ಮಂಗಳವಾರ, ಅಕ್ಟೋಬರ್ 30, 2012

ಪುರಾತನ ಜ್ಞಾನ

೩೦ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ಗುರುದೇವ, ನಾಳೆಯಿಂದ ನಾವು ಉಪನಯನದೊಂದಿಗೆ ವೈದಿಕ ಜ್ಞಾನ ಅಧಿವೇಶನವನ್ನು ಪ್ರಾರಂಭಿಸಲಿದ್ದೇವೆ. ಯುರೋಪಿನಿಂದ ಸುಮಾರು ನೂರು ಜನರು ನಮ್ಮೊಂದಿಗಿದ್ದಾರೆ. ಈ ವೈದಿಕ ಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಉಪಯೋಗಿಸಲ್ಪಡಬಹುದು ಎಂಬುದರ ಬಗ್ಗೆ ನೀವು ನಮಗೆ ಸ್ವಲ್ಪ ಮಾರ್ಗದರ್ಶನವನ್ನು ನೀಡುವಿರಾ?
ಶ್ರೀ ಶ್ರೀ ರವಿ ಶಂಕರ್: ನೋಡಿ, ವೈದಿಕ ಜ್ಞಾನವು ಅನಾದಿ ಕಾಲದಿಂದ ಇಲ್ಲಿದೆ. ಜ್ಞಾನವು ಯಾವಾಗ ಪ್ರಾರಂಭವಾಯಿತು ಎಂಬುದನ್ನು ಸ್ಥಿರವಾಗಿ ಹೇಳಲು ಸಾಧ್ಯವಿಲ್ಲ. ಅದು ಯಾವುದೇ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಲಿಲ್ಲ. ಅದು, ಜನರು ಧ್ಯಾನದಲ್ಲಿ ಆಳವಾಗಿ ಹೋದಾಗ ಸಿಕ್ಕಿದಂತಹದು. ಹಲವಾರು ಋಷಿಗಳು ಧ್ಯಾನ ಮಾಡಿದರು ಮತ್ತು ಧ್ಯಾನ ಮಾಡಿದಾಗ ಆಳವಾದ ಮೌನದಲ್ಲಿ ಅವರು ಏನೋ ಕೇಳಿಸಿಕೊಂಡರು. ತಾವು ಏನನ್ನೆಲ್ಲಾ ಕೇಳಿಸಿಕೊಂಡರೋ, ಅದನ್ನು ಅವರು ಹೇಳಲು ಶುರು ಮಾಡಿದರು ಮತ್ತು ಅದನ್ನು ಟಿಪ್ಪಣಿಸಿಕೊಳ್ಳುವಂತೆ ಯಾರಲ್ಲೋ ಕೇಳಿಕೊಂಡರು. ಇದು ನಂತರದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಮಾತಿನ ಮೂಲಕ ರವಾನಿಸಲ್ಪಟ್ಟಿತು- ಮೌಖಿಕ ಪದ್ಧತಿ. ಅದೇ ರೀತಿಯಲ್ಲಿ ಇತರ ಎಲ್ಲಾ ವಿವಿಧ ಶಾಸ್ತ್ರಗಳು; ಔಷಧಶಾಸ್ತ್ರ, ಅಂದರೆ ಆಯುರ್ವೇದ ಕೂಡಾ ಸಂಗ್ರಹಿಸಲ್ಪಟ್ಟಿತು.
ಆಯುರ್ವೇದವು ಹೇಗೆ ಹುಟ್ಟಿತೆಂಬುದು ನಿಮಗೆ ಗೊತ್ತಿದೆಯಾ? ಒಮ್ಮೆ ಮಧ್ಯಭಾರತದಲ್ಲಿ, ನೈಮಿಷಾರಣ್ಯವೆಂಬ ಒಂದು ಅರಣ್ಯವಿತ್ತು. ಆ ಅರಣ್ಯದಲ್ಲಿ ೮೪,೦೦೦ ಧ್ಯಾನಿಗಳು ಮತ್ತು ಸಂತರು ಒಟ್ಟುಸೇರಿದರು. ಅವರು ಚರ್ಚಿಸಿದರು, "ಬರಲಿರುವ ಎಲ್ಲಾ ಕಾಲದ ಸಮಾಜದ ಒಳಿತಿಗಾಗಿ ನಾವು ಏನಾದರೂ ಮಾಡಬೇಕು." ಇದು ಅವರ ಉದ್ದೇಶವಾಗಿತ್ತು. ಆದುದರಿಂದ ಅವರಂದರು, "ನಾವು ಧ್ಯಾನದೊಳಕ್ಕೆ ಹೋಗೋಣ ಮತ್ತು ಆಯುರ್ವೇದ; ಜೀವವಿಜ್ಞಾನದ ಜ್ಞಾನವನ್ನು ಸಂಗ್ರಹಿಸೋಣ."
ಆದರೆ ಎಲ್ಲರೂ ಆಳವಾದ ಧ್ಯಾನಕ್ಕೆ ಹೋದರೆ, ಅದನ್ನು ಬರೆಯಲು ಯಾರಿದ್ದಾರೆ. ಆದುದರಿಂದ ಅವರು ಆ ಕೆಲಸವನ್ನು ಒಬ್ಬರು ಋಷಿಗೆ ವಹಿಸಿದರು. ಆ ಒಬ್ಬರು ಋಷಿಯು ಹೇಳಿದರು, "ನಾನು ಎಚ್ಚರವಾಗಿದ್ದುಕೊಂಡು ಅದನ್ನೆಲ್ಲವನ್ನೂ ಬರೆಯುತ್ತೇನೆ. ನೀವೆಲ್ಲರೂ ಧ್ಯಾನ ಮಾಡಿ ಮತ್ತು ಆಳವಾದ ಧ್ಯಾನಕ್ಕೆ ಹೋದ ನಂತರ ನಿಮಗೆ ಏನೆಲ್ಲಾ ತಿಳಿಯುವುದೋ ಅದನ್ನೆಲ್ಲಾ ಹೇಳಿ."
ಹೀಗೆ, ೮೪,೦೦೦ ಋಷಿಗಳು ಧ್ಯಾನ ಮಾಡಿದರು ಮತ್ತು ಒಬ್ಬರು ಋಷಿ ಭಾರದ್ವಾಜರು ಅದನ್ನೆಲ್ಲಾ ತಾಳೆಗರಿಗಳ ಮೇಲೆ ಬರೆದಿಟ್ಟರು. ಸಂಪೂರ್ಣ ಆಯುರ್ವೇದವು ಪ್ರಜ್ಞೆಯಿಂದ ಸಂಗ್ರಹಿಸ್ಪಟ್ಟದ್ದು ಹೀಗೆ ಮತ್ತು ಅದಕ್ಕಾಗಿಯೇ ಇವತ್ತು ಕೂಡಾ ಅದು ಕಾಲದ ಪರೀಕ್ಷೆಯನ್ನು ಎದುರಿಸಿ ನಿಂತಿದೆ.
ಯಾವುದೇ ಅಂಗಕ್ಕೆ ಅವರು ನಿಗದಿಪಡಿಸಿದ ಯಾವುದೇ ಮೂಲಿಕೆಯನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಇವತ್ತಿಗೂ ಕೂಡಾ ಅದು ಸತ್ಯದ ಸಾಕ್ಷ್ಯವಾಗಿ ನಿಂತಿದೆ.
ಅದೇ ರೀತಿಯಲ್ಲಿ ಸಂಗೀತ ವಿಜ್ಞಾನ ಕೂಡಾ ಸಂಗ್ರಹಿಸಲ್ಪಟ್ಟಿತು. ಸಂಗೀತದಲ್ಲಿ, ಏಳು ಸ್ವರಗಳಿವೆ, ’ಸ ರೆ ಗ ಮ ಪ ಧ ನಿ’ ಮತ್ತು ಈ ಏಳು ಸ್ವರಗಳು ಏಳು ಪ್ರಾಣಿಗಳೊಂದಿಗೆ ಸಂಬಂಧ ಹೊಂದಿದೆ. ಉದಾಹರಣೆಗೆ ದೊಡ್ಡದಾಗಿರುವ ಆನೆಯೊಂದಿಗೆ ’ನಿ’ ಎಂದು ಅದು ಹೇಳುತ್ತದೆ. ಒಂದು ಆನೆಯು ಶಬ್ದ ಮಾಡುವಾಗಲೆಲ್ಲಾ ಅಲ್ಲಿ ’ನಿ’ ಅಥವಾ ನಿಶಾದ (ಸಂಗೀತದಲ್ಲಿನ ಒಂದು ಶಬ್ದ ಅಥವಾ ಶ್ರುತಿ)ವಿರುತ್ತದೆ.
ಅದೇ ರೀತಿಯಲ್ಲಿ ಕೋಗಿಲೆಯು ’ಪ’ ಶಬ್ದವನ್ನು ಮಾಡುತ್ತದೆ. ಕೋಗಿಲೆಯು ಐದನೆಯ ಸ್ವರವಾದ ’ಪ’ ದಲ್ಲಿ ಹಾಡುತ್ತದೆ. ಅದೇ ರೀತಿಯಲ್ಲಿ ’ರೆ’ ಸ್ವರವು ವೃಷಭಕ್ಕೆ ಸೇರಿದೆ.
ಆದುದರಿಂದ ವಿವಿಧ ಪ್ರಾಣಿಗಳು ಶಬ್ದಗಳನ್ನು ಮಾಡುವಾಗ ’ಸ ರೆ ಗ ಮ ಪ ಧ ನಿ’ ಉತ್ಪತ್ತಿಯಾಗುತ್ತವೆ. ಆದರೆ ಮನುಷ್ಯರು ಮಾತ್ರ ಆ ಎಲ್ಲಾ ರಾಗಗಳಲ್ಲಿ ಹಾಡಬಲ್ಲರು. ಗಂಧರ್ವ ವೇದದಲ್ಲಿ ಸಂಗೀತದ ಬಗ್ಗೆ ಅತ್ಯುನ್ನತ ಜ್ಞಾನವಿದೆ. ಸಂಗೀತಗಾರರು ಇದನ್ನು ಕಲಿಯಬೇಕು. ಅದು ಬಹಳ ಆಸಕ್ತಿಕರವಾಗಿದೆ. ಪ್ರಧಾನವಾಗಿ ೭೨ ರಾಗಗಳಿವೆ ಮತ್ತು ಈ ೭೨ ರಾಗಗಳು ಹಲವಾರು ಸಂತತಿಗಳನ್ನು (೭೨ ಪ್ರಧಾನವಾದ ರಾಗಗಳಿಂದ ಪಡೆಯಲಾದ ವಿವಿಧ ಮರಿ ರಾಗಗಳ ಬಗ್ಗೆ) ಹೊಂದಿವೆ ಎಂದು ಹೇಳುತ್ತಾರೆ. ಖರ್ಹರ್ ಪ್ರಿಯಾ ಎಂಬ ಒಂದು ರಾಗವಿದೆ, ಅದಕ್ಕೆ ಎರಡು ಸಾವಿರ ಸಂತತಿಗಳಿವೆ.
ಹೀಗೆ, ಸಂಗೀತ, ರಾಗ ಮತ್ತು ಶ್ರುತಿಗಳು ಹೇಗೆ ಹುಟ್ಟಿಕೊಂಡವು ಎಂಬುದು ಗಂಧರ್ವ ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದು ಬಹಳ ಆಸಕ್ತಿಕರವಾದುದು.
ಅದೇ ರೀತಿಯಲ್ಲಿ ಸ್ಥಾಪತ್ಯ ವೇದ ಎಂಬುದು, ಒಂದು ಮನೆಯನ್ನು ಹೇಗೆ ಕಟ್ಟುವುದು, ಅದು ಯಾವ ದಿಕ್ಕಿನಲ್ಲಿರಬೇಕು ಮತ್ತು ಇವುಗಳ ಪರಿಣಾಮಗಳೇನು ಎಂಬುದರ ಬಗ್ಗೆ ಮಾತನಾಡುತ್ತದೆ. ಆದರೆ ಈ ಗ್ರಂಥಗಳಲ್ಲಿ ಹಲವು ಮತ್ತು ಈ ಜ್ಞಾನವು ಇವತ್ತು ಪ್ರಪಂಚದಲ್ಲಿ ಕಾಣೆಯಾಗಿವೆ. ಮಧ್ಯಕಾಲ ಯುಗದಲ್ಲಿ ಯಾವತ್ತೋ, ಈ ಎಲ್ಲಾ ಗ್ರಂಥಗಳನ್ನು ಮತ್ತು ಸ್ಮಾರಕ ವಸ್ತುಗಳನ್ನು ಸುಟ್ಟು ಹಾಕಲಾಯಿತು. ಈ ಎಲ್ಲಾ ಜ್ಞಾನವನ್ನು ಪ್ರೋತ್ಸಾಹಿಸಲಾಗಲಿಲ್ಲ. ಅವುಗಳಲ್ಲಿ ಹಲವು ಕಳೆದುಹೋಗಿವೆ.

ಪ್ರಶ್ನೆ: ಗುರುದೇವ, ನಾವು ಕೂಡಾ ಇದೆಲ್ಲವನ್ನೂ ಸಂಗ್ರಹಿಸಲು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಹೌದು, ನಾವು ಕೂಡಾ ಇದನ್ನು ಸಂಗ್ರಹಿಸಬಹುದು. ಆದರೆ ಅಷ್ಟನ್ನು ಕಲಿ ಯುಗದಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಕಲಿ ಯುಗದಲ್ಲಿ ತಮೋಗುಣವು ಹೆಚ್ಚು ಪ್ರಚಲಿತವಾಗಿದೆ. ಅದಕ್ಕಾಗಿಯೇ, ಹೊಸ ವಿಷಯಗಳನ್ನು ಕಂಡುಹಿಡಿಯಲು ಸಾಧ್ಯವಾಗಲು ಹೆಚ್ಚು ಹೆಚ್ಚು ಜನರು ಧ್ಯಾನ ಮಾಡಬೇಕು. ವಾತಾವರಣದಲ್ಲಿ ಅತಿಯಾಗಿ ತಮಸ್ಸಿರುವಾಗ, ಅದನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಅದಕ್ಕಾಗಿಯೇ ಈ ಎಲ್ಲಾ ಯಜ್ಞಗಳು ಇಲ್ಲಿ ಆಗುತ್ತಿರುವುದನ್ನು ನೀವು ನೋಡುವುದು. ನಿಮಗೆ ಗೊತ್ತಾ, ಇಷ್ಟು ಪರಿಪೂರ್ಣತೆಯೊಂದಿಗೆ ಮತ್ತು ನಿಖರತೆಯೊಂದಿಗೆ ಈ ಯಜ್ಞಗಳನ್ನು ಭಾರತದ ಬೇರೆ ಎಲ್ಲೆಡೆಯಾದರೂ ಯಾರಾದರೂ ಮಾಡುವುದನ್ನು ನೀವು ಕಾಣುವುದು ಬಹಳ ಕಷ್ಟ.

ಪ್ರಶ್ನೆ: ಗುರುದೇವ, ’ರಾಮ್ ನಾಮ್ ಸತ್ಯ್ ಹೈ’ (ರಾಮನ ಹೆಸರು ಸತ್ಯವಾದುದು) ಎಂಬ ಶಬ್ದಗಳನ್ನು, ಒಬ್ಬ ವ್ಯಕ್ತಿಯು ಮರಣಹೊಂದಿದಾಗ ಮಾತ್ರ ಉಚ್ಛರಿಸುವುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಯಾಕೆಂದರೆ, ಯಾರಾದರೂ ಮರಣ ಹೊಂದಿದಾಗಲಾದರೂ ಜನರು ಅದನ್ನು ನೆನಪಿಸಿಕೊಳ್ಳಲೆಂದು. ಸಾಧಾರಣವಾಗಿ ಜನರು ಇದನ್ನು, ತಮಗೆ ಸಂಬಂಧ ಪಡದಿರುವವರು ಮರಣ ಹೊಂದಿದಾಗ ಉಚ್ಛರಿಸುತ್ತಾರೆ. ನಮ್ಮ ಸ್ವಂತದವರೊಬ್ಬರು ಅಥವಾ ನಮಗೆ ಸಂಬಂಧಪಟ್ಟವರೊಬ್ಬರು ಮರಣ ಹೊಂದಿದಾಗ, ನಾವಿದನ್ನು ನೆನಪಿಸಿಕೊಳ್ಳುವುದಿಲ್ಲ.
ಇನ್ನೊಬ್ಬರ ಮರಣದ ಸಮಯದಲ್ಲಿ ಎಲ್ಲರೂ, ದೇವರ ಹೆಸರು ಮಾತ್ರ ಇರುವ ಒಂದೇ ಒಂದು ಸತ್ಯ, ಇತರ ಎಲ್ಲವೂ ನಶ್ವರವಾದುದು ಮತ್ತು ಅವುಗಳು ಶಾಶ್ವತವಲ್ಲ ಎಂಬುದನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ಇದನ್ನು ಜನರು ತಿಳಿಯುವುದಕ್ಕಾಗಿ ಈ ಪದ್ಧತಿಯನ್ನು ಪ್ರಾರಂಭಿಸಲಾಯಿತು. ಇದು ಕೇವಲ ಉತ್ತರ ಭಾರತದಲ್ಲಿ ಮಾತ್ರ ಆಗುತ್ತದೆ, ದಕ್ಷಿಣ ಭಾರತದಲ್ಲಲ್ಲ. ದಕ್ಷಿಣದಲ್ಲಿ, ಯಾರಾದರೂ ಮರಣ ಹೊಂದಿದಾಗ ಮೌನವನ್ನಾಚರಿಸುತ್ತಾರೆ.

ಪ್ರಶ್ನೆ: ಗುರುದೇವ, ಹಲವು ಸಲ ಮನಸ್ಸು ಅಂತಃಸ್ಫುರಣೆಯ ದನಿಯನ್ನು ತುಳಿದುಹಾಕುತ್ತದೆ. ನಮ್ಮ ಅಂತಃಸ್ಫುರಣೆಯನ್ನು ವೃದ್ಧಿಪಡಿಸಿಕೊಳ್ಳಲು ನಾವೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ನಾವು ಸಂಪಾದಿಸಿಕೊಳ್ಳುವ ಮೂರು ರೀತಿಗಳ ಜ್ಞಾನವಿದೆ.
ಒಂದನೆಯ ರೀತಿಯ ಜ್ಞಾನವು ಇಂದ್ರಿಯ ಜನ್ಯ ಜ್ಞಾನ ಎಂದು ಕರೆಯಲ್ಪಡುತ್ತದೆ. ಇದು ಐದು ಇಂದ್ರಿಯಗಳಿಂದ ಬರುವ ಜ್ಞಾನ; ಕಣ್ಣುಗಳಿಂದ ನೋಡುವುದು, ಕಿವಿಗಳಿಂದ ಕೇಳುವುದು, ಮೂಗಿನಿಂದ ಆಘ್ರಾಣಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಸ್ಪರ್ಶ. ಇದು ಅತ್ಯಂತ ಮೂಲಭೂತವಾದ ಜ್ಞಾನ.
ಇದಕ್ಕಿಂತ ಉನ್ನತವಾದುದೆಂದರೆ ಬುದ್ಧಿಯ ಮೂಲಕ ಪಡೆಯುವ ಜ್ಞಾನ. ಇದು ಬುದ್ಧಿ ಜನ್ಯ ಜ್ಞಾನ ಎಂದು ಕರೆಯಲ್ಪಡುತ್ತದೆ - ಬೌದ್ಧಿಕ ಜ್ಞಾನ.
ಇದಕ್ಕಿಂತಲೂ ಹೆಚ್ಚು ಉತ್ಕೃಷ್ಟವಾದುದೆಂದರೆ, ಒಳಗಿನಿಂದ ಬರುವ ಜ್ಞಾನ, ಪ್ರಯತ್ನವಿಲ್ಲದ ಅಂತಃಸ್ಫುರಣೆಯ ಮೂಲಕ; ಅಂದರೆ ನಮ್ಮ ಐದು ಇಂದ್ರಿಯಗಳ ಸಹಾಯವಿಲ್ಲದೆ. ಈ ಜ್ಞಾನವು ನಮ್ಮೊಳಗೆ ಆಳದಿಂದ ಅರಳುತ್ತದೆ.
ಹೀಗೆ, ಇವುಗಳು ಜ್ಞಾನದ ಮೂರು ಹಂತಗಳು. ಬುದ್ಧಿಯ ಮೂಲಕ ಗಳಿಸಿದ ಜ್ಞಾನವು ಇಂದ್ರಿಯಗಳ ಮೂಲಕ ಗಳಿಸಿದುದಕ್ಕಿಂತ ಉತ್ಕೃಷ್ಟವಾದುದು. ಅದಕ್ಕಿಂತಲೂ ಹೆಚ್ಚು ಉತ್ಕೃಷ್ಟವಾದುದು ಅಂತಃಸ್ಫುರಣೆಯಿಂದ ಗಳಿಸಿದ ಜ್ಞಾನ.
ನಾವು ಬೆಳೆದಂತೆ ಮತ್ತು ಪ್ರೌಢರಾದಂತೆ, ಜ್ಞಾನವು ಹೆಚ್ಚು ಸೂಕ್ಷ್ಮ ಮತ್ತು ಪರಿಷ್ಕೃತವಾಗುತ್ತದೆ, ಯಾಕೆಂದರೆ ಮನಸ್ಸು ಕೂಡಾ ಪ್ರೌಢವಾಗುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತದೆ. ಮನಸ್ಸು ಕಡುಬಯಕೆಗಳು ಮತ್ತು ವಿರೋಧಗಳಿಂದ ಹೆಚ್ಚು ಹೆಚ್ಚು ಮುಕ್ತವಾಗುತ್ತದೆ ಹಾಗೂ ನಂತರ ನಮಗೆ ಸೂಕ್ಷ್ಮ ಜ್ಞಾನವು ಲಭ್ಯವಾಗುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನಿಮ್ಮ ಭಕ್ತರಿಗೆ ಯಾವ ಆಧಾರದ ಮೇಲೆ ಫಲ ನೀಡುವಿರಿ? ಯಾಕೆಂದರೆ ನನಗೆ ಏನು ಸಿಕ್ಕಿದೆಯೋ ಅದರ ಹತ್ತು ಶೇಕಡಾ ಪಡೆಯಲು ಕೂಡಾ ನಾನು ಅರ್ಹನಲ್ಲ ಎಂದು ನನಗೆ ಅನಿಸುತ್ತದೆ. ನಿಮ್ಮ ಕಡೆಯಿಂದ ಲೆಕ್ಕಾಚಾರದಲ್ಲಿ ತಪ್ಪಾಗಿದೆಯೇ? 
ಶ್ರೀ ಶ್ರೀ ರವಿ ಶಂಕರ್: ನಾನು ಲೆಕ್ಕ ಹಾಕುವುದಿಲ್ಲ. ಲೆಕ್ಕ ಹಾಕುವ ತೊಂದರೆಯೇಕೆ? ನಾನು ಆರಾಮವಾಗಿರುತ್ತೇನೆ. ನೀನು ಕೂಡಾ ಆರಾಮವಾಗಿರುವುದು ಒಳ್ಳೆಯದು.
ನಮ್ಮ ಅರ್ಹತೆಗಿಂತ ಹೆಚ್ಚು ನಮಗೆ ಲಭಿಸಿದೆಯೆಂದು ನಮಗೆ ಅನ್ನಿಸಿದರೆ ಅದು ಒಳ್ಳೆಯದು. ಇದು ನಮ್ಮನ್ನು ಹೆಚ್ಚು ನಮ್ರವಾಗಿಸುತ್ತದೆ. ಅದು ನಮ್ಮ ತಲೆಯಿಂದ ಬೇಡಿಕೆಯನ್ನು ದೂರ ಮಾಡುತ್ತದೆ ಯಾಕೆಂದರೆ ಬೇಡಿಕೆಯು ಪ್ರೀತಿಯನ್ನು ನಾಶಗೊಳಿಸುತ್ತದೆ.
ಆದುದರಿಂದ, ನಮ್ಮ ಅರ್ಹತೆಗಿಂತ ಹೆಚ್ಚು ನಮಗೆ ಲಭಿಸಿದೆಯೆಂಬುದು ನಮಗೆ ತಿಳಿದಾಗ ನಾವು ಪ್ರೀತಿಯಲ್ಲಿರುತ್ತೇವೆ. ನಾವು ನಮ್ಮ ಜೀವನದಲ್ಲಿ ಕೃತಜ್ಞರಾಗಿರುತ್ತೇವೆ ಮತ್ತು ಇನ್ನೂ ಹೆಚ್ಚು ಬರುತ್ತದೆ. ನಾವು ಹೆಚ್ಚು ಕೃತಜ್ಞರಾದಷ್ಟೂ, ನಮ್ಮ ದಾರಿಯಲ್ಲಿ ಹೆಚ್ಚು ಬರುತ್ತದೆ. ಆದರೆ ನಾವು, "ಓ, ನಾನು ಅಷ್ಟೊಂದು ಮಾಡಿದೆ, ಆದರೆ ಸ್ವಲ್ಪ ಮಾತ್ರ ಸಿಕ್ಕಿತಷ್ಟೇ, ನಾನು ಇನ್ನೂ ಹೆಚ್ಚು ಪಡೆಯಲು ಅರ್ಹನಾಗಿರುವೆ" ಎಂದು ಹೇಳಿದರೆ, ಆ ರೀತಿಯಲ್ಲಿ ನಾವು ಯೋಚಿಸುವಾಗ ದೂರುವಿಕೆ, ಗೊಣಗುಟ್ಟುವಿಕೆ, ಕೋಪ ಮತ್ತು ನಿರಾಶೆ ಬರುತ್ತವೆ.
ಜೀವನದಲ್ಲಿ ಸಾಧಾರಣವಾಗಿ ನಮಗೇನೇ ಲಭಿಸಲಿ, ನಮ್ಮಲ್ಲಿ "ನನ್ನ ಅರ್ಹತೆಗಿಂತ ಹೆಚ್ಚು ನನಗೆ ಲಭಿಸಿದೆ" ಎಂಬ ಭಾವನೆಯಿರಬೇಕು. ಇದು ಮೊದಲನೆಯ ಅಂಶ. ಅದರರ್ಥ ನೀವು ಕೆಲಸ ಮಾಡಬಾರದೆಂದಲ್ಲ. ನೀವು ಕೆಲಸ ಮಾಡುತ್ತಿರಬೇಕು. ನೀವು ಕೆಲಸ ಮಾಡುತ್ತಿರುವಾಗ ನೀವು, "ನಾನೇನು ಮಾಡಬಲ್ಲೆನೆಂದು ನನಗನಿಸುವುದೋ ನನಗೆ ಅದಕ್ಕಿಂತ ಹೆಚ್ಚು ಸಾಮರ್ಥ್ಯವಿದೆ" ಎಂದು ಹೇಳಬೇಕು.
ಆದರೆ ಪಡೆಯುವ ಸಂದರ್ಭ ಬಂದಾಗ, ನಮ್ಮ ನಿಜವಾದ ಅರ್ಹತೆಗಿಂತಲೂ ಹೆಚ್ಚನ್ನು ನಾವು ಪಡೆದಿರುವೆವೆಂಬುದು ನಮಗೆ ತಿಳಿದಿರಬೇಕು. ಅದು ನಮ್ಮನ್ನು ಒಂದು ಉನ್ನತವಾದ ಸ್ತರಕ್ಕೆ ಕರೆದೊಯ್ಯುವುದು, ವಿಶೇಷವಾಗಿ ಆಧ್ಯಾತ್ಮದಲ್ಲಿ. ಇದು ನಿಯಮವಾಗಿರಬೇಕು. ಮಾನವ ಹಕ್ಕುಗಳ ವಿಷಯಕ್ಕೆ ಬಂದಾಗಲೂ ಅದೇ ನಿಯಮವೆಂದು ನಾನು ಹೇಳುವುದಿಲ್ಲ. ಅಲ್ಲಿ ನಿಮ್ಮ ಹಕ್ಕುಗಳು ಗೌರವಿಸಲ್ಪಡದಿದ್ದರೆ, ಆಗ ನೀವು ನಿಮ್ಮ ಮಾನವ ಹಕ್ಕುಗಳನ್ನು ಕೇಳಬೇಕು. ಆದರೆ ನಿಮ್ಮ ಆಧ್ಯಾತ್ಮಿಕ ವಿಕಾಸಕ್ಕೆ ಬಂದಾಗ, "ದೇವರು ನನಗೆ ನನ್ನ ಅರ್ಹತೆಗಿಂತಲೂ ಹೆಚ್ಚನ್ನು ನೀಡಿದ್ದಾರೆ" ಎಂಬುದು ನಿಮಗೆ ತಿಳಿದಿರಬೇಕು. ದೈವತ್ವದ ತೀರ್ಮಾನ ಮತ್ತು ನ್ಯಾಯದಲ್ಲಿ ನಿಮಗೆ ನಂಬಿಕೆಯಿದೆಯೆಂಬುದನ್ನು ಅದು ಹೇಳುತ್ತದೆ.

ಪ್ರಶ್ನೆ: ಗುರುದೇವ, ಆರ್ಟ್ ಆಫ್ ಲಿವಿಂಗ್ ಈಗ ಬಹಳ ಪ್ರಖ್ಯಾತವಾಗಿದೆ, ಆದರೂ ನಮ್ಮ ಹೆತ್ತವರನ್ನು ಒಪ್ಪಿಸಲು ಕೆಲವೊಮ್ಮೆ ನಾವು ಬಹಳ ಕಷ್ಟವನ್ನು ಎದುರಿಸುತ್ತೇವೆ. ನಿಮ್ಮ ಸಮಯದಲ್ಲಿ, ನೀವು ನಿಮ್ಮ ಹೆತ್ತವರ ಸಮ್ಮತಿಯನ್ನು ಗೆದ್ದದ್ದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು. ಅದಕ್ಕಾಗಿ ನಾನು ಬಹಳ ಕಷ್ಟಪಡಬೇಕಾಯಿತು
ನಾನು ಗಡ್ಡವನ್ನು ಯಾಕೆ ಬೆಳೆಸಿದ್ದೇನೆಂಬುದು ನಿಮಗೆ ಗೊತ್ತೇ? ಇಲ್ಲವೇ?
ದಿಲ್ಲಿಯಲ್ಲಿ, ನಾನು ಕಲಿಸಲು ಪ್ರಾರಂಭಿಸಿದಾಗ, ಹಲವಾರು ಪ್ರಾಧ್ಯಾಪಕರು ಬರುತ್ತಿದ್ದರು, ಯಾಕೆಂದರೆ ಅವರು ನನ್ನ ಹೆಸರನ್ನು ಮತ್ತು ನಾನು ಧ್ಯಾನ ಕಲಿಸುತ್ತಿದ್ದೆನೆಂಬುದನ್ನು ಕೇಳಿದ್ದರು. ಆದರೆ ಅವರು ನಿಗದಿಪಡಿಸಿದ ಸ್ಥಳಕ್ಕೆ ಬಂದಾಗ ಅವರು, "ಗುರುದೇವ ಎಲ್ಲಿದ್ದಾರೆ?" ಎಂದು ಕೇಳುತ್ತಿದ್ದರು. ನಾನು ಹೇಳುತ್ತಿದ್ದೆ, "ನಾನು ಗುರುದೇವ."
ನಾನೊಬ್ಬ ಚಿಕ್ಕ ೧೯ ವರ್ಷ ವಯಸ್ಸಿನ ಹುಡುಗನಂತೆ ಕಾಣಿಸುತ್ತಿದ್ದೆ ಮತ್ತು ಇದರಿಂದಾಗಿ ಅವರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಾನು ಮಾತನಾಡುವಾಗ ಅವರು ಇಲ್ಲಿ ಅಲ್ಲಿ ನೋಡುತ್ತಿದ್ದರು ಮತ್ತು ಅವರು, "ಓ, ಇವನೊಬ್ಬ ಚಿಕ್ಕ ಹುಡುಗ, ಏನನ್ನೋ ಮಾತನಾಡುತ್ತಿದ್ದಾನೆ" ಎಂದು ಯೋಚಿಸುತ್ತಿದ್ದರು. ಅವರು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಮತ್ತು ನನ್ನ ಕಡೆಗೆ ಗಮನವನ್ನೇ ಕೊಡುತ್ತಿರಲಿಲ್ಲ.
ಕೆಲವು ಮಂದಿ ಹೇಳುತ್ತಿದ್ದರು, "ಓ, ನೀವಾ ಗುರುದೇವ" ಮತ್ತು ಅವರು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಳ್ಳುತ್ತಿದ್ದರು.
ಆದುದರಿಂದ ನಂತರ ಸ್ವಲ್ಪ ವಯಸ್ಸಾಗಿರುವಂತೆ ಮತ್ತು ಪ್ರೌಢನಂತೆ ಕಾಣುವುದಕ್ಕಾಗಿ ನಾನು ಗಡ್ಡ ಬೆಳೆಸಲು ಶುರು ಮಾಡಿದೆ. ನಾನು ಬೆಂಗಳೂರಿಗೆ ಬಂದಾಗ, ನನಗೆ ಗಡ್ಡವಿರುವುದನ್ನು ನೋಡಿ ನನ್ನ ತಾಯಿಗೆ ಸಂತೋಷವಾಗಲಿಲ್ಲ. ಅವರು ಭಾನುವಿನಲ್ಲಿ ಹೇಳುತ್ತಿದ್ದರು, "ನೀನು ಅವನಲ್ಲಿ ಗಡ್ಡ ಬೋಳಿಸುವಂತೆ ಹೇಳು", ಮತ್ತು ಭಾನು ಉತ್ತರಿಸುತ್ತಿದ್ದಳು, "ಇಲ್ಲ! ನಾನು ಹೇಳುವುದಿಲ್ಲ, ನೀನು ಅವನಿಗೆ ಹೇಳು." ಹೀಗೆ ಅವರಿಬ್ಬರೂ ಸಂಭಾಷಣೆ ಮಾಡುತ್ತಿದ್ದರು ಮತ್ತು ನಾನಿದನ್ನು ಪಕ್ಕದ ಕೋಣೆಯಿಂದ ಕೇಳಿಸಿಕೊಳ್ಳುತ್ತಿದ್ದೆ (ನಗು).
ಅವರು ಹೇಳುತ್ತಿದ್ದರು, "ಅವನಿಗೆ ಏನನ್ನೂ ಹೇಳಬೇಡ, ಅವನು ಬಹಳ ಸಮಯದ ಬಳಿಕ ಮನೆಗೆ ಹಿಂತಿರುಗಿ ಬಂದಿದ್ದಾನೆ. ಅವನಿಗೆ ಅಸಮಾಧಾನ ಮಾಡಬೇಡ. ಅವನೇನು ಮಾಡಲು ಬಯಸುವನೋ ಅದನ್ನು ಮಾಡಲಿ ಬಿಡು." ಹೀಗೆ, ಅವರಿಬ್ಬರಿಗೂ ಆ ಸಮಯದಲ್ಲಿ ನನಗೆ ಗಡ್ದವಿರುವುದು ಇಷ್ಟವಿರಲಿಲ್ಲ. ಆದರೆ ನಾನದನ್ನು ಇಟ್ಟುಕೊಳ್ಳಬೇಕಿತ್ತು, ಇಲ್ಲದಿದ್ದರೆ ಜನರು ನನ್ನನ್ನು ಒಬ್ಬ ಶಿಕ್ಷಕನಾಗುವ ವಯಸ್ಸಿನವನು ಎಂದು ಪರಿಗಣಿಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು, "ಓ, ಅವನೊಬ್ಬ ಚಿಕ್ಕ ಹುಡುಗ." ನಾನು ಹೇಗಿದ್ದರೂ ಮೊದಲಿನಿಂದಲೇ ಒಂದು ಮಗುವಿನಂತಿದ್ದೆ (ನಗು). ಆದುದರಿಂದ ನಾನೊಂದು ಗಡ್ಡವನ್ನು ಇಟ್ಟುಕೊಳ್ಳಬೇಕಾಯಿತು, ಮತ್ತು ಒಮ್ಮೆ ನಾನದನ್ನು ಇಟ್ಟುಕೊಂಡ ಬಳಿಕ, ನಾನದನ್ನು ಯಾವತ್ತಿಗೂ ಇಟ್ಟುಕೊಂಡೆ.
ಇದು ಇರುವ ಕಥೆ.

ಪ್ರಶ್ನೆ: ಗುರುದೇವ, ನಮ್ಮ ಹತ್ತು ಇಂದ್ರಿಯಗಳ ಮೇಲೆ ವಿಜಯವನ್ನು ಗಳಿಸುವುದು ಹೇಗೆ (ಐದು ಕರ್ಮೇಂದ್ರಿಯಗಳು: ಬಾಯಿ, ಕೈಗಳು, ಕಾಲುಗಳು, ವಿಸರ್ಜನಾಂಗ ಮತ್ತು ಜನನೇಂದ್ರಿಯಗಳು ಹಾಗೂ ಐದು ಜ್ಞಾನೇಂದ್ರಿಯಗಳು: ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ - ಇವುಗಳನ್ನು ಉದ್ದೇಶಿಸಿ)?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ನಿನ್ನನ್ನು ಕಾರ್ಯನಿರತನನ್ನಾಗಿರಿಸು. ನೀನು ನಿನ್ನನ್ನು ಆಲಸಿಯಾಗಿರಿಸಿದರೆ, ಆಗ ನಿನ್ನ ಇಂದ್ರಿಯಗಳು ನಿನ್ನನ್ನು ಸ್ವಾಧೀನಪಡಿಸುವುವು. ನಿನ್ನನ್ನು ಕಾರ್ಯನಿರತನನ್ನಾಗಿರಿಸು, ಅದು ಮುಖ್ಯವಾದುದು. ಜೀವನದಲ್ಲಿ ಒಂದು ದೊಡ್ಡ ಗುರಿಯನ್ನಿರಿಸು, ಆಗ ನಿನಗೆ ಈ ಸಮಸ್ಯೆಯಿರಲಾರದು.
ಎರಡನೆಯದಾಗಿ, ನಿನ್ನಲ್ಲಿ ತಾಳ್ಮೆಯಿರಬೇಕು ಮತ್ತು ನೀನು ಏನನ್ನು ತಿನ್ನುವೆಯೋ, ಕುಡಿವೆಯೋ ಅದರ ಮೇಲೆ ನಿಗಾ ವಹಿಸು.

ಪ್ರಶ್ನೆ: ಗುರುದೇವ, ಒಂದು ಕರ್ಮದ ಅಚ್ಚು ನಮ್ಮ ಮನಸ್ಸಿನಲ್ಲಿ ಒಮ್ಮೆ ಮೂಡಿದರೆ, ನಂತರ ಅದನ್ನು ತೆಗೆದುಹಾಕಲು, ’ನಾನು ಈ ಮನಸ್ಸಲ್ಲ ಮತ್ತು ನಾನು ಏನಾಗಿರುವೆನೋ ಅದನ್ನು ಮುಟ್ಟಲು ಅಥವಾ ಅದರ ಮೇಲೆ ಪ್ರಭಾವ ಬೀರಲು ಕರ್ಮಕ್ಕೆ ಸಾಧ್ಯವಿಲ್ಲ’  ಎಂದು ತಿಳಿಯುವ ಅನುಭವವಿದ್ದರೆ ಸಾಕೇ ಅಥವಾ ಇದನ್ನು ತಿಳಿದ ಬಳಿಕ ಮರುಗಿ ನನ್ನನ್ನು ನಾನೇ ತಿದ್ದಿಕೊಳ್ಳುವುದರ ಅವಶ್ಯಕತೆಯಿದೆಯೇ?
ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇದನ್ನು ತಿಳಿದರೆ ಅಷ್ಟೇ ಸಾಕು. ನೀನು ಕ್ಷಮೆ ಕೇಳಬೇಕು ಮತ್ತು ನಿನ್ನನ್ನು ನೀನು ತಿದ್ದಿಕೊಳ್ಳಬೇಕು, ಆದರೆ ಇದನ್ನು ತಿಳಿಯುವುದು ಕೂಡಾ ಬಹಳ ಮುಖ್ಯವಾದುದು.

ಪ್ರಶ್ನೆ: ಭಗವದ್ಗೀತೆಯಲ್ಲಿ, ಕೃಷ್ಣ ಪರಮಾತ್ಮನು ಅರ್ಜುನನಲ್ಲಿ, "ಆದಿತ್ಯರಲ್ಲಿ ನಾನು ವಿಷ್ಣು, ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ನಾನು ಇಂದ್ರ ಮತ್ತು ರುದ್ರರಲ್ಲಿ ನಾನು ಶಂಕರ" ಎಂದು ಹೇಳುತ್ತಾನೆ. ಅವನು ಯಾಕೆ ಒಂದರ ಮೇಲೆ ಇನ್ನೊಂದಕ್ಕಿಂತ ಹೆಚ್ಚು ಆದ್ಯತೆಯನ್ನು ಕೊಡುತ್ತಾನೆ? 
ಶ್ರೀ ಶ್ರೀ ರವಿ ಶಂಕರ್: ಅವನು ಯಾವತ್ತೂ, "ನಾನು ಶ್ರೇಷ್ಠನು" ಎಂದು ಹೇಳಿದನು. ಆದುದರಿಂದ ಅವನು ಶ್ರೇಷ್ಠವಾದುದರ ಕಡೆಗೆ ಹೋಗುತ್ತಾನೆ. ವೇದಗಳಲ್ಲಿ ಸಾಮವೇದವನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ ಯಾಕೆಂದರೆ ಅದು ಸಂಗೀತದಿಂದ ಕೂಡಿದುದು. ಅದು ಎಲ್ಲಾ ಸಂಗೀತ, ತಾಳ, ಪ್ರೇಮ ಮತ್ತು ಭಕ್ತಿಗಳ ತಾಯಿಯಾಗಿದೆ. ಆದುದರಿಂದ ಕೃಷ್ಣನು ಒಂದರ ಮೇಲೆ ಇನ್ನೊಂದಕ್ಕಿಂತ ಹೆಚ್ಚು ಆದ್ಯತೆಯನ್ನು ನೀಡುತ್ತಾನೆ.
ಇವುಗಳು ಅವನ ಆದ್ಯತೆಗಳು. ಇತರ ವಿಷಯಗಳು ಕಡಿಮೆ ಪ್ರಾಮುಖ್ಯತೆಯುಳ್ಳವು ಅಥವಾ ಒಳ್ಳೆಯದಲ್ಲವೆಂದು ಅವನು ಹೇಳುವುದಿಲ್ಲ. ಇಲ್ಲ, ಇಲ್ಲವೇ ಇಲ್ಲ! ಅವನು ಕೇವಲ, "ನಾನು ಇದು" ಎಂದು ಹೇಳುತ್ತಾನೆ. ಅದು ಹೇಗೆಂದರೆ, ಕೆಲವೊಮ್ಮೆ ನೀವು ಒಂದು ಹೋಟೆಲಿಗೆ ಹೋಗಿ ಕೆಲವು ತಿಂಡಿಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು "ನನಗಿದು ಇಷ್ಟ" ಎಂದು ಹೇಳುವ ಹಾಗೆ. ಅದರರ್ಥ ನಿಮಗೆ ಇತರ ತಿಂಡಿಗಳು ಇಷ್ಟವಿಲ್ಲವೆಂದಲ್ಲ.

ಸೋಮವಾರ, ಅಕ್ಟೋಬರ್ 29, 2012

ಹೃದಯ, ಬುದ್ಧಿ, ಮತ್ತು ಮನಸ್ಸು

೨೯ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ


ಪ್ರಶ್ನೆ: ಮನಸ್ಸಿನ ಖಿನ್ನತೆಯನ್ನು ಹೋಗಲಾಡಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ಎಚ್ಚೆತ್ತುಕೊಳ್ಳಿ ಮತ್ತು ಜೀವನವು ತಾತ್ಕಾಲಿಕವಾದುದೆಂಬುದನ್ನು ತಿಳಿಯಿರಿ. ನಾವು ಇನ್ನೊಂದು ೧೫-೨೦ ವರ್ಷಗಳ ವರೆಗೆ ಬದುಕಬಹುದು, ಮತ್ತು ನಂತರ ನಾವೆಲ್ಲರೂ ಸಾಯಲೇಬೇಕು. ನೀವು ಬದುಕುವ ಈ ೧೫-೨೦ ವರ್ಷಗಳಲ್ಲಿ, ಇತರರಿಗೆ ಸಂತೋಷವನ್ನು ಹರಡುವುದರ ಬಗ್ಗೆ ಯೋಚಿಸಿ. ಇತರರೊಂದಿಗೆ ಚೆನ್ನಾಗಿ ವರ್ತಿಸುವುದರ ಬಗ್ಗೆ ಯೋಚಿಸಿ. ಆಗ ಖಿನ್ನತೆಯೆಲ್ಲಿರುತ್ತದೆ? "ನನಗೇನಾಗಬಹುದು? ನನಗೇನಾಗಬಹುದು?" ಎಂಬುದರ ಬಗ್ಗೆ ನಾವು ಹಗಲಿರುಳು ಚಿಂತಿಸುತ್ತಾ ಇರುವಾಗ ಖಿನ್ನತೆಯುಂಟಾಗುತ್ತದೆ. ಇದು ಖಿನ್ನತೆಗೊಳಗಾಗಲಿರುವ ಖಚಿತವಾದ ಮಾರ್ಗ: "ನನಗೇನಾಗಬಹುದು?"

ಪ್ರಶ್ನೆ: ಒಬ್ಬರು ನಮಗೆ ನೋವುಂಟುಮಾಡುವಾಗ, ನಾವು ಖಿನ್ನತೆಗೊಳಗಾಗುತ್ತೇವೆ.
ಶ್ರೀ ಶ್ರೀ ರವಿ ಶಂಕರ್: ಇತರರು ನಿಮಗೆ ನೋವುಂಟುಮಾಡಲು ಹೇಗೆ ಸಾಧ್ಯ? ಇತರರಿಗೆ ನೋವುಂಟುಮಾಡುವವರು ಮೂರ್ಖರು. ನಿಜವಾಗಿ ಮೂರ್ಖರಾಗಿರುವ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿರುವ ಯಾರನ್ನಾದರೂ ನೀವು ನಿಂದಿಸುವಿರಾ? ಇಲ್ಲ. ಆದುದರಿಂದ, ನಿಮಗೆ ನೋವುಂಟುಮಾಡುವವರು ಮೂರ್ಖರು ಅಥವಾ ಅಸ್ವಸ್ಥರು ಎಂಬುದಾಗಿ ಯೋಚಿಸಿ. ನೀವು ಈ ರೀತಿಯಲ್ಲಿ ಯೋಚಿಸಿದರೆ, ಆಗ ನಿಮಗೆ ನೋವಾಗುವುದಿಲ್ಲ.
ಎಲ್ಲರೂ ಬುದ್ಧಿವಂತರು ಮತ್ತು ಅವರು ಬುದ್ಧಿವಂತಿಕೆಯಿಂದ ವ್ಯವಹರಿಸಬೇಕು ಎಂದು ನೀವು ಯೋಚಿಸಿದರೆ, ಅದು ಹೇಗೆ ಸಾಧ್ಯ? ಎಲ್ಲರಿಗೂ ಅವರದ್ದೇ ಆದ ಚಿಕ್ಕ ಮನಸ್ಸು, ಅವರದ್ದೇ ಆದ ಬಯಕೆಗಳು, ಸಮಸ್ಯೆಗಳು ಮತ್ತು ಅಜ್ಞಾನಗಳಿರುತ್ತವೆ. ಕೇವಲ ಅವರನ್ನು ಸ್ವೀಕರಿಸಿ. ನಾವು ಅವರಿಗೆ ಅನುಮತಿ ನೀಡುವ ವರೆಗೆ ಯಾರಿಗೂ ನಮ್ಮನ್ನು ನೋಯಿಸಲು ಸಾಧ್ಯವಿಲ್ಲ.

ಪ್ರಶ್ನೆ: ಗುರುದೇವ, ನಾನು ಪ್ರತಿಕ್ಷಣವೂ ನಿಮ್ಮ ಪ್ರೀತಿ ಮತ್ತು ಮಮತೆಯನ್ನು ಅನುಭವಿಸುತ್ತೇನೆ, ಆದರೆ ಕೆಲವೊಮ್ಮೆ (ನೀವು ನೀಡುವ) ದೈವಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿ ಮತ್ತು ಜ್ಞಾನ ಎರಡನ್ನೂ ಪಡೆಯಲು ಸಾಧ್ಯವಾಗಲು ನಾನೇನು ಮಾಡಬೇಕು? 
ಶ್ರೀ ಶ್ರೀ ರವಿ ಶಂಕರ್: ಯಾವುದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದು ನಿನಗೆ ಕಷ್ಟವಾಗುವುದೋ ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿಯೇ ಇಲ್ಲ. ಅದೆಲ್ಲವೂ ನಿನ್ನ ತಲೆಯ ಮೇಲಿನಿಂದಾಗಿ ಹೋಗುತ್ತಿರುವುದಾದರೆ, ಅದನ್ನು ಹೋಗಲು ಬಿಡು. ನಿನಗೆ ಯಾವುದು ಅರ್ಥವಾಗುವುದೋ ಅದನ್ನು ಮಾತ್ರ ತೆಗೆದುಕೋ.
ನೋಡು, ಜ್ಞಾನವನ್ನು ಪಡೆಯಲಿರುವ ಸಾಮರ್ಥ್ಯವು ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿದೆ, ಆದರೆ ಅನುಭವಿಸಲು ಮತ್ತು ಭಕ್ತಿಯಲ್ಲಿರಲು, ಯಾವುದೇ ಸಾಮರ್ಥ್ಯದ ಪರಿಕಲ್ಪನೆಯಿಲ್ಲ. ಎಲ್ಲರೂ ಒಂದೇ ಮತ್ತು ಸರಿಸಮಾನವಾಗಿ ಸಮರ್ಥರು. ಅದಕ್ಕಾಗಿ ಅಲ್ಲಿ ಯಾವುದೇ ವಿಶೇಷ ಯೋಗ್ಯತೆ ಬೇಕಿಲ್ಲ. ಆದರೆ, ಜ್ಞಾನವನ್ನು ಗಳಿಸುವುದರ ಬಗ್ಗೆ ನೀನು ಮಾತನಾಡುವಾಗ, ಜನರಿಗೆ ಒಂದು ಬೇರೆಯ ಸಾಮರ್ಥ್ಯವಿರುತ್ತದೆ. ಕೆಲವು ಜನರು ಹೆಚ್ಚು ಗಳಿಸುತ್ತಾರೆ, ಕೆಲವರು ಕಡಿಮೆ; ಆದರೆ ನಿನ್ನಲ್ಲಿ ಭಕ್ತಿಯಿರುವಾಗ ಮತ್ತು ಏಕತೆಯ ಒಂದು ಭಾವನೆಯಿರುವಾಗ ಅದು ಯಾವುದೇ ವ್ಯತ್ಯಾಸವನ್ನುಂಟುಮಾಡುವುದಿಲ್ಲ.
ನೀನು ಬಹಳ ಬುದ್ಧಿವಂತನಾಗಿದ್ದರೆ ಮಾತ್ರ ದೇವರು ನಿನ್ನ ಬಗ್ಗೆ ಸಂತೋಷಗೊಳ್ಳುವರು ಅಥವಾ ನೀನು ಅವರ ಅಚ್ಚುಮೆಚ್ಚಿನವನಾಗುವೆ ಎಂದು ಯೋಚಿಸಬೇಡ. ಜ್ಞಾನದ ಉದ್ದೇಶವು, ನಿನ್ನ ಸ್ವಂತ ಆನಂದಕ್ಕಾಗಿ.
ನಿಮ್ಮ ಬುದ್ಧಿಯನ್ನು ಶುದ್ಧಗೊಳಿಸಲು, ನಿಮಗೆ ಜ್ಞಾನ ಬೇಕು;
ನಿಮ್ಮ ಹೃದಯವನ್ನು ಶುದ್ಧಗೊಳಿಸಲು, ನಿಮಗೆ ಪ್ರೀತಿ ಬೇಕು;
ನಿಮ್ಮ ಕರ್ಮವನ್ನು ಶುದ್ಧಗೊಳಿಸಲು, ನಿಮಗೆ ಸೇವೆ ಬೇಕು;
ಎಲ್ಲಾ ಮೂರೂ ಜೊತೆಯಲ್ಲಿ ಸಾಗಬೇಕು.

ಪ್ರಶ್ನೆ: ಗುರುದೇವ, ನಾವು ಬಹಿರ್ಮುಖವಾಗಿ ನೋಡುವಾಗ ನಮ್ಮಲ್ಲಿ ಮಾತ್ಸರ್ಯವುಂಟಾಗುತ್ತದೆ. ಅದೇ ರೀತಿಯಲ್ಲಿ ನಾವು ಗುರುವನ್ನು ಕೂಡಾ ಬಹಿರ್ಮುಖವಾಗಿ ನೋಡುವಾಗ ನಾವು ಮಾತ್ಸರ್ಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದೇ?
ಶ್ರೀ ಶ್ರೀ ರವಿ ಶಂಕರ್: ಹೌದು. ನೀವು, "ನೋಡು, ಗುರೂಜಿಯವರು ಅವನಿಗೆ ಒಂದು ಹೂವಿನ ಹಾರವನ್ನು ಕೊಟ್ಟಿದ್ದಾರೆ, ಆದರೆ ನನಗೆ ಕೊಡಲಿಲ್ಲ" ಅಥವಾ "ಗುರೂಜಿಯವರು ಅವನೊಂದಿಗೆ/ಅವಳೊಂದಿಗೆ ಮಾತನಾಡಿದರು ಆದರೆ ನನ್ನೊಂದಿಗೆ ಮಾತನಾಡಲಿಲ್ಲ" ಅಥವಾ "ಅವರು ನನ್ನನ್ನು ದಾಟಿ ಹೋದರು, ಆದರೆ ನನ್ನಲ್ಲಿ ನಗಲಿಲ್ಲ. ಅವರು ನನ್ನಲ್ಲಿ ಕೋಪಗೊಂಡಿದ್ದಾರಾ?" ಈ ರೀತಿ ಯೋಚಿಸುವಾಗ, ನೀವು ನಿಮ್ಮದೇ ಮನಸ್ಸನ್ನು ಅಭಿವ್ಯಕ್ತಗೊಳಿಸುವುದಾಗಿರುತ್ತದೆ.
ನಾನು ಯಾಕೆ ನಿಮ್ಮಲ್ಲಿ ಕೋಪಗೊಳ್ಳಬೇಕು? ನೀವೊಂದು ತಪ್ಪನ್ನು ಮಾಡಿದರೆ, ನಾನು ಯಾಕೆ ಕೋಪಗೊಳ್ಳಬೇಕು? ಇಲ್ಲವೇ ಇಲ್ಲ. ಯಾರಾದರೊಬ್ಬರು ಏನಾದರೂ ತಪ್ಪು ಮಾಡಿದರೆ, ಅವನು ಸ್ವತಃ ತನ್ನಿಂತಾನೇ ಅದರ ಬೆಲೆ ತೆರುತ್ತಾನೆ. ಆದುದರಿಂದ, ಗುರುಗಳು ನಿಮ್ಮೊಂದಿಗೆ ಕೋಪಗೊಂಡಿರುವರೆಂದು ಅಥವಾ ನಿಮ್ಮನ್ನು ನಿರ್ಲಕ್ಷಿಸುತ್ತಿರುವರೆಂದು ಯೋಚಿಸಬೇಡಿ. ಅದು ಹಾಗಲ್ಲ.
ಬಾಹ್ಯ ತೋರಿಕೆ ಮತ್ತು ವರ್ತನೆಗಳು ಹಾಗಿರುತ್ತವೆ. ಬಾಹ್ಯ ವರ್ತನೆಗಳ ಕಡೆಗೆ ನೋಡಬೇಡಿ, ಆಂತರಿಕವಾಗಿ ನೋಡಿ ಮತ್ತು ಬೇರೆ ಯಾರೊಬ್ಬರಂತೆಯೇ ನೀವು ಕೂಡಾ ದೇವರಿಗೆ ಅಷ್ಟೇ ಪ್ರಿಯವಾದವರು ಎಂಬುದನ್ನು ತಿಳಿಯಿರಿ. ಈ ಯೋಚನೆಯು ನಿಮ್ಮ ಮನಸ್ಸಿನಲ್ಲಿ ಘನೀಕರಿಸಿದರೆ, ಆಗ ಅಲ್ಲಿ ಯಾವುದೇ ಮಾತ್ಸರ್ಯವಿರಲಾರದು.

ಪ್ರಶ್ನೆ: ನಾವು ಗುರು ಅಥವಾ ಗುರು ತತ್ವದ ಕಡೆಗೆ ನೋಡಬೇಕಾದರೆ, ನಮ್ಮಲ್ಲಿ ಯಾವ ರೀತಿಯ ದೃಷ್ಟಿಯಿರಬೇಕು?
ಶ್ರೀ ಶ್ರೀ ರವಿ ಶಂಕರ್: ಎಲ್ಲರೂ ತನಗೆ ಸೇರಿದವರು ಎಂದು ಒಬ್ಬನು ಭಾವಿಸಬೇಕು; ಮತ್ತು ಒಬ್ಬನಲ್ಲಿ ತಾಳ್ಮೆಯಿರಬೇಕು. ಒಂದು ದಿನದಲ್ಲಿ ನಾನು ೨೦೦೦ದಿಂದ ೩೦೦೦ ಪ್ರಶ್ನೆಗಳನ್ನು ಆಲಿಸಬೇಕಾಗಿ ಬರುತ್ತದೆ. ನಾನು ಅವುಗಳನ್ನು ಕೇಳಿಸಿಕೊಳ್ಳುವೆನೇ ಇಲ್ಲವೇ? ಎಷ್ಟೇ ಪ್ರಶ್ನೆಗಳಿರಲಿ, ನಾನು ಅವುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತೇನೆ. ನಾನು ಅವುಗಳನ್ನು ಸಂತೋಷದಿಂದ ಕೇಳಿಸಿಕೊಳ್ಳುವೆನೇ ಇಲ್ಲವೇ?
ಆದುದರಿಂದ, ಮನಸ್ಸಿನ ಸ್ಥಿರತೆ; ಬುದ್ಧಿಯ ತೀಕ್ಷ್ಣತೆ; ಹೃದಯದ ಕೋಮಲತೆ. ಈ ಮೂರು ಜೀವನದಲ್ಲಿ ಮುಖ್ಯವಾಗಿವೆ.
ಹೃದಯವು ಕೋಮಲವಾಗಿರಬೇಕು,
ಬುದ್ಧಿಯು ತೀಕ್ಷ್ಣವಾಗಿರಬೇಕು ಮತ್ತು
ಮನಸ್ಸು ಪ್ರಸನ್ನವಾಗಿರಬೇಕು.
ಈ ಮೂರನ್ನು ಕಳೆದುಕೊಳ್ಳಬೇಡಿ.
ಅದು ಕಳೆದುಹೋದಂತೆ ಅನ್ನಿಸಿದರೂ, ಅದು ದೂರ ಹೋಗಿಲ್ಲ, ಆದರೆ ಅಲ್ಲೇ ಇದೆ ಮತ್ತು ಕೇವಲ ಅಡಗಿದೆ ಎಂದು ಯೋಚಿಸಿ.

ಪ್ರಶ್ನೆ: ಗುರುದೇವ, ದೇವರು ಮತ್ತು ಆಕಾಶದ ನಡುವಿನ ವ್ಯತ್ಯಾಸವೇನು? ನಾವದನ್ನು ತಿಳಿದುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ನೀನು ಯಾರೆಂಬುದನ್ನು ನೀನು ತಿಳಿದುಕೊಂಡಿರುವೆಯಾ? ನೀನು ಯಾರು? ನೀನು ಕಂಡುಹಿಡಿದಿದ್ದೀಯಾ? ಇಲ್ಲ. ನೀನು ಇಲ್ಲಿರುವೆ, ಅಲ್ಲವೇ? ನೀನು ಖಚಿತವಾಗಿರುವೆಯಾ? ಕುಳಿತುಕೊಂಡು "ನಾನು ಯಾರು" ಎಂಬುದರ ಬಗ್ಗೆ ವಿಚಾರ ಮಾಡು. ನಿಜವಾದ ಉತ್ತರವನ್ನು ನೀನು ಕಂಡುಹುಡುಕಿದಾಗ, ಅಲ್ಲಿ ಯಾವುದೇ ಉತ್ತರವಿಲ್ಲವೆಂಬುದು ನಿನಗೆ ತಿಳಿಯುತ್ತದೆ. ನೀನು, "ನಾನು ಇದು" ಅಥವಾ "ನಾನು ಅದು" ಎಂಬ ಪರಿಕಲ್ಪನೆಗಳನ್ನು ಒಂದೊಂದಾಗಿ ಬದಿಗಿರಿಸಬೇಕು ಮತ್ತು ಆಗ ನಿನಗೆ ಆಕಾಶ ತತ್ವ ಮಾತ್ರ ಅನುಭವವಾಗುತ್ತದೆ.
ಆದುದರಿಂದ, ಮೊದಲು ನೀನು ನಿನ್ನನ್ನೇ ತಿಳಿದುಕೋ, ನಂತರ ದೇವರು ನಿನ್ನನ್ನು ಹಿಂಬಾಲಿಸುವರು. ನೀವು ಕಬೀರನ ದ್ವಿಪದಿಯ ಬಗ್ಗೆ ಕೇಳಿರಬಹುದು:
ಜಬ್ ಮೈ ಹರಿ ಹರಿ ಕೆಹಕೇ ಜಾ ರಹಾ ಥಾ, ಹರಿ ಮಿಲೆ ನಹೀಂ ಕಹೀಂ;
ಅಬ್ ಜಬ್ ಮೈ ಅಪ್ನೇ ಆಪ್ ಮೆ ಬೈಠಾ, ಅಬ್ ಲಾಗೆ ಹರಿ ಪೀಛೆ ಕಬೀರ್ ಕಬೀರ್.
(ನಾನು ಹರಿಯನ್ನು (ದೇವರನ್ನು) ಕರೆಯುತ್ತಿದ್ದಾಗ, ನನಗೆ ಅವನು ಎಲ್ಲೂ ಸಿಗಲಿಲ್ಲ; ಮತ್ತು ನಾನು ಹುಡುಕುವುದನ್ನು ನಿಲ್ಲಿಸಿ ನನ್ನೊಳಗೆಯೇ ನೋಡಿದಾಗ, ಅವನು ನನ್ನನ್ನು ಹಿಂಬಾಲಿಸುತ್ತಿರುವುದು ಕಾಣಿಸುತ್ತಿದೆ.)
ಈ ರೀತಿಯಲ್ಲಿ ದೇವರು ನಿಮ್ಮನ್ನು ಹಿಂಬಾಲಿಸಲಿ.

ಪ್ರಶ್ನೆ: ಸತಿಯು ಕೂಡಾ ಪಾರ್ವತಿಯಂತೆಯೇ ದೇವಿಯ ಒಂದು ರೂಪವಾಗಿದ್ದಳು. ಸತಿಯು ಆತ್ಮ ಸಾಕ್ಷಾತ್ಕಾರವನ್ನು ಹೊಂದಿದರೆ ಪಾರ್ವತಿಯು ಶಿವನ ಪತ್ನಿಯಾದಳು. ಅಂತಹದ್ದೇನಾಯಿತು?
ಶ್ರೀ ಶ್ರೀ ರವಿ ಶಂಕರ್: ದೇವಿಗಿರುವುದು ಕೇವಲ ಒಂದು ರೂಪವಲ್ಲ, ಅವಳಿಗೆ ಹಲವಾರು ರೂಪಗಳಿವೆ. ಅದಕ್ಕಾಗಿಯೇ ಅವಳು ಲೀಲಾ ಎಂದು ಅರಿಯಲ್ಪಡುತ್ತಾಳೆ. ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಅವಳು ಬೇರೆ ಬೇರೆ ರೂಪಗಳಲ್ಲಿ ಬರುತ್ತಾಳೆ. ಅದು ಅವಳ ಲೀಲೆ. ಕೇವಲ ಇಷ್ಟನ್ನು ತಿಳಿದುಕೊಳ್ಳಿ.

ಪ್ರಶ್ನೆ: ಒಬ್ಬ ಭಕ್ತನಿಗೆ ಯಾವುದು ಪ್ರಧಾನವಾದುದು: ಆಕಾರವನ್ನು ಆರಾಧಿಸುವುದೇ ಅಥವಾ ನಿರಾಕಾರವನ್ನೇ?
ಶ್ರೀ ಶ್ರೀ ರವಿ ಶಂಕರ್: ಮೊದಲು ನನಗೆ ಹೇಳು, ನಿನಗೊಂದು ಆಕಾರವಿದೆಯೇ ಇಲ್ಲವೇ ಎಂದು.
ಭಕ್ತ: ನನಗೊಂದು ಆಕಾರವಿದೆ.
ಶ್ರೀ ಶ್ರೀ ರವಿ ಶಂಕರ್: ನಿನಗೊಂದು ಆಕಾರವಿದೆಯೇ? ಎಲ್ಲಿದೆ ಆಕಾರ? ನಿನ್ನ ಮನಸ್ಸಿನ ಆಕಾರವೇನು?
ಭಕ್ತ: ಮನಸ್ಸಿಗೊಂದು ಆಕಾರವಿಲ್ಲ.
ಶ್ರೀ ಶ್ರೀ ರವಿ ಶಂಕರ್: ನೋಡು, ನಿನ್ನ ಶರೀರಕ್ಕೊಂದು ಆಕಾರವಿದೆ, ಆದರೆ ನಿನ್ನ ಮನಸ್ಸಿಗಿಲ್ಲ. ನೀನು ಎರಡರ ಒಂದು ಸಂಯೋಗವಾಗಿರುವೆಯಲ್ಲವೇ? ನೀನು ಶರೀರ ಮತ್ತು ಮನಸ್ಸು ಎರಡೂ ಆಗಿರುವೆ, ಅಲ್ಲವೇ? ಆದುದರಿಂದ ನೀನು ಆಕಾರ ಮತ್ತು ನಿರಾಕಾರಗಳ ಒಂದು ಸಂಯೋಗವಾಗಿರುವೆ. ಅದೇ ರೀತಿಯಲ್ಲಿ, ದೇವರು ನಿರಾಕಾರನಾಗಿದ್ದರೂ, ಸಂಪೂರ್ಣ ಸೃಷ್ಟಿಯು ಅವನ ವ್ಯಕ್ತವಾಗಿರುವ ಸ್ವರೂಪವಾಗಿದೆ. ಪ್ರಜ್ಞೆಯು ಆಕಾರರಹಿತವಾಗಿದೆ ಮತ್ತು ಪ್ರಕೃತಿಯಲ್ಲಿ ವ್ಯಕ್ತವಾಗಿರುವ ಸೃಷ್ಟಿಗೆ ಆಕಾರವಿದೆ.
ಅದಕ್ಕಾಗಿಯೇ ನಮ್ಮ ದೇಶದಲ್ಲಿ ದನಗಳು ಕೂಡಾ ಪೂಜ್ಯನೀಯವಾಗಿವೆ ಮತ್ತು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಅಶ್ವತ್ಥ ಮರಗಳು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು, ಮರಗಳಲ್ಲಿ ನಾನು ಅಶ್ವತ್ಥ ಎಂದು ಹೇಳುತ್ತಾನೆ. ಅದೇ ರೀತಿಯಲ್ಲಿ ಅವನು, ’ಭೂತಾನಾಂ ಚೇತನಶ್ಚಾಸ್’ (ನಾನು ಚೇತನನಾಗಿದ್ದೇನೆ) ಎಂದು ಹೇಳಿದ್ದಾನೆ. ’ಜೀವನಂ ಸರ್ವ ಭೂತೇಷು’ ಎಂದು ಹೇಳಿದ್ದಾನೆ, ಅಂದರೆ, ಜೀವಿಗಳಲ್ಲಿರುವ ಪ್ರಾಣವು ನಾನು ಎಂದು. ಗೋಪಿಯರು ಕೂಡಾ ಆಕಾರವನ್ನು ಆರಾಧಿಸುವುದರಿಂದ, ನಿರಾಕಾರವನ್ನು ಆರಾಧಿಸುವುದರ ಕಡೆಗೆ ಹೋದರು, ಮತ್ತು ಇದು ಅವರಿಗೆ ಬಹಳ ಸಹಜವಾಗಿ ಆಯಿತು. ಅವರು ಅವನನ್ನು ಎಲ್ಲದರಲ್ಲಿಯೂ ಮತ್ತು ಎಲ್ಲಾ ಜಾಗಗಳಲ್ಲಿಯೂ ನೋಡಲು ಪ್ರಾರಂಭಿಸಿದರು. ಅವನಿಲ್ಲದೆ ಒಂದು ಕ್ಷಣ ಕೂಡಾ ಅವರಿಗೆ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಭಕ್ತಿಯ ಪರಾಕಾಷ್ಠೆ, ಭಕ್ತಿಯ ಉತ್ತುಂಗ.
ಭಕ್ತಿಯು ಯಾವತ್ತೂ ಆಕಾರದೊಂದಿಗೆ ಪ್ರಾರಂಭವಾಗಿ ನಿರಾಕಾರದೊಂದಿಗೆ ಕೊನೆಯಾಗುತ್ತದೆ. ಸಾಂಪ್ರದಾಯಿಕ ಅಭ್ಯಾಸವೇ ಈ ರೀತಿಯಾಗಿದೆ - ಮೊದಲು ಪಾದಗಳನ್ನು ಪೂಜಿಸುವುದು, ನಂತರ ಮೂರ್ತಿಯನ್ನು ಪೂಜಿಸುವುದು, ನಂತರ ಸಾಲಿಗ್ರಾಮವನ್ನು (ಕಪ್ಪು ಕಲ್ಲಿನ ರೂಪದಲ್ಲಿ ವಿಷ್ಣುವಿನ ಪೂಜೆ)ಪೂಜಿಸುವುದು, ನಂತರ ಯಂತ್ರವನ್ನು ಪೂಜಿಸುವುದು. (ಯಂತ್ರ - ಪವಿತ್ರ ಚಿಹ್ನೆ, ಮಂತ್ರ ಹಾಗೂ ಚಿತ್ರಗಳನ್ನೊಳಗೊಂಡ ಲೋಹದ ಹಾಳೆ)
ಯಂತ್ರವಿಲ್ಲದೆ, ಮೂರ್ತಿಗೆ ಯಾವುದೇ ಶಕ್ತಿ ಲಭಿಸುವುದಿಲ್ಲ. ಪ್ರತೀ ದೇವತೆಯೊಂದಿಗೆ ಒಂದು ನಿರ್ದಿಷ್ಟ ಯಂತ್ರವು ಸಂಬಂಧ ಹೊಂದಿದೆ. ಯಂತ್ರಕ್ಕಿಂತ ಹೆಚ್ಚು ಶ್ರೇಷ್ಠವಾದುದು ಮಂತ್ರವಾಗಿದೆ. ಮಂತ್ರವಿಲ್ಲದೆ ಯಂತ್ರವು ಕಾರ್ಯನಿರ್ವಹಿಸುವುದಿಲ್ಲ. ಆದುದರಿಂದ, ಯಂತ್ರವಿಲ್ಲದೆ ಮೂರ್ತಿಗೆ ಯಾವುದೇ ಮಹತ್ವವಿಲ್ಲ ಮತ್ತು ಮಂತ್ರವಿಲ್ಲದೆ ಯಂತ್ರಕ್ಕೆ ಯಾವುದೇ ಮಹತ್ವವಿಲ್ಲ. ಒಬ್ಬ ಸಂತ ಅಥವಾ ಒಬ್ಬ ಅನ್ವೇಷಕನಿಲ್ಲದಿದ್ದರೆ ಮಂತ್ರದಿಂದಲೂ ಯಾವುದೇ ಉಪಯೋಗವಿಲ್ಲ. ನೀವು ಯಾರಿಂದಲಾದರೂ ಸುಮ್ಮನೇ ಒಂದು ಮಂತ್ರವನ್ನು ತೆಗೆದುಕೊಂಡರೆ, ಅದು ಕೆಲಸ ಮಾಡದು. ಮಂತ್ರವು ಕೆಲಸ ಮಾಡಬೇಕಾದರೆ ಅದನ್ನು ಪವಿತ್ರವಾದ ಸಂಪ್ರದಾಯ ಮತ್ತು ಶಾಸ್ತ್ರಗಳ ಪ್ರಕಾರ ಪಡೆಯಬೇಕು. ಆದುದರಿಂದ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ.

ಪ್ರಶ್ನೆ: ನನ್ನಲ್ಲಿ ಮೂರು ಪ್ರಶ್ನೆಗಳಿವೆ. ದೇವರು ಪ್ರತಿಯೊಬ್ಬರಲ್ಲೂ ಪ್ರಜ್ಞೆಯಾಗಿ ಇರುವುದಾದರೆ, ನಾವು ಅವನನ್ನು ನಮ್ಮೊಳಗೆಯೇ ಆತ್ಮವಾಗಿ ಹುಡುಕುವುದು ಯಾಕೆ? ಅವನು ಭ್ರಮೆಗಳನ್ನು ಸೃಷ್ಟಿಸುವುದು ಯಾಕೆ? ಅವನು ಯಾಕೆ ಪ್ರಪಂಚದಲ್ಲಿ ಕೆಟ್ಟದಾಗಲು ಬಿಡುತ್ತಾನೆ?
ಶ್ರೀ ಶ್ರೀ ರವಿ ಶಂಕರ್: ಹೌದು. ನೀನೊಂದು ಒಳ್ಳೆಯ ಪ್ರಶ್ನೆಯನ್ನು ಕೇಳಿರುವೆ. ಇದಕ್ಕಿರುವ ಉತ್ತರವೆಂದರೆ, ಅವನು ಸುಮ್ಮನಿರಲು ಇಷ್ಟ ಪಡುವುದಿಲ್ಲ. ಸ್ವಲ್ಪ ಅವ್ಯವಸ್ಥೆ ಇದ್ದರೆ ಮಾತ್ರ, ಅದನ್ನು ಪರಿಹರಿಸಲು ಅವನು ಒಂದು ಅವತಾರವಾಗಿ ಕೆಳಗಿಳಿದು ಬರಲು ಸಾಧ್ಯ. ಅದೊಂದು ಆಟ.
ನಾನು ನಿನಗೆ ಇದೇ ರೀತಿಯ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರು ಯಾಕೆ ಫುಟ್ಬಾಲ್ ಅಥವಾ ಕ್ರಿಕೆಟನ್ನು ಆಡುತ್ತಾರೆ? ೧೧ ಮಂದಿ ಈ ಬದಿಯಲ್ಲಿ ನಿಂತಿದ್ದಾರೆ ಮತ್ತು ೧೧ ಮಂದಿ ಇನ್ನೊಂದು ಬದಿಯಲ್ಲಿ ನಿಂತಿದ್ದಾರೆ. ಅವರು ಚೆಂಡನ್ನು ಒದೆಯುತ್ತಾರೆ. ಇದೆಲ್ಲದರ ಲಾಭವೇನು?
ಭಕ್ತ: ಅವನು ಕೇವಲ ಅದನ್ನೊಂದು ಅನುಭವವಾಗಿ ತೆಗೆದುಕೊಳ್ಳುತ್ತಾನೆ ಅಥವಾ ಅದನ್ನು ಆನಂದಿಸುತ್ತಾನೆ.
ಶ್ರೀ ಶ್ರೀ ರವಿ ಶಂಕರ್: ಹೌದು, ಅವನು ಅದರಿಂದ ಆನಂದ ಪಡೆಯುತ್ತಾನೆ.
ಭಕ್ತ: ಆದರೆ ಸಮಾಜದಲ್ಲಿ ಕೊಲ್ಲುವುದೇ ಮೊದಲಾದಂತಹ ತಪ್ಪು ಕೆಲಸಗಳನ್ನು ಮಾಡಿ ಜನರು ಆನಂದ ಪಡೆಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನು ರೋಮಾಂಚಕ ಸಿನೆಮಾಗಳನ್ನು ನೋಡುವುದಿಲ್ಲವೇ? ಸಿನೆಮಾಗಳಲ್ಲಿ ಕೇವಲ ಒಳ್ಳೆಯ ವಿಷಯಗಳು ಮಾತ್ರ ಆಗುತ್ತವೆಯೇ? ಅಲ್ಲಿ ಅವ್ಯವಸ್ಥೆ ಅಥವಾ ಖಳನಾಯಕನಿರುವುದಿಲ್ಲವೇ? ಯಾವುದೇ ಕೆಟ್ಟದಾಗುವುದಿಲ್ಲವೇ? ರಾಮಾಯಣದಲ್ಲಿ ರಾವಣನಿರಲಿಲ್ಲವೆಂಬುದಾಗಿ ಸುಮ್ಮನೇ ಊಹಿಸು. ಆಗ ರಾಮಾಯಣವು ಕೇವಲ ಮತ್ತೊಂದು ಕಥೆಯಾಗಿರುತ್ತಿತ್ತು: ರಾಮನೆಂಬ ಒಬ್ಬ ರಾಜನಿದ್ದ. ಅವನಿಗೆ ಮದುವೆಯಾಗಿ ಪುತ್ರರಾದರು, ಮತ್ತು ಅಷ್ಟೇ. ಅಲ್ಲಿಗೆ ಕೊನೆಯಾಯಿತು. ಆಗ ನೀನು ನಾಯಕನನ್ನು ಗುರುತಿಸುವುದು ಹೇಗೆ? ಯಾವುದೇ ಚಲನಚಿತ್ರದಲ್ಲಾದರೂ, ನಿನಗೇನು ಕಾಣಿಸುತ್ತದೆ? ಯಾವುದೋ ಗೂಂಡಾಗಿರಿ ಮತ್ತು ದುಷ್ಟತನವಿರುವಾಗ ನಾಯಕನು ೧೪ನೆಯ ಮಹಡಿಯಿಂದ ಕೆಳಗೆ ಹಾರುತ್ತಾನೆ. ಅವನು ಕಾರು ಹಾರುವಂತೆ, ಮೊದಲಾದವನ್ನು ಮಾಡುತ್ತಾನೆ. ಅವನು ಕಾರಿನಿಂದ ದೋಣಿಗೆ ಹಾರುತ್ತಾನೆ. ಅವರು ಅಷ್ಟೊಂದು ಅಪಾಯವನ್ನು ಯಾಕೆ ತೆಗೆದುಕೊಳ್ಳುತ್ತಾರೆ?

ಪ್ರಶ್ನೆ: ಮಹತ್ ಎಂದರೇನು ಮತ್ತು ಮಹತ್ ತತ್ವವನ್ನು ನಾವು ಗುರುತಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲು ಮನಸ್ಸು ಹೆಚ್ಚು ಸೂಕ್ಷ್ಮವಾಗಬೇಕು. ನಂತರ ಬುದ್ಧಿಯು ಹೆಚ್ಚು ತೀಕ್ಷ್ಣವಾಗಬೇಕು. ಇದಾಗುತ್ತಿದ್ದಂತೆ, ಅಹಂಕಾರವು ಕರಗುತ್ತದೆ. ಅಹಂಕಾರವು ಕರಗುವಾಗ ಮಹತ್ ತತ್ವವು ತನ್ನಿಂತಾನೆಯೇ ತೆರೆಯುತ್ತದೆ ಮತ್ತು ಪ್ರಕಟಗೊಳ್ಳುತ್ತದೆ. ಮಹತ್ ತತ್ವವನ್ನು ಬೆಳಕಿಗೆ ತರಬೇಕಾದರೆ, ಅಹಂಕಾರವು ಮಾಯವಾಗಬೇಕು, ಅದು ಕರಗಬೇಕು. ಯಾರ ಅಹಂಕಾರವು ಕರಗಿರುತ್ತದೆಯೋ ಅಂತಹ ಜನರು ಮಹಾತ್ಮ ಎಂದು ಕರೆಯಲ್ಪಡುತ್ತಾರೆ.

ಪ್ರಶ್ನೆ: ಕೆಟ್ಟ ದೃಷ್ಟಿ ಮೊದಲಾದ ಸಾಂಪ್ರದಾಯಿಕ ಮೂಢನಂಬಿಕೆಗಳು ಎಷ್ಟು ಪ್ರಸ್ತುತ? ಅವುಗಳು ಸರಿಯೇ ತಪ್ಪೇ?
ಶ್ರೀ ಶ್ರೀ ರವಿ ಶಂಕರ್: ಯೋಚನೆಗಳ ಪ್ರಪಂಚವು ಒಂದು ಸೂಕ್ಷ್ಮ ಪ್ರಪಂಚವಾಗಿದೆ. ಇವುಗಳೆಲ್ಲದರದ್ದು ಸ್ವಲ್ಪ ಪ್ರಭಾವವಿದೆ ಮತ್ತು ಈ ಪ್ರಭಾವಗಳನ್ನು ತೊಡೆದುಹಾಕಲು ಒಂದು ಸರಳ ಮಾರ್ಗವಿದೆ. ಇದೆಲ್ಲವೂ ಕಂಪನಗಳ ಮೇಲೆ ಆಧರಿಸಿದೆ.
ಎಲ್ಲೆಡೆಯೂ ಕಂಪನಗಳಿವೆ. ಸಂಪೂರ್ಣ ಜೀವನವು ಒಂದು ಕಂಪನವಾಗಿದೆ. ಪ್ರತಿಯೊಂದು ವಸ್ತುವೂ ಒಂದು ಕಂಪನವಾಗಿದೆ. ಆದುದರಿಂದ, ಸ್ವಲ್ಪ ನಕಾರಾತ್ಮಕ ಕಂಪನವು ನಿಮ್ಮ ಕಡೆಗೆ ಬರಲೂಬಹುದು. ನೀವು ಸ್ವಲ್ಪ ಅಸುಖವನ್ನು ಅನುಭವಿಸಲೂಬಹುದು. ಯಾರಾದರೂ ನಿಮ್ಮನ್ನು ನಿಂದಿಸಿದರೆ, ಆಗ ನಿಮ್ಮ ಮನಸ್ಸು ಚಲ್ಲಾಪಿಲ್ಲಿಯಾಗಿ ತನ್ನ ಗಮನವನ್ನು ಕಳೆದುಕೊಳ್ಳುವುದಿಲ್ಲವೇ? ಇದು ನಿಮಗಾಗುವುದಿಲ್ಲವೇ?
ನಮ್ಮ ಪ್ರಾಚೀನ ಜನರು ಒಂದು ಸರಳವಾದ ಪರಿಹಾರವನ್ನು ಕಂಡುಹಿಡಿದರು - ಸ್ವಲ್ಪ ಉಪ್ಪನ್ನು ಶರೀರದ ಸಮೀಪ ಸುತ್ತಿ ಅದನ್ನು ಚಿಮುಕಿಸುವುದರಿಂದ ಈ ಕಂಪನಗಳನ್ನು ತೆಗೆದುಹಾಕಬಹುದು ಎಂದು ಯೋಚಿಸಿದರು. ಹೊರದೇಶಗಳಲ್ಲಿ ಕೂಡಾ, ಜನರಿಗೆ ಯಾವುದಾದರೂ ಮಾನಸಿಕ ತೊಂದರೆಗಳಿರುವಾಗ, ಅವರು ಸಮುದ್ರ ತೀರದ ಬಳಿಗೆ ಹೋಗುತ್ತಾರೆ. ಉಪ್ಪು ನೀರು ತಮ್ಮ ಪ್ರಜ್ಞೆಯನ್ನು ಬಲಗೊಳಿಸುತ್ತದೆ ಮತ್ತು ಅದಕ್ಕೆ ಶಕ್ತಿ ನೀಡುತ್ತದೆ ಎಂದು ಅವರು ಭಾವಿಸುತ್ತಾರೆ. ಕೇವಲ ಉಪ್ಪು ಮತ್ತು ನೀರನ್ನು ಉಪಯೋಗಿಸುವುದರ ಮೂಲಕ ನೀವು ನಿಮ್ಮ ಸೂಕ್ಷ್ಮ ಪ್ರಭಾವಲಯವನ್ನು ಶುದ್ಧಗೊಳಿಸಬಹುದು; ಇದಕ್ಕಿಂತ ಹೆಚ್ಚಿನದೇನೂ ಅಗತ್ಯವಿಲ್ಲ.  
ಹಲವಾರು ಮೂಢನಂಬಿಕೆಗಳು ಮತ್ತು ತಪ್ಪು ನಂಬಿಕೆಗಳಿವೆ - ಉದಾಹರಣೆಗೆ ಶಿಶುಗಳನ್ನು ದೇವಸ್ಥಾನಗಳಲ್ಲಿ ತಲೆ ಕೆಳಗಾಗಿ ಹಿಡಿಯುವುದು; ಒಂದು ನಿಮಿಷಗಳವರೆಗೇನೋ ಮಗುವನ್ನು ಮರಳಿನಲ್ಲಿ ಹುಗಿಯುವುದು ಮೊದಲಾದವು. ಇದೆಲ್ಲಾ ಬಹಳ ತಪ್ಪು ಮತ್ತು ಇದನ್ನು ಮಾಡಬಾರದು. ನಮ್ಮ ಸಮಾಜದಲ್ಲಿ ಹಲವಾರು ತಪ್ಪು ನಂಬಿಕೆಗಳಿವೆ ಮತ್ತು ಇದಕ್ಕೆ ಧರ್ಮಗ್ರಂಥಗಳಲ್ಲಿ ಯಾವುದೇ ಆಧಾರವಿಲ್ಲ.
ಯಾವುದು ನಿಮ್ಮ ಬುದ್ಧಿಗೆ ಸರಿಬೀಳುವುದಿಲ್ಲವೋ ಅಥವಾ ಪ್ರಾಯೋಗಿಕವಲ್ಲವೋ ಮತ್ತು ಒಂದು ತಪ್ಪು ವರ್ತನೆಯಾಗಿ ಕಾಣಿಸುವುದೋ, ಅದನ್ನು ನೀವು ಮಾಡಲೇಬಾರದು ಎಂದು ಧರ್ಮಗ್ರಂಥಗಳಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸನಾತನ ಧರ್ಮವು ಅಂತಹ ಮೂಢನಂಬಿಕೆಗಳಿಗೆ ವಿರುದ್ಧವಾಗಿದೆ. ಆದರೆ ಅಂತಹ ಮೂಢನಂಬಿಕೆಗಳು ಎಲ್ಲಾ ಧರ್ಮಗಳೊಳಗೂ ನುಗ್ಗಿವೆ. ನಾವು ಮೂಢನಂಬಿಕೆಗಳನ್ನು ತೊಡೆದುಹಾಕಬೇಕು ಮತ್ತು ಕೇವಲ ಒಳ್ಳೆಯ ಅಭ್ಯಾಸಗಳನ್ನು ಸ್ವೀಕರಿಸಬೇಕು.

ಪ್ರಶ್ನೆ: ರಾವಣನು ಒಬ್ಬ ಕಲಿತ ಬ್ರಾಹ್ಮಣನಾಗಿದ್ದನು ಮತ್ತು ತನ್ನ ಸಹೋದರಿಯನ್ನು ರಕ್ಷಿಸಲು ಧಾವಿಸಿದನು. ರಾಮನು ತನ್ನ ಹೆತ್ತವರಿಗೆ ದುಃಖವನ್ನುಂಟುಮಾಡಿದನು, ಅನ್ಯಾಯದಿಂದ ವಾಲಿಯನ್ನು ಸೋಲಿಸಿದನು, ಇತರ ಜನರ ಅಭಿಪ್ರಾಯಗಳಿಗೆ ಫುಟ್ಬಾಲ್ ಆಗಿದ್ದನು ಮತ್ತು ತನ್ನ ಪತ್ನಿಯನ್ನು ಹೊರಗಟ್ಟಿದನು. ನಾವು ಯಾಕೆ ರಾಮನನ್ನು ಒಳ್ಳೆಯವನೆಂದು ಮತ್ತು ರಾವಣನನ್ನು ಕೆಟ್ಟವನೆಂದು ಪರಿಗಣಿಸುತ್ತೇವೆ?
ಶ್ರೀ ಶ್ರೀ ರವಿ ಶಂಕರ್: ಇದು ಶ್ರೀಲಂಕಾದ ರಾಮಾಯಣದಂತೆ ತೋರುತ್ತದೆ! (ನಗು) ಪ್ರತಿಯೊಂದು ಕಥೆಗೂ ಎರಡು ಬದಿಗಳಿವೆ. ಬೇರೆಯ ಕೋನದಿಂದ ರಾಮಾಯಣವನ್ನು ನೋಡಿದರೆ, ರಾವಣನು ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದನು ಎಂಬುದನ್ನು ಅದು ತೋರಿಸುತ್ತದೆ. ಭಗವಂತ ರಾಮನೇ ಹಾಗೆ ಹೇಳಿದ್ದಾನೆ. ರಾವಣನು ಕೆಟ್ಟವನೆಂದು ಅವನು ಯಾವತ್ತೂ ಹೇಳಲೇ ಇಲ್ಲ. ರಾಮನು ಲಕ್ಷ್ಮಣನಲ್ಲಿ, ರಾವಣನು ಒಬ್ಬ ಬುದ್ಧಿವಂತ ವಿದ್ವಾಂಸನೆಂದು ಮತ್ತು ತಾನು (ಭಗವಂತ ರಾಮ) ರಾವಣನ ಬಳಿಗೆ ಹೋಗುವುದಕ್ಕಿಂತ ಮೊದಲೇ ಲಕ್ಷ್ಮಣನು ರಾವಣನಲ್ಲಿರುವ ಜ್ಞಾನವನ್ನು ಕಲಿಯಬೇಕೆಂದು ಹೇಳಿದನು.
ಇನ್ನೊಂದು ಬಹಳ ಸುಂದರವಾದ ಕಥೆಯಿದೆ. ರಾಮೇಶ್ವರಂನಲ್ಲಿ ಭಗವಾನ್ ಶಿವನನ್ನು ಪ್ರಾರ್ಥಿಸಲು ಭಗವಾನ್ ರಾಮನು ಶಿವಲಿಂಗವನ್ನು ಪ್ರತಿಷ್ಠಾಪಿಸಲು ಇಚ್ಛಿಸಿದಾಗ, ಅವನಿಗೆ ಅದನ್ನು ತನ್ನ ಪತ್ನಿ ಮತ್ತು ಒಬ್ಬ ಬ್ರಾಹ್ಮಣ ಪುರೋಹಿತನಿಲ್ಲದೆ ಮಾಡಲು ಸಾಧ್ಯವಿರಲಿಲ್ಲ. ಅವನು ಸಹಾಯ ಮಾಡುವಂತೆ ರಾವಣನಲ್ಲಿ ವಿನಂತಿಸಿಕೊಂಡನು. ರಾವಣನು ತಾನೇ ಸೀತೆಯನ್ನು ಕರೆದು ತಂದನು ಮತ್ತು ಪೂಜೆಯ ಶಾಸ್ತ್ರಕ್ಕೆ ಪುರೋಹಿತನಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯ ಮಾಡಿದನು. ಪೂಜೆಯ ಬಳಿಕ ಭಗವಾನ್ ರಾಮನು ರಾವಣನ ಪಾದಗಳಿಗೆ ನಮಸ್ಕರಿಸಿದಾಗ ಅವನು ಭಗವಾನ್ ರಾಮನಿಗೆ ದೀರ್ಘಾಯುಷಿಯಾಗಿರುವಂತೆಯೂ ಆಶೀರ್ವದಿಸಿದನು.   ಆ ಕ್ಷಣದಲ್ಲಿ ಒಬ್ಬ ಪುರೋಹಿತನಾಗಿ ಭಗವಾನ್ ರಾಮನನ್ನು ಆಶೀರ್ವದಿಸಲು ತಾನು ಕರ್ತವ್ಯದಿಂದ ಬಂಧಿತನಾಗಿರುವುದಾಗಿ ರಾವಣನು ಹೇಳಿದನು.  ಒಬ್ಬನು ಒಬ್ಬ ಪುರೋಹಿತನಲ್ಲಿ ಆಶೀರ್ವದಿಸಲು ಕೇಳಿಕೊಂಡಾಗ, ಅದನ್ನು ನೀಡಲು ಅವನು ಬದ್ಧನಾಗಿರುತ್ತಾನೆ.
ಪುರೋಹಿತನು ಯಜಮಾನ(ಯಾರಿಗಾಗಿ ಪೂಜೆಯನ್ನು ಮಾಡಲಾಗುವುದೋ ಅವರು)ನಿಗಾಗಿ ಪೂಜೆಯ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕೆಂಬುದು ಒಂದು ಸಂಪ್ರದಾಯ ಕೂಡಾ ಆಗಿದೆ. ಭಗವಾನ್ ರಾಮನ ಪತ್ನಿಯು ಪೂಜೆಗೆ ಲಭ್ಯವಿಲ್ಲದಿದ್ದುದರಿಂದ, ಭಗವಾನ್ ರಾಮನ ಪತ್ನಿಯಾದ ಸೀತೆಯನ್ನು ಪೂಜೆಗಾಗಿ ಆತನ ಬಳಿಗೆ ಕರೆದುತರುವ ವ್ಯವಸ್ಥೆಯನ್ನು ರಾವಣನು ಮಾಡಿದನು. ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ಈ ಕಥೆಯನ್ನು ಕೇಳಿರಲಿಲ್ಲ?
ಭಗವಾನ್ ಶಿವನನ್ನು ಪ್ರಾರ್ಥಿಸದೆ ಅವನಿಗೆ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂಬುದಾಗಿ ಅಗಸ್ತ್ಯ ಋಷಿಯು ಭಗವಾನ್ ರಾಮನಿಗೆ ಸಲಹೆ ನೀಡಿದ್ದನು. ಅದಕ್ಕಾಗಿ ಅವನು ಭಗವಾನ್ ಶಿವನ ಮೂರ್ತಿಯನ್ನು (ಶಿವಲಿಂಗ) ರಾಮೇಶ್ವರಂನಲ್ಲಿ ಪ್ರತಿಷ್ಠಾಪಿಸಬೇಕಾಗಿತ್ತು. ಆದುದರಿಂದ ಭಗವಾನ್ ರಾಮನು ಇದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದನು. ತಾನು ಕಾಶಿ(ವಾರಣಾಸಿ)ಯಿಂದ ಶಿವಲಿಂಗವನ್ನು ತರುವುದಾಗಿ ಭಗವಾನ್ ಹನುಮಂತನು ಹೇಳಿದನು. ಮುಹೂರ್ತಕ್ಕಾಗಿ, ಭಗವಾನ್ ಹನುಮಂತನು ಮರಳಿ ಬರುವ ಮೊದಲು ಒಬ್ಬ ಪುರೋಹಿತನು ಬೇಕಾಗಿತ್ತು. ಆ ಸಮಯದಲ್ಲಿ ರಾವಣನಿಗಿಂತ ಶ್ರೇಷ್ಠನಾದ ಶಿವ ಭಕ್ತ ಮತ್ತು ಪುರೋಹಿತನು ಬೇರೆ ಯಾರೂ ಇರಲಿಲ್ಲವೆಂದು ನಂಬಲಾಗಿತ್ತು.
ನೀವು ರಾಮೇಶ್ವರಂನ ಚಿತ್ರವನ್ನು ನೋಡಿದ್ದೀರಾ? ಆ ಚಿತ್ರದಲ್ಲಿ ರಾವಣನಿದ್ದಾನೆ, ವಿಭೀಷಣ (ಯುದ್ಧದ ಮೊದಲು ರಾಮನ ಸೈನ್ಯಕ್ಕೆ ತೆರಳಿದ, ರಾವಣನ ತಮ್ಮ) ಕೂಡಾ ಇದ್ದಾನೆ. ಚಿತ್ರಗಳನ್ನು ಆ ಸ್ಥಳದಲ್ಲಿ ಮಾರುತ್ತಾರೆ. ಪ್ರಾಣಪ್ರತಿಷ್ಠೆಯ ಬಳಿಕ ಭಗವಾನ್ ರಾಮನು ಪುರೋಹಿತನ ಅಂದರೆ ರಾವಣನ ಆಶೀರ್ವಾದವನ್ನು ಕೋರಿದಾಗ, ಅವನು ’ವಿಜಯೀಭವ’  (ನೀನು ವಿಜಯಿಯಾಗು!) ಎಂದು ಅವನನ್ನು ಆಶೀರ್ವದಿಸಿದನು. ಪೂಜೆಯು ಮುಗಿದ ಬಳಿಕ, ಭಗವಾನ್ ಹನುಮಂತನು ಮರಳಿ ಬಂದನು ಮತ್ತು ತಾನು ಕಾಶಿಯಿಂದ ಶಿವಲಿಂಗವನ್ನು ತಂದರೂ ಪೂಜೆಯು ಅದಾಗಲೇ ಮುಗಿದಿರುವುದನ್ನು ನೋಡಿ ಬೇಸರಗೊಂಡನು. ಆದುದರಿಂದ ನಂತರ ಭಗವಾನ್ ರಾಮನು ಭಗವಾನ್ ಹನುಮಂತನನ್ನು ಶಾಂತಗೊಳಿಸಲು, ಅವನು ತಂದ ಶಿವಲಿಂಗವನ್ನು ಕೂಡಾ ಪ್ರತಿಷ್ಠಾಪಿಸಿದನು. ಆದುದರಿಂದ ಅಲ್ಲಿ ಎರಡು ಶಿವಲಿಂಗಗಳಿವೆ - ಒಂದು ರಾಮೇಶ್ವರಂ ಮತ್ತು ಇನ್ನೊಂದು ಹನುಮತದ್ ಲಿಂಗಂ ಎಂದು ಕರೆಯಲ್ಪಡುತ್ತದೆ. ಇದು ಕಥೆ.
ಆದುದರಿಂದ ನೀವು ಪ್ರತಿಯೊಬ್ಬರಿಂದಲೂ ಕೇವಲ ಒಳ್ಳೆಯ ಗುಣಗಳನ್ನು ಮಾತ್ರ ಹೀರಬೇಕು ಮತ್ತು ತೆಗೆದುಕೊಳ್ಳಬೇಕು. ನೀವು ಕೇವಲ ದೋಷಗಳನ್ನು ಮಾತ್ರ ಹುಡುಕುತ್ತಿದ್ದರೆ, ಆಗ ನಿಮಗೆ ಕೇವಲ ದೋಷಗಳೇ ಕಾಣಸಿಗುತ್ತವೆ. ನಿಮಗೆ ಭಗವಾನ್ ರಾಮನಲ್ಲಿ ತಪ್ಪುಗಳು ಕಂಡುಬರಬಹುದು ಮತ್ತು ಭಗವಾನ್ ಕೃಷ್ಣನಲ್ಲಿ ಅದಕ್ಕಿಂತಲೂ ಹೆಚ್ಚು ತಪ್ಪುಗಳು ಕಂಡುಬರಬಹುದು. ಅದಕ್ಕಾಗಿಯೇ ಜೈನರು ಭಗವಾನ್ ಕೃಷ್ಣನನ್ನು ನರಕದಲ್ಲಿರಿಸಿದ್ದಾರೆ. ಅವನು ಅಲ್ಲಿ ಎಂದೆಂದಿಗೂ ಇರಲಾರನೆಂದು, ಮುಂದಿನ ಸಲ ಅವನು ಮೊದಲನೆಯ ತೀರ್ಥಂಕರನಾಗುವನೆಂದು,. ಅವನು ಅಷ್ಟೊಂದು ಶ್ರೇಷ್ಠ ಆತ್ಮಜ್ಞಾನಿಯಾಗಿರುವನು ಎಂದು ಅವರು ಹೇಳುತ್ತಾರೆ.
ನಮ್ಮ ಸಂಸ್ಕೃತಿಯು ಬಹಳ ಅನನ್ಯವಾಗಿದೆ. ಒಬ್ಬನು ಚಪಲ ಮತ್ತು ತಿರಸ್ಕಾರಗಳ ನಕಾರಾತ್ಮಕತೆಗಳಲ್ಲಿ ಸಿಕ್ಕಿಬೀಳಬಾರದು. ಅವುಗಳಿಂದ ಪಾರಾಗಿ ಸತ್ಯಕ್ಕಾಗಿ ಹುಡುಕಿ.

ಪ್ರಶ್ನೆ: ಗುರುದೇವ, ನಾವು ಧ್ಯಾನ ಮಾಡುವಾಗ ನಮ್ಮ ಸುತ್ತಲಿರುವ ಜನರ ಮೇಲೆ ಒಂದು ಸಕಾರಾತ್ಮಕ ಪ್ರಭಾವವಿರುತ್ತದೆ. ನಮ್ಮ ಪೂರ್ವಜರು ಮತ್ತು ಮುಂಬರುವ ಪೀಳಿಗೆಯವರು ಕೂಡಾ ಧ್ಯಾನದಿಂದ ಲಾಭಪಡೆಯುತ್ತಾರೆಯೇ? ಇದನ್ನು ಅರಿಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು, ನಾವು ಧ್ಯಾನ ಮಾಡುವಾಗ, ಅದು ಎಲ್ಲರ ಮೇಲೂ ಪ್ರಭಾವ ಬೀರುತ್ತದೆ. ಈಗ ಜೀವಿಸುತ್ತಿರುವವರನ್ನು ಧ್ಯಾನ ಮಾಡುವಂತೆ ಪ್ರೋತ್ಸಾಹಿಸಿ. ಕೇವಲ ಕರ್ಮಕಾಂಡದಲ್ಲಿ (ಶಾಸ್ತ್ರ ಮತ್ತು ಆರಾಧನೆ) ತೊಡಗಿದರೆ ಸಾಕಾಗುವುದಿಲ್ಲ. ನೀವು ಧ್ಯಾನ ಮಾಡುವಾಗ, ಮಡಿದು ಹಾದುಹೋದವರು ಬಹಳ ಪ್ರಸನ್ನರಾಗುತ್ತಾರೆ.

ಪ್ರಶ್ನೆ: ಬುದ್ಧಿವಂತಿಕೆ ಮತ್ತು ಮುಗ್ಧತೆಗಳ ನಡುವೆ ಸಂತುಲನವಿರಿಸುವುದು ಹೇಗೆ? ನಾವು ನಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಿರುತ್ತೇವೆ.
ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇಲ್ಲ, ನೀವು ನಿಮ್ಮ ಮುಗ್ಧತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ಅದು ನಿಮ್ಮ ಸ್ವಭಾವದಲ್ಲಿದೆ. ನೀವದನ್ನು ಕಳೆದುಕೊಂಡಿರುವಿರೆಂದು ತೋರಿದರೆ, ಅದಕ್ಕೆ ಮರಳಿ ಬನ್ನಿ. ಅದು ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಗೆ ಅದರ ಅರಿವಾದ ಕ್ಷಣದಲ್ಲಿಯೇ ನೀವು ಮರಳಿರುತ್ತೀರಿ. ಮುಗ್ಧತೆಯು ಯಾವತ್ತೂ ವರ್ತಮಾನದ ಕ್ಷಣದಲ್ಲಿರುತ್ತದೆ. ನಾವು ವರ್ತಮಾನದ ಕ್ಷಣದಲ್ಲಿ ಮುಗ್ಧರಾಗಿರುತ್ತೇವೆ.

ಪ್ರಶ್ನೆ: ಜೈನ ಧರ್ಮದಲ್ಲಿ, ಯಜ್ಞಗಳನ್ನು ಆಚರಿಸಬಾರದು ಯಾಕೆಂದರೆ ಬೆಂಕಿಯು ಜೀವಿಗಳನ್ನು ಕೊಲ್ಲುತ್ತದೆ ಎಂದು ಹೇಳಲಾಗಿದೆ. ನಾನು ಇಲ್ಲಿನ ಯಜ್ಞಗಳಲ್ಲಿ ಪಾಲ್ಗೊಂಡಿದ್ದೇನೆ ಮತ್ತು ಅವುಗಳು ಬಹಳ ಚೆನ್ನಾಗಿದ್ದವು; ಶಬ್ದಗಳನ್ನೂ ಮೀರಿ. ಜೈನರ ಧರ್ಮಗ್ರಂಥಗಳಲ್ಲಿ ಹೇಳಿರುವುದನ್ನು ನಾನು ಅರ್ಥ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜೈನ ಧರ್ಮದ ಮುಖ್ಯ ಸಾರವೆಂದರೆ ಧ್ಯಾನ. ಎರಡನೆಯದು ಅಹಿಂಸೆ. ಅವುಗಳೆರಡೂ ಜೊತೆಯಲ್ಲಿ ಸಾಗುತ್ತವೆ - ಅಹಿಂಸೆ ಮತ್ತು ಧ್ಯಾನ.
ಧರ್ಮಗಳು ಬೇರೆ ಬೇರೆ ಕಾಲಗಳಲ್ಲಿ ಮತ್ತು ಬೇರೆ ಬೇರೆ ಜಾಗಗಳಲ್ಲಿ ಅರಳಿದವು. ಸಮಯ ಮತ್ತು ಜಾಗಕ್ಕನುಗುಣವಾಗಿ ಜ್ಞಾನವನ್ನು ನೀಡಲಾಯಿತು. ಉದಾಹರಣೆಗೆ, ಮರುಭೂಮಿಯಲ್ಲಿ ಯಾವುದೇ ಮರಗಳಿರಲಿಲ್ಲ. ಬೆಂಕಿಯನ್ನು ಮಾಡಲು ಏನೂ ಇರಲಿಲ್ಲ ಮತ್ತು ಎಲ್ಲಿ ಸಾಕಷ್ಟು ಮರವಿರಲಿಲ್ಲವೋ, ಆ ಜಾಗದಲ್ಲಿ ಈ ಸಂಪ್ರದಾಯವು (ಯಜ್ಞಗಳನ್ನು ಮಾಡದಿರುವುದು) ಆ ಸಮಯದಲ್ಲಿ ಒಗ್ಗಿತು.
ಜೈನ ಧರ್ಮದಲ್ಲಿ, ನೀರನ್ನು ಕುಡಿಯುವ ಮೊದಲು ನೀವದನ್ನು ಒಂದು ಬಟ್ಟೆಯಿಂದ ಸೋಸಬೇಕು ಎಂದು ಹೇಳಲಾಗಿದೆ. ಇದೊಂದು ಪರಿಪೂರ್ಣ ವಿಜ್ಞಾನ. ಆದರೆ ಇವತ್ತು ಜನರೇನು ಮಾಡುತ್ತಾರೆ? ಅವರು ನಲ್ಲಿಯ ಬಾಯಿಯ ಸುತ್ತಲೂ ಒಂದು ಬಟ್ಟೆಯನ್ನು ಕಟ್ಟುತ್ತಾರೆ (ನೀರನ್ನು ಸೋಸಲು). ನನಗೆ ನೆನಪಿದೆ, ಒಮ್ಮೆ ಸೂರತ್ತಿನಲ್ಲಿ ನಾನೊಂದು ಜೈನ ಕುಟುಂಬದೊಂದಿಗೆ ಉಳಕೊಂಡಿದ್ದೆ. ಅವರು ಮನೆಯಲ್ಲಿದ್ದ ಎಲ್ಲಾ ನಲ್ಲಿಗಳಿಗೂ ಬಟ್ಟೆ ಕಟ್ಟಿದ್ದರು. ನೊಣಗಳು ಮತ್ತು ಧೂಳು ಬಟ್ಟೆಯ ಮೇಲೆ ಬರಬಹುದು ಮತ್ತು ನೀವು ನಲ್ಲಿಯನ್ನು ತೆರೆದಾಗ, ನೀರು ಆ ಎಲ್ಲಾ ಧೂಳು ಮತ್ತು ಕೊಳೆಯೊಂದಿಗೆ ಬರುತ್ತದೆ. ಉದ್ದೇಶವು (ಬಟ್ಟೆ ಕಟ್ಟುವ) ಬೇರೆಯದಾಗಿತ್ತು, ಆದರೆ ನಾವು ಧರ್ಮಗ್ರಂಥವನ್ನು ಬೇರೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡೆವು ಮತ್ತು ಕುಡಿಯಲಿದ್ದ ಒಳ್ಳೆಯ ನೀರು ಇನ್ನೂ ಹೆಚ್ಚು ಕಲುಷಿತವಾಗುವಂತೆ ಮಾಡಿದೆವು. ಆದುದರಿಂದ ಕೆಲವೊಮ್ಮೆ ನಾವು ಅಹಿಂಸೆಯನ್ನು ಬಹಳಷ್ಟು ಎಳೆಯುತ್ತೇವೆ. ಅದೇ ರೀತಿಯಲ್ಲಿ, ಜನರು ಯಜ್ಞವನ್ನು ಬಹಳವಾಗಿ ಎಳೆದಿದ್ದಾರೆ. ಅವರು ಬಹಳಷ್ಟು ಖರ್ಚು ಮಾಡುತ್ತಾರೆ ಮತ್ತು ಅಗತ್ಯವಿಲ್ಲದಿರುವ ಹಲವಾರು ವಸ್ತುಗಳನ್ನು ಸುಡುತ್ತಾರೆ. ಪ್ರತಿಯೊಂದು ಸಂಪ್ರದಾಯದಲ್ಲೂ ಮೆಚ್ಚಲು ಯೋಗ್ಯವಾದ, ಅಮೂಲ್ಯವಾದ ಕೆಲವು ವಿಷಯಗಳಿವೆ.
ಜೈನ ಧರ್ಮದಲ್ಲಿ ಕೂಡಾ ಕೇವಲ ಒಂದು ಸಂಪ್ರದಾಯ ಮಾತ್ರವಿರುವುದಲ್ಲ. ಒಂದು ನಿರ್ದಿಷ್ಟ ಜೈನ ಸಂಪ್ರದಾಯದಲ್ಲಿ ಅವರೊಂದು ಹವನವನ್ನು ಮಾಡುತ್ತಾರೆ. ಹವನವು ಕೆಲವು ಜೈನ ಸಂಪ್ರದಾಯಗಳ ಒಂದು ಭಾಗವೂ ಆಗಿದೆ. ಬೌದ್ಧ ಧರ್ಮದಲ್ಲಿ ಕೂಡಾ.
ಜೈನ ಧರ್ಮದಲ್ಲಿ ಕೆಲವು ವ್ಯತ್ಯಾಸಗಳಿವೆ, ಉದಾಹರಣೆಗೆ ಸ್ಥಾನಕವಸಿ (ಆತ್ಮವು ನಿರಾಕಾರವಾದುದು ಎಂದು ನಂಬುವ ಹಾಗೂ ಈ ಕಾರಣಕ್ಕಾಗಿ ಮೂರ್ತಿ ಪೂಜೆಯನ್ನು ಮಾಡದಿರುವ, ಜೈನರ ಒಂದು ಒಳಪಂಗಡ), ತೇರಾಪಂಥಿ, ದೇರಾವಸಿ ಅಥವಾ ಮೂರ್ತಿಪೂಜಕ್ (ಮೂರ್ತಿ ಪೂಜೆಯನ್ನು ಮಾಡುವ ಜೈನರ ಒಂದು ಒಳಪಂಗಡ) ಮೊದಲಾದವು.
ಕೆಲವು ಜನರು ಆಕಾರವನ್ನು ಪೂಜಿಸುತ್ತಾರೆ, ಕೆಲವರು ಪೂಜಿಸುವುದಿಲ್ಲ. ಹೀಗೆ ಹಲವಾರು ವಿವಿಧ ಕಲ್ಪನೆಗಳಿವೆ, ಇಲ್ಲವೇ? ಕೆಲವು ನಿರ್ದಿಷ್ಟ ಜೈನ ಸಂಪ್ರದಾಯಗಳಲ್ಲಿ, ಅವರು ಯಾವುದೇ ಮೂರ್ತಿಗಳನ್ನಿಡುವುದಿಲ್ಲ ಮತ್ತು ಬೇರೆ ಜೈನ ಸಂಪ್ರದಾಯಗಳಲ್ಲಿ; ಉದಾಹರಣೆಗೆ ದಿಗಂಬರ, ಶ್ವೇತಾಂಬರ, ಸ್ಥಾನಕವಸಿ ಮೊದಲಾದವುಗಳಲ್ಲಿ ಅವರ ಸಂಪ್ರದಾಯ ಮತ್ತು ಪೂಜಾ ಶಾಸ್ತ್ರಗಳು ಬೇರೆಯಾಗಿವೆ.
ಆದರೆ ಮುಖ್ಯ ಸಾರವು ಧ್ಯಾನವಾಗಿದೆ. ಯಜ್ಞಗಳನ್ನು ಮಾಡುವುದು ಒಂದು ಸೂಕ್ಷ್ಮ ಕಂಪನವನ್ನು, ಒಂದು ಸೂಕ್ಷ್ಮ ಶಕ್ತಿಯನ್ನು ಸೃಷ್ಟಿಸುವುದಕ್ಕಾಗಿ. ಅದಕ್ಕೆ ಅದರದ್ದೇ ಆದ ಮೌಲ್ಯವಿದೆ. ಕೆಲವು ಜೈನ ಸಂಪ್ರದಾಯಗಳಲ್ಲಿ, ನಿಮ್ಮ ಬಾಯಿಗೆ ಒಂದು ಕವಚವಿಲ್ಲದೆ ನೀವು ಮಾತನಾಡಲೂ ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅದು ಪ್ರಾಯೋಗಿಕವಲ್ಲ. ಪ್ರಪಂಚದಲ್ಲಿರುವ ಜನರೆಲ್ಲರೂ ಬಾಯಿಯ ಮೇಲೆ ಒಂದು ಕವಚ ಹಾಕಿಕೊಂಡರೆ ಹೇಗಿರುತ್ತದೆಯೆಂದು ಸುಮ್ಮನೇ ಊಹಿಸಿ.
ಜೈನರ ಕೆಲವು ಒಳಪಂಗಡಗಳ ಜನರು ವಿದ್ಯುಚ್ಛಕ್ತಿಯನ್ನು ಉಪಯೋಗಿಸುವುದೇ ಇಲ್ಲ. ಮೈಕಾಗಲೀ ಅಥವಾ ಬಲ್ಬಾಗಲೀ ಅಥವಾ ಏನನ್ನೂ ಇಲ್ಲ. ನಾನು ಹೇಳುವುದೆಂದರೆ ಇದು, ಭಗವಾನ್ ಮಹಾವೀರನು ಹೇಳಿರುವುದನ್ನು ಅತಿಯಾಗಿ ಎಳೆಯುವುದೆಂದು. ನಾವು, ತೀರ್ಥಂಕರರು (ಆತ್ಮ ಸಾಕ್ಷಾತ್ಕಾರ ಹೊಂದಿದವರು) ಹೇಳಿರುವುದರ ನಿಜವಾದ ಅರ್ಥವನ್ನು ಮೀರಿ ಹೋಗುತ್ತಿದ್ದೇವೆ.
ಇವುಗಳು ಸುಧಾರಣೆ ಹೊಂದಬೇಕಾಗಿರುವಂತಹ ವಿಷಯಗಳು. ಕೆಲವು ಜೈನ ಮುನಿಗಳು ಈಗಾಗಲೇ ಸುಧಾರಣೆ ಮಾಡಲು ಪ್ರಾರಂಭಿಸಿರುವುದು ಬಹಳ ಒಳ್ಳೆಯ ವಿಷಯ. ಅವರು ಕಾರುಗಳು ಮತ್ತು ವಿಮಾನಗಳಲ್ಲಿ ಹೋಗಲು ಪ್ರಾರಂಭಿಸಿದ್ದಾರೆ. ಪ್ರಾಚೀನ ದಿನಗಳಲ್ಲಿ, ನೀವು ಯಾವುದೇ ವಾಹನಗಳನ್ನು ಉಪಯೋಗಿಸಬಾರದೆಂದು ಹೇಳಲಾಗುತಿತ್ತು ಯಾಕೆಂದರೆ ವಾಹನಗಳನ್ನು ಪ್ರಾಣಿಗಳಿಂದ ನಡೆಸಲಾಗುತಿತ್ತು. ಅದು ಪ್ರಾಣಿಗೆ ಹಿಂಸೆ ನೀಡಿದಂತೆ. ಅದು ಬಹಳ ಸರಿಯಾದುದು. ಆದರೆ ಇವತ್ತು ವಾಹನಗಳನ್ನು ಪ್ರಾಣಿಗಳಿಂದ ನಡೆಸಲಾಗುವುದಿಲ್ಲ, ಅವುಗಳನ್ನು ಪೆಟ್ರೋಲಿನಿಂದ ನಡೆಸಲಾಗುತ್ತದೆ. ಸಂಪ್ರದಾಯಗಳಲ್ಲಿ ನಾವು ಅಷ್ಟು ವಿವೇಕವನ್ನು ಉಪಯೋಗಿಸಬೇಕು.

ಭಾನುವಾರ, ಅಕ್ಟೋಬರ್ 28, 2012

ನಕಾರಾತ್ಮಕ ಅಭಿಪ್ರಾಯಗಳೊಂದಿಗೆ ವ್ಯವಹರಿಸುವುದು


೨೮ ಅಕ್ಟೋಬರ್ ೨೦೧೨
ಬೆಂಗಳೂರು, ಭಾರತ

ದೇವರನ್ನು ಆಳವಾದ ವಿಶ್ರಾಂತಿಯಲ್ಲಿ(ಧ್ಯಾನ) ಮಾತ್ರ ಕಂಡುಕೊಳ್ಳಬಹುದಾಗಿದೆ. ಆಳವಾದ ವಿಶ್ರಾಂತಿಗಿರುವ ಅಡಚಣೆಗಳು ಯಾವುವೆಂಬುದು ನಿಮಗೆ ತಿಳಿದಿದೆಯೇ? ಅದು, ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳು. ಮನಸ್ಸು ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ತುಂಬಿದ್ದರೆ, ವಿಶ್ರಾಂತಿಯು ಸಾಧ್ಯವಿಲ್ಲ, ಮತ್ತು ವಿಶ್ರಾಂತಿಯಿಲ್ಲದಿದ್ದರೆ, ಸಾಧನೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ಮುಕ್ತರಾಗಬೇಕು.
ಹಾಗಾದರೆ, ನಾವದನ್ನು ಮಾಡುವುದು ಹೇಗೆ? ’ನನಗೆ ಯಾರಿಂದಲೂ ಏನೂ ಬೇಡ ’, ಇದನ್ನೇ ನಾವು ನಮ್ಮ ಮನಸ್ಸಿನಲ್ಲಿ ಇಡಬೇಕಾದುದು. ನಮಗೆ ಯಾರಿಂದಲೂ ಏನೂ ಬೇಡದಿರುವಾಗ, ನಮ್ಮಲ್ಲಿ ಯಾರ ಕಡೆಗೂ ಬಯಕೆಗಳಿರಲಾರವು. ಬಯಕೆಯಿಲ್ಲದಿರುವಾಗ, ಅಲ್ಲಿ ತಿರಸ್ಕಾರವಿರುವುದಿಲ್ಲ.
ಯಾರನ್ನೂ ಒಬ್ಬ ಕೆಟ್ಟ ವ್ಯಕ್ತಿಯೆಂದು ಯೋಚಿಸಬೇಡಿ. ಜಗತ್ತಿನಲ್ಲಿ ಯಾವುದೇ ಕೆಟ್ಟ ವ್ಯಕ್ತಿಯಿಲ್ಲ. ಜನರು ಏನಾದರೂ ಕೆಟ್ಟದನ್ನು ಮಾಡಿದರೆ, ಅದು ಅವರ ಅಜ್ಞಾನ ಅಥವಾ ಅರಿವಿನ ಕೊರತೆಯ ಕಾರಣದಿಂದ ಅಥವಾ ಅವರ ಮನಸ್ಸು ನೊಂದಿರುವುದರಿಂದ. ಆದುದರಿಂದ ಯಾರ ಬಗ್ಗೆಯೂ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಬೇಡಿ.

ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.

ಪ್ರಶ್ನೆ: ಯಾರಾದರೂ ನಿಜವಾಗಿ ನಮಗೆ ಏನಾದರೂ ಕೆಟ್ಟದನ್ನು ಮಾಡಿದ್ದರೆ, ನಾವೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಯಾರಾದರೂ ನಿಮಗೆ ಏನಾದರೂ ಕೆಟ್ಟದನ್ನು ಮಾಡುವಾಗ, ಅವರು ಹಾಗೆ ಯಾಕೆ ಮಾಡುವರು ಎಂಬುದಾಗಿ ಯೋಚಿಸು. ಅವರು ಆರೋಗ್ಯವಂತರಾಗಿಲ್ಲವೆಂಬುದು ಒಂದು ಕಾರಣವಾಗಿರಬಹುದು.
ಒಬ್ಬ ಮೂರ್ಖನನ್ನು ಅಥವಾ ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯನ್ನು ನೀವು ಒಬ್ಬ ಅಪರಾಧಿಯನ್ನಾಗಿ ನೋಡುವಿರೇ? ಇಲ್ಲ! ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯು ನಿಮಗೆ ಏನಾದರೂ ಕೆಟ್ಟದನ್ನು ಹೇಳಿದರೆ, ನೀವು ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಿರೇ? ಇಲ್ಲ. ಅವನು ಮಾನಸಿಕವಾಗಿ ಅಸ್ವಸ್ಥನೆಂಬುದನ್ನು ತಿಳಿದುಕೊಂಡು ನೀವು ಸುಮ್ಮನೇ ಮುಂದೆ ಸಾಗುವಿರಿ. ಆದುದರಿಂದ, ಯಾರಾದರೂ ನಿಮಗೆ ಏನಾದರೂ ಕೆಟ್ಟದಾಗಿ ಹೇಳುವಾಗ, ಅದರ ಬಗ್ಗೆ ಇದೇ ರೀತಿಯಲ್ಲಿ ಯೋಚಿಸಿ. ಒಬ್ಬ ಮನ ನೊಂದ ವ್ಯಕ್ತಿಯು ಏನಾದರೂ ಕೆಟ್ಟದನ್ನು ಹೇಳುವಾಗ, ನೀವು ಯಾಕೆ ತೊಂದರೆಗೊಳಗಾಗಬೇಕು?

ಪ್ರಶ್ನೆ: ಶಾಂತಿಯಿಂದಿರಬೇಕಾದರೆ, ಇತರರಿಂದ ನಿರೀಕ್ಷಿಸದೇ ಇರಲು ನಾವು ಕಲಿಯಬೇಕು. ಆದರೆ ದೈನಂದಿನ ಜೀವನದಲ್ಲಿ; ಕಛೇರಿಯಲ್ಲಿ ಅಥವಾ ಮನೆಯಲ್ಲಿ, ಬೇರೆ ಬೇರೆ ಜನರು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರದನ್ನು ಮಾಡದೇ ಇದ್ದರೆ, ಆಗ ಸಮಸ್ಯೆಗಳು ಏಳುತ್ತವೆ. ಪ್ರತಿಯೊಬ್ಬರೂ ಅವನ ಅಥವಾ ಅವಳ ಕೆಲಸವನ್ನು ಮಾಡಲೇಬೇಕು. ದಯವಿಟ್ಟು ಇದರ ಬಗ್ಗೆ ನಮಗೆ ಮಾರ್ಗದರ್ಶನ ನೀಡಿ. 
ಶ್ರೀ ಶ್ರೀ ರವಿ ಶಂಕರ್: ಒಬ್ಬನು ಅಥವಾ ಒಬ್ಬಳು ತಾನು ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ, ಆಗ ನಾವು ಅವರಿಗೆ ಅದನ್ನು ಮಾಡಲು ಹೇಳಬೇಕು. ನಾವು ನಮ್ಮ ಅಧಿಕಾರವನ್ನು ಅಲ್ಲಿ ಚಲಾಯಿಸಬೇಕು. ತಮ್ಮ ಕೆಲಸವನ್ನು ಮಾಡದ ಆಲಸಿ ಜನರಿದ್ದರೆ, ನಾವು ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ತಮ್ಮ ಕರ್ತವ್ಯದ ಬಗ್ಗೆ ಅವರಿಗೆ ಅರಿವು ಮೂಡುವಂತೆ ನಾವು ಮಾಡಬೇಕಾಗಿದೆ. ನಮಗೆ ಅವರ ಕಡೆಗೆ ಬಯಕೆ ಅಥವಾ ತಿರಸ್ಕಾರವಿದ್ದರೆ, ಆಗ ಅವರಲ್ಲಿ ಅರಿವು ಮೂಡಿಸಲು ನಮಗೆ ಸಾಧ್ಯವಿಲ್ಲ. ಅದು ನಮ್ಮನ್ನು ಕ್ರೋಧಗೊಳ್ಳುವಂತೆ ಮಾತ್ರ ಮಾಡುವುದು.

ಪ್ರಶ್ನೆ: ಕಾರಣ ಮತ್ತು ಪರಿಣಾಮ ಇದರ ಅರ್ಥವೇನು? 
ಶ್ರೀ ಶ್ರೀ ರವಿ ಶಂಕರ್: ಅದನ್ನು ’ಕಾರಣ’ ಮತ್ತು ’ಕಾರ್ಯ’ ಎನ್ನುತ್ತೇವೆ. ಹಸುವು ಕಾರಣವಾಗಿದೆ, ಹಾಲು ಕಾರ್ಯವಾಗಿದೆ. ಅಲ್ಲಿ ಹಾಲಿದ್ದರೆ, ಅದು ಹಸುವಿನಿಂದಾಗಿ. ಹಸುವಿನ ಕಾರಣವೆಂದರೆ ಹುಲ್ಲು. ಹುಲ್ಲಿನ ಕಾರಣವೆಂದರೆ ಭೂಮಿ. ಭೂಮಿಯ ಕಾರಣವೆಂದರೆ ಸೂರ್ಯ. ಪ್ರತಿಯೊಂದು ಸಂಭವದ ಹಿಂದೆಯೂ ಒಂದು ಕಾರಣವಿದೆ.
ಪರಮಕಾರಣ, ಎಲ್ಲಾ ಕಾರಣಗಳ ಕಾರಣವು ದೇವರು. ಅದಕ್ಕಾಗಿಯೇ, ’ತಸ್ಮೈ ನಮಃ ಪರಮಕಾರಣ ಕಾರಣಾಯ ’ ಎಂದು ಹೇಳಲಾಗಿದೆ. ಎಲ್ಲಾ ಕಾರಣಗಳ ಕಾರಣವು ಶಿವನಾಗಿರುವನು.

ಪ್ರಶ್ನೆ: ಗುರುದೇವ, ನಾವು ’ಆಚಮನೀಯಂ ಸಮರ್ಪಯಾಮಿ’ ಎಂದು ಹೇಳುತ್ತೇವೆ. ನೀರು ’ಅಪ’ ಎಂದು ಕರೆಯಲ್ಪಡುತ್ತದೆ, ಹಾಗಾದರೆ ನಾವು ಅದನ್ನು ’ಆಚಮನೀಯಂ’ ಎಂದು ಯಾಕೆ ಕರೆಯುತ್ತೇವೆ? ನೀರನ್ನು ಅರ್ಪಿಸುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಹೌದು, ನೀರು ಆಚಮನೀಯಂ ಎಂದು ಕೂಡಾ ಕರೆಯಲ್ಪಡುತ್ತದೆ.
ಇದು ಯುಗಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಪದ್ಧತಿಯಾಗಿದೆ. ಯಾವುದನ್ನಾದರೂ ಪ್ರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಮೊದಲು, ಆಚಮನೀಯಂನ್ನು ಅರ್ಪಿಸಲಾಗುತ್ತದೆ. ಅದು, ನಾವು ಅಭಿಮಂತ್ರ (ನೀರಿನ ಮೇಲೆ ಮಂತ್ರವನ್ನು ಉಚ್ಛರಿಸುವುದು. ನೀವೊಂದು ನೀರಿನ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ನಿಮ್ಮ ಕೈಯನ್ನಿಟ್ಟು, ನಂತರ ಮಂತ್ರಗಳನ್ನು ಉಚ್ಛರಿಸುವಿರಿ. ಮಂತ್ರಗಳು ನೀರಿನೊಳಗೆ ಹೀರಲ್ಪಡುತ್ತವೆ)ವನ್ನು ಮಾಡಿ ನಂತರ ಅದನ್ನು ಅರ್ಪಿಸುವ ಪ್ರಕ್ರಿಯೆಯಾಗಿದೆ. ಅದು ಕೇವಲ ಕುಡಿಯುವ ನೀರಲ್ಲ. ಮಂತ್ರದ ಕಂಪನಗಳ ಮೂಲಕ ನೀರನ್ನು ಚಾರ್ಜ್ ಮಾಡಲಾಗುತ್ತದೆ.
ಯಾವಾಗೆಲ್ಲಾ ಮನೆಗೆ ಅತಿಥಿಗಳು ಬರುವರೋ, ಆಗ ಅವರ ಪಾದಗಳನ್ನು ತೊಳೆಯುವುದಕ್ಕಾಗಿ ನೀರನ್ನು ಬಳಸಲಾಗುತ್ತದೆ. ನಂತರ, ಅವರ ಕೈಗಳಿಗೆ ನೀರನ್ನು ಕೊಡಲಾಗುತ್ತದೆ. ಇದರ ಬಳಿಕ, ತಮ್ಮ ದಾಹವನ್ನು ತಣಿಸುವುದಕ್ಕಾಗಿ ಅವರಿಗೆ ಕುಡಿಯಲು ನೀರನ್ನು ಕೊಡಲಾಗುತ್ತದೆ. ಹಳೆಯ ಕಾಲದಲ್ಲಿ ಈ ಮೂರು ಪದ್ಧತಿಗಳನ್ನು ಅಭ್ಯಸಿಸಲಾಗುತ್ತಿತ್ತು.
ಒಬ್ಬರು ನಿಮ್ಮ ಮನೆಗೆ ಬರುವಾಗ ನೀವು, "ನೀವು ಕುಡಿಯಲು ಏನು ತೆಗೆದುಕೊಳ್ಳುವಿರಿ? ಸ್ವಲ್ಪ ನಿಂಬೆಹಣ್ಣಿನ ಶರಬತ್ತು, ಹಾಲು, ಚಹಾ ಅಥವಾ ಕಾಫಿ ತೆಗೆದುಕೊಳ್ಳುವಿರಾ?" ಎಂದು ಕೇಳುವುದಿಲ್ಲವೇ? ನೀವವರಿಗೆ ಕುಡಿಯಲು ಸ್ವಲ್ಪ ನೀರನ್ನು ಕೊಡುವುದಿಲ್ಲವೇ?ಅದೇ ರೀತಿಯಲ್ಲಿ, ಹಳೆಕಾಲದಲ್ಲಿ, ಪಾದ್ಯ, ಅರ್ಘ್ಯ ಮತ್ತು ಆಚಮನೀಯಂಗಳ ಪದ್ಧತಿಯಿತ್ತು.
ಪಾದ್ಯವೆಂದರೆ, ಪಾದಗಳಲ್ಲಿರುವ ಕೊಳೆಯು ಮನೆಯನ್ನು ಪ್ರವೇಶಿಸದೇ ಇರಲಿ ಎಂಬ ಕಾರಣಕ್ಕಾಗಿ, ಮನೆಯ ಪ್ರವೇಶದ್ವಾರದಲ್ಲಿ ಅತಿಥಿಯ ಪಾದಗಳನ್ನು ತೊಳೆಯುವುದು. ಅರ್ಘ್ಯವೆಂದರೆ ಅವರ ಕೈಗಳನ್ನು ತೊಳೆಯುವುದು. ಆಚಮನೀಯಂ ಎಂದರೆ ಅವರಿಗೆ ಕುಡಿಯಲು ನೀರು ಕೊಡುವುದು, ಇದರ ಮೂಲಕ ಮಾತುಕತೆಯನ್ನು ಪ್ರಾರಂಭಿಸಬಹುದೆಂಬ ಸೂಚನೆಯನ್ನು ಕೊಡುವುದು.

ಪ್ರಶ್ನೆ: ಪಂಚಾಮೃತ ಅಭಿಷೇಕದ ಮಹತ್ವವೇನು? ಈ ವಸ್ತುಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಯಿತು?
ಶ್ರೀ ಶ್ರೀ ರವಿ ಶಂಕರ್: ಈ ಐದು ವಸ್ತುಗಳು ಅಮೃತದಂತೆ: ಹಾಲು, ಮೊಸರು, ಜೇನು, ಬೆಲ್ಲ ಮತ್ತು ತುಪ್ಪ. ಬೆಲ್ಲವನ್ನು ಬಳಸಬೇಕಾಗಿರುವುದಾದರೂ ಸಹ, ಈ ದಿನಗಳಲ್ಲಿ ಬೆಲ್ಲದ ಬದಲು ಸಕ್ಕರೆಯನ್ನು ಬಳಸಲಾಗುತ್ತಿದೆ.
ಅವುಗಳಲ್ಲಿ ಐದು ದೇವತೆಯರು ವಾಸಿಸುತ್ತಾರೆ. ಸಕ್ಕರೆಯಲ್ಲಿ ಸವಿತ್ರು, ಜೇನಿನಲ್ಲಿ ವಿಶ್ವೇದೇವ, ತುಪ್ಪದಲ್ಲಿ ಸೂರ್ಯ, ಮೊಸರಿನಲ್ಲಿ ವಾಯು ಮತ್ತು ಹಾಲಿನಲ್ಲಿ ಸೋಮ. ಹೀಗಾಗಿ, ಅವುಗಳನ್ನು ನೀವು ಅಭಿಷೇಕವಾಗಿ ಅರ್ಪಿಸುವಾಗ, ಅದರ ಉದ್ದೇಶವೆಂದರೆ - ದೇವತೆಯರ ಗುಣಗಳು ನಮ್ಮ ಜೀವನದಲ್ಲಿ ಅರಳಲಿ ಎಂಬುದಾಗಿದೆ.
ನಾವು, ಪ್ರತಿಯೊಬ್ಬರ ಮನಸ್ಸಿನ ಶಾಂತಿಗಾಗಿಯೂ ಪ್ರಾರ್ಥಿಸುತ್ತೇವೆ.
ಎಲ್ಲರ ಮನಸ್ಸಿನಲ್ಲಿಯೂ ಆನಂದವಿರಲಿ.
ಜನರ ಜೀವನಗಳಲ್ಲಿ ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯವಿರಲಿ.
ಜನರ ಜೀವನಗಳಲ್ಲಿ ತೃಪ್ತಿ ಮತ್ತು ಸಮೃದ್ಧಿಯಿರಲಿ.
ಜೀವನದಲ್ಲಿ ಕಾಂತಿಯಿರಲಿ.
ಮಾರುತಗಳು ಮತ್ತು ನದಿಗಳು ಮಧುರವಾಗಿ ಹರಿಯುತ್ತಿರಲಿ.
ನಮ್ಮ ಹಗಲುಗಳು ಮತ್ತು ರಾತ್ರಿಗಳು ಮಧುರವಾಗಿರಲಿ.
ಮಣ್ಣಿನ ಪ್ರತಿಯೊಂದು ಕಣವೂ ನಮಗೆ ಸಿಹಿಯನ್ನು ತರಲಿ.
ಆಕಾಶದಿಂದ, ದೇವತೆಯರಿಂದ ಮತ್ತು ಪಿತೃಗಳಿಂದ ನಮಗೆ ಸಿಹಿ ಲಭಿಸಲಿ.
ನಮ್ಮ ಮಾತು ಮತ್ತು ಯೋಚನೆಗಳು ಮಧುರವಾಗಿರಲಿ.
ಸಮಾಜವು ನಮಗೆ ಸಿಹಿಯನ್ನು ತರಲಿ.
ವನಸ್ಪತಿ (ಅರಣ್ಯದ ದೇವತೆ)ಯು ನಮಗೆ ಸಿಹಿಯನ್ನು ತರಲಿ.
ಸೂರ್ಯನು ನಮ್ಮ ಜೀವನಗಳಿಗೆ ಸಿಹಿಯನ್ನು ತರಲಿ.
ನಮ್ಮ ಸಂಪೂರ್ಣ ಜೀವನವು ಇತರ ಜನರ ಜೀವನಗಳಿಗೆ ಸಿಹಿಯನ್ನು ತರಲಿ.
ಸಾಮೂಹಿಕ ಪ್ರಜ್ಞೆಗೆ ನಾವು ಸಿಹಿಯನ್ನು ತರೋಣ.  

ಪ್ರಶ್ನೆ: ಕೊನೆಯಾಗದ ಮತ್ತು ದೃಢವಾದ ಭಕ್ತಿಯನ್ನು ಹೊಂದಲಿರುವ ಮಾರ್ಗವನ್ನು ನಮಗೆ ದಯವಿಟ್ಟು ತಿಳಿಸಿ. 
ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ದೃಢವಾದ ಭಕ್ತಿಯಿದೆಯೆಂಬುದಾಗಿ ಭಾವಿಸು. ಭಕ್ತಿ ಸೂತ್ರಗಳಲ್ಲಿ ನಾರದ ಮಹರ್ಷಿಯು, ಭಕ್ತಿಯೆಂದರೆ ಗಳಿಸುವಂತಹ ಒಂದು ವಸ್ತುವಲ್ಲ ಎಂದು ಹೇಳುತ್ತಾರೆ. ನೀನು ಎಲ್ಲಾ ಸಂಶಯಗಳನ್ನು ಬಿಟ್ಟರೆ, ಭಕ್ತಿಯು ಅಲ್ಲಿ ಈಗಾಗಲೇ ಇದೆ.

ಪ್ರಶ್ನೆ: ನಾವು ಕಾನೂನನ್ನು ಕಲಿತರೆ, ಒಬ್ಬ ವಕೀಲನಾಗುವ ಖಚಿತತೆ ಅಲ್ಲಿದೆ. ನಾವು ಎಂಜಿನಿಯರಿಂಗ್ ಕಲಿತರೆ, ನಮ್ಮ ಪ್ರಯತ್ನಗಳನ್ನು ಹಾಕಿದರೆ ನಾವೊಬ್ಬ ಎಂಜಿನಿಯರ್ ಆಗುವ ಭರವಸೆಯಿದೆ. ಆದರೂ, ನಾವು ನಮ್ಮ ಸಾಧನೆಯನ್ನು ಮಾಡುತ್ತಿದ್ದರೆ ಮತ್ತು ಈ ಪಥದಲ್ಲಿ ನಡೆಯುತ್ತಿದ್ದರೂ ಮೋಕ್ಷವನ್ನು ಪಡೆಯುವ ಯಾವುದೇ ಭರವಸೆಯಿಲ್ಲ.
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ ಅದರ ಭರವಸೆಯಿದೆ.
ಭಗವದ್ಗೀತೆಯಲ್ಲಿ ಅರ್ಜುನನು ಇದೇ ಪ್ರಶ್ನೆಯನ್ನು ಕೇಳುತ್ತಾನೆ. ಹಾಗಾಗಿ ಕೃಷ್ಣ ಪರಮಾತ್ಮನು ಉತ್ತರಿಸುತ್ತಾನೆ, ’ನ ಹಿ ಕಲ್ಯಾಣಕೃತ್ಕಶ್ಚಿದ್ ದುರ್ಗತಿಂ ತಾತ ಗಚ್ಛತಿ’, (ಅಧ್ಯಾಯ ೬, ಶ್ಲೋಕ ೪೦).
ಯಾರು ಆಧ್ಯಾತ್ಮಿಕ ಪಥದಲ್ಲಿ ನಡೆಯುವರೋ, ಅವರು ಕೇವಲ ಎತ್ತರೆತ್ತರಕ್ಕೆ ಮಾತ್ರ ಏರುತ್ತಾರೆ.

ಪ್ರಶ್ನೆ: ಹಲವಾರು ಶ್ರೇಷ್ಠ ಸಂತರು, ಅವರು ಜ್ಞಾನೋದಯವನ್ನು ಗಳಿಸಿದ್ದರೂ ಕೂಡಾ ಅದನ್ನು ಯಾರಿಗೂ ನೇರವಾಗಿ ಕೊಡಲಿಲ್ಲ. ಅವರು ಕೇವಲ ಅದನ್ನು ಗಳಿಸಲಿರುವ ಹೆಜ್ಜೆಗಳನ್ನು ಮಾತ್ರ ಹೇಳಿಕೊಟ್ಟರು. ದೇವರು ಯಾಕೆ ಎಲ್ಲರಿಗೂ ನೇರವಾಗಿ ಜ್ಞಾನೋದಯವನ್ನು ನೀಡುವುದಿಲ್ಲ? ಇದಕ್ಕೆ ಸಂಸ್ಕಾರಗಳು ಅವಶ್ಯವೇ?
ಶ್ರೀ ಶ್ರೀ ರವಿ ಶಂಕರ್: ಸಂಸ್ಕಾರಗಳು ಆವಶ್ಯಕ. ನೀವಿಲ್ಲಿರುವುದಾದರೆ, ಅದರರ್ಥ ಎಲ್ಲೋ ಒಂದು ಕಡೆ ನಿಮ್ಮಲ್ಲಿ ಬರುವ ಆಸಕ್ತಿ ಮತ್ತು ಕುತೂಹಲವಿತ್ತೆಂದು. ಆ ಆಸಕ್ತಿಯಿಲ್ಲದೆ, ನೀವಿಲ್ಲಿಗೆ ಬಂದಿರಲು ಹೇಗೆ ಸಾಧ್ಯ? ಆದುದರಿಂದ, ಸ್ವಲ್ಪ ಸಂಸ್ಕಾರಗಳು ಆವಶ್ಯಕವಾಗಿವೆ.
ಹೀಗಿದ್ದರೂ, ಕೇವಲ ಸಂಸ್ಕಾರಗಳು ಸಾಕಾಗುವುದಿಲ್ಲ. ಜೀವನದಲ್ಲಿ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಬೇಕು. ಇವುಗಳೊಂದಿಗೆ, ಸ್ವಪ್ರಯತ್ನ ಕೂಡಾ ಬೇಕು. ನಿಮಗೆ ಸತ್ಸಂಗಕ್ಕೆ ಬರುವ ಬಯಕೆಯಿದ್ದರೆ, ಆದರೆ ನಿಮ್ಮ ಹಾಸಿಗೆಯಲ್ಲಿ ಮಲಗಿದ್ದರೆ, ಅದು ಸಹಾಯ ಮಾಡುವುದೇ? ಆದುದರಿಂದ, ಸ್ವಪ್ರಯತ್ನ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಅಗತ್ಯವಾಗಿದೆ.

ಪ್ರಶ್ನೆ: ಸಾಧನೆಯನ್ನು ನಿಯಮಿತವಾಗಿ ಮಾಡುವವರಿಗೆ ಕೂಡಾ ಅಪಸ್ಮಾರ ದಾಳಿಯಾಗುವ ಸಾಧ್ಯತೆಗಳಿವೆಯೇ?
ಶ್ರೀ ಶ್ರೀ ರವಿ ಶಂಕರ್: ಆ ವ್ಯಕ್ತಿಯು ಏನನ್ನು ತಿನ್ನುತ್ತಾನೆ, ಕುಡಿಯುತ್ತಾನೆ ಮತ್ತು ದಿನವಿಡೀ ಏನನ್ನು ಮಾಡುತ್ತಾನೆ ಎಂಬುದರ ಮೇಲೆ ಅದು ಆಧರಿಸಿದೆ. ತಿನ್ನುವ, ಕುಡಿಯುವ ಮತ್ತು ಜೀವನ ಶೈಲಿ ಸರಿಯಿಲ್ಲದಿದ್ದರೆ, ಅದರ ಸಾಧ್ಯತೆಯಿದೆ.
ನರಮಂಡಲದಲ್ಲಿ ಅತಿಯಾದ ಒತ್ತಡವಿದ್ದರೆ, ಆಗ ಅಂತಹ ದಾಳಿಗಳ ಸಾಧ್ಯತೆಗಳಿವೆ. ಒಬ್ಬನು ಆರೋಗ್ಯಕರ ಜೀವನವನ್ನು ಜೀವಿಸಿದರೆ, ಹಾಗಾಗದು.

ಗುರುವಾರ, ಅಕ್ಟೋಬರ್ 25, 2012

ಜೀವನದ ರಹಸ್ಯ

೨೫ ಅಕ್ಟೋಬರ್ ೨೦೧೨

ಬೆಂಗಳೂರು ಆಶ್ರಮ
 
ಪ್ರಶ್ನೆ: ಗುರುದೇವ, ಜೀವನದ ರಹಸ್ಯವನ್ನು ಜೀವಿಸುವುದು ಎಂಬ ಶೀರ್ಷಿಕೆಯುಳ್ಳ ನಿಮ್ಮ ಪುಸ್ತಕದಲ್ಲಿ ನೀವು, "ಈ ಪ್ರಪಂಚದಲ್ಲಿ ಕೆಲಸ ಮಾಡಿ, ಆದರೆ ಅದು ನಿಮ್ಮ ತಲೆಯನ್ನು ಪ್ರವೇಶಿಸಲು ಬಿಡಬೇಡಿ" ಎಂದು ಹೇಳಿದ್ದೀರಿ. ದಯವಿಟ್ಟು ನೀವು ಇದನ್ನು ಮತ್ತೊಮ್ಮೆ ವಿವರಿಸುವಿರಾ? ಅದು ವೈರಾಗ್ಯದಂತೆಯೇ?
ಶ್ರೀ ಶ್ರೀ ರವಿ ಶಂಕರ್:
ಸರಿಯಾಗಿ ಇದನ್ನೇ ನಾವೀಗ ಧ್ಯಾನದಲ್ಲಿ ಮಾಡಿರುವುದು. ಕಣ್ಣುಗಳು ತೆರೆದಿರುವಾಗ, ನಾವು ದೃಶ್ಯವನ್ನು ನೋಡುತ್ತೇವೆ ಮತ್ತು ನಾವು ನಮ್ಮ ಕಣ್ಣುಗಳನ್ನು ಮತ್ತು ನಮ್ಮ ಮನಸ್ಸನ್ನು ಮುಚ್ಚಿದಾಗ ಅಲ್ಲಿ ಇನ್ನೊಂದು ಪ್ರಪಂಚವಿರುತ್ತದೆ. ನೀನಿದನ್ನು ಗಮನಿಸಿದ್ದೀಯಾ? ಆದುದರಿಂದ ಇದಕ್ಕಿರುವ ಮಾರ್ಗವು ಧ್ಯಾನವಾಗಿದೆ.
ನೋಡು, ನೀನು ಕುಳಿತುಕೊಂಡು, "ಓ, ನನ್ನ ಸೊಸೆಯು ಇದನ್ನು ಮಾಡಿದಳು. ನನ್ನ ಮಗನು ನನಗೆ ಗೌರವ ನೀಡಲಿಲ್ಲ" ಮೊದಲಾದವನ್ನು ಯೋಚಿಸುತ್ತಿರುವೆಯೆಂದು ಇಟ್ಟುಕೊಳ್ಳೋಣ. ನೀನು ಕುಳಿತುಕೊಂಡು ಇದರ ಬಗ್ಗೆ ಇಡೀ ರಾತ್ರಿ, ಮಾರನೇ ದಿನ ಬೆಳಗ್ಗೆ ಮತ್ತು ಮರುದಿನವಿಡೀ ಯೋಚಿಸಬಹುದು ಹಾಗೂ ಅದೆಲ್ಲವೂ ನಿನಗೆ ಸುಮ್ಮನೇ ತೊಂದರೆಯನ್ನುಂಟುಮಾಡಬಹುದು.
ನಾನು ಹೇಳುತ್ತಿರುವುದೇನೆಂದರೆ, ಅವರೇನೇ ಮಾಡಿರಲಿ, ಅದು ಅಲ್ಲಿರಲಿ. ನೀನು ನಿನ್ನ ಕಣ್ಣುಗಳನ್ನು ಮುಚ್ಚಿದಾಗ, ನೀನು ನಿನ್ನ ಸ್ಥಾನದಲ್ಲಿರು. ಹೊರ ಪ್ರಪಂಚವು ನಿನಗೆ ತೊಂದರೆಯನ್ನುಂಟುಮಾಡಲು ಬಿಡಬೇಡ. ಅದು ಕಷ್ಟ, ನನಗೆ ಗೊತ್ತು, ಅದು ಅಷ್ಟೊಂದು ಸುಲಭವಲ್ಲ. ಆದರೆ ನಾವು ಮುಂದುವರಿಯಬೇಕಾಗಿರುವುದು ಆ ದಿಕ್ಕಿನಲ್ಲಿ.
ಎರಡು ಪ್ರಪಂಚಗಳಿವೆ ಮತ್ತು ಸತ್ಯವಿರುವುದು ಎರಡು ಪ್ರಪಂಚಗಳ ನಡುವೆ. ಒಂದು ಮನೋರಾಜ್ಯ ಎಂದು ಕರೆಯಲ್ಪಡುತ್ತದೆ - ಒಬ್ಬನ ಸ್ವಂತ ಮನಸ್ಸಿನಲ್ಲಿರುವ ರಾಜ್ಯ. ಇನ್ನೊಂದು ಸಮಾಜ  - ಹೊರ ಪ್ರಪಂಚದ ಪರಿಸರ. ಸಮಾಜ ಮತ್ತು ಮನೋರಾಜ್ಯದ ನಡುವೆ ಸತ್ಯವಿದೆ.
 
ಪ್ರಶ್ನೆ: ಗುರುದೇವ, ನಾವು ಧ್ಯಾನಕ್ಕೆ ಕುಳಿತಾಗ, ಕೆಲವು ಯೋಚನೆಗಳು ಮೋಡಗಳಂತೆ ಹಾಗೆಯೇ ಹಾದುಹೋಗುತ್ತವೆ, ಆದರೆ ಇತರ ಕೆಲವು ಯೋಚನೆಗಳಿರುತ್ತವೆ, ಅವುಗಳು ನಾವೊಂದು ದೀರ್ಘ ಪಯಣವನ್ನು ಕೈಗೊಳ್ಳುವಂತೆ ಮಾಡುತ್ತವೆ. ನಾನೊಂದು ಪಯಣದಲ್ಲಿರುವೆನೆಂಬುದು ನನಗೆ ಅಚಾನಕ್ಕಾಗಿ ತಿಳಿದು ಬಂತು. ಆ ದೀರ್ಘ ಪಯಣಕ್ಕೆ ನಮ್ಮನ್ನು ಕಳುಹಿಸುವಂತಹ ಯಾಂತ್ರಿಕ ವ್ಯವಸ್ಥೆ ಯಾವುದು ಮತ್ತು ಅವುಗಳೆಲ್ಲಾ ಯಾಕೆ ಮೋಡಗಳಂತೆ ಹಾದು ಹೋಗುವುದಿಲ್ಲ?
ಶ್ರೀ ಶ್ರೀ ರವಿ ಶಂಕರ್:
ಅವುಗಳಿರುವುದೇ ಹಾಗೆ. ಕೆಲವು ಯೋಚನೆಗಳು ಈ ರೀತಿ ಇರುತ್ತವೆ, ಕೆಲವು ಆ ರೀತಿ ಇರುತ್ತವೆ. ಕೆಲವು ನಿಮಗೆ ತೊಂದರೆಯನ್ನುಂಟುಮಾಡುತ್ತವೆ, ಕೆಲವು ಮಾಡುವುದಿಲ್ಲ. ಅದಕ್ಕಾಗಿಯೇ ನಿಮ್ಮ ಮನಸ್ಸನ್ನು ಕೇಂದ್ರಕ್ಕೆ ತರಲು ಹಲವಾರು ಉಪಾಯಗಳು ಮತ್ತು ಹಲವಾರು ಮಾರ್ಗಗಳಿರುವುದು.
ನೋಡಿ, ಇತ್ತೀಚೆಗಿನ ಪೂಜೆಗಳಲ್ಲಿ, ಅವರು ಯಾಕೆ ಅಷ್ಟೊಂದು ಸಂಗೀತ ಉಪಕರಣಗಳನ್ನು ಉಪಯೋಗಿಸಿದರು? ತಾಳಗಳಿಂದ ಒಂದು ದೊಡ್ಡ ಸದ್ದು ಮಾಡಲಾಯಿತು, ನಾದಸ್ವರವನ್ನು ನುಡಿಸಲಾಯಿತು, ಮಂತ್ರೋಚ್ಛಾರಣೆಯು ನಡೆಯುತ್ತಿತ್ತು. ಮನಸ್ಸು ಒಳಗಡೆ ಯೋಚಿಸುವುದನ್ನು ನಿಲ್ಲಿಸುವುದಕ್ಕಾಗಿ ಹೊರಗಡೆ ಬಹಳಷ್ಟು ಸದ್ದನ್ನು ಮಾಡಲಾಯಿತು. ಹೀಗೆ ಹಲವಾರು ಮಾರ್ಗಗಳಿವೆ. ನಾವು ಮನಸ್ಸನ್ನು ಕೇಂದ್ರಕ್ಕೆ ತರಬೇಕಾದುದು ಕೆಲವು ಕುಶಲತೆಗಳನ್ನು ಉಪಯೋಗಿಸುವುದರ ಮೂಲಕ.
ನಾವು ಇದರ ಬಗ್ಗೆ ದೂರಲು ಸಾಧ್ಯವಿಲ್ಲ, ಯಾಕೆಂದರೆ ಮನಸ್ಸು ಇರುವುದೇ ಹಾಗೆ. ಕೆಲವೊಮ್ಮೆ ಅದು ಸಂಪೂರ್ಣವಾಗಿ ಕ್ಷುಲ್ಲಕವಾದ ಹಾಗೂ ಮೂರ್ಖ ವಿಷಯಗಳಿಗೆ ಜೋತು ಬೀಳುತ್ತದೆ ಮತ್ತು ಅದು ಇರುವುದೇ ಹಾಗೆ. ಅದಕ್ಕಾಗಿಯೇ ಕೆಲವೊಮ್ಮೆ ಮನಸ್ಸಿನ ಆಳವನ್ನರಿಯಲಾಗುವುದಿಲ್ಲ.
ಭಗವದ್ಗೀತೆಯಲ್ಲಿ ಅರ್ಜುನನು ಕೃಷ್ಣ ಪರಮಾತ್ಮನಲ್ಲಿ ಹೇಳುತ್ತಾನೆ, "ಈ ಮನಸ್ಸು ಒಂದು ರಾಕ್ಷಸನಂತೆ. ನನಗದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದು ನಾನು ಹೇಳುವುದನ್ನು ಕೇಳುವುದಿಲ್ಲ."
ಕೃಷ್ಣ ಪರಮಾತ್ಮನು ಅವನಲ್ಲಿ ಅನ್ನುತ್ತಾನೆ, "ಖಂಡಿತಾ, ನಾನು ನೀನು ಹೇಳುವುದನ್ನು ಒಪ್ಪುತ್ತೇನೆ."
ಆದರೆ ಒಂದು ಮಾರ್ಗವಿದೆಯೆಂದು ಕೊನೆಯಲ್ಲಿ ಅವನು ಹೇಳುತ್ತಾನೆ.
 
ಪ್ರಶ್ನೆ: ಪ್ರೀತಿಯ ಗುರುದೇವ, ನಿಮ್ಮ ಆಶೀರ್ವಾದಗಳನ್ನು ಪಡೆದುಕೊಳ್ಳಲಿರುವ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾನೇನು ಮಾಡಬೇಕು? ನಾನು ನನ್ನ ಲೋಟವನ್ನು ದೊಡ್ಡದಾಗಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್:
ಉನ್ನತ ಶಿಬಿರದಲ್ಲಿ ನೀವೆಲ್ಲರೂ ಷಟ್ ಸಂಪತ್ತಿಯ ಬಗ್ಗೆ ಕೇಳಿರುವಿರಿ (ಆರು ಸಂಪತ್ತುಗಳು ಅಥವಾ ಆರು ಗುಣಗಳು)
ಸಮ (ಮನಸ್ಸಿನ ಶಾಂತಿ)
ದಮ (ಸ್ವ-ನಿಯಾಂತ್ರಣ ಅಥವಾ ಇಂದ್ರಿಯಗಳ ಸಂಯಮ)
ಉಪರತಿ (ಪೂರ್ಣ ಸಂತೃಪ್ತಿ)
ತಿತಿಕ್ಷ (ಸಹಿಷ್ಣುತೆ)
ಶ್ರದ್ಧೆ
ಸಮಾಧಾನ
ನಿಮ್ಮ ಜೀವನದಲ್ಲಿ ನೀವು ಗಮನ ಕೊಡಬೇಕಾಗಿರುವುದು, ಇದನ್ನು ಹೆಚ್ಚಿಸುವುದರ ಕಡೆಗೆ. ಈ ಗುಣಗಳನ್ನು ವರ್ಧಿಸುವುದರಿಂದ, ಆಶೀರ್ವಾದಗಳನ್ನು ಪಡೆಯಲಿರುವ ನಿಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ.
ಜ್ಞಾನದ ನಾಲ್ಕು ಕಂಬಗಳಲ್ಲಿ, ಮೂರನೆಯದು ಈ ಆರು ಸಂಪತ್ತುಗಳನ್ನು ಹೊಂದಿದೆ. ಅದನ್ನೇ ನಾವು ಹೆಚ್ಚಿಸಿಕೊಳ್ಳಬೇಕಾಗಿರುವುದು.
ಹಾಗೆಯೇ ನಾವು ಸೇವೆ ಮತ್ತು ಸಾಧನೆಗಳನ್ನು (ಆಧ್ಯಾತ್ಮಿಕ ಅಭ್ಯಾಸಗಳು) ಮಾಡಬೇಕು.
 
ಪ್ರಶ್ನೆ: ಗುರುದೇವ, ನಮ್ಮ ಧರ್ಮಗ್ರಂಥಗಳು ನಮ್ಮನ್ನು, "ನನಗೇನು ಸಿಗುತ್ತದೆ" ಎಂಬ ರೀತಿಯ ಯೋಚನೆಗಳಿಂದಾಚೆಗೆ ಕರೆದೊಯ್ಯಬೇಕೆಂದು ಭಾವಿಸಲಾಗಿದೆ. ಹಾಗಾದರೆ, ಪ್ರತಿಯೊಂದು ಧರ್ಮಗ್ರಂಥದಲ್ಲೂ ಕೂಡಾ ಫಲಶ್ರುತಿ (ಧರ್ಮಗ್ರಂಥದ ಲಾಭ) ಯ ಬಗ್ಗೆ ಯಾಕೆ ಅಷ್ಟೊಂದು ವಿವರವಾಗಿ ಸ್ಪಷ್ಟೀಕರಿಸಲಾಗಿದೆ?
ಶ್ರೀ ಶ್ರೀ ರವಿ ಶಂಕರ್:
ಅದನ್ನು ಮಾಡುವಂತೆ ನಿಮಗೆ ಆಸೆ ಬರಿಸುವುದಕ್ಕಾಗಿ ನೀಡುವುದಕ್ಕಾಗಿ ಮಾತ್ರ! (ನಗು) ಅದೊಂದು ಮಾರಾಟದ ಕಾರ್ಯತಂತ್ರ.
ನಿಮಗೆ ಗೊತ್ತಾ, "ಯಾವುದೇ ಲಾಭ ದೊರಕದಿದ್ದಲ್ಲಿ ಯಾರೂ ಏನನ್ನೂ ಮಾಡುವುದಿಲ್ಲ" ಎಂಬ ಒಂದು ಮಾತಿದೆ. ತನಗೆ ಅದರಿಂದ ಏನಾದರೂ ಸಿಗಬಹುದು ಎಂದು ಯೋಚಿಸದಿದ್ದಲ್ಲಿ ಒಬ್ಬ ಮಂದ ವ್ಯಕ್ತಿಯು ಏನನ್ನೂ ಮಾಡನು. ಪ್ರಾಚೀನ ಕಾಲದ ಋಷಿಗಳಿಗೆ ಇದು ತಿಳಿದಿತ್ತು ಮತ್ತು ಅದಕ್ಕಾಗಿಯೇ ಅವರು, ಇದನ್ನು ಮಾಡುವುದರಿಂದ ನಿಮಗೆ ಇಂತಿಂಥ ಲಾಭಗಳು ದೊರೆಯುವುವು ಎಂಬುದನ್ನು ನಿಮಗೆ ಹೇಳಲಿಕ್ಕಾಗಿ ಫಲಶ್ರುತಿಯನ್ನು ಸೇರಿಸಿದರು. ಅದಕ್ಕಾಗಿಯೇ ಅದು ಅಪರ ಎಂದು ಕರೆಯಲ್ಪಡುತ್ತದೆ.
ಅಪರ ವಿದ್ಯೆ ಎಂದರೆ, ಯಾವುದರಲ್ಲಿ ನೀವು ಯಾವತ್ತೂ ಅಭ್ಯಾಸದೊಂದಿಗೆ ಕೆಲವು ಲಾಭಗಳನ್ನು ಜೋಡಿಸುವಿರೋ ಅದು. ಅದಕ್ಕಿಂತ ಸೂಕ್ಷ್ಮವಾದುದೆಂದರೆ ಪರಾ-ಪರ, ಮತ್ತು ಕೊನೆಯಲ್ಲಿ ಪರ ವಿದ್ಯೆ  ಎಂದಿದೆ, ಅಲ್ಲಿ ಇದು ಯಾವುದೂ ಗಣನೆಗೇ ಇಲ್ಲ . ಪರಾ ವಿದ್ಯೆಯನ್ನು ಪಡೆಯಲು ಯಾವುದೇ ಮಾರ್ಗವಿಲ್ಲ.
 
ಪ್ರಶ್ನೆ: ಗುರುದೇವ, ನವರಾತ್ರಿಯು ರಜಸ್ಸು ಮತ್ತು ತಮಸ್ಸುಗಳ ಮೇಲೆ ಸತ್ವದ ವಿಜಯ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಜೀವನವು ಅಸ್ತಿತ್ವದಲ್ಲಿರಲು ಎಲ್ಲಾ ಮೂರು ಗುಣಗಳೂ ಸಮಾನವಾಗಿ ಮುಖ್ಯವಲ್ಲವೇ? ಒಂದಕ್ಕಿಂತ ಇನ್ನೊಂದರ ಮೇಲೆ ನಾವು ಹೆಚ್ಚು ಒಲವನ್ನು ತೋರಿಸಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್:
ಇಲ್ಲ, ಅದು ಯಾವತ್ತೂ ಹಾಗೆಯೇ. ಮೂರರಲ್ಲಿ ಒಂದು ಅಧಿಕಾರ ನಡೆಸುತ್ತದೆ.
ಎಲ್ಲರಲ್ಲೂ ಸತ್ವವು ಯಾವತ್ತೂ ಇರುತ್ತದೆ. ಹಾಗೆಯೇ ರಜೋ ಗುಣ ಮತ್ತು ತಮೋ ಗುಣಗಳೂ ಇರುತ್ತವೆ. ಎಲ್ಲಾ ಮೂರು ಗುಣಗಳೂ ಯಾವತ್ತೂ ಜೊತೆಯಲ್ಲಿ ಇರುತ್ತವೆ. ಆದರೆ  ಯಾವುದು ಅಧಿಕಾರ ನಡೆಸುತ್ತದೆ ಎಂಬುದು, ಆ ಸಮಯದ ಗುಣವನ್ನು ನಿರ್ಧರಿಸುತ್ತದೆ.
ತಮೋಗುಣವು ಆಳುತ್ತಿದ್ದರೆ, ಅಲ್ಲಿ ದುಃಖವಿರುತ್ತದೆ.
ರಜೋಗುಣವು ಆಳುವಾಗ, ಅಲ್ಲಿ ಸಂಘರ್ಷವಿರುತ್ತದೆ.
ಸದ್ಗುಣವು ಆಳುವಾಗ, ಅಲ್ಲಿ ಅರಿವು, ಜ್ಞಾನ ಮತ್ತು ಸಂತೋಷವಿರುತ್ತವೆ.
ಯಾವುದು ಆಳುತ್ತಿದೆಯೆಂಬುದನ್ನು ನೀವು ಗಮನಿಸಬೇಕು, ಯಾಕೆಂದರೆ ಅದುವೇ ಆ ಸಮಯಕ್ಕೆ ಗುಣಮಟ್ಟವನ್ನು ನೀಡುವುದು.
 
ಪ್ರಶ್ನೆ: ಪ್ರೀತಿಯ ಗುರುದೇವ, ನಮ್ಮ ವಿಧಿಯನ್ನು ಕೂಡಾ ಒಳಗೊಂಡಂತೆ ನಾವು ಹಲವಾರು ಸಂಗತಿಗಳನ್ನು ಬದಲಾಯಿಸಬಹುದೆಂದು ನಿನ್ನೆ ನೀವು ನಮಗೆ ಹೇಳಿದ್ದಿರಿ. ನನ್ನ ಜೀವನದಲ್ಲಿ ಏನನ್ನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಬದಲಾಯಿಸಲು ನಾನು ನನಗೆ ಸಾಧ್ಯವಿರುವಷ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ, ನನ್ನ ವಿಧಿಯಲ್ಲೇನಿದೆಯೋ ಅದರ ಮೂಲಕವೇ ನಾನು ಹಾದುಹೋಗುತ್ತಿರುವೆನು ಎಂದು ನನಗನ್ನಿಸುತ್ತದೆ. ಯಾಕೆ?
ಶ್ರೀ ಶ್ರೀ ರವಿ ಶಂಕರ್:
ನೋಡು, ಜೀವನವೆಂಬುದು ಹಿತ ಮತ್ತು ಅಹಿತಗಳ ಒಂದು ಮಿಶ್ರಣವಾಗಿದೆ. ನಿನ್ನ ಜೀವನದಲ್ಲಾದ ಒಳ್ಳೆಯ ವಿಷಯಗಳ ಮೇಲೆ ಹೆಚ್ಚು ಗಮನವನ್ನು ಹಾಕು. ಆಗ ಅದು ಬೆಳೆಯುತ್ತದೆ.
ನೀವು ಜ್ಞಾನದಲ್ಲಿರುವಾಗ ಕೂಡಾ ವಿಧಿಯು ಬದಲಾಗುತ್ತದೆ.

ಬುಧವಾರ, ಅಕ್ಟೋಬರ್ 24, 2012

ಮನಸ್ಸಿಗೆ ಮಹತ್ವವಿದೆ


೨೪ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ

ನಿಮಗೆ ಗೊತ್ತಾ, ಎಷ್ಟೇ ಬೆಲೆ ತೆತ್ತಾದರೂ ನೀವು ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು.
ಏನಾಗುತ್ತದೆಯೆಂದರೆ, ನೀವೊಂದು ಸಂತೋಷದ ಮನೋಸ್ಥಿತಿಯಲ್ಲಿರುತ್ತೀರಿ, ಒಂದು ಆನಂದದ ಮನೋಸ್ಥಿತಿಯಲ್ಲಿರುತ್ತೀರಿ ಮತ್ತು ಒಬ್ಬರು ಬಂದು, ನಿಮಗಿಷ್ಟವಿಲ್ಲದಿರುವ ಏನನ್ನೋ ನಿಮ್ಮ ಕಿವಿಗಳಲ್ಲಿ ಹೇಳುತ್ತಾರೆ.
ಅವರನ್ನುತ್ತಾರೆ, "ಇಂತಿಂಥವರು ನಿನ್ನ ಬಗ್ಗೆ ಹೀಗೆ ಹೇಳಿದರು", ಮತ್ತು "ನೀನೇನು ಮಾಡುತ್ತಿರುವೆ? ಇದು ಒಳ್ಳೆಯದಲ್ಲ" ಎಂದು ಹೇಳುತ್ತಾ ಅವರು ನಿಮ್ಮನ್ನು ಸೂಕ್ಷ್ಮವಾಗಿ ಟೀಕಿಸುತ್ತಾರೆ. ಕೂಡಲೇ ನಿಮ್ಮ ಮನಸ್ಸಿಡೀ ತಿರುಗಲು ಶುರುವಾಗುತ್ತದೆ ಮತ್ತು ನಿಮಗೆ ಹಿತವಾಗುವುದಿಲ್ಲ. ನಿಮಗೆ ಬಹಳ ಅಹಿತವಾಗಲು ತೊಡಗುತ್ತದೆ.
ಹಾಗಾದರೆ ಇದೆಲ್ಲಾ ಆಗುವುದು ಹೇಗೆ? ಯಾರೋ ಒಬ್ಬರು ಸ್ವಲ್ಪ ನಕಾರಾತ್ಮಕತೆಯನ್ನು ಹಾಕುತ್ತಾರೆ. ಇದು ಸರ್ವೇಸಾಮಾನ್ಯ. ನಿಮ್ಮ ದೈನಂದಿನ ಬದುಕಿನಲ್ಲಿ ನಿಮಗೆ, ಜನರು ಬಂದು ನಿಮ್ಮ ಮನಸ್ಸನ್ನು, ನಿಮ್ಮ ಛಲವನ್ನು ಅಲ್ಲಾಡಿಸುವ ಸ್ವಲ್ಪ ನಕಾರಾತ್ಮಕತೆಯನ್ನು ಹಾಕುವುದು ಕಂಡುಬರುತ್ತದೆ. ಹೀಗಾಗಲು ಬಿಡಬೇಡಿ.
ಜನರು ಸ್ವಲ್ಪ ನಕಾರಾತ್ಮಕತೆಯನ್ನು ಹಾಕುವುದು ಸ್ವಾಭಾವಿಕ ಮತ್ತು ಸಾಮಾನ್ಯ. ಆದರೆ ನೀವು ಒಳಗಡೆ ಆಳವಾದ ಸಂಪರ್ಕದಲ್ಲಿರುವಾಗ, ನಿಮ್ಮಲ್ಲಿ ಆ ಅಂತಃಸ್ಫುರಣೆ ಇರುವಾಗ, ನೀವು ಕೇವಲ ಮುಗುಳ್ನಗೆಯೊಂದಿಗೆ ಅವುಗಳೆಲ್ಲದರ ಮೂಲಕ ಹಾದುಹೋಗುವಿರಿ. ನೀವು ನಿಮ್ಮ ಕಿವಿಗಳೊಳಗೆ ಒಂದು ಶೋಧಕ(ಫಿಲ್ಟರ್)ವನ್ನು ಹಾಕಿಕೊಳ್ಳುವಿರಿ.
ನಿಮಗೆ ಗೊತ್ತಾ, ಪ್ರಪಂಚವಿರುವುದೇ ಹಾಗೆ. ಅಲ್ಲಿ ಕೆಲವು ಹಿತಕರ ಹಾಗೂ ಕೆಲವು ಅಹಿತಕರ ಸಂಗತಿಗಳಿರುತ್ತವೆ ಎಂಬುದು ನಿಮಗೆ ಗೊತ್ತಿದೆ. ಅವುಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಮತ್ತು ನಮ್ಮ ಗುರಿಯತ್ತ ಸಾಗುತ್ತೇವೆ, ಇದು ಬಹಳ ಮುಖ್ಯವಾದುದು.
ಈ ಒಂಭತ್ತು ದಿನಗಳಲ್ಲಿ ನಾವು ಮಾಡಿದ ಎಲ್ಲಾ ಸಾಧನೆ ಮತ್ತು ಯಜ್ಞಗಳು ಹಾಗೂ ಈ ಎಲ್ಲಾ ಆಚರಣೆಗಳು, ಉತ್ಸಾಹ ಮತ್ತು ಶಕ್ತಿಗಳ ನಿಮ್ಮ ಮೂಲ ಹಂತಕ್ಕೆ ತಿರುಗಿ ಬರಲು ನಿಮಗೆ ಸಹಾಯ ಮಾಡುತ್ತವೆ.  
ಆದುದರಿಂದ, ನಿಮ್ಮ ಹೃದಯವನ್ನು ಬಲವಾಗಿರಿಸಿ ಮತ್ತು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಿ, ಹಾಗೂ ಜೀವನದ ಗಾಡಿಯು ಬಹಳ ಸರಾಗವಾಗಿ ಓಡುತ್ತದೆ. ಚಿಕ್ಕ ವಿಷಯಗಳನ್ನು ಬಿಡಿ ಮತ್ತು ದೊಡ್ಡದನ್ನು ಯೋಚಿಸಿ. ನಾವು ಸಮಾಜಕ್ಕಾಗಿ, ದೇಶಕ್ಕಾಗಿ, ಪ್ರಪಂಚಕ್ಕಾಗಿ ಏನು ಮಾಡಬಹುದು ಎಂದು ಯೋಚಿಸಿ. ಈ ರೀತಿಯಲ್ಲಿ, ಜೀವನದಲ್ಲಿ ನಿಮಗೊಂದು ದೊಡ್ಡ ಗುರಿಯಿರಬೇಕು.
ಜನರು ಸಾಧಾರಣವಾಗಿ ಚಿಕ್ಕ ಪುಟ್ಟ ವಿಷಯಗಳನ್ನು ಕೇಳುತ್ತಾರೆ. ಜನರನ್ನುತ್ತಾರೆ, "ಗುರುದೇವ, ನಮಗೊಂದು ಕಾರನ್ನು ಕಳುಹಿಸಿ, ನಮಗೆ ಟ್ಯಾಕ್ಸಿ ಸಿಗುತ್ತಿಲ್ಲ." ಅವರು ಇಂತಹ ಚಿಕ್ಕ ವಿಷಯಗಳನ್ನು ಕೇಳುತ್ತಿರುತ್ತಾರೆ. ಅದು ಕೂಡಾ ಪರವಾಗಿಲ್ಲ. ಅಂತಹ ವಿಷಯಗಳನ್ನು ಕೇಳಿಕೊಳ್ಳುವುದರಿಂದ ಯಾವುದೇ ಹಾನಿಯಿಲ್ಲ, ಆದರೆ ಏನಾದರೂ ದೊಡ್ಡದರ ಬಗ್ಗೆ ಯೋಚಿಸಿ. ಅದಕ್ಕಾಗಿಯೇ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸಾವಿರಾರು ವರ್ಷಗಳಿಂದ ಜನರು ಹೇಳುತ್ತಿದ್ದಾರೆ, ’ಸುಖೀ ಬಸೆ ಸಂಸಾರ್ ಸಬ್ ದುಃಖಿಯಾ ರಹೆ ನ ಕೋಯೆ’, (ಎಲ್ಲರೂ ಸಂತೋಷವಾಗಿರಲಿ, ಯಾರೂ ದುಃಖಿತರಾಗಿರುವುದು ಬೇಡ).
ನಾವು ಕೂಡಾ ಪ್ರಾರ್ಥಿಸುವಾಗ ಅದನ್ನೇ ಹೇಳುತ್ತೇವೆ, ’ಲೋಕಾ: ಸಮಸ್ತಾ: ಸುಖಿನೋ ಭವಂತು’, (ಸಂಪೂರ್ಣ ಲೋಕವು ಸಂತೋಷವಾಗಿರಲಿ). ಕೇವಲ ಈ ಲೋಕ ಮಾತ್ರವಲ್ಲ, ಆದರೆ ಸೂಕ್ಷ್ಮ ಲೋಕಗಳಲ್ಲಿ ವಾಸಿಸುವವರು ಕೂಡಾ, ನಮ್ಮ ಪೂರ್ವಜರು ಕೂಡಾ ಸಂತೋಷವಾಗಿರಲಿ. ಇದನ್ನೇ ನಾವು ಆಶಿಸುವುದು.
ಮುಖ್ಯವಾದುದೇನೆಂದರೆ ನೀವು ತೃಪ್ತರಾಗಿರಬೇಕು. ಸಮಯದಿಂದ ಸಮಯಕ್ಕೆ ನೀವು ನಿಮ್ಮ ಮೌಲ್ಯಮಾಪನ ಮಾಡುತ್ತಿರಬೇಕು. ನಿಮ್ಮನ್ನೇ ಕೇಳಿಕೊಳ್ಳಿ, ನಾನೇನು ಮಾಡುತ್ತಿರುವೆನೋ ಅದರಿಂದ ಇತರರಿಗೆ ಲಾಭವಾಗುತ್ತಿದೆಯೇ ಇಲ್ಲವೇ ಎಂದು. ಒಂದು ವಿಷಯವು ಅಲ್ಪಾವಧಿಗೆ ನೋವನ್ನು ತಂದರೂ, ದೀರ್ಘಾವಧಿಗೆ ಅದು ಎಲ್ಲರಿಗೂ ಲಾಭದಾಯಕವಾಗಿದ್ದರೆ, ಆಗ ಅದು ಮಾಡಬಹುದಾದ ಸರಿಯಾದ ವಿಷಯ. ಇದೊಂದು ಪರೀಕ್ಷೆ.
ಯಾವುದೇ ಕೆಲಸವನ್ನು ಮಾಡುವ ಮೊದಲು, ನೀವು ನಿಮ್ಮಲ್ಲೇ ಕೇಳಿಕೊಳ್ಳಬೇಕು, "ನಾನು ಕೇವಲ ಚಿಕ್ಕ ವಿಷಯಗಳ ಮೇಲೆ ಗಮನ ಹರಿಸುತ್ತಿರುವೆನೇ ಅಥವಾ ನಾನು ಒಂದು ವಿಶಾಲ ದೃಷ್ಟಿಕೋನದಿಂದ ಯೋಚಿಸುತ್ತಿರುವೆನೇ?" ಇದು ಆವಶ್ಯಕವಾಗಿದೆ.
ಆದುದರಿಂದ, ನಿಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುವುದು ಅಗತ್ಯ. ನಮ್ಮ ನಿರ್ಧಾರಗಳು ತಪ್ಪಾಗುವುದು ದೃಷ್ಟಿಕೋನವು ಸಂಕುಚಿತವಾಗಿರುವಾಗ. ಆದರೆ ನಮ್ಮಲ್ಲಿ ವಿಶಾಲ ದೃಷ್ಟಿಕೋನವಿರುವಾಗ, ದೀರ್ಘಾವಧಿಯ ಕಲ್ಪನೆಯಿರುವಾಗ, ನಮ್ಮೊಳಗೆ ಒಂದು ಅಂತರ್ಬೋಧೆಯ ಜಾಗೃತಿ ಬೆಳೆಯಲು ಪ್ರಾರಂಭವಾಗುತ್ತದೆ.
ಇವತ್ತು ವಿಜಯದ ದಿನ; ಕೆಟ್ಟದರ ಮೇಲೆ ಒಳ್ಳೆಯದರ ವಿಜಯ. ಹೊಸದಾಗಿ ಯೋಚಿಸುವುದನ್ನು ಪ್ರಾರಂಭಿಸಲು ಇದೊಂದು ಒಳ್ಳೆಯ ದಿನ. ನಿಮ್ಮನ್ನೇ ಕೇಳಿಕೊಳ್ಳಿ, "ಸರಿ, ನಾನೀಗ ಏನು ಮಾಡಲು ಬಯಸುತ್ತೇನೆ?"
ನಿಮಗಾಗಿ ಒಂದು ಗುರಿಯನ್ನಿಟ್ಟುಕೊಳ್ಳಿ ಮತ್ತು ಪ್ರಪಂಚಕ್ಕಾಗಿ ಒಂದು ಗುರಿಯನ್ನಿಟ್ಟುಕೊಳ್ಳಿ. ಅವೆರಡೂ ಒಂದೇ ಆದರೆ, ಆಗ ಅದು ಶ್ರೇಷ್ಠ. ಅದು ಒಂದೇ ಆಗಿಲ್ಲದಿದ್ದರೆ, ಆಗಲೂ ಅದು ಪರವಾಗಿಲ್ಲ. ನಿಮ್ಮಲ್ಲಿ ಎರಡೂ ಇರಬಹುದು, ಆದರೆ ಅವುಗಳು ಪರಸ್ಪರ ವಿರೋಧಾತ್ಮಕವಾಗಿಲ್ಲ ಎಂಬುದನ್ನು ನೋಡಿಕೊಳ್ಳಿ.
ಮೊದಲನೆಯದಾಗಿ ಸಮಾಜಕ್ಕಾಗಿ, ಲೋಕಕ್ಕಾಗಿ, ಜನರಿಗಾಗಿ ಒಂದು ಕನಸು ಮತ್ತು ನಂತರ ನಿಮ್ಮ ಬಯಕೆಗಳು, ನಿಮ್ಮ ಇಚ್ಛೆಗಳು ಏನಿವೆಯೋ ಅವುಗಳು ಖಂಡಿತವಾಗಿ ನೆರವೇರುತ್ತವೆ. ಅದು ಈಗಾಗಲೇ ಆಗುತ್ತಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ, ನೀವೇನು ಕೇಳುವಿರೋ ಅದು ನಿಮಗೆ ಸಿಗುವ ಅನುಭವವಾಗಿದೆ? (ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಒಬ್ಬ ಸಾಧಕನಿಗೆ (ಅನ್ವೇಷಕ) ಅದು ಹೀಗೆಯೇ. ’ಪ್ರತ್ಯವಯೋ ನ ವಿದ್ಯತೆ’ ಎಂದು ಹೇಳಲಾಗಿದೆ. ಒಮ್ಮೆ ನಿಮಗೆ ದಾರಿಯು ಸಿಕ್ಕಿದರೆ, ಆಗ ಅದರ ಮೇಲೆ ಯಾವ ತಡೆಗಳೂ ಇರುವುದಿಲ್ಲ. ನಂತರ, ನೀವು ಯಾವ ಸಂಕಲ್ಪವನ್ನು ತೆಗೆದುಕೊಂಡರೂ, ನೀವು ಏನನ್ನೇ ಯೋಚಿಸಿದರೂ, ಅದು ಪ್ರಯತ್ನವಿಲ್ಲದೆಯೇ ಆಗಲು ತೊಡಗುತ್ತದೆ.
ಕಳೆದ ತಿಂಗಳು, ಅಶ್ವಿನ್ (ಅಶ್ವಯುಜ) ಮಾಸವು ಬಹಳ ಮುಖ್ಯವಾದ ಮಾಸವಾಗಿದೆ. ಯಾಕೆ? ಯಾಕೆಂದರೆ ಹದಿನೈದು ದಿನಗಳು, ಅಗಲಿ ಹೋದ ನಮ್ಮ ಪೂರ್ವಜರ ಸ್ಮರಣೆಗಾಗಿ ಮೀಸಲಾಗಿದ್ದವು ಮತ್ತು ಉಳಿದ ಹದಿನೈದು ದಿನಗಳು ದೇವರನ್ನು ಆರಾಧಿಸುವುದರಲ್ಲಿ ಮತ್ತು ಅವರೊಂದಿಗೆ ಸಂಭಾಷಿಸುವುದರಲ್ಲಿ ಕಳೆಯಲಾಗುತ್ತದೆ. ಅದಕ್ಕಾಗಿಯೇ ಇದೊಂದು ಬಹಳ ಮುಖ್ಯವಾದ ಮಾಸ, ಮತ್ತು ಹುಣ್ಣಿಮೆಯ ರಾತ್ರಿಯವರೆಗೆ ಉತ್ಸವಗಳು ಮುಂದುವರಿಯುವುವು.
ಆದರೆ ನಮಗೆ, ಪ್ರತಿದಿನವೂ ಒಂದು ಆಚರಣೆ, ಅಲ್ಲವೇ? ಎಲ್ಲೆಡೆಯೂ ಆಚರಣೆಯಿದೆ. ಹಾಗಿದ್ದರೂ, ಈ ತಿಂಗಳು ಸ್ವಲ್ಪ ವಿಶೇಷವಾಗಿದೆ.

ಪ್ರಶ್ನೆ: ಗುರುದೇವ, ಈ ಲೋಕದಲ್ಲಿ, ಮಹಾತ್ಮರು ಮತ್ತು ರಾಕ್ಷಸರು ಇಬ್ಬರೂ ಇದ್ದಾರೆ. ಮಹಾತ್ಮರನ್ನು ಅನುಸರಿಸುವವರು ಸಾತ್ವಿಕರಾಗುತ್ತಾರೆ. ಆಗ ರಾಕ್ಷಸರು ಸಾತ್ವಿಕರನ್ನು ದಮನ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಸಮಯಗಳಲ್ಲಿ ಏನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯ ಜನರು ಒಗ್ಗಟ್ಟಿನಿಂದಿರುವುದು ಅಗತ್ಯವಾಗಿದೆ. ಸಮಾಜವು ಕೆಟ್ಟಿರುವುದು ಕೆಲವು ಕೆಟ್ಟ ಜನರಿಂದಾಗಿಯಲ್ಲ, ಆದರೆ ಒಳ್ಳೆಯವರ ಮೌನದಿಂದಾಗಿ. ಒಳ್ಳೆಯ ಉದ್ದೇಶವನ್ನು ಹೊಂದಿದವರು ಮೌನವಾಗಿರುತ್ತಾರೆ ಮತ್ತು ಮತದಾನ ಮಾಡಲೂ ಹೋಗುವುದಿಲ್ಲ. ಅವರು ಯೋಚಿಸುತ್ತಾರೆ, ’ನಾವು ಯಾಕೆ ಕಾಳಜಿ ವಹಿಸಬೇಕು, ಹೇಗಿದ್ದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಕೆಲಸವನ್ನು ಮಾಡೋಣ ಮತ್ತು ಸಂತೋಷವಾಗಿರೋಣ’. ಇಂತಹ ಉದಾಸೀನ ಭಾವನೆಗಳೊಂದಿಗೆ ಅವರು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ, ನೀವು ಕ್ರಿಯಾತ್ಮಕರಾಗಬೇಕು. ಜಡತ್ವವನ್ನು ಒಂದು ಒಳ್ಳೆಯ ಗುಣವಾಗಿ ಪರಿಗಣಿಸಬಾರದು. ಒಬ್ಬ ವ್ಯಕ್ತಿಯು ನಿಷ್ಕ್ರಿಯನಾಗಿ ಉಳಿದರೆ, ಮತ್ತು ಏನನ್ನೂ ಮಾಡದೇ, ನಂತರ "ನಾನೊಬ್ಬ ಒಳ್ಳೆಯ ವ್ಯಕ್ತಿ" ಎಂದು ಹೇಳಿದರೆ, ಆ ಒಳ್ಳೆಯತನ ಯಾವುದಕ್ಕೂ ಉಪಯೋಗವಿಲ್ಲ. ನೀವು ಒಳ್ಳೆಯವರಾಗಿದ್ದರೆ ಮತ್ತು ಸಹಾನುಭೂತಿ ಹೊಂದಿದವರಾಗಿದ್ದರೆ, ಸ್ವಲ್ಪ ಕೆಲಸವನ್ನು ಕೂಡಾ ಮಾಡಿ. ಅಲ್ಲವೇ? ಯಾವುದನ್ನು ನಿಮಗೆ ಸರಿಪಡಿಸಲು ಸಾಧ್ಯವಿದೆಯೋ, ಅದನ್ನು ನೀವು ಸರಿಪಡಿಸಬೇಕು. ಯಾವುದನ್ನು ನಿಮಗೆ ಸರಿಪಡಿಸಲು ಸಾಧ್ಯವಿಲ್ಲವೋ, ಯಾವುದು ನಿಮ್ಮ ಸಾಮರ್ಥ್ಯವನ್ನು ಮೀರಿದುದೋ, ಅದಕ್ಕೆ ಪ್ರಾರ್ಥನೆಯು ಅತ್ಯುತ್ತಮವಾದ ಆಯ್ಕೆಯಾಗಿದೆ.
ಅದಕ್ಕಾಗಿಯೇ ನಾಲ್ಕು ಸಂಗತಿಗಳು ಜೀವನದಲ್ಲಿ ಬಹಳ ಮುಖ್ಯವಾದವು: ಭಕ್ತಿ, ಮುಕ್ತಿ, ಶಕ್ತಿ ಮತ್ತು ಯುಕ್ತಿ.
ಯುಕ್ತಿಯೊಂದಿಗೆ ನೀವು ನಿಮ್ಮ ಕೆಲಸವನ್ನು ಸಾಧಿಸಬಹುದು. ಜೀವನದಲ್ಲಿ ಶಕ್ತಿ ಕೂಡಾ ಬೇಕು. ಆದರೆ ಕೇವಲ ಯುಕ್ತಿ ಮತ್ತು ಶಕ್ತಿಗಳು ಕೆಲಸ ಮಾಡವು. ಅವುಗಳೊಂದಿಗೆ ನಿಮಗೆ ಭಕ್ತಿ ಮತ್ತು ಮುಕ್ತಿ ಕೂಡಾ ಬೇಕು. ನಿಮಗೆ ಗೊತ್ತಾ, ನೀವು ಒಳಗಿನಿಂದ ಒಂದು ಸ್ವಾತಂತ್ರ್ಯದ ಭಾವನೆಯನ್ನು ಅನುಭವಿಸುವಾಗ, ಅದು ನಿಮಗೆ ಎಷ್ಟೊಂದು ಬಲವನ್ನು ತರುವುದೆಂದರೆ, ನೀವು ಯಾವುದೇ ಕೆಲಸವನ್ನು ಮಾಡಲು ಬಯಸಿದರೂ ಅದು ಅನಾಯಾಸವಾಗಿ ನೆರವೇರುತ್ತದೆ.
ಒಳ್ಳೆಯ ಜನರು, ತಾವು ಬಲಹೀನರು ಎಂದು ಯಾವತ್ತೂ ಯೋಚಿಸಬಾರದು. ನೀವು ಎಲ್ಲಿ ಬಲಹೀನರಾಗಿರುವಿರಿ? ನಿಮ್ಮಲ್ಲಿ ಅಷ್ಟೊಂದು ಅಗಾಧವಾದ ಶಕ್ತಿಯಿದೆ, ನೀವದನ್ನು ಗುರುತಿಸಬೇಕು. ಮೊನ್ನೆ ಏನಾಯಿತೆಂಬುದು ನಿಮಗೆ ನೆನಪಿದೆಯಾ? ಇಲ್ಲಿಗೆ (ಯಜ್ಞಶಾಲೆ) ಬಂದಾಗ ಆನೆಗೆ ಯಾಕೆ ಅಷ್ಟೊಂದು ಭಯವಾಯಿತು ಎಂಬುದು ನಿಮಗೆ ಗೊತ್ತಾ?
(ಚಂಡಿ ಹೋಮದಲ್ಲಿ ಭಾಗವಹಿಸಲು ಕರೆತರಲಾದ ಆಶ್ರಮದ ಆನೆಯಾದ ಇಂದ್ರಾಣಿಯ ಬಗ್ಗೆ)
ಅವಳು ಭಯಗೊಂಡಳು, ಯಾಕೆಂದರೆ ಅವಳು ತನ್ನನ್ನು ತಾನೇ ಪರದೆಯ ಮೇಲೆ ನೋಡಿದಳು (ಕಾರ್ಯಕ್ರಮವನ್ನು ಸಭಿಕರೆಲ್ಲರಿಗೂ ಕಾಣಿಸುವುದಕ್ಕಾಗಿ ದೊಡ್ಡ ಪರದೆಯ ಮೇಲೆ ಬಿತ್ತರಿಸಲಾಗುತ್ತಿತ್ತು)  ಮತ್ತು ಅಲ್ಲಿ ಇನ್ನೊಂದು ಆನೆ ನಿಂತಿದೆಯೆಂದು ಯೋಚಿಸಿದಳು. ಅದು ತನ್ನದೇ ಪ್ರತಿಬಿಂಬವೆಂಬುದು ಅವಳಿಗೆ ಅರ್ಥವಾಗಲಿಲ್ಲ. ಆದುದರಿಂದ ನಾವು ಆ ಪರದೆಯನ್ನು ಆರಿಸಬೇಕಾಯಿತು. ಇದುವೇ ನಮ್ಮೊಂದಿಗೆ ಆಗುತ್ತಿದೆ. ನಾವು ನಮ್ಮ ಗುರುತನ್ನು ಕಳೆದುಕೊಂಡಿದ್ದೇವೆ ಮತ್ತು ನಾವು ಯಾರೆಂಬುದು ನಮಗೆ ತಿಳಿಯದು. ಒಮ್ಮೆ ನಾವಿದನ್ನು ತಿಳಿದುಕೊಂಡರೆ, ಜೀವನದಲ್ಲಿ ಯಾವುದೇ ದುಃಖವಿರುವುದಿಲ್ಲ.

ಪ್ರಶ್ನೆ: ಗುರುದೇವ, ದಯವಿಟ್ಟು ನಮಗೆ ೧೨ ಜ್ಯೋತಿರ್ಲಿಂಗಗಳ ಮಹತ್ವವನ್ನು ತಿಳಿಸಿ.  
ಶ್ರೀ ಶ್ರೀ ರವಿ ಶಂಕರ್: ನೋಡು, ಜ್ಯೋತಿ ನಿನ್ನೊಳಗಿದೆ ಮತ್ತು ಎಲ್ಲಿ ಜ್ಯೋತಿಯಿರುವುದೋ ಅಲ್ಲಿ ಶಿವನಿರುತ್ತಾನೆ.  
ಜ್ಯೋತಿರ್ಲಿಂಗವು ನಿಮ್ಮೊಳಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳು ನಮ್ಮ ಶರೀರದಲ್ಲಿಯೇ ಇವೆ. ನಮ್ಮ ಶರೀರದಲ್ಲಿ ಹನ್ನೆರಡು ಸ್ಥಾನಗಳಿವೆ.
ಈಗ, ಹಿಂದಿನ ದಿನಗಳಲ್ಲಿ, ಜನರು ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣಿಸಲೆಂದು, ಹನ್ನೆರಡು ಜ್ಯೋತಿರ್ಲಿಂಗಗಳನ್ನು ಕೇದಾರನಾಥ ಮತ್ತು ರಾಮೇಶ್ವರಂನ ನಡುವೆ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಯಿತು. ಇದು, ಭಾರತವನ್ನು ಒಂದು ಏಕೀಕೃತ ರಾಷ್ಟ್ರವನ್ನಾಗಿ ಮಾಡಲು ನಮ್ಮ ಪೂರ್ವಜರಿಂದ ಮಾಡಲ್ಪಟ್ಟ ಒಂದು ಉಪಾಯವಾಗಿತ್ತು. ಭಾರತವನ್ನು ಏಕೀಕೃತಗೊಳಿಸಲು ಬೇರೆ ಯಾವುದೇ ಮಾರ್ಗವಿರಲಿಲ್ಲ. ಬೇರೆ ಯಾವ ರೀತಿಯಲ್ಲಿ ನಿಮಗೆ ಭಾರತವನ್ನು ಏಕೀಕೃತಗೊಳಿಸಲು ಸಾಧ್ಯ? ಪ್ರತಿಯೊಂದು ಸ್ಥಳದಲ್ಲಿ ಒಂದು ಬೇರೆಯ ಭಾಷೆಯಿದೆ. ತಮಿಳುನಾಡು ಮತ್ತು ಉತ್ತರಪ್ರದೇಶಗಳ ನಡುವಿನ ಸಂಬಂಧವೇನು? ಅವುಗಳು, ಬೇರೆ ಬೇರೆ ಸಂಸ್ಕೃತಿಗಳು, ಸಂಪ್ರದಾಯಗಳು, ಆಹಾರ, ವೇಷಭೂಷಣಗಳನ್ನು ಹೊಂದಿದ ಎರಡು ಬೇರೆ ಬೇರೆ ದೇಶಗಳಂತೆ. ಎಲ್ಲವೂ ಬೇರೆ ಬೇರೆ.
ಆದುದರಿಂದ, ಜನರಲ್ಲಿ ರಾಮೇಶ್ವರಂನ್ನು ಸಂದರ್ಶಿಸಲು ಹೇಳಲಾಯಿತು, ಮತ್ತು ನಂತರ ಅಲ್ಲಿಂದ ಕಾಶಿಗೆ ತೀರ್ಥಯಾತ್ರೆ ಹೋಗಿ ಪವಿತ್ರ ಗಂಗೆಯಲ್ಲಿ ಮೀಯಲು ಅವರಲ್ಲಿ ಹೇಳಲಾಯಿತು.  ಅದರ ನಂತರ, ಗಂಗೆಯ ಪವಿತ್ರ ನೀರನ್ನು ಕಾಶಿಯಿಂದ ರಾಮೇಶ್ವರಂಗೆ ತಮ್ಮೊಂದಿಗೆ ಹಿಂದಕ್ಕೆ ತಂದು ಅದನ್ನು ಅಲ್ಲಿಯ ಜ್ಯೋತಿರ್ಲಿಂಗಕ್ಕೆ ಅರ್ಪಿಸಲು ಅವರಲ್ಲಿ ಹೇಳಲಾಯಿತು. ಅವರದನ್ನು ಒಂದು ಪದ್ಧತಿಯನ್ನಾಗಿ ಮಾಡಿದರು ಮತ್ತು ಹೀಗೆಯೇ ಭಾರತದ ಎಲ್ಲಾ ಭಾಗಗಳ ಜನರು ಒಗ್ಗಟ್ಟಾದುದು. ಇಲ್ಲದಿದ್ದರೆ ಅದು ಯುರೋಪಿನಂತೆ ಇಪ್ಪತ್ತನಾಲ್ಕು ದೇಶಗಳಾಗಿ ವಿಂಗಡಿಸಲ್ಪಟ್ಟಿರುತ್ತಿತ್ತು.
ಭಾರತದ ವಿವಿಧ ಭಾಗಗಳನ್ನು ಒಗ್ಗಟ್ಟಾಗಿಸುವ ಈ ಬಹಳ ಮುಖ್ಯವಾದ ಕೆಲಸವನ್ನು ನಮ್ಮ ಪೂರ್ವಜರು ಸಾಧಿಸಿದ್ದಾರೆ. ಅದಕ್ಕಾಗಿಯೇ, ಗಂಗಾನದಿಯಿಂದ ನೀವು ನೀರನ್ನು ತಂದು ಅದನ್ನು ರಾಮೇಶ್ವರಂನಲ್ಲಿ ಅರ್ಪಿಸಬೇಕೆಂದು ಹೇಳಿರುವುದು.

ಪ್ರಶ್ನೆ: ಗುರುದೇವ, ಜ್ಞಾನವನ್ನು ಆಲಿಸುವಾಗ ಕೆಲವೊಮ್ಮೆ ನಮ್ಮ ಮನಸ್ಸು, "ಓ, ಇದನ್ನು ನಾನು ಈಗಾಗಲೇ ಕೇಳಿದ್ದೇನೆ" ಎಂದು ಯೋಚಿಸುತ್ತದೆ. ಜ್ಞಾನವನ್ನು ಪುನಃ ಪಡೆಯಲು ನಾವು ಯಾವತ್ತೂ ಆ ಅಚ್ಚರಿಯ ಮತ್ತು ತೆರೆದ ಮನಸ್ಸಿನ ಒಂದು ಸ್ಥಿತಿಗೆ ಹೋಗುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ನೀನಿದನ್ನು ಕೇಳಿರುವೆಯೆಂದು ನಿನಗನ್ನಿಸಿದರೆ, ಆಗ ಅದು ಈಗಾಗಲೇ ಚೈತನ್ಯದಲ್ಲಿ, ಆತ್ಮದಲ್ಲಿ ಇದೆ. ಅದು ಒಳ್ಳೆಯದು. ಗುರುತಿಸುವುದು, ಹೀರಿಕೊಳ್ಳುವುದು ಮತ್ತು ನಂತರ ಅದರ ಒಂದು ಭಾಗವಾಗುವುದು - ಈ ಮೂರು ಹಂತಗಳು ಸ್ವಾಭಾವಿಕವಾಗಿ ಆಗುತ್ತವೆ.

ಪ್ರಶ್ನೆ: ಗುರುದೇವ, ದುರ್ಗಾ ದೇವಿಯ ವಿವಿಧ ಶಸ್ತ್ರಾಸ್ತ್ರಗಳ ಮಹತ್ವದ ಬಗ್ಗೆ ದಯವಿಟ್ಟು ನಮಗೆ ತಿಳಿಸಿ.
ಶ್ರೀ ಶ್ರೀ ರವಿ ಶಂಕರ್: ನಾನು ನಿಮಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ಆ ದಿನಗಳಲ್ಲಿ ಅವರಲ್ಲಿ ಬಂದೂಕುಗಳಿರಲಿಲ್ಲ. ಆ ದಿನಗಳಲ್ಲಿ, ಅವರಲ್ಲಿ ಕೇವಲ ತ್ರಿಶೂಲವಿತ್ತು. ಆ ದಿನಗಳಲ್ಲಿ ಬಂದೂಕುಗಳಿರುತ್ತಿದ್ದರೆ, ಆಗ ಬಹುಶಃ ದುರ್ಗಾ ಮಾತೆಯ ಕೈಗಳಲ್ಲಿ ಎ.ಕೆ.-೪೭ ಇರುತ್ತಿತ್ತು.
ದೇವತೆಗಳು ದೇವಿ ಮಾತೆಯಲ್ಲಿ, "ದೇವಿ, ನೀನು ಯಾಕೆ ಈ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವೆ? ನಿನ್ನ ಒಂದು ಶಬ್ದದಿಂದ ಎಲ್ಲಾ ರಾಕ್ಷಸರನ್ನು ಸುಟ್ಟು ಬೂದಿ ಮಾಡಲು ನಿನಗೆ ಸಾಧ್ಯವಿದೆ" ಎಂದು ಹೇಳಿದರೆಂದು ಹೇಳಲಾಗುತ್ತದೆ. ದೇವತೆಗಳು ನಂತರ ತಾವೇ ಹೀಗೆಂದು ಉತ್ತರವನ್ನು ನೀಡಿದರು, "ನೀನು ಎಷ್ಟೊಂದು ಕರುಣಾಮಯಿಯಾಗಿರುವೆಯೆಂದರೆ, ರಾಕ್ಷಸರನ್ನು ಕೂಡಾ ನೀನು ನಿನ್ನ ಶಸ್ತ್ರಾಸ್ತ್ರಗಳಿಂದ ಪವಿತ್ರಗೊಳಿಸಲು ಬಯಸುವೆ. ನೀನು ಅವರನ್ನು ಮುಕ್ತಗೊಳಿಸಲು ಬಯಸುವೆ ಮತ್ತು ಅದಕ್ಕಾಗಿಯೇ ನೀನಿದನ್ನು ಮಾಡುತ್ತಿರುವೆ." ಇದರ ಹಿಂದಿರುವ ಸಂದೇಶವೆಂದರೆ, ಕಾರ್ಯಕ್ಕೆ ಅದರದ್ದೇ ಆದ ಬೆಲೆಯಿದೆ ಎಂದು ಹೇಳುವುದು. ಸಂಕಲ್ಪ ಇರುವುದು ಮಾತ್ರ ಸಾಕಾಗುವುದಿಲ್ಲ. ನೋಡಿ, ನಾವು ಕೆಲಸ ಮಾಡಲು ಸಾಧ್ಯವಾಗಲೆಂದು ದೇವರು ನಮಗೆ ಕೈಗಳನ್ನು ಮತ್ತು ಕಾಲುಗಳನ್ನು ಕೊಟ್ಟಿದ್ದಾರೆ.
ಈಗ, ದೇವಿ ಮಾತೆಗೆ ಅಷ್ಟೊಂದು ಕೈಗಳು ಯಾಕಿವೆ? ಅದು, ದೇವರು ಕೂಡಾ ಕೆಲಸ ಮಾಡುತ್ತಾರೆ, ಮತ್ತು ಕೇವಲ ಒಂದು ಕೈಯ ಮೂಲಕವಲ್ಲ, ಬದಲಾಗಿ ಸಾವಿರಾರು ಕೈಗಳ ಮೂಲಕ ಹಾಗೂ ಸಾವಿರಾರು ರೀತಿಗಳಲ್ಲಿ ಎಂಬುದನ್ನು ಸೂಚಿಸಲು.
ರಾಕ್ಷಸರನ್ನು ನಾಶಮಾಡಲು ದೇವಿಯ ಬಳಿ ಸಾವಿರ ದಾರಿಗಳಿವೆ. ಆಕೆಯು ದುಷ್ಟರನ್ನು ಒಂದು ಹೂವಿನ ಮೂಲಕ ಕೂಡಾ ಓಡಿಸಬಲ್ಲಳು; ಗಾಂಧಿಗಿರಿಯಂತೆ. ದೇವಿಯು ತನ್ನ ಕೈಯಲ್ಲಿ ಒಂದು ಹೂವನ್ನು ಹಿಡಿದುಕೊಂಡಿರುವುದು ಅದಕ್ಕಾಗಿಯೇ; ವಿಷಯಗಳನ್ನು ಒಂದು ಹೂವಿನ ಮೂಲಕ ಇತ್ಯರ್ಥಗೊಳಿಸಲು. ನಂತರ ಶಂಖವನ್ನು ಊದುವುದರ ಮೂಲಕ ಮತ್ತು ಜ್ಞಾನವನ್ನು ನೀಡುವುದರ ಮೂಲಕ. ಅದು ಕೂಡಾ ಕೆಲಸ ಮಾಡದಿದ್ದರೆ, ಆಗ ಅವಳು ಸುದರ್ಶನ ಚಕ್ರವನ್ನು ಉಪಯೋಗಿಸುತ್ತಾಳೆ.
ಹೀಗೆ, ಅವಳಲ್ಲಿ ಒಂದಕ್ಕಿಂತ ಹೆಚ್ಚು ಉಪಾಯಗಳಿವೆ. ಇದು, ಈ ಪ್ರಪಂಚದಲ್ಲಿ ಬದಲಾವಣೆಗಳನ್ನು ತರಲು ಕೇವಲ ಒಂದು ಉಪಾಯವು ಕೆಲಸ ಮಾಡಲಾರದು ಎಂಬುದನ್ನು ಸೂಚಿಸಲು. ನೀವು ಹಲವಾರು ಮಾರ್ಗಗಳನ್ನು ಕಂಡುಹಿಡಿಯಬೇಕಾಗುತ್ತದೆ.
ಇದೇ ರೀತಿ ನಮ್ಮ ಸಂಬಂಧಗಳು ಕೂಡಾ. ನಾವು ಎಲ್ಲಾ ಸಂದರ್ಭಗಳಲ್ಲೂ ಕಠಿಣವಾಗಿರಲು ಸಾಧ್ಯವಿಲ್ಲ. ನೀವು ಎಲ್ಲಾ ಸಮಯದಲ್ಲೂ ನಿಮ್ಮ ತಂದೆಯೊಂದಿಗೆ ಹಠದಿಂದಿದ್ದರೆ ಮತ್ತು ಎಲ್ಲಾ ವಿಷಯಗಳೂ ಸರಿಯಾಗಬೇಕೆಂದು ಇಚ್ಛಿಸಿದರೆ, ಆಗ ಅದು ಆಗುವುದಿಲ್ಲ. ಕೆಲವೊಮ್ಮೆ ಪ್ರೀತಿ, ಕೆಲವೊಮ್ಮೆ ಹಠಮಾಡುವುದು ಮತ್ತು ಕೆಲವೊಮ್ಮೆ ಕೋಪ ಕೆಲಸ ಮಾಡುತ್ತದೆ.
ಅದೇ ರೀತಿ ಮಕ್ಕಳೊಂದಿಗೆ ಕೂಡಾ. ತಮ್ಮ ಮಕ್ಕಳನ್ನು ಬೆಳೆಸಲು ಹೆತ್ತವರು ಎಲ್ಲಾ ವಿವಿಧ ರೀತಿಯ ಉಪಾಯಗಳನ್ನು ಮತ್ತು ವರ್ತನೆಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂದು ನೋಡಿ. ಪ್ರತಿಸಲವೂ ಕೋಲನ್ನು ಉಪಯೋಗಿಸುವುದು ಕೆಲಸ ಮಾಡುವುದಿಲ್ಲ. ಕೆಲವೊಮ್ಮೆ ಅವರು ಪ್ರೀತಿಯ ಮೂಲಕ ಕೂಡಾ ತಮ್ಮ ಕೆಲಸವನ್ನು ಸಾಧಿಸಬೇಕು.
ಆದುದರಿಂದ, ಹೇಳಿರುವುದು ಇದನ್ನು. ಒಂದು ಸಮಸ್ಯೆಗೆ ಹಲವಾರು ಪರಿಹಾರಗಳಿರುತ್ತವೆ ಮತ್ತು ಅದಕ್ಕಾಗಿಯೇ ದೇವಿಯು ಹಲವಾರು ಶಸ್ತ್ರಾಸ್ತ್ರಗಳಿಂದ ಸಿಂಗರಿಸಲ್ಪಟ್ಟಿರುವುದು.

ಪ್ರಶ್ನೆ: ಗುರುದೇವ, ದೇವಿಮಾತೆಯ ಚಿನ್ನಮಸ್ತ ರೂಪದ ಬಗೆಗಿನ ಮಹತ್ವದ ಬಗ್ಗೆ ದಯವಿಟ್ಟು ನಮಗೆ ತಿಳಿಸಿ. 
ಶ್ರೀ ಶ್ರೀ ರವಿ ಶಂಕರ್: ದೇವಿ ಮಾತೆಯು ತನ್ನದೇ, ಕತ್ತರಿಸಿದ ತಲೆಯನ್ನು ಹಿಡಿದುಕೊಂಡಿರುವುದನ್ನು ನೀವು ನೋಡಿರಬಹುದು ಮತ್ತು ನಿಮಗೆ ಭಯವಾಗಿದ್ದಿರಬಹುದು. ಈ ಚಿತ್ರಣದ ಅರ್ಥವೇನೆಂಬುದು ನಿಮಗೆ ಗೊತ್ತಾ?
ಬೆಳಗ್ಗಿನಿಂದ ರಾತ್ರಿಯ ವರೆಗೆ ನಾವು ನಮ್ಮ ತಲೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ತಲೆಯಿಲ್ಲದಿರುವಾಗ ಅಲ್ಲಿ ಯಾವುದೇ ಚಿಂತೆಗಳಿರುವುದಿಲ್ಲ, ಸಮಸ್ಯೆಗಳಿರುವುದಿಲ್ಲ ಮತ್ತು ಜಗಳಗಳಿರುವುದಿಲ್ಲ. ಆಗ ಕೆಲಸ ಮಾಡುವುದು ಕೇವಲ ಹೃದಯ ಮತ್ತು ಈ ಹೃದಯದಿಂದ ಪ್ರೀತಿಯ, ಸಂತೋಷದ, ಆನಂದದ ಹಾಗೂ ಸರಳತೆಯ ಕಾರಂಜಿಗಳು ಚಿಮ್ಮುತ್ತವೆ.
ಎಲ್ಲಾ ಭೇದಗಳು ಏಳುವುದು ತಲೆಯಲ್ಲಿ, ಹೃದಯದಿಂದಲ್ಲ. ಜಾತಿ, ಮತ, ಅಂತಸ್ತು ಮೊದಲಾದವುಗಳ ಭೇದಗಳು ಎಲ್ಲವೂ ಬರುವುದು ತಲೆಯಿಂದ. ದುರಹಂಕಾರ ಶುರುವಾಗುವುದು ತಲೆಯಲ್ಲಿ, ತಪ್ಪು ಕಾರ್ಯಗಳು ಪ್ರಾರಂಭವಾಗುವುದು ತಲೆಯಲ್ಲಿ, ಹಿಂಸೆ ಕೂಡಾ ಪ್ರಾರಂಭವಾಗುವುದು ತಲೆಯಲ್ಲಿ. ಯಾರೊಬ್ಬರೂ ಯಾವತ್ತೂ ಹೃದಯದಿಂದ ಹಿಂಸೆ ಮಾಡುವವರಾಗಿಲ್ಲ. ಅದೆಲ್ಲವೂ ಬರುವುದು ತಲೆಯಿಂದ.
ಚಿನ್ನಮಸ್ತ ಅಂದರೆ, ದೇವಿಯು ಶರೀರದಿಂದ ತಲೆಯನ್ನು ಕತ್ತರಿಸಿದ್ದಾಳೆ ಎಂದು ಅರ್ಥ. ತಲೆಯನ್ನು ತೆಗೆದಾಗ, ಶುದ್ಧವಾದ ಪ್ರಜ್ಞೆಯಲ್ಲಿ ಉಳಿಯುವುದೇನೆಂದರೆ, ಅದು ಹೃದಯ. ಕೇವಲ ಹೃದಯ ಮಾತ್ರ ಉಳಿದಾಗ, ಪ್ರೀತಿ, ಸಹಾನುಭೂತಿ ಮತ್ತು ಸಂತೋಷಗಳು ಜೀವನದಲ್ಲಿ ಅರಳುತ್ತವೆ. ದುಷ್ಟತೆಯು ನಾಶವಾಗುತ್ತದೆ. ಇದು ಚಿನ್ನಮಸ್ತದ ಹಿಂದಿರುವ ಸಂಕೇತ.
ಈ ಎಲ್ಲಾ ಚಿತ್ರಣಗಳು ಸಾಂಕೇತಿಕವಾದುದು. ಈ ಚಿತ್ರಣಗಳ ಹಿಂದೆ ರಹಸ್ಯಗಳು ಅಡಗಿವೆ. ಅಂತಹ ರಹಸ್ಯಗಳನ್ನು ಅನ್ವೇಷಿಸಬೇಕು.

ಮಂಗಳವಾರ, ಅಕ್ಟೋಬರ್ 23, 2012

ಅಂತರಾಳದ ಅಗ್ನಿ


23 ಅಕ್ಟೋಬರ್ 2012
ಬೆಂಗಳೂರು, ಭಾರತ


(ವಿಶ್ವದಾದ್ಯಂತದ ಭಕ್ತರೆಲ್ಲರೂ ತಮ್ಮ ತಮ್ಮ ರಾಷ್ಟ್ರಭಾಷೆಗಳಲ್ಲಿ ಗೀತೆ ಹಾಗೂ ಭಜನೆಗಳನ್ನು ಹಾಡುವುದರೊಂದಿಗೆ
ಸತ್ಸಂಗವು ಆರಂಭವಾಯಿತು. ಪ್ರಪಂಚದ ಅನೇಕ ದೇಶಗಳ ಹಾಗೂ ಭಾರತದ ಎಲ್ಲ ಭಾಗಗಳ ಜನರು ಸಂಗೀತದ ಮೂಲಕ
ಇತರರೊಂದಿಗೆ ಒಂದುಗೂಡಿದರು.)
ಇದೇ ನವರಾತ್ರಿಯ ನಿಜವಾದ ಅರ್ಥ - ಇಡೀ ವಿಶ್ವವನ್ನು ಒಂದುಗೂಡಿಸುವುದು. ಪುರಾತನ ಕಾಲದಲ್ಲಿಯೂ ಕೂಡ
ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ಬೇರೆ ಬೇರೆ ವೇದದಲ್ಲಿ, ಜ್ಞಾನದ ಒಂದೊಂದು ವಿಭಾಗದಲ್ಲಿ ಪರಿಣತಿಯನ್ನು
ಹೊಂದುತ್ತಿದ್ದರು. ನವರಾತ್ರಿಯಲ್ಲಿ ಎಲ್ಲರೂ ಒಂದೆಡೆ ಸೇರಿ ತಮ್ಮ ತಮ್ಮ ಪ್ರಾಂತ್ಯದ ಜ್ಞಾನ, ಸಂಗೀತ, ನೃತ್ಯ, ಸಂಸ್ಕøತಿ -
ಹೀಗೆ ಎಲ್ಲವನ್ನೂ ಒಂದೆಡೆ ಮೇಳೈಸುತ್ತಿದ್ದರು.
ನೀವು ನೋಡಿರಬಹುದು, ನೆನ್ನೆ ನಾವು ಕೊಳಲು, ತಬಲ, ಮೃದಂಗ ಹಾಗೂ ಸಂಗೀತವನ್ನು ಹಮ್ಮಿಕೊಂಡಿದ್ದೆವು.
ಬ್ರಹ್ಮಾಂಡದಲ್ಲಿರುವ ವೈವಿಧ್ಯತೆಯು 'ಒಂದು ಆತ್ಮ'; 'ಒಂದು ಪ್ರಜ್ಞೆ', ಒಂದೇ ದೈವತ್ವವೆಂಬ ಜ್ಞಾನದಲ್ಲಿ ಅಡಕವಾಗಿದೆ.
ನೀವು ದೇವರ ಬಗ್ಗೆ ಭಯ ಪಡಬೇಕಾಗಿಲ್ಲ ಏಕೆಂದರೆ ಅದು ನಿಮ್ಮನ್ನು ಪಾಲಿಸುವ, ಪ್ರೀತಿಸುವ, ಮುದ್ದಿಸುವ, ಉದ್ಧಾರ
ಮಾಡುವ ಒಂದು ತಾಯಿಯ ಹಾಗೆ. ಮಾತೃತ್ವದ ಎಲ್ಲ ಗುಣಗಳೂ ದೇವರಲ್ಲಿವೆ. ಸಾಮಾನ್ಯವಾಗಿ ನಾವು ಹೇಳುತ್ತೇವೆ, '
ದೇವರ ಬಗ್ಗೆ ಭಯವಿರಲಿ; ದೇವರು ನಿಮ್ಮನ್ನು ಶಿಕ್ಷಿಸುತ್ತಾನೆ' ಎಂದು, ಇಲ್ಲ! ಇದು ತಪ್ಪು ಕಲ್ಪನೆ. ದೇವರು ಎಂದಿಗೂ
ನಿಮ್ಮನ್ನು ಶಿಕ್ಷಿಸುವುದಿಲ್ಲ, ಕೇವಲ ವಿದ್ಯೆಯನ್ನು ಬೋಧಿಸಿ ನಿಮ್ಮನ್ನು ಉದ್ಧರಿಸುತ್ತಾನೆ.
ನಾವು ಜೀವನವನ್ನು ಸಂಭ್ರಮದಿಂದ ಆಚರಿಸಬೇಕು. ನಾವು ಈಗ ತಾನೇ 'ಲಾ-ಇಲಾಹ-ಇಲ್ಲಲಾಹ್' - ಒಂದೇ ದಿವ್ಯ
ಶಕ್ತಿಯು ಎಲ್ಲೆಡೆ ಇರುವುದು ಎಂಬ ಹಾಡನ್ನು ಆಲಿಸಿದೆವು. ಆ ದಿವ್ಯ ಶಕ್ತಿಯು ಎಲ್ಲೋ ಮೇಲೆ ಸ್ವರ್ಗದಲ್ಲಿಲ್ಲ, ಅದು
ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಲ್ಲಿದೆ. ಹಾಗಾಗಿ, ಭೂಮಾತೆಯನ್ನು ಆದರಿಸಿ, ಜಲವನ್ನು
ಆದರಿಸಿ ಮತ್ತು ಬೆಂಕಿಯ ಉತ್ತಮ ಉಪಯೋಗವನ್ನು ಮಾಡಿ. ಕೇವಲ ಹೊರಗಿನ ಬೆಂಕಿ ಮಾತ್ರವಲ್ಲ; ನಿಮ್ಮ ಅಂತರಾಳದ
ಅಗ್ನಿಯನ್ನೂ ಕೂಡ.
ಎಲ್ಲರೊಳಗೂ ಒಂದು ಅಗ್ನಿ ಇದೆ, ಒಂದು ಕಿಚ್ಚು ಇರುವುದು - ಅದನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿ.
ಅಗ್ನಿಯು ನಾಶ ಮಾಡಬಲ್ಲದು ಹಾಗೂ ಸೃಷ್ಟಿಯನ್ನೂ ಸಹ ಮಾಡಬಲ್ಲದು. ಹಾಗಾಗಿ ಅಗ್ನಿಗೆ
ಸೃಜನಾತ್ಮಕವಾದುದೇನನ್ನಾದರೂ ಮಾಡಲು ಅವಕಾಶ ಕೊಡಿ. ನಿಮ್ಮೊಳಗಿರುವ ಆ ಅಗ್ನಿಗೆ ಒಂದು ದಿಕ್ಕನ್ನು ನೀಡಿ. ನೀರು
ಬಾಯಾರಿಕೆಯನ್ನು ನಿವಾರಿಸಬಹುದು ಹಾಗೆಯೇ ನಿಮ್ಮನ್ನು ಮುಳುಗಿಸಲೂಬಹುದು. ದೇವಿಯನ್ನು ನೆನೆಯಿರಿ; ದಿವ್ಯತೆಯು
ಪಂಚಭೂತಗಳಲ್ಲಿ ಹಾಗೂ ಆತ್ಮದಲ್ಲಿದೆ. ನಿಜವಾದ ಸಂಭ್ರಮಾಚರಣೆಯೆಂದರೆ ಶಾಂತವಾಗಿ ಹಾಗೂ ಅನಾಯಾಸವಾಗಿ
ಆತ್ಮದಲ್ಲಿ ಅಂತರ್ಮುಖವಾಗುವುದು.
'ಪರಮಾತ್ಮನು ನನ್ನನ್ನು ಅತ್ಯಂತ ಆತ್ಮೀಯವಾಗಿ ಪ್ರೀತಿಸುತ್ತಾನೆ' ಎಂಬ ಆತ್ಮವಿಶ್ವಾಸವನ್ನು ನಾವು ಹೊಂದಿರಬೇಕು.
ಯಾವುದೇ ಪ್ರಶ್ನೆ ಅಥವಾ ಸಂಶಯಗಳಿಲ್ಲದೆ !
ಅಲ್ಲದೇ, ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ. ಇದು ಕೂಡ ಬಹುಮುಖ್ಯ.
'ಓಹ್, ಆ ವ್ಯಕ್ತಿಯು ಹಾಡಬಲ್ಲ ಆದರೆ ನನಗೆ ಹಾಡಲು ಬರುವುದಿಲ್ಲ!'; 'ಅವರು ಎಷ್ಟು ಜಾಣರು; ನಾನು ಜಾಣನಲ್ಲ'
ಎಂದು. ಇಲ್ಲ! ನಿಮ್ಮೊಳಗೆ ನೀವು ಎಲ್ಲವನ್ನೂ ಹೊಂದಿದ್ದೀರಿ. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ವಿಷಯಗಳು
ವ್ಯಕ್ತವಾಗುವುವು, ತಾಳ್ಮೆಯನ್ನು ಹೊಂದಿ.
ಇನ್ನೊಂದು ವಿಷಯ - ನಮಗೆ ಆರ್ಶೀವಾದ ಮತ್ತು ಅನುಗ್ರಹ ಬೇಕೆಂದು ನಾವು ಬೇಡುತ್ತೇವೆ, ಅಲ್ಲವೇ? ಆರ್ಶೀವಾದವು
ಯಥೇಚ್ಛವಾಗಿದೆ ಆದರೆ ನಿಮ್ಮ ಪಾತ್ರೆಯು ಚಿಕ್ಕದಾಗಿದ್ದರೆ ಏನು ಮಾಡುವುದು?
ನೀವು ಈ ಲೋಟವನ್ನು (ಶ್ರೀ ಶ್ರೀಯವರು ಒಂದು ಲೋಟವನ್ನು ಹಿಡಿಯುತ್ತಾ) ತಂದು 'ನನಗೆ ಇದರಲ್ಲಿ ಎರಡು ಲೀಟರ್
ಹಾಲು ಕೊಡಿ' ಎಂದು ಕೇಳಿದರೆ ಈ ಸಣ್ಣ ಲೋಟದಲ್ಲಿ ಅಷ್ಟೊ೦ದು ಹಾಲು ಹೇಗೆ ಹಿಡಿಯಲು ಸಾಧ್ಯ? ಲೋಟ ಚಿಕ್ಕದು
ಆದರೆ ನೀವು ಕೇಳುತ್ತಿರುವುದು ಅದಕ್ಕಿಂತ ಎಷ್ಟೋ ಹೆಚ್ಚು. ನೀವು ಮೂರು ಲೀಟರ್ ಪ್ರಮಾಣದ ಪಾತ್ರೆಯನ್ನು ತಂದರೆ ಆಗ
ನಾವು ನಿಮಗೆ ¨ಬೇಕಾದಷ್ಟು, ಎರಡು ಅಥವಾ ಮೂರು ಲೀಟರ್ ಕೊಡಬಹುದು.
ಹಾಗಾಗಿ, ನೀವು ನೆನಪಿಡಬೇಕು, 'ನಿಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿಮಗೆ ದೊರೆಯುವುದು; ಮತ್ತು ನಿಮಗೆ ಹೆಚ್ಚು
ಬೇಕಿದ್ದಲ್ಲಿ ಪ್ರತೀಕ್ಷೆ ಮಾಡಿ, ನಿಮ್ಮ ಸಾಮಥ್ರ್ಯವನ್ನು ವಿಸ್ತರಿಸಿ. ನಮ್ಮ ಸಾಮಥ್ರ್ಯವು ಹೆಚ್ಚಿದಾಗ ಖಂಡಿತವಾಗಿಯೂ ನಮಗೆ
ಇನ್ನೂ ಹೆಚ್ಚು ದೊರೆಯುವುದು. ಜನರು ದುಃಖಿತರಾಗಿರುವುದು ಈ ಕಾರಣದಿಂದಲೇ. ಸಣ್ಣ ಲೋಟವನ್ನು ಹಿಡಿದು ಅವರು
'ಇದರಲ್ಲಿ ಒಂದು ಲೀಟರ್ ಹಾಲು ಕೊಡಿ' ಎನ್ನುತ್ತಾರೆ. ಆಗ ಆ ಲೋಟವು ತುಂಬಿ ಹರಿಯುತ್ತದೆ. ನಾವು ಇದನ್ನು
ತಿಳಿದುಕೊಳ್ಳಬೇಕು.
ನೋಡಿ, ಜೀವನದಲ್ಲಿ ನಿಮ್ಮನ್ನು ಕೆರಳಿಸುವ ಅನೇಕ ಸಂಗತಿಗಳು ಬರುತ್ತವೆ. 'ಓಹ್. ಆ ವ್ಯಕ್ತಿಯು ಸರಿ ಇಲ್ಲ; ನಾನು
ಇವರ ಜೊತೆಯಲ್ಲಿ ಇರಲಾರೆ, ಇವರು ನನಗೆ ಅವಮಾನ ಮಾಡುತ್ತಾರೆ', ಈ ರೀತಿಯ ಸಣ್ಣ ಸಂಗತಿಗಳು ಮನಸ್ಸಿನಲ್ಲಿ
ಬರುತ್ತವೆ, ಮತ್ತು ನೀವು ಧ್ಯಾನಕ್ಕೆ ಕುಳಿತಾಗ, ಇವುಗಳೆಲ್ಲ ಬಂದು ನಿಮಗೆ ತೊಡಕನ್ನುಂಟು ಮಾಡುತ್ತವೆ. ಅಲ್ಲವೇ? ಕೈ
ಎತ್ತಿ ಪ್ರಾಮಾಣಿಕವಾಗಿ ಹೇಳಿ ನೀವು ಧ್ಯಾನಕ್ಕೆ ಕುಳಿತಾಗ ನೀವು ಇವುಗಳ ಬಗ್ಗೆ ಯೋಚಿಸುವುದಿಲ್ಲವೇ - 'ಓಹ್, ನನ್ನ
ಪತಿಯು ಹೀಗೆ ಮಾಡಿದರೆ ಉತ್ತಮ, ಓಹ್, ನನ್ನ ಮಗು ನನ್ನ ಮಾತು ಕೇಳುವುದಿಲ್ಲ' ಎಂದು.
ನಿಮ್ಮ ನೆರೆಹೊರೆಯವರ, ಸ್ನೇಹಿತರ, ಪರಿಚಿತರ, ಅಪರಿಚಿತರ ಎಲ್ಲ ಸಣ್ಣ ರಗಳೆಗಳು ಬಂದು ನಿಮ್ಮೊಳಗೆ ಸಿಟ್ಟು, ರೊಚ್ಚು
ಮತ್ತು ಹತಾಶೆಯನ್ನು ತರುತ್ತವೆ. ಹಾಗಾದರೆ ಈ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವುದು? ನೀವು ಯಾವುದಾದರೂ
ಮುಖ್ಯವಾದ ಕಾರ್ಯವನ್ನು ಮಾಡುತ್ತಿದ್ದೀರಿ ಎಂದು ತಿಳಿಯಿರಿ, ಆಗ ಒಂದು ನೊಣ ಬಂದು ನಿಮ್ಮ ಮೇಲೆ ಕುಳಿತರೆ, ನೀವು
ಆ ನೊಣದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವಿರಾ? ಇಲ್ಲ, ನೀವು ಅದರ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ, ಸುಮ್ಮನೆ
ಹಗುರವಾಗಿ ಅದನ್ನು ಓಡಿಸುವಿರಿ. ಈ ಎಲ್ಲ ಸಂದರ್ಭಗಳೂ ಕೂಡ ಹಾಗೆಯೇ ಎಂದು ತಿಳಿಯಿರಿ.
ಈ ಸಣ್ಣ ಸಣ್ಣ ರಗಳೆಗಳು ನಿಮ್ಮೊಳಗೆ ಸ್ವೀಕಾರಭಾವವನ್ನು ತರಲು ಸಹಾಯ ಮಾಡುತ್ತವೆ. ರಗಳೆ ಎಂದರೆ ಸ್ವೀಕಾರ
ಮಾಡದಿರುವುದು. ಸ್ವೀಕಾರ ಮಾಡದಿರುವುದೆಂದರೆ ನಿಮ್ಮ ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಂತೆ. ಸ್ವೀಕಾರವೆಂದರೆ
ನಿಮ್ಮ ಮುಷ್ಟಿಯನ್ನು ಬಿಡಿಸಿದಂತೆ. ರಗಳೆಯು ಬಿಗಿತ. ನಿಮಗೆ ಸಿಟ್ಟು ಬಂದಾಗ ನೀವು ಬಿಗಿತವನ್ನು ಅನುಭವಿಸುವುದಿಲ್ಲವೇ?
ಸ್ವೀಕಾರವೆಂದರೆ ತೆರೆದ ಮನ, ನಮ್ಮ ಹಸ್ತಗಳು ತೆರೆದಿದ್ದಾಗ, ಆಕಾಶವೇ ಮಿತಿ; ಎಲ್ಲವೂ ನಿಮ್ಮೊಳಗೆ ಇದೆ (ತೆರೆದ
ಮುಷ್ಟಿಯನ್ನು ತೋರುತ್ತಾ). ಆದರೆ ನೀವು ಮುಷ್ಟಿಯನ್ನು ಮುಚ್ಚಿದರೆ (ಬಿಗಿದ ಮುಷ್ಟಿಯನ್ನು ತೋರುತ್ತಾ) ಆಗ ಒಳಗೆ
ಏನೂ ಇಲ್ಲ. ಹಾಗಾಗಿ, ಬಿಟ್ಟುಬಿಡುವುದು ಬಹಳ ಮುಖ್ಯ. ಈಗ ಪ್ರಶ್ನೆ ಮೂಡುವುದು, 'ನಾನು ಬಿಟ್ಟುಬಿಟ್ಟರೆ, ಕ್ರಮ
ತೆಗೆದುಕೊಳ್ಳುವುದು ಹೇಗೆ?' ಯಾರಾದರೂ ಅನ್ಯಾಯ ಮಾಡುತ್ತಿರುವಾಗ ನೀವು ಯೋಚಿಸಬಹುದು ' ಓಹ್, ಗುರುದೇವರು
ಸ್ವೀಕಾರ ಭಾವದ ಬಗ್ಗೆ ಹೇಳಿರುವರು, ಆದ್ದರಿಂದ ನಾನು ಇದನ್ನು ಸ್ವೀಕರಿಸುತ್ತೇನೆ'. ಇಲ್ಲ ! ನೋಡಿ, ಆ ಅಗ್ನಿಯು
ನಿಮ್ಮೊಳಗೆ ಇದೆ, ಅದಕ್ಕೆ ಸರಿಯಾದ ದಿಕ್ಕನ್ನು ತೋರಿ.
ಸಿಟ್ಟಿಗೆದ್ದು ಕ್ರಮ ತೆಗೆದುಕೊಳ್ಳುವುದರಿಂದ ಯಾವುದೇ ಉಪಯೋಗವಿಲ್ಲ. ಮೊದಲು ಸ್ವೀಕರಿಸಿ ಮತ್ತು ನಂತರ ಸರಿಯಾದ
ಕ್ರಮವನ್ನು ತೆಗೆದುಕೊಳ್ಳಿ. ಇದಕ್ಕೆ ಬಹಳ ಧೈರ್ಯ ಮತ್ತು ಸಹನೆ ಬೇಕು.
ಇನ್ನೊಂದು ಕಳವಳವೆಂದರೆ ಅವಮಾನಕ್ಕೊಳಗಾಗುವುದು. ನಾವು ನಿಮಗೆ ಹೇಳುತ್ತೇವೆ. ಅವಮಾನವು ತುಂಬಾ ಒಳ್ಳೆಯದು.
ಅವಮಾನವು ನಿಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ; ನಿಮ್ಮ ಪಾತ್ರೆಯನ್ನು ದೊಡ್ಡದಾಗಿಸುತ್ತದೆ. ಅವಮಾನವೇ ನಿಮ್ಮ
'ನಾನು'ತನವನ್ನು ವಿಲೀನಗೊಳಿಸುತ್ತದೆ, ನಿಮ್ಮ ಅಹಂಭಾವವನ್ನು ಹೋಗಲಾಡಿಸುತ್ತದೆ, ಮತ್ತು ನೀವು ಸಣ್ಣ ಮಗುವಿನ
ಹಾಗೆ ಆಗುವಿರಿ. ನಿಮಗೆ ಗೊತ್ತೇ, ನೀವು ಎಂದಿಗೂ ಮಗುವನ್ನು ಹೀಯಾಳಿಸಲಾರಿರಿ ಏಕೆಂದರೆ ಅದು ಟೊಳ್ಳು ಹಾಗೂ
ಖಾಲಿಯಾಗಿರುತ್ತದೆ! ಆದರೆ ನಾವು ಒಂದು ಅಸ್ತಿತ್ವವನ್ನು ಬೆಳೆಸಿಕೊಂಡಾಗ, ನಾವು ನಮ್ಮ ಬಗೆಗಿನ ಒಂದು ಕಲ್ಪನೆಯನ್ನು
ಹಿಡಿದಿಟ್ಟುಕೊಂಡಾಗ 'ಓಹ್, ಇದು ಅವಮಾನ' ಎಂದು ಭಾವಿಸುತ್ತೇವೆ. ಯಾರೋ 'ಬರಬೇಡಿ' ಅಥವಾ 'ಹೀಗೆ
ಮಾಡಬೇಡಿ' ಎಂದರೆ ಈ ಸಣ್ಣ ವಿಷಯಗಳು ನಿಮ್ಮನ್ನು ಕಾಡುತ್ತವೆ. ಆದ್ದರಿಂದಲೇ ಇದನ್ನು 'ಮಾಯೆ' ಎಂದು
ಕರೆಯುವುದು. ಏಕೆಂದರೆ ಗಮನ ನೀಡಲು ಯೋಗ್ಯವಲ್ಲದ ವಿಷಯಗಳೆಡೆಗೆ ಮನಸ್ಸು ಸೆಳೆಯಲ್ಪಡುತ್ತದೆ. ಯಾವಾಗ ನೀವು
'ಇದೂ ನನ್ನದಲ್ಲ' ಎನ್ನುವಿರೋ ಆಗ ಅದು 'ಮಹಾಮಾಯೆ', ದೈವಕ್ರೀಡೆ. ಏಕೆಂದರೆ ಆಗ ನೀವು ಅದರೊಂದಿಗೆ
ಹೋರಾಡಲು ಪ್ರಾರಂಭಿಸುವಿರಿ, ಆಗ ಈ ಹೋರಾಟ ಅದನ್ನು ಇನ್ನೂ ಹದಗೆಡಿಸುತ್ತದೆ. ನೀವು ಮದದಲ್ಲಿ ಸಿಲುಕುವಿರಿ.
ಹಾಗಾಗಿ ಅವಮಾನದಿಂದ ದೂರ ಸರಿಯಬೇಡಿ. ಅವಮಾನವಾದರೆ ಅದನ್ನು ತಪಸ್ಸಿನಂತೆ ಪರಿಗಣಿಸಿ. 'ಆಯಿತು, ಇದು
ತಪಸ್ಸು. ನಾನು ಇದನ್ನು ಸಹಿಸುತ್ತೇನೆ, ಸ್ವೀಕರಿಸುತ್ತೇನೆ'. ತಪಸ್ಸು ನಿಮ್ಮನ್ನು ಸುಂದರ ಹಾಗೂ ಪ್ರಬಲರನ್ನಾಗಿಸುತ್ತದೆ.
'ಜ್ಞಾನಿನಾಮಪಿ ಚೇತಾಂಸಿ ದೇವಿ ಭಗವತಿ ಹಿ ಸಾ, ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ'. ನಾವು ನೆನ್ನೆ
ಹಾಡಿದ ದುರ್ಗಾ ಸಪ್ತಶತಿಯಲ್ಲಿ ಹೀಗೆ ಬರೆದಿದೆ. ಮಾಯೆಯ ಶಕ್ತಿ, ಅಜ್ಞಾನದ ಶಕ್ತಿ ಎಷ್ಟು ಬಲವಾಗಿದೆಯೆಂದರೆ ಅತ್ಯಂತ
ಜ್ಞಾನಿಗಳೂ ಪಂಡಿತರೂ ಕೂಡ ಆಕೆಯ ಪ್ರಭಾವಕ್ಕೊಳಗಾಗುವರು. ಆಕೆ ಎಲ್ಲರನ್ನೂ ಆಡಿಸಬಹುದು, ಹಾಗಾಗಿ, 'ನನ್ನ
ದೇವಿಮಾತೆಯೇ, ನೀನು ನಮ್ಮನ್ನು ಮನಸ್ಸಿನ ಈ ಮಾಯೆಯ ಆಟದಲ್ಲಿ ತೂಗಿಸಿರುವೆ' ಎಂದು ಹೇಳಲಾಗಿದೆ. ನಾವು
ಪ್ರಾಮುಖ್ಯತೆಗೆ ಯೋಗ್ಯವಲ್ಲದ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತೇವೆ. ನಶ್ವರ ಹಾಗೂ ಕ್ಷಣಿಕವಾದ ವಿಷಯಗಳಿಗೆ
ನಾವು ಅತಿಯಾದ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಅವೆಲ್ಲವೂ ಬರುತ್ತವೆ ಮತ್ತು ಹೋಗುತ್ತವೆ. ಹಾಗಾಗಿಯೇ ಇದನ್ನು
ಮಹಾಮಾಯೆ ಎಂದು ಕರೆಯುವುದು.
ನೆನ್ನೆ ನಾವು ಹೇಳಿದೆವು, 'ಯಾ ದೇವಿ ಸರ್ವ¨ಭೂತೇಷು ಭ್ರಾಂತಿರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ
ನಮಃ' ಎಂದು. ಪ್ರಜ್ಞೆಯು ಮಾಯೆಂiÀi ರೂಪದಲ್ಲಿಯೂ ಇದೆ, ಕೇವಲ ಶಾಂತಿ ಹಾಗೂ ಶಕ್ತಿಯಾಗಿ ಮಾತ್ರವಲ್ಲ. ಅದು
ಹಸಿವು, ಗೊಂದಲ, ಮಾಯೆ ಹಾಗೂ ಇವೆಲ್ಲವುಗಳ ಆವಿರ್ಭಾವದ ರೂಪದಲ್ಲಿಯೂ ಇದೆ. ನೀವು ಇದನ್ನು ಗಮನಿಸಿದಾಗ
ಮನಸ್ಸಿನ ಆಟದೆಡೆಗೆ ನಸುನಗುತ್ತೀರಿ. ಆಗ ಸಣ್ಣ ಮನಸ್ಸು ಆಟಗಳಲ್ಲಿ ತೊಡಗಿದಾಗ, ನೀವು ಅದರೊಂದಿಗೆ ನಿಮ್ಮನ್ನು
ಗುರುತಿಸಿಕೊಳ್ಳುವುದಿಲ್ಲ; ನೀವು ಅದನ್ನು ಮೀರಿ ಹೋಗುವಿರಿ, ಆಗ ಅಲ್ಲಿಯೇ ನಿಮಗೆ ಚಿರಶಾಂತಿ ದೊರೆಯುವುದು. ಮನಸ್ಸು
ಪ್ರಶಾಂತವಾಗಿ ಅಟಲವಾಗಿರುತ್ತದೆ. ಈ ಸ್ಥಿತಿಯು ಜೀವನದಲ್ಲಿ ಹೊಂದಲು ಯೋಗ್ಯವಾದುದು, ಇದಕ್ಕಾಗಿಯೇ ಎಲ್ಲ
ಆಶೀರ್ವಾದ ಅಗತ್ಯ.
ಇಂದು ನಾವು ಋಷಿ ಹೋಮವನ್ನು ಆಚರಿಸಿದೆವು. ಬಹುಕಾಲದಿಂದ ಹಲವಾರು ಸಂತರು ಈ ಜ್ಞಾನವನ್ನು ಸಂರಕ್ಷಿಸಿದ್ದಾರೆ.
ಗುರುಪರಂಪರೆಯಲ್ಲಿ ಪೂಜಾ ವಿಧಾನವು ಪರಾಶರರ ವಿಷೇಷತೆಯಾಗಿತ್ತು. ಗುರುಪೂಜೆಯಲ್ಲಿ ನಾವು 'ನಾರಾಯಣಂ ಪದ್ಮಭವಂ
ವಸಿಷ್ಠ೦ ಶಕ್ತಿಂ ಚ ತತ್ಪುತ್ರ ಪರಾಶರಂ ಚ' ಎಂದು ಹಾಡುತ್ತೇವೆ. ಈ ಪರಂಪರೆಯಲ್ಲಿ ಐದನೆಯ ಋಷಿಯು ಪರಾಶರ.
ಅವರು ಪೂಜೆಗಳ ಮೂಲಕ ಭಕ್ತಿ ಹಾಗೂ ಪ್ರೀತಿಯ ಅಭಿವ್ಯಕ್ತಿಗೆ ಪ್ರಾಮುಖ್ಯತೆಯನ್ನು ನೀಡಿದರು. ಇಂದು ಆಯುಧ
ಪೂಜೆಯನ್ನೂ ಕೂಡ ಮಾಡಲಾಗುತ್ತದೆ. ನಾವು ಉಪಯೋಗಿಸುವ ಎಲ್ಲ ಉಪಕರಣಗಳನ್ನು ಆದರಿಸಲು ಇದನ್ನು
ಆಚರಿಸಲಾಗುತ್ತದೆ. ನಾಳೆ ನೀವು ನಗರಕ್ಕೆ ಹೋದಾಗ ಎಲ್ಲ ಬಸ್ಸುಗಳೂ ಕುಂಕುಮ, ಗಂಧ, ಹೂವುಗಳಿಂದ
ಅಲಂಕೃತವಾಗಿರುತ್ತವೆ. ಜನರು ತಮ್ಮ ವಾಹನಗಳಿಗೆ ಅಲಂಕಾರ ಮಾಡುತ್ತಾರೆ. ಇದರ ಅರ್ಥ, ಒಂದು ಸೂಜಿಯಿಂದ ಹಿಡಿದು
ಕಂಬದವೆರೆಗೆ ಎಲ್ಲದರಲ್ಲಿಯೂ ದಿವ್ಯತೆಯು ಒಳಹೊಕ್ಕಿದೆ ಎಂದು. ಆದ್ದರಿಂದ ಎಲ್ಲ ಉಪಕರಣಗಳ ಪೂಜೆ.
ಸೂಜಿ, ಚಾಕು, ಕತ್ತರಿ, ಸ್ಪ್ಯಾನರ್ ಮು೦ತಾದ ಸಣ್ಣ ಸಣ್ಣ ವಸ್ತುಗಳೂ ಸಹ ಸತ್ಕರಿಸಲ್ಪಡುತ್ತವೆ. ದೇವಿಯು ಎಲ್ಲ
ಉಪಕರಣಗಳಲ್ಲಿಯೂ ನೆಲೆಸಿದ್ದಾಳೆ, ಹಾಗಾಗಿ ಅವುಗಳನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಇಂದು ಜನರು
ಉಪಕರಣಗಳು, ವಾಹನಗಳು, ಬಸ್ಸು, ಕಾರು, ಎಲ್ಲವನ್ನೂ ಆದರಿಸಿ ತಮ್ಮ ಕೃತಜ್ಞತೆಯನ್ನು ತೋರುತ್ತಾರೆ. ಏಕೆಂದರೆ
ದಿವ್ಯತೆಯು ಎಲ್ಲೆಡೆಯೂ ವ್ಯಾಪಿಸಿದೆ. ಆಯುಧ ಪೂಜೆಯನ್ನು ನವರಾತ್ರಿಯ ಒಂಭತ್ತನೆಯ ದಿನದಂದು ಮಾಡುತ್ತಾರೆ. ನಾಳೆ
ವಿಜಯದಶಮಿ, ವಿಜಯದ ಸುದಿನ. ಹಾಗಾಗಿ, ಯಾವಾಗ ಮಾಯೆಯು ಮನಸ್ಸನ್ನು ಆವರಿಸುತ್ತದೆಯೋ ಆಗ ಅದು
ಮನಸ್ಸಿನ ಮಾಯೆ ಎಂದು ಅರಿವಿಗೆ ತಂದುಕೊಳ್ಳಿ. ಎಲ್ಲೆಲ್ಲೂ ಓಡಾಡಿ ಇದೆಲ್ಲವನ್ನೂ ಮಾಡುತ್ತಿರುವುದು ಮನಸ್ಸು. ಅದನ್ನು
ಬಿಟ್ಟುಬಿಡಿ.
ಇದು ನವರಾತ್ರಿಯ ಪ್ರಮುಖವಾದ ಸಂದೇಶ.

ಸೋಮವಾರ, ಅಕ್ಟೋಬರ್ 22, 2012

ನೀವು ಪ್ರಿಯರು


೨೨ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ, ಭಾರತ

ಗ ದೈವಿಕತೆಯ ಸಂದೇಶವೆಂದರೆ - ನೀವು ಭಗವಂತನಿಗೆ ಬಲು ಪ್ರಿಯರು. ಅಷ್ಟೊಂದು ಪ್ರಿಯರು ಎಂಬುದನ್ನು ನೀವು ಕೇವಲ ಗುರುತಿಸಬೇಕಾಗಿದೆ.

ನೀವು ಭಗವಂತನಿಗೆ ಎಷ್ಟೊಂದು ಪ್ರಿಯರು ಎಂಬುದನ್ನು ನಿಮಗೆ ಊಹಿಸಲು ಸಾಧ್ಯವಿಲ್ಲ. ಅಷ್ಟೊಂದು ಪ್ರೀತಿಯಿದೆ. ಒಬ್ಬ ತಾಯಿ ತನ್ನ ಮಗುವನ್ನು ಪ್ರೀತಿಸಿದಂತೆ, ಆ ಮಗು ಏನು ಮಾಡುತ್ತದೆ ಎಂಬುದನ್ನು ಪರಿಗಣಿಸದೆ ಪ್ರೀತಿಸಿದಂತೆ. ಆ ಮಗು ಹೊಲಸು ಮಾಡಬಹುದು, ಆದರೆ ತಾಯಿ ಅದರಿಂದ ಬೇಸರಗೊಳ್ಳುವುದಿಲ್ಲ. ಅವಳು ನಗುತ್ತ ಆ ಹೊಲಸನ್ನು ಶುಚಿಗೊಳಿಸಿ ಮತ್ತೆ ಆ ಮಗುವನ್ನುಪ್ರೀತಿಸಲು ಮುಂದುವರೆಯುತ್ತಾಳೆ.

ಇದೇ ರೀತಿ, ನೀವು ದೈವಿಕತೆಗೆ ಅತ್ಯಂತ ಪ್ರಿಯರು. ನಾವು ನಮ್ಮ ಮನಸ್ಸಿನಲ್ಲಿ ಇಡಬೇಕಾದದ್ದು ಇದನ್ನು.
ನಾನಿಲ್ಲಿರುವುದು ನಿಮಗಿದನ್ನು ಹೇಳುವುದಕ್ಕಾಗಿಯಷ್ಟೇ, ಮತ್ತೇನೂಅಲ್ಲ! ನೀವಿದನ್ನು ಅರ್ಥಮಾಡಿಕೊಂಡರೆ, ಮತ್ತೆ ನನ್ನ ಕೆಲಸ ಮುಗಿಯಿತು!

ನಾನು ದೈವಿಕತೆಗೆ ಅಷ್ಟೊಂದು ಪ್ರಿಯ’, ಮತ್ತುದೈವಿಕತೆಯು ಇಲ್ಲಿದೆ, ಇದೀಗ’, ಇವೆರಡು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದವು.

ನಮ್ಮಲ್ಲಿನ ನಾನು ಕರಗಿದಾಗ ಮತ್ತು ಅದು ಕೇವಲ ಶಕ್ತಿಯಾಗಿ ಉಳಿದಾಗ, ಆನಂದವು ಅಂಥ ಸಮಯದಲ್ಲಿ ಉಕ್ಕುವುದು. ಇಲ್ಲವಾದರೆ, ’ನನಗೆ ಮುಕ್ತಿ ಬೇಕಾಗಿದೆಅಥವಾನಾನಿದನ್ನು ಅನುಭವಿಸಬೇಕಾಗಿದೆಎಂದು ನೀವು ಯೋಚಿಸುತ್ತೀರಿ. ಮತ್ತೆ ಸಂಶಯವು ಆನಾನುಎಂಬುದರೊಳಗೆ ಸೇರಿಕೊಂಡಾಗ, ಅದು ಅತಿ ನಿಕೃಷ್ಟವಾದುದು.

ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು ಹೇಳಿದ್ದಾನೆ, ’ಸಂಶಯವು ಒಬ್ಬನ ಹೃದಯವನ್ನು ಸೇರಿಕೊಂಡಾಗ, ಅವನು ಸಂಪೂರ್ಣವಾಗಿ ಕಳೆದುಹೋಗಿರುತ್ತಾನೆ, ಮತ್ತು ಅವನು ಆರ್ತನಾಗಿಬಿಡುತ್ತಾನೆ’.

ಹಾಗಾಗಿ ನೀವು ದೈವಿಕತೆಗೆ ಬಹಳ ನೆಚ್ಚಿನವರು ಮತ್ತು ಬಹಳ ಪ್ರೀತಿಸಲ್ಪಟ್ಟವರು ಎಂದು ಗುರುತಿಸಿಕೊಂಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಷ್ಟೇ. ಅದನ್ನು ನಿಮ್ಮ ಮನಸ್ಸಿನಲ್ಲಿ ಮುದ್ರಿಸಿಕೊಳ್ಳಿಅದರ ಬಗ್ಗೆ ಇನ್ನೇನೂ ಸಂಶಯಗಳಿಲ್ಲ, ಅಥವಾ ಇನ್ನು ಆತ್ಮಸಂಶಯವಿಲ್ಲ.

ನಾನು ಪ್ರೀತಿಸಲ್ಪಟ್ಟಿದ್ದೇನೋ ಇಲ್ಲವೋ ಎಂಬ ಪ್ರಶ್ನೆಗಳು ಇನ್ನಿಲ್ಲ. ನೀವು ಪ್ರಶ್ನಿಸಕೂಡದು.

ಮೊದಲು ಭಗವಂತ ನಿಮಗೆ ಹೇಳುತ್ತಾನೆ, ’ನೀನು ನನಗೆ ಬಹಳ ಪ್ರಿಯ’,  ಮತ್ತೆ ಭಕ್ತ ಹೇಳುತ್ತಾನೆ, ’ಹೌದು, ನಾನೂ ನಿನ್ನನ್ನು ಪ್ರೀತಿಸುತ್ತೇನೆ!’

ಹಾಗಾಗಿ, ದೈವಿಕತೆಯು ನಿಮಗೆ ಹೇಳುತ್ತಿರುವ ಈ ಪದಗಳನ್ನು ಮೊದಲು ಕೇಳಿಕೊಳ್ಳಿ, ಭಗವಂತ ನಿಮ್ಮನ್ನು ಆಪ್ತವಾಗಿ ಪ್ರೀತಿಸುತ್ತಾನೆ ಎಂಬುದನ್ನು. ಅವನು ನಿಮ್ಮನ್ನು ಎಂದೂ ಮುಳುಗಲು ಬಿಡುವುದಿಲ್ಲ - ಇದು ಮೊದಲನೆಯದು.

ಎರಡನೆಯದು ಆ ನಂಬಿಕೆ, ನನ್ನನ್ನು ಎಂದೂ ಮುಳುಗಲು ಬಿಡುವುದಿಲ್ಲ ಎಂದು. ನಾನು ಮೂಗಿನ ತನಕ ನೀರಿನಲ್ಲಿ ಇರಬಹುದು, ಆದರೆ ಮೂಗಿನಿಂದ ಮೇಲಲ್ಲ.

ಮತ್ತೆ ಮೂರನೆಯದೆಂದರೆ ನಾವು ನಮ್ಮ ಮನಸ್ಸನ್ನು ಸಂತೋಷದಿಂದ ಮತ್ತು ತೃಪ್ತಿಯಿಂದ ಇಟ್ಟುಕೊಳ್ಳಬೇಕು. ಏನೇಬರಲಿ, ನಾವೊಂದು ತೃಪ್ತ ಮನಸ್ಸನ್ನು ಇಟ್ಟುಕೊಳ್ಳಬೇಕು.

ಒಂದು ಅತೃಪ್ತ ಮತ್ತು ಗೊಣಗಾಡುತ್ತಿರುವ ಮನಸ್ಸು, ತನಗೆ ಈ ಗ್ರಹದ ಮೇಲಿರುವುದೆಲ್ಲ ದೊರೆತರೂ, ಆಗಲೂ ಅದು ಆರ್ತವಾಗಿರುತ್ತದೆ. ಬ್ರಹ್ಮಾಂಡದಲ್ಲಿ ಅಂಥ ಯಾವುದೂ ನಿಮಗೆ ಎಂದೂ ತೃಪ್ತಿ ನೀಡಲಾರದು. ನೀವದನ್ನು ನಿಮ್ಮಲ್ಲಿ ತಂದುಕೊಳ್ಳಬೇಕು. ಮತ್ತೆ ಅದು ಯಾವಾಗ ನಡೆಯುತ್ತದೆ? ನೀವು ಬಿಟ್ಟುಬಿಟ್ಟಾಗ(ತ್ಯಾಗಹೊಂದಿದಾಗ) ಮತ್ತು ಅರ್ಥ ಮಾಡಿಕೊಂಡಾಗ ಅದು ನೆರವೇರುತ್ತದೆ. ಶುದ್ಧತೆ, ಸ್ಪಷ್ಟತೆ(ವಿವೇಕ) ಮತ್ತು ತೃಪ್ತಿ, ಇದು ಸಂತೋಷಕ್ಕೆ ಸೂತ್ರ.

ಬೈಬಲ್.ನಲ್ಲೂ ಹೀಗೊಂದು ಮಾತಿದೆ, ’ಯಾರಲ್ಲಿ ಇದೆಯೋ ಅವರಿಗೆ ಇನ್ನೂ ಕೊಡಲಾಗುತ್ತದೆ, ಯಾರಲ್ಲಿ ಇಲ್ಲವೋ ಅವರಲ್ಲಿ ಇರುವ ಸ್ವಲ್ಪವನ್ನೂ ತೆಗೆದುಕೊಳ್ಳಲಾಗುತ್ತದೆ.’

ಅದು ತುಂಬಾ ನಿಜ. ಮನಸ್ಸಿನಲ್ಲಿ ತೃಪ್ತಿಯ ಅಭಾವವಿದ್ದಾಗ ಮತ್ತು ನೀವು ದೂರುತ್ತಾ ಗೊಣಗಾಡುತ್ತಿದ್ದರೆ, ಆಗ ನಿಮಗದು ಅರಿವಾಗಬೇಕು ಮತ್ತು ನೀವು ಆ ಸ್ಥಿತಿಯಿಂದ ಹೊರ ನುಗ್ಗಬೇಕು. ನೀವು ಅದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅದು ಬಹಳ ಮುಖ್ಯ.

ತೃಪ್ತಿ ಮತ್ತು ಸಂತೋಷ! ಎಲ್ಲವನ್ನೂ ಸಂತೋಷದಿಂದ ಮಾಡಿ. ಓಡಾಡುವುದಾಗಲಿ, ಮಾತನಾಡುವುದನ್ನು, ಕುಳಿತುಕೊಳ್ಳುವುದನ್ನು ಸಂತಸದಿಂದ ಮಾಡಿ; ನೀವು ಯಾರದಾದರೂ ವಿರುದ್ಧ ದೂರುತ್ತಿದ್ದರೂ, ಅದನ್ನು ಸಂತೋಷದಿಂದ ಮಾಡಿ. ನನಗನ್ನಿಸುತ್ತದೆ ನಾವದನ್ನು ಈ ಆಶ್ರಮದಲ್ಲಿ ಒಂದಿಷ್ಟು ಸಲ ಮಾಡುತ್ತೀವಿ! (ಶ್ರೀಶ್ರೀ ನಗುತ್ತಾರೆ)

ನಿಮಗೆ ಗೊತ್ತೆ, ಮೊನ್ನೆಯ ದಿನ ಖರೀದಿ ವಿಭಾಗದ ಒಬ್ಬ ಮಂದಿ ನನಗೆ ಮಧ್ಯರಾತ್ರಿಯ ಸಮಯದಲ್ಲಿ ಕರೆನೀಡಿ ಹೇಳಿದರು, ’ಗುರೂಜಿ, ನಾಳೆಗಾಗಿ ನಾವು ಸ್ವಲ್ಪ ಸಾಮಾನುಗಳನ್ನು ಖರೀದಿಸಬೇಕಾಗಿದೆ.’

ನಾನೆಂದೆ, ’ಏನು?’

ಅವನು ಹೇಳಿದ, ’ಸಿಹಿತಿನಿಸು ಮಾಡುವುದಕ್ಕಾಗಿ ನಮಗೆ ೩000ಕೆ.ಜಿ. ಸಕ್ಕರೆ ಮತ್ತು ೨000ಕೆ.ಜಿ. ಹೆಸರುಬೇಳೆ ಬೇಕಾಗಿದೆ.’
ನಾನು ಹೇಳಿದೆ, ’ಏನು? (ಆಶ್ಚರ್ಯದಿಂದ), ನೀನು ಹೇಳಿದೆ ಕೇವಲ ಸ್ವಲ್ಪ ಸಾಮಾನುಗಳು ಬೇಕಾಗಿವೆ ಎಂದು.’

ಹಾಗಾಗಿ ಖರೀದಿ ವಿಭಾಗ ಇಡೀ ಮಾರಾಟ (ಹೋಲ್ಸೇಲ್) ಕೇಂದ್ರಗಳಿಗೆ ಧಾವಿಸಿ ಅಲ್ಲಿ ಜನರನ್ನು ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಬ್ಬಿಸಿ, ಮತ್ತೆ ಎಲ್ಲವನ್ನೂ ಬೆಳಗ್ಗೆ ೨ ಘಂಟೆಗೆ ಆಶ್ರಮಕ್ಕೆ ತಲುಪಿಸಲಾಯಿತು.

ಅವರು ಹಲವು ಅಂಗಡಿಯವರನ್ನು ಎಬ್ಬಿಸಬೇಕಾಯಿತು, ಅವರನ್ನು ಅವರ ಅಂಗಡಿಗೆ ಕರೆದುಕೊಂಡು ಹೋಗಿ, ಉಗ್ರಾಣವನ್ನು ತೆರೆದು ಸಾಮಾನುಗಳನ್ನು ತರಬೇಕಾಯಿತು. ಆದರೆ ಅವರೆಲ್ಲರೂ ಸಂತುಷ್ಟರಾಗಿದ್ದರು. ಮಾರಿದವನೂ ಖುಷಿಯಾಗಿದ್ದ, ಖರೀದಿಸಿದವನೂ ಖುಷಿಯಾಗಿದ್ದ, ಅಡುಗೆಯವನೂ ಖುಷಿಯಾಗಿದ್ದ ಮತ್ತು ಉಂಡವರೂ ಖುಷಿಯಾಗಿದ್ದರು.

ನಿಮಗೆ ಗೊತ್ತೇ, ಈ ಸಂಪೂರ್ಣ ಕೆಲಸ ಬಹಳ ಒತ್ತಡದಾಯಕ ಆಗಿರಬಹುದಿತ್ತು.

ಆ ವ್ಯಕ್ತಿ ನನಗಿದನ್ನು ಕೊನೆಯ ಕ್ಷಣದಲ್ಲಿ ಹೇಳುತ್ತಿದ್ದರು. ಕೊನೆ ಳಿಗೆಯಲ್ಲಿ ನಾವೆಲ್ಲಿಗೆ ಹೋಗುವುದು?

ಇದರಲ್ಲಿ ಬಹಳ ಗೊಣಗಾಟ ಮತ್ತು ದೂರುಗಳು ನಡೆಯಬಹುದಿತ್ತು, ಮತ್ತೆ ಅವರು, "ಛೆ, ಈ ಕೆಲಸವಾಗಲಿಲ್ಲ" ಎಂದು ಹಾಗೆಯೇ ಮರಳಿಬರಬಹುದಿತ್ತು. ಆದರೆ ನಡೆದದ್ದು ಅದಲ್ಲ.

ನೋಡಿ, ಎಲ್ಲಿ ಸತ್ವವಿದೆಯೋ ಮತ್ತು ಸಕಾರಾತ್ಮಕತೆಯಿದೆಯೋ, ಆಗ ಸವಾಲುಗಳೂ ಮಧುರವಾಗಿರುತ್ತವೆ.
ಅದಕ್ಕಾಗಿಯೇ ಸಂತೋಷ ಮತ್ತು ತೃಪ್ತಿ ಬಹಳ ಮುಖ್ಯವಾಗಿರುವುದು.

ನೋಡಿ, ಅದೊಂದು ಸಣ್ಣಪುಟ್ಟ ವಿಷಯವಾಗಿದ್ದರೆ, ಆಗ ಪರವಾಗಿಲ್ಲ. ನೀವು ಹೋಗಿ ಒಂದು ಅಂಗಡಿಯನ್ನು ತೆರೆಯಬಹುದು. ಆದರೆ ೩೦೦೦ಕೆ.ಜಿ. ಸಕ್ಕರೆ ಒಂದು ಅಂಗಡಿಯಿಂದ ನಿಮಗೆ ಸಿಗಲು ಸಾಧ್ಯವಿಲ್ಲ.

ಹಾಗೆ ಎಲ್ಲರ ಜೀವನದಲ್ಲಿ, ನಾವು ಕೆಲವೊಮ್ಮೆ ಅಸಾಧ್ಯವೆಂದು ಪರಿಗಣಿಸುವಂಥ ಬಹಳ ವಿಷಯಗಳಿವೆ. ಅದು ಯಾಕೆಂದು ನಿಮಗೆ ಗೊತ್ತಾ?ಅದು ಯಾಕೆಂದರೆ ನಾವು ನಮ್ಮನ್ನು ಗುರುತಿಸಿಕೊಳ್ಳುವುದಿಲ್ಲ.

ನಿಮಗೆ ಗೊತ್ತೇ, ಆ ಆನೆಯು ಇಲ್ಲಿಗೆ(ಯಜ್ಞಶಾಲೆಗೆ) ಬಂದಾಗ ಯಾಕೆ ಅಷ್ಟೊಂದು ಬೆಚ್ಚಿಬಿದ್ದದ್ದು? (ಚಂಡಿಕಾಹೋಮದಲ್ಲಿ ಪಾಲ್ಗೊಳ್ಳಲು ಕರೆತರಲ್ಪಟ್ಟಿದ್ದ ಇಂದ್ರಾಣಿ, ಆಶ್ರಮದ ಆನೆಯ ಬಗ್ಗೆ ಹೇಳುತ್ತಿರುವುದು)

ಅವಳು ತನ್ನನ್ನೇ ಪರದೆಯ (ವೇದಿಕೆಯ ಪಕ್ಕದ ನೇರಪ್ರಸಾರದ ವಿಶಾಲಪರದೆ) ಮೇಲೆ ನೋಡಿದ್ದಕ್ಕಾಗಿ ಭಯಗೊಂಡಳು, ಅವಳು ಅಲ್ಲಿ ಇನ್ನೊಂದು ಆನೆ ನಿಂತಿದೆ ಎಂದು ಭಾವಿಸಿದಳು. ಅದು ತನ್ನದೇ ಪ್ರತಿಬಿಂಬವೆಂದು ಅವಳು ಅರಿತುಕೊಳ್ಳಲಿಲ್ಲ. ಹಾಗಾಗಿ ನಮಗೆ ಆ ಪರದೆಯ ಮೇಲಿನ ಪ್ರಸಾರವನ್ನು ನಿಲ್ಲಿಸಬೇಕಾಯಿತು.

ಆಗ ನಾನಂದುಕೊಂಡೆ, ಅವಳು ನಮಗಿಂದು ಒಂದು ದೊಡ್ಡ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಜನರೊಂದಿಗೆ ನಡೆಯುತ್ತಿರುವುದು ಇದೇ. ಅವರು ತಮ್ಮನ್ನು ಗುರುತಿಸಿಕೊಳ್ಳುವುದಿಲ್ಲ. ಎಲ್ಲರೂ ಕೇವಲ ನಿಮ್ಮ ಪ್ರತಿಬಿಂಬವಾಗಿದ್ದಾರೆ.

ನೀವು ನಿಮ್ಮನ್ನು ಗುರುತಿಸಿಕೊಳ್ಳದಿದ್ದಾಗ, ಅಥವಾ ನಿಮ್ಮನ್ನೇ ನೋಡಲು ಅಷ್ಟೊಂದು ಹೆದರಿಕೊಂಡಿದ್ದಾಗ, ಅಂಥಲ್ಲಿ ಜ್ಞಾನವು ಈ ವಿಷಯವನ್ನು ಪ್ರತಿಬಿಂಬಿಸಲು, ಅರಿತುಕೊಳ್ಳಲು ಸಹಾಯವಾಗುತ್ತದೆ.

ನಿಮ್ಮೊಳಗೇ ನೋಡಿಕೊಳ್ಳಿ, ಏನಿದೆ, ಏನು ಕಾಡಿಸುತ್ತಿದೆ, ಏನು ಚುಚ್ಚುತ್ತಿದೆ?

ನಿಮ್ಮಲ್ಲಿ ಕೆಲವು ನಕಾರಾತ್ಮಕ ಪ್ರವೃತ್ತಿಗಳಿವೆಯೆಂದು ನಿಮಗೆ ಕಂಡುಬಂದರೆ, ನಾನು ಹೇಳುತ್ತೇನೆ, ಅದರ ಬಗ್ಗೆ ಚಿಂತಿಸಬೇಡಿ, ಯಾಕೆಂದರೆ ನಿಮಗೆ ಅದರಿಂದ ಪಾರುಗೊಳ್ಳಲು ಆಗುವುದಿಲ್ಲ. ಅದರ ಬಗ್ಗೆ ಕಾಳಜಿವಹಿಸಲು ಒಬ್ಬರಿದ್ದಾರೆ. ಇದು ಆ ಸೂಚನೆ!

ದುರ್ಗಾಸಪ್ತಶತಿಯಲ್ಲಿ ಹೇಳಿದ್ದಾರೆ, ’ಯಾ ದೇವೀ ಸರ್ವಭೂತೇಷು ಭ್ರಾಂತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಓ ತಾಯಿ, ನೀನು ಎಲ್ಲಾ ಜೀವಿಗಳಲ್ಲಿ ಶಾಂತಿಯಾಗಿ ಮತ್ತು ಭ್ರಾಂತಿಯಾಗಿ ಸ್ಥಿತಳಾಗಿರುವೆ; ಜ್ಞಾನವಾಗಿ ಮತ್ತು ಭ್ರಾಂತಿಯಾಗಿ ವಾಸವಾಗಿರುವೆ. ನಾನು ಗೌರವದಿಂದ ನಿನಗೆ ಶಿರ ಬಾಗಿಸುವೆ!

ಹಾಗಾಗಿ ದೈವಿಕತೆಯು ತುಮುಲವಾಗಿಯೂ ಇರುವುದು.

ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ನೋಡಿ, ಅವು ಅಷ್ಟೊಂದು ತುಮುಲಗೊಂಡಿವೆ. ಆ ಆನೆಯು ಸ್ವಲ್ಪ ಸಮಯಕ್ಕೆ ಎಷ್ಟೊಂದು ಗಲಿಬಿಲಿಗೊಂಡಿತ್ತು.

ಅದು ಏನಾಗಿತ್ತು? ಅದು ಪ್ರಜ್ಞೆಯಾಗಿತ್ತು; ಭ್ರಾಂತಿಯ ರೂಪವಾಗಿ ಸ್ಥಿತವಾಗಿರುವ ಚೈತನ್ಯ, ಮತ್ತು ಜ್ಞಾನದ ರೂಪವಾಗಿ ಮತ್ತು ಅಜ್ಞಾನದ ರೂಪವಾಗಿ ಸ್ಥಿತವಾಗಿರುವ ಆ ಶುದ್ಧ ಶಕ್ತಿ.

ಹಾಗಾಗಿಯೇ ಎಲ್ಲವನ್ನೂ ಪರಿಪೂರ್ಣತೆಯಿಂದ ಪ್ರೀತಿಸಿ. ಎಲ್ಲವನ್ನೂ ಜೊತೆಗೆ ತೆಗೆದುಕೊಳ್ಳಿ. ಆರಿಸಲು ಅಥವಾ ಪ್ರತ್ಯೇಕಿಸಲು ಪ್ರಯತ್ನಿಸಬೇಡಿ, ಎಲ್ಲವನ್ನೂ ಸಂಪೂರ್ಣವಾಗಿ ತೆಗೆದುಕೊಳ್ಳಿ ಆಗ ನೀವು ಶಾಂತಿಯಿಂದಿರುತ್ತೀರಿ, ಪರಿಪೂರ್ಣ ಶಾಂತಿ.

ಇದು ಆ ಸಂಪೂರ್ಣಸಾರ. ಆಗ ದುಃಖದಿಂದ ಮುಕ್ತಿ, ಶಾಂತಿಯ ಉಪಸ್ಥಿತಿ, ಹೊರಹೊಮ್ಮುತ್ತಿರುವ ಪ್ರೀತಿ ಮತ್ತು ಆನಂದ, ಭಕ್ತಿ ಮತ್ತು ಮನಸ್ಸಿನಲ್ಲಿ ಸ್ವಾತಂತ್ರ್ಯ-ಇವು ಬೆಳೆದುಕೊಳ್ಳುತ್ತವೆ.

ಈ ಸಂಪೂರ್ಣ ಬ್ರಹ್ಮಾಂಡವು ಒಂದೇ ಚೈತನ್ಯವಾಗಿದೆ. ನೀವೆಲ್ಲರೂ ಇವತ್ತು ಅದನ್ನು ಅನುಭವಿಸಲಿಲ್ಲವೇ?

ಹಲವಾರು ಶರೀರಗಳಿದ್ದು, ಕೇವಲ ಒಂದು ಮನಸ್ಸಿರುವಂತೆ ಅದು.

ಹಲವಾರು ಶರೀರಗಳಿದ್ದರೂ ಒಂದು ಶರೀರ, ಈ ಸಂಪೂರ್ಣ ವ್ಯಾಪ್ತಿಯಲ್ಲಿ ಒಂದು ಉಪಸ್ಥಿತಿ.

ನಾವೆಲ್ಲರೂ ಆ ಒಂದರ ಭಾಗವಾಗಿದ್ದೇವೆ - ಈ ಅರಿವು ಒಂದು ಆಳವಾದ ಅನುಭವವಾಗಿ ಉಂಟಾಗುತ್ತದೆ.

ಈಗ, ’ಆ ಅರಿವು ನನಗೆ ಯಾವಾಗ ಬರುತ್ತದೆ ಗುರೂಜಿ? ಅದು ನನಗೆ ಈಗ ಬೇಕು.’ ಎಂದು ಕೇಳಬೇಡಿ.
ಕೇವಲ ವಿಶ್ರಮಿಸಿ! ಏನನ್ನೂ ಮಾಡದಿರಿ!

ನೀವು ಭಗವಂತನಿಗೆ ನೆಚ್ಚಿನವರು ಮತ್ತು ಆ ದೈವಿಕತೆಯು ಇಲ್ಲಿದೆ, ಈ ಕ್ಷಣ ನಿಮ್ಮೊಳಗಿದೆ ಎಂದು ತಿಳಿದಿರಿ.

ಇವತ್ತಿಗೆ ಇಷ್ಟು ಸಾಕು.