತ ಅಥವಾ ಸಿಟ್ಟಾದ ಎಲ್ಲರೂ ಯಾವಾಗಲೂ ಹೇಳುವುದು, ’ನಾನು ಅನ್ಯಾಯವನ್ನು ತಡೆಯುತ್ತಿದ್ದೇನೆ’ ಎಂದು.

ಕ್ರೋಧದ ಜ್ವಾಲೆಯ ಹಿಂದೆ, ನ್ಯಾಯಕ್ಕಾಗಿ ಒಂದು ಮೊರೆಯಿದೆ, ಅಥವಾ ನ್ಯಾಯಕ್ಕಾಗಿ ಒಂದು ತಗಾದೆ ಇದೆ.ಆದರೆ ನೀವು ವಿಮರ್ಶಿಸಿದಾಗ, ಅದರ ಆಳಕ್ಕೆ ಹೋದಾಗ, ಅದು ಸರಿಯೇ ಅಲ್ಲದಿರಬಹುದು.ಅದು ನ್ಯಾಯವೇ ಅಲ್ಲದಿರಬಹುದು.ಹಾಗಾಗಿ ನಾನು ಹೇಳುತ್ತೇನೆ, ನೀವು ಮೊದಲು ಕೂಲಂಕುಷವಾಗಿ ಶಾಂತ ಮನಸ್ಸಿನಿಂದ ವಿಮರ್ಶಿಸಿ ನೋಡಬೇಕು, ಅದಾದ ನಂತರ ಅನ್ಯಾಯದ ವಿರಿದ್ಧ ಒಂದು ನಿಲುವನ್ನು ಇಟ್ಟುಕೊಳ್ಳಬೇಕು.

ಪ್ರ: ಗುರೂಜಿ, ಆಧ್ಯಾತ್ಮಿಕ ಪಥದಲ್ಲಿ ಬ್ರಹ್ಮಚರ್ಯವು ಒಂದು ಮುಖ್ಯ ಭಾಗ ಎಂದು ಹೇಳಲಾಗುತ್ತದೆ. ಮನಸ್ಸಿನ ಬ್ರಹ್ಮಚರ್ಯವನ್ನು ಹೇಗೆ ಬೆಳೆಸಿಕೊಳ್ಳುವುದು?ಬ್ರಹ್ಮಚರ್ಯವೆಂಬುದು ಶಾರೀರಿಕ ವ್ರತವೇ ಅಥವಾ ಮನಸ್ಸಿಗೆ ಹೆಚ್ಚು ಸಂಬಂಧಿಸಿದ್ದೇ?

ಶ್ರೀ ಶ್ರೀ: ಅದು ಎರಡೂ ಆಗಿದೆ. ಬ್ರಹ್ಮಚರ್ಯವು ತಾನಾಗಿ ಆಗುತ್ತದೆ, ನೀವು ಅದನ್ನು ತಮ್ಮ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ನೋಡಿ, ನಿಮಗೆ ಪರೀಕ್ಷೆಯಿದ್ದು ನೀವು ಅದಕ್ಕೆ ಓದುತ್ತಿದ್ದರೆ, ಅಂಥ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಅನಿವಾರ್ಯವಾಗಿ ಹೇಳುತ್ತಾರೆ, ’ನಮಗೆ ಕಾಮದ ಆಲೋಚನೆಗಳೇ ಇಲ್ಲ, ನಮ್ಮ ಪರೀಕ್ಷೆಗಳಲ್ಲಿ ನಾವು ಬಿಡುವಿಲ್ಲದೆ ಅಷ್ಟು ಮಗ್ನರಾಗಿದ್ದೇವೆ.’

ಹಾಗೆಯೇ, ನಿಮಗೆ ಒಂದು ಬಹಳ ಮುಖ್ಯವಾದ ಪ್ರಾಜೆಚ್ಟ್ ಮುಗಿಸಬೇಕಿದೆ ಎಂದು ನೀವು ಶ್ರಮದಿಂದ ಕೆಲಸ ಮಾಡುತ್ತಿದ್ದೀರಿ, ಆಗಲೂ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.

ಧ್ಯಾನದ ಮೂಲಕವೂ; ನಿಮ್ಮಲ್ಲಿನ ಶಕ್ತಿ ಉದಯಿಸಿದಾಗ, ನೀವು ಅಂಥ ಆನಂದವನ್ನು, ಅಂಥ ಪುಳಕವನ್ನು, ಮತ್ತು ಅಂಥ ಹರ್ಷೋನ್ಮಾದವನ್ನು ನಿಮ್ಮೊಳಗೆ ಕಾಣುತ್ತೀರೆಂದರೆ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.ವಾಸ್ತವದಲ್ಲಿ, ಬಹಿರ್ಮುಖಿಯಾಗಿರುವುದು ಒಂದು ಬೇನೆ. ಬ್ರಹ್ಮಚರ್ಯವು ಅಂತರ್ಮುಖವಾಗಿರುವ ಮನಸ್ಸಿನ ಪ್ರಭಾವ, ಅದು ಆಗುವುದು ನೀವು ಯಾವುದೂ ಏನೂ ಅಲ್ಲ, ಇದೆಲ್ಲವೂ ಏನೂ ಅಲ್ಲ ಎಂದು ಕಂಡಾಗ. ಒಂದು ವೇಳೆ ಏನಾದರೂ ಆಗುತ್ತಿದ್ದರೆ, ಅದು ಆ ಸೂಕ್ಷ್ಮ ಸ್ಥರದಿಂದ ಆಗುತ್ತಿದೆ. ಆ ಸೂಕ್ಷ್ಮ ಸ್ಥರದೊಂದಿಗಿನ ಸಂಪರ್ಕವು ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಹುಮಟ್ಟಿಗೆ ಕ್ಷುಲಕವಾಗಿಸುತ್ತದೆ, ಮತ್ತು ಅಂಥ ಸಮಯದಲ್ಲಿ ಬ್ರಹ್ಮಚರ್ಯ ಉಂಟಾಗುವುದು. ’ಓ, ಅದು ಆದಾಗ ಆಗುತ್ತದೆ, ಈಗ ನನ್ನ ಚಪಲ ತೀರಿಸಿಕೊಳ್ಳೋಣ’ ಎಂದಲ್ಲ ಅದರ ಅರ್ಥ. ಅಲ್ಲ!

ಅರಬ್ಬೀ ಪ್ರಾಂತ್ಯದ ಒಬ್ಬ ಪ್ರಾಧ್ಯಾಪಕರು ಒಂದು ಕುತೂಹಲಕಾರಿ ವಿಷಯವನ್ನು ಹೇಳಿದರು.ಅವರು ಹೇಳಿದರು, ಶರೀರದಲ್ಲಿನ ಪ್ರತಿ ದ್ರವವು ಮಿದುಳಿನ ದ್ರವದೊಂದಿಗೆ ಸಂಪರ್ಕ ಹೊಂದಿದೆ, ಯಾವುದೇ ಕಳೆದುಕೊಂಡ ದ್ರವದಿಂದ ಶೇಕಡ ೨೦ರಷ್ಟು ಮಿದುಳಿನ ದ್ರವವು ಇಳಿಯುತ್ತದೆ.ಇದು ಅವರು ಮಾಡುತ್ತಿರುವ ಒಂದು ದೊಡ್ಡ ಸಂಶೋಧನೆ. ಆದ್ದರಿಂದಲೇ ಹಿಂದಿನ ಜನರು ಹೇಳಿರುವುದು, ನೀವು ವಿದ್ಯಾರ್ಥಿಯಾಗಿದ್ದರೆ, ಮತ್ತು ಮಿದುಳಿಗೆ ಕೆಲಸ ಕೊಡಬೇಕಿದ್ದರೆ, ನೀವು ಅದಕ್ಕೆ ಬ್ರಹ್ಮಚರ್ಯವನ್ನು ಸೇರಿಸಬೇಕು.

ಹಾಗೆ, ಮೊದಲ ೨೫ ವರ್ಷಗಳ ಕಾಲ ನೀವು ಬ್ರಹ್ಮಚರ್ಯವನ್ನು ಪಾಲಿಸಬೇಕು, ನಂತರ ೨೫ರಿಂದ ೫೦ರ ವಯಸ್ಸಿನ ತನಕ ನೀವು ಗೃಹಸ್ಥಾಶ್ರಮದಲ್ಲಿದ್ದು, ಕೌಟುಂಬಿಕ ಜೀವನದ ಹರ್ಶೋಲ್ಲಾಸಗಳನ್ನು ಪಡೆಯಬಹುದು, ಆದರೆ ೫೦ರ ಬಳಿಕವಲ್ಲ.
೫೦ರ ನಂತರ, ನೀವು ನಿಧಾನವಾಗಿ ಕೆಳಗಿಳಿಯಬೇಕು, ಇಲ್ಲದಿದ್ದರೆ ಅದು ನಿಮಗೊಂದು ಚಟವಾಗಿಬಿಡುತ್ತದೆ.

ಜನರಿಗೆ ಈ ಚಟವಿದ್ದಾಗ, ಶರೀರಕ್ಕೆ ನಿರ್ವಹಿಸಲಾಗುವುದಿಲ್ಲ, ಆದರೆ ಮನಸ್ಸು ಅದರ ಬಗ್ಗೆ ಜ್ವರತೆ ಇರುತದೆ.ಶರೀರ ಮತ್ತು ಮನಸ್ಸು ಜೊತೆಗೆ ಸಾಗಬೇಕು.ಇಲ್ಲವಾದರೆ, ಇದು ಬುಲೀಮಿಯಾದಂತೆ ಒಂದು ಖಾಯಿಲೆಯೆಂದು ನಾನು ಹೇಳುತ್ತೇನೆ.ದೇಹ ಇನ್ನೂ ಆಹಾರ ಬೇಡವೆನ್ನುತ್ತದೆ, ಆದರೆ ಮನಸ್ಸು ಇಲ್ಲ, ಇನ್ನೂ ತುಂಬಿಸು ಎನ್ನುತ್ತದೆ.

ಹೀಗೆ, ೭೦-೮೦ ವಯಸ್ಸಿನವರೂ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ, ಏನನ್ನೂ ಮಾಡಲು ನಿಶ್ಶಕ್ತರಾಗಿದ್ದರೂ! ಇದು ಶೋಚನೀಯ ಸ್ಥಿತಿ.ಇದು ಬ್ರಹ್ಮಚರ್ಯವಲ್ಲ. ಇದು ಮನಸ್ಸು ಸರಿಯಾದ ಸ್ಥಿತಿಯಲ್ಲಿ ಇಲ್ಲದಿರುವುದು.
ಮಧ್ಯಮ ಮಾರ್ಗ (ಸಂಯಮ) ಎಂಬುದನ್ನು ಬ್ರಹ್ಮಚರ್ಯ ಎಂದು ಕರೆಯುವುದು; ಸಂಯಮವು ಬ್ರಹ್ಮಚರ್ಯ ವ್ರತ.

ಪ್ರ: ಪ್ರಿಯ ಗುರೂಜಿ, ಇಂದು ನಾವು ಸೇವಿಸುವ ಆಹಾರದಲ್ಲಿ ಬಹಳಷ್ಟು ರಾಸಾಯನಿಕ ಪದಾರ್ಥಗಳಿವೆ ಮತ್ತು ಸರಕಾರದ ಕಾರ್ಯನೀತಿ, ಧೋರಣೆ ಇದನ್ನು ಪ್ರಚೋದಿಸುತ್ತವೆ. ಇದನ್ನು ಹೇಗೆ ನಿರ್ವಹಿಸುವುದು?ಅಲ್ಲದೇ ಸಾವಯವ ಕೃಷಿಯಿಂದ ಲಭಿಸುವ ಆಹಾರ ಮತ್ತು ಸಾವಯವ ಕೃಷಿಯ ಬಗ್ಗೆಯೂ ದಯವಿಟ್ಟು ಹೇಳಬೇಕು.

ಶ್ರೀ ಶ್ರೀ: ಸಾವಯವ ಕೃಷಿಯು ಈ ಭೂಮಿಯ ಭವಿಷ್ಯ.

ನಮಗೆ ಈ ಭೂಮಿಯು ಜೀವಂತವಾಗಿರಬೇಕಿದ್ದರೆ, ನಾವು ಸಾವಯವ ಮಾರ್ಗವನ್ನು ಅಳವಡಿಸಬೇಕು. ಬೇರೊಂದು ಮಾರ್ಗವಿಲ್ಲ. ಕೆಲವು ಜನ ಎಷ್ಟು ಲೋಭಿ ಮತ್ತು ಸ್ವಾರ್ಥರಾಗಿರುತ್ತಾರೆಂದರೆ ಅವರು ಈ ಭೂಮಿಗಾಗಿ ಕಳವಳ ಪಡುವುದಿಲ್ಲ, ಮತ್ತು ಹಾಗಾಗಿ ಅವರು  ಅಪಾಯಕಾರಿ ವಿಷಯಗಳನ್ನು ರೈತರಿಗೆ ಉತ್ತೇಜಿಸುತ್ತಾರೆ. ಒಂದೋ ಎರಡೋ ಬೆಳೆಗಳು ಚೆನ್ನಾಗಿ ಬರುತ್ತವೆ, ಹಾಗೆ ಅದು ರೈತರನ್ನು ಆಕರ್ಷಿಸಿ ಅವರು ಅದನ್ನು ತೆಗೆದುಕೊಳ್ಳುತ್ತಾಎ. ಒಮ್ಮೆ ಅವರು ಅದನ್ನು ತೆಗೆದುಕೊಂಡ ನಂತರ, ಮೂರನೆ ಅಥವಾ ನಾಲ್ಕನೇ ಫಸಲಿನಿಂದ ಎಲ್ಲವೂ ಇಳಿದುಹೋಗುತ್ತದೆ ಮತ್ತು ನೆಲವೂಕೆಟ್ಟು ಹೋಗುತ್ತದೆ. ಭೂಮಿಯು ವ್ಯವಸಾಯಕ್ಕೆ ಅಯೋಗ್ಯವಾಗಿಬಿಡುತ್ತದೆ.ಇದುವೇ ಸಮಸ್ಯೆ.ಅದಕ್ಕಾಗಿಯೇ ನಾವು ರೈತರಿಗೆ ಸಾವಯವ ಕೃಷಿ; ಪ್ರಾಚೀನ ರೀತಿಯ ವ್ಯವಸಾಯವ್ಯನ್ನು ಕಲಿಸಲಿಕ್ಕಾಗಿ ಒಂದು ಕೃಷಿ ವಿದ್ಯಾನಿಲಯವನ್ನು ಸ್ಥಾಪಿಸಿದ್ದೇವೆ.

ಹಿಂದಿನ ದಿನಗಳಲ್ಲಿ, ಜನರು ಮೂರು ಬೆಳೆಗಳನ್ನು ಬೆಳೆಸುತ್ತಿದ್ದರು.ಹಾಗೆ ಒಂದು ಬೆಳೆ ಸತ್ತರೂ ಇನ್ನೆರಡು ಬೆಳೆಗಳಿವೆ.ಹಾಗೆ ಜನರು ಎಂದೂ ಹಸಿವಿನಿಂದ ಬಳಲುತ್ತಿರಲಿಲ್ಲ. ಅವರು ಎಂದೂ ದಿವಾಳಿಯಾಗಲಿಲ್ಲ ಅಥವಾ ನಷ್ಟದಲ್ಲಿ ಮುಳುಗಲಿಲ್ಲ.

ಉದಾಹರಣೆಗೆ ಅವರು ಯಾವುದಾದರೂ ಧಾನ್ಯಗಳೊಂದಿಗೆ ಕಬ್ಬು ಇತರೆಯನ್ನು ಬೆಳೆಸುತ್ತಿದ್ದರು, ಹಾಗೆ ಒಂದು ಬೆಳೆ ಬರದಿದ್ದರೆ, ಇನ್ನೆರಡು ಇರುತ್ತಿದ್ದವು.ಸಾಮಾನ್ಯವಾಗಿ ಎಲ್ಲಾ ಮೂರು ಬೆಳೆಗಳು ಬರುತ್ತಿದ್ದವು ಮತ್ತು ಅವುಗಳ ವೈವಿಧ್ಯದಿಂದ ತಾನಾಗಿಯೇ ಮಣ್ಣಿನಲ್ಲಿ ಸಾರಜನಕದ ಅಂಶವನ್ನು ಹೊಂದಿಸುತ್ತಿತ್ತು.ಈ ರೀತಿಯ ವ್ಯವಸಾಯಕ್ಕೆ ಪ್ರತಿಯೊಬ್ಬರು ಮರಳಬೇಕಾಗಿರುವುದು.

ನಾವು ಅಗ್ನಿಹೋತ್ರ (ಒಂದು ವಿಧದ ವೈದಿಕ ಯಜ್ಞ)ವನ್ನು ಮಾಡಬೇಕು, ಆಗ ಅದು ಹಾನಿಕಾರಕ ಹುಳಜಂತುಗಳನ್ನು ತಡೆಗಟ್ಟುತ್ತದೆ. ಹಾಗೆ ನೀವು ಕ್ರಿಮಿನಾಶಕಗಳನ್ನು ಹಾಕಬೇಕಾಗಿಲ್ಲ. ಮತ್ತೆ ಪ್ರಾಕೃತಿಕ ಕ್ರಿಮಿನಾಶಕಗಳಿವೆ: ಗೋಮೂತ್ರ, ಕಹಿಬೇವಿನೆಲೆ ಮತ್ತು ಹಲವಾರು ಅಂಥ ಪದಾರ್ಥಗಳು.

ಹಾಗೆ ನಾವು ನೀರನ್ನು, ಈ ಭೂಮಿಯನ್ನು ಮತ್ತು ಜನರ ಆರೋಗ್ಯವನ್ನು ಕೆಡಿಸದಂಥ ಈ ಬಗೆಯ ವ್ಯವಸಾಯಕ್ಕೆ ಮರಳಬೇಕಾಗಿದೆ.

ಪ್ರ: ಗುರೂಜಿ, ನಾವು ಮೂರು ಅಸಮರ್ಥ ವೈದ್ಯರ ಬಳಿಗೆ ಹೋದ್ದರಿಂದ ನಾನು ನನ್ನ ಕುಟುಂಬದ ಮೂರು ಮಂದಿಯನ್ನು ಕಳೆದುಕೊಂಡೆ. ನಾವು ವೈದ್ಯಕೀಯ ಸೇವಾಕ್ಷೇತ್ರದಲ್ಲಿ ಏನು ತಪ್ಪು ಮಾಡುತ್ತಿದ್ದೇವೆ, ಮತ್ತು ನಾವದನ್ನು ಹೇಗೆ ಸುಧಾರಿಸಬಹುದು?

ಶ್ರೀ ಶ್ರೀ: ಇದನ್ನು ವೈದ್ಯರು ಕುಳಿತು ಚರ್ಚಿಸಬೇಕು.

ಮೊತ್ತಮೊದಲನೆಯದಾಯಿ ನಾನು ಹೇಳುವುದು, ವೈದ್ಯರು ಧ್ಯಾನ ಮಾಡಬೇಕು, ಅವರ ಮನಸ್ಸು ತಿಳಿಯಾಗುತ್ತದೆ ಮತ್ತು ಅವರು ತಮ್ಮೊಳಗಿನ ಆಳದಲ್ಲಿರುವ ಅಂತರ್ದೃಷ್ಟಿಯ(ಒಳ ಅರಿವು)  ಸಾಮರ್ಥ್ಯವನ್ನು ಹೊರತೆಗೆಯಬಹುದು.

ಆಯುರ್ವೇದ ವೈದ್ಯರು ಮಾಡುವುದು ಇದನ್ನೇ, ಅವರು ನಿಮ್ಮ ನಾಡಿಯನ್ನು ಹಿಡಿದು ನಿಮ್ಮಲ್ಲಿ ಏನು ತೊಂದರೆ ಇದೆ ಎಂದು ಗುರುತಿಸಿ ನಿರ್ಣಯಿಸುತ್ತಾರೆ.ಇದನ್ನು ಮಾಡುವುದಕ್ಕೂ ಅವರು ಧ್ಯಾನ ಮಾಡಬೇಕು, ಅದು ಬಹಳ ಮುಖ್ಯ. ಮನಸ್ಸಿನ ಒಳಗಿನ ಅಂತರ್ದೃಷ್ಟಿಯ ಮೂಲವನ್ನು ಶೋಧಿಸುವುದಕ್ಕಾಗಿ ಮನಸ್ಸು ಸಪಂದನಶೀಲವಾಗಿ ಮಿಡಿಯುತ್ತಿರಬೇಕು.

ನೋಡಿ ಅವರಿಗೆ ಅಂತರ್ದೃಷ್ಟಿಯಿಲ್ಲದಿದ್ದರೆ, ಅವರು ಕತ್ತಲಿನಲ್ಲಿ ಏನು ಔಷಧ ಕೊಡುವುದು ಎಂದು ತಡಕಾಡುತ್ತಿದ್ದಾರೆ. ಆದ್ದರಿಂದಲೇ , ಬಹಳ ವೈದ್ಯರು ಇದ್ದರೂ, ಕೆಲವು ವೈದ್ಯರಷ್ಟೇ ಜನರನ್ನು ಗುಣಮುಖಗೊಳಿಸುವವರಲ್ಲಿ ಗಣಿಸಲ್ಪಡುತ್ತಾರೆ. ಯಾಕೆ?ಇದು ಸಾಧ್ಯವಾಗುವುದು ಹೇಗೆಂದರೆಅವರಲ್ಲಿ ತಮ್ಮ ಅಂತರ್ದೃಷ್ಟಿಯ ಸಾಮರ್ಥ್ಯವನ್ನು ಉಪಯೋಗಿಸುವ ಮತ್ತು ರೋಗಿಗಳಿಗೆ ಸರಿಯಾದ ಔಷಧಿಯನ್ನು ಕೊಡುವ ವರವಿದೆ.

ವೈದ್ಯರು ಧ್ಯಾನ ಮಾಡಬೇಕು ಮತ್ತು ಪ್ರಶಾಂತ ಮನಸ್ಸಿನಿಂದ ವೈದ್ಯಕೀಯ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.

ಇತ್ತೀಚೆಗೆ ಏ.ಐ.ಎಂ.ಎಸ್.(ಏಮ್ಸ್) ನಡೆಸಿದ ಸಮೀಕ್ಷೆಯನ್ನು ಓದಿ ತಿಳಿದೆ- ಶೇಕಡಾ ೬೦ರಷ್ಟು ವೈದ್ಯರೇ ಅಸ್ವಸ್ಥರು ಎಂದು. ಅವರ ಗಮನ ವ್ಯಾಪ್ತಿ ಬಹಳ ಕಡಿಮೆಯಿರುತ್ತದೆ, ಅದಕ್ಕಾಗಿಯೇ ನರ್ಸ್ ಅವರಿಗೆ ಶಸ್ತ್ರಕ್ರಿಯೆಯ ಮೊದಲು ವೈದ್ಯರಿಗೆ ಕೊಡುವ ಉಪಕರಣಗಳನ್ನು ಎಣಿಸಬೇಕು, ಮತ್ತೆ ಇನ್ನೊಮ್ಮೆ ಮರಳಿ ಪಡೆದ ಉಪಕರಣಗಳನ್ನು ಎಣಿಸಬೇಕು.ಹಲವು ಸಲ ಅವರು ಚಾಕು ಅಥವಾ ಸೂಜಿ ಉದಕರಣಗಳನ್ನು ದೇಹದೊಳಗೆ ಬಿಟ್ಟು ಹೊಲಿಗೆ ಹಾಕುತ್ತಾರೆ.

ಅದಕ್ಕಾಗಿ ಅವರು ಎಷ್ಟು ಉಪಕರಣಗಳು ಹೋದವು ಮತ್ತು ಎಷ್ಟು ಮರಳಿ ಬಂದವು ಎಂದು ಪಟ್ಟಿ ಮಾಡುತ್ತಾರೆ.ಹಾಗಾಗಿ ಪ್ರತಿ ವೈದ್ಯನೂ ಸ್ವಲ್ಪ ಕಾಲ ತೆಗೆದುಕೊಂಡು ವಿಶ್ರಮಿಸಬೇಕು, ಅವರು ಒತ್ತಡಕ್ಕೊಳಗಾಗುವುದು ದುಬಾರಿಯಾಗುತ್ತದೆ.

ಪೈಲಟ್.ಗಳು, ವಾಯು ಸಂಚಾರ ನಿಯಂತ್ರಣ ಗೋಪುರಗಳಲ್ಲಿ ಕೆಲಸ ಮಾಡುವವರು, ವೈದ್ಯರು - ಈ ಉದ್ಯೋಗದಲ್ಲಿರುವವರಿಗೆ ಬಹಳ ಮಾನಸಿಕ ಶಕ್ತಿಯು ಅಗತ್ಯ.ಅವರು ಯಾವಗಲೂ ತುದಿಗಾಲಲ್ಲಿ ನಿಂತಿರಬೇಕಾಗುತ್ತದೆ, ಜಾಗೃತರಾಗಿರಬೇಕಾಗುತ್ತದೆ.ಅವರು ಒಂದು ಸಣ್ಣ ತಪ್ಪನ್ನು ಮಾಡಿದರೂ ನಿರ್ವಹಿಸಲಾಗುವುದಿಲ್ಲ.

ವಾಯು ಸಂಚಾರ ನಿಯಂತ್ರಣ ಗೋಪುರದಲ್ಲಿ ಕೆಲಸ ಮಾಡುವವರು , ಒಂದು ನಿಮಿಷಕ್ಕೂ ಕಿರಿದಾಗಿ ನಿದ್ರಿಸಲಾಗುವುದಿಲ್ಲ, ಅವರು ಬಹಳ ನಿಖರ ಮತ್ತು ಎಚ್ಚರವಾಗಿರಬೇಕು. ಆದರೆ ಮಾನಸಿಕ ಶಕ್ತಿಯಿಲ್ಲದೇ ಅಥವಾ ಧ್ಯಾನಸ್ಥ ಅರಿವಿಲ್ಲದೆ ಅವರು  ಅದನ್ನು ಮಾಡುವುದು ಹೇಗೆ ಸಾಧ್ಯ? ಹಾಗಾಗಿ ಅತಿ ಒತ್ತಡ ಮತ್ತು ಅತಿ ಅಪಾಯ-ಸಂಬಂಧಿಸಿದ ಕೆಲಸದಲ್ಲಿರುವವರು ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು.

ಪ್ರ: ಗುರೂಜಿ, ಪ್ರಯತ್ನವಿಲ್ಲದಿರುವುದು(ನಿರಾಯಾಸವಾಗಿರುವುದು) ನನ್ನನ್ನು ಜೀವನದಲ್ಲಿ ಹೇಗೆ ಯಶಸ್ವಿಯಾಗಿಸಬಹುದು? ದಯವಿಟ್ಟು ಬಿಡಿಸಿ ಹೇಳಿ.

ಶ್ರೀ ಶ್ರೀ: ಒಂದು ಬಾಣವು ಮುಂದೆ ಹೋಗಬೇಕಾದರೆ ಅದನ್ನು ಹಿಂದೆ ಎಳೆಯಬೇಕಗಿರುವಂತೆ, ಅಲ್ಲ?

ಹಾಗೆಯೇ, ನಿರಾಯಾಸವಾಗಿರುವುದು ನಿಮಗೆ ಗಾಢ ವಿಶ್ರಾಂತಿಯನ್ನು ನೀಡುತ್ತದೆ, ಮತ್ತು ಅದು ನಿಮ್ಮ ಅಂತರ್ದೃಷ್ಟಿಯ, ಸೃಜನಾತ್ನಕತೆಯ ಮತ್ತು ಶಕ್ತಿಯ ಮೂಲವನ್ನು ಹೊರತೆಗೆಯಲು ಸಹಾಯವಾಗುತ್ತದೆ.ಆಗ ನೀವು ಹೊರಬಂದು ಅದರ ಅರಿವಿನಿಂದ ಕಾರ್ಯನಿರ್ವಹಿಸುತ್ತೀರಿ.

’ನಾನು ಸಿತಾರ್ ನುಡಿಸುವುದನ್ನು ಕಲಿಯಲು ಯಾವುದೇ ಪರಿಶ್ರಮ ಹಾಕುವುದಿಲ್ಲ ಆದರೆ ನನಗೆ ಮಹಾನ್ ಸಿತಾರ್ ವಾದಕನಾಗಬೇಕು’, ಎಂದು ನಿಮಗೆ ಹೇಲಲಾಗುವುದಿಲ್ಲ. ನೀವು ಪರಿಶ್ರಮ ಹಾಕಬೇಕು.ಅದರೊಂದಿಗೆ ನಿರಾಯಾಸವಾಗಿರುವುದು ನಿಮಗೆ ಪರಿಶ್ರಮ ಹಾಕಲು ಸಹಾಯವಾಗುತ್ತದೆ.

ಪ್ರ: ಪ್ರತಿ ಆತ್ಮವೂ ಒಂದು ದಿನ ಮೋಕ್ಷ ಪಡೆಯುವುದೇ? ಈ ಭೂಮಿ ಇನ್ನೆಷ್ಟು ಕಾಲ ಇರುತ್ತದೆ ಮತ್ತು ನಾವೆಲ್ಲರೂ ಮುಂದಿನ ಜನ್ಮದಲ್ಲೂ ಕೃಪೆಯನ್ನು ಪಡೆಯುತ್ತೇವೋ?

ಶ್ರೀ ಶ್ರೀ: ನೀವು ನಿಮ್ಮ ಬಗ್ಗೆ ಕೇಳಿ. ನೀವು ಜಗತ್ತಿನ ಎಲ್ಲಾ ಆತ್ಮಗಳ ಬಗ್ಗೆ ಕೇಳುತ್ತೀರಿ?ಮೊದಲನೆಯದಾಗಿ ಎಲ್ಲಾ ಆತ್ಮಗಳಿಗೂ ಮೋಕ್ಷ ಬೇಕೆಂದಿದೆಯೇ? ಅವುಗಳಿಗೆ ಬೇಕೆಂದನಿಸದೇ ಇದ್ದಿರಬಹುದು; ಸರಿಯೇ!

ನಿಮಗೆ ಗೊತ್ತೇ.ಕೆಲವೊಮ್ಮೆ ನಾವು ಸಾಮಾನ್ಯೀಕರಿಸಿದ ವಾಕ್ಯಗಳನ್ನು ಹೇಳುತ್ತೇವೆ ಮತ್ತು ಈ ಸಾಮಾನ್ಯೀಕರಿಸಿದ ಪ್ರಶ್ನೆಗಳನ್ನೂ ಕೇಳುತ್ತೇವೆ.ಎಲ್ಲಾ ಆತ್ಮಗಳೂ ಮೋಕ್ಷವನ್ನು ಹೊಂದುತ್ತವೋ ಎಂಬುದು ನನಗೆ ಗೊತ್ತಿಲ್ಲ, ಆದರೆ ನಿಮಗೆ ಅದು ಬೇಕಿದ್ದರೆ, ಹೌದು, ಅದು ಸಾಧ್ಯ. ನಿಮಗೆ ಎಲ್ಲಾ ಅವಕಾಶಗಳಿವೆ.

ನಾವು ಇದೆಲ್ಲವನ್ನೂ ಈ ಜನ್ಮದಲ್ಲೇ ಮುಗಿಸೋಣ, ನೀವು ನನ್ನನ್ನು ಮುಂದಿನ ಜನ್ಮಕ್ಕೂ ಏಕೆ ಎಳೆಯುತ್ತೀರಿ.

ದೇವರು ಎಲ್ಲ ರೂಪಗಳಲ್ಲೂ ಇದ್ದಾನೆ.ಭಗವಂತನಿಲ್ಲದ ಸ್ಥಳವಿಲ್ಲ. ಹಾಗಾಗಿ ಭಗವಂತ ಎಲ್ಲೆಲ್ಲೂ ಇದ್ದಾನೆ.