ಮಂಗಳವಾರ, ಜೂನ್ 25, 2013

Face2Face with Sri Sri: 23 June, 7:30 pm IST

ಭೂಮಿಯ ಮೇಲೆ ನಮ್ಮ ಅಸ್ತಿತ್ವವಿರುವುದು ಪ್ರಕೃತಿ ನಿರ್ದೇಶಿತ ಕರ್ತವ್ಯವೊಂದನ್ನು ಪೂರ್ಣಗೊಳಿಸುವ ಸಲುವಾಗಿ. ಆ ಕರ್ತವ್ಯ ಪೂರ್ಣಗೊಳ್ಳಲು ಹತ್ತು, ಇಪ್ಪತ್ತು, ಮೂವತ್ತು, ನೂರು ಅಥವ ಇನ್ನೂ ಹೆಚ್ಚು ಜನ್ಮಗಳ ಅವಧಿ ತಗುಲಿದರೂ ಆಶ್ಚರ್ಯವೇನಲ್ಲ. ಪ್ರತಿ ಜನ್ಮದಲ್ಲೂ ಆ ಕರ್ತವ್ಯವನ್ನು ಒಂದು ನಿರ್ದಿಷ್ಟ ಶೇಕಡಾವಾರು ಅಂಶದಷ್ಟು ನಿರ್ವಹಿಸಬೇಕಾದ್ದು ನಮ್ಮ ಜವಾಬ್ದಾರಿ. ಇನ್ನಷ್ಟು ಪಕ್ವವಾಗಿ ಅದರ ಮುಂದಿನ ಜನ್ಮದಲ್ಲೂ, ಅದಕ್ಕಿಂತಲೂ ಪರಿಪೂರ್ಣವಾಗಿ ನಂತರದ ಜನ್ಮದಲ್ಲೂ, ಜನ್ಮದಿಂದ ಜನ್ಮಕ್ಕೆ ಹೆಚ್ಚುಹೆಚ್ಚು ಸುಧಾರಿತ ರೀತಿಯಲ್ಲೂ ಆ ಕರ್ತವ್ಯವನ್ನು ನಾವು ಮುನ್ನಡೆಸುತ್ತೇವೆ. ಸಾವು ಬದುಕುಗಳ ಚಕ್ರದಿಂದ ನಾವು ಮುಕ್ತರಾಗುವುದು ಆ ಕರ್ತವ್ಯ ಪೂರ್ಣಗೊಂಡ ನಂತರವೇ. ನಾವು ನಮ್ಮ ಮೈಮೇಲಿನ ಬಟ್ಟೆಯನ್ನು ಕಳಚಿದಷ್ಟೇ ಸರಾಗವಾಗಿ, ಈ ಜನ್ಮಕ್ಕೆ ಮೀಸಲಿಟ್ಟ ಕರ್ತವ್ಯದ ಹಂತವನ್ನು ನಾವು ದಾಟಿದ ಮರುಕ್ಷಣ, ಸದಾ ಸಚೇತನ ಆತ್ಮವು ನಮ್ಮ ಶರೀರವನ್ನು ತೊರೆದು ಅವ್ಯಕ್ತ ರೂಪಕ್ಕೆ ಜಾರಿ, ಆ ಕರ್ತವ್ಯದ ಮುಂದಿನ ಹಂತದ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತದೆ. ಈ ಮೇರೆಗೆ ಜನ್ಮದ ನಂತರ ಜನ್ಮವನ್ನೆತ್ತುತ್ತ ಭೂಮಿಯ ಮೇಲೆ ಸಾವಿರ, ಲಕ್ಷ ವರ್ಷಗಳ ಅವಧಿಯವರೆಗೆ ನಮ್ಮ ಆತ್ಮ ಜೀವಂತವಾಗಿರುವುದೆಂಬುದು ಆಶ್ಚರ್ಯ ಉಂಟುಮಾಡುವ ಸಂಗತಿಯಲ್ಲವೆ?

ಇಪ್ಪತ್ತು, ನೂರು ವಯೋಮಾನದ ನಮ್ಮ ಶರೀರದ ರೂಪುರೇಷೆಯನ್ನು ಅರಿತು ನಾವು ತರುಣರು, ವೃದ್ಧರೆಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ ಪ್ರಕೃತಿ ನಿರ್ದೇಶಿಸಿರುವ ನಮ್ಮ ಕರ್ತವ್ಯ ಯಾವುದೆಂದು ಅರಿಯುವುದು, ಆಯಾ ಜನ್ಮದ ಕರ್ತವ್ಯಾಂಶವನ್ನು ಯಶಸ್ವಿಯಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ನಾವು ಬೆಳೆಯುವ ಪರಿಸರ, ನಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನ ಮತ್ತಿತರ ಬಹಿರಾಕರ್ಷಣೆಗಳ ಹಿಂದೆ ನಮ್ಮ ಬದುಕಿನ ನಿಜವಾದ ಕರ್ತವ್ಯ ಅಗೋಚರವಾಗಿಬಿಟ್ಟಿರುತ್ತದೆ. ಆ ಕರ್ತವ್ಯವನ್ನು ಶೀಘ್ರದಲ್ಲಿ ಗುರ್ತಿಸುವಷ್ಟು ಅದೃಷ್ಟಶಾಲಿಗಳಾಗಿದ್ದರೆ, ಗಿನ್ನೆಸ್ ದಾಖಲೆ ಸ್ಥಾಪಿಸಿದ ಹದಿಹರೆಯದವನೆಂ/ಳೆಂಬ ಗೌರವ ನಮ್ಮದಾಗಬಹುದು. ಆ ಕರ್ತವ್ಯ ಅರಿಯುವಲ್ಲಿ ಏರ್ಪಡುವ ವಿಳಂಬದಿಂದ ನಾವು ಅನಾಮಿಕರಾಗಿ ಸಾಯಲೂಬಹುದು.

ಬದುಕಿನ ಕ್ರಮವನ್ನು ಚುರುಕುಗೊಳಿಸಬಲ್ಲಂಥ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆರ್ಟ್ ಆಫ಼್ ಲಿವಿಂಗ್ ಮತ್ತಿತರ NGOಗಳು ರೂಪಿಸಿವೆ. ಈ ತರಬೇತಿಗಳಲ್ಲಿ ಭಾಗವಹಿಸಿದರೆ ನಮಗೆ ನಮ್ಮ ಪ್ರಕೃತಿ ನಿರ್ದೇಶಿತ ಕರ್ತವ್ಯದ ಶೀಘ್ರ ಅರಿವು ಮೂಡಬಹುದು. ಆರ್ಟ್ ಆಫ಼್ ಲಿವಿಂಗ್ ಬೆಂಗಳೂರು ಕೇಂದ್ರ, ತಾನು ನಿರೂಪಿಸಿದ ಹಲವು ವಿಧದ ತರಬೇತಿಗಳು ಬೀರಬಲ್ಲ ಪರಿಣಾಮವೆಂಥದ್ದು ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವಂಥ Face2Face with Sri Sri ಎಂಬ facebook ಸಹಭಾಗಿತ್ವದ ಜಾಗತಿಕ ಅಂತರ್ಜಾಲ ಸಮಾವೇಶವನ್ನು ಇತ್ತೀಚೆಗೆ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲೆಡೆಯಲ್ಲಿ ಕೆಳಕಂಡ ಚಿತ್ರಿಕೆಗಳು ಕಾಣಿಸಿಕೊಂಡು ಜನ ಸಮುದಾಯದಲ್ಲಿ ಸಾತ್ವಿಕ ಮನೋಭಾವ ಅಂಕುರಿಸಲು ಕಾರಣವಾದವು.




ಟೈಮ್ಸ್ ಆಫ಼್ ಇಂಡಿಯಾದ ಸಹೋದರ ಪತ್ರಿಕೆ 'ವಿಜಯ ಕರ್ನಾಟಕ' ಈ ಸಮಾವೇಶವನ್ನು ಕುರಿತ ವರದಿಯನ್ನು ಪ್ರಕಟಿಸಿತು. ಆ ವರದಿಯ ಕ್ಲಿಪ್ಪಿಂಗ್ ಕೆಳಕಂಡಂತಿತ್ತು.


ಭಾನುವಾರ, ಜೂನ್ 23, 2013

ಮನಸ್ಸಿದ್ದಲ್ಲಿ ಮಾರ್ಗವಿದೆ

ಮುಖಾಮುಖಿ

ಬೆಂಗಳೂರು, ಭಾರತ
೨೩ ಜೂನ್ ೨೦೧೩

ಪ್ರಶ್ನೆ: ಗುರೂಜಿ, ನಿಮ್ಮ ದೈವಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ನೀವೋರ್ವ ಮಹಾನ್ ಮಾನವತಾವಾದಿಯಾಗುತ್ತೀರೆಂಬ ಕನಸು ನಿಮ್ಮ ಮನದಲ್ಲಿತ್ತೇ?

ಶ್ರೀ ಶ್ರೀ ರವಿ ಶಂಕರ್:  ನಾನು ಬೆಳೆದಿಲ್ಲವೆಂದು ಆಶಿಸುತ್ತೇನೆ (ನಗುತ್ತಾರೆ), ಮತ್ತು ನಾನು ಈಗಲೂ ಹದಿಹರೆಯದ, ಬೆಳೆಯಲು ನಿರಾಕರಿಸುವ ವ್ಯಕ್ತಿಯೆಂದು ಭಾವಿಸುತ್ತೇನೆ. ನಾನು ಹದಿಹರೆಯದವನಿದ್ದಾಗ, ಜಗಳಗಳನ್ನು ಒಪ್ಪುತ್ತಿರಲಿಲ್ಲ. ನಾನು ಎಂದಿಗೂ ಶಾಂತಿಯನ್ನು ತರಲು ಬಯಸುತ್ತಿದ್ದೆ. ಯಾವಗಾಲಾದರೂ, ಯಾರಾದರೂ ಜಗಳಮಾಡುತ್ತಿದ್ದರೆ, ನಾನು ಮಧ್ಯ ಪ್ರವೇಶಿಸಿ ಏನಾದರೂ ಮಾಡುತ್ತಿದ್ದೆ. ಆಂತರಿಕ ಶಾಂತಿಯು ಯಾರೂ ನೋಡದ, ಅರಿಯದ ಪ್ರಪಂಚದ ಬಾಗಿಲನ್ನು ತೆರೆಯುತ್ತದೆ, ಅಲ್ಲಿ ಅತಿ ಹೆಚ್ಚು ಹಂತಗಳ ಸತ್ಯವು ಬಹಿರಂಗಗೊಳ್ಳುತ್ತದೆ. ಆದರೆ ಶಾಂತಿಯು ಎಲ್ಲದರ ಮೂಲ ತತ್ವ. ಹಾಗಾಗಿ ನನ್ನ ಸಮಸ್ಯೆಯು, ನಿಮ್ಮೊಳಗೆ ಇದಕ್ಕಿಂತ ಹೆಚ್ಚಿನ ಆಯಾಮವೊಂದಿದೆ ಹಾಗೂ ನೀವು ನಿಮ್ಮೊಡನೆ ಶಾಂತಿ ಮತ್ತು ನಿರ್ಮಲತೆಯಿಂದ ಇದ್ದಾಗ ಅದನ್ನು ಪಡೆಯಬಹುದು ಎಂಬುದನ್ನು ತಿಳಿಯಪಡಿಸುವುದಾಗಿತ್ತು.

ಪ್ರಶ್ನೆ: ನಿಮ್ಮ ಬಾಲ್ಯದಲ್ಲಿ ನೀವು ಯಾರನ್ನು ಆದರ್ಶರನ್ನಾಗಿ ನೋಡಿದ್ದಿರಿ ಅಥವಾ ಯಾರಿಂದ ಸ್ಫೂರ್ತಿಗೊಂಡಿದ್ದಿರಿ?

ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ ನನ್ನ ತಾಯಿ. ನಾನು ಇನ್ನೂ ಉತ್ತಮವಾಗಬಹುದು ಎಂದು ಅವರು ಯಾವತ್ತೂ ಹೇಳುತ್ತಿದ್ದರು. ನನಗೆ, ಅವರು ಪರಿಪೂರ್ಣತೆಯ ಸಾಕಾರವಾಗಿದ್ದರು. ಅವರೇನೇ ಮಾಡಿದರೂ ಅದರಲ್ಲಿ ಅವರು ಪರಿಪೂರ್ಣರಾಗಿದ್ದರು.

ಎರಡನೆಯದಾಗಿ ನನ್ನ ಶಿಕ್ಷಕರು. ಅವರು ಮಹಾತ್ಮಾ ಗಾಂಧಿಯವರ ಶಿಕ್ಷಕರೂ ಆಗಿದ್ದರು, ಪಂಡಿತ್ ಸುಧಾಕರ ಚತುರ್ವೇದಿ. ಅವರು ಇನ್ನೂ ಜೀವಂತವಾಗಿದ್ದಾರೆ ಮತ್ತು ಅವರಿಗೆ ೧೧೮ ವರ್ಷ ವಯಸ್ಸು. ನನ್ನ ಶಾಲಾ ದಿನಗಳಲ್ಲಿ, ನನ್ನ ಬಿಡುವಿನ ವೇಳೆಯಲ್ಲಿ ನಾನು ಅವರಿಂದ ಕೆಲವು ವೈದಿಕ ಸ್ತೋತ್ರಗಳನ್ನು ಕಲಿತೆ. ಅವರೊಬ್ಬರು ಮಹಾನ್ ಪ್ರೇರಣಾತ್ಮಕ ವ್ಯಕ್ತಿ. ಅವರು ತಮ್ಮ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು ಮತ್ತು ಸುಮಾರು ನಲುವತ್ತು ವರ್ಷಗಳನ್ನು ಮಹಾತ್ಮಾ ಗಾಂಧಿಯವರೊಂದಿಗೆ ಕಳೆದರು.

ಅವರೊಬ್ಬರು ಬ್ರಹ್ಮಚಾರಿಯಾಗಿದ್ದಾಗ, ಅವರು ಎಂಟು ದಲಿತ ಮತ್ತು ಹರಿಜನ ಮಕ್ಕಳನ್ನು ದತ್ತುಪಡೆದುಕೊಂಡರು, ಅವರನ್ನು ಬೆಳೆಸಿದರು ಮತ್ತು ಅವರನ್ನು ಐ.ಎ.ಎಸ್. ಅಧಿಕಾರಿಗಳನ್ನಾಗಿ ಮಾಡಿದರು. ಅವರ ಜೀವನ ಮತ್ತು ಮನುಕುಲಕ್ಕಿರುವ ಸಮರ್ಪಣೆಯು ಒಂದು ಮಹತ್ತರ ಸ್ಫೂರ್ತಿಯಾಗಿದೆ.

ಪ್ರಶ್ನೆ: ಶ್ರೀ ಶ್ರೀಯವರೆ, ಆರ್ಟ್ ಆಫ್ ಲಿವಿಂಗ್ ೩೨ ವರ್ಷಗಳಷ್ಟು ಹಳೆಯ ಒಂದು ಸಂಸ್ಥೆಯಾಗಿದೆ, ಅದು ೧೫೨ ದೇಶಗಳಲ್ಲಿ ಹರಡಿದೆ ಮತ್ತು ೩೭೦ ದಶಲಕ್ಷ ಜನರ ಜೀವನವನ್ನು ಸ್ಪರ್ಷಿಸಿದೆ. ನೀವು ಎದುರಿಸಬೇಕಾಗಿ ಬಂದ ಅತ್ಯಂತ ದೊಡ್ಡ ಸವಾಲು ಯಾವುದು?

ಶ್ರೀ ಶ್ರೀ ರವಿ ಶಂಕರ್: ಈ ಸವಾಲುಗಳು ನಿಜವಾಗಿ ನನಗೆ ನೆನಪಿಗೆ ಬರುತ್ತಿಲ್ಲ ಅಥವಾ ನಾನು ಅವುಗಳ ಲೆಕ್ಕ ಇಟ್ಟುಕೊಳ್ಳುವುದಿಲ್ಲ. ಹಲವಾರು ಸವಾಲುಗಳು ಬರುತ್ತವೆ, ಆದರೆ ನಿಮಗೆ ನಿಮ್ಮ ಗುರಿ ಸ್ಪಷ್ಟವಾಗಿರುವಾಗ ನೀವು ನಡೆಯುತ್ತಾ ಇರುವಿರಿ.

ಮೂಲಭೂತವಾದಿಗಳು ಇದನ್ನು ಇಷ್ಟಪಡುವುದಿಲ್ಲ ಯಾಕೆಂದರೆ, ಜನರು ಹೆಚ್ಚು ಸ್ವೀಕರಿಸುವವರೂ, ಹೆಚ್ಚು ವಿಶಾಲ ದೃಷ್ಟಿಯವರೂ ಆಗುವುದರಿಂದ ಅದು ಅವರ ನೆಲೆಯನ್ನು ಕಿರಿದಾಗಿಸುತ್ತದೆ. ಕೆಲವು ಜನರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ; ಸಣ್ಣ ಕೆಲಸಗಳನ್ನು ಮಾಡುವುದರಿಂದ ತಮಗೇನು ಲಾಭವಿದೆಯೆಂದು ಮತ್ತು ವಿವಿಧ ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ. ಧರ್ಮದ ವಿರುದ್ಧ ಅವರು ಬೇರೆ ಬೇರೆ ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ.

ಆರಂಭದಲ್ಲಿ ನಾನು ಧ್ಯಾನ ಕಲಿಸುತ್ತಾ ಹೋಗುತ್ತಿದ್ದಾಗ, ಕೆಲವು ಜನರು ಯೋಚಿಸಿದರು ಅದು ವೂಡೂವಿನಂತೆ; ಒಬ್ಬ ಸಾಮಾನ್ಯ ವ್ಯಕ್ತಿಗೆ ಇರುವಂತಹದ್ದಲ್ಲ ಎಂದು. ಯಾರಾದರೂ ಧ್ಯಾನ ಮಾಡಿದರೆ, ಆಗ ಅವರು ಯಾರೋ ಅತಿರೇಕಿ ಎಂದು ಅವರು ಯೋಚಿಸಿದರು. ಇವತ್ತು ಕಾಲ ಬದಲಾಗಿದೆ. ಪಕ್ಷಪಾತವು ಕಡಿಮೆಯಾಗಿದೆ.

ಮೊದಲು, ನಾನು ಧರಿಸುತ್ತಿದ್ದ ಉಡುಪು ಮತ್ತು ನಾನು ಕಾಣಿಸುತ್ತಿದ್ದ ರೀತಿ, ಜಾತಿ ಮತ್ತು ಧರ್ಮ, ಎಲ್ಲವೂ ಗಣ್ಯವಾಗಿದ್ದವು. ಒಂದು ಕಾಲದಲ್ಲಿ ಎಲ್ಲವೂ ಒಂದು ಅಡ್ಡಿಯಾಗಿತ್ತು, ಯಾಕೆಂದರೆ ಅದೊಂದು ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ರೂಢಿಯಾಗಿರಲಿಲ್ಲ. ಆದರೆ ಈಗ ಭೇದಭಾವವು ಬಹಳಷ್ಟು ಕಡಿಮೆಯಾಗಿದೆ.

ಪ್ರಶ್ನೆ: ನೀವು ದಿನದಲ್ಲಿ ೨೦ ಗಂಟೆ ಕೆಲಸ ಮಾಡುತ್ತೀರೆಂಬುದನ್ನು ನಾವು ಕೇಳಿದ್ದೇವೆ. ನಿಮಗೆ ಪ್ರೇರಣೆ ಮತ್ತು ಸ್ಫೂರ್ತಿ ಸಿಗುವುದು ಎಲ್ಲಿಂದ?

ಶ್ರೀ ಶ್ರೀ ರವಿ ಶಂಕರ್: ನೀವು ಯಾವುದಾದರೂ ಕೆಲಸ ಮಾಡಲು ಬಯಸುವಾಗ, ಅಲ್ಲಿ ಶಕ್ತಿಯಿರುತ್ತದೆ. ಒಂದು ಹಳೆಯ ಮಾತಿದೆ, ’ಮನಸ್ಸಿದ್ದಲ್ಲಿ ಮಾರ್ಗವಿದೆ’ ಎಂದು. ನಾನು ಯಾವತ್ತೂ ನಂಬಿಕೆಯಿರಿಸಿದ ಒಂದು ವಿಷಯವೆಂದರೆ, ಯಾವುದು ನಿಮ್ಮ ಸ್ವಭಾವದಲ್ಲಿಲ್ಲವೋ, ಯಾವುದು ನಿಮಗೆ ಸಹಜವೆಂದು ಅನ್ನಿಸುವುದಿಲ್ಲವೋ ಅದನ್ನು ಮಾಡಬೇಡಿ ಎಂಬುದು. ನಾನು ಕೆಲಸ ಮಾಡುವಾಗ, ನಾನು ಆಗಲೂ ನನ್ನ ಪರಮಾತ್ಮನೊಂದಿಗೆ ಸಂಪರ್ಕದಲ್ಲಿರುತ್ತೇನೆ. ಹಾಗಾಗಿ ಬಹುಶಃ ನನಗೆ ಅಷ್ಟೊಂದು ಸುಲಭವಾಗಿ ಬಳಲಿಕೆಯೆನ್ನಿಸುವುದಿಲ್ಲ.

ಪ್ರೇಮವೆಂಬುದು ಭೂಮಿಯ ಮೇಲಿನ ಅತ್ಯಂತ ದೊಡ್ಡ ಶಕ್ತಿಯೆಂದು ನನಗನ್ನಿಸುತ್ತದೆ ಮತ್ತು ನಾವು ನಮ್ಮೊಂದಿಗೆ ಸಂಬಂಧ ಹೊಂದಿದಾಗ, ನಮಗೆ ನಮ್ಮೊಳಗೆ ಒಂದು ಅಗಾಧವಾದ ಚೈತನ್ಯದ ಮೂಲವು ಕಾಣಸಿಗುತ್ತದೆ ಹಾಗೂ ನಂತರ ಕಾರ್ಯವು ಸಹಜವಾಗಿಯೇ ಆಗುತ್ತದೆ, ಅದೊಂದು ಪ್ರಯತ್ನವಾಗಿರುವುದಿಲ್ಲ. ಯಾವಾಗೆಲ್ಲಾ ಪ್ರಯತ್ನವಿರುವುದೋ, ಆಗ ಅದು ಶಕ್ತಿಯನ್ನು ಬರಿದುಮಾಡುತ್ತದೆ. ಆದರೆ, ಕಾರ್ಯವು ಸಹಜವಾಗಿ ಆಗುವಾಗ, ಉತ್ಸಾಹ ಮತ್ತು ಶಕ್ತಿಯು ಯಾವಾಗಲೂ ನಿಮ್ಮೊಂದಿಗಿರುವುದನ್ನು ನೀವು ನೋಡುವಿರಿ.

ಪ್ರಶ್ನೆ: ಶ್ರೀ ಶ್ರೀಯವರೆ, ಯಶಸ್ಸಿನ ಪರಿಕಲ್ಪನೆಯನ್ನು ನಾನು ನನ್ನ ಮಕ್ಕಳಿಗೆ ಸರಳವಾದ ನೇರ ಶಬ್ದಗಳಲ್ಲಿ ವಿವರಿಸುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್: ಮಕ್ಕಳು ಯಶಸ್ಸು ಅಥವಾ ಸೋಲಿನ ಬಗ್ಗೆ ತಲೆಕೆಡಿಸುವುದಿಲ್ಲ. ನಾನು ಹೇಳುವುದೇನೆಂದರೆ, ಮಕ್ಕಳನ್ನು ಅವರಿರುವಂತೆಯೇ ಬಿಡಿ ಮತ್ತು ಅವರ ಮನಸ್ಸಿನಲ್ಲಿ ಯಶಸ್ಸು ಅಥವಾ ಸೋಲಿನ ಪರಿಕಲ್ಪನೆಯನ್ನು ಹಾಕಲು ಪ್ರಯತ್ನಿಸಬೇಡಿ. ಅವರು ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸಲು ಬಿಡಿ; ಅದು ಅವರಲ್ಲಿಗೆ ಹೇಗೆ ಬರುವುದೋ ಹಾಗೆ.

ದೊಡ್ಡವರಿಗೆ ನನ್ನಲ್ಲೊಂದು ಬೇರೆಯ ಸೂತ್ರವಿದೆ. ದೊಡ್ಡವರು, ನಿಮ್ಮ ಯಶಸ್ಸನ್ನು, ನೀವು ನಗುವ ಗಂಟೆಗಳ ಸಂಖ್ಯೆಗಳಲ್ಲಿ ಅಳೆಯಿರಿ. ನಿಮ್ಮ ನಗು ಮತ್ತು ನಿಮ್ಮ ವಿಶ್ವಾಸವು ನಿಮ್ಮ ಯಶಸ್ಸನ್ನು ಸೂಚಿಸುತ್ತವೆ. ನಿಮ್ಮಲ್ಲಿರುವ ನಿರ್ಭಯತೆ ಮತ್ತು ಜನರೊಂದಿಗೆ ಹಂಚುವ ಹಾಗೂ ಅವರ ಬಗ್ಗೆ ಕಾಳಜಿ ವಹಿಸುವ ಸಾಮರ್ಥ್ಯವು ನಿಮ್ಮ ಯಶಸ್ಸನ್ನು ಸೂಚಿಸುತ್ತವೆ.

ಮಕ್ಕಳ ಬಗ್ಗೆ ಹೇಳುವುದಾದರೆ, ಫಲಿತಾಂಶವು ಏನೇ ಆಗಿರಲಿ, ಅದು ಪರವಾಗಿಲ್ಲವೆಂದು ಅವರಿಗೆ ಹೇಳಿ. ಅವರೊಂದು ಬಹುಮಾನವನ್ನು ಗೆಲ್ಲಲಿ ಅಥವಾ ಅವರು ಕಳೆದುಕೊಳ್ಳಲಿ, ಅದು ಪರವಾಗಿಲ್ಲ. ಅವರೊಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಲಿ ಅಥವಾ ಅವರು ಅಷ್ಟೊಂದು ಚೆನ್ನಾಗಿ ಮಾಡಿಲ್ಲದೇ ಇರಲಿ, ಅದು ಪರವಾಗಿಲ್ಲ. ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು, ಸ್ವಲ್ಪ ಹೆಚ್ಚು ಓದಬೇಕು ಮತ್ತು ಸ್ವಲ್ಪ ಹೆಚ್ಚು ಪ್ರಯತ್ನವನ್ನು ಹಾಕಬೇಕು ಎಂಬುದನ್ನು ಸುಮ್ಮನೆ ಅವರಿಗೆ ನೆನಪಿಸಿ. ಅವರು ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಈ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಬೇಡಿ. ಇದೊಂದು ದೊಡ್ಡ ಒತ್ತಡವಾಗಬಲ್ಲದು. ಹಲವಾರು ಹದಿಹರೆಯದವರಿಗೆ, ಯಶಸ್ವಿಯಾಗುವ ಈ ಅಗಾಧವಾದ ಒತ್ತಡವಿರುತ್ತದೆ ಮತ್ತು ಅವರು ಹಲವಾರು ಮನೋದೈಹಿಕ ಅಸ್ವಸ್ಥತೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ನಾನು ಹೇಳುವುದೇನೆಂದರೆ, ಮಕ್ಕಳಲ್ಲಿರುವ ಸ್ವಾಭಾವಿಕ ಹಾಗೂ ಸೃಜನಾತ್ಮಕ ಪ್ರವೃತ್ತಿಯನ್ನು ಸಂರಕ್ಷಿಸಬೇಕು.

ಪ್ರಶ್ನೆ: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾನು ನನ್ನನ್ನು ಹೇಗೆ ಸಜ್ಜುಗೊಳಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಚುರುಕಿನ ಕೆಲಸ, ಕಠಿಣ ಪರಿಶ್ರಮ ಮತ್ತು ಹೊಸ ವಿಚಾರಗಳಿಗೆ ಮನಸ್ಸನ್ನು ತೆರೆದಿರುವುದು ಹಾಗೂ ಯಾವುದೇ ವಿಚಾರಕ್ಕೆ ಜೋತುಬೀಳಬೇಡ. ಇವುಗಳೆಲ್ಲದರಲ್ಲಿ ಅತ್ಯಂತ ಹೆಚ್ಚು ಪ್ರಮುಖವಾದುದೆಂದರೆ ಒಳಗೆ ಆಳದಲ್ಲಿ ನಿರಾಳವಾಗಿರುವುದು.

ಪ್ರಶ್ನೆ: ನನಗೆ ನಿಕಟವಾಗಿರುವ ಜನರು ಯಶಸ್ಸಿನ ಬಗ್ಗೆ ನನಗಿರುವುದಕ್ಕಿಂತ ಒಂದು ವಿಭಿನ್ನವಾದ ಪರಿಕಲ್ಪನೆಯನ್ನು ಹೊಂದಿದ್ದರೆ ಏನು ಮಾಡುವುದು? 

ಶ್ರೀ ಶ್ರೀ ರವಿ ಶಂಕರ್: ಅವರು ಅವರದ್ದೇ ಆದ ಪರಿಕಲ್ಪನೆಯನ್ನು ಹೊಂದಲಿ ಬಿಡು. ಯಾರಿಗೆ ಬೇಕಾದರೂ ಯಶಸ್ಸಿನ ಬಗ್ಗೆ ತಮ್ಮದೇ ಆದ ಪರಿಕಲ್ಪನೆಯಿರಲು ಸಾಧ್ಯವಿದೆ. ಯಶಸ್ಸಿನ ಬಗ್ಗೆ ಇರುವ ಅವರ ಪರಿಕಲ್ಪನೆಯನ್ನು ಬದಲಾಯಿಸಲು ನಿನಗೆ ಸಾಧ್ಯವಿಲ್ಲ. ನೀನು ನಿನ್ನ ಕಲ್ಪನೆ, ನಿನ್ನ ದೃಷ್ಟಿಕೋನಕ್ಕೆ ಕಟ್ಟುಬಿದ್ದಿರು. ಜೀವನದಲ್ಲಿ ನೀನು ಏನನ್ನಾದರೂ ಸಾಧಿಸಲು ಬಯಸುವೆ ಎಂದಿಟ್ಟುಕೊಳ್ಳೋಣ; ಒಂದು ನಿರ್ದಿಷ್ಟವಾದ ಗುರಿ. ನೀನು ಹಲವಾರು ಸೋಲುಗಳನ್ನು ಎದುರಿಸಲೂಬಹುದು, ಚಿಂತಿಸಬೇಡ. ನಿನ್ನ ಗುರಿಯು ಮುಖ್ಯವಾದುದು ಮತ್ತು ನೀನು ಅದರ ಕಡೆಗೆ ಕೆಲಸ ಮಾಡುತ್ತಾ ಇರಬೇಕು. ಪ್ರತಿಯೊಂದು ಸೋಲೂ ಯಶಸ್ಸಿನ ಕಡೆಗಿರುವ ಮೆಟ್ಟಿಲಾಗಿದೆ.

ನಾವು ಯಶಸ್ಸಿನ ಬಗ್ಗೆ ಅತಿಯಾಗಿ  ಕಾತುರರಾಗಿರಬಾರದು, ಆಗ ಅದು ಯಶಸ್ವಿಯಾಗಲು ಒಂದು ಅಡ್ಡಿಯಾಗುತ್ತದೆ. ನಿಮ್ಮ ಕಾರ್ಯದಲ್ಲಿನ, ನಿಮ್ಮ ಪ್ರವೃತ್ತಿಯಲ್ಲಿನ ಪರಿಪೂರ್ಣತೆಯನ್ನು ಸುಧಾರಿಸಿಕೊಳ್ಳಿ ಮತ್ತು ತನ್ನಿಂತಾನೇ, ಅನಾಯಾಸವಾಗಿ ಅಲ್ಲಿ ಫಲಿತಾಂಶ ಸಿಗುವುದನ್ನು ನೀವು ಕಾಣುವಿರಿ.

ಪ್ರಶ್ನೆ: ಯಶಸ್ವಿಯಾಗಲು ಅಪಾಯವನ್ನು ತೆಗೆದುಕೊಳ್ಳುವುದು ಅಷ್ಟೊಂದು ಆವಶ್ಯಕವಾಗಿರುವಾಗ, ಒಬ್ಬರಿಗೆ ಜೀವನದಲ್ಲಿ ಸುರಕ್ಷತೆಯ ಅನುಭವವಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ವಿಶ್ವಾಸ, ಮತ್ತು ಒಳಕ್ಕೆ ಆಳವಾಗಿ ಹೋಗುವುದರಿಂದ ನೀವು ವಿಶ್ವಾಸವನ್ನು ಪಡೆಯುತ್ತೀರಿ. ಕೆಲವು ನಿಮಿಷಗಳ ಧ್ಯಾನವು ನಿಮಗೆ ಆ ವಿಶ್ವಾಸವನ್ನು ನೀಡುವುದು. ನಿಮ್ಮದೇ ಜೀವನದ ಕಡೆಗೆ ತಿರುಗಿ ನೋಡಿ. ಒಂದು ನಿರ್ದಿಷ್ಟ ಪರಿಸ್ಥಿತಿಯಿಂದ ನೀವು ಹೇಗೆ ಹೊರಬರಬಲ್ಲಿರಿ ಎಂಬುದರ ಬಗ್ಗೆ ನೀವು ಚಿಂತಿತರಾಗಿದ್ದ ಹಲವಾರು ಸನ್ನಿವೇಶಗಳು ನಿಮಗೆದುರಾಗಿದ್ದವು ಮತ್ತು ಅವುಗಳೆಲ್ಲವನ್ನೂ ಸಾಕಷ್ಟು ಯಶಸ್ವಿಯಾಗಿ ದಾಟಲು ನಿಮಗೆ ಸಾಧ್ಯವಾಯಿತು. ನೀವು ನಿಮ್ಮ ಗತಕಾಲದ ಕಡೆಗೆ ನೋಡಿದರೆ, ಪ್ರತಿಯೊಂದು ಘಟನೆಯೂ ನಿಮ್ಮನ್ನು ಬಲಶಾಲಿಗಳನ್ನಾಗಿಸಿದೆ. ಕೆಟ್ಟ ಘಟನೆಗಳು ಎಲ್ಲೋ ನಿಮ್ಮ ಆಂತರಿಕ ಶಕ್ತಿಗೆ ಸಹಾಯ ಮಾಡಿವೆ ಮತ್ತು ಒಳ್ಳೆಯ ಘಟನೆಗಳು, ನಿಮ್ಮ ಸಾಮರ್ಥ್ಯದಲ್ಲಿ ಮತ್ತು ನಿಮ್ಮ ಸೃಜನಶೀಲತೆಯಲ್ಲಿ ನಿಮಗೆ ಇನ್ನೂ ಹೆಚ್ಚಿನ ವಿಶ್ವಾಸವನ್ನು ನೀಡಿವೆ.

ಹಾಗಾಗಿ ನಾವು ಕೇವಲ ಪರಿಸ್ಥಿತಿಗಳನ್ನು; ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ; ನಮ್ಮ ಪ್ರಗತಿಗಾಗಿ ಉಪಯೋಗಿಸಬೇಕು ಮತ್ತು ನಾನು ಹೇಳುತ್ತೇನೆ ಕೇಳಿ, ಅದು ನಮ್ಮ ಬೆಳವಣಿಗೆಗಾಗಿ.

ಪ್ರಶ್ನೆ: ಯಾವುದರಲ್ಲಾದರೂ ನಾವು ನಮ್ಮ ಅತ್ಯುತ್ತಮ ಪ್ರಯತ್ನ ನೀಡಿದ್ದೇವೆಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:  ನಿನ್ನ ಹೊಟ್ಟೆ ತುಂಬಿದಾಗ ನಿನಗೆ ಹೇಗೆ ತಿಳಿಯುತ್ತದೆ? ನೀನು ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ಓಡಿದೆಯೆಂಬುದು ನಿನಗೆ ಹೇಗೆ ತಿಳಿಯುತ್ತದೆ? ಅದು ಸ್ಪಷ್ಟವಾಗಿರುತ್ತದೆ! ಅದು ನಿನ್ನ ಕಾಲಿನಲ್ಲಿರುವ ನೋವಿನಂತೆ, ಮತ್ತು ನಿನ್ನ ಕಾಲಿನಲ್ಲಿ ನೋವಿದೆಯೆಂದು ನಿನಗೆ ಬೇರೆ ಯಾರೂ ಹೇಳಬೇಕಾಗಿಲ್ಲ! ನೀನು ಸಾಕಷ್ಟು ತಿಂದಿರುವೆಯೆಂದು ನಿನಗೆ ಬೇರೆ ಯಾರೂ ಹೇಳಬೇಕಾಗಿಲ್ಲ. ಅದೇ ರೀತಿಯಲ್ಲಿ, ನೀನು ನಿನ್ನ ನೂರು ಶೇಕಡಾವನ್ನು ಹಾಕಿದಾಗ, ಒಳಗಿನಿಂದ ಒಂದು ನಿರ್ದಿಷ್ಟವಾದ ತೃಪ್ತಿಯು ಸಿಗುತ್ತದೆ ಮತ್ತು "ನಾನು ನನ್ನಿಂದ ಸಾಧ್ಯವಿದ್ದುದನ್ನು ಮಾಡಿರುವೆನು ಮತ್ತು ಇನ್ನೂ ಹೆಚ್ಚಿಗೆ ಮಾಡಲು ನನಗೆ ಸಾಧ್ಯವಿಲ್ಲ" ಎಂದು ಹೇಳಲು ನಿನಗೆ ಸಾಧ್ಯವಾಗುತ್ತದೆ.

ಆದರೆ ನಿನ್ನ ಕಾರ್ಯದಲ್ಲಿ, ನಿನ್ನ ಉತ್ಪಾದನೆಯಲ್ಲಿ ಏನಾದರೂ ಕೊರತೆಯಿದ್ದರೆ ಆಗ ನಿನ್ನ ಮನಸ್ಸು, "ನಾನು ಇನ್ನೂ ಸ್ವಲ್ಪ ಉತ್ತಮವಾಗಿ ಮಾಡಬೇಕಾಗಿತ್ತು" ಎಂದು ಹೇಳುತ್ತದೆ. ಕುಳಿತುಕೊಂಡು ಭೂತಕಾಲದ ಬಗ್ಗೆ ಕೊರಗುವ ಬದಲು ನೀನು ಸುಮ್ಮನೇ ಮುಂದಕ್ಕೆ ಸಾಗಬೇಕು, ಆಗಿಹೋದುದನ್ನು ಸ್ವೀಕರಿಸಬೇಕು ಮತ್ತು ಮುಂದಿನ ಸಲ ನೀನು ನಿನ್ನ ನೂರು ಶೇಕಡಾವನ್ನು ಹಾಕುವೆಯೆಂಬುದಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ನೂರು ಶೇಕಡಾವನ್ನು ಹಾಕುವ ಈ ಸಂಕಲ್ಪವೇ, ನೀನು ಆ ನೂರು ಶೇಕಡಾವನ್ನು ಹಾಕುವಂತೆ ಮಾಡುತ್ತದೆ.

ಪ್ರಶ್ನೆ: ನಿಜವಾದ ಪ್ರೇಮದ ಸಂಕೇತಗಳೇನು?

ಶ್ರೀ ಶ್ರೀ ರವಿ ಶಂಕರ್: ಅದಕ್ಕೆ ಯಾವುದೇ ಪ್ರಮಾಣ ಬೇಕಾಗಿಲ್ಲ. ಪ್ರೇಮವನ್ನು ಕೇವಲ ಹೃದಯದಲ್ಲಿ ಅನುಭವಿಸಬಹುದು, ತಲೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರೇಮವೆಂದರೆ ಅಡಗಿಸಿಡಲು ಅಥವಾ ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹದ್ದು. ಪ್ರಪಂಚದ ಸುತ್ತಲಿರುವ ಪ್ರೇಮಿಗಳ ನೋವು ಇದುವೇ, ಅವರಿಗೆ ಅದನ್ನು ನೂರು ಶೇಕಡಾ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಹಾಗಾಗಿ ಅವರು ಅಸಂಪೂರ್ಣತೆಯನ್ನು ಅನುಭವಿಸುತ್ತಾರೆ. ಹಾಗೂ ಅವರಿಗೆ ಅದನ್ನು ಮುಚ್ಚಿಡಲೂ ಸಾಧ್ಯವಾಗುವುದಿಲ್ಲ, ಅದು ಹಾಗೆಯೇ ಕಾಣಿಸಿಕೊಳ್ಳುತ್ತದೆ. ನೀವದನ್ನು ಅಡಗಿಸಿಡಲು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ನಿಮ್ಮ ಕಾರ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಪ್ರಶ್ನೆ: ಆಳವಾದ ಪ್ರೇಮದೊಂದಿಗೆ ನಾವು ಪ್ರೇಮಿಸುವ ವ್ಯಕ್ತಿಯನ್ನು ಕಳೆದುಕೊಳ್ಳುವ ಭಾವನೆ ಬರುತ್ತದೆ. ಇದನ್ನು ಜಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಎಲ್ಲೋ ಪ್ರೇಮ, ಭಯ ಮತ್ತು ದ್ವೇಷ ಇವುಗಳೆಲ್ಲವೂ ಸಂಬಂಧ ಹೊಂದಿವೆ. ಜ್ಞಾನದ ಮೂಲಕ ಮಾತ್ರ ನಿಮಗೆ ಪ್ರೇಮವನ್ನು ಪರಿಶುದ್ಧವಾಗಿಡಲು ಸಾಧ್ಯ; ಅದನ್ನು ದ್ವೇಷವಾಗಿ ಅಥವಾ ಭಯವಾಗಿ ತಿರುಗಿಸದೇ ಇರುವ ಮೂಲಕ. ಅದಕ್ಕಾಗಿಯೇ ಜ್ಞಾನ, ತಿಳುವಳಿಕೆ ಮತ್ತು ಆಧ್ಯಾತ್ಮಿಕತೆಗಳು ಆವಶ್ಯಕವಾಗಿರುವುದು. ತಲೆ ಮತ್ತು ಹೃದಯ ಇವುಗಳೆರಡನ್ನೂ ತಮ್ಮ ತಮ್ಮ ಸರಿಯಾದ ಜಾಗಗಳಲ್ಲಿರಿಸಲು ಅವುಗಳು ಸಹಾಯ ಮಾಡುತ್ತವೆ.

ಪ್ರಶ್ನೆ: ಶ್ರೀ ಶ್ರೀಯವರೆ, ಪ್ರೇಮವು ನಮ್ಮ ಅಸ್ತಿತ್ವವಾಗಿದ್ದರೆ, ಕೇವಲ ಕೆಲವೇ ಜನರ ಕಡೆಗೆ ನಾವು ಪ್ರೇಮವನ್ನು ಅನುಭವಿಸುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಪ್ರೇಮದ ಅಭಿವ್ಯಕ್ತಿಯು ಬೇರೆ ಬೇರೆ ವಯಸ್ಸಿನ ಗುಂಪುಗಳೊಂದಿಗೆ ಬೇರೆ ಬೇರೆಯಾಗಿದೆ. ಮಕ್ಕಳೊಂದಿಗೆ ನಿಮ್ಮ ಪ್ರೇಮವು ಬೇರೆಯಾಗಿದೆ, ದೊಡ್ಡವರೊಂದಿಗೆ ನಿಮ್ಮ ಪ್ರೇಮವು ವಿಭಿನ್ನವಾಗಿದೆ ಮತ್ತು ಹಿರಿಯರೊಂದಿಗೆ ನಿಮ್ಮ ಪ್ರೇಮ ವಿಭಿನ್ನವಾಗಿದೆ. ಪ್ರೇಮಕ್ಕೆ ಹಲವಾರು ವರ್ಣಗಳಿವೆ. ದೇವರ ಕಡೆಗಿರುವ ಪ್ರೇಮ, ದೇಶ ಪ್ರೇಮ, ಭೂಮಿಯ ಮೇಲಿನ ಪ್ರೇಮ, ಮರಗಳ ಮೇಲಿನ ಪ್ರೇಮ, ಇವುಗಳೆಲ್ಲವೂ ನಿಮ್ಮ ಅಸ್ತಿತ್ವವೇ ಆಗಿರುವ ಒಂದೇ ವಿಷಯದ ಬೇರೆ ಬೇರೆ ಅಭಿವ್ಯಕ್ತಿಗಳಾಗಿವೆ; ಅದುವೇ ಪ್ರೇಮವಾಗಿದೆ.

ಪ್ರಶ್ನೆ: ಶ್ರೀ ಶ್ರೀಯವರೆ, ಹೆಚ್ಚಾಗಿ ವಿವಾಹವಾಗಿ ಕೆಲವು ವರ್ಷಗಳ ಬಳಿಕ ಪ್ರೇಮವು ಸತ್ತುಹೋಗುತ್ತದೆ. ಎಂದೆಂದಿಗೂ ಪ್ರೇಮದಲ್ಲಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಸಂಗಾತಿಯ ಪ್ರೀತಿಯ ಬಗ್ಗೆ ಯಾವತ್ತೂ ಸಂಶಯಿಸಬೇಡಿ ಅಥವಾ ಅವರಿಗೆ ನಿಮ್ಮ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸಲು ಅವರಲ್ಲಿ ಕೇಳಬೇಡಿ. ಏನನ್ನಾದರೂ ಸಾಬೀತುಪಡಿಸಲಿರುವ ಭಾರವು ಬಹಳ ದೊಡ್ಡದಾಗಿದೆ, ಅದು ಭಯಾನಕವಾದುದು. ಯಾರಾದರೂ ನಿಮ್ಮಲ್ಲಿ, ನೀವು ಅವರನ್ನು ನಿಜವಾಗಿಯೂ ಪ್ರೀತಿಸುತ್ತೀರೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಹೇಳಿದರೆ, ಅದು ನಿಮ್ಮ ಹೃದಯದ ಮೇಲೆ ಬಹಳ ಭಾರ ಹಾಕುತ್ತದೆ. ಒಬ್ಬರ ಪ್ರೀತಿಯ ಬಗ್ಗೆ ಯಾವತ್ತೂ ಸಾಕ್ಷ್ಯವನ್ನು ಕೇಳಬೇಡಿ.

ಕೆಲವೊಮ್ಮೆ ಅವರ ಅಭಿವ್ಯಕ್ತಿಗಳು ಬದಲಾಗಲೂಬಹುದು, ಅದು ಸ್ವಲ್ಪ ಬೇರೆ ರೀತಿಯಾಗಲೂಬಹುದು. ನಿಮ್ಮ ಕಡೆಗಿರುವ ಅವರ ಗಮನವು ಕಡಿಮೆಯಾಗುತ್ತಿದೆಯೆಂದು ನಿಮಗನ್ನಿಸಿದರೆ, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ದೂರುವ ಬದಲು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಅವರಲ್ಲಿ ಕೇಳಿ. ಆಗ, ಅವರು ನಿಮ್ಮನ್ನು ಅಷ್ಟೊಂದು ಪ್ರೀತಿಸುತ್ತಿಲ್ಲವಾದರೂ ಸಹ ಅವರು ನಿಮ್ಮನ್ನು ಹೆಚ್ಚು ಪ್ರೀತಿಸಲು ತೊಡಗುವರು. ಪ್ರೇಮದ ಅಭಿವ್ಯಕ್ತಿಯ ಕಡೆಗೆ ಒಬ್ಬರು ಒಂದು ಧನಾತ್ಮಕ ಮೇಲ್ನೋಟವನ್ನು ಹೊಂದಬೇಕು. ಇದೊಂದು ಸೂಕ್ಷ್ಮ ಸಂಗತಿಯಾಗಿದೆ. ಒಬ್ಬರು ನಿಮ್ಮನ್ನು ಪ್ರೀತಿಸುವಂತೆ ನೀವು ಬಲವಂತಪಡಿಸಲು ಸಾಧ್ಯವಿಲ್ಲ. ಅದು ಅಸಾಧ್ಯ. ಒಬ್ಬರನ್ನು ಪ್ರೀತಿಸುವಂತೆ ನಿಮ್ಮನ್ನು ನೀವೇ ಬಲವಂತಪಡಿಸುವುದು ಕೂಡಾ ಅಸಾಧ್ಯವಾದುದು. ಅದೆಲ್ಲವೂ ನಿಮ್ಮೊಳಗಿನಿಂದ ಒಂದು ಸಹಜವಾದ ಮತ್ತು ಸೂಕ್ಷ್ಮವಾದ ರೀತಿಯಲ್ಲಿ ಉದಯಿಸಬೇಕಾಗಿದೆ. ಇಲ್ಲಿಯೇ ನಿಮಗೆ ಕುಶಲತೆಯ ಅಗತ್ಯವಿರುವುದು ಮತ್ತು ಕುಶಲತೆಯು ನಿಮಗೆ ಜ್ಞಾನದಿಂದ ಬರುತ್ತದೆ.

ದುರಂತ ಸಮಯದಲ್ಲಿ ದೇವರನ್ನು ನಂಬುವುದೆಂತು?

ಬೆಂಗಳೂರು, ಭಾರತ
23ನೇ ಜೂನ್ 2013

ಪ್ರ: ಪ್ರೀತಿಯ ಗುರೂಜೀ, ಇತ್ತೀಚೆಗೆ ಜರ್ಮನಿ ಮತ್ತಿತರ ಯೂರೋಪ್ ದೇಶಗಳಲ್ಲಿ ವಿನಾಶಕಾರಿ ಪ್ರವಾಹವನ್ನೆದುರಿಸಿದೆವು. ಪರಿಸರದ ಬಗ್ಗೆ ನಮ್ಮ ಕರ್ತವ್ಯವೇನು ಮತ್ತು ಇದರಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೇನು?

ಶ್ರೀಶ್ರೀರವಿಶಂಕರ್: ಪ್ರಕೃತಿ ವಿಕೋಪಗಳು ನಡೆಯುತ್ತವೆ ಮತ್ತು ಮಾನವನ ದುಷ್ಕೃತ್ಯಗಳು ಅದನ್ನು ಹೆಚ್ಚಿಸುತ್ತದೆ.  ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುವ ಪ್ರದೇಶಗಳಲ್ಲಿ ನಮ್ಮ ಸಿದ್ಧತೆಯು ಬಹಳ ಕಡಿಮೆ. ಇದು ನನ್ನನ್ನು ಚಿಂತೆಗೊಳಪಡಿಸುತ್ತದೆ.

ಕೇದಾರನಾಥದ ಅತ್ಯಂತ ವಿನಾಶಕಾರಿ ಪ್ರವಾಹದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಇದಕ್ಕೆ ಕಾರಣ ಭಾಗಶಃ ಪರಿಸರದ ಬಗ್ಗೆ ನಮಗಿರುವ ನಿರ್ಲಕ್ಷ್ಯ. ಪರಿಸರವನ್ನು ನಾವು ಹೇಗೆ ರಕ್ಷಣೆ ಮಾಡಬೇಕೋ ಹಾಗೆ ರಕ್ಷಣೆ ಮಾಡುತ್ತಿಲ್ಲ. ಹಿಮಾಲಯದಲ್ಲಿ ಕಾಡಿನ ನಾಶ ಅತಿ ದೊಡ್ಡ ಸಮಸ್ಯೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದೇವೆ. ಹೆಚ್ಚಿನ ಅಧಿಕಾರವನ್ನು ಪಡೆಯುವುದಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದೇವೆ, ಅವುಗಳನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದಾಗಿತ್ತು.
ಎರಡನೆಯದಾಗಿ ಭಾರತದ ಯಾತ್ರಾರ್ಥಿಗಳನ್ನು ನಿರ್ಲಕ್ಷಿಸಲಾಗಿದೆ. ಪ್ರತಿವರ್ಷ ಸಾವಿರಾರು ಜನರು ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ. ಈ ಸ್ಥಳಗಳಲ್ಲಿ ಉತ್ತಮ ರಸ್ತೆ ಮತ್ತು ಪರ್ಯಾಯ ರಸ್ತೆಗಳನ್ನು ನಿರ್ಮಿಸಬೇಕಾಗಿತ್ತು, ಆಗ ರಸ್ತೆ ಖಾಲಿ ಮಾಡಿಸಲು ಅನುಕೂಲವಾಗುತಿತ್ತು. ಪ್ರವಾಹ ಬರುತ್ತದೆ, ವಿನಾಶವುಂಟಾಗುತ್ತದೆ, ಆದರೆ ಜನರ ಪ್ರಾಣವನ್ನು ರಕ್ಷಿಸಬಹುದು.
ಕ್ಯಾಲ್‍ಗರಿ ಮತ್ತು ಯೂರೋಪಿನಲ್ಲಿ ಜನರ ಪ್ರಾಣಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಸುನಾಮಿಯ ನಂತರ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಪ್ರಾಣಹಾನಿಯಾಗಿರಲಿಲ್ಲ. ಇದು ಹಿಮಾಲಯದ ಸುನಾಮಿ. ಅಲ್ಲಿ ನಮ್ಮ ಆರ್ಟ್ ಆಫ್ ಲಿವಿಂಗ್‍ನ ಸ್ವಯಂಸೇವಕರು ಸಂತ್ರಸ್ತರಿಗೆ ನೆರವಿನ ಸಾಮಗ್ರಿಗಳನ್ನು ಒದಗಿಸುತಿದ್ದಾರೆ. ಜರ್ಮನಿ ಹಾಗೂ ಕ್ಯಾಲ್‍ಗರಿಯಲ್ಲೂ ನಮ್ಮ ಸ್ವಯಂಸೇವಕರು ಕಾರ್ಯನಿರ್ವಹಿಸುತಿದ್ದಾರೆ.

ಅವರಲ್ಲಿಗೆ ಹೋಗಿ ನೆರವಿನ ಕಾರ್ಯದಲ್ಲಿ ತೊಡಗಲು ನಾನು ಹೇಳಿರಲಿಲ್ಲ. ನಮ್ಮ ಚೈತನ್ಯವು ಅರಳಿದಾಗ ಹೀಗೆ ಸ್ವಯಂ ಕಾರ್ಯತತ್ಪರರಾಗುವೆವು. ಮಾನವ ಮೌಲ್ಯಗಳನ್ನು ನಮ್ಮ ಹೃದಯವು ಅನುಭವಿಸುವುದು. ಇಂತಹ ಸಂದರ್ಭಗಳಲ್ಲಿ ಸಹಜವಾಗಿ ಪ್ರತಿಕ್ರಯಿಸುತ್ತದೆ ಮತ್ತು ಜನರು ಯೋಚಿಸದೇ ತಮ್ಮ ಸಹಬಾಂಧವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವರು.
ಇಂತಹ ಸನ್ನಿವೇಶಗಳೇ ನಮ್ಮ ಮಾನವೀಯತೆಯನ್ನು ಪರೀಕ್ಷಿಸುವುದು; ನೀವು ನಿಜವಾಗಲೂ ಮಾನವರೇ ಅಥವಾ ರೋಬೋಟ್‍ಗಳೇ ಎಂದು. ಆ ದುರ್ದೈವಿಗಳಿಗೆ ನಮ್ಮ ಸಹಾಯ ಹಸ್ತವನ್ನು ಚಾಚಬೇಕು. ಯಾವಾಗಲಾದರೂ, ಎಲ್ಲಿಯಾದರೂ ಪ್ರಕೃತಿ ವಿಕೋಪಗಳುಂಟಾದಾಗ ಜನರು ಅಧಿಕ ಸಂಖ್ಯೆಯಲ್ಲಿ ಮುಂದೆ ಬಂದು ತಮ್ಮ ಯೋಗದಾನವನ್ನು ನೀಡಬೇಕು.

ಸರ್ಕಾರವು ಇತ್ತ ಗಮನ ಹರಿಸಬೇಕು. ಇಂತಹ ವಿಕೋಪಗಳನ್ನು ಮುಂಚಿತವಾಗಿ ಕಂಡುಹಿಡಿಯಲು ಹಾಗೂ ಜನರ ಪ್ರಾಣಗಳನ್ನು ರಕ್ಷಿಸಲು ಮೀಟಿಯರಲಾಜಿಕಲ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಹೆಚ್ಚು ಕೆಲಸಗಳನ್ನು ಮಾಡಬಹುದಾಗಿದೆ. ವಿಪತ್ತು ನಿರ್ವಹಣೆ ವಿಜ್ಞಾನವೇ ಆಗಿದೆ. ಸದ್ಭಾವನೆಯುಳ್ಳವರು ಇಂತಹ ಸಂದರ್ಭಗಳಲ್ಲಿ ಎಚ್ಚೆತ್ತು ಯೋಗದಾನ ನೀಡಬೇಕು; ಅವರು ನೀಡುತಿದ್ದಾರೆ ಕೂಡ. ದುರಂತ ಪೀಡಿತರ ಜೀವನವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವರೆಲ್ಲರಿಗೂ ನನ್ನ ಧನ್ಯವಾದಗಳು.
ಇಲ್ಲಿಯೂ ಕೂಡ ತಮ್ಮ ಪ್ರಾಣ ಒತ್ತೆಯಿಟ್ಟು ಜನರನ್ನು ರಕ್ಷಿಸಿದ ಭಾರತದ ಸೇನಾಪಡೆ ಮತ್ತು ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಮರ್ಪಣೆ ಮತ್ತು ನೆರವು ಅತ್ಯಮೂಲ್ಯ. ಅವರ ಪರಿಶ್ರಮಕ್ಕೆ ನಾವೆಲ್ಲರೂ ಕೃತಜ್ಞತೆಯನ್ನು ಸಲ್ಲಿಸಬೇಕು.

ಪ್ರ: ಹಿಂದೆಂದೂ ಕಂಡಿಲ್ಲದ ದುರಂತ ಕೇದಾರನಾಥದಲ್ಲಿ ಸಂಭವಿಸಿತು. ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡರು ಮತ್ತು ಸ್ಥಳಾಂತರಗೊಂಡಿದ್ದರು. ಪ್ರಾರ್ಥನೆ ಸಲ್ಲಿಸಲೆಂದು ತೀರ್ಥಕ್ಷೇತ್ರಕ್ಕೆ ತೆರಳಿದವರು ದುರಂತವನ್ನೆದುರಿಸಿದರು. ಈ ಹಂತದಲ್ಲಿ ಅನೇಕರ ವಿಶ್ವಾಸ ಅಲುಗಾಡಿರಬಹುದು. ಇದನ್ನು ಹೇಗೆ ನಿಭಾಯಿಸುವುದು?

ಶ್ರೀಶ್ರೀರವಿಶಂಕರ್: ಮೊದಲಿಗೆ, ದೇವರು ನಿಷ್ಪಕ್ಷಪಾತಿಯೆಂದು ತಿಳಿಯೋಣ. ಪ್ರಕೃತಿ ನನ್ನದು ನಿಮ್ಮದೆಂದು ನೋಡುವುದಿಲ್ಲ. ಕೇದಾರನಾಥದಲ್ಲೇ ದೇವರು ನೆಲೆಸಿಲ್ಲ. ಅವನು ಸರ್ವವ್ಯಾಪಿ. ನಿಮ್ಮ ಹೃದಯದಲ್ಲಿ ವಾಸವಾಗಿದ್ದಾನೆ, ಸರ್ವಾಂತರ್ಯಾಮಿ.
ಹೆಚ್ಚಿಗೆ ಭೇಟಿ ನೀಡುವ ತೀರ್ಥಕ್ಷೇತ್ರಗಳಿಗೆ ಅಗತ್ಯವಿರುವ ಸೌಲಭ್ಯವಿಲ್ಲ. ದೇಶದೆಲ್ಲೆಡೆ ತೀರ್ಥಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದಾರೆ. ಅಲ್ಲಿ ಉತ್ತಮ ಸೌಕರ್ಯ, ರಸ್ತೆ, ಸಂಪರ್ಕ ವ್ಯವಸ್ಥೆಯ ಅಗತ್ಯವಿದೆ. ಈ ಬಗ್ಗೆ ಎಷ್ಟರ ಮಟ್ಟಿಗೆ ಕಾರ್ಯತತ್ಪರರಾಗಬೇಕೋ ಅಷ್ಟು ನಿರ್ವಹಿಸುತ್ತಿಲ್ಲ.

ಅನೇಕ ಘಟನೆಗಳು ನಮ್ಮ ವಿಶ್ವಾಸವನ್ನು ಅಲುಗಾಡಿಸಲು ಬರುತ್ತವೆ. ಆದರೆ ಏನೇ ಬರಲಿ ಸತ್ಯಕ್ಕೆ ಜಯ ಮತ್ತು ಒಳ್ಳೆಯದಕ್ಕೆ ಅವಕಾಶವಿದೆಯೆಂಬ ವಿಶ್ವಾಸವಿರಬೇಕು. ಇದು ಪ್ರಾರ್ಥನೆಯ ಸಮಯ. ದುರ್ಘಟನೆಗಳು ಸಂಭವಿಸಿದಾಗ, ಭಯ ನಮ್ಮ ಮನಸ್ಸನ್ನು ಆವರಿಸಿದಾಗ, ಪ್ರಾರ್ಥನೆ ಸಹಾಯಕವಾಗುತ್ತದೆ. ಭರವಸೆಯನ್ನು ಕಳೆದುಕೊಳ್ಳಬೇಡಿ. ಪ್ರತಿಯೊಂದು ಸ್ಥಳವೂ ದೇವರಿಗೆ ಸೇರಿದ್ದು. ವಿಕೋಪಗಳುಂಟಾಗುವುದು. ಇಂತಹ ಸಮಯದಲ್ಲಿ ನಿಮ್ಮ ನಂಬಿಕೆಯು ಪರೀಕ್ಷೆಗೊಳಪಡುವುದು. ನಿಮ್ಮ ನಂಬಿಕೆಯು ಅಚಲವಾಗಿರಲಿ. ನಿಮ್ಮ ಸುತ್ತಮುತ್ತಲಿರುವವರಿಗೆ ನೀವೇನು ಸಹಾಯ ಮಾಡಬಲ್ಲಿರೆಂದು ಯೋಚಿಸಿ.
ಅನೇಕ ಜನರನ್ನು ರಕ್ಷಿಸಲಾಗಿದೆ.ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಹಾಗೂ ಅವರ ಕುಟುಂಬದವರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಿ. ಈ ದುರಂತದಿಂದ ದುಃಖತಪ್ತರಾದ ಅವರ ಕುಟುಂಬವರ್ಗದವರು ಹೊರಬರಲಿ. ಇದನ್ನು ನಿಭಾಯಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಹೀಗೆ ಪ್ರಾರ್ಥಿಸಿ. ಬದುಕುಳಿದವರ ಕುರಿತು ಪ್ರಾರ್ಥಿಸಿ ಮತ್ತು ಈ ದುರ್ಘಟನೆಯನ್ನು ಅನುಭವಿಸಿದ ಜನರನ್ನು ರಕ್ಷಿಸಿದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ.

ಮಾನವ ದುರಂತವನ್ನು ವರ್ಣಿಸಲು ಪದಗಳೇ ಇಲ್ಲ. ಈ ಪ್ರದೇಶ ದುರ್ಗಮ ಹಾಗೂ ಕಷ್ಟಕರವೆಂದು ತಿಳಿದು ಈಗಲಾದರೂ ನಾವು ಎಚ್ಚೆತ್ತು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಸರಿಯಾದ ರಸ್ತೆ, ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದು ತುರ್ತಾಗಿ ಆಗಬೇಕಾಗಿದೆ. ಬಹಳ ಕಾಲದಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಈ ದುರಂತದಿಂದ ಅಲ್ಲಿಗೆ ಭೇಟಿ ನೀಡುವುದನ್ನು ನಿಲ್ಲಿಸಲಾಗದು.

ಈ ದುರ್ಘಟನೆಯಿಂದ ಪಾಠ ಕಲಿಯೋಣ. ಮಾನವ ನಿರ್ಲಕ್ಷ್ಯದಿಂದ ಸಂಭವಿಸಿದ ಈ ದುರಂತ ಭೂಮಿಯ ಇನ್ಯಾವುದೇ ಸ್ಥಳದಲ್ಲಿ ಸಂಭವಿಸುವುದು ಬೇಡ. ಇದಕ್ಕಿಂತ ಮೀರಿ ಯಾವ ಮುನ್ಸೂಚನೆಯನ್ನು ನೀಡಲಾಗುವುದಿಲ್ಲ ಅಥವಾ ಹೇಳಲಾಗುವುದಿಲ್ಲ. ಆದ್ದರಿಂದ ನಮ್ಮ ನಿರ್ಲಕ್ಷ್ಯವನ್ನು ಆದಷ್ಟು ಕಡಿಮೆ ಮಾಡಿಕೊಳ್ಳೋಣ.

ಪ್ರ: ಬ್ರೆಜಿಲ್‍ನಲ್ಲಿ ಇತ್ತೀಚಿನ ಪ್ರತಿಭಾಟನಾ ಮೆರವಣಿಗೆಗಳಿಂದ ಜೀವನದ ಎಲ್ಲಾ ವಿಷಯಾಂಶಗಳ ಮೇಲೆ ಪರಿಣಾಮ ಬೀರಿದೆ. ಇದನ್ನು ಹೇಗೆ ನಿಭಾಯಿಸುವುದು?

ಶ್ರೀಶ್ರೀರವಿಶಂಕರ್: ಜನರಿಗೆ ನ್ಯಾಯ ಸಿಗದಿದ್ದಾಗ ಅಥವಾ ಸಮಾಜದಲ್ಲಿ ಭ್ರಷ್ಟಾಚಾರದಿಂದ ಬೇಸೆತ್ತಾಗ ಸಹಜವಾಗಿ ಉದ್ವಿಗ್ನರಾಗುತ್ತಾರೆ. ಜನರು ಪ್ರತಿಭಟಿಸಲು, ಚಳುವಳಿ ಹೂಡಲು ಒಟ್ಟಾಗುತ್ತಾರೆ. ಅವರು ಎಚ್ಚೆತ್ತುಕೊಳ್ಳುತ್ತಿರುವುದು ಶುಭ ಸಂಕೇತ.

ಒಂದು ಉಪಾಯವೆಂದರೆ ಎಲ್ಲವನ್ನೂ ಹೇಗಿದೆಯೋ ಹಾಗೆಯೇ ಸ್ವೀಕರಿಸಿ, ತಲೆಕೆಡಿಸಿಕೊಳ್ಳದೇ, ಲಂಚಕೋರತನದ ಒಂದು ಭಾಗವಾಗಿರುವುದು. ಇನ್ನೊಂದು ಮಾರ್ಗವೆಂದರೆ ಲಂಚಕೋರತನದ ವಿರುದ್ಧ ಮತ್ತು ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು. ಇದು ಸ್ವಾಗತಾರ್ಹ ಮನೋಭಾವ. ಇದನ್ನು ಖಂಡಿತವಾಗಿ ಶ್ಲಾಘಿಸಬೇಕು.

ಒಂದು ವಿಷಯವೇನೆಂದರೆ ಜನಸ್ತೋಮವು ಸಮಾಜದ ವಿರೋಧಿಯಾಗದಂತೆ ಮತ್ತು ಹಿಂಸಾಚರಣೆಗೆ ತಿರುಗದಂತೆ ಕಾರ್ಯನಿರ್ವಹಿಸಬೇಕು. ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುವಂತೆ ಜಾಗ್ರತೆವಹಿಸಬೇಕು. ಪ್ರತಿಭಟನೆಗಳನ್ನು ಹೂಡುವುದು ಯಾವುದೋ ಒಂದು ಕಾರಣಕ್ಕಾಗಿ ಹೊರತು ವ್ಯಕ್ತಿಗತವಲ್ಲ ಎಂಬುದನ್ನು ಗಮನಿಸಬೇಕು, ಏಕೆಂದರೆ ಜನರು ಬದಲಾಗುತ್ತಾರೆ ಮತ್ತು ಎಲ್ಲರಲ್ಲೂ ಪರಿವರ್ತನೆಗೊಳ್ಳುವಂತಹ ಸಾಮರ್ಥ್ಯವಿದೆ. ಇದನ್ನು ನಾವು ಗುರುತಿಸಬೇಕು. ಪ್ರತಿಭಟನೆ ಹಾಗೂ ಚಳುವಳಿಗಳ ಔಚಿತ್ಯವನ್ನು ಶಾಂತಿ ಹಾಗೂ ಉದ್ದೇಶಗಳೊಂದಿಗೆ ಕಾಪಾಡಬೇಕು.

ಶಾಂತಿಯಿಂದ ಇಲ್ಲದಿದ್ದಾಗ ಉದ್ದೇಶ ಮತ್ತು ಗುರಿಯನ್ನು ಕಳೆದುಕೊಳ್ಳುತ್ತೇವೆ. ಯಾವುದೇ ಪ್ರತಿಭಟನೆಯಲ್ಲಿ ಅಹಿಂಸೆ ಮಾರ್ಗದರ್ಶಕ ಶಕ್ತಿಯಾಗಬೇಕು. ವ್ಯಕ್ತಿಗತವಾಗಿಲ್ಲದೇ ಒಂದು ಸಮುಚಿತ ಕಾರಣಕ್ಕೆ ನಿರ್ದೇಶಿತವಾಗಿರಬೇಕು. ಪ್ರಾಣ ಅಥವಾ ಆಸ್ತಿಗಳಿಗೆ ಹಾನಿಯುಂಟು ಮಾಡಬಾರದು. ಇಂತಹ ಮಾರ್ಗಸೂಚಿ ಇರಬೇಕು.

ಸದುದ್ದೇಶವುಳ್ಳವರು ಪ್ರತಿಭಟನೆಯನ್ನು ಪ್ರಾರಂಭಿಸುವರು. ನಂತರ ಲಕ್ಷ್ಯದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುವುದು ಕಾರಣ ಸಮಾಜ ವಿರೋಧಿಗಳು ಪ್ರವೇಶಿಸಿ ಹಿಂಸಾಚಾರಗಳನ್ನು ನಡೆಸುವರು. ಇಲ್ಲಿ ಜನರು ಹಿಂಸೆ ಮತ್ತು ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಅಹಿಂಸೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಪ್ರತಿಭಟನೆ ಹಾಗೂ ಪ್ರದರ್ಶನಗಳನ್ನು ನಡೆಸಿದಾಗ ಅದನ್ನು ಸ್ವಾಗತಿಸಬೇಕು. ಹಿಂಸೆಯ ಕೃತ್ಯಗಳು ನಡೆದಾಗ ಬಲ ಪ್ರಯೋಗಿಸದೇ ಅದನ್ನು ಅಡಗಿಸಲು ಅನ್ಯ ಮಾರ್ಗವಿರುವುದಿಲ್ಲ. ಬಹಳ ಕಷ್ಟವಾಗುವುದು. ಶಾಂತಿಯುತವಾದ, ಅಹಿಂಸಾಯುತ ಆಂದೋಲನಗಳು ನಡೆಯಲಿ ಎಂದು ಮತ್ತೆ ಒತ್ತಿ ಹೇಳುತ್ತೇನೆ. ಇಂದಿನ ಸಂದರ್ಭದಲ್ಲಿದು ಅತ್ಯವಶ್ಯಕ.

ಪ್ರ: ಪ್ರೀತಿಯ ಗುರೂಜೀ, ನಮ್ಮ ಪೌರ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹಿಂಸಾಚಾರವಿಲ್ಲದೇ ಹೇಗೆ ಕಾಪಾಡುವುದು? ಸರ್ಕಾರವು ಭಿನ್ನತೆಯನ್ನು ಸೃಷ್ಟಿಸಿ ಒಡೆದು ಆಳುವ ನೀತಿಯನ್ನು ಬಳಸುತ್ತಿರಬೇಕಾದರೆ ಸಮಾಜದಲ್ಲಿ ಆತ್ಮೀಯತೆಯನ್ನು ಹೇಗೆ ಬೆಳೆಸುವುದು?

ಶ್ರೀಶ್ರೀರವಿಶಂಕರ್:  ಒಂದು ಮಹತ್ ಕಾರ್ಯಕ್ಕೆ ಅನೇಕ ಅಡಚಣೆಗಳು ಹಾಗೂ ಸವಾಲುಗಳು ಬರುತ್ತವೆ. ಸವಾಲುಗಳು ದೊಡ್ಡದಾಗಿದ್ದರೆ ನಮ್ಮ ಮೌಲ್ಯಗಳಿಗೆ ಅಂಟಿಕೊಳ್ಳಬೇಕು. ಅನ್ಯಾಯವಿದ್ದಾಗ, ಮುಖ್ಯವಾಗಿ ಹಿಂಸಾಚರಣೆಯಿದ್ದಾಗ, ಶಾಂತಿಯಿಂದಿರಲು ಅಸಾಧ್ಯವೆಂದು ಬಲ್ಲೆ. ಅತೀ ಜಾಗರೂಕತೆಯಿಂದ ಹಾಗೂ ಉತ್ಸಾಹದಿಂದ ಇದನ್ನು ನಿಭಾಯಿಸಬಹುದು. ಏನೇ ಬರಲಿ ನಮ್ಮ ಗುರಿ ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿರಲಿ.

ನಿಮ್ಮ ನಿರ್ಧಾರದಲ್ಲಿ ಬಲಶಾಲಿಯಾಗಿದ್ದಾಗ, ನೀವು ಎದುರಿಸುವ ಸಣ್ಣ ಪುಟ್ಟ ತೊಂದರೆಗಳು ಏನೂ ಅಲ್ಲ. ನೀವು ಆಗಲೂ ಮುನ್ನಡೆಯುವಿರಿ.

ನ್ಯಾಯ ಬಯಸುವುದು, ಮಾನವ ಹಕ್ಕುಗಳು ಮತ್ತು ಮೌಲ್ಯಗಳನ್ನು ಪಡೆಯಲಿಚ್ಛಿಸುವುದು ಸುಲಭವಲ್ಲ. ಅದು ಸುದೀರ್ಘ ಮಾರ್ಗ. ಸಮಾಜದಲ್ಲಿ ಕೆಲವು ಪಟ್ಟಭದ್ರಹಿತಾಸಕ್ತಿಗಳುಂಟು ಮತ್ತು ಕೆಲವರು ಅಧಿಕಾರವನ್ನು ಹಿಡಿದುಕೊಂಡಿರಲು ಬಯಸುತ್ತಾರೆ. ಕೆಲವರು ಯೋಚಿಸದೇ ಕೃತ್ಯಗಳನ್ನು ಮಾಡುವರು, ಅವರಿಗೆ ಒಂದೇ ಭಾಷೆ ತಿಳಿದಿರುವುದು, ಅದು ಹಿಂಸೆಯ ಭಾಷೆ. ಇಂತಹ ಸಂದರ್ಭದಲ್ಲಿ ಅತಿ ಜಾಗರೂಕರಾಗಿದ್ದು, ನಮ್ಮ ಗುರಿಯನ್ನು ತಲುಪಲು ಶಾಂತಿ ಮತ್ತು ಅಹಿಂಸಾ ಮಾರ್ಗದಲ್ಲಿ ಮುನ್ನಡೆಯಬೇಕು.

ಸತ್ಯಕ್ಕೆ ಸದಾ ಜಯವೆಂದು ನಮ್ಮ ಜನರಿಗೆ ನೈತಿಕ ಬಲ ನೀಡಬೇಕು. ಈ ನಂಬಿಕೆ ನಿಮ್ಮಲ್ಲಿದ್ದಾಗ ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ, ಮುಂದೆ ಸಾಗುವಿರಿ.

ನಾವು ಗೊಂದಲದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ಮತ್ತು ಕೋಪದಲ್ಲಿದ್ದಾಗ, ನಮ್ಮೊಳಗೆಲ್ಲೋ ಒಂದು ಕಡೆ ಅಲುಗಾಡಿಸಿದಂತಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಯಾವುದೇ ಬೃಹತ್ ಕೆಲಸವನ್ನೆತ್ತಿಕೊಳ್ಳಲು ಅಗಾಧ ಶಕ್ತಿಯ ಅಗತ್ಯವಿರುತ್ತದೆ. ಈ ಅಗಾಧ ಶಕ್ತಿಯು ನಮ್ಮೊಳಗಿನ ಶಾಂತತೆಯಿಂದ ಬರುತ್ತದೆ.

ಎರಡನೆಯದಾಗಿ, ಮಾತುಕತೆಗೆ ಸದಾ ಸಿದ್ಧವಾಗಿರಿ.

ಮೂರನೆಯದಾಗಿ, ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯನ್ನು ಕೆಟ್ಟದ್ದೆಂದು ಪಟ್ಟಿ ಹಚ್ಚುವುದು ಬೇಡ. ಹಾಗೆ ಹಣೆಪಟ್ಟಿ ಹಚ್ಚಿದರೆ, ಸಂಪರ್ಕಕ್ಕೆ ಬಾಗಿಲು ಮುಚ್ಚಿದಂತಾಗುತ್ತದೆ. ಮಹಾತ್ಮಾ ಗಾಂಧೀಜೀಯವರು ಎಂದೂ ಬ್ರಿಟಿಷರನ್ನು ಕೆಟ್ಟವರೆಂದು ಪಟ್ಟಿ ಹಚ್ಚಲಿಲ್ಲ. ಅವರೊಂದಿಗೆ ಸದಾ ಸಂಪರ್ಕದ ಕೊಂಡಿಯನ್ನು ಮುಕ್ತವಾಗಿಟ್ಟಿಟ್ಟುಕೊಂಡಿದ್ದರು. ಅನೇಕ ದುಷ್ಕೃತ್ಯಗಳು ನಡೆದ ಮೇಲೂ ಸಹ ಅವರೊಡನೆ ಸಂವಾದಿಸಲು ಮತ್ತೆ ಮತ್ತೆ ಭೇಟಿ ನೀಡಿದರು. ಬೇರೆಯವರು ಅಥವಾ ಸರ್ಕಾರ ಜನಪರವಾಗಿಲ್ಲವೆಂದು ಯೋಚಿಸಬಾರದು. ಆಗ ಇನ್ನಷ್ಟು ಸಿಟ್ಟಾಗಿ, ಆ ಸಿಟ್ಟಿನಲ್ಲಿ ನಮ್ಮ ಶಕ್ತಿಯನ್ನು ಮತ್ತಷ್ಟು ಕಳೆದುಕೊಳ್ಳುತ್ತೇವೆ.

ಸಂಪರ್ಕದ ಕೊಂಡಿಯನ್ನು ಸದಾ ಮುಕ್ತವಾಗಿಟ್ಟುಕೊಂಡಿರುವುದು ಉತ್ತಮ. ನ್ಯಾಯ, ಪ್ರಜಾಪ್ರಭುತ್ವದ ಹಕ್ಕುಗಳು, ಶಾಂತಿ, ಸಮೃದ್ಧಿ ಹಾಗೂ ಪ್ರಗತಿಯ ಕುರಿತು ಸ್ಥಿರವಾದ ಮಾರ್ಗವನ್ನು ಅನುಸರಿಸಿ. ದೃಢನಿಶ್ಚಯವನ್ನು ಹೊಂದಿರಿ ಮತ್ತು ಜನರನ್ನು ದೃಢತೆ ಹಾಗೂ ಶಾಂತಿಯಿಂದ ಪ್ರತಿಭಟಿಸಲು ಪೆÇ್ರೀತ್ಸಾಹಿಸಿ. ಇದು ಹೇಳಲು ಸುಲಭವೆಂದು ನನಗೆ ಗೊತ್ತು, ಆದರೂ ಸಹ ಇದೇ ನಿಟ್ಟಿನಲ್ಲಿ ನಾವು ಮುಂದುವರೆದರೆ ಜಯ ನಮ್ಮದಾಗುವುದು.

ಪ್ರ: ಪ್ರೀತಿಯ ಗುರೂಜೀ, ಪಾಕಿಸ್ತಾನದ ಮುಸ್ಲಿಮರು ಶಾಂತಿ ಬಯಸುವವರು. ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹೇಗೆ ತೊಲಗಿಸುವುದು?

ಶ್ರೀಶ್ರೀರವಿಶಂಕರ್: ಭಯೋತ್ಪಾದನೆಯನ್ನು ತಡೆಗಟ್ಟಲು, ಭಯೋತ್ಪಾದಕರೊಡನೆ ಸಂಪರ್ಕವನ್ನು ಹೇಗೆ ಸ್ಥಾಪಿಸುವುದು ಮತ್ತು ಅವರ ಮನಸ್ಸಿನಲ್ಲಿ ಹೇಗೆ ವಿವೇಚನೆಯನ್ನು ತರುವುದೆಂದು ಆಲೋಚಿಸುವುದು ಆವಶ್ಯಕ.

ಎರಡನೆಯದಾಗಿ, ವೈವಿಧ್ಯತೆಯನ್ನು ಅಂಗೀಕರಿಸಿ, ಆನಂದಿಸುವುದು. ವೈವಿಧ್ಯತೆಯು ಸಂಘರ್ಷ ಅಥವಾ ವಿವಾದಾಸ್ಪದ ವಿಷಯವಲ್ಲ. ಅದು ಉತ್ಸವಾಚರಣೆಯ ವಿಷಯ.

ಎಲ್ಲರೂ ಭಿನ್ನವಾಗಿದ್ದೇವೆ. ಪ್ರತಿಯೊಬ್ಬರೂ ಬೇರೆ ಬೇರೆ ಉಡುಪುಗಳನ್ನು ಧರಿಸಿದ್ದೀರ, ಪ್ರತಿಯೊಬ್ಬರ ಜೀವನಶೈಲಿಯೂ ಭಿನ್ನವಾಗಿದೆ. ಈ ವಿಭಿನ್ನತೆಯನ್ನು ಒಪ್ಪಿಕೊಂಡು ಜಾಗತಿಕ ಪರಿವಾರದ ದೃಷ್ಟಿಕೋನವನ್ನು ಹೊಂದಿರಬೇಕು. ನಾವೆಲ್ಲರೂ ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರಗಳನ್ನೊಳಗೊಂಡಿರುವ ಒಂದು ವಿಶ್ವ ಪರಿವಾರದವರು. ಈ ವೈವಿಧ್ಯತೆ ಕುರಿತ ಹೆಮ್ಮೆಯನ್ನು ಯುವಜನಾಂಗದ ಮನಸ್ಸಿನಲ್ಲಿ ಮೂಡಿಸಬೇಕು. ಒಮ್ಮೆ ಇದನ್ನು ತಿಳಿದರೆ, ಅವರೆಂದಿಗೂ ತೀವ್ರವಾದಿ ಅಥವಾ ಭಯೋತ್ಪಾದಕರಾಗುವುದಿಲ್ಲ.

ಭಯೋತ್ಪಾದಕ ಹಾಗೂ ತೀವ್ರವಾದಿಗಳ ಮನಸ್ಥಿತಿ ಇರುವವರೊಂದಿಗೆ ನಾನು ವ್ಯವಹರಿಸಿದ್ದೇನೆ. ಎರಡು ಬಗೆಯ ತೀವ್ರವಾದಿಗಳಿದ್ದಾರೆ, ಒಂದು ಧಾರ್ಮಿಕ ಹಾಗೂ ಇನ್ನೊಂದು ಸೈದ್ಧಾಂತಿಕ ತೀವ್ರವಾದಿಗಳು. ಭಾರತದಲ್ಲಿನ ಮಾವೋಗಳು ಒಂದು ಗುರಿಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಡಲು ಸಿದ್ಧವಾಗಿರುತ್ತಾರೆ. ಅವರು ಅರಿಯದ ಒಂದೇ ಒಂದು ವಿಷಯವೆಂದರೆ ಇನ್ನೊಬ್ಬರಿಗೆ ನೋವು ಮತ್ತು ಕಷ್ಟಗಳನ್ನು ನೀಡಿ ತಮ್ಮ ಗುರಿಯನ್ನು ತಲುಪಲಾಗದು ಅಥವಾ ಆದು ಸಂತೋಷ ಕೊಡುವುದಿಲ್ಲವೆಂದು ತಿಳಿದಿಲ್ಲ. ನಾವು ಜನರಿಗೆ ಈ ವೈವಿಧ್ಯತೆಯ ಶಿಕ್ಷಣವನ್ನು ನೀಡಬೇಕು, ಅವರೊಂದಿಗೆ ಮುಕ್ತ ಸಂಪರ್ಕವನ್ನು ಹೊಂದಿರಬೇಕು ಮತ್ತು ‘ನಾನೇ ಸರಿ ಮತ್ತಿನ್ನೆಲ್ಲರೂ ತಪ್ಪು' ಎನ್ನುವ ಧೋರಣೆಗೆ ಬೀಳದಂತೆ ನಿಗಾ ವಹಿಸಬೇಕು.

ಇವರೆಲ್ಲರೂ ಸ್ವಲ್ಪ ಉಸಿರಾಟ ಪ್ರಕ್ರಿಯೆ ಮತ್ತು ವಿಶ್ರಾಮ ಮಾಡಿದರೆ, ಸೃಷ್ಟಿಯ ರಮ್ಯತೆಯನ್ನು ನೋಡಿದರೆ, ವೈವಿಧ್ಯತೆಯಲ್ಲಿರುವ ಸೌಂದರ್ಯವನ್ನು ಗುರುತಿಸಿದರೆ, ಖಂಡಿತವಾಗಿಯೂ ಬದಲಾಗುವರು. ನಾನು ನೋಡಿದ್ದೇನೆ ಅನೇಕ ಜನರು ತಮ್ಮ ಯೋಚನಾಲಹರಿಯನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ತಪ್ಪು ಕಲ್ಪನೆಗಳಿರುತ್ತವೆ, ಯಾವುದೋ ಅವ್ಯಕ್ತ ಭಯವಿರುತ್ತದೆ, ಅಥವಾ ಯಾವುದೋ ಬಗೆಯ ಹಿಂಸೆಗೆ ಗುರಿಯಾಗಿರುತ್ತಾರೆ. ಅವರು ತಮ್ಮನ್ನು ತಾವೇ ನಾಶಮಾಡಿಕೊಳ್ಳುವಂತಹ ತೀವ್ರ ತೆರನಾದ ಸಿದ್ಧಾಂತವನ್ನು ಸ್ವೀಕರಿಸಲು ಇದೇ ಕಾರಣವಿರಬಹುದು.

ಪ್ರ: ಅರ್ಜೆಂಟೀನಾ ದೇಶದ ರಾಜಕೀಯ ವರ್ಗದವರಿಗೆ ಸಮಾಜವನ್ನು ಬೆಳೆಸಲು ಶಾಂತಿಯೇ ಉತ್ತಮ ಮಾರ್ಗವೆಂದು ಹೇಗೆ ಅರಿವು ಮೂಡಿಸುವುದು?

ಶ್ರೀಶ್ರೀರವಿಶಂಕರ್: ರಾಜಕೀಯವನ್ನು ಆಧ್ಯಾತ್ಮಿಕತೆಯನ್ನಾಗಿ, ವ್ಯಾಪಾರವನ್ನು ಸಾಮಾಜಿಕತೆಗೂ ಹಾಗೂ ಧರ್ಮವನ್ನು ಜಾತ್ಯಾತೀತತೆಗೆ ಪರಿವರ್ತಿಸಬೇಕು. ಇದೇ ಉಪಾಯ. ಜಾತ್ಯಾತೀತತೆ ಎಂದರೆ ಧಾರ್ಮಿಕರು ಇಡೀ ವಿಶ್ವದ ಕುರಿತು ಆಲೋಚಿಸಬೇಕು, ಕೇವಲ ತಮ್ಮ ಧರ್ಮ ಅಥವಾ ತಮ್ಮ ಸಮುದಾಯವನ್ನಷ್ಟೇ ಅಲ್ಲ. ಸಾಮಾನ್ಯವಾಗಿ ಒಬ್ಬ ಧಾರ್ಮಿಕ ಮುಖಂಡನು ತನ್ನ ಧರ್ಮವನ್ನು ಅನುಸರಿಸುವವರೊಂದಿಗೆ ಮಾತ್ರ ಆತ್ಮೀಯತೆಯನ್ನು ಹೊಂದಿರುತ್ತಾನೆ. ಅಂತಹ ಪ್ರತಿಬಂಧದಿಂದ ಹೊರಬಂದು, ಇಡೀ ವಿಶ್ವವನ್ನು ಕುರಿತು ಪ್ರಾರ್ಥಿಸಬೇಕು.

ಹಾಗೆಯೇ, ಪ್ರತಿಯೊಬ್ಬ ವ್ಯಾಪಾರಿಯು ಸ್ವಲ್ಪ ಮಟ್ಟಿಗೆ ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸಮಾಜದ ಒಂದು ಭಾಗವಾಗಿರಬೇಕು.

ರಾಜಕಾರಣಿಗಳು ದೇಶದ ಬಗ್ಗೆ ಮೊದಲು ಆಲೋಚಿಸಿ, ನಂತರ ತಮ್ಮ ಪಕ್ಷ, ತದನಂತರ ತಮ್ಮ ಬಗ್ಗೆ ಆಲೋಚಿಸಬೇಕು. ಇವತ್ತು ಏನಾಗುತ್ತಿದೆಯೆಂದರೆ ಮೊದಲು ತಮ್ಮ ಬಗ್ಗೆ ಆಲೋಚಿಸುವರು, ನಂತರ ಪಕ್ಷ ಮತ್ತು ಇನ್ನೇನ್ನಾದರೂ ಉಳಿದಿದ್ದರೆ ಆಗ ರಾಷ್ಟ್ರ. ಈ ಪ್ರವೃತ್ತಿಯನ್ನು ಹಿಂದುಮುಂದಾಗಿಸಬೇಕು.

ಸಮಾಜದಲ್ಲಿ ಹೆಚ್ಚಿನ ಜನರ ಒಳಿತಿಗಾಗಿ ಕಾಳಜಿವಹಿಸಿದಾಗ ತಾನೆ ತಾನಾಗಿ ಆಧ್ಯಾತ್ಮಿಕರಾಗುತ್ತಾರೆ, ಸಹಜವಾಗಿ ಶಾಂತಿಯನ್ನು ಬಯಸುತ್ತಾರೆ ಮತ್ತು ದೂರದೃಷ್ಟಿಯಿಲ್ಲದೇ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಮಾಯವಾಗುವುದು.

ಅಧಿಕಾರ ಮತ್ತು ಹಣ ಬರುತ್ತದೆ, ಹೋಗುತ್ತದೆ. ಆದರೆ ನಮ್ಮ ಧೋರಣೆಯಿಂದ ಹಾಗೂ ಕೆಲಸಗಳಿಂದ ಒಳ್ಳೆಯತನವು ಚಿರಸ್ಥಾಯಿಯಾಗಿರುತ್ತದೆ. ಇದನ್ನು ರಾಜಕಾರಣಿಯು ತಿಳಿಯಬೇಕು. ಅವರು ಸಂಕುಚಿತ ಮನೋಭಾವವಿಟ್ಟುಕೊಳ್ಳದೇ ದೀರ್ಘಾವಧಿಯಲ್ಲಿ ಹೆಚ್ಚಿನ ಜನರಿಗೆ ಲಾಭವಾಗುವುದರ ಬಗ್ಗೆ ಆಲೋಚಿಸಬೇಕು. ಇದನ್ನೇ ತಮ್ಮ ಕಾರ್ಯಸೂಚಿಯನ್ನಾಗಿಸಿಕೊಳ್ಳಬೇಕು. ಇದೇ ಉತ್ಕೃಷ್ಟವಾಗಿರುವಂತಹದು.

ಶಾಂತಿಯು ಅತ್ಯಗತ್ಯ. ನಾವು ಶಾಂತಿಯಿಂದ ಇದ್ದಾಗ, ವಿಚಾರಗಳು ಮೂಡುತ್ತವೆ. ಅಶಾಂತಿ ನೆಲೆಸಿದಾಗ, ಅಸಮಾಧಾನಗೊಂಡು, ಆಲೋಚನೆ ಹಗೂ ಕಾರ್ಯಗಳಲ್ಲಿ ಇನ್ನಷ್ಟು ಗೊಂದಲವನ್ನು ತರುತ್ತೇವೆ ಹೊರತು ಶಾಂತಿಯನ್ನಲ್ಲ. ಆದ್ದರಿಂದ ಎಲ್ಲರೂ ಧ್ಯಾನ ಮಾಡಬೇಕು!

ಪ್ರ: ಶಾಂತಿಯೆಂದರೇನು ಮತ್ತು ಅದರ ತತ್ವಗಳನ್ನು ನಮ್ಮ ಜೀವನದಲ್ಲಿ, ಧರ್ಮ, ಸಂಸ್ಕೃತಿ ಮತ್ತು ಪರಿವಾರದಲ್ಲಿ, ಮತ್ತು ಶಿಶುವಿಹಾರದಾರಭ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಿಕೊಳ್ಳುವುದು?

ಶ್ರೀಶ್ರೀರವಿಶಂಕರ್: ಮಕ್ಕಳಿಂದ ನಾವು ಬಹಳ ಕಲಿಯಬೇಕಾಗಿದೆ. ಪ್ರತಿದಿನ ಒಬ್ಬ ಹೊಸ ಸ್ನೇಹಿತನನ್ನು ಮಾಡಿಕೊಳ್ಳಬೇಕೆಂದು ತಿಳಿಸಬೇಕು.

ಒಂದು ತರಗತಿಯಲ್ಲಿ ನಲವತ್ತರಿಂದ ಐವತ್ತು ಮಕ್ಕಳಿದ್ದರೆ, ಅವರಲ್ಲಿ ನಿಮಗೆಷ್ಟು ಜನ ಸ್ನೇಹಿತರೆಂದು ಕೇಳಿದರೆ, ಸಾಮಾನ್ಯವಾಗಿ ಬೆರಳೆಣಿಸುವಷ್ಟಿರುತ್ತಾರೆ, ಮತ್ತು ಆ ಸ್ನೇಹಿತರೊಂದಿಗೆ ಮಾತ್ರ ವರ್ಷವಿಡೀ ಕಳೆಯುತ್ತಾರೆ. ಅವರ ಸ್ನೇಹಪರತೆಯನ್ನು ಹೊರತರಬೇಕು. ಇದಕ್ಕಾಗಿ ಪ್ರತಿದಿನ ಒಬ್ಬನನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕೆಂದು ಹೇಳಬೇಕು. ನಿಮ್ಮನ್ನು ಅವಹೇಳನ ಮಾಡಿದರೂ ಪರವಾಗಿಲ್ಲ. ನಕ್ಕುಬಿಡಿ. ಹಾಸ್ಯ ಹಾಗೂ ವಿನೋದ ಭಾವವಿರಲಿ. ವೈವಿಧ್ಯತೆಯನ್ನು ಆರಾಧಿಸಿ.

ಯಾರಾದರೂ ವಿಭಿನ್ನ ರೀತಿಯಲ್ಲಿ ಉಡುಪು ಧರಿಸಿದ್ದರೆ ಅಥವಾ ಭಿನ್ನವಾಗಿ ಕಾಣುತ್ತಿದ್ದರೆ ಅಥವಾ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರನ್ನು ಅಪರಿಚಿತರಂತೆ ಕಾಣದೇ ನಿಮ್ಮದೇ ಒಂದು ಭಾಗವೆಂದು ಮನವರಿಕೆ ಮಾಡಿಸಿ. ಈ ಕೆಲವು ಮೌಲ್ಯಗಳನ್ನು ಮಕ್ಕಳಲ್ಲಿ ಪ್ರೇರೇಪಿಸಬಹುದು.

ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯನ್ನು ತರುವುದೇ ಧರ್ಮದ ಗುರಿ. ಆ ವಿಶ್ವ ಸತ್ಯಕ್ಕೆ, ವಿಶ್ವ ಚೈತನ್ಯಕ್ಕೆ ಮತ್ತು ವಿಶ್ವ ಪ್ರೀತಿಗೆ ಸಂಪರ್ಕ ಹೊಂದಿರುವುದು ಮತ್ತು ಸಹಬಾಂಧವರಿಗೆ ಸಹಾಯ ಮಾಡುವುದೇ ಧರ್ಮದ ಗುರಿ. ದಿವ್ಯತೆ, ಜ್ಯೋತಿ ಮತ್ತು ಪ್ರೀತಿಯ ಆಂತರಿಕ ಅನುಭವವೇ ಧರ್ಮದ ತಿರುಳು. ಇದನ್ನೇ ನಮ್ಮ ಗುರಿಯನ್ನಾಗಿರಿಸಿಕೊಳ್ಳಬೇಕು, ಇದರ ಮೇಲೇ ಕೇಂದ್ರೀಕರಿಸಬೇಕು.

ಎರಡನೆಯದಾಗಿ ಸಾಂಸ್ಕೃತಿಕ ವೈವಿಧ್ಯತೆ. ಪ್ರತಿ ಕೆಲವು ಕಿಲೋಮೀಟರುಗಳಿಗೂ ಸಂಸ್ಕೃತಿ ಬದಲಾಗುತ್ತದೆ. ನೂರು ಕಿಲೋಮೀಟರ್ ಸಾಗಿದರೆ, ಆಡುಭಾಷೆ ಬದಲಾಗುತ್ತದೆ, ಆಹಾರ ಪದ್ಧತಿ ಬದಲಾಗುತ್ತದೆ ಮತ್ತು ಈ ವೈವಿಧ್ಯತೆಯೇ ನಮ್ಮ ಸೃಷ್ಟಿಯ ಸೌಂದರ್ಯ. ಇದನ್ನು ಪ್ರಶಂಸಿಸಬೇಕು. ಇದನ್ನು ವಿವಾದಾಸ್ಪದ ವಿಷಯವನ್ನಾಗಿ ತಿರುಗಿಸದೇ ಉತ್ಸವದ ಅವಕಾಶವನ್ನಾಗಿ ಮಾರ್ಪಡಿಸಬೇಕು. ಇದು ಬಹಳ ಮುಖ್ಯ. ಇದನ್ನು ಕಾರ್ಯಗತಗೊಳಿಸಲು ಶಕ್ತಿ ಅಗತ್ಯ.

ನಾವು ಒತ್ತಡದಲ್ಲಿದ್ದಾಗ ಶಕ್ತಿ ಎಲ್ಲಿಂದ ಬರುತ್ತದೆ? ಅದಕ್ಕಾಗಿಯೇ ಸ್ವಲ್ಪ ಉಸಿರಾಟ ಪ್ರಕ್ರಿಯೆಗಳನ್ನು ಮಾಡಬೇಕು, ಹಿತಮಿತವಾದ ಆಹಾರ ಮತ್ತು ಹಾಸ್ಯ ಮನೋಭಾವವಿರಬೇಕು, ಅತಿ ಮುಖ್ಯವಾಗಿ ಪ್ರತಿದಿನ ಹತ್ತು ನಿಮಿಷ ವಿಶ್ರಮಿಸಲು ಅಥವಾ ಧ್ಯಾನ ಮಾಡಲು ಸಮಯ ವಿನಿಯೋಗಿಸಿ.  ಎಲ್ಲರಿಗೂ ಇದನ್ನೇ ಹೇಳುವುದು. ಹತ್ತರಿಂದ ಹದಿನೈದು ನಿಮಿಷಗಳ ಸಮಯ ಕುಳಿತು ವಿಶ್ರಮಿಸಿ, ನಿಮ್ಮ ಮನಸ್ಸು, ಬುದ್ಧಿಗಳನ್ನು ವಿಶ್ರಮಿಸಿ, ಆಂತರ್ಯದೊಳಗೆ ಹೋಗಿ, ನಿಮ್ಮ ಉಸಿರಾಟವನ್ನು ಗಮನಿಸಿ, ನೀವೊಂದು ಶಕ್ತಿಯ ಕಾರಂಜಿ, ಪ್ರೀತಿಯ ಸಾಗರ ಮತ್ತು ವಿಚಾರಗಳ ಪರ್ವತವೆಂದು ತಿಳಿಯುವಿರಿ.

ಪ್ರ: ಕೊರಿಯಾದಲ್ಲಿ ಆತ್ಮಹತ್ಯೆಯ ಸಂಖ್ಯೆ ಅತಿ ಹೆಚ್ಚಾಗಿದೆ. ಇಲ್ಲಿನ ಮಕ್ಕಳು ಅತಿ ಹೆಚ್ಚು ಸ್ಪರ್ಧೆ, ಅತಿ ಕಡಿಮೆ ಸಂಸ್ಕೃತಿ ಮತ್ತು ಆಧ್ಯಾತ್ಮದ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ. ನಿಮ್ಮ ಜ್ಞಾನ ಸಂದೇಶವನ್ನು ಕಳುಹಿಸಿಕೊಡಿ.

ಶ್ರೀಶ್ರೀರವಿಶಂಕರ್: ನಿಮ್ಮ ಪ್ರಾಣಶಕ್ತಿಯು ಕಡಿಮೆಯಾದಾಗ ಖಿನ್ನತೆಗೊಳಗಾಗುವಿರಿ. ಇನ್ನೂ ಕ್ಷೀಣಿಸಿದಾಗ ಆತ್ಮಹತ್ಯೆಯ ಪ್ರವೃತ್ತಿಗಳೇಳುತ್ತವೆ. ಸರಿಯಾದ ಉಸಿರಾಟ ಪ್ರಕ್ರಿಯೆ, ಧ್ಯಾನ ಮತ್ತು ಸುಸಂಗತದಲ್ಲಿ ಪ್ರಾಣಶಕ್ತಿಯು ಹೆಚ್ಚುತ್ತದೆ.

ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳೆದ್ದಾಗ, ಅದನ್ನು ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ, ಅವರು ನಮ್ಮ ನಕಾರಾತ್ಮಕತೆಯನ್ನು ಕರಗಿಸುವ ಬದಲು ಅದನ್ನು ಬಲಪಡಿಸುತ್ತಾರೆ. ‘ಹೌದು. ನೀವು ಹೇಳುತ್ತಿರುವುದು ಸರಿ. ಎಲ್ಲವೂ ನಿರಾಶಾದಾಯಕವಾಗಿದೆ’ಎನ್ನುವರು. ಅವರ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸಬೇಕು.

ಬಡವರಷ್ಟೇ ಅಲ್ಲ ಶ್ರೀಮಂತರೂ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ ಏಕೆಂದರೆ ಈ ಆತ್ಮಹತ್ಯೆ ಪ್ರವೃತ್ತಿಗೆ ಕಾರಣ ಮಾನಸಿಕ ಸ್ಥಿತಿ. ಆತ್ಮಹತ್ಯೆಗೂ ಲೌಕಿಕ ವಸ್ತುಗಳ ಗಳಿಕೆಗೂ ಸಂಬಂಧವಿಲ್ಲ. ಇಂತಹ ಪ್ರವೃತ್ತಿಯುಳ್ಳವರನ್ನು ಕರೆದು ಧ್ಯಾನ ಹಾಗೂ ಉಸಿರಾಟ ಪ್ರಕ್ರಿಯೆಗಳನ್ನು ಮಾಡಿಸಿ, ಶಕ್ತಿಯನ್ನು ವೃದ್ಧಿಸುವವರ ಬಳಿ ಕಳುಹಿಸಬೇಕು.

ಸ್ವಹಿಂಸೆ ಪರಹಿಂಸೆಯಷ್ಟೇ ಕೆಟ್ಟದ್ದು. ಆದ್ದರಿಂದ ಪ್ರಪಂಚವು ಒಂದೆಡೆ ಸಾಮಾಜಿಕ ಹಿಂಸೆ ಇನ್ನೊಂದೆಡೆ ಆತ್ಮಹತ್ಯೆ ಪ್ರವೃತ್ತಿಯ ನಡುವೆ ಸಿಕ್ಕಿಹಾಕಿಹೊಂಡಿದೆ. ಈ ಇಬ್ಬದಿಗಳಿಂದ ಸಮಾಧಾನ ತರುವುದು, ಕೇಂದ್ರಕ್ಕೆ ತರುವುದು ಆಧ್ಯಾತ್ಮ.

ಯಾರಿಗಾದರೂ ಆತ್ಮಹತ್ಯೆಯ ಪ್ರವೃತ್ತಿಯಿದೆಯೆಂದು ತಿಳಿದರೆ, ದಯವಿಟ್ಟು ಅವರಿಗೆ ಯೋಗ ಮಾಡಲು ಹೇಳಿ. ಅವರನ್ನು ಸುಸಂಗತಕ್ಕೆ ಸೇರಿಸಿ, ಹಾಡಿಸಿ, ನೃತ್ಯ ಮಾಡಿಸಿ, ಜೀವನ ಕೆಲವು ಲೌಕಿಕ ವಸ್ತುಗಳ ಗಳಿಕೆಯಷ್ಟೇ ಅಲ್ಲ ಎಂಬುದನ್ನು ಅರ್ಥ ಮಾಡಿಸಿ. ಜೀವನ ಇನ್ನೊಬ್ಬರ ತೆಗಳಿಕೆ ಅಥವಾ ಹೊಗಳಿಕೆಗಿಂತ ದೊಡ್ಡದು, ಸಂಬಂಧ ಅಥವಾ ಕೆಲಸಕ್ಕಿಂತ ಹಿರಿದು.

ಆತ್ಮಹತ್ಯೆಗೆ ಕಾರಣ ಸಂಬಂಧಗಳಲ್ಲಿ ಹಾಗೂ ಕೆಲಸಗಳಲ್ಲಿ ಸೋಲು ಮತ್ತು ಬಯಸಿದ್ದನ್ನು ಪಡೆಯಲಾಗದೇ ಇರುವುದು. ನಿಮ್ಮ ಚೇತನದಲ್ಲಿ ಮೂಡುವ ಚಿಕ್ಕ ಚಿಕ್ಕ ಆಸೆಗಳಿಗಿಂತ ಜೀವನ ಬಹಳ ವಿಸ್ತಾರವಾದುದು. ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು, ಸಾಮಾಜಿಕ ಚಟುವಟಿಕೆ ಅಥವಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ.

ಸೇವೆಯು ಜನರನ್ನು ಸ್ವಸ್ಥವಾಗಿರಿಸುತ್ತದೆ ಮತ್ತು ಖಿನ್ನತೆಯಿಂದ ದೂರವಿಡುತ್ತದೆ. ಮಾನಸಿಕ ಖಿನ್ನತೆಯು ಆರ್ಥಿಕ ಕುಸಿತಕ್ಕಿಂತ ನಿಕೃಷ್ಟವಾದುದು. ಇದನ್ನು ದಾಟಿ ಮುಂದೆ ಹೋಗಲು ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ಸುತ್ತಮುತ್ತಲಿನವರಿಗೂ ಸಹಾಯ ಮಾಡಬೇಕು. ಆರ್ಟ್ ಆಫ್ ಲಿವಿಂಗ್ ಇಂತಹವರೊಂದಿಗೆ ಕೆಲಸ ಮಾಡುತ್ತಿದೆ. ಇವರೊಂದಿಗೆ ಇನ್ನೂ ಹೆಚ್ಚು ಜನರು ಸೇರಿ ಖಿನ್ನತೆ ಹಾಗೂ ಆತ್ಮಹತ್ಯೆ ಪ್ರವೃತ್ತಿಯ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಕಾರ್ಯನಿರ್ವಹಿಸಬೇಕು.

ಪ್ರ: ಸಮಾಜದಲ್ಲಿ ಮಾದಕ ವಸ್ತುಗಳ ಚಟವೆಂಬುದು ತೀವ್ರತೆರನಾದ ಸಮಸ್ಯೆ. ಇದರಿಂದ ಹೊರಬರುವುದು ಹೇಗೆ?

ಶ್ರೀಶ್ರೀರವಿಶಂಕರ್: ತಂದೆ-ತಾಯಂದಿರು ಮಕ್ಕಳ ಮನಸ್ಸಿನಲ್ಲಿ ಮಾದಕ ವಸ್ತುಗಳನ್ನು ಮುಟ್ಟಬಾರದು, ಅದು ಚಟಕ್ಕೆ ತಿರುಗಿ, ಹಾನಿಯುಂಟು ಮಾಡುವುದೆಂದು ನಿರ್ಬಂಧಿಸಬೇಕು. ಅವುಗಳ ಬಗ್ಗೆ ಪ್ರತಿಕೂಲ ಭಾವನೆಯನ್ನು ಬೆಳಸಬೇಕು. ಆ ಕಡೆ ನೋಡದಂತೆ ಒಂದು ಮಾನಸಿಕ ನಿರ್ಬಂಧವನ್ನು ನಿರ್ಮಿಸಬೇಕು. ಇದು ಅತ್ಯವಶ್ಯಕ.

ಹೇಗೆ ಬೆಳೆಯುವ ಗಿಡವನ್ನು ರಕ್ಷಿಸಲು ಸುತ್ತ ಬೇಲಿಯನ್ನು ಹಾಕುತ್ತೇವೋ ಹಾಗೆಯೇ ಈ ಯುವಮನಸ್ಸನ್ನು ಕೆಲವು ಮಾನಸಿಕ ನಿರ್ಬಂಧಗಳಿಂದ ರಕ್ಷಿಸಬೇಕು. ಇದು ಅವಶ್ಯಕ. ಆ ಕಡೆ ಒಂದಿಂಚೂ ಚಲಿಸದಂತೆ ಕೆಲವು ಪರಿಕಲ್ಪನೆಗಳನ್ನು ನೀಡಬೇಕು.

ಈಗಾಗಲೇ ಮಾದಕ ಸೇವನೆಯ ಚಟದಲ್ಲಿರುವವರಿಗೆ ಅದರಿಂದ ಹೊರಗೆ ಬರಲು ಮೂರು ದಾರಿಗಳುಂಟು: ಪ್ರೀತಿ, ಲೋಭ ಮತ್ತು ಭಯ. ಅವರು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅವರ ಮೇಲೆ ಶಪಥ ಮಾಡಿಸಿ, ಆ ಮಾದಕ ವಸ್ತುವನ್ನು ಎಂದಿಗೂ ಮುಟ್ಟುವುದಿಲ್ಲವೆಂದು ಅಥವಾ ಅವುಗಳನ್ನು ಮುಟ್ಟದಿದ್ದರೆ ಬಹಳ ಅದೃಷ್ಟ ಖುಲಾಯಿಸುವುದೆಂದು ಹೇಳಿ.

ಆ ಚಟದಿಂದ ಹೊರಬರಲು ಯಾವುದೇ ರೀತಿಯಲ್ಲಾಗಲೀ ಸಹಾಯ ಮಾಡಿ. ಹೋಮಿಯೋಪತಿ ಮತ್ತು ಆಯುರ್ವೇದಗಳಲ್ಲಿ ಅನೇಕ ಉಪಶಮನಗಳಿವೆ. ಯೋಗ ಮತ್ತು ಧ್ಯಾನ ಕೂಡ ಬಹಳ ಒಳ್ಳೆಯದು. ಮಿಲಿಯನ್ ಜನರು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ ಮಾದಕ ವಸ್ತುಗಳ ಚಟದಿಂದ ಹೊರಬಂದಿರುವುದನ್ನು ಕಂಡಿದ್ದೇನೆ.

ಪ್ರ: ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಜಾತ್ಯಾತೀತವಲ್ಲ ಎಂದು ಯಾರಾದರೂ ಭಾವಿಸಿದರೆ, ಅವರಿಗೆ ನಿಮ್ಮ ಸಲಹೆಯೇನು?

ಶ್ರೀಶ್ರೀರವಿಶಂಕರ್: ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಯಾರು ಮಾಡಿಲ್ಲವೋ ಅವರು ಹೀಗೆ ಅಭಿಪ್ರಾಯವನ್ನಿಟ್ಟುಕೊಂಡಿರುತ್ತಾರೆ. ಎಲ್ಲರಿಗೂ ವ್ಯಾಯಾಮ ಅಥವಾ ತಂತ್ರ ಕೆಲಸ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸೃಜನಾತ್ಮಕತೆಗೆ ಸಹಕಾರಿಯಾಗಿದೆ. ಆದ್ದರಿಂದ ಮೊದಲು ಇದನ್ನು ಪ್ರಯತ್ನಿಸಿ, ನಂತರ ತಿಳಿಯುತ್ತದೆ ಇದು ಜಾತ್ಯಾತೀತ ಮತ್ತು ಸರ್ವವ್ಯಾಪಿಯಾಗಿದೆಯೆಂದು.

ಧರ್ಮ ಅಥವಾ ನಂಬಿಕೆಗಳನ್ನು ಯೋಗ ವಿರೋಧಿಸುವುದಿಲ್ಲ. ಒಮ್ಮೆ ಇದನ್ನು ಅಭ್ಯಾಸ ಮಾಡಿದರೆ ಈ ತಪ್ಪು ಅಭಿಪ್ರಾಯವನ್ನು ಸುಲಭವಾಗಿ ತೊಡೆದುಹಾಕಬಹುದು.

ಪ್ರ: ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ. ವಿಭಜನೆಗೆ ಕಾರಣ ಧರ್ಮವೇ ಅಥವಾ ಧರ್ಮ ಒಂದುಗೂಡಿಸುತ್ತದೆಯೇ?

ಶ್ರೀಶ್ರೀರವಿಶಂಕರ್: ಜ್ಞಾನವಿಲ್ಲದೇ, ವಿವೇಕವಿಲ್ಲದೇ ಧರ್ಮ ಜನರನ್ನು ವಿಭಜಿಸುವಂತೆ ಗೋಚರಿಸುತ್ತದೆ; ಸ್ವಸ್ವರೂಪದ ಪ್ರಮುಖ ಅಥವಾ ಏಕಮಾತ್ರ ಸಂಕೇತವಾಗುತ್ತದೆ.

ಮೊದಲು ಬೇರೆ ಬೇರೆ ಧರ್ಮಗಳ ನಡುವೆ ಘರ್ಷಣೆಗಳು ಉದ್ಭವಿಸುತ್ತವೆ. ನಂತರ ಧರ್ಮದೊಳಗೆ ಘರ್ಷಣೆಗಳು ಉಂಟಾಗುವವು, ತದನಂತರ ಪಂಗಡಗಳುಂಟಾಗುವವು. ವಿವೇಕವಿಲ್ಲದೇ ತಿಳುವಳಿಕೆಯಿಲ್ಲದೇ ಇವೆಲ್ಲ ಸಂಭವಿಸುವವು.

ಜ್ಞಾನಿಯಾದವನು ಎಲ್ಲ ಧರ್ಮಗಳಿಂದ ಲಾಭ ಪಡೆಯುತ್ತಾನೆ. ಧರ್ಮವು ಜೀವನದ ಮೌಲ್ಯವನ್ನು ವೃದ್ಧಿಸುತ್ತದೆ. ಈ ವಿವೇಕವಿಲ್ಲದೇ ಕೇವಲ ನಿಮ್ಮ ಗುರುತಿಗಾಗಿಯಷ್ಟೇ ಧರ್ಮವನ್ನು ಆಚರಿಸುತ್ತಿದ್ದರೆ, ನಿಮ್ಮ ವಿಕಾಸಕ್ಕಾಗಿ ಅಲ್ಲದಿದ್ದರೆ, ಆಗ ಅದು ಖಂಡಿತ ವಿಭಜಿಸುತ್ತದೆ.

ನಾವು ಒಂದು ಬೆಳಕಿನ ಭಾಗವೆಂದು ಮೊದಲು ಗುರುತಿಸಿಕೊಳ್ಳಬೇಕು. ಎರಡನೆಯದಾಗಿ ಒಂದು ಸಮಾಜ, ಒಂದು ಜಾಗತಿಕ ಪರಿವಾರದ ಭಾಗವೆಂದು ಗುರುತಿಸಿಕೊಳ್ಳುವುದು. ಮೂರನೆಯದು ರಾಷ್ಟ್ರ ಅಥವಾ ಭಾಷೆಯಾಗಿರಬಹುದು. ನಾಲ್ಕನೆಯದು ಧರ್ಮವಾಗಬಹುದು. ಮತ್ತು ಐದನೆಯದು ನಿಮ್ಮ ಪರಂಪರೆ ಅಥವಾ ಪರಿವಾರವಾಗಬಹುದು.

ಇನ್ನಿತರ ಗುರುತುಗಳನ್ನು ಇಟ್ಟುಕೊಳ್ಳಬಹುದು. ಆದರೆ ಒಂದು ಮಾನವ ಸಮಾಜದ, ಒಂದು ವಿಶ್ವ ಪ್ರಕಾಶದ ಭಾಗವೆಂದು ಮರೆತರೆ, ಆಗ ಧರ್ಮ ಸಮಾಜವನ್ನು ವಿಭಜಿಸುವುದು ಮತ್ತು ನಮ್ಮನ್ನು ನಾಶಗೊಳಿಸುವುದು. ವಿವೇಕದಿಂದ ವೈವಿಧ್ಯತೆಯನ್ನು ಉತ್ಸವದಂತೆ ಆಚರಿಸಿ. ಉತ್ತಮ ಮಾನವನಾಗಿ ರೂಪುಗೊಳ್ಳಲು ಎಲ್ಲ ಧರ್ಮಗಳಿಂದಲೂ ಉತ್ತಮವಾದುದನ್ನು ತೆಗೆದುಕೊಳ್ಳಿರಿ.

ಪ್ರ: ಶ್ರೀಶ್ರೀಗಳೇ ನಮ್ಮೆಲ್ಲರಿಗೂ ನಿಮ್ಮ ಸಂದೇಶವೇನು?

ಶ್ರೀಶ್ರೀರವಿಶಂಕರ್: ಈ ಭೂಮಿಯ ಮೇಲಿನ ಪ್ರತಿಯೊಂದು ಮುಖವೂ ವಿಶ್ವ ಗ್ರಂಥ, ದೇವರ ಗ್ರಂಥ. ಎಲ್ಲರೂ ಪ್ರೀತಿಯ ಚಿಲುಮೆಯೇ. ಪ್ರೀತಿಯು ಅಭಿವ್ಯಕ್ತವಾಗಲಿ, ಕಾರಂಜಿಯಂತೆ ಹರಿಯಲಿ ಮತ್ತು ಈ ಸಮಯದಲ್ಲಿ ನಮ್ಮ ಭೂಮಿಯನ್ನು ಸಂಪನ್ನಗೊಳಿಸಲಿ. ನಿಮ್ಮೆಲ್ಲರಿಗೂ ನನ್ನ ಪ್ರೀತಿ ಮತ್ತು ಆಶೀರ್ವಾದಗಳು.

ಶುಕ್ರವಾರ, ಜೂನ್ 7, 2013

ಸ್ವಧರ್ಮ

ಬೆಂಗಳೂರು, ಭಾರತ
೭ ಜೂನ್ ೨೦೧೩

ಪ್ರಶ್ನೆ: ಗುರುದೇವ ಸ್ವಧರ್ಮವೆಂದರೇನು ಮತ್ತು ನನ್ನ ಸ್ವಧರ್ಮ ಯಾವುದೆಂಬುದನ್ನು ನಾನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಸ್ವಧರ್ಮವೆಂದರೆ, ಯಾವ ಕೆಲಸವು ನಿಮ್ಮ ಸ್ವಭಾವಕ್ಕನುಗುಣವಾಗಿ ಇರುವುದೋ ಅದು. ಅದು, ನಿಮ್ಮ ಕುಶಲತೆಗಳಿಗೆ ಮತ್ತು ಪ್ರತಿಭೆಗಳಿಗೆ; ನಿಮ್ಮದೇ ಸ್ವಭಾವಕ್ಕನುಗುಣವಾಗಿ ಹಾಗೂ ಯಾವುದಕ್ಕೆ ನೀವು ಜವಾಬ್ದಾರರಾಗಿರುವಿರೋ ಅದಕ್ಕನುಗುಣವಾಗಿ ಪ್ರವರ್ತಿಸುವುದಾಗಿದೆ. ನೀವು ಭಯಬೀತರಾಗುವಂತೆ ಅಥವಾ ಚಡಪಡಿಸುವಂತೆ ಮಾಡದಿರುವ ಯಾವುದೇ ಕ್ರಿಯೆಯು ಸ್ವಧರ್ಮವಾಗಿದೆ. ಯಾವ ಕೆಲಸವನ್ನು ಮಾಡಲೇಬೇಕೆಂದು ನಿಮಗನಿಸುವುದೋ, ಯಾವುದನ್ನು ಮಾಡದಿರುವುದರಿಂದ ನಿಮಗೆ ಚಡಪಡಿಕೆಯಾಗುವುದೋ ಅದು ಸ್ವಧರ್ಮವಾಗಿದೆ.

ಈಗ ಇದನ್ನು ಅಪಾರ್ಥ ಮಾಡಿಕೊಂಡು, ’ನನಗೆ ಮದ್ಯಪಾನ ಮಾಡದಿದ್ದರೆ ಚಡಪಡಿಕೆಯಾಗುತ್ತದೆ’ ಎಂದು ಹೇಳಬೇಡಿ. ಅಲ್ಲ! ಅಲ್ಲವೇ ಅಲ್ಲ. ಪ್ರತಿಸಲವೂ ನಿಮಗೆ ಚಡಪಡಿಕೆಯಾದಾಗ, ಅದು ಯಾವತ್ತೂ ಸ್ವಧರ್ಮದ ಕಾರಣದಿಂದಾಗಿಯಲ್ಲ. ಆದರೆ ಅದೇ ವೇಳೆ, ನಿಮ್ಮ ಸ್ವಧರ್ಮವನ್ನು ಅನುಸರಿಸದೇ ಇರುವುದು ಯಾವತ್ತೂ ನೀವು ಚಡಪಡಿಸುವಂತೆ ಮಾಡುತ್ತದೆ. ಅದಕ್ಕಾಗಿಯೇ ಭಗವದ್ಗೀತೆಯಲ್ಲಿ ಹೀಗೆಂದು ಹೇಳಿರುವುದು,

’ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ II’  (೩.೩೫)

ನಾವು ಯಾವುದನ್ನಾದರೂ ಪ್ರಾಮಾಣಿಕತೆಯಿಲ್ಲದೆ ಮಾಡುವಾಗ, ಕೇವಲ ಇನ್ನೊಬ್ಬ ವ್ಯಕ್ತಿಗೆ ತೋರಿಸುವುದಕ್ಕೋಸ್ಕರ ಮಾಡುವಾಗಲೇ ನಮಗೆ ಭಯವಾಗುವುದು ಯಾಕೆಂದರೆ, ಅಂತಹ ಕೆಲಸವು ಅಸಲಿಯಾಗಿರುವುದಿಲ್ಲ, ಅದು ಹೃದಯದಿಂದ ಬಂದಿರುವುದಿಲ್ಲ. ಆದರೆ ನಾವು ಪ್ರಾಮಾಣಿಕವಾಗಿ ಮತ್ತು ಹೃದಯದಿಂದ ಏನನ್ನಾದರೂ ಮಾಡುವಾಗ, ಅಲ್ಲಿ ಯಾವುದೇ ಭಯವಿರುವುದಿಲ್ಲ.

ಒಬ್ಬರು ಸುಳ್ಳು ಹೇಳುವಾಗ, ಅವರಿಗೆ ಖಂಡಿತವಾಗಿಯೂ ಒಳಗಡೆಯೆಲ್ಲೋ ಭಯವೆನಿಸುತ್ತದೆ. ಆದರೆ ಸತ್ಯವನ್ನು ಹೇಳುವವನೊಬ್ಬನಿಗೆ ಭಯವೆನಿಸುವುದೇ ಇಲ್ಲ. ವಾಸ್ತವವಾಗಿ, ಸತ್ಯವನ್ನು ಹೇಳುವುದು ಮತ್ತು ಅದನ್ನು ಪಾಲಿಸುವುದು ನಿಮಗೆ ಬಹಳಷ್ಟು ಶಕ್ತಿಯನ್ನು ತರುತ್ತದೆ, ಅಲ್ಲವೇ? ಅದುವೇ ಸ್ವಧರ್ಮ.

ನಮ್ಮ ಜೀವನದಲ್ಲಿ ಯಾವುದು ನಮಗೆ ಸಹಜವಾಗಿ ಬರುವುದೋ ಅದನ್ನು ನಾವು ಅನುಸರಿಸುವಾಗ ಅದು ನಮಗೆ ಸಮೃದ್ಧಿ ಮತ್ತು ಏಳಿಗೆಯನ್ನು ತರುತ್ತದೆ. ನಾವು ನಮ್ಮ ಸ್ವಭಾವಕ್ಕನುಸಾರವಾಗಿ ನಡೆಯುವಾಗ, ನಾವು ಒಳಗಡೆಯಿಂದ ಬೆಳೆಯುತ್ತೇವೆ. ನಮ್ಮನ್ನು ಮೇಲೆತ್ತುವ ಯಾವುದೇ ಕೆಲಸವು ನಮ್ಮ ಸ್ವಧರ್ಮವಾಗಿದೆ. ಧರ್ಮವೆಂದರೆ, ಯಾವುದು ಮನಸ್ಸು, ಬುದ್ಧಿ, ಸ್ಮರಣೆ ಮತ್ತು ನಮ್ಮ ಅಂತರಾತ್ಮಗಳನ್ನು ಜೊತೆಯಲ್ಲಿ ಸಾಮರಸ್ಯದಿಂದ ಹಿಡಿದಿಟ್ಟುಕೊಳ್ಳುವುದೋ ಅದು. ಬೆಳವಣಿಗೆಯುಂಟಾಗುವುದು ನಾವು ನಮ್ಮ ಸ್ವಧರ್ಮವನ್ನು ಅನುಸರಿಸುವಾಗ.

ಪ್ರಶ್ನೆ: ಗುರುದೇವ, ದೇವರು ಎಲ್ಲೆಡೆಯಲ್ಲೂ ಇರುವರು ಎಂಬುದಾಗಿ ಗೀತೆಯಲ್ಲಿ ನೀವು ಹೇಳಿರುವಿರಿ. ಆದರೆ ದೈನಂದಿನ ಜೀವನದಲ್ಲಿ ಇದನ್ನು ಒಬ್ಬರು ಪ್ರಾಯೋಗಿಕವಾಗಿ ಹೇಗೆ ಅನುಭವಿಸಬಹುದು?

ಶ್ರೀ ಶ್ರೀ ರವಿ ಶಂಕರ್: ನೋಡು, ಇವುಗಳು ಜ್ಞಾನಕ್ಕಿರುವ ಎರಡು ಮಗ್ಗಲುಗಳು. ಒಂದನೆಯದು ಬೋಧ - ಅಂದರೆ ಜ್ಞಾನವೇ ಮತ್ತು ಇನ್ನೊಂದು ವ್ಯವಹಾರ - ಅಂದರೆ ಜ್ಞಾನವನ್ನು ಅನುಸರಿಸುವುದು ಮತ್ತು ಅದನ್ನು ಪ್ರಾಯೋಗಿಕವಾಗಿ ಅನುಭವಿಸುವುದು.

ನಿನ್ನ ಮನೆಯಲ್ಲಿ ಬಾಗಿಲುಗಳು, ಮೇಜುಗಳು ಮತ್ತು ಕುರ್ಚಿಗಳೆಲ್ಲಾ ಮರದಿಂದ ಮಾಡಲ್ಪಟ್ಟಿವೆಯೆಂಬುದು ನಿನಗೆ ತಿಳಿದಿದೆ. ಆದರೆ ಒಂದು ಕುರ್ಚಿಯಾಗಿ ನೀನು ಒಂದು ಮೇಜನ್ನು ಬಳಸಲು ಸಾಧ್ಯವಿಲ್ಲ, ಒಂದು ಬಾಗಿಲಿನ ಸ್ಥಾನದಲ್ಲಿ ನಿನಗೆ ಕುರ್ಚಿಯನ್ನು ಬಳಸಲೂ ಸಾಧ್ಯವಿಲ್ಲ, ಅಲ್ಲವೇ? ಮಂಚ, ಬಾಗಿಲು ಮತ್ತು ಮೇಜುಗಳೆಲ್ಲವೂ ಒಂದೇ ವಸ್ತುವಿನಿಂದ ಮಾಡಲ್ಪಟ್ಟಿರುವುದಾದರೂ ಸಹ, ಒಂದರ ಜಾಗದಲ್ಲಿ ಇನ್ನೊಂದನ್ನು ಬಳಸಲು ನಿನಗೆ ಸಾಧ್ಯವಿಲ್ಲ, ಯಾಕೆಂದರೆ ಪ್ರಾಯೋಗಿಕವಾಗಿ ಅವುಗಳಲ್ಲಿ ಪ್ರತಿಯೊಂದೂ ಇನ್ನೊಂದರಿಂದ ವ್ಯತ್ಯಸ್ತವಾಗಿದೆ ಮತ್ತು ತಮ್ಮದೇ ಆದ ಉಪಯೋಗಗಳನ್ನು ಹೊಂದಿವೆ.

ಅದೇ ರೀತಿಯಲ್ಲಿ, ಯುವಕರಲ್ಲಿ ಮತ್ತು ವಯಸ್ಸಾದವರಲ್ಲಿ ಇಬ್ಬರಲ್ಲೂ ಒಬ್ಬರೇ ದೇವರಿರುವುದು. ಆದರೆ ನೀನು, ಅವರೆಲ್ಲರೂ ಒಂದೇ ಎಂದು ಹೇಳುತ್ತಾ, ಚಿಕ್ಕ ಮಕ್ಕಳ ಪಾದಗಳನ್ನು ಮುಟ್ಟಲು ಮತ್ತು ವಯಸ್ಸಾದವರಿಗೆ ಆಶೀರ್ವದಿಸಲು ತೊಡಗಿದರೆ, ಆಗ ನಿನಗೆ ಹುಚ್ಚುಹಿಡಿದಿದೆಯೆಂದು ಅವರಂದುಕೊಳ್ಳುವರು. ನಿನಗೇನೋ ಆಗಿದೆಯೆಂದು ಅವರು ಯೋಚಿಸುವರು.

ಆದುದರಿಂದ ನೀವು ವರ್ತಿಸುವ ರೀತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬೇಕು. ನೀವು ಎಲ್ಲರೊಂದಿಗೂ ಒಂದೇ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ. ಆದರೆ ನಿಮ್ಮಲ್ಲಿ ಒಂದು ಸಮಭಾವದ ಭಾವನೆಯಿರಬೇಕು - ಅಂದರೆ, ನಿಮ್ಮ ಸುತ್ತಲಿರುವ ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ ಒಂದು ದೈವತ್ವವನ್ನು ನೋಡುವುದು.

ಅದ್ವೈತದ ಈ ಜ್ಞಾನವನ್ನು ನೀವು ಅರ್ಥಮಾಡಿಕೊಂಡಾಗ ಮತ್ತು ಅದನ್ನು ನಿಮ್ಮ ಹೃದಯದಲ್ಲಿರಿಸಿದಾಗ ನೀವು ಆತ್ಮನಲ್ಲಿ ಹೆಚ್ಚು ದೃಢವಾಗಿ ಸ್ಥಾಪಿತರಾಗುವಿರಿ. ಆಗ ಮಾತ್ರ ನೀವು, ಎಲ್ಲರೊಳಗೆ ಮತ್ತು ಎಲ್ಲದರೊಳಗೆ ಒಂದೇ ಚೇತನವಿರುವುದಾದರೂ, ಎಲ್ಲವನ್ನೂ ನೀವು ಅದರದ್ದೇ ಆದ ಸ್ವಭಾವಕ್ಕನುಸಾರವಾಗಿ ನೋಡಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರುವಿರಿ.

ಪ್ರಶ್ನೆ: ಗುರುದೇವ, ನಾನು ನನ್ನ ಪತಿಯನ್ನು ಸಂತೋಷಪಡಿಸಲು ಏನೇ ಮಾಡಿದರೂ ಅವರು ಯಾವತ್ತೂ ಸಂತೋಷಗೊಳ್ಳುವುದಿಲ್ಲ. ಅವರು ನನ್ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತಿರುತ್ತಾರೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಅದು ಅವರ ಅಭ್ಯಾಸವೆಂಬುದು ನಿನಗೆ ತಿಳಿದಿರುವುದಾದರೆ, ಮತ್ತೆ ಯಾಕೆ ನೀನು ಅಷ್ಟೊಂದು ವ್ಯಾಕುಲಳಾಗುವೆ? ಅವರನ್ನು ಸ್ವೀಕರಿಸು ಮತ್ತು ಮುಂದೆ ಸಾಗು. ನಿನ್ನನ್ನು ಸಂತೋಷವಾಗಿರಿಸು. ಅವರ ವರ್ತನೆಯಿಂದ ನೀನು ವ್ಯಾಕುಲಳಾಗದೇ ಇದ್ದರೆ, ಆಗ ಅವರು ಬದಲಾಗಲು ತೊಡಗುವರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ನಕಾರಾತ್ಮಕ ಗುಣವಿರುತ್ತದೆ ಮತ್ತು ಈ ನಕಾರಾತ್ಮಕ ಗುಣಗಳು ನಿನ್ನನ್ನು ಜಾಗೃತಗೊಳಿಸಲಿಕ್ಕಾಗಿಯೂ(ನಿನ್ನ ಸಹನೆಯನ್ನು ಪರೀಕ್ಷಿಸಲು) ಕೂಡಾ ಇರುವುದಾಗಿದೆ; ಅದರಿಂದಾಗಿ ನೀನು ಬಲಶಾಲಿಯಾಗಲೆಂದು. ಒಮ್ಮೆ ನೀನು ಬಲಶಾಲಿಗಳಾದ ಮೇಲೆ, ಅವರು ಬದಲಾಗಲು ತೊಡಗುವರು.

ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ ಮತ್ತು ಬದಲಾಗದಿರುವ ಕೆಲವು ವಿಷಯಗಳಿವೆ. ಈ ಎರಡೂ ಪರಿಸ್ಥಿತಿಗಳನ್ನು ನಾವು ಸ್ವೀಕರಿಸಬೇಕಾಗಿದೆ.

ಪ್ರಶ್ನೆ: ಗುರುದೇವ, ಭಾರತದಲ್ಲಿ ಗೋ ಹತ್ಯೆಯು ಹೆಚ್ಚುತ್ತಿದೆ. ಇದನ್ನು ನಿಷೇಧಿಸುವಂತಹ ಯಾವುದಾದರೂ ಕಠಿಣ ಕಾನೂನನ್ನು ಸಂಸತ್ತಿನಲ್ಲಿ ಜಾರಿಗೆ ತರಲು ಸಾಧ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇವತ್ತು ಭಾರತದಲ್ಲಿರುವ ಹಸುಗಳ ಸಂಖ್ಯೆಯು, ಸ್ವಾತಂತ್ರ್ಯದ ಮೊದಲಿದ್ದುದರ ಕೇವಲ ೨೦% ಮಾತ್ರವೆಂಬುದು ದುರದೃಷ್ಟಕರ. ನಮ್ಮ ದೇಶದ ಪ್ರಾಣಿ ಸಂಪತ್ತು ಒಂದು ದೊಡ್ಡ ಮಟ್ಟಿಗೆ ಇಳಿಮುಖವಾಗಿದೆ ಮತ್ತು ಮೊದಲು ಎಷ್ಟಿತ್ತೋ ಅದಕ್ಕಿಂತ ಇವತ್ತು ಬಹಳಷ್ಟು ಕಡಿಮೆಯಾಗಿದೆ.

ದೇಶದ ಹಲವಾರು ಜಾಗಗಳಲ್ಲಿ ನಾವು ಹಾಲಿನ ಒಂದು ದೊಡ್ಡ ಕೊರತೆಯನ್ನು ಎದುರಿಸುತ್ತಿದ್ದೇವೆ. ಉತ್ತರ ಭಾರತದ ಕೆಲವು ಮಾರುಕಟ್ಟೆಗಳಲ್ಲಿ ಮಾರಲಾಗುವ ಸಿಹಿತಿಂಡಿಗಳು ಸೇವಿಸುವುದಕ್ಕೇ ಸುರಕ್ಷಿತವಾದುದಲ್ಲ ಎಂಬುದನ್ನು ನೀವು ಕೇಳಿರಬೇಕು. ಸಿಹಿತಿಂಡಿಗಳನ್ನು ಉತ್ಪಾದಿಸಲು ಅವರು ಯೂರಿಯಾ ಮತ್ತು ಬೇರೆ ಯಾವುದೋ ರಾಸಾಯನಿಕಗಳನ್ನು ಮಿಶ್ರ ಮಾಡುತ್ತಾರೆ. ಅಂತಹ ಜಾಗಗಳಲ್ಲಿ ಬಹಳಷ್ಟು ಕಲಬೆರಕೆ ಆಗುತ್ತಿದೆ. ಖೋವಾ (ಸಿಹಿತಿಂಡಿಗಳನ್ನು ಗಟ್ಟಿಗೊಳಿಸಲು ಅವುಗಳಿಗೆ ಸೇರಿಸುವ, ಹಾಲಿನಿಂದ ಮಾಡುವ ಒಂದು ಪದಾರ್ಥ)ವನ್ನು ಮಾಡಲು ಜನರು ರಾಸಾಯನಿಕಗಳನ್ನು ಸೇರಿಸುತ್ತಾರೆ. ಅದನ್ನು ಅವರು ನಂತರ ಮಿಠಾಯಿಗಳನ್ನು ಮಾಡಲು ಬಳಸುತ್ತಾರೆ. ಇದರಿಂದಾಗಿ ಬಹಳಷ್ಟು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕ ಜನರು ನರಳುತ್ತಿದ್ದಾರೆ. ಜನರು ಕಲಬೆರಕೆಯನ್ನು ಅವಲಂಬಿಸುವುದು, ಕಚ್ಚಾ ಪದಾರ್ಥಗಳ ಕೊರತೆಯಿದ್ದಾಗ ಮಾತ್ರ. ಕೊರತೆಯಿಲ್ಲದಿದ್ದರೆ, ಅಲ್ಲಿ ಯಾವುದೇ ಕಲಬೆರಕೆಯಿರಲಾರದು. ಆಗ ಕಲಬೆರಕೆಯನ್ನು ಮಾಡುವುದು ಹೆಚ್ಚು ದುಬಾರಿಯಾಗುವುದು.

ನಮ್ಮ ದೇಶದ ಪ್ರಾಣಿ ಸಂಪತ್ತನ್ನು ಹೆಚ್ಚಿಸಲು ನಾವು ಪ್ರಯತ್ನಪಡಬೇಕು ಮತ್ತು ನಮ್ಮ ಪ್ರಾಣಿ ಸಂಕುಲದಲ್ಲಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಲು ಕಠಿಣ ಪರಿಶ್ರಮ ಪಡಬೇಕಾಗಿದೆ.

ಇತ್ತೀಚೆಗೆ, ನಾನೊಂದು ಸಂಶೋಧನೆಯ ಬಗ್ಗೆ ತಿಳಿದೆ. ಅದರಲ್ಲಿ ಅವರು, ಭಾರತೀಯ ಹಸುಗಳ ಹಾಲು ಮತ್ತು ಯುರೋಪಿನಿಂದ ಆಮದುಗೊಳಿಸಲಾದ ಹಸುಗಳ ಹಾಲಿನ ನಡುವಣ ವ್ಯತ್ಯಾಸವನ್ನು ಗುರುತಿಸಿದ್ದಾರೆ.

ಆಮದುಗೊಳಿಸಲಾದ ಹಸುಗಳ ಹಾಲಿನಲ್ಲಿರುವ ಪ್ರೊಟೀನ್ ಎ೧ ಪ್ರೊಟೀನ್ ಎಂದು ಕರೆಯಲ್ಪಡುತ್ತದೆ. ಎ೧ ಪ್ರೊಟೀನ್ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳು, ಮೊದಲಾದವುಗಳಿಗೆ ಕಾರಣವಾಗುತ್ತದೆ. ಹಲವಾರು ರೋಗಗಳು ಉಂಟಾಗುವುದು ಎ೧ ಪ್ರೊಟೀನ್‌ನಿಂದಾಗಿ. ಇನ್ನೊಂದು ಬದಿಯಲ್ಲಿ, ಇನ್ನೊಂದು ರೀತಿಯ ಪ್ರೊಟೀನ್ ಕೂಡಾ ಇದೆ. ಅದು ಎ೨ ಪ್ರೊಟೀನ್ ಎಂದು ಕರೆಯಲ್ಪಡುತ್ತದೆ.

ಎ೨ ಪ್ರೊಟೀನ್ ತಾಯಿಯ ಹಾಲಿನಲ್ಲಿ ಕಂಡುಬರುತ್ತದೆ ಹಾಗೂ ಅದು ಭಾರತೀಯ ಹಸುಗಳ ಹಾಲಿನಲ್ಲಿ ಮತ್ತು ಮೇಕೆಹಾಲಿನಲ್ಲಿ ಕೂಡಾ ಕಂಡುಬರುತ್ತದೆ. ಹಾಗಾಗಿ, ತಾಯಿಯ ಹಾಲು, ಮೇಕೆಯ ಹಾಲು ಮತ್ತು ಭಾರತೀಯ ಹಸುಗಳ ಹಾಲು ಒಂದೇ ಆಗಿವೆ (ಸಂಯೋಜನೆಯಲ್ಲಿ).

ಹೇಗೆಂದು ನಿಮಗೆ ಗೊತ್ತಾ? ಭಾರತದಲ್ಲಿ, ಹಲವಾರು ವರ್ಷಗಳವರೆಗೆ ಹಸುವನ್ನು ಒಬ್ಬ ತಾಯಿಯಂತೆ ಗೌರವಿಸಲಾಗಿದೆ ಮತ್ತು ಆದರಿಸಲಾಗಿದೆ. ಹೀಗೆ ನಮ್ಮ ಸಂಪ್ರದಾಯದಲ್ಲಿನ ಈ ಪ್ರಜ್ಞೆ ಅಥವಾ ಯೋಚನೆಯು, ಎ೧ ಪ್ರೊಟೀನ್‌ನ ಬದಲಾಗಿ ಎ೨ ಪ್ರೊಟೀನ್‌ನ್ನು ಉತ್ಪಾದಿಸುವಂತೆ ಹಸುವಿನ ಡಿ.ಎನ್.ಎ.ಯನ್ನು ಬದಲಾಯಿಸಿದೆ. ಭಾರತೀಯ ಹಸುಗಳ ಹಾಲು ಎಷ್ಟೊಂದು ಪ್ರಬಲ ಮತ್ತು ಉಪಯುಕ್ತವಾದುದೆಂದರೆ, ಅದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಔಷಧಿಯಾಗಿ ಕೂಡಾ ಬಳಸಲ್ಪಡುತ್ತದೆ.

ಆದುದರಿಂದ ಯಾವುದೇ ಬೆಲೆ ತೆತ್ತಾದರೂ ಗೋಹತ್ಯೆಯನ್ನು ನಿಲ್ಲಿಸಬೇಕಾಗಿದೆ. ಇದರ ವಿರುದ್ಧವಾಗಿ ಒಂದು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತರಬೇಕು, ಆದರೆ ಹೆಚ್ಚು ಮುಖ್ಯವಾಗಿ, ಜನರು ಈ ನಿಜಸಂಗತಿಗಳ ಬಗ್ಗೆ ಹೆಚ್ಚು ಹೆಚ್ಚು ಅರಿಯುವಂತೆ ಕೂಡಾ ಮಾಡಬೇಕು.  

ಪ್ರಶ್ನೆ: ಗುರುದೇವ, ದೇವರು ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತಾರೆಂದು ನಿನ್ನೆ ನೀವು ಹೇಳಿದಿರಿ. ಹಾಗಾದರೆ ಬಡತನವಿರುವುದು ಯಾಕೆ, ನೆರೆಗಳು ಬರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಪ್ರಪಂಚದಲ್ಲಿ ಯಾವುದೇ ಸಮಸ್ಯೆಗಳಿರದ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೋ.

ನೀನೊಂದು ಸಿನೆಮಾ ನೋಡಲು ಹೋಗುವೆ ಮತ್ತು ಆ ಸಿನೆಮಾದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ ಮತ್ತು ಯಾವುದೇ ಒತ್ತಡವಿರುವುದಿಲ್ಲ. ಒಬ್ಬ ವ್ಯಕ್ತಿ ಏಳುತ್ತಾನೆ, ತಿನ್ನುತ್ತಾನೆ, ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ ಮತ್ತು ಮಲಗುತ್ತಾನೆ ಹಾಗೂ ಪ್ರತಿದಿನವೂ ಇದನ್ನೇ ಮಾಡುತ್ತಿರುತ್ತಾನೆ. ನೀನು ಹೋಗಿ ಅಂತಹ ಒಂದು ಚಲಚಿತ್ರವನ್ನು ನೋಡುವೆಯಾ? ಅಂತಹ ಒಂದು ಚಲನಚಿತ್ರವನ್ನು ನೀನು ಆನಂದಿಸುವೆಯಾ?

ಒಂದು ಚಲನಚಿತ್ರವನ್ನು ನೀನು ಆನಂದಿಸುವುದು ಯಾವಾಗ? ಅದರಲ್ಲೊಬ್ಬ ಖಳನಾಯಕನಿರುವಾಗ ಅಥವಾ ಸ್ವಲ್ಪ ಬಿಗಿತ ಇರುವಾಗ ಅಥವಾ ಅದರಲ್ಲಿ ಸ್ವಲ್ಪ ಸಮಸ್ಯೆಗಳಿರುವಾಗ. ಆಗ ನೀನು ಹೊರಬಂದು, ’ಇದೊಂದು ಬಹಳ ಒಳ್ಳೆಯ ಸಿನೆಮಾ’ ಎಂದು ಹೇಳುವೆ.

ಅದೇ ರೀತಿಯಲ್ಲಿ, ಈ ಪ್ರಪಂಚವು ದೇವರಿಗೆ ಒಂದು ಸಿನೆಮಾದಂತೆ. ಹೇಗಿದ್ದರೂ ನೆರೆಗಳಿಂದ ಯಾರೂ ಸಾಯುವುದಿಲ್ಲ. ಅವರೆಲ್ಲರೂ ಇನ್ನೊಂದು ಶರೀರದಲ್ಲಿ ತಿರುಗಿ ಬರುತ್ತಾರೆ.

ನಮಗೂ ಮಾಡಲು ಏನಾದರೂ ಬೇಕು. ಪ್ರಪಂಚದಲ್ಲಿ ಯಾವುದೇ ಸಮಸ್ಯೆಗಳಿಲ್ಲವೆಂದು ಸುಮ್ಮನೆ ಕಲ್ಪಿಸಿಕೊಳ್ಳಿ, ಎಲ್ಲರೂ ಆರೋಗ್ಯವಾಗಿ ಮತ್ತು ಸಂತೋಷವಾಗಿದ್ದಾರೆ, ಆಗ ಅಲ್ಲಿ ಸಹಾನುಭೂತಿಗೆ ಯಾವುದೇ ಜಾಗವಿರದು. ಯಾರ ಕಡೆಗೆ ನೀವು ಸಹಾನುಭೂತಿ ಹೊಂದುವಿರಿ? ಸಹಾನುಭೂತಿ ಮತ್ತು ಇತರ ಎಲ್ಲಾ ಮೌಲ್ಯಗಳು ಮಾಯವಾಗುವುವು.

ಹಾಗಾಗಿ, ಈ ಪ್ರಪಂಚದಲ್ಲಿ ಸಮಸ್ಯೆಗಳಿರುವುದು ಯಾಕೆಂದರೆ, ಈ ಪ್ರಪಂಚದಲ್ಲಿ ನಮ್ಮ ಉದ್ದೇಶವನ್ನು ನಾವು ಅರಿತುಕೊಳ್ಳಲೆಂದು.

ಪ್ರಶ್ನೆ: ನಾನು ನನ್ನ ಪ್ರೇಮಾಸಕ್ತಿಗಳಿಂದ ಹೊರಬರುವುದು ಹೇಗೆ? ಒಬ್ಬರನ್ನು ಇಷ್ಟಪಡುವುದು ನನಗೆ ಬಹಳ ಸುಲಭವಾಗುತ್ತದೆ ಮತ್ತು ಅದು ನನಗೆ ತೊಂದರೆ ನೀಡುತ್ತದೆ.

ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ಬಹಳಷ್ಟು ಬಿಡುವಿನ ವೇಳೆಯಿದೆಯೆಂದು ನನಗನ್ನಿಸುತ್ತದೆ. ನೀನು ಕೆಲಸದಲ್ಲಿ ವ್ಯಸ್ತನಾಗಬೇಕು. ಪ್ರೇಮಾಸಕ್ತಿಗಳಲ್ಲಿ ಬೀಳಲು ಇದು ತುಂಬಾ ಚಿಕ್ಕ ವಯಸ್ಸು. ನೀನಿನ್ನೂ ಒಂದು ಹೂವಿನಂತೆ ಅರಳಿಲ್ಲ, ಈಗಲೂ ನೀನೊಂದು ಮೊಗ್ಗಾಗಿರುವೆ. ಯಾರೂ ನಿನ್ನನ್ನು ಈಗ ಹೊಸಕಿಹಾಕಲು ಬಿಡಬೇಡ. ಅದಕ್ಕೆ ಒಂದು ಸಮಯವಿದೆ. ಈಗ ನಿನ್ನ ಓದಿನ ಮೇಲೆ ಮಾತ್ರ ಗಮನವಿಡು. ಎಲ್ಲರನ್ನೂ ಮೋಡಿಮಾಡು ಆದರೆ ನಿಲ್ಲಬೇಡ, ಮುಂದೆ ಸಾಗು, ಅದು ಸೂತ್ರ.

ಪ್ರಶ್ನೆ: ಗುರುದೇವ, ’ಯೋಗಿಯ ಆತ್ಮಕಥೆ’ ಎಂಬ ಒಂದು ಪುಸ್ತಕದಲ್ಲಿ ಒಮ್ಮೆ ನಾನು, ಯಾವುದೋ ವಿಶೇಷ ತಂತ್ರವನ್ನುಪಯೋಗಿಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವ ಯೋಗಿಗಳು ಹಿಮಾಲಯಗಳಲ್ಲಿರುವರೆಂದು ಓದಿದ್ದೆ. ಇದು ನಿಜವೇ? ಹೌದಾದರೆ, ನಾವದನ್ನು ಅನುಭವಿಸಬಹುದೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅಂತಹದ್ದೇನೂ ಇಲ್ಲ. ನೀನು ಹಿಮಾಲಯಗಳಿಗೆ ಹೋಗಿ ಅಲ್ಲೆಲ್ಲಾ ಹುಡುಕು, ಆದರೆ ನಿನಗೆ ಅಂತಹದ್ದೇನೂ ಸಿಗದು.

ಪ್ರಶ್ನೆ: ನಾವು ನಿಮಗೆ ಕೆಲವು ರಾಪಿಡ್ ಫಯರ್ ಪ್ರಶ್ನೆಗಳನ್ನು ಕೇಳಬಹುದೇ?

ಶ್ರೀ ಶ್ರೀ ರವಿ ಶಂಕರ್: ಸರಿ, ಮುಂದುವರೆಸಿ.

ನೀವು ಯಾರು?

ನಿಮ್ಮನ್ನೇ ಕೇಳಿಕೊಳ್ಳಲು ಒಳ್ಳೆಯ ಪ್ರಶ್ನೆ.

ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಯಾರಾಗಿದ್ದಿರಿ?

ಅದೊಂದು ರಹಸ್ಯ, ನಾನು ನಿಮಗೆ ಬೇರೆ ಯಾವತ್ತಾದರೂ ಹೇಳುವೆನು.

ದೇವರೆಂದರೆ ಏನು ಮತ್ತು ಯಾರು?

ಯಾವುದು ಮತ್ತು ಯಾರು ದೇವರಲ್ಲ.

ನಾವು ದೇವರನ್ನು ಹೇಗೆ ಅನುಭವಿಸಬೇಕು?

ಸುಮ್ಮನೆ ಮೌನವಾಗಿರಿ. ಅವನ ಬಗ್ಗೆ ಚಿಂತಿಸಬೇಡಿ, ಅವನು ನಿಮ್ಮ ಬಗ್ಗೆ ಚಿಂತಿಸಲು ಬಿಡಿ.

ಪ್ರಪಂಚವು ಹಿಂಸಾ-ಮುಕ್ತವೂ, ಒತ್ತಡ-ಮುಕ್ತವೂ ಹೇಗಾಗಬಲ್ಲದು?

ಆರ್ಟ್ ಆಫ್ ಲಿವಿಂಗ್‌ನ್ನು ಹರಡುವುದರಿಂದ.

ಭೂಮಿಯ ಭವಿಷ್ಯವೇನು?

ನಿಮ್ಮಂತಹ ಜನರಿಂದ ಉಜ್ವಲವಾಗಿದೆ.

ಧರ್ಮವೆಂದರೇನು?

ಯಾವುದು ನಿಮ್ಮನ್ನು ಸರಿಯಾದ ದಾರಿಯಲ್ಲಿ ಇಡುವುದೋ ಅದು ಧರ್ಮ.

ಯಾವುದು ಸತ್ಯ?

ಯಾವುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲವೋ ಮತ್ತು ಯಾವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಅದು.

ಧನಾತ್ಮಕ ಯಾವುದು ಮತ್ತು ಋಣಾತ್ಮಕ ಯಾವುದು?

ಯಾವುದು ನಿಮ್ಮನ್ನು ಮೇಲಕ್ಕೇರಿಸುವುದೋ ಅದು ಧನಾತ್ಮಕ ಮತ್ತು ಯಾವುದು ನಿಮ್ಮನ್ನು ಕೆಳಕ್ಕಿಳಿಸುವುದೋ ಅದು ಋಣಾತ್ಮಕ.

ಗುರುವೆಂದರೆ ಯಾರು?

ಈ ಪ್ರಶ್ನೆಗೆ ಉತ್ತರಿಸುವವರು.

ಮನಸ್ಸೆಂದರೇನು?

ಯಾವುದು ಪ್ರಶ್ನೆಯನ್ನು ಕೇಳುತ್ತಿದೆಯೋ ಅದು.

ಓದಿನ ಸಮಯದಲ್ಲಿ ನಿಮಗೆ ಒತ್ತಡದ ಅನುಭವವಾದಾಗ, ಸುಮ್ಮನೆ ವಿಶ್ರಾಮ ಮಾಡಿ. ಮತ್ತೆ, ಎಲ್ಲಾ ವಿದ್ಯಾರ್ಥಿಗಳು ಕ್ಯಾರೆಟ್ ತಿನ್ನಬೇಕು. ವಿಶೇಷವಾಗಿ ಕನ್ನಡಕಗಳನ್ನು ಧರಿಸಿರುವವರು, ನಿಮಗೆ ವಿಟಮಿನ್ ಎ ಬೇಕು ಮತ್ತು ಅದು ಕ್ಯಾರೆಟ್‌ಗಳೊಂದಿಗೆ ಬರುತ್ತದೆ. ಹಾಗಾಗಿ ಹೆಚ್ಚು ಕ್ಯಾರೆಟ್‌ಗಳನ್ನು ತಿನ್ನಲು ಶುರು ಮಾಡಿ.

ಸರಿಯಾದ ಆಹಾರವು ಬಹಳ ಆವಶ್ಯಕವಾಗಿದೆ. ನೀವು ಸರಿಯಾಗಿ ತಿಂದರೆ ನೀವು ಖಾಯಿಲೆ ಬೀಳಲಾರಿರಿ. ನಾವು ಖಾಯಿಲೆ ಬೀಳುವುದು ಯಾಕೆಂದರೆ ನಾವು ಚೆನ್ನಾಗಿ ತಿನ್ನುವುದಿಲ್ಲ. ಹೆಚ್ಚಾಗಿ ನಾವು ರುಚಿಕರವಾದ ಆಹಾರವನ್ನು ತಿನ್ನಲು ಬಯಸುತ್ತೇವೆ ಮತ್ತು ಯಾವ ಆಹಾರ ಶರೀರಕ್ಕೆ ಒಳ್ಳೆಯದೋ ಅದನ್ನಲ್ಲ. ಶರೀರಕ್ಕೆ ಒಳ್ಳೆಯದಾದ ಆಹಾರವನ್ನು ನಾವು ತಿನ್ನಬೇಕು.

ಒಂದು ವಾರಕ್ಕೆ ಎರಡು ಅಥವಾ ಮೂರು ಸಲ, ಒಂದು ಅಥವಾ ಎರಡು ನೀಮ್(ಬೇವು) ಗುಳಿಗೆಗಳನ್ನು ತೆಗೆದುಕೊಳ್ಳಿ. ಅದು ಹೊಟ್ಟೆಗೆ ಮತ್ತು ನರಮಂಡಲಕ್ಕೆ ಬಹಳ ಒಳ್ಳೆಯದು. ನಿಮಗೆ ಗೊತ್ತಾ, ಮಹಾತ್ಮಾ ಗಾಂಧಿಯವರ ಆಶ್ರಮದಲ್ಲಿ ಅವರು ಪ್ರತಿದಿನವೂ ಬೇವಿನ ಚಟ್ನಿಯನ್ನು ಇಡುತ್ತಿದ್ದರು, ಯಾಕೆಂದರೆ ಅದು ಮನಸ್ಸು, ಶರೀರ ಮತ್ತು ಹೊಟ್ಟೆಗೆ ಒಳ್ಳೆಯದು. ಅದು ಶರೀರದ ರೋಗನಿರೋಧಕಾ ವ್ಯವಸ್ಥೆಯನ್ನೂ ಬಲಪಡಿಸುತ್ತದೆ.

ತ್ರಿಫಲವೂ ಕೂಡಾ ಶರೀರಕ್ಕೆ ಬಹಳ ಒಳ್ಳೆಯದು. ತ್ರಿಫಲದೊಂದಿಗೆ ಶರೀರದಲ್ಲಿನ ಎಲ್ಲಾ ಅಸಮತೋಲನಗಳೂ ದೂರವಾಗುತ್ತವೆ.

ಹಾಗಾಗಿ, ನಾವು ಈ ಆಯುರ್ವೇದ ಔಷಧಿಗಳಲ್ಲಿ ಕೆಲವನ್ನು ತೆಗೆದುಕೊಳ್ಳಬೇಕು, ಅವುಗಳು ಶರೀರಕ್ಕೆ ಒಳ್ಳೆಯದು. ಮತ್ತು ನಾವು ಸ್ವಲ್ಪ ಜಪವನ್ನು ಕೂಡಾ ಮಾಡಬೇಕು.

ಓಂ ಎಂಬುದು ಕೇವಲ ಒಂದು ಮಂತ್ರವಲ್ಲ, ಅದೊಂದು ಔಷಧಿ ಕೂಡಾ ಎಂಬುದನ್ನು ಇವತ್ತು ನಾನೊಂದು ಲೇಖನದಲ್ಲಿ ಓದಿದೆ. ಆದುದರಿಂದ ನಾವು ಪ್ರತಿದಿನವೂ ಓಂನ್ನು ಉಚ್ಛರಿಸಬೇಕು; ಕಡಿಮೆಯೆಂದರೆ ಮೂರು ಸಲ.

ಓಂ ನಮೋ ನಾರಾಯಣ ಅಥವಾ ಓಂ ನಮಃ ಶಿವಾಯ ಎಂದು ಪ್ರತಿದಿನವೂ ಜಪಿಸಿ. ಇವುಗಳು ಮಹಾ ಮಂತ್ರಗಳೆಂದು ಕರೆಯಲ್ಪಡುತ್ತವೆ. ನಾವು ಪ್ರತಿದಿನವೂ ಮಂತ್ರಗಳನ್ನು ಜಪಿಸಬೇಕು.

ಹೀಗೆ, ಒಳ್ಳೆಯ ಆಹಾರ ಸೇವಿಸಿ, ಔಷಧಿಯನ್ನು ಬಳಸಿ, ಮಂತ್ರಗಳನ್ನು ಜಪಿಸಿ ಮತ್ತು ಮುಗುಳ್ನಗುತ್ತಾ ಇರಿ. ಸಮಸ್ಯೆಗಳು ಎಲ್ಲರ ಜೀವನದಲ್ಲೂ ಇವೆ. ಅವುಗಳು ಬರುತ್ತವೆ, ಹೋಗುತ್ತವೆ. ಯಾವುದೇ ಸಮಸ್ಯೆಯೂ ಶಾಶ್ವತವಾಗಿ ಉಳಿಯುವುದಿಲ್ಲ. ನನಗೇನು ಬೇಕೋ ಅದು ನನಗೆ ಸಿಗುವುದು ಎಂಬ ಈ ವಿಶ್ವಾಸವನ್ನು ಹೊಂದಿ ಮತ್ತು ಮುಂದಕ್ಕೆ ಸಾಗುತ್ತಾ ಇರಿ. 

ಗುರುವಾರ, ಜೂನ್ 6, 2013

ಮೂರ್ತಿಪೂಜೆಯ ಔಚಿತ್ಯ

ಬೆಂಗಳೂರು, ಭಾರತ
೦೬.೦೬.೧೩

ಪ್ರ: ಪೂಜ್ಯ ಗುರೂಜಿ, ನನ್ನ ಪ್ರಶ್ನೆ, ಹಿಂದೂ ಧರ್ಮದಲ್ಲಿನ ಮೂರ್ತಿ ಪೂಜೆಯ ಬಗ್ಗೆ. ಕ್ರೈಸ್ತರಿಗೆ ಎಲ್ಲ ಕಡೆಯಲ್ಲಿ ಇಗರ್ಜಿಗಳಿಲ್ಲ. ಮಸೀದಿ ಮತ್ತು ಗುರುದ್ವಾರಗಳೂ ಎಲ್ಲ ಕಡೆಯಲ್ಲಿಲ್ಲ. ಹಾಗಿದ್ದರೆ ಹಿಂದೂಗಳಿಗೆ ದೇವಾಲಯ ಯಾಕೆ ಎಲ್ಲ ಕಡೆಯಲ್ಲಿವೆ? ಪ್ರತಿ ಮರದ ಕೆಳಗು ಮತ್ತು ಪ್ರತಿ ಮೂಲೆಯಲ್ಲೂ ಒಂದು ದೇವಸ್ಥಾನ ನೋಡಬಹುದು. ಮೂರ್ತಿಪೂಜೆಯನ್ನು ಎಷ್ಟರ ಮಟ್ಟಿಗೆ ಒಪ್ಪಬಹುದು?

ಶ್ರೀ ಶ್ರೀ: ಕ್ರೈಸ್ತ ಧರ್ಮದಲ್ಲಿ ಮೂರ್ತಿಪೂಜೆ ಇಲ್ಲ ಎಂದು ಯಾರು ಹೇಳುತ್ತಾರೆ? ಕ್ರೈಸ್ತ ಧರ್ಮವೂ ಮೂರ್ತಿ ಪೂಜೆಗೆ ಪ್ರಾಮುಖ್ಯ ನೀಡುತ್ತದೆ. ಅವರು ಶಿಲುಬೆಯ ಚಿಹ್ನೆಯನ್ನು ಎಲ್ಲಾದರೂ ಹಾಕುತ್ತಾರೆ, ರಸ್ತೆಯ ಮೇಲೂ, ಅಥವಾ ಗುಡ್ಡದ ಮೇಲೆ, ಅಲ್ಲವೇ? ಬಹಳ ಮಸೀದಿಗಳನ್ನೂ ಬಹಳ ಸ್ಥಳಗಳಲ್ಲಿ ನಿರ್ಮಿಸಲಾಗುತ್ತಿದೆ.

ಈಗ ಹಿಂದೂ ಧರ್ಮದಲ್ಲಿ ಮೂರ್ತಿಪೂಜೆ ಎಷ್ಟರ ಮಟ್ಟಿಗೆ ಸ್ವೀಕಾರಾರ್ಹ? ಇದು ವಿಚಾರಮಾಡಲು ಯೋಗ್ಯ ಪ್ರಶ್ನೆ.

ಎಲ್ಲೆಲ್ಲಿ ಮೂರ್ತಿ ಪೂಜೆಯನ್ನು ಜನರು ವಿರೋಧಿಸಿದ್ದಾರೋ, ಅಲ್ಲಲ್ಲಿ ಇನ್ನ್ಯಾವುದೋ ರೀತಿಯ ಸಾಂಕೇತಿಕತೆ ಹುಟ್ಟಿಕೊಂಡಿದೆ.

ಮೂರ್ತಿ ಅಂದರೇನು? ಅದು ಒಂದು ಸಂಕೇತ/ಚಿಹ್ನೆ. ನಿರಾಕಾರ ದೈವಿಕತೆ, ಯಾವುದನ್ನು ವರ್ಣಿಸಲಾಗುವುದಿಲ್ಲವೋ ಅಥವಾ ನೋಡುವುದಾಗಲಿ ಮುಟ್ಟುವುದಾಗಲಿ ಸಾಧ್ಯವಿಲ್ಲವೋ, ಅಂಥ ದೈವಿಕತೆಯನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಮಾಧ್ಯಮ ಬೇಕು. ಮತ್ತು ಆ ಮಾಧ್ಯಮವನ್ನು ನಾವು ಮೂರ್ತಿ/ವಿಗ್ರಹ ಎಂದು ಕರೆಯುತ್ತೇವೆ.

ದೇವರು ಆ ವಿಗ್ರಹದಲ್ಲಿ ವಾಸವಾಗಿಲ್ಲ, ಆದರೆ ವಿಗ್ರಹವು ದೇವರತ್ತ ನಿಮ್ಮ ಗಮನಹರಿಸುತ್ತದೆ.

ನೋಡಿ, ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜನ ಛಾಯಾಚಿತ್ರವು ಗೋಡೆಯ ಮೇಲಿದೆ. ಈಗ ಯಾರಾದರೂ ’ನಿಮ್ಮ ಅಜ್ಜ ಯಾರು?’ ಎಂದು ನಿಮ್ಮನ್ನು ಕೇಳಿದರೆ, ನೀವು ಅವರ ಚಿತ್ರದತ್ತ ಬೆರಳ್ತೋರಿಸುತ್ತೀರಿ. ಆ ಚಿತ್ರ ನಿಮ್ಮ ಅಜ್ಜನೇ? ಅಲ್ಲ. ನಿಮ್ಮ ಅಜ್ಜ ಈಗಿಲ್ಲ, ಆದರೆ ಯಾರಾದರೂ ಕೇಳಿದರೆ ನೀವು ಅವರ ಚಿತ್ರದತ್ತ ಕೈತೋರಿಸಿ ’ಇದು ನನ್ನ ಅಜ್ಜ’ ಎಂದು ಹೇಳುತ್ತೀರಿ.

ಹಾಗೆ, ಒಂದು ಚಿತ್ರ (ಅಥವಾ ಮೂರ್ತಿ) ಒಂದು ಮಾಧ್ಯಮ ಅಥವಾ ಒಂದು ಸಂಕೇತ, ಆದ್ದರಿಂದಲೇ ಅದನ್ನು ಪ್ರತಿಮಾ ಎಂದು ಕರೆಯುತ್ತಾರೆ.ಇದು ದೇವರು ಎಂದು, ಕೇವಲ ಒಂದೇ ಚಿಹ್ನೆ ಅಥವಾ ಆಕೃತಿಯಿರದೇ ಇರುವುದು ಒಳ್ಳೆಯದೇ. ಇಲ್ಲದಿದ್ದರೆ ಜನರು ಅದು ಮಾತ್ರ ದೇವರು ಎಂದು ಯೋಚಿಸುತ್ತಿದ್ದರು. ಹಾಗಾಗಿಯೇ ಭಾರತದಲ್ಲಿ ದೇವರ ಸಾವಿರ ವಿವಿಧ ರೂಪಗಳು ಇವೆ. ನೀವು ದೇವರನ್ನು ನಿಮಗಿಷ್ಟವಾದ ಈ ಯಾವುದೇ ರೂಪದಲ್ಲಿ ನೋಡಬಹುದು (ಇಷ್ಟ ದೇವತೆ ಅಂದರೆ ಒಬ್ಬ ವ್ಯಕ್ತಿ ಅಥವಾ ಗುಂಪೊಂದು ಅಕ್ಕರೆಯಿಂದ ಪೂಜಿಸುವಂಥ ನಿರ್ದಿಷ್ಟವಾದ ಒಬ್ಬ ದೇವತೆ).

ಎಲ್ಲಾ ಕಿರಣಗಳು ಒಂದೇ ಸೂರ್ಯನಿಂದ ಬರುವುವಾದರೂ, ಆ ಕಿರಣಗಳಿಗೆ ಏಳು ವಿವಿಧ ಬಣ್ಣಗಳಿವೆ. ಆದ್ದರಿಂದಲೇ ನಮ್ಮಲ್ಲಿ ಪಂಚ ದೇವತೆಗಳಿದ್ದಾರೆ (ಎಲ್ಲಾ ಪೂಜೆ ಪುನಸ್ಕಾರಗಳನ್ನೊಳಗೊಳ್ಳುವ ಐದು ಮೂಲ ದೇವತೆಗಳಾದ ಭಗವಾನ್ ಶಿವ, ಭಗವತೀ ಪಾರ್ವತೀ, ಶ್ರೀ ವಿಷ್ಣು, ಶ್ರೀ ಗಣೇಶ ಮತ್ತು ಸೂರ್ಯ ದೇವ) ಮತ್ತು ಸಪ್ತ ಮಾತೃಕೆಯರಿದ್ದಾರೆ (ದೇವಿ ಮಾತೆಯ ಏಳು ವಿವಿಧ ರೂಪಗಳು: ಬ್ರಹ್ಮಾಣಿ, ನಾರಾಯಣಿ, ಇಂದ್ರಾಣಿ, ಮಹೇಶ್ವರಿ, ವಾರಾಹಿ, ಕೌಮಾರಿ ಮತ್ತು ಚಾಮುಂಡ).

ಅದೇ ರೀತಿಯಲ್ಲಿ ದೇವರು ಒಬ್ಬ, ಆದರೆ ನಮ್ಮ ಪೂರ್ವಜರು ದೇವರಿಗೆ ವಿವಿಧ ಹೆಸರುಗಳನ್ನೂ ರೂಪಗಳನ್ನೂ ನೀಡಿದ್ದಾರೆ.

ಮತ್ತೆ ದೇವತೆಯ ಒಂದು ವಿಗ್ರಹವನ್ನು ಮಂತ್ರ ಪಠಣ ಹಾಗೂ ಪೂಜೆ ಮಾಡಿ ಸ್ಥಾಪಿಸುವ ಒಂದು ಸಂಪ್ರದಾಯವಿದೆ.ಪೂಜೆ ಮತ್ತು ಭಕ್ತಿಯಿಂದ ಸ್ಥಾಪಿಸಲ್ಪಟ್ಟು ಮಾನ್ಯ ಪೀಠದಲ್ಲಿಡಲ್ಪಟ್ಟ ಯಾವುದೇ ರೂಪವು ಮಾನ್ಯವಾಗುತ್ತದೆ.

ನೋಡಿ, ಗುರು ಗ್ರಂಥ ಸಾಹಿಬ್ (ಸಿಖ್ ಜನರ ಮುಖ್ಯ ಧರ್ಮ ಗ್ರಂಥ) ಅಥವಾ ಭಗವದ್ಗೀತೆಯನ್ನು ಒಬ್ಬರು ಎಲ್ಲಾದರೂ ಇಡಬಹುದು. ಆದರೆ ನೀವದನ್ನು ಆರಾಧಿಸಿದಾಗ, ಅದರ ಮುಂದೆ ವಂದಿಸಿ, ಸೇವೆ ಹಾಗೂ ನೈವೇದ್ಯಗಳನ್ನು ಸಮರ್ಪಿಸಿದರೆ, ಆಗ ಅದಕ್ಕೆ ಬೇರೆ ಅರ್ಥವಿದೆ. ಮತ್ತು ಆ ರೂಪಕ್ಕೆ ನೀವೊಂದು ಆಕಾರವನ್ನೂ ಅಥವಾ ಮುಖವನ್ನು ನೀಡಿದಾಗ ಅದು ನಿಮ್ಮೊಳಗೆ ಇನ್ನೂ ಭಕ್ತಿಯನ್ನು ಉಂಟುಮಾಡುತ್ತದೆ.

ಉದಾಹರಣೆಗೆ, ಕೇವಲ ಶ್ರೀ ಕೃಷ್ಣನ ಮುಖವನ್ನು ನೋಡುತ್ತಿದಂತೆ, ಮೀರಾ ಬಾಯಿ ಅವನಲ್ಲಿ ಅಷ್ಟೊಂದು ಆಳ ಪ್ರೀತಿಯನ್ನು ಹೊಂದಿದಳು. ಶ್ರೀ ಚೈತನ್ಯ ಮಹಾಪ್ರಭು(ಮಹಾ ಸಂತರು ಮತ್ತು ಶ್ರೀ ಕೃಷ್ಣನ ಭಕ್ತರು) ಅವರು ಶ್ರೀ ಕೃಷ್ಣನ ರೂಪವನ್ನು (ಕೈಯಲ್ಲಿ ಕೊಳಲನ್ನು ಹಿಡಿದು, ನವಿಲುಗರಿಯ ಕಿರೀಟವನ್ನು ಧರಿಸಿ, ಹೊಳೆಯುವ ಹಳದಿ ಬಣ್ಣದ ವಸ್ತ್ರವನ್ನುಟ್ಟು  ಮರವೊಂದರ ಕೆಳಗಡೆ ನಿಂತಿದ್ದ ಶ್ರೀ ಕೃಷ್ಣನ ಚಿತ್ರ) ನೋಡುತ್ತಿದ್ದಂತೆ ಚೈತನ್ಯದ ಅತ್ಯುನ್ನತ ಮಟ್ಟವನ್ನು ತಲುಪಿದರು.

ವಿಗ್ರಹದ ಅಗತ್ಯವಿದ್ದವರು ಅದನ್ನು ದೈವಿಕತೆ ತಲುಪುವುದಕ್ಕಾಗಿ ಒಂದು ಮೆಟ್ಟಿಲಾಗಿ ಉಪಯೋಗಿಸಬಹುದು. ಆದರೆ ವಿಗ್ರಹಕ್ಕೆ ಅಂಟಿಕೊಳ್ಳಬೇಡಿ. ಯಾವತ್ತೂ ದೆವರು ನಿಮ್ಮೊಂದಿಗೆ ಇದ್ದಾನೆ ಎಂದು ನೆನಪಿನಲ್ಲಿಟ್ಟುಕೊಳ್ಳಿ.

ಆದ್ದರಿಂದಲೇ ಹಿಂದಿನ ದಿನಗಳಲ್ಲಿ, ದೇವಸ್ಥಾನಕ್ಕೆ ಹೋಗುವ ಉದ್ದೇಶವೆಂದರೆ ವಿಗ್ರಹವನ್ನು ನೋಡಿದ ನಂತರ ಸ್ವಲ್ಪ ಹೊತ್ತು ತಮ್ಮೊಂದಿಗೇ ಸಮಯ ಕಳೆಯುವುದಾಗಿತ್ತು. ದೇವಸ್ಥಾನಕ್ಕೆ ಹೋದಾಗ ಅಲ್ಲಿ ಸ್ವಲ್ಪ ಹೊತ್ತು ಕಳೆಯದೇ ಹೊರಡಬಾರದು.

ಇತ್ತೀಚಿನ ದಿನಗಳಲ್ಲಿ ಜನರು ಏನು ಮಾಡುತ್ತಾರೆಂದರೆ ಕುಳಿತುಕೊಳ್ಳುವ ಸಲುವಾಗಿ ಕೆಲವು ಕ್ಷಣಕಾಲು ಕುಳಿತು ಮತ್ತೆ ಎದ್ದು ಹೊರಡುತ್ತಾರೆ. ಇದು ನಿಮ್ಮನ್ನು ನೀವೇ ಮೋಸಗೊಳಿಸುವುದು.

ಹಿಂದಿನ ದಿನಗಳಲ್ಲಿ, ವಿಗ್ರಹವನ್ನು ಗರ್ಭಗುಡಿಯಲ್ಲಿ ಕತ್ತಲಿನಲ್ಲಿಡುತ್ತಿದ್ದರು, ದೇವರ ಮುಖವನ್ನು ನಿಮಗೆ ಹಣತೆಯ ಬೆಳಕಿನಿಂದ ಮಾತ್ರ ನೋಡಲಾಗುತ್ತಿತ್ತು.

ಇದರ ಸಂಕೇತವೆಂದರೆ ದೇವರು ನಿಮ್ಮ ಹೃದಯದ ಗುಹೆಯಾಳದಲ್ಲಿ ವಾಸವಾಗಿದ್ದಾನೆ ಎಂದು ನೆನಪಿಸಿಕೊಳ್ಳುವುದಾಗಿದೆ. ನೀವು ದೇವರನ್ನು ಆತ್ಮ-ಜ್ಞಾನದ ಬೆಳಕಿನಿಂದ ನೋಡಬೇಕಾಗಿದೆ. ಇದು ನಿಜವಾದ ತತ್ತ್ವ.

ಹಿಂದಿನ ದಿನಗಳಲ್ಲಿ ಜನರು ವಿಗ್ರಹಗಳನ್ನು ಬಹಳ ಸುಂದರವಾಗಿ ಅಲಂಕರಿಸುತ್ತಿದ್ದರು, ಯಾಕೆಂದರೆ ನಿಮ್ಮ ಮನಸ್ಸು ಅಲ್ಲಿ ಇಲ್ಲಿ ಅಲೆದಾಡದೆ ನೀವು ಸಂಪೂರ್ಣವಾಗಿ ದೈವಿಕತೆಯಿಂದ ಚಿತ್ತಾಕರ್ಷಿತವಾಗಿರಲಿ ಎಂದು. ಜನರು ಅಮೃತಶಿಲೆಯ(ಮಾರ್ಬಲ್) ಸುಂದರ ವಿಗ್ರಹಗಳನ್ನು ಮಾಡುತ್ತಿದ್ದರು, ಮತ್ತು ಅದನ್ನು ಸುಂದರ ಬಟ್ಟೆಗಳಿಂದಲೂ ಒಡವೆಗಳಿಂದಲೂ ಶೃಂಗರಿಸುತ್ತಿದ್ದರು.

ಇದು ವಿಂಡೊ ಶಾಪಿಂಗ್ ನಂತೆ(ಮಾಲ್, ಬೃಹತ್ ಅಂಗಡಿ ಮಳಿಗೆಗಳಲ್ಲೇನಿದೆ ಎಂದು ಒಂದು ಸುತ್ತು ನೋಡಿ ಬರುವಂತೆ). ಇಂದೂ ಬಹಳ ಮಂದಿ ವಿಂಡೋ ಶಾಪಿಂಗ್ ಗೆ ಹೋಗುತ್ತಾಎ, ಅಲ್ಲವೇ. ಜನರು ಎಲ್ಲಾ ಒಳ್ಳೊಳ್ಳೆ ಸಾಮಾನುಗಳನ್ನು ನೋಡಿ ಸಂತೋಷ ಪಡುತ್ತಾರೆ. ಯಾಕೆ? ಯಾಕೆಂದರೆ ಮನಸ್ಸು ಚಂದದ ಬಟ್ಟೆಗಳಿಗೆ, ಒಳ್ಳೆ ಪರಿಮಳಕ್ಕೆ, ಹೂಗಳಿಗೆ, ಹಣ್ಣುಗಳಿಗೆ ಮತ್ತು ಒಳ್ಳೆಯ ಆಹಾರಕ್ಕೆ ಆಕರ್ಷಿತಗೊಳ್ಳುತ್ತದೆ.

ನಮ್ಮ ಪೂರ್ವಜರು ಇದನ್ನು ತಿಳಿದುಕೊಂಡಿದ್ದರು, ಮತ್ತು ಅದಕ್ಕಾಗಿ ಅವರು ಮನಸ್ಸು ಈ ಐದು ಇಂದ್ರಿಯಗಳ ಮೂಲಕ ಈ ದಿಕ್ಕಿನಲ್ಲಿ ಸ್ಥಾಪಿತವಾಗಿದ್ದು ದೈವಿಕತೆಯ ಕಡೆ ಗಮನಹರಿಸುವಂತೆ ಈ ವಸ್ತುಗಳನ್ನು ವಿಗ್ರಹದ ಸುತ್ತ ಇಡುತ್ತಿದ್ದರು.

ಬೋಧಿ ಜನರೂ ಮನಸ್ಸನ್ನು ವಶಪಡಿಸಲು ಈ ತಂತ್ರವನ್ನು ಉಪಯೋಗಿಸುತ್ತಿದ್ದರು. ಇದಕ್ಕಾಗಿಯೇ ಅವರು ಭಗವಾನ್ ಬುದ್ಧನ ವಿಗ್ರಹಗಳನ್ನು ಹಾಗು ಬೋಧಿಸತ್ತ್ವಗಳನ್ನು ಮರಕತ, ಇಂದ್ರನೀಲಮಣಿ, ಬಂಗಾರ ಮತ್ತು ಬೆಳ್ಳಿಯಿಂದ ಬಹಳ ಸುಂದರವಾಗಿ ತಯಾರಿಸುತ್ತಿದ್ದರು. ಮನಸ್ಸು ಈ ಐದು ಇಂದ್ರಿಯಗಳ ಸಹಿತವಾಗಿ ದೈವಿಕತೆಯಲ್ಲಿ ಕೇಂದ್ರೀಕೃತವಾಗಿರಲಿ ಎಂದು ಅವರು ವಿಗ್ರಹದ ಮುಂದೆ ಹಣ್ಣು, ಹೂವು, ಧೂಪ ಮತ್ತು ಮಿಠಾಯಿಗಳನ್ನು ಇಡುತ್ತಾರೆ.

ಒಮ್ಮೆ ಮನಸ್ಸು ಶಾಂತವಾದ ಮೇಲೆ, ಅವರು ನಿಮಗೆ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಲು ಹೇಳುತ್ತಾರೆ. ಇದು ಎರಡನೆಯ ಹೆಜ್ಜೆ. ಧ್ಯಾನದಲ್ಲಿ ನೀವು ನಿಮ್ಮೊಳಗೇ ದೇವರನ್ನು ಪಡೆಯುತ್ತೀರಿ.

ಒಂದು ಬಹಳ ಸುಂದರವಾದ ಉಕ್ತಿಯಿದೆ,

’ಮನುಷ್ಯಾಣಾಂ ಅಪ್ಸು ದೇವತಾ ಮನೀಷೀಣಾಂ ದಿವಿ ದೇವತಾ |
ಬಾಲಾನಾಂ ತೋಷಕಾಷ್ಟೇಷು ಜ್ಞಾನಿನೋ ಆತ್ಮನಿ ದೇವತಾ || ’
(ವೇದಾಂತಗಳಲ್ಲಿ ಬರುವ ಶೃತಿಗಳಿಂದ ಆಯ್ದ ಒಂದು ಶ್ಲೋಕ)

ಒಬ್ಬರು ’ದೇವರೆಲ್ಲಿದ್ದಾರೆ?’ ಎಂದು ಕೇಳಿದಾಗ, ವಿವೇಕಿಗಳು ಈ ಶ್ಲೋಕದಿಂದ ಉತ್ತರಿಸುತ್ತಾರೆ. ಇದರ ಅರ್ಥ, ’ಮನುಷ್ಯರಿಗೆ, ಪ್ರೀತಿಯೇ ದೇವರು; ಬಹಳ ಪಾಂಡಿತ್ಯದವರಿಗೆ, ಅವರು ದೈವೀ ಶಕ್ತಿಗಳಲ್ಲಿ ಹಾಗೂ ದೈವೀ ಗುಣಗಳಲ್ಲಿ ದೇವರನ್ನು ನೋಡುತ್ತಾರೆ; ಸ್ವಲ್ಪ ಕಡಿಮೆ ಬುದ್ಧಿವಂತರು ದೇವರನ್ನು ಮರದ ಅಥವಾ ಕಲ್ಲಿನ ಮೂರ್ತಿಗಳಲ್ಲಿ ನೋಡುತ್ತಾರೆ; ಆದರೆ ವಿವೇಕಿಗಳು, ದೇವರನ್ನು ತಮ್ಮ ಆತ್ಮನಲ್ಲಿ ನೋಡುತ್ತಾರೆ.’

ನಾಳೆ ನಾವು ಆಶ್ರಮದಲ್ಲಿ ಚತುರ್ದಶಿ ಹವನವನ್ನು ಇಡುತ್ತೇವೆ. ನೀವೆಲ್ಲರೂ ಅದರಲ್ಲಿ ಪಾಲ್ಗೊಳ್ಳಬಹುದು. ಮಂತ್ರ ಪಠಣ ಆಗುತ್ತಿದ್ದಂತೆ ನೀವೆಲ್ಲರೂ ಧ್ಯಾನ ಮಾಡಬಹುದು.

ನೋಡಿ, ಪೂಜೆಗೆಂದು ನಿಯಮಿಸಲ್ಪಟ್ಟ ದೀರ್ಘ ಪದ್ಧತಿಗಳಿವೆಯಾದರೂ, ನಾವು ಅವನ್ನು ನಿಜವಾಗಿಯೂ ಮಾಡಬೇಕಾಗಿಲ್ಲ,

ಯಾಕೆಂದರೆ ನಾವು ಧ್ಯಾನ ಮಾಡುವಾಗ ಎಲ್ಲವೂ ದೇವರು ಎಂದು ನೋಡುತ್ತೇವೆ. ಆದರೆ, ಪ್ರಾಚೀನ ಸಂಪ್ರದಾಯ ಹಾದು ಪದ್ಧತಿಗಳನ್ನು ಉಳಿಸಿಕೊಳ್ಳುವುದರ ಸಲುವಾಗಿ, ನಾವು ಈ ಎಲ್ಲಾ ವಿಧಿ ಮತ್ತು ಕ್ರಮಗಳನ್ನು ಆಚರಿಸಬೇಕು. ಅದಕ್ಕಾಗಿಯೇ ನಾವು ನಿಯತವಾಗಿ ದೀಪ ಬೆಳಗಬೇಕು, ದೇವರಿಗೆ ಹೂಗಳನ್ನು ಅರ್ಪಿಸಬೇಕು, ನಮ್ಮ ಮಕ್ಕಳು ಇದರಿಂದ ಕಲಿತುಕೊಳ್ಳುವುದಕ್ಕಾಗಿ ಮತ್ತು ಭವಿಷ್ಯದ ಪೀಳಿಗೆಗಳು ನಮ್ಮ ಪ್ರಾಚೀನ ಸಂಪ್ರದಾಯಗಳು ಹಾಗೂ ಶ್ರೀಮಂತ ಸಾಂಪ್ರದಾಯಿಕ ಪರಂಪರೆಗೆ ಪರಿಚಿತವಾಗಿರುವುದಕ್ಕಾಗಿ.

ನಾವು ದೀಪಾವಳಿಯನ್ನು ಏಕೆ ಆಚರಿಸುತ್ತೇವೆ? ಅದನ್ನು ಆಚರಿಸುವ ನಿಜವಾದ ಅಗತ್ಯವಿಲ್ಲ. ಆದರೆ ನಾವು ಆಚರಿಸದಿದ್ದರೆ, ನಾವು ಮುಂದಿನ ಪೀಳಿಗೆಗಳಿಗೆ ಆ ಹಬ್ಬದ ಸಾಂಪ್ರದಾಯಿಕ ಹಾಗೂ ಪೌರಾಣಿಕ ಮಹತ್ತ್ವವನ್ನು ಮತ್ತು ನಮ್ಮ ಪೂರ್ವಜರು ಅದನ್ನು ಹೇಗೆ, ಯಾಕೆ ಆಚರಿಸುತ್ತಿದ್ದರು ಎಂದು ಹೇಗೆ ತಿಳಿಸುವುದು. ಹಾಗಾಗಿ ನಾವು ಇದೆಲ್ಲವನ್ನೂ ಮಾಡದಿದ್ದರೆ, ಆಗ ಒಂದು ಪ್ರಾಚೀನ ಪದ್ಧತಿ ಮತ್ತು ಒಂದು ದಿವ್ಯ ಸಂಪ್ರದಾಯ ಕಳೆದುಹೋಗುತ್ತದೆ.

ನೀವು ಇದೆಲ್ಲದರ ಆಳಕ್ಕೆ ಇಳಿದಾಗ, ಇದೆಲ್ಲವೂ ಎಷ್ಟು ಅದ್ಭುತವಾಗಿದೆ ಎಂದು ನೀವು ನೋಡುತ್ತೀರಿ. ಆದ್ದರಿಂದಲೇ ಶ್ರೀ ಕೃಷ್ಣನು ಹೇಳುವುದು, ’ಎಲ್ಲವೂ ನಾನು’. ಹಾಗಾಗಿ ನೀವು ಈ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಬಿಟ್ಟುಬಿಡಬೇಕಾಗಿಲ್ಲ.

ಪ್ರ: ಗುರೂಜಿ, ಇಂದಿನ ಟಿ.ವಿ. ಧಾರಾವಾಹಿಗಳಲ್ಲಿ ತೋರಿಸುವಂತ ಮಹಾದೇವ, ಪಾರ್ವತಿ, ಜಾಲಂಧರ ಹಾಗೂ ಇತರ ಪಾತ್ರಗಳಲ್ಲಿ ನೈಜತೆಯಿದೆಯೇ? ದಯವಿಟ್ಟು ಇದರ ಮೇಲೆ ಸ್ವಲ್ಪ ಬೆಳಕುಹರಿಸಿ.

ಶ್ರೀ ಶ್ರೀ: ಹ್ಞಾಂ, ಇದು ನನಗೂ ಸಮಂಜಸವೆನಿಸುವುದಿಲ್ಲ.

ಅವರು ಪಾರ್ವತಿಯನ್ನು, ಒಬ್ಬ ಸದಾ ಕೋಪಿಸಿಕೊಳ್ಳುವ, ನಿತ್ಯವಾಗಿ ಸುಲಭದಿಂದ ಅಸಮಾಧಾನಪಟ್ಟುಕೊಳ್ಳುವ ಮತ್ತು ಆಗಾಗ ರೇಗಾಡುವವಳಂತೆ ತೋರಿಸುತ್ತಾರೆ. ಇವು ದೈವೀ ಗುಣಗಳಲ್ಲ. ಸಮಚಿತ್ತತ್ತ್ವ, ಆನಂದ, ಸಹಜತೆ, ಸರಳತೆ ಮತ್ತು ದೂರದರ್ಶಿತ್ವ, ಇವು ದೈವೀ ಗುಣಗಳು. ಇದು ತೋರಿಸಬೇಕಾಗಿರುವುದು.

ನೋಡಿ ಕೆಲವು ದೈವೀ ಶಕ್ತಿಗಳಿವೆ ಮತ್ತು ಕೆಲವು ಆಸುರೀ ಶಕ್ತಿಗಳಿವೆ. ಆದರೆ ಈ ಧಾರಾವಾಹಿಗಳು ಇದನ್ನು ನಿರ್ಲಕ್ಷಿಸಿ ಈ ದೈವೀ ಪಾತ್ರಗಳನ್ನು ಮನುಷ್ಯರಂತೆ ಮತ್ತು ಸಾಮಾನ್ಯ ಮನುಷ್ಯರಲ್ಲ ಆದರೆ ಭಾವುಕವಾಗಿಅಸ್ವಸ್ಥ ಅಥವಾ ನೇತ್ಯಾತ್ಮಕತೆ ಹಾಗೂ ದಾರಿದ್ರ್ಯವುಳ್ಳ ಜರಂತೆ ಚಿತ್ರೀಕರಿಸುತ್ತಾರೆ. ಹಾಗಾಗಿ ಇದು ವಿವೇಕಶೀಲ ಕೆಲಸ ಎಂದು ನಾನು ಯೋಚಿಸುವುದಿಲ್ಲ.ಇದು ಒಂದು ವಿಷಯ.

ಎರಡನೆಯದಾಗಿ, ನೀವು ಆ ಕಥೆಯನ್ನು ನಿಜ ವಾಸ್ತವ ಎಂದು ಪರಿಗಣಿಸಬಾರದು, ಆದರೆ ಆ ಕಥೆಗಳಲ್ಲಿ ಪ್ರಸ್ತುತಪಡಿಸಿದ ಆಳವಾದ ಅರ್ಥ-ಸಾರವನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಅದು ಇನ್ನೊಂದು ಬಗೆಯ ಮನರಂಜನೆಯಲ್ಲದೇ ಹೆಚ್ಚೇನೂ ಆಗುವುದಿಲ್ಲ.

ಉದಾಹರಣೆಗೆ, ಆ ಧಾರಾವಾಹಿಯಲ್ಲಿ ಜಾಲಂಧರ ಎಂಬ ಹೆಸರಿನ ಒಬ್ಬ ರಾಕ್ಷಸ ಉದ್ಭವಿಸಿದ. ಈಗ ಎಲ್ಲವೂ ಭಗವಾನ್ ಶಿವನಾಗಿರುವಾಗ ಈ ಆಸುರೀ ಶಕ್ತಿ ಎಲ್ಲಿಂದ ಉಂಟಾಯಿತು? ಭಗವಾನ್ ಶಿವನನ್ನು ಮೀರಿ ಏನೂ ಇಲ್ಲದಿರುವಾಗ, ಈ ಅಸುರನೂ ಶಿವನಿಂದ ಬಂದಿರಬೇಕು.

ಹಾಗಾಗಿ ಉದ್ಭವಿಸಿರುವ ಎಲ್ಲಾ ಅಸುರರು ಆ ಬ್ರಹ್ಮ ತತ್ತ್ವದ ಭಾಗವೇ ಹೊರತು ಅದರಿಂದ ಬೇರ್ಪಟ್ಟಿಲ್ಲ. ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದನ್ನೇ.

ಆ ಕಥೆ ಹೀಗೆ ವಿವರಿಸಲಾಗಿದೆ: ಭಗವಾನ್ ಶಿವನು ಇಂದ್ರನ ಅಹಂಕಾರದಿಂದ ಬಹಳ ಕ್ರೋಧಗೊಂಡನಂತೆ.

ಭಗವಾನ್ ಶಿವ ಶಾಂತಿಯ ವ್ಯಕ್ತರೂಪ ಮತ್ತು ಇಂದ್ರನು ಸಾಮೂಹಿಕ ಚೈತನ್ಯ ಅಥವಾ ದೊಂಬಿ-ಮನೋಭಾವದ ಪ್ರತೀಕ.
ಒಂದು ಇಂದ್ರ ೧೦೦೦ ಕಣ್ಣುಗಳಿಗೆ ಸಮಾನ ಎಂದು ಹೇಳುತ್ತಾರೆ, ಅಂದರೆ ೫೦೦ ಜನರ ಒಂದು ದೊಂಬಿಯ ಪ್ರತೀಕ. ಒಂದು ಗುಂಪು ಸಾಮಾನ್ಯವಾಗಿ ತನ್ನದೇ ಆದ ಚೈತನ್ಯ ಅಥವಾ ಮನಸ್ಸನ್ನು ಹೊಂದಿರುತ್ತದೆ, ಇದನ್ನು ಮಾಬ್ ಸೈಕಾಲಜಿ (ದೊಂಬಿ-ಮನೋಭಾವ) ಎನ್ನುತ್ತಾರೆ, ಇದು ಗರಿಷ್ಠ ಪಕ್ಷ ಹಾನಿಕಾರಕವಾಗಿರುತ್ತದೆ.

ಅವರು ಎಲ್ಲಾದರೂ ಹೋಗಿ ಸಾರ್ವಜನಿಕ ಸ್ವತ್ತನ್ನು ಸುಟ್ಟು ಅಥವಾ ಮುರಿದುಹಾಕಿ ಗದ್ದಲವೆಬ್ಬಿಸುತ್ತಾರೆ. ಈ ದೊಂಬಿ-ಮನೋಭಾವ ಯಾವತ್ತೂ ಒಂದು ವಿನಾಶಕಾರಕ ಪ್ರವೃತ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಶಿವ ತತ್ತ್ವವು (ಶುದ್ಧ ಚೈತನ್ಯ ಮತ್ತು ಪರಮಾನಂದದ ಮೂಲ ತತ್ತ್ವ) ಇಂದ್ರನ ವಿನಾಶಕಾರಕ ಚೈತನ್ಯದ ಮೇಲೆ ಕೋಪಗೊಳ್ಳುವುದು ಬಹಳ ಸಹಜವಾಗಿತ್ತು.

ಹಾಗೆ ಶಾಂತ ಶಿವ ತತ್ತ್ವದಿಂದ ಕ್ರೋಧ ಉಕ್ಕಿತು. ಆದರೆ ಆ ಸಿಟ್ಟು ಅಲ್ಲಿ ನಿಲ್ಲಲಿಲ್ಲ. ಭಗವಾನ್ ಶಿವನ ಕ್ರೋಧವು ಒಂದು ರಾಕ್ಷಸನ (ಭಗವಂತನ ಕ್ರೋಧದ ವಿನಾಶಕ ಶಕ್ತಿಯ ಸಶರೀರ ರೂಪ) ರೂಪ ತಳೆಯಿತು. ಸಿಟ್ಟು ಎಲ್ಲಿಂದಲೂ ಬಂದಿರಲಿ, ಭಗವಂತನಿಂದಲೇ ಬಂದಿದ್ದರೂ, ಅದು ನಿಖರವಾಗಿ ಪ್ರತಿಕ್ರಿಯೆ ಹೊಂದಿ ಮತ್ತೆ ಆ ವ್ಯಕ್ತಿಯ ಕಡೆಗೆ ಮರಳುತ್ತದೆ. ಎಲ್ಲಿ ತನ್ನ ಮೂಲವಿದೆಯೋ, ಕಟ್ಟಕಡೆಯದಾಗಿ ಎಲ್ಲವೂ, ಕೋಪವೂ ಸೇರಿ, ಅಲ್ಲಿಗೆ ಮರಳುತ್ತದೆ.

ಹಾಗೆ ಆ ಕ್ರೋಧವೂ (ಜಾಲಂಧರನಿಂದ ನಿರೂಪಿಸಿರುವಂಥದ್ದು) ತನ್ನ ಮೂಲವಾದ ಶಿವನಲ್ಲಿಗೆ ಮರಳಿ ಬರಬೇಕಿತ್ತು (ಮತ್ತು ಕರಗಿಹೋಗಬೇಕಿತ್ತು). ಭಗವಾನ್ ಶಿವನು ಜಾಲಂಧರನ ವಧೆಗಾಗಿ ಆದಿಶಕ್ತಿಯಲ್ಲಿ (ಮೊದಲಿನಿಂದಲೂ ಇರುವ ಶಕ್ತಿಯಾದ ಮಾತಾ ಭಗವತಿ) ಪ್ರಾರ್ಥಿಸುತ್ತಾನೆ.

ಭಗವಾನ್ ಶಿವನು ಚೈತನ್ಯದ ಶಾಂತ ತತ್ತ್ವವನ್ನು ನಿರೂಪಿಸುತ್ತಾನೆ, ಹಾಗೂ ಮಾತಾ ಭಗವತಿಯು ಈ ಸೃಷ್ಟಿಯಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಹೇತುವಾಗಿರುವ ಶಕ್ತಿ. ಈಗ ಆದಿಶಕ್ತಿಯು ಮೂರು ಶಾಕ್ತಿಗಳ ಸಮ್ಮಿಲನ: ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಮತ್ತು ಇಚ್ಛಾ ಶಕ್ತಿ.

ಹಾಗೆ ಭಗವಾನ್ ಶಿವ ಮತ್ತು ಆದಿ ಶಕ್ತಿ ಒಂದಾದಾಗ, ಭಗವಂತನಿಂದ ಬಂದ ಶಕ್ತಿಯನ್ನು ಅವರು ಸೋಲಿಸಿದರು. ಈ ರೀತಿಯಲ್ಲಿ ಅವರು ಜಾಲಂಧರನನ್ನು, ಜನರನ್ನು ತನ್ನ ಶಕ್ತಿಗಳನ್ನುಪಯೋಗಿಸಿ ಭ್ರಾಂತಿಯ ಜಾಲದಲ್ಲಿ ಸಿಕ್ಕಿಹಾಕಿಸುತ್ತಿದ್ದ ಅಸುರನನ್ನು, ವಧಿಸಿದರು. ಇದು ಕಥೆಯ ಸಾರ.

ಪ್ರ: ಗುರುದೇವ, ನಾನು ಸರ್ಕಾರೀ ನೌಕರ. ನನ್ನ ಸಂಪಾದನೆ ಅಲ್ಪಪ್ರಮಾಣವಾದುದು. ನಾನು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೇ ಒಂದು ಯಶಸ್ವಿ ಹಾಗೂ ಸುಖಸಾಧನದ ಜೀವನವನ್ನು ನಡೆಸಲು ಆಗುವುದೇ?

ಶ್ರೀ ಶ್ರೀ: ನಿಮಗೆ ಶಾಂತಿಯಿಂದ ನಿದ್ರಿಸಬೇಕೇ? ನಿಮಗೆ ಅಂಜಿಕೆಯಿಲ್ಲದೇ ನಡೆಯಬೇಕೇ? ನಿಮಗೆ ಆತ್ಮ ವಿಶ್ವಾಸದಿಂದ ತಲೆ ಮೇಲೆತ್ತಿ ಬದುಕಬೇಕೇ?

ನಿಮಗೆ ಒಂದು ಪ್ರಾಮಾಣಿಕ ಬದುಕಿನಿಂದ ಸಿಗುವ ಆನಂದವು ಒಂದು ಅಪ್ರಾಮಾಣಿಕ ರೀತಿಯ ಜೀವನದಿಂದ ಸಿಗುವುದು ಎಂದೂ ಸಾಧ್ಯವಿಲ್ಲ. ನಿಮ್ಮ ಬಳಿ ಎಲ್ಲಾ ಯಂತ್ರೋಪಕರಣಗಳು ಹಾಗೂ ಸುಖಸಾಧನಗಳೂ ಇದ್ದಿರಬಹುದು, ಆದರೆ ನಿಮಗೆ ನೆಮ್ಮದಿಯಿಂದ ನಿದ್ರಿಸಲಾಗದಿದ್ದರೆ ಏನು ಪ್ರಯೋಜನ?

ಈಗ ನಿಮಗೇನು ಬೇಕೆಂದು ನೀವು ಆಯ್ದುಕೊಳ್ಳಿ. ನಿಮಗೆ ಶಾಂತಿಯಿಂದ ಬದುಕಿ, ಶಾಂತಿಯಿಂದ ನಿದ್ರಿಸಿ ತಲೆ ಮೇಲೆತ್ತಿ ಬದುಕಬೇಕೇ? ನಾನೊಂದು ಪ್ರಾಮಾಣಿಕ ಜೀವನ ನಡೆಸಿದ್ದೇನೆ ಎಂದ ನಿಮಗೆ ಧೈರ್ಯದಿಂದ ಹೇಳಲು ಸಾಧ್ಯವೇ? ಇದನ್ನು ಹೇಳಲು ಸಾಧ್ಯವಾದರೆ, ಬೇರೆ ಯಾವುದರಿಂದಲೂ ಸಾಧ್ಯವಾಗದ ಆನಂದ ಮತ್ತು ತೃಪ್ತಿಯನ್ನು ಇದು ನಿಮಗೆ ತಂದುಕೊಡುತ್ತದೆ.

ಪ್ರ: ಗುರೂಜಿ, ಈ ಜಗತ್ತಿನಲ್ಲಿ ಎಲ್ಲರೂ ಒಂದಿಲ್ಲೊಂದು ತೊಂದರೆಯಿಂದ ಪೀಡಿತರಾಗಿರುವಂತಿದೆ. ನಾವು ಈ ಲೋಕಕ್ಕೆ ತೊಂದರೆಗಳನ್ನು ಸುಧಾರಿಸುವುದಕ್ಕಾಗಿಯೇ ಬಂದಿದ್ದೇವಾ?

ಶ್ರೀ ಶ್ರೀ: ನೀವದನ್ನು ತೊಂದರೆ ಎಂದು ಪರಿಗಣಿಸಿದರೆ, ಅವು ನಿಮಗೆ ತೊಂದರೆಯಂತೆಯೇ ಕಾಣುತ್ತವೆ. ನೀವದನ್ನು ಒಂದು ಆಟ (ಭಗವಂತನದ್ದು) ಎಂದು ನೋಡಿದರೆ, ಅವು ನಿಮಗೆ ಆಟದಂತೆ ತೋರುತ್ತವೆ.

ಬಹಳ ಸಲ ನಾವು ತೊಂದರೆಗಳಿಗೆ ಎಷ್ಟು ಹೊಂದಿಕೊಳ್ಳುತ್ತೇವೆ ಅಂದರೆ, ಅವುಗಳಿಲ್ಲದೆ ನಾವು ಅವಿಶ್ರಾಂತರಾಗುತ್ತೇವೆ.

ತೊಂದರೆಗಳಿಲ್ಲದೇ ಇದ್ದರೆ, ನಾವು ಕೊಂಚ ತೊಂದರೆಗಳನ್ನು ನಮಗಾಗಿಯೇ ಸೃಷ್ಟಿಸಿಕೊಳ್ಳುತ್ತೇವೆ, ಮತ್ತು ನಮ್ಮ ಸುತ್ತಮುತ್ತಲಿನವರಿಗೆ ತೊಂದರೆಯಾಗುತ್ತೇವೆ. ಜೀವನದ ಯಥಾದೃಷ್ಟಿಯನ್ನು ನಾವು ಬದಲಿಸಬೇಕಾಗಿದೆ. ಒಂದು ವಿಶಾಲ ದೃಷ್ಟಿಯನ್ನು ಹೊಂದಿರಿ.

ಈ ಲೋಕ ವೈವಿಧ್ಯಗಳಿಂದ ತುಂಬಿದೆ, ಮತ್ತು ಪ್ರತಿ ವ್ಯಕ್ತಿಯೂ ಬೇರೆ ಸ್ವಭಾವವನ್ನು ಮತ್ತು ಬೇರೆ ವರ್ತನೆಯನ್ನು ಹೊಂದಿರುತ್ತಾನೆ. ನೀವಿದನ್ನು ಅರ್ಥಮಾಡಿಕೊಳ್ಳಬೇಕು.

ಪ್ರ: ಗುರೂಜಿ, ನನ್ನ ಪೋಷಕರ ವಿವಾಹವಾಗಿ ೨೫ ವರ್ಷಗಳಾಗಿವೆ ಆದರೆ ಅವರು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ನಾನು ಅಪ್ಪನ ಬಳಿ ಹೋದಾಗ ಅವರು ಸರಿ ಎಂದು ಕಾಣುತ್ತದೆ, ಮತ್ತು ನಾನು ಅಮ್ಮನ ಬಳಿ ಹೋದಾಗ ಅವರು ಸರಿ ಎಂದು ಕಾಣುತ್ತದೆ. ನಾನೇನು ಮಾಡಲಿ?

ಶ್ರೀ ಶ್ರೀ: ನಿನಗೆ ನನ್ನ ಮೊದಲ ಉಪದೇಶವೆಂದರೆ ಇಬ್ಬರ ಬಳಿಯೂ ಹೋಗುತ್ತಲೇ ಇರು. ಇಬ್ಬರಲ್ಲಿಯೂ "ನೀವು ಸರಿ" ಎಂದು ಹೇಳುತ್ತಿರಿ ಮತ್ತು ಅವರ ನಡುವಿನ ಸ್ನೇಹವನ್ನು ಕಾಪಾಡಲು ಪ್ರಯತ್ನವನ್ನು ಮುಂದುವರಿಸಿ. ಬಿಟ್ಟುಬಿಡಬೇಡಿ. ನೀವು ನೂರು ಸಲ ಪ್ರಯತ್ನಿಸಿದರೆ, ಕನಿಷ್ಠ ಒಂದು ಸಲವಾದರೂ ಏನಾದರೂ ಒಳ್ಳೆಯದಾಗುತ್ತದೆ.

ನೋಡಿ, ಆಗಲೇ ೨೫ ವರ್ಷಗಳು ಕಳೆದಿವೆ, ಮತ್ತು ಮುಂದಿನ ೨೦-೨೫ ವರ್ಷಗಳು ಹಾಗೆ ಕಳೆಯುತ್ತವೆ. ಅದರ ನಂತರ ಏನಾಗುತ್ತದೆ ಎಂದು ನಾವು ಆಮೇಲೆ ನೋಡೋಣ.

ಅಂಥ ಪರಿಸ್ಥಿತಿಯಲ್ಲಿ ಶಾಂತಿ ಉಳಿಸಲು ಬಹಳ ಪ್ರಯತ್ನ ಮಾಡಬೇಡಿ. ವಸ್ತುಸ್ಥಿತಿ ಹೇಗಿದೆಯೋ ಅದನ್ನು ಸ್ವೀಕಾರ ಮಾಡಿ ವಿಶ್ರಮಿಸಿ. ಜನರ ಸ್ವಭಾವವನ್ನು ಬದಲಾಯಿಸುವುದು ಕಷ್ಟ. ಅವರು ಹೇಗಿದ್ದಾರೋ ಅವರನ್ನು ಹಾಗೆಯೇ ಬಿಡುವುದು ಒಳ್ಳೆಯದು. ಬೆಂಕಿ ಬಹಳ ಹೆಚ್ಚಿದಾಗ ಸ್ವಲ್ಪ ನೀರು ಸಿಂಪಡಿಸಿ. ಅವರು ಜಗಳ ಪ್ರಾರಂಭಿಸಿದರೆ ನಡುವಿನಲ್ಲಿ ನಿಲ್ಲಿ. ನೀವು ಪ್ರಜ್ಞಾವಂತ ಹಾಗೂ ಬಲಶಾಲಿಯಾಗಿರುವಿರಿ. ನಮ್ಮ ಸಮಾಜದಲ್ಲಿ ವಸ್ತುಸ್ಥಿತಿ ಇರುವುದು ಹಾಗೆ.

ಒಬ್ಬ ಮಹಾಶಯನನ್ನು ಯಾರೋ ಕೇಳಿದರು, ’ನೀವು ನಿಮ್ಮ ಪತ್ನಿಯೊಂದಿಗೆ ಏಕೆ ಜಗಳವಾಡುತ್ತೀರಿ?’

ಅವನು ಉತ್ತರಿಸಿದ, ’ನಿಮ್ಮ ಮಾತಿನ ಅರ್ಥವೇನು? ಅವಳು ನನ್ನ ಪತ್ನಿ ಮತ್ತು ನಾನವಳನ್ನು ಪ್ರೀತಿಸುತ್ತೇನೆ, ಹಾಗಿರುವಾಗ ನಾನು ಹೋಗಿ ಇನ್ನೊಬ್ಬರೊಂದಿಗೆ ಹೇಗೆ ಜಗಳವಾಡಲಿ? ಯಾರನ್ನು ನಾನು ಪ್ರೀತಿಸುತ್ತೇನೋ ಅವರೊಡನೆ ಮಾತ್ರ ನಾನು ಜಗಳವಾಡಬಲ್ಲೆ’.

ಅದು ಬಹಳ ನಿಜ.

ನೋಡಿ, ಅವರು ಈಗೊಮ್ಮೆ ಆಗೊಮ್ಮೆ ಜಗಳವಾಡುತ್ತಾರೆ, ಆದರೆ ನಂತರ ಅವರು ಜೊತೆಯಾಗುತ್ತಾರೆ ಮತ್ತು ಪರಸ್ಪರ ಪ್ರೀತಿಯಿಂದಲೂ ಇರುತ್ತಾರೆ. ಅದು ಅನುಮೋದನೀಯವೇ. ನಡುವಿನಲ್ಲಿ ಬಹಳ ತಲೆ ಹಾಕಬೇಡಿ ಮತ್ತು ಚಿಂತಿಸಬೇಡಿ.


ಈ ಬರಹದ ’ಸ್ಪೀಕಿಂಗ್ ಟ್ರೀ’ ಲಿಂಕ್:
http://www.speakingtree.in/spiritual-blogs/seekers/self-improvement/to-what-extent-is-idol-worship-acceptable

ಭಾನುವಾರ, ಜೂನ್ 2, 2013

ನಿಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ

ಬೆಂಗಳೂರು, ಭಾರತ
೨ ಜೂನ್ ೨೦೧೩

’ಔಷಧಿ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಲಾಗಿದೆ. ಇದರರ್ಥವೇನೆಂದರೆ, ನಾವೊಂದು ಔಷಧಿಯನ್ನು ತೆಗೆದುಕೊಳ್ಳುವಾಗ, ನಾವದನ್ನು ಪವಿತ್ರವೆಂದು ಪರಿಗಣಿಸಬೇಕು, ಗಂಗಾ ನದಿಯ ನೀರಿನಂತೆ.

ನೀವು ಗಂಗಾ ನದಿಯ ನೀರನ್ನು (ಗಂಗಾಜಲ) ಕುಡಿಯುವಾಗ, ನಿಮಗೆ ಹೇಗನ್ನಿಸುವುದು? ನೀವದನ್ನು ಒಂದು ಪವಿತ್ರತೆಯ ಭಾವನೆಯೊಂದಿಗೆ ಮತ್ತು ಶ್ರದ್ಧೆಯೊಂದಿಗೆ ಕುಡಿಯುತ್ತೀರಿ. ಸಾಮಾನ್ಯ ನೀರು ಮತ್ತು ಗಂಗಾಜಲದ ನಡುವೆ ಇರುವ ವ್ಯತ್ಯಾಸವೆಂದರೆ ಅದು. ನೀವು ಶ್ರದ್ಧೆಯೊಂದಿಗೆ ಕುಡಿಯುವಾಗ, ನೀರು ತೀರ್ಥವಾಗುತ್ತದೆ. ಒಂದು ಔಷಧಿಯನ್ನು ಇದೇ ಭಾವನೆಯೊಂದಿಗೆ ತೆಗೆದುಕೊಳ್ಳಬೇಕು, ಆಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಅದು ಕೇವಲ ಒಂದು ಮಾತ್ರೆಯನ್ನು ನಿಮ್ಮ ಬಾಯಿಯೊಳಕ್ಕೆ ಹಾಕಿ ನೀರು ಕುಡಿಯುವುದಲ್ಲ.

’ವೈದ್ಯೋ ನಾರಾಯಣೋ ಹರಿಃ’, ಅಂದರೆ ಒಬ್ಬರು ವೈದ್ಯರನ್ನು ಭಗವಾನ್ ನಾರಾಯಣನ ಒಂದು ರೂಪವಾಗಿ ನೋಡಬೇಕು.

ಈ ಚರಣಕ್ಕೆ ಎರಡು ಅರ್ಥಗಳಿವೆ. ಒಂದನೆಯದೆಂದರೆ, ನಿಜವಾದ ವೈದ್ಯನು ಭಗವಾನ್ ನಾರಾಯಣನಾಗಿರುವನು ಮತ್ತು ನಿಜವಾದ ಔಷಧಿಯು ಗಂಗಾ ನದಿಯ ನೀರಾಗಿದೆ.

ಇನ್ನೊಂದು ಎಂದರೆ, ಒಂದು ಔಷಧಿಯು ಗಂಗಾ ನದಿಯ ನೀರಿನಷ್ಟೇ ಪವಿತ್ರವಾಗಿ ಪರಿಗಣಿಸಲ್ಪಡಬೇಕು ಮತ್ತು ಒಬ್ಬ ವೈದ್ಯನು ಭಗವಾನ್ ನಾರಾಯಣನ ಒಂದು ರೂಪವಾಗಿ ನೋಡಲ್ಪಡಬೇಕು.

ನಿಮ್ಮ ಆರೋಗ್ಯವನ್ನು ಕಾಪಾಡಲು ಒಳ್ಳೆಯ ಅಭ್ಯಾಸಗಳ ಅಗತ್ಯವಿದೆ. ಇಲ್ಲಿ ಮನಸ್ಸು ಕೂಡಾ ಒಂದು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾವು ದುರಭ್ಯಾಸಗಳಿಂದ ಮುಕ್ತರಾಗಲು ಬಯಸುವುದಾದರೆ, ನಮ್ಮ ಮನಸ್ಸು ಪ್ರಸನ್ನವಾಗಿರಬೇಕು ಮತ್ತು ನಾವು ಶ್ರದ್ಧೆಯನ್ನು ಹೊಂದಿರಬೇಕು.

ಒಂದು ರೋಗವು ಗುಣಹೊಂದಬೇಕಾದರೆ ಮೂರು ವಿಷಯಗಳು: ಒಳ್ಳೆಯ ಅಭ್ಯಾಸಗಳು, ಒಳ್ಳೆಯ ಯೋಚನೆಗಳು ಮತ್ತು ಔಷಧಿಗಳು ಬೇಕಾಗುತ್ತವೆಯೆಂದು ನಮ್ಮ ಪೂರ್ವಿಕರು ಹೇಳಿರುವರು. ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಮನಸ್ಸನ್ನು ಪ್ರಸನ್ನವಾಗಿಯೂ ಶಾಂತವಾಗಿಯೂ ಇಟ್ಟುಕೊಳ್ಳಬೇಕು ಮತ್ತು ನಾವು ಶ್ರದ್ಧೆಯನ್ನು ಹೊಂದಿರಬೇಕು.

ಆಯುರ್ವೇದವು ಗಂಗಾನದಿಯ ತಟದಲ್ಲಿ ಹುಟ್ಟಿಕೊಂಡಿತು. ನೀವು ಋಷಿಕೇಶ ಮತ್ತು ಹರಿದ್ವಾರಗಳಿಗೆ ಹೋದರೆ, ನಿಮಗೆ ಅಲ್ಲಿ ಹಲವಾರು ಆಯುರ್ವೇದ ಅಂಗಡಿಗಳು ಕಾಣಸಿಗುತ್ತವೆ. ಅದು ಈಗ ಭಾರತದಾದ್ಯಂತ ಹರಡಿದೆ.

ನಿಮ್ಮ ಆರೋಗ್ಯವನ್ನು ನಿಯಮಿತ ಅಂತರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.

ನಾವು ತಿನ್ನುತ್ತಾ ಇರುತ್ತೇವೆ ಮತ್ತು ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಹಲವು ಜನರು ವ್ಯಾಯಾಮವನ್ನು ಮಾಡುವುದೂ ಇಲ್ಲ. ಮೊದಲು, ಜನರು ಬಹಳ ಕಷ್ಟಪಟ್ಟು ದುಡಿಯುತ್ತಿದ್ದರು.

ಸುಮಾರು ೬ ಅಂಗುಲಗಳಷ್ಟಿರುವ ಒಂದು ತುಂಡು ಕಬ್ಬನ್ನು ತಿನ್ನಲು ನಾವು ಬಹಳಷ್ಟು ಪ್ರಯತ್ನವನ್ನು ಹಾಕಬೇಕಾಗುತ್ತದೆ ಮತ್ತು ನೀವು ಕಬ್ಬನ್ನು ಬಹಳಷ್ಟು ಪ್ರಯತ್ನದೊಂದಿಗೆ ತಿನ್ನುವಾಗ, ಅದು ಸುಲಭವಾಗಿ ಜೀರ್ಣವಾಗುತ್ತದೆ ಕೂಡಾ. ಈಗ ಸುಮ್ಮನೆ ಊಹಿಸಿ, ಯಾರಾದರೂ ನಿಮ್ಮಲ್ಲಿ ಒಂದು ಹತ್ತು ಅಡಿಗಳಷ್ಟು ಉದ್ದದ ಕಬ್ಬನ್ನು ತಿನ್ನಲು ಹೇಳಿದರೆ, ನೀವು ಎಷ್ಟು ಬಳಲುವಿರಿ ಎಂದರೆ, ಅದರ ನಂತರ ಯಾವುದನ್ನೂ ತಿನ್ನಲು ನಿಮಗೆ ಸಾಧ್ಯವಾಗದು.

ನಿಮಗೆ ಗೊತ್ತೇ, ಒಂದು ಚಮಚ ಸಕ್ಕರೆಯು, ಹತ್ತು ಅಡಿಗಳಷ್ಟು ಉದ್ದದ ಕಬ್ಬಿನ ರಸದಿಂದ ಮಾಡಲಾಗಿರುತ್ತದೆ ಎಂಬುದು?

ಒಂದು ದಿನದಲ್ಲಿ ನಾವು ಹಲವಾರು ಚಮಚಗಳಷ್ಟು ಸಕ್ಕರೆಯನ್ನು ತಿನ್ನುತ್ತೇವೆ. ಈಗ, ಯಾವುದೇ ವ್ಯಾಯಾಮವಿಲ್ಲದೆಯೇ ನಾವು ಅಷ್ಟೊಂದು ಸಕ್ಕರೆಯನ್ನು ತಿಂದರೆ, ಶರೀರಕ್ಕೆ ಅದನ್ನು ತಡೆಯಲು ಹೇಗೆ ಸಾಧ್ಯ? ನಲುವತ್ತು ವರ್ಷದ ಮೇಲಿನ ವಯಸ್ಸಿನ ಜನರು ಆಸ್ಟಿಯೋಪೋರೋಸಿಸ್‌ಗೆ (ಎಲುಬುಗಳು ಟೊಳ್ಳಾಗುವಿಕೆಯ ರೋಗ) ತುತ್ತಾಗುತ್ತಿದ್ದಾರೆ, ಅವರಿಗೆ ಕೀಲುನೋವುಗಳು ಮತ್ತು ಎಲುಬುಗಳಲ್ಲಿ ಕ್ಯಾಲ್ಸಿಯಂನ ನಷ್ಟವಾಗುತ್ತಿವೆ. ಇದೆಲ್ಲವೂ ಬಿಳಿ ಸಕ್ಕರೆಯಿಂದಾಗಿ. ಬ್ರಿಟಿಷರು ಬೆಲ್ಲವನ್ನು ತೆಗೆದುಹಾಕಿ, ನಮಗೆ ಬಿಳಿ ಸಕ್ಕರೆಯನ್ನು ಕೊಟ್ಟರು ಮತ್ತು ಅಂದಿನಿಂದ ನಾವು ಬಿಳಿ ಸಕ್ಕರೆಯನ್ನು ತಿನ್ನುತ್ತಾ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ.

ನೀವು ಸಕ್ಕರೆಯನ್ನು ತಿಂದರೆ, ಅದಕ್ಕನುಸಾರವಾಗಿ ನೀವು ವ್ಯಾಯಾಮ ಮಾಡಬೇಕು. ಸಿಹಿಮೂತ್ರದಂತಹ ರೋಗಗಳು ಬರುವುದು ಯಾಕೆಂದರೆ ನಾವು ಆಹಾರದ ಬಗ್ಗೆ ಗಮನ ನೀಡಿಲ್ಲ. ನೀವು ನಿಮ್ಮ ಆಹಾರದ ಅಭ್ಯಾಸದ ಕಡೆಗೆ ಕಾಳಜಿ ವಹಿಸಬೇಕು. ನೀವಿದನ್ನು ಮಾಡಿದಾಗ, ನಿಮಗೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯು ಕಾಣಿಸುವುದು.

ಬಿಳಿ ಸಕ್ಕರೆಯನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ ಬದಲಾಗಿ ಬೆಲ್ಲವನ್ನು ಬಳಸಿ. ಬೆಲ್ಲದಲ್ಲಿ ಸತು, ಮೆಗ್ನೀಷಿಯಂ, ಪೊಟಾಷಿಯಂ ಮತ್ತು ಇತರ ಖನಿಜಗಳಿವೆ. ಅವುಗಳು ಶರೀರವನ್ನು ಬಲಗೊಳಿಸುವುದರಲ್ಲಿ, ರಕ್ತವನ್ನು ಉತ್ಪಾದಿಸುವುದರಲ್ಲಿ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರಲ್ಲಿ ಸಹಾಯ ಮಾಡುತ್ತವೆ. ಬಿಳಿ ಸಕ್ಕರೆಯು ಸಲ್ಫರನ್ನು (ಗಂಧಕ) ಒಳಗೊಂಡಿರುತ್ತದೆ, ಅದು ಶರೀರದಲ್ಲಿನ ಕ್ಯಾಲ್ಸಿಯಂನ್ನು ಬರಿದಾಗಿಸುತ್ತದೆ. ಅದಕ್ಕಾಗಿಯೇ ಜನರು ಆಸ್ಟಿಯೋಪೋರೋಸಿಸ್‌ನಂತಹ ಖಾಯಿಲೆಗಳಿಗೆ ತುತ್ತಾಗುತ್ತಿರುವುದು.

ಆದುದರಿಂದ, ಬಿಳಿ ಸಕ್ಕರೆಯನ್ನು ಒಳಗೊಂಡಿರುವಂತಹ ಸಿಹಿತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿ ಮತ್ತು ಬೆಲ್ಲದಿಂದ ಮಾಡಿದಂತಹ ಸಿಹಿತಿಂಡಿಗಳನ್ನು ತಿನ್ನಿ. ಆಗ ನಿಮ್ಮ ಆರೋಗ್ಯವು ಉತ್ತಮವಾಗುವುದನ್ನು ನೀವು ನೋಡುವಿರಿ.

ಶನಿವಾರ, ಜೂನ್ 1, 2013

ಸಕಲ ವಿದ್ಯಮಾನಗಳ ಮೂಲತತ್ವ

ಜೂನ್ ೧, ೨೦೧೩
ಬೆಂಗಳೂರು, ಭಾರತ

ಮುಂದಿನ ಶ್ಲೋಕಗಳು ಹೀಗಿವೆ,

’ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ I
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ II’ (೯.೭)
’ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ I
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ II’ (೯.೮)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಪ್ರಕೃತಿಯು ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತದೆ ಮತ್ತು ಅದು ಆ ನಿಯಮಗಳಿಂದ ಚಲಿಸುತ್ತದೆ. ಒಂದು ಹೂ ಒಂದು ಮರದಲ್ಲಿ ಅರಳುತ್ತದೆ ಮತ್ತು ಸ್ವಲ್ಪ ಸಮಯದ ಬಳಿಕ ಅದು ಬಿದ್ದು ಹೋಗುತ್ತದೆ. ಅದು ಕೊಳೆತು ಗೊಬ್ಬರವಾಗುತ್ತದೆ. ಭೂಮಿಯಲ್ಲಿನ ಅದೇ ಗೊಬ್ಬರವು ಅದೇ ಮರದಿಂದ ಪುನಃ ಒಂದು ಹೂವಾಗಿ ಬೆಳೆಯುತ್ತದೆ. ಹೀಗೆ ಇದು ಪ್ರಕೃತಿಯ ದೈವಿಕ ನಿಯಮವಾಗಿದೆ. ಸೃಷ್ಟಿಯಲ್ಲಿನ ಎಲ್ಲವೂ ನನ್ನಿಂದ ಬಂದಿದೆ ಮತ್ತು ಅದೆಲ್ಲವೂ ಒಂದು ದಿನ ನನ್ನಲ್ಲಿ ವಿಲೀನವಾಗುವುದು. ಕಾಲದಿಂದ ಕಾಲಕ್ಕೆ, ನಾನು ಈ ಸೃಷ್ಟಿಯನ್ನು ಸೃಷ್ಟಿಸುತ್ತೇನೆ ಮತ್ತು ಕಾಲದಿಂದ ಕಾಲಕ್ಕೆ ನಾನು ಈ ಸೃಷ್ಟಿಯನ್ನು ನನ್ನೊಳಗೆಯೇ ವಿಲೀನಗೊಳಿಸುತ್ತೇನೆ."

ನೀವು ನಿಮ್ಮ ಮುಂದೆ ನೋಡುವ ಒಬ್ಬ ಸಾಮಾನ್ಯ ವ್ಯಕ್ತಿಯು ಒಂದು ದಿನ ಸಾಯುತ್ತಾನೆ ಮತ್ತು ಮಾಯವಾಗುತ್ತಾನೆ ಹಾಗೂ ಈ ವ್ಯಕ್ತಿಯು ಎಲ್ಲಿ ಹೋದನೆಂದು ನೀವು ಅಚ್ಚರಿಪಡುತ್ತೀರಿ! ಅವನ ಶರೀರವು ಇನ್ನೂ ಅಲ್ಲೇ ಇದ್ದರೂ ಸಹ, ಅವನ ಚೇತನವು ಎಲ್ಲಿ ಹೋಯಿತು?

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಸಾವಿನ ಬಳಿಕ ಅದು (ಒಬ್ಬ ವ್ಯಕ್ತಿಯ ಚೇತನ) ನನ್ನಲ್ಲಿ ಒಂದಾಗುತ್ತದೆ (ಆತ್ಮವು ಭಗವಂತನೊಂದಿಗೆ ಲೀನವಾಗುತ್ತದೆ). ಅದು ನನ್ನಲ್ಲಿ ವಿಲೀನವಾಗುತ್ತದೆ ಮತ್ತು ಸೂಕ್ತ ಸಮಯ ಬಂದಾಗ, ಮತ್ತೆ ನಾನು ಆತ್ಮಕ್ಕೆ, ಅದರ ಕರ್ಮಗಳ ಸ್ವಭಾವಕ್ಕೆ ಸರಿಯಾಗಿ ಜೀವವನ್ನು ಮತ್ತು ಒಂದು ಭೌತಿಕ ಶರೀರವನ್ನು ದಯಪಾಲಿಸುತ್ತೇನೆ. ನಂತರ ನಾನು ಅದನ್ನು, ಮತ್ತೊಮ್ಮೆ ಹುಟ್ಟುವುದಕ್ಕಾಗಿ ಸೂಕ್ತವಾದ ಗರ್ಭದಲ್ಲಿ ಇರಿಸುತ್ತೇನೆ. ಹೀಗೆ ನನ್ನ ವಸ್ತು ಸ್ವರೂಪದ ಮೂಲಕ ನಾನು ಮತ್ತೆ ಮತ್ತೆ ಈ ಬ್ರಹ್ಮಾಂಡ ಸೃಷ್ಟಿಯನ್ನು ಸೃಷ್ಟಿಸುತ್ತೇನೆ".

ಅವನು ಹೀಗೆಂದು ಹೇಳುತ್ತಾನೆ, "ಯಾವುದರಿಂದ ಸೃಷ್ಟಿಯಲ್ಲಿರುವ ಎಲ್ಲವೂ ಜನ್ಮ ತಾಳಿತೋ ಮತ್ತು ಯಾವುದರೊಳಕ್ಕೆ ಸೃಷ್ಟಿಯಲ್ಲಿರುವ ಎಲ್ಲವೂ ಮತ್ತೆ ಮತ್ತೆ ವಿಲೀನವಾಗುವುದೋ, ಆ ಮೂಲ ತತ್ವವು ಪರಮಾತ್ಮ ತತ್ವವಾಗಿದೆ (ಅತ್ಯಂತ ಮೂಲಭೂತವಾದ ಮೂಲವಸ್ತು ಅಥವಾ ತತ್ವ)."

ಇವತ್ತು ವಿಜ್ಞಾನಿಗಳು ಕಪ್ಪು ರಂಧ್ರ (ಬ್ಲ್ಯಾಕ್ ಹೋಲ್)ದ ಬಗ್ಗೆ ಮಾತನಾಡುತ್ತಾರೆ(ಆಕಾಶದಲ್ಲಿರುವ ಒಂದು ಪ್ರದೇಶ ಅಥವಾ ವಸ್ತು, ಅದು ತನ್ನ ಉನ್ನತ ಗುರುತ್ವಾಕರ್ಷಣೆಯಿಂದ, ಅದಕ್ಕೆ ಸಮೀಪಿಸಿದ ಎಲ್ಲಾ ವಸ್ತುಗಳನ್ನು ನುಂಗಿ ಬಿಡುತ್ತದೆ). ಈ ಬ್ಲ್ಯಾಕ್ ಹೋಲ್ ಯಾವುದರಿಂದ ಮಾಡಲ್ಪಟ್ಟಿದೆ ಮತ್ತು ಅದು ನಿಜಕ್ಕೂ ಎಷ್ಟು ಆಳವಾಗಿದೆ ಎಂಬುದು ಅವರಿಗೆ ತಿಳಿಯದು. ಅದರ ಸಮೀಪಕ್ಕೆ ಬರುವ ಎಲ್ಲವೂ ಅದರೊಳಕ್ಕೆ ಹೀರಲ್ಪಡುತ್ತದೆ ಮತ್ತು ಅದು ಎಲ್ಲಿಗೆ ಹೋಗುತ್ತದೆಯೆಂಬುದು ಯಾರಿಗೂ ತಿಳಿಯದು. ವಿಶ್ವದಲ್ಲಿ ನೂರು ಸಾವಿರಾರು ಅಂತಹ ಬ್ಲ್ಯಾಕ್ ಹೋಲ್‌ಗಳಿವೆಯೆಂದು ಹೇಳಲಾಗುತ್ತದೆ.

ಅದೇ ರೀತಿಯಲ್ಲಿ ಇವತ್ತು ವಿಜ್ಞಾನಿಗಳು ಗಾಢ ವಸ್ತು ಮತ್ತು ಗಾಢ ಚೈತನ್ಯದ ಬಗ್ಗೆ ಮಾತನಾಡುತ್ತಾರೆ. ಸಂಪೂರ್ಣ ಪ್ರಪಂಚವು ಈ ಗಾಢ ವಸ್ತು ಮತ್ತು ಗಾಢ ಚೈತನ್ಯದಿಂದ ಮಾಡಲ್ಪಟ್ಟಿದೆಯೆಂದು ಅವರು ಹೇಳುತ್ತಾರೆ.

ಸೂರ್ಯನು ಗೋಳಾಕಾರದಲ್ಲಿ ಯಾಕೆ ಕಾಣಿಸುತ್ತದೆಯೆಂಬುದು ನಿಮಗೆ ಗೊತ್ತೇ? ಅದು ಯಾಕೆಂದರೆ, ಎಲ್ಲಾ ಬದಿಗಳಿಂದಲೂ ಅಧಿಕ ಪ್ರಮಾಣದಲ್ಲಿ ಚೈತನ್ಯದ ಒತ್ತಡವಿರುವುದರಿಂದ. ಸೂರ್ಯನ ಸುತ್ತಲಿರುವ ಖಾಲಿ ಜಾಗದಲ್ಲಿ ಚೈತನ್ಯವಿದೆ ಮತ್ತು ಅದು ಸೂರ್ಯನಕ್ಕಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಪ್ರಪಂಚದಲ್ಲಿ ಯಾವುದೇ ವಸ್ತು ಗೋಳಾಕಾರದಲ್ಲಿ ಕಾಣಿಸಿದರೂ ಅದು, ಅದರ ಸುತ್ತಲಿರುವ ಜಾಗದಲ್ಲಿರುವ ಅದೃಶ್ಯ ಶಕ್ತಿಗಳಿಂದಾಗಿ ಮತ್ತು ಈ ಶಕ್ತಿಗಳು ಆ ವಸ್ತುವಿಗಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿವೆ.

ಹೀಗೆ ಸೂರ್ಯನ ಸುತ್ತಲಿರುವ ಖಾಲಿ ಜಾಗದಲ್ಲಿರುವ ಶಕ್ತಿಗಳು ಸೂರ್ಯನಿಗಿಂತ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ, ಮತ್ತು ಈ ಜಾಗವನ್ನೇ ವಿಜ್ಞಾನಿಗಳು ಗಾಢ ವಸ್ತು ಹಾಗೂ ಗಾಢ ಚೈತನ್ಯವೆಂದು ಕರೆದಿರುವುದು.

ಈ ಗಾಢ ವಸ್ತು ಹಾಗೂ ಗಾಢ ಚೈತನ್ಯ ಎಷ್ಟು ಶಕ್ತಿಶಾಲಿಯೆಂದರೆ, ಅದು ಸೂರ್ಯನನ್ನು ನಿಮಿಷಗಳಲ್ಲಿ ಸಂಪೂರ್ಣವಾಗಿ ನುಂಗಬಲ್ಲದು.

ಹೀಗೆ ಯಾವುದು ಕಾಣಿಸುವುದಿಲ್ಲವೋ ಅದು, ಯಾವುದನ್ನು ನಾವು ನೋಡುವೆವೋ ಅದಕ್ಕಿಂತ ನಿಜವಾಗಿಯೂ ಹೆಚ್ಚು ಶಕ್ತಿಶಾಲಿಯಾದುದು. ಇದನ್ನೇ ನಮ್ಮ ಪೂರ್ವಿಕರು ಅದೃಷ್ಟ ಎಂದು ಕರೆದುದು.

ಪ್ರಕಟವಾಗಿಲ್ಲದ ಹಾಗೂ ಅದೃಶ್ಯ ಅಂಶವು, ನಾವು ನೋಡಬಹುದಾದ ಪ್ರಕಟವಾಗಿರುವ ವಸ್ತುವಿಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ.

ಇವತ್ತು ವಿಜ್ಞಾನಿಗಳಾಡುವ ಅದೇ ವಿಷಯವು ಶ್ರೀಕೃಷ್ಣ ಪರಮಾತ್ಮನಿಂದ ಸಾವಿರಾರು ವರ್ಷಗಳ ಹಿಂದೆ ಹೇಳಲ್ಪಟ್ಟಿತು. ಇದಕ್ಕಾಗಿಯೇ ಅವನು ಹೀಗೆಂದು ಹೇಳುವುದು, "ನಾನು ಸೃಷ್ಟಿಯನ್ನು ಮತ್ತೆ ಮತ್ತೆ ಸೃಷ್ಟಿಸುತ್ತೇನೆ. ಪ್ರಕೃತಿಯಲ್ಲಿರುವ ಎಲ್ಲಾ ಪರಮಾಣುಗಳು ಮತ್ತು ಅಣುಗಳು ನಿರಂತರವಾಗಿ ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ಪರಿವರ್ತನೆಗೊಳ್ಳುತ್ತವೆ ಹಾಗೂ ಅಂತಿಮವಾಗಿ ನನ್ನಲ್ಲಿ ವಿಲೀನವಾಗುತ್ತವೆ".

ಎಲೆಗಳು, ಹಣ್ಣುಗಳು ಮತ್ತು ಮರಗಳು ಸತ್ತ ಬಳಿಕ ಅಂತಿಮವಾಗಿ ವಿಲೀನವಾಗುತ್ತವೆ. ಅವುಗಳು ಮರಳಿ ಪ್ರಕೃತಿಯಲ್ಲಿ ವಿಲೀನವಾಗುತ್ತವೆ, ಅಲ್ಲಿಂದ ಅವುಗಳು ಮತ್ತೊಮ್ಮೆ ಜನಿಸುತ್ತವೆ. ಅದೇ ರೀತಿಯಲ್ಲಿ, ಮಾನವ ಶರೀರ ಕೂಡಾ ನಶಿಸುತ್ತದೆ ಮತ್ತು ವಿಲೀನವಾಗುತ್ತದೆ ಹಾಗೂ ನಂತರ, ಅದರ (ಆತ್ಮದ) ಕರ್ಮಗಳ ಸ್ವಭಾವಕ್ಕನುಸಾರವಾಗಿ ಮತ್ತೊಮ್ಮೆ ಒಂದು ಹೊಸ ಶರೀರವನ್ನು ಪಡೆಯುತ್ತದೆ. ಈ ರೀತಿಯಲ್ಲಿ ಪ್ರಕೃತಿಯ ಚಕ್ರವು ಮುಂದುವರಿಯುತ್ತದೆ.

ಮುಂದಿನ ಶ್ಲೋಕಗಳು ಹೀಗಿವೆ,

’ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ I
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು II’ (೯.೯)
’ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ I
ಹೇತುನಾನೇನ ಕೌಂತೇಯ ಜಗದ್ ವಿಪರಿವರ್ತತೇ II’ (೯.೧೦)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಈ ಸಂಪೂರ್ಣ ಸೃಷ್ಟಿಯು ನನ್ನಿಂದ ಬರುವುದಾದರೆ ಮತು ಇವುಗಳೆಲ್ಲದರ ಕರ್ತೃವು ನಾನಾಗಿದ್ದರೆ, ಆಗ ಸ್ಪಷ್ಟವಾಗಿಯೂ, ಈ ಕರ್ಮದ ಫಲಗಳು ಕೂಡಾ ನನಗೆ ಪ್ರಾಪ್ತಿಯಾಗಬೇಕು. ಆದರೆ ಇದು ನಿಜವಾಗಿಯೂ ಹಾಗಲ್ಲ. ಓ ಅರ್ಜುನ! ಪ್ರಕೃತಿಯ ಮೂಲಕ ಎಲ್ಲಾ ಸೃಷ್ಟಿಯು ನನ್ನಿಂದ ಸೃಷ್ಟಿಯಾಗಿ ನಿರ್ವಹಿಸಲ್ಪಟ್ಟರೂ ಹಾಗೂ ಪ್ರಕೃತಿಯು ನನ್ನಲ್ಲಿ ವಾಸಿಸುತ್ತಿದ್ದರೂ ಸಹ, ಸೃಷ್ಟಿಯನ್ನು ಸೃಷ್ಟಿಸುವ ಕಾರ್ಯ ಹಾಗೂ ಫಲಗಳಿಂದ ನಾನು ಅಪ್ರಭಾವಿತನಾಗಿರುವೆನು".

ಈಗ, ಇದು ಹೇಗೆ ಸಾಧ್ಯ? ಉದಾಹರಣೆಗೆ, ಯಾರಾದರೂ ಆಕಾಶ ತತ್ವವನ್ನು ಮಲಿನಗೊಳಿಸಲು ಸಾಧ್ಯವೇ? ಅದು ಸಾಧ್ಯವಿಲ್ಲ.

ಪೃಥ್ವಿ, ಜಲ, ಅಗ್ನಿ ಮತ್ತು ವಾಯುವನ್ನು ಕೂಡಾ ನೀವು ಮಲಿನಗೊಳಿಸಬಹುದು. ಆದರೆ ನಿಮಗೆ ಆಕಾಶವನ್ನು ಮಲಿನಗೊಳಿಸಲು ಸಾಧ್ಯವಿದೆಯೇ? ಇಲ್ಲವೇ ಇಲ್ಲ! ವಾಯುವು ಕೊಳೆಯಾಗಿದ್ದು ಮಲಿನಗೊಂಡಿದ್ದರೆ, ನೀವು ಫ್ಯಾನ್ ಹಾಕಬಹುದು ಮತ್ತು ಎಲ್ಲಾ ಮಲಿನ ವಾಯುವು ಹೊರಟುಹೋಗುತ್ತದೆ. ಆದರೆ ಆಕಾಶ ತತ್ವವು ಯಾವತ್ತೂ ಅದಿರುವಂತೆಯೇ ಇರುತ್ತದೆ, ಶುದ್ಧ ಹಾಗೂ ಬದಲಾಗದೇ.

ಹಾಗಾಗಿ ಅದೇ ರೀತಿಯಲ್ಲಿ ಶ್ರೀಕೃಷ್ಣ ಪರಮಾತ್ಮನು, "ಆಕಾಶ ತತ್ವವು ಅಪ್ರಭಾವಿತವಾಗಿ ಉಳಿಯುವಂತೆಯೇ, ಅದೇ ರೀತಿಯಲ್ಲಿ ನಾನು ಕೂಡಾ, ಎಲ್ಲಾ ಕರ್ಮವು ನನ್ನೊಳಗೆ ಮತ್ತು ನನ್ನ ಮೂಲಕ ನಡೆಯುವುದಿದ್ದರೂ ಸಹ ಎಲ್ಲದರಿಂದಲೂ ಅಪ್ರಭಾವಿತನಾಗಿರುವೆನು. ನಾನು ಯಾವುದೇ ಕರ್ಮ ಅಥವಾ ಅದರ ಫಲಗಳಿಂದ ಬಂಧಿತನಾಗಿಲ್ಲ" ಎಂದು ಹೇಳುತ್ತಾನೆ.
  
ಇದಕ್ಕಾಗಿಯೇ, ಒಬ್ಬ ಜ್ಞಾನಿಯು ಏನನ್ನಾದರೂ ಮಾಡುವಾಗ, ಅವನು ಆ ಕರ್ಮದ ಫಲಗಳಿಂದ ಅಪ್ರಭಾವಿತನಾಗಿ ಉಳಿಯುತ್ತಾನೆ. ಅವನು ತನ್ನ ಕರ್ಮಗಳ ಯಾವುದೇ ದುಷ್ಪರಿಣಾಮಗಳನ್ನು ಅನುಭವಿಸುವುದಿಲ್ಲ.

ಒಬ್ಬ ಶಸ್ತ್ರಚಿಕಿತ್ಸಾ ವೈದ್ಯನು ಒಬ್ಬ ರೋಗಿಯ ಶಸ್ತ್ರಚಿಕಿತ್ಸೆ ನಡೆಸುತ್ತಾನೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ರೋಗಿಯು ಸಾಯುತ್ತಾನೆಂದಿಟ್ಟುಕೊಳ್ಳೋಣ. ರೋಗಿಯ ಸಾವಿಗೆ ವೈದ್ಯನು ದೂಷಿಸಲ್ಪಡುವನೇ? ಇಲ್ಲ; ಅವನು ಬೇಜವಾಬ್ದಾರಿಯಿಂದ ವರ್ತಿಸಿ, ಅಜಾಗ್ರತೆಯಿಂದ ಶಸ್ತ್ರಚಿಕಿತ್ಸೆ ನಡೆಸುತ್ತಾ ಇಲ್ಲದಿದ್ದಲ್ಲಿ. ಹಾಗಾಗಿ, ಒಬ್ಬ ವೈದ್ಯನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಕೆಲವೊಮ್ಮೆ ಒಂದು ಆಪರೇಷನ್‌ನ ಸಂದರ್ಭದಲ್ಲಿ ರೋಗಿಗಳು ಸಾಯುತ್ತಾರೆ. ಅಲ್ಲವೇ? ರೋಗಿಯ ಸಾವಿಗೆ ವೈದ್ಯನು ದೂಷಿಸಲ್ಪಡಲು ಸಾಧ್ಯವಿಲ್ಲ.

ಆದರೆ ಒಬ್ಬ ಡಕಾಯಿತನು ಯಾರನ್ನಾದರೂ ಒಂದು ಚಾಕುವಿನಿಂದ ಚುಚ್ಚಿ ಆ ವ್ಯಕ್ತಿಯು ಸತ್ತರೆ, ಡಕಾಯಿತನು, ಒಬ್ಬನನ್ನು ಕೊಂದ ಕೆಟ್ಟ ಕರ್ಮಕ್ಕೆ ಈಡಾಗುವನೇ? ಹೌದು!

ಒಬ್ಬ ಡಕಾಯಿತನ ಚಾಕುವು ಒಬ್ಬ ವೈದ್ಯನ ಚಾಕುವಿಗಿಂತ ಬಹಳ ಭಿನ್ನವಾಗಿದೆ. ಎರಡೂ ಚಾಕುಗಳು ಮೂಲಭೂತವಾಗಿ ಒಂದೇ ಕೆಲಸವನ್ನು ಮಾಡುವುದಾಗಿದೆ.  ಅವುಗಳು ಒಬ್ಬ ಮನುಷ್ಯನ ಶರೀರವನ್ನು ತುಂಡರಿಸುತ್ತವೆ. ಆದರೆ, ಒಬ್ಬ ವ್ಯಕ್ತಿಯು ಒಬ್ಬ ವ್ಯಕ್ತಿಯನ್ನು ತುಂಡರಿಸಿ ತೆರೆದಾಗ(ಅವನಿಗೆ ಚಿಕಿತ್ಸೆ ನೀಡಲು), ನಾವು ಅವನಿಗೆ ಅವನ ಪ್ರಯತ್ನಗಳಿಗಾಗಿ ಧನ್ಯವಾದವನ್ನರ್ಪಿಸುತ್ತೇವೆ; ಒಬ್ಬ ಡಕಾಯಿತನು ತನ್ನ ಚಾಕುವನ್ನು ಬಳಸಿದಾಗ, ಅವನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಹೀಗೆ ಡಕಾಯಿತನು ತನ್ನ ಕೆಟ್ಟ ಕರ್ಮಗಳ ಫಲಗಳನ್ನು ಅನುಭವಿಸುತ್ತಾನೆ.

ಹೀಗೆ ಇಲ್ಲಿ ಶ್ರೀಕೃಷ್ಣ ಪರಮಾತ್ಮನು, "ನಾನು ಎಲ್ಲಾ ಕರ್ಮ ಮತ್ತು ಅದರ ಫಲಗಳಿಂದ ಸೋಕದೇ ಉಳಿಯುತ್ತೇನೆ" ಎಂದು ಹೇಳುತ್ತಾನೆ. ಒಂದು ರೈಲಿನಲ್ಲಿ ಕುಳಿತುಕೊಂಡು ಕಿಟಿಕಿಯಿಂದ ಹೊರಗೆ ನೋಡುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸಿ.

ಕಿಟಿಕಿಯಿಂದ ಕಾಣುವ ದೃಶ್ಯವು ಬದಲಾಗುತ್ತಾ ಇರುತ್ತದೆ, ಆದರೆ ಈ ವ್ಯಕ್ತಿಯು ಸುಮ್ಮನೇ ಕುಳಿತುಕೊಂಡು, ಅದೆಲ್ಲವೂ ಸಾಗಿಹೋಗುವುದನ್ನು ನೋಡುತ್ತಾನೆ. ನಿಲ್ದಾಣಗಳು ಒಂದರ ನಂತರ ಇನ್ನೊಂದರಂತೆ ಬರುತ್ತಾ ಇರುತ್ತವೆ. ಆದರೂ ಈ ವ್ಯಕ್ತಿಯು ಸುಮ್ಮನೇ ಕುಳಿತುಕೊಂಡು ಅದೆಲ್ಲವನ್ನೂ ಗಮನಿಸುತ್ತಿದ್ದಾನೆ. ಹೊರಗಡೆ ಆಗುತ್ತಿರುವ ಬದಲಾವಣೆಗಳಲ್ಲಿ ಅವನು ಹಸ್ತಕ್ಷೇಪ ಮಾಡುವುದಿಲ್ಲ. "ಓ, ಈ ದೃಶ್ಯವು ಅಲ್ಲಿರಬಾರದು" ಎಂದು ಅವನು ಹೇಳುವುದಿಲ್ಲ. ಇದನ್ನು ಹೇಳುವುದರಿಂದ ಯಾವುದೇ ಉಪಯೋಗವಿಲ್ಲವೆಂಬುದು ಅವನಿಗೆ ತಿಳಿದಿರುತ್ತದೆ, ಯಾಕೆಂದರೆ ಅದು ಹೊರಗಡೆ ನಡೆಯುತ್ತಿರುವುದನ್ನು ಬದಲಾಯಿಸದು. ಹಾಗಾಗಿ, ಈ ರೀತಿಯಲ್ಲಿ, ಅವನು ಕುಳಿತುಕೊಂಡು ಎಲ್ಲವನ್ನೂ ಅನಾಸಕ್ತಿಯ ಒಂದು ಭಾವನೆಯೊಂದಿಗೆ ಗಮನಿಸುತ್ತಾನೆ.    

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಪ್ರಕೃತಿಯು ತನ್ನ ಕೆಲಸವನ್ನು ಮಾಡುತ್ತಾ ಹೋದಂತೆ, ನಾನು ಎಲ್ಲವನ್ನೂ (ಎಲ್ಲಾ ಕರ್ಮಗಳನ್ನು) ಅನಾಸಕ್ತಿಯ ಒಂದು ಭಾವನೆಯೊಂದಿಗೆ ಗಮನಿಸುತ್ತೇನೆ. ಆಗುತ್ತಿರುವ ಯಾವುದಕ್ಕೂ ನಾನು ಅಂಟಿಕೊಂಡಿಲ್ಲ, ಯಾಕೆಂದರೆ ಮೂರು ಗುಣಗಳ (ಸತ್‌ಗುಣ, ರಜೋಗುಣ ಮತ್ತು ತಮೋಗುಣ) ಸ್ವಭಾವವು ನನಗೆ ತಿಳಿದಿದೆ.

ಈ ಮೂರು ಗುಣಗಳು ಮತ್ತು ಅವುಗಳ ಸ್ವಭಾವಗಳನ್ನು ಸೃಷ್ಟಿಸಿದುದು ನಾನೇ. ನನ್ನಿಂದ ವಿನ್ಯಾಸಗೊಳಿಸಲ್ಪಟ್ಟ ದೈವಿಕ ನಿಯಮಗಳ ಅನುಸಾರವಾಗಿ ಅವುಗಳು ಕಾರ್ಯನಿರ್ವಹಿಸುತ್ತವೆ. ಹೀಗೆ ಅವುಗಳು ಅವುಗಳ ಆಡಳಿತ ನಡೆಸುವ ನಿಯಮಗಳನುಸಾರವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಅವುಗಳ ಕಾರ್ಯದಲ್ಲಿ ನಾನು ಯಾಕೆ ಹಸ್ತಕ್ಷೇಪ ಮಾಡಬೇಕು?

ಹಾಗಾಗಿ ಮೂರು ಗುಣಗಳ ಆಟದಿಂದ ನಾನು ಬೇರೆಯಾಗಿ ಉಳಿಯುತ್ತೇನೆ ಮತ್ತು ಆಗುತ್ತಿರುವುದೆಲ್ಲವನ್ನೂ ಸುಮ್ಮನೇ ಗಮನಿಸುತ್ತೇನೆ".

ಪ್ರತಿಯೊಬ್ಬ ವ್ಯಕ್ತಿಯೊಳಗೂ ಆಳದಲ್ಲಿ ಚೇತನವಿದೆ. ಈ ಚೇತನದ ಕಾರಣದಿಂದಾಗಿ ಎಲ್ಲವೂ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿಯೇ, ನಾವೇನೇ ಮಾಡಿದರೂ, ಆ ಕಾರ್ಯಕ್ಕೆ ನಾವೊಂದು ಸಾಕ್ಷಿ ಕೂಡಾ ಆಗಿದ್ದೇವೆ (ಇದು ಯಾಕೆಂದರೆ, ಎಲ್ಲಾ ಕರ್ಮಗಳ ಮೂಲ ಕಾರಣವು ಚೇತನವಾಗಿದೆ). ಇದೆಲ್ಲವೂ ಸುಮ್ಮನೇ ಆಗುತ್ತಿದೆ ಎಂಬ ಈ ಭಾವನೆಯು ಅಲ್ಲಿರುತ್ತದೆ.

ಯಾವಾಗೆಲ್ಲಾ ನೀವು ಬಹಳ ಒಳ್ಳೆಯ ಕೆಲಸವನ್ನು ಮಾಡುವಿರೋ, ನಿಮಗೆ, "ನಾನೇನೂ ಮಾಡಲಿಲ್ಲ. ಎಲ್ಲವೂ ಸುಮ್ಮನೇ ಅದಾಗಿಯೇ ಆಯಿತು (ನನ್ನ ಮೂಲಕ)" ಎಂದು ಅನ್ನಿಸುತ್ತದೆ.

ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನೆತ್ತುತ್ತಾರೆ).

ಉದಾಹರಣೆಗೆ, ನೀವೊಂದು ಮಹತ್ತರವಾದ ಕಾರ್ಯವನ್ನು ಸಾಧಿಸಿರುವಿರಿ ಮತ್ತು ಎಲ್ಲರೂ ಅದನ್ನು ಪೂರ್ಣಗೊಳಿಸಿದುದಕ್ಕಾಗಿ ನಿಮ್ಮನ್ನು ಹೊಗಳುತ್ತಾರೆ. ಆದರೂ ನಿಮಗೆ, ’ನಾನೇನನ್ನೂ ಮಾಡಲಿಲ್ಲ. ಅದೆಲ್ಲವೂ ಅದಾಗಿಯೇ ಸಂಭವಿಸಿತು. ಎಲ್ಲವನ್ನೂ ಮಾಡಿದುದು ದೇವರು’ ಎಂದು ಅನ್ನಿಸುತ್ತದೆ.

ನಿಮಗೆ ಯಾವತ್ತಾದರೂ ಈ ರೀತಿ ಅನ್ನಿಸಿದೆಯೇ?

ಅದೇ ರೀತಿಯಲ್ಲಿ, ನೀವು ಯಾವುದೇ ಜೈಲಿಗೆ ಹೋಗಿ ಅಲ್ಲಿರುವ ಅತ್ಯಂತ ಕೆಟ್ಟ ಅಪರಾಧಿಯಲ್ಲಿ, "ಅಂತಹ ಒಂದು ಅಪರಾಧವನ್ನು ನೀನು ಹೇಗೆ ಮಾಡಿದೆ? ನೀನದನ್ನು ಮಾಡುವಂತೆ ಮಾಡಿದುದು ಯಾವುದು? " ಎಂದು ಕೇಳಿದರೆ, ಅವನು, "ನಾನದನ್ನು ಮಾಡಲಿಲ್ಲ. ಅದು ಸುಮ್ಮನೇ ಆಗಿ ಹೋಯಿತು (ನನ್ನ ಮೂಲಕ)" ಎಂದು ಹೇಳುವನು. ಒಬ್ಬ ವ್ಯಕ್ತಿಯು ತಮೋಗುಣದ ಒಂದು ಬಲವಾದ ಪ್ರಭಾವಕ್ಕೆ ಒಳಗಾಗುತ್ತಾನೆ ಮತ್ತು ಒಂದು ಅಪರಾಧವನ್ನು ಮಾಡುತ್ತಾನೆ. ನಂತರ ಅವನು, "ನಾನದನ್ನು ಮಾಡಲಿಲ್ಲ. ಅದು ಸುಮ್ಮನೆ ಆಗಿ ಹೋಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಹೇಳುತ್ತಾನೆ.

ಆದರೆ, ಅವನು ಕೇಳುವ ಕ್ಷಮೆಯಲ್ಲಿ ಸ್ವಲ್ಪ ಪ್ರಾಮಾಣಿಕತೆಯಿದೆ ಯಾಕೆಂದರೆ ಅವನು, ’ನಾನು ಅಪರಾಧವನ್ನು ಮಾಡಲಿಲ್ಲ. ಅದು ಹೇಗೆ ಆಯಿತೆಂದು ನನಗೆ ಅಚ್ಚರಿಯಾಗುತ್ತಿದೆ’ ಎಂದು ಯೋಚಿಸುವುದನ್ನು ಮುಂದುವರಿಸುತ್ತಾನೆ.

ತಮ್ಮನ್ನು ನಿರ್ದೋಷಿಯೆಂದು ಯೋಚಿಸುವ ಹಲವಾರು ಅಪರಾಧಿಗಳಿದ್ದಾರೆ.

ಒಮ್ಮೆ ನಾನು ಒಂದು ಜೈಲಿಗೆ ಅಲ್ಲಿರುವ ಖೈದಿಗಳನ್ನುದ್ದೇಶಿಸಿ ಮಾತನಾಡಲು ಹೋಗಿದ್ದಾಗ ನಾನು ಅವರೆಲ್ಲರಲ್ಲಿ ಕೇಳಿದೆ, "ನನಗೆ ಹೇಳಿ, ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ನೀವು ನಿರ್ದೋಷಿಗಳೆಂದು ಯೋಚಿಸುತ್ತೀರಿ? ನಿಮ್ಮ ಕೈಗಳನ್ನು ಮೇಲೆತ್ತಿ".

ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಮೇಲೆತ್ತಿದರು! (ನಗು)

ಸೆರೆಮನೆ ಅಧಿಕಾರಿಯು ನಂತರ ನನ್ನ ಬಳಿ ಬಂದು, "ಗುರುದೇವ, ಇಲ್ಲಿರುವ ಪ್ರತಿಯೊಬ್ಬರೂ ಹಾಗೆ ಹೇಳುವರು" ಎಂದು ಹೇಳಿದರು. ಹೀಗೆ ಪ್ರತಿಯೊಬ್ಬ ಅಪರಾಧಿಯೂ, "ನಾನು ನಿರ್ದೋಷಿ. ಬೇರೊಬ್ಬರಿಂದ ನನ್ನ ಮೇಲೆ ಈ ಅಪರಾಧದ ಸುಳ್ಳು ಆರೋಪ ಹೊರಿಸಲಾಗಿದೆ. ನನ್ನ ಮೇಲೆ ತಪ್ಪು ಆರೋಪ ಹೊರಿಸಿ ಇಲ್ಲಿ ಜೈಲಿಗೆ ಕರೆತರಲಾಗಿದೆ" ಎಂದು ಹೇಳುವನು.

ಅಪರಾಧವನ್ನು ಮಾಡುವವರು ಕೂಡಾ, "ಅದು ಹೇಗಾಯಿತೆಂದು ನನಗೆ ಗೊತ್ತಿಲ್ಲ" ಎಂದು ಹೇಳುವರು.

ಆದುದರಿಂದ ಇದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು, "ಎಲ್ಲಾ ಕರ್ಮಗಳು ಪ್ರಕೃತಿಯಿಂದಾಗಿ ಆಗುತ್ತವೆ, ಆದರೆ ಅಂತಹ ಕರ್ಮಗಳು ನನ್ನನ್ನು ಬಂಧಿಸುವುದಿಲ್ಲ. ನಾನು ಅವುಗಳಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಉಳಿಯುತ್ತೇನೆ; ಕುಳಿತುಕೊಂಡು ಎಲ್ಲವನ್ನೂ ಅನಾಸಕ್ತಿಯಿಂದ ಗಮನಿಸುವ ಒಬ್ಬ ಭಾವಶೂನ್ಯನಾದ ವ್ಯಕ್ತಿಯ ಹಾಗೆಯೇ" ಎಂದು ಹೇಳುತ್ತಾನೆ.

ಅವನು ಹೀಗೆಂದು ಹೇಳುತ್ತಾನೆ, "ನಾನು ನಿರಾಸಕ್ತನು ಅಥವಾ ದುಃಖಿತನು ಎಂದು ಯೋಚಿಸಬೇಡ, ಅಲ್ಲ! ಆದರೆ ಒಬ್ಬ ಅನಾಸಕ್ತ ವ್ಯಕ್ತಿಯು ವೈರಾಗ್ಯದ ಒಂದು ಭಾವನೆಯಿಂದ ಕುಳಿತುಕೊಳ್ಳುವಂತೆಯೇ, ನಾನು ಎಲ್ಲಾ ಕರ್ಮಗಳನ್ನು, ಅವುಗಳಿಗೆ ಅಂಟಿಕೊಳ್ಳದೆಯೇ ಅಥವಾ ಅವುಗಳಿಂದ ಪ್ರಭಾವಿತನಾಗದೆಯೇ ಗಮನಿಸುತ್ತೇನೆ." 

ಬೆರಗುಗೊಳಿಸುವ ರಹಸ್ಯ


ಜೂನ್ ೧, ೨೦೧೩
ಬೆಂಗಳೂರು, ಭಾರತ


ಯಾವುದು ಸಾಮಾನ್ಯವಲ್ಲವೋ ಅದನ್ನು ನಾವು ಅದ್ಭುತ ಅಥವಾ ಆಶ್ಚರ್ಯಕರವೆಂದು ಕರೆಯುತ್ತೇವೆ. ಆದರೆ ಅದೇ ಘಟನೆಯು ಪ್ರತಿದಿನವೂ ಆಗುತ್ತಿದ್ದರೆ, ಆಗ ನಾವು ಅದನ್ನು ಒಂದು ಆಶ್ಚರ್ಯವೆಂದು ಕರೆಯುವುದಿಲ್ಲ ಯಾಕೆಂದರೆ ನಮಗೆ ಅದರಲ್ಲೇನೂ ನಿಜವಾದ ಅದ್ಭುತ ಕಾಣಿಸುವುದಿಲ್ಲ. 

ನೀವು ಸಾಧಾರಣವಾಗಿ ಏನನ್ನು ನೋಡುವಿರೋ ಅದಕ್ಕೆ ವಿಭಿನ್ನವಾದುದನ್ನೇನೋ ಇದ್ದಕ್ಕಿದ್ದಂತೆ ನೋಡುವಾಗ ನೀವು, "ಓ! ಇದು ಆಶ್ಚರ್ಯಕರವಾದುದು! ಇದೊಂದು ಅಚ್ಚರಿ" ಎಂದು ಹೇಳುತ್ತೀರಿ. 

ಒಂದು ರಹಸ್ಯ ಕೂಡಾ ಹಾಗೆಯೇ. ಅದು ಅಸಾಮಾನ್ಯ.

ಒಂದು ಮಾವಿನ ಮರವು ಕೇವಲ ಮಾವಿನ ಹಣ್ಣುಗಳನ್ನು ಮಾತ್ರ ಬಿಡುತ್ತವೆ. ಇದರಲ್ಲೇನೂ ರಹಸ್ಯವಿಲ್ಲ. ತೆಂಗಿನ ಮರವು ಕೇವಲ ತೆಂಗಿನಕಾಯಿಗಳನ್ನು ಬಿಡುತ್ತದೆ. ಅದರಲ್ಲೇನಾದರೂ ರಹಸ್ಯವಿದೆಯೇ? ಆದರೆ ಒಂದು ದಿನ ಒಂದು ತೆಂಗಿನ ಮರದಲ್ಲಿ ಒಂದು ಮಾವಿನಹಣ್ಣು ಬೆಳೆಯುವುದನ್ನು ನೀವು ನೋಡಿದರೆ, ಆಗ ಅದೊಂದು ಅಚ್ಚರಿ. "ಇದೊಂದು ಪವಾಡ! ಇದು ಅಷ್ಟೊಂದು ಅದ್ಭುತ ವಿಷಯ. ಇದು ಅಸಾಮಾನ್ಯವಾದುದು" ಎಂದು ನೀವು ಹೇಳುವಿರಿ. 

ನೀವು ಎಚ್ಚರಿಕೆಯಿಂದ ಗಮನಿಸಿದರೆ, ಹಲವಾರು ಅದ್ಭುತವಾದ ಘಟನೆಗಳು ಈ ಸೃಷ್ಟಿಯಲ್ಲಿ ಮತ್ತು ಪ್ರಕೃತಿಯಲ್ಲಿಡೀ ಎಲ್ಲಾ ಸಮಯದಲ್ಲೂ ಮತ್ತು ಎಲ್ಲೆಡೆಯೂ ಆಗುತ್ತಿವೆ. ಆದರೆ ಈ ಅದ್ಭುತ ಘಟನೆಗಳನ್ನು ನೋಡಲು ಸಾಧ್ಯವಾಗಲು ನಿಮಗೊಂದು ವಿಶೇಷ ರೀತಿಯ ದೃಷ್ಟಿ ಬೇಕು. 

ನಾವು ವಿಷಯಗಳನ್ನು ನೋಡುವ ರೀತಿಯನ್ನು ನಾವು ಬದಲಾಯಿಸಬೇಕು. ಅದು ಯೋಗವೆಂದು ಕರೆಯಲ್ಪಡುತ್ತದೆ. 

ಈ ಸೃಷ್ಟಿಯನ್ನು ನೀವು ಯೋಗದ ದೃಷ್ಟಿಯಿಂದ ನೋಡಿದಾಗ, ನಿಮಗೆ ಎಲ್ಲವೂ ಬಹಳ ಅಚ್ಚರಿದಾಯಕವಾಗಿ, ಬಹಳ ಅದ್ಭುತವಾಗಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಇದಕ್ಕಿಂತ ಇನ್ನೂ ಹೆಚ್ಚು ಅದ್ಭುತವಾದುದೆಂದರೆ, ಈ ಸೃಷ್ಟಿಯಲ್ಲಿರುವ ಎಲ್ಲವೂ, ನೋಡಲು ಸಾಧ್ಯವಾಗದೇ ಇರುವುದರ ಒಂದು ಆವಿರ್ಭಾವವಾಗಿರುವುದು ಹೇಗೆ ಎಂಬುದು; ಅವ್ಯಕ್ತ ಚೇತನದ ಒಂದು ಆವಿರ್ಭಾವ!

ಈ ಸೃಷ್ಟಿಯಲ್ಲಿ ಎಲ್ಲವೂ ಖಾಲಿ ಆಕಾಶದಿಂದ ಬಂದಿದೆ.

ಇದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುವುದು,

’ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ I
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನ: II (೯.೫)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಓ ಅರ್ಜುನ! ಈ ಸೃಷ್ಟಿಯಲ್ಲಿರುವ ಎಲ್ಲವೂ ನನ್ನೊಳಗೆ ವಿಶ್ರಾಂತಿ ಮಾಡುತ್ತವೆ, ಆದರೂ ನಾನು ಅವುಗಳಲ್ಲಿಲ್ಲ. ಪಂಚಭೂತಗಳು ನನ್ನಿಂದ ಹುಟ್ಟಿವೆ ಮತ್ತು ನನ್ನಲ್ಲಿ ಆಶ್ರಯ ಪಡೆಯುತ್ತವೆ, ಆದರೂ ನಾನು ಅವುಗಳಲ್ಲಿಲ್ಲ. ಯೋಗದ ಈ ಅಪೂರ್ವ ಭವ್ಯತೆಯ ಕಡೆಗೆ ನೋಡು."

ಉದಾಹರಣೆಗೆ, ನಿಮ್ಮ ಶರೀರವು ಪಂಚಭೂತಗಳಿಂದ ಸಂಯೋಜಿಸಲ್ಪಟ್ಟಿದೆ ಮತ್ತು ನಿಮ್ಮ ಶರೀರವು ನಿಮ್ಮ ಮನಸ್ಸಿನಿಂದ ಆವರಿಸಲ್ಪಟ್ಟಿದೆ. ಮತ್ತು ನಿಮ್ಮ ಮನಸ್ಸಿನಲ್ಲಿ ನೀವು, ಪಂಚಭೂತಗಳ ಬಗ್ಗೆ, ಬಿಸಿಯಾಗ ಬೇಸಿಗೆಗಾಲದ ಬಗ್ಗೆ ಮತ್ತು ತಂಪಾದ ಚಳಿಗಾಲದ ಬಗ್ಗೆ, ಅಹಾರ ಮತ್ತು ಆಶ್ರಯಗಳು ಮೊದಲಾದವುಗಳ ಬಗ್ಗೆ ಯೋಚಿಸುತ್ತೀರಿ. ಆದರೆ ಆಹಾರವನ್ನು ತಿನ್ನುವುದು ಮನಸ್ಸೇ?  

ನೀವು ಆಗಾಗ್ಗೆ ಒಂದು ಗುಲಾಬ್ ಜಾಮೂನ್ ಅಥವಾ ರಸಗುಲ್ಲಾದ ಬಗ್ಗೆ ಯೋಚಿಸುತ್ತೀರಿ, ಆದರೆ ಮನಸ್ಸಿಗೆ ಈ ಸಿಹಿತಿಂಡಿಗಳನ್ನು ತಿನ್ನಲು ಸಾಧ್ಯವೇ? ಇಲ್ಲ, ತಿನ್ನುವುದು ಶರೀರ, ಆದರೆ ಆಹಾರದ ಯೋಚನೆಯು ಮನಸ್ಸಿನಲ್ಲಿ ಬರುತ್ತದೆ.
ನಿಮ್ಮ ಮನಸ್ಸಿಗೆ ಒಂದು ರಸಗುಲ್ಲಾವನ್ನು ಹಿಡಿದುಕೊಳ್ಳಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲ. ಆದರೆ ಒಂದು ರಸಗುಲ್ಲಾದ ಯೋಚನೆಗಳು ಮತ್ತು ಭಾವನೆಗಳು ಮನಸ್ಸಿನಲ್ಲಿ ಏಳುತ್ತವೆ. 

ಅದೇ ರೀತಿಯಲ್ಲಿ, ದೇವರು ಈ ಸಂಪೂರ್ಣ ಸೃಷ್ಟಿಯಲ್ಲಿರುವನು. ಮತ್ತು ಅದು ಹೇಗೆ? ಇದನ್ನು ಶ್ರೀಕೃಷ್ಣ ಪರಮಾತ್ಮನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ,

’ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ I
ತಥಾ ಸರ್ವಾಣಿ ಭೂತಾನಿ ಮತ್‌ಸ್ಥಾನೀತ್ಯುಪಧಾರಯ II(೯.೬)

ಅವನು ಹೀಗೆಂದು ಹೇಳುತ್ತಾನೆ, "ಹೇಗೆ ವಾಯು ತತ್ವವು ಆಕಾಶದಲ್ಲಿಡೀ, ಎಲ್ಲೆಡೆಯೂ ಇರುವುದೋ, ಅದೇ ರೀತಿಯಲ್ಲಿ ಈ ಸಂಪೂರ್ಣ ಸೃಷ್ಟಿಯು ನನ್ನೊಳಗೆ ವಾಸಿಸುತ್ತದೆ. ನೀನು ನಿನ್ನ ಸುತ್ತಲೂ ಏನನ್ನೆಲ್ಲಾ ನೋಡುವೆಯೋ ಅದೆಲ್ಲವೂ ನನ್ನಲ್ಲಿ ವಿಶ್ರಮಿಸುತ್ತದೆ ಮತ್ತು ನನ್ನಿಂದ ಹೊರತಾಗಿರುವುದು ಯಾವುದೂ ಇಲ್ಲ’. 

ಎಂಟು ಅಥವಾ ಹತ್ತು ವರ್ಷ ವಯಸ್ಸಿನ ಒಬ್ಬ ಚಿಕ್ಕ ಹುಡುಗನು ತನ್ನ ತಂದೆಯಲ್ಲಿ ಹೀಗೆಂದು ಕೇಳುತ್ತಾನೆ, "ದೇವರೆಂದರೇನು? ಅವನು ಹೇಗೆ ಕಾಣಿಸುತ್ತಾನೆ? ಅವನು ಎಲ್ಲಿದ್ದಾನೆ?"

ತಂದೆಯು ಮಗುವಿನ ಕೈಹಿಡಿದು ಮನೆಯ ಹೊರಗೆ ಕರೆದೊಯ್ಯುತ್ತಾನೆ. ಅವನು ಮಗುವಿನಲ್ಲಿ ಕೇಳುತ್ತಾನೆ, "ನನ್ನ ಪ್ರಿಯನೇ! ನನಗೆ ಹೇಳು, ಈ ಮನೆಯನ್ನು ಕಟ್ಟುವ ಮೊದಲು ಇಲ್ಲೇನಿತ್ತು?"

ಮಗುವು, "ಅಲ್ಲಿ ಏನೂ ಇರಲಿಲ್ಲ. ಅದೆಲ್ಲವೂ ಖಾಲಿ ಜಾಗವಾಗಿತ್ತು" ಎಂದು ಉತ್ತರಿಸುತ್ತಾನೆ. 

ತಂದೆಯು, "ಹಾಗಾದರೆ ಈಗ ಈ ಮನೆಯನ್ನು ಎಲ್ಲಿ ಕಟ್ಟಲಾಗಿದೆ?" ಎಂದು ಕೇಳುತ್ತಾನೆ. 

ಮಗುವು, "ಅದನ್ನು ಖಾಲಿ ಜಾಗದಲ್ಲಿ ಕಟ್ಟಲಾಗಿದೆ" ಎಂದು ಹೇಳುತ್ತಾನೆ. 

ಆಗ ತಂದೆಯು, "ಹಾಗಾದರೆ ನಾವು ಈ ಮನೆಯನ್ನು ಮುರಿದರೆ ಏನು ಉಳಿಯುವುದು?" ಎಂದು ಕೇಳುತ್ತಾನೆ. 

ಮಗುವು, "ಮತ್ತೊಮ್ಮೆ ಅಲ್ಲಿ ಕೇವಲ ಖಾಲಿ ಜಾಗ(ಆಕಾಶ)ವಿರುವುದು" ಎಂದು ಹೇಳುತ್ತಾನೆ. 

ಹಾಗಾಗಿ ಇದರರ್ಥವೆಂದರೆ ಖಾಲಿ ಜಾಗ(ಆಕಾಶ)ವು ಅಲ್ಲಿ ಹಿಂದೆ ಇತ್ತು, ಅದು ಅಲ್ಲಿ ಈಗ ಇದೆ ಮತ್ತು ಮುಂದೆ ಕೂಡಾ ಇರುವುದು. ಅದು ಬದಲಾಗದೇ ಮತ್ತು ಎಲ್ಲದರಿಂದಲೂ ಅಪ್ರಭಾವಿತವಾಗಿ ಉಳಿಯುತ್ತದೆ. ದೇವರೆಂದರೆ ಆ ಆಕಾಶ. 

ಉಪನಿಷತ್ತುಗಳಲ್ಲಿ ಒಂದು ಪ್ರಶ್ನೆಯಿದೆ, ’ಕಿಂ ಬ್ರಹ್ಮಯೇತಿ?’ (ಅರ್ಥ: ಬ್ರಹ್ಮನೆಂದರೇನು? ಅಥವಾ ಬ್ರಹ್ಮನು ಏನೆಲ್ಲವನ್ನು ಒಳಗೊಂಡಿರುವನು?) ಅದಕ್ಕೆ ನೀಡಲಾಗಿರುವ ಉತ್ತರವೆಂದರೆ, ’ಖಂ! ಖಂ ಬ್ರಹ್ಮಯೇತಿ!’ (ಅರ್ಥ: ಆಕಾಶ! ಆಕಾಶ ಮತ್ತು ಅದು ಒಳಗೊಂಡಿರುವುದೆಲ್ಲಾ ಬ್ರಹ್ಮನಾಗಿರುವನು!)

ಹಾಗಾಗಿ, ಹೇಗೆ ಆಕಾಶ ತತ್ವವು ಎಲ್ಲೆಡೆಯೂ ಮತ್ತು ಎಲ್ಲದರಲ್ಲೂ ಇರುವುದೋ, ಅದೇ ರೀತಿಯಲ್ಲಿ ಬ್ರಹ್ಮ ಅಥವಾ ದೇವರು ಎಲ್ಲೆಡೆಯೂ ಇರುವನು. 

ಇದಕ್ಕಾಗಿಯೇ ನಾವು ದೇವರನ್ನು ನೆನಪಿಸಿಕೊಳ್ಳುವಾಗಲೆಲ್ಲಾ, ನಾವು ಹೀಗೆಂದು ಉಚ್ಛರಿಸುವುದು,

’ನಮಾಮೀಶಮೀಶಾನ್ ನಿರ್ವಾಣರೂಪಂ
ವಿಭುಂ ವ್ಯಾಪಕಂ ಬ್ರಹ್ಮವೇದಸ್ವರೂಪಂ I
ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ
ಚಿದಾಕಾಶಮಾಕಾಶವಾಸಂ ಭಜೇsಹಂ II
ನಿರಾಕಾರಮೋಂಕರಮೂಲಂ ತುರೀಯಂ
ಗಿರಾಜ್ಞಾನಗೋತೀತಮೀಶಂ ಗಿರೀಶಂ I
ಕರಾಲಂ ಮಹಾಕಾಲಕಾಲಂ ಕೃಪಾಲಂ
ಗುಣಾಗಾರಸಂಸಾರಪಾರಂ ನತೋsಹಂ II

(ರುದ್ರಾಷ್ಟಕಂನ ಆರಂಭದ ಶ್ಲೋಕಗಳು - ಶ್ರೀ ಗೋಸ್ವಾಮಿ ತುಳಸೀದಾಸರಿಂದ ಬರೆಯಲ್ಪಟ್ಟ, ಭಗವಾನ್ ಶಿವನ ವೈಭವವನ್ನು ಹಾಡುವ ಒಂದು ಕವಿತೆ.)

ಇದರರ್ಥವೆಂದರೆ, ದೇವರು ಚೇತನದ ವ್ಯಾಪಕವಾದ, ಅಂತ್ಯವಿಲ್ಲದ ಆಕಾಶವಾಗಿರುವನು.   

ಭಗವಾನ್ ದಕ್ಷಿಣಾಮೂರ್ತಿಯನ್ನು ಹಾಡಿ ಹೊಗಳುವ ಒಂದು ಶ್ಲೋಕವಿದೆ (ಎಲ್ಲಾ ಜ್ಞಾನದ ಸಾಕಾರವಾಗಿರುವಂತೆ, ಭಗವಾನ್ ಶಿವನ ಒಂದು ದಯಾಳು ರೂಪ). ಅದು ಹೀಗೆಂದು ಹೇಳುತ್ತದೆ, ’ವ್ಯೋಮವದ್ ವ್ಯಾಪ್ತದೇಹಾಯ ಶ್ರೀ ದಕ್ಷಿಣಾಮೂರ್ತಯೇ ನಮಃ’.

(ಅರ್ಥ: ಆಕಾಶದುದ್ದಕ್ಕೂ ವ್ಯಾಪ್ತವಾಗಿರುವ ಪರಮಾತ್ಮನ ಸಾಕಾರ ರೂಪವಾಗಿರುವ ಭಗವಾನ್ ದಕ್ಷಿಣಾಮೂರ್ತಿಗೆ ವಂದನೆಗಳು.)

ಇದರರ್ಥ, ದೇವರ ಶರೀರವು ಹೇಗೆ ಕಾಣಿಸುತ್ತದೆ? ಅದು ಆಕಾಶದಂತೆ ವ್ಯಾಪಕವೂ, ಕೊನೆಯಿಲ್ಲದುದೂ ಆಗಿದೆ. 

ಶ್ರೀಕೃಷ್ಣ ಪರಮಾತ್ಮ ಕೂಡಾ ಅದನ್ನೇ ಹೇಳುತ್ತಾನೆ, "ಆಕಾಶದಾದ್ಯಂತ ವಾಯು ಇರುವಂತೆಯೇ, ಅದೇ ರೀತಿಯಲ್ಲಿ, ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳೂ ಮತ್ತು ಎಲ್ಲವೂ ನನ್ನೊಳಗೆ ವಾಸಿಸುತ್ತವೆ. ಹಾಗಾಗಿ ಎಲ್ಲಾ ಜೀವಿಗಳು, ಪಂಚಭೂತಗಳು, ಪ್ರಕೃತಿ; ಸಂಪೂರ್ಣವಾಗಿ ಎಲ್ಲವೂ ನನ್ನೊಳಗೆ ಆಶ್ರಯ ಪಡೆಯುತ್ತವೆ."

ಈಗ, ಎಲ್ಲೆಡೆಯೂ ಇರುವುದನ್ನು ಯಾರಾದರೂ ಹುಡುಕಿಕೊಂಡು ಹೋಗುತ್ತಾರೆಯೇ? ತನ್ನಿಂದ ಹೊರಗಡೆ ಯಾರು ಹುಡುಕಿಕೊಂಡು (ದೇವರನ್ನು) ಹೋಗುವನೋ ಅವನೊಬ್ಬ ಮೂರ್ಖ. ಯಾರು ತನ್ನೊಳಗೆ ಹೋಗಿ ತನ್ನೊಳಗೆಯೇ ವಿಶ್ರಾಂತಿ ಪಡೆದುಕೊಳ್ಳುವನೋ ಅವನು ತನ್ನನ್ನೇ (ದೇವರನ್ನು) ಪಡೆಯುತ್ತಾನೆ ಮತ್ತು ಅವನು ಬುದ್ಧಿವಂತನು. 

ನೀವು ಕೈಲಾಶ್-ಮಾನಸರೋವರಗಳಂತಹ (ಹಿಮಾಲಯಗಳಲ್ಲಿರುವ ಭಗವಾನ್ ಶಿವನ ಒಂದು ಪವಿತ್ರ ಕ್ಷೇತ್ರ) ತೀರ್ಥಕ್ಷೇತ್ರಗಳನ್ನು ಒಂದರ ನಂತರ ಇನ್ನೊಂದರಂತೆ ಸಂದರ್ಶಿಸುತ್ತಾ ಇದ್ದರೂ, ನಿಮಗೆ ಭಗವಾನ್ ಶಿವನು ಕಾಣಿಸುವುದಿಲ್ಲ.   

ನೀವೆಲ್ಲೇ ಇದ್ದರೂ, ನೀವು ಸುಮ್ಮನೇ ಮೌನವಾಗಿ ನಿಮ್ಮೊಳಗೆಯೇ ಹೋದಾಗ, ಆ ಕ್ಷಣದಲ್ಲೇ ನಿಮಗೆ ದೇವರು ಕಾಣಿಸುವನು. 

ಭಗವಾನ್ ಶಿವನು ಎಲ್ಲೆಡೆಯೂ ಇರುವನು, ಚಿದಾಕಾಶವಾಗಿ: ಎಲ್ಲೆಡೆಯೂ ಹರಡಿರುವ ಚೇತನದ ಆಕಾಶವಾಗಿ. ದೇವರು ಆಕಾಶದಂತೆ. ಆಕಾಶವು ಕಾಣಿಸುತ್ತದೆಯೇ? ನೀವು ಆಕಾಶವನ್ನು ನೋಡಬಲ್ಲಿರಾ? ಹೌದು ಮತ್ತು ಇಲ್ಲ. 

ಹೀಗಾಗಿ, ದೇವರು ಎಲ್ಲೆಡೆಯೂ ಇರುವನೆಂದು ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿರಬೇಕು. ದೇವರ ಹಿಂದೆ ಓಡಬೇಡಿ. ದೇವರನ್ನು ನೋಡಲು ಜ್ವರತೆಯಿಂದಿರಬೇಡಿ (ಅಂದರೆ, ದೇವರನ್ನು ಒಂದು ರೂಪದಲ್ಲಿ ನೋಡುವ ಬಯಕೆ). 

ಸಂತ ಕಬೀರದಾಸನ ಒಂದು ಸುಂದರವಾದ ದ್ವಿಪದಿಯಿದೆ,

’ಹರಿ ಹರಿ ಕೆಹತಾ ಮೈ ಫಿರಾ, ಪರ್ ಹರಿ ನಹೀ ಮಿಲೆ
ಜಬ್ ಮೈ ಟೆಹೆರ್ ಕರ್ ಚುಪ್ ಹೋ ಗಯಾ, ತೋ ಹರಿ ಲಾಗೆ ಪೀಛೆ ಕೆಹತ್ ಕಬೀರ್! ಕಬೀರ್!’

(ಅರ್ಥ: ಹರಿ ಹರಿ ಎನ್ನುತ್ತ ನಾನು ಅಲೆದಾಡಿದೆ. ಆದರೆ ಹರಿ ದೊರೆಯಲಿಲ್ಲ. ಅಲೆತವನ್ನು ನಿಲ್ಲಿಸಿ ಯಾವಾಗ ನಾನು ಸುಮ್ಮನಾದೆನೋ, ಆಗ ಹರಿಯು ಕಬೀರ್! ಕಬೀರ್! ಎಂದೆನ್ನುತ್ತ ನನ್ನನ್ನು ಹಿಂಬಾಲಿಸತೊಡಗಿದ.)