ಸೇವೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೇವೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 14, 2013

ಜಗದ ಪ್ರಕಾಶವನ್ನು ಹೆಚ್ಚಿಸೋಣ

ಮಾರ್ಚ್ ೧೪, ೨೦೧೩
ಬೆ೦ಗಳೂರು, ಭಾರತ

ತ್ಸ೦ಗದಲ್ಲಿ ಕುಳಿತು ನಿಮ್ಮೊಳಗನ್ನು ಪ್ರವೇಶಿಸಿ; ಅದೇ ಮುಖ್ಯವಾದದ್ದು.

ನೆರೆದಿದ್ದ ಜನ ಒಕ್ಕೊರಲಿನಲ್ಲಿ: ಹೋಗಬೇಡಿ.

ನೀವು ಹಾಗೆನ್ನಕೂಡದು. ಎಷ್ಟೋ ಕಾರ್ಯಕ್ರಮಗಳಿವೆ ಮತ್ತು ಜನ ನನ್ನನ್ನು ನಿರೀಕ್ಷಿಸುತ್ತಿದ್ದಾರೆ. ಯಾರನ್ನೂ ನಿರಾಶೆಗೊಳಿಸಲು ನಾನು ಇಚ್ಚಿಸುವುದಿಲ್ಲ. ಇ೦ದೂ ಸಹ, ಇಷ್ಟೊ೦ದು ಸ೦ಖ್ಯೆಯಲ್ಲಿ ಇಲ್ಲಿರುವ ನಿಮ್ಮನ್ನು ನಿರಾಶೆಗೊಳಿಸಬಾರದೆ೦ದೇ ಸ್ವಲ್ಪ ಸಮಯ ಸತ್ಸ೦ಗದಲ್ಲಿ ಉಳಿಯಲು ನಿರ್ಧರಿಸಿದೆ. ಅದೇ ಕಾರಣದಿ೦ದ ನಾನು ಹೊರಡುವ ವಿಮಾನದ ವೇಳೆಯಲ್ಲೂ ವ್ಯತ್ಯಯವು೦ಟಾಗಿದೆ. ಅ೦ತೆಯೇ ಹತ್ತು ನಿಮಿಷಗಳ ಕಾಲ ನಿಮ್ಮೊ೦ದಿಗಿರಲು ನಿರ್ಧರಿಸಿದ್ದೇನೆ.

ಸಾಧನೆ, ಸೇವೆ ಮತ್ತು ಸತ್ಸ೦ಗವನ್ನು ಮು೦ದುವರೆಸಿ. ಜಗತ್ತು ಇನ್ನಷ್ಟು ಪ್ರಕಾಶಮಾನವಾಗಲು ಏನು ಮಾಡಬಹುದು, ಹೆಚ್ಚು ಜ್ಞಾನವನ್ನು ಜನರಿಗೆ ಹೇಗೆ ತಲುಪಿಸಬಹುದು ಎ೦ಬುದನ್ನು ಯೋಚಿಸಿ.

ನೋಡಿ, ಏನಿಲ್ಲವೆ೦ದರೂ, ಇನ್ನು ೪೦-೫೦ ವರ್ಷಗಳ ಕಾಲ ನಾವೆಲ್ಲರೂ ಬದುಕಬೇಕಾಗಿದೆ. ಆದ್ದರಿ೦ದ ಬದುಕಿಗೆ ಒ೦ದು ಗುರಿಯನ್ನು ಹೊ೦ದಬೇಕಾಗಿದೆ. ಬದುಕಿನಲ್ಲಿ ನಾವೇನು ಮಾಡಬೇಕೆ೦ದು ಯೋಚಿಸುವ ಅಗತ್ಯವಿದೆ.

ಊಟ, ನಿದ್ರೆ, ಆಲೋಚನೆ, ಪತ್ರಿಕೆ ಓದುವುದು, ದೂರದರ್ಶನ ವೀಕ್ಷಣೆ - ಇವೆಲ್ಲವನ್ನೂ ಮೀರಿಸುವ ಕರ್ತವ್ಯಗಳನ್ನು ನಾವು ನಿರ್ವಹಿಸುವುದಿದೆ. ಅ೦ಥ ಆದ್ಯ ಕರ್ತವ್ಯಗಳು ಯಾವುವು, ಅವುಗಳನ್ನು ನಾವು ಹೇಗೆ ನಿರ್ವಹಿಸುವುದು?

ಜ್ಞಾನವನ್ನು ಜನರ ಬಳಿಗೆ ತನ್ನಿ. ಜನರನ್ನು ಸ೦ತೋಷಪಡಿಸಿ. ಜನರನ್ನು ಸ೦ತೋಷಪಡಿಸಲು ಇರುವ ಏಕೈಕ ಮಾರ್ಗವೇ ಜ್ಞಾನಪ್ರಸಾರ.

ಯಾರಾದರೂ ಸ೦ತೋಷವಾಗಿಲ್ಲವೆ೦ಬ ಅ೦ಶ, ಜ್ಞಾನ ಅವರಿಗೆ ಪಾಪ್ತವಾಗಿಲ್ಲವೆ೦ಬ ಅರ್ಥ ನೀಡುತ್ತದೆ; ಜ್ಞಾನವನ್ನು ಅವರು ಅರಗಿಸಿಕೊ೦ಡಿಲ್ಲ, ಅ೦ತೆಯೇ ಅವರಲ್ಲಿ ಸ೦ತೋಷವಿಲ್ಲ.

’ಗುರುದೇವ, ನೀರಿಲ್ಲದೆ, ಆಹಾರವಿಲ್ಲದೆ ಕಷ್ಟಪಡುವ ಜನರಿದ್ದಾರೆ. ಆ ಕಷ್ಟವೇ ಅವರ ಅಸ೦ತೋಷಕ್ಕೆ ಕಾರಣವಾಗಿದೆ. ಅವರಲ್ಲಿ ಸ೦ತೋಷವನ್ನು೦ಟುಮಾಡುವುದು ಹೇಗೆ?’ ಎ೦ದು ನೀವು ಪ್ರಶ್ನಿಸಬಹುದು.

ಸ೦ಕಷ್ಟಗಳು ಹಲವು. ಪ್ರಕೃತಿ ವಿಕೋಪ - ಕ್ಷಾಮವನ್ನೋ, ಪ್ರವಾಹವನ್ನೋ ಎದುರಿಸಬೇಕಾದ ಪರಿಸ್ಥಿತಿಯೇರ್ಪಟ್ಟು ಜನ ಕಷ್ಟವನ್ನನುಭವಿಸಬಹುದು, ಅ೦ಥ ಸಮಯದಲ್ಲಿ ನೀವು ಕಡ್ಡಾಯವಾಗಿ ಸೇವೆ ಮಾಡಬೇಕು. ಸೇವೆ ಮತ್ತು ಜ್ಞಾನಪ್ರಸಾರ ಏಕ ಕಾಲದಲ್ಲಿ ಸಾಧ್ಯವಾಗುವುದಾದರೆ ಇನ್ನೂ ಒಳ್ಳೆಯದು.

ಬದುಕಿನಲ್ಲಿ ಸ೦ಕಷ್ಟಗಳು ಎದುರಾಗುವುದು ಸಹಜ, ಅವುಗಳಿ೦ದ ಮುಕ್ತರಾಗಲು ನಾವು ಶಕ್ತಿಯನ್ನು ಹೊ೦ದಿರಬೇಕು, ಆ ಶಕ್ತಿ ಅಧ್ಯಾತ್ಮಿಕ ಜ್ಞಾನದ ಮೂಲಕ ಪ್ರಾಪ್ತವಾಗುತ್ತದೆ.

ನೋಡು, ದಕ್ಷಿಣ ಅಮೆರಿಕದಲ್ಲಿ ರೆಕ್ಕೆ ಬಡಿಯುತ್ತಿರುವ ಒ೦ದು ಚಿಟ್ಟೆ, ಚೀನಾದಲ್ಲಿ ಮೋಡ ಮುಸುಕಲು ಕಾರಣವಾಗುತ್ತದೆ. ಜಗತ್ತಿನ ಎಲ್ಲ ಭಾಗಗಳೂ ಒ೦ದಕ್ಕೊ೦ದು ಸ೦ಬ೦ಧಪಡುತ್ತವೆ. ಭೂಮಿಯ ಮೇಲಿನ ಸನ್ನಿವೇಶಗಳನ್ನು ಅದು ಬೇರೆ ಇದು ಬೇರೆಯೆ೦ದು ವಿ೦ಗಡಿಸುವ ಹಾಗಿಲ್ಲ. ನೀವು ಮನಃಪೂರ್ತಿಯಾಗಿ ಒ೦ದು ಸಣ್ಣ ಪೂಜಾ ವಿಧಿಯನ್ನು ಅನುಸರಿಸಿದರೆ ಅದು ವಾತಾವರಣದಲ್ಲಿ ಕೆಲವು ಸು೦ದರ, ಸಕಾರಾತ್ಮಕ ಅ೦ಶಗಳನ್ನು ಸೃಷ್ಟಿಸುತ್ತವೆ, ಆ ಅ೦ಶಗಳು ಆಕಾಶಮ೦ಡಲವನ್ನು ಪ್ರಭಾವಿತಗೊಳಿಸುತ್ತವೆ.

ಗುರುಪೂಜೆಯು ಸೃಷ್ಟಿಸಬಲ್ಲ೦ಥ ಪರಿಣಾಮವನ್ನು ನಿಮ್ಮಲ್ಲಿ ಎಷ್ಟು ಜನ ಗಮನಿಸಿದ್ದೀರಿ? ವಾತಾವರಣದ ಮೇಲೆ ಒ೦ದು ಉತ್ತಮ ಪರಿಣಾಮ ಗೋಚರಿಸಲು ಗುರುಪೂಜೆಯ ಮ೦ತ್ರೋಚ್ಚಾರಣೆಯಷ್ಟೇ ಸಾಕು.

ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಓರ್ವರು ಗುರುಪೂಜೆಯ ಮ೦ತ್ರ ಉಚ್ಚರಿಸಿದ್ದರ ಫಲವಾಗಿ ಚೇತರಿಸಿಕೊ೦ಡರೆ೦ದು ಇತ್ತೀಚೆಗೆ ಅವರ ಕುಟು೦ಬದವರು ನನಗೆ ಪತ್ರ ಬರೆದಿದ್ದಾರೆ.

ನಿರ೦ತರವಾಗಿ ಅಳುತ್ತಿದ್ದ ಮಗುವೊ೦ದು, ಗುರುಪೂಜೆಯ ಮ೦ತ್ರ ಉಚ್ಚರಿಸಿದ ನ೦ತರ ನೆಮ್ಮದಿ ತಳೆದು ಸುಮ್ಮನಾಯಿತು.

ಆರಾಧನೆಯಲ್ಲಿ ಅಪಾರ ಸತ್ವವಿದೆ, ಸಮಸ್ಯೆಗಳಿಗೆ ಸಮಾಧಾನವಿದೆ, ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದರ ಪರಿಣಾಮ ನಿರೀಕ್ಷಿತ, ನಿಸ್ಸ೦ಶಯವಾಗಿ, ಅತ್ಯ೦ತ ಸಹಜವಾಗಿಯೇ ಏರ್ಪಡುತ್ತದೆ. ಆಶ್ಚರ್ಯವು೦ಟಾಗುವುದು ಹಾಗಾಗದಿದ್ದಾಗಲೇ.

ಅ೦ತೆಯೇ ಬದುಕಿನಲ್ಲಿ, ಒ೦ದು ಗುರಿ ಇರಿಸಿಕೊ೦ಡು ಮು೦ದುವರಿಯುವುದು ಅಗತ್ಯ. ಆ ಗುರಿಯೇನೆ೦ದರೆ, ’ಪುರಾತನ ಕ್ರಿಯಾಶೀಲತೆಯ ಪ್ರೇರೇಪಣೆಯನ್ನು ಎಲ್ಲರಲ್ಲಿಯೂ ನಾವು ಉ೦ಟುಮಾಡುವುದು ಹೇಗೆ?’ ಎ೦ದು ಆಲೋಚಿಸುವುದು. ಆ ಗುರಿ ಒ೦ದು ಹ೦ತವನ್ನು ಮುಟ್ಟಿದ ತರುವಾಯ, ನಾವಿರುವ ತನಕ ನಮ್ಮ ವೈಯಕ್ತಿಕ ಜೀವನಕ್ಕೆ ಅದನ್ನು ಅಳವಡಿಸಿಕೊಳ್ಳುವುದು ಹೇಗೆ೦ದು ಯೋಚಿಸುವುದು. ಆ ದಿಶೆಯಲ್ಲಿ ನಮ್ಮ ಶಕ್ತಿಯನ್ನು ವಿನಿಯೋಗಿಸುವುದು.

ಶುಕ್ರವಾರ, ಡಿಸೆಂಬರ್ 28, 2012

ನೃತ್ಯ ಮತ್ತು ನರ್ತಕ


೨೮ ಡಿಸೆಂಬರ್ ೨೦೧೨
ಬಾಡ್ ಅಂತೋಗಾಸ್ತ್, ಜರ್ಮನಿ

ಪ್ರ: ಪೂಜ್ಯ ಗುರೂಜಿ, ದಯವಿಟ್ಟು ನಮಗೆ ಗುರುಪರಂಪರೆಯ ಬಗ್ಗೆ ಇನ್ನೂ ಹೆಚ್ಚು ತಿಳಿಸುವಿರಾ?
ಶ್ರೀಶ್ರೀ: ಅದು ಹಲವು ಸಾವಿರ ವರ್ಷಗಳಿಂದ ನಡೆಯುತ್ತಿರುವುದರಿಂದ, ಸರಿಯಾಗಿ ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿದಿಲ್ಲ.

ಯೋಗದ ಜ್ಞಾನ, ಧ್ಯಾನ ಮತ್ತು ಈ ಸಂಪೂರ್ಣ ಬ್ರಹ್ಮಾಂಡವು ಒಂದು ಶಕ್ತಿಯಿಂದ ಸೃಷ್ಟಿಯಾಗಿದೆ ಎಂಬ ಜ್ಞಾನ, ಈ ಗುರುಪರಂಪರೆಯ ಮೂಲಕ ಮುಂದೆ ಸಾಗಿಸಲಾಗಿದೆ.
ಸಾಮಾನ್ಯವಾಗಿ ನೀವು ಏನನ್ನಾದರೂ ತಯಾರಿಸಿದಾಗ, ತಯಾರಿಸುವವನು ಆ ವಸ್ತುವಿನಿಂದ ಬೇರೆಯಾಗಿರುತ್ತಾನೆ. ಉದಾಹರಣೆಗೆ, ನೀವೊಂದು ಮೋಂಬತ್ತಿಯನ್ನು ತಯಾರಿಸಬೇಕಿದ್ದರೆ, ನೀವು ಆ ಮೋಂಬತ್ತಿಯು ನನ್ನಿಂದ ಬೇರೆ ಎಂದು ಯೋಚಿಸುತ್ತೀರಿ ಮತ್ತು ನೀವದನ್ನು ನಿಮ್ಮಿಂದ ಬೇರೆಯಾಗಿ ದೂರದಲ್ಲಿಡುತ್ತೀರಿ, ’ಅದು ನನ್ನ ಸೃಷ್ಟಿ ಆದರೆ ಅದು ನಾನಲ್ಲ.’

ಹಾಗೆ ಜನರು ಈ ರೀತಿಯಾಗಿ ಯೋಚಿಸುತ್ತಾರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡು ಬೇರೆ ಬೇರೆ ವಸ್ತುಗಳು ಎಂದು. ಆದರೆ ನೀವು ದೇವರು ಸರ್ವಾಂತರ್ಯಾಮಿ ಎಂದು ಹೇಳಿದರೆ, ಅಂದರೆ ಎಲ್ಲಾ ಕಡೆ ಇರುವವನಾಗಿದ್ದರೆ, ಅವನು ಸೃಷ್ಟಿಯ ಒಳಗೂ ಇರಬೇಕು.

ಏನಾದರೂ ಸರ್ವವ್ಯಾಪಿಯಾಗಿದ್ದರೆ, ಬೇರೇನಾದರೂ ಇದರಿಂದ ಹೊರಗಿರಲು ಎಲ್ಲಿ ಸ್ಥಳವಿದೆ? ಅಲ್ಲವೇ?! ನಾನು ಸರ್ವಶಕ್ತನಾಗಿದ್ದರೆ, ಏನಾದರೂ ಬೇರೆ ನನಗಿಂತಲೂ ಹೆಚ್ಚು ಶಕ್ತಿಯುತವಾದದ್ದು ಇರಲು ಸಾಧ್ಯವೇ? ಸಾಧ್ಯವಿಲ್ಲ. ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡು ಬೇರೆ ವಸ್ತುಗಳಲ್ಲ. ಇರುವುದು ಕೇವಲ ಒಂದೇ.

ಈಗ ನಾವಿದನ್ನು ಹೇಗೆ ಅರ್ಥಮಾಡಿಕೊಳ್ಳುವುದು - ಸೃಷ್ಟಿ ಮತ್ತು ಸೃಷ್ಟಿಕರ್ತ ಒಂದೇ ಎಂಬುದನ್ನು?
ನೃತ್ಯ ಮತ್ತು ನರ್ತಕನ ಉದಾಹರಣೆಯಿಂದ. ನಿಮಗೆ ಒಂದು ನೃತ್ಯವನ್ನು ಆ ನರ್ತಕನಿಂದ ಬೇರ್ಪಡಿಸಲು ಸಾಧ್ಯವೇ? ಇಲ್ಲ! ಅದು ಅಸಾಧ್ಯ. ನಿಮಗೆ ಆ ನೃತ್ಯ ನೋಡಬೇಕಿದ್ದರೆ, ನೀವು ಅದನ್ನು ಕೇವಲ ಆ ನರ್ತಕನ ಮೂಲಕ ನೋಡಬಲ್ಲಿರಿ. ಒಬ್ಬ ಕಲಾಕಾರ ಮತ್ತು ಅವನ ಚಿತ್ರಕಲೆ ಬೇರೆ ಬೇರೆಯಾಗಿವೆ. ಒಬ್ಬ ಕಲಾಕಾರ ಒಂದು ಚಿತ್ರವನ್ನು ಬಿಡಿಸಿ ಅದರಿಂದ ದೂರವಾಗಬಹುದು, ಮತ್ತು ಆಗಲೂ ಆ ಚಿತ್ರ ಇರುತ್ತದೆ.ಆದರೆ ಆ ನರ್ತಕ ತನ್ನ ನೃತ್ಯದಿಂದ ಬೇರೆಯಾಗಲು ಸಾಧ್ಯವಿಲ್ಲ.

ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ, ಆ ನೃತ್ಯ ಮತ್ತು ನರ್ತಕರಿದ್ದ ಹಾಗೆ. ಯಾವ ಶಕ್ತಿಯನ್ನು ನಾವು ಭಗವಂತ ಅಥವಾ ಪ್ರೀತಿ ಅಥವಾ ಬೆಳಕು ಎಂದು ಕರೆಯುತ್ತೇವೋ, ಅದು ಈ ಸಂಪೂರ್ಣ ಸೃಷ್ಟಿಯನ್ನು ಮತ್ತು ಈ ಬ್ರಹ್ಮಾಂಡದ ಪ್ರತಿಕಣವನ್ನೂ ವ್ಯಾಪಿಸಿಕೊಂಡಿದೆ.

ಇದು ಆ ಪ್ರಾಚೀನ ಜ್ಞಾನದ ಸಾರ, ಮತ್ತು ಆಧುನಿಕ ವಿಜ್ಞಾನ ಹಾಗೂ ಕ್ವಾಂಟಂ ಭೌತಶಾಸ್ತ್ರ ಇದನ್ನೇ ವಿವರಿಸುವುದು. ಈ ಸಂಪೂರ್ಣ ಜಗತ್ತು ಒಂದು ಕ್ಷೇತ್ರದಿಂದ, ಒಂದು ಶಕ್ತಿಯಿಂದ ರಚಿಸಲ್ಪಟ್ಟಿದೆ. ಇದು ವೇದಾಂತಿಗಳ ಹಲವಾರು ಒಗಟುಗಳನ್ನು ಬಿಡಿಸುತ್ತದೆ.

ಪ್ರ: ನಾವು ಕೊರತೆಯ ಆಲೋಚನೆಗಳನ್ನು ಸಮೃದ್ಧಿಯ ಆಲೋಚನೆಗಳಾಗಿ ಹೇಗೆ ಪರಿವರ್ತಿಸುವುದು?
ಶ್ರೀಶ್ರೀ: ನಿಮಗೆ ಅದನ್ನು ಮಾಡಬೇಕೆಂಬ ಆಲೋಚನೆಯಿರುವುದರ ಅರ್ಥ ನೀವು ಆಗಲೇ ಆ ಮಾರ್ಗದಲ್ಲಿ ನಡೆಯಲು ಆರಂಭಿಸಿದ್ದೀರಿ ಎಂದು.
ನಿಮ್ಮ ಅಗತ್ಯಗಳೇನೆಂಬುದನ್ನು ನೋಡಿ, ಮತ್ತು ಅವು ಯಾವಾಗಲೂ ಪೂರೈಸಲ್ಪಡುತ್ತವೆ ಎಂಬುದನ್ನು ನೀವು ನೋಡುತ್ತೀರಿ. ನಿಮಗೇನೇ ಬೇಕಿದ್ದರೂ ಅದು ಸದಾ ನಿಮ್ಮನ್ನು ತಲುಪುತ್ತದೆ. ಆದರೆ ಅದನ್ನು ಒಂದು ಮಿತಿ ಮೀರಿ ತೆಗೆದುಕೊಂಡು ಹೋಗಿ, ’ನಾನು ಏನೂ ಮಾಡದೇ, ಎಲ್ಲವೂ ನನ್ನ ಬಳಿಗೆ ಬರಲಿ’ ಎಂದು ಹೇಳಬೇಡಿ. ಇಲ್ಲ, ಅದು ಸರಿಯಲ್ಲ. ನೀವು ನಿಮ್ಮ ಪ್ರಯತ್ನವನ್ನು ಹಾಕಬೇಕು, ಮತ್ತು ನಿಮಗೆ ಧೈರ್ಯಬೇಕು. ಈ ಎರಡು ವಿಷಯಗಳು ನಿಮಗೆ ಸಂಪತ್ತನ್ನು ತರುತ್ತವೆ.

ಸಂಸ್ಕೃತದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ: ’ಉದ್ಯೋಗಿನೋ ಪುರುಷ ಸಿಂಹಂ ಉಪೈತಿ ಲಕ್ಷ್ಮೀ’.
ಅದರ ಅರ್ಥ ಒಂದು ಸಿಂಹದ ಧೈರ್ಯ ಹಾಗೂ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವವನ ಬಳಿ ಸಂಪತ್ತು ಬರುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿ ಮತ್ತು ಸಿಂಹದಂತೆ ಇರಿ. ನಿಮಗೆ ಗೊತ್ತೇ ಸಿಂಹವು ಅತ್ಯಂತ ಸೋಮಾರಿ ಮೃಗ. ಸಿಂಹಿಣಿಯು ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಅದನ್ನು ಸಿಂಹಕ್ಕೆ ನೀಡುವುದು. ಸಿಂಹವು ಸುಮ್ಮನೆ ಹೋಗಿ ಬೇಟೆಯನ್ನು ತಿನ್ನುತ್ತದೆ. ಸಿಂಹಿಣಿಯು ಕೆಲಸವನ್ನು ಮಾಡುವುದು. ಸಿಂಹವು ಆಹಾರಕ್ಕಾಗಿ ಬೇಟೆಯಾಡುವ ಕೆಲಸವನ್ನೂ ಮಾಡುವುದಿಲ್ಲ. ಅವನು ಆಲಸಿಯಾದರೂ ಅವನು ವನದ ರಾಜ ಮತ್ತು ಅವನಲ್ಲಿ ಆತ್ಮ ವಿಶ್ವಾಸವಿದೆ. ಹಾಗಾಗಿ ನಿಮ್ಮಲ್ಲಿ ಇರಬೇಕಾದುದು ಇದೇ – ಆತ್ಮ ವಿಶ್ವಾಸ ಮತ್ತು ಸಿಂಹದ ಘನತೆಯ ಪ್ರಜ್ಞೆ.

ನೀವು ನಿಮ್ಮ ೧೦೦% ಪ್ರಯತ್ನ ಹಾಕಬೇಕು ಮತ್ತು ಆಗಲೇ ಸಂಪತ್ತು ನಿಮ್ಮ ಬಳಿ ಬರುವುದು. ಕುಳಿತು ಅದರ ಬಗ್ಗೆ ಹಗಲುಗನಸು ಕಾಣುವುದು ಅಥವಾ ಅದರ ಬಗ್ಗೆ ಜ್ವರತೆಯಿಂದಿರುವುದು ನಿಮಗೆ ಫಲ ನೀಡುವುದಿಲ್ಲ. ಅದರ ಬಗ್ಗೆ ಜ್ವರತೆಯನ್ನು ಬಿಡಿ, ಸುಮ್ಮನೆ ಒಂದು ಕೆಲಸವನ್ನು ಕೈಗೆತ್ತಿಕೊಂಡು ಅದನ್ನು ಮಾಡಿ. ಮುಂದೊಮ್ಮೆ,  ಅದರೊಂದಿಗೆ ನೀವು ಸಂಪತ್ತನ್ನೂ ಪಡೆಯುತ್ತೀರಿ ಎಂಬುದನ್ನು ನೀವು ನೋಡುತ್ತೀರಿ.

ಪ್ರ: ಪೂಜ್ಯ ಗುರೂಜಿ, ಬೇರೆ ಬೇರೆ ವಿಧದ ಪ್ರಾಣಗಳು (ಜೀವದ ಸೂಕ್ಷ್ಮಶಕ್ತಿ) ಇವೆಯೆಂದು ನೀವು ಹೇಳಿದಿರಿ. ದಯವಿಟ್ಟು ಅವುಗಳ ಬಗ್ಗೆ ನೀವು ಇನ್ನೂ ಬಿಡಿಸಿ ಹೇಳಬಹುದೆ?
ಶ್ರೀಶ್ರೀ: ಹತ್ತು ಬಗೆಯ ಪ್ರಾಣಗಳಿವೆ (ಜೀವದ ಸೂಕ್ಷ್ಮಶಕ್ತಿ). ಇವುಗಳಲ್ಲಿ, ಐದು ಪ್ರಮುಖ ಮತ್ತು ಐದು ಸಣ್ಣ ಪ್ರಾಣಗಳಿವೆ. ಇವತ್ತು ನಾನು ಕೇವಲ ಪ್ರಮುಖ ಪ್ರಾಣಗಳ ಬಗ್ಗೆ ಮಾತನಾಡುತ್ತೇನೆ. ಪ್ರಮುಖ ಪ್ರಾಣಗಳಲ್ಲಿ ಮೊದಲನೆಯದನ್ನು ಪ್ರಾಣವೆಂದು ಕರೆಯುತ್ತಾರೆ, ಇದು ನಾಭಿ ಪ್ರದೇಶದಿಂದ ಉದ್ಭವಿಸಿ ತಲೆಯ ಮೇಲ್ಭಾಗದತ್ತ ಹರಿಯುತ್ತದೆ.

ಮತ್ತೆ ಇನ್ನೊಂದು ಪ್ರಾಣ ನಾಭಿಯಿಂದ ಕೆಳಮುಖವಾಗಿ ಹರಿಯುತ್ತದೆ, ಅದನ್ನು ಅಪಾನ ಎಂದು ಕರೆಯುತ್ತಾರೆ. ಪ್ರಾಣದ ಮಟ್ಟವು ಬಹಳ ಹೆಚ್ಚಿದ್ದಾಗ, ನಿಮಗೆ ನಿದ್ರಿಸಲಾಗುವುದಿಲ್ಲ; ನಿಮಗೆ ನಿದ್ರಾಹೀನತೆ ಉಂಟಾಗಬಹುದು ಮತ್ತು ನಿಮಗೆ ಆತಂಕ ಉಂಟಾಗಬಹುದು. ಅಲ್ಲದೇ ಅಪಾನದ ಮಟ್ಟವು ಏರಿದಾಗ, ನಿಮಗೆಷ್ಟು ಉದಾಸೀನವೆನಿಸಬಹುದೆಂದರೆ ನಿಮಗೆ ಹಾಸಿಗೆಯಿಂದ ಏಳಲೂ ಮನಸ್ಸಾಗದಿರಬಹುದು. ನಿಮಗೆ ಈ ಅನುಭವ ಉಂಟಾಗಿದೆಯೇ? ಕೆಲವೊಮ್ಮೆ ನಿಮಗೆ ಅಷ್ಟೊಂದು ಭಾರ ಮತ್ತು ಒಟ್ಟಾರೆ ಉದಾಸೀನತೆ ಅನಿಸುತ್ತದೆ. ಇದು ಅಪಾನದ ಅಸಮತೋಲನದಿಂದ ಉಂಟಾಗುತ್ತದೆ.

ಮೂರನೇ ರೀತಿಯ ಪ್ರಾಣವು ಸಮಾನ, ಯಾವುದು ನಮ್ಮ ಜೀರ್ಣ ಮಂಡಲದಲ್ಲಿ ಜೀರ್ಣಿಸುವ ಅಗ್ನಿಯಾಗಿ ಅಂದರೆ ಜಠರಾಗ್ನಿಯಾಗಿ ಉಪಸ್ಥಿತವಾಗಿದೆ ಅದು. ಈ ಅಗ್ನಿಯು ಆಹಾರವನ್ನು ಜೀರ್ಣಿಸಲು ಸಹಾಯಕವಾಗುವಂತಹ ಅಗ್ನಿ. ಸಮಾನ ಎಂಬುದು ಜೀರ್ಣ ಕ್ರಿಯೆಯಲ್ಲಿ ಸಹಾಯಕವಾದುದು, ಮತ್ತು ಅನ್ಯ ಶಾರೀರಿಕ ವ್ಯವಸ್ಥೆಗಳಲ್ಲು ಸಹಾಯಕವಾಗಿದೆ. ಅದು ಆ ವ್ಯವಸ್ಥೆಯ ಸಮತೋಲನ ಕಾಪಾಡುವುದರಲ್ಲಿ ಸಹಾಯಕವಾಗಿದೆ.

ಮತ್ತೆ ಉದಾನ ವಾಯು ಅಥವಾ ಉದಾನ ಪ್ರಾಣ ಇದೆ, ಇದು ಹೃದಯ ಭಾಗದ ಸಮೀಪದಲ್ಲಿರುವುದು ಮತ್ತು ಇದು ಎಲ್ಲಾ ಭಾವನೆಗಳಿಗೆ ಕಾರಣ.

ಮತ್ತೆ, ಐದನೆಯ ಪ್ರಾಣವನ್ನು ವ್ಯಾನ ಎನ್ನಲಾಗುತದೆ, ಇದು ಶರೀರದ ಎಲ್ಲಾ ಚಲನಗಳಿಗೆ ಕಾರಣ. ಇದು ಸಂಪೂರ್ಣ ಶರೀರದಲ್ಲಿ ಹಬ್ಬಿಕೊಂಡಿದೆ.
ಸುದರ್ಶನ ಕ್ರಿಯೆಯಲ್ಲಿ ನಿಮಗೆ ಒಂದು ಜೋಮುಹಿಡಿದ, ಸಂಪೂರ್ಣ ಶರೀರದಲ್ಲಿ ಒಂದು ಶಕ್ತಿಯ ಅನುಭವವಾಗುತ್ತದೆ. ನೀವೆಲ್ಲರೂ ಇದನ್ನು ಅನುಭವಿಸಿದ್ದೀರಾ? ಸುದರ್ಶನ ಕ್ರಿಯೆಯಲ್ಲಿ ಏನಾಗುವುದೆಂದರೆ, ಎಲ್ಲಾ ಪಂಚಪ್ರಾಣಗಳು ಸಮತೋಲನಗೊಳ್ಳುತ್ತವೆ, ಮತ್ತು ಅದರಿಂದಲೇ ನೀವು ಅಳುವುದು, ಅಥವಾ ನಗುವುದು, ಮತ್ತು ಮೈಯೆಲ್ಲ ಜೋಮುಹಿಡಿದಂತೆ ಅನುಭವವಾಗುವುದು. ಇದು ಸುದರ್ಶನ ಕ್ರಿಯೆಯ ವೈಶಿಷ್ಟ್ಯ. ಕ್ರಿಯೆಯ ಬಳಿಕ ನಿಮಗೆ ಬಹಳ ಹಸಿವೂ ಅನುಭವವಾಗುವುದುಂಟು, ಅಲ್ಲವೇ?

ಹಾಗಾಗಿ ಶರೀರದಲ್ಲಿನ ಈ ಪಂಚಪ್ರಾಣಗಳು ನಮ್ಮ ಜೀವನವನ್ನು ನಡೆಸುತ್ತವೆ. ಸಮಾನ ವಾಯು ಅಸಮತೋಲನವಾದರೆ, ಅದು ಜೀರ್ಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟು ಮಾಡುತ್ತದೆ, ಮತ್ತು ನಿಮಗೆ ಆಹಾರವನ್ನು ಸರಿಯಾಗಿ ಜೀರ್ಣಿಸಲಾಗುವುದಿಲ್ಲ, ಅಥವಾ ನಿಮಗೆ ಹೊಟ್ಟೆ ತೊಳಸಿದಂತಾಗಬಹುದು. ಇವೆಲ್ಲಾ ಸಮಾನ ಪ್ರಾಣದ ಅಸಮತೋಲನದಿಂದಾಗುವುದು.

ಉದಾನ ಪ್ರಾಣ ಸಿಕ್ಕಿಕೊಂಡಾಗ,  ನೀವು ಭಾವನೆಗಳಲ್ಲಿ ಅಡೆತಡೆಗಳನ್ನು ಅನುಭವಿಸುತ್ತೀರಿ ಮತ್ತು ಅದು ನಿಮ್ಮ ಆಲೋಚನೆಗಳ ಹಾಗೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಸಂಪೂರ್ಣ ಶರೀರದಲ್ಲಿರುವ ವ್ಯಾನ ಅಸಮತೋಲನಗೊಂಡಾಗ, ನಿಮಗೆ ಸಂಧಿಗಳಲ್ಲಿ ನೋವು, ಅಥವಾ ಚಲನೆಯಲ್ಲಿ ತೊಂದರೆ, ಮತ್ತು ನೀವು ಅತಿ ಗಾಬರಿ ಹಾಗೂ ಅವಿಶ್ರಾಂತಿ ಅನುಭವಿಸುತ್ತೀರಿ, ಅಥವಾ ನಿಮಗೆ ಏನನ್ನೂ ಮಾಡಲು ಮನಸ್ಸಾಗದಿರಬಹುದು. ಅಂಥ ಸ್ಥಿತಿಯಲ್ಲಿ ಓಡಾಡಿದಾಗ ಅಸಮಾಧಾನ ಮತ್ತು ಶರೀರದಲ್ಲಿ ಚಡಪಡಿಸುವಿಕೆಯನ್ನು ಉಂಟುಮಾಡುತ್ತದೆ. ಇವೆಲ್ಲಾ ವ್ಯಾನ ಪ್ರಾಣದ ಅಸಮತೋಲನದಿಂದ ಉಂಟಾಗುವುದು.

ಸುದರ್ಶನ ಕ್ರಿಯೆಯ ನಂತರ, ನೀವು ಗಮನಿಸಿರಬೇಕು, ಈ ಎಲ್ಲಾ ಅಸಮತೋಲನಗಳು ಹೋಗಿಬಿಡುತ್ತವೆ. ಇದು ನಿಮ್ಮೆಲ್ಲರಿಗೂ ಆಗಿಲ್ಲವೇ? ಹಿಂದೆ ಶರೀರದ ಚಲನೆಯಲ್ಲಿ ಇದ್ದಂಥ ಎಲ್ಲಾ ಅಹಿತ ಅನುಭವ, ಅಥವಾ ರಕ್ತ ಪರಿಚಲನೆಯಲ್ಲಿನ ತೊಂದರೆ, ಅಥವಾ ವ್ಯಾನ ಅಸಮತೋಲನದ ಒಂದು ನೋವು, ಎಲ್ಲವೂ ಸುದರ್ಶನ ಕ್ರಿಯೆಯ ನಂತರ ಕಣ್ಮರೆಯಾಗುತ್ತವೆ.

ಹಾಗೆ, ಇವು ಐದು ವಿವಿಧ ಪ್ರಾಣಗಳು.
ಐದು ಉಪ ಪ್ರಾಣಗಳೂ ಇವೆ, ಆದರೆ ನಾವು ಅದರ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

ಪ್ರ: ಬಾಳ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ವಿರಕ್ತಿಗಳು ಎಷ್ಟು ಸಮಂಜಸ?
ಶ್ರೀಶ್ರೀ: ನಿಮಗೆ ಜೀವನದಲ್ಲಿ ಅನುರಾಗ ಮತ್ತು ವೈರಾಗ್ಯ ಎರಡೂ ಆವಶ್ಯಕ. ಸಾಮಾನ್ಯವಾಗಿ ನಾವು ಯೋಚಿಸುತ್ತೇವೆ, ’ನನಗೆ ಅನುರಾಗವಿರುವಾಗ, ಹೇಗೆ ವಿರಕ್ತಿ ನನ್ನಲ್ಲಿರಬಹುದು? ನಾನು ವಿರಕ್ತನಾಗಿದ್ದರೆ, ನಾನು ಹೇಗೆ ಯಾವುದೇ ವಿಷಯದ ಕುರಿತು ಅನುರಾಗದಿಂದಿರುವುದು?’
ಇದು ಜನರ ಮನಸ್ಸಿನಲ್ಲಿ ಇರುವ ಸಾಮಾನ್ಯ ಪರಿಕಲ್ಪನೆ. ನಾನು ನಿಮಗೆ ಹೇಳುತ್ತೇನೆ, ಅದು ಆ ರೀತಿಯಲ್ಲ. ಅದು ಹೀಗಿರುವುದು, ನೀವು ಎಳೆಯುವ ಉಸಿರು ಅನುರಾಗ, ಹೊರಗೆ ಬಿಡುವ ಉಸಿರು ವಿರಕ್ತಿ ಮತ್ತು ಇವುಗಳೆರಡರ ನಡುವಿನಲ್ಲಿರುವುದು ಸಹಾನುಭೂತಿ. ನಮಗೆ ಎಲ್ಲಾ ಮೂರು ಅಗತ್ಯ.

ನಿಮಗೆ ಜೀವನದಲ್ಲಿ ಯಾವುದಾದರೊಂದರ ಬಗ್ಗೆ ಅನುರಾಗವಿರಬೇಕು, ಇಲ್ಲವಾದರೆ ನೀವು ಖಿನ್ನತೆಗೊಳಗಾಗುತ್ತೀರಿ. ಜ್ಞಾನದ ಬಗ್ಗೆ ಅನುರಾಗದಿಂದಿರಿ, ಸೇವೆ ಮಾಡುವುದರಲ್ಲಿ ಆಸಕ್ತಿಯಿರಲಿ, ಯೋಚಿಸುವುದರಲ್ಲಿ ಅಥವಾ ಯಾವುದರ ಬಗ್ಗೆಯಾದರೂ ಆಸಕ್ತಿಯಿಂದಿರಿ. ಜೀವನದಲ್ಲಿ ಒಂದಾದರೂ ವಿಷಯದ ಬಗ್ಗೆ ದಾಹ, ಆಸಕ್ತಿ ಖಂಡಿತ ಇರಬೇಕು. ನೀವು ವಿವೇಕದ ಬಗ್ಗೆಯೂ ಆಸಕ್ತಿ ಇಟ್ಟುಕೊಳ್ಳಬಹುದು. ಹಾಗಾಗಿ ಆಸಕ್ತಿಯು ಅತ್ಯಗತ್ಯ!

ವಿರಕ್ತಿಯೂ ಅತ್ಯಗತ್ಯವೇ. ವಿರಕ್ತಿಯಿಲ್ಲದೇ ಯಾವುದೇ ಆನಂದವಿಲ್ಲ; ಸಂತೋಷವಿಲ್ಲ. ನಿಮಗೆ ಚೂರೂ ವಿರಕ್ತಿಯಿಲ್ಲದಿದ್ದರೆ ನೀವು ದೀನತೆಗೊಳಗಾಗುತ್ತೀರಿ. ಮತ್ತೆ, ನಿಸ್ಸಂಶಯವಾಗಿ ಜೀವನದಲ್ಲಿ ದಯೆಯು ಆವಶ್ಯಕ. ಹಾಗಾಗಿ ಈ ಮೂರರಲ್ಲಿ ಎಲ್ಲವೂ ಅತ್ಯಗತ್ಯ.

ಪ್ರ: ನಾವು ಈ ಬಾರಿ ಮುಕ್ತಿ ಹೊಂದಲು ಅಸಫಲರಾದರೆ ಏನಾಗುತ್ತದೆ? ನಾವು ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಗಿರಬಹುದೇ?
ಶ್ರೀಶ್ರೀ: ಹೌದು, ಖಂಡಿತವಾಗಿ. ಅದರ ಬಗ್ಗೆ ಚಿಂತಿಸಬೇಡಿ.

ಪ್ರ: ಆಪ್ತ ಗುರೂಜಿ, ಅಷ್ಟೊಂದು ದಂಪತಿಗಳು ಮಕ್ಕಳನ್ನು ಪಡೆಯದಿರುವುದು ನನಗೆ ಆಶ್ಚರ್ಯವಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಏನಾಗುತ್ತಿದೆ?
ಶ್ರೀಶ್ರೀ: ಹ್ಞಾಂ, ಅದನ್ನುನೀವು ವೈದ್ಯರಲ್ಲಿ ಕೇಳಬೇಕು. ಅವರು ನಿಮ್ಮ ಸರಿಯಾದ ಪರಿಶೀಲನೆ ನಡೆಸುತ್ತಾರೆ. ನಾವು ಇದರ ಕುರಿತು ಸಾರ್ವತ್ರಿಕಗೊಳಿಸಲಾಗುವುದಿಲ್ಲ. ಅಲ್ಲದೇ ಮದ್ಯ ಮತ್ತು ಮಾದಕದ್ರವ್ಯಗಳ ಉಪಯೋಗ ಇದರ ಕಾರಣಗಳಲ್ಲಿ ಒಂದಾಗಿದೆ. ಅದರಲ್ಲೇನೂ ಒಳಿತಿಲ್ಲ. ಜನರು ತಮ್ಮ ಕಾಲೇಜು ದಿನಗಳಲ್ಲೇ ಅಥವಾ ಶಾಲಾದಿನಗಳಲ್ಲೇ ಮದ್ಯಪಾನ ಶುರುಮಾಡುತ್ತಾರೆ. ಅದು ಒಳ್ಳೆಯದಲ್ಲ. ಜನರು ಮಾದಕದ್ರವ್ಯಗಳಿಂದ ದೂರವಿದ್ದರೆ ಈ ಜಗತ್ತು ಇನ್ನೂ ಏಷ್ಟೋ ಒಳ್ಳೆಯದಾಗಿರುವುದು.

ಭಾನುವಾರ, ಅಕ್ಟೋಬರ್ 28, 2012

ನಕಾರಾತ್ಮಕ ಅಭಿಪ್ರಾಯಗಳೊಂದಿಗೆ ವ್ಯವಹರಿಸುವುದು


೨೮ ಅಕ್ಟೋಬರ್ ೨೦೧೨
ಬೆಂಗಳೂರು, ಭಾರತ

ದೇವರನ್ನು ಆಳವಾದ ವಿಶ್ರಾಂತಿಯಲ್ಲಿ(ಧ್ಯಾನ) ಮಾತ್ರ ಕಂಡುಕೊಳ್ಳಬಹುದಾಗಿದೆ. ಆಳವಾದ ವಿಶ್ರಾಂತಿಗಿರುವ ಅಡಚಣೆಗಳು ಯಾವುವೆಂಬುದು ನಿಮಗೆ ತಿಳಿದಿದೆಯೇ? ಅದು, ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳು. ಮನಸ್ಸು ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ತುಂಬಿದ್ದರೆ, ವಿಶ್ರಾಂತಿಯು ಸಾಧ್ಯವಿಲ್ಲ, ಮತ್ತು ವಿಶ್ರಾಂತಿಯಿಲ್ಲದಿದ್ದರೆ, ಸಾಧನೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ಮುಕ್ತರಾಗಬೇಕು.
ಹಾಗಾದರೆ, ನಾವದನ್ನು ಮಾಡುವುದು ಹೇಗೆ? ’ನನಗೆ ಯಾರಿಂದಲೂ ಏನೂ ಬೇಡ ’, ಇದನ್ನೇ ನಾವು ನಮ್ಮ ಮನಸ್ಸಿನಲ್ಲಿ ಇಡಬೇಕಾದುದು. ನಮಗೆ ಯಾರಿಂದಲೂ ಏನೂ ಬೇಡದಿರುವಾಗ, ನಮ್ಮಲ್ಲಿ ಯಾರ ಕಡೆಗೂ ಬಯಕೆಗಳಿರಲಾರವು. ಬಯಕೆಯಿಲ್ಲದಿರುವಾಗ, ಅಲ್ಲಿ ತಿರಸ್ಕಾರವಿರುವುದಿಲ್ಲ.
ಯಾರನ್ನೂ ಒಬ್ಬ ಕೆಟ್ಟ ವ್ಯಕ್ತಿಯೆಂದು ಯೋಚಿಸಬೇಡಿ. ಜಗತ್ತಿನಲ್ಲಿ ಯಾವುದೇ ಕೆಟ್ಟ ವ್ಯಕ್ತಿಯಿಲ್ಲ. ಜನರು ಏನಾದರೂ ಕೆಟ್ಟದನ್ನು ಮಾಡಿದರೆ, ಅದು ಅವರ ಅಜ್ಞಾನ ಅಥವಾ ಅರಿವಿನ ಕೊರತೆಯ ಕಾರಣದಿಂದ ಅಥವಾ ಅವರ ಮನಸ್ಸು ನೊಂದಿರುವುದರಿಂದ. ಆದುದರಿಂದ ಯಾರ ಬಗ್ಗೆಯೂ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಬೇಡಿ.

ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.

ಪ್ರಶ್ನೆ: ಯಾರಾದರೂ ನಿಜವಾಗಿ ನಮಗೆ ಏನಾದರೂ ಕೆಟ್ಟದನ್ನು ಮಾಡಿದ್ದರೆ, ನಾವೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಯಾರಾದರೂ ನಿಮಗೆ ಏನಾದರೂ ಕೆಟ್ಟದನ್ನು ಮಾಡುವಾಗ, ಅವರು ಹಾಗೆ ಯಾಕೆ ಮಾಡುವರು ಎಂಬುದಾಗಿ ಯೋಚಿಸು. ಅವರು ಆರೋಗ್ಯವಂತರಾಗಿಲ್ಲವೆಂಬುದು ಒಂದು ಕಾರಣವಾಗಿರಬಹುದು.
ಒಬ್ಬ ಮೂರ್ಖನನ್ನು ಅಥವಾ ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯನ್ನು ನೀವು ಒಬ್ಬ ಅಪರಾಧಿಯನ್ನಾಗಿ ನೋಡುವಿರೇ? ಇಲ್ಲ! ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯು ನಿಮಗೆ ಏನಾದರೂ ಕೆಟ್ಟದನ್ನು ಹೇಳಿದರೆ, ನೀವು ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಿರೇ? ಇಲ್ಲ. ಅವನು ಮಾನಸಿಕವಾಗಿ ಅಸ್ವಸ್ಥನೆಂಬುದನ್ನು ತಿಳಿದುಕೊಂಡು ನೀವು ಸುಮ್ಮನೇ ಮುಂದೆ ಸಾಗುವಿರಿ. ಆದುದರಿಂದ, ಯಾರಾದರೂ ನಿಮಗೆ ಏನಾದರೂ ಕೆಟ್ಟದಾಗಿ ಹೇಳುವಾಗ, ಅದರ ಬಗ್ಗೆ ಇದೇ ರೀತಿಯಲ್ಲಿ ಯೋಚಿಸಿ. ಒಬ್ಬ ಮನ ನೊಂದ ವ್ಯಕ್ತಿಯು ಏನಾದರೂ ಕೆಟ್ಟದನ್ನು ಹೇಳುವಾಗ, ನೀವು ಯಾಕೆ ತೊಂದರೆಗೊಳಗಾಗಬೇಕು?

ಪ್ರಶ್ನೆ: ಶಾಂತಿಯಿಂದಿರಬೇಕಾದರೆ, ಇತರರಿಂದ ನಿರೀಕ್ಷಿಸದೇ ಇರಲು ನಾವು ಕಲಿಯಬೇಕು. ಆದರೆ ದೈನಂದಿನ ಜೀವನದಲ್ಲಿ; ಕಛೇರಿಯಲ್ಲಿ ಅಥವಾ ಮನೆಯಲ್ಲಿ, ಬೇರೆ ಬೇರೆ ಜನರು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರದನ್ನು ಮಾಡದೇ ಇದ್ದರೆ, ಆಗ ಸಮಸ್ಯೆಗಳು ಏಳುತ್ತವೆ. ಪ್ರತಿಯೊಬ್ಬರೂ ಅವನ ಅಥವಾ ಅವಳ ಕೆಲಸವನ್ನು ಮಾಡಲೇಬೇಕು. ದಯವಿಟ್ಟು ಇದರ ಬಗ್ಗೆ ನಮಗೆ ಮಾರ್ಗದರ್ಶನ ನೀಡಿ. 
ಶ್ರೀ ಶ್ರೀ ರವಿ ಶಂಕರ್: ಒಬ್ಬನು ಅಥವಾ ಒಬ್ಬಳು ತಾನು ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ, ಆಗ ನಾವು ಅವರಿಗೆ ಅದನ್ನು ಮಾಡಲು ಹೇಳಬೇಕು. ನಾವು ನಮ್ಮ ಅಧಿಕಾರವನ್ನು ಅಲ್ಲಿ ಚಲಾಯಿಸಬೇಕು. ತಮ್ಮ ಕೆಲಸವನ್ನು ಮಾಡದ ಆಲಸಿ ಜನರಿದ್ದರೆ, ನಾವು ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ತಮ್ಮ ಕರ್ತವ್ಯದ ಬಗ್ಗೆ ಅವರಿಗೆ ಅರಿವು ಮೂಡುವಂತೆ ನಾವು ಮಾಡಬೇಕಾಗಿದೆ. ನಮಗೆ ಅವರ ಕಡೆಗೆ ಬಯಕೆ ಅಥವಾ ತಿರಸ್ಕಾರವಿದ್ದರೆ, ಆಗ ಅವರಲ್ಲಿ ಅರಿವು ಮೂಡಿಸಲು ನಮಗೆ ಸಾಧ್ಯವಿಲ್ಲ. ಅದು ನಮ್ಮನ್ನು ಕ್ರೋಧಗೊಳ್ಳುವಂತೆ ಮಾತ್ರ ಮಾಡುವುದು.

ಪ್ರಶ್ನೆ: ಕಾರಣ ಮತ್ತು ಪರಿಣಾಮ ಇದರ ಅರ್ಥವೇನು? 
ಶ್ರೀ ಶ್ರೀ ರವಿ ಶಂಕರ್: ಅದನ್ನು ’ಕಾರಣ’ ಮತ್ತು ’ಕಾರ್ಯ’ ಎನ್ನುತ್ತೇವೆ. ಹಸುವು ಕಾರಣವಾಗಿದೆ, ಹಾಲು ಕಾರ್ಯವಾಗಿದೆ. ಅಲ್ಲಿ ಹಾಲಿದ್ದರೆ, ಅದು ಹಸುವಿನಿಂದಾಗಿ. ಹಸುವಿನ ಕಾರಣವೆಂದರೆ ಹುಲ್ಲು. ಹುಲ್ಲಿನ ಕಾರಣವೆಂದರೆ ಭೂಮಿ. ಭೂಮಿಯ ಕಾರಣವೆಂದರೆ ಸೂರ್ಯ. ಪ್ರತಿಯೊಂದು ಸಂಭವದ ಹಿಂದೆಯೂ ಒಂದು ಕಾರಣವಿದೆ.
ಪರಮಕಾರಣ, ಎಲ್ಲಾ ಕಾರಣಗಳ ಕಾರಣವು ದೇವರು. ಅದಕ್ಕಾಗಿಯೇ, ’ತಸ್ಮೈ ನಮಃ ಪರಮಕಾರಣ ಕಾರಣಾಯ ’ ಎಂದು ಹೇಳಲಾಗಿದೆ. ಎಲ್ಲಾ ಕಾರಣಗಳ ಕಾರಣವು ಶಿವನಾಗಿರುವನು.

ಪ್ರಶ್ನೆ: ಗುರುದೇವ, ನಾವು ’ಆಚಮನೀಯಂ ಸಮರ್ಪಯಾಮಿ’ ಎಂದು ಹೇಳುತ್ತೇವೆ. ನೀರು ’ಅಪ’ ಎಂದು ಕರೆಯಲ್ಪಡುತ್ತದೆ, ಹಾಗಾದರೆ ನಾವು ಅದನ್ನು ’ಆಚಮನೀಯಂ’ ಎಂದು ಯಾಕೆ ಕರೆಯುತ್ತೇವೆ? ನೀರನ್ನು ಅರ್ಪಿಸುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಹೌದು, ನೀರು ಆಚಮನೀಯಂ ಎಂದು ಕೂಡಾ ಕರೆಯಲ್ಪಡುತ್ತದೆ.
ಇದು ಯುಗಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಪದ್ಧತಿಯಾಗಿದೆ. ಯಾವುದನ್ನಾದರೂ ಪ್ರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಮೊದಲು, ಆಚಮನೀಯಂನ್ನು ಅರ್ಪಿಸಲಾಗುತ್ತದೆ. ಅದು, ನಾವು ಅಭಿಮಂತ್ರ (ನೀರಿನ ಮೇಲೆ ಮಂತ್ರವನ್ನು ಉಚ್ಛರಿಸುವುದು. ನೀವೊಂದು ನೀರಿನ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ನಿಮ್ಮ ಕೈಯನ್ನಿಟ್ಟು, ನಂತರ ಮಂತ್ರಗಳನ್ನು ಉಚ್ಛರಿಸುವಿರಿ. ಮಂತ್ರಗಳು ನೀರಿನೊಳಗೆ ಹೀರಲ್ಪಡುತ್ತವೆ)ವನ್ನು ಮಾಡಿ ನಂತರ ಅದನ್ನು ಅರ್ಪಿಸುವ ಪ್ರಕ್ರಿಯೆಯಾಗಿದೆ. ಅದು ಕೇವಲ ಕುಡಿಯುವ ನೀರಲ್ಲ. ಮಂತ್ರದ ಕಂಪನಗಳ ಮೂಲಕ ನೀರನ್ನು ಚಾರ್ಜ್ ಮಾಡಲಾಗುತ್ತದೆ.
ಯಾವಾಗೆಲ್ಲಾ ಮನೆಗೆ ಅತಿಥಿಗಳು ಬರುವರೋ, ಆಗ ಅವರ ಪಾದಗಳನ್ನು ತೊಳೆಯುವುದಕ್ಕಾಗಿ ನೀರನ್ನು ಬಳಸಲಾಗುತ್ತದೆ. ನಂತರ, ಅವರ ಕೈಗಳಿಗೆ ನೀರನ್ನು ಕೊಡಲಾಗುತ್ತದೆ. ಇದರ ಬಳಿಕ, ತಮ್ಮ ದಾಹವನ್ನು ತಣಿಸುವುದಕ್ಕಾಗಿ ಅವರಿಗೆ ಕುಡಿಯಲು ನೀರನ್ನು ಕೊಡಲಾಗುತ್ತದೆ. ಹಳೆಯ ಕಾಲದಲ್ಲಿ ಈ ಮೂರು ಪದ್ಧತಿಗಳನ್ನು ಅಭ್ಯಸಿಸಲಾಗುತ್ತಿತ್ತು.
ಒಬ್ಬರು ನಿಮ್ಮ ಮನೆಗೆ ಬರುವಾಗ ನೀವು, "ನೀವು ಕುಡಿಯಲು ಏನು ತೆಗೆದುಕೊಳ್ಳುವಿರಿ? ಸ್ವಲ್ಪ ನಿಂಬೆಹಣ್ಣಿನ ಶರಬತ್ತು, ಹಾಲು, ಚಹಾ ಅಥವಾ ಕಾಫಿ ತೆಗೆದುಕೊಳ್ಳುವಿರಾ?" ಎಂದು ಕೇಳುವುದಿಲ್ಲವೇ? ನೀವವರಿಗೆ ಕುಡಿಯಲು ಸ್ವಲ್ಪ ನೀರನ್ನು ಕೊಡುವುದಿಲ್ಲವೇ?ಅದೇ ರೀತಿಯಲ್ಲಿ, ಹಳೆಕಾಲದಲ್ಲಿ, ಪಾದ್ಯ, ಅರ್ಘ್ಯ ಮತ್ತು ಆಚಮನೀಯಂಗಳ ಪದ್ಧತಿಯಿತ್ತು.
ಪಾದ್ಯವೆಂದರೆ, ಪಾದಗಳಲ್ಲಿರುವ ಕೊಳೆಯು ಮನೆಯನ್ನು ಪ್ರವೇಶಿಸದೇ ಇರಲಿ ಎಂಬ ಕಾರಣಕ್ಕಾಗಿ, ಮನೆಯ ಪ್ರವೇಶದ್ವಾರದಲ್ಲಿ ಅತಿಥಿಯ ಪಾದಗಳನ್ನು ತೊಳೆಯುವುದು. ಅರ್ಘ್ಯವೆಂದರೆ ಅವರ ಕೈಗಳನ್ನು ತೊಳೆಯುವುದು. ಆಚಮನೀಯಂ ಎಂದರೆ ಅವರಿಗೆ ಕುಡಿಯಲು ನೀರು ಕೊಡುವುದು, ಇದರ ಮೂಲಕ ಮಾತುಕತೆಯನ್ನು ಪ್ರಾರಂಭಿಸಬಹುದೆಂಬ ಸೂಚನೆಯನ್ನು ಕೊಡುವುದು.

ಪ್ರಶ್ನೆ: ಪಂಚಾಮೃತ ಅಭಿಷೇಕದ ಮಹತ್ವವೇನು? ಈ ವಸ್ತುಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಯಿತು?
ಶ್ರೀ ಶ್ರೀ ರವಿ ಶಂಕರ್: ಈ ಐದು ವಸ್ತುಗಳು ಅಮೃತದಂತೆ: ಹಾಲು, ಮೊಸರು, ಜೇನು, ಬೆಲ್ಲ ಮತ್ತು ತುಪ್ಪ. ಬೆಲ್ಲವನ್ನು ಬಳಸಬೇಕಾಗಿರುವುದಾದರೂ ಸಹ, ಈ ದಿನಗಳಲ್ಲಿ ಬೆಲ್ಲದ ಬದಲು ಸಕ್ಕರೆಯನ್ನು ಬಳಸಲಾಗುತ್ತಿದೆ.
ಅವುಗಳಲ್ಲಿ ಐದು ದೇವತೆಯರು ವಾಸಿಸುತ್ತಾರೆ. ಸಕ್ಕರೆಯಲ್ಲಿ ಸವಿತ್ರು, ಜೇನಿನಲ್ಲಿ ವಿಶ್ವೇದೇವ, ತುಪ್ಪದಲ್ಲಿ ಸೂರ್ಯ, ಮೊಸರಿನಲ್ಲಿ ವಾಯು ಮತ್ತು ಹಾಲಿನಲ್ಲಿ ಸೋಮ. ಹೀಗಾಗಿ, ಅವುಗಳನ್ನು ನೀವು ಅಭಿಷೇಕವಾಗಿ ಅರ್ಪಿಸುವಾಗ, ಅದರ ಉದ್ದೇಶವೆಂದರೆ - ದೇವತೆಯರ ಗುಣಗಳು ನಮ್ಮ ಜೀವನದಲ್ಲಿ ಅರಳಲಿ ಎಂಬುದಾಗಿದೆ.
ನಾವು, ಪ್ರತಿಯೊಬ್ಬರ ಮನಸ್ಸಿನ ಶಾಂತಿಗಾಗಿಯೂ ಪ್ರಾರ್ಥಿಸುತ್ತೇವೆ.
ಎಲ್ಲರ ಮನಸ್ಸಿನಲ್ಲಿಯೂ ಆನಂದವಿರಲಿ.
ಜನರ ಜೀವನಗಳಲ್ಲಿ ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯವಿರಲಿ.
ಜನರ ಜೀವನಗಳಲ್ಲಿ ತೃಪ್ತಿ ಮತ್ತು ಸಮೃದ್ಧಿಯಿರಲಿ.
ಜೀವನದಲ್ಲಿ ಕಾಂತಿಯಿರಲಿ.
ಮಾರುತಗಳು ಮತ್ತು ನದಿಗಳು ಮಧುರವಾಗಿ ಹರಿಯುತ್ತಿರಲಿ.
ನಮ್ಮ ಹಗಲುಗಳು ಮತ್ತು ರಾತ್ರಿಗಳು ಮಧುರವಾಗಿರಲಿ.
ಮಣ್ಣಿನ ಪ್ರತಿಯೊಂದು ಕಣವೂ ನಮಗೆ ಸಿಹಿಯನ್ನು ತರಲಿ.
ಆಕಾಶದಿಂದ, ದೇವತೆಯರಿಂದ ಮತ್ತು ಪಿತೃಗಳಿಂದ ನಮಗೆ ಸಿಹಿ ಲಭಿಸಲಿ.
ನಮ್ಮ ಮಾತು ಮತ್ತು ಯೋಚನೆಗಳು ಮಧುರವಾಗಿರಲಿ.
ಸಮಾಜವು ನಮಗೆ ಸಿಹಿಯನ್ನು ತರಲಿ.
ವನಸ್ಪತಿ (ಅರಣ್ಯದ ದೇವತೆ)ಯು ನಮಗೆ ಸಿಹಿಯನ್ನು ತರಲಿ.
ಸೂರ್ಯನು ನಮ್ಮ ಜೀವನಗಳಿಗೆ ಸಿಹಿಯನ್ನು ತರಲಿ.
ನಮ್ಮ ಸಂಪೂರ್ಣ ಜೀವನವು ಇತರ ಜನರ ಜೀವನಗಳಿಗೆ ಸಿಹಿಯನ್ನು ತರಲಿ.
ಸಾಮೂಹಿಕ ಪ್ರಜ್ಞೆಗೆ ನಾವು ಸಿಹಿಯನ್ನು ತರೋಣ.  

ಪ್ರಶ್ನೆ: ಕೊನೆಯಾಗದ ಮತ್ತು ದೃಢವಾದ ಭಕ್ತಿಯನ್ನು ಹೊಂದಲಿರುವ ಮಾರ್ಗವನ್ನು ನಮಗೆ ದಯವಿಟ್ಟು ತಿಳಿಸಿ. 
ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ದೃಢವಾದ ಭಕ್ತಿಯಿದೆಯೆಂಬುದಾಗಿ ಭಾವಿಸು. ಭಕ್ತಿ ಸೂತ್ರಗಳಲ್ಲಿ ನಾರದ ಮಹರ್ಷಿಯು, ಭಕ್ತಿಯೆಂದರೆ ಗಳಿಸುವಂತಹ ಒಂದು ವಸ್ತುವಲ್ಲ ಎಂದು ಹೇಳುತ್ತಾರೆ. ನೀನು ಎಲ್ಲಾ ಸಂಶಯಗಳನ್ನು ಬಿಟ್ಟರೆ, ಭಕ್ತಿಯು ಅಲ್ಲಿ ಈಗಾಗಲೇ ಇದೆ.

ಪ್ರಶ್ನೆ: ನಾವು ಕಾನೂನನ್ನು ಕಲಿತರೆ, ಒಬ್ಬ ವಕೀಲನಾಗುವ ಖಚಿತತೆ ಅಲ್ಲಿದೆ. ನಾವು ಎಂಜಿನಿಯರಿಂಗ್ ಕಲಿತರೆ, ನಮ್ಮ ಪ್ರಯತ್ನಗಳನ್ನು ಹಾಕಿದರೆ ನಾವೊಬ್ಬ ಎಂಜಿನಿಯರ್ ಆಗುವ ಭರವಸೆಯಿದೆ. ಆದರೂ, ನಾವು ನಮ್ಮ ಸಾಧನೆಯನ್ನು ಮಾಡುತ್ತಿದ್ದರೆ ಮತ್ತು ಈ ಪಥದಲ್ಲಿ ನಡೆಯುತ್ತಿದ್ದರೂ ಮೋಕ್ಷವನ್ನು ಪಡೆಯುವ ಯಾವುದೇ ಭರವಸೆಯಿಲ್ಲ.
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ ಅದರ ಭರವಸೆಯಿದೆ.
ಭಗವದ್ಗೀತೆಯಲ್ಲಿ ಅರ್ಜುನನು ಇದೇ ಪ್ರಶ್ನೆಯನ್ನು ಕೇಳುತ್ತಾನೆ. ಹಾಗಾಗಿ ಕೃಷ್ಣ ಪರಮಾತ್ಮನು ಉತ್ತರಿಸುತ್ತಾನೆ, ’ನ ಹಿ ಕಲ್ಯಾಣಕೃತ್ಕಶ್ಚಿದ್ ದುರ್ಗತಿಂ ತಾತ ಗಚ್ಛತಿ’, (ಅಧ್ಯಾಯ ೬, ಶ್ಲೋಕ ೪೦).
ಯಾರು ಆಧ್ಯಾತ್ಮಿಕ ಪಥದಲ್ಲಿ ನಡೆಯುವರೋ, ಅವರು ಕೇವಲ ಎತ್ತರೆತ್ತರಕ್ಕೆ ಮಾತ್ರ ಏರುತ್ತಾರೆ.

ಪ್ರಶ್ನೆ: ಹಲವಾರು ಶ್ರೇಷ್ಠ ಸಂತರು, ಅವರು ಜ್ಞಾನೋದಯವನ್ನು ಗಳಿಸಿದ್ದರೂ ಕೂಡಾ ಅದನ್ನು ಯಾರಿಗೂ ನೇರವಾಗಿ ಕೊಡಲಿಲ್ಲ. ಅವರು ಕೇವಲ ಅದನ್ನು ಗಳಿಸಲಿರುವ ಹೆಜ್ಜೆಗಳನ್ನು ಮಾತ್ರ ಹೇಳಿಕೊಟ್ಟರು. ದೇವರು ಯಾಕೆ ಎಲ್ಲರಿಗೂ ನೇರವಾಗಿ ಜ್ಞಾನೋದಯವನ್ನು ನೀಡುವುದಿಲ್ಲ? ಇದಕ್ಕೆ ಸಂಸ್ಕಾರಗಳು ಅವಶ್ಯವೇ?
ಶ್ರೀ ಶ್ರೀ ರವಿ ಶಂಕರ್: ಸಂಸ್ಕಾರಗಳು ಆವಶ್ಯಕ. ನೀವಿಲ್ಲಿರುವುದಾದರೆ, ಅದರರ್ಥ ಎಲ್ಲೋ ಒಂದು ಕಡೆ ನಿಮ್ಮಲ್ಲಿ ಬರುವ ಆಸಕ್ತಿ ಮತ್ತು ಕುತೂಹಲವಿತ್ತೆಂದು. ಆ ಆಸಕ್ತಿಯಿಲ್ಲದೆ, ನೀವಿಲ್ಲಿಗೆ ಬಂದಿರಲು ಹೇಗೆ ಸಾಧ್ಯ? ಆದುದರಿಂದ, ಸ್ವಲ್ಪ ಸಂಸ್ಕಾರಗಳು ಆವಶ್ಯಕವಾಗಿವೆ.
ಹೀಗಿದ್ದರೂ, ಕೇವಲ ಸಂಸ್ಕಾರಗಳು ಸಾಕಾಗುವುದಿಲ್ಲ. ಜೀವನದಲ್ಲಿ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಬೇಕು. ಇವುಗಳೊಂದಿಗೆ, ಸ್ವಪ್ರಯತ್ನ ಕೂಡಾ ಬೇಕು. ನಿಮಗೆ ಸತ್ಸಂಗಕ್ಕೆ ಬರುವ ಬಯಕೆಯಿದ್ದರೆ, ಆದರೆ ನಿಮ್ಮ ಹಾಸಿಗೆಯಲ್ಲಿ ಮಲಗಿದ್ದರೆ, ಅದು ಸಹಾಯ ಮಾಡುವುದೇ? ಆದುದರಿಂದ, ಸ್ವಪ್ರಯತ್ನ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಅಗತ್ಯವಾಗಿದೆ.

ಪ್ರಶ್ನೆ: ಸಾಧನೆಯನ್ನು ನಿಯಮಿತವಾಗಿ ಮಾಡುವವರಿಗೆ ಕೂಡಾ ಅಪಸ್ಮಾರ ದಾಳಿಯಾಗುವ ಸಾಧ್ಯತೆಗಳಿವೆಯೇ?
ಶ್ರೀ ಶ್ರೀ ರವಿ ಶಂಕರ್: ಆ ವ್ಯಕ್ತಿಯು ಏನನ್ನು ತಿನ್ನುತ್ತಾನೆ, ಕುಡಿಯುತ್ತಾನೆ ಮತ್ತು ದಿನವಿಡೀ ಏನನ್ನು ಮಾಡುತ್ತಾನೆ ಎಂಬುದರ ಮೇಲೆ ಅದು ಆಧರಿಸಿದೆ. ತಿನ್ನುವ, ಕುಡಿಯುವ ಮತ್ತು ಜೀವನ ಶೈಲಿ ಸರಿಯಿಲ್ಲದಿದ್ದರೆ, ಅದರ ಸಾಧ್ಯತೆಯಿದೆ.
ನರಮಂಡಲದಲ್ಲಿ ಅತಿಯಾದ ಒತ್ತಡವಿದ್ದರೆ, ಆಗ ಅಂತಹ ದಾಳಿಗಳ ಸಾಧ್ಯತೆಗಳಿವೆ. ಒಬ್ಬನು ಆರೋಗ್ಯಕರ ಜೀವನವನ್ನು ಜೀವಿಸಿದರೆ, ಹಾಗಾಗದು.