ಶುಕ್ರವಾರ, ನವೆಂಬರ್ 29, 2013

ಹೊರಲಾರದ ಹೊರೆ ಹೊರುವಂತೆ ಪ್ರಕೃತಿ ಪ್ರೇರಿಸದು

ನವೆಂಬರ್ ೨೯, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ದೇವರಿಂದಾಗಿ ನೊಂದರೆ ಅವನು ಎಲ್ಲಿಗೆ ಹೋಗುವುದು?

ಶ್ರೀ ಶ್ರೀ ರವಿ ಶಂಕರ್: ಹೋಗಲು ಯಾವ ಜಾಗವೂ ಇಲ್ಲ! ದೇವರು ನಿಮ್ಮನ್ನು ನೋಯಿಸುವುದು ಅಸಾಧ್ಯ!

ಕನ್ನಡದಲ್ಲಿ ಒಂದು ಸುಂದರವಾದ ದ್ವಿಪದಿಯಿದೆ. ಅದನ್ನು ನಾವು ಶಾಲೆಯಲ್ಲಿ ಕಲಿಯುತ್ತಿದ್ದೆವು. ಅದು ಹೀಗೆಂದು ಹೇಳುತ್ತದೆ, ನೀವು ಕಬ್ಬನ್ನು ಹೆಚ್ಚು ಹಿಂಡಿದಷ್ಟೂ ಹೊರಬರುವ ರಸವು ಹೆಚ್ಚು ಸಿಹಿಯಾಗಿರುತ್ತದೆ. ನೀವೊಂದು ವಜ್ರವನ್ನು ಹೆಚ್ಚು ತುಂಡರಿಸಿದಷ್ಟೂ, ಅದು ಹೆಚ್ಚು ಹೊಳೆಯುತ್ತದೆ. ಚಿನ್ನವನ್ನು ಹೆಚ್ಚು ಬಡಿದು ಬೆಂಕಿಯಲ್ಲಿ ಹಾಕಿದಷ್ಟೂ, ಅದು ಹೆಚ್ಚು ಹೊಳೆಯುತ್ತದೆ. ಗಂಧವನ್ನು ನೀವು ಹೆಚ್ಚು ತೇದಷ್ಟೂ, ಅದರ ಸುವಾಸನೆಯು ಹೆಚ್ಚು ಹರಡುತ್ತದೆ.

ಪ್ರಕೃತಿಯು ನಿಮ್ಮನ್ನು ವಿವಿಧ ಕಾರ್ಯಗಳು ಮತ್ತು ಪರೀಕ್ಷೆಗಳಿಗೆ ಒಡ್ಡುತ್ತದೆ, ಮತ್ತು ನೀವು ಅದೆಲ್ಲದರಿಂದ ಹೊಳೆಯುತ್ತಾ ಹೊರಬರುತ್ತೀರಿ. ನಿಮಗೆ ಹೊರಲು ಸಾಧ್ಯವಿಲ್ಲದ ಭಾರವನ್ನು ಪ್ರಕೃತಿಯು ನಿಮಗೆ ನೀಡದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ಒಂದು ಪ್ರಾಣಿಯು ತನ್ನ ಬಾಲವನ್ನು ಸುಲಭವಾಗಿ ಅಲ್ಲಾಡಿಸಲು ಸಾಧ್ಯವಾಗಲೆಂದು, ದೇವರು ಮೊದಲು ಬಾಲವನ್ನು ಅಳತೆ ಮಾಡುತ್ತಾನೆ ಮತ್ತು ನಂತರ ಅದನ್ನು ಪ್ರಾಣಿಯ ಮೇಲೆ ಇಡುತ್ತಾನೆ. ಒಂದು ಇಲಿಗೆ ಒಂದು ಆನೆಯ ಬಾಲವಿದ್ದರೆ ಹೇಗಿರುತ್ತದೆಯೆಂದು ಸುಮ್ಮನೇ ಊಹಿಸಿ, ಅದನ್ನು ಎತ್ತಲೂ ಕೂಡಾ ಅದಕ್ಕೆ ಸಾಧ್ಯವಿಲ್ಲ!

ಪ್ರಕೃತಿಯು ಬಹಳ ಬುದ್ಧಿಶಾಲಿಯಾಗಿದೆ. ನಿಮಗೆ ನಿರ್ವಹಿಸಲು ಸಾಧ್ಯವಿರುವ ಸಮಸ್ಯೆಯನ್ನು ಮಾತ್ರ ಅದು ನಿಮಗೆ ನೀಡುತ್ತದೆ.

ಪ್ರಶ್ನೆ: ಗುರುದೇವ, ನಾನು ಮಾತನಾಡಲು ಸಾಧ್ಯವಿಲ್ಲದಿರುವಂತಹ ಒಂದು ರಹಸ್ಯವು ನನ್ನಲ್ಲಿ ಆಳವಾಗಿ ಬೇರೂರಿದೆ. ನಾನದನ್ನು ಹೇಳಿದರೆ, ನಾನು ಎಲ್ಲವನ್ನು ಮತ್ತು ಎಲ್ಲರನ್ನು ಕಳೆದುಕೊಳ್ಳುವೆನು. ನಾನೊಂದು ಐಹಿಕ ಪ್ರಪಂಚದಲ್ಲಿರುವೆನು, ಸಂಪೂರ್ಣವಾಗಿ ಶರಣಾಗತನಾಗಲು ನನಗೆ ಸಾಧ್ಯವಿಲ್ಲ ಮತ್ತು ನಾನು ಸೋಲಿನ ಬಗ್ಗೆ ಭಯಭೀತನಾಗಿರುವೆನು. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನೀನು ಪರಿಣಾಮಗಳನ್ನು ನೋಡು, ಹಾಗಾದರೆ ಅದರಿಂದ ಏನೂ ಸಿಗುವುದಿಲ್ಲವೆಂದರೆ ನೀನೇಕೆ ಅದನ್ನು ಮಾಡುವೆ?

ತಪ್ಪೊಪ್ಪಿಕೊಳ್ಳುವಿಕೆ ಎಂದು ಕರೆಯಲ್ಪಡುವುದೊಂದಿದೆ. ಈಗ, ನೀನು ಯಾರು ಯಾರಲ್ಲಿಗೋ ಹೋಗಿ ತಪ್ಪೊಪ್ಪಿಕೊಳ್ಳಲು ಸಾಧ್ಯವಿಲ್ಲ, ಆದರೆ ವಿಷಯಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವ ಒಬ್ಬ ಜ್ಞಾನಿಯಲ್ಲಿ ನೀನು ತಪ್ಪೊಪ್ಪಿಕೊಳ್ಳಬಹುದು. ಇದನ್ನು ಇಗರ್ಜಿಗಳಲ್ಲಿ ಕೂಡಾ ನಡೆಸಲಾಗುತ್ತದೆ; ಚರ್ಚಿನಲ್ಲಿ ಒಂದು ಜಾಗವಿರುತ್ತದೆ, ಅಲ್ಲಿಗೆ ಹೋಗಿ ನೀವು ತಪ್ಪೊಪ್ಪಿಕೆಗಳನ್ನು ಮಾಡಬಹುದು, ತನ್ನೊಂದಿಗೆ ಯಾರು ಮಾತನಾಡುತ್ತಿರುವರೆಂಬುದನ್ನು ಪಾದ್ರಿ ಕೂಡಾ ನೋಡುವುದಿಲ್ಲ. ನೀವು ಹೋಗಿ ತಪ್ಪೊಪ್ಪಿಕೊಂಡಾಗ, ಆ ಒಂದು ಚಿಕ್ಕ ಕಿಟಿಕಿಯಿಂದ ಪಾದ್ರಿಯು ನಿಮಗೊಂದು ಪರಿಹಾರವನ್ನು ಕೊಡುತ್ತಾರೆ, ಇದರಿಂದ ನಿಮ್ಮ ಉತ್ಸಾಹ ಹೆಚ್ಚುವುದು.

ಅದಕ್ಕಾಗಿಯೇ ನೀನು ಇಲ್ಲಿರುವುದು ಕೂಡಾ; ಟೊಳ್ಳು ಮತ್ತು ಖಾಲಿಯಾಗಲು. ನೀನು ನಿನ್ನ ಸಮಸ್ಯೆಯನ್ನು ಬರೆದು ಬುಟ್ಟಿಯಲ್ಲಿ ಹಾಕು ಮತ್ತು ಮುಕ್ತನಾಗು.

ಹಿಂದೆ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದರೂ, ಅದು ಮುಗಿಯಿತು, ಅದು ಹೋಗಿದೆ. ನೀನು ಯಾಕೆ ಅದಕ್ಕೆ ಜೋತುಬಿದ್ದು ನಿನ್ನ ವರ್ತಮಾನ ಮತ್ತು ಭವಿಷ್ಯವನ್ನು ದುಃಖಕರವಾಗಿಸುವೆ? ಹಾಗಾಗಿ ಬರೆ ಮತ್ತು ಹೋಗಲು ಬಿಡು!

ಅದನ್ನು ಹೇಳುವುದರಿಂದ ಏನಾದರೂ ಲಾಭವಿದೆಯೆಂದು ನಿನಗನ್ನಿಸಿದರೆ ಅಥವಾ ಹೇಳದಿರುವುದರಿಂದ ಅದು ಇತರ ಮುಗ್ಧ ಜನರಿಗೆ ತೊಂದರೆಯನ್ನುಂಟುಮಾಡುವುದು ಎಂದು ನಿನಗನ್ನಿಸಿದರೆ, ಆಗ ಅವರೊಂದು ಬಲೆಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕಾಗಿ, ಇತರರ ಕಡೆಗೆ ಕರುಣೆಯೊಂದಿಗೆ ಮಾತನಾಡು. ಆದರೆ ಅದನ್ನು ಹೇಳುವುದು ಯಾರಿಗೂ ಒಳ್ಳೆಯದಲ್ಲವಾಗಿದ್ದರೆ, ಆಗ ಅಂತಹ ವಿಷಯಗಳನ್ನೆತ್ತಿ, ಅದನ್ನೇ ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಒಬ್ಬ ಜ್ಞಾನಿಯಲ್ಲಿ ತಪ್ಪೊಪ್ಪಿಕೋ, ಕೇವಲ ಒಬ್ಬ ವ್ಯಕ್ತಿಯಲ್ಲಿ; ಅಥವಾ ಅದನ್ನು ಬರೆದು ದೇವರಿಗೆ ಸಮರ್ಪಿಸು ಮತ್ತು ಮುಕ್ತನಾಗು!

ಪ್ರಶ್ನೆ: ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಿರುವುದು ಮತ್ತು ಬಡವರು ಇನ್ನೂ ಹೆಚ್ಚು ಬಡವರಾಗುತ್ತಿರುವುದು ಯಾಕೆ? ಒಂದು ಊಟ ಮಾಡಲು ಬಡವರು ಹೋರಾಡುತ್ತಿರುವಾಗ ದೇವರು ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ?

ಶ್ರೀ ಶ್ರೀ ರವಿ ಶಂಕರ್: ನಾನು ಗಮನಿಸಿದ ಪ್ರಕಾರ ಬಡಜನರು ಬಡವರಾಗಿರುವುದು ದೇವರು ಅವರನ್ನು ಶಿಕ್ಷಿಸಿದ ಕಾರಣದಿಂದಲ್ಲ; ಜನರನ್ನು ಬಡವರಾಗಿ ಇರಿಸಿರುವುದು ಮದ್ಯಸಾರವಾಗಿದೆ. ಒಬ್ಬ ಕೂಲಿ ಕೆಲಸಗಾರನು ಬಹುತೇಕ ನಗರದಲ್ಲಿನ ಒಬ್ಬ ಸಾಮಾನ್ಯ ಕಚೇರಿ ಕೆಲಸಗಾರ ಸಂಪಾದಿಸುವಷ್ಟೇ ಹಣವನ್ನು ಸಂಪಾದಿಸುತ್ತಾನೆ. ಆದರೆ ಅವನು ತನ್ನ ಸಂಪಾನೆಯಲ್ಲಿ ಮೂರರಲ್ಲಿ ಎರಡು ಭಾಗಗಳನ್ನು ಮದ್ಯಸಾರದ ಮೇಲೆ ಖರ್ಚು ಮಾಡುತ್ತಾನೆ, ಹಾಗಾಗಿ ಅವನು ಬಡವನಾಗಿ ಉಳಿಯುತ್ತಾನೆ.

ಬಡತನಕ್ಕಿರುವ ಎರಡನೆಯ ಕಾರಣವೆಂದರೆ, ಆಲಸ್ಯ/ಸೋಮಾರಿತನ. ಇವತ್ತು ಕೂಡಾ ನೀವೊಬ್ಬ ಬಡ ಬಾಲಕ ಅಥವಾ ಬಾಲಕಿಯನ್ನು ನೋಡಿದರೆ, ಅವರು ಕಷ್ಟಪಟ್ಟರೆ ನಿಜವಾಗಿಯೂ ಅವರು ಮೇಲೆ ಬರಬಹುದು. ಪಿರಮಿಡ್ಡಿನ ಕೆಳಭಾಗದಿಂದ ನಿಜವಾಗಿಯೂ ಮೇಲ್ಭಾಗಕ್ಕೆ ಜನರು ಏರುತ್ತಿರುವ ಹಲವಾರು ಉದಾಹರಣೆಗಳಿವೆ. ನಿಮ್ಮಲ್ಲಿ ಅದನ್ನು ಮಾಡುವ ಆ ಹುರುಪು,ಇಚ್ಛೆ ಮತ್ತು ಉತ್ಸಾಹ ಬೇಕು; ಹಲವು ಸಲ ಜನರಲ್ಲಿ ಇದರ ಕೊರತೆಯಿರುತ್ತದೆ.  

ನಾವು ಮೊದಲ ಸಲ ಇಲ್ಲಿಗೆ, ಬೆಂಗಳೂರಿನ ಈ ಜಾಗಕ್ಕೆ ಬಂದಾಗ, ಈ ಆಶ್ರಮವು ಕೇವಲ ಒಂದು ಬರಡು ಭೂಮಿಯಾಗಿತ್ತು. ಯಾರಿಗೂ ಈ ಜಾಗ ಬೇಕಾಗಿರಲಿಲ್ಲ. ಇಲ್ಲಿ ಹುಲ್ಲಾಗಲೀ, ಮರವಾಗಲೀ ಏನೂ ಬೆಳೆಯುತ್ತಿರಲಿಲ್ಲ. ೬೦ ಎಕರೆಗಳಷ್ಟು ಜಾಗದಲ್ಲಿ ಕೇವಲ ಒಂದೇ ಒಂದು ಮರವಿತ್ತು. ಸುಮ್ಮನೆ ಊಹಿಸಿ! ಬೇರೆ ಯಾವುದೇ ಮರಗಳೂ ಇರಲಿಲ್ಲ! ಇಲ್ಲಿ ಏನೂ ಇರಲಿಲ್ಲ, ಅದು ಕಲ್ಲುಬಂಡೆಗಳಿಂದ ಕೂಡಿತ್ತು, ನೀರಿಲ್ಲದ, ಸಾಗುವಳಿಯಿಲ್ಲದ ಭೂಮಿಯಾಗಿತ್ತು.

ಆ ದಿನಗಳಲ್ಲಿ, ಫಿಲಿಪ್, ಪ್ರಮೀಳಾ, ಕಿರಣ್, ವಿನೋದ್ ಮೆನನ್ ಮತ್ತು ಇಲ್ಲಿದ್ದ ಇತರ ಹಲವರು ಈ ಎಲ್ಲಾ ಮರಗಳನ್ನು ನೆಟ್ಟರು. ಮೊದಲ ದಿನಗಳಲ್ಲಿ ಅವರು ಮರಗಳಿಗೆ ಬಕೆಟುಗಟ್ಟಲೆ ನೀರನ್ನು ಎರೆಯುತ್ತಿದ್ದರು.

ಆಶ್ರಮದ ಸುತ್ತಲೂ ಜನರು ಹುಲ್ಲು ಛಾವಣಿಯ ಗುಡಿಸಲುಗಳಲ್ಲಿ ಜೀವಿಸುತ್ತಿದ್ದರು. ನನ್ನ ನೆನಪು ಸರಿಯಾಗಿದ್ದರೆ, ಪಕ್ಕದ ಹಳ್ಳಿಯಲ್ಲಿ ಒಂದೇ ಒಂದು ಹಂಚಿನ ಛಾವಣಿಯ ಮನೆಯಿತ್ತು. ಅದು ಈ ಹಳ್ಳಿಯ ಮುಖಂಡರಿಗೆ ಸೇರಿದುದಾಗಿತ್ತು. ಇತರ ಪ್ರತಿಯೊಂದು ಮನೆಯೂ ಒಂದು ಹುಲ್ಲಿನ ಛಾವಣಿಯದಾಗಿತ್ತು. ಅದು ಮಳೆಯಲ್ಲಿ ಸೋರುತ್ತಿತ್ತು ಮತ್ತು ಬಲವಾದ ಗಾಳಿಯಿದ್ದರೆ ಹಾರಿಹೋಗುತ್ತಿತ್ತು. ಈ ಹಳ್ಳಿಯಲ್ಲಿ ಮಾತ್ರವಲ್ಲ, ಇಲ್ಲಿ ಸುತ್ತಲೆಲ್ಲಾ ಸಂಗತಿ ಇದಾಗಿತ್ತು.

ಮೇಲಾಗಿ, ಈ ಕನಕಪುರ ರಸ್ತೆಯಲ್ಲಿ ಕೇವಲ ಎರಡು ಬಸ್ಸುಗಳು ಮಾತ್ರ ಇದ್ದವು - ಒಂದು ಬೆಳಗ್ಗೆ ಮತ್ತು ಇನ್ನೊಂದು ಸಂಜೆ. ಮತ್ತು ಕೆಳಗಿನ ನದಿಯಿಂದ ನಗರಕ್ಕೆ ಮರಳು ಒಯ್ಯುವ ಲಾರಿಗಳಿದ್ದವು. (ಸುದರ್ಶನ ಕ್ರಿಯೆಯ ಟೇಪುಗಳಲ್ಲಿ ಕೂಡಾ ನೀವು ಲಾರಿಗಳ ಶಬ್ದವನ್ನು ಕೇಳಬಹುದು!) ಆ ಕಾಲದಲ್ಲಿ, ಜಯನಗರದಿಂದ ಆಶ್ರಮಕ್ಕೆ ಬರಲು ನೀವು ಎರಡು ಬಸ್ಸುಗಳನ್ನು ಹಿಡಿಯಬೇಕಾಗುತ್ತಿತ್ತು.

ನಾವು ಈ ಜಾಗಕ್ಕೆ ಬಂದಾಗ, ಇದೊಂದು ಸಂಪೂರ್ಣವಾಗಿ ಗ್ರಾಮೀಣ ಪ್ರದೇಶವಾಗಿತ್ತು. ಪಕ್ಕದ ೨೦ ಗ್ರಾಮಗಳಿಂದ ನಾವು ಎಲ್ಲಾ ಮಕ್ಕಳನ್ನು ಸೇರಿಸಿ ಅವರಿಗಾಗಿ ಒಂದು ಶಾಲೆಯನ್ನು ತೆರೆದೆವು. ಸುತ್ತಲಿದ್ದ ಜನರು ಬಹಳ ಬಡವರಾಗಿದ್ದರು. ನಮ್ಮಲ್ಲಿ ಆರ್ಟ್ ಆಫ್ ಲಿವಿಂಗ್‌ನಲ್ಲಿ ಕೂಡಾ ಸೀಮಿತವಾದ ಸಂಪನ್ಮೂಲಗಳಿದ್ದವಷ್ಟೆ. ಹೆಚ್ಚಾಗಿ ನಾವು ಆಶ್ರಮಕ್ಕಾಗಿ ಬ್ಯಾಂಕಿನಿಂದ ಸ್ವಲ್ಪ ಹೆಚ್ಚು ಹಣ ಪಡೆಯುವ ಸೌಲಭ್ಯ ತೆಗೆದುಕೊಳ್ಳುತ್ತಿದ್ದೆವು ಮತ್ತು ಎರಡು-ಮೂರು ತಿಂಗಳುಗಳ ಬಳಿಕ ನಾವು ಅವರಿಗೆ ಮರುಪಾವತಿ ಮಾಡುತ್ತಿದ್ದೆವು.

ಬಹುಶಃ ತೊಂಭತ್ತರ ದಶಕದಲ್ಲಿ ಯಾವಾಗಲೋ, ನಾನು ಈ ಪ್ರದೇಶದ ಸುತ್ತಲಿನ ಎಲ್ಲಾ ಬಡ ನಿರುದ್ಯೋಗಿ ಯುವಕರನ್ನು ಕರೆದೆ; ಅವರು ೨೦ ರಿಂದ ೩೫ ವರ್ಷ ವಯಸ್ಸಿನ ನಡುವಿನವರಾಗಿರಬೇಕು. ಅವರಿಗೆ ಯಾವುದಾದರೂ ಉದ್ಯೋಗವಿರಬೇಕೆಂದು ನಾನು ಬಯಸುವುದಾಗಿ ನಾನು ಅವರಿಗೆ ಹೇಳಿದೆ. ಅವರು ಏನನ್ನೂ ಮಾಡದೆಯೇ ಸುಮ್ಮನೇ ಅವರ ಕುಟುಂಬಗಳ ಮೇಲೆ ಒಂದು ಹೊರೆಯಾಗಿದ್ದರು; ಇಡೀ ದಿನ ಕುಳಿತುಕೊಂಡು, ರೇಡಿಯೋ ಕೇಳಿಕೊಂಡು, ಇಸ್ಪೀಟು ಅಥವಾ ಕ್ರಿಕೆಟ್ ಆಡಿಕೊಂಡು ಇರುತ್ತಿದ್ದರು, ಮತ್ತು ಸಂಜೆಯಲ್ಲಿ ಅವರು ಹೋಗಿ ಕುಡಿಯುತ್ತಿದ್ದರು. ನಾವು ಮಕ್ಕಳಿಗಾಗಿ ಶಾಲೆಯನ್ನು ಮಾಡಿದೆವು, ಆದರೆ ಯುವಕರು ನಿರುದ್ಯೋಗಿಗಳಾಗಿದ್ದರು. ಅವರು ತಮ್ಮ ಹತ್ತನೆಯ ತರಗತಿಯನ್ನು ಪಾಸು ಮಾಡಿಕೊಂಡಿದ್ದರು ಮತ್ತು ಹೊಲಕ್ಕೆ ಹೋಗಿ ಕೆಲಸ ಮಾಡುವುದು ಅಥವಾ ಯಾವುದೇ ಕೃಷಿ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಯಾರು ಶಾಲೆಗೆ ಹೋಗಲಿಲ್ಲವೋ ಅಥವಾ ಯಾರು ಪ್ರಾಥಮಿಕ ಶಾಲೆಯವರೆಗೆ ಮಾತ್ರ ಓದಿರುವರೋ ಅವರು ಕೃಷಿ ಮಾಡುವುದು ಎಂಬುದು ಅವರ ಮನೋಭಾವವಾಗಿತ್ತು. ತಾವು ಯಾಕೆ ಕೃಷಿ ಮಾಡುವುದು? ಅವರು ಹೊಲಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿರಲಿಲ್ಲ.

ನಾನು ಕರ್ನಾಟಕ ಸರಕಾರದಿಂದ ಸಣ್ಣ ಕೈಗಾರಿಕೆಗಳ ನಿರ್ದೇಶಕರನ್ನು ಕರೆದೆ ಮತ್ತು ಈ ೨೦೦ ನಿರುದ್ಯೋಗಿ ಹುಡುಗರ ಮುಂದೆ, ತಮಗೆ ಸಾಧ್ಯವಿರುವ ಎಲ್ಲಾ ಯೋಜನೆಗಳನ್ನು ಪ್ರಸ್ತುತ ಪಡಿಸಲು ಹೇಳಿದೆ. ಅವರು ಏನಾದರೂ ಮಾಡಬೇಕೆಂಬುದು ನನ್ನ ಬಯಕೆಯಾಗಿತ್ತು. (ನಮ್ಮದು ಕೂಡಾ ಒಂದು ಹುಲ್ಲಿನ ಛಾವಣಿಯ ಹಜಾರವಾಗಿತ್ತು. ಅಲ್ಲಿ ನಾವು ಅಷ್ಟಾವಕ್ರ ಪ್ರವಚನವನ್ನು ಕೊಡುತ್ತಿದ್ದೆವು; ಅದೇ ಜಾಗದಲ್ಲಿ ನಾನು ಈ ಹುಡುಗರನ್ನು ಮತ್ತು ನಿರ್ದೇಶಕರನ್ನು ಕರೆದೆನು.)

ನಿರ್ದೇಶಕರು ಬಹಳ ಉತ್ಸಾಹದಿಂದ ಬಂದರು. ಮೂರರಿಂದ ನಾಲ್ಕು ಗಂಟೆಗಳ ಕಾಲ ಬಹಳ ಎಚ್ಚರಿಕೆಯ ಪ್ರಯತ್ನದೊಂದಿಗೆ ಅವರು ಸುಮಾರು ೨೨೫ ಯೋಜನೆಗಳನ್ನು ವಿವರಿಸಲು ಪ್ರಯತ್ನಿಸಿದರು. ಮತ್ತು ಅದನ್ನು ಮಾಡಲು ಹೇಗೆ ಸಾಧ್ಯವಾಗದು ಮತ್ತು ಇದನ್ನು ಮಾಡಲು ಹೇಗೆ ಸಾಧ್ಯವಾಗದು ಎಂದು ಹೇಳಲು ಹುಡುಗರಿಗೆ ಒಂದು ನೆಪ ಇರುತ್ತಿತ್ತು! ನಿರ್ದೇಶಕರು ವಿವರಿಸುತ್ತಿದ್ದ ಪ್ರತಿಯೊಂದು ಯೋಜನೆಗೂ ಅವರು, "ಗುರುದೇವ, ಇದು ಸಾಧ್ಯವಿಲ್ಲ!" ಎಂದು ಹೇಳುತ್ತಿದ್ದರು. ಕೊನೆಗೆ ನಾನು ಅವರಲ್ಲಿ ಕೇಳಿದೆ, "ಯಾವುದು ಸಾಧ್ಯವಾಗುತ್ತದೆ?"

ಅವರಂದರು, "ದಯವಿಟ್ಟು ನಮಗೆ ಪೋಲಿಸ್ ಇಲಾಖೆಯಲ್ಲಿ ಕೆಲಸ ಕೊಡಿಸಿ ಅಥವಾ ನನ್ನನ್ನೊಬ್ಬ ಬಸ್ ಕಂಡಕ್ಟರನನ್ನಾಗಿ ಮಾಡಿ."

ಆರಕ್ಷಕ ದಳದೊಂದಿಗೆ ಅಥವಾ ಸರಕಾರೀ ಕಂಡಕ್ಟರನಾಗಿ ನಿಮಗೆ ಎಷ್ಟು ಉದ್ಯೋಗಗಳು ಸಿಗಲು ಸಾಧ್ಯ? ಒಬ್ಬ ವಾಣಿಜ್ಯೋದ್ಯಮಿಯಾಗಲು ಯಾರೂ ಬಯಸುವುದಿಲ್ಲ, ಯಾವುದೇ ಪ್ರಯತ್ನವನ್ನು ಹಾಕಲು ಯಾರೂ ಬಯಸುವುದಿಲ್ಲ.

ಈ ಜನರು ಬಡವರಾಗಿಯೇ ಉಳಿಯಲು ಬಯಸುತ್ತಾರೆ, ನೀವೇನು ಮಾಡಲು ಸಾಧ್ಯ? ಇದು ನಾವು ಯೂತ್ ಲೀಡರ್‌ಶಿಪ್ ಟ್ರೈನಿಂಗ್ ಪ್ರೋಗ್ರಾಮ್ (ವೈ.ಎಲ್.ಟಿ.ಪಿ.) ಪ್ರಾರಂಭಿಸಿದಾಗ. ನಾವು ಅವರೆಲ್ಲರಿಗೂ ಮೂರು ತಿಂಗಳುಗಳ ಕಠಿಣ ತರಬೇತಿಯನ್ನು ನೀಡಿದೆವು. ಅವರು ತಮ್ಮ ಆಲಸ್ಯದಿಂದ ಹೊರಬರಲೆಂದು ಬೆಳಗ್ಗೆ ವ್ಯಾಯಾಮ ಮಾಡುವಂತೆ ಮಾಡಿದೆವು. ಅವರು ಕ್ರಿಯೆ ಮತ್ತು ಧ್ಯಾನ ಮಾಡಲು ಪ್ರಾರಂಭಿಸಿದಾಗ, ನಾವು ಅವರಿಗೆ ಮೂರು ತಿಂಗಳುಗಳಿಗಾಗಿ ಉದ್ಯೋಗ ನೀಡಿದೆವು. ಹೀಗಿದ್ದರೂ, ನೀವು ಏನಾದರೂ ಮಾಡಬೇಕೆಂದು ನಾವು ಅವರಿಗೆ ಹೇಳಿದೆವು. ಇವತ್ತು, ಅವರಲ್ಲಿ ಹಲವರು ವಾಣಿಜ್ಯೋದ್ಯಮಿಗಳಾಗಿರುವರು.

ಈಗ, ಆಶ್ರಮದ ಸುತ್ತ ಯಾವುದಾದರೂ ಹುಲ್ಲಿನ ಛಾವಣಿಗಳನ್ನು ನೀವು ನೋಡುತ್ತೀರೇ? ಇಲ್ಲ! ಜನರು ಮನೆಗಳನ್ನು ಕಟ್ಟಿದ್ದಾರೆ; ಈ ಹಳ್ಳಿಯಲ್ಲಿ ಮಾತ್ರವಲ್ಲ, ಆದರೆ ಸುತ್ತಲಿರುವ ಎಲ್ಲಾ ಹಳ್ಳಿಗಳು ಈಗ ಅಭಿವೃದ್ಧಿ ಹೊಂದುತ್ತಿವೆ. ಆರ್ಥಿಕ ಸ್ಥಿತಿ ಮುನ್ನಡೆಯುತ್ತಿದೆ; ಈಗ ನಿಮಗೆ ಈ ಪ್ರದೇಶದಿಂದ ಕಾರ್ಮಿಕರು ಸಿಗುವುದಿಲ್ಲ, ಅವರು ಇತರ ಪ್ರದೇಶಗಳಿಂದ ಬರುತ್ತಾರೆ.

ಅದೇ ರೀತಿಯಲ್ಲಿ, ಇಲ್ಲಿ ನಮ್ಮ ದ್ವಾರಪಾಲಕನಾಗಿದ್ದ ಒಬ್ಬ ಹುಡುಗನಿದ್ದ. ಇವತ್ತು, ಅವನ ಕೈಕೆಳಗೆ ೪೦೦ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಹುಡುಗನ ಕಥೆಯು ಬಹಳ ಆಸಕ್ತಿದಾಯಕವಾಗಿದೆ. ಮಗುವಾಗಿದ್ದಾಗ ಅವನು ಶಾಲೆಯಲ್ಲಿ ತೊಂದರೆ ನೀಡುವವನಾಗಿದ್ದ. ಅವನು ಇತರ ಪ್ರತಿಯೊಬ್ಬ ಹುಡುಗನೊಂದಿಗೂ ಜಗಳವಾಡುತ್ತಿದ್ದ ಮತ್ತು ಯಾವುದೇ ಶಾಲೆಯೂ ಅವನನ್ನು ಸ್ವೀಕರಿಸುತ್ತಿರಲಿಲ್ಲ. ಅವನ ಹೆತ್ತವರು ಅವನಿಂದಾಗಿ ರೋಸಿಹೋಗಿದ್ದರು ಮತ್ತು ದಣಿದಿದ್ದರು. ಹೀಗಾಗಿ ಅವರು ಬಂದು ಅವನನ್ನು ಇಲ್ಲಿ ಬಿಟ್ಟರು. ನಮಗೇನು ಬೇಕೋ ಅದನ್ನು ನಾವು ಮಾಡಬೇಕೆಂದು ಅವರು ನಮ್ಮಲ್ಲಿ ಹೇಳಿದರು. ಅವನು ಮನೆಯಲ್ಲಿರುವುದು ಅವರಿಗೆ ಬೇಕಿರಲಿಲ್ಲ, ಯಾಕೆಂದರೆ ಅವನು ಎಲ್ಲರಿಗೆ ಹೊಡೆಯುತ್ತಿದ್ದನು, ಎಲ್ಲವನ್ನೂ ಒದೆಯುತ್ತಿದ್ದನು ಮತ್ತು ಸುತ್ತಲೆಲ್ಲಾ ಬಹಳಷ್ಟು ತೊಂದರೆ ಸೃಷ್ಟಿಸುತ್ತಿದ್ದನು. ಹೀಗೆ ಅವನು ಶಕ್ತಿ ಕುಟೀರದ ಹೊರಗೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದನು ಮತ್ತು ಜನರು ನನ್ನ ಕೋಣೆಗೆ ಬರುವುದನ್ನು ತಡೆಯುತ್ತಿದ್ದನು. ಆ ದಿನಗಳಲ್ಲಿ ನಾವು ಇತರ ಯಾವುದೇ ಕಾವಲುಗಾರರನ್ನು ಹೊಂದಿರಲಿಲ್ಲ, ಅವನು ಇದ್ದ ಒಬ್ಬನೇ ವ್ಯಕ್ತಿಯಾಗಿದ್ದನು! ಅವನು ಎಲ್ಲರನ್ನೂ ನಿಲ್ಲಿಸುತ್ತಿದ್ದನು, ನನ್ನ ತಾಯಿಯನ್ನು ಕೂಡಾ! ಹಲವು ಸಾರಿ, ಆಹಾರದೊಂದಿಗೆ ಬರಲು ಅವಳು ಅವನೊಂದಿಗೆ ಜಗಳ ಮಾಡಬೇಕಾಗುತ್ತಿತ್ತು.
ನೋಡಿ, ಸುಮ್ಮನೇ ಇಲ್ಲಿದ್ದುದರಿಂದ ಅವನಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಯಾಯಿತು. ನಂತರ ಅವನು ಹಿಂದಿರುಗಿ ಹೋದನು ಮತ್ತು ಮದುವೆಯಾದನು. ಅವನೊಂದು ದೊಡ್ದ ವ್ಯಾಪಾರವನ್ನು ಪ್ರಾರಂಭಿಸಿದನು; ಅವನು ಹೆಚ್ಚೇನೂ ಕಲಿತಿಲ್ಲ, ಆದರೂ ಅವನು ಸುಮಾರು ೩೦೦-೪೦೦ ನೌಕರರನ್ನು ಹೊಂದಿದ್ದಾನೆ.

ಇತರ ಹಲವಾರು ಜನರೊಂದಿಗೆ ಹೀಗೆಯೇ ಆಗಿದೆ; ಇತರ ಹಲವಾರು ಉದಾಹರಣೆಗಳಿವೆ, ಒಂದಲ್ಲ; ಆಲಸ್ಯವು ದೂರಹೋಗಲೇಬೇಕು.

ಈ ದೇಶದ ಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರು ಒಂದು ಕಾಲದಲ್ಲಿ ಒಬ್ಬ ಚಹಾ ಮಾರಾಟಗಾರರಾಗಿದ್ದರು. ಅವರು ಒಂದು ಬಹಳ ಬಡ ಕುಟುಂಬದಿಂದ ಬಂದರು; ಇವತ್ತು ಅವರೊಂದು ರಾಜ್ಯದ ಮುಖ್ಯಮಂತ್ರಿಯಾಗಿರುವರು.

ಇನ್ನೊಂದು ಉದಾಹರಣೆಯು ರಾಮನಾಥ ಗೊಯೆಂಕಾಜಿಯವರದ್ದು. ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ್ನು ಪ್ರಾರಂಭಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್‌ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎದುರು ಹಾಕಿಕೊಂಡಂತಹ ಪತ್ರಿಕೆ. ಅವರು ಕೇವಲ ಎರಡನೆಯ ತರಗತಿಯವರೆಗೆ ಮಾತ್ರ ಕಲಿತಿದ್ದರು. ಅವರು ಮುಂಬೈಯ ಮಾರ್ಗಗಳಲ್ಲಿ ಒಂದು ಗಾಡಿಯಲ್ಲಿ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಮಾರುತ್ತಿದ್ದರು. ಒಂದು ಬಹಳ ಬಡ ಕುಟುಂಬದಿಂದ ಬಂದರೂ, ಇವತ್ತು ಅವರೊಂದು ಸಾಮ್ರಾಜ್ಯವನ್ನು ಕಟ್ಟಿರುವರು.

ನೀವು ಆ ಆಧ್ಯಾತ್ಮಿಕ ಶಕ್ತಿ, ವಿಶ್ವಾಸ ಮತ್ತು ಬಡತನದಿಂದ ಹೊರಬರಲಿರುವ ಇಚ್ಛೆಯನ್ನು ತರಬೇಕಾಗಿದೆ; ಇದನ್ನೇ ನಾವು ಮಾಡಬೇಕಾದುದು. ಕೇವಲ ಬಡವರಿಗೆ ಆಹಾರ ಮತ್ತು ವಸ್ತುಗಳನ್ನು ನೀಡುವುದರಿಂದ ಪ್ರಯೋಜನವಿಲ್ಲ.

ಇಥಿಯೋಪಿಯಾವು ಇನ್ನೊಂದು ಉದಾಹರಣೆಯಾಗಿದೆ. ಏಳು ವರ್ಷಗಳವರೆಗೆ ಇಥಿಯೋಪಿಯಾದಲ್ಲಿ ಒಂದು ಕ್ಷಾಮವಿತ್ತು. ದೇಶವು ಅಷ್ಟು ದೀರ್ಘ ಕಾಲದವರೆಗೆ ಒಂದು ಕ್ಷಾಮದ ಮೂಲಕ ಹಾದುಹೋದುದರಿಂದ, ಜನರು ಕೆಲಸ ಮಾಡಲಿಲ್ಲ.

ಎಂಟನೆಯ ವರ್ಷದಲ್ಲಿ, ಮಳೆ ಬಂದಾಗ ಕೂಡಾ ಯಾರೂ ಕೆಲಸ ಮಾಡಲು ಬಯಸಲಿಲ್ಲ! ಇದು ಯಾಕೆಂದರೆ, ಇತರ ದೇಶಗಳಿಂದ ಸಹಾಯ ಪಡೆಯುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಬೇರೊಬ್ಬರು ತಮಗೆ ಸಹಾಯ, ಆಹಾರ ಮತ್ತು ವಸ್ತುಗಳನ್ನು ಕೊಡಬೇಕೆಂದು ಅವರು ನಿರೀಕ್ಷಿಸಿದರು. ಇವತ್ತೂ ಕೂಡಾ, ಇಥಿಯೋಪಿಯಾವು ಅಷ್ಟೊಂದು ವಿಶಾಲವಾದ ಭೂಮಿಯನ್ನು ಹೊಂದಿದೆ, ಆದರೆ ಇಥಿಯೋಪಿಯಾದಲ್ಲಿ ನೆಲವನ್ನು ಖರೀದಿಸಿ ಅಲ್ಲಿ ಕೃಷಿ ಮಾಡುತ್ತಿರುವುದು ಚೈನೀಯರು ಮತ್ತು ಭಾರತೀಯರಾಗಿರುವರು, ಯಾಕೆಂದರೆ ಜನರಲ್ಲಿ ಏನನ್ನಾದರೂ ಮಾಡಲಿರುವ ಉತ್ಸಾಹವು ಹೋಗಿದೆ.

ಇಥಿಯೋಪಿಯಾದಲ್ಲಿ ಇನ್ನೊಂದು ಬಹಳ ವಿಚಿತ್ರವಾದ ಸಂಗತಿಯಿದೆ. ಯಾವುದೋ ಧಾರ್ಮಿಕ ನಂಬಿಕೆಯಿಂದಾಗಿ ಜನರು ವರ್ಷದಲ್ಲಿ ಆರು ತಿಂಗಳುಗಳ ಕಾಲ ಯಾವುದೇ ಹಾಲಿನ ಉತ್ಪನ್ನಗಳನ್ನು ಉಪಯೋಗಿಸುವುದಿಲ್ಲ. ಹಾಗಾಗಿ ಈಗ, ಒಂದು ಹಾಲಿನ ಉತ್ಪನ್ನಗಳ ವ್ಯಾಪಾರವನ್ನು ತೆರೆಯಲು ಯಾರೂ ಬಯಸುವುದಿಲ್ಲ, ಯಾಕೆಂದರೆ ಆರು ತಿಂಗಳುಗಳ ಕಾಲ ಉತ್ಪನ್ನವು ಮಾರಾಟವಾಗದು.

ಬಹುಶಃ ಪ್ರಾಚೀನ ಕಾಲದಲ್ಲಿ, ಚಳಿಗಾಲದಲ್ಲಿ ಒಬ್ಬರು ತಂಪಾದ ಹಾಲನ್ನು ಕುಡಿಯಬಾರದು ಎಂದು ಹೇಳಿದ್ದಿರಬೇಕು, ಅಥವಾ ಅಲ್ಲಿ ಬೇರೆ ಯಾವುದಾದರೂ ತಾರ್ಕಿಕವಾದ ತೀರ್ಮಾನವಿದ್ದಿರಬಹುದು. ಹೀಗಿದ್ದರೂ, ಒಂದು ಧಾರ್ಮಿಕ ನಂಬಿಕೆಯಾಗಿ ಆರು ತಿಂಗಳುಗಳವರೆಗೆ ಜನರು ಹಾಲನ್ನು ಕುಡಿಯದಿರುವುದು ಅಥವಾ ಯಾವುದೇ ಹಾಲಿನ ಉತ್ಪನ್ನಗಳನ್ನು ಉಪಯೋಗಿಸದಿರುವುದು ಇಡೀ ಉದ್ಯಮವು ಬಹಳಷ್ಟು ಬಳಲುವಂತೆ ಮಾಡುತ್ತದೆ.

ಬಡತನದಿಂದ ಹೊರಬರಲು ಒಬ್ಬನು ಒಂದು ಸರಿಯಾದ ಮನೋಭಾವವನ್ನು ಹೊಂದಿರಬೇಕು. ನಾನು ಹೆಳುವುದಾದರೆ, ನಾನೊಬ್ಬ ಬಲಿಪಶು ಎಂಬ ಮನೋಭಾವವು ಸ್ವಯಂಪ್ರೇರಿತವಾಗಿದೆ."ನಾನೊಬ್ಬ ಬಲಿಪಶು, ಯಾರಲ್ಲೋ ಹಣವಿದೆ, ನನ್ನಲ್ಲಿ ಅದು ಇಲ್ಲ" ಎಂದು ಅಂಥವರು ಹೇಳುತ್ತಾರೆ!

ನಿಮ್ಮಲ್ಲಿ ಅದು ಯಾಕಿಲ್ಲ? ಅದು ಯಾಕೆಂದರೆ ನೀವು ಅದರ ಕಡೆಗೆ ಕೆಲಸ ಮಾಡಲಿಲ್ಲ. ಖಂಡಿತವಾಗಿಯೂ, ಜನರನ್ನು ಶೋಷಿಸುವಂತಹ ಇತರ ಭಾಗಗಳೂ ಈ ಚಿತ್ರಣಕ್ಕಿವೆ ಮತ್ತು ಅದು ಕೂಡಾ ಸರಿಯಲ್ಲ!

ಪ್ರಶ್ನೆ: ಗುರುದೇವ, ನಾನು ಬೇಯಿಸಿದ ಅಕ್ಕಿಯನ್ನು ಮುಟ್ಟಿದ ಮೇಲೆ ನನ್ನ ಕೈಗಳನ್ನು ತೊಳೆಯುವಂತೆ ನನ್ನ ಅತ್ತೆ ಮಾವ ಬಲವಂತಪಡಿಸುತ್ತಾರೆ. ನನ್ನ ಋತುಚಕ್ರದ ಸಮಯದಲ್ಲಿ, ದೇವರಕೋಣೆಯನ್ನು, ಅಡುಗೆಕೋಣೆಯನ್ನು ಪ್ರವೇಶಿಸಲು ಅಥವಾ ಬಟ್ಟೆಗಳನ್ನು ಮುಟ್ಟಲು ಅವರು ನನಗೆ ಅನುಮತಿಸುವುದಿಲ್ಲ. ಅವರು ಯಾಕೆ ಈ ಸಂಪ್ರದಾಯಗಳನ್ನು ಅನುಸರಿಸುತ್ತಾರೆ? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ಸಂಪ್ರದಾಯವನ್ನು ಸಾಬೀತುಪಡಿಸಲು ಅಥವಾ ಅಲ್ಲಗಳೆಯಲು ನೀನು ವೈಜ್ಞಾನಿಕ ಪ್ರಯೋಗಗಳನ್ನು ಮಾಡಬೇಕು.  ಒಂದು ಪ್ರಯೋಗವನ್ನು ಮಾಡದೆಯೇ, ಒಂದು ಸಂಪ್ರದಾಯವು ತಪ್ಪು ಅಥವಾ ಸರಿ ಎಂದು ಹೇಳಲು ನಿನಗೆ ಸಾಧ್ಯವಿಲ್ಲ! ಉದಾಹರಣೆಗೆ, ಸಾಂಪ್ರದಾಯಿಕ ಮನೆಗಳಲ್ಲಿ, ಶೌಚಾಲಯಕ್ಕೆ ಹೋಗುವ ಮುನ್ನ ಜನರು ಜನಿವಾರವನ್ನು ತಮ್ಮ ಕಿವಿಯ ಸುತ್ತಲೂ ಕಟ್ಟುತ್ತಿದ್ದರು; ಹಲವು ಸಲ ಇದು ಅಸಂಬದ್ಧವಾಗಿ ಕಾಣಿಸುತ್ತಿತ್ತು. ಕೊಡಲಾಗುತ್ತಿದ್ದ ವಿವರಣೆಯೇನೆಂದರೆ, ಬಹುಶಃ ಜನಿವಾರವು ಉದ್ದವಾಗಿ, ಅತಿಯಾಗಿ ಕೆಳಕ್ಕೆ ನೇತಾಡುತ್ತದೆ, ಅದು ಎಲ್ಲೂ ಸಿಕ್ಕಿಹಾಕಿಕೊಳ್ಳದಂತೆ ಅದನ್ನು ಕಿವಿಗೆ ಕಟ್ಟಿ ಎಂದು. ಹೀಗಿದ್ದರೂ, ನ್ಯೂಯೋರ್ಕಿನ ವಿಜ್ಞಾನಿಯೊಬ್ಬರು ಒಂದು ಅಧ್ಯಯನವನ್ನು ಪ್ರಕಟಿಸಿದರು. ಕಿವಿಗಳ ಹಿಂಭಾಗ ಮತ್ತು ಕಿವಿಹಾಲೆಗಳು ಕರುಳಿನೊಂದಿಗೆ ಸಂಪರ್ಕ ಹೊಂದಿದೆ ಎಂದು ಅದು ಹೇಳಿಕೆ ನೀಡಿತು.

ಹೀಗಾಗಿ ಕಿವಿಗಳನ್ನು ಹಿಂಡಿದಾಗ, ರಕ್ತದೊತ್ತಡವು ಕಡಿಮೆಯಾಗುತ್ತದೆ ಮತ್ತು ಮಲ ವಿಸರ್ಜನೆ ಉತ್ತಮವಾಗುತ್ತದೆ. ಹೀಗೆ ಸಂಪ್ರದಾಯವು ವ್ಯವಸ್ಥೆಯ ಮೇಲೆ ಒಂದು ಪ್ರಭಾವವನ್ನು ಹೊಂದಿದೆ. ಇದಕ್ಕಾಗಿಯೇ ನೀನು ಅದನ್ನು ಮೂಢನಂಬಿಕೆಯೆಂದು ಹೇಳಲು ಸಾಧ್ಯವಿಲ್ಲ; ಒಂದು ಮಟ್ಟದಲ್ಲಿ ಅದೊಂದು ಮೂಢನಂಬಿಕೆಯಾಗಿದ್ದರೂ, ಇನ್ನೊಂದು ಮಟ್ಟದಲ್ಲಿ, ಆ ಅಭ್ಯಾಸಕ್ಕೆ ಅಲ್ಲೊಂದು ವೈಜ್ಞಾನಿಕ ಪುಷ್ಟೀಕರಣವಿತ್ತು.

ಅದೇ ರೀತಿಯಲ್ಲಿ, ಆಹಾರದಲ್ಲಿ ಮತ್ತು ಪಾತ್ರೆಗಳನ್ನು ತೊಳೆಯುವಲ್ಲಿ ಅರಸಿನದ ಉಪಯೋಗ ಕೂಡಾ ಒಂದು ಮೂಢನಂಬಿಕೆಯೆಂದು ಜನರು ಯೋಚಿಸಿದ್ದರು. ಬಹಳಷ್ಟು ಆಹಾರ ತಯಾರಿಕೆಗಳಲ್ಲಿ, ಬೇಯಿಸಿದ ಬಳಿಕ ಆಹಾರದ ಮೇಲ್ಭಾಗದಲ್ಲಿ ಅವರೊಂದು ತುಳಸಿ ಎಲೆಯನ್ನು ಹಾಕುತ್ತಿದ್ದರು. ಎಂಭತ್ತರ ದಶಕದಲ್ಲಿನ ವಿಜ್ಞಾನಿಗಳು ದೀರ್ಘಕಾಲದವರೆಗೆ ಅರಸಿನವನ್ನು "ಓ, ಇದು ಕೇವಲ ಬಣ್ಣ, ವರ್ಣದ್ರವ್ಯ ಮಾತ್ರ; ಅದಕ್ಕೆ ಯಾವುದೇ ದೊಡ್ಡ ಬೆಲೆಯಿಲ್ಲ, ಅರಸಿನವೇನೂ ಪವಿತ್ರವಾದುದಲ್ಲ, ಅದು ಆಹಾರಕ್ಕೆ ಯಾವುದೇ ಮೌಲ್ಯವನ್ನು ಸೇರಿಸುವುದಿಲ್ಲ" ಎಂದು ಗುರಿಯಾಗಿಸಿದರು. ತೊಂಭತ್ತರ ದಶಕದ ಹೊತ್ತಿಗೆ, ಅರಸಿನವು ಅತ್ಯುತ್ತಮವಾದ ಉತ್ಕರ್ಷಣ ನಿರೋಧಕ (ಏಂಟಿ ಓಕ್ಸಿಡೆಂಟ್) ಎಂದು ವಿಜ್ಞಾನಿಗಳು ಕಂಡುಹಿಡಿದರು.

ಅರಸಿನವು ವಯಸ್ಥಾಪನವಾಗಿ; ಅಂದರೆ ವಯಸ್ಸಾಗುವಿಕೆಯನ್ನು ನಿಲ್ಲಿಸುವ ಒಂದು ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಯುರ್ವೇದದ ವೈದ್ಯರುಗಳು ಹೇಳಿದರು. ಆದರೆ ಯಾರೂ ಅವರನ್ನು ನಂಬಲಿಲ್ಲ. ಇದೆಲ್ಲವೂ ಅಸಂಬದ್ಧವೆಂದು ಎಂ.ಬಿ.ಬಿ.ಎಸ್ ವೈದ್ಯರು ಹೇಳುತ್ತಿದ್ದರು. ಆನಂತರದಲ್ಲಿ, ಅರಸಿನವು ಆರೋಗ್ಯಕ್ಕೆ ಬಹಳ ಒಳ್ಳೆಯದೆಂದು ವಿಜ್ಞಾನಿಗಳು ಸಾಬೀತುಪಡಿಸಿದರು; ಅದು ಕ್ಯಾನ್ಸರನ್ನು ಕೂಡಾ ತಡೆಯುತ್ತದೆ. ಹಾಗಾಗಿ, ತಪ್ಪೆಂದು ಸಾಬೀತುಪಡಿಸದ ಹೊರತು ನೀವು ಯಾವುದೇ ಸಂಪ್ರದಾಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮತ್ತೆ, ನಾನು ಹೇಳುವುದೇನೆಂದರೆ, ನಾವೊಂದು ಮುಕ್ತ ಮನಸ್ಸು ಇಟ್ಟುಕೊಳ್ಳಬೇಕು; ಒಂದು ಸಮಯದಲ್ಲಿ ಅದು ಸರಿಯೆಂದು ಸಾಬೀತಾಗಿ, ನಂತರದಲ್ಲಿ ಅಲ್ಲಗಳೆಯಲ್ಪಟ್ಟಿದ್ದಿರಲೂಬಹುದು.
ನೆಲಗಡಲೆ ಎಣ್ಣೆ ಬಹಳ ಕೆಟ್ಟದೆಂದು ಈ ದೇಶದಲ್ಲಿ ಒಂದು ದೊಡ್ಡ ಅಲೆಯೆದ್ದಿತ್ತು. ದಕ್ಷಿಣ ಭಾರತೀಯ ಮನೆಗಳಲ್ಲಿ, ಅವರು ಕೇವಲ ನೆಲಗಡಲೆ ಎಣ್ಣೆ ಮತ್ತು ಎಳ್ಳೆಣ್ಣೆಗಳನ್ನು ಬಳಸುತ್ತಿದ್ದರು. ಪಾಮ್ ಎಣ್ಣೆಯನ್ನು ಪ್ರಚಾರ ಮಾಡಲು ಬಯಸಿದ್ದ ಕಂಪೆನಿಯೊಂದು, ತೆಂಗಿನೆಣ್ಣೆ; ಈ ಇತರ ಎಣ್ಣೆಗಳು ಕೆಟ್ಟದು ಪಾಮ್ ಎಣ್ಣೆ ಅತ್ಯುತ್ತಮವಾದ ಎಣ್ಣೆ ಎಂದು ಹೇಳಿತು. ಕೂಡಲೇ ಎಲ್ಲರೂ ಪಾಮ್ ಎಣ್ಣೆಯನ್ನು ಬಳಸಲು ತೊಡಗಿದರು.

ಈಗ ಸಂಶೋಧನೆಯು ಅದನ್ನು ಅಲ್ಲಗಳೆದಿದೆ, ಮತ್ತು ನೆಲಗಡಲೆ ಎಣ್ಣೆ ಬಹಳ ಒಳ್ಳೆಯದು, ಅದು ಅತ್ಯುತ್ತಮವಾದುದು ಎಂದು ಕಂಡುಹಿಡಿದಿದೆ. ಅವರು ನೆಲಗಡಲೆ ಎಣ್ಣೆಯ ವೈಭವವನ್ನು ಹಾಡುತ್ತಾರೆ. ವಾಸ್ತವವಾಗಿ, ಇಲ್ಲಿ ಜನರು ಶತಮಾನ, ಸಹಸ್ರಮಾನಗಳಿಂದ ನೆಲಗಡಲೆ ಎಣ್ಣೆಯನ್ನು ಬಳಸುತ್ತಿದ್ದರು! ತಮಿಳುನಾಡಿನಲ್ಲಿ ಎಳ್ಳೆಣ್ಣೆಯು ನಲ್ಲ ಎಣ್ಣೈ ಎಂದು ಕರೆಯಲ್ಪಡುತ್ತದೆ, ಅಂದರೆ ಬಹಳ ಒಳ್ಳೆಯ ಎಣ್ಣೆ ಎಂದು. ಅದು ನಮ್ಮ ಶರೀರದ ವ್ಯವಸ್ಥೆಗೆ ಬಹಳಷ್ಟು ಒಳ್ಳೆಯದನ್ನು ಮಾಡುವುದೆಂದು ಭಾವಿಸಲಾಗಿದೆ.

ಎಣ್ಣೆ ಮಾರುಕಟ್ಟೆಯು ಆ ಎಲ್ಲಾ ಮಲೇಷಿಯಾದ ಪಾಮ್ ಎಣ್ಣೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಬಯಸಿದ್ದರಿಂದ, ಕೆಲವು ಸಂಶೋಧಕರು ಈ ರೀತಿಯ ಕಥೆಗಳನ್ನು ಕಟ್ಟಿದರು. ಸಂಶೋಧನೆಗೆ ಕಂಪೆನಿಯಿಂದ ಅನುದಾನ ದೊರಕಿತ್ತು, ಮತ್ತು ಅದು ಒಂದು ತಪ್ಪು ಭಾವನೆಯನ್ನು ಸೃಷ್ಟಿಸಿತು. ಹೀಗಾಗಿ, ನಡೆಸಲಾಗುವ ಸಂಶೋಧನೆಯು ಪ್ರಾಮಾಣಿಕವಾಗಿರಬೇಕು ಮತ್ತು ಹೆಚ್ಚಿನ ಸಂಶೋಧನೆಗಾಗಿ ನಾವು ನಮ್ಮ ಮನಸ್ಸನ್ನು ತೆರೆದಿಡಬೇಕು. ಭವಿಷ್ಯದಲ್ಲಿ, ಇನ್ನೊಂದು ಸಂಶೋಧನೆಯು ಬಂದು ಇದು ತಪ್ಪೆಂದು ಹೇಳಿದರೆ, ನಾವು ಇದನ್ನೇ ಹಿಡಿದಿಟ್ಟುಕೊಳ್ಳಬಾರದು, ನಾವದನ್ನು ಆಲಿಂಗಿಸಿಕೊಳ್ಳಲು ತಯಾರಿರಬೇಕು.
ಪ್ರಾಚೀನ ಆಯುರ್ವೇದ ವ್ಯವಸ್ಥೆಯಲ್ಲಿನ ಸೌಂದರ್ಯವೇನೆಂದರೆ, ಅದು ೫,೦೦೦ ವರ್ಷಗಳ ಕಾಲ-ಪರೀಕ್ಷೆಗೊಳಪಟ್ಟಿದೆ!

ಅದಕ್ಕಾಗಿಯೇ ಸಂಪ್ರದಾಯವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಹೀಗೆ ಹೇಳುವುದರೊಂದಿಗೆ, ಹಲವು ಸಾರಿ ಸಂಪ್ರದಾಯವು ಪ್ರಕ್ಷೇಪಿಸಿಕೊಂಡಿದೆ; ಸಂಪ್ರದಾಯದ ಹೆಸರಿನಲ್ಲಿ ಬಹಳಷ್ಟು ಸಂಗತಿಗಳನ್ನು ಇಟ್ಟುಕೊಳ್ಳಲಾಗಿದೆ.
ಉದಾಹರಣೆಗೆ, ಒಂದು ಚಿಕ್ಕ ಮಗುವಿನ ಶರೀರದ ಮೇಲೆ ಬಿಸಿಯಾದ ಪಾಯಸವನ್ನು ಹಚ್ಚಬೇಕು, ಆಗ ಮಗುವು ಚೆನ್ನಾಗಿ ಬೆಳೆಯುವುದು ಎಂದು ಜನರು ಹೇಳುತ್ತಾರೆ; ಅಥವಾ ಕೆಲವು ನಿಮಿಷಗಳವರೆಗೆ ಮಗುವನ್ನು ತಲೆಕೆಳಗಾಗಿ ನೇತಾಡಿಸಬೇಕು, ಬಹುಶಃ ಯಾವುದೋ ದೇವರು ಪ್ರಸನ್ನಗೊಳ್ಳುವನು ಅಥವಾ ಏನಾದರೂ; ಇವುಗಳೆಲ್ಲವೂ ಮೂರ್ಖ ಸಂಗತಿಗಳು. ಈ ಅಭ್ಯಾಸಗಳು ಬಹಳ ದೂರದವು; ಬಹುಶಃ ಕೆಲವು ಜನರು ಯಾವುದೋ ಕೆಲವು ಹಳ್ಳಿಗಳಲ್ಲಿ ಧರ್ಮದ ಹೆಸರಿನಲ್ಲಿ ಈ ಅಭ್ಯಾಸಗಳನ್ನು ಅನುಸರಿಸುತ್ತಿರಬೇಕು; ಅದು ಹಾಸ್ಯಾಸ್ಪದ.

ಸಂಪ್ರದಾಯವು ಹೇಳುತ್ತಿರುವುದನ್ನೆಲ್ಲಾ ಅನುಸರಿಸಬೇಕೆಂದು ನಾನು ಹೇಳುತ್ತಿಲ್ಲ; ಅದೇ ವೇಳೆಗೆ, ನೀವು ಸಂಪ್ರದಾಯವನ್ನು ಸಂಪೂರ್ಣವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ; ಮಧ್ಯದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಮನೆಯಲ್ಲಿ ಯಾರಾದರೂ ತೀರಿಹೋಗಿದ್ದರೆ ಅಥವಾ ಒಂದು ಮಗುವು ಜನಿಸಿದ್ದರೆ, ಅವರಿಗೆ ಸೂತಕವಿರುತ್ತದೆ. ಅಂದರೆ, ಹತ್ತು ದಿನಗಳವರೆಗೆ ಅವರನ್ನು ಮುಟ್ಟುವಂತಿಲ್ಲ. ಇದು ಅತೀ ಹತ್ತಿರದ ಸಂಬಂಧಿಕರಿಂದ ಅಭ್ಯಸಿಸಲ್ಪಡುತ್ತದೆ. ಅವರು ಏನನ್ನೂ ಆಚರಿಸುವುದಿಲ್ಲ ಅಥವಾ ಯಾರ ಮನೆಗೂ ಹೋಗುವುದಿಲ್ಲ; ಅವರ ಮನೆಯಿಂದ ಯಾರೂ ಏನನ್ನೂ ತೆಗೆದುಕೊಳ್ಳುವುದಿಲ್ಲ ಅಥವಾ ತಿನ್ನುವುದಿಲ್ಲ. ಇದರ ಹಿಂದಿರುವ ಕಾರಣವೇನು? ಯಾರಾದರೂ ಸತ್ತುಹೋದಾಗಲೆಲ್ಲಾ, ಜನರು ಎಷ್ಟು ದುಃಖದಲ್ಲಿರುತ್ತಾರೆಂದರೆ ಅವರ ದುಃಖದ ಕಂಪನಗಳು ಅವರ ಮನೆಗಳಲ್ಲಿ, ಅವರ ವಾತಾವರಣದಲ್ಲಿರುತ್ತವೆ, ಹೀಗಾಗಿ ಅವರು ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿರುತ್ತಾರೆ, ಅಷ್ಟೇ.ನೀವು ಯಾರನ್ನಾದರೂ ಮುಟ್ಟಿದರೆ ನಿಮಗೇನಾದರೂ ಆಗುವುದೆಂದಲ್ಲ. ಹತ್ತು ದಿನಗಳವರೆಗೆ ಕಂಪನವು ಹಾಗಿರುತ್ತದೆ, ದುಃಖದಿಂದ ತುಂಬಿಕೊಂಡು ಎಂದು ಮಾತ್ರ.

ಒಬ್ಬರಿಗೆ ಯಾವುದೇ ದುಃಖವಿಲ್ಲವೆಂದಿಟ್ಟುಕೊಳ್ಳೋಣ! ಕುಟುಂಬದಲ್ಲಿ ಒಂದು ದೀರ್ಘಕಾಲದವರೆಗೆ ಯಾರಾದರೂ ಅನಾರೋಗ್ಯದಿಂದಿದ್ದರೆ, ಅವರು ನಿಧನರಾಗುವಾಗ ಕುಟುಂಬವು ಸಂತೋಷಗೊಳ್ಳುತ್ತದೆ. "ಸರಿ, ಒಳ್ಳೆಯದು ಅವರು ಮುಕ್ತರಾದರು, ನಾನು ಅವರಿಗಾಗಿ ಸಂತೋಷಪಡುತ್ತೇನೆ ಮತ್ತು ನಾನು ನನಗಾಗಿ ಸಂತೋಷಪಡುತ್ತೇನೆ" ಎಂದು ಅವರು ಹೇಳುತ್ತಾರೆ. ಆಗ ಅಲ್ಲಿ ಯಾವುದೇ ಋಣಾತ್ಮಕವಾದ, ಖಿನ್ನತೆಯ, ದುಃಖಕರವಾದ ಕಂಪನಗಳಿರುವುದಿಲ್ಲ, ಯಾಕೆಂದರೆ ಅವರು ಅವರಿಗಾಗಿ ಸಂತೋಷಪಡುತ್ತಾರೆ! ಯಾವತ್ತಾದರೂ ಎಲ್ಲರೂ ಹೋಗಲೇಬೇಕು!

ಅದೇ ರೀತಿಯಲ್ಲಿ, ಒಂದು ಮಗುವು ಜನಿಸಿದಾಗ ಜನರು ಬಹಳ ಹರ್ಷಿತರಾಗಿರುತ್ತಾರೆ, ಅತಿಯಾಗಿ ಸಂತೋಷಗೊಂಡಿರುತ್ತಾರೆ. ಆಗ ಕೂಡಾ ಕಂಪನಗಳು ಶಾಂತಿಯುತವಾಗಿರುವುದಿಲ್ಲ. ಹೀಗಾಗಿ ಅಂತಹ ಸಮಯಗಳಲ್ಲಿ ಕೂಡಾ ಒಬ್ಬರು ಎಲ್ಲಾ ಕಟ್ಟುಪಾಡುಗಳಿಂದ ಮುಕ್ತರಾಗಿರುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಜನರು ಇದನ್ನು ಎಷ್ಟರಮಟ್ಟಿಗೆ ಎಳೆಯುತ್ತಾರೆಂದರೆ, ಅದು ನಿಮ್ಮ ಬುದ್ಧಿಗೆ ಮೆಚ್ಚುಗೆಯಾಗುವುದಿಲ್ಲ.

ಋತುಚಕ್ರದ ಸಮಯದಲ್ಲಿ ಒಬ್ಬಳು ಸ್ತ್ರೀಯು ಚೆನ್ನಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಹೀಗೆ, ಇದು ಕೇವಲ ಆ ತಡೆಯನ್ನು ಇಟ್ಟುಕೊಳ್ಳಲು, ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವುದು ಬೇಡವೆಂದು ಸ್ತ್ರೀಯರಿಗೆ ಹೇಳುವುದಕ್ಕಾಗಿ ಈ ಸಂಪ್ರದಾಯವನ್ನು ಉಳಿಸಿಕೊಳ್ಳಲಾಗಿದೆ. ಇದು, ಸ್ತ್ರೀಯರು ಸುಮ್ಮನೆ ವಿಶ್ರಾಂತಿ ತೆಗೆದುಕೊಳ್ಳಲು, ನಿದ್ರಿಸಲು, ವಿಶ್ರಾಮ ಮಾಡಲು, ಓದಲು, ಸ್ವಲ್ಪ ಹೆಣಿಗೆ ಅಥವಾ ಏನನ್ನಾದರೂ ಮಾಡಲು ಅನುಮತಿಸುವುದಕ್ಕಾಗಿ. ಇಲ್ಲದಿದ್ದರೆ, ಸ್ತ್ರೀಯರು ಕೆಲಸ ಮಾಡಲು ಪ್ರಾರಂಭಿಸುವಾಗ, ಅವರು ಅತಿಯಾಗಿ ಕೆಲಸ ಮಾಡುತ್ತಾರೆ.

ಅನ್ನ ಮತ್ತು ಬೇಯಿಸಿದ ಆಹಾರದ ಬಗ್ಗೆ ಹೇಳುವುದಾದರೆ; ಪ್ರಾಚೀನ ದಿನಗಳಲ್ಲಿ, ಬೇಯಿಸಿದ ಆಹಾರವು ಅಂಟಂಟಾಗಿರುತ್ತಿತ್ತು. ಸಾಮಾನ್ಯವಾಗಿ ಅದು ಪಾತ್ರೆಯಿಂದ ತುಂಬಿ ಹೊರಚೆಲ್ಲುತ್ತಿತ್ತು. ನೀವು ಪಾತ್ರೆಯನ್ನು ಮುಟ್ಟಿ ನಂತರ ಬೇರೇನನ್ನಾದರೂ ಮುಟ್ಟಿದಾಗ, ಎಲ್ಲವೂ ಅಂಟಂಟಾಗುತ್ತಿತ್ತು. ನೀವು ಆಹಾರವನ್ನು ಮುಟ್ಟಿದರೆ, ಅದು ನಿಮ್ಮ ಕೈಗಳಿಗೆ ಅಂಟುತ್ತಿತ್ತು. ಹಾಗಾಗಿ ನಿಮ್ಮ ಕೈಗಳನ್ನು ತೊಳೆಯುವುದು ಒಳ್ಳೆಯದು; ಇದಾಗಿತ್ತು ಕಾರಣ. ಇವತ್ತು ನೀವದನ್ನು ಕೈಯಿಂದ ಮುಟ್ಟುವುದಿಲ್ಲ, ನೀವು ಚಮಚಗಳನ್ನು ಬಳಸುತ್ತೀರಿ.

ಆ ದಿನಗಳಲ್ಲಿ, ಶುಚಿತ್ವದ ಪ್ರಜ್ಞೆಯು ಬಹಳಷ್ಟು ಚೆನ್ನಾಗಿತ್ತು; ಹೀಗಾಗಿ, ನೀವು ಪಿಷ್ಟದಿಂದ್ ಕೂಡಿದ ಆಹಾರವನ್ನು ಮುಟ್ಟಿದಾಗ, ನೀವು ನಿಮ್ಮ ಕೈಗಳನ್ನು ತೊಳೆಯಬೇಕು. ಅವರು ಹಣ್ಣುಗಳನ್ನು ಕೂಡಾ ಪ್ರತ್ಯೇಕವಾಗಿ ಇಡುತ್ತಿದ್ದರು. ಹೀಗಿದ್ದರೂ, ಯಾರಾದರೂ ಈ ಪದ್ಧತಿಗಳ ಬಗ್ಗೆ ಸಂಶೋಧನೆ ಮಾಡಬೇಕು.

ಯಹೂದಿಯರಲ್ಲಿ ಕೂಡಾ ಇದೇ ರೀತಿಯ ಒಂದು ಸಂಪ್ರದಾಯವಿದೆ; ನೀವು ಹಾಲನ್ನು ಮುಟ್ಟಿದರೆ, ಆಗ ನೀವು ಮಾಂಸವನ್ನು ಮುಟ್ಟುವುದಿಲ್ಲ; ಅವರಲ್ಲಿ ನಿರ್ದಿಷ್ಟ ನಿಯಮಗಳಿವೆ.

ಜಪಾನೀಯರಲ್ಲೂ ಕೂಡಾ ಇಂತಹ ಪದ್ಧತಿಗಳಿವೆ; ಸಾಂಪ್ರದಾಯಿಕ ಜಪಾನೀ ಜನರು ಅತಿಥಿಗಳಿಗಾಗಿ ಪ್ರತ್ಯೇಕ ಲೋಟಗಳನ್ನು ಮತ್ತು ಪಾತ್ರೆಗಳನ್ನು ಇಡುತ್ತಾರೆ; ಅತಿಥಿಗಳ ತೊಳೆದಿಟ್ಟ ಪಾತ್ರೆಗಳನ್ನಿರಿಸಲಾದ ಪ್ರತ್ಯೇಕವಾದ ಕಪಾಟೊಂದನ್ನು ಅವರು ಹೊಂದಿರುತ್ತಾರೆ. ಅವರು ಅತಿಥಿಗಳ ಪಾತ್ರೆಗಳನ್ನು ಉಪಯೋಗಿಸುವುದಿಲ್ಲ ಮತ್ತು ತಮ್ಮ ಪಾತ್ರೆಗಳನ್ನು ಬೇರೆ ಯಾರಾದರೂ ಉಪಯೋಗಿಸುವುದಕ್ಕೂ ಅವರು ಬಿಡುವುದಿಲ್ಲ. ಜಪಾನಿನಲ್ಲಿ ಇದನ್ನು ನೋಡಿ ನನಗೆ ಬಹಳ ಅಚ್ಚರಿಯಾಯಿತು. ಭಾರತದಲ್ಲಿ ಕೂಡಾ, ತಮ್ಮ ಲೋಟಗಳನ್ನು ಮತ್ತು ತಟ್ಟೆಗಳನ್ನು ಪ್ರತ್ಯೇಕವಾಗಿರಿಸುವ ಈ ಸಂಪ್ರದಾಯವನ್ನು ಕೆಲವು ಜನರು ಅನುಸರಿಸುತ್ತಿದ್ದರು. ಜಪಾನಿನಲ್ಲಿ, ಸಂಪ್ರದಾಯಸ್ಥ ಕುಟುಂಬದ ಮನೆಗಳಲ್ಲಿ ಮತ್ತು ಮಠಗಳಲ್ಲಿ ಇದು ಬಹಳ ಚಾಲ್ತಿಯಲ್ಲಿದೆ.

ಈ ಅಭ್ಯಾಸಗಳಲ್ಲಿ ಹಲವು ಒಂದು ವೈಜ್ಞಾನಿಕ ಹಿನ್ನೆಲೆಯನ್ನು ಅಥವಾ  ಯಾವುದೇ ಕಾರಣವನ್ನು ಹೊಂದಿಲ್ಲ, ಆಗ ನಾವು ಅವುಗಳನ್ನು ಅಭ್ಯಸಿಸುವುದನ್ನು ನಿಲ್ಲಿಸಬೇಕು. ಯಾವುದಾದರೂ ಅಭ್ಯಾಸಗಳು ಇದ್ದರೆ, ಅದು ಒಳ್ಳೆಯದೇ ಎಂಬುದನ್ನು ನಾವು ನೋಡಬೇಕು, ಅಥವಾ ಕಡಿಮೆಪಕ್ಷ ಆ ದಿಕ್ಕಿನಲ್ಲಿ ಸ್ವಲ್ಪ ಪ್ರಯೋಗವನ್ನಾದರೂ ಮಾಡಬೇಕು.

ಪ್ರಶ್ನೆ: ಗುರುದೇವ, ಮಾದಕ ದ್ರವ್ಯಗಳ ವ್ಯಸನಕ್ಕೆ ಬಿದ್ದಿರುವ, ತನ್ನನ್ನು ಹಾಗೂ ಇತರರನ್ನು ನೋಯಿಸುವುದನ್ನು ಮುಂದುವರಿಸುತ್ತಿರುವ ಒಬ್ಬ ವ್ಯಕ್ತಿಯನ್ನು ನೀವು ಸ್ವೀಕರಿಸುವುದು ಹೇಗೆ? ಅವನ ಅನುರಾಗ, ಶೌರ್ಯ ಮತ್ತು ಶರಣಾಗತಿಯ ನಡುವೆ ನೀವೊಂದು ಗೆರೆಯನ್ನೆಳೆಯುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್: ಅವನನ್ನು ಅದರಿಂದ ಹೊರಕ್ಕೆ ತರಲು ನೀವು ನಿಮ್ಮಿಂದ ಸಾಧ್ಯವಾದುದನ್ನೆಲ್ಲಾ ಮಾಡಬೇಕು. ಯುಕ್ತಿ, ಶಕ್ತಿ, ಪ್ರೀತಿ; ಪ್ರೀತಿಯಿಂದ, ಯುಕ್ತಿಯಿಂದ ಮತ್ತು ಸ್ವಲ್ಪ ಶಕ್ತಿಯಿಂದ, ಹೇಗಾದರೂ ಅದರಿಂದ ಹೊರಬರಲು ನೀವು ಅವನಿಗೆ ಸಹಾಯ ಮಾಡಬೇಕು. ಅತ್ಯುತ್ತಮವಾದುದೆಂದರೆ, ಅವರನ್ನು ಒಂದು ಪುನರ್ವಸತಿಯಲ್ಲಿ ಸೇರಿಸುವುದು. ನಾವು ಕೋಲ್ಕತ್ತಾದಲ್ಲಿ ಒಂದನ್ನು ಹೊಂದಿದ್ದೇವೆ ಮತ್ತು ಎಲ್ಲೆಡೆಗಳಲ್ಲಿ ಇತರ ಹಲವಾರು ಪುನರ್ವಸತಿ ಕೇಂದ್ರಗಳಿವೆ. ಅವನನ್ನು ಅಂತಹ ಒಂದು ಕೇಂದ್ರಕ್ಕೆ ಕರೆದುಕೊಂಡು ಹೋಗು, ಅವನು ಸುದರ್ಶನ ಕ್ರಿಯೆ ಮಾಡುವಂತೆ ಮಾಡು. ಅವನು ಕ್ರಿಯೆ ಮತ್ತು ಪ್ರಾಣಾಯಾಮಗಳನ್ನು ಕಲಿತರೆ, ಅದೊಂದು ದೊಡ್ಡ ಬದಲಾವಣೆಯನ್ನುಂಟುಮಾಡುತ್ತದೆ. ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವಾಗ ಹಲವಾರು ಜನರು ಮಾದಕದ್ರವ್ಯಗಳನ್ನು ಮತ್ತು ಮದ್ಯಸಾರವನ್ನು ಬಿಟ್ಟಿದ್ದಾರೆ.

ಪ್ರಶ್ನೆ: ಗುರುದೇವ, ಈ ದಿನಗಳಲ್ಲಿ ಬಹಳಷ್ಟು ಜನರು ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ. ಒಬ್ಬರು ಈ ರೋಗವನ್ನು ಹೇಗೆ ತಡೆಯಬಹುದು? ಬಳಲುವಿಕೆಯನ್ನು ಕಡಿಮೆಮಾಡಲು ರೋಗಿ ಮತ್ತು ಅವನ ಕುಟುಂಬದ ಸದಸ್ಯರು ಏನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಜೀವನಶೈಲಿಯಲ್ಲಿ ಒಂದು ಬದಲಾವಣೆಯು ಸಹಾಯಕವಾಗಬಲ್ಲದು. ನೀವು ಮಲಗಲು ಹೋಗುವಾಗ, ನಿಮ್ಮೆಲ್ಲಾ ಇಲೆಕ್ಟ್ರೋನಿಕ್ ಸಾಧನಗಳನ್ನು ಆಫ್ ಮಾಡಿ; ನೀವು ನಿದ್ರಿಸಲು ಹೋಗುವಾಗ ನಿಮ್ಮ ಐ-ಫೋನ್, ಐ-ಪ್ಯಾಡ್‌ಗಳು, ವೈಫೈ, ಎಲ್ಲವನ್ನೂ ಆಫ್ ಮಾಡಿ. ಸುತ್ತಲೂ ಅಷ್ಟೊಂದು ವಿದ್ಯುನ್ಮಾನ (ಇಲೆಕ್ಟ್ರೋನಿಕ್) ಕಂಪನಗಳನ್ನು ಹೊಂದಿರುವುದು ಒಳ್ಳೆಯದಲ್ಲ.

ಹೆಚ್ಚಾಗಿ, ಸರಿಯಲ್ಲದ ಆಹಾರಗಳನ್ನು ನೀವು ತಿನ್ನುತ್ತೀರಿ. ನೀವು ಸಾಕಷ್ಟು ಧ್ಯಾನ ಮಾಡದಿದ್ದರೆ, ದೇಹಕ್ಕೆ ಹಾನಿಯುಂಟಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ತಿನ್ನಿ. ತ್ರಿಫಲ, ಚ್ಯವನಪ್ರಾಶ ತೆಗೆದುಕೊಳ್ಳಿ. ಅರಸಿನವನ್ನು ಬಳಸಿ; ಇವುಗಳೆಲ್ಲವೂ ಶರೀರದೊಳಕ್ಕೆ ಹೋಗಬೇಕಾದ ಉತ್ಕರ್ಷಣ ನಿರೋಧಕಗಳಾಗಿವೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್:

Hard work is always rewarded