ಶುಕ್ರವಾರ, ನವೆಂಬರ್ 30, 2012

ಐದು ಅನುಭವಗಳು

೩೦ ನವೆಂಬರ್ ೨೦೧೨
ಬೆಂಗಳೂರು

ನಿಮ್ಮ ಜೀವನದಲ್ಲಿ ನಿಜವಾಗಿ ಅರಳುವುದಕ್ಕಾಗಿ ಐದು ದಿನಗಳು ಮತ್ತು ಅನುಭವಗಳು ಬೇಕು.
ಒಂದು ದಿನವನ್ನು ನೀವು ರೈತರೊಂದಿಗೆ ಕಳೆಯಬೇಕು. ಬೆಳಗ್ಗಿನಿಂದ ರಾತ್ರಿಯ ವರೆಗೆ, ದಿನವನ್ನು ರೈತರೊಂದಿಗೆ ಕಳೆಯಿರಿ ಮತ್ತು ಅವರು ಬೀಜಗಳನ್ನು ಹೇಗೆ ಬಿತ್ತುವರು, ಗಿಡಗಳಿಗೆ ಹೇಗೆ ನೀರೆರೆಯುವರು ಮತ್ತು ಗಿಡಗಳ ಆರೈಕೆಯನ್ನು ಹೇಗೆ ಮಾಡುವರು ಎಂಬುದನ್ನು ನೋಡಿ. ಇದಕ್ಕೆ ಸಾಕ್ಷಿಯಾಗುವುದರಿಂದ ಜೀವನವು ಸಮೃದ್ಧಗೊಳ್ಳುವುದು. ಆಹಾರವನ್ನು ಹೇಗೆ ಬೆಳೆಯಲಾಗುವುದು ಮತ್ತು ರೈತರು ಎಷ್ಟೊಂದು ಶ್ರಮವಹಿಸುವರು ಎಂಬುದು ನಿಮಗೆ ತಿಳಿದಾಗ, ನೀವು ಆಹಾರವನ್ನು ಗೌರವಿಸುವಿರಿ, ನೀವು ಗಿಡಗಳನ್ನು ಗೌರವಿಸುವಿರಿ ಮತ್ತು ನೀವು ಪರಿಸರವನ್ನು ಗೌರವಿಸುವಿರಿ. ಆದುದರಿಂದ ಒಂದು ದಿನವನ್ನು ರೈತರೊಂದಿಗೆ ಕಳೆಯುವುದು ಆವಶ್ಯಕವಾಗಿದೆ.
ಒಂದು ದಿನವನ್ನು ನೀವು ಸೆರೆಮನೆಯಲ್ಲಿ ಕಳೆಯಬೇಕು. ಒಬ್ಬನು ಹೇಗೆ ತಪ್ಪಿತಸ್ಥನಾದನು ಎಂಬುದನ್ನು ನೀವು ತಿಳಿಯುವಿರಿ ಮತ್ತು ಪ್ರತಿಯೊಬ್ಬ ತಪ್ಪಿತಸ್ಥನೂ ಒಂದು ರೀತಿಯಲ್ಲಿ ಒಬ್ಬ ಬಲಿಪಶುವಾಗಿರುವನು ಎಂಬುದು ನಿಮಗೆ ತಿಳಿಯುವುದು. ಅವರಲ್ಲಿ ಯಾವುದೇ ಜ್ಞಾನವಿರಲಿಲ್ಲ, ಅವರೊಂದು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು ಮತ್ತು ಹಾಗಾಗಿ ಅವರೊಂದು ಅಪರಾಧವನ್ನೆಸಗಿದರು. ನಿಮಗೆ ಅವರ ಬಗ್ಗೆ ಬಹಳಷ್ಟು ಕರುಣೆ ಮತ್ತು ಕ್ಷಮಾಪಣಾ ಭಾವ ಉಂಟಾಗುತ್ತದೆ.
ಒಂದು ದಿನವನ್ನು ನೀವು ಒಂದು ಆಸ್ಪತ್ರೆಯಲ್ಲಿ ಕಳೆಯಬೇಕು. ಜನರು ಹೇಗೆ ಯಾತನೆಯನ್ನು ಅನುಭವಿಸುತ್ತಿರುವರು ಎಂಬುದು ನಿಮಗೆ ತಿಳಿಯುವುದು, ಆಗ ನೀವು ನಿಮ್ಮ ಸ್ವಂತ ಜೀವನವನ್ನು ಮೆಚ್ಚಿಕೊಳ್ಳುವಿರಿ. ನೀವೆಷ್ಟು ಅದೃಷ್ಟವಂತರು ಎಂಬುದನ್ನು ನೀವು ಗೌರವಿಸುವಿರಿ. ನಿಮ್ಮಲ್ಲಿ ಕರುಣೆ ಬರುವುದು ಮತ್ತು ನಿಮ್ಮ ಜೀವನವನ್ನು ಉತ್ತಮ ಬಳಕೆಗಾಗಿ ಮುಡಿಪಾಗಿಡಬೇಕೆಂಬುದನ್ನು ನೀವು ನೋಡುವಿರಿ. ನೀವು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗುವಿರಿ. ಆದುದರಿಂದ, ಒಂದು ದಿನ ಆಸ್ಪತ್ರೆಯಲ್ಲಿ ಇರುವುದು ನಿಮಗೆ ಅದನ್ನು ನೀಡುತ್ತದೆ.
ಒಂದು ದಿನವನ್ನು ನೀವು ಮಾನಸಿಕ ಆಸ್ಪತ್ರೆಯಲ್ಲಿ ಕಳೆಯಬೇಕು. ನೀವು ಒಂದು ದಿನವನ್ನು ಮಾನಸಿಕ ಆಸ್ಪತ್ರೆಯಲ್ಲಿ ಕಳೆದರೆ, ಅವರು ನಿಮ್ಮನ್ನು ಹೇಗೆ ಬಯ್ಯುವರು ಮತ್ತು ಅವರು ನಿಮ್ಮೊಂದಿಗೆ ಹೇಗೆ ಮಾತನಾಡುವರು ಎಂಬುದನ್ನು ನೀವು ನೋಡುವಿರಿ. ನಿಮ್ಮ ತಪ್ಪಿಲ್ಲದೆಯೇ ನೀವು ಬೈಗುಳವನ್ನು ಪಡೆಯುವಾಗ, ಸಂಪೂರ್ಣ ಪ್ರಪಂಚವಿರುವುದೇ ಹೀಗೆ ಎಂಬುದು ನಿಮಗೆ ಅರ್ಥವಾಗುತ್ತದೆ. ಆಗ ನಿಮಗೆ ಕೋಪ ಬರುವುದಿಲ್ಲ. ’ನಾನು’, ’ನನಗೆ’, ’ಅದು ನನಗೆ ತಿಳಿದಿದೆ’ ಎಂದು ಹೇಳುವ ಆ ಅಹಂಕಾರವು ಹಾಗೆಯೇ ಕರಗುತ್ತದೆ. ಕೇವಲ ಒಂದು ದಿನದ ಮಟ್ಟಿಗೆ ನೀವೊಬ್ಬ ಹುಚ್ಚನಂತೆ ವರ್ತಿಸಿದರೆ, ನೀವು ಬಹಳ ಸಹಜವಾಗುವಿರಿ. ’ನಾನು ಇಂತಿಂತಹವನು' ಎಂಬುದಾಗಿ ನೀವು ನಿಮ್ಮ ಸುತ್ತಲೂ ಕಟ್ಟಿರುವ ಅಹಂಕಾರದ ಎಲ್ಲಾ ಗೋಡೆಗಳೂ ಹಾಗೆಯೇ ಬಿದ್ದು ಹೋಗುವುವು. ನಂತರ ನಿಮಗೆ ಜನರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಮತ್ತು ನೀವು ಎಲ್ಲರೊಂದಿಗೆ ಬೆರೆಯುವಿರಿ. ಯಾರಿಗೂ ನಿಮ್ಮನ್ನು ಕಂಗೆಡಿಸಲು ಸಾಧ್ಯವಾಗದು, ಯಾಕೆಂದರೆ, ಪ್ರಪಂಚವು ಒಂದು ಮಾನಸಿಕ ಆಸ್ಪತ್ರೆಯಂತೆ ಎಂಬುದು ನಿಮಗೆ ತಿಳಿದಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಪ್ರಪಂಚದಲ್ಲಿ ಜೀವಿಸುತ್ತಿರುತ್ತಾರೆ ಮತ್ತು ತಾವು ಮಾತ್ರ ಸರಿಯೆಂದು ಅವರು ಯೋಚಿಸುತ್ತಾರೆ.
ನೀವು ಇಸ್ರೇಲಿಗೆ ಹೋದರೆ, ಇಸ್ರೇಲಿನ ಮಾನಸಿಕ ಆಸ್ಪತ್ರೆಗಳಲ್ಲಿ ’ಜೆರುಸಲೇಂ ಖಾಯಿಲೆ’ ಎಂದು ಕರೆಯಲ್ಪಡುವ ಒಂದು ವಿಭಾಗವಿರುವುದು  ನಿಮಗೆ ಕಂಡುಬರುತ್ತದೆ. ಕೆಲವೊಮ್ಮೆ ಜನರು ಯಾತ್ರಿಗಳಾಗಿ ಬರುವಾಗ, ಅವರು ಜೆರುಸಲೇಂಗೆ ಬರುತ್ತಾರೆ ಹಾಗೂ ಇದ್ದಕ್ಕಿದ್ದಂತೆ ಅವರಿಗೆ ತಾವು ಯೇಸುಕ್ರಿಸ್ತನೆಂದು ಅಥವಾ ತಾವು ಮೇರಿ ಮ್ಯಾಗ್ದಲೀನ್ ಎಂದು ಅಥವಾ ಅಂತಹ ಒಂದು ಪಾತ್ರವೆಂದು ಅನ್ನಿಸುತ್ತದೆ ಮತ್ತು ಹಾಗೆ ವರ್ತಿಸಲು ತೊಡಗುತ್ತಾರೆ. ಅದಕ್ಕಾಗಿ ಈ ಜನರನ್ನು ’ಜೆರುಸಲೇಂ ಖಾಯಿಲೆ’ ಎಂದು ಕರೆಯಲ್ಪಡುವ ಈ ವಿಭಾಗಕ್ಕೆ ಸೇರಿಸಲಾಗುತ್ತದೆ. ಅವರು ಹುಚ್ಚರಂತಾಗಿಬಿಡುತ್ತಾರೆ.
ಆದುದರಿಂದ ನೀವು ಮಾನಸಿಕ ಆಸತ್ರೆಗೆ ಹೋದಾಗ, ನಿಮಗೆ ನಿಮ್ಮದೇ ಮನಸ್ಸಿನ ಬಗ್ಗೆ ಹೆಚ್ಚು ಅರ್ಥವಾಗುತ್ತದೆ. ಈ ಅನುಭವವು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ. ನೀವು ಟೀಕೆಗೆ ಪ್ರತಿರೋಧಕ ಶಕ್ತಿಯನ್ನು ಪಡೆಯುವಿರಿ. ಯಾರಾದರೂ ನಿಮ್ಮನ್ನು ಟೀಕಿಸಿದರೆ, ನೀವು ಕುಸಿದು ಬೀಳಲಾರಿರಿ. ಹೆಚ್ಚಾಗಿ ಜನರಿಗೆ ಟೀಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಪಂಚದಲ್ಲಿರುವ ಜನರು ಹುಚ್ಚರೆಂಬುದು ಅವರಿಗೆ ಅರ್ಥವಾಗುವುದಿಲ್ಲ. ಆದುದರಿಂದ ಒಂದು ಮಾನಸಿಕ ಆಸ್ಪತ್ರೆಯಲ್ಲಿ ಕೇವಲ ಒಂದು ದಿನ ಇರುವುದರಿಂದ, ನೀವು ಎದುರಿಸುವ ಎಲ್ಲಾ ಟೀಕೆಗಳಿಗೂ ಕಿರುನಗೆ ಬೀರುವ ಸಾಮರ್ಥ್ಯವು ನಿಮಗೆ ದೊರಕುತ್ತದೆ.
ನಂತರ, ನೀವು ಒಂದು ದಿನವನ್ನು ಒಂದು ಶಾಲೆಯಲ್ಲಿ ಕಳೆಯಬೇಕು. ಒಂದು ಶಾಲೆಯಲ್ಲಿ ಒಂದು ದಿನ; ನೀವು ಎಲ್ಲಿಂದ ಎಲ್ಲಿಗೆ ಹೋಗಿರುವಿರಿ ಎಂಬುದು ನಿಮಗೆ ತಿಳಿಯುವುದು. ನೀವು ನಿಮ್ಮದೇ ಬೆಳವಣಿಗೆಯನ್ನು ಮರುಮಾಪನ ಮಾಡುವಿರಿ. ನೀವು ತಾಳ್ಮೆಯನ್ನು ಕಲಿಯುವಿರಿ. ಮಕ್ಕಳೊಂದಿಗೆ ಎಷ್ಟು ತಾಳ್ಮೆಯಿಂದ ವ್ಯವಹರಿಸಬೇಕು ಎಂಬುದನ್ನು ನೀವು ನೋಡುವಿರಿ ಮತ್ತು ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸುವಿರಿ. ಮಕ್ಕಳೊಂದಿಗೆ ನೀವು ಹೇಗೆ ವ್ಯವಹರಿಸುವಿರೋ, ಹಾಗೆಯೇ ನೀವು ಪ್ರಪಂಚದಲ್ಲಿರುವ ಎಲ್ಲಾ ಜನರೊಂದಿಗೂ ವ್ಯವಹರಿಸಬೇಕು.
ಆದುದರಿಂದ, ನಿಮ್ಮ ಜೀವನದ ಈ ಐದು ದಿನಗಳು ನಿಮಗೆ ಬಹಳ ಸಮೃದ್ಧವಾದ ಒಂದು ಅನುಭವವಾಗಬಹುದು.
ನಿಮಗೆ ಈ ಐದು ದಿನಗಳನ್ನು ಮಾಡಲು ಸಾಧ್ಯವಿಲ್ಲವಾದರೆ, ಆಶ್ರಮದಲ್ಲಿ ಒಂದು ದಿನವಿದ್ದರೆ ಸಾಕು. ನೀವು ಸುತ್ತಮುತ್ತ ನಡೆದಾಡಿ ಮತ್ತು ನಿಮಗೆ ಹಲವಾರು ಹುಚ್ಚರು ಕಂಡುಬರುವರು.
ಇಲ್ಲೊಂದು ಶಾಲೆಯಿದೆ, ಇಲ್ಲಿ ರೈತರಿದ್ದಾರೆ, ನೀವು ಹೋಗಿ ಸ್ವಲ್ಪ ವ್ಯವಸಾಯ ಮಾಡಬಹುದು. ಇಲ್ಲಿ ಆಸ್ಪತ್ರೆಯಿದೆ, ನೀವು ಹೋಗಿ ಅಲ್ಲಿರುವ ಜನರ ಆರೈಕೆ ಕೂಡಾ ಮಾಡಬಹುದು ಮತ್ತು ನಿಮಗೆ ಬೇಕಿದ್ದರೆ, ನೀವೊಂದು ಸೆರೆಮನೆಯಲ್ಲಿರುವುದಾಗಿ ಭಾವಿಸಲೂಬಹುದು.
ಆದುದರಿಂದ, ಸೆರೆಮನೆಯನ್ನು ಹೊರತುಪಡಿಸಿ, ಇತರ ಎಲ್ಲಾ ನಾಲ್ಕು ಅನುಭವಗಳು ನಿಮಗೆ ಇಲ್ಲಿ ಸಿಗಬಹುದು. ಒಂದು ದಿನ ಸಾಕು.
ಮುಂಚಿನ ದಿನಗಳಲ್ಲಿ, ನಾವು ಆಶ್ರಮವನ್ನು ಪ್ರಾರಂಭಿಸಿದಾಗ, ನೀವು ಒಮ್ಮೆ ಆಶ್ರಮಕ್ಕೆ ಬಂದರೆ ನಗರಕ್ಕೆ ಮರಳಿ ಹೋಗಲು ಯಾವುದೇ ವಾಹನ ಸೌಕರ್ಯ ಇರಲಿಲ್ಲ. ಈ ಮಾರ್ಗದಲ್ಲಿ ಕೇವಲ ಎರಡೇ ಬಸ್ಸುಗಳು ಚಲಿಸುತ್ತಿದ್ದವು. ಒಂದು ಬೆಳಗ್ಗೆ ೧೧ ಗಂಟೆಗೆ ಮತ್ತು ಇನ್ನೊಂದು ಬಸ್ಸು ಸಂಜೆ ೫ ಗಂಟೆಗೆ. ಯಾವುದೇ ಆಟೋ ರಿಕ್ಷಾಗಳಿರಲಿಲ್ಲ, ಯಾವುದೇ ಬಾಡಿಗೆ ಕಾರುಗಳಿರಲಿಲ್ಲ, ಏನೂ ಇರಲಿಲ್ಲ. ಆರಂಭದ ದಿನಗಳಲ್ಲಿ ಆಶ್ರಮಕ್ಕೆ ಬರುತ್ತಿದ್ದವರಿಗೆ ಸಿಕ್ಕಿಬಿದ್ದಂತೆ ಅನ್ನಿಸುತ್ತಿತ್ತು. ಬೆಳಗ್ಗೆ ನೀವು ೧೧ ಗಂಟೆಗೆ ಬಂದಿರುವಿರಿ ಮತ್ತು ನಿಮಗೆ ಸಂಜೆಯಾಗುವಲ್ಲಿಯ ವರೆಗೆ ಮರಳಿ ಹೋಗಲು ಸಾಧ್ಯವಿಲ್ಲ ಯಾಕೆಂದರೆ, ಯಾವುದೇ ಬಸ್ಸುಗಳಾಗಲೀ ಅಥವಾ ಬಾಡಿಗೆ ಕಾರುಗಳಾಗಲೀ ಅಥವಾ ಯಾವುದೇ ಸಾರಿಗೆ ಸೌಕರ್ಯವಾಗಲೀ ಇರಲಿಲ್ಲ.
ಹಾಗೆಯೇ, ಕೇವಲ ಚಹಾ ಮಾತ್ರ ಮತ್ತು ಬಹುಶಃ ಕಾಫಿಯನ್ನು ಕೂಡಾ ಒದಗಿಸುತ್ತಿದ್ದ ಒಂದು ಚಿಕ್ಕ ಚಹಾ ಅಂಗಡಿಯನ್ನು ಬಿಟ್ಟರೆ, ಇಲ್ಲಿ ಸುತ್ತುಮುತ್ತಲೆಲ್ಲೂ ಯಾವುದೇ ಅಂಗಡಿಗಳಿರಲಿಲ್ಲ. ಆಶ್ರಮದ ಹೊರಗೆ ಒಂದು ಚಿಕ್ಕ ಹುಲ್ಲು ಛಾವಣಿಯಿತ್ತು, ಅಷ್ಟೇ. ಬೇರೇನೂ ಲಭ್ಯವಿರಲಿಲ್ಲ. ಒಂದೇ ಒಂದು ಅಂಗಡಿಯೂ ಇರಲಿಲ್ಲ. ಆದರೆ ನೀವು ಆ ಅವಕಾಶವನ್ನು ತಪ್ಪಿಸಿಕೊಂಡಿರಿ. ತುಂಬಾ ತಡವಾಯಿತು!

ಜಿಜ್ಞಾಸೆ

೩೦ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆಗಳನ್ನು ಕೇಳುವ ಆರು ರೀತಿಯ ಜನರಿರುತ್ತಾರೆ.
ಪ್ರಶ್ನೆಗಳನ್ನು ಕೇಳುವ ಮೊದಲನೆಯ ರೀತಿಯ ವ್ಯಕ್ತಿಯೆಂದರೆ, ಯಾರು ದುಃಖಿತನಾಗಿರುವನೋ ಅಥವಾ ಅಸಂತೋಷದಲ್ಲಿರುವನೋ ಅವನು. ಅಸಂತೋಷದಲ್ಲಿರುವ ಜನರು ಪ್ರಶ್ನೆಗಳನ್ನು ಕೇಳುತ್ತಾರೆ ಆದರೆ ಅವರು ಉತ್ತರಗಳನ್ನು ಕೇಳಿಸಿಕೊಳ್ಳುವುದಿಲ್ಲ. ಇದೊಂದು ವಾಸ್ತವ, ನೀವಿದನ್ನು ಅನುಭವಿಸಲಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ನಿಮ್ಮ ಜೀವನದಲ್ಲಿ ಅನುಭವಿಸಿರುವಿರಿ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ವಯಸ್ಸಾದವರು, ವಿಶೇಷವಾಗಿ ಅವರಿಗೆ ವಯಸ್ಸಾಗಿ ಮನೆಯಲ್ಲಿರುವಾಗ, ಯಾತನೆ ಪಡುವಾಗ, ಅವರನ್ನುತ್ತಾರೆ, "ಓ ನನಗೆ ಈ ಸಮಸ್ಯೆಯಿದೆ, ದೇವರಿಗೆ ಯಾಕೆ ನನ್ನ ಮೇಲೆ ಕರುಣೆಯಿಲ್ಲ? ಈ ಸಮಸ್ಯೆ ಯಾಕೆ?"
ಅವರು ಈ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅದಕ್ಕಾಗಿ ಅವರು ನಿಮ್ಮಿಂದ ಒಂದು ಉತ್ತರವನ್ನು ನಿರೀಕ್ಷಿಸುವುದು ಕೂಡಾ ಇಲ್ಲ. ನೆನಪಿದೆಯೇ?! ಅವರು ಸುಮ್ಮನೇ ಪ್ರಶ್ನೆಗಳನ್ನು ಕೇಳುತ್ತಾರೆ, "ನಾನು ಯಾಕೆ ಯಾತನೆ ಪಡುತ್ತಿರುವೆ? ನಾನು ಎಲ್ಲಾ ಒಳ್ಳೆಯದನ್ನೇ ಮಾಡಿದೆ, ಈ ಯಾತನೆ ಯಾಕೆ ನನಗೆ?"
ಆದುದರಿಂದ, ದುಃಖದಲ್ಲಿದ್ದರೂ ಅಥವಾ ಅಸಂತೋಷವಾಗಿದ್ದರೂ ಜನರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ಅವರು ಒಂದು ಉತ್ತರವನ್ನು ನಿರೀಕ್ಷಿಸುತ್ತಿಲ್ಲ, ಮತ್ತು ನೀವೊಂದು ಉತ್ತರವನ್ನು ನೀಡಿದರೆ ಆಗ ನೀವು ಮೂರ್ಖರು. ನೀವು ಸುಮ್ಮನಿರಬೇಕು. ಕೇವಲ ಅವರಿಗೆ ಮುಗುಳ್ನಗೆ ಬೀರಿ. ನೀವು ಕೇವಲ ಅವರೊಂದಿಗಿರುವುದಷ್ಟೇ ಸಾಕು ಅವರಿಗೆ.
ಒಂದು ಕುಟುಂಬದಲ್ಲಿ ಒಂದು ಸಾವುಂಟಾದಾಗ, ಜನರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ, "ಇದು ಯಾಕಾಯಿತು?" ಮತ್ತು ನಿಮಗೆ ಹೇಳಲು ಏನೂ ಇರುವುದಿಲ್ಲ. ನಿಮಗೇನಾದರೂ ಹೇಳಲು ಇರುತ್ತದೆಯೇ? ಇಲ್ಲ, ಹೇಳಲು ಏನೂ ಇರುವುದಿಲ್ಲ. ಆದುದರಿಂದ ನಿಮ್ಮ ಸರಳವಾದ ಸಾನ್ನಿಧ್ಯವಿದ್ದರೆ ಸಾಕು. ಅವರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಡಿ, ತಿಳಿಯಿತೇ?!
ಹಾಗೆಯೇ, ದೇವರ ಪರ ವಕೀಲರಾಗಬೇಡಿ ಅಥವಾ ಅವರು ದೇವರ ವಿರುದ್ಧವಾಗುವಂತೆ ಮಾಡಬೇಡಿ. ಸಾಧಾರಣವಾಗಿ ಜನರು, "ದೇವರು ನಿನ್ನೊಂದಿಗೆ ಕ್ರೂರವಾಗಿದ್ದಾನೆ, ಪ್ರಕೃತಿಯು ನಿನ್ನೊಂದಿಗೆ ಬಹಳ ಕಠೋರವಾಗಿದೆ, ಇದು ಆಗಬಾರದಾಗಿತ್ತು" ಈ ಎಲ್ಲವನ್ನೂ ಹೇಳುತ್ತಾರೆ. ಅದು ಅವರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ.
ಆದುದರಿಂದ ದುಃಖಿತರಾದ ಮತ್ತು ದೀನರಾದ ಜನರು ಪ್ರಶ್ನೆಗಳನ್ನು ಕೇಳುವಾಗ, ನೀವು ಹಾಗೆಯೇ ಸುಮ್ಮನಿರಬೇಕು.
ಪ್ರಶ್ನೆಗಳನ್ನು ಕೇಳುವ ಎರಡನೆಯ ರೀತಿಯ ಜನರು ಯಾರೆಂದರೆ, ಕ್ರೋಧದಲ್ಲಿರುವವರು; ತಮಗೆ ಅನ್ಯಾಯವಾಗಿದೆಯೆಂದು ಯಾರಿಗೆ ಅನ್ನಿಸುವುದೋ ಅವರು. ಅವರು ಬಹಳ ಕೋಪದಲ್ಲಿರುತ್ತಾರೆ ಮತ್ತು ಅವರು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಯಾವುದೇ ಉತ್ತರವನ್ನು ಕೇಳಿಸಿಕೊಳ್ಳಲು ತಯಾರಿರುವುದಿಲ್ಲ, ಯಾಕೆಂದರೆ ಒಬ್ಬ ವ್ಯಕ್ತಿಯು ಕೋಪದಲ್ಲಿರುವಾಗ ಮನಸ್ಸು ಅದಾಗಲೇ ಮುಚ್ಚಿರುತ್ತದೆ. ಬುದ್ಧಿಯು ಕೆಲಸ ಮಾಡುತ್ತಿರುವುದಿಲ್ಲ. ಭಾವನೆಯು ಅಧಿಕಾರದಲ್ಲಿರುತ್ತದೆ. ಆ ಪರಿಸ್ಥಿತಿಯಲ್ಲಿ, ಅವರನ್ನು ಶಾಂತರಾಗಲು ಬಿಡುವುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗದಿರುವುದು ಒಳ್ಳೆಯದು. ಒಬ್ಬ ಕ್ರೋಧದಲ್ಲಿರುವ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸುವುದು ನಿಷ್ಪ್ರಯೋಜಕ.
ಪ್ರಶ್ನೆಗಳನ್ನು ಕೇಳುವ ಮೂರನೆಯ ರೀತಿಯ ಜನರು ಯಾರೆಂದರೆ, ತಮ್ಮ ಇರುವಿಕೆಯನ್ನು ತೋರಿಸಲಿಕ್ಕಾಗಿ ಮಾತ್ರ ಪ್ರಶ್ನೆಗಳನ್ನು ಕೇಳುವವರು, ಅವರಿಗೆ ಒಂದು ಉತ್ತರದಲ್ಲಿ ಆಸಕ್ತಿಯಿಲ್ಲ. "ನಾನಿಲ್ಲಿರುವೆನು, ನೀವು ನನ್ನನ್ನು ಗುರುತಿಸಿರುವಿರಾ?", ಅವರು ತಿಳಿಯಲು ಬಯಸುವುದು ಅದನ್ನು ಮಾತ್ರ, ಅವರಿಗೆ ಒಂದು ಉತ್ತರದಲ್ಲಿ ಆಸಕ್ತಿಯೇ ಇಲ್ಲ. ನೀವು ಅವರ ಪ್ರಶ್ನೆಗೆ ಉತ್ತರಿಸಿದರೆ, ಅವರು ಬೇರೆಲ್ಲೋ ನೋಡುತ್ತಾರೆ, ಅಥವಾ ಅವರು ಬೇರೇನನ್ನೋ ಮಾಡುತ್ತಿರಬಹುದು. ಯಾಕೆಂದರೆ ಅವರಿಗೆ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುವುದು ಬಹಳ ಮುಖ್ಯವಾಗುತ್ತದೆಯಾದುದರಿಂದ ಅವರೊಂದು ಪ್ರಶ್ನೆಯನ್ನು ಕೇಳುತ್ತಾರೆ. ಇವರು ಮೂರನೆಯ ರೀತಿಯ ಜನರು.
ನೀವೊಬ್ಬರು ಶಾಲಾ ಶಿಕ್ಷಕರಾಗಿದ್ದರೆ ನಿಮಗೆ ಈ ಅನುಭವವಿರಬಹುದು. ಒಬ್ಬರು ಕಾಲೇಜು ಶಿಕ್ಷಕರು ಇದರ ಬಗ್ಗೆ ಬರೆದಿದ್ದಾರೆ, ಕಾಲೇಜಿನಲ್ಲಿ ಕೆಲವೊಮ್ಮೆ ಜನರು ತಾವು ಬುದ್ಧಿವಂತರೆಂಬುದನ್ನು ಹಾಗೂ ತಾವು ತರಗತಿಯಲ್ಲಿ ಇರುವೆವೆಂಬುದನ್ನು ತೋರಿಸುವುದಕ್ಕಾಗಿ ಮಾತ್ರ ಎದ್ದು ನಿಲ್ಲುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ಐ.ಐ.ಟಿಯಲ್ಲಿ ಇದು ಯಾವಾಗಲೂ ಆಗುವುದಿಲ್ಲವೇ? ಒಬ್ಬರು ಸುಮ್ಮನೇ ಎದ್ದು ನಿಂತು ಪ್ರಶ್ನಿಸುತ್ತಾರೆ.
ನಾಲ್ಕನೆಯ ರೀತಿಯ ಜನರೆಂದರೆ, ತಮಗೆ ಉತ್ತರ ತಿಳಿದಿದೆಯೆಂದು ಭಾವಿಸುವವರು ಆದರೆ, ಇನ್ನೊಬ್ಬನಿಗೆ ಉತ್ತರ ತಿಳಿದಿದೆಯೇ ಇಲ್ಲವೇ ಎಂದು ಪರೀಕ್ಷಿಸುವುದಕ್ಕಾಗಿ ಮಾತ್ರ ಬರುವವರು. "ನನಗೆ ಎಲ್ಲಾ ಉತ್ತರಗಳು ತಿಳಿದಿವೆ, ಆದರೆ ಈ ವ್ಯಕ್ತಿಗೆ ಉತ್ತರ ತಿಳಿದಿದೆಯೇ ಇಲ್ಲವೇ ಎಂದು ನಾನು ಅವನನ್ನು ಪರೀಕ್ಷಿಸಲು ಬಯಸುತ್ತೇನೆ" ಎಂಬಂತೆ. ಅಂತಹ ಜನರೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ.
ಪ್ರಶ್ನೆಗಳನ್ನು ಕೇಳುವ ಐದನೆಯ ರೀತಿಯ ಜನರೆಂದರೆ, ಅವರಿಗೆ ಒಂದು ಆಳವಾದ ಅನುಭವವಾಗಿದೆ ಮತ್ತು ಅವರು ಅದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. "ನಾನು ಧ್ಯಾನ ಮಾಡಿದೆ ಮತ್ತು ಈ ಎಲ್ಲಾ ಸಂವೇದನೆಗಳಾಗುವುದನ್ನು ಅನುಭವಿಸಿದೆ. ಅದೇನಾಗಿತ್ತು? ನಾನು ಅದರ ಬಗ್ಗೆ ಹೆಚ್ಚು ತಿಳಿಯಲು ಬಯಸುತ್ತೇನೆ."
"ನಾನು ಧ್ಯಾನ ಮಾಡಿದಾಗ ನಾನು ಪ್ರಕಾಶವನ್ನು ನೋಡಿದೆ ಮತ್ತು ಅಲ್ಲಿ ಈ ಸುಂದರವಾದ ಪರಿಮಳವಿತ್ತು. ನಾನು ಇದರ ಬಗ್ಗೆ ತಿಳಿಯಲು ಬಯಸುತ್ತೇನೆ. ನಾನು ಪ್ರಕ್ರಿಯೆಯನ್ನು ಸರಿಯಾಗಿ ಮಾಡುತ್ತಿರುವೆನೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ಈ ಅನುಭವದ ಅರ್ಥವೇನು?"
ಒಂದು ಅನುಭವವಾದ ನಂತರ ಪ್ರಶ್ನೆಗಳನ್ನು ಕೇಳುವುದು, ಯಾಕೆಂದರೆ ಅನುಭವ ಮತ್ತು ತಿಳಿದುಕೊಳ್ಳುವುದು ಜೊತೆಯಲ್ಲಿ ಸಾಗಬೇಕು. ಕೆಲವು ಜನರಿಗೆ ಮೊದಲ ಸಾರಿ ಅನುಭವವಾದಾಗ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಅದಕ್ಕಾಗಿ ಅವರು ಪ್ರಶ್ನೆಗಳನ್ನು ಕೇಳುತ್ತಾರೆ.
ಪ್ರಶ್ನೆಗಳನ್ನು ಕೇಳುವ ಆರನೆಯ ವಿಧದ ಜನರನ್ನು ಜಿಜ್ಞಾಸುಗಳೆಂದು ಕರೆಯುತ್ತಾರೆ. ಅವರ ಮನಸ್ಸಿನಾಳದಲ್ಲಿ ಸತ್ಯವನ್ನು ತಿಳಿಯುವ, ವಾಸ್ತವವನ್ನು ತಿಳಿಯುವ ಒಂದು ತೀವ್ರ ದಾಹವಿರುತ್ತದೆ ಮತ್ತು ಯಾರಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿರುವೆವೋ ಅವರಲ್ಲಿ ಅವರಿಗೆ ನಂಬಿಕೆಯಿರುತ್ತದೆ; ಈ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬುದಾಗಿ ಹಾಗೂ ಅದರಿಂದಾಗಿ ಅವರು ಅವರಲ್ಲಿಗೆ ಹೋಗಿ ಪ್ರಶ್ನೆ ಕೇಳುತ್ತಾರೆ.
ಔಷಧಿಗೆ ಸಂಬಂಧಿಸಿದ ಪ್ರಶ್ನೆಯನ್ನು ನೀವು ಮನೆ ಕೆಲಸದಾಕೆಯಲ್ಲಿ ಕೇಳುವುದಿಲ್ಲ. ಒಬ್ಬಳು ನಿಮ್ಮ ನೆಲವನ್ನು ಗುಡಿಸುತ್ತಿರುತ್ತಾಳೆ ಮತ್ತು ಅವಳು ನಿಮ್ಮ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುತ್ತಾಳೆ, ನೀವು ಹೋಗಿ ಅವಳಲ್ಲಿ ನೀವು ಯಾವ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಕೇಳುವುದಿಲ್ಲ ಯಾಕೆಂದರೆ ಅವಳಿಗೆ ತಿಳಿದಿರಲಾರದು ಎಂಬುದು ನಿಮಗೆ ತಿಳಿದಿದೆ. ನಿಮಗೆ ಖಾಯಿಲೆ ಬಂದಾಗ, ನೀವೊಬ್ಬರು ವೈದ್ಯರ ಬಳಿಗೆ ಹೋಗುತ್ತೀರಿ ಮತ್ತು ಅವರಲ್ಲಿ ಕೇಳುತ್ತೀರಿ ಯಾಕೆಂದರೆ ಅವರಿಗೆ ತಿಳಿದಿದೆಯೆಂಬುದು ನಿಮಗೆ ತಿಳಿದಿದೆ.
ಆದುದರಿಂದ ಆ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬ ವಿಶ್ವಾಸ ನಿಮ್ಮಲ್ಲಿರುವಾಗ ಮತ್ತು ನೀವು ನಿಮ್ಮ ಪ್ರಶ್ನೆಯನ್ನು ಆ ವ್ಯಕ್ತಿಗೆ ಕೇಳಲು ಬಯಸುವಾಗ, ಉತ್ತರವನ್ನು ತೆಗೆದುಕೊಳ್ಳಲು ನೀವು ಸಿದ್ಧರಿರುವಿರಿ.
ನಿಮಗೆ ತಿಳಿಯದು, ನೀವು ತಿಳಿಯಲು ಬಯಸುವಿರಿ ಮತ್ತು ಯಾವ ವ್ಯಕ್ತಿಯಲ್ಲಿ ನೀವು ಪ್ರಶ್ನೆಯನ್ನು ಕೇಳಬೇಕೆಂದಿರುವಿರೋ ಆ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬುದು ನಿಮಗೆ ಖಚಿತವಿದೆ - ಇಂತಹ ಒಂದು ಪರಿಸ್ಥಿತಿಯಲ್ಲಿ; ಈ ಮೂರು ಅಂಶಗಳು ಇರುವಾಗ, ಅಲ್ಲಿ ಜಿಜ್ಞಾಸೆಯಿರುತ್ತದೆ - ವಿಚಾರಿಸುವ ನಿಜವಾದ ಉತ್ಸಾಹ.
ವಿಮಾನ ನಿಲ್ದಾಣಕ್ಕೆ ಹೋಗುವುದು ಹೇಗೆಂದು ನೀವೊಬ್ಬ ಕಸಗುಡಿಸುವವನಲ್ಲಿ ಕೇಳುವುದಿಲ್ಲ. ಒಂದು ವಾಹನ ಚಲಾಯಿಸುವುದು ಹೇಗೆಂದು ಅಥವಾ ಒಂದು ಔಷಧಿಯನ್ನು ಕೊಡುವುದು ಹೇಗೆಂದು ನೀವೊಬ್ಬ ತೋಟಗಾರನ ಬಳಿಗೆ ಹೋಗಿ ಕೇಳುವುದಿಲ್ಲ. ಅವರಿಗೆ ತಿಳಿಯದೆಂಬುದು ನಿಮಗೆ ತಿಳಿದಿರುತ್ತದೆ ಯಾಕೆಂದರೆ, ಅವರಿಗೆ ಏನು ತಿಳಿದಿರುತ್ತದೆಯೆಂಬುದರ ಬಗ್ಗೆ ನಿಮಗೊಂದು ಕಲ್ಪನೆಯಿರುತ್ತದೆ. ನೀವೊಬ್ಬ ತೋಟಗಾರನ ಬಳಿಗೆ ಹೋಗಿ ಅವನಲ್ಲಿ ಅವನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುವಾಗ, ಅವನಿಗೆ ಉತ್ತರ ತಿಳಿದಿರುತ್ತದೆಯೆಂಬುದು ನಿಮಗೆ ತಿಳಿದಿರುತ್ತದೆ.
ಆದುದರಿಂದ, ಈ ವ್ಯಕ್ತಿಗೆ ಉತ್ತರ ತಿಳಿದಿದೆ ಮತ್ತು ನನಗೆ ಉತ್ತರ ತಿಳಿದಿಲ್ಲವೆಂಬುದನ್ನು ತಿಳಿದುಕೊಂಡು, ನಂತರ ಪ್ರಶ್ನೆ ಕೇಳುವುದು - ಅವನೊಬ್ಬ ನಿಜವಾದ ಅನ್ವೇಷಕ. ಇದು ಪ್ರಶ್ನೆಗಳನ್ನು ಕೇಳುವ ಜನರಲ್ಲಿನ ಆರನೆಯ ವಿಧ.
ಭಾರತದಲ್ಲಿರುವ ನಮ್ಮ ಶಾಸ್ತ್ರಗಳೆಲ್ಲಾ, ನಮ್ಮ ಧರ್ಮಗ್ರಂಥಗಳೆಲ್ಲಾ ಒಂದು ಪ್ರಶ್ನೆಯೊಂದಿಗೆ ಪ್ರಾರಂಭವಾಗಿವೆ. ಯಾವ ರೀತಿಯ ಪ್ರಶ್ನೆ? ಮೊದಲನೆಯ ರೀತಿಯದಲ್ಲ, ಎರಡನೆಯ ರೀತಿಯದಲ್ಲ, ಮೂರನೆಯ ರೀತಿಯದಲ್ಲ, ನಾಲ್ಕನೆಯ ರೀತಿಯದಲ್ಲ, ಐದನೆಯ ರೀತಿಯದಲ್ಲ, ಆದರೆ ಆರನೆಯ ರೀತಿಯ ಪ್ರಶ್ನೆ - ನನಗೆ ತಿಳಿಯದು, ನಾನು ತಿಳಿಯಲು ಬಯಸುತ್ತೇನೆ ಮತ್ತು ಈ ವ್ಯಕ್ತಿಗೆ ತಿಳಿದಿದೆ, ಆದುದರಿಂದ ನಾನು ಅವನಲ್ಲಿ ಪ್ರಶ್ನೆಯನ್ನು ಕೇಳುತ್ತೇನೆ. ಧರ್ಮಗ್ರಂಥಗಳಲ್ಲಿನ ಎಲ್ಲಾ ಜ್ಞಾನವೂ ವಿಚಾರಣೆಯ ಒಂದು ನಿಜವಾದ ಉತ್ಸಾಹದಿಂದ, ಪ್ರಶ್ನೆಗಳ ಮೂಲಕ ಪ್ರಾರಂಭವಾದವು.
ಒಮ್ಮೆ ಒಬ್ಬರು ಒಂದು ರೈಲು ನಿಲ್ದಾಣದಲ್ಲಿ ನಿಂತಿದ್ದರು ಮತ್ತು ಬಂದು ಹೋದ ಪ್ರತಿಯೊಂದು ರೈಲಿನ ಬಗ್ಗೆಯೂ ಟಿಕೆಟ್ ಕಲೆಕ್ಟರರಲ್ಲಿ ಕೇಳುತ್ತಾ ಇದ್ದರು. ಟಿಕೆಟ್ ಕಲೆಕ್ಟರರು ಮೂರರಿಂದ ನಾಲ್ಕು ಸಾರಿ ಅವರಿಗೆ ಉತ್ತರಿಸಿದರು ಮತ್ತು ಕಡೆಗೆ ಅವರಿಗೆ ಎಷ್ಟೊಂದು ಬಳಲಿತೆಂದರೆ ಅವರು, "ಬನ್ನಿ, ನಿಮಗೆ ಎಲ್ಲಿಗೆ ಹೋಗಬೇಕೆಂದು ಮಾತ್ರ ಹೇಳಿ" ಎಂದು ಹೇಳಿದರು. ಆ ವ್ಯಕ್ತಿಯಂದರು, "ಎಲ್ಲಿಗೂ ಇಲ್ಲ, ನಾನು ಕೇವಲ ಇನ್ನೊಂದು ಬದಿಗೆ ದಾಟಬೇಕು." ಆದುದರಿಂದ, ನಿಮಗೆ ಕೇವಲ ಇನ್ನೊಂದು ಬದಿಗೆ ದಾಟಬೇಕಿದ್ದರೆ, ನೀವು ಅಪ್ರಸ್ತುತ ಪ್ರಶ್ನೆಗಳನ್ನು ಕೇಳುತ್ತಾ ಇರುವುದು ನಿರರ್ಥಕ. ಬಹುತೇಕ ಜನರು ಮಾಡುವುದು ಇದನ್ನೇ, ಕೇವಲ ಸಮಯ ಕಳೆಯುವುದಕ್ಕಾಗಿ ಅಸಂಬದ್ಧ ವಿಷಯಗಳನ್ನು ಕೇಳುವುದು.
ಆದುದರಿಂದ, ನಾನು ಏನೆಲ್ಲಾ ಹೇಳಿರುವೆನೋ, ಅದರ ಬಗ್ಗೆ ವಿಚಾರ ಮಾಡಿ. ಅದರ ಬಗ್ಗೆ ಪುನಃ ಪುನಃ ಯೋಚಿಸಿ!
ಒಮ್ಮೆ ಕೆನಡಾದಲ್ಲಿ, ಸತ್ಸಂಗದಲ್ಲಿ ನಾನಂದೆ, ’೨+೧=೦’. ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಯಿತು. ಅಲ್ಲಿ ಐ.ಐ.ಟಿ. ಯಂತಹ ಸ್ಥಳಗಳಿಂದ ಬಂದ ಎಲ್ಲಾ ಅಗ್ರ ಪ್ರಾಧ್ಯಾಪಕರಿದ್ದರು. ಅದು ಪ್ರತಿಯೊಬ್ಬರಿಗೂ ಅಷ್ಟೊಂದು ಮೋಜಿನ ವಿಷಯವಾಗಿತ್ತು - ಗುರುದೇವರು ’೨+೧=’, ಹೀಗೆ ಹೇಳಲು ಹೇಗೆ ಸಾಧ್ಯ?
ನೋಡಿ, ಅದು ಯಾರು ಹೇಳುತ್ತಾರೆಂಬುದರ ಮೇಲೆ ಕೂಡಾ ಅವಲಂಬಿಸಿದೆ. ಒಂದು ಮಗುವು ’೨+೧=೦’ ಎಂದು ಹೇಳಿದರೆ, ಆಗ ನಾವು ಅದು ತಪ್ಪೆಂದು ಹೇಳಬಹುದು. ಆದರೆ ಒಬ್ಬರು ಮಹಾನ್ ಪ್ರಾಧ್ಯಾಪಕರು ’೨+೧=೦’ ಎಂದು ಹೇಳಿದರೆ ಆಗ ನಾವು, ’ಇಲ್ಲ, ಇದು ಸರಿಯಲ್ಲ’ ಎಂದು ಹೇಳಲು ಸಾಧ್ಯವಿಲ್ಲ.
ನೀವು ಇದರ ಬಗ್ಗೆ ವಿಚಾರ ಮಾಡಬೇಕು. ನೀವು ಇದರ ಬಗ್ಗೆ ಯೋಚಿಸಬೇಕು. ಇದರ ಹಿಂದೆ ಏನೋ ರಹಸ್ಯವಿರಬಹುದು ಮತ್ತು ಅದಕ್ಕಾಗಿಯೇ ಅವರು ಹಾಗೆ ಹೇಳಿದರು. ಅದನ್ನು ಹಾಗೆಯೇ ಸುಮ್ಮನೇ ಹೇಳಲು ಅವರೊಬ್ಬರು ಮೂರ್ಖರಲ್ಲ.
ಮೇಲಿನಿಂದ ನೀವು ಅದರ ಕಡೆಗೆ ನೋಡಿದಾಗ ಅದು ಅಸಾಧ್ಯವೆಂದು ನಿಮಗನ್ನಿಸಬಹುದು, ಆದರೆ ಪ್ರತಿಯೊಂದು ಅಸಾಧ್ಯತೆಯಲ್ಲೂ ಸ್ವಲ್ಪ ಸಾಧ್ಯತೆಯಿರುತ್ತದೆ. ಹಲವಾರು ಹೊಸ ಸಾಧ್ಯತೆಗಳು ತೆರೆಯುವುದು ನೀವು ಕುಳಿತುಕೊಂಡು ವಿಚಾರ ಮಾಡಿದಾಗ.
ಆದುದರಿಂದ ಆ ದಿನ, ಕೇವಲ ’೨+೧=೦’ ಆಗುವುದು ಹೇಗೆಂದು ಯೋಚಿಸುವ ಮೂಲಕ ಬಹಳಷ್ಟು ಜ್ಞಾನವು ತೆರೆದುಕೊಂಡಿತು. ಇದರೊಂದಿಗೆ ನಾವು ಒಂದು ಸಂಪೂರ್ಣ ಚಿತ್ರ ಸುರುಳಿಯನ್ನು ಮುಗಿಸಿದೆವು. ಅದು ಬಹಳ ಹಾಸ್ಯಾತ್ಮಕವಾಗಿತ್ತು. ಇಡಿಯ ಎರಡೂವರೆ ಗಂಟೆಗಳ ಉದ್ದಕ್ಕೂ ಎಲ್ಲರೂ ನಗುತ್ತಿದ್ದರು.
ಜ್ಞಾನವನ್ನು ಯಾರು ನೀಡುತ್ತಿದ್ದಾರೆ, ಯಾರು ಅದನ್ನು ಹೇಳುತ್ತಿದ್ದಾರೆ ಎಂಬುದರ ಮೇಲೆ ಅದು ಅವಲಂಬಿಸಿದೆ. ಒಬ್ಬ ಬಹಳ ಬುದ್ಧಿವಂತ ವ್ಯಕ್ತಿಯು ’೨+೧=೦’ ಎಂದು ಹೇಳಿದರೆ, ನೀವದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನೀವು ಅದರೊಳಗೆ ಹೋಗಬೇಕು ಮತ್ತು ವಿಮರ್ಶೆ ಮಾಡಬೇಕು. ಇದು ಕೋನ್ (ಧ್ಯಾನಕ್ಕೆ ಸಹಾಯ ಮಾಡಲು ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಲಿರುವ ಒಂದು ದಾರಿಯಾಗಿ ಜ಼ೆನ್ ಬೌದ್ಧಧರ್ಮದಲ್ಲಿ ಉಪಯೋಗಿಸಲಾಗುವ ಒಂದು ಗೊಂದಲದ, ವಿರೋಧಾಭಾಸದ ಹೇಳಿಕೆ ಅಥವಾ ಕಥೆ) ಎಂದು ಕರೆಯಲ್ಪಡುತ್ತದೆ. ಹಿಂದಿಯಲ್ಲಿ ಇದು ಪಹೇಲಿ (ಒಗಟು) ಎಂದು ಕರೆಯಲ್ಪಡುತ್ತದೆ.
ನೋಡಿ, ಜೀವನವು ಒಂದು ಒಗಟಿನಂತೆ ಮತ್ತು ಹಲವು ಸಲ ಜ್ಞಾನವೂ ಕೂಡಾ ನಮ್ಮ ಬಳಿಗೆ ಒಂದು ಒಗಟಿನ ರೂಪದಲ್ಲಿ ಬರುತ್ತದೆ. ಒಳಗೆ ಅಡಗಿರುವ ರಹಸ್ಯಗಳನ್ನು; ಒಳಗೆ ಅಡಗಿರುವ ಅರ್ಥಗಳನ್ನು ತಿಳಿಯಲು, ಬುದ್ಧಿಯ ತೀಕ್ಷ್ಣತೆಯನ್ನು ಉಪಯೋಗಿಸಿಕೊಂಡು ನಾವು ಜ್ಞಾನವನ್ನು ವಿಮರ್ಶೆ ಮಾಡಬೇಕು ಮತ್ತು ಅದನ್ನು ಅಗಿಯಬೇಕು.
ಭಾರತದಲ್ಲಿ, ಅಂತಹ ಹಲವಾರು ಮಹಾನ್ ಶಿಕ್ಷಕರಿದ್ದರು ಮತ್ತು ಈ ಶಿಕ್ಷಕರು, ಬಹಳ ಬುದ್ಧಿವಂತರಾದವರಿಗೆ ಎಲ್ಲವನ್ನೂ ಒಗಟುಗಳ ರೂಪದಲ್ಲಿ ತಿಳಿಸುತ್ತಿದ್ದರು. ಆದುದರಿಂದ ಅವರು ಜ್ಞಾನವನ್ನು ಪಡೆಯಬೇಕಾದರೆ, ಅವರು ಮೊದಲು ಯೋಚಿಸಿ ಒಗಟನ್ನು ಬಿಡಿಸಬೇಕಾಗಿತ್ತು. ನಂತರ ಅವರು ಜ್ಞಾನವನ್ನು ಪಡೆಯುತ್ತಿದ್ದರು.
ನೀವು ವಿಕ್ರಮಾದಿತ್ಯ ಮತ್ತು ಬೇತಾಳನ ಬಗ್ಗೆ ಕೇಳಿರಬಹುದು; ಮಕ್ಕಳಿಗೆ ಬಹಳ ಲಾಭದಾಯಕವಾಗುವ ಅಂತಹ ಹಲವಾರು ಒಗಟುಗಳು ನಮ್ಮ ದೇಶದಲ್ಲಿವೆ. ಅದು ಅವರ ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಅವರ ಆಲೋಚನಾ ಸಾಮರ್ಥ್ಯವೂ ಕೂಡಾ ಬಹಳ ತೀಕ್ಷ್ಣವಾಗುತ್ತದೆ.
ಕೃಷ್ಣ ಪರಮಾತ್ಮನೇ, ಅರ್ಜುನನಿಗೆ ಎಲ್ಲಾ ಜ್ಞಾನವನ್ನು ನೀಡಿದ ಬಳಿಕ ಅಂದನು, "ನನಗೆ ಏನೆಲ್ಲಾ ಹೇಳಬೇಕಾಗಿತ್ತೋ ಅದನ್ನೆಲ್ಲಾ ನಾನು ಹೇಳಿರುವೆನು, ಈಗ ನೀನು ಅದರ ಬಗ್ಗೆ ಯೋಚಿಸು. ಅದರೊಳಕ್ಕೆ ಆಳವಾಗಿ ಹೋಗು, ಚಿಂತನೆ ಮಾಡು ಮತ್ತು ಅದು ಸರಿಯೆಂದು ನಿನಗೆ ಅನ್ನಿಸಿದರೆ, ಆಗ ನೀನು ಅದನ್ನು ಸ್ವೀಕರಿಸು."
ಆದುದರಿಂದ ಕೇಳಿಸಿಕೊಂಡ ಬಳಿಕ ನೀವು ಚಿಂತನೆ ಮಾಡಬೇಕು. ಕೇವಲ ಕೇಳಿಸಿಕೊಳ್ಳುವುದಷ್ಟೇ ಸಾಲದು, ಅದನ್ನು ಜೀರ್ಣಿಸಿಕೊಳ್ಳುವುದು ಕೂಡಾ ಮುಖ್ಯ. ಅದರ ಬಗ್ಗೆ ಪುನಃ ಪುನಃ ಯೋಚಿಸಿ. ಅರ್ಥದ ಹಿಂದಿರುವ ಅರ್ಥವನ್ನು ತಿಳಿಯಿರಿ, ಮತ್ತು ಅದರ ಬಗ್ಗೆ ಚಿಂತನೆ ಮಾಡದೆಯೇ ನೀವದನ್ನು ಸ್ವೀಕರಿಸಲೂಬಾರದು ತಿರಸ್ಕರಿಸಲೂಬಾರದು. ನೀವದನ್ನು ತಿರಸ್ಕರಿಸಿದರೆ, ಆಗ ಅದು ತಪ್ಪು ಮತ್ತು ನೀವದನ್ನು ಸುಮ್ಮನೇ ಸ್ವೀಕರಿಸಿಕೊಂಡು ಕುಳಿತರೆ, ಅದು ಕೂಡಾ ತಪ್ಪು.
ನೀವು ಕೇಳಿಸಿಕೊಳ್ಳಬೇಕು, ಚಿಂತನೆ ಮಾಡಬೇಕು ಮತ್ತು ನಂತರ ಸ್ವೀಕರಿಸಬೇಕು. ಆಗ ಜ್ಞಾನವು ನಿಮ್ಮೊಳಗೆ ಸ್ಥಾಪಿತವಾಗುತ್ತದೆ.
ನೀವದನ್ನು ಕೇಳಿಸಿಕೊಂಡ ಕೂಡಲೇ ಸ್ವೀಕರಿಸಿದರೆ, ಆಗ ಅಲ್ಲಿ ಅದರ ಬಗ್ಗೆ ವಿಚಾರ ಮಾಡುವ ಅವಕಾಶವಿರುವುದಿಲ್ಲ, ಮತ್ತು ನೀವು, "ಇಲ್ಲ, ಇದು ತಪ್ಪು" ಎಂದು ಹೇಳುತ್ತಾ ಕೂಡಲೇ ಅದನ್ನು ತಿರಸ್ಕರಿಸಿದರೆ, ಆಗ ಕೂಡಾ ಅಲ್ಲಿ  ಚಿಂತನೆ ಇರುವುದಿಲ್ಲ.
ಆದುದರಿಂದ ಮೊದಲು ಕೇಳಿಸಿಕೊಳ್ಳಿ, ಸ್ವೀಕರಿಸಿ ಮತ್ತು ನಂತರ ಅದರ ಬಗ್ಗೆ ಚಿಂತನೆ ಮಾಡಿ, ಹಾಗೂ ಅದರ ಬಗ್ಗೆ ಚಿಂತನೆ ಮಾಡಿದ ಬಳಿಕ ಅದನ್ನು ಸ್ವೀಕರಿಸಿ.

ಗುರುವಾರ, ನವೆಂಬರ್ 29, 2012

ಆರಾಧನೆ


೨೯ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ದಯವಿಟ್ಟು ನಮಗೆ ಹನುಮಂತನ ಬಗ್ಗೆ ಸ್ವಲ್ಪ ಹೇಳಿ.
ಶ್ರೀ ಶ್ರೀ ರವಿ ಶಂಕರ್: ರಾಮಾಯಣವು ನಿಮ್ಮದೇ ಶರೀರದಲ್ಲಿ ಆಗುತ್ತಿದೆಯೆಂದು ಹೇಳಲಾಗಿದೆ. ನಿಮ್ಮ ಆತ್ಮವು ರಾಮ, ನಿಮ್ಮ ಮನಸ್ಸು ಸೀತೆ, ನಿಮ್ಮ ಉಸಿರು ಅಥವಾ ಪ್ರಾಣ-ಶಕ್ತಿ ಹನುಮಂತ, ನಿಮ್ಮ ಅರಿವು ಲಕ್ಷ್ಮಣ ಮತ್ತು ನಿಮ್ಮ ಅಹಂಕಾರವು ರಾವಣ. ಮನಸ್ಸು ರಾವಣ(ಅಹಂಕಾರ)ನಿಂದ ಅಪಹರಿಸಲ್ಪಟ್ಟಾಗ ಆತ್ಮದಲ್ಲಿ ಚಡಪಡಿಕೆಯುಂಟಾಯಿತು. ಈಗ, ಆತ್ಮವು ತಾನಾಗಿಯೇ ಮನಸ್ಸನ್ನು ತಲುಪಲು ಸಾಧ್ಯವಿಲ್ಲ, ಅದು ಪ್ರಾಣದ ಸಹಾಯವನ್ನು ತೆಗೆದುಕೊಳ್ಳಲೇಬೇಕು. ಪ್ರಾಣದ ಸಹಾಯದೊಂದಿಗೆ ಮನಸ್ಸು ಆತ್ಮದೊಂದಿಗೆ ಮತ್ತೆ ಒಂದಾಯಿತು ಮತ್ತು ಅಹಂಕಾರವು ಮಾಯವಾಯಿತು. ಇದು ಕಥೆಯ ಆಧ್ಯಾತ್ಮಿಕ ಮಹತ್ವ.
ಇಲ್ಲದಿದ್ದರೆ, ಹನುಮಂತನು ಒಬ್ಬ ಕೋತಿಯಾಗಿದ್ದನು ಮತ್ತು ಆ ದಿನಗಳಲ್ಲಿ ಕೋತಿಗಳು ಕೂಡಾ ಬಹಳ ಬುದ್ಧಿಶಾಲಿ ಹಾಗೂ ಬಹಳ ದೊಡ್ಡ ಭಕ್ತರಾಗಿದ್ದವು. ಭಕ್ತರು ಗುರುವಿಗಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಗಳು. ಇದೊಂದು ವಾಸ್ತವ. ನಿಜವಾದ ಭಕ್ತರು ದೇವರಿಗಿಂತಲೂ ಬಹಳ ಹೆಚ್ಚು ಶಕ್ತಿಶಾಲಿಗಳು.

ಪ್ರಶ್ನೆ: ಗುರುದೇವ, ನಾವು ಭಗವಂತ ರಾಮನ ಹಾಗೂ ಕೃಷ್ಣ ಪರಮಾತ್ಮನ ಸಂಪೂರ್ಣ ಶರೀರವನ್ನು ಆರಾಧಿಸುತ್ತೇವೆ, ಆದರೆ ನಾವು ಭಗವಂತ ಶಿವನ ಲಿಂಗವನ್ನು ಮಾತ್ರ ಪೂಜಿಸುತ್ತೇವೆ, ಇದು ಯಾಕೆ ಹೀಗೆ?
ಶ್ರೀ ಶ್ರೀ ರವಿ ಶಂಕರ್: ಲಿಂಗವು ಭಗವಂತ ಶಿವನ ಒಂದು ಸಾಂಕೇತಿಕ ನಿರೂಪಣೆ ಅಥವಾ ಸ್ವರೂಪ. ಮೊದಲಿಗೆ, ಲಿಂಗವೆಂದರೇನು ಎಂಬುದನ್ನು ನೀನು ತಿಳಿ. ಲಿಂಗವು ಒಂದು ಗುರುತು.
ಜನನಾಂಗಗಳು ಕೂಡಾ ಲಿಂಗವೆಂದು ಕರೆಯಲ್ಪಡುವುದು ಯಾಕೆ? ಅದು ಯಾಕೆಂದರೆ, ಒಂದು ಮಗುವು ಗಂಡೋ ಅಥವಾ ಹೆಣ್ಣೋ ಎಂದು ಒಬ್ಬರು ತಿಳಿಯಬಹುದಾದುದು ಈ ಚಿಹ್ನೆಯ ಮೂಲಕ. ಒಂದು ಮಗುವು ಜನಿಸಿದಾಗ, ಅದು ಗಂಡೋ ಹೆಣ್ಣೋ ಎಂಬುದನ್ನು ಗುರುತಿಸಲು ನೀವು ಕೇವಲ ಒಂದೇ ಒಂದು ಪ್ರದೇಶವನ್ನು ನೋಡುವಿರಿ. ಆದುದರಿಂದ ಅದೊಂದು ಗುರುತಿನ ಚಿಹ್ನೆ.
ಭಗವಂತ ಶಿವನು ಬ್ರಹ್ಮಾಂಡದಲ್ಲಿಡೀ ವ್ಯಕ್ತವಾಗಿರುವನು, ಹಾಗಾದರೆ ಒಬ್ಬನು ಅವನನ್ನು ಗುರುತಿಸುವುದು ಅಥವಾ ಅವನೊಂದಿಗೆ ಸಂಬಂಧ ಕಲ್ಪಿಸುವುದು ಹೇಗೆ? ಇದಕ್ಕಾಗಿಯೇ ಪ್ರಾಚೀನ ದಿನಗಳಲ್ಲಿ, ಬುದ್ಧಿವಂತ ಋಷಿಗಳು ಒಂದು ಪಿಂಡವನ್ನು ಅಥವಾ ಒಂದು ಉರುಟಾದ ಅಥವಾ ಅಂಡಾಕಾರದ ಕಲ್ಲಿನ ತುಂಡನ್ನು ಇರಿಸುತ್ತಿದ್ದರು ಮತ್ತು ಅದನ್ನು ಭಗವಂತ ಶಿವನೊಂದಿಗೆ ಗುರುತಿಸಿಕೊಳ್ಳುತ್ತಿದ್ದರು.
ಹೀಗೆ, ಲಿಂಗ ಮತ್ತು ಯೋನಿ (ಇಲ್ಲಿ, ಕಲ್ಲು ಅಥವಾ ಲಿಂಗವು ಯಾವುದರ ಮೇಲೆ ಕುಳಿತಿದೆಯೋ, ಶಿವಲಿಂಗದ ಆ ಆಧಾರದ ಬಗ್ಗೆ)ಗಳನ್ನಿರಿಸಲಾಯಿತು, ಯಾಕೆಂದರೆ ಇದರಿಂದ ಗಂಡು ಮತ್ತು ಹೆಣ್ಣನ್ನು ಗುರುತಿಸಲಾಯಿತು.
ಈಗ, ನಿರಾಕಾರನಾದ, ಬ್ರಹ್ಮಾಂಡದ ಪ್ರಭುವನ್ನು ನೀವು ಹೇಗೆ ವಿವರಿಸುವಿರಿ? ಪ್ರಾಚೀನ ಕಾಲದಲ್ಲಿ, ಭಗವಂತ ಶಿವನು ಒಂದು ತ್ರಿಶೂಲವನ್ನು ಹಿಡಿದ ಅಥವಾ ಹಾಗಿರುವ ಯಾವುದೇ ರೂಪವಿರಲಿಲ್ಲ. ಪ್ರಾಚೀನ ದಿನಗಳಲ್ಲಿ, ಕೇವಲ ಒಂದು ಪಿಂಡವನ್ನು ಇಟ್ಟಿರಲಾಗುತ್ತಿತ್ತು ಮತ್ತು ನಂತರ ಮಂತ್ರಗಳನ್ನು ಉಚ್ಛರಿಸುವುದರೊಂದಿಗೆ ಚೈತನ್ಯ ಶಕ್ತಿಯನ್ನು ಪಿಂಡದಲ್ಲಿ ಜಾಗೃತಗೊಳಿಸಲಾಗುತ್ತಿತ್ತು ಮತ್ತು ಪ್ರಕಟಗೊಳಿಸಲಾಗುತ್ತಿತ್ತು. ಪೂಜಿಸಲಾಗುತ್ತಿದ್ದುದು ಹೀಗೆ. ಮೂರ್ತಿಗಳು ಸೃಷ್ಟಿಸಲ್ಪಟ್ಟುದು ಬಹಳ ಸಮಯದ ನಂತರ ಮಾತ್ರ.
ನಂತರ ಏನಾಯಿತು? ಪಿಂಡದ ಮೇಲೆ ಜನರು ಕಣ್ಣುಗಳು, ಮುಖ, ಮೊದಲಾದವುಗಳನ್ನು ಚಿತ್ರಿಸಲು ಪ್ರಾರಂಭಿಸಿದರು. ಪಿಂಡದ ಮೇಲೆ ಒಂದು ಮುಖವನ್ನು ಚಿತ್ರಿಸುವ ಪದ್ಧತಿಯು ಮೊದಲಿಗೆ ಇರಲಿಲ್ಲ. ಅದೇ ರೀತಿಯಲ್ಲಿ ಭಗವಂತ ವಿಷ್ಣುವನ್ನು, ಅವನ ಪಾದಗಳಿಗೆ ಪೂಜೆ ಮಾಡುವುದರ ಮೂಲಕ ಆರಾಧಿಸಲಾಗುತ್ತಿತ್ತು. ನೀವು ಗಯೆಗೆ ಹೋದರೆ (ಬಿಹಾರದ ಎರಡನೆಯ ಅತ್ಯಂತ ದೊಡ್ಡ ನಗರ) ಅಲ್ಲಿನ ಜನರು ಹೇಳುವರು, ’ವಿಷ್ಣು ಪಾದ’, ಕೇವಲ, ಭಗವಂತ ವಿಷ್ಣುವಿನ ಪಾದಗಳು ಮಾತ್ರ ಪೂಜಿಸಲ್ಪಡುತ್ತವೆ.
ಮೂರ್ತಿಗಳಿಗಿಂತ ಹೆಚ್ಚು ಪ್ರಧಾನವಾದುದು ಯಂತ್ರ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ದೇವತೆಗೂ ಒಂದು ಯಂತ್ರ ಮತ್ತು ಒಂದು ಮಂತ್ರ ಮೀಸಲಾಗಿದೆ ಮತ್ತು ಅವರನ್ನು ಪೂಜಿಸುವ ವಿಧಾನ ಅಥವಾ ಶಾಸ್ತ್ರವು ತಂತ್ರವೆಂದು ಕರೆಯಲ್ಪಡುತ್ತದೆ. ಅದರ ಯಂತ್ರವನ್ನು ಪ್ರತಿಷ್ಠಾಪಿಸುವ ವರೆಗೆ ಮೂರ್ತಿಗೆ ಅದರ ಆಧ್ಯಾತ್ಮಿಕ ಶಕ್ತಿಯು ದೊರೆಯುವುದಿಲ್ಲ, ಮತ್ತು ಮಂತ್ರಗಳ ಉಚ್ಛಾರಣೆಯ ಮೂಲಕ ಶಕ್ತಿಯನ್ನು ಕೊಡುವಲ್ಲಿ ವರೆಗೆ ಯಂತ್ರಕ್ಕೆ ಯಾವುದೇ ಶಕ್ತಿಯಿರುವುದಿಲ್ಲ. ಅದಕ್ಕಾಗಿಯೇ ಪ್ರತಿಯೊಂದು ದೇವಾಲಯದಲ್ಲಿ ಮೊದಲನೆಯದಾಗಿ ಒಂದು ಯಂತ್ರವನ್ನು ಪ್ರತಿಷ್ಠಾಪಿಸಲಾಗುತ್ತದೆ, ಮತ್ತು ನಂತರ ಅದರ ಮೇಲೆ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ದೇವಾಲಯವನ್ನು ಸಂದರ್ಶಿಸುವವರಲ್ಲಿ ಭಕ್ತಿಯ ಒಂದು ಆಳವಾದ ಭಾವನೆಯನ್ನು ಆವಾಹನೆ ಮಾಡುವುದಕ್ಕಾಗಿ ಇದನ್ನು ಮಾಡಲಾಗುತ್ತದೆ.
ಮೊದಲಲ್ಲಿ ಕೂಡಾ, ಸನಾತನ ಧರ್ಮದಲ್ಲಿ (ಹಿಂದೂ ಧರ್ಮದ ಮೊದಲ ಹೆಸರು) ಯಾವುದೇ ಮೂರ್ತಿಗಳಾಗಲೀ ಅಥವಾ ಮೂರ್ತಿ ಪೂಜೆಯಾಗಲೀ ಇರಲಿಲ್ಲ, ಆದರೆ ಕೇವಲ ಹವನಗಳು ಮಾಡಲ್ಪಡುತ್ತಿದ್ದವು ಮತ್ತು ಭಗವಂತ ಶಿವನ ಸಾನ್ನಿಧ್ಯವನ್ನು ಸ್ಥಾಪಿಸಲು ಅವನ ಪಿಂಡವನ್ನು ಇರಿಸಲಾಗುತ್ತಿತ್ತು. ಅಷ್ಟೇ, ಬೇರೇನನ್ನೂ ಮಾಡುತ್ತಿರಲಿಲ್ಲ. ಮೂರ್ತಿಗಳನ್ನು ಸ್ಥಾಪಿಸುವ ಪದ್ಧತಿಯು ಬಂದುದು ಆನಂತರವಷ್ಟೇ.
ಭಗವಂತ ಗಣೇಶನನ್ನು ಒಂದು ಅಡಿಕೆಯಲ್ಲಿ ನೋಡಲಾಗುತ್ತಿತ್ತು, ಭಗವಂತ ಶಿವನನ್ನು ಒಂದು ಪಿಂಡದಲ್ಲಿ ನೋಡಲಾಗುತ್ತಿತ್ತು ಮತ್ತು ದೇವಿಯನ್ನು ಒಂದು ಕಲಶದ ಮೇಲೆ ತೆಂಗಿನಕಾಯಿಯನ್ನಿಟ್ಟು ಪೂಜಿಸಲಾಗುತ್ತಿತ್ತು. ಸನಾತನ ಧರ್ಮದ ಪ್ರಕಾರ ಇದಾಗಿತ್ತು ವಿಧಾನ.
ಇವತ್ತು ಕೂಡಾ ಒಂದು ಮೂರ್ತಿಯನ್ನು ಕಲಶವಿಲ್ಲದೆಯೇ ಪೂಜಿಸುವುದಕ್ಕೆ ಯಾವುದೇ ಮಹತ್ವವಿಲ್ಲ. ಕಲಶದಲ್ಲಿನ ನೀರನ್ನು ಮೂರ್ತಿಯ ಮೇಲೆ ಸುರಿಯಲಾಗುತ್ತದೆ. ಇದು ಪದ್ಧತಿ.
ಈಗ, ಮೂರ್ತಿಗಳನ್ನಿರಿಸುವ ಅಭ್ಯಾಸವು ಯಾಕೆ ಪ್ರಾರಂಭವಾಯಿತು?
ಇದು ಯಾಕೆಂದರೆ, ಮೂರ್ತಿಯನ್ನು ನೋಡುವುದರಿಂದ ಭಕ್ತಿಯ ಒಂದು ಭಾವನೆಯು ಒಳಗಿನಿಂದ ಏಳುವುದು.
ಇನ್ನೊಂದು ಕಾರಣವೆಂದರೆ, ಬೌದ್ಧರು ಮತ್ತು ಜೈನರು ತಮ್ಮ ದೇವಾಲಯಗಳನ್ನು ಮಾಡಿದಾಗ ಪೂಜಾವೇದಿಕೆಯಲ್ಲಿ ಅವರು ಬಹಳ ಸುಂದರವಾದ ಮೂರ್ತಿಗಳನ್ನು ಇಡುತ್ತಿದ್ದರು. ಆಗ, ಸನಾತನ ಧರ್ಮವನ್ನು ಅನುಸರಿಸುತ್ತಿದ್ದವರು, ತಾವು ಕೂಡಾ ಇಂತಹುದನ್ನೇನಾದರೂ ಮಾಡಬೇಕೆಂದು ಅಂದುಕೊಂಡರು. ಆದುದರಿಂದ ಅವರು ಕೂಡಾ ಇದನ್ನೇ ಅನುಸರಿಸಿದರು ಮತ್ತು ಭಗವಂತ ವಿಷ್ಣು, ಭಗವಂತ ರಾಮ ಹಾಗೂ ಭಗವಂತ ಕೃಷ್ಣನ ವಿವಿಧ ಮೂರ್ತಿಗಳನ್ನು ಸ್ಥಾಪಿಸಲು ತೊಡಗಿದರು. ಭಗವದ್ಗೀತೆ ಅಥವಾ ರಾಮಾಯಣದಲ್ಲಿ, ಪೂಜೆಗಾಗಿ ಮೂರ್ತಿಗಳನ್ನು ಸ್ಥಾಪಿಸುವ ಒಂದು ಅಭ್ಯಾಸದ ಬಗ್ಗೆ ಯಾವುದೇ ಉಲ್ಲೇಖವೂ ನಿಮಗೆ ಸಿಗುವುದಿಲ್ಲ. ಕೇವಲ ಶಿವಲಿಂಗವು ಸ್ಥಾಪಿಸಲ್ಪಟ್ಟಿತು. ಅದಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ಕೇವಲ ಶಿವಲಿಂಗ ಮಾತ್ರವಿತ್ತು. ಅದು ಕೃಷ್ಣ ಪರಮಾತ್ಮ, ಭಗವಂತ ರಾಮ ಮತ್ತು ಇತರ ಎಲ್ಲರಿಂದಲೂ ಪೂಜಿಸಲ್ಪಟ್ಟಿತು.
ನಿಮಗೆ ಗೊತ್ತಾ, ಪವಿತ್ರ ಕಾಬಾದಲ್ಲಿರುವ (ಮೆಕ್ಕಾ, ಸೌದಿ ಅರೇಬಿಯಾದಲ್ಲಿರುವ ಪವಿತ್ರ ದೇವಾಲಯದ ಬಗ್ಗೆ) ಕಲ್ಲು ಕೂಡಾ ಭಗವಂತ ಶಿವನೆಂಬುದು?
ಭಗವಂತ ವಿಷ್ಣುವಿನ ಮೂರು ಹೆಜ್ಜೆಗಳ ಬಗ್ಗೆ (ಅವನ ಐದನೆಯ ಅವತಾರವಾದ ವಾಮನಾವತಾರದಲ್ಲಿ) ಭವಿಷ್ಯ ಪುರಾಣದಲ್ಲಿ ಒಂದು ಶ್ಲೋಕವಿದೆ. ಭಗವಂತನ ಮೊದಲ ಹೆಜ್ಜೆಯು ಗಯೆಯಲ್ಲಾಗಿತ್ತು ಮತ್ತು ಎರಡನೆಯ ಹೆಜ್ಜೆಯು ಮೆಕ್ಕಾದಲ್ಲಾಗಿತ್ತು. ಸಂತ ಮೊಹಮ್ಮದರು ಬರುವುದಕ್ಕೆ ಎಷ್ಟೋ ಮೊದಲು ಜನರು ಮೆಕ್ಕಾಕ್ಕೆ ತೀರ್ಥಯಾತ್ರೆ ಹೋಗುತ್ತಿದ್ದರು. ಅದಕ್ಕಾಗಿಯೇ ಯಾತ್ರಿಕರು ಹೋಗಿ ಕಲ್ಲಿಗೆ ಮುತ್ತು ಕೊಡುತ್ತಾರೆ ಮತ್ತು ಅದಕ್ಕೆ ಏಳು ಸಾರಿ ಸುತ್ತು ಬರುತ್ತಾರೆ. ಶಿವ ಮಂದಿರಗಳಲ್ಲಿ ಕೂಡಾ ಅದೇ ರೀತಿ ಮಾಡಲಾಗುತ್ತದೆ. ಅಲ್ಲಿ ಜನರು ಹೊಲಿಯದಿರುವ ಬಿಳಿಯ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಹೋಗಿ ಕಲ್ಲನ್ನು ಪೂಜಿಸುತ್ತಾರೆ.
ಇದು ಪ್ರಾಚೀನ ಕಾಲದಿಂದಲೂ ಅಭ್ಯಾಸ ಮಾಡುತ್ತಾ ಬಂದಿರುವಂತಹ ಪದ್ಧತಿಗಳಂತೆಯೇ. ಹೀಗೆ, ಗಯೆ ಮತ್ತು ಮೆಕ್ಕಾಗಳಲ್ಲಿ ಹೇಗೆ ಪೂಜೆ ಮಾಡುವರೋ ಅವುಗಳಲ್ಲಿ ಗಮನಾರ್ಹವಾದ ಹೋಲಿಕೆಗಳಿವೆ: ಒಂದೇ ರೀತಿಯ ಕಲ್ಲನ್ನು ಸ್ಥಾಪಿಸಲಾಗಿದೆ ಮತ್ತು ಪೂಜಿಸಲಾಗುತ್ತಿದೆ. ಸುತ್ತು ಬರುವಿಕೆಯನ್ನು ಒಂದೇ ರೀತಿ ಮಾಡಲಾಗುತ್ತದೆ ಮತ್ತು ಒಂದೇ ರೀತಿಯ ಹೊಲಿಯದಿರುವ ಬಟ್ಟೆಗಳನ್ನು ಧರಿಸಲಾಗುತ್ತದೆ.
ಇವುಗಳೆಲ್ಲವೂ ಒಂದಲ್ಲ ಒಂದು ಕಡೆಯಲ್ಲಿ ಜೊತೆಗೂಡಿವೆ ಮತ್ತು ಸಂಪರ್ಕ ಹೊಂದಿವೆ.

ಪ್ರಶ್ನೆ: ಶಿವಲಿಂಗವು ಯಾಕೆ ಒಂಟಿಯಾಗಿಯಲ್ಲದೆ, ಯೋನಿಯೊಂದಿಗೆ ಪೂಜಿಸಲ್ಪಡುತ್ತದೆ?
ಶ್ರೀ ಶ್ರೀ ರವಿ ಶಂಕರ್: ನಾನು ಮೊದಲೇ ಹೇಳಿದಂತೆ, ಎರಡನ್ನೂ ಶಿವ ಮತ್ತು ಶಕ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಅವುಗಳು ಪ್ರತ್ಯೇಕವಾಗಿ ಕೂಡಾ ಪೂಜಿಸಲ್ಪಡುತ್ತವೆ. ಕೇವಲ ಪಿಂಡ ಮಾತ್ರವಿರುವ ಹಲವಾರು ಸ್ಥಳಗಳಿವೆ.

ಪ್ರಶ್ನೆ: ಗುರುದೇವ, ವೈದಿಕ ಕಾಲದಲ್ಲಿ, ಭಗವಂತ ಬ್ರಹ್ಮ, ಭಗವಂತ ವಿಷ್ಣು ಮತ್ತು ಭಗವಂತ ಶಿವ, ಇವರು ಇದ್ದ ಬಗ್ಗೆ ಉಲ್ಲೇಖವಿಲ್ಲ. ೩೫೦೦ ಬಿ.ಸಿ ಮತ್ತು ೨೮೦೦ ಬಿ.ಸಿ ಗಳ ನಡುವಿನ ಕಾಲವನ್ನು ಭಾರತದ ಚರಿತ್ರೆಯಲ್ಲಿ ವೈದಿಕ ಕಾಲ ಎಂದು ಹೇಳಲಾಗುತ್ತದೆ. ೨೮೦೦ ಬಿ.ಸಿ ಮತ್ತು ೨೬೦೦ ಬಿ.ಸಿ ಗಳ ನಡುವಿನ ಕಾಲವನ್ನು ರಾಮಾಯಣದ ಯುಗವೆಂದು ಕರೆಯಲಾಗುತ್ತದೆ. ಈ ಸಂಪೂರ್ಣ ವ್ಯಾಪ್ತಿಯಲ್ಲಿ, ಭಗವಂತ ಶಿವನ ಪೂಜೆಯ ಬಗ್ಗೆ ಯಾವುದೇ ಉಲ್ಲೇಖವಾಗಲೀ ಅಥವಾ ಪುರಾವೆಯಾಗಲೀ ಇಲ್ಲ. ಹಾಗದರೆ, ಭಗವಂತ ಶಿವನನ್ನು ಲಿಂಗ ಮತ್ತು ಯೋನಿಯ ರೂಪದಲ್ಲಿ ಪೂಜಿಸುವ ಪದ್ಧತಿಯು ಆರಂಭವಾದುದು ನಿಜವಾಗಿ ಯಾವಾಗ, ಮತ್ತು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಭಾರತ್ ಗ್ಯಾನ್ ಎಂಬ ಒಂದು ಪುಸ್ತಕವಿದೆ, ಅದನ್ನು ನೀನು ಓದಬೇಕು. ನೀನು ಹೇಳುತ್ತಿರುವ ೨,೮೦೦ ವರ್ಷಗಳ ಕಾಲವು ನಿಖರವಾಗಿಲ್ಲ. ಕೃಷ್ಣ ಪರಮಾತ್ಮನು ಸುಮಾರು ೫,೨೦೦ ವರ್ಷಗಳ ಹಿಂದೆ ಇದ್ದನು ಮತ್ತು ಭಗವಂತ ರಾಮನು ಸುಮಾರು ೭,೫೦೦ ವರ್ಷಗಳ ಹಿಂದೆ ಇದ್ದನು, ಮತ್ತು ಅದಕ್ಕಿಂತ ಕನಿಷ್ಠಪಕ್ಷ ೧೦,೦೦೦ ವರ್ಷಗಳ ಮೊದಲು ವೇದಗಳನ್ನು ಕಲ್ಪಿಸಲಾಯಿತು ಮತ್ತು ಬರೆಯಲಾಯಿತು.
ನನ್ನ ಸಲಹೆಯೆಂದರೆ, ನೀನು ಭಾರತ್ ಗ್ಯಾನ್ ವಿಭಾಗವನ್ನು ಸಂಪರ್ಕಿಸು ಅಥವಾ ಡಾ. ಡಿ.ಕೆ. ಹರಿ ಅವರನ್ನು ಭೇಟಿಯಾಗು. ಅವರು ನಿನಗೆ ಇದರ ಬಗ್ಗೆ ಎಲ್ಲವನ್ನೂ ಹೇಳುವರು. ಅವರು ಈ ಕ್ಷೇತ್ರದಲ್ಲಿ ವ್ಯಾಪಕವಾದ ಸಂಶೋಧನೆಯನ್ನು ಮಾಡಿದ್ದಾರೆ, ಆದುದರಿಂದ ಅವರು ನಿನ್ನ ಪ್ರಶ್ನೆಗಳಿಗೆ ಉತ್ತರಿಸಬಲ್ಲರು.

ಪ್ರಶ್ನೆ: ಗುರುದೇವ, ನಾವು ನಾಲ್ಕು ಯುಗಗಳ ಬಗ್ಗೆ ಓದಿದ್ದೇವೆ - ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ ಮತ್ತು ಕಲಿ ಯುಗ. ಆದರೂ, ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಕಲಿಸಲಾಗುವ ಚರಿತ್ರೆಯು, ಕಾಲಮಾನವನ್ನು ವಿಭಜಿಸುವ ಈ ಪದ್ಧತಿಯನ್ನು ಅನುಸರಿಸುವುದಿಲ್ಲ ಮತ್ತು ಅದನ್ನು ಪೂರ್ಣವಾಗಿ ವಜಾ ಮಾಡುತ್ತದೆ. ಭಾರತಕ್ಕೆ ಆರ್ಯ ಜನಾಂಗದ ಆಗಮನವು ಸುಮಾರು ೫,೫೦೦ ವರ್ಷಗಳ ಹಿಂದೆ ಆಯಿತೆಂದು ಹೇಳಲಾಗುತ್ತದೆ. ಈ ವೈಷಮ್ಯವನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಈ ಎಲ್ಲಾ ಸಿದ್ಧಾಂತಗಳನ್ನು ಹೊರಕ್ಕೆಸೆಯಲಾಗಿದೆ. ಕಲಿಸಲಾಗುತ್ತಿರುವ ಆರ್ಯರ ಆಕ್ರಮಣ ಸಿದ್ಧಾಂತವು ತಪ್ಪೆಂದು ಸಾಬೀತುಪಡಿಸಲಾಗಿದೆ.
ಪ್ರಪಂಚದ ವಯಸ್ಸು ಸುಮಾರು ೨೮ ಬಿಲಿಯನ್ ವರ್ಷಗಳು ಅಥವಾ ೧೯ ಬಿಲಿಯನ್ ವರ್ಷಗಳು ಎಂದು ಹೇಳಲಾಗುತ್ತದೆ. ಇದು ನಮ್ಮ ಪಂಚಾಂಗದಲ್ಲಿ ಹೇಳಿರುವುದಕ್ಕೆ ಸರಿಸುಮಾರು ನಿಖರವಾಗಿ ತಾಳೆಯಾಗುತ್ತದೆ.
ವೈದಿಕ ಕಾಲಕ್ಕನುಗುಣವಾಗಿ ಪಂಚಾಂಗವು ವರದಿ ಮಾಡುವ, ವಿಶ್ವದ ವಯಸ್ಸು, ಅಧುನಿಕ ವಿಜ್ಞಾನಿಗಳು ಹೇಳುವುದರೊಂದಿಗೆ ನಿಕಟವಾಗಿ ಒಪ್ಪುವುದು ಮತ್ತು ಹೊಂದಿಕೆಯಾಗುವುದು. ಅದಕ್ಕಾಗಿಯೇ ನಾನು ನಿನ್ನಲ್ಲಿ, ಭಾರತ್ ಗ್ಯಾನ್ ವಿಭಾಗದವರೊಂದಿಗೆ ಕುಳಿತುಕೊಂಡು ಸಂಶೋಧನೆಯನ್ನು ಅಧ್ಯಾಯನ ಮಾಡಲು ಹೇಳುತ್ತಿರುವುದು.
ತಾನು ಬರೆದಿರುವುದು ತಪ್ಪೆಂಬುದಾಗಿ ರೊಮಿಲಾ ಥಾಪರ್ ಸ್ವತಃ ಒಪ್ಪಿಕೊಂಡಿದ್ದಾಳೆ. ಚರಿತ್ರೆಯ ಪುಸ್ತಕಗಳನ್ನು ಬರೆಯುವಾಗ, ಎಲ್ಲವೂ ೬,೦೦೦ ವರ್ಷಗಳ ಹಿಂದಿನ ಕಾಲದ ನಂತರ ಆಯಿತೆಂದು ಹೇಳಲಾಯಿತು. ಅವಳಂತಹ ವಿದ್ವಾಂಸರು ಸಂಸ್ಕೃತವನ್ನೂ ಕಲಿತಿಲ್ಲ, ನಮ್ಮ ಪ್ರಾಚೀನ ದಾಖಲೆಗಳಲ್ಲಿ ಯಾವುದನ್ನೂ ಓದಲೂ ಇಲ್ಲ. ಕೇವಲ ಆಂಗ್ಲ ಸಿದ್ಧಾಂತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಎಲ್ಲವನ್ನೂ ೬,೦೦೦ ವರ್ಷಗಳ ಕಾಲಾವಧಿಯಲ್ಲಿ ಹೊಂದಿಸಲು ಪ್ರಯತ್ನಿಸಿದರು. ಅವರು ಭಾರತದ ಚರಿತ್ರೆಯನ್ನು ಸಂಪೂರ್ಣವಾಗಿ ತಿರುಚಿದ್ದಾರೆ.
ಇಲ್ಲಿ ಹಲವಾರು ಶೋಧನೆಗಳನ್ನು ಮಾಡಲಾಯಿತು. ಹಲವಾರು ಹೊಸ ತತ್ವಗಳು ಮತ್ತು ಅನ್ವೇಷಣೆಗಳು ಹೊರಬಂದವು. ಇವುಗಳೆಲ್ಲದರ ಲೇಖಕಿಯಾಗಿರುವ ರೊಮಿಲಾ ಥಾಪರ್, ಆರ್ಯರ ಆಕ್ರಮಣ ಸಿದ್ಧಾಂತದ ಬಗ್ಗೆ ನಾವು ಮರುಯೋಚನೆ ಮಾಡಬೇಕಾಗಿದೆ ಎಂದು ಸ್ವತಃ ಹೇಳಿದ್ದಾಳೆ. ಇದೇ ಕಾರಣಕ್ಕಾಗಿ ನಾನು ನಿನಗೆ, ಅದನ್ನು ನೋಡಿ ಇಲ್ಲಿರುವ ಭಾರತ್ ಗ್ಯಾನ್ ವಿಭಾಗದೊಂದಿಗೆ ಸಮಾಲೋಚಿಸಲು ಸಲಹೆ ನೀಡುತ್ತಿದ್ದೇನೆ.

ಪ್ರಶ್ನೆ: ಗುರೂಜಿ, ನಮಗೆ ತಿಳಿಯದಿರುವ ವಿಷಯಗಳ ಬಗ್ಗೆ ತಿಳಿಯುವುದು ಹೇಗೆ? ತಿಳಿಯದಿರುವ ವಿಷಯಗಳು ಹಲವಾರಿವೆ. ಕೆಲವೊಮ್ಮೆ ನನಗೆ ಬಹಳ ವೇದನೆಯಾಗುತ್ತದೆ ಮತ್ತು ತಿಳಿಯದಿರುವುದನ್ನು ತಿಳಿಯದಿರುವುದಕ್ಕೆ ನಾನು ಅಳಲು ಶುರು ಮಾಡುತ್ತೇನೆ.
ಶ್ರೀ ಶ್ರೀ ರವಿ ಶಂಕರ್: ನನಗೆ ನಿನ್ನ ಕಷ್ಟವು ಅರ್ಥವಾಗುತ್ತದೆ. ಏನೋ ಒಂದನ್ನು ತಿಳಿಯಲು ಬಯಸುವ ತೀವ್ರವಾದ ಅನ್ವೇಷಣೆಯು ಇದೆ, ಆದರೆ ಆ ಏನೋ ಒಂದು ಏನು, ಅದು ನಿನಗೆ ತಿಳಿಯದು. ಅಲ್ಲಿ ಏನೋ ಒಂದು ಇದೆ ಎಂಬುದು ನಿನಗೆ ತಿಳಿದಿದೆ, ಆದರೆ ಅಸ್ತಿತ್ವದಲ್ಲಿರುವ ಆ ಏನೋ ಒಂದನ್ನು ತಿಳಿಯುವುದು ಹೇಗೆಂಬುದು ನಿನಗೆ ತಿಳಿಯದು. ಅದಲ್ಲವೇ! ಕೇವಲ ವಿಶ್ರಾಮ ಮಾಡು ಮತ್ತು ಧ್ಯಾನ ಮಾಡು. ಅಲ್ಲಿಗೆ ಹೋಗಲಿರುವ ದಾರಿ ಅದು.

ಪ್ರಶ್ನೆ: ಗುರುದೇವ, ಅಸುರರು ಮತ್ತು ದೇವತೆಗಳ ಬಗ್ಗೆ ನೀವು ನಮಗೆ ದಯವಿಟ್ಟು ಏನಾದರೂ ಹೇಳುವಿರಾ. ಅಸುರರು ಕೆಟ್ಟ ಜನರಾಗಿದ್ದರೇ?
ಶ್ರೀ ಶ್ರೀ ರವಿ ಶಂಕರ್: ಅಸುರರೆಂದರೆ ಯಾರು ಆತ್ಮದ ಬಗ್ಗೆ ಯೋಚಿಸುವುದಿಲ್ಲವೋ ಅವರು, ಅವರು ಕೇವಲ ದೇಹಕ್ಕೆ ಕಟ್ಟುಬಿದ್ದಿರುತ್ತಾರೆ ಅಥವಾ ಭೂಮಿಗೆ ಕಟ್ಟುಬಿದ್ದಿರುತ್ತಾರೆ. ದೇವತೆಗಳು ಆತ್ಮಕ್ಕೆ ಕಟ್ಟುಬಿದ್ದವರು. ನಿಜವಾಗಿ ಇಬ್ಬರೂ, ಅಸುರರು ಮತ್ತು ದೇವತೆಗಳು ಒಬ್ಬನೇ ವ್ಯಕ್ತಿಯ ಮಕ್ಕಳು. ಪ್ರಜಾಪತಿಗೆ ಇಬ್ಬರು ಪತ್ನಿಯರಿದ್ದರು; ಅದಿತಿ ಮತ್ತು ದಿತಿ. ದಿತಿಯಿಂದ ಅಸುರರು ಬಂದರು ಮತ್ತು ಅದಿತಿಯಿಂದ ದೇವತೆಗಳು ಬಂದರು. ಕಥೆ ಬರುವುದು ಹೀಗೆ.

ಗುರುವಾರ, ನವೆಂಬರ್ 8, 2012

ಯೋಗ ವಿಸ್ಮಯ ಶಕ್ತಿ

ಅಮೃತಬಿ೦ದು’ ಸರಣಿಯ ಬರಹಗಳು

ಒ೦ಭತ್ತನೆಯ ಕ೦ತು

ತಾಳ್ಮೆ ಇರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೯/೦೪/೨೦೦೩ರ೦ದು ಪ್ರಕಟವಾಗಿತ್ತು)

ಜಾಗೃತಿ, ಸ್ವಪ್ನ, ಸುಷುಪ್ತಿ ಈ ಮೂರು ಅವಸ್ಥೆಗಳು ಬರುತ್ತಿರುತ್ತವೆ.
ಧೈರ್ಯದಿಂದ ಈ ಮೂರು ಅವಸ್ಥೆಗಳನ್ನು ಅನುಭವಿಸುವಂಥವನು ವೀರೇಶ.
ಹೀಗೆಯೇ ಜ್ಞಾನ, ಪ್ರವೃತ್ತಿ, ಮೋಹ ಜೀವನದಲ್ಲಿ ಉಂಟಾಗುತ್ತಲೇ ಇರುತ್ತವೆ.

"ತೃತೀಯ ಭೋಕ್ತಾ ವೀರೇಶಃ"
ನಮ್ಮಲ್ಲುಂಟಾಗುವ ಭಾವನೆಗಳೆಲ್ಲವನ್ನು ಆತ್ಮಗ್ಲಾನಿಗೊಳಗಾಗದೇ, ಧೈರ್ಯವಾಗಿ ಸಾಕ್ಷೀಭಾವದಿಂದ ನೋಡತಕ್ಕವನು ವೀರೇಶ! ಇದು ಬಹಳ ಸೂಕ್ಷ್ಮವಾದ ಜ್ಞಾನ, ಧೈರ್ಯದಿಂದ, ತಾಳ್ಮೆಯಿಂದ, ಸಹನೆಯಿಂದ ಇರಬೇಕು.

ಒಂದು ದಿನ ಪ್ರಾಣಾಯಾಮ, ಆಸನ ಮಾಡಿಬಿಟ್ಟು ನಾಳೆಯಿಂದಲೇ ಸರಿಯಾಗಿರ್ತೀನಿ ಅಂದರೆ...ನಿಮ್ಮ ಮನಸ್ಸು ಅಷ್ಟು ಬೇಗ ಬದಲಾಯಿಸುವುದಿಲ್ಲ. ಹಾ! ಅದಕ್ಕೂ ಸಮಯ ಬೇಕಾಗುತ್ತದೆ. ಎಷ್ಟೋ ವರ್ಷಗಳಿಂದ ನೀನು ಮನಸ್ಸನ್ನು ಒಂದು ತರದ ಸ್ವಭಾವದಲ್ಲಿ ರೂಢಿಸಿಕೊಂಡು ಬಂದಿದ್ದೀಯ. ಬದಲಾಯಿಸಿಕೊಳ್ಳುವುದಕ್ಕೆ ಅದಕ್ಕೆ ಸ್ವಲ್ಪ ಸಮಯಾವಕಾಶ ಕೊಡು. ಒಂದು ವೇಳೆ ಕೋಪ, ರಾಗ, ಕಾಮ, ಮೋಹ ಯಾವ ಭಾವನೆಯೇ ಬಂದರೂ ಯಾವ ಅವಿವೇಕವೇ ಉಂಟಾದರೂ ತಾಳ್ಮೆ ವಹಿಸು, ಧೈರ್ಯದಿಂದಿರು, ಆತ್ಮನಿಂದೆ ಮಾಡಬೇಡ. ನೀನು ಮಾಡುವ ಪ್ರಾಣಾಯಾಮ, ಧ್ಯಾನ ಮುಂತಾದ ಸಾಧನೆಗಳಲ್ಲಿ ನಂಬಿಕೆ ಕಳೆದುಕೊಳ್ಳಬೇಡ. ನಾನು ಸತ್ಸಂಗ ಮಾಡಿಯೂ ಪ್ರಯೋಜನವಾಗಲಿಲ್ಲವಲ್ಲ ಎಂದು ನಿನ್ನನ್ನು ನೀನು ಹಳಿದುಕೊಳ್ಳಬೇಡ. ಉತ್ಸಾಹವನ್ನು ಹಾಳು ಮಾಡಿಕೊಳ್ಳಬೇಡ. ಜಾಗೃತಾವಸ್ಥೆಯನ್ನು, ಸ್ವಪ್ನವನ್ನು, ಸುಷುಪ್ತಿಯನ್ನು ಅನುಭವಿಸುವ ನೀನು ಇವೆಲ್ಲದರಿಂದಲೂ ಬೇರೆಯೇ ಆಗಿದ್ದೀಯ. ಇದನ್ನು ಕಂಡುಹಿಡಿದುಕೊಳ್ಳಬೇಕಾದರೆ ಸ್ವಲ್ಪ ಸಮಯ ಬೇಕು. ಒಂದೇ ದಿನಕ್ಕೆ ಆಗುವುದಿಲ್ಲ. ನಿರಂತರವಾಗಿ ಧ್ಯಾನ ಮಾಡುತ್ತಿದ್ದಾಗ, ನಿನಗೆ ಅನುಭವಕ್ಕೆ ಬರುತ್ತದೆ. ಈ ಅನುಭವ ಆಗುತ್ತಿದ್ದಂತೆಯೇ ಪ್ರಸನ್ನತೆ, ಪ್ರೇಮ, ವಾತ್ಸಲ್ಯ..ನಿನ್ನ ಸಹಜ ಸ್ವಭಾವ ಮರುಕಳಿಸಿ ಮತ್ತೆ ಮೇಲಕ್ಕೆ ಬರುತ್ತೆ. ಹೀಗೆ ಆಗಿಲ್ಲವೋ ವೀರೇಶ, ಧೈರ್ಯವಾಗಿರು, ಆಗುತ್ತದೆ, ತಾಳ್ಮೆ ವಹಿಸು!

* * * * *

ಯೋಗ ಭೂಮಿಕಾ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೩೦/೦೪/೨೦೦೩ರ೦ದು ಪ್ರಕಟವಾಗಿತ್ತು)

ಮುಂದಿನ ಸೂತ್ರ ಹೇಳುತ್ತಾರೆ..."ವಿಸ್ಮಯೋ ಯೋಗ ಭೂಮಿಕಾಃ"
ಈ ಪ್ರಪಂಚದಲ್ಲಿ ಒಂದು ಕ್ರಾಂತಿಕಾರಿಯಾದ ಸೂತ್ರ ಇದು.ಇದೊಂದು ಸೂತ್ರವನ್ನು ಚೆನ್ನಾಗಿ ತಿಳಿದುಕೊಂಡುಬಿಟ್ಟರೆ ಸಾಕು. ಇದುವರೆಗೂ ನಾವು ನಮ್ಮ ಶರೀರ, ಉಸಿರು, ಮನಸ್ಸು ಈ ಎಲ್ಲದರ ಸಾಮರಸ್ಯದಿಂದ ಯೋಗ ಉಂಟಾಗಿ ನಾವು ಅ೦ತರ್ಮುಖಿಗಳಾಗಲು, ಆತ್ಮಸ್ಥರಾಗಲು ಸೂತ್ರಗಳ ಮೂಲಕ ಅನೇಕ ಪ್ರಕ್ರಿಯೆಗಳನ್ನು ಅರಿತುಕೊಂಡೆವು. ಈಗ ಕೊಡತಕ್ಕಂಥ ಪ್ರಕ್ರಿಯೆ ಅತ್ಯಂತ ಮಹತ್ವಪೂರ್ಣವಾದುದು.

"ವಿಸ್ಮಯೋ ಯೋಗ ಭೂಮಿಕಾಃ"

ಒಂದು ಭೂಮಿಕೆ ಇಲ್ಲದಿದ್ದರೆ ಏನು ಮಾಡಲು ಸಾಧ್ಯ? ಪಾಯ ಎಲ್ಲಿ ಹಾಕ್ತೀರಾ? ಗೋಡೆ ಎಲ್ಲಿ ಎಬ್ಬಿಸ್ತೀರ? ಮನೆ ಎಲ್ಲಿ ಕಟ್ತೀರ? ನಡೀತೀರಾ.. ಎಲ್ಲಿ? ಕಾಲೆಲ್ಲಿ ಇಡ್ತೀರಾ, ಭೂಮಿ ಇದ್ದರಲ್ವಾ? ನಿಮ್ಮ ಅಸ್ತಿತ್ವವೇ ಭೂಮಿಕೆ! ಆ ಅಸ್ತಿತ್ವ ಯಾವುದು?ಯೋಗಕ್ಕೆ ಅಸ್ತಿತ್ವ ಯಾವುದು? ಯೋಗ ಎಲ್ಲಿ ಪ್ರಾರಂಭವಾಗುತ್ತದೆ? ವಿಸ್ಮಯದಿಂದ! ವಿಸ್ಮಯ ಎಂದರೆ ಆಶ್ಚರ್ಯಪಡುವುದು.

ಒಂದು ಚಿಕ್ಕ ಮಗೂನ ನೋಡಿದೀರಾ? ಆರು ತಿಂಗಳ ಮಗುವನ್ನು ಗಮನಿಸಿದ್ದೀರಾ? ತನ್ನ ಕೈಯನ್ನು ಆಶ್ಚರ್ಯಚಕಿತವಾಗಿ ನೋಡುತ್ತಾ ಇರುತ್ತದೆ, ತನ್ನ ಕೈ ಬೆರಳುಗಳನ್ನೆಲ್ಲಾ ನೋಡುತ್ತಾ ಇರುತ್ತೆ. ಅರೆರೆ!  ಏನೋ ಆಶ್ಚರ್ಯ, ಪ್ರಪಂಚದಲ್ಲಿ ಅದ್ಭುತ ಕಂಡುಬಿಟ್ಟ ಹಾಗೆ.ಅದು ನೋಡ್ತಾ ಇರೋದು ತನ್ನ ಕೈಯನ್ನೇ! ಈ ಪ್ರಪಂಚದಲ್ಲಿ ಜ್ಞಾನ ಉಂಟಾದ ಕೂಡಲೇ, ಜ್ಞಾನದ ಜೊತೆಗೆ ವಿಸ್ಮಯ ಉಂಟಾಗದೇ ಇದ್ದರೆ ಆ ಜ್ಞಾನ ಮೂರು ಕಾಸಿಗೆ ಪ್ರಯೋಜನವಿಲ್ಲ. ಆ ಜ್ಞಾನ ಅಜ್ಞಾನವೇ ಎಂದುಕೊಳ್ಳಬೇಕು. ಯಾವ ಜ್ಞಾನದಿಂದ ವಿಸ್ಮಯ ಉಂಟಾಗುವುದೋ ಅದೇ ನಿಜವಾದ ಜ್ಞಾನ. ನಾವು ಯಾವುದನ್ನು ಜ್ಞಾನ ಅಂತ ತಿಳಿದುಕೊಳ್ತೀವೋ ಅದು ನಮ್ಮಲ್ಲಿರುವ ವಿಸ್ಮಯವನ್ನೆಲ್ಲಾ ಕಳೆದುಹಾಕಿಬಿಡುತ್ತೆ. ಚಚ್ಚಿ ಚೂರು ಚೂರು ಮಾಡಿ ಹಾಕಿಬಿಡುತ್ತೆ. ಜೀವನದಲ್ಲಿ ವಿಸ್ಮಯವೇ ಹೋಗಿಬಿಟ್ಟರೆ ಬೇರೆ ಏನಿದೆ? ’ವಿಸ್ಮಯ-ಆಶ್ಚರ್ಯ’, ಜೀವನದ ಚಿಲುಮೆ ಅದರ ಲಕ್ಷಣ! ವಿಸ್ಮಯದಿಂದಲೇ ನಮಗೆ ಯೋಗ ಉಂಟಾಗುತ್ತದೆ. ಯೋಗದ ಭೂಮಿಕೆಯೇ ವಿಸ್ಮಯ! ಯಾವುದನ್ನು ಕಂಡರೂ ಅದು ಆಶ್ಚರ್ಯಜನಕವಾಗುತ್ತದೆ. ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.

* * * * *

ವಿಸ್ಮಯ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೧/೦೫/೨೦೦೩ರ೦ದು ಪ್ರಕಟವಾಗಿತ್ತು)

ಒಂದು ಮಗುವನ್ನು ನೋಡಿ. ಎಲೆ ನೋಡಿದರೆ ’ಈ ಎಲೆ ಯಾಕೆ ಹಸುರಾಗಿದೆ?’ ಅದಕ್ಕೆ ನೀವೇನೋ ಒಂದು ಉತ್ತರ ಕೊಡ್ತೀರ. ’ಆಕಾಶ ನೀಲಿ ಯಾಕೆ ಆಗಿದೆ?’, ’ಆನೆಗೆ ಸೊಂಡಿಲು ಯಾಕಿದೇಪ್ಪಾ - ಕುದುರೆಗೆ ಯಾಕಿಲ್ಲ ಸೊಂಡಿಲು?’ ಅಂತ ಹಲವಾರು ತರಹದ ಪ್ರಶ್ನೆ ಕೇಳ್ತಾರೆ ಮಕ್ಕಳು.

’ಈ ಆಕಾಶದಲ್ಲಿ ಮೋಡ ಎಲ್ಲ ಹೋಗ್ತಾ ಇದೆಯಲ್ಲ ಎಲ್ಲಿಗೆ ಹೋಗುತ್ತೆ?’.. ಎಷ್ಟೋ ಸಲ ತಂದೆ, ತಾಯಿಗೇ ಉತ್ತರ ಗೊತ್ತಿರಲ್ಲ! ಆ ಮಕ್ಕಳು ಕೇಳಿಬಿಟ್ಟು ಸುಮ್ಮನಾಗಿಬಿಡುತ್ತವೆ, ಪಾಪ! ’ಈ ನಕ್ಷತ್ರದ ಮೇಲೆ ಹೋದರೆ ಎಲ್ಲಿಗೆ ಹೋಗ್ತೀವಿ?’ ವಿಶ್ವಾಸ ಇದೆ, ನಮ್ಮಪ್ಪ ನಕ್ಶತ್ರದ ಮೇಲೆ ಹೋಗಿದ್ದಾನೆ, ಇವನಿಗೆ ಗೊತ್ತಿರುತ್ತೆ, ಅಣ್ಣಂಗೆ ಗೊತ್ತಿರುತ್ತೆ, ಚಿಕ್ಕಪ್ಪಂಗೆ ಗೊತ್ತಿರುತ್ತೆ... ಇವರು ಹೇಳ್ತಾರೆ ಅಂತ ಶ್ರದ್ಧೆ. ಅವರಿಗೇನು ಗೊತ್ತಿರುತ್ತೆ! ಆ ಮಗೂಗೆ ಏನೋ ಒಂದಷ್ಟು ಹೇಳಿಬಿಟ್ಟು ’ಸುಮ್ಮನಿರು, ನನ್ನ ತಲೆ ತಿನ್ನಬೇಡ’ ಅಂತ ಬೈದು ಕಳಿಸುತ್ತಾರೆ. ತಲೆ ಇದ್ದರಲ್ವಾ ತಿನ್ನೋಕೆ?

ಮಕ್ಕಳಲ್ಲಿ ವಿಸ್ಮಯ ಇದೆ. ಇದು ನಮ್ಮ ಹುಟ್ಟು ಗುಣ. ಜೀವನದ ಲಕ್ಷಣ, ವಿಸ್ಮಯ. ಹಾಗೆಯೇ ಒಬ್ಬ ನಿಜವಾದ ವಿಜ್ಞಾನಿ, ವೈಜ್ಞಾನಿಕ ದೃಷ್ಟಿಕೋನ ಇರುವಂಥಹವನು - ಅವನಿಗೂ ಎಲ್ಲಾ ಗೊತ್ತು. ಆದರೆ ಎಲ್ಲಾ ತಿಳಿದಿದೆ ಎನ್ನುವ ಭಾವನೆ ಇರುವುದಿಲ್ಲ. ತಿಳಿಯಬೇಕಾದ್ದು ತುಂಬಾ ಇದೆ, ತಿಳಿದುಕೊಂಡಷ್ಟೂ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ ಕುತೂಹಲ ಇರುತ್ತದೆ, ಅದು ನಿಜವಾದ ಜ್ಞಾನ.
ಈ ಅರ್ದಂಬರ್ಧ ತಿಳಿದುಕೊಂಡಿರುವವರದೇ ತಲೆಹರಟೆ, ತಕರಾರು. ಎಲ್ಲಾ ತರಹದ ಸಮಸ್ಯೆ, ಸಂದಿಗ್ಧತೆ ಉಂಟುಮಾಡುವವರು ಇವರೇ. ಪ್ರಪಂಚದಲ್ಲಿ ಆಗುವ ಎಲ್ಲಾ ತಾಪತ್ರಯ, ಉಪದ್ರವ ಉಂಟಾಗುವುದೂ ಇವರಿಂದಲೇ. ಏನೂ ತಿಳಿಯದೇ ಇರುವವರು ಹಾಗೂ ಚೆನ್ನಾಗಿ ತಿಳಿದುಕೊಂಡಿರುವವರು ಯಾರಿಗೂ ಉಪದ್ರವ ಉಂಟುಮಾಡುವುದಿಲ್ಲ. ಈ ಮಧ್ಯದವರು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಆದರೆ, ಎಲ್ಲಾ ತಮಗೆ ತಿಳಿದುಬಿಟ್ಟಿದೆ ಎನ್ನುವಂತೆ ವ್ಯವಹಾರ ಮಾಡುತ್ತಾರೆ. ಅವರಲ್ಲಿ ವಿಸ್ಮಯ ಅನ್ನುವುದೇ ಇಲ್ಲ. ಅದಕ್ಕೇ ಯೋಗದ ಭೂಮಿಕೆಯೇ ಇಲ್ಲ. ಇನ್ನು ಯೋಗ ಉಂಟಾಗುವುದು ಹೇಗೆ? ಎಲೆ ನೋಡಿದರೆ ’ಅಯ್ಯೋ, ಇದು ಎಲೇರಿ, ಎಲೆ ಏನು ನೋಡೋದು!’ ಹೂವು? - ’ಹಾ! ಇದು ಹೂವು ಅಷ್ಟೇ, ಅದನ್ನೇನು ನೋಡೋದು’ ಅಂದುಬಿಡ್ತಾರೆ. ಪ್ರತಿಯೊಂದನ್ನೂ ಹೊಸದೃಷ್ಟಿಯಿಂದ ನೋಡಿದರೇ ವಿಸ್ಮಯ ಉಂಟಾಗುವುದು. ಆ ವಿಸ್ಮಯದಿಂದಾನೇ ಯೋಗ ಉಂಟಾಗುವುದು.

* * * * *

ಯೋಗ ಉಂಟಾಗುವ ಬಗೆ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೨/೦೫/೨೦೦೩ರ೦ದು ಪ್ರಕಟವಾಗಿತ್ತು)

ಯೋಗ ಎಂದರೇನು?
ಯೋಗ ಅಂದರೆ ಬರೀ ಆಸನ, ಪ್ರಾಣಾಯಾಮ, ಭಾಸ್ತ್ರಿಕ ಮಾಡುವುದಲ್ಲ. ಯೋಗ ತರಗತಿ ಎಂದರೆ ಯೋಗಾಸನಗಳನ್ನು ಕಲಿಯುವುದು; ಆಸನಗಳನ್ನು ಮಾಡುವುದಷ್ಟೇ ಯೋಗ ಎಂದುಕೊಂಡಿದ್ದೇವೆ - ಸಾಮಾನ್ಯವಾಗಿ. ನಾವು ಯೋಗವನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾ...ಆಸನದಿಂದ ಶರೀರ ಶುದ್ಧಿಯಾಗುತ್ತದೆ, ಬಲಿಷ್ಠವಾಗುತ್ತದೆ, ರೋಗ ನಿವಾರಣೆಯಾಗುತ್ತದೆ, ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಬರೀ ಇಷ್ಟೇ ಯೋಗ ಅಲ್ಲ. ವಿಸ್ಮಯಪೂರ್ಣವಾದ ಚೇತನವೇ ಯೋಗಕ್ಕೆ ಭೂಮಿಕೆಯಾಗುತ್ತದೆ. ವಿಸ್ಮಯಪೂರ್ಣವಾದ ಚೇತನದಲ್ಲಿ ಮತ್ತೆ ಮುಗ್ಧತೆ ಬರುತ್ತದೆ.

’ವಿಸ್ಮಯೋ ಯೋಗ ಭೂಮಿಕಾ’

ಸೂರ್ಯಾಸ್ತ ಸಮಯದಲ್ಲಿ ನೋಡಿ - ಸೂರ್ಯ ಮುಳುಗುತ್ತಿರುತ್ತಾನೆ, ಚಂದ್ರ ಉದಯವಾಗುತ್ತಿರುತ್ತಾನೆ. ಆಕಾಶವನ್ನೂ, ಸೂರ್ಯನನ್ನೂ ನೋಡಿ. ಪ್ರಕೃತಿಯಲ್ಲಿರುವ ಪ್ರತಿಯೊಂದೂ ವಿಸ್ಮಯಜನಕವಾಗಿದೆ. ವಿಸ್ಮಯಪೂರ್ಣವಾಗಿದೆ! ನಮ್ಮ ಶರೀರದಲ್ಲಿ ಎಂತೆಂಥಹ ನಾಡಿಗಳೆಲ್ಲಾ ಇವೆ. ಹೇಗೆಲ್ಲಾ ಇದೆ ಶರೀರ ರಚನೆ! ಈ ರಚನಾ ಕ್ರಮವನ್ನು ನೋಡಿದರೇ ವಿಸ್ಮಯಜನಕವಾಗಿದೆ. ಎಷ್ಟು ತರಹದ ಕೀಟಾಣುಗಳಿವೆ ಪ್ರಪಂಚದಲ್ಲಿ!

ಮಕ್ಕಳನ್ನು ನೋಡಿ. ಒಂದು ಜೇನು ದುಂಬಿ ಹೋಗುತ್ತಿದ್ದರೆ ಅದನ್ನು ಬೆಂಕಿಪೊಟ್ಟಣದಲ್ಲಿ ಹಾಕಿ ಎಷ್ಟು ವಿಸ್ಮಯಪೂರ್ಣವಾಗಿ ಅದನ್ನುನೋಡ್ತಾ ಇರ್ತಾರೆ. ಅದೇ ಧ್ಯಾನ! ಅಲ್ಲೇ ಶರಣಾಗತಿಯಾಗಿದೆ.

ಈ ಪ್ರಪಂಚದಲ್ಲಿರತಕ್ಕಂಥ ಎಷ್ಟೊಂದು ವೈವಿಧ್ಯತೆಯೆಲ್ಲವನ್ನೂ ವಿಧ ವಿಧ ವಸ್ತುಗಳನ್ನು, ಪ್ರಾಣಿಗಳನ್ನು, ಮನುಷ್ಯರನ್ನು, ಕೀಟಗಳನ್ನು ವಿಸ್ಮಯಪೂರ್ಣವಾದ ದೃಷ್ಟಿಯಿಂದ, ಹೊಸ ಕಣ್ಣಿನಿಂದ, ಹೊಸ ದೃಷ್ಟಿಯಿಂದ ನೋಡಬೇಕು. ತಿಳಿದುಕೊಂಡುಬಿಟ್ಟಿದ್ದೀನಿ ಎನ್ನುವ ಭಾವನೆಯಿಂದಲ್ಲ. ಆಗಲೇ ನಮ್ಮ ಚೇತನ ಯೋಗಕ್ಕೆ ಭೂಮಿಕೆಯಾಗುತ್ತದೆ.

* * * * *


ಹೊಸ ದೃಷ್ಟಿ


(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೩/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೂರು ತರಹದ ಭಾವನೆಯಾಗುತ್ತದೆ..
ಒಂದು ’ನಾನು ತಿಳಿದುಕೊಂಡಿದ್ದೀನಿ’ ಅಂತ. ಇನ್ನೊಂದು ’ನಾನು ತಿಳಿದುಕೊಂಡಿಲ್ಲ’ ಅಂತ. ಮೂರನೆಯದು ’ತಿಳಿಯಲಿಕ್ಕೆ ಆಗದೇ ಇರುವಂತಹುದು’ ಅಂತ.
ಸಂಸ್ಕೃತದಲ್ಲಿ - ’ಜ್ಞಾತ’ - ತಿಳಿದದ್ದು, ’ಅಜ್ಞಾತ’ - ತಿಳಿಯದೆ ಇರತಕ್ಕಂಥಹುದು, ’ಅಜ್ಞೇಯ’ - ತಿಳಿಯುವುದಕ್ಕೆ ಆಗದೇ ಇರತಕ್ಕಂಥಹುದು. ತಿಳಿಯುವುದಕ್ಕಾಗದೇ ಇರುವುದಕ್ಕೆ ಕರೆದುಕೊಂಡು ಹೋಗಬೇಕಾದರೆ, ಜ್ಞಾತ, ಅಜ್ಞಾತ - ತಿಳಿದದ್ದೂ, ತಿಳಿಯದೇ ಇರೋದೂ ಸೇರಿ, ಇವೆರಡರಿಂದಲೂ ವಿಸ್ಮಯ ಉಂಟಾದಾಗ ಅಜ್ಞೇಯದ ಹತ್ತಿರ ನಾವು ಹೋಗ್ತೀವಿ. ಅಜ್ಞೇಯವೇ ಯೋಗ.

ನಮಗೆ ಪ್ರಪಂಚದಲ್ಲಿ ಇರುವಂಥಹ ಅತ್ಯಂತ ವಿಸ್ಮಯಜನಕವಾದ ಅತಿ ಸುಂದರವಾದ ಯಾವುದನ್ನೇ ಕಣ್ಮುಂದೆ ಇಟ್ಟರೂ ಆಸಕ್ತಿಯುಂಟಾಗುವುದಿಲ್ಲ, ತೋರಿಸಿದರೂ ವಿಸ್ಮಯ ಉಂಟಾಗುವುದಿಲ್ಲ.
ತಾಜಮಹಲ್ ಹತ್ತಿರ ಹೋದರೂ ಆಯ್ಕೆ. ’ಇದೇನು ಅದ್ಭುತ ಅ೦ತ ತಾಜಮಹಲ್ ನೋಡ್ತೀರ!’ ಅ೦ಬೋ ಟೀಕೆ. ಭೇಲ್ ಪುರಿ, ಕಡ್ಲೆಕಾಯಿ ತಗೊಂಡು ತಿನ್ನೋದು, ಅದರ ಬಗ್ಗೆ ಮಾತಾಡೋದು ಅಥವಾ ಯಾರ ಬಗ್ಗೇನೋ ದೂರು, ಚಿಂತೆ, ತಾಪತ್ರಯದ ಬಗ್ಗೆ ಮಾತನಾಡೋದು! ತಾಜಮಹಲ್ ಎಲ್ಲಿ ನೋಡಿದಿರಿ? ’ಹಾ! ನೋಡಿದ್ದಾಯ್ತು!’ ಕೆಲವರು ಬಸ್ಸಿನಲ್ಲೇ ಕೂತ್ಕೊಂಡು ನೋಡಿಬಿಟ್ಟು ’ಇನ್ನೇನಿದೆ ನೋಡೋದು? ಅಯ್ಯೋ ಅದೇರಿ ಬಿಳಿ ಕಲ್ಲು ಬಿಲ್ಡಿಂಗ್!’ ಎನ್ನುತ್ತಾರೆ.

ಮಕ್ಕಳನ್ನು ನೋಡಿ. ನದೀ ತೀರಕ್ಕೆ, ಸಮುದ್ರ ತೀರಕ್ಕೆ, ಅಲ್ಲಿಗೆ ಇಲ್ಲಿಗೆ ಕರೆದುಕೊಂಡು ಹೋದಾಗ ಮಕ್ಕಳು ಕಲ್ಲುಗಳನ್ನು ಆರಿಸಿ ತರುತ್ತಾರೆ. ನೀವು ಬೈತೀರಾ, ಅವಕ್ಕೆ ಅದೇ ಬೆಳ್ಳಿ ಬಂಗಾರ. ಏನೋ ಮುತ್ತು ರತ್ನ ಸಿಕ್ಕಿಬಿಟ್ಟ ಹಾಗೆ!
ಮಕ್ಕಳಿಗೆ ಅದೇ ಏನೋ ಸಂತೋಷ, ಆಹ್ಲಾದ, ಉತ್ಸಾಹ! ’ಸುಮ್ಮನೆ ಕವಡೆ ಸೇರಿಸ್ತೀರಾ’ ಅಂತ ನೀವು ಮಕ್ಕಳನ್ನು ಬೈಯುತ್ತೀರಾ.

"ವಿಸ್ಮಯೋ ಯೋಗ ಭೂಮಿಕಾ", ಈ ಪ್ರಪಂಚದಲ್ಲಿ ಎಷ್ಟು ವೈವಿಧ್ಯತೆ ಇದೆ ನಿಮಗೆ ವಿಸ್ಮಯ ಉಂಟುಮಾಡುವುದಕ್ಕೋಸ್ಕರ! ಇಲ್ಲಿರುವ ಒಂದೊಂದು ವಸ್ತು ನೋಡ್ತಾ ಇದ್ದ ಹಾಗೇನೇ ಅದರಲ್ಲಿ ಹೊಸತು ಕಣ್ಣಿಗೆ ಗೋಚರವಾಗುತ್ತೆ. ಇಡೀ ಜೀವನ ಸಾಲದು ಹೊಸತನವನ್ನು ಅನುಭವಿಸಲು. ಹೊಸತಿನ ಜೊತೆಗೆ ಒಂದಾಗುವುದೇ ಯೋಗ, ಯಾವುದು ಹೊಸತೆನಿಸುವುದೋ ಅದರಿಂದಲೇ ವಿಸ್ಮಯ ಉಂಟಾಗುತ್ತದೆ.

* * * * *

ಜೀವನ ನಿತ್ಯ ನೂತನ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೪/೦೫/೨೦೦೩ರ೦ದು ಪ್ರಕಟವಾಗಿತ್ತು)

ಜೀವನ ಘಳಿಗ ಘಳಿಗೆಗೂ ಹೊಸದು. ನಿತ್ಯ ನೂತನ ಜೀವನ. ಅದಕ್ಕೇ ಹೇಳೋದು ವಿಸ್ಮಯೋ ಯೋಗ ಭೂಮಿಕಾ - ವಿಸ್ಮಯದಿಂದ ತುಂಬಿಬಿಡಿ! ಬಹಳ ಸರಳವಾದ ಉಪಾಯ. ವಯಸ್ಸಾದಷ್ಟೂ, ದೊಡ್ಡವರಾದಷ್ಟೂ, ಎಲ್ಲಾ ತಿಳಿದುಕೊಂಡಷ್ಟೂ ನಮ್ಮಲ್ಲಿ ವಿಸ್ಮಯ ಪೂರ್ಣ ಸತ್ತೇ ಹೋಗಿಬಿಟ್ಟಿರುತ್ತದೆ. ಅದನ್ನು ಪುನರುಜ್ಜೀವನಗೊಳಿಸಬೇಕು. ಪ್ರತಿ ಕ್ಷಣವನ್ನೂ, ಪ್ರತಿ ದಿನವನ್ನೂ ಹೊಸದಾಗಿ ನೋಡಬೇಕು.

’ಅಯ್ಯೋ ಅದೇ ಸತ್ಸಂಗ, ಅದೇ ಹಾಡು, ಭಜನೆ’; ಅದೇ ದಸರಾನಾ, ಅದೇ ವಸ್ತುಪ್ರದರ್ಶನವೇನ್ರೀ. ಯಾರ್ರೀ ನೋಡ್ತಾರೆ?’ ನಿರುತ್ಸಾಹ! ಅಂದರೆ ಮಾಡಿದ್ದನ್ನೇ ಮಾಡ್ತಾ ಇರಿ ಅಂತ ಅಲ್ಲ! ದಿನಾ ವಸ್ತು ಪ್ರದರ್ಶನದಲ್ಲಿ ಹೋಗಿ ಕುಳಿತುಕೊಳ್ಳಿ ಅಂತ ಹೇಳ್ತಾ ಇಲ್ಲ ನಾವು. ವಿಸ್ಮಯ ನಮ್ಮಲ್ಲಿ ಜಾಗೃತವಾಗಿರಬೇಕು.

ಈ ಅರಿವಿನ ’ಅಜ್ಞೇಯ’ ಸ್ವಭಾವ ಯಾವುದಿದೆ... ಅದನ್ನು ಜಾಗೃತ ಮಾಡಿಕೊಳ್ಳೋಣ. ನಮ್ಮಲ್ಲಿ ನಿಮ್ಮನ್ನು ನೀವು ನೋಡಿ ವಿಸ್ಮಯ ಪಡೀಪ್ಪ!
ನಿಮ್ಮ ಮನಸ್ಸು ನೋಡಿ ಎಂತೆಂಥಾ ಚೇಷ್ಟೆ ಮಾಡುತ್ತೆ, ಏನೆಲ್ಲಾ ಆಲೋಚನೆ ಮಾಡ್ತೀರಾ! ಬೇರೇನು ಬೇಕು ಹೇಳಿ ನಿಮ್ಮ ಮನಸ್ಸು ಸಾಲದೆ? ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರೋದಿಲ್ಲ. ಒಂದು ಕ್ಷಣ ಬರುವ ವಿಚಾರ ಬೇರೆ ಕ್ಷಣ ಇರೋದಿಲ್ಲ. ಮನಸ್ಸು ಹೇಗೆಲ್ಲಾ ಆಟ ಆಡ್ತದೆ! ಈ ನಮ್ಮ ಮನಸ್ಸನ್ನು ನೋಡಿ ವಿಸ್ಮಯ ಪಡಿ ಸಂತೋಷ ಆಗುತ್ತೆ.

ಅದೇ ಕ್ಷಣದಲ್ಲಿ ’ನಮಃ ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶ ವಪುಷೇ’...

ಪುನಃ ಸ್ವಾತ್ಮಾನಂದದಲ್ಲಿ ಮುಳುಗಲು ಆರಂಭವಾಗುತ್ತೆ. ಬೇರೇನೂ ಬೇಡ ವಿಸ್ಮಯ ಒಂದರಿಂದಲೇ ಯೋಗಾರೂಢವಾಗುತ್ತೆ ಮನಸ್ಸು, ಯೋಗದಲ್ಲಿ ನೆಲೆಯುಂಟಾಗುತ್ತದೆ.

* * * * *

ಯಾವುದು ಶಕ್ತಿ?

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೫/೦೫/೨೦೦೩ರ೦ದು ಪ್ರಕಟವಾಗಿತ್ತು)

ಲಹೀನನಾದ ವ್ಯಕ್ತಿ ಆಶ್ಚರ್ಯ ಅಥವಾ ವಿಸ್ಮಯವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಉತ್ಸಾಹ, ಆನಂದ, ಸಂತೋಷ, ವಿಸ್ಮಯ ಇವನ್ನು ಅನುಭವಿಸಬೇಕಾದರೆ ಶಕ್ತಿ ಬೇಕು.
ಮುಂದಿನ ಸೂತ್ರ "ಸ್ವಪದಂ ಶಕ್ತಿಃ"

ಜೀವನದಲ್ಲಿ ಯಾರು ಏನು ಮಾಡಿದರೂ, ದುಡಿದರೂ ಶಕ್ತಿ ಸಂಪಾದನೆಗಾಗಿಯೇ. ಆದರೆ, ದುಡಿಯೋದರಲ್ಲೇ ಶಕ್ತಿ ಎಲ್ಲಾ ಕಳೆದು ಹೋಗಿಬಿಡುತ್ತೆ. ಧನ ಸಂಪಾದಿಸ್ತೀರಿ ಯಾಕೆ? ಗಟ್ಟಿ ಮುಟ್ಟಾಗಿರಬೇಕು ಅಂತ. ಶಕ್ತಿ ಸಂಪಾದನೆಗಾಗಿಯೇ ಧನದ ಸಂಪಾದನೆಯೂ ಆಗ್ತಾ ಇದೆ, ಹೌದಲ್ಲ? ಯಶಸ್ಸು, ಕೀರ್ತಿ ಏತಕ್ಕೆ ಬೇಕು? ಅದರಲ್ಲೇನೋ ಶಕ್ತಿ ಇದೆ!

ಮನೆಯಲ್ಲಿ, ತೆಪ್ಪಗಿರುವ ಮಕ್ಕಳು ಯಾರೋ ಅತಿಥಿಗಳು ಬಂದಾಗ, ನೀವು ಅವರೊಂದಿಗೆ ಮಾತನಾಡ್ತಾ ಇರುವಾಗ ನಿಮ್ಮ ಮುಂದೆ ಬಂದು ಕೂತ್ಕೊಂಡು ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ, "ಅಪ್ಪ ಇದು ಮಾಡಿದೆ ನೋಡು", "ಅಮ್ಮ ಅದು ಮಾಡಿದೆ" ಚಿತ್ರ ಬರೆದು ತಂದು ತೋರಿಸೋದು, ಆಟದ ಸಾಮಾನೆಲ್ಲಾ ತಂದು ಹಾಕೋದು..ಏಕೆ ಮಕ್ಕಳು ಹಾಗೆ ಮಾಡ್ತಾರೆ? ನಿಮ್ಮ ಗಮನ ಸೆಳೆಯುವುದರಿಂದ ಅವರಿಗೇನು ಸಿಗುತ್ತೆ? ಶಕ್ತಿ ಸಿಗುತ್ತೆ, ಬಲ ಸಿಗುತ್ತೆ. ಬಲ ಇಲ್ಲದಿದ್ದರೆ ಜೀವನದಲ್ಲಿ ಯಾವ ಅನುಭವವನ್ನೂ ಮಾಡುವುದಕ್ಕಾಗುವುದಿಲ್ಲ. ಜೀರ್ಣಶಕ್ತಿ ಇಲ್ಲದವನಿಗೆ ಅಜೀರ್ಣ! ಯಾವುದೂ ರುಚಿಕರವಾಗಿರುವುದಿಲ್ಲ, ತಿನ್ನಲು ಮನಸ್ಸಾಗುವುದಿಲ್ಲ.

ಜ್ವರ, ಮೈ ಕೈ ನೋವು, ಕಣ್ಣು ಬಿಡುವುದಕ್ಕೂ ಆಗದವನಿಗೆ ಎಂಥ ಒಳ್ಳೆಯ ದೃಶ್ಯದ ಹತ್ತಿರ ಕರೆದುಕೊಂಡು ಹೋದರೂ ಕಣ್ಣು ಎಳೆದುಕೊಂಡು ಹೋಗಿ ಬಿಡುತ್ತೆ - ನಿದ್ರೆ ಹೋಗಿ ಬಿಡುತ್ತಾನೆ. ನಿದ್ರೆಯಿಂದ ಏನು ಸಿಗುತ್ತೆ? ಶಕ್ತಿ ಸಿಗುತ್ತೆ.

ಆದರೆ, ಯಾವುದನ್ನು ನಾವು ಶಕ್ತಿ ಅಂತ ತಿಳಿದುಕೊಳ್ಳುತ್ತೇವೋ, ಯಾವುದರಿಂದ ಎಲ್ಲಿಂದ ನಮಗೆ ಶಕ್ತಿ ಸಿಗುತ್ತೆ ಅಂತ ತಿಳಿದುಕೊಳ್ಳುತ್ತೀವೋ, ಅಲ್ಲಿ ಶಕ್ತಿಯ ವ್ಯಯ ಆಗುತ್ತಿದೆ. ಕೂಲಂಕಷವಾಗಿ ಪ್ರತಿಯೊಂದು ಘಟನೆಯನ್ನು ನೋಡಿದಾಗ ಎಂಥವರಿಗಾದರೂ ಇದು ಮನದಟ್ಟಾಗಿಯೇ ಆಗುತ್ತದೆ. ಇದರ ಬಗ್ಗೆ ವಿವರವಾಗಿ ಮುಂದೆ ವಿಚಾರ ಮಾಡೋಣ.

* * * * *

ಆಂತರ್ಯದಲ್ಲಿ ವಿಶ್ರಾಂತಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೬/೦೫/೨೦೦೩ರ೦ದು ಪ್ರಕಟವಾಗಿತ್ತು)

ಕ್ತಿ ಎಲ್ಲಿದೆ? ನಿನಗೆ ಶಕ್ತಿ ಯಾವಾಗ ಸಿಗುತ್ತದೆ?
ನೀನೇ ಶಕ್ತಿ! ನಿನ್ನ ಕೇಂದ್ರವೇ ಶಕ್ತಿ! "ಸ್ವಪದಂ ಶಕ್ತಿಃ" ನಿನ್ನಲ್ಲಿ ನೀನು ವಿಶ್ರಮಿಸಿದಾಗ ಶಕ್ತಿ ಸಂಚಯವಾಗುತ್ತದೆ, ಶಕ್ತಿಯ ಸ್ಫುರಣವಾಗುತ್ತದೆ.

ಬೇರೆಯವರು ನಿನ್ನ ಕಡೆ ಗಮನ ಕೊಡಲಿ, ಕೊಡದೆ ಇರಲಿ, ನೀನು ನಿನ್ನ ಕಡೆ ಗಮನ ಹರಿಸು. ನೀನು ಬೇರೆಯವರಿಗೋಸ್ಕರ ನಿನ್ನ ಗಮನ ಹರಿಸ್ತೀಯ; ಅಥವಾ ಬೇರೆಯವರು ನಿನ್ನ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ನೀನು ನಿನ್ನ ಬಗ್ಗೆ ಯೋಚನೆ ಮಾಡ್ತೀಯ. ಅದನ್ನು ಬಿಟ್ಟುಬಿಟ್ಟು ನಿನಗಾಗಿ ನೀನು ನಿನ್ನ ಬಗ್ಗೆ ಏನು ಮಾಡ್ಬೇಕು ಅಂತ ಕೂತ್ಕೊಂಡು ಚಿಂತನೆ ಮಾಡಿದರೆ ಅದೇ ಶಕ್ತಿಸ್ಥಾನವಾಗುತ್ತೆ. ಯಾವ ಸುಖಕ್ಕಾಗಿ ನಾವು ಎಲ್ಲಾ ಕಡೆ ಹಾರಾಡುತ್ತೀವೋ, ಆ ಸುಖ ನಮ್ಮ ಸ್ವರೂಪವೇ ಆಗಿದೆ. ಯಾವ ಶಕ್ತಿಯ ಸಂಚಯಕ್ಕೋಸ್ಕರ ಎಲ್ಲಾ ಕಡೆ ಓಡಾಡ್ತೀರೋ ಆ ಶಕ್ತಿಯ ಸಂಚಯ ನೀವೇ ಆಗಿದ್ದೀರ.

ಶಕ್ತಿಯ ಆಸೆಯಿಂದ, ಶಕ್ತಿಯ ಸಂಚಯ ಮಾಡಿಕೋಬೇಕು ಅಂತ ತಾವು ಬಲಿಷ್ಠರಾಗಬೇಕೆಂಬ ಆಸೆಯಿಂದ ದುರ್ಬಲರಾಗುತ್ತಾರೆ ಜನ. ಮನಸ್ಸಿನಲ್ಲಿ ಎಷ್ಟು ಹೆಚ್ಚು ಮಹತ್ವಾಕಾಂಕ್ಷೆಗಳಿರುತ್ತವೋ, ವ್ಯಕ್ತಿ ಅಷ್ಟೇ ಬಲಹೀನನಾಗಿರುತ್ತಾನೆ ನೋಡಿ. ಅಳುಕು ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಶಕ್ತಿ ಇಲ್ಲ. ಶಕ್ತಿ ಇದ್ದರೆ ಮನಸ್ಸಿಗೆ ಅಳುಕು ಬರುವುದಿಲ್ಲ. ನಿನ್ನನ್ನು ಬಲಹೀನವಾಗಿ ಮಾಡೋದು ಬೇರೆ ಏನೂ ಅಲ್ಲ, ನಿನ್ನ ಆಸೆಯೇ ಆಗಿದೆ. ನಿನ್ನನ್ನು ಭಿಕಾರಿಯನ್ನಾಗಿ ಮಾಡೋದು ನಿನ್ನ ಆಸೆಯೇ! ಮರಳಿ ಬಾನಿನ್ನ ಪಥಕ್ಕೆ, ನಿನ್ನ ಸ್ಥಾನಕ್ಕೆ ಬಾ, ನಿನ್ನಲ್ಲಿ ನೀನಿರು. "ಸ್ವಪದಂ ಶಕ್ತಿ:" - ನೀನೇ ಶಕ್ತಿಯಾಗಿದ್ದೀಯ!

ಸ್ಥಾನಕ್ಕೆ ಪ್ರಾಧಾನ್ಯವಿದೆ, ಒಂದು ದೇವಸ್ಥಾನದಲ್ಲಿ ಗೋಪುರದ ಮೇಲೂ ವಿಷ್ಣುವಿನ ವಿಗ್ರಹ ಇರುತ್ತೆ, ದ್ವಾರಪಾಲಕರ ಸ್ಥಾನದಲ್ಲೂ ಅದೇ ರೀತಿಯ ವಿಷ್ಣುವಿನ ವಿಗ್ರಹವಿರುತ್ತೆ. ಪ್ರಾಕಾರ ಸುತ್ತಿ ಬರ್ತೀರಾ, ಅಲ್ಲಿಯೂ ಅದೇ ಇದೆ. ಆದರೆ ಪೂಜೆ ಆಗುವುದು ಯಾವುದಕ್ಕೆ? ಯಾವುದು ಕೇಂದ್ರ ಸ್ಥಳವಾದ ಗರ್ಭಗುಡಿಯಲ್ಲಿದೆಯೋ ಅದಕ್ಕೆ. ಸ್ಥಾನ! ’ಪದ’ ಮುಖ್ಯ. ಏಕೆಂದರೆ ಅಲ್ಲಿದ್ದಾಗಲೇ ಬೆಲೆ ಬರುತ್ತದೆ. ಅದಕ್ಕೇ "ಸ್ವಪದಂ ಶಕ್ತಿಃ" ಎಂದು ಹೇಳಿದರು. ನಿನ್ನ ಕೇಂದ್ರವಾದ ಆತ್ಮನಲ್ಲಿ, ನಿನ್ನ ಆಂತರ್ಯದಲ್ಲಿ ವಿಶ್ರಮಿಸು, ನೀನೇ ಶಕ್ತಿ!

* * * * *

ಸ್ವಪದಂ ಶಕ್ತಿಃ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೭/೦೫/೨೦೦೩ರ೦ದು ಪ್ರಕಟವಾಗಿತ್ತು)

ಜೀವನದಲ್ಲಿ ನಾವು ಎಲ್ಲಾ ಘಟನೆಗೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೆಲವಕ್ಕೆ ಜವಾಬ್ದಾರಿ ತೆಗೆದುಕೊಳ್ತೀವಿ, ಕೆಲವಕ್ಕೆ ತೆಗೆದುಕೊಳ್ಳುವುದಿಲ್ಲ. ಎಲ್ಲಾ ನಮಗೆ ಸರಿಯಾಗಿ ಆದರೆ ಜವಾಬ್ದಾರಿ ತೆಗೆದುಕೊಳ್ಳೋದು, ’ನಾನು ಮಾಡಿದೆ’ ಅನ್ನೋದು ಇಲ್ಲದಿದ್ದರೆ ’ಅವರು ಮಾಡಿದರು, ಇವರು ಮಾಡಿದರು’ ಅಂತ ಬೇರೆಯವರ ಮೇಲೆ ಹಾಕೋದು.

ಒಂದು ಕಂಪನಿಯಲ್ಲಿ ಒಬ್ಬ ಮ್ಯಾನೇಜರ್ ಇದ್ದಾರೆ ಅಂತಿಟ್ಟುಕೊಳ್ಳೋಣ. ಅವನ ಕೆಳಗೆ ಇಬ್ಬರು ಸಹಾಯಕರು ಇದ್ದಾರೆ.
ಒಬ್ಬ ಸಹಾಯಕ ಯಾವ ಕೆಲಸ ಮಾಡಿದರೂ, ತನ್ನ ಕೆಳಗಿನವರು ಮಾಡಿದ ಕೆಲಸದಲ್ಲಿ ತಪ್ಪುಗಿಪ್ಪು ಇದ್ದರೆ ಸೀದಾ ಹೋಗಿ ಮ್ಯಾನೇಜರರಿಗೆ ದೂರು ಹೇಳ್ತಿದ್ದ. ’ನನ್ನ ಕೆಳಗಿನವರು ಹಾಗೆ ಮಾಡಿಲ್ಲ, ಹೀಗೆ ಮಾಡಿಲ್ಲ’ ಅಂತ. ಕಡೆಗೆ ಮ್ಯಾನೇಜರರಿಗೆ ಬೇಸರ ಬಂದು ಇವನನ್ನು ಬಿಟ್ಟು, ಇವನ ಕೆಳಗಿನ ಕೆಲಸಗಾರರನ್ನೇ ನೇರವಾಗಿ ಮಾತನಾಡಿಸತೊಡಗಿದರು.

ಇನ್ನೊಬ್ಬ ಸಹಾಯಕ..ತನ್ನ ಕೆಳಗಿರುವವರು ಏನು ತಪ್ಪು ಮಾಡಿದರೂ, ಸರಿ ಮಾಡಿದರೂ ಜವಾಬ್ದಾರಿ ತಾನು ತೆಗೆದುಕೊಂಡ, ’ನಾನು ನೋಡಿಕೊಳ್ತೀನಿ’ ಅಂತ. ಈ ತರಹ ಇರುವವನಿಗೆ ಮುಂದೆ ಪ್ರೊಮೋನ್ ಸಿಕ್ಕಿತು.

ಎಷ್ಟೋ ಜನ ದೂರು ಹೇಳುವುದರಲ್ಲಿ ತಮ್ಮ ಬಲ ಕಂಡುಕೊಳ್ಳುತ್ತಾರೆ. ದೂರು ಹೇಳಿದರೆ ಅಥವಾ ತಪ್ಪು ಕಂಡುಹಿಡಿದರೆ ನಾವು ತುಂಬಾ ಬಲಶಲಿಗಳಾಗ್ತೀವಿ ಅಂತ. ಭ್ರಮೆ!

ನಮ್ಮ ಶಕ್ತಿ ಎಲ್ಲಿದೆ ಅಂತ ನಾವು ಕಂಡುಕೊಂಡಿಲ್ಲ. ಅದು ನಾವೇ ಆಗಿದ್ದೀವಿ. ಶಕ್ತಿ ಇದ್ದಾಗಲೇ ನೀವು ಮುಗ್ಧತೆಯಿಂದ ಇರಲುಸಾಧ್ಯ. ಶಕ್ತಿಯಿದ್ದಾಗಲೇ ನೀವು ಪ್ರೇಮದಿಂದ ಇರಲು ಸಾಧ್ಯ. ಶಕ್ತಿಯ ಸೂಚನೆ ಅದು. ಮಗುವಿನ ಹಾಗೆ ನಿನ್ನ ಮನಸ್ಸಿರಬೇಕಾದರೆ "ಸ್ವಪದಂ ಶಕ್ತಿಃ". ನಿನ್ನ ಸ್ಥಾನದಲ್ಲಿ ನೀನಿರಬೇಕು. ನಿನ್ನ ಪದದಲ್ಲಿ ನೀನಿದ್ದಾಗಲೇ ಅದು ಸಾಧ್ಯವಾಗುವುದು.

* * * * *

ಕುತರ್ಕ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೮/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೂರು ತರಹದ ತರ್ಕವಿದೆ. ತರ್ಕ, ಕುತರ್ಕ, ವಿತರ್ಕ. ತರ್ಕ ಇಲ್ಲದ ಜೀವನ ಇರುವುದಕ್ಕೆ ಸಾಧ್ಯವೇ ಇಲ್ಲ. ತರ್ಕ ಬೇಕು. ಆದರೆ ಆ ತರ್ಕ ಕುತರ್ಕವಾಗದೇ ಇರುವ ಹಾಗೆ ನೋಡಿಕೋಬೇಕು. ಕುತರ್ಕವೆಂದರೆ - ಎಲ್ಲದರಲ್ಲೂ ದೋಷ ಕಂಡುಹಿಡಿಯುವುದು. ಒಂದು ಒಳ್ಳೆಯ ಉದ್ದೇಶದಲ್ಲಿಯೂ, ಒಳ್ಳೆಯ ಕಾರ್ಯದಲ್ಲಿಯೂ ದುರುದ್ದೇಶವನ್ನು ನೋಡುವುದು, ಇದು ಕುತರ್ಕ. ಕುತರ್ಕ ನಿನಗೆ ಅಶಾಂತಿ ಉಂಟುಮಾಡುತ್ತದೆ.

ಈಗ ಯಾರಿಗೋ ನಿಮ್ಮ ಜೊತೇನೋ ಯಾರ ಜೊತೇನೋ ಮನಸ್ಸಿಗೆ ವಿರಸವಾಗಿದೆ, ಬೇಜಾರಾಗಿದೆ ಅಂತಿಟ್ಟುಕೊಳ್ಳಿ. ಅವರು ತಮ್ಮ ತಪ್ಪನ್ನು ತಿಳಿದುಕೊಂಡು ಮುಂದೆ ಬಂದು ’ನಂದು ತಪ್ಪಾಗಿದೆ’ ಅಂತ ಸರಿಮಾಡಿಕೊಳ್ಳಲು ಸ್ವೀಟ್ ಅದೂ ಇದೂ ತೆಗೆದುಕೊಂಡು ಬರ್ತಾರೆ ಮನೇಗೆ ಅಂದುಕೊಳ್ಳಿ. ಆಗ ಕುತರ್ಕ - ’ಇದನ್ನೆಲ್ಲ ತೆಗೆದುಕೊಂಡು ಬಂದಿದ್ದಾರಲ್ಲ, ಓ! ಏನೋ ಇರಬೇಕು, ಏನೋ ಹೊಂಚು ಹಾಕ್ತಾ ಇರಬೇಕು. ಇಲ್ಲದಿದ್ದರೆ ಸುಮ್ಮಸುಮ್ಮನೆ ತರ್ತಾರಾ, ಅಂತ ತರ್ಕ ಮಾಡೋದು ಮನಸ್ಸಿನಲ್ಲಿ.

ಇಲ್ಲದಿದ್ದರೆ, ಇವರು ಯಾಕೆ ಇವತ್ತು ತುಂಬ ಚೆನ್ನಾಗಿ ಮಾತಾಡ್ತಾ ಇದ್ದಾರಲ್ಲ, ಏನೋ ಹೊಂಚು ಹಾಕ್ತಾ ಇದ್ದಾರೆ ಇವರು ಅಂದುಕೊಳ್ಳೋದು. ಎಲ್ಲಾ ಒಳ್ಳೆಯ ಸ್ವಭಾವದಲ್ಲೂ, ಯಾವುದೇ ಒಳ್ಳೆಯ ಕೆಲಸದಲ್ಲಿಯೂ ಎಲ್ಲದರಲ್ಲೂ ಅದರಲ್ಲೇನೋ ಒಂದು ದೋಷ ಇದೆ ಅಂತ ಹುಡುಕೋದು. ಇದು ಕುತರ್ಕದಿಂದ ಉಂಟಾಗುತ್ತೆ.

ಮುಂದಿನ ಸೂತ್ರ "ವಿತರ್ಕ ಆತ್ಮ ಜ್ಞಾನಂ". ಮುಂಬರುವ ದಿನಗಳಲ್ಲಿ ಈ ಬಗ್ಗೆ ಅರಿತುಕೊಳ್ಳೋಣ.

ಬುಧವಾರ, ನವೆಂಬರ್ 7, 2012

ಕೋಪವನ್ನು ನಿಭಾಯಿಸುವುದು


೭ ನವೆ೦ಬರ್ ೨೦೧೨
ಬೆಂಗಳೂರು, ಭಾರತ

ಪ್ರ: ಗುರುದೇವ, ಪ್ರತಿಯೊಂದು ಸತ್ಸಂಗಕ್ಕೂ ನೀವು ಮುಂಚಿತವಾಗಿ ತಯಾರಾಗುತ್ತೀರೋ ಅಥವಾ ಧ್ಯಾನವನ್ನು ಆ ಕ್ಷಣದಲ್ಲೇ ಸೃಜಿಸುತ್ತೀರೋ ಎಂಬುದು ನನಗೆ ಅಚ್ಚರಿಯಾಗಿದೆ?
ಶ್ರೀಶ್ರೀರವಿಶಂಕರ್: ಅದು ಆ ಕ್ಷಣದಲ್ಲಿ ಉಂಟಾಗುತ್ತದೆ. ನಾನು ಯಾವ ತಯಾರಿಯನ್ನೂ ಮಾಡುವುದಿಲ್ಲ. ನಾನು ರೆಡಿಮೇಡ್ (ನಗೆ).

ಪ್ರ: ಪಕ್ಷಪಾತಿಯಾಗದೇ ನ್ಯಾಯಪರತೆಯನ್ನು ಹೇಗೆ ನಿಭಾಯಿಸುವುದು? ನಾನು ತಪ್ಪೆಂದೆನಿಸಿದರೆ ಹಿಂದಕ್ಕೆ ಸರಿಯುತ್ತೇನೆ, ಅದರಿಂದ ನನ್ನ ಕ್ಷಮಿಸುವ ಮತ್ತು ಮರೆಯುವ ಸಾಮಥ್ರ್ಯವು ಸೀಮಿತಗೊಳ್ಳುತ್ತದೆ.
ಶ್ರೀಶ್ರೀರವಿಶಂಕರ್: ಕೋಪ ಮಾಡಿಕೊಳ್ಳುವವರೆಲ್ಲರೂ ಹಾಗೆ ಸದಾಚಾರದಿಂದಲೇ ಕೋಪಗೊಳ್ಳುವುದು. ಆದರೆ ಅವರ ನ್ಯಾಯಪರತೆಯ ಕಲ್ಪನೆಯು ತುಂಬಾ ಸೀಮಿತವಾದುದು. ಈ ಪ್ರಪಂಚದಲ್ಲಿ ಎಲ್ಲ ರೀತಿಯ ಆಗು-ಹೋಗುಗಳು ನಡೆಯುತ್ತವೆ, ಅದಕ್ಕೆ ತಾಳ್ಮೆ ಬೇಕು.
ಕೇವಲ ನ್ಯಾಯಪರತೆಯನ್ನು ಬಯಸುವುದು ಮತ್ತು ‘ನಾನು ನ್ಯಾಯಬದ್ಧನಾಗಿರಬೇಕು. ನನಗೆ ಎಲ್ಲರೂ ನ್ಯಾಯಬದ್ಧರಾಗಿರಬೇಕು, ಈಗಲೇ’ ಎಂದರೆ, ಅದು ಸಾಧ್ಯವಿಲ್ಲ.
ಎಲ್ಲರೂ ನ್ಯಾಯಬದ್ಧರಾಗಿರಬೇಕೆಂಬುದು ಸರಿಯೇ, ಆದರೆ ಅವರಿಗೆ ತಪ್ಪು ಮಾಡಲು ಅವಕಾಶ ನೀಡಬೇಕು. ನ್ಯಾಯಬದ್ಧತೆಯೊಂದಿಗೆ ತಾಳ್ಮೆಯಿರಲಿ, ಆಗ ಕೋಪ ಬರುವುದಿಲ್ಲ.
ಇಲ್ಲದ್ದಿದ್ದರೆ, ‘ನಾನು ನೀತಿವಂತ’ ಎನ್ನುವುದು, ‘ನನಗೆ ಹೀಗಿರಬೇಕು’ ಎಂದು ತಗಾದೆ ಮಾಡಿದರೆ, ಆಗ ಕೋಪ ಉಕ್ಕುವುದು, ಕೋಪ ಬಂದರೆ, ನೀವು ನಿಮ್ಮ ನ್ಯಾಯಪರತೆಯನ್ನು ಕಳೆದುಕೊಳ್ಳುವಿರಿ. ನೀವು ಸಿಟ್ಟಾದರೆ, ಬೇರೆಯವರು ತಪ್ಪು ಮಾಡಿದಷ್ಟೇ ಕೆಟ್ಟದಾಗಿರುತ್ತದೆ.
ಒಂದು ವೇಳೆ ಈ ಸ್ಥಳವನ್ನು ಯಾರೂ ಸ್ವಚ್ಛಗೊಳಿಸದ್ದಿದ್ದರೆ, ಇದು ಕೊಳಕಾಗಿರುತ್ತದೆ. ನೀವು ಇಲ್ಲಿಗೆ ಬಂದು ಸಿಟ್ಟಾಗುವಿರಿ. ಈಗ ಆ ವ್ಯಕ್ತಿಯು ಸ್ವಚ್ಚಗೊಳಿಸದೇ ತಪ್ಪು ಮಾಡಿರುವುದು ಸರಿ. ಆದರೆ ನೀವು ಅದಕ್ಕೆ ಸಿಟ್ಟಾಗಿ, ಕೂಗುವುದು, ಕಿರುಚುವುದು ಮಾಡಿದರೆ ಅದು ಇನ್ನೊಂದು ತಪ್ಪು.
ಎರಡು ತಪ್ಪುಗಳು ಸೇರಿ ಒಂದು ತಪ್ಪನ್ನು ಸರಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾರಾದರೂ ತಪ್ಪು ಮಾಡಿದರೆ, ಸಮಾಧಾನವಾಗಿ ಒಂದು, ಎರಡು, ಮೂರು ಬಾರಿ ಹೇಳಿ ತಿದ್ದಿ.
ಶಿಕ್ಷಕರಾಗಲು ನಿಮಗೆ ತುಂಬಾ ತಾಳ್ಮೆ ಬೇಕು. ಈಗಿನ ಕಾಲದ ಶಾಲೆಯ ಉಪಾಧ್ಯಾಯರಿಗೆ ಇದೊಂದು ಸವಾಲಾಗಿದೆ. ಹತ್ತು ಸಾರಿ ಹೇಳಿದರೂ ಮಕ್ಕಳು ಅವರ ಮಾತನ್ನು ಕೇಳುವುದಿಲ್ಲ. ಮಕ್ಕಳಿಗೆ ಶ್ರದ್ಧೆಯ ಅಭಾವದ ರೋಗಲಕ್ಷಣವಿದೆ. ಮಕ್ಕಳು ಗಮನ ಕೊಡುವುದಿಲ್ಲ. ಆದ್ದರಿಂದ ತಾಳ್ಮೆ ಅಗತ್ಯ.
ತಾಳ್ಮೆ ಒಂದು ಸದ್ಗುಣ. ಆರು ಸಂಪತ್ತುಗಳಲ್ಲಿ ಒಂದು: ಶಮ (ಸಹನೆ ಅಥವಾ ಶಾಂತ ಮನಸ್ಸು), ದಮ (ಸ್ವ-ನಿಗ್ರಹ ಅಥವಾ ನಿಗ್ರಹ), ಉಪರತಿ (ಲೌಕಿಕ ವಸ್ತುಗಳಿಂದ ಸ್ವಯಂ ಹಿಂದೆಗೆಯುವುದು), ತಿತೀಕ್ಷೆ (ಸಹಿಸುವ ಶಕ್ತಿ), ಶ್ರದ್ಧೆ (ನಂಬಿಕೆ) ಮತ್ತು ಸಮಾಧಾನ (ಸಮಚಿತ್ತತೆ ಅಥವಾ ಏಕಾಗ್ರಚಿತ್ತತೆ). ಸಮಾಧಾನವೆಂದರೆ ತೃಪ್ತಿ ಮತ್ತು ತಾಳ್ಮೆಯನ್ನು ಹೊಂದಿರುವುದು.  ಅದು ಅತ್ಯವಶ್ಯಕ.

ಪ್ರ: ಗುರುದೇವ, ಜೀವಿಸಲು ನಮಗಿಂತ ದೊಡ್ಡದಾದ ಗುರಿಯನ್ನು ಹೇಗೆ ಕಂಡುಹಿಡಿಯುವುದು? ಶೋಧನಾ ಮಾರ್ಗವಿದೆಯೇ ಅಥವಾ ಆ ಗುರಿಯೇ ನಮ್ಮನ್ನು ಹುಡುಕುವುದೇ?
ಶ್ರೀಶ್ರೀರವಿಶಂಕರ್: ನೀವೇನಾಗಬೇಕೆಂದು ಬಯಸುವಿರೋ ಮತ್ತು ನೀವೇನು ಮಾಡಬೇಕೆಂದಿರುವಿರೋ, ಅಂತಹ ಗುರಿ, ದೃಷ್ಠಿಕೋನ ನಿಮಗಿರಬೇಕು.
ಒಂದು ನಿಮ್ಮ ಸ್ವಂತ ಗುರಿ: ಜೀವನದಲ್ಲಿ ನಾನು ಇಂತಿಂತಹದನ್ನು ಪಡೆಯಬೇಕು.
ಇನ್ನೊಂದು ಪ್ರಪಂಚದ ಪ್ರತಿ ನಿಮಗಿರಬೇಕಾದ ಗುರಿ: ನಾನು ಏನ್ನನ್ನು ಕೊಡಲಿಚ್ಛಿಸುತ್ತೇನೆ?
ಸಾಮಾನ್ಯವಾಗಿ, ಗುರಿಯ ಬಗ್ಗೆ ಯೋಚಿಸಿದಾಗ, ಅದರಿಂದೇನು ಪಡೆಯಬಹುದೆಂದು ಆಲೋಚಿಸುವಿರಿ. ಆದ್ದರಿಂದಲೇ ಎರಡು ಗುರಿಯನ್ನು ಹೊಂದಿರಬೇಕೆಂದು ನಾನು ಹೇಳುವುದು: ಒಂದು ನಿಮಗೇನು ಬೇಕೋ ಅದು, ಇನ್ನೊಂದು ನೀವೇನ್ನನ್ನು ಕೊಡಲಿಚ್ಛಿಸುತ್ತೀರೋ ಅದು. ಇವೆರಡೂ ಒಂದೇ ಆಗುವುದಾದರೆ ಇನ್ನೂ ಉತ್ತಮ.

ಪ್ರ: ಗುರುದೇವ, ನಮ್ಮ ಆಹಾರದ ಪದ್ಧತಿಯನ್ನು ಬದಲಾಯಿಸಿದರೆ ಕೋಪವನ್ನು ನಿಯಂತ್ರಿಸಬಹುದೇ? ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಹೆಚ್ಚು ಕೋಪ ಬರುವುದೆಂದು ಹೇಳುತ್ತಾರೆ.
ಶ್ರೀಶ್ರೀರವಿಶಂಕರ್: ನೀವು ಪ್ರಯತ್ನ ಮಾಡಿ ನೋಡಿ. ಒಂದು ವಾರ ನೀವು ಉಪ್ಪು-ಖಾರವಿಲ್ಲದ  ಆಹಾರ ಸೇವಿಸಿ ನೋಡಿ. ಅದು ಸಾಧ್ಯ. ಅದರೆ ಕೆಲವರು ಖಾರದ ಪುಡಿ ಹಾಕಿದ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೂ ಕೋಪಗೊಳ್ಳುವುದಿಲ್ಲ. ಅದೂ ಸಾಧ್ಯ.

ಸೋಮವಾರ, ನವೆಂಬರ್ 5, 2012

ನಿಮಗೆ ಆಶೀರ್ವಾದ ಲಭ್ಯವಾಗಿದೆ

೫ ನವೆ೦ಬರ್ ೨೦೧೨ 

ಬೆಂಗಳೂರು, ಭಾರತ


ಪ್ರ: ‘ಪಾದಪೂಜೆ’ (ಅತಿಥಿಗಳ ಪಾದವನ್ನು ನೀರಿನಿಂದ ತೊಳೆದು ಹೂಗಳನ್ನು ಅರ್ಪಿಸಿ ಸ್ವಾಗತಿಸುವ ಪ್ರಾಚೀನ ಭಾರತದ ಒಂದು ಪದ್ಧತಿ) ಯನ್ನು ಏಕೆ ಮಾಡುತ್ತೇವೆ? ಅದರ ಮಹತ್ವವೇನು?
ಶ್ರೀಶ್ರೀರವಿಶಂಕರ್: ಹಿಂದಿನ ಕಾಲದಲ್ಲಿ ಗೌರವಾನ್ವಿತ ಅತಿಥಿಗಳನ್ನು ಮನೆಗೆ ಬರಮಾಡಿಕೊಂಡಾಗ ಅವರ ಪಾದಗಳನ್ನು ತೊಳೆಯುತ್ತಿದ್ದರು. ಅವರು ನಡೆದು ಬರುತ್ತಿದ್ದು, ಕಾಲು ಕೊಳಕಾಗಿರುತ್ತಿದ್ದ ಕಾರಣ ಮೊದಲು ಕಾಲು ತೊಳೆಯುತ್ತಿದ್ದರು. ನಮ್ಮ ನಮ್ರತೆಯನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೆವು.
ಕೆಲವು ಬಾರಿ ಅತಿಥಿಗಳು ನಮ್ಮ ಮನೆಗೆ ಬಂದಾಗ ಅವರನ್ನು ಹೂವಿನ ಹಾರದೊಂದಿಗೆ ಅಥವಾ ಹೂವು ಇಲ್ಲವೇ ಬುಕೆಯನ್ನು ಕೊಟ್ಟು ಆದರಿಸುತ್ತೇವೆ. ಒಂದಾನೊಂದು ಕಾಲದಲ್ಲಿ ಪ್ರಪಂಚದಾದ್ಯಂತ ಅತಿಥಿಗಳನ್ನು ಈ ರೀತಿಯಲ್ಲಿ ಸತ್ಕರಿಸುತ್ತಿದ್ದರು.
ಹಿರಿಯರ ಕಾಲುಗಳನ್ನು ತೊಳೆಯುವುದರ ಹಿಂದೆ ಕೈಕಾಲುಗಳಿಂದ ಶಕ್ತಿಯು ಪ್ರಸರಿಸುವುದೆಂಬ ಕಾರಣವೂ ಇತ್ತು. ಆದ್ದರಿಂದಲೇ ಜನರು ‘ದಯವಿಟ್ಟು ನಿಮ್ಮ ಕೈಗಳನ್ನು ನನ್ನ ತಲೆಯ ಮೇಲಿಟ್ಟು ಆಶೀರ್ವದಿಸಿ’ ಎಂದು ಕೇಳಿಕೊಳ್ಳುತ್ತಿದ್ದರು.
ಭಾರತದಲ್ಲಿ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆಯುವುದು ವಾಡಿಕೆ. ಆದರೆ ಶಕ್ತಿ ಅಥವಾ ಕಂಪನಗಳು ಪಾದಗಳಿಂದಲೇ ಪ್ರಸರಿಸುವುದೆಂಬುದು ನಿಜವಲ್ಲ, ಇಡೀ ಶರೀರದಿಂದ ಅದು ಪ್ರಸರಿಸುವುದು. ದೃಷ್ಟಿ ಹಾಗೂ ಮಾತುಗಳಿಂದ ಅದೇ ಫಲವನ್ನು ಪಡೆಯಬಹುದು. ಇದು ಆಶೀರ್ವಾದದ ಮಹತ್ವ.
ಹಿರಿಯರನ್ನು ನೆನೆಯುವುದರಿಂದಲೇ ಆಶೀರ್ವಾದವನ್ನು ಪಡೆಯುತ್ತೇವೆ. 
ಆಲೋಚನೆ, ಮಾತು, ದೃಷ್ಟಿ ಹಾಗೂ ಸ್ಪರ್ಶದಿಂದ ಆಶೀರ್ವಾದವನ್ನು ಪಡೆಯುತ್ತೇವೆ.
ದರ್ಶನ, ಸ್ಪರ್ಶ ಮತ್ತು ದೃಷ್ಟಿಯಿಂದ ಆಶೀರ್ವಾದವನ್ನು ಪಡೆಯುತ್ತೇವೆ.
ಹಾಗೆಂದ ಮಾತ್ರಕ್ಕೆ, ನೀವು, ‘ಗುರೂಜೀ, ನನ್ನ ತಲೆಯನ್ನು ಸ್ಪರ್ಶಿಸಿ ಆಶೀರ್ವದಿಸಿ’ ಎಂದು ಕೇಳಬಾರದು. ಇತ್ತೀಚೆಗೆ ಕೆಲವು ಭಕ್ತರು ಹರಸುವುದು ಹೇಗೆಂದು ಗುರುಗಳಿಗೇ ಕಲಿಸಲು ಮುಂದಾಗುತ್ತಾರೆ. ಅನುಗ್ರಹ ಮತ್ತು ಆಶೀರ್ವಾದಗಳು ತಂತಾನೆ ಬರುವುದು. ನನ್ನ ಪಾದಗಳನ್ನು ಸ್ಪರ್ಶಿಸುವುದರಿಂದ ಅಥವಾ ನಿಮ್ಮ ತಲೆಯ ಮೇಲೆ ಕೈಯಿಡಲು ಕೇಳಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ದರ್ಶನ ಅಥವಾ ಧ್ವನಿ ಆಲಿಸುವುದರಿಂದಲೇ ಆಶೀರ್ವಾದ ದೊರೆಯಿತೆಂದು ಭಾವಿಸಿರಿ.
ನೀವೆಲ್ಲೇ ಕುಳಿತಿರಿ, ಮನಸ್ಸಿನಲ್ಲಿ ಆಶೀರ್ವದಿಸುವಂತೆ ಬೇಡಿಕೊಳ್ಳಿ, ನಿಮಗೆ ಆಶೀರ್ವಾದ ದೊರೆಯುವುದು.
ಇದೇ ರೀತಿಯಲ್ಲಿ ಶ್ರಾದ್ಧವನ್ನು ಆಚರಿಸುವುದು (ಪಿತೃಗಳನ್ನು ಗೌರವಿಸುವ ಒಂದು ಸಂಪ್ರದಾಯ). ಒಂದು ಕಡೆ ಕುಳಿತು ಇನ್ನೊಂದು ಕಡೆಗೆ ದಾಟಿರುವವರನ್ನು (ಮೃತರಾದವರನ್ನು) ಸ್ಮರಿಸಿಕೊಂಡು, ಹರಸುವಂತೆ ಅವರಲ್ಲಿ ಪ್ರಾರ್ಥಿಸಿಕೊಳ್ಳುವುದು. ಹೀಗೆ ಆಲೋಚಿಸುವುದರಿಂದಲೇ ನಮಗೆ ಕಂಪನಗಳು ಮೂಡುವುದು.
ಇದು ಹೇಗೆ ಸಾಧ್ಯವೆಂದು ನೀವು ಕೇಳಬಹುದು. ಕಾಮವಾಸನೆಯು ಹೇಗೆ ಉಂಟಾಗುವುದು? ಕೇವಲ ಆಲೋಚನೆಯಿಂದಲೇ ಅಲ್ಲವೇ? ನಂತರ ಹಾರ್ಮೋನುಗಳು ಹೆಚ್ಚಾಗಿ ಉತ್ಪತ್ತಿಯಾಗುವುದು.
ನಿಮಗೆ ಕೋಪ ಹೇಗೆ ಬರುವುದು? ಕೇವಲ ಆಲೋಚನೆಯಿಂದಲೇ.
ದ್ವೇಷ ಹೇಗೆ ಉಂಟಾಗುವುದು? ನೀವು ಯಾರನ್ನು ಇಷ್ಟಪಡುವುದಿಲ್ಲವೋ ಅವರ ಬಗ್ಗೆ ಆಲೋಚಿಸುವುದರಿಂದ. ನಿಮಗೆ ಯಾರು ಇಷ್ಟವಿಲ್ಲವೋ ಅವರನ್ನು ಕುರಿತು ಆಲೋಚಿಸಿ, ನಿಮ್ಮ ಶರೀರವು ಕಂಪಿಸಲು ಶುರುವಾಗುವುದು.
ಭಯ ಹೇಗೆ ಉಂಟಾಗುವುದು? ಆಲೋಚಿಸುವುದರಿಂದ.
ಆದ್ದರಿಂದ, ಕೇವಲ ಆಲೋಚಿಸುವುದರಿಂದ, ಕಾಮ, ಕೋಪ, ಭಯ, ದ್ವೇಷ ಉಂಟಾಗುವುದಾದರೆ, ಆಶೀರ್ವಾದವೂ ಉಂಟಾಗುವುದಲ್ಲವೇ? ಆಶೀರ್ವಾದವು ಅಷ್ಟು ಪರಿಣಾಮಕಾರಿಯಲ್ಲವೆಂದೇ, ಅಥವಾ ಅದಕ್ಕಾಗಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಅದು ಲಭ್ಯವಾಗುವುದೆಂದು ಭಾವಿಸಿರುವಿರೇ? ಇಲ್ಲ! ನೀವೇನನ್ನೂ ಮಾಡುವ ಅಗತ್ಯವಿಲ್ಲ. ಕೇವಲ ಆಲೋಚನೆಯನ್ನು ಮಾಡುವುದರಿಂದಲೇ ನಿಮಗೆ ಆಶೀರ್ವಾದ ಪ್ರಾಪ್ತಿಯಾಗುವುದು.
ಅದಕ್ಕಾಗಿಯೇ, ದುರ್ಗಾ ಸಪ್ತಶತಿಯಂತಹ ಹಲವಾರು ಧರ್ಮ ಗ್ರಂಥಗಳಲ್ಲಿಹೇಳಿರುವುದು- ಕೇವಲ ಪಠಣೆ ಮಾಡುವುದರಿಂದಲೇ ನಿಮಗೆ ಸಂತೋಷವುಂಟಾಗುವುದು. ಇದರ ಉದ್ದೇಶ, ದೇವರ ಆಲೋಚನೆಯಿಂದಲೇ ಆಶೀರ್ವಾದವನ್ನು ಪಡೆಯಬಹುದೆಂದು. ಹೀಗೆಯೇ …
ಆದ್ದರಿಂದ ಎಂದಾದರೂ ನಿಮಗೆ ಧನ್ಯತಾ ಭಾವವುಂಟಾದರೆ ಅದರೊಂದಿಗೆ ಆಶೀರ್ವಾದವೂ ಬಂದಿರುವುದೆಂದು ತಿಳಿಯಿರಿ.

ಪ್ರ: ಶರಣಾಗತಿಯಿಂದ ಎಲ್ಲವನ್ನೂ ಪಡೆಯಬಹುದೆಂದು ಹೇಳುತ್ತಾರೆ; ಹಾಗಾದರೆ ಯಾರು ಎಲ್ಲವನ್ನೂ ಪಡೆದಿಲ್ಲವೋ ಅವರು ಸಂಪೂರ್ಣವಾಗಿ ಶರಣಾಗತರಾಗಿಲ್ಲವೆಂದು ತಿಳಿಯಬಹುದೇ?
ಶ್ರೀಶ್ರೀರವಿಶಂಕರ್: ಎಲ್ಲವನ್ನೂ ಬೇಡುವ ಮೊದಲು ಎಚ್ಚರವಹಿಸುವುದೂ ಅಗತ್ಯ. ನೀವು ಎಲ್ಲವನ್ನೂ ಬೇಡಿದರೆ, ಅದು ಒಳ್ಳೆಯದು, ಕೆಟ್ಟದ್ದು ಎರಡನ್ನೂ ಹೊಂದಿರುತ್ತದೆ. ಸಂತೋಷ, ದುಃಖ, ಸಮಸ್ಯೆಗಳು, ಇವೆಲ್ಲವೂ ಸೇರಿರುತ್ತದೆ. ಇವೆಲ್ಲವೂ ಜೀವನದ ಒಂದು ಭಾಗವಾಗಿದೆ.
ನೋಡಿ, ನಿಮ್ಮ ಮನಸ್ಸಿನಲ್ಲಿ ಸ್ಪಷ್ಟತೆಯಿಲ್ಲ. ನಿಮಗೇನು ಬೇಕೆಂದು ನಿಮಗೇ ಅರಿವಿಲ್ಲ. ಒಂದು ದಿನ ಎಲ್ಲಿಯಾದರೂ ಆರಾಮವಾಗಿ ಕುಳಿತುಕೊಂಡು ನಿಜವಾಗಲೂ ನಿಮಗೆ ಏನು ಬೇಕೆಂದು ಆಲೋಚಿಸಿರಿ. ನಿಮಗೆ ಅನೇಕ ಆಸೆಗಳಿರುವುದು, ನಿಮ್ಮ ಮನಸ್ಸು ಅದರೊಡನೆ ಸಿಕ್ಕಿಹಾಕಿಕೊಳ್ಳುವುದು; ಇದು ಸರಿಯಲ್ಲ. ಒಂದು ಆಸೆಯನ್ನು ಇಟ್ಟುಕೊಂಡು ಅದನ್ನು ಗಮನಿಸಿ. ತಮ್ಮ ಯಾವುದೇ ಆಸೆಗಳು ಪೂರ್ಣವಾಗಿಲ್ಲವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗೆಯೇ ತಮ್ಮೆಲ್ಲಾ ಆಸೆಗಳು ಶೇ.100 ರಷ್ಟು ಈಡೇರಿರುವುದೆಂದು ಹೇಳಲು ಸಾಧ್ಯವಿಲ್ಲ.
ಸತ್ವ ಹೆಚ್ಚಾದಷ್ಟು ಪೂರ್ಣತೆಯ ಭಾವ ಹೆಚ್ಚಾಗುವುದು ಮತ್ತು ನೀವು ಯತ್ನಿಸುವ ಕಾರ್ಯ ಈಡೇರುವುದು.
ಹೆಚ್ಚು ಆನಂದದ ಸ್ಥಿತಿಯಲ್ಲಿದ್ದರೆ, ಹೆಚ್ಚು ಕೆಲಸ ಪೂರ್ಣಗೊಳ್ಳುವುದು. ಆಸೆಗಳು ಪೂರ್ಣಗೊಳ್ಳುವ ತೀವ್ರತೆಯು ಕಡಿಮೆಯಿದ್ದಷ್ಟೂ ನಿಮ್ಮ ಆಸೆಗಳು ನೆರೆವೇರುವುದು.
ಪ್ರತಿ ಕ್ಷಣವೂ ಹೊಸದೊಂದು ಬಯಕೆಯೊಂದಿಗೆ ನೀವು ಕುಳಿತರೆ, ಆಗ ಗಣಕಯಂತ್ರದಂತಿರುವ ನಮ್ಮ ಪ್ರಜ್ಞೆಗೆ ಗೊಂದಲವಾಗುವುದು - ಹೇಗೆ ನೀವು ಸಾಮಾನ್ಯವಾಗಿ ‘ಹ್ಯಾಂಗ್’ ಆಯಿತೆಂದು ಹೇಳುವಿರೋ, ಹಾಗೆಯೇ ಕೂಡಲೇ ಪ್ರಜ್ಞೆಯು ಕೆಲಸಗಳನ್ನು ಸ್ಥಗಿತಗೊಳಿಸುವುದು.
ನಿಮ್ಮ ಸೆಲ್‍ಫೆÇೀನ್ ಸಹ ಅನೇಕ ಕೆಲಸಗಳನ್ನು ಒಂದೇ ಬಾರಿಗೆ ನಿರ್ವಹಿಸಲು ತೊಡಗಿದರೆ, ಅದು ಕೆಲಸ ಮಾಡುವುದನ್ನು ನಿಲ್ಲಿಸುವುದು. ಸೆಲ್‍ಫೆÇೀನ್ ನಂತೆ ನಮ್ಮ ಪ್ರಜ್ಞೆಯೂ ಕೂಡ ಒಂದು ದೊಡ್ಡ ಗಣಕಯಂತ್ರದಂತೆ. ಅದಕ್ಕಾಗಿಯೇ, ಬಯಸುವುದೂ ಒಂದು ಕಲೆ, ಮತ್ತು ಬಯಕೆಯನ್ನು ಪೂರ್ಣಗೊಳಿಸುವುದೂ ಒಂದು ಕಲೆ.
ಇದರ ನಂತರ, ಬಯಸದೇ ಆಸೆಗಳನ್ನು ಈಡೇರಿಸಿಕೊಳ್ಳುವುದು ಅದಕ್ಕಿಂತಲೂ ದೊಡ್ಡ ಕಲೆ. ಇದನ್ನೇ ಸಿದ್ಧಿ ಎಂದು ಕರೆಯುವುದು (ಅಸಾಧಾರಣವಾದ ಅಥವಾ ಪರಿಪೂರ್ಣತೆಯ ಸಾಮಥ್ರ್ಯ).
ಎಷ್ಟು ಜನಕ್ಕೆ ಹೀಗೆ ಬಯಸುವ ಮುನ್ನವೇ ನಿಮ್ಮ ಅವಶ್ಯಕತೆಗಳು ಪೂರ್ಣವಾಗಿರುವುದರ ಅನುಭವವಾಗಿರುವುದು? (ಸಭಿಕರಲ್ಲಿ ಅನೇಕ ಮಂದಿ ಕೈ ಎತ್ತುವರು).
ನೋಡಿ, ಹಲವಾರು ಸಿದ್ಧರು (ಪರಿಪೂರ್ಣಿತರು) ಇಲ್ಲಿ ಕುಳಿತಿರುವರು. ನೀವು ಬಯಸುವ ಮೊದಲೇ ನಿಮ್ಮೆಲ್ಲಾ ಕೆಲಸ-ಕಾರ್ಯಗಳು ನಡೆಯುವುದಾದರೆ ಅದು ಪ್ರಶಂಸೆಗೆ ಅರ್ಹವಾಗಿದೆ.

ಪ್ರ: ಗುರುದೇವ, ಜ್ಞಾನೋದಯವನ್ನು ಪಡೆದ ನಂತರವೂ ಜೀವಂತವಾಗಿರುವುದು ಜನಕ ಮಹಾರಾಜನ ತಪಸ್ಸಾಗಿತ್ತೆಂದು ತಿಳಿಸಿರುವಿರಿ. ಜ್ಞಾನೋದಯದ ನಂತರವೂ ತಪಸ್ಸನ್ನಾಚರಿಸಲು ಸಾಧ್ಯವೇ?
ಶ್ರೀಶ್ರೀರವಿಶಂಕರ್: ಜ್ಞಾನೋದಯದ ನಂತರ ಭೋಗಿಸುವುದು ತಪಸ್ಸೆಂದು ನಾನು ಹೇಳಿರುವುದು. ಜ್ಞಾನೋದಯದ ನಂತರ ಜೀವಿಸುವ ಬಗ್ಗೆ ನಾನು ಮಾತನಾಡಿಲ್ಲ. ಜ್ಞಾನೋದಯಕ್ಕೆ ಮೊದಲು ಯೋಗವೇ ತಪಸ್ಸು, ಜ್ಞಾನೋದಯದ ನಂತರ ಭೋಗವೇ ತಪಸ್ಸು.

ಪ್ರ: ಶಿವನ ಪರಿವಾರದ ಅನೇಕ ವಾಹನಗಳು ಅಂದರೆ ಶಿವನ ಪರಿವಾರವು- ಸಿಂಹ, ನಂದಿ, ಹಾವು, ಇಲಿ ಇತ್ಯಾದಿಗಳು ಬದ್ಧವೈರಿಗಳು. ಇದರ ಹಿಂದಿರುವ ರಹಸ್ಯವೇನು?
ಶ್ರೀಶ್ರೀರವಿಶಂಕರ್: ವಿರುದ್ಧಾರ್ಥಕ ಮೌಲ್ಯಗಳು ಒಂದಕ್ಕೊಂದು ಪೂರಕವಾಗಿರುತ್ತದೆ. ಎಲ್ಲಿ ಶಿವನಿರುವನೋ ಅಲ್ಲಿ ಎಲ್ಲರೂ ಒಟ್ಟಾಗಿರುತ್ತಾರೆ. ಎಲ್ಲಿ ಆಧ್ಯಾತ್ಮವು ಬೆಳೆಯುವುದೋ ಅಲ್ಲಿ ವಿವಿಧ ರೀತಿಯ ಜನರು ಒಟ್ಟಿಗೆ ಸೇರುವರು. ಎಲ್ಲಿ ಶಿವ ತತ್ವ ಅಥವಾ ಗುರು ತತ್ವವಿರುವುದೋ, ಅಲ್ಲಿ ಒಂದೇ ಬಗೆಯ ಜನರನ್ನು ಕಾಣಲು ಸಾಧ್ಯವಿಲ್ಲ, ಬದಲಾಗಿ ಅನೇಕ ಬಗೆಯ ಜನರು ಒಟ್ಟಾಗಿ ಸಾಮರಸ್ಯದಿಂದಿರುವುದನ್ನು ಕಾಣಬಹುದು. ಇದೇ ವೈಶಿಷ್ಟ್ಯ.

ಪ್ರ: ಕಲಿಯುಗದಲ್ಲಿ ತಾಮಸವೇ ಎಲ್ಲೆಡೆ ವ್ಯಾಪಿಸುವುದು; ಆದರೆ ಸಾಧಕನಿಗೆ ಬಹಳ ಒಳ್ಳೆಯ ಸಮಯವೆಂದು ಕೇಳಿದ್ದೇನೆ. ತಾಮಸವೇ ಪ್ರಧಾನವಾಗಿರುವ ಕಾಲದಲ್ಲಿ ಸಾಧಕನಿಗೆ ಹೇಗೆ ಒಳೆಯದಾಗಿರುವುದು?
ಶ್ರೀಶ್ರೀರವಿಶಂಕರ್: ನೋಡಿ, ನೀವು ಸಾಧಕನಾದ ಬಳಿಕ ಎಲ್ಲಾ ಕಾಲವನ್ನು ಶುಭ ಹಾಗೂ ಫಲಕಾರಿಯೆಂದು ತಿಳಿಯಿರಿ. ಸಂತೋಷ ಮತ್ತು ದುಃಖ ಎರಡಕ್ಕೂ ತನ್ನದೇ ಆದ ಉದ್ದೇಶವಿದೆ. ಎಲ್ಲಾ ಬಗೆಯ ಸಂದರ್ಭಗಳನ್ನು ಅನುಕೂಲಕರವಾದುದೆಂದು, ಅವುಗಳು ನಿಮ್ಮ ಸಾಧನೆಗೆ ನೆರವಾಗುವ ಅಂಶವೆಂದು ತಿಳಿಯಬೇಕು.

ಪ್ರ: ಗುರುದೇವ, ನಿಮ್ಮ ಅನುಗ್ರಹವು ಎಲ್ಲರ ಮೇಲೂ ಸರಿಸಮನಾಗಿರುವಾಗ, ಕೆಲವು ಸಾಧಕರು ಅತ್ಯಂತ ಕಷ್ಟ ಅನುಭವಿಸುವರು ಮತ್ತು ಇನ್ನು ಕೆಲವರು ಕಷ್ಟಪಡಬೇಕಾಗಿರುವುದಿಲ್ಲ. ಇದು ಏಕೆ?
ಶ್ರೀಶ್ರೀರವಿಶಂಕರ್: ಎಲ್ಲರೂ ಒಂದೇ ರೀತಿಯಾಗಿರುವುದಿಲ್ಲ. ದೇವರು ಎಲ್ಲರನ್ನೂ ಒಂದೇ ತರಹ ಸೃಷ್ಟಿಸಿಲ್ಲ. ವಿವಿಧ ಸಾಮಥ್ರ್ಯಗಳೊಂದಿಗೆ, ಪೆÇೀಷಣೆ, ಬಗೆಬಗೆಯ ಆಲೋಚನಾಲಹರಿ, ಬೇರೆ ಬೇರೆ ಸಂಸ್ಕಾರಗಳನ್ನು ಹೊತ್ತಿರುವ ವಿವಿಧ ರೀತಿಯ ಜನರಿದ್ದಾರೆ.
ನೀವೊಬ್ಬ ಸಾಧಕರೆಂದು ಭಾವಿಸುವುದಾದರೆ, ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ನಿಮ್ಮನ್ನು ಅದ್ವಿತೀಯರೆಂದು ಭಾವಿಸಿ. ಎಲ್ಲರೂ ತಮ್ಮನ್ನು ಅದ್ವಿತೀಯರೆಂದು ಭಾವಿಸಬೇಕು. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿ ನೋಡಿದಾಗ, ಬಹಿರ್ಮುಖವಾಗಿ ದೃಷ್ಟಿ ಹೊರಳುವುದು, ಮತ್ತು ತೀವ್ರ ಹಂಬಲ ಹಾಗೂ ತಿರಸ್ಕಾರಗಳಲ್ಲಿ ಸಿಲುಕಿ ನಿಮ್ಮನ್ನು ನೀವೇ ಗೊಂದಲದಲ್ಲಿ ಕಳೆದುಕೊಳ್ಳುವಿರಿ.
ಪ್ರ: ಗುರುದೇವ, ನೀವು ಅಂತರ್ಯಾಮಿ. ನಿಮಗೆ ಸರ್ವಸ್ವವೂ ತಿಳಿದಿದೆ. ದಯವಿಟ್ಟು ನನ್ನ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರಿಸಿ.
ಶ್ರೀಶ್ರೀರವಿಶಂಕರ್: ನಾನು ನಿಮಗೆ ಅಲ್ಲೇ ಉತ್ತರಿಸುವೆ, ನಿಮ್ಮ ಮನಸ್ಸಿನಲ್ಲೇ. ನಿಮ್ಮ ಮನಸ್ಸಿನಲ್ಲಿ ಒಂದೇ ಪ್ರಶ್ನೆಯಿದ್ದಿದ್ದರೆ ಅದು ಬೇರೆಯಾಗಿರುತ್ತಿತ್ತು. ಆದರೆ ಅಲ್ಲಿ ಬಹಳಷ್ಟು ಇವೆ. ಪ್ರಶ್ನೆಗಳ ಸರಮಾಲೆಯೇ ಇದೆ. ಶಾಂತವಾಗಿರಿ ಹಾಗೂ ವಿಶ್ರಮಿಸಿ. ನೀವೇ ನೋಡುವಿರಂತೆ ತಂತಾನೆ ನಿಮಗೆ ಉತ್ತರಗಳು ದೊರೆಯುವುದು.

ಪ್ರ: ಗುರುದೇವ, ಪುರುಷ ಮತ್ತು ಪ್ರಕೃತಿಯು ಹೇಗೆ ಜನಿಸಿದರು? ಇವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆ?
ಶ್ರೀಶ್ರೀರವಿಶಂಕರ್: ಯಾವಾಗ ಅವರ ಜನನವಾಯಿತೆಂದು ನನಗೆ ತಿಳಿಯದು. ಮೊದಲನೆಯದಾಗಿ ಅವರು ಎಂದಾದರೂ ಜನಿಸಿದ್ದರೆ ಎನ್ನುವುದೂ ತಿಳಿಯದು. ಅನಾದಿ ಕಾಲದಿಂದಲೂ ಅವರು ಅಸ್ತಿತ್ವದಲ್ಲಿರುವರು.

ಭಾನುವಾರ, ನವೆಂಬರ್ 4, 2012

ಕಾರಣ ಮತ್ತು ಪರಿಣಾಮ


೪ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ಗುರೂಜಿ, ಇದನ್ನೆಲ್ಲಾ ನೀವು ಯಾರಿಂದ ಕಲಿತಿರಿ? ನಿಮಗೆ ಧ್ಯಾನವನ್ನು ಯಾರು ಕಲಿಸಿದರು?
ಶ್ರೀ ಶ್ರೀ ರವಿ ಶಂಕರ್: ನೀನೊಬ್ಬ ಕವಿಯಲ್ಲಿ ಅಥವಾ ಒಬ್ಬ ಬರಹಗಾರನಲ್ಲಿ, ಅವರು ಯಾರಿಂದ ಕಲಿತರೆಂದು ಕೇಳುವೆಯಾ? ಅವರು ತಾವಾಗಿಯೇ ಬರೆಯುತ್ತಾರೆ, ಅಲ್ಲವೇ? ಒಬ್ಬ ಕವಿ ಅಥವಾ ಒಬ್ಬ ಬರಹಗಾರನು ವಿಷಯವನ್ನು ಇಲ್ಲಿಂದ ಅಲ್ಲಿಂದ ನಕಲು ಮಾಡಿದರೆ, ಅದು ತಮ್ಮದೇ ಸೃಷ್ಟಿಯೆಂದು ಅವರಿಗೆ ಹೇಳಲು ಸಾಧ್ಯವೇ? ಅದೇ ರೀತಿಯಲ್ಲಿ, ಒಬ್ಬನು ಧ್ಯಾನ ಮಾಡುವಾಗ, ಇವೆಲ್ಲವೂ ಅದೇ ಮೂಲದಿಂದ ಅಂತಃಸ್ಫುರಣೆಯಾಗಿ ಬರುತ್ತವೆ.

ಪ್ರಶ್ನೆ: ಕೆಲವು ಹಬ್ಬಗಳ ಸಮಯದಲ್ಲಿ, ನಾವು ಎಲ್ಲಾ ರೀತಿಯ ಧಾನ್ಯಗಳನ್ನು ದಾನವಾಗಿ ಕೊಡುತ್ತೇವೆ. ಒಬ್ಬರು ಧಾನ್ಯಗಳೊಂದಿಗೆ ಉಪ್ಪನ್ನು ದಾನವಾಗಿ ಕೊಡಬಾರದೆಂದು ಯಾಕೆ ಹೇಳಲಾಗಿದೆ?
ಶ್ರೀ ಶ್ರೀ ರವಿ ಶಂಕರ್: ಅದು ಕೇವಲ ಒಂದು ರೂಢಿ. ಶಾಸ್ತ್ರಗಳಲ್ಲಿ ಇದನ್ನು ಉಲ್ಲೇಖಿಸಿಲ್ಲ. ಅದರ ಬಗ್ಗೆ ಚಿಂತೆ ಮಾಡಬೇಡ.
ಉಪ್ಪಿಲ್ಲದ ಯಾವುದೇ ಭಕ್ಷ್ಯವಿಲ್ಲ. ಪ್ರತಿಯೊಂದೂ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಒಳಗೊಂಡಿದೆ. ಒಂದು ಶಾಸ್ತ್ರದ ಸಂದರ್ಭದಲ್ಲಿ ಅರ್ಪಿಸುವ ಪ್ರತಿಯೊಂದೂ ಸ್ವಲ್ಪ ಉಪ್ಪನ್ನು ಒಳಗೊಂಡಿರುತ್ತದೆ. ತೆಂಗಿನಕಾಯಿ ನೀರು ಉಪ್ಪನ್ನೊಳಗೊಂಡಿದೆ. ಹಣ್ಣುಗಳು ಕೂಡಾ ಉಪ್ಪನ್ನೊಳಗೊಂಡಿರುತ್ತವೆ ಎಂದು ಹೇಳಲಾಗಿದೆ. ನೀವು ಉಸಿರಾಡುವ ಗಾಳಿಯಲ್ಲಿ ಉಪ್ಪಿದೆ.
ಎಣ್ಣೆ, ಉಪ್ಪು, ಮೆಣಸಿನಕಾಯಿ ಮತ್ತು ನೀರನ್ನು ಒಬ್ಬರಿಗೆ ನೇರವಾಗಿ ಕೊಡಬಾರದೆಂಬ ಒಂದು ಹೇಳಿಕೆಯಿದೆಯಷ್ಟೆ. ಅದಕ್ಕಾಗಿಯೇ ಅವರು ಅವುಗಳನ್ನು ನೆಲದ ಮೇಲೆ ಇಡುತ್ತಿದ್ದರು. ಈ ವಸ್ತುಗಳನ್ನು ನೇರವಾಗಿ ಕೊಟ್ಟರೆ ಒಬ್ಬ ವ್ಯಕ್ತಿಯ ಕಂಪನಗಳು ಇನ್ನೊಬ್ಬ ವ್ಯಕ್ತಿಗೆ ಹೋಗುತ್ತದೆ ಎಂಬ ಒಂದು ನಂಬಿಕೆಯಿದೆ.
ಒಂದು ವೇಳೆ ಇನ್ನೊಬ್ಬ ವ್ಯಕ್ತಿಯ ಕಂಪನಗಳ ಪ್ರಭಾವವು ನಿಮ್ಮ ಮೇಲಾಗುತ್ತಿದೆಯೆಂದು ನಿಮಗನ್ನಿಸಿದರೆ, ಭಜನೆಗಳನ್ನು ಹಾಡಿ ಅಥವಾ ಓಂ ನಮಃ ಶಿವಾಯ ಜಪ ಮಾಡಿ ಮತ್ತು ಪ್ರಾಣಾಯಾಮ ಮಾಡಿ. ಎಲ್ಲಾ ನಕಾರಾತ್ಮಕ ಪರಿಣಾಮಗಳು ದೂರ ಹೋಗುತ್ತವೆ.

ಪ್ರಶ್ನೆ: ನನ್ನಲ್ಲಿ ಯೋಗ ವಾಸಿಷ್ಠದಿಂದ ಒಂದು ಪ್ರಶ್ನೆಯಿದೆ. ಭೃಗು ಮಹರ್ಷಿಯ ಮಗನಾದ ಶುಕ್ರಾಚಾರ್ಯನು ಪವಿತ್ರ ನೀರನ್ನು ಸಿಂಪಡಿಸುವುದರ ಮೂಲಕ ಮತ್ತು ಮಂತ್ರಗಳನ್ನುಚ್ಛರಿಸುವುದರ ಮೂಲಕ ಸತ್ತ ಒಬ್ಬ ವ್ಯಕ್ತಿಯನ್ನು ಪುನಃ ಜೀವಂತಗೊಳಿಸುತ್ತಾನೆ. ಇದು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಯೋಗ ವಾಸಿಷ್ಠದಲ್ಲಿರುವ ಕಥೆಗಳಿಗೆ ಬಹಳಷ್ಟು ಆಳವಾದ ಗೂಢಾರ್ಥಗಳಿವೆ. ಅದನ್ನು ಒಂದು ಸಲ ಓದಿದರೆ ಸಾಕಾಗುವುದಿಲ್ಲ. ನೀವದನ್ನು ಪುನಃ ಪುನಃ ಓದಿದಾಗ, ಆ ಪುಸ್ತಕದಲ್ಲಿ ಅಡಗಿರುವ ರಹಸ್ಯಗಳು ನಿಮಗೆ ಅರ್ಥವಾಗಲು ತೊಡಗುತ್ತವೆ.

ಪ್ರಶ್ನೆ: ನಾವು ಮಂತ್ರಗಳನ್ನು ಉಚ್ಛರಿಸುವಾಗ, ಅವುಗಳು ಪರಿಸರ, ಜನರು ಮತ್ತು ಸಂಪೂರ್ಣ ಪ್ರಪಂಚದ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
ಶ್ರೀ ಶ್ರೀ ರವಿ ಶಂಕರ್: ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಇತರ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಆದುದರಿಂದ, ನೀವು ಜಪ ಮಾಡುವಾಗ, ನೀವು ಹವನ ಮಾಡುವಾಗ, ಅದರ ಪ್ರಭಾವವು ಪರಿಸರದ ಮೇಲೆ ಬಹಳ ಸಕಾರಾತ್ಮಕವಾಗಿರುತ್ತದೆ. ಅದು ನಿಮಗೆ ಒಳ್ಳೆಯ ಕಂಪನಗಳನ್ನು ಕೂಡಾ ತರುತ್ತದೆ ಮತ್ತು ಸಂಪೂರ್ಣ ವಾತಾವರಣದಲ್ಲಿ ಧನಾತ್ಮಕ ಕಣಗಳನ್ನು ಕೂಡಾ ವರ್ಧಿಸುತ್ತದೆ.

ಪ್ರಶ್ನೆ: ದಕ್ಷಿಣಾಮೂರ್ತಿಯು (ಶಿವನ ಗುರು ರೂಪ) ಸಾಮವೇದಪ್ರಿಯನೆಂದು ಹೇಳಲಾಗುತ್ತದೆ. ಯಾಕೆ ಹಾಗೆ?
ಶ್ರೀ ಶ್ರೀ ರವಿ ಶಂಕರ್: ಅದನ್ನು ಸಾಮವೇದಕ್ಕೆ ಸಂಬಂಧಪಟ್ಟ ಜನರು ಬರೆದಿದ್ದಿರಬೇಕು. ಋಗ್ವೇದದ ಜನರು ಬರೆದರೆ, ಅವರು ಋಗ್ವೇದಪ್ರಿಯ ಎಂದು ಕರೆಯುವರು. ಯಜುರ್ವೇದಕ್ಕೆ ಸಂಬಂಧಪಟ್ಟ ಜನರು, ಅದು ಎಲ್ಲಾ ವೇದಗಳಲ್ಲಿ ಶ್ರೇಷ್ಠವಾದುದು ಎಂದು ಹೇಳುವರು.
ಕೃಷ್ಣ ಪರಮಾತ್ಮನು ಹೇಳಿದ್ದಾನೆ, ’ವೇದಾನಾಂ ಸಾಮವೇದೋಸ್ಮಿ’ (ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೨೨). ಅದು ಯಾಕೆಂದರೆ, ಸಾಮವೇದವು ಭಕ್ತಿ ಮತ್ತು ಸಂಗೀತಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತದೆ. ಮೆದುಳಿನ ಎರಡು ಗೋಳಾರ್ಧಗಳಲ್ಲಿ, ಎಡಭಾಗಕ್ಕಿರುವುದು ತರ್ಕ ಮತ್ತು ಬಲಭಾಗಕ್ಕಿರುವುದು ಸಂಗೀತ. ಸಾಮವೇದವು ತರ್ಕ ಮತ್ತು ಸಂಗೀತ ಎರಡನ್ನೂ ಒಳಗೊಂಡಿರುವುದರಿಂದ, ಈ ಮಾತುಗಳು ಅಲ್ಲಿಂದ ಬಂದಿರುವ ಸಾಧ್ಯತೆಯಿದೆ.

ಪ್ರಶ್ನೆ: ಕನ್ನಡ ಭಾಷೆಯನ್ನು ಕಸ್ತೂರಿಗೆ ಹೋಲಿಸಲಾಗಿದೆ, ಯಾಕೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಲ್ಲಿಗೆಯೊಂದಿಗೆ ಹೋಲಿಸಲು ಬಯಸಿದರೆ, ನೀನು ಹಾಗೆ ಮಾಡಬಹುದು! ಕವಿಗಳು ಅದನ್ನು ಕಸ್ತೂರಿ ಕನ್ನಡ ಎಂದು ಕರೆದರು. ಅದನ್ನು ಅವರು ಯಾಕೆ ಹಾಗೆ ಹೆಸರಿಸಿದರೆಂದು ನೀನು ಕೇಳಲು ಸಾಧ್ಯವಿಲ್ಲ. ಉದಾಹರಣೆಗೆ, ಒಬ್ಬಳು ಸುಂದರವಾದ ಸ್ತ್ರೀಯನ್ನು ’ಚಂದ್ರಮುಖಿ’ ಎಂದು ಕರೆಯುತ್ತಾರೆ, ಅಂದರೆ ಯಾರ ಮುಖವು ಚಂದ್ರನಂತಿದೆಯೋ ಅವಳು ಎಂದು. ಈಗ, ಚಂದ್ರನಲ್ಲಿ ಬಹಳಷ್ಟು ಕಲೆಗಳಿವೆ. ಹಾಗಾದರೆ, ಮುಖವನ್ನು ಚಂದ್ರನಿಗೆ ಹೋಲಿಸುವುದು ಯಾಕೆ? ಹಸಿದವನೊಬ್ಬನಿಗೆ ಚಂದ್ರನು ಹೋಳಿಗೆಯಂತೆ ಕಾಣಿಸುತ್ತದೆ ಎಂಬ ಮಾತೊಂದಿದೆ.
ಕಸ್ತೂರಿಗೆ ಬಹಳ ಒಳ್ಳೆಯ ಪರಿಮಳವಿದೆ. ಆದುದರಿಂದ, ಕವಿಗಳು ಕನ್ನಡವನ್ನು ಒಂದು ಬಹಳ ಸಿಹಿಯಾದ ಭಾಷೆಯಾಗಿ ಬಣ್ಣಿಸಿದ್ದಾರೆ.

ಪ್ರಶ್ನೆ: ಈ ದಿನಗಳಲ್ಲಿ ನಮ್ಮ ದೇಶವು ಬಹಳಷ್ಟು ಬರಗಳನ್ನು ಎದುರಿಸುತ್ತಿದೆ. ಗಂಗಾ ಮತ್ತು ಕಾವೇರಿ ನದಿಗಳನ್ನು ನಾವು ಜೋಡಿಸಿದರೆ, ಅದು ನೀರಾವರಿಯಲ್ಲಿ ಸಹಾಯಕವಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರಾಜಕಾರಣಿಗಳೊಂದಿಗೆ ನೀವು ದಯವಿಟ್ಟು ಮಾತನಾಡುವಿರೇ?
ಶ್ರೀ ಶ್ರೀ ರವಿ ಶಂಕರ್: ನಮ್ಮ ದೇಶದಲ್ಲಿರುವ ಎಲ್ಲಾ ನದಿಗಳಿಗೆ ನಾವು ಅಣೆಕಟ್ಟುಗಳನ್ನು ಕಟ್ಟಿ ನೀರು ಸಮುದ್ರಕ್ಕೆ ಹೋಗುವುದನ್ನು ತಡೆಗಟ್ಟಿದರೆ, ಸಂಪೂರ್ಣ ಭಾರತವು ಎರಡು ಅಡಿ ನೀರಿನಿಂದ ಆವರಿಸುವುದು ಖಚಿತವೆಂದು ವಿಜ್ಞಾನಿಗಳು ಹೇಳುತ್ತಾರೆ. (ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಉಲ್ಲೇಖಿಸಿ)
ಸಮುದ್ರದೊಳಕ್ಕೆ ಹರಿದು, ನದಿಗಳಿಂದ ಬಹಳಷ್ಟು ನೀರು ವ್ಯರ್ಥವಾಗುತ್ತಿದೆ. ನಾವು ನದಿಗಳ ನೀರನ್ನು ಸರಿಯಾಗಿ ಉಪಯೋಗಿಸಬೇಕು. ನೀರಿಗೇನೂ ಬರವಿಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಲ್ಲಿ ಭಾರತಕ್ಕೆ ಎರಡನೆಯ ಸ್ಥಾನವಿದೆ. ಹೀಗಿದ್ದರೂ, ನಾವು ಈ ನೀರನ್ನು ಸರಿಯಾಗಿ ಸಂಗ್ರಹಿಸುವುದಿಲ್ಲ.
ಗುಂಪುಗಳನ್ನು ರೂಪಿಸಿ ಮತ್ತು ಮಳೆ ನೀರನ್ನು ಉಳಿಸಲು ಸಣ್ಣ ಅಣೆಕಟ್ಟುಗಳನ್ನು ಕಟ್ಟಿ.

ಪ್ರಶ್ನೆ: ವೈದಿಕ ಜ್ಞಾನ ಕಾರ್ಯಕ್ರಮವನ್ನು ಯುರೋಪಿಯನ್ನರಿಗೆ ಮಾತ್ರವಾಗಿ, ಮತ್ತು ವಿಶೇಷವಾಗಿ ೨೦೧೨ ರಲ್ಲಿ  ಸಂಘಟಿಸಿದುದಕ್ಕೆ ಯಾವುದಾದರೂ ಕಾರಣವಿದೆಯೇ?
ಶ್ರೀ ಶ್ರೀ ರವಿ ಶಂಕರ್: ನಾವದನ್ನು ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಿಗೆ ತೆರೆದಿರುತ್ತಿದ್ದರೆ, ಗುಂಪು ಬಹಳ ದೊಡ್ಡದಾಗಿಬಿಡುತ್ತಿತ್ತು. ನಾವು ಸುಮಾರು ನೂರ ಐವತ್ತು ಜನರ ಒಂದು ಚಿಕ್ಕ ಗುಂಪನ್ನಿಡಲು ಬಯಸಿದೆವು. ಆದುದರಿಂದ, ಸದ್ಯಕ್ಕೆ ನಾವದನ್ನು ಕೇವಲ ಯುರೋಪಿನವರಿಗೆ ಮಾತ್ರ ಪ್ರಕಟಿಸಿದೆವು. ನಾವದನ್ನು ಪ್ರಪಂಚದಾದ್ಯಂತದ ಜನರಿಗೆ ಪ್ರಕಟಿಸಿರುತ್ತಿದ್ದರೆ, ಅದು ಸಾವಿರದ ಐನೂರು ಜನರ ಗುರು ಪೂಜೆ ಶಿಬಿರದಂತೆ ಬಹಳ ದೊಡ್ಡದಾಗಿರುತ್ತಿತ್ತು. ಈಗ ಇಲ್ಲಿ ಅಷ್ಟೊಂದು ಜಾಗವಿಲ್ಲದುದರಿಂದ ನಾವದನ್ನು ಚಿಕ್ಕ ಗುಂಪುಗಳಲ್ಲಿ ಮಾಡೋಣವೆಂದು ನನಗನಿಸಿತು.
ಈ ವರ್ಷ, ಜ್ಞಾನದ ಒಂದು ಹೊಸ ಅಲೆಯ ಅಗತ್ಯವಿತ್ತು, ಮತ್ತು ಅದು ಬರುತ್ತದೆ. ನಿಮಗೆಲ್ಲರಿಗೂ ಮಾಡಲು ಒಂದು ದೊಡ್ಡ ಕೆಲಸವಿದೆ. ಇವತ್ತು, ಸಂಪೂರ್ಣ ಪ್ರಪಂಚವು ಪುರಾತನ ಜ್ಞಾನಕ್ಕೆ ತಯಾರಾಗಿದೆ.  ಆದುದರಿಂದ, ವೈದಿಕ ಜ್ಞಾನ ಕಾರ್ಯಕ್ರಮದಲ್ಲಿರುವ ನೀವೆಲ್ಲರೂ ಈ ಜ್ಞಾನವನ್ನು ತೆಗೆದುಕೊಂಡು, ಲಕ್ಷಾಂತರ ಜನರ ಜೀವನದಲ್ಲಿ ಬೆಳಕು ಮತ್ತು ನಗೆಯನ್ನು ತರಬಹುದು.

ಪ್ರಶ್ನೆ: ಥೈರೋಯಿಡ್ ಸಮಸ್ಯೆಯಿಂದ ಬಳಲುತ್ತಿರುವ ಸ್ತ್ರೀಯರ ಸಂಖ್ಯೆಯು ಹೆಚ್ಚುತ್ತಿದೆ. ಇದಕ್ಕಿರುವ ಪರಿಹಾರವೇನು?
ಶ್ರೀ ಶ್ರೀ ರವಿ ಶಂಕರ್: ಅದು ನಮ್ಮ ಆಹಾರದಲ್ಲಿರುವ ಕ್ರಿಮಿನಾಶಕ ಔಷಧಿ ಮತ್ತು ರಾಸಾಯನಿಕಗಳಿಂದಾಗಿಯೆಂದು ನನಗನಿಸುತ್ತದೆ.

ಶನಿವಾರ, ನವೆಂಬರ್ 3, 2012

ಅಭಿವ್ಯಕ್ತಿ


೩ ನವೆಂಬರ್ ೨೦೧೨
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ನಿಮ್ಮಿಂದ ಬೇಷರತ್ತಾದ ಪ್ರೀತಿಯನ್ನು ಪಡೆಯುವುದು ನನಗೆ ಎಷ್ಟರಮಟ್ಟಿಗೆ ಅಭ್ಯಾಸವಾಗಿಬಿಟ್ಟಿದೆ ಎಂದರೆ, ನಾನೊಂದು ಸಂಬಂಧ ಕಂಡುಕೊಂಡಾಗಲೆಲ್ಲಾ, ಇನ್ನೊಬ್ಬ ವ್ಯಕ್ತಿಯಲ್ಲಿ ನಾನು ಅದೇ ಪ್ರೀತಿಯನ್ನು ಹುಡುಕುತ್ತೇನೆ ಮತ್ತು ಯಾವುದೇ ಸಂಬಂಧವೂ ನನಗೆ ಸರಿಹೋಗುವುದಿಲ್ಲ. ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನಿಜವಾಗಿ, ಸಂಬಂಧಗಳ ರಹಸ್ಯದ ಬಗ್ಗೆ ಮಾತನಾಡಲು ಬೇಕಾದ ಅರ್ಹತೆ ನನಗಿಲ್ಲ! ಹೀಗಿದ್ದರೂ, ನಾನು ನಿನಗೆ ಇದನ್ನು ಹೇಳುವೆನು, ನೀನು ನಿನ್ನೆಲ್ಲಾ ಪ್ರೀತಿಯನ್ನು ಒಬ್ಬರ ಮೇಲೆ ಎರೆಯಬಹುದು, ಆದರೆ ಅವರು ಎಷ್ಟು ಪ್ರೀತಿಯನ್ನು ತೆಗೆದುಕೊಳ್ಳಬಲ್ಲರು ಎಂಬುದನ್ನು ಕೂಡಾ ನೀನು ನೋಡಬೇಕು.

ನೀರು ಬಹಳ ರಭಸದಿಂದ ಬೀಳುತ್ತಿರುವಾಗ, ನೀನು ಅದರ ಕೆಳಗೆ ನಿಲ್ಲಲು ಸಾಧ್ಯವಿಲ್ಲ, ನೀನು ನಿನ್ನ ತಲೆಯನ್ನು ಕಳೆದುಕೊಳ್ಳುವೆ. ಅದಕ್ಕಾಗಿ, ನೀನು ನಲ್ಲಿಯನ್ನು ನಿಯಂತ್ರಿಸಬೇಕಾಗುತ್ತದೆ. ನೀನು ನಲ್ಲಿಯನ್ನು ಸಂಪೂರ್ಣ ರಭಸದೊಂದಿಗೆ ತೆರೆದು ಅದರ ಅಡಿಯಲ್ಲಿ ಒಂದು ಖಾಲಿ ಬಾಟಲಿಯನ್ನಿಟ್ಟರೆ, ಬಾಟಲಿಯು ಖಾಲಿಯಾಗಿ ಉಳಿಯುವುದು. ನೀನು ನಲ್ಲಿಯನ್ನು, ಬಾಟಲಿ ತುಂಬಲು ಎಷ್ಟು ಬೇಕೋ ಅಷ್ಟೇ ತೆರೆಯಬೇಕು. ನಿನಗೆ ಈ ಅನುಭವವಾಗಿದೆಯೇ?

ಅದೇ ರೀತಿಯಲ್ಲಿ, ನೀನು ಯಾರನ್ನಾದರೂ ಬೇಷರತ್ತಾಗಿ ಪ್ರೀತಿಸುವಾಗ, ಅದನ್ನೆಲ್ಲಾ ಒಂದೇ ಸಾರಿಗೆ ವ್ಯಕ್ತಪಡಿಸಬೇಡ. ಅವರು ಓಡಿ ಹೋಗುವರು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

ಭಗವದ್ಗೀತೆಯಲ್ಲಿ ಒಂದು ಮಾತಿದೆ, ’ಸಮಃಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಹೋ.’  (ಯಾರು ಶತ್ರುವಿನೊಂದಿಗೂ, ಮಿತ್ರನೊಂದಿಗೂ, ಹಾಗೆಯೇ ಮಾನದಲ್ಲೂ ಅಪಮಾನದಲ್ಲೂ ಸಮಾನವಾಗಿರುವರೋ, ಛಳಿಯಲ್ಲೂ ಸೆಖೆಯಲ್ಲೂ, ಸಂತೋಷದಲ್ಲೂ ನೋವಿನಲ್ಲೂ ಯಾರು ಸಮಾನವಾಗಿರುವರೋ, ಯಾರು ಮೋಹದಿಂದ ಮುಕ್ತರಾಗಿರುವರೋ)

ಒಬ್ಬ ಯೋಗಿಯು ಮಿತ್ರರೊಂದಿಗೆ ಮತ್ತು ಶತ್ರುಗಳೊಂದಿಗೆ ಹೇಗೆ ವ್ಯವಹರಿಸುವನು? ಮಿತ್ರರಾಗಿರಲಿ ಅಥವಾ ಶತ್ರುಗಳಾಗಿರಲಿ, ಯೋಗಿಯು ಅವರನ್ನೆಲ್ಲಾ ಒಂದು ಬುಟ್ಟಿಯಲ್ಲಿ ಹಾಕುತ್ತಾನೆ ಮತ್ತು ಒಂದು ಸಮಚಿತ್ತತೆಯ ಮನೋಸ್ಥಿತಿಯನ್ನಿಟ್ಟುಕೊಳ್ಳುತ್ತಾನೆ. ಇದು ಯಾಕೆಂದರೆ, ಒಬ್ಬ ಮಿತ್ರನು ಯಾವಾಗ ಒಬ್ಬ ಶತ್ರುವಾಗುವನೆಂದೂ, ಒಬ್ಬ ಶತ್ರುವು ಯಾವಾಗ ಒಬ್ಬ ಬಹಳ ಒಳ್ಳೆಯ ಮಿತ್ರನಾಗುವನೆಂದೂ ನಿಮಗೆ ಯಾವತ್ತಿಗೂ ತಿಳಿಯದು. ಇದೊಂದು ವಾಸ್ತವವಾಗಿದೆ.

ನಮ್ಮ ಪೂರ್ತಿ ಜೀವನವು ಯಾವುದೋ ವಿಚಿತ್ರ ಕರ್ಮಾನುಸಾರ, ಯಾವುದೋ ವಿಚಿತ್ರ ಪ್ರಾಕೃತಿಕ ನಿಯಮಗಳನುಸಾರ ಕೆಲಸ ಮಾಡುತ್ತದೆ. ಹಾಗಾಗಿ ನೀವು ಕೇವಲ ನಿಮ್ಮನ್ನೇ ಅವಲಂಬಿಸಿ, ಸ್ವಾವಲಂಬನೆ ಎಂಬುದರ ಅರ್ಥ ಇದುವೇ. ಮತ್ತೆ, ಯಾರಿಗೂ ಕೆಟ್ಟದನ್ನು ಬಯಸಬೇಡಿ.

ಹೆಚ್ಚಾಗಿ, ಒಬ್ಬರು ಇನ್ನೊಬ್ಬರನ್ನು ದ್ವೇಷಿಸುವಾಗ, ಅವರು ಅವರನ್ನು ಶಪಿಸಲು ತೊಡಗುತ್ತಾರೆ. ಏನೇ ಬರಲಿ, ಯಾರನ್ನೂ ಶಪಿಸಬೇಡಿ. ಹೆಚ್ಚೆಂದರೆ, ಅವರು ಒಂದು ಒಳ್ಳೆಯ ಮನಸ್ಸನ್ನು ಹೊಂದುವಂತೆ ನಾವವರಿಗೆ ಹಾರೈಸಬೇಕು, ’ಅವರ ಬುದ್ಧಿಯು ಸರಿಯಾಗಲಿ.’

ಹಿಂದಿಯಲ್ಲಿ ನಾವು, ’ಭಗವಾನ್, ಇನ್‌ಕೋ ಸದ್ಬುದ್ಧಿ ದೋ’ (ದೇವರೇ, ಅವರಿಗೆ ಒಳ್ಳೆಯ ಬುದ್ಧಿಯನ್ನು ನೀಡಿ) ಎಂದು ಹೇಳುತ್ತೇವೆ.  ಇದು ಭಾರತದಲ್ಲಿ ಸಾಮಾನ್ಯವಾಗಿರುವ ಒಂದು ಪ್ರಾರ್ಥನೆಯಾಗಿದೆ. ಇದೊಂದು ಬಹಳ ಒಳ್ಳೆಯ ಪ್ರಾರ್ಥನೆ ಹಾಗೂ ಜೀವನದಲ್ಲಿಟ್ಟುಕೊಳ್ಳಲು ಒಂದು ಒಳ್ಳೆಯ ಮನೋಭಾವವೂ ಆಗಿದೆ.

ಜೀವನದಲ್ಲಿ ಹೊಂದಲು ಉತ್ತಮವಾದ ನಾಲ್ಕು ರೀತಿಯ ಮನೋಭಾವಗಳಿವೆ:

೧) ಸ್ನೇಹಪರತೆ: ಸಂತೋಷವಾಗಿರುವ ಜನರೊಂದಿಗೆ ಸ್ನೇಹಪರತೆಯಿಂದಿರಿ. ಸಂತೋಷವಾಗಿರುವ ಜನರೊಂದಿಗೆ ನೀವು ಸ್ನೇಹಪರತೆಯಿಂದಿಲ್ಲದಿದ್ದರೆ, ನಿಮ್ಮಲ್ಲಿ ಮಾತ್ಸರ್ಯವುಂಟಾಗುವುದು. ಇದು ಯಾಕೆಂದರೆ, ನಿಮ್ಮ ಶತ್ರುವು ಸಂತೋಷವಾಗಿರುವರೆಂದು ನೀವು ಯೋಚಿಸುವಿರಿ ಮತ್ತು ನಿಮ್ಮ ಶತ್ರುವು ಸಂತೋಷವಾಗಿರುವುದನ್ನು ನೀವು ಸಹಿಸುವುದಿಲ್ಲ. ಆದುದರಿಂದ, ಸಂತೋಷವಾಗಿರುವ ಜನರೊಂದಿಗೆ ಕೈಗಳನ್ನು ಕುಲುಕಿ. ಅಂತಹ ಒಂದು ಮನೋಭಾವವು ನಿಮ್ಮ ಮನಸ್ಸಿಗೆ ಬಹಳಷ್ಟು ಒಳ್ಳೆಯದನ್ನು ಮಾಡುತ್ತದೆ.

೨) ಸಹಾನುಭೂತಿ: ದುಃಖಿತರಾಗಿರುವ ಜನರೊಂದಿಗೆ ಸ್ನೇಹಪರತೆಯಿಂದಿರಬೇಡಿ, ಬದಲಾಗಿ, ಅವರ ಕಡೆಗೆ ಸಹಾನುಭೂತಿ ಹೊಂದಿ. ಅಸಂತುಷ್ಟರಾಗಿರುವ ಜನರೊಂದಿಗೆ ನೀವು ಸ್ನೇಹಪರತೆಯಿಂದಿದ್ದರೆ, ನೀವು ಅಸಂತುಷ್ಟರಾಗುವಿರಿ ಮತ್ತು ನೀವು ಅಸಂತುಷ್ಟರಾದರೆ, ಅವರ ದುಃಖದಿಂದ ಹೊರಬರುವಲ್ಲಿ ನೀವು ಅವರಿಗೆ ಯಾವತ್ತೂ ಸಹಾಯ ಮಾಡಲಾರಿರಿ. ಹೀಗಾಗಿ, ಅವರೊಂದಿಗಿನ ನಿಮ್ಮ ಸಂಬಂಧದಲ್ಲಿ ವಿಭಿನ್ನವಾದೊಂದು ರುಚಿಯಿರುತ್ತದೆ.

ಅಸಂತುಷ್ಟರಾದ ಜನರೊಂದಿಗೆ ಸ್ನೇಹಪರತೆಯಿಂದಿದ್ದು, ಹಲವಾರು ಜನರು ಕಷ್ಟದಲ್ಲಿ ಸಿಲುಕಿದ್ದಾರೆ; ಇಬ್ಬರೂ ದುಃಖಿತರಾಗುತ್ತಾರೆ. ಅದು, ಒಬ್ಬ ರೋಗಿಯ ಬಳಿಗೆ ಹೋಗುವ ವೈದ್ಯನೂ ರೋಗಿಯಾಗುವಂತೆ. ವೈದ್ಯ ಕೂಡಾ, ’ನಾನು ಮಾತ್ರ ಆರೋಗ್ಯವಂತನಾಗಿರಲು ಹೇಗೆ ಸಾಧ್ಯ? ನಾನು ಕೂಡಾ ರೋಗಿಯ ದುಃಖವನ್ನು ಹಂಚಿಕೊಳ್ಳುತ್ತೇನೆ’ ಎಂದು ಯೋಚಿಸಿದರೆ, ಆಗ ರೋಗಿಗೆ ಯಾರು ಸಹಾಯ ಮಾಡುವರು? ಆದುದರಿಂದ, ದುಃಖಿತರಾಗಿರುವ ಜನರ ಕಡೆಗಿರಬೇಕಾದ ಮನೋಭಾವವೇನು? ಸಹಾನುಭೂತಿ, ಕರುಣೆಯಲ್ಲ.

೩) ಸಂತೋಷ: ಒಳ್ಳೆಯ ಕೆಲಸವನ್ನು ಮಾಡುತ್ತಿರುವ ಜನರಿಗಾಗಿ ಅಥವಾ ಜಗತ್ತಿನಲ್ಲಿ ಯಶಸ್ವಿಯಾಗಿರುವ ಜನರಿಗಾಗಿ; ನೀವೇ ಅದನ್ನು ಮಾಡುತ್ತಿರುವಿರೇನೋ ಎಂಬಂತೆ ನೀವು ಸಂತೋಷಪಡಬೇಕು.

ಉದಾಹರಣೆಗೆ, ಒಬ್ಬರು ಒಳ್ಳೆಯ ಗಾಯಕರು ಹಾಡುತ್ತಾ ಎಲ್ಲರಿಗೂ ಆನಂದವನ್ನು ತರುತ್ತಾರೆ. ಅವರನ್ನು ನೋಡಿ ನೀವು ಯೋಚಿಸಬೇಕು, ’ಈ ವ್ಯಕ್ತಿಯು ಅಷ್ಟೊಂದು ಚೆನ್ನಾಗಿ ಹಾಡಿ ಎಲ್ಲರನ್ನೂ ಸಂತೋಷಪಡಿಸುತ್ತಿರುವುದಕ್ಕಾಗಿ ನನಗೆ ಬಹಳ ಸಂತೋಷವಾಗುತ್ತಿದೆ.’

ಒಬ್ಬರು ಒಳ್ಳೆಯ ಮನೋರಂಜನೆ ನೀಡುವವರಾಗಿದ್ದು, ಅವರು ಎಲ್ಲರ ಮನರಂಜಿಸುತ್ತಿದ್ದರೆ, ನೀವು ಅದರ ಬಗ್ಗೆ ಸಂತೋಷಪಡಬೇಕು. ಒಬ್ಬರು ಮಹಾನ್ ವಾಸ್ತುಶಿಲ್ಪಿಯಾಗಿದ್ದು, ಸುಂದರವಾದ ಕಟ್ಟಡಗಳನ್ನು ಕಟ್ಟಿದರೆ, ನೀವು ಅದರ ಬಗ್ಗೆ ಸಂತೋಷಪಡಬೇಕು. ಯಾವಾಗೆಲ್ಲಾ ಒಬ್ಬರು ಒಂದು ಒಳ್ಳೆಯ ಕೆಲಸವನ್ನು ಮಾಡುವರೋ, ಆಗ ಅವರೊಂದಿಗೆ ಆ ಸಂತೋಷವನ್ನು ಹಂಚಿಕೊಳ್ಳಿ; ನಮ್ಮಲ್ಲಿ ಈ ಮನೋಭಾವವಿರಬೇಕಾಗಿದೆ.

೪) ಅನಾಸಕ್ತಿ: ಸಮಾಜದಲ್ಲಿ ಭೀಕರ ಕೆಲಸಗಳನ್ನು ಮಾಡುತ್ತಾ ತಮ್ಮನ್ನೇ ನಶಿಸುತ್ತಿರುವವರ ಮೇಲೆ ನಾವು ಸಾಧಾರಣವಾಗಿ ಕೋಪಗೊಳ್ಳುತ್ತೇವೆ. ನೀವು ಕೋಪಗೊಳ್ಳುವಾಗ, ನಿಮ್ಮ ಮನಸ್ಸಿಗೆ ಭಾರೀ ನಷ್ಟವುಂಟಾಗುತ್ತದೆ. ನೀವು ಬಹಳಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತೀರಿ, ನೀವು ನಿಮ್ಮ ಒಳ್ಳೆಯ ಮನಸ್ಥಿತಿಯನ್ನು ಮತ್ತು ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತೀರಿ. ಶಕ್ತಿ ಮತ್ತು ಉತ್ಸಾಹಗಳು ನಿಮ್ಮಿಂದ ದೂರಹೋಗುವಾಗ, ನೀವು ಕೋಪಗೊಳ್ಳುತ್ತೀರಿ ಮತ್ತು ಆಗ ನೀವು ಇನ್ನೊಬ್ಬ ವ್ಯಕ್ತಿಗಿಂತ ಉತ್ತಮರೇನೂ ಆಗಿರುವುದಿಲ್ಲ. ನೀವೇನು ಮಾಡುತ್ತಿರುವಿರೆಂಬುದು ನಿಮಗೆ ತಿಳಿಯುವುದಿಲ್ಲ. ಆದುದರಿಂದ, ಅಂತಹ ಒಂದು ಸಂದರ್ಭದಲ್ಲಿ ನೀವೇನು ಮಾಡಬೇಕು? ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಅನಾಸಕ್ತಿಯನ್ನುಹೊಂದಿ. ಉದಾಹರಣೆಗೆ, ಪ್ರಪಂಚದಲ್ಲಿ ಕಳ್ಳರಿದ್ದಾರೆ; ಅವರಿದ್ದಾರೆ, ಅವರ ಬಗ್ಗೆ ನೀವೇನು ಮಾಡಲು ಸಾಧ್ಯ? ಮೊದಲು ಸ್ವೀಕರಿಸಿ, ಅನಾಸಕ್ತರಾಗಿ. ಹೀಗಿದ್ದರೂ, ನೀವು ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂಬುದು ಇದರ ಅರ್ಥವಲ್ಲ. ನಿಮ್ಮ ಮನಸ್ಸು ಅನಾಸಕ್ತವಾಗಿರುತ್ತದೆ (ಪ್ರಭಾವಿತವಾಗದೆ ಇರುತ್ತದೆ), ಆದರೆ ನೀವು ಅದರ ಮೇಲೆ ಕ್ರಮ ಕೈಗೊಳ್ಳುವಿರಿ.

ಇವುಗಳು, ನಮ್ಮ ಮನಸ್ಸನ್ನು ಕಾಪಾಡಲು ನಮಗೆ ಸಹಾಯ ಮಾಡುವ ನಾಲ್ಕು ಮನೋಭಾವಗಳಾಗಿವೆ. ಇದನ್ನೇ ನಾವು ಮಾಡಬೇಕಾದುದು, ಯಾವುದೇ ಬೆಲೆ ತೆತ್ತಾದರೂ ನಮ್ಮ ಮನಸ್ಸನ್ನು ಸಂರಕ್ಷಿಸಿಕೊಳ್ಳುವುದು.

ಪ್ರಶ್ನೆ: ಗುರುದೇವ, ನಮ್ಮ ಜೀವನದಲ್ಲಿ ಆಗ್ರಹ, ನಿಗ್ರಹ ಮತ್ತು ಅನುಗ್ರಹಗಳ ಪ್ರಸಕ್ತತೆಯೇನು?

ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದಕ್ಕೂ ತನ್ನದೇ ಆದ ಸ್ಥಾನ ಮತ್ತು ಮಹತ್ವಗಳಿವೆ. ಜೀವನವು ಅನುಗ್ರಹ, ಆಶೀರ್ವಾದದಿಂದ ನಡೆಯುತ್ತದೆ. ನಿಗ್ರಹ, ಅಂದರೆ ಸಂಯಮವು ನಿಮಗೆ ಜೀವನದಲ್ಲಿ ಆನಂದ ಮತ್ತು ಸಂತೋಷವನ್ನು ನೀಡುತ್ತದೆ. ಕೆಲವೊಮ್ಮೆ ನಮ್ಮಲ್ಲಿ ಆಗ್ರಹ ಅಥವಾ ಒತ್ತಾಯ ಕೂಡಾ ಇರಬೇಕು. ಒಬ್ಬಳು ತಾಯಿಯು ಒತ್ತಾಯಿಸದಿದ್ದರೆ, ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವುದಿಲ್ಲ. ಒಬ್ಬ ತಂದೆಯು ಒತ್ತಾಯಿಸದಿದ್ದರೆ ಅಥವಾ ತನ್ನ ಮಕ್ಕಳಿಗೆ ತಿಳಿಹೇಳದಿದ್ದರೆ, ಆಗ ಅವರಿಗೆ ಜೀವನದಲ್ಲಿ ಯಾವುದೇ ಸರಿದಾರಿ ಸಿಗುವುದಿಲ್ಲ. ಈ ರೀತಿಯಲ್ಲಿ ಆಗ್ರಹ ಕೂಡಾ ಮುಖ್ಯವಾಗಿದೆ.

ಅದೇ ರೀತಿಯಲ್ಲಿ, ತಿಳುವಳಿಕೆಯುಳ್ಳ ಜನರು ಅನ್ಯಾಯದ ವಿರುದ್ಧ ಎದ್ದುನಿಲ್ಲುವುದರ ಬಗ್ಗೆ ಪಟ್ಟು ಹಿಡಿಯದಿದ್ದರೆ, ಆಗ ಸಮಾಜದಲ್ಲಿ ಅನ್ಯಾಯವು ಹರಡುವುದು ಮುಂದುವರಿಯುತ್ತದೆ. ಅಜ್ಞಾನವನ್ನು ವಿರೋಧಿಸುವುದದ ಬಗ್ಗೆ ನಾವು ಒತ್ತಿಹೇಳದಿದ್ದರೆ, ಆಗ ಅಜ್ಞಾನವು ಬೆಳೆಯುವುದು. ಆದುದರಿಂದ, ಅನ್ಯಾಯ ಮತ್ತು ಅಜ್ಞಾನವನ್ನು ಸಮಾಜದಿಂದ ತೆಗೆದುಹಾಕುವುದನ್ನು ಆಗ್ರಹಿಸುವುದು ಮುಖ್ಯವಾಗಿದೆ.

ಒಬ್ಬರು ನಿಗ್ರಹವನ್ನು; ಮನಸ್ಸಿನ ಮೇಲೆ ಸಂಯಮವನ್ನು ಅಭ್ಯಾಸ ಮಾಡಬೇಕಾಗಿದೆ. ಸಾವಿರಾರು ಯೋಚನೆಗಳು ಮನಸ್ಸಿಗೆ ಬರುತ್ತವೆ. ಕೆಲವೊಮ್ಮೆ ಜನರಿಗೆ, ತಮ್ಮದೇ ಮನಸ್ಸಿಗೆ ಬರುವ ಯೋಚನೆಗಳಿಂದ ತೊಂದರೆಯಾಗುತ್ತದೆ. ಮನಸ್ಸಿಗೆ ಬರುವ ಯೋಚನೆಗಳನ್ನು ನಿಗ್ರಹಿಸುವ ಅಭ್ಯಾಸ ಮಾಡದಿದ್ದರೆ, ಆಗ ನೀವು ಹುಚ್ಚರಾಗುವಿರಿ ಮತ್ತು ಒಂದು ಮಾನಸಿಕ ಆಸ್ಪತ್ರೆಗೆ ಭರ್ತಿ ಮಾಡಲ್ಪಡುವಿರಿ. ಹಾಗಾಗಿ ನಿಗ್ರಹವು ಬಹಳ ಆವಶ್ಯಕವಾಗಿದೆ.

ನಾವು ನಮ್ಮ ಇಂದ್ರಿಯಗಳ ಮೇಲೆ ಕೂಡಾ ನಿಗ್ರಹವನ್ನು ಅಭ್ಯಾಸ ಮಾಡಬೇಕಾಗಿದೆ.

ಉದಾಹರಣೆಗೆ, ನಮ್ಮ ಹೊಟ್ಟೆಯು ತಾನು ತುಂಬಿರುವೆನೆಂದು ಹೇಳಿದರೂ, ನಮ್ಮ ಮನಸ್ಸು ಹೆಚ್ಚು ತಿನ್ನುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇದು ಹಲವಾರು ಸಲ ಆಗುತ್ತದೆ. ಬುಲಿಮಿಯಾ ಎಂದು ಕರೆಯಲ್ಪಡುವ ಒಂದು ಖಾಯಿಲೆಯಿದೆ. ಅದು ಹೊರದೇಶಗಳಲ್ಲಿ ವ್ಯಾಪ್ತವಾಗಿದೆ, ಭಾರತದಲ್ಲಿ ಅಷ್ಟೊಂದಿಲ್ಲ. ಬುಲಿಮಿಯಾದಲ್ಲಿ, ಒಬ್ಬರು ಮೊದಲು ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ನಂತರ ಅವರು ಮತ್ತೆ ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ಈ ರೀತಿಯಲ್ಲಿ ಅವರು ಆರು ಅಥವಾ ಹೆಚ್ಚು ಸಾರಿ ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ದೀರ್ಘಾವಧಿಯಲ್ಲಿ ಆಹಾರ ನಳಿಕೆಯು ಸಂಪೂರ್ಣವಾಗಿ ಹಾನಿಗೊಳ್ಳುತ್ತದೆ ಮತ್ತು ಸುಟ್ಟುಹೋಗುತ್ತದೆ.

ಈ ಖಾಯಿಲೆಯಿರುವ ಜನರು ಒಳಗಿನಿಂದ ಬಹಳ ಕದಡಿದ ಮನಸ್ಸಿನವರಾಗಿ ಉಳಿಯುತ್ತಾರೆ. ಪ್ರಾಣಾಯಾಮ, ಧ್ಯಾನ ಮತ್ತು ನಿಯಮಿತವಾಗಿ ಸುದರ್ಶನ ಕ್ರಿಯೆ ಮಾಡುವುದರಿಂದ ಹಲವಾರು ಜನರಿಗೆ ಇದರಿಂದ ಹೊರಬರಲು ಸಾಧ್ಯವಾಗಿದೆ. ಹೀಗೆ, ಬುಲಿಮಿಯಾವೆಂದರೆ, ತಿನ್ನಲಿರುವ ಬಯಕೆಯು ಬಹಳಷ್ಟು ಹೆಚ್ಚಾಗಿದ್ದರೂ ಮನಸ್ಸಿನಲ್ಲಿ ಯಾವುದೇ ತೃಪ್ತಿಯಿರದ ಒಂದು ಖಾಯಿಲೆಯಾಗಿದೆ. ಇದಕ್ಕಾಗಿಯೇ ಇಂದ್ರಿಯಗಳ ಮೇಲಣ ನಿಗ್ರಹದ ಅಭ್ಯಾಸ ಮಾಡುವುದು ಆವಶ್ಯಕವಾಗಿರುವುದು.

ಒಬ್ಬ ವ್ಯಕ್ತಿಯು ತನ್ನ ಇಂದ್ರಿಯಗಳ ಮೇಲೆ ನಿಗ್ರಹವನ್ನು ಅಭ್ಯಾಸ ಮಾಡದಿರುವಾಗ, ಅವನು ಖಾಯಿಲೆಯೊಂದಿಗೆ ಒಂದು ಆಸ್ಪತ್ರೆಯನ್ನು ಸೇರುತ್ತಾನೆ ಅಥವಾ ಜೈಲನ್ನು ಸೇರುತ್ತಾನೆ. ನಿಗ್ರವನ್ನು ಅಭ್ಯಾಸ ಮಾಡುವುದು ಒಬ್ಬರನ್ನು ಈ ಎರಡೂ ಪರಿಸ್ಥಿತಿಗಳಿಂದ ಕಾಪಾಡಬಹುದು.

ಅನುಗ್ರಹವು ಜೀವನದಲ್ಲಿ ತೃಪ್ತಿಯನ್ನು ತರುತ್ತದೆ. ನೀವು ಜೀವನದಲ್ಲಿ ಯಾವುದಾದರೂ ಆನಂದ ಅಥವಾ ಸುಖವನ್ನು ಅನುಭವಿಸಿರುವುದಾದರೆ, ಅದು ಬಂದಿರುವುದು ಅನುಗ್ರಹದ ಮೂಲಕ ಮಾತ್ರ. ನಮ್ಮಲ್ಲಿ ಜ್ಞಾನವು ಉದಯಿಸುವಾಗ, ನಮಗೆ ನಮ್ಮ ಜೀವನದಲ್ಲಿರುವ ಅನುಗ್ರಹವನ್ನು ಗುರುತಿಸಲು ಮತ್ತು ಅದರ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ.

ಜೀವನದಲ್ಲಿ ಇವತ್ತು ನಾವು ಏನನ್ನೇ ಪಡೆದಿದ್ದರೂ, ಎಲ್ಲೇ ಇದ್ದರೂ, ಇದೆಲ್ಲವೂ ಬಂದಿರುವುದು ಅನುಗ್ರಹದಿಂದ ಮಾತ್ರ. ಈ ಭಾವನೆಯು ಜೀವನಕ್ಕೆ, ಪೂರ್ಣತೆಯ ಒಂದು ಭಾವವನ್ನು ಒದಗಿಸುತ್ತದೆ.

ಪ್ರಶ್ನೆ: ಗುರುದೇವ, ಕಲಾವಿದರು ಕೃಷ್ಣ ಪರಮಾತ್ಮನ ವಿಶ್ವರೂಪವನ್ನು, ಹಲವಾರು ತಲೆ ಹಾಗೂ ಕೈಗಳಿರುವ ಒಬ್ಬ ವ್ಯಕ್ತಿಯಾಗಿ ಚಿತ್ರಿಸುತ್ತಾರೆ. ಅದರ ನಿಜವಾದ ಅರ್ಥವೇನು?
ಶ್ರೀ ಶ್ರೀ ರವಿ ಶಂಕರ್: ವಿಶ್ವರೂಪವೆಂದರೆ ಎಲ್ಲದರಲ್ಲೂ ದೇವರನ್ನು  ನೋಡುವುದು. ಇಲ್ಲಿ ರೂಪವೆಂದರೆ ಸಾರ್ವತ್ರಿಕ ರೂಪವೆಂದು ಅರ್ಥ; ಸಂಪೂರ್ಣ ವಿಶ್ವವನ್ನು ಒಂದು ದೈವಿಕತೆಯ ರೂಪವಾಗಿ ನೋಡುವುದೇ ಇದರ ಅರ್ಥವಾಗಿದೆ, ಆದರೆ ಕಲಾವಿದನು ಅದನ್ನು ವಿಭಿನ್ನವಾಗಿ ತೋರಿಸಿರುವನು. ಅದರ ಬಗ್ಗೆ, ಕಲಾವಿದನು ಅದನ್ನು ಪ್ರಸ್ತುತ ಪಡಿಸಿರುವ ರೀತಿಯಲ್ಲಿ; ಪರಮಾತ್ಮನನ್ನು, ಹಲವಾರು ತಲೆಗಳು ಮತ್ತು ಕೈಗಳಿರುವ ಒಬ್ಬ ವ್ಯಕ್ತಿಯಂತೆ ಯೋಚಿಸಬೇಡಿ, ಇಲ್ಲ.

ಅರ್ಜುನನಿಗೆ, ಎಲ್ಲರೂ ಒಂದು ಎಂಬ ಅನುಭವವು ಹಾಗೆಯೇ ಆಯಿತು. ನೂರಾರು ಮತ್ತು ಸಾವಿರಾರು ತಲೆಗಳು ಒಬ್ಬ ವ್ಯಕ್ತಿಯದಾಗಿರಲಿಲ್ಲ. ಅದು ಹಾಗಲ್ಲ. ಅದರ ಅರ್ಥವೇನೆಂದರೆ ಒಂದು ಪ್ರಜ್ಞೆಯಿರುವುದು, ಅದು ಈ ಎಲ್ಲಾ ತಲೆಗಳಲ್ಲಿದೆ.  ಏಕತ್ವದ ಆ ಅನುಭವವನ್ನು ಹೊಂದಿರುವುದು, ನೀರು, ಭೂಮಿ, ಮೋಡಗಳು, ಪ್ರಾಣಿಗಳು ಮತ್ತು ಮರಗಳೊಂದಿಗೆ ಏಕತ್ವದ ಭಾವನೆಯನ್ನು ಹೊಂದಿರುವುದು. ನಿಜವಾಗಿ ವಿಶ್ವರೂಪವೆಂದರೆ ಅದುವೇ.

ಪ್ರಶ್ನೆ: ಗುರುದೇವ, ಪುರುಷ ಎಂಬುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಪುರ ಎಂದರೆ ನಗರವೆಂದು ಅರ್ಥ. ಆದುದರಿಂದ, ಒಂದು ನಗರದಲ್ಲಿ ವಾಸಿಸುವವನು ಒಬ್ಬ ಪುರುಷ.
ನಮ್ಮ ಶರೀರ ಕೂಡಾ ಒಂದು ನಗರದಂತೆ. ನಮ್ಮ ಶರೀರದೊಳಗೆ ಎಷ್ಟೊಂದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿವೆಯೆಂಬುದು ನಿಮಗೆ ಗೊತ್ತೇ? ಕರುಳಿನಲ್ಲಿ ಮಾತ್ರವಾಗಿ ಸುಮಾರು ೫೦,೦೦೦ ರೀತಿಯ ಬ್ಯಾಕ್ಟೀರಿಯಾ ಇವೆ. ನಿಮಗೆ ಅತಿಸಾರವಾದಾಗ, ಈ ಬ್ಯಾಕ್ಟೀರಿಯಾದ ಒಂದು ಪ್ರವಾಹವಿರುತ್ತದೆ. ನಿಮ್ಮ ಹೊಟ್ಟೆಯೊಳಗೆ ಶಬ್ದವಾಗುವಾಗ, ಅದು ಈ ಬ್ಯಾಕ್ಟೀರಿಯಾ ಅಲ್ಲಾಡುವುದಾಗಿದೆ; ಅಲ್ಲೊಂದು ಭೂಕಂಪವಾಗಿದೆಯೇನೋ ಎಂಬಂತೆ!

ನೀವು ವಾಯುಪೀಡೆಯಿಂದ ಬಳಲುವಾಗ, ಅದು ಬ್ಯಾಕ್ಟೀರಿಯಾವು ಒಂದು ಬಿರುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ. ಹೀಗೆ, ನಿಮ್ಮೊಳಗೆ ಒಟ್ಟಿನಲ್ಲಿ ಒಂದು ಭಿನ್ನವಾದ ಪ್ರಪಂಚವಿದೆ.

ಅದೇ ರೀತಿಯಲ್ಲಿ, ನಮ್ಮ ನರ ನಾಡಿಗಳಲ್ಲಿ ಕೂಡಾ ಹಲವಾರು ಬ್ಯಾಕ್ಟೀರಿಯಾ ಇವೆ. ನಮ್ಮ ಹಣೆಯ ಮೇಲೆ ಮೂರು ರೀತಿಯ ಮೈಟ್ ಎಂಬ ಸೂಕ್ಷ್ಮಜೀವಿಗಳಿವೆ ಎಂದು ಹೇಳಲಾಗಿದೆ. ಮೈಟ್‌ಗಳು ಕೂಡಾ ಒಂದು ರೀತಿಯ ಬ್ಯಾಕ್ಟೀರಿಯಾ. ಒಂದು ರೀತಿಯದ್ದು ಕಣ್ಣ ಹುಬ್ಬುಗಳ ಬಳಿ ವಾಸಿಸುತ್ತವೆ, ಇನ್ನೊಂದು ರೀತಿಯದ್ದು ಹುಬ್ಬುಗಳ ಮೇಲಿರುವ ಪ್ರದೇಶದಲ್ಲಿ ಮತ್ತು ಮೂರನೆಯ ರೀತಿಯದ್ದು ಹಣೆಯ ಮೇಲ್ಭಾಗದಲ್ಲಿ ವಾಸಿಸುತ್ತವೆ. ಅವುಗಳೆಲ್ಲವೂ ಪರಸ್ಪರ ವಿಭಿನ್ನವಾಗಿವೆ ಮತ್ತು ತಮ್ಮದೇ ಆದ ಸೀಮೆಗಳನ್ನು ಹೊಂದಿವೆ.

ಮೇಲಿನ ಭಾಗದಲ್ಲಿರುವವು ಕೆಳಭಾಗಕ್ಕೆ ದಾಟುವುದಿಲ್ಲ, ಕೆಳಗಿರುವವು ಮೇಲಿನ ಭಾಗಕ್ಕೆ ದಾಟುವುದಿಲ್ಲ ಮತ್ತು ಮಧ್ಯದಲ್ಲಿರುವವು ಅವುಗಳೆಲ್ಲಿರುವುವೋ ಅಲ್ಲಿಯೇ ಉಳಿಯುವುವು. ಹೀಗೆ ಈ ಸೂಕ್ಷ್ಮಜೀವಿಗಳು ತಮ್ಮ ಪ್ರದೇಶಗಳಿಗೆ ಸೀಮಿತವಾಗಿ ಉಳಿಯುತ್ತವೆ. ಪ್ರಾಚೀನ ಭಾರತದಲ್ಲಿ, ಕೈಗಳ ಮೂರು ಬೆರಳುಗಳನ್ನುಪಯೋಗಿಸಿ ಹಣೆಯ ಮೇಲೆ ವಿಭೂತಿಯ ಮೂರು ಗೆರೆಗಳನ್ನು ಎಳೆಯುವ ಒಂದು ಪದ್ಧತಿಯಿತ್ತು. ಅವರು ಹಾಗೆಯೇ ಕೇವಲ ಒಂದೇ ಗೆರೆಯನ್ನು ಎಳೆಯಬಹುದಿತ್ತು,

ಆದರೆ ಅವರು ಮಧ್ಯೆ ಜಾಗ ಬಿಟ್ಟುಕೊಂಡು ನಿಜವಾಗಿ ಮೂರು ಗೆರೆಗಳನ್ನು ಎಳೆಯುತ್ತಿದ್ದರು. ಹಣೆಯ ಮೇಲೆ ಮೂರು ಗೆರೆಗಳಲ್ಲಿ ನಿರ್ದಿಷ್ಟ ರೀತಿಯ ಸೂಕ್ಷ್ಮಜೀವಿಗಳಿವೆ ಎಂಬುದು ಬಹುಶಃ ಅವರಿಗೆ ಗೊತ್ತಿತ್ತು.

ಅದೇ ರೀತಿಯಲ್ಲಿ, ನಮ್ಮ ಚರ್ಮದಲ್ಲಿ ಕೂಡಾ ಬ್ಯಾಕ್ಟೀರಿಯಾ ಇವೆ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕೈಗಳನ್ನು ಕುಲುಕುವ ಪದ್ಧತಿಯಿರಲಿಲ್ಲ. ಬ್ಯಾಕ್ಟೀರಿಯಾವು ಸಂಪರ್ಕಕ್ಕೆ ಬರುವುದನ್ನು ತಡೆಗಟ್ಟುವುದು ಇದರ ಉದ್ದೇಶವಾಗಿತ್ತು.

ಬದಲಾಗಿ, ಕೈಗಳನ್ನು ಮಡಚಿ ಪ್ರಣಾಮವನ್ನು ಮಾಡುವುದರ ಮೂಲಕ ಅವರು ಪರಸ್ಪರರಿಗೆ ಅಭಿವಂದಿಸುತ್ತಿದ್ದರು.

ಇವತ್ತು ಕೂಡಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ತಮ್ಮ ಶರೀರಗಳಲ್ಲಿ ಒಂದು ವಿಶೇಷ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿದ ಒಂದು ಬುಡಕಟ್ಟಿನ ಜನರಿದ್ದಾರೆ. ಭಾರತ ಸರಕಾರದಿಂದ ಅವರಿಗೆ ರಕ್ಷಣೆ ಮತ್ತು ಕಾನೂನು ಮೂಲಕ ಪ್ರತ್ಯೇಕತೆಗಳನ್ನು ನೀಡಲಾಗಿದೆ. ಅವರಿಗೆ ಇತರ ಜನರನ್ನು ಭೇಟಿಯಾಗಲು ಅನುಮತಿಯಿಲ್ಲ. ಅವರು ಇತರ ಜನರನ್ನು ಭೇಟಿಯಾದರೆ, ಅವರು ಬ್ಯಾಕ್ಟೀರಿಯಾವನ್ನು ವಿನಿಮಯ ಮಾಡಿಕೊಳ್ಳುವರು, ಅದೊಂದು ಅಸಮತೋಲನವನ್ನುಂಟುಮಾಡಬಹುದು. ಆದುದರಿಂದ ಅವರನ್ನು ನಾಗರೀಕತೆಯಿಂದ ದೂರ ಇರಿಸಲಾಗಿದೆ.

ಅದೇ ರೀತಿಯಲ್ಲಿ, ಆಫ್ರಿಕಾದಲ್ಲಿ ಕಾಡುಗಳಲ್ಲಿ ವಾಸಿಸುವ ಜನರು ನಗರದ ಜನರೊಂದಿಗೆ ಸಂಪರ್ಕಕ್ಕೆ ಬರಲು ಅನುಮತಿಯಿಲ್ಲ. ಅವರ ಶರೀರ ರಚನೆಯು ನಗರದ ಜನರದಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಅವರು ನಗರಕ್ಕೆ ಬಂದರೆ, ಅವರು ಖಾಯಿಲೆ ಬೀಳುತ್ತಾರೆ ಮತ್ತು ನಮ್ಮಂತಹ ಜನರು ಅವರ ಜಾಗಕ್ಕೆ ಹೋದರೆ, ಆಗ ನಾವು ಖಾಯಿಲೆ ಬೀಳುವೆವು. ಅವರ ಶರೀರದ ರೀತಿಯು ಹೇಗಿದೆಯೆಂದರೆ, ಕಾಡಿನಲ್ಲಿನ ಆ ಜಾಗಗಳಲ್ಲಿ ವಾಸಿಸಲು ಅವರಿಗೆ ಅಭ್ಯಾಸವಾಗಿಬಿಟ್ಟಿದೆ.

ನಮ್ಮ ಶರೀರದೊಳಗೆ ಹಲವಾರು ಸೂಕ್ಷ್ಮಜೀವಿಗಳು ವಾಸಿಸುತ್ತಿವೆಯೆಂಬುದು ಒಂದು ವೈಜ್ಞಾನಿಕ ಸತ್ಯವಾಗಿದೆ; ಪ್ರತಿದಿನವೂ ಹಲವಾರು ಸಾಯುತ್ತವೆ ಮತ್ತು ಹೊಸತು ಹುಟ್ಟುತ್ತವೆ. ಇದಕ್ಕಾಗಿಯೇ ನಮ್ಮ ಶರೀರವನ್ನು ಒಂದು ನಗರವಾಗಿ(ಪುರ) ಕೂಡಾ ಪರಿಗಣಿಸಬಹುದು. ಮಾನವ ಶರೀರದಲ್ಲಿ ಹಲವಾರು ವಿದ್ಯುತ್ ವಾಹಕಗಳು ಮತ್ತು ವ್ಯವಸ್ಥೆಗಳಿವೆ. ವಿವಿಧ ಸಂಕೇತಗಳನ್ನು ಸ್ವೀಕರಿಸುವ ಒಂದು ನರಮಂಡಲವಿದೆ. ಶರೀರದ ಪ್ರತಿಯೊಂದು ಜೀವಕೋಶವೂ ಮೆದುಳಿನೊಂದಿಗೆ ಒಂದು ದೂರವಾಣಿ ಸಂಪರ್ಕವನ್ನು ಹೊಂದಿದೆ. ಇದು ಜೀವಕೋಶಗಳ ಮೇಲೆ ಆಜ್ಞೆಯನ್ನು ಕೂಡಾ ಹೇರುತ್ತದೆ ಮತ್ತು ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುವಂತೆ ಅವುಗಳಿಗೆ ನಿರ್ದೇಶಿಸುತ್ತದೆ. ಜೀವಕೋಶಗಳು ಮೆದುಳಿನ ಆಜ್ಞೆಯನ್ನು ಅನುಸರಿಸದಿರುವಾಗ, ಅವುಗಳು ಖಾಯಿಲೆ ಬೀಳುತ್ತವೆ.

ನಮ್ಮ ಶರೀರವು ಅಸಾಮಾನ್ಯವಾದುದಾಗಿದೆ. ನೀವು ಮಾನವ ಶರೀರದ ಕಡೆಗೆ ಕೂಲಂಕುಷವಾಗಿ ಪರಿಶೀಲಿಸಿದರೆ, ನಿಮಗೆ ಬಹಳ ಅಚ್ಚರಿಯಾಗುವುದು. ಇದಕ್ಕಾಗಿಯೇ ಶರೀರದೊಳಗೆ ವಾಸಿಸುತ್ತಿರುವ ಆತ್ಮವೂ ಕೂಡಾ ಪುರುಷನೆಂದು ಉಲ್ಲೇಖಿಸಲ್ಪಡುವುದು.

ನಂತರ ಇರುವುದು ವಿರಾಟ ಪುರುಷ. ನಮ್ಮ ಶರೀರದೊಳಗೆ ಒಂದು ಆತ್ಮವಿರುವಂತೆಯೇ, ಅದೇ ರೀತಿಯಲ್ಲಿ, ಸಂಪೂರ್ಣ ಸೃಷ್ಟಿಯನ್ನು ವ್ಯಾಪಿಸಿರುವ ಒಂದು ಸಾರ್ವತ್ರಿಕ ಆತ್ಮ ಅಥವಾ  ಚೇತನವಿದೆ. ಅದು ವಿಶ್ವಾತ್ಮವೆಂದು ಕರೆಯಲ್ಪಡುತ್ತದೆ.

ನಂತರ ಇರುವುದು ಪರಮಾತ್ಮ; ವೈಯಕ್ತಿಕ ಆತ್ಮ ಮತ್ತು ವಿಶ್ವಾತ್ಮಗಳಿಗೆ ಕೊಡಲಾಗಿರುವ ಸಾಮೂಹಿಕ ಹೆಸರು. ಈ ಪ್ರಪಂಚ ಮತ್ತು ಪರಮಾತ್ಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಈ ಸೃಷ್ಟಿಯು ಪರಮಾತ್ಮನಲ್ಲದೆ ಬೇರೇನೂ ಅಲ್ಲ ಮತ್ತು ಪರಮಾತ್ಮನೆಂದರೆ ಸೃಷ್ಟಿಯೇ; ಇಷ್ಟನ್ನು ನಾವು ಅರ್ಥಮಾಡಿಕೊಳ್ಳಬೇಕು. ನಂತರ ಸುಮ್ಮನೆ ವಿಶ್ರಾಮ ಮಾಡಿ, ಆತ್ಮನಲ್ಲಿ ವಿರಮಿಸಿ.

ಪ್ರಶ್ನೆ: ಗುರುದೇವ, ನಿಮಗೆ ಆತ್ಮೀಯವಾದ ರೀತಿಯ ಪ್ರೇಮದ ಗುಣಗಳು ಯಾವುವು?

ಶ್ರೀ ಶ್ರೀ ರವಿ ಶಂಕರ್: ಜ್ಞಾನದೊಂದಿಗಿನ ಪ್ರೇಮ. ಸಹನೆಯೊಂದಿಗಿನ ಪ್ರೇಮ. ಕೆಲಸದಲ್ಲಿನ ಪ್ರೇಮ, ಅಂದರೆ ಸೇವೆ.
ನೀವು ಯಾರಿಗಾದರೂ, ’ಓ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ಆದರೆ ನಾನು ನಿನಗಾಗಿ ಏನನ್ನೂ ಮಾಡಲಾರೆ’ ಎಂದು ಹೇಳಲು ಸಾಧ್ಯವಿಲ್ಲ.

ನೀವು ಯಾರನ್ನಾದರೂ ಪ್ರೀತಿಸುವುದಾದರೆ, ನೀವದನ್ನು ಕ್ರಿಯಾರೂಪಕ್ಕೆ ತರಲೇಬೇಕು ಮತ್ತು ಅದುವೇ ಸೇವೆ. ಪ್ರೇಮವನ್ನು, ’ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀವು ಹಲವಾರು ಸಲ ಹೇಳುತ್ತಾ ಇರುವ,  ಕೇವಲ ಒಂದು ಭಾವನೆಯಾಗಿ ಅಥವಾ ಒಂದು ಬಹಳ ಮೆತ್ತಮೆತ್ತಗಿನ ವಿಷಯವಾಗಿ ಯೋಚಿಸಬೇಡಿ.

ಹದಿಹರೆಯದವರು ಯಾರೊಂದಿಗಾದರೂ ಪ್ರೇಮದಲ್ಲಿ ಬೀಳುವಾಗ, ಅವರು ಆ ವ್ಯಕ್ತಿಯ ಹೆಸರನ್ನು ಒಂದು ನೂರು ಸಾರಿ, ಎಲ್ಲಾ ಕಡೆಗಳಲ್ಲಿ ಬರೆಯುವರು. ಅದು ಪ್ರೇಮದ ಸ್ವಭಾವವಾಗಿದೆ; ಅದನ್ನು ಒಂದು ಸಾರಿ ಹೇಳುವುದು ಸಾಕಾಗುವುದಿಲ್ಲ, ನೀವದನ್ನು ಹಲವಾರು ಸಾರಿ ಹೇಳಲು ಮತ್ತು ಬರೆಯಲು ಬಯಸುತ್ತೀರಿ. ಪ್ರೇಮವೆಂದರೆ ಕೇವಲ ಒಂದು ಅಲ್ಪಾವಧಿಯವರೆಗೆ ಉಳಿಯುವ ಆ ಮೆತ್ತಮೆತ್ತಗಿನ, ಹದಿಹರೆಯದ ಭಾವನೆಯಲ್ಲ. ಪ್ರೇಮವೆಂಬುದು ನಮ್ಮ ಅಸ್ತಿತ್ವವೇ ಆಗಿದೆ. ನೀವದರಿಂದ ಯಾವತ್ತೂ ಹೊರಗಿರಲು ಸಾಧ್ಯವಿಲ್ಲ. ಅದು ಅಲ್ಲಿ ಇಲ್ಲಿ ಸ್ವಲ್ಪ ವಿಕೃತಿಗೊಳ್ಳುವುದು ಮಾತ್ರ. ಜ್ಞಾನವಿರುವಾಗ,
ವಿಕೃತಿಯುಂಟಾಗುವುದಿಲ್ಲವೆಂಬುದನ್ನು ನೀವು ಕಾಣುವಿರಿ. ಪ್ರೇಮವು ತನ್ನ ಶುದ್ಧವಾದ ರೂಪದಲ್ಲಿ ಉಳಿಯುತ್ತದೆ.

ಪ್ರಶ್ನೆ: ಗುರುದೇವ, ನಮ್ಮ ವೈಯಕ್ತಿಕ ಸಂಕಲ್ಪ ಮತ್ತು ಸಾರ್ವತ್ರಿಕ ಸಂಕಲ್ಪಗಳ ನಡುವೆ ಒಂದು ಹೊಂದಾಣಿಕೆಯಿದೆಯೇ ಎಂಬುದನ್ನು ನಾವು ಹೇಗೆ ತಿಳಿಯಬಹುದು?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಬಯಕೆಯು ನೆರವೇರಲು ತೊಡಗುವಾಗ ನೀವದನ್ನು ತಿಳಿಯುವಿರಿ.
ನಿಮ್ಮ ಇಚ್ಛೆಯು ನೆರವೇರದಿದ್ದರೆ, ಆಗ ಅದರರ್ಥವೇನೆಂದರೆ, ನಿಮ್ಮ ಇಚ್ಛೆಯು ವಿಶ್ವದ ಇಚ್ಛೆಯೊಂದಿಗೆ ಸಾಮರಸ್ಯದಿಂದಿಲ್ಲವೆಂದು.

ಪ್ರಶ್ನೆ: ಗುರುದೇವ, ಗುರು ಪೂಜೆ ಸಂಪ್ರದಾಯದಲ್ಲಿ, ನಾವು ಉಚ್ಛರಿಸುವ ಹೆಸರುಗಳಲ್ಲಿ ಪ್ರತಿಯೊಂದಕ್ಕೆ ಒಂದು ನಿರ್ದಿಷ್ಟ ಮಹತ್ವವಿದೆ; ಋಷಿ ಪರಾಶರರ ಮಹತ್ವವೇನು?

ಶ್ರೀ ಶ್ರೀ ರವಿ ಶಂಕರ್: ಈ ಋಷಿಗಳಲ್ಲಿ ಪ್ರತಿಯೊಬ್ಬರೂ ಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಋಷಿ ಪರಾಷರರ ಗೌರವಾರ್ಥವಾಗಿ, ಪರಾಷರ-ಸ್ಮೃತಿ ಎಂದು ಕರೆಯಲ್ಪಡುವ ಶ್ಲೋಕಗಳ ಒಂದು ಸಮೂಹವಿದೆ. ಬಹಳಷ್ಟು ಕೃತಿಗಳು ಋಷಿ ಪರಾಷರರಿಂದ ನೀಡಲ್ಪಟ್ಟವು, ಕೇವಲ ಒಂದೆರಡಲ್ಲ. ಆದರೆ ನನಗೆ ಅದರ ಬಗ್ಗೆ ತಿಳಿದಿರುವುದು ಸ್ವಲ್ಪವೇ ಸ್ವಲ್ಪ.

ಈ ಮಹಾನ್ ಸಂತರಿಂದ ಬಹಳಷ್ಟು ಜ್ಞಾನ ಮತ್ತು ಅರಿವು  ನೀಡಲ್ಪಟ್ಟಿದೆ.

ಗುರುವಾರ, ನವೆಂಬರ್ 1, 2012

ಜ್ಞಾನೋದಯ

ಬೆಂಗಳೂರು, ಭಾರತ
೦೧.೧೧.೧೨

ಕನ್ನಡ ರಾಜ್ಯೋತ್ಸವದ ಸಂದರ್ಭದಂದು ಭಕ್ತ ವೃಂದಕ್ಕೆ ಪೂಜ್ಯ ಗುರೂಜಿಯವರು ನೀಡಿದ ಸಂದೇಶವಿದು.

ನ್ನಡ ತಿಳಿಯದವರು ಕನ್ನಡದ ಅಸಾಮಾನ್ಯ ಸಾಹಿತ್ಯ ರಚನೆಗಳು, ಕಾವ್ಯಗಳು ಮತ್ತು ಜ್ಞಾನವನ್ನು ಓದುವುದರಿಂದ ವಂಚಿತರಾಗಿದ್ದಾರೆ ಎಂದು ನನಗೆ ಯಾವತ್ತೂ ಅನ್ನಿಸುತ್ತಿತ್ತು. ಕನ್ನಡ ಒಂದು ಸರಳ ಹಾಗೂ ಮಧುರ ಭಾಷೆಯಾಗಿದ್ದರೂ, ಜನ ಈ ಭಾಷೆಯನ್ನು ಮರೆಯುತ್ತಿದ್ದಾರೆ, ಅಭಿಮಾನಶೂನ್ಯರಾಗುತ್ತಿದ್ದಾರೆ.

ನನಗೆ ನೆನಪಾಗುತ್ತಿದೆ, ಸುಮಾರು ೪೦-೪೫ ವರ್ಷಗಳ ಹಿಂದೆ ನಾನು ಶಾಲೆಗೆ ಬಸ್ಸಿನಲ್ಲಿ ಹೋದುತ್ತಿದ್ದಾಗ, ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯನ್ನು ಉಪಯೋಗಿಸದ ಒಬ್ಬ ನಿರ್ವಾಹಕರಿದ್ದರು. ನಾವು ಅವರನ್ನು ಆಮಂತ್ರಿಸಿ ಆದರಿಸಿದೆವು. ಅವರು ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದ ರೀತಿಯನ್ನು ಜನರು ಇಷ್ಟಪಡುತ್ತಿದ್ದರು, ಇದು ಮಕ್ಕಳನ್ನು, ಯುವಕರನ್ನು ಮತ್ತು ದೊಡ್ಡವರನ್ನು ಪ್ರೋತ್ಸಾಹಿಸುತ್ತಿತ್ತು. ಬಸ್ಸಿನಲ್ಲಿ ಕುಳಿತಿದ್ದ ಯಾರಿಗೂ ಗಂಭೀರ ಮುಖವಿರಲಿಲ್ಲ, ಎಲ್ಲರೂ ಮಂದಹಾಸದಿಂದ ನಿರ್ವಾಹಕರು ಮುಂದೇನು ಮಾತನಾಡುತ್ತಾರೆ ಎಂದು ಕೇಳಲು ಕಾಯುತ್ತಿರುತ್ತಿದ್ದರು.

ನಮ್ಮ ಸಂಸ್ಕೃತಿಯನ್ನುಳಿಸುವುದು ಹೇಗೆ ನಮ್ಮ ಕರ್ತವ್ಯವಾಗಿದೆಯೋ, ಅದೇ ರೀತಿಯಲ್ಲಿ ನಮ್ಮ ಭಾಷೆಯನ್ನು  ಉಳಿಸುವುದು ಹಾಗೂ ಬೆಳೆಸುವುದೂ ನಮ್ಮ ಕರ್ತವ್ಯವಾಗಿದೆ. ನಿಮಗೆ ಗೊತ್ತೇ ಲೆಕ್ಕ ಮಾಡುವಾಗ ನಾನಿನ್ನೂ ಕನ್ನಡ ಅಂಕೆಗಳನ್ನು ಉಪಯೋಗಿಸುತ್ತೇನೆ? ನಾನು ಜಗತ್ತಿನಲ್ಲಿ ಬಹಳ ದೇಶಗಳನ್ನು ಸುತ್ತಿದ್ದರೂ, ನಾನು ಯಾವತ್ತೂ ಆಂಗ್ಲದಲ್ಲಿ ಸಂಖ್ಯೆ ಎಣಿಸುವುದಿಲ್ಲ, ನನ್ನ ಲೆಕ್ಕ ಮತ್ತು ಆಲೋಚನೆ ಕನ್ನಡದಲ್ಲಿ ಹುಟ್ಟುತ್ತವೆ. ನಾನು ಸಮಯವನ್ನೂ ಕನ್ನಡದಲ್ಲೇ ಅನುಸರಿಸುತ್ತೇನೆ. ನಾನು ಬಹಳ ಸಣ್ಣ ವಯಸ್ಸಿನಿಂದ ನನ್ನ ಮಾತೃ ಭಾಷೆಯಲ್ಲಿ ಕಲಿತಿದ್ದೇನೆ. ನಾನು ಕನ್ನಡದಲ್ಲಿ ಓದಿ ಬರೆಯುತ್ತಿದ್ದುದು.

ನಾನು ಮೊದಲು ಆಂಗ್ಲದ ಅನುಭವ ಪಡೆದದ್ದು ಏಳನೇ ತರಗತಿಯಲ್ಲಿ. ನಾವು ಆಂಗ್ಲವನ್ನು ಬರೆದ ರೀತಿಯಲ್ಲಿ ಉಚ್ಚರಿಸುವುದಿಲ್ಲ, ಉಚ್ಚರಿಸುವ ರೀತಿಯಲ್ಲಿ ಬರೆಯುವುದಿಲ್ಲ. ಉದಾಹರಣೆಗೆ, ’know’ ಎಂಬ ಪದವನ್ನು ’ನೊ’ ಎಂದು ಉಚ್ಚರಿಸುತ್ತೇವೆ; ಇದು ನಮಗೆ ಬಹಳ ಗೊಂದಲವನ್ನುಂಟುಮಾಡುತ್ತಿತ್ತು. 

ಹಾಗಾಗಿ ನಾವು ಆಂಗ್ಲ ಪದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೆವು. ಕನ್ನಡದಲ್ಲಿ ನಾವು ಬರೆಯುವ ರೀತಿಗನುಗುಣವಾಗಿ ಉಚ್ಚರಣೆ ಮಾಡುತ್ತೇವೆ, ಇದು ಕನ್ನಡದ ಸೌಂದರ್ಯ. ತಮಿಳಿನಲ್ಲಿ ಹೀಗಿಲ್ಲ ಎಂದು ನಾನು ಕೇಳಿದ್ದೇನೆ. ನಾನು ತಮಿಳು ಮಾತನಾಡುತ್ತೇನೆ, ಆದರೆ ನನಗೆ ತಮಿಳು ಓದುವುದರಲ್ಲಿ ಅಥವಾ ಬರೆಯುವುದರಲ್ಲಿ ಹೆಚ್ಚು ಅನುಭವವಿಲ್ಲ.
ತಮಿಳಿನಲ್ಲಿ ಅವರು ’ಕ’ ಮತ್ತು ’ಗ’ ಎನ್ನಲು ಒಂದೇ ಅಕ್ಷರವನ್ನು ಉಪಯೋಗಿಸುತ್ತಾರೆ; ಕಣಪತಿ ಮತ್ತು ಗಣಪತಿ ಎರಡೂ ತಮಿಳಿನಲ್ಲಿ ಒಂದೇ ಆಗಿವೆ. ಹೇಗಿದ್ದರೂ ಕನ್ನಡದಲ್ಲಿ, ಅಕ್ಷರಮಾಲೆಯು ಸಂಪೂರ್ಣವಾಗಿವೆ. ಕನ್ನಡವನ್ನು ಕಲಿತಿರುವವರಿಗೆ ಉಳಿದ ಭಾಷೆಗಳನ್ನು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ.

ಆರು ಕೋಟಿ ಕನ್ನಡಿಗರಿಗೆ ನನ್ನ ಸಂದೇಶವೆಂದರೆ, ನಿಮ್ಮ ಮಕ್ಕಳೊಂದಿಗೆ ನಿಮ್ಮ ಮಾತೃಭಾಷೆಯಲ್ಲೇ ಮಾತನಾಡಿ. ಸಾಧ್ಯವಾದಷ್ಟು, ಐದು ಅಥವಾ ಆರನೇ  ತರಗತಿಯ ತನಕನಿಮ್ಮಮಕ್ಕಳು ವಿದ್ಯಾಭ್ಯಾಸವೂ ಮಾತೃಭಾಷೆಯಲ್ಲಿ ಪಡೆಯುವಂತೆ ನೋಡಿಕೊಳ್ಳಿ. ಇಂದಿನ ದಿನಗಳಲ್ಲಿ ನಾವು ’ಬಾಬಾ ಬ್ಲ್ಯಾಕ್ ಷೀಪ್’ (ಆಂಗ್ಲ ಪ್ರಾಸ ಚುಟುಕು) ಎಂದು ಸಣ್ಣ ವಯಸ್ಸಿನಲ್ಲೇ ಶುರು ಮಾಡುತ್ತೇವೆ.  ಮಕ್ಕಳು ಬೇರೆ ಭಾಷೆಯಲ್ಲಿ ಲೆಕ್ಕ ಮಾಡಲು ಶುರು ಮಾಡಿದಾಗ ಅವರ ಪ್ರತಿಭೆಗಳು ಅಷ್ಟೊಂದು ಅರಳುವುದಿಲ್ಲ. ಜಗತ್ತಿನಾದ್ಯಂತ ಬಹಳ ಮಂದಿ ಮನೋವಿಜ್ಞಾನಿಗಳು ಹೇಳುವುದು, ಮಕ್ಕಳಿಗೆ ಮೊದಲ ಸ್ವಲ್ಪ ವರ್ಷಗಳ ಕಾಲ ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ನೀಡಿದರೆ ಅವರ ಪ್ರತಿಭೆಗಳು ಇನ್ನೂ ಚೆನ್ನಾಗಿ ಅರಳುತ್ತವೆ. 

ನಾನು ಶಾಲೆಗೆ ಹೋದಾಗ, ವಿದ್ಯಾಭ್ಯಾಸದ ಮಾಧ್ಯಮವು ಕನ್ನಡವಾಗಿತ್ತು. ಕರ್ನಾಟಕದ ಜನರಿಗೆ ನನ್ನ ಸಂದೇಶವೆಂದರೆ, ಕನ್ನಡದ ಬಗ್ಗೆ ಹೆಮ್ಮೆಯಿಂದಿರಿ ಮತ್ತು ಅದನ್ನು ಮಕ್ಕಳಿಗೆ ಕಲಿಸಿ. ಮನೆಯಲ್ಲಿ ಮಾತೃಭಾಷೆಯನ್ನು ಮಾತ್ರ ಉಪಯೋಗಿಸಿ. ಈ ಭಾಷೆಯಲ್ಲಿ ಆಧರಿತವಾಗಿರುವ ಬಹಳ ನೀತಿ ಪಾಠಗಳಿವೆ.

ಕನ್ನಡದಲ್ಲಿ ಹೀಗೊಂದು ಮಾತಿದೆ, ’ವೇದ ಸುಳ್ಳಾದರೂ ಗಾದೆ ಸುಳ್ಳಾಗದು’.

ಇದು ಗಾದೆಗಳ ಬಗ್ಗೆ ಒಂದು ಗಾದೆ. ಈಗಿನ ದಿನಗಳಲ್ಲಿ ಜನರು ಗಾದೆಗಳನ್ನು ಮರೆತಿದ್ದಾರೆ. ಮಕ್ಕಳಿಗೆ ಗಾದೆ ಎಂದರೇನು ಅಂತಲೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿದ್ದರೆ, ಮಕ್ಕಳು ನೈತಿಕ ಮೌಲ್ಯಗಳ ಅರಿವನ್ನು ಹೇಗೆ ಹೊಂದುತ್ತಾರೆ? ಮಕ್ಕಳು ತಮ್ಮ ಪೋಷಕರನ್ನು ’ಮಮ್ಮಿ’ ಮತ್ತು ’ಡ್ಯಾಡಿ’ ಎಂದು ಕರೆಯುವ ಬದಲು ಅವರು ತಮ್ಮ ಮಾತೃಭಾಷೆಯನ್ನು ಉಪಯೋಗಿಸಲಿ. ನಮ್ಮ ಮಾತೃಭಾಷೆಯನ್ನು ಉಳಿಸಿ, ಬೆಳೆಸಿ. ನೀವು ಬೇರೆ ಭಾಷೆಗಳನ್ನು ಕಲಿಯಬಾರದು ಎಂದಲ್ಲ. ಬೇರೆ ಭಾಷೆಗಳನ್ನು ಗೌರವಿಸಿ ಮತ್ತು ಕಲಿಯಿರಿ, ಆದರೆ ಈ ಏಳು ಬಿಲಿಯನ್ ನರಿರುವ ಜಗತ್ತಿನಲ್ಲಿ,  ಆರು ಮಿಲಿಯನ್ ಕನ್ನಡಿಗರು ಕನ್ನಡವನ್ನು ಉಳಿಸದಿದ್ದರೆ, ನನಗನ್ನಿಸುತ್ತದೆ ಅದು ನಿಧಾನವಾಗಿ ಕಾಣೆಯಾಗುತ್ತದೆ. ಹಾಗಾಗಿ ಇದು ನಿಮ್ಮೆಲ್ಲರಿಗೂ ಒಂದು ದೊಡ್ಡ ಜವಾಬ್ದಾರಿ.

೭೦೦ ಕೋಟಿ ಜನರಿರುವ ಈ ಜಗತ್ತಿನಲ್ಲಿ, ಆರು ಕೋಟಿ ಕನ್ನಡಿಗರ ಜನಸಂಖ್ಯೆ ನೂರರಲ್ಲಿ ಒಂದರಷ್ಟನ್ನೂ ಮುಟ್ಟುವುದಿಲ್ಲ. ಈ ಆರು ಕೋಟಿ ಜನರಲ್ಲಿ, ಎಲ್ಲರೂ ಕನ್ನಡವನ್ನು ಮಾತನಾಡುವುದಿಲ್ಲ. 

ಮೈಸೂರಿನಲ್ಲಿ ಮಾತನಾಡುವ ಕನ್ನಡವು ಕನ್ನಡದ ಅತ್ಯುತ್ತಮ ಮತ್ತು ಅತಿ ಮಧುರ ರೂಪವಾಗಿದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಮೈಸೂರು ಕರ್ನಾಟಕದ ಹಳೆಯ ಭಾಗಗಳಿಗೆ ಸೇರಿದ್ದು. ಮಂಗಳೂರಿನ ಕನ್ನಡ ಬೇರೆಯಾಗಿದ್ದು, ಅದರದೇ ಮಾಧುರ್ಯ ಹೊಂದಿದೆ. ಉತ್ತರ ಕನ್ನಡದಲ್ಲಿ ಬೇರೆಯೇ ರೀತಿ ಮಾತನಾಡಲಾಗುತ್ತದೆ ಮತ್ತು ಅದೂ ಕೇಳಲು ಮಧುರ; ಹೀಗೆ ವಿವಿಧ ಪ್ರದೇಶ ಭಾಷೆಗಳಿವೆ ಹಾಗೂ ನಾವು ಅವೆಲ್ಲವನ್ನೂ ಉಳಿಸಬೇಕಾಗಿದೆ. ನಾವು ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸೋಣ ಮತ್ತು ಜೀವನದಲ್ಲಿ ಆಧ್ಯಾತ್ಮಿಕತೆಯ ಕಂಪನ್ನು ಬೀರೋಣ.

ಪ್ರ: ಜನಕ ಮಹಾರಾಜ  ಮತ್ತು ಬುದ್ಧ ಇಬ್ಬರಿಗೂ ಜ್ಞಾನೋದಯವಾಯಿತು. ಅದರಲ್ಲಿ ಜನಕನು ಎಲ್ಲಾ ಸುಖಭೋಗಗಳೊಂದಿಗೆ ಜೀವನ ಮುಂದುವರಿಸಿದರೆ, ಬುದ್ಧನು ಒಬ್ಬ ಸನ್ಯಾಸಿಯ ಬದುಕನ್ನು ನಡೆಸಿದನು, ಹಾಗಾಗಿ ಇವರಲ್ಲಿ ವ್ಯತ್ಯಾಸವಿದೆಯೇ? ಆತ್ಮ-ಸಾಕ್ಷಾತ್ಕಾರದಲ್ಲಿ ವಿವಿಧ ಹಂತಗಳಿವೆಯೇ?

ಶ್ರೀ ಶ್ರೀ: ಇಲ್ಲವೇ ಇಲ್ಲ. ಅಲ್ಲಿ ವ್ಯತ್ಯಾಸವಿದ್ದರೆ, ಅದು ಜ್ಞಾನೋದಯ ಅಲ್ಲವೇ ಅಲ್ಲ. ಮನಸ್ಸು ನೀವು ಉಟ್ಟಿರುವ ಬಟ್ಟೆಯ ಮೇಲೆ ಅವಲಂಬಿತವಾಗಿಲ್ಲ. ನೀವು ಹೊರಗಡೆ ಏನೇ ಉಟ್ಟರೂ, ಒಳಗಡೆ ನೀವು ಒಂದೇ ಆಗಿರುತ್ತೀರಿ. ಹಾಗಾಗಿ ಆತ್ಮ ಸಾಕ್ಷಾತ್ಕಾರ ಎಂದರೆ ಒಳಗಿನ ಜಾಗೃತಿ, ಹೊರಗಿನ ನೋಟ ಅಥವಾ ಅಲಂಕಾರಕ್ಕೆ ಅದು ಸಂಬಂಧಿಸಿಲ್ಲ. ಈ ವಿಷಯದಲ್ಲಿ, ಒಬ್ಬ ರಾಜ, ಭಿಕ್ಷು ಅಥವಾ ಸನ್ಯಾಸಿ, ಎಲ್ಲರೂ ಒಂದೇ.

ಬುದ್ಧನು ಸನ್ಯಾಸಿಯಾದ, ಮತ್ತು ಎಲ್ಲರನ್ನೂ ಸನ್ಯಾಸಿಯನ್ನಾಗಿ ಮಾಡಿದ. ಆ ದಿನಗಳಲ್ಲಿ, ಭಾರತವು ತನ್ನ ಸಮೃದ್ಧಿಯಲ್ಲಿ ಉನ್ನತ ಸ್ಥಾನವನ್ನು ತಲುಪಿತ್ತು ಮತ್ತು ಭಿಕ್ಷುಕರಿರಲಿಲ್ಲ. ಈ ಕಾರಣದಿಂದಾಗಿ ಬುದ್ಧನು ಜನರಿಗೆ ಸನ್ಯಾಸಿಯಾಗಲು ಪ್ರೋತ್ಸಾ ನೀಡುತ್ತಿದ್ದ. ಅವನು ಜನರಿಗೆ ಸನ್ಯಾಸಿಯಾಗಲು ಮತ್ತು ತಮ್ಮ ಆಹಾರಕ್ಕಾಗಿ ಬೇಡಲು ಪ್ರೋತ್ಸಾಹಿಸುತ್ತಿದ್ದ, ಏಕೆಂದರೆ ಅಹಂಕಾರಿಗಳ ಅಹಂ ಬಿಡಿಸಲು ಇದಕ್ಕಿಂತ ಒಳ್ಳೆಯ ಮಾರ್ಗವಿಲ್ಲ.

ಒಬ್ಬ ಭಿಕ್ಷುಕ ಆಹಾರಕ್ಕಾಗಿ ಬೇಡಿದಾಗ, ಅದು ಸ್ವಾಭಾವಿಕ. ಆದರೆ ಒಬ್ಬ ಶ್ರೀಮಂತ ತನ್ನ ಆಹಾರಕ್ಕಾಗಿ ಬೇಡುವುದನ್ನು ಊಹಿಸಿಕೊಳ್ಳಿ, ಅದು ಅಸಾಧ್ಯವಾದುದನ್ನು ಮಾಡಿದಂತೆ ಮತ್ತು ಅಹಂಕಾರವನ್ನು ನೋಯಿಸುತ್ತದೆ. ಹಾಗಾಗಿ, ಅಹಂಕಾರವನ್ನು ನೋಯಿಸಲು, ಅವರನ್ನು ವಿರಕ್ತರನ್ನಾಗಿ ಮಾಡಲು ಬುದ್ಧನು ಎಲ್ಲಾ ಶ್ರೀಮಂತರನ್ನು ಸನ್ಯಾಸಿಗಳನ್ನಾಗಿ ಮಾಡಿದ.

ರಾಜಾ ಜನಕನ ಕಥೆ ಬೇರೆಯಾಗಿತ್ತು. ಜನಕನು ಮೊದಲಿನಿಂದಲೇ ವಿರಕ್ತಿಯಲ್ಲಿ ತೊಡಗಿದ್ದ. ವಿರಕ್ತಿಯಲ್ಲಿದ್ದುಕೊಂಡು, ಜ್ಞಾನೋದಯವಾಗಿದ್ದು ರಾಜ್ಯವನ್ನಾಳುವುದೂ ಒಂದು ರೀತಿಯ ತಪಸ್ಸು. ಅರ್ಜುನನೂ ಒಂದು ಸನ್ಯಾಸಿಯಾಗಿ ಕಾಡಿಗೆ ಹೋಗಬೇಕೆಂದಿದ್ದ; ಅವನಿಗೆ ಯುದ್ಧ ಮಾಡಲು ಇಷ್ಟವಿರಲಿಲ್ಲ. ಶ್ರೀ ಕೃಷ್ಣನು ಹೇಳಿದನು, ’ಇಲ್ಲ, ಕುಳಿತುಕೋ, ಒಂದು ಪಲಾಯನವಾದಿಯಾಗದಿರು.’

ಯೋಗಸ್ಥ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜ (ನಿನ್ನನ್ನು ನೀನು ಆತ್ಮನಲ್ಲಿ ತೊಡಗಿಸಿಕೊಂಡು ನಂತರ ಚಟುವಟಿಕೆಯಿಂದಿರು, ಸಮಾಜದಲ್ಲಿ ಕೆಲಸ ಮಾಡು. ಕೆಳಮಟ್ಟ ಅಥವಾ ಮೇಲ್ಮಟ್ಟದ ಜ್ಞಾನೋದಯವಿದೆಯೆಂದು ಯೋಚಿಸಬೇಡ).

ತ್ಯಾಗಮಯಿ ಮಹರ್ಷಿ ಸುಖದೇವರು ಮಹಾರಾಜ ಜನಕನ ಬಳಿಗೆ ಹೋದರು, ಜನಕನಿಂದ ಜ್ಞಾನವನ್ನು ಪಡೆಯಲು ಅವರು ಜನಕನ ದ್ವಾರದಲ್ಲಿ ಮೂರು ದಿನಗಳ ಕಾಲ ಕಾಯುತ್ತಿದ್ದರು. ಹಾಗಾಗಿ, ಆಶ್ರಮದಲ್ಲಿರುವ ವ್ಯಕ್ತಿಗೇ ಹೆಚ್ಚು ಜ್ಞಾನವಿದೆಯೆಂದು ತೀರ್ಮಾನಿಸುವುದರಲ್ಲಿ ಅರ್ಥವಲ್ಲ.

ಒಬ್ಬ ಬ್ರಹ್ಮಚಾರಿಯು ಸನ್ಯಾಸಿಗಿಂತ ಕಡಿಮೆ ಜ್ಞಾನವುಳ್ಳವನೆಂದು ಭಾವಿಸಲಾಗುವುದಿಲ್ಲ. ಅತ್ಯಂತ ಶ್ರೇಷ್ಠನಾದ ಸನ್ಯಾಸಿ ಸಹ ಒಂದು ಮಗುವಿನಿಂದ ಅಥವಾ ಬ್ರಹ್ಮಚಾರಿಯಿಂದ ಕಲಿಯಬೇಕಾದಂಥ ವಿಷಯಗಳಿರುತ್ತವೆ. ಒಂದೊಮ್ಮೆ ಓರ್ವನು ಆತ್ಮನಲ್ಲಿ ಸ್ಥಿರನಾದರೆ, ಹೊರಗಿನ ಪರಿಸ್ಥಿತಿಗಳು ಅಂತರವನ್ನುಂಟು ಮಾಡುವುದಿಲ್ಲ.

ಪ್ರ: ಗುರೂಜಿ, ಆಂತರ್ಯವು ಅಷ್ಟು ಸುಂದರವಾಗಿದ್ದರೂ ಈ ಚೈತನ್ಯವು ಬಹಿರ್ಮುಖವಾಗುವಂತೆ ಮಾಡುವುದೇನದು?

ಶ್ರೀ ಶ್ರೀ: ಪ್ರಕೃತಿಯು ನಮ್ಮ ಇಂದ್ರಿಯಗಳನ್ನು ಬಹಿರ್ಮುಖಿಯಾಗಿ ಸೃಷ್ಟಿಸಿದೆ. ಈ ಹೊರಗಿನ ಜಗತ್ತು ಇರುವುದು ಇಂದ್ರಿಯಗಳಿಗಾಗಿ. ಸುಂದರ ಪ್ರಕೃತಿಯು ಕಣ್ಣುಗಳಿಗಾಗಿ ಇವೆ, ಪರಿಮಳವು ಮೂಗಿಗಾಗಿ ಮತ್ತು ಅದೇ ರೀತಿಯಲ್ಲಿ ಬಾಯಿ ರುಚಿಗಾಗಿಯೂ, ತ್ವಚೆ ಸ್ಪರ್ಶದ ಸಲುವಾಗಿಯೂ ಇವೆ. ಆದರೆ ಮನಸ್ಸು ಈ ಇಂದ್ರಿಯಗಳಿಂದ ಹಿಂದಕ್ಕೆ ಸರಿದುಕೊಂಡು, ಆಲೋಚನೆಗಳು ಮತ್ತು ಭಾವನೆಗಳು ಉದಿಸುವಂಥ ತನ್ನದೇ ಮೂಲಕ್ಕೆ ಹೋಗಬಹುದಾದ ಪ್ರಕ್ರಿಯೆಯಿದೆ. ಹಾಗೆ ಈ ಮನಸ್ಸಿಗೆ ಆ ಸಾಮರ್ಥ್ಯವಿದೆ, ಮತ್ತು ಮನಸ್ಸು ತನ್ನದೇ ಮೂಲಕ್ಕೆ ಹೋಗುವುದರಲ್ಲಿ ಬುದ್ಧಿಯು (ವಿವೇಕ) ಬಹಳ ಸಹಕಾರಿಯಾಗಿದೆ. ಬುದ್ಧಿಯ ಸಹಕಾರವಿಲ್ಲದೇ ಅದು ಸಾಧ್ಯವಿಲ್ಲ. ಭೇದಗಳನ್ನು ಅರಿತು, ನಿರ್ಧರಿಸಿ ’ಹೌದು, ನಾನಿದನ್ನು ನೋಡಿದ್ದೇನೆ, ಇನ್ನು ಸಾಕು. ಈಗ ನಾನು ನನ್ನಾಳಕ್ಕೆ ಹೋಗಬೇಕು’ ಎಂದು ಹೇಳುವಂಥದ್ದು ವಿವೇಕ. 

ಬಹಳ ಪವಿತ್ರವಾದ ಮಂತ್ರಗಳಲ್ಲಿ ಒಂದಾಗಿರುವ ಗಾಯತ್ರಿ ಮಂತ್ರ ಹೇಳುವುದು, ’ಧಿಯೋ ಯೋನ ಪ್ರಚೋದಯಾತ್’, ಅಂದರೆ ನನ್ನ ಬುದ್ಧಿಯು ದವಿಕತೆಯಿಂದ ಪ್ರೇರಿಸಲ್ಪಡಲಿ, ನನ್ನ ಬುದ್ಧಿಯು ದೈವಿಕತೆಯಲ್ಲಿ ತನ್ಮಯವಾಗಲಿ, ಆ ಸ್ಫೂರ್ತಿ ಮತ್ತು ಅಂತರ್ದೃಷ್ಟಿ ನನ್ನ ಬುದ್ಧಿಯಲ್ಲಿ ಹರಿದು ಬರಲಿ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇದು ಒಂದು ಮುಖ್ಯವಾದ ಪ್ರಾರ್ಥನೆಯಾಗಿದೆ. ’ಉಳಿದದ್ದೆಲ್ಲಾ ಆಮೇಲೆ, ಮೊದಲು ನನ್ನ ವಿವೇಕವು ಪ್ರಕಾಶಿಸಲಿ ಮತ್ತು ದೈವಿಕತೆಯನ್ನೂ, ತರ್ಕಾತೀತ ದಿವ್ಯ ಜ್ಞಾನವನ್ನೂ ಹೊರಹೊಮ್ಮಲಿ.

ಪ್ರ: ಗುರೂಜಿ, ನಾನು ಉದ್ಯೋಗಗಳನ್ನೂ ಸ್ಥಾನಗಳನ್ನು ಬದಲಾಯಿಸಿದ್ದೇನೆ, ಆದರೂ ನನ್ನ ಜೀವನದಲ್ಲಿ ಬಹಳ ಬೇಸರಿಕೆಯನ್ನು ಕಾಣುತ್ತೇನೆ. ದಯವಿಟ್ಟು ಉದಾಸೀನದಿಂದ ಹೇಗೆ ಹೊರಬರುವುದು ಎಂದು ಉಪದೇಶಿಸಿ.

ಶ್ರೀ ಶ್ರೀ: ನಿಮ್ಮ ಜೀವನದಲ್ಲಿ ಒಂದು ಮಹತ್ತರವಾದ ಉದ್ದೇಶಕ್ಕಾಗಿ ನಿಮ್ಮಲ್ಲಿ ಒಂದು ದಾಹ ಹಾಗೂ ಬದ್ಧತೆ ಇದ್ದರೆ, ಬೇಸರಿಕೆಯು ದೂರವಾಗುತ್ತದೆ. ಬೇಸರಿಕೆ ಬರುವುದು ಏಕೆಂದರೆ, ನೀವು ನಿಮ್ಮ ಸ್ವಂತ ಆನಂದದ ಬಗ್ಗೆ ಮಾತ್ರ ಗಮನಿಸುತ್ತಿದ್ದೀರಿ. ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರೆ, ನಿಮಗೆ ಎಷ್ಟು ಸುಖ ಅಥವಾ ಆನಂದ ಸಿಗುತ್ತದೆಂದು ಯೋಚಿಸುತ್ತಿದ್ದರೆ, ನೀವು ಬೇಸರಗೊಳ್ಳುತ್ತೀರಿ, ಯಾಕೆಂದರೆ ಅದು ನಿಮಗೆ ಎಲ್ಲೂ ಸಿಗುವುದಿಲ್ಲ. ಹೇಗಿದ್ದರೂ, ನಿಮ್ಮ ಹೃದಯವು ಇತರರಿಗಾಗಿ, ಇನ್ನೂ ಹೆಚ್ಚಿನ ಉದ್ದೇಶಕ್ಕಾಗಿ, ಇನ್ನೂ ಉತ್ತಮವಾದುದಕ್ಕಾಗಿ ಮತ್ತು ಇನ್ನೂ ಅರ್ಥಪೂರ್ಣವಾದುದಕ್ಕಾಗಿ ಮಿಡಿದಾಗ, ಅಲ್ಲಿ ಯಾವುದೇ ಬೇಸರಿಕೆಯಿರುವುದಿಲ್ಲ.

ನಮ್ಮ ಜೀವನದಲ್ಲಿ ಬದ್ಧತೆಯ ಮಟ್ಟವು ನಮ್ಮ ಉತ್ಸಾಹ ಅಥವಾ ಬೇಸರಿಕೆಯನ್ನು ಸೂಚಿಸುತ್ತದೆ. ನಮ್ಮ ಬದ್ಧತೆಯು ತಳದಲ್ಲಿದ್ದಾಗ, ಬೇಸರಿಕೆ ಅನಿವಾರ್ಯವಾಗಿ ಹುಟ್ಟುತ್ತದೆ. ನಮ್ಮ ಬದ್ಧತೆಯು ಉನ್ನತ ಮಟ್ಟದಲ್ಲಿದ್ದಾಗ, ಬೇಸರಿಕೆಯು ಯಾವ ಮೂಲೆಯಲ್ಲೂ ಸುಳಿಯುವುದಿಲ್ಲ. ಬೇಸರಿಕೆಯು ನಿಮ್ಮ ಸಮೀಪದಲ್ಲೆಲ್ಲೂ ಇರುವುದಿಲ್ಲ.

ಪ್ರ: ಪಂಚ ಪ್ರಾಣಗಳೇನು?

ಶ್ರೀ ಶ್ರೀ: ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಎಂಬ ಶರೀರದ ಐದು ಸ್ಥಿತಿಗಳಿಗೆ ಪಂಚಪ್ರಾಣವೆಂಬ ಉಲ್ಲೇಖವಿದೆ.

ಪ್ರಾಣವೆಂದರೆ ಶರೀರದ ಮೇಲ್ಭಾಗ, ಹೃದಯದಿಂದ ಮೇಲ್ಭಾಗದಲ್ಲಿನ ಶಕ್ತಿ. ಪ್ರಾಣವು ಅತಿ ಹೆಚ್ಚಾಗಿದ್ದಾಗ ಅಥವಾ ಅಸಮತೋಲನದಲ್ಲಿದ್ದಾ ನಿಮಗೆ ನಿದ್ರಿಸಲಾಗುವುದಿಲ್ಲ. ಅಪಾನ ವಾಯು ಎಂದರೆ ಶರೀರದ ಕೆಳಭಾಗದಲ್ಲಿನ ಶಕ್ತಿ. ಅಪಾನವು ಬಹಳ ಹೆಚ್ಚಿದಾಗ, ನೀವು ಆಯಾಸ, ನಿದ್ರಾಶೀಲತೆ ಮತ್ತು ಮಂಕುತನ ಅನುಭವಿಸುತ್ತೀರಿ. ಸಮಾನ ವಾಯು ಇರುವುದು ಹೊಟ್ಟೆಯ ಭಾಗದಲ್ಲಿ, ಇದು ಜೀರ್ಣಕ್ರಿಯೆಯಲ್ಲಿ ಸಹಾಯವಾಗುತ್ತದೆ. ಉದಾನ ವಾಯು ಇರುವುದು ಹೃದಯದ ಮೇಲ್ಭಾಗದಲ್ಲಿ ಮತ್ತು ಕಂಠ ಭಾಗದಲ್ಲಿ, ಇದು ಭಾವನೆಗಳಿಗೆ ಹೇತುವಾಗಿದೆ. ಉದಾನ ವಾಯು ಅಸಮತೋಲನದಲ್ಲಿದ್ದಾಗ, ನಿಮ್ಮಲ್ಲಿ ಭಾವನೆಗಳೇ ಇರುವುದಿಲ್ಲ, ನೀವು ಕಲ್ಲಿನಂತಾಗುತ್ತೀರಿ ಅಥವಾ ಬಹಳ ಭಾವುಕರಾಗಿ ನಿಶ್ಶಕ್ತರಾಗುತ್ತೀರಿ.
ವ್ಯಾನವು ಈ ಸಂಪೂರ್ಣ ಶರೀರದಲ್ಲಿದೆ, ಇದು ಗಂಟುಗಳಲ್ಲಿನ ಚಲನ, ಶರೀರದಲ್ಲಿ ರಕ್ತ ಸಂಚಲನಕ್ಕೆ ಕಾರಣವಾಗಿದೆ. ವ್ಯಾನ ಪ್ರಾಣ ಅಸಂತುಲಿತವಾದರೆ, ಸಂಚಲನ ವ್ಯವಸ್ಥೆ ಸಂತುಲನ ತಪ್ಪಿ ಗಂಟುಗಳಲ್ಲಿ ಚಲನೆ ಸೀಮಿತವಾಗಿ, ಬೇನೆಗಳು ಕಂಡುಬರುತ್ತವೆ.

ಪಂಚ ಪ್ರಾಣ ಎಲ್ಲರಲ್ಲೂ ಇದೆ ಮತ್ತು ವಿವಿಧ ಸಮಯಗಳಲ್ಲಿ ಬೇರೆ ಬೇರೆ ಪ್ರಾಣಗಳು ಆಳುತ್ತವೆ. ಪ್ರಾಣಗಳಲ್ಲಿನ ಅಸಮತೋಲನಗಳು ಪ್ರಾಣಾಯಾಮಗಳಲ್ಲಿ ಮತ್ತು ಸುದರ್ಶನ ಕ್ರಿಯೆಯಲ್ಲಿ ಸರಿಯಾಗುತ್ತವೆ. ಅದರಿಂದಲೇ, ಈ ಪಂಚಪ್ರಾಣಗಳು ಕ್ರಿಯಾಮುಖವಾಗುತ್ತಿದ್ದಂತೆ, ನಿಮಗೆ ಅಳು ಅಥವಾ ನಗು ಬರುತ್ತದೆ.

ಜ್ಞಾನವು ಒಂದು ಅರಿಯಲಾಗದ ಸಾಗರ, ಅಷ್ಟೊಂದು ಜ್ಞಾನವಿದೆ, ಆದರೆ ತಿಳಿಯಲು ಇಷ್ಟು ಸಾಕು: ಶರೀರದಲ್ಲಿ ಪಂಚ ಪ್ರಾಣಗಳಿವೆ ಹಾಗೂ ನಾವು ಪ್ರಾಣಾಯಾಮ ಧ್ಯಾನಗಳನ್ನು ಮಾಡಿದಾಗ ಎಲ್ಲಾ ಪ್ರಾಣಗಳು ಸಮತೋಲನ ಹೊಂದುತ್ತವೆ.

ಪ್ರ: ಒಬ್ಬ ವ್ಯಕ್ತಿ ತೀರಿಕೊಂಡಾಗ, ೧೨ ದಿನಗಳ ನಂತರ ಆತ್ಮ ಇನ್ನೊಂದು ಕಡೆಯಲ್ಲಿ ಮರುಜನ್ಮ ಪಡೆಯುತ್ತದೆ ಎಂದು ಹೇಳುತ್ತಾರೆ. ಆತ್ಮವು ಮರುಜನ್ಮ ಪಡೆದರೆ, ನಾವು ನಮ್ಮ ಪೂರ್ವಜರ ಚಿತ್ರವನ್ನು ತೂಗುಹಾಕಿ ಯಾಕೆ ಪೂಜಿಸುತ್ತೇವೆ?

ಶ್ರೀ ಶ್ರೀ: ಒಬ್ಬ ವ್ಯಕ್ತಿ ಮರುಜನ್ಮ ಪಡೆಯುವುದಾದರೆ, ನಾವು ಶ್ರಾದ್ಧವನ್ನು ಏಕೆ ಮಾಡಬೇಕು? ನೀನು ಹೇಳುತ್ತಿರುವುದು ಸರಿಯಲ್ಲ. ಪ್ರಾಚೀನ ದಿನಗಳಲ್ಲಿ, ಜನರು ಆತ್ಮ ಜಾಗೃತರಾಗಿದ್ದರು, ಹಾಗಾಗಿ ಇಂಥ ವ್ಯಕ್ತಿ ಮರುಜನ್ಮ ಹೊಂದಿದ್ದಾನೆ ಎಂದು ಅವರಿಗೆ ತಿಳಿಯುತ್ತಿತ್ತು ಮತ್ತು ಅವರು ಶ್ರಾದ್ಧ ಮಾಡುವುದನ್ನು ನಿಲ್ಲಿಸುತ್ತಿದ್ದರು. 

ಈಗ ನಿಮಗೆ ತಿಳಿದಿಲ್ಲ, ನೀವು ಯೋಗಿಯಲ್ಲ, ಅಲ್ಲದೇ ಒಬ್ಬ ವ್ಯಕ್ತಿ ಮರುಜನ್ಮ ಪಡೆದಿದ್ದಾನೆಯೇ ಇಲ್ಲವೇ ಎಂದು  ನಿಮಗೆ ಅರ್ಥವಾಗುವುದಿಲ್ಲ. ಹಾಗಾಗಿ, ಆಶೀರ್ವಾದ ಪಡೆಯಲು, ಜನರು ಈ ಕ್ರಿಯಾ ವಿಧಿಗಳನ್ನು ಮುಂದುವರೆಸಿದ್ದಾರೆ.
ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ, ಒಬ್ಬ ನಿರ್ದಿಷ್ಟ ವ್ಯಕ್ತಿ ಮರುಜನ್ಮ ಪಡೆದಾಗ ಜನರಿಗೆ ತಿಳಿಯುತ್ತಿತ್ತು ಮತ್ತು ಅವರು ಶ್ರಾದ್ಧಗಳನ್ನು ನಿಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ.  ಶ್ರಾದ್ಧದ ಅರ್ಥ, ಒಬ್ಬ ವ್ಯಕ್ತಿಯನ್ನು ಸಂಪೂರ್ಣ ಶ್ರದ್ಧೆಯಿಂದ ನೆನಪಿಸಿಕೊಳ್ಳುವುದು.

ಪ್ರ: ಗುರೂಜಿ, ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಪಾಲಕ ಮತ್ತು ಶಿವ ವಿನಾಶಕ. ನಾವು ವಿನಾಶಕನನ್ನೇ ಇಷ್ಟೊಂದು ಏಕೆ ಪ್ರಾರ್ಥಿಸುತ್ತೇವೆ?

ಶ್ರೀ ಶ್ರೀ: ಸೃಷ್ಟಿಕರ್ತನು ತನ್ನ ಕೆಲಸವನ್ನು ಮುಗಿಸಿದ್ದಾನೆ, ಹಾಗಾಗಿ ಯಾರೂ ಅವನನ್ನು ಕೇಳುವುದಿಲ್ಲ. ಪಾಲಕನು ಅಗತ್ಯವಾಗಿರುವವನು ಮತ್ತು ವಿನಾಶಕನ ಬಗ್ಗೆ ಎಲ್ಲರೂ ಭಯಪಡುತ್ತಾರೆ!

ಇಲ್ಲ, ಅದು ಹಾಗಲ್ಲ. ಎಲ್ಲಾ ದೇವತೆಗಳ ದೇವನೆಂದರೆ ಶಿವ, ಮಹಾದೇವ, ಹಾಗಾಗಿ ಎಲ್ಲರೀ ಮಹಾದೇವನನ್ನು ಪ್ರಾರ್ಥಿಸುತ್ತಾರೆ. ಬ್ರಹ್ಮನು ವಿಷ್ಣುವಿನಿಂದ ಜನಿಸಿದ್ದ. ಈ ರೀತಿಯಲ್ಲಿ, ಎಲ್ಲಾ ವಿವಿಧ ಸಂಪ್ರದಾಯಗಳಲ್ಲಿ ವಿವಿಧ ನಂಬಿಕೆಗಳಿವೆ, ನೀವೇನು ಇಷ್ಟಪಡುತ್ತೀರೋ ಅದನ್ನು ನಂಬಿ.