ಸೋಮವಾರ, ಡಿಸೆಂಬರ್ 31, 2012

ಶ್ರೀ ಶ್ರೀಯವರ ಹೊಸ ವರ್ಷದ ಸಂದೇಶ

೩೧ ದಶಂಬರ, ೨೦೧೨
ಬರ್ಲಿನ್, ಜರ್ಮನಿ

೦೧೨ ಬಹಳ ವೇಗವಾಗಿ ಸಾಗುತ್ತಿದೆ. ನಾವು ಪುನರ್ಸ್ಮರಣೆ ಮಾಡಿಕೊಳ್ಳೋಣ!
ಈ ವರ್ಷ ಆರಂಭವಾದಾಗ, ೨೧ ದಶಂಬರ ೨೦೧೨ರ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಪ್ರಪಂಚವು ಕೊನೆಯಾಗುವುದೆಂಬ ವದಂತಿಗಳಿದ್ದವು, ಮತ್ತು ವದಂತಿಗಳನ್ನು ನಂಬುವ ಹಲವಾರು ಜನರಿದ್ದಾರೆ; ಕನಿಷ್ಠಪಕ್ಷ ಕೆಲವು ಜನರಾದರೂ ವದಂತಿಗಳನ್ನು ಬಲವಾಗಿ ನಂಬುತ್ತಾರೆ. ಆದುದರಿಂದ ಜನರು ಪ್ರಳಯದಿನ ಬಂದೆರಗುವುದನ್ನು ಕಾಯುತ್ತಾ, ತಮ್ಮ ನೆಲಮಾಳಿಗೆಗಳಲ್ಲಿ ಆಹಾರವನ್ನು ಸಂಗ್ರಹಿಸಲು ತೊಡಗಿದರು.
ಅಂತಹದ್ದೇನೂ ಸಂಭವಿಸುವುದಿಲ್ಲವೆಂದು ನಾನು ಯಾವತ್ತೂ ಹೇಳುತ್ತಾ ಇದ್ದೆ. ಖಂಡಿತವಾಗಿಯೂ, ಬಹುತೇಕ ಪ್ರತಿವರ್ಷದಂತೆ ಈ ವರ್ಷ ನಾವು ಹಲವಾರು ವಿಪತ್ತುಗಳನ್ನು ಕಂಡಿದ್ದೇವೆ. ಬಹುಶಃ ಸ್ವಲ್ಪ ಹೆಚ್ಚೇ ಇರಬಹುದು. ಯು.ಎಸ್. ನಲ್ಲಿ ಒಂದು ದೊಡ್ಡ ವಿಪತ್ತು ಸಂಭವಿಸಿತು, ಜಪಾನಿನಲ್ಲಿ ಸಮಸ್ಯೆಗಳುಂಟಾದವು ಮತ್ತು ಪ್ರಪಂಚದ ಇತರ ಹಲವು ಭಾಗಗಳಲ್ಲಿ ಕೂಡಾ ಸಮಸ್ಯೆಗಳಿದ್ದವು; ಪ್ರಕೃತಿ ವಿಕೋಪ.
ಅದೇ ಸಮಯದಲ್ಲಿ, ಪರಿಸ್ಥಿತಿಯನ್ನು ನಿಜವಾಗಿಯೂ ಇನ್ನೂ ಹದಗೆಡಿಸಬಹುದೆಂದು ಜನರು ಅಂದುಕೊಂಡಿದ್ದ ಆರ್ಥಿಕ ಹಿನ್ನಡೆಯನ್ನು ಕೂಡಾ ನಿರ್ವಹಿಸಲಾಯಿತು. ಇನ್ನೂ ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಜನರು ಬದುಕುತ್ತಿದ್ದಾರೆ. ಖಂಡಿತವಾಗಿಯೂ ಸಂಗತಿಗಳು ಉತ್ತಮಗೊಳ್ಳಬೇಕು ಮತ್ತು ಅದು ಈಗಾಗಲೇ ಉತ್ತಮಗೊಳ್ಳಲು ಆರಂಭವಾಗಿದೆ.
ಈ ಬರುವ ವರ್ಷ, ೨೦೧೩ ಹೆಚ್ಚು ಉತ್ತಮವಾಗಿರುವುದು.
ಇವತ್ತು ಜನರಲ್ಲಿ ಒಂದು ದೊಡ್ಡ ಅರಿವಿದೆ; ಪರಿಸರದ ಕಡೆಗೆ, ಸ್ತ್ರೀಯರು ಮತ್ತು ಮಕ್ಕಳ ಸುರಕ್ಷತೆಯ ಕಡೆಗೆ. ನಾವು ಹಲವಾರು ವರ್ಷಗಳಿಂದ ಹೇಳುತ್ತಿರುವಂತೆ, ಇವತ್ತು ಹಲವಾರು ಜನರು ಎಚ್ಚೆತ್ತುಕೊಂಡು, "ನಮಗೆ ಇನ್ನೂ ಹೆಚ್ಚು ಮಾನವೀಯ ಮೌಲ್ಯಗಳು ಬೇಕು, ಹಿಂಸೆಯು ಕೊನೆಗೊಳ್ಳಬೇಕೆಂಬುದು ನಮ್ಮ ಬಯಕೆ" ಎಂದು ಹೇಳುತ್ತಿರುವರು.
ಈ ವರ್ಷ, ಒಂದು ಉತ್ತಮ ಸಮಾಜವನ್ನು ಮಾಡಲು ಕೆಲಸ ಮಾಡುವುದಾಗಿ ನಾವೆಲ್ಲರೂ ನಿರ್ಧರಿಸೋಣ; ಹಿಂಸೆಯಿಂದ ಮುಕ್ತವಾದ ಒಂದು ಸಮಾಜ, ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತವಾದ ಸಮಾಜ, ಸುರಕ್ಷಿತ ಹಾಗೂ ನ್ಯಾಯವಾದ ಒಂದು ಸಮಾಜ ಮತ್ತು ಸಂರಕ್ಷಣೆ ಮಾಡುವ ಒಂದು ಪ್ರಪಂಚ.
ಎಲ್ಲದಕ್ಕಿಂತ ಮಿಗಿಲಾಗಿ ನಾವು ಆಧ್ಯಾತ್ಮಿಕ ಉನ್ನತಿ ಮತ್ತು ಆಧ್ಯಾತ್ಮಿಕ ಜಾಗೃತಿಗಳ ಕಡೆಗೆ ಕೆಲಸ ಮಾಡಬೇಕು, ಮತ್ತು ಅದು ಆಗುವುದು. ವಾಸ್ತವವಾಗಿ, ಅದು ಈಗಾಗಲೇ ಆಗುತ್ತಿದೆ. ಹೆಚ್ಚು ಹೆಚ್ಚು ಜನರು ಆಧ್ಯಾತ್ಮಿಕ ಜಾಗೃತಿಯಲ್ಲಿ ಆಸಕ್ತರಾಗಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಒಂದು ದೊಡ್ಡ ಕೆಲಸ ಮಾಡಲಿದೆ. ಈ ವರ್ಷ ನಾವು ಎರಡು ಹೊಸ ಕ್ರಿಯೆಗಳನ್ನು ಕಲಿಸಲಿದ್ದೇವೆ. ಅವುಗಳು ಜನರ ಜೀವನವನ್ನು ಎಷ್ಟೋ ಹೆಚ್ಚು ಆನಂದದಾಯಕವಾಗಿಸಲಿವೆ. ಜನರು ಬಹಳ ಅಧಿಕ ಆನಂದವನ್ನನುಭವಿಸುವರು, ಬಹಳ ಅಧಿಕ ಕ್ರಿಯಾಶೀಲತೆಯನ್ನನುಭವಿಸುವರು, ಬಹಳ ಅಧಿಕ ಬದ್ಧತೆ, ಸಹಾನುಭೂತಿ ಮತ್ತು ಸೃಜನಾತ್ಮಕತೆಯನ್ನು ಅನುಭವಿಸುವರು.
ಸಮಯವು ಸವಾಲುಗಳನ್ನೊಡ್ಡುತ್ತದೆ. ನೀವು ಈ ಸವಾಲುಗಳಿಂದ ಹೇಗೆ ಲಾಭ ಪಡೆಯಬಹುದು ಎಂದು ನೋಡುವುದು ನಿಮಗೆ ಬಿಟ್ಟದ್ದು. ಪ್ರತಿಸಲವೂ ನಿಮ್ಮ ಮುಂದೆ ಒಂದು ಸವಾಲು ಇರುವಾಗ, ಈ ಸವಾಲನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಇರುವ ಒಂದು ಅವಕಾಶವನ್ನಾಗಿ ನೀವು ಹೇಗೆ ಮಾಡಿಕೊಳ್ಳಬಹುದು ಎಂದು ನೋಡಿ. ಅದನ್ನು ನೀವು ಹೇಗೆ ಬದಲಾಯಿಸಬಹುದು ಮತ್ತು ಅದನ್ನು ನಿಮ್ಮ ಸ್ವಂತ ಬೆಳವಣಿಗೆಗಾಗಿ ಹೇಗೆ ಉಪಯೋಗಿಸಬಹುದು ಎಂದು ನೋಡಿ. ನೀವು ಮಾಡಬೇಕಾಗಿರುವುದು ಇದನ್ನೇ.
ನೀವು ಈ ವರ್ಷದ ಅಂತ್ಯಕ್ಕೆ ಬರುತ್ತಿರುವಂತೆ, ನಿಮಗೆದುರಾದ ಆ ಎಲ್ಲಾ ಸವಾಲುಗಳ ಬಗ್ಗೆ ಮತ್ತು ಅವುಗಳು ನಿಮ್ಮ ಬೆಳವಣಿಗೆಗೆ ಹೇಗೆ ತಮ್ಮ ಕೊಡುಗೆಯನ್ನು ನೀಡಿವೆ ಎಂಬುದರ ಬಗ್ಗೆ ಯೋಚಿಸಿ. ಈ ಸವಾಲುಗಳನ್ನು ನೀವು ಹೇಗೆ ನಿರ್ವಹಿಸಿದಿರಿ, ಅವುಗಳನ್ನು ನಿರ್ವಹಿಸುವಾಗ ನೀವು ಯಾವ ತಪ್ಪುಗಳನ್ನು ಮಾಡಿದಿರಿ ಮತ್ತು ಆ ತಪ್ಪುಗಳಿಂದ ನೀವು ಯಾವ ಪಾಠಗಳನ್ನು ಕಲಿತಿರಿ ಎಂಬುದರ ಬಗ್ಗೆ ಯೋಚಿಸಿ. ಇದು ಮೊದಲನೆಯ ಹೆಜ್ಜೆ.
ಎರಡನೆಯದು, ಕಳೆದ ವರ್ಷವು ನಿಮಗೆ ನೀಡಿರುವ; ನಿಮ್ಮ ಜೀವನದಲ್ಲಿ ತಂದಿರುವ ಉಡುಗೊರೆಗಳ ಬಗ್ಗೆ ಹಾಗೂ ಭೂಮಿಯಲ್ಲಿ ಜೀವಿಗಳ ಒಳಿತಿಗಾಗಿ ನೀವು ಈ ಉಡುಗೊರೆಗಳನ್ನು ಹೇಗೆ ಉಪಯೋಗಿಸುವಿರಿ ಎಂಬುದರ ಬಗ್ಗೆ ಯೋಚಿಸಿ.
ನೋಡಿ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರತಿಭೆ, ಒಂದಲ್ಲ ಒಂದು ಉಡುಗೊರೆಯನ್ನು ಕೊಡಲಾಗಿದೆ. ಈ ಪ್ರತಿಭೆಗಳನ್ನು ನೀವು ಹೇಗೆ ಉಪಯೋಗಿಸುತ್ತಿರುವಿರಿ ಎಂಬುದನ್ನು ನೀವು ನೋಡಬೇಕಾಗಿದೆ. ನೀವು ಅವುಗಳ ಉಪಯೋಗವನ್ನಾದರೂ ಮಾಡುತ್ತಿರುವಿರೇ? ಇದನ್ನೇ ನೀವು ಗುರುತು ಮಾಡಬೇಕಾಗಿರುವುದು.
ಈ ವರ್ಷಕ್ಕಾಗಿ ಯೋಜನೆಯನ್ನು ಹಾಕಿಕೊಳ್ಳಿ; ಮುಂದಿನ ೧೨ ತಿಂಗಳುಗಳಲ್ಲಿ, ಪ್ರತಿದಿನವೂ ನೀವು ಏನನ್ನು ಮಾಡಲಿರುವಿರಿ?!
ಪ್ರತಿದಿನವೂ, ಧ್ಯಾನ ಮಾಡಿ. ಪ್ರತಿ ಮೂರರಿಂದ ನಾಲ್ಕು ತಿಂಗಳುಗಳಿಗೊಮ್ಮೆ ಸ್ವಲ್ಪ ಸಮಯ ಬಿಡುವು ತೆಗೆದುಕೊಂಡು ಧ್ಯಾನದಲ್ಲಿ ಆಳಕ್ಕೆ ಹೋಗಿ ಮತ್ತು ಮೌನವನ್ನು ಪಾಲಿಸಿರಿ. ಕನಿಷ್ಠಪಕ್ಷ ವರ್ಷದಲ್ಲಿ ಒಮ್ಮೆ ನೀವು ಮೌನದಲ್ಲಿದ್ದು ಧ್ಯಾನ ಮಾಡಬೇಕು (ಉನ್ನತ ಶಿಬಿರ) ಮತ್ತು ಸಮಾಜಕ್ಕಾಗಿ ಹಾಗೂ ಭೂಮಿಯ ಮೇಲಿರುವ ಎಲ್ಲರಿಗಾಗಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡುತ್ತಾ ಸ್ವಲ್ಪ ಸಮಯ ಕಳೆಯಬೇಕು.
ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಬೇಡಿ, ಆದರೆ ಏನಾದರೂ ಸೇವಾ ಕಾರ್ಯವನ್ನು ಮಾಡಿ. ಆಗ, ನಿಮಗಾಗಿ ನೀವು ಏನನ್ನೆಲ್ಲಾ ಬಯಸುವಿರೋ, ಅದನ್ನು ನೀವು ಕೇಳಿ ಮತ್ತು ಅದು ನಿಮ್ಮ ಬಳಿಗೆ ಬರುತ್ತದೆ ಎಂಬುದನ್ನು ನೀವು ನೋಡುವಿರಿ. ಮೊದಲು ನೀವು ಏನನ್ನಾದರೂ ಮಾಡಬೇಕು, ನಂತರ ನೀವು ಕೇಳಿಕೊಂಡಾಗ ನಿಮಗೆ ಸಿಗುವುದು.
ನೀವು, "ನನಗಾಗಿ ಮಾತ್ರ ಬೇಕು, ನಾನು ಏನನ್ನೂ ಮಾಡಲು ಬಯಸುವುದಿಲ್ಲ" ಎಂದು ಹೇಳಿದರೆ, ಇಲ್ಲ, ಅದು ಕೆಲಸ ಮಾಡುವುದಿಲ್ಲ. ನೀವು ಸಮಾಜದಲ್ಲಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು, ಜನರ ಮುಖದಲ್ಲಿ ನಗೆಯನ್ನು ತರಬೇಕು ಮತ್ತು ಸ್ವಲ್ಪ ಪುಣ್ಯ ಗಳಿಸಿಕೊಳ್ಳಬೇಕು. ಇತರರ ಮುಖಗಳ ಮೇಲೆ ನೀವು ನಗೆಯನ್ನು ತಂದರೆ ಆಗ, ನಿಮಗಾಗಿ ಏನಾದರೂ ಬೇಡಿಕೆಯನ್ನೊಡ್ಡುವ ಅಧಿಕಾರ ನಿಮಗಿದೆ. ನಾನು ಏನು ಹೇಳುತ್ತಿರುವೆನೆಂಬುದು ನಿಮಗೆ ಅರ್ಥವಾಗುತ್ತಿದೆಯೇ? ಇದು ನಿಜವಾದ ಹಣ.
ನೋಡಿ, ನಿಮ್ಮ ಬಳಿ ಹಣವಿದ್ದರೆ, ಆಗ ನಿಮಗೆ ಸಾಮಾನು ಕೊಳ್ಳಲು ಹೋಗಲು ಸಾಧ್ಯ. ನಿಮ್ಮ ಬಳಿ ಹಣವಿಲ್ಲದಿದ್ದರೆ, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ ಮತ್ತು ನೀವು ಸಾಮಾನು ಕೊಳ್ಳಲು ಹೋದರೆ, ಯಾರು ನಿಮಗೆ ಏನನ್ನಾದರೂ ಕೊಡುವರು? ಮೊದಲು ನಿಮ್ಮಲ್ಲಿ ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು, ಅಲ್ಲವೇ? ಆದುದರಿಂದ, ನೀವು ಸೇವೆ ಮಾಡಿದಾಗ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಮೇಲಕ್ಕೇರುತ್ತದೆ. ಆಗ ನೀವು ಬಯಸಿದುದೇನನ್ನಾದರೂ ನೀವು ಕೇಳಿದಾಗ, ನಿಮಗದು ಸಿಗುತ್ತದೆ.
ನಿಮ್ಮಲ್ಲಿ ಸಾಕಷ್ಟು ಪಾಯಿಂಟುಗಳಿದ್ದರೆ, ನಿಮಗೆ ಇಡೀ ಅಂಗಡಿಯನ್ನು ಖರೀದಿಸಲು ಸಾಧ್ಯವಿದೆ. ಆದುದರಿಂದ, ಸಮಾಜದಲ್ಲಿ ಏನಾದರೂ ಒಳ್ಳೆಯದನ್ನು ಮಾಡಲು ತೀರ್ಮಾನಿಸೋಣ ಮತ್ತು ನಮಗೇನು ಬೇಕೋ ಅದು ನಮಗೆ ಸಿಗುತ್ತದೆ; ನಮಗೆ ಕೊಡಲಾಗುತ್ತದೆ ಎಂಬ ವಿಶ್ವಾಸವನ್ನಿಟ್ಟುಕೊಳ್ಳೋಣ. ನಮ್ಮ ಇಚ್ಛೆಯು ಖಂಡಿತವಾಗಿ ನೆರವೇರುತ್ತದೆ. ನಾವು ಏನನ್ನಾದರೂ ಇಚ್ಛಿಸಿದಾಗ, ಅದು ಕೊಡಲ್ಪಡುತ್ತದೆ.
ಮುಂದಿನದು, ಜೀವನದಲ್ಲಿ ಹೊಸ ಪಾಠಗಳನ್ನು ಕಲಿಯಲು ನೀವು ಸಿದ್ಧರಿರಬೇಕು. ಜೀವನದ ಪಯಣದುದ್ದಕ್ಕೂ ಸಂತೋಷ, ಆನಂದ ಮತ್ತು ನಗುವನ್ನು ಇರಿಸಿಕೊಳ್ಳಿ. ತಿಳಿಯಿತೇ? ನೋಡಿ, ಪ್ರತಿಯೊಬ್ಬರೂ ನಡೆಯುತ್ತಿದ್ದಾರೆ. ಕೆಲವರು ಕಿರುಚುತ್ತಾ, ಅಳುತ್ತಾ ನಡೆಯುತ್ತಿದ್ದಾರೆ ಹಾಗೂ ಕೆಲವರು ನಗುತ್ತಾ ನಡೆಯುತ್ತಿದ್ದಾರೆ. ಎಲ್ಲರೂ ಒಂದು ಕನ್ವೇಯರ್ ಬೆಲ್ಟಿನ ಮೇಲಿದ್ದಾರೆ ಮತ್ತು ಬೆಲ್ಟ್ ಚಲಿಸುತ್ತಿದೆ. ಕೆಲವರು ಅಳುತ್ತಿದ್ದಾರೆ, ಕೆಲವರು ನಗುತ್ತಿದ್ದಾರೆ, ಆದರೆ ಕನ್ವೇಯರ್ ಬೆಲ್ಟ್ ಹೇಗಿದ್ದರೂ ಚಲಿಸುತ್ತಿದೆ. ಆದುದರಿಂದ, ಅದು ನಿಮ್ಮ ಆಯ್ಕೆ; ಸಮಯವೆಂಬ ಈ ಕನ್ವೇಯರ್ ಬೆಲ್ಟಿನ ಮೇಲೆ ನೀವು ಹೇಗೆ ಚಲಿಸಲು ಬಯಸುವಿರಿ ಎಂಬುದು.
ನೋಡಿ, ಒಂದು ಕಾರಿನಲ್ಲಿ, ಹಿಂದಿನದನ್ನು ನೋಡುವ ಕನ್ನಡಿ (ರೇರ್ ವ್ಯೂ ಮಿರರ್) ಇರುತ್ತದೆ, ಅಲ್ಲವೇ?! ಒಂದು ದೊಡ್ಡ ವಿಂಡ್ ಶೀಲ್ಡ್ ಇರುತ್ತದೆ (ಕಾರಿನ ಮುಂಭಾಗದಲ್ಲಿರುವ ದೊಡ್ಡ ಗಾಜು) ಮತ್ತು ಒಂದು ಚಿಕ್ಕ ರೇರ್ ವ್ಯೂ ಮಿರರ್ ಇರುತ್ತದೆ. ನಿಮ್ಮ ಕಾರಿನ ರೇರ್ ವ್ಯೂ ಮಿರರ್, ವಿಂಡ್ ಶೀಲ್ಡಿನಷ್ಟು ದೊಡ್ಡದಾಗಿದೆಯೆಂದು ಮತ್ತು ವಿಂಡ್ ಶೀಲ್ಡ್ ರೇರ್ ವ್ಯೂ ಮಿರರಿನಷ್ಟು ಚಿಕ್ಕದಾಗಿದೆಯೆಂದು ಸುಮ್ಮನೇ ಊಹಿಸಿಕೊಳ್ಳಿ, ನಿಮಗೇನಾಗಬಹುದು? ನಿಮಗೆ ಕಾರು ಚಲಾಯಿಸಲು ಸಾಧ್ಯವಿದೆಯೇ? ಇಲ್ಲ!
ನಿಮ್ಮ ಕಾರು ನಿಮಗೊಂದು ಪಾಠವನ್ನು ಕಲಿಸಬಲ್ಲದು. ಪಾಠ ಯಾವುದು? ನೀವು ಹಿಂದಕ್ಕೆ ನೋಡಬೇಕಾಗಿರುವುದು ಕೇವಲ ಸ್ವಲ್ಪ ಮಾತ್ರ, ಆ ಚಿಕ್ಕ ಕನ್ನಡಿಯಂತೆ. ರೇರ್ ವ್ಯೂ ಮಿರರ್ ಭೂತಕಾಲವನ್ನು ಪ್ರತಿನಿಧಿಸುತ್ತದೆ ಮತ್ತು ವರ್ತಮಾನವು ವಿಂಡ್ ಶೀಲ್ಡ್ ಆಗಿದೆ. ಭವಿಷ್ಯವು ಬದಿಗಳನ್ನು ನೋಡುವ ಕನ್ನಡಿಗಳಂತೆ. ಆದುದರಿಂದ ನೀವು ಕಾರು ಚಲಾಯಿಸುವಾಗ, ನೀವು ಬದಿಗಳನ್ನು ಮತ್ತು ಹಿಂದೆ ಕೂಡಾ ನೋಡಬೇಕಾಗುತ್ತದೆ. ಆದರೆ ಹೆಚ್ಚಿನ ಸಮಯ ನೀವು ಮುಂದೆ ನೋಡಬೇಕು. ಕಾರು ಚಲಾಯಿಸುವಾಗ ನೀವು ಕೇವಲ ಬದಿಯಲ್ಲಿರುವ ಕನ್ನಡಿಗಳನ್ನು ಮಾತ್ರ ನೋಡುತ್ತಿದ್ದರೆ, ನಿಮಗೆ ಅಪಘಾತ ಸಂಭವಿಸುತ್ತದೆ.
ಆದುದರಿಂದ ನೀವು ಮುಂದೆ ನೋಡಬೇಕು, ಆದರೆ ಕೆಲವೊಮ್ಮೆ ಬದಿಗಳಲ್ಲಿರುವ ಕನ್ನಡಿಗಳನ್ನು ನೋಡಬೇಕು ಮತ್ತು ಕೆಲವೊಮ್ಮೆ ರೇರ್ ವ್ಯೂ ಮಿರರನ್ನು ನೋಡಬೇಕು. ಭೂತಕಾಲ ಮತ್ತು ಭವಿಷ್ಯದ ಕಡೆಗೆ ಸ್ವಲ್ಪ ನೋಡಿ, ಆದರೆ ಹೆಚ್ಚಾಗಿ ವರ್ತಮಾನದಲ್ಲಿರಿ.
ನೀವೇನು ಹೇಳುವಿರಿ?
ಸಮಯವು ಬಂದಿದೆ, ಒಳ್ಳೆಯ ಜನರ ಧ್ವನಿಗಳು ಈಗ ಹೆಚ್ಚು ಶಕ್ತಿಯುತವಾಗುವುವು. ಕೆಟ್ಟ ಕೆಲಸಗಳನ್ನು ಮಾಡುವ ಆ ಜನರೆಲ್ಲರೂ ಬೆಳಕಿಗೆ ಬರುವರು ಮತ್ತು ಅವರ ಮನಸ್ಸುಗಳು ಬದಲಾಗುವುವು. ಆಧ್ಯಾತ್ಮಿಕತೆಯ ಅಲೆಗಳು ಜನರನ್ನು ಪರಿವರ್ತಿಸಲು ತೊಡಗುವುವು. ಮುಂಬರುವ ವರ್ಷಗಳಲ್ಲಿ ಇದು ಆಗುವುದು. ಈ ಅಲೆಯು ಬಹಳ ಹೆಚ್ಚು ಪ್ರಬಲವಾಗುವುದು. ಇತರರನ್ನು ಮೋಸಗೊಳಿಸುತ್ತಿರುವ ಜನರೆಲ್ಲರೂ ತಮ್ಮ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವರು, ಮತ್ತು ನಂತರ ಅವರ ಬಣ್ಣ ಬಯಲಾಗುವುದು. ಇತರರನ್ನು ಮೋಸಗೊಳಿಸುತ್ತಿರುವ ಜನರ ಬಣ್ಣ ಬಯಲಾಗುವುದು, ಇದು ಆಗುವುದು.
ಆದುದರಿಂದ, ಒಳ್ಳೆಯ ಕಾಲವು ನಮ್ಮ ಮುಂದಿದೆ.

ಭಾನುವಾರ, ಡಿಸೆಂಬರ್ 30, 2012

ನೀವು ಎಲ್ಲವನ್ನೂ ಮೀರಿ ನಿಲ್ಲಬಲ್ಲಿರಿ


ಬಾಡ್ ಅಂತೋಗಸ್ಟ್
ದಶಂಬರ ೩೦, ೨೦೧೨

ನೀವೆಲ್ಲರೂ ಸ್ಫೂರ್ತಿಯಿ೦ದ ತು೦ಬಿರುವುದನ್ನು ಮತ್ತು ಜ್ಞಾನದಲ್ಲಿ ಬೆಳೆಯುವುದನ್ನು ಕಾಣುವುದು ಆನಂದ. ನಿಮ್ಮೆಲ್ಲರ ಪರಿಪೂರ್ಣ ಜ್ಞಾನ ವಿಕಾಸ ಇನ್ನೂ ಹೆಚ್ಚಿನ ಆನಂದ. ಜ್ಞಾನವೆಂದರೆ, ನೀವು ಗಟ್ಟಿಯಾಗಿರುವ, ಅಲ್ಲಾಡಿಸಲು ಸಾಧ್ಯವಾಗದೇ ಇರುವ ಮತ್ತು ಹಸನ್ಮುಖದಿ೦ದಿರುವ ಸ್ಥಿತಿಯೇ ಸರಿ.

ಪ್ರಶ್ನೆ: ಸಲಿಂಗಕಾಮಿಯಾಗಿರುವುದು ಮನಸ್ಸಿನ ಒಂದು ಸಂಸ್ಕಾರವೇ?
ಶ್ರೀ ಶ್ರೀ ರವಿ ಶಂಕರ್: ಅದಾಗಿರಬಹುದು, ಅಥವಾ ಅದು ಜೀವಶಾಸ್ತ್ರಕ್ಕೆ ಸಂಬಂಧಿಸಿದುದೂ ಆಗಿರಬಹುದು.
ನೀವು ಗಂಡು ಮತ್ತು ಹೆಣ್ಣು, ಎರಡೂ ವರ್ಣತಂತುಗಳಿಂದ ಮಾಡಲ್ಪಟ್ಟಿರುವಿರಿ. ನಿಮ್ಮಲ್ಲಿನ ಸ್ತ್ರೀ ವರ್ಣತಂತುಗಳು ಕ್ರಿಯಾಶೀಲವಾಗಿದ್ದರೆ, ಆದರೆ ಶರೀರವು ಗಂಡಾಗಿದ್ದರೆ, ಆಗ ಪ್ರವೃತ್ತಿಗಳು ಬದಲಾಗಬಹುದು. ಹೀಗಿದ್ದರೂ, ಇದು ಒಂದು ಜೀವಮಾನವಿಡೀ ಅಲ್ಲ. ಈ ಪ್ರವೃತ್ತಿಗಳು ಸ್ವಲ್ಪ ಸಮಯದ ಕಾಲ ಬರಬಹುದು ಮತ್ತು ಮಾಯವಾಗುತ್ತದೆ. ನೇರವಾಗಿರುವ ಹಲವಾರು ಜನರು ಅಚಾನಕ್ಕಾಗಿ ಸಲಿಂಗಕಾಮಿಗಳಾಗುವುದನ್ನು ನೀವು ಕಾಣಬಹುದು, ಮತ್ತು ಒಂದು ದೀರ್ಘಕಾಲದ ವರೆಗೆ ಸಲಿಂಗಕಾಮಿಗಳಾಗಿರುವ ಅನೇಕ ಜನರು ವಿವಾಹವಾಗಲು ತೊಡಗುತ್ತಾರೆ. ಜನರಲ್ಲಿ ಈ ಎಲ್ಲಾ ವಿವಿಧ ಕ್ರಮ ವ್ಯತ್ಯಾಸಗಳು (ಪರಿವರ್ತನೆಗಳು), ಸಂಯೋಗಗಳು, ಮನೋಭಾವಗಳನ್ನು ನಾನು ನೋಡಿರುವೆನು. ಆದುದರಿಂದ, ನಿಮಗೆ ಹಣೆಪಟ್ಟಿ ಹಚ್ಚಿಕೊಳ್ಳದಿರುವುದು ಅತ್ಯುತ್ತಮವಾದುದು.
ಕೆಲವೊಮ್ಮೆ, ನಿರ್ದಿಷ್ಟ ವರ್ಗಗಳಲ್ಲಿ ಹೊಂದಿಕೆಯಾಗಲು ಜನರು ತಮ್ಮ ಮೇಲೆ ಬಲವಂತ ಹೇರುತ್ತಾರೆ. ಅವರನ್ನುತ್ತಾರೆ, "ಸರಿ, ನಾನು ಸಲಿಂಗಕಾಮಿನಿ" ಅಥವಾ "ನಾನು ಸಲಿಂಗಕಾಮಿ", ಮತ್ತು ಈ ಪ್ರವೃತ್ತಿಗಳು ಬದಲಾಗುವಾಗ, ನಂತರ ಅವರು ಛಿದ್ರವಾಗುತ್ತಾರೆ. ಕೆಲವೊಮ್ಮೆ ಜನರು ಸಲಿಂಗಕಾಮಿಗಳ ಬಗ್ಗೆ ಎಷ್ಟೊಂದು ಭಯಭೀತರಾಗುವರೆಂದರೆ, ಅಂತಹ ಪ್ರವೃತ್ತಿಗಳಿರುವ ಜನರನ್ನು ಅವರು ದ್ವೇಷಿಸಲು ತೊಡಗುತ್ತಾರೆ, ಇದು ಒಳ್ಳೆಯದಲ್ಲ. ಶರೀರದ ಯಾವುದೋ ಪ್ರವೃತ್ತಿಯ ಆಧಾರದ ಮೇಲೆ ನಿಮ್ಮ ಮೇಲೆಯೇ ಹಣೆಪಟ್ಟಿ ಹಚ್ಚಿಕೊಳ್ಳುವುದರಿಂದ ಹೊರಬರಬೇಕೆಂಬುದು ನನ್ನ ಸಲಹೆಯಾಗಿದೆ. ನೀವು ಪ್ರಜ್ಞೆಯಾಗಿರುವಿರಿ ಎಂಬುದನ್ನು ತಿಳಿಯಿರಿ. ನೀವು ಪ್ರೇಮವಾಗಿರುವಿರಿ. ನೀವು ಮಿನುಗುವ ಶಕ್ತಿಯಾಗಿರುವಿರಿ. ಶಕ್ತಿಯಾಗಿ, ಪ್ರೇಮವಾಗಿ ಮತ್ತು ಒಬ್ಬ ಸುಂದರ ವ್ಯಕ್ತಿಯಾಗಿ ನಿಮ್ಮನ್ನು ಗುರುತಿಸುವುದು, ನಿಮ್ಮಲ್ಲೇಳುವ ಶಾರೀರಿಕ ಪ್ರವೃತ್ತಿಯೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವುದಕ್ಕಿಂತ, ಹಣೆಪಟ್ಟಿ ಹಚ್ಚಿಕೊಳ್ಳುವುದಕ್ಕಿಂತ ಎಷ್ಟೋ ಹೆಚ್ಚು ಉತ್ತಮವಾಗಿದೆ.
ಅಂತಹ ಪ್ರವೃತ್ತಿಗಳು ಬರುವಾಗ, ನೀವು ದುಃಖಿಸಬೇಕಾಗಿ ಅಥವಾ ಆತ್ಮಗ್ಲಾನಿ ಭಾವನೆ ಹೊಂದಬೇಕಾಗಿ ಏನೂ ಇಲ್ಲ. ಅದು ಇರುವುದೇ ಹಾಗೆ! ಅದನ್ನು ಸ್ವೀಕರಿಸಿ! ಅದು ಪ್ರಕೃತಿಯಲ್ಲಿನ ಒಂದು ಆಗುವಿಕೆ - ನಿಮ್ಮೊಳಗೆ ಏಳುವ ವಿವಿಧ ಗಂಡು ಅಥವಾ ಹೆಣ್ಣು ಪ್ರವೃತ್ತಿಗಳು ಅಥವಾ ಭಾವನೆಗಳು ಅಥವಾ ಆಕರ್ಷಣೆಗಳು ಇರುತ್ತವೆ. ಅದರಲ್ಲೇನೂ ತಪ್ಪಿಲ್ಲ. ನೀವು ಅದನ್ನು ಮೀರಿ ಹೋಗಬೇಕು! ಅದರಾಚೆಗೆ ಇರುವುದು ಆತ್ಮವಾಗಿದೆ.
ಆತ್ಮಕ್ಕೆ ಯಾವುದೇ ಲಿಂಗವಿಲ್ಲ, ಅದು ಲಿಂಗವನ್ನು ಮೀರಿದುದಾಗಿದೆ. ಆತ್ಮವು ಪ್ರೇಮವಾಗಿದೆ, ಮತ್ತು ಅದುವೇ ನೀವಾಗಿರುವಿರಿ. ಇದನ್ನು ನೀವು ತಿಳಿದಾಗ, ನೀವು ಬಹಳ ಗಟ್ಟಿಯಾಗುವಿರಿ.

ಪ್ರಶ್ನೆ: ಪ್ರೀತಿಯ ಗುರುದೇವ, ನನ್ನ ಮೇಲೆ ಎಲ್ಲದಕ್ಕೂ ಸಿಡಿಮಿಡಿಗೊಳ್ಳುವ ಒಬ್ಬಳು ಹೆಂಗಸನ್ನು ನೋಡಿಕೊಳ್ಳುವುದು ಹೇಗೆ! ದಯವಿಟ್ಟು ಸಹಾಯ ಮಾಡಿ, ನಾನವಳನ್ನು ಬಹಳ ಪ್ರೀತಿಸುತ್ತೇನೆ.
ಶ್ರೀ ಶ್ರೀ ರವಿ ಶಂಕರ್: ಈ ವಿಷಯದಲ್ಲಿ ನಾನು ಬಹಳ ಅನನುಭವಿ! ನೀನೊಬ್ಬ ತಪ್ಪಾದ ವ್ಯಕ್ತಿಯನ್ನು ಕೇಳುತ್ತಿರುವೆ!
ನಿನ್ನಲ್ಲಿ ಸಿಡಿಮಿಡಿಗೊಳ್ಳುವ ಹಾಗೂ ನೀನು ಬಹಳವಾಗಿ ಪ್ರೀತಿಸುವ ಒಬ್ಬ ವ್ಯಕ್ತಿಯೊಡನೆ ನೀನೇನು ಮಾಡುವೆ? ನನ್ನ ಊಹೆಯ ಪ್ರಕಾರ, ನೀನದನ್ನು ಸುಮ್ಮನೆ ಸ್ವೀಕರಿಸಬೇಕು ಮತ್ತು ಸುಮ್ಮನೇ ಮುಂದೆ ಸಾಗಬೇಕು.
ತನ್ನ ಪತ್ನಿಯಿಂದ ಬಹಳ ತೊಂದರೆಗೀಡಾಗಿದ್ದ ಒಬ್ಬ ವ್ಯಕ್ತಿಯ ಒಂದು ಕಥೆಯಿದೆ. ಅವಳು ಮಾಡುತ್ತಿದ್ದುದೆಲ್ಲವೂ, ಅವನು ಬಯಸಿದುದರ ವಿರುದ್ಧವಾಗಿತ್ತು. ಅವನು, "ನಾನಿವತ್ತು ಪಾಸ್ತಾ ತಿನ್ನಲು ಬಯಸುವುದಿಲ್ಲ" ಎಂದು ಹೇಳಿದರೆ, ಅವನಿಗೆ ಆ ದಿನ ಕೇವಲ ಪಾಸ್ತಾ ಮಾತ್ರ ಸಿಗುವುದನ್ನು ಅವಳು ಖಾತ್ರಿ ಮಾಡುತ್ತಿದ್ದಳು. ಅವನು, "ನನಗೆ ನೀಲಿ ಜೀನ್ಸ್ ಇಷ್ಟವಿಲ್ಲ" ಎಂದು ಹೇಳಿದರೆ, ಆ ದಿನ ಅವಳು ನೀಲಿ ಜೀನ್ಸ್ ಧರಿಸುತ್ತಿದ್ದಳು.
ಅವನು ಅವಳನ್ನು ಏನನ್ನೇ ಕೇಳಲಿ, ಅವಳು ಅದರ ವಿರುದ್ಧವಾಗಿಯೇ ಮಾಡುತ್ತಿದ್ದಳು. ಅವನು, "ನನಗೆ ಹೊರಗೆ ಹೋಗಲು ಮನಸ್ಸಿಲ್ಲ" ಎಂದು ಹೇಳಿದರೆ, ಅವಳು, "ಇಲ್ಲ, ನಾನು ಹೊರಗೆ ಹೋಗಲು ಬಯಸುತ್ತೇನೆ" ಎಂದು ಹೇಳುತ್ತಿದ್ದಳು. ಅವನು ಹೊರಗೆ ಹೋಗಲು ಬಯಸಿದಾಗ ಅವಳು, "ನಾನು ಮನೆಯಿಂದ ಹೊರಗೆ ಕಾಲಿಡಲು ಬಯಸುವುದಿಲ್ಲ" ಎಂದು ಹೇಳುತ್ತಿದ್ದಳು!
ಅವನು ಬಹಳ ತೊಂದರೆಗೀಡಾಗಿದ್ದ, ಬಹಳ ಚಿಂತೆಗೊಳಗಾಗಿದ್ದ ಮತ್ತು ಒಂದು ಬಹಳ ಉದ್ದನೆಯ ಮುಖ ಹೊಂದಿದ್ದ.
ಒಂದು ದಿನ ಬೆಳಗ್ಗೆ ಅವನು ನಡೆಯಲು ಹೋದಾಗ, ಅವನಿಗೆ ಒಬ್ಬರು ಗುರು ಕಾಣಲು ಸಿಕ್ಕಿದರು. ಗುರುವು ಅವನಲ್ಲಿ ಕೇಳಿದರು, "ಆತ್ಮೀಯನೇ, ನೀನು ಸಂತೋಷವಾಗಿರುವೆಯಾ? ನೀನು ಸಂತೋಷವಾಗಿರುವಂತೆ ಕಾಣಿಸುವುದಿಲ್ಲ. ನಿನಗೇನು ಬೇಕು?"
ಅವನಂದನು, "ನನಗೊಂದು ದೊಡ್ಡ ಸಮಸ್ಯೆಯಿದೆ. ನಾನೇನೇ ಹೇಳಿದರೂ, ನನ್ನ ಪತ್ನಿಯು ಅದಕ್ಕೆ ತದ್ವಿರುದ್ಧವಾಗಿ ಮಾಡುತ್ತಾಳೆ."
ಆಗ ಜ್ಞಾನಿ ವ್ಯಕ್ತಿಯು ಅವನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದನು.
ಮೂರು ತಿಂಗಳುಗಳ ಬಳಿಕ, ಒಂದು ದಿನ ಬೆಳಗ್ಗೆ ಆ ವ್ಯಕ್ತಿಯು ಸಂತೋಷವಾಗಿ ನಡೆದುಕೊಂಡು ಹೋಗುತ್ತಿದ್ದಾಗ, ಪುನಃ ಅವನಿಗೆ ಗುರುವು ಕಾಣಲು ಸಿಕ್ಕಿದರು. ಗುರು ಅಂದರು, "ಹೇ, ನೀನು ಹೆಚ್ಚು ಸಂತೋಷವಾಗಿರುವಂತೆ ಕಾಣಿಸುತ್ತಿರುವೆ!" ಅವನಂದನು, "ಹೌದು, ನಿಮ್ಮ ಉಪಾಯ ಫಲಿಸಿತು."
ಈಗ, ಉಪಾಯವೇನಾಗಿತ್ತು?
ಗುರುವು ಅವನಿಗೆ, "ನಿನ್ನ ಹೃದಯದಲ್ಲಿರುವುದನ್ನು ನಿನ್ನ ಪತ್ನಿಗೆ ಹೇಳಬೇಡ. ನಿನಗೇನು ಬೇಕೋ, ಅದರ ವಿರುದ್ಧವಾದುದನ್ನು ಹೇಳು! ನಿನಗೆ ಹೊರಗೆ ಹೋಗಬೇಕಿದ್ದರೆ, ನೀನು ಮನೆಯಿಂದ ಹೊರಗೆ ಹೆಜ್ಜೆಯಿಡಲು ಬಯಸುವುದಿಲ್ಲವೆಂದು ಅವಳಿಗೆ ಹೇಳು. ನಿನಗೆ ಆಪಲ್ ಪೈ (ಸೇಬಿನಿಂದ ಮಾಡಿದ ಸಿಹಿತಿಂಡಿ) ಬೇಕಿದ್ದರೆ, ಅದನ್ನು ಮಾಡುವುದು ಬೇಡವೆಂದು ಅವಳಿಗೆ ಹೇಳು. ಅವಳು ನೀಲಿ ಜೀನ್ಸ್ ಧರಿಸುವುದು ನಿನಗೆ ಬೇಡವಾಗಿದ್ದರೆ, ಆ ದಿನ ನೀಲಿ ಜೀನ್ಸ್ ಧರಿಸುವಂತೆ ಅವಳಲ್ಲಿ ಹೇಳು."
ಆ ವ್ಯಕ್ತಿಯು ಗುರುವಿಗಂದನು, "ನಾನು, ನೀವು ಏನು ಹೇಳಿದಿರೋ ಅದನ್ನು ಮಾಡಿದೆ, ಮತ್ತು ಅದು ಕೆಲಸ ಮಾಡಿತು. ನಾನು ನನಗೆ ಬೇಕಾಗಿರುವ ಎಲ್ಲದರ ವಿರುದ್ಧವನ್ನು ಹೇಳುತ್ತೇನೆ, ಮತ್ತು ನಾವೀಗ ಸಂತೋಷವಾಗಿದ್ದೇವೆ."
ಅದೇ ರೀತಿ, ಯಾವುದು ಅವಳಿಗೆ ಸಂತೋಷವನ್ನುಂಟುಮಾಡಬಹುದು ಎಂಬುದನ್ನು ನೀನು ಕಂಡುಹಿಡಿ, ಮತ್ತು ಅವಳು ಸಿಡಿಮಿಡಿಗೊಳ್ಳುವುದನ್ನು ತಪ್ಪಿಸು.
ಕೆಲವೊಮ್ಮೆ, ಕಿರಿಕಿರಿಗೊಳ್ಳುವುದು ಜನರ ಸ್ವಭಾವವಾಗುತ್ತದೆ. ಏನೇ ಬಂದರೂ, ಅವರು ದೂರುತ್ತಾ ಇರುತ್ತಾರೆ. ನೀವೇನೇ ಮಾಡಿದರೂ, ದೂರಲು ಅವರು ಏನನ್ನಾದರೂ ಕಂಡುಹುಡುಕುತ್ತಾರೆ. ವಿಶೇಷವಾಗಿ ಅವರು ೭೦ ಅಥವಾ ೮೦ ವರ್ಷ ವಯಸ್ಸು ದಾಟಿದ ಬಳಿಕ, ಅದು ಇನ್ನೂ ಹೆಚ್ಚು. ತಮ್ಮ ಜೀವನವಿಡೀ ಅವರು ತಮ್ಮ ಮನಸ್ಸು ಮತ್ತು ಮೆದುಳನ್ನು ಆ ರೀತಿಯಲ್ಲಿ ತಯಾರಿ ಮಾಡಿದುದರಿಂದ - ದೂರುವುದು, ದೂರುವುದು, ದೂರುವುದು ಮತ್ತು ದೂರುವುದು. ಆಗ ಅದು ಅವರ ಜೀವನದಲ್ಲಿ ಪ್ರಮುಖ ನಡವಳಿಕೆಯ ಮಾದರಿಯಾಗುತ್ತದೆ. ನೀವದನ್ನು ಸುಮ್ಮನೇ ನುಂಗಬೇಕಾಗುತ್ತದೆ, ಸ್ವೀಕರಿಸಬೇಕಾಗುತ್ತದೆ. ಅವರನ್ನು ಪ್ರಸನ್ನಗೊಳಿಸಲು ಪ್ರಯತ್ನಿಸಬೇಡಿ.
ನಿಮ್ಮ ಅತ್ಯಂತ ದೊಡ್ಡ ಕಷ್ಟವೆಂದರೆ, ಜನರು ನಿಜವಾಗಿ ತಮ್ಮ ದೂರುವ ಪ್ರಕ್ರಿಯೆಯಲ್ಲಿ ಸಂತೋಷವಾಗಿರುವಾಗ ನೀವು ಅವರನ್ನು ಮೆಚ್ಚಿಸಲು ಪ್ರಯತ್ನಪಡುವಿರಿ. ನೀವವರನ್ನು ಬದಲಾಯಿಸಲು, ಅವರನ್ನು ಸಂತೋಷಪಡಿಸಲು ಪ್ರಯತ್ನಿಸುವಿರಿ ಮತ್ತು ಅದು ಕೆಲಸ ಮಾಡುವುದಿಲ್ಲ! ಅವರು ಏನನ್ನು ಬಯಸುವರೋ ಅದನ್ನು ಮಾಡಲು ನೀವು ಅವರನ್ನು ಬಿಡಬೇಕು, ಆದರೆ ಅವರ ದೂರುಗಳು ನಿಮ್ಮ ತಲೆಯನ್ನು ಪ್ರವೇಶಿಸಲು ಬಿಡಬೇಡಿ. ಅವರು ದೂರುವರೆಂದು ನೀವು ದೂರಬೇಡಿ. ತಿಳಿಯಿತೇ? ಎಷ್ಟೇ ಬೆಲೆ ತೆತ್ತಾದರೂ, ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಿ. ಇತರರು ದೂರುತ್ತಿದ್ದರೆ, ದೂರಲಿ ಬಿಡಿ! ನೀವು ಅವರನ್ನು ತಿದ್ದಲು ಸಾಧ್ಯವಿಲ್ಲದಿದ್ದರೆ, ನೀವವರನ್ನು ಸುಮ್ಮನೇ ಸ್ವೀಕರಿಸಿ ಮತ್ತು ಮುಂದೆ ಸಾಗಿ.
ನೋಡಿ, ಹೆಚ್ಚು ಸಮಯ ಇಲ್ಲ! ಎಲ್ಲವೂ ಅಂತ್ಯದ ಕಡೆಗೆ ಸಾಗುತ್ತಿದೆ; ನಾವೆಲ್ಲರೂ ಸಾವಿನ ಕಡೆಗೆ ಸಾಗುತ್ತಿದ್ದೇವೆ. ಎಷ್ಟು ಕಾಲ ನೀವು ಒಬ್ಬರನ್ನು ಸಂತೈಸಲು ಪ್ರಯತ್ನ ಪಡುತ್ತಾ ಇರಲು ಸಾಧ್ಯ? ಅದರರ್ಥ ನೀವು ಯಾರೊಂದಿಗಾದರೂ ನಿಷ್ಠುರರಾಗಿರಬೇಕೆಂದಲ್ಲ. ನೀವು ಜನರೊಂದಿಗೆ ನಯವಾಗಿರಿ, ಹೀಗಿದ್ದರೂ, ಸಿಕ್ಕಿಬೀಳಬೇಡಿ, "ಓ, ಅವರು ಕಿರಿಕಿರಿಗೊಂಡಿರುವರು, ನಾನೇನು ಮಾಡಲಿ?" ನೀವು ಹೆಚ್ಚೇನೂ ಮಾಡಲಾರಿರಿ! ನಡೆಯುತ್ತಾ ಇರಿ!
ಈ ಸಮಸ್ಯೆ ನನಗೆ ಎಲ್ಲೆಡೆಗಳಲ್ಲಿಯೂ, ಪ್ರಪಂಚದ ಪ್ರತಿಯೊಂದು ಭಾಗದಲ್ಲಿಯೂ ಕಾಣಸಿಗುತ್ತದೆ. ಬಹುತೇಕ ಪ್ರತಿಯೊಂದು ಮನೆಯಲ್ಲಿ, ಎಲ್ಲರನ್ನೂ ಕಿರಿಕಿರಿಗೊಳಿಸುವ ಒಬ್ಬರಿರುತ್ತಾರೆ ಮತ್ತು ಎಲ್ಲರೂ ಯಾರಾದರೊಬ್ಬರಿಂದ ಕಿರಿಕಿರಿಗೊಳ್ಳುತ್ತಾರೆ. ಆಗ ಅಲ್ಲಿ ಒಂದು ಮಾತಿನ ಯುದ್ಧ ನಡೆಯುತ್ತದೆ. ಪ್ರಪಂಚವಿರುವುದೇ ಹಾಗೆ ಎಂದು ನಾನು ಹೇಳಿದುದು ಅದಕ್ಕೇ! ಅದಕ್ಕೇ ಇದು ಮಾಯೆಯೆಂದು ಕರೆಯಲ್ಪಡುತ್ತದೆ; ಅದು ಏನೋ ಆಗಿ ತೋರುತ್ತದೆ, ಮತ್ತು ಅದು ನಿಜವಾಗಿ ಅದಲ್ಲ.

ಪ್ರಶ್ನೆ: ನನಗೆ ನನ್ನದೇ ಮತ್ತು ನನ್ನ ಪ್ರೀತಿಪಾತ್ರರ ಸಾವಿನ ಬಗ್ಗೆ ಬಹಳಷ್ಟು ಭಯವಿದೆ. ಈ ಭಯದಿಂದ ಹೊರಬರಲು ದಯವಿಟ್ಟು ಏನಾದರೂ ಸಲಹೆ ನೀಡಿ. 
ಶ್ರೀ ಶ್ರೀ ರವಿ ಶಂಕರ್: ಏನೂ ಇಲ್ಲವೇ ಇಲ್ಲ! ಕೇವಲ ಭಯದೊಂದಿಗಿರು ಮತ್ತು ಅದು ಹೇಗೆ ಆರಿಹೋಗುವುದೆಂದು ನೋಡು. ಅದೊಂದು ನೀರಿನ ಗುಳ್ಳೆಯಂತೆ. ನೀನು ಭಯವನ್ನು ತೊಲಗಿಸಲು ಪ್ರಯತ್ನಿಸುವೆ ಮತ್ತು ಅದು ಇನ್ನೂ ಹೆಚ್ಚಾಗುತ್ತದೆ. ಸುಮ್ಮನೆ ಉಸಿರಾಟ ನಡೆಸು. ಕ್ರಿಯೆ ಮತ್ತು ಧ್ಯಾನ ಸಾಕು, ಹಾಗೂ ನಿನ್ನನ್ನು ಅದರಿಂದ ಹೊರತೆಗೆಯಲು ಈ ಎಲ್ಲಾ ಜ್ಞಾನ ಸಾಕು.

ಪ್ರಶ್ನೆ: ನಮಗೆ ಮತ್ತು ನಮ್ಮ ಸಂಬಂಧಗಳಿಗೆ ತೊಂದರೆಯುಂಟುಮಾಡುವ ಶಾರೀರಿಕ ಬಯಕೆಗಳನ್ನು ನಾವು ಹೇಗೆ ತೊಲಗಿಸಬಹುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಪ್ರಾಣವನ್ನು ವರ್ಧಿಸುವುದರಿಂದ.
ಕಾಮವಿರುವಾಗ, ಅಲ್ಲಿ ಬಾಚಿಕೊಳ್ಳಲು ಬಯಸುವ ಒಂದು ಭಾವನೆಯಿರುತ್ತದೆ. ಪ್ರೇಮವಿರುವಾಗ, ಕೊಡಲು ಬಯಸುವ ಒಂದು ಭಾವನೆಯಿರುತ್ತದೆ.
ಕಾಮದ ಭಾವನೆಯನ್ನು ಪ್ರೇಮವಾಗಿ ಹೇಗೆ ಪರಿವರ್ತನೆಗೊಳಿಸಬಹುದು? ನಮ್ಮ ಶಾರೀರಿಕ ವ್ಯವಸ್ಥೆಯಲ್ಲಿರುವ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದರಿಂದ. ಶಕ್ತಿಯು ಕೆಳಗಿನ ಚಕ್ರದಲ್ಲಿ (ಬೆನ್ನುಹುರಿಯ ಬುಡದಿಂದ ಎರಡು-ಮೂರು ಅಂಗುಲಗಳಷ್ಟು ಮೇಲೆ) ಸಿಕ್ಕಿಹಾಕಿಕೊಂಡಾಗ, ಅಲ್ಲಿ ಕಾಮದ ಒಂದು ಭಾವನೆಯಿರುತ್ತದೆ. ಹೀಗಿದ್ದರೂ, ಶಕ್ತಿ ಪ್ರವಹಿಸುವ ವಾಹಿನಿಗಳು ತೆರೆದುಕೊಂಡಾಗ, ಶಕ್ತಿಯು ಏರುತ್ತದೆ. ಆಗ ಅಲ್ಲಿ ಹೆಚ್ಚು ಪ್ರೇಮ, ಸಹಾನುಭೂತಿ, ಅರಿವು ಇರುತ್ತದೆ. ಈ ಎಲ್ಲಾ ಇತರ ಸುಂದರವಾದ, ಒಳ್ಳೆಯ ಸೂಕ್ಷ್ಮ ಭಾವನೆಗಳು ಕೂಡಾ ತೆರೆದುಕೊಳ್ಳುತ್ತವೆ. ಆಗ ಶಾರೀರಿಕ ವ್ಯವಸ್ಥೆಯಿಂದ ಹಿಂಸೆಯು ಮಾಯವಾಗುತ್ತದೆ.

ಪ್ರಶ್ನೆ: ಆತ್ಮ ಸಾಕ್ಷಾತ್ಕಾರವು ಎಲ್ಲಿ ಮತ್ತು ಯಾವಾಗ ಆಗುವುದು?
ಶ್ರೀ ಶ್ರೀ ರವಿ ಶಂಕರ್: ಆತ್ಮ ಸಾಕ್ಷಾತ್ಕಾರದ ಅನುಭವವು ಇಲ್ಲಿಯೇ ಆಗುವುದು! ನಾನು, "ನಿಮ್ಮ ಕಣ್ಣುಗಳನ್ನು ಮುಚ್ಚಿ" ಎಂದು ಹೇಳಿ, ನಾವು ಧ್ಯಾನ ಮಾಡುವಾಗ, ಆ ಸಮಯದಲ್ಲಿ, ನಿಮಗೆ ನಿಮ್ಮ ಗುರುತು ನೆನಪಿರುತ್ತದೆಯೇ? ನೀವೊಬ್ಬ ಗಂಡಸೋ, ಒಬ್ಬಳು ಹೆಂಗಸೋ, ಅಥವಾ ಒಬ್ಬ ಉಪನ್ಯಾಸಕನೋ? ನಿಮಗೆ ನಿಮ್ಮ ವಯಸ್ಸು ತಿಳಿದಿರುತ್ತದೆಯೇ? ನೀವು ಅಜರಾಮರರಾಗಿರುವಿರೆಂಬುದನ್ನು ನೀವು ಕಾಣುವಿರೇ? ನೀವು ನಿಮ್ಮ ವಯಸ್ಸನ್ನು, ನಿಮ್ಮ ವ್ಯಕ್ತಿತ್ವವನ್ನು ಮೀರಿದವರು. ಅದುವೇ ಆತ್ಮ ಸಾಕ್ಷಾತ್ಕಾರ. ನಿಧಾನವಾಗಿ, ಹಂತ ಹಂತವಾಗಿ ನೀವು ಈ ದಿಕ್ಕಿನಲ್ಲಿ ಸಾಗುತ್ತೀರಿ. ನಂತರ ನಿಮಗೆ ತಿಳಿಯುತ್ತದೆ, "ನಾನು ಕೇವಲ ಶರೀರ ಮಾತ್ರವಲ್ಲ, ನಾನು ಶುದ್ಧ ಚೈತನ್ಯವಾಗಿರುವೆನು."
ಇದು ನಿನ್ನ ಮೊದಲನೆಯ ಉನ್ನತ ಶಿಬಿರವೇ? ನಿನಗೆ ಇನ್ನೂ ಕೆಲವು ಹೆಚ್ಚಿನ ಉನ್ನತ ಶಿಬಿರ ಮಾಡಬೇಕಾಗಬಹುದು. ಅದು ಪರವಾಗಿಲ್ಲ. ಮೊದಲನೆಯ ದಿನ ಮನಸ್ಸು ಎಲ್ಲಾ ಕಡೆ ಹೋಗುತ್ತಿತ್ತು ಎಂಬುದನ್ನು ನೀನು ಗಮನಿಸಿದ್ದೀಯಾ? ಎರಡನೆಯ ದಿನ, ಅದು ನೆಲೆಯೂರಲು ಪ್ರಾರಂಭಿಸಿತು. ಮೂರನೆಯ ದಿನ, ಇವತ್ತು, ಧ್ಯಾನವು ಇನ್ನೂ ಉತ್ತಮವಾಗಿತ್ತು. ಹೀಗೆ, ನಿಧಾನವಾಗಿ, ನೀನು ಆ ದಿಕ್ಕಿನಲ್ಲಿ ಸಾಗುವೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಜ್ಞಾನದ ಮಾತುಗಳನ್ನು ಕೇಳಿಸಿಕೊಳ್ಳುವಾಗ, ನನ್ನೊಳಗಿರುವ ಏನೋ ಒಂದು ನಡುಗುತ್ತದೆ. ನಡುಗುವ ಅದು ಏನು?
ಶ್ರೀ ಶ್ರೀ ರವಿ ಶಂಕರ್: ಅದುವೇ ಶಕ್ತಿ, ನಿಜವಾದ ಚೈತನ್ಯ, ನಿಜವಾದ ನೀನು. ಅದುವೇ ಪ್ರಜ್ಞೆಯೆಂದು ಕರೆಯಲ್ಪಡುವುದು; ನಿನ್ನೊಳಗೆ ಚಲಿಸುವ ಆ ಏನೋ ಒಂದು; ಶಕ್ತಿ. ನೀನು ಆ ಶಕ್ತಿಯಿಂದ ಮಾಡಲ್ಪಟ್ಟಿರುವೆ.

ನಮ್ಮ ಬದುಕಿನಲ್ಲಿ ಬದಲಾವಣೆಯು೦ಟಾಗಲು ಏನು ಮಾಡಬೇಕು?


ಬಾಡ್ ಅಂತೋಗಸ್ಟ್, ಜರ್ಮನಿ
ದಶಂಬರ ೩೦, ೨೦೧೨

ಪ್ರಶ್ನೆ: ಪ್ರೀತಿಯ ಗುರುದೇವ, ಭಾರತದಲ್ಲಿ ಬಲಾತ್ಕಾರಕ್ಕೊಳಪಟ್ಟವಳ ಮರಣದಿಂದ ನಾನು ಜರ್ಜರಿತಗೊಂಡಿರುವೆನು. ಭಾರತದಲ್ಲಿ ಯಾಕೆ ಅಂತಹ ಕ್ರೂರ ಬಲಾತ್ಕಾರ ಅಪರಾಧಗಳು ಆಗುತ್ತವೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಅದು ಕೇವಲ ಒಂದು ಜಾಗದಲ್ಲಲ್ಲ, ಮತ್ತು ಅದು ಕೇವಲ ಭಾರತದಲ್ಲಿ ಮಾತ್ರವಲ್ಲ. ಈ ಘಟನೆಯು ಅಷ್ಟೊಂದು ಪ್ರಚಾರವನ್ನು ಪಡೆಯಿತೆಂದು ಮಾತ್ರ. ಅಂತಹ ಅಪರಾಧಗಳು ಪ್ರಪಂಚದಾದ್ಯಂತ ಹಲವಾರು ನಡೆಯುತ್ತಿವೆ. ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ, ಆದರೆ ಮಕ್ಕಳ ಮೇಲೆ, ಮತ್ತು ವಯಸ್ಸಾದವರ ಮೇಲೆ ಕೂಡಾ!
ನಮ್ಮ ಸ್ವಯಂಸೇವಕರಲ್ಲಿ ಒಬ್ಬಳು, ಕೆನ್ಯಾದ ನೈರೋಬಿಯಲ್ಲಿ ಏನಾಗುತ್ತಿದೆಯೆಂಬುದರ ಬಗ್ಗೆ ಈಗಷ್ಟೇ ನನಗೆ ಹೇಳಿದಳು. ಅದು ಭೀಕರವಾಗಿದೆ; ಜನರು ಅಲ್ಲಿ ಸುರಕ್ಷಿತವಾಗಿಲ್ಲ. ಅವಳು ಹೇಳಿದುದನ್ನು ಕೇಳಿ, ಜನರು ತಮ್ಮ ಮನೆಗಳಿಂದ ಹೊರಗೆ ಹೋಗಬಾರದೆಂದು ನಾನು ಹೇಳಿದೆ. ಅದಕ್ಕೆ ಅವಳು, ’ಜನರಿಗೆ ತಮ್ಮ ಮನೆಗಳೊಳಗೆ ಇರಲು ಇನ್ನೂ ಹೆಚ್ಚು ಭಯವಾಗುತ್ತಿದೆ, ಯಾಕೆಂದರೆಅಲ್ಲಿ ಬಹಳಷ್ಟು ಕಳ್ಳತನಗಳಾಗುತ್ತವೆ. ತಮ್ಮ ಕಾರುಗಳಲ್ಲಿ ಹೊರಗೆ ಹೋಗುವುದು ಹೆಚ್ಚು ಸುರಕ್ಷಿತವೆಂದು ಅವರಿಗೆ ಅನ್ನಿಸುತ್ತದೆ’ ಎಂದು ಹೇಳಿದಳು.
ನೀವು ನಿಮ್ಮ ಸ್ವಂತ ಮನೆಯೊಳಗೇ ಸುರಕ್ಷಿತವಾಗಿಲ್ಲ! ಅಂತಹ ಘಟನೆಗಳು ಹೆಚ್ಚಾಗುತ್ತಿವೆ; ಮುಂಬೈಯಲ್ಲಿ ಕೂಡಾ. ಒಬ್ಬಂಟಿಯಾಗಿ ವಾಸಿಸುವಂತಹ ವಯಸ್ಸಾದ ಜನರನ್ನು ನೋಡಿಕೊಂಡು, ನಂತರ ಅವರನ್ನು ಗುರಿಯಾಗಿಸುತ್ತಾರೆ. ಅಂತಹ ಅಪರಾಧಗಳು ಬಹುತೇಕ ಎಲ್ಲೆಡೆಯೂ ಆಗುತ್ತಿವೆ. ಇಟೆಲಿಯಲ್ಲಿ, ಸ್ಪೈನಿನಲ್ಲಿ ಮತ್ತು ಟರ್ಕಿಯಲ್ಲಿ ಹಲವಾರು ಅಪರಾಧಗಳು ವರದಿಯಾಗಿವೆ; ಇಲ್ಲಿ ಜರ್ಮನಿಯಲ್ಲಿ ಕೂಡಾ, ಅಲ್ಲವೇ? ರಷ್ಯಾದಲ್ಲಿ ಅದು ಎಷ್ಟೊಂದು ಹೆಚ್ಚೆಂದರೆ, ಅಲ್ಲಿ ರಸ್ತೆಗಳಲ್ಲಿ ನಡೆಯುವುದು ಕೂಡಾ ಸುರಕ್ಷಿತವಲ್ಲ ಎಂಬುದನ್ನು ನಾನು ಕೇಳಿದ್ದೇನೆ.  
ಇಂತಹ ವಿಷಯಗಳನ್ನು ಕೇಳುವಾಗ, ನಾವೆತ್ತ ಸಾಗುತ್ತಿರುವೆವೆಂದು ನನಗೆ ಅಚ್ಚರಿಯಾಗುತ್ತದೆ. ಈ ಒಂದು ಘಟನೆಯು ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿತು. ನಿಮಗೆ ಗೊತ್ತಾ, ಈ ಘಟನೆಯ ಬಗ್ಗೆ ಅರಿವನ್ನು ಮೂಡಿಸುವುದರಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಅಗ್ರಗಾಮಿ ಆಗಿತ್ತೆಂಬುದು? ಮೊದಲನೆಯ ದಿನವೇ, ಇಂಡಿಯಾ ಗೇಟಿಗೆ ಮೋಂಬತ್ತಿ ಬೆಳಕಿನ ನಡಿಗೆಯನ್ನು ಕೈಗೊಂಡದ್ದು ಯೆಸ್ ಪ್ಲಸ್ ವಿದ್ಯಾರ್ಥಿಗಳಾಗಿದ್ದರು. ನೋಡಿ, ನಾವು ಯಾವುದನ್ನೆಲ್ಲಾ ಪ್ರಾರಂಭಿಸಿದೆವೋ ಅದು ಇನ್ನೂ ಒಂದು ದೊಡ್ಡ ಆಯಾಮವನ್ನು, ದೊಡ್ಡ ಪ್ರಮಾಣವನ್ನು ತೆಗೆದುಕೊಂಡಿದೆ; ಎಲ್ಲೆಡೆಗಳಲ್ಲಿಯೂ ಈಗ ಜನರು ಜಾಗೃತರಾಗಿದ್ದಾರೆ. ಎಲ್ಲೆಡೆಗಳಲ್ಲಿಯೂ ಇಂತಹ ಅಪರಾಧಗಳಾಗುವುದನ್ನು ಕಡಿಮೆಗೊಳಿಸುವುದರಲ್ಲಿ ಇದು ಸಹಾಯಕವಾಗಬಹುದೆಂದು ನಾನು ಆಶಿಸುತ್ತೇನೆ, ಮತ್ತು ನನಗೆ ಇದರ ಬಗ್ಗೆ ಖಾತ್ರಿಯಿದೆ. ಅದಕ್ಕಾಗಿಯೇ ನಾವೆಲ್ಲರೂ ಒಂದು ಹಿಂಸಾ-ಮುಕ್ತವಾದ ಮತ್ತು ಒತ್ತಡ-ಮುಕ್ತವಾದ ಸಮಾಜಕ್ಕಾಗಿ ಕೆಲಸ ಮಾಡಬೇಕು.
ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಜನರು ಬೇಡಿಕೆಯೊಡ್ಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ತಮ್ಮ ಕಾಮ ಮತ್ತು ಭಾವನೆಗಳ ಮೇಲೆ ನಿಯಂತ್ರಣವಿಲ್ಲದ ಹತ್ತು ಇತರ ಜನರು ಏಳುವರು. ಅವರು ತಮ್ಮ ಪ್ರವೃತ್ತಿಗಳಲ್ಲಿ ಬಹಳ ಹಿಂಸಾತ್ಮಕ ಪ್ರವೃತ್ತಿಗಳುಳ್ಳವರಾಗುತ್ತಾರೆ. ನೀವೇನು ಮಾಡುವಿರಿ? ಎಷ್ಟು ಜನರನ್ನು ನೀವು ಗಲ್ಲಿಗೇರಿಸುತ್ತಾ; ಶಿಕ್ಷಿಸುತ್ತಾ ಹೋಗುವಿರಿ? ನಾವು ಸುಧಾರಣೆ ಮಾಡಬೇಕಾಗಿದೆ.
ಸಾವಿರಾರು ಯುವಜನರು ಹಲವಾರು ಹಿಂಸಾತ್ಮಕ ಸಿನೆಮಾಗಳನ್ನು ನೋಡುತ್ತಾರೆ, ಮತ್ತು ಹಿಂಸಾತ್ಮಕವಾದ ವಿಡಿಯೋ ಗೇಮುಗಳನ್ನು ಆಡುತ್ತಾರೆ. ಅವುಗಳು ಕೂಡಾ ಪ್ರಪಂಚದಲ್ಲಿ ಹೆಚ್ಚುತ್ತಿರುವ ಅಪರಾಧಕ್ಕೆ ಹೊಣೆಯಾಗಿವೆ. ಮಕ್ಕಳು ವಿಡಿಯೋ ಗೇಮುಗಳಲ್ಲಿ ಬಂದೂಕಿನಿಂದ ಗುಂಡಿಕ್ಕಲು ಶುರು ಮಾಡಿದಾಗ, ಅಲ್ಲಿನ ಕಾಲ್ಪನಿಕ ಪ್ರಪಂಚ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ತಿಳಿಯುವಲ್ಲಿ ಅವರು ವಿಫಲರಾಗುತ್ತಾರೆ. ಅವರ ಮನಸ್ಸಿನಲ್ಲಿ, ಎರಡರ ನಡುವೆ ಒಂದು ಬಹಳ ತೆಳ್ಳಗಿನ ಗೆರೆಯಿರುತ್ತದೆ. ಕಾಲ್ಪನಿಕ ಪ್ರಪಂಚದಲ್ಲಿ ಅವರು ಜನರಿಗೆ ಗುಂಡಿಕ್ಕಲು ಸಾಧ್ಯವಾದರೆ, ನಿಜ ಪ್ರಪಂಚದಲ್ಲಿ ಒಂದು ಬಂದೂಕು ತೆಗೆದುಕೊಂಡು ಜನರಿಗೆ ಗುಂಡಿಕ್ಕುವುದು ಒಂದು ದೊಡ್ಡ ವಿಷಯವೆಂದು ಅವರಿಗೆ ಅನ್ನಿಸುವುದಿಲ್ಲ. ಇದುವೇ ಅಮೇರಿಕಾದ ಕನೆಕ್ಟಿಕಟ್ ನಲ್ಲಿ ಸಂಭವಿಸಿದುದು. ಬಹಳ ಸಾಧು ಹುಡುಗನೊಬ್ಬನು ತನ್ನ ತಾಯಿಗೆ, ಹಲವಾರು ಮಕ್ಕಳಿಗೆ ಗುಂಡಿಕ್ಕಿ ನಂತರ ತನಗೆ ತಾನೇ ಗುಂಡಿಕ್ಕಿಕೊಂಡನು!
ಕಳೆದ ವರ್ಷ ನೋರ್ವೆಯಲ್ಲಿ ಕೂಡಾ ಏನಾಯಿತೆಂಬುದನ್ನು ನೋಡಿ. ಅದು ಭೀಕರವಾದುದು! ಅಂತಹ ಅಪರಾಧಗಳು ಪ್ರಪಂಚದ ಎಲ್ಲೆಡೆಯಲ್ಲಿ ನಡೆಯುತ್ತಿವೆ.
ಮೆಕ್ಸಿಕೋದಲ್ಲಿ, ಒಂದು ಟ್ರಾಫಿಕ್ ದೀಪದ ಬಳಿ ಇಬ್ಬರು ಟ್ಯಾಕ್ಸಿ ಚಾಲಕರ ನಡುವೆ ವಾದವುಂಟಾಯಿತು. ಅವರ ಪ್ರಯಾಣಿಕರು ಕಾರುಗಳಲ್ಲಿ ಇನ್ನೂ ಕುಳಿತಿದ್ದಂತೆಯೇ, ಅವರು ಕಾರಿನಿಂದ ಹೊರಗಿಳಿದು ಪರಸ್ಪರರಿಗೆ ಗುಂಡಿಕ್ಕಿದರು! ಅವರ ನಡುವೆ ಕೇವಲ ಒಂದು ವಾದ ನಡೆದಿತ್ತಷ್ಟೇ! ನಮ್ಮ ಸಹಿಷ್ಣುತೆಯ ಮಟ್ಟವು ಬಹಳ ಕೆಳಮಟ್ಟಕ್ಕೆ ಇಳಿದಿದೆ.
ಪಾಕಿಸ್ತಾನದಲ್ಲಿ ಇವತ್ತು, ಮತ್ತೆ ಹಲವಾರು ಜನರು ಗಾಯಗೊಂಡಿದ್ದಾರೆ; ಒಂದು ಕಾರ್ ಬಾಂಬಿನಲ್ಲಿ ಹಲವಾರು ಜನರು ಸಾವಿಗೀಡಾದರು. ಪಾಕಿಸ್ತಾನದಲ್ಲಿ ಹಲವು ಜನರು ಸಾಯುತ್ತಿದ್ದಾರೆ.
ಇರಾಕಿನಲ್ಲಿ, ಜನರು ಈ ಸಂಖ್ಯೆಗಳ ಕಡೆಗೆ ಈಗ ಜಡವಾಗಿದ್ದಾರೆ. ಇರಾಕಿನಲ್ಲಿ ನಲುವತ್ತು ಜನರು ಸಾವಿಗೀಡಾದರು. ಅವರು ಪ್ರತಿದಿನವೂ ಸಾಯುತ್ತಿರುವುದಾದರೂ ಕೂಡಾ ಯಾರಿಗೂ ಅದರ ಪರಿವೆಯಿಲ್ಲ! ಸಿರಿಯಾದಲ್ಲಿ, ಈಜಿಪ್ಟಿನಲ್ಲಿ ಏನಾಗುತ್ತಿದೆ ನೋಡಿ? ಅರ್ಧದಷ್ಟು ಜನತೆಯು ಅಳಿಸಿ ಹೋಗುತ್ತಿದೆ. ನಾವು ಮಾಡುತ್ತಿರುವುದು ಬಹಳ ಪ್ರಧಾನವಾದುದೆಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾದುದು ಇಂತಹ ಸಮಯಗಳಲ್ಲೇ!
ಒಂದು ಹಿಂಸಾ-ಮುಕ್ತ ಮತ್ತು ಒತ್ತಡ-ಮುಕ್ತ ಸಮಾಜವನ್ನು ಸೃಷ್ಟಿಸುವುದು ಬಹಳ ಪ್ರಧಾನವಾಗಿದೆ. ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಶಿಕ್ಷಕರನ್ನು ನಾವು ಹೊಂದಬೇಕಾಗಿದೆ. ನಾವು ಹರಡಬೇಕಾಗಿದೆ ಮತ್ತು ಜನರ ಮನಸ್ಸನ್ನು ಬದಲಾಯಿಸಬೇಕಾಗಿದೆ.
ನಮ್ಮ ಶಿಕ್ಷಕರು ಜೈಲುಗಳಲ್ಲಿ ಕೆಲಸ ಮಾಡುತ್ತಿರುವುದರ ಬಗ್ಗೆ ನನಗೆ ಬಹಳ ಸಂತಸವಿದೆ. ಇತ್ತೀಚೆಗೆ, ನಾನು ಅರ್ಜೆಂಟೀನಾದಲ್ಲಿ ಒಂದು ಜೈಲಿಗೆ ಹೋದೆ. ಅಲ್ಲಿ ಬಹಳಷ್ಟು ಹಿಂಸೆ ಮತ್ತು ಅಪರಾಧಗಳಿದ್ದವು; ಜೈಲಿನ ಕೋಣೆಗಳಲ್ಲಿ ಕೂಡಾ. ಅಲ್ಲಿ ಆರ್ಟ್ ಆಫ್ ಲಿವಿಂಗ್ ಶಿಬಿರವನ್ನು ನಡೆಸಿದಂದಿನಿಂದ, ಎಲ್ಲಾ ಖೈದಿಗಳೂ, "ನಾವು ಯಾವುದೇ ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ" ಎಂದು ಹೇಳುವ ಒಂದು ಬ್ಯಾಂಡನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅರ್ಜೆಂಟೀನಾದ ಜೈಲಿನಲ್ಲಿದ್ದ ೫,೨೦೦ ಪೌರುಷತ್ವ ಹೊಂದಿದ ಗಂಡಸರ ಕಣ್ಣುಗಳಲ್ಲಿ ಕಣ್ಣೀರುಗಳಿದ್ದವು! ಅವರಂದರು, "ನಮ್ಮ ಜೀವನ ಬದಲಾಗಿದೆ! ನಮಗೆ ಈ ಜ್ಞಾನ ಮೊದಲೇ ಯಾಕೆ ಸಿಗಲಿಲ್ಲ?"
ಅದೇ ರೀತಿ, ಬ್ರೆಝಿಲಿನಲ್ಲಿ, ನಾನು ರಿಯೋದಲ್ಲಿದ್ದಾಗ, ನಾನೊಂದು ಸೆರೆಮನೆಯ ಕೋಣೆಯನ್ನು ಸಂದರ್ಶಿಸಿದೆ. ಸೆರೆಮನೆಯ ಒಳಗೆ ಅವರು ಒಂದು ಆರ್ಟ್ ಆಫ್ ಲಿವಿಂಗ್ ಕೇಂದ್ರವನ್ನು ಹೊಂದಿದ್ದಾರೆ. ಒಂದು ಕೋಣೆಯಲ್ಲಿ ಅವರು, ನನ್ನ ಚಿತ್ರವನ್ನು ಮತ್ತು ಬಹಳಷ್ಟು ಆರ್ಟ್ ಆಫ್ ಲಿವಿಂಗ್ ಸಾಹಿತ್ಯಗಳನ್ನು ಇಟ್ಟಿದ್ದಾರೆ. ಯಾರಿಗೂ ಅಲ್ಲಿ ಪಾದರಕ್ಷೆಗಳೊಂದಿಗೆ ಒಳಹೋಗಲು ಅನುಮತಿಯಿಲ್ಲ. ಅವರು ಯೋಗದ ಹಾಸುಗಳನ್ನು ಹಾಕಿದ್ದಾರೆ. ಜನರು ಅಲ್ಲಿಗೆ ಹೋಗಿ ಕುಳಿತುಕೊಂಡು, ಯೋಗ, ಧ್ಯಾನಗಳು, ಚಿತ್ರಗಳನ್ನು ಮಾಡುತ್ತಾರೆ ಮತ್ತು ಅವರ ಜೀವನದ ಮೇಲೆ ಬಹಳ ಪರಿಣಾಮವಾಗಿದೆ!
ಬರುವ ಪೀಳಿಗೆಗಾಗಿ ಈ ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಲು, ಪ್ರಪಂಚದಲ್ಲಿ ನಾವು ಮಾಡುವುದು ಬಹಳಷ್ಟಿದೆ! ಇಲ್ಲವಾದರೆ ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ನಿಮ್ಮನ್ನು ಕ್ಷಮಿಸಲಾರರು. ಅವರು, "ನೀವು ನಮಗೆ ಯಾವ ರೀತಿಯ ಒಂದು ಪ್ರಪಂಚವನ್ನು ನೀಡಿರುವಿರಿ?" ಎಂದು ಹೇಳುವರು. ನೀವವರಿಗೆ ಒಂದು ಉತ್ತಮ ಪ್ರಪಂಚವನ್ನು ಕೊಡಬೇಕೆಂದು ಅವರು ಬಯಸುತ್ತಾರೆ - ಹೆಚ್ಚಿನ ಪ್ರೀತಿಯಿರುವ ಮತ್ತು ಹಿಂಸೆಯಿಂದ ಮುಕ್ತವಾದ ಒಂದು ಪ್ರಪಂಚ.
ನಿಮ್ಮ ಚಿಕ್ಕ ಚಿಕ್ಕ ಅವಶ್ಯಕತೆಗಳಲ್ಲಿ ಮತ್ತು ಮಿತ್ರರೊಂದಿಗಿನ ಹಾಗೂ ಇತರ ಜನರೊಂದಿಗಿನ ಚಿಕ್ಕ ಚಿಕ್ಕ ವಾಗ್ವಾದಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ದೊಡ್ಡದಾಗಿ ಯೋಚಿಸಿ ಮತ್ತು ಪ್ರಪಂಚದಲ್ಲಿನ ಹಿಂಸೆ, ಒತ್ತಡ ಹಾಗೂ ಬಿಗಿತಗಳನ್ನು ಕಡಿಮೆ ಮಾಡಲು ನೀವೇನು ಮಾಡಬಲ್ಲಿರಿ ಎಂದು ನೋಡಿ. ಇದರ ಕಡೆಗೆಯೇ ನಾವು ನೋಡಬೇಕಾದುದು!
ಇತರರ ಕ್ಷೇಮದ ಕಡೆಗೆ ಕುರುಡರಾಗಿರುವ, ತೀವ್ರವಾದ ಲೈಂಗಿಕ ಪ್ರವೃತ್ತಿಗಳಿರುವವರಿಗೆ ಒಂದು ಪಾಠದ ಅಗತ್ಯವಿದೆ. ಒಬ್ಬ ವ್ಯಕ್ತಿಯು ಅಂತಹ ನೀಚ ಅಪರಾಧಗಳನ್ನು ಮಾಡುವಂತೆ ಮಾಡುವುದು ಹಾರ್ಮೋನುಗಳಲ್ಲಿನ ಅಸಮತೋಲನ ಮತ್ತು ಒತ್ತಡ. ಅದು ಅವರ ಮನಸ್ಸುಗಳನ್ನು, ಅವರ ಕಣ್ಣುಗಳನ್ನು ಮತ್ತು ಅವರ ಬುದ್ಧಿಯನ್ನು ಕುರುಡಾಗಿಸುತ್ತದೆ. ಬಸ್ಸಿನಲ್ಲಿ ಬಲಾತ್ಕಾರ, ಹಲವಾರು ಜನರು ಜೊತೆಯಲ್ಲಿ! ಈ ಎಲ್ಲಾ ವಿಷಯಗಳನ್ನು ನಾವು ಒಂದು ಹೆಚ್ಚಿನ ಮಾನವೀಯ ನೆಲೆಯಲ್ಲಿ ಸಂಭೋದಿಸಬೇಕೆಂದು ನನಗನ್ನಿಸುತ್ತದೆ. ನಾವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಮರಳಿ ತರಬೇಕಾಗಿದೆ. ಜನರನ್ನು ಆಧ್ಯಾತ್ಮದಲ್ಲಿ ಸುಶಿಕ್ಷಿತರನ್ನಾಗಿಸಿ. ಆಗ ಅವರ ಮನೋಭಾವವು ಬದಲಾಗುವುದು. ಆಧ್ಯಾತ್ಮಿಕವಾಗಿರುವ ಜನರು ಎಂದೆಂದಿಗೂ ಅಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲಾರರು.
ಸಂಪೂರ್ಣವಾಗಿ ಹಿಂಸೆಯಿಂದ ಮುಕ್ತವಾದ ಪ್ರಪಂಚವನ್ನು ಸಾಧಿಸಲು ನಮಗೆ ಈ ಪೀಳಿಗೆಯಲ್ಲಿ ಸಾಧ್ಯವಾಗದೇ ಇರಬಹುದು, ಆದರೆ ನಾವು ಯಾವತ್ತೂ ಅದರ ಕಡೆಗೆ ಕೆಲಸ ಮಾಡಬೇಕು. ಪ್ರಪಂಚದಲ್ಲಿನ ಹಿಂಸೆಯನ್ನು ನಾವು ಖಂಡಿತವಾಗಿ ಕಡಿಮೆ ಮಾಡಲು ಸಾಧ್ಯವಿದೆಯೆಂದು ನನಗೆ ಭರವಸೆಯಿದೆ.
ಇತ್ತೀಚೆಗೆ, ದಿಲ್ಲಿಯ ಒಂದು ಭಾಗದಲ್ಲಿ, ಪೋಲೀಸರು ೭೫೬ ಅಪರಾಧಿಗಳನ್ನು ಒಟ್ಟು ಸೇರಿಸಿ, ಅವರು ಐದು ದಿನಗಳ ವರೆಗೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡುವಂತೆ ಮಾಡಿದರು. ಅವರು ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಮಾಡಿದರು. ಈ ಜನರು ಹಂಚಿಕೊಂಡ ಅನುಭವಗಳನ್ನು ನೀವು ಕೇಳಬೇಕಿತ್ತು, ಅದು ಬಹಳ ಹೃದಯಸ್ಪರ್ಷಿಯಾಗಿತ್ತು. ಮಾದಕ ದ್ರವ್ಯಗಳನ್ನು ಬಳಸುತ್ತಿದ್ದ ಜನರು ಅಲ್ಲಿದ್ದರು ಮತ್ತು ಐದು ದಿನಗಳಲ್ಲಿ ಮಾದಕ ದ್ರವ್ಯಗಳ ಕಡೆಗೆ ಅವರಲ್ಲಿ ತಿರಸ್ಕಾರ ಬೆಳೆಯಿತು.
ಚೈನುಗಳನ್ನು ಕಸಿಯುತ್ತಿದ್ದ ಮತ್ತು ಅಂತಹ ಇತರ ಚಟುವಟಿಕೆಗಳಲ್ಲಿ ತೊಡಗಿದ್ದ ಜನರು ಸಂಪೂರ್ಣವಾಗಿ ಬದಲಾದರು ಮತ್ತು ಕೊಳಗೇರಿಗಳಲ್ಲಿ ಸಮಾಜ ಸೇವೆ ಮಾಡಲು ಶುರು ಮಾಡಿದರು. ಈ ಜನರಿಗೆ ತರಬೇತಿ ನೀಡಲು ನಮ್ಮ ಶಿಕ್ಷಕರಿಗೆ ಸಾಧ್ಯವಾಯಿತು.
ಕೋರ್ಸಿನ ಕಡೆಯ ದಿನ ನಾನು ಹೋಗಿ ಅವರನ್ನು ಭೇಟಿಯಾದೆ. ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಬಲ್ಲೆವೆಂಬ ಭರವಸೆ ನಮಗಿನ್ನೂ ಇದೆ ಎಂಬುದನ್ನು ಅವರ ಅನುಭವಗಳು ಸೂಚಿಸುತ್ತವೆ. ನಾವೊಂದು ಉತ್ತಮ ಸಮಾಜವನ್ನು ಸೃಷ್ಟಿಸಬಲ್ಲೆವು.

ಪ್ರಶ್ನೆ: ಗುರುದೇವ, ಕೋರ್ಸ್ ನಡೆಯುತ್ತಿರುವಾಗ ಮತ್ತು ಕೋರ್ಸಿನ ನಂತರ ಅದ್ಭುತ ಶಕ್ತಿಯಿರುತ್ತದೆ. ಅದೊಂದು ಸ್ಫೋಟದಂತೆ. ಆದರೆ ನಂತರ, 2-3 ದಿನಗಳಲ್ಲಿ ನನ್ನ ಶಕ್ತಿಯು ಕಡಿಮೆಯಾಗುವಂತಹ ವಿಷಯಗಳನ್ನು ನಾನು ಮಾಡುತ್ತೇನೆ. ಈ ಸಲ ಅದನ್ನು ತಡೆಯಲು ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಶಕ್ತಿಯು ಹೆಚ್ಚು ಕಡಿಮೆಯಾಗುತ್ತಿರುತ್ತದೆ, ಆದರೆ ಅದರ ಬಗ್ಗೆ ಅತಿಯಾದ ಕಾಳಜಿ ವಹಿಸಬೇಡ.
ನಿನ್ನದೇ ಶಕ್ತಿಯ ಕಡೆಗೆ ನೋಡುವುದು, ಅದು ಮೇಲಕ್ಕೆ ಹೋಗುತ್ತಿದೆಯೇ ಅಥವಾ ಕೆಳಕ್ಕೆ ಬರುತ್ತಿದೆಯೇ ಎಂದು ನೋಡುವುದನ್ನು ನೋಡಿದರೆ, ನಿನಗೆ ಬಹಳಷ್ಟು ವಿರಾಮದ ಸಮಯವಿದೆಯೆಂದು ತೋರುತ್ತದೆ. ನಿನ್ನನ್ನು ಕಾರ್ಯನಿರತನನ್ನಾಗಿರಿಸು. ನೀನು ಕಾರ್ಯನಿರತನಾಗಿರುವಾಗ ಎಲ್ಲವೂ ಸರಿಹೋಗುತ್ತದೆ. ನೀನು ಬಹಳ ಕಾರ್ಯನಿರತನಾಗಿರುವಾಗ ದುಃಖಪಡಲು ಸಮಯವೆಲ್ಲಿರುವುದು? ನೀನು ಎಚ್ಚೆತ್ತಾಗ, ನಿನಗೆ ಮಾಡಲು ಏನೋ ಇರುತ್ತದೆ. ನೀನು ಮರಳಿ ಬರುವಾಗ ನಿನಗೆ ಎಷ್ಟೊಂದು ಆಯಾಸವಾಗಿರುವುದೆಂದರೆ, ನೀನು ಮರಳಿ ನಿದ್ದೆಗೆ ಜಾರುವೆ. ನೀವು ನಿಮ್ಮನ್ನು ಕಾರ್ಯನಿರತರನ್ನಾಗಿರಿಸಿದರೆ, ನಿಮಗೆ ದೂರಲು ಸಮಯವಿರುವುದಿಲ್ಲ, ದುಃಖಪಡಲು ಸಮಯವಿರುವುದಿಲ್ಲ. ಕ್ರಿಯಾಶೀಲರಾಗಿರುವ ಜನರಿಗೆ ಖಿನ್ನರಾಗಿರಲು ಸಮಯವಿರುವುದಿಲ್ಲ. ಖಿನ್ನತೆಯನ್ನು ಅನುಭವಿಸುವುದು ಬಿಡುವಾಗಿರುವ ಜನರು ಮಾತ್ರ.
ಕುಳಿತುಕೊಂಡು ಜ್ಞಾನದಲ್ಲಿ ಸ್ವಲ್ಪ ಸಮಯವನ್ನು ಕಳೆ. ಯೋಗ ವಾಸಿಷ್ಠವನ್ನು ಓದು, ಅದು ಅಷ್ಟೊಂದು ಉತ್ತಮವಾದ ಜ್ಞಾನ. ನಾರದ ಭಕ್ತಿ ಸೂತ್ರ ಅಥವಾ ಅಷ್ಟಾವಕ್ರ ಗೀತೆಯ ಧ್ವನಿಸುರುಳಿಗಳನ್ನು ಕೇಳು. ಈ ಎಲ್ಲಾ ಜ್ಞಾನವು ಎಲ್ಲಾ ಸಮಯವೂ ನಿನ್ನ ಶಕ್ತಿಯನ್ನು ಹೆಚ್ಚಾಗಿಸಿ ಇಟ್ಟಿರುತ್ತದೆ ಮತ್ತು ಹಾಡು ಹೇಳು! ನೀನು ಒಬ್ಬಂಟಿಯಾಗಿ ಹಾಡಬಹುದು, ಅಥವಾ ಸ್ನಾನ ಮಾಡುವಾಗ ಐದು ನಿಮಿಷ ಹೆಚ್ಚಿಗೆ ತೆಗೆದುಕೋ ಮತ್ತು ಹಾಡು. ನೀನು ಸ್ನಾನ ಮಾಡುವಾಗ, ನೀನು ಹಾಡು ಹೇಳುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!
ಈಗ, ಸಂತೋಷವಾಗಿರಲು ನಾನು ನಿನಗೆ ಹಲವಾರು ಆಯ್ಕೆಗಳನ್ನು ನೀಡಿದ್ದೇನೆ. ಇದೆಲ್ಲದರ ಹೊರತಾಗಿ, ಸಂತೋಷವಾಗಿಲ್ಲದಿರಲು ನೀನು ನಿರ್ಧರಿಸಿರುವೆಯಾದರೆ, ನಾನು ಏನು ಹೇಳಲು ಸಾಧ್ಯ?
ನೀನು ಜಗತ್ತಿಗೆ ಬಣ್ಣವನ್ನು ಸೇರಿಸುವೆ; ವಿರುದ್ಧ ಮೌಲ್ಯಗಳು ಪೂರಕವಾಗಿವೆ. ಅದನ್ನು ಇರಿಸಿಕೋ. ನೀನಿರುವ ಹಾಗೆಯೇ ಇರು, ನಾನು ನಿನ್ನನ್ನು ಸ್ವೀಕರಿಸುತ್ತೇನೆ!
ನೀನು ಜ್ಞಾನವನ್ನು ಅರಗಿಸಿರುವುದಾದರೆ, ನೀನು ದೀನನಾಗಿರಲು ಸಾಧ್ಯವೇ ಇಲ್ಲ. ಜ್ಞಾನವೆಂದರೆ ಹೇಗಿರುತ್ತದೆಯೆಂದರೆ, ಹಿತಕರವಾದ ದಿನಗಳಿರುತ್ತವೆ ಮತ್ತು ಅಹಿತಕರವಾದ ದಿನಗಳಿರುತ್ತವೆ ಎಂಬುದು ನಿಮಗೆ ತಿಳಿದಿರುತ್ತದೆ. ಒಳ್ಳೆಯ ಜನರಿರುತ್ತಾರೆ ಮತ್ತು ಕೆಟ್ಟ ಜನರಿರುತ್ತಾರೆ. ಕೆಲವೊಮ್ಮೆ ನಿಮ್ಮ ಮಿತ್ರರು ನಿಮ್ಮ ಶತ್ರುಗಳಂತೆ ವರ್ತಿಸುತ್ತಾರೆ ಮತ್ತು ಕೆಲವೊಮ್ಮೆ ನಿಮ್ಮ ಶತ್ರುಗಳು ನಿಮ್ಮ ಒಳ್ಳೆಯ ಮಿತ್ರರಾಗುತ್ತಾರೆ. ಇದೆಲ್ಲವೂ ಜೀವನದ ಒಂದು ರೀತಿ, ಈ ವಿಷಯಗಳು ನಡೆಯುತ್ತವೆ. ನೀವು ಕೇಂದ್ರಿತರಾಗಲು ಮತ್ತು ದೃಢವಾಗಲು ಅವುಗಳು ನಿಮಗೆ ಸಹಾಯ ಮಾಡುತ್ತವೆ. ಆಗ, ಯಾವುದೇ ಬಿರುಗಾಳಿಗೂ ನಿಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ.
ನನ್ನ ಇತರ ಎಲ್ಲಾ ಮಾತುಗಳನ್ನು ನೀವು ಮರೆತರೂ ಸಹ, ನಾನು ಹೇಳಿದ ಈ ಐದು ವಾಕ್ಯಗಳು ನಿಮ್ಮೊಂದಿಗೆ ಉಳಿದರೆ, ನೀವದನ್ನು ಸಾಧಿಸಿದಿರಿ ಎಂದು ನಾನು ಹೇಳುತ್ತೇನೆ! ನೀವು ವಿಜಯಿಗಳಾದಿರಿ! ಅದಕ್ಕೇ ಇದು ಮಾಯೆಯೆಂದು ಕರೆಯಲ್ಪಡುವುದು. ಯಾವುದನ್ನು ನಾವು ನಿಜವೆಂದು ಅಂದುಕೊಳ್ಳುವೆವೋ, ಆ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ಅಸತ್ಯವಾದವು, ಒಂದು ಭ್ರಮೆ. ಇತರರ ಬಗ್ಗೆ, ನಮ್ಮ ಬಗ್ಗೆ ನಮ್ಮಲ್ಲಿರುವ ಪರಿಕಲ್ಪನೆಗಳು, ಅವುಗಳೆಲ್ಲವೂ ಅಸತ್ಯವಾದವು. ಅವುಗಳನ್ನೆಲ್ಲಾ ಕೊಡವಿಕೊಂಡು ಎಚ್ಚೆತ್ತುಕೊಳ್ಳಿ! ನೀವು ಕೇವಲ ಶಕ್ತಿಯ ಚಿಲುಮೆಗಳು, ಉತ್ಸಾಹದ ಚಿಲುಮೆಗಳೆಂಬುದನ್ನು ನೀವು ಕಾಣುವಿರಿ! ನೀವು ಪ್ರೇಮದ ಕಾರಂಜಿಯಾಗಿರುವಿರಿ!

ಪ್ರಶ್ನೆ: ಪ್ರೀತಿಯ ಗುರುದೇವ, ಎಟರ್ನಿಟಿ ಪ್ರಕ್ರಿಯೆ ಮತ್ತು ನಮಗೆ ಅದರಿಂದಾಗುವ ಲಾಭಗಳ ಬಗ್ಗೆ ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಎಟರ್ನಿಟಿ ಪ್ರಕ್ರಿಯೆಯೆಂದರೆ ಕೇವಲ ನಿಮ್ಮ ಸ್ಮರಣೆಯನ್ನು ಹಿಂದಕ್ಕೆ ಕೊಂಡುಹೋಗುವುದು, ಅಲ್ಲಿರುವ ಸಂಸ್ಕಾರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪುನಃ ಜೀವಿಸುವುದು ಹಾಗೂ ಅವುಗಳನ್ನು ನಿವಾರಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಅಂಗಾಂಶ ಕಸಿ ಮಾಡುವುದರ ಅಗತ್ಯವಿರುವವರಿಗೆ ಸಹಾಯವಾಗಲು ಜನರು ಶರೀರವನ್ನು ದಾನ ಮಾಡಬೇಕೆಂದು ನೀವು ಸಲಹೆ ಕೊಡುವಿರೇ?
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ, ನೀವು ನಿಮ್ಮ ಶರೀರದ ಅಂಗಗಳನ್ನು ದಾನ ಮಾಡಬಹುದು. ಅದರಲ್ಲೇನೂ ತಪ್ಪಿಲ್ಲ.

ಪ್ರಶ್ನೆ: ಗುರುದೇವ, ಪೂರ್ಣಾವಧಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾಗುವುದೆಂಬುದರ ಅರ್ಥವೇನು? ಮತ್ತು ಯಾವ ರೀತಿಯ ವ್ಯಕ್ತಿಯು ಅದನ್ನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ನೀನು ಒಬ್ಬ ಪೂರ್ಣಾವಧಿ ಶಿಕ್ಷಕನಾಗಬೇಕಾದ ಅಗತ್ಯವಿಲ್ಲ. ನೀನೊಬ್ಬ ಅರೆಕಾಲಿಕ ಶಿಕ್ಷಕನಾಗಬಹುದು. ಕಲಿಸುವುದು ನಿನ್ನ ಸಮಯದ ಕೇವಲ ಎರಡು ಘಂಟೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕೋರ್ಸುಗಳನ್ನು ಸಾಮಾನ್ಯವಾಗಿ ಸಂಜೆಗಳಲ್ಲಿ, ಜನರು ತಮ್ಮ ಕೆಲಸವನ್ನು ಮುಗಿಸಿರುವಾಗ ನಡೆಸಲಾಗುತ್ತದೆ. ರಚನೆಯನ್ನು ಆಧರಿಸಿ ನೀನು ಮೂರು ದಿನಗಳ, ನಾಲ್ಕು ದಿನಗಳ ಅಥವಾ ಐದು ದಿನಗಳವರೆಗಿನ ಕೋರ್ಸನ್ನು ತೆಗೆದುಕೊಳ್ಳಬಹುದು. ನೀನು ಒಂದು ತಿಂಗಳಿಗೆ ಒಂದು ಅಥವಾ ಎರಡು ಕೋರ್ಸುಗಳನ್ನು ಕಲಿಸಬಹುದು.
ಮೇಲಾಗಿ, ನೀನು ಎರಡು ಅಥವಾ ಮೂರು ಶಿಕ್ಷಕರನ್ನು ಜೊತೆಸೇರಿಸಿಕೊಂಡು, ಒಟ್ಟಾಗಿ ಕೋರ್ಸುಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನಿನ್ನ ಮೇಲೆ ಭಾರದ ಅನುಭವವಾಗುವುದಿಲ್ಲ. ಅದು ನಿನ್ನಿಂದ ಒತ್ತಡವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ನೀನು ನಿನ್ನ ಮಗುವನ್ನು ಯಾವುದೋ ಶಾಪಿಂಗ್ ಮಾಡಲು ಕರೆದೊಯ್ಯಬೇಕೆಂದು ಅಂದುಕೋ, ಆಗ ನೀನು, "ಓ, ನನಗೊಂದು ಕೋರ್ಸಿದೆ, ನಾನದನ್ನು ಹೇಗೆ ಮಾಡಲಿ" ಎಂದು ಯೋಚಿಸಬೇಕಾಗಿಲ್ಲ. ಆಗ, ಅದರ ಕಾಳಜಿ ವಹಿಸಲು ನಿನ್ನೊಂದಿಗೆ ಇನ್ನೊಬ್ಬರು ಶಿಕ್ಷಕರಿರುತ್ತಾರೆ. ಆದುದರಿಂದ, ಇಬ್ಬರು ಶಿಕ್ಷಕರು ಜೊತೆಯಲ್ಲಿ ಒಂದು ಕೋರ್ಸನ್ನು ತೆಗೆದುಕೊಳ್ಳಬೇಕೆಂಬುದಾಗಿ ನಾನು ಶಿಫಾರಸು ಮಾಡುತ್ತೇನೆ. ಆಗ ನೀವು ನಿಮ್ಮ ನೌಕರಿಯನ್ನು ಇಟ್ಟುಕೊಳ್ಳಬಹುದು, ವೃತ್ತಿಪರವಾಗಿ ನೀವೇನು ಮಾಡುತ್ತಿರುವಿರೋ ಅದರೊಂದಿಗೆ ಮುಂದುವರೆಯಬಹುದು ಮತ್ತು ಬದಿಯಲ್ಲಿ ನೀವು ಕಲಿಸಬಹುದು ಹಾಗೂ ಸುತ್ತಲಿನ ಜನರಿಗೆ ಸಹಾಯ ಮಾಡಬಹುದು.
ನಿಮಗೆ ಯಾವುದೇ ಅಗತ್ಯಗಳು (ವೈಯಕ್ತಿಕ) ಇಲ್ಲದಿರುವುದಾದರೆ, ಸುತ್ತಲೂ ಯಾವುದೇ ಒತ್ತಡವಿಲ್ಲದಿರುವುದಾದರೆ, ಆಗ ನೀವು ನಿಮ್ಮ ಜೀವನವನ್ನು ಮೀಸಲಿಡಬಹುದು. ನೀವು, "ನನಗಾಗಿ ಬೇಕಾಗಿರುವುದು ಬಹಳ ಸ್ವಲ್ಪ ಮಾತ್ರ, ಮತ್ತು ನಾನು ಪೂರ್ಣಾವಧಿ ಕಲಿಸಲು ಬಯಸುತ್ತೇನೆ" ಎಂದು ಹೇಳಬಲ್ಲಿರಾದರೆ, ಆಗ ನೀವು ಅದನ್ನು ಕೂಡಾ ಮಾಡಬಹುದು. ಆದರೆ ನಾನು ಹೇಳುವುದೆಂದರೆ, ಮೊದಲು ಒಬ್ಬ ಅರೆಕಾಲಿಕ ಶಿಕ್ಷಕನಾಗು, ಸ್ವಲ್ಪ ಕೆಲಸ ಮಾಡು.

ಶನಿವಾರ, ಡಿಸೆಂಬರ್ 29, 2012

ಪ್ರೇಮದ ಇನ್ನೊಂದು ಮುಖ


೨೯ ದಶಂಬರ ೨೦೧೨
ಬಾಡ್ ಅಂತೋಗಸ್ಟ್, ಜರ್ಮನಿ

ಪ್ರಶ್ನೆ: ಗುರುದೇವ, ಆಧ್ಯಾತ್ಮ ಮತ್ತು ಗಣಿತದ ನಡುವೆ ಇರುವ ಸಂಬಂಧದ ಬಗ್ಗೆ ನೀವು ದಯವಿಟ್ಟು ಮಾತನಾಡುತ್ತೀರಾ?
ಶ್ರೀ ಶ್ರೀ ರವಿ ಶಂಕರ್: ಆಧ್ಯಾತ್ಮದ ಲೆಕ್ಕವೆಂದರೆ, ೨+೧=೦. ನಿನಗಿದು ಅರ್ಥವಾಯಿತೇ? ಇದರ ಬಗ್ಗೆ ಯೋಚಿಸು!
ಶರೀರ ಮತ್ತು ಮನಸ್ಸು, ಇವೆರಡು ಒಂದು ಆತ್ಮದೊಂದಿಗೆ ಸೇರುತ್ತವೆ, ನಂತರ ಆಮೇಲೆ ತಿಳಿಯಲು ಇನ್ನೇನೂ ಉಳಿಯುವುದಿಲ್ಲ. ಅದುವೇ ಇದು!

ಪ್ರಶ್ನೆ: ಪ್ರೀತಿಯ ಗುರುದೇವ, ಯೇಸುವಿನ ಬಗ್ಗೆ, ಅವನ ಜನ್ಮದ ಬಗ್ಗೆ ಮತ್ತು ಅವನ ಇರುವಿಕೆಯ ಬಗೆಗಿನ ಅರ್ಥದ ಬಗ್ಗೆ ಹೆಚ್ಚು ಮಾತನಾಡಲು ನಿಮ್ಮಲ್ಲಿ ಕೇಳಿಕೊಂಡ ಹಲವಾರು ಪ್ರಶ್ನೆಗಳಿವೆ. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಮಾತನಾಡಿ. 
ಶ್ರೀ ಶ್ರೀ ರವಿ ಶಂಕರ್: ಯೇಸುವು ಪ್ರೇಮದ ಸಾಕಾರ ರೂಪ.
ಅವನು ಎಷ್ಟೊಂದು ಅವಮಾನ ಹಾಗೂ ನೋವನ್ನು ಅನುಭವಿಸಬೇಕಾಗಿ ಬಂತು ಎಂಬುದನ್ನು ನೋಡಿ. ಯೇಸುವು ಹಿಂಸೆ ಮತ್ತು ನೋವನ್ನು ಬಹಳಷ್ಟು ಸಮಚಿತ್ತತೆ ಮತ್ತು ಶಾಂತತೆಯಿಂದ ತೆಗೆದುಕೊಂಡನು. ಅವನು ಎಲ್ಲರಿಂದಲೂ ದೂಷಿಸಲ್ಪಟ್ಟನು. ಅವನ ಸ್ವಂತ ಶಿಷ್ಯರು ಕೂಡಾ ದೂರ ಓಡಿದರು.
ಆ ಸಮಯದಲ್ಲಿ ಅದು ಅವನಿಗೆ ಎಷ್ಟೊಂದು ನೋವನ್ನುಂಟುಮಾಡಿರಬಹುದೆಂದು ಊಹಿಸಿ ನೋಡಿ. ನಿಮ್ಮ ಭಕ್ತರಿಗೆ ನೀವು ನಿಮಗೆ ಸಾಧ್ಯವಾದದ್ದನ್ನೆಲ್ಲಾ ಮಾಡುವಾಗ, ಮತ್ತು ಒಂದು ದಿನ ಅವರು ನಿಮ್ಮನ್ನು ಬಿಟ್ಟು ಓಡಿ ಹೋದರೆ, ಅದು ಯಾರಾದರೂ ಊಹಿಸಬಹುದಾದ ಅತ್ಯಂತ ಭೀಕರ ನೋವಾಗಿದೆ. ಆದರೆ ಯೇಸುವಿನ ಜೀವನವು ಹಾಗಿತ್ತು, ಮತ್ತು ಕೊನೆಯಲ್ಲಿ ಎಲ್ಲರೂ ಅವನನ್ನು ತೊರೆದಾಗ, ಅವನು ದೇವರಲ್ಲಿ, "ನೀನು ಕೂಡಾ ನನ್ನನ್ನು ಪರಿತ್ಯಜಿಸಿರುವೆಯಾ?" ಎಂದು ಕೂಡಾ ಕೇಳಿದನು. ಹೀಗೆ, ಅವನ ಜೀವನವು ಒಂದು ಕಡೆಯಲ್ಲಿ ಸಂಪೂರ್ಣ ನೋವಿನದ್ದು ಮತ್ತು ಇನ್ನೊಂದು ಕಡೆಯಲ್ಲಿ ಪ್ರೇಮದ್ದಾಗಿತ್ತು.
ಈಗ, ಪ್ರೇಮಿಸುವ ಯಾರೇ ಆದರೂ ಅಷ್ಟೊಂದು ನೋವಿಗೆ ಒಳಗಾಗಬೇಕೆಂಬುದು ಇದರ ಅರ್ಥವಲ್ಲ. ಅದು ಹಾಗಲ್ಲ. ಜನರಿಗೆ ಅವನ ಸಂದೇಶವು ಯಾವತ್ತೂ ಇದಾಗಿತ್ತು, "ಯಾವುದರ ಬಗ್ಗೆಯೂ ಅಂಧಾಭಿಮಾನಿಗಳಾಗಬೇಡಿ. ಅಳೆಯಬೇಡಿ ಮತ್ತು ಕ್ರೂರಿಗಳಾಗಬೇಡಿ. ಎಲ್ಲರ ಕಡೆಗೂ ಪ್ರೇಮದಿಂದ ಮತ್ತು ಸಹಾನುಭೂತಿಯಿಂದಿರಿ, ಯಾಕೆಂದರೆ ದೇವರೇ ಪ್ರೇಮ."
ಆ ಕಾಲದಲ್ಲಿ ಜನರು ತಲೆಯಲ್ಲಿ ಜೀವಿಸುತ್ತಿದ್ದರು. ಅವರು ಕೇವಲ ಪಾಪಗಳು ಮತ್ತು ಶಿಕ್ಷೆಯ ಬಗ್ಗೆ ಯೋಚಿಸುತ್ತಿದ್ದರು. ಅವರು ಕೇವಲ ಸ್ವರ್ಗದ ಕನಸು ಕಾಣುತ್ತಿದ್ದರು ಮತ್ತು ನರಕದ ಬಗ್ಗೆ ಭಯಭೀತರಾಗಿದ್ದರು.
ಯೇಸುವು ಬಂದು ಹೇಳಿದನು, "ವರ್ತಮಾನದ ಕ್ಷಣದಲ್ಲಿ ಜೀವಿಸಿರಿ. ಈಗ ಜೀವಿಸಿ ಮತ್ತು ಎಲ್ಲರ ಕಡೆಗೂ ಪ್ರೀತಿಯಿಂದಲೂ ಕಾಳಜಿಯಿಂದಲೂ ಇರಿ. ದೇವರೆಂದರೆ ಹೆದರುವ ಅಗತ್ಯವಿಲ್ಲ ಯಾಕೆಂದರೆ ಅವನು ನಮ್ಮ ತಂದೆ, ಮತ್ತು ಒಬ್ಬ ತಂದೆಯಂತೆ ಅವನು ನಮ್ಮ ಭಾಗವಾಗಿದ್ದಾನೆ. ನನ್ನ ತಂದೆ ಮತ್ತು ನಾನು ಒಂದೇ ಆಗಿದ್ದೇವೆ."
ಆ ಕಾಲದಲ್ಲಿ ಅವನು ಬಹಳ ಕ್ರಂತಿಕಾರಿಯಾದ ಒಂದು ಸಂದೇಶವನ್ನು ನೀಡಿದನು ಮತ್ತು ಪಯಣವು ತಲೆಯಿಂದ ಹೃದಯಕ್ಕೆ ಇರುವುದು, ಹಾಗೂ ತಲೆಯಿಂದ ಸ್ವರ್ಗಗಳಿಗೆ ಮತ್ತು ನಕ್ಷತ್ರಗಳಿಗೆ ಅಲ್ಲ ಎಂಬುದನ್ನು ಜನರು ತಿಳಿಯುವಂತೆ ಮಾಡಿದನು. ಅವನು ಆ ಸಂದೇಶವನ್ನು ನೀಡಿದನು, ಆದರೆ ಎಪ್ಪತ್ತು ವರ್ಷಗಳ ವರೆಗೆ ಅವನು ಹೇಳಿದುದನ್ನು ಯಾರೂ ದಾಖಲಿಸಲಿಲ್ಲ.
ಅವನು ಮರಣ ಹೊಂದಿ ಎಪ್ಪತ್ತು ವರ್ಷಗಳ ಬಳಿಕ ಬೈಬಲ್ ಬರೆಯಲ್ಪಟ್ಟಿತು ಎಂಬುದನ್ನು ನಾನು ಪಂಡಿತರಿಂದ ಕೇಳಿರುವೆನು. ಆದುದರಿಂದ ಆಮೇಲೆ, ಮೂಲ ಗ್ರಂಥದ  ಹಲವಾರು ವಿಕೃತಿಗಳು ಇದ್ದಿರುವ ಸಾಧ್ಯತೆಯಿದೆ. ಅದಕ್ಕಾಗಿಯೇ ಕ್ರೈಸ್ತ ಧರ್ಮದಲ್ಲಿ, ತಮ್ಮದೇ ನಿಜವಾದುದೆಂದು ಪ್ರತಿಪಾದಿಸುವ ೭೨ ಪಂಥಗಳು ಇರುವುದು.
ಯೇಸು ಕ್ರಿಸ್ತನಿರುವುದು ಒಬ್ಬನೇ ಒಬ್ಬ, ಆದರೆ ೭೨ ವಿವಿಧ ಪಂಥಗಳಿವೆ ಮತ್ತು ಅವರೆಲ್ಲರೂ ಬೈಬಲನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವರು ಅದರ ಮುಖ್ಯವಾದ ಸಾರವನ್ನು ಅರ್ಥೈಸಿಕೊಳ್ಳಲು ಮತ್ತು ಪರಸ್ಪರರೊಂದಿಗೆ ಧಾರ್ಮಿಕ ಹೊಡೆದಾಟಗಳಲ್ಲಿ ಬೀಳದಿರಲು ಪ್ರಯತ್ನಿಸಬೇಕು, ಯಾಕೆಂದರೆ ಅದು ಪ್ರಪಂಚದಲ್ಲಿ ಯಾವತ್ತೂ ಕೊನೆಯಾಗದು.
ಇದುವೇ ಭಗವಾನ್ ಬುದ್ಧನೊಂದಿಗೂ ಆಯಿತು. ಒಬ್ಬನೇ ಒಬ್ಬ ಭಗವಾನ್ ಬುದ್ಧನಿದ್ದನು, ಆದರೆ ಬೌದ್ಧ ಧರ್ಮದಲ್ಲಿ ೩೨ ಪಂಥಗಳಿದ್ದು, ತಮ್ಮದೇ ನಿಜವಾದ ಬೌದ್ಧ ಧರ್ಮವೆಂದೂ, ತಮ್ಮ ವ್ಯಾಖ್ಯಾನವೇ ಬುಧ್ಧನ ಅಸಲೀ ಬೋಧನೆಯೆಂದೂ ಪ್ರತಿಪಾದಿಸುತ್ತಾರೆ.
ಇದನ್ನೇ ಸಂತ ಮೊಹಮ್ಮದನ ವಿಷಯದಲ್ಲೂ ಕಾಣಬಹುದು. ಇಸ್ಲಾಂನಲ್ಲಿ ಐದು ಪಂಥಗಳಿವೆ ಮತ್ತು ಅವರು ಪರಸ್ಪರರನ್ನು ಇಷ್ಟಪಡುವುದಿಲ್ಲ. ವಾಸ್ತವವಾಗಿ, ಅವರು ಪರಸ್ಪರ ವಿರೋಧಿಸುತ್ತಾರೆ.
ಮಾನವನಿಗೆ, ನಿಜವಾಗಿ ಅನುಭವಿಸದೆಯೇ ಪರಿಕಲ್ಪನೆಗಳಿಗೆ ಜೋತುಬೀಳುವ ಈ ಒಂದು ಅಭ್ಯಾಸವಿದೆ. ಜನರು ಆ ಪರಿಕಲ್ಪನೆಗಳನ್ನು ತಮ್ಮ ಗುರುತಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ಗುರುತಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಲು ಅವರು ಸಿದ್ಧರಿರುತ್ತಾರೆ.
ಯೇಸುವಿನ ಸಂದೇಶವು, "ಎಚ್ಚೆತ್ತುಕೊಳ್ಳಿ ಮತ್ತು ಸ್ವರ್ಗದ ಸಾಮ್ರಾಜ್ಯವು ನಿಮ್ಮೊಳಗಿದೆ ಎಂಬುದನ್ನು ಕಂಡುಕೊಳ್ಳಿ. ದೇವರೆಂದರೆ ಪ್ರೇಮ ಎಂಬುದನ್ನು ತಿಳಿಯಿರಿ" ಎಂದಾಗಿತ್ತು.
ಆದುದರಿಂದ, ಒಂದು ಮಗುವಿನಂತಿರಿ. ಒಂದು ಮಗುವಿನಲ್ಲಿ ಯಾವುದೇ ಪೂರ್ವಾಗ್ರಹಗಳಿರುವುದಿಲ್ಲ. ನೀವೊಂದು ಮಗುವಿನಂತಾಗದಿದ್ದಲ್ಲಿ, ನೀವು ಸ್ವರ್ಗವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಈ ಸಂದೇಶವು ಕಳೆದುಹೋಗುತ್ತಿದೆ. ಒಂದು ಮಗುವಿನಂತಹ ಮುಗ್ಧತೆ, ಮತ್ತು ಎಲ್ಲರೊಂದಿಗೂ ಒಂದು ಆತ್ಮೀಯತೆಯ ಭಾವನೆಯು ಇಲ್ಲವಾಗಿದೆ. ಇದಕ್ಕಾಗಿಯೇ ಧರ್ಮದ ಹೆಸರಿನಲ್ಲಿ ಅಷ್ಟೊಂದು ಅಪರಾಧಗಳಾಗುತ್ತಿರುವುದು.
ಧರ್ಮವನ್ನು ರಾಜಕೀಯ ಅಧಿಕಾರದೊಂದಿಗೆ ಒಂದುಗೂಡಿಸಲು ಆರಂಭಿಸಿದಾಗ ಅದು ಸಮತಾವಾದಕ್ಕೆ ದಾರಿ ಮಾಡಿತು. ಇದೆಲ್ಲವೂ ಆಗಿರುವುದು ಯಾಕೆಂದರೆ ನಾವಾಗಿರುವ ಆ ಅಂತರಿಕ ಪ್ರಕಾಶವನ್ನು, ನಮ್ಮ ಆಂತರ್ಯದ ಪ್ರಕಾಶವನ್ನು ನಾವು ಅರಿಯೆವು.

ಪ್ರಶ್ನೆ: ಪ್ರೀತಿಯ ಗುರುದೇವ, ಏನನ್ನೂ ಮಾಡದಿರುವುದು ನಮಗೆ ಅಷ್ಟೊಂದು ಆನಂದ ಮತ್ತು ಸಂತೋಷವನ್ನು ತರುವುದಾದರೆ, ನಾವು ಏನನ್ನಾದರೂ ಮಾಡುವುದಾದರೂ ಯಾಕೆ?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಸ್ವಭಾವವೆಂದರೆ, ಏನನ್ನೂ ಮಾಡದೆಯೇ ದೀರ್ಘ ಕಾಲವಿರಲು ನಿಮಗೆ ಸಾಧ್ಯವಿಲ್ಲ.
ನಿಮಗೆ ಗೊತ್ತಿದೆಯೇ, ಆನಂದವು ಯಾವತ್ತೂ ವಿರೋಧಾತ್ಮಕ ಸಿಗುತ್ತದೆ ಅಥವಾ ತಿಳಿಯುತ್ತದೆ. ನೀವು ಏನನ್ನಾದರೂ ಮಾಡುತ್ತಿರುವಾಗ ಮತ್ತು ನೀವು ನಿಮ್ಮ ೧೦೦% ಪ್ರಯತ್ನವನ್ನು ಹಾಕುವಾಗ ಮಾತ್ರ, ಏನನ್ನಾದರೂ ಮಾಡದಿರುವುದರ ಬೆಲೆಯು ನಿಮಗೆ ತಿಳಿಯುತ್ತದೆ. ನೋಡಿ, ನೀವು ಚುರುಕಾಗಿ ಮತ್ತು ಕ್ರಿಯಾಶೀಲರಾಗಿರುವಾಗ ಮಾತ್ರ ನಿಮಗೆ ಆಳವಾದ ವಿಶ್ರಾಂತಿ ಆಗುತ್ತದೆ. ನೀವು ಇಡೀ ದಿನ ಸುಮ್ಮನೇ ಹಾಸಿಗೆಯಲ್ಲಿ ಮಲಗಿದ್ದರೆ ಮತ್ತು ಏನನ್ನೂ ಮಾಡದೇ ಇದ್ದರೆ, ಆಗ ನಿಮಗೆ ರಾತ್ರಿ ನಿದ್ರಿಸಲು ಸಾಧ್ಯವಾಗದು. ಆದುದರಿಂದ ನೀವೇನು ಮಾಡಬೇಕೋ ಅದನ್ನು ಮಾಡುವುದು ಅಗತ್ಯವಾಗಿದೆ.
ನಾವು ಮಾಡಬೇಕಾಗಿರುವ ನಿರ್ದಿಷ್ಟ ಕರ್ಮಗಳಿವೆ ಮತ್ತು ಒಮ್ಮೆ ಕರ್ಮಗಳನ್ನು ಮಾಡಿಯಾದರೆ ಆಗ, ಮಾಡುವ ಹಾಗೂ ಚಟುವಟಿಕೆಯಿಂದಿರುವ ಅವಸ್ಥೆಗಳ ನಡುವೆ, ಏನನ್ನೂ ಮಾಡದಿರುವ ಆ ಅವಸ್ಥೆಯನ್ನು ಕೂಡಾ ನಾವು ಅನುಭವಿಸುವೆವು.

ಪ್ರಶ್ನೆ: ಗುರುದೇವ, ಬಯಕೆಗಳು ಸೃಷ್ಟಿಸಲ್ಪಡುತ್ತವೆಯೇ ಮತ್ತು ಅವುಗಳನ್ನು ತೆಗೆದುಹಾಕಬಹುದೇ? ಹಾಗಿದ್ದರೆ, ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸುಮ್ಮನೇ ಹಿಂತಿರುಗಿ ನೋಡು ಮತ್ತು ನಿನ್ನ ಬಾಲ್ಯದಿಂದ ಹಿಡಿದು ನಿನ್ನ ಜೀವನವನ್ನು ಅವಲೋಕಿಸಿ ನೋಡು. ಹಿಂದೆ ನಿನ್ನಲ್ಲಿ ಹಲವಾರು ಬಯಕೆಗಳಿದ್ದವು; ಅವುಗಳಲ್ಲಿ ಕೆಲವನ್ನು ನೀನು ಪೂರೈಸಿರುವೆ ಮತ್ತು ಅವುಗಳಲ್ಲಿ ಹಲವನ್ನು ನೀನು ಬಿಟ್ಟುಬಿಟ್ಟೆ.
ಒಬ್ಬ ಮಗುವಾಗಿ, ಒಬ್ಬ ಹದಿ ಹರೆಯದವನಾಗಿ ಅಥವಾ ಒಬ್ಬ ಯುವಕನಾಗಿ ನಿನ್ನ ತಲೆಯಲ್ಲೆದ್ದ ಪ್ರತಿಯೊಂದು ಬಯಕೆಯನ್ನೂ ಪೂರೈಸಲು ನಿನಗೆ ಸಾಧ್ಯವಾಗಲಿಲ್ಲ. ಆ ರೀತಿ ಆಗಿರುತ್ತಿದ್ದರೆ, ನೀನು ಹುಚ್ಚನಾಗಿರುತ್ತಿದ್ದೆ. ನೀನು ದುಃಖಿತನಾಗಿರುತ್ತಿದ್ದೆ. ಹಾಗಾಗದಿದ್ದುದು ದೇವರ ದಯೆ, ಹಾಗಾಗಲಿಲ್ಲ. ಅದಕ್ಕಾಗಿಯೇ, ಏನಾಗಬೇಕಾಗಿತ್ತೋ ಅವುಗಳು ಮಾತ್ರ ನಿನಗೆ ಆಗಲು ತೊಡಗಿದವು.
ನಿನಗಾದ ಕಹಿ ಅನುಭವಗಳು ನಿನ್ನ ವ್ಯಕ್ತಿತ್ವಕ್ಕೆ ಆಳವನ್ನು ನೀಡಿವೆ, ಅದೇ ಸಮಯದಲ್ಲಿ ಒಳ್ಳೆಯ ಅನುಭವಗಳು ನಿನ್ನ ವ್ಯಕ್ತಿತ್ವವನ್ನು ವಿಶಾಲಗೊಳಿಸಿವೆ. ಆದುದರಿಂದ ಅವುಗಳೆಲ್ಲವೂ ನಿನ್ನ ಜೀವನಕ್ಕೆ ಕೊಡುಗೆ ಸಲ್ಲಿಸಿವೆ. ಒಳ್ಳೆಯ ಅನುಭವಗಳಿರಲಿ ಅಥವಾ ಕೆಟ್ಟ ಅನುಭವಗಳಿರಲಿ, ಅವೆರಡೂ ನಿನ್ನ ವ್ಯಕ್ತಿತ್ವವನ್ನು ಬಲಗೊಳಿಸುವುದರಿಂದ ಅವೆರಡನ್ನೂ ಸ್ವಾಗತಿಸಬೇಕು. ಅವುಗಳೆರಡೂ ಒಂದು ಕಲ್ಪಿಸಲಾಗದ ರೀತಿಯಲ್ಲಿ ನಿನ್ನ ಇರುವಿಕೆಗೆ ಕೊಡುಗೆ ಸಲ್ಲಿಸುತ್ತವೆ.
ಅವುಗಳೆಲ್ಲವೂ ನಿನ್ನ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸ) ಭಾಗವೆಂಬುದನ್ನು ಸುಮ್ಮನೇ ತಿಳಿ. ಆದುದರಿಂದ, ಹಿತಕರವಾದ ಅನುಭವಗಳು ಕೂಡಾ ನಿನ್ನ ಸಾಧನೆಯ ಒಂದು ಭಾಗ. ಅದುವೇ, ನೀನು ಹಾದು ಹೋದ ಅಹಿತಕರ ಘಟನೆಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ಜನರು ನಿನಗೆ ಹೊಗಳ ಬಹುದು ಅಥವಾ ಜನರು ನಿನ್ನನ್ನು ಅವಮಾನಗೊಳಿಸುವುದು, ಇವುಗಳೆರಡೂ ನಿನ್ನ ಸಾಧನೆಯ ಒಂದು ಭಾಗ. ಎರಡೂ ಸಂದರ್ಭಗಳಲ್ಲಿ ನೀನು ಗಟ್ಟಿಯಾಗುವೆ, ನೀನು ಕೇಂದ್ರಿತನಾಗುವೆ ಮತ್ತು ನೀನು ಯಾವ ರೀತಿಯಲ್ಲಿ ಬೆಳೆಯಬೇಕೋ ಆ ರೀತಿಯಲ್ಲಿ ಬೆಳೆಯುವೆ.
ಈ ಎಲ್ಲಾ ಹೊಗಳಿಕೆ ಮತ್ತು ಅವಮಾನ, ಎಲ್ಲವೂ ಆಗುವುದು ಕೇವಲ ಭೂಗ್ರಹದಲ್ಲಿ ಮಾತ್ರ, ಮತ್ತು ನಾವು ಅವುಗಳನ್ನು ಎದುರಿಸಬೇಕು ಹಾಗೂ ಮುನ್ನಡೆಯಬೇಕು. ಒಂದು ಶಕ್ತಿಶಾಲಿ ಆತ್ಮ, ಒಬ್ಬ ಶಕ್ತಿಶಾಲಿ ವ್ಯಕ್ತಿಯಾಗು. ಅದು ನಿಜವಾದ ಶಕ್ತಿ.
ಜೀವನದಲ್ಲಿನ ಪ್ರತಿಯೊಂದು ಘಟನೆಯ ಮೂಲಕವೂ ಕಿರುನಗೆ ಸೂಸುತ್ತಾ ಹಾದುಹೋಗಲು ನಿನಗೆ ಸಾಧ್ಯವೇ? ಅದು ಇದೆಲ್ಲದರ ಉದ್ದೇಶ. ನಿನಗೆ ನಿನ್ನ ಕಿರುನಗೆಯನ್ನು ಇಟ್ಟುಕೊಳ್ಳಲು ಸಾಧ್ಯವಿದೆಯೇ? ಅದು ಕಷ್ಟ, ನನಗೆ ತಿಳಿದಿದೆ, ಆದರೆ ನೀನದನ್ನು ಮಾಡಬೇಕು.
ನೀವು ಯಾವುದರಿಂದಲಾದರೂ ಓಡಿಹೋಗಲು ಪ್ರಯತ್ನಿಸಿದರೆ, ಅದು ನಿಮ್ಮನ್ನು ಮತ್ತಷ್ಟು ಬೆನ್ನಟ್ಟುವುದಷ್ಟೆ. ಈ ಜೀವನದಲ್ಲಿ ಅಲ್ಲವಾದರೆ, ಅದು ಮುಂದಿನ ಜೀವನದಲ್ಲಿ ಆಗುವುದು. ಅದಕ್ಕಾಗಿಯೇ, ಯಾವುದು ಈಗ ಆಗಬೇಕಾಗಿದೆಯೋ ಅದೆಲ್ಲವನ್ನೂ ಈಗಲೇ ಮಾಡಿ ಮುಗಿಸಿ ಎಂದು ಹೇಳಲಾಗಿರುವುದು ಮತ್ತು ಒಂದು ದೊಡ್ಡ ನಗುವಿನೊಂದಿಗೆ, ಧೈರ್ಯದೊಂದಿಗೆ ಮತ್ತು ಉತ್ಸಾಹದೊಂದಿಗೆ ಮುನ್ನಡೆಯಿರಿ.

ಪ್ರಶ್ನೆ: ಪ್ರೀತಿಯ ಗುರುದೇವ, ಹಾತೊರೆತವು ಅಷ್ಟೊಂದು ನೋವುಂಟುಮಾಡುವುದು ಯಾಕೆ? ದೇವರಿಗಾಗಿರುವ ಮತ್ತು ಅನಂತತೆಗಾಗಿರುವ ಹಾತೊರೆತದ ಬಗ್ಗೆ ನಾನು ಉಲ್ಲೇಖಿಸುತ್ತಿರುವುದು. ನಾವು ಎಲ್ಲಿಂದ ಬಂದಿರುವೆವು?
ಶ್ರೀ ಶ್ರೀ ರವಿ ಶಂಕರ್: ನೋಡು, ಪ್ರೇಮ ಮತ್ತು ನೋವು ಬಹಳ ನಿಕಟವಾದವು ಮತ್ತು ಕೈ ಕೈಹಿಡಿದು ಹೋಗುತ್ತವೆ.
ನೀವು ಯಾರನ್ನಾದರೂ ಪ್ರೀತಿಸುವಾಗ ಕೆಲವೊಮ್ಮೆ ನಿಮಗೆ ನೋವಾಗುವುದು. ಅದು ಈ ರೀತಿ ಆಗುತ್ತದೆ ಮತ್ತು ನಾವು ಅದರೊಡನೆ ಬಾಳಬೇಕು. ಆದುದರಿಂದ ಅದರಿಂದ ದೂರ ಓಡಬೇಡ. ನೋವಾಗುವುದು ಪ್ರೀತಿಯ ಒಂದು ಭಾಗವಾಗಿದೆ.
ಇವತ್ತು ಒಬ್ಬರು ಬಂದು ನನ್ನಲ್ಲಿ ಹೇಳಿದರು, "ನನ್ನ ಮಗ ಹೀಗೆ, ನನ್ನ ಮಗ ಹಾಗೆ; ಅವನು ನಾನು ಹೇಳುವುದನ್ನು ಕೇಳುವುದಿಲ್ಲ."
ನೋಡಿ, ಇದು ಕೇವಲ ಸ್ವಾಭಾವಿಕ. ತಾಯಿಯು ಮಗುವಿಗೆ ಬಹಳಷ್ಟು ಮಾಡಿದ್ದಾಳೆ ಮತ್ತು ಮಗುವು ಅವಳು ಹೇಳುವುದನ್ನು ಕೇಳದೇ ಇರುವಾಗ, ಅವಳಿಗೆ ಬಹಳ ನೋವಾಗುತ್ತದೆ.
ಸ್ವಾಭಾವಿಕವಾಗಿಯೇ, ತಾಯಿಯು ತನ್ನ ಮಗನಿಗಾಗಿ ಅತ್ಯುತ್ತಮವಾದುದನ್ನು ಬಯಸುತ್ತಾಳೆ, ಅದೇ ಸಮಯದಲ್ಲಿ ಮಗನು, ತನಗೆ ಯಾವುದು ಒಳ್ಳೆಯದೆಂಬುದು ತನಗೆ ತಿಳಿದಿದೆಯೆಂದು ಯೋಚಿಸುತ್ತಾನೆ. ಆದುದರಿಂದ ಅವನು ತಾಯಿಯು ಹೇಳಿದುದನ್ನು ಕೇಳಲು ಬಯಸುವುದಿಲ್ಲ. ಈಗ, ಈ ಪರಿಸ್ಥಿತಿಯಲ್ಲಿ ನೀವೇನು ಮಾಡುವುದು?
ತಾಯಿಯು ನನ್ನ ಬಳಿ ಬಂದು ಹೇಳಿದಳು, "ಗುರುದೇವ, ನಾನೇನು ಮಾಡಬೇಕೆಂದು ನೀವು ಸಲಹೆ ನೀಡುವಿರಿ?"
ನಾನು ಅವಳಿಗೆ ಅಂದೆ, "ನೋಡು, ನಾನು ಎಲ್ಲರಿಗೂ ಅತ್ಯುತ್ತಮವಾದುದನ್ನು ಬಯಸುತ್ತೇನೆ. ಆದುದರಿಂದ, ನಿನ್ನ ಮಗನಿಗೆ ಅತ್ಯುತ್ತಮವಾದುದನ್ನು ಬಯಸುತ್ತೇನೆ ಮತ್ತು ನಿನಗೆ ಕೂಡಾ ನಾನು ಅತ್ಯುತ್ತಮವಾದುದನ್ನು ಬಯಸುತ್ತೇನೆ."
ಇದಕ್ಕೆ ಅವಳು ಉತ್ತರಿಸಿದಳು, "ಆದರೆ ಗುರುದೇವ, ನನ್ನ ಮಗನು ನನ್ನ ಮಾತಿಗಿಂತ ಹೆಚ್ಚು ನಿಮ್ಮ ಮಾತನ್ನು ಕೇಳುತ್ತಾನೆ."
ನಾನಂದೆ, "ಈಗ ಅವನು ನಿನ್ನ ಮಾತಿಗಿಂತ ಹೆಚ್ಚು ನನ್ನ ಮಾತನ್ನು ಕೇಳುವುದಾದರೆ, ಆಗ ಅದರರ್ಥ, ಗುರುದೇವರಿಗೆ ಯಾವುದೇ ಸ್ವಾರ್ಥದ ಉದ್ದೇಶವಿಲ್ಲವೆಂದು ಮತ್ತು ನಾನು ಸರಿಯಾದುದನ್ನು ಹೇಳುವೆನೆಂದು ಅವನು ಖಚಿತವಾಗಿ ತಿಳಿದಿರುವನೆಂದು."
ನಾನು ಮಗನಿಗೆ ಹೇಳಿದೆ, "ನೀನು ನಿನಗೇನು ಬೇಕೋ ಅದನ್ನು ಮಾಡು."
ನೋಡಿ, ನಾನು ಜನರಿಗೆ, "ನೀನು ಇದನ್ನು ಮಾಡು, ನೀನು ಅದನ್ನು ಮಾಡು" ಎಂದು ಹೇಳುವುದಿಲ್ಲ.
ಆದುದರಿಂದ ನೋವಾಗುವುದು ನಿಶ್ಚಯವಾಗಿ ಪ್ರೇಮದ ಒಂದು ಭಾಗ. ನೋವು ತಪ್ಪಿಸಿಕೊಳ್ಳಲಾಗದುದು.
ಪ್ರೇಮವಿರುವಾಗ, ಅದು ಕೆಲವೊಮ್ಮೆ ನೋವನ್ನೂ ತರುತ್ತದೆ. ಆದರೆ ನೋವಿಗೆ ಹೆದರಿ ಪ್ರೀತಿಸುವುದನ್ನು ನಿಲ್ಲಿಸುವುದು ಮತ್ತು ಸಂಪೂರ್ಣವಾಗಿ ಮನವನ್ನು ಮುಚ್ಚಿ ಬಿಡುವುದು ಮೂರ್ಖತನವಾಗಿದೆ, ಇದನ್ನು ಹಲವಾರು ಜನರು ಮಾಡುತ್ತಾರೆ. ಕೆಲವೊಮ್ಮೆ ಅದು ನೋವುಂಟುಮಾಡುವುದು ಎಂಬ ಕಾರಣಕ್ಕಾಗಿ ಪ್ರೇಮದಲ್ಲಿರುವುದನ್ನು ನಿಲ್ಲಿಸುವುದು ಒಂದು ಬುದ್ಧಿವಂತ ನಿರ್ಧಾರ ಅಲ್ಲವೇ ಅಲ್ಲ. ಇದು ಒಬ್ಬನು ಯಾವತ್ತಾದರೂ ಮಾಡಬಹುದಾದ ಅತ್ಯಂತ ಮೂರ್ಖ ಸಂಗತಿ. ಆದರೆ ಆ ಚಿಕ್ಕ ನೋವಿನ ಮೂಲಕ ತೇಲಿಕೊಂಡು ಮುನ್ನಡೆಯುವವರು ನಿಜವಾದ, ಆನಂದದಾಯಕ ಪ್ರೇಮವನ್ನು ಪಡೆಯುವರು.

ಪ್ರಶ್ನೆ: ಗುರುದೇವ, ಮೋಕ್ಷವನ್ನು ಪಡೆಯಲು ಮಾನವರು ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ಯಾಕೆ ಹಾದುಹೋಗಬೇಕು?
ಶ್ರೀ ಶ್ರೀ ರವಿ ಶಂಕರ್: ಅದರ ಅಗತ್ಯವಿದೆ, ಈಗಿನ ಮಟ್ಟಿಗೆ ಕೇವಲ ಅದನ್ನು ತಿಳಿ.

ಗುರು ಸಾಮೀಪ್ಯ


೨೯ ಡಿಸೆಂಬರ್ ೨೦೧೩
ಬಾಡ್ ಆಂಟೋಗಾಸ್ಟ್, ಜರ್ಮನಿ

ಪ್ರ: ಉಪನಿಷತ್ತಿನಲ್ಲಿ ಗುರುಗಳ ಸಾಮೀಪ್ಯದ ಬಗ್ಗೆ ತಿಳಿಸಿದಿರಿ. ಇದರ ಅರ್ಥ ಭೌತಿಕ ಸಾಮೀಪ್ಯವೂ ಆಗಿದೆಯೇ?
ಶ್ರೀಶ್ರೀರವಿಶಂಕರ್: ನಾವಿಲ್ಲೇ ಹತ್ತಿರವೇ ಕುಳಿತ್ತಿದ್ದೇವೆ, ಅಲ್ಲವೇ?
ಮನಸ್ಸು ಮತ್ತು ಹೃದಯದಿಂದ ಸಾಮೀಪ್ಯದ ಅನುಭವವಾಗುವುದು. ನಿಮ್ಮ ಮನಸ್ಸು ಬೇರೆಲ್ಲೋ ಇದ್ದರೆ, ಅನುಮಾನ ಮತ್ತು ನಕಾರಾತ್ಮಕತೆಯಿಂದ ತುಂಬಿದ್ದಾಗ, ನನ್ನ ಪಕ್ಕ ಕುಳಿತ್ತಿದ್ದರೂ ಪ್ರಯೋಜನವಾಗುವುದಿಲ್ಲ.
ಆದರೆ ನಿಮ್ಮ ಹೃದಯ ಸ್ಫುಟವಾಗಿದ್ದು, ಮನಸ್ಸು ಪರಿಶುದ್ಧವಾಗಿದ್ದು, ಸ್ಪಷ್ಟವಾದ ಗುರಿಯನ್ನು ಹೊಂದಿದ್ದರೆ, ನೀವು ಸಾವಿರಾರು ಮೈಲಿ ದೂರದಲ್ಲಿದ್ದರೂ ನನ್ನ ಸಮೀಪದಲ್ಲಿರುವಿರಿ.
ಆಗ ನಿಮಗೆ ತಿಳಿಯುವುದು ನಾವು ಒಂದೇ ಎಂದು, ಒಟ್ಟಿಗೆ ಇರುವೆವೆಂದು.
ಸಂಪೂರ್ಣ ಅರಿವಿದ್ದಾಗ ಸಾಮೀಪ್ಯವೂ ಇರುತ್ತದೆ.
ಆದರೆ ನೀವಿಲ್ಲಿ ಕುಳಿತು, ‘ಓಹ್, ಗುರೂಜೀ ಏನು ಮಾಡುತ್ತಿದ್ದಾರೆ? ಅವರಿಗೆ ಅಧಿಕಾರ ಬೇಕೇನೋ,’ ಎಂದು ಕುತೂಹಲಪಟ್ಟರೆ, ಸಾಮೀಪ್ಯವು ಸಾಧ್ಯವಾಗುವುದಿಲ್ಲ.
ಒಬ್ಬ ಮಹಿಳೆಯು ಕೇಳಿದಳು, ‘ಯಾವುದನ್ನು ಮಾಡುವುದರಿಂದ ಜನರ ಮೇಲೆ ನೀವಿಷ್ಟು ಪ್ರಭಾವಶಾಲಿಗಳಾಗಿದ್ದೀರ?’
ನಾವು ಹೇಳಿದೆವು, ‘ಜನರ ಮೇಲೆ ಪ್ರಭಾವ? ನಾನೇ ಸ್ವತಃ ಬಲಶಾಲಿ. ನನಗೆ ಯಾರಿಂದಲೂ ಬಲ ಬೇಡ. ನನಗೆ ಯಾರಿಂದಲೂ ಏನೂ ಬೇಡ.’
ನೋಡಿ, ನಿಮಗೆ ಅಧಿಕಾರ ಚಲಾಯಿಸಲು ಆಸಕ್ತಿಯಿದೆ ಏಕೆಂದರೆ ನಿಮಗೆ ಜನರಿಂದ ಏನೋ ಬೇಕಾಗಿದೆ ಮತ್ತು ಅದನ್ನು ಪಡೆಯಲು ಬಯಸುತ್ತೀರ. ಆದರೆ ನಮಗೇನೂ ಬೇಡ. ನಮಗೆ ಎಲ್ಲರೂ ಸಂತೋಷವಾಗಿರುವುದು ಹಾಗೂ ಆಧ್ಯಾತ್ಮದ ಹಾದಿಯಲ್ಲಿ ತೊಡಗುವುದಷ್ಟೇ ಬೇಕಾಗಿರುವುದು.
ನೋಡಿ, ಇಂದು ಜಗತ್ತಿಗೆ ಆಧ್ಯಾತ್ಮ ಜ್ಞಾನದ ಅವಶ್ಯಕತೆಯಿದೆ. ಹಿಂಸಾ-ಮುಕ್ತ ಸಮಾಜದ ಅಗತ್ಯವಿದೆ. ಭಾರತದಲ್ಲಿ ಏನಾಯಿತೆಂದು ಗೊತ್ತಿದೆಯಾ? ಎಂತಹ ಭಯಾನಕವಾದ ಘಟನೆ ನಡೆಯಿತು. ಇದು ಬಹಳ ದುರದೃಷ್ಟಕರ; ಇಡೀ ದೇಶವೇ ಉರಿಯುತ್ತಿದೆ. ಬಹಳ ಅಪರಾಧಗಳು ನಡೆಯುತ್ತಿರುವುದರಿಂದ ಇಂದು ಮಹಿಳೆಯರು ಸುರಕ್ಷಿತವಾಗಿಲ್ಲ. ಜನರನ್ನು ಜನರಂತೆ, ಮನುಷ್ಯರಂತೆ ಕಾಣುವುದಿಲ್ಲ.
ನಮಗೆ ಬೇಕಾಗಿರುವುದು ಹಿಂಸಾ-ಮುಕ್ತ, ಸುರಕ್ಷಿತ ಜಗತ್ತು. ಇದನ್ನೇ ನಾವೆಲ್ಲರೂ ಬಯಸಬೇಕು. ನಾವೆಲ್ಲರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು, ಅಲ್ಲವೇ?
ಯಾರೋ, ‘ಗುರೂಜೀ, ನಿಮಗೆ ಬಹಳ ಅಧಿಕಾರವಿದೆ’ ಎಂದರು; ಯಾವ ಅಧಿಕಾರ?!
ನಾವೆಂದೆವು, ‘ಎಲ್ಲರ ಮೇಲೆ ಅಧಿಕಾರವಿದೆಯೆನ್ನುವುದನ್ನು ನಿಂದನೆಯೆಂದು ಭಾವಿಸುತ್ತೇನೆ.’
ಇದೆಲ್ಲ ಜನರ ತಪ್ಪು ತಿಳುವಳಿಕೆಯಷ್ಟೇ, ‘ಓಹ್, ಆ ಆಧ್ಯಾತ್ಮ ಸಂಸ್ಥೆ ಅಥವಾ ಪಂಥಕ್ಕೆ, ಎಲ್ಲರ ಮೇಲೂ ಅಧಿಕಾರವಿದೆ,’  ಇವು ಹುರುಳಿಲ್ಲದ ಮಾತುಗಳು.
ನಾವು ಆ ಮಹಿಳೆಯನ್ನು ಕೇಳಿದೆವು, ‘ಮದರ್ ತೆರೆಸಾಗೆ ಇದೇ ಪ್ರಶ್ನೆಯನ್ನು ಕೇಳುವಿರಾ? ಇಲ್ಲ! ಏಕಿಲ್ಲ? ಏಕೆಂದರೆ ಅವರೊಬ್ಬ ಅಂಗೀಕೃತ ಧಾರ್ಮಿಕ ಪರಂಪರೆಗೆ (ಕ್ರೈಸ್ತ ಮತಕ್ಕೆ) ಸೇರಿರುವರೆಂದು.
ಯಾರೂ ಕೂಡ ಮದರ್ ತೆರೆಸಾ ಬಹಳ ಪ್ರಭಾವಶಾಲಿಯೆಂದು, ಕುಶಲತೆಯಿಂದ ಎಲ್ಲರನ್ನು ನಿಭಾಯಿಸುವರೆಂದು ಹೇಳುತ್ತಿರಲಿಲ್ಲ.
ಅವರ ಆಶ್ರಮದಲ್ಲೇ ನಾಲ್ಕು ಸಾವಿರ ಜನರು ಜೀವನ ನಡೆಸುತ್ತಿದ್ದರು. ಅವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಬಡತನದ ಶಪಥವನ್ನು ಮಾಡಿದ್ದರು.
ನಾವು ಯಾರನ್ನೂ ಮನೆ ಬಿಟ್ಟು ಬನ್ನಿರೆಂದು ಹೇಳುವುದಿಲ್ಲ. ನಾವು ಸದಾ ನಿಮ್ಮ ಮನೆಯ ಜವಾಬ್ದಾರಿಯನ್ನು ನಿಭಾಯಿಸಿ ಹಾಗೂ ಎಲ್ಲೇ ಇದ್ದರೂ ಸಂತೋಷವಾಗಿರಿ ಎಂದು ಹೇಳುತ್ತೇವೆ; ಸಮಾಜದಲ್ಲಿರಿ.
ಮುಕ್ತಿ ಲಭ್ಯವಾಗುವುದೆಂಬ ಭರವಸೆಯಿಂದ ನಾಲ್ಕು ಸಾವಿರ ಮಹಿಳೆಯರು ಎಲ್ಲ ತೊರೆದು ಬಂದು, ಅವರ ಜೊತೆಯಿದ್ದರು. ಆದರೆ ನೀವು, ಎಲ್ಲರ ಮೇಲೆ ಪ್ರಭಾವ ಹೊಂದಿರುವಿರೆಂದು ಮದರ್ ತೆರೆಸಾಗೆ ಹೇಳುವುದಿಲ್ಲ.
ಇದು ಮನಸ್ಸಿನ ಭ್ರಮೆ.
ಖಂಡಿತವಾಗಿಯೂ, ಆಧ್ಯಾತ್ಮದ ಪಥದಲ್ಲಿ ಬಹಳ ಮಂದಿ ಪ್ರಾಮಾಣಿಕರಿಲ್ಲವೆಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ನಾವು ಆಧ್ಯಾತ್ಮದ ಶಾಪಿಂಗ್‍ಗೆ ಹೋಗುವುದನ್ನು ಪುರಸ್ಕರಿಸುವುದಿಲ್ಲ. ಜ್ಞಾನವನ್ನು ಅನುಸರಿಸಿ, ಒಂದು ಆಧ್ಯಾತ್ಮದ ಪಥವನ್ನು ಅನುಸರಿಸಿ.
ವಿಶ್ವದಲ್ಲಿ, ಎಲ್ಲ ಬಗೆಯ ಜನರು ಆಧ್ಯಾತ್ಮದ ಹೆಸರಿನಲ್ಲಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದು ಇವತ್ತಿಗೆ ನಿಜವಿದ್ದರೂ, ಅದರ ಬಗ್ಗೆ ಭ್ರಮೆ ಬೇಡ. ಎಲ್ಲ ಆಧ್ಯಾತ್ಮ ಸಂಸ್ಥೆಯು ಜನರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವರೆಂದು ಹೇಳುವಂತಿಲ್ಲ. ಇದು ಇತರರಲ್ಲೂ ಭ್ರಮೆ ಸೃಷ್ಟಿಸುತ್ತಿದೆ.
ಒಂದು ಸಂಸ್ಥೆಯೆಂದರೆ ಫ಼ೋಟೋವನ್ನು ಹಿಡಿದಿಡುವ ಒಂದು ಫ್ರೇಮ್‍ನಂತೆ ಎಂದು ನಾವು ಸದಾ ಹೇಳುತ್ತಿರುತ್ತೇವೆ. ಅದು ಆವಶ್ಯಕವಾಗಿದೆ. ಸಂಸ್ಥೆಯಿಲ್ಲದೇ ಕೆಲಸ-ಕಾರ್ಯಗಳು ನಡೆಯುವುದಿಲ್ಲ.
ನಿಮಗೆ ವಸತಿ, ಆಹಾರ ಮತ್ತಿನ್ನೆಲ್ಲವನ್ನು ಒದಗಿಸಲು ಅನೇಕ ಜನರು ಶ್ರಮಿಸುತ್ತಿದ್ದಾರೆಂದು ನಿಮಗೆ ಗೊತ್ತೇ? ಇಂತಹ ಸ್ವಾದಿಷ್ಟವಾದ ಇಟಾಲಿಯನ್ ಆಹಾರವನ್ನು ತಯಾರಿಸಿದವರೆಲ್ಲರಿಗೂ ನೀವು ಧನ್ಯವಾದಗಳನ್ನು ತಿಳಿಸಬೇಕು. ಅವರು ಈ ಕೆಲಸವನ್ನು ಕೆಲಸವೆಂದೋ, ಇಲ್ಲವೇ ವೃತ್ತಿಯೆಂದೋ ಮಾಡುವುದಿಲ್ಲ, ಬದಲಿಗೆ ನಿಸ್ವಾರ್ಥ ಸೇವೆಯೆಂದು ನಿರ್ವಹಿಸುತ್ತಿದ್ದಾರೆ.
ಸೇವೆ ಮಾಡುವಾಗ ಭಕ್ತಿಯಿಂದ, ಹೃನ್ಮನಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಾವು ಸ್ವಯಂ ಮಾಡುತ್ತೇವೆ! ವಿಶ್ವದಾದ್ಯಂತ ನಾವು ಸಂಚರಿಸಿ ಶಿಬಿರದಲ್ಲಿ ಹೇಳಿಕೊಡುತ್ತೇವೆ. ನಾವು ಯಾರಿಂದಲೂ ಹಣವನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲವೇ ಯಾವುದನ್ನು ನಮಗಾಗಿ ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಎಲ್ಲರೂ ನಮ್ಮಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ.
ನಾವೇನಾದರೂ ಹಣವನ್ನೆಲ್ಲಾ ನಮ್ಮ ಬಳಿಯೇ ಇಟ್ಟುಕೊಂಡಿದ್ದರೆ, ಇಷ್ಟು ವೇಳೆಗೆ ಬಿಲಿಯನೇರ್ ಆಗುತ್ತಿದ್ದೆವು. ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಂದು, ಶಿಬಿರ ನಡೆಸಿ ಮತ್ತೆ ಹೊರಡುತ್ತೇವೆ. ವರ್ಷಕ್ಕೊಮ್ಮೆ ಇಲ್ಲಿಗೆ ಬರದಿದ್ದರೆ, ಆಗ ಈ ಆಶ್ರಮವನ್ನು ಮುಚ್ಚಬೇಕಾಗುತ್ತದೆ. ತಾವೆ ಸ್ವತಃ ಇದನ್ನು ನಡೆಸಲು ಅಸಮರ್ಥರಾಗಿದ್ದಾರೆ. ಆದ್ದರಿಂದ  ಇಲ್ಲಿಗೆ ಬಂದು ಅವರಿಗೆ ನೆರವನ್ನು ನೀಡುತ್ತೇವೆ.
ಎಲ್ಲರೂ ಕೆಲಸ ಮಾಡುತ್ತಾ ತಮ್ಮ ಕರ್ಮ ಫಲಗಳನ್ನು ಗುರುಗಳಿಗೆ ಸಮರ್ಪಿಸುತ್ತಾರೆಂದು ತಿಳಿಯಬೇಡಿ. ಅದರ ಬದಲಿಗೆ ಗುರುಗಳು ಕೆಲಸ ಮಾಡುತ್ತಾ ಎಲ್ಲರಿಗೂ ನೆರವು ನೀಡುತ್ತಾರೆಂದು ತಿಳಿಯಿರಿ. ನಾವು ಪ್ರತಿನಿತ್ಯ ೧೯ಗಂಟೆಗಳ ಕಾಲ ಕೆಲಸ ಮಾಡಿ ಅನೇಕ ಜನರಿಗೆ ಆಶ್ರಯ ನೀಡುತ್ತೇವೆ. ಇದನ್ನು ಆನಂದದಿಂದ, ಪ್ರತಿಫಲಾಕ್ಷೆಯಿಲ್ಲದೇ ಮಾಡುತ್ತೇವೆ, ಅವರು ಸಂತೋಷವಾಗಿರುವುದೇ ನಮಗೆ ಬೇಕಾಗಿರುವುದು. ಅವರು ಸಂತೋಷವಾಗಿಲ್ಲವೆಂದರೆ ನಾವು ಸಂತೋಷವಾಗಿರುವುದಿಲ್ಲ.
ನಿಮಗೆ ಗೊತ್ತೇ, ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಅಪನಂಬಿಕೆಯು ಹೆಚ್ಚಾಗಿದೆ.
ಗಂಡ-ಹೆಂಡತಿಯರಲ್ಲಿ, ತಂದೆ-ತಾಯಿ ಮತ್ತು ಮಕ್ಕಳ ನಡುವೆ, ನೆರೆಹೊರೆಯವರ ಮೇಲೆ ಅವಿಶ್ವಾಸ ಇತ್ಯಾದಿ. ಖಂಡಿತವಾಗಿಯೂ, ಈ ರೀತಿಯಲ್ಲಿ ಇಡೀ ವಿಶ್ವವವೇ ಅವಿಶ್ವಾಸ ಹೊಂದಲು ಪ್ರಾರಂಭಿಸಿದರೆ, ಆಗ ಒಂದು ಅಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ. ಇದು ಬದಲಾಗಬೇಕಾಗಿದೆ.
ಜನರಿಗೆ ತಮ್ಮ ಮೇಲೂ ವಿಶ್ವಾಸವಿರುವುದಿಲ್ಲ. ಆತ್ಮವಿಶ್ವಾಸ, ಸಮಾಜದ ಒಳ್ಳೆಯತನದ ಮೇಲೆ ವಿಶ್ವಾಸ ಮತ್ತು ಅಗೋಚರವಾದ ಶಕ್ತಿ, ಸರ್ವವ್ಯಾಪಿಯಾದ ದೈವತ್ವದ ಮೇಲೆ ವಿಶ್ವಾಸವನ್ನು ಹೊಂದಿರಬೇಕು. ಈ ಮೂರು ಬಗೆಯ ವಿಶ್ವಾಸ ಅತ್ಯವಶ್ಯಕ. ಇದೇ ಆಧ್ಯಾತ್ಮ.

ಪ್ರ: ಪ್ರೀತಿಯ ಗುರೂಜೀ, ಕಾಲವು ಬದಲಾಗುತ್ತಿರುತ್ತದೆ ಆದರೆ ಆಕಾಶವು ಸ್ಥಿರವಾಗಿರುತ್ತದೆಂದು ವೈಜ್ಞಾನಿಕ ಪರಂಪರೆಯು ಹೇಳುತ್ತದೆ. ಪುರಾತನ ಗ್ರಂಥಗಳು ಹೇಳುವುದು, ಕಾಲವು ಸ್ಥಿರವಾದುದು ಹಾಗೂ ಆಕಾಶವು ಬದಲಾಗುತ್ತದೆಂದು. ಈ ಸಂಗತಿಯನ್ನು ವಿವರಿಸುವಿರಾ?
ಶ್ರೀಶ್ರೀರವಿಶಂಕರ್: ಕಾಲದಲ್ಲೂ ಎರಡು ಬಗೆಯಿದೆ.
ಒಂದು, ಬದಲಾಗುವ ಕಾಲ - ಭೂತ, ವರ್ತಮಾನ ಮತ್ತು ಭವಿಷ್ಯತ್; ಮತ್ತೊಂದು ಬದಲಾಗದೇ ಇರುವ ಮಹಾಕಾಲ; ಇನ್ನಿತರ ಎಲ್ಲ ಕಾಲಗಳಿಗೂ ಉಲ್ಲೇಖ ಬಿಂದು. ಅದನ್ನು ಮಹಾಕಾಲವೆನ್ನುವರು.
ಕಾಲವನ್ನು ನಿರ್ಣಯಿಸಲು ಉಲ್ಲೇಖ ಬಿಂದುವಿನ ಅವಶ್ಯಕತೆಯುಂಟಾಗುತ್ತದೆ. ಆಕಾಶ ಅಥವಾ ಕಾಲದ ಬಗ್ಗೆ ತಿಳಿಯಲು, ಬದಲಾವಣೆಯನ್ನು ನಿರ್ಣಯಿಸಲು ಯಾವುದೋ ಬದಲಾಗದೇ ಇರುವುದು ಇರಬೇಕು.
ಆದ್ದರಿಂದ ಉಲ್ಲೇಖ ಬಿಂದು ಹಾಗೂ ಎಲ್ಲಾ ಬದಲಾವಣೆಗಳಿಗೂ ಅದೇ ಆಧಾರ.
ನೀವು ಕಾಲವನ್ನು ತಿಳಿಯಲು, ಮನಸ್ಸನ್ನು ತಿಳಿಯಬೇಕು. ಮನಸ್ಸಿನ ಬಗ್ಗೆ ತಿಳಿಯದೆ ಕಾಲವನ್ನು ಅರಿಯಲಾಗದು, ಮತ್ತು ಮನಸ್ಸಿನ ಆಳವನ್ನು ಅರಿಯಲಾಗದು. ಅದನ್ನು ಸಂಪೂರ್ಣವಾಗಿ ಅರಿಯಲಾರಿರಿ.
ಆದ್ದರಿಂದಲೇ, ಎಷ್ಟರ ಮಟ್ಟಿಗೆ ನಿಮ್ಮ ಮನಸ್ಸನ್ನು ಅರಿತಿರುವಿರೋ, ಅಷ್ಟರ ಮಟ್ಟಿಗೆ ಕಾಲವನ್ನು ಅರಿತಿರುವಿರಿ.

ಪ್ರ: ಗುರೂಜೀ, ಆಶೀರ್ವಾದವು ಹೇಗೆ ಕೆಲಸ ಮಾಡುವುದೆಂದು ದಯವಿಟ್ಟು ವಿವರಿಸುವಿರಾ?
ಶ್ರೀಶ್ರೀರವಿಶಂಕರ್: ಆಶೀರ್ವಾದವು ನಿರ್ಮಲ ಹೃದಯದಿಂದ ಹರಿಯುವ ಸಕಾರಾತ್ಮಕ ಶಕ್ತಿಯಲ್ಲದೇ ಬೇರೇನಿಲ್ಲ.

ಪ್ರ: ಪ್ರೀತಿಯ ಗುರೂಜೀ, ವೈರಾಗ್ಯ ಮತ್ತು ಜ್ವರ ಪೀಡನೆಯಿಲ್ಲದಿರುವುದರ ಬಗ್ಗೆ ತಾವು ಬಹಳ ಸೊಗಸಾಗಿ ಮಾತನಾಡಿದಿರಿ. ಆದರೆ ನೀವು ನಮ್ಮ ಹತ್ತಿರವಿರುವಾಗ ಈ ಜ್ಞಾನವು ಬಹಿರ್ಮುಖವಾಗಿ ಕೇವಲ ಜ್ವರದ ತಪಿಸುವಿಕೆಯಿರುತ್ತದೆ.  
 ಶ್ರೀಶ್ರೀರವಿಶಂಕರ್: ಯಾವುದಾದರೊಂದು ವಿಷಯವನ್ನು ಹಿಡಿದುಕೊಳ್ಳುವುದು ಮನಸ್ಸಿನ ಸ್ವಭಾವ. ಆದ್ದರಿಂದ ಎಲ್ಲ ವಿಚಾರಗಳಿಂದ ಮುಕ್ತರಾಗುವ ತನಕ ಒಂದು ವಿಚಾರವನ್ನು ಹಿಡಿದುಕೊಂಡರೆ ಪರವಾಗಿಲ್ಲ.
ಆದರೆ ಕಾಲ ಕಳೆದಂತೆ ಅದರಿಂದಲೂ ಮುಕ್ತಿಯನ್ನು ಹೊಂದುವಿರಿ, ಮನಸ್ಸು ಶಾಂತವಾಗುವುದು.

ಪ್ರ: ಗುರೂಜೀ, ಮಕ್ಕಳಾಗದಿರುವುದು ಮತ್ತು ಸಂಬಂಧದಲಿಲ್ಲದಿರುವುದರ ಪರಿಣಾಮ ಕರ್ಮಗಳು ಕಳೆಯುವುದೆಂದು ಹೇಳುವುದು ಸರಿಯೇ ಅಥವಾ ಅದು ನಮ್ಮ ಆಯ್ಕೆಗೆ ಸಂಬಂಧಿಸಿದುದೇ?
ಶ್ರೀಶ್ರೀರವಿಶಂಕರ್: ಅದು ನಿಮ್ಮ ಆಯ್ಕೆಗೆ ಸಂಬಂಧಿಸಿದುದು. ಅದು ನಿಮ್ಮ ಮನಸ್ಸನ್ನು ನೀವು ಹೇಗೆ ನಿಭಾಯಿಸುವಿರೆಂಬುದನ್ನು ಅವಲಂಬಿಸುತ್ತದೆ.

ಪ್ರ: ಪ್ರೀತಿಯ ಗುರೂಜೀ, ಮಾನವೀಯತೆ, ಭೂಮಿ ಮತ್ತು ವಿಶ್ವದ ಮೇಲೆ ದಿ.12.12.12ರಂದು ನಡೆಸಿದ ಮೂರು ಧ್ಯಾನಗಳ ಪರಿಣಾಮವೇನೆಂದು ತಿಳಿಸಿ. 
ಶ್ರೀಶ್ರೀರವಿಶಂಕರ್: ನೋಡಿ, ಸೀಮಿತ ಮಾನದಂಡಗಳಿಂದ ಧ್ಯಾನದ ಪರಿಣಾಮವನ್ನು ಅಳೆಯಲಾಗದು. ನಮಗೆ ತಿಳಿದಿರುವ ಮಾನದಂಡಗಳಿಗೂ ಮೀರಿ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವು ಖಂಡಿತವಾಗಿಯೂ ಇರುತ್ತದೆ. ಅದನ್ನು ಕಾಲ ತಿಳಿಸುವುದು.

ಪ್ರ: ಪ್ರೀತಿಯ ಗುರೂಜೀ, ಸೀಮಿತ ಸಮಯದವರೆಗೆ ಮಾತ್ರ ಈ ದೇಹವಿರುವುದೆಂದು ನೀವು ಹೇಳುವಿರಿ. ಹಾಗಾದರೆ ಮಹಾಭಾರತದ ಭೀಷ್ಮ ಪಿತಾಮಹನು (ಮಹಾಭಾರತದಲ್ಲಿ ಕೌರವ ಹಾಗೂ ಪಾಂಡವರ ಮುತ್ತಾತ) ಅಷ್ಟು ದೀರ್ಘಕಾಲ ಹೇಗೆ ಬದುಕಿದ್ದನು ಮತ್ತು ಹೇಗೆ ಇಚ್ಛಾಮರಣಿಯಾಗಿದ್ದನು?
ಶ್ರೀಶ್ರೀರವಿಶಂಕರ್: ನೋಡಿ, ಭೀಷ್ಮನ ಅಥವಾ ಇನ್ಯಾವುದೇ ಪಾತ್ರಕ್ಕೆ ನಾನು ವಕೀಲನಾಗಲಾರೆ. ನೀವು ಬೇಕಾದರೆ ಒಬ್ಬ ವಕೀಲ ಮತ್ತು ಮಾನವಶಾಸ್ತ್ರಜ್ಞನೊಂದಿಗೆ ಕುಳಿತುಕೊಂಡು ಇವೆಲ್ಲವುದರ ಬಗ್ಗೆ ಸಂಶೋಧನೆ ನಡೆಸಬಹುದು.
ನಾವು ಮಕ್ಕಳಾಗಿದ್ದಾಗ, ಹೇಗೆ ಒಂದು ಹಕ್ಕಿಯು ಜನರನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗುವುದೆಂದು ಆಶ್ಚರ್ಯಪಟ್ಟಿದ್ದೆವು. ಅಷ್ಟು ಚಿಕ್ಕದಾದ ಹಕ್ಕಿಯ ಮೇಲೆ ಒಂದು ಮಂಟಪವು ಹೇಗಿರಬಹುದೆಂದು ವಿಸ್ಮಯಗೊಂಡಿದ್ದೆವು.
ಸಾಮಾನ್ಯವಾಗಿ ಪುರಾಣದ ಚಿತ್ರಗಳಲ್ಲಿ ಮತ್ತು ಕತೆಗಳಲ್ಲಿ, ಒಂದು ಹಕ್ಕಿಯು ತನ್ನ ಬೆನ್ನ ಹಿಂದೆ ಒಂದು ಮಂಟಪವನ್ನು ಹೊತ್ತುಕೊಂಡಿರುವ ಚಿತ್ರವನ್ನು ನೋಡಿರುವೆವು ಅಥವಾ ಓದಿರುವೆವು.
ಆದರೆ ನೋಡಿ, ನೀವು ವಿಜ್ಞಾನದಲ್ಲಿ ಆಳವಾಗಿ ಹೋದಾಗ, ವೈಜ್ಞಾನಿಕರೂ ಸಹ ಸುಮಾರು 300 ಟನ್‍ಗಳಷ್ಟು ತೂಕದ ಭಾರೀ ಗಾತ್ರದ ಹಕ್ಕಿಗಳಿದ್ದವೆಂದು ಹೇಳುತ್ತಾರೆ.
ಡೈನಾಸರ್ ಯುಗದಲ್ಲಿ ಏರ್ ಪ್ಲೇನ್‍ಗಳಂತೆ ಬಹಳ ದೊಡ್ಡದಾದಂತಹ ಹಕ್ಕಿಗಳಿದ್ದವು. ಅವು ಅಷ್ಟು ಭಾರಿಯಾಗಿದ್ದರೆ, ಅವುಗಳ ಮೇಲೆ ಹತ್ತು ಜನರನ್ನು ಖಂಡಿತವಾಗಿಯೂ ಕೂರಿಸಬಹುದು. ಹತ್ತೇಕೆ, ಅವುಗಳ ಮೇಲೆ ನೂರು ಜನರನ್ನು ಕೂರಿಸಬಹುದು.
ಅಂತಹ ಹಕ್ಕಿಗಳನ್ನು ಈ ರೀತಿಯ ಕಾರ್ಯಗಳಿಗೆ ತರಬೇತಿ ನೀಡಬಹುದಾಗಿತ್ತು. ಇವು ಖಂಡಿತವಾಗಲೂ ಸಾಧ್ಯ. ಎಲ್ಲವೂ ಸಾಧ್ಯವೆಂದು ನಾವು ಸದಾ ಹೇಳಬೇಕು.

ಶುಕ್ರವಾರ, ಡಿಸೆಂಬರ್ 28, 2012

ನೃತ್ಯ ಮತ್ತು ನರ್ತಕ


೨೮ ಡಿಸೆಂಬರ್ ೨೦೧೨
ಬಾಡ್ ಅಂತೋಗಾಸ್ತ್, ಜರ್ಮನಿ

ಪ್ರ: ಪೂಜ್ಯ ಗುರೂಜಿ, ದಯವಿಟ್ಟು ನಮಗೆ ಗುರುಪರಂಪರೆಯ ಬಗ್ಗೆ ಇನ್ನೂ ಹೆಚ್ಚು ತಿಳಿಸುವಿರಾ?
ಶ್ರೀಶ್ರೀ: ಅದು ಹಲವು ಸಾವಿರ ವರ್ಷಗಳಿಂದ ನಡೆಯುತ್ತಿರುವುದರಿಂದ, ಸರಿಯಾಗಿ ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿದಿಲ್ಲ.

ಯೋಗದ ಜ್ಞಾನ, ಧ್ಯಾನ ಮತ್ತು ಈ ಸಂಪೂರ್ಣ ಬ್ರಹ್ಮಾಂಡವು ಒಂದು ಶಕ್ತಿಯಿಂದ ಸೃಷ್ಟಿಯಾಗಿದೆ ಎಂಬ ಜ್ಞಾನ, ಈ ಗುರುಪರಂಪರೆಯ ಮೂಲಕ ಮುಂದೆ ಸಾಗಿಸಲಾಗಿದೆ.
ಸಾಮಾನ್ಯವಾಗಿ ನೀವು ಏನನ್ನಾದರೂ ತಯಾರಿಸಿದಾಗ, ತಯಾರಿಸುವವನು ಆ ವಸ್ತುವಿನಿಂದ ಬೇರೆಯಾಗಿರುತ್ತಾನೆ. ಉದಾಹರಣೆಗೆ, ನೀವೊಂದು ಮೋಂಬತ್ತಿಯನ್ನು ತಯಾರಿಸಬೇಕಿದ್ದರೆ, ನೀವು ಆ ಮೋಂಬತ್ತಿಯು ನನ್ನಿಂದ ಬೇರೆ ಎಂದು ಯೋಚಿಸುತ್ತೀರಿ ಮತ್ತು ನೀವದನ್ನು ನಿಮ್ಮಿಂದ ಬೇರೆಯಾಗಿ ದೂರದಲ್ಲಿಡುತ್ತೀರಿ, ’ಅದು ನನ್ನ ಸೃಷ್ಟಿ ಆದರೆ ಅದು ನಾನಲ್ಲ.’

ಹಾಗೆ ಜನರು ಈ ರೀತಿಯಾಗಿ ಯೋಚಿಸುತ್ತಾರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡು ಬೇರೆ ಬೇರೆ ವಸ್ತುಗಳು ಎಂದು. ಆದರೆ ನೀವು ದೇವರು ಸರ್ವಾಂತರ್ಯಾಮಿ ಎಂದು ಹೇಳಿದರೆ, ಅಂದರೆ ಎಲ್ಲಾ ಕಡೆ ಇರುವವನಾಗಿದ್ದರೆ, ಅವನು ಸೃಷ್ಟಿಯ ಒಳಗೂ ಇರಬೇಕು.

ಏನಾದರೂ ಸರ್ವವ್ಯಾಪಿಯಾಗಿದ್ದರೆ, ಬೇರೇನಾದರೂ ಇದರಿಂದ ಹೊರಗಿರಲು ಎಲ್ಲಿ ಸ್ಥಳವಿದೆ? ಅಲ್ಲವೇ?! ನಾನು ಸರ್ವಶಕ್ತನಾಗಿದ್ದರೆ, ಏನಾದರೂ ಬೇರೆ ನನಗಿಂತಲೂ ಹೆಚ್ಚು ಶಕ್ತಿಯುತವಾದದ್ದು ಇರಲು ಸಾಧ್ಯವೇ? ಸಾಧ್ಯವಿಲ್ಲ. ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡು ಬೇರೆ ವಸ್ತುಗಳಲ್ಲ. ಇರುವುದು ಕೇವಲ ಒಂದೇ.

ಈಗ ನಾವಿದನ್ನು ಹೇಗೆ ಅರ್ಥಮಾಡಿಕೊಳ್ಳುವುದು - ಸೃಷ್ಟಿ ಮತ್ತು ಸೃಷ್ಟಿಕರ್ತ ಒಂದೇ ಎಂಬುದನ್ನು?
ನೃತ್ಯ ಮತ್ತು ನರ್ತಕನ ಉದಾಹರಣೆಯಿಂದ. ನಿಮಗೆ ಒಂದು ನೃತ್ಯವನ್ನು ಆ ನರ್ತಕನಿಂದ ಬೇರ್ಪಡಿಸಲು ಸಾಧ್ಯವೇ? ಇಲ್ಲ! ಅದು ಅಸಾಧ್ಯ. ನಿಮಗೆ ಆ ನೃತ್ಯ ನೋಡಬೇಕಿದ್ದರೆ, ನೀವು ಅದನ್ನು ಕೇವಲ ಆ ನರ್ತಕನ ಮೂಲಕ ನೋಡಬಲ್ಲಿರಿ. ಒಬ್ಬ ಕಲಾಕಾರ ಮತ್ತು ಅವನ ಚಿತ್ರಕಲೆ ಬೇರೆ ಬೇರೆಯಾಗಿವೆ. ಒಬ್ಬ ಕಲಾಕಾರ ಒಂದು ಚಿತ್ರವನ್ನು ಬಿಡಿಸಿ ಅದರಿಂದ ದೂರವಾಗಬಹುದು, ಮತ್ತು ಆಗಲೂ ಆ ಚಿತ್ರ ಇರುತ್ತದೆ.ಆದರೆ ಆ ನರ್ತಕ ತನ್ನ ನೃತ್ಯದಿಂದ ಬೇರೆಯಾಗಲು ಸಾಧ್ಯವಿಲ್ಲ.

ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ, ಆ ನೃತ್ಯ ಮತ್ತು ನರ್ತಕರಿದ್ದ ಹಾಗೆ. ಯಾವ ಶಕ್ತಿಯನ್ನು ನಾವು ಭಗವಂತ ಅಥವಾ ಪ್ರೀತಿ ಅಥವಾ ಬೆಳಕು ಎಂದು ಕರೆಯುತ್ತೇವೋ, ಅದು ಈ ಸಂಪೂರ್ಣ ಸೃಷ್ಟಿಯನ್ನು ಮತ್ತು ಈ ಬ್ರಹ್ಮಾಂಡದ ಪ್ರತಿಕಣವನ್ನೂ ವ್ಯಾಪಿಸಿಕೊಂಡಿದೆ.

ಇದು ಆ ಪ್ರಾಚೀನ ಜ್ಞಾನದ ಸಾರ, ಮತ್ತು ಆಧುನಿಕ ವಿಜ್ಞಾನ ಹಾಗೂ ಕ್ವಾಂಟಂ ಭೌತಶಾಸ್ತ್ರ ಇದನ್ನೇ ವಿವರಿಸುವುದು. ಈ ಸಂಪೂರ್ಣ ಜಗತ್ತು ಒಂದು ಕ್ಷೇತ್ರದಿಂದ, ಒಂದು ಶಕ್ತಿಯಿಂದ ರಚಿಸಲ್ಪಟ್ಟಿದೆ. ಇದು ವೇದಾಂತಿಗಳ ಹಲವಾರು ಒಗಟುಗಳನ್ನು ಬಿಡಿಸುತ್ತದೆ.

ಪ್ರ: ನಾವು ಕೊರತೆಯ ಆಲೋಚನೆಗಳನ್ನು ಸಮೃದ್ಧಿಯ ಆಲೋಚನೆಗಳಾಗಿ ಹೇಗೆ ಪರಿವರ್ತಿಸುವುದು?
ಶ್ರೀಶ್ರೀ: ನಿಮಗೆ ಅದನ್ನು ಮಾಡಬೇಕೆಂಬ ಆಲೋಚನೆಯಿರುವುದರ ಅರ್ಥ ನೀವು ಆಗಲೇ ಆ ಮಾರ್ಗದಲ್ಲಿ ನಡೆಯಲು ಆರಂಭಿಸಿದ್ದೀರಿ ಎಂದು.
ನಿಮ್ಮ ಅಗತ್ಯಗಳೇನೆಂಬುದನ್ನು ನೋಡಿ, ಮತ್ತು ಅವು ಯಾವಾಗಲೂ ಪೂರೈಸಲ್ಪಡುತ್ತವೆ ಎಂಬುದನ್ನು ನೀವು ನೋಡುತ್ತೀರಿ. ನಿಮಗೇನೇ ಬೇಕಿದ್ದರೂ ಅದು ಸದಾ ನಿಮ್ಮನ್ನು ತಲುಪುತ್ತದೆ. ಆದರೆ ಅದನ್ನು ಒಂದು ಮಿತಿ ಮೀರಿ ತೆಗೆದುಕೊಂಡು ಹೋಗಿ, ’ನಾನು ಏನೂ ಮಾಡದೇ, ಎಲ್ಲವೂ ನನ್ನ ಬಳಿಗೆ ಬರಲಿ’ ಎಂದು ಹೇಳಬೇಡಿ. ಇಲ್ಲ, ಅದು ಸರಿಯಲ್ಲ. ನೀವು ನಿಮ್ಮ ಪ್ರಯತ್ನವನ್ನು ಹಾಕಬೇಕು, ಮತ್ತು ನಿಮಗೆ ಧೈರ್ಯಬೇಕು. ಈ ಎರಡು ವಿಷಯಗಳು ನಿಮಗೆ ಸಂಪತ್ತನ್ನು ತರುತ್ತವೆ.

ಸಂಸ್ಕೃತದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ: ’ಉದ್ಯೋಗಿನೋ ಪುರುಷ ಸಿಂಹಂ ಉಪೈತಿ ಲಕ್ಷ್ಮೀ’.
ಅದರ ಅರ್ಥ ಒಂದು ಸಿಂಹದ ಧೈರ್ಯ ಹಾಗೂ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವವನ ಬಳಿ ಸಂಪತ್ತು ಬರುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿ ಮತ್ತು ಸಿಂಹದಂತೆ ಇರಿ. ನಿಮಗೆ ಗೊತ್ತೇ ಸಿಂಹವು ಅತ್ಯಂತ ಸೋಮಾರಿ ಮೃಗ. ಸಿಂಹಿಣಿಯು ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಅದನ್ನು ಸಿಂಹಕ್ಕೆ ನೀಡುವುದು. ಸಿಂಹವು ಸುಮ್ಮನೆ ಹೋಗಿ ಬೇಟೆಯನ್ನು ತಿನ್ನುತ್ತದೆ. ಸಿಂಹಿಣಿಯು ಕೆಲಸವನ್ನು ಮಾಡುವುದು. ಸಿಂಹವು ಆಹಾರಕ್ಕಾಗಿ ಬೇಟೆಯಾಡುವ ಕೆಲಸವನ್ನೂ ಮಾಡುವುದಿಲ್ಲ. ಅವನು ಆಲಸಿಯಾದರೂ ಅವನು ವನದ ರಾಜ ಮತ್ತು ಅವನಲ್ಲಿ ಆತ್ಮ ವಿಶ್ವಾಸವಿದೆ. ಹಾಗಾಗಿ ನಿಮ್ಮಲ್ಲಿ ಇರಬೇಕಾದುದು ಇದೇ – ಆತ್ಮ ವಿಶ್ವಾಸ ಮತ್ತು ಸಿಂಹದ ಘನತೆಯ ಪ್ರಜ್ಞೆ.

ನೀವು ನಿಮ್ಮ ೧೦೦% ಪ್ರಯತ್ನ ಹಾಕಬೇಕು ಮತ್ತು ಆಗಲೇ ಸಂಪತ್ತು ನಿಮ್ಮ ಬಳಿ ಬರುವುದು. ಕುಳಿತು ಅದರ ಬಗ್ಗೆ ಹಗಲುಗನಸು ಕಾಣುವುದು ಅಥವಾ ಅದರ ಬಗ್ಗೆ ಜ್ವರತೆಯಿಂದಿರುವುದು ನಿಮಗೆ ಫಲ ನೀಡುವುದಿಲ್ಲ. ಅದರ ಬಗ್ಗೆ ಜ್ವರತೆಯನ್ನು ಬಿಡಿ, ಸುಮ್ಮನೆ ಒಂದು ಕೆಲಸವನ್ನು ಕೈಗೆತ್ತಿಕೊಂಡು ಅದನ್ನು ಮಾಡಿ. ಮುಂದೊಮ್ಮೆ,  ಅದರೊಂದಿಗೆ ನೀವು ಸಂಪತ್ತನ್ನೂ ಪಡೆಯುತ್ತೀರಿ ಎಂಬುದನ್ನು ನೀವು ನೋಡುತ್ತೀರಿ.

ಪ್ರ: ಪೂಜ್ಯ ಗುರೂಜಿ, ಬೇರೆ ಬೇರೆ ವಿಧದ ಪ್ರಾಣಗಳು (ಜೀವದ ಸೂಕ್ಷ್ಮಶಕ್ತಿ) ಇವೆಯೆಂದು ನೀವು ಹೇಳಿದಿರಿ. ದಯವಿಟ್ಟು ಅವುಗಳ ಬಗ್ಗೆ ನೀವು ಇನ್ನೂ ಬಿಡಿಸಿ ಹೇಳಬಹುದೆ?
ಶ್ರೀಶ್ರೀ: ಹತ್ತು ಬಗೆಯ ಪ್ರಾಣಗಳಿವೆ (ಜೀವದ ಸೂಕ್ಷ್ಮಶಕ್ತಿ). ಇವುಗಳಲ್ಲಿ, ಐದು ಪ್ರಮುಖ ಮತ್ತು ಐದು ಸಣ್ಣ ಪ್ರಾಣಗಳಿವೆ. ಇವತ್ತು ನಾನು ಕೇವಲ ಪ್ರಮುಖ ಪ್ರಾಣಗಳ ಬಗ್ಗೆ ಮಾತನಾಡುತ್ತೇನೆ. ಪ್ರಮುಖ ಪ್ರಾಣಗಳಲ್ಲಿ ಮೊದಲನೆಯದನ್ನು ಪ್ರಾಣವೆಂದು ಕರೆಯುತ್ತಾರೆ, ಇದು ನಾಭಿ ಪ್ರದೇಶದಿಂದ ಉದ್ಭವಿಸಿ ತಲೆಯ ಮೇಲ್ಭಾಗದತ್ತ ಹರಿಯುತ್ತದೆ.

ಮತ್ತೆ ಇನ್ನೊಂದು ಪ್ರಾಣ ನಾಭಿಯಿಂದ ಕೆಳಮುಖವಾಗಿ ಹರಿಯುತ್ತದೆ, ಅದನ್ನು ಅಪಾನ ಎಂದು ಕರೆಯುತ್ತಾರೆ. ಪ್ರಾಣದ ಮಟ್ಟವು ಬಹಳ ಹೆಚ್ಚಿದ್ದಾಗ, ನಿಮಗೆ ನಿದ್ರಿಸಲಾಗುವುದಿಲ್ಲ; ನಿಮಗೆ ನಿದ್ರಾಹೀನತೆ ಉಂಟಾಗಬಹುದು ಮತ್ತು ನಿಮಗೆ ಆತಂಕ ಉಂಟಾಗಬಹುದು. ಅಲ್ಲದೇ ಅಪಾನದ ಮಟ್ಟವು ಏರಿದಾಗ, ನಿಮಗೆಷ್ಟು ಉದಾಸೀನವೆನಿಸಬಹುದೆಂದರೆ ನಿಮಗೆ ಹಾಸಿಗೆಯಿಂದ ಏಳಲೂ ಮನಸ್ಸಾಗದಿರಬಹುದು. ನಿಮಗೆ ಈ ಅನುಭವ ಉಂಟಾಗಿದೆಯೇ? ಕೆಲವೊಮ್ಮೆ ನಿಮಗೆ ಅಷ್ಟೊಂದು ಭಾರ ಮತ್ತು ಒಟ್ಟಾರೆ ಉದಾಸೀನತೆ ಅನಿಸುತ್ತದೆ. ಇದು ಅಪಾನದ ಅಸಮತೋಲನದಿಂದ ಉಂಟಾಗುತ್ತದೆ.

ಮೂರನೇ ರೀತಿಯ ಪ್ರಾಣವು ಸಮಾನ, ಯಾವುದು ನಮ್ಮ ಜೀರ್ಣ ಮಂಡಲದಲ್ಲಿ ಜೀರ್ಣಿಸುವ ಅಗ್ನಿಯಾಗಿ ಅಂದರೆ ಜಠರಾಗ್ನಿಯಾಗಿ ಉಪಸ್ಥಿತವಾಗಿದೆ ಅದು. ಈ ಅಗ್ನಿಯು ಆಹಾರವನ್ನು ಜೀರ್ಣಿಸಲು ಸಹಾಯಕವಾಗುವಂತಹ ಅಗ್ನಿ. ಸಮಾನ ಎಂಬುದು ಜೀರ್ಣ ಕ್ರಿಯೆಯಲ್ಲಿ ಸಹಾಯಕವಾದುದು, ಮತ್ತು ಅನ್ಯ ಶಾರೀರಿಕ ವ್ಯವಸ್ಥೆಗಳಲ್ಲು ಸಹಾಯಕವಾಗಿದೆ. ಅದು ಆ ವ್ಯವಸ್ಥೆಯ ಸಮತೋಲನ ಕಾಪಾಡುವುದರಲ್ಲಿ ಸಹಾಯಕವಾಗಿದೆ.

ಮತ್ತೆ ಉದಾನ ವಾಯು ಅಥವಾ ಉದಾನ ಪ್ರಾಣ ಇದೆ, ಇದು ಹೃದಯ ಭಾಗದ ಸಮೀಪದಲ್ಲಿರುವುದು ಮತ್ತು ಇದು ಎಲ್ಲಾ ಭಾವನೆಗಳಿಗೆ ಕಾರಣ.

ಮತ್ತೆ, ಐದನೆಯ ಪ್ರಾಣವನ್ನು ವ್ಯಾನ ಎನ್ನಲಾಗುತದೆ, ಇದು ಶರೀರದ ಎಲ್ಲಾ ಚಲನಗಳಿಗೆ ಕಾರಣ. ಇದು ಸಂಪೂರ್ಣ ಶರೀರದಲ್ಲಿ ಹಬ್ಬಿಕೊಂಡಿದೆ.
ಸುದರ್ಶನ ಕ್ರಿಯೆಯಲ್ಲಿ ನಿಮಗೆ ಒಂದು ಜೋಮುಹಿಡಿದ, ಸಂಪೂರ್ಣ ಶರೀರದಲ್ಲಿ ಒಂದು ಶಕ್ತಿಯ ಅನುಭವವಾಗುತ್ತದೆ. ನೀವೆಲ್ಲರೂ ಇದನ್ನು ಅನುಭವಿಸಿದ್ದೀರಾ? ಸುದರ್ಶನ ಕ್ರಿಯೆಯಲ್ಲಿ ಏನಾಗುವುದೆಂದರೆ, ಎಲ್ಲಾ ಪಂಚಪ್ರಾಣಗಳು ಸಮತೋಲನಗೊಳ್ಳುತ್ತವೆ, ಮತ್ತು ಅದರಿಂದಲೇ ನೀವು ಅಳುವುದು, ಅಥವಾ ನಗುವುದು, ಮತ್ತು ಮೈಯೆಲ್ಲ ಜೋಮುಹಿಡಿದಂತೆ ಅನುಭವವಾಗುವುದು. ಇದು ಸುದರ್ಶನ ಕ್ರಿಯೆಯ ವೈಶಿಷ್ಟ್ಯ. ಕ್ರಿಯೆಯ ಬಳಿಕ ನಿಮಗೆ ಬಹಳ ಹಸಿವೂ ಅನುಭವವಾಗುವುದುಂಟು, ಅಲ್ಲವೇ?

ಹಾಗಾಗಿ ಶರೀರದಲ್ಲಿನ ಈ ಪಂಚಪ್ರಾಣಗಳು ನಮ್ಮ ಜೀವನವನ್ನು ನಡೆಸುತ್ತವೆ. ಸಮಾನ ವಾಯು ಅಸಮತೋಲನವಾದರೆ, ಅದು ಜೀರ್ಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟು ಮಾಡುತ್ತದೆ, ಮತ್ತು ನಿಮಗೆ ಆಹಾರವನ್ನು ಸರಿಯಾಗಿ ಜೀರ್ಣಿಸಲಾಗುವುದಿಲ್ಲ, ಅಥವಾ ನಿಮಗೆ ಹೊಟ್ಟೆ ತೊಳಸಿದಂತಾಗಬಹುದು. ಇವೆಲ್ಲಾ ಸಮಾನ ಪ್ರಾಣದ ಅಸಮತೋಲನದಿಂದಾಗುವುದು.

ಉದಾನ ಪ್ರಾಣ ಸಿಕ್ಕಿಕೊಂಡಾಗ,  ನೀವು ಭಾವನೆಗಳಲ್ಲಿ ಅಡೆತಡೆಗಳನ್ನು ಅನುಭವಿಸುತ್ತೀರಿ ಮತ್ತು ಅದು ನಿಮ್ಮ ಆಲೋಚನೆಗಳ ಹಾಗೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಸಂಪೂರ್ಣ ಶರೀರದಲ್ಲಿರುವ ವ್ಯಾನ ಅಸಮತೋಲನಗೊಂಡಾಗ, ನಿಮಗೆ ಸಂಧಿಗಳಲ್ಲಿ ನೋವು, ಅಥವಾ ಚಲನೆಯಲ್ಲಿ ತೊಂದರೆ, ಮತ್ತು ನೀವು ಅತಿ ಗಾಬರಿ ಹಾಗೂ ಅವಿಶ್ರಾಂತಿ ಅನುಭವಿಸುತ್ತೀರಿ, ಅಥವಾ ನಿಮಗೆ ಏನನ್ನೂ ಮಾಡಲು ಮನಸ್ಸಾಗದಿರಬಹುದು. ಅಂಥ ಸ್ಥಿತಿಯಲ್ಲಿ ಓಡಾಡಿದಾಗ ಅಸಮಾಧಾನ ಮತ್ತು ಶರೀರದಲ್ಲಿ ಚಡಪಡಿಸುವಿಕೆಯನ್ನು ಉಂಟುಮಾಡುತ್ತದೆ. ಇವೆಲ್ಲಾ ವ್ಯಾನ ಪ್ರಾಣದ ಅಸಮತೋಲನದಿಂದ ಉಂಟಾಗುವುದು.

ಸುದರ್ಶನ ಕ್ರಿಯೆಯ ನಂತರ, ನೀವು ಗಮನಿಸಿರಬೇಕು, ಈ ಎಲ್ಲಾ ಅಸಮತೋಲನಗಳು ಹೋಗಿಬಿಡುತ್ತವೆ. ಇದು ನಿಮ್ಮೆಲ್ಲರಿಗೂ ಆಗಿಲ್ಲವೇ? ಹಿಂದೆ ಶರೀರದ ಚಲನೆಯಲ್ಲಿ ಇದ್ದಂಥ ಎಲ್ಲಾ ಅಹಿತ ಅನುಭವ, ಅಥವಾ ರಕ್ತ ಪರಿಚಲನೆಯಲ್ಲಿನ ತೊಂದರೆ, ಅಥವಾ ವ್ಯಾನ ಅಸಮತೋಲನದ ಒಂದು ನೋವು, ಎಲ್ಲವೂ ಸುದರ್ಶನ ಕ್ರಿಯೆಯ ನಂತರ ಕಣ್ಮರೆಯಾಗುತ್ತವೆ.

ಹಾಗೆ, ಇವು ಐದು ವಿವಿಧ ಪ್ರಾಣಗಳು.
ಐದು ಉಪ ಪ್ರಾಣಗಳೂ ಇವೆ, ಆದರೆ ನಾವು ಅದರ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

ಪ್ರ: ಬಾಳ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ವಿರಕ್ತಿಗಳು ಎಷ್ಟು ಸಮಂಜಸ?
ಶ್ರೀಶ್ರೀ: ನಿಮಗೆ ಜೀವನದಲ್ಲಿ ಅನುರಾಗ ಮತ್ತು ವೈರಾಗ್ಯ ಎರಡೂ ಆವಶ್ಯಕ. ಸಾಮಾನ್ಯವಾಗಿ ನಾವು ಯೋಚಿಸುತ್ತೇವೆ, ’ನನಗೆ ಅನುರಾಗವಿರುವಾಗ, ಹೇಗೆ ವಿರಕ್ತಿ ನನ್ನಲ್ಲಿರಬಹುದು? ನಾನು ವಿರಕ್ತನಾಗಿದ್ದರೆ, ನಾನು ಹೇಗೆ ಯಾವುದೇ ವಿಷಯದ ಕುರಿತು ಅನುರಾಗದಿಂದಿರುವುದು?’
ಇದು ಜನರ ಮನಸ್ಸಿನಲ್ಲಿ ಇರುವ ಸಾಮಾನ್ಯ ಪರಿಕಲ್ಪನೆ. ನಾನು ನಿಮಗೆ ಹೇಳುತ್ತೇನೆ, ಅದು ಆ ರೀತಿಯಲ್ಲ. ಅದು ಹೀಗಿರುವುದು, ನೀವು ಎಳೆಯುವ ಉಸಿರು ಅನುರಾಗ, ಹೊರಗೆ ಬಿಡುವ ಉಸಿರು ವಿರಕ್ತಿ ಮತ್ತು ಇವುಗಳೆರಡರ ನಡುವಿನಲ್ಲಿರುವುದು ಸಹಾನುಭೂತಿ. ನಮಗೆ ಎಲ್ಲಾ ಮೂರು ಅಗತ್ಯ.

ನಿಮಗೆ ಜೀವನದಲ್ಲಿ ಯಾವುದಾದರೊಂದರ ಬಗ್ಗೆ ಅನುರಾಗವಿರಬೇಕು, ಇಲ್ಲವಾದರೆ ನೀವು ಖಿನ್ನತೆಗೊಳಗಾಗುತ್ತೀರಿ. ಜ್ಞಾನದ ಬಗ್ಗೆ ಅನುರಾಗದಿಂದಿರಿ, ಸೇವೆ ಮಾಡುವುದರಲ್ಲಿ ಆಸಕ್ತಿಯಿರಲಿ, ಯೋಚಿಸುವುದರಲ್ಲಿ ಅಥವಾ ಯಾವುದರ ಬಗ್ಗೆಯಾದರೂ ಆಸಕ್ತಿಯಿಂದಿರಿ. ಜೀವನದಲ್ಲಿ ಒಂದಾದರೂ ವಿಷಯದ ಬಗ್ಗೆ ದಾಹ, ಆಸಕ್ತಿ ಖಂಡಿತ ಇರಬೇಕು. ನೀವು ವಿವೇಕದ ಬಗ್ಗೆಯೂ ಆಸಕ್ತಿ ಇಟ್ಟುಕೊಳ್ಳಬಹುದು. ಹಾಗಾಗಿ ಆಸಕ್ತಿಯು ಅತ್ಯಗತ್ಯ!

ವಿರಕ್ತಿಯೂ ಅತ್ಯಗತ್ಯವೇ. ವಿರಕ್ತಿಯಿಲ್ಲದೇ ಯಾವುದೇ ಆನಂದವಿಲ್ಲ; ಸಂತೋಷವಿಲ್ಲ. ನಿಮಗೆ ಚೂರೂ ವಿರಕ್ತಿಯಿಲ್ಲದಿದ್ದರೆ ನೀವು ದೀನತೆಗೊಳಗಾಗುತ್ತೀರಿ. ಮತ್ತೆ, ನಿಸ್ಸಂಶಯವಾಗಿ ಜೀವನದಲ್ಲಿ ದಯೆಯು ಆವಶ್ಯಕ. ಹಾಗಾಗಿ ಈ ಮೂರರಲ್ಲಿ ಎಲ್ಲವೂ ಅತ್ಯಗತ್ಯ.

ಪ್ರ: ನಾವು ಈ ಬಾರಿ ಮುಕ್ತಿ ಹೊಂದಲು ಅಸಫಲರಾದರೆ ಏನಾಗುತ್ತದೆ? ನಾವು ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಗಿರಬಹುದೇ?
ಶ್ರೀಶ್ರೀ: ಹೌದು, ಖಂಡಿತವಾಗಿ. ಅದರ ಬಗ್ಗೆ ಚಿಂತಿಸಬೇಡಿ.

ಪ್ರ: ಆಪ್ತ ಗುರೂಜಿ, ಅಷ್ಟೊಂದು ದಂಪತಿಗಳು ಮಕ್ಕಳನ್ನು ಪಡೆಯದಿರುವುದು ನನಗೆ ಆಶ್ಚರ್ಯವಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಏನಾಗುತ್ತಿದೆ?
ಶ್ರೀಶ್ರೀ: ಹ್ಞಾಂ, ಅದನ್ನುನೀವು ವೈದ್ಯರಲ್ಲಿ ಕೇಳಬೇಕು. ಅವರು ನಿಮ್ಮ ಸರಿಯಾದ ಪರಿಶೀಲನೆ ನಡೆಸುತ್ತಾರೆ. ನಾವು ಇದರ ಕುರಿತು ಸಾರ್ವತ್ರಿಕಗೊಳಿಸಲಾಗುವುದಿಲ್ಲ. ಅಲ್ಲದೇ ಮದ್ಯ ಮತ್ತು ಮಾದಕದ್ರವ್ಯಗಳ ಉಪಯೋಗ ಇದರ ಕಾರಣಗಳಲ್ಲಿ ಒಂದಾಗಿದೆ. ಅದರಲ್ಲೇನೂ ಒಳಿತಿಲ್ಲ. ಜನರು ತಮ್ಮ ಕಾಲೇಜು ದಿನಗಳಲ್ಲೇ ಅಥವಾ ಶಾಲಾದಿನಗಳಲ್ಲೇ ಮದ್ಯಪಾನ ಶುರುಮಾಡುತ್ತಾರೆ. ಅದು ಒಳ್ಳೆಯದಲ್ಲ. ಜನರು ಮಾದಕದ್ರವ್ಯಗಳಿಂದ ದೂರವಿದ್ದರೆ ಈ ಜಗತ್ತು ಇನ್ನೂ ಏಷ್ಟೋ ಒಳ್ಳೆಯದಾಗಿರುವುದು.

ಪವಾಡ


೨೮ ಡಿಸೆಂಬರ್ ೨೦೧೨
ಬಾದ್ ಅಂತೋಗಾಸ್ತ್, ಜರ್ಮನಿ

ನೀವು ಹಲವಾರು ಗುರು-ಕಥೆಗಳನ್ನು ಕೇಳಿದ್ದೀರಿ, ಅಲ್ಲವೇ?ಹಾಗಾಗಿ ನಾನು ಈಗ ನಿಮಗೆ ಒಂದು ಭಕ್ತ-ಕಥೆಯನ್ನು ಹೇಳುತ್ತೇನೆ.

ನವೆಂಬರ್.ನ ಕೊನೆಯ ತಿಂಗಳಲ್ಲಿ, ನಾನು ಮಹಾರಾಷ್ಟ್ರದ ಕೆಲವು ಗ್ರಾಮಗಳಲ್ಲಿ ಪ್ರಯಾಣ ಮಾಡುತ್ತಿದ್ದೆ.ನಾನೆಂದೂ ಹೋಗಿರದಿದ್ದ ಕೆಲವು ಹಳ್ಳಿ ಮತ್ತು ಜಿಲ್ಲೆಗಳಾಗಿದ್ದವು.ನನ್ನನ್ನು ಭೇಟಿಯಾಗಲೂ ಬಂದ ಬಹಳ ಜನರಿದ್ದರು.
ಒಂದು ಹಳ್ಳಿಯಲ್ಲಿ ನಾನು ನನ್ನ ಕಾರ್ಯದರ್ಶಿಗೆ ಹೇಳಿದೆನು, ’ಮೂರು ಜನ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ ಮತು ಅವರು ಬಹಳ ಬಡ ಮಂದಿ.ಹಾಗಾಗಿ ನನ್ನ ಚೀಲದಲ್ಲಿ ಮೂರು ಹೊಸ ಮೊಬೈಲ್ ಫೋನ್.ಗಳನ್ನು ಹಾಕು.’
ನಾನು ಅಲ್ಲಿಗೆ ಹೋದಾಗ, ಅಲ್ಲಿ ೨೦೦೦ದಿಂದ ೨೫೦೦ ಸ್ವಯಂಸೇವಕರು ಮತ್ತು ೨೦೦,೦೦೦ ಜನರ ಸಂಉಹವಿತ್ತು.

ಕಾರ್ಯಕ್ರಮದ ನಂತರ ಸ್ವಯಂ ಸೇವಕರ ಕೂಟದಲ್ಲಿ, ನಾನು ಹೇಳಿದೆ, ’ನಿಮ್ಮಲ್ಲಿ ಮೂರು ಜನ ಮೊಬೈಲ್ ಕಳೆದುಕೊಂಡಿದ್ದೀರಿ.ನನಗದು ತಿಳಿದಿದೆ.ನಿಮ್ಮಲ್ಲಿ ಮೊಬೈಲ್ ಕಳೆದುಕೊಂಡಿರುವವರು ನಿಂತುಕೊಳ್ಳಿ’, ಮತ್ತು ಅಲ್ಲಿ ಮೂರೇ ಜನರು ನಿಂತುಕೊಂಡರು.
ಅಲ್ಲೊಬ್ಬ ಮಹಿಳೆ ನಿಂತುಕೊಂಡಿದ್ದಳು, ನಾನವಳಿಗೆ ಹೇಳಿದೆ, ’ನೋಡು ನೀನು ನನ್ನ ಭಾವಚಿತ್ರದ ಮುಂದೆ ಕಳೆದ ವಾರ ಅಳುತ್ತಿದ್ದಿ. ನಿನಗೇನು ಮಾಡಬೇಕೆಂದು ತಿಳಿದಿರಲಿಲ್ಲ, ಅದೊಂದು ದುಬಾರಿ ಮೊಬೈಲ್ ಆಗಿದ್ದು ಎರಡು ಮೂರು ತಿಂಗಳ ಗಳಿಕೆಯಷ್ಟು ಬೆಲೆಯುಳ್ಳದ್ದರಿಂದ, ನಿನ್ನ ಕುಟುಂಬವನ್ನು ಹೇಗೆ ಎದುರಿಸುವುದೆಂದು ತಿಳಿದಿರಲಿಲ್ಲ. ಇಲ್ಲಿ, ಈ ಹೊಸದನ್ನು ತೆಗೆದುಕೊ.’

ನಾನು ಇದನ್ನು ಮಾಡುತ್ತಿದ್ದಾಗ, ಗುಂಪಿನಿಂದ ಒಬ್ಬ ಬಾಲಕ ನನ್ನ ಬಳಿಗೆ ಬಂದು ತನ್ನ ಕಥೆಯನ್ನು ಹಂಚಿಕೊಂಡ. ಅವನು ಒಂದು ಉನ್ನತ ಧ್ಯಾನ ಶಿಬಿರದಲ್ಲಿದ್ದ ಮತ್ತು ಅವನ ಹೆಂಡತಿ ಮನೆಯಲ್ಲಿದ್ದಳು, ಅವನಿಗೆ ಅವಳೊಂದಿಗೆ ಮಾತನಾಡಬೇಕಿತ್ತು. ಅವನ ಮೊಬೈಲ್.ನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ಮನೆಯಲ್ಲಿ ಮರೆತಿದ್ದ. ಹಾಗಾಗಿ ಅವನು ತನ್ನ ಫೋನನ್ನು ನನ್ನ ಭಾವಚಿತ್ರದ ಮುಂದಿಟ್ಟು ಕೇಳಿಕೊಂಡ, ’ಗುರುದೇವ, ಈ ಫೋನ್ ಚಾರ್ಜ್ ಆಗಲಿ.’
ಮರುದಿನ ಮುಂಜಾನೆ ಅವನು ಎದ್ದಾಗ, ಆ ಫೋನ್ ಪೂರ್ತಿ ಚಾರ್ಜ್ ಆಗಿತ್ತು.
ಈ ಹುಡುಗ ತನ್ನ ಫೋಣ್ ನನ್ಗೆ ತೋರಿಸಿ ಹೇಳಿದ, ’ನೋಡಿ ಒಂದೂವರೆ ವರ್ಷದಿಂದ ನಾನು ನನ್ನ ಚಾರ್ಜರ್ ಎಸೆದು, ಈಗ ನಾನು ನನ್ನ ಫೋನನ್ನು ಕೇವಲ ನಿಮ್ಮ ಭಾವಚಿತ್ರದ ಮುಂದಿಡುತ್ತೇನೆ ಮತ್ತು ಅದು ಚಾರ್ಜ್ ಆಗುತ್ತದೆ.’
ಅವನು ತನ್ನ ಚಾರ್ಜರ್ ಎಸೆದು ಬಿಟ್ಟ!
ನಾನು ಹೇಳಿದೆ, ’ಇದು ನಿಜವಾಗಿಯೂ ಒಂದು ವಿಸ್ಮಯ.ನಾನೂ ನನ್ನ ಫೋನಿಗೆ ಚಾರ್ಜರ್ ಉಪಯೋಗಿಸಬೇಕು, ಮತ್ತು ನನ್ನ ಭಕ್ತ ತನ್ನ ಮೊಬೈಲನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ನೋಡಿ ಭಕ್ತರು ಎಷ್ಟು ಶಕ್ತಿಶಾಲಿಗಳಾಗಬಹುದು.

ಇದೊಂದು ವಿಸ್ಮಯಕಾರಿ ಕಥೆ ಎಂದು ನನಗನ್ನಿಸಿತು. ಹಾಗೆ ನಾನು ಬೆಂಗಳೂರಿಗೆ ಮರಳಿದೆ ಮತ್ತು ಅಲ್ಲಿ ರಶ್ಶ್ಯ, ಪೋಲಂಡ್ ಮತ್ತು ಯುರೋಪಿನಾದ್ಯಂತದಿಂದ ಬಂದ ಸುಮಾರು ೧೫೦ ಜನರಿದ್ದರು, ಮತ್ತು ನಾನವರೊಂದಿಗೆ ಈ ಕಥೆಯನ್ನು ಹಂಚಿಕೊಂಡೆ, ’ನೋಡಿ ನನಗೆ ನನ್ನ ಫೋನನ್ನು ಚಾರ್ಜರ್ ಇಲ್ಲದೇ ಚಾರ್ಜ್ ಮಾಡಲಾಗುವುದಿಲ್ಲ ಮತ್ತು ಈ ಭಕ್ತ ತನ್ನ ಚಾರ್ಜರ್ ಎಸೆದ ಮತ್ತು ಅವನ ಫೋನನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ಆಗ ಅಲ್ಲಿದ್ದ ೧೫೦ ಜನರು ಹೇಳಿದರು, ’ಹೌದು, ಅದು ನಮಗೂ ಆಗುತ್ತದೆ.’
ನಾನು ಇದನ್ನು ಹೇಳಿದ್ದು ಅವರಿಗೆ ಯಾವುದೇ ಆಶ್ಚರ್ಯ ತರಲಿಲ್ಲ.
ಒಬ್ಬ ರಶ್ಶ್ಯನ್ ಹೇಳಿದ, ’ಅದು ನನಗೂ ಆಯಿತು.ಒಂದು ದಿನ ನಾನೂ ನನ್ನ ಫೋನನ್ನಿಟ್ಟು ಅದು ಚಾರ್ಜ್ ಆಗಲಿ ಎಂದು ಪ್ರಾರ್ಥಿಸಿದೆ, ಮತ್ತು ಅದು ನಿಜವಾಗಿ ಚಾರ್ಜ್ ಆಗಿಬಿಟ್ಟಿತು!’
ಪೋಲಂಡ್ ಮತ್ತು ಸ್ಕಾಂಡಿನೇವಿಯಾದ ಭಕ್ತರೂ ಇದೇ ಅನುಭವಗಳನ್ನು ಹಂಚಿಕೊಂಡರು.

ಇನ್ನೊಬ್ಬ ವ್ಯಕ್ತಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಹೇಳಿದರು, ’ನನ್ನ ಕಾರಿನ ಪೆಟ್ರೋಲ್ ಮುಗಿದು , ಫ಼್ಯೂಲ್ ಮಾರ್ಕರ್ ಶೂನ್ಯದತ್ತ ತಿರುಗಿ ಟ್ಯಾಂಕ್ ಖಾಲಿಯಾಗಿರುವುದನ್ನು ಸೂಚಿಸುತ್ತಿತ್ತು. ಆದರೆ ನಾನು ಡ್ರೈವ್ ಮಾಡುತ್ತಾ ಹೋದೆ, ಹಾಗೆಯೇ ೧೧೭ಕ್ಮ್ ದೂರ ಖಾಲಿ ಟ್ಯಾಂಕ್.ನೊಂದಿಗೆ ಗಾಡಿ ಓಡಿಸಿದೆ.’

ಇದು ಹೇಗೆ ಸಾಧ್ಯ?ಇದು ಎಲ್ಲಾ ಗೋಚರ ಪ್ರಕೃತಿಯ ನಿಯಮಗಳನ್ನು ಮುರಿಯುತ್ತಿರುವಂತೆ ಕಾಣುತ್ತದೆ.
ನಾನು ಹೇಳುತ್ತೇನೆ, ನಾವು ಜೀವನದಲ್ಲಿ ಪವಾಡಗಳು ನಡೆಯಲು ಅವಕಾಶ ನೀಡಬೇಕು.ಯಾರದೇ ಜೀವನ ಪವಾಡರಹಿತವಾಗಿರುವುದಿಲ್ಲ. ನಾವೇ ಅದನ್ನು ನಂಬುವುದಿಲ್ಲ.
ಈ ಜಗತ್ತಿನ ಎಲ್ಲಾ ಸಂಪ್ರದಾಯ ಹಾಗೂ ತತ್ತ್ವವಾದಗಳು ಪವಾಡಗಳ ಮೇಲೆ ಆಧಾರಿತವಾಗಿವೆ.ವಾಸ್ತವದಲ್ಲಿ ಅವು ಪವಾಡಗಳ ಮೇಲೆ ಪ್ರವರ್ಧಿಸುತ್ತವೆ.
ಬೈಬಲ್.ನ ಎಲ್ಲಾ ಪವಾಡಗಳನ್ನು ತೆಗೆದು ಬಿಡಿ ಆಗ ನಿಮಗೆ ಬೈಬಲ್ ಇಲ್ಲವೇನೋ ಎಂಬಂತೆ ಅನಿಸುತ್ತದೆ.
ಹಾಗೆಯೇ ನೀವು ಜಗತ್ತಿನ ಯಾವುದೇ ಧರ್ಮಗ್ರಂಥಗಳನ್ನು ನೋಡಿದರೆ, ಅದು ಪೂರ್ಣವಾಗಿ ಪವಾಡಗಳನ್ನು ಹೊಂದಿದೆ.ಆದರೆ ನಾವು ಅಂದುಕೊಳ್ಳುವುದು, ಪವಾಡಗಳು ಹಿಂದಿನ ದಿನಗಳ ಮಾತು, ವರ್ತಮಾನದ್ದಲ್ಲ ಎಂದು.ನಾನು ಹೇಳುತ್ತೇನೆ ಅವು ಇಂದು ನಡೆಯಲು ಸಾಧ್ಯ, ವರ್ತಮಾನದಲ್ಲಿ.

ಒಮ್ಮೆ ನಾನು ಬಾಸ್ಟನ್ ವಿಮಾನ ನಿಲ್ದಾಣದಲ್ಲಿದ್ದಾಗ ಒಬ್ಬ ಭಕ್ತ ನನಗೆ ಊಟ ತಂದು ಕೊಟ್ಟ, ಮತ್ತು ನನ್ನ ಜೊತೆ ಪ್ರಯಾಣಿಸುತ್ತಿದ್ದ ಇನ್ನೂ ನಾಲ್ಕು ಮಂದಿಗೂ ತಂದಿದ್ದ. ನನ್ನ ಜೊತೆ ಎಷ್ಟು ಜನರಿದ್ದರು, ನಿಮಗೆ ಗೊತ್ತಾ? ಸುಮಾರು ೬೦ರಿಂದ ೭೦ ಮಂದಿ ಇದ್ದರು, ಮತ್ತು ನಾಲ್ಕು ಜನರಿಗೆಂದು ತಂದಿದ್ದ ಆಹಾರವು ೬೦ ಜನರೊಳಗೆ ಹಂಚಲ್ಪಟ್ಟಿತ್ತು.ಪ್ರತಿಯೊಬ್ಬರೂ ಆಹಾರ ಸೇವಿಸಿದರು.ಇದು ನಿಮಗೆ ಆಶ್ಚರ್ಯ ತರುತ್ತದೆ - ಇದು ಹೇಗೆ ಸಾಧ್ಯ?!

ಇದಕ್ಕೆ ಒಂದು ವೈಜ್ಞಾನಿಕ ವಿವರಣೆಯೂ ಇದೆ.
ಈ ಸಂಪೂರ್ಣ ಜಗತ್ತು ಕಂಪನಗಳಲ್ಲದೇ ಬೇರೇನಲ್ಲ; ಎಲ್ಲವೂ ಕಂಪನವೇ.ವಸ್ತುವೂ ಕಂಪನಗಳದ್ದೇ ಸಮೂಹ. ವಸ್ತು ಮತ್ತು ಶಕ್ತಿ ಒಂದೇ, ಅವು ಕೇವಲ ಕಂಪನಗಳು.ನೋಡಿ, ನೀವೊಂದು ಸ್ವಯಂ-ಚಾಲಿತ ಗಾಜಿನ ಬಾಗಿಲನ್ನು ಸಮೀಪಿಸಿದಾಗ, ಕೂಡಲೇ ಆ ಗಾಜಿನ ಬಾಗಿಲು ತೆರೆದುಕೊಳ್ಳುತ್ತದೆ.ಈ ವಿದ್ಯಮಾನ ೧೦೦-೨೦೦ ವರ್ಷಗಳ ಹಿಂದೆ ನಡೆದಿದ್ದರೆ ಕಲ್ಪಿಸಿಕೊಳ್ಳಿ.ಆಗಿನ ಜನರಿಗೆ ಹುಚ್ಚು ಹಿಡಿಯುತ್ತಿತ್ತು.ಅವರು ಇದು ಹೇಗೆ ಸಾಧ್ಯ ಎಂದು ವಿಸ್ಮಯ ಪಡುತ್ತಿದ್ದರು.ನೀವು ಸುಮ್ಮನೆ ಅದರತ್ತ ಹೋದರೆ ಬಾಗಿಲು ತೆರೆದುಕೊಳ್ಳುತ್ತದೆ.
ಇಂದು ಇದು ಜೈವಿಕ ಶಕ್ತಿಯಿಂದ ಸಾಧ್ಯ ಎಂದು ನಮಗೆ ತಿಳಿದಿದೆ.ನಮ್ಮ ಶರೀರದಿಂದ ಶಕ್ತಿ ಹೊರಹೊಮ್ಮುತ್ತಿದೆ.

ನಿಮಗೆ ಗೊತ್ತೇ, ಕೆಲವು ಲಾಕ್.ಗಳನ್ನು ಕೇವಲ ಒಬ್ಬರಿಂದಲೇ ತೆರೆಯಲು ಸಾಧ್ಯ.
ನೀವು "ಬಯೋಮೆಟ್ರಿಕ್ ಲಾಕ್"ಗಳ ಬಗ್ಗೆ ಕೇಳಿರಬಹುದು.ಆ ಲಾಕ್ನಲ್ಲಿ ನಿಮ್ಮ ಶಕ್ತಿ ಅಡಕಗೊಂಡಿರುವುದಾದರೆ, ಮತ್ತಾರೂ ಅದನ್ನು ತೆರೆಯಲಾರರು.ನೀವಷ್ಟೇ ಅದನ್ನು ಮುಟ್ಟಿದಾಗ ಅದು ತೆರೆದುಕೊಳ್ಳುತ್ತದೆ.ಅದರ ಅರ್ಥ ಎಲ್ಲರೂ ಶಕ್ತಿಯನ್ನು ಹೊರಸೂಸುತ್ತಿದ್ದಾರೆ.

ನೀವು ಪ್ರೀತಿ ಹಾಗೂ ಭಕ್ತಿಯ ಸ್ಥಿತಿಯಲ್ಲಿದ್ದಾಗ, ನಿಮ್ಮ ಶಕ್ತಿ ಅಷ್ಟು ಪ್ರಬಲವಾಗಿ ಹಾಗೂ ದೊಡ್ಡದಾಗಿರುತ್ತದೆ ಅಂದರೆ ನಿಮ್ಮ ಮೊಬೈಲ್ ಚಾರ್ಜ್ ಆಗಬೇಕು ಎಂದು ನೀವು ಇಚ್ಚಿಸಿದರೆ ಅದು ಚಾರ್ಜ್ ಆಗಿ ಬಿಡುತ್ತದೆ.
ಇದು ಬಯೋಮೆಟ್ರಿಕ್ ಲಾಕ್.ನ ತೀಕ್ಷ್ಣ ಶಕ್ತಿಯಂತೆ.ನೀವು ಬಾಗಿಲನ್ನು ಸಮೀಪಿಸಿದಾಗ, ಆ ಬಾಗಿಲ ಮೇಲಿನ ಸಣ್ಣ ಪೆಟ್ಟಿಗೆ ನಿಮ್ಮ ಶಕ್ತಿಯನ್ನು ಗ್ರಹಿಸಿ ಬಾಗಿಲು ತೆರೆದುಕೊಳ್ಳುತ್ತದೆ.

ಹಾಗೆಯೇ, ಈ ಬ್ರಹ್ಮಾಂಡವು ಕೇವಲ ಶಕ್ತಿಯಿಂದ ಮಾಡಲ್ಪಟ್ಟಿದೆ.ಎಲ್ಲವೂ ಶಕ್ತಿಯೇ.ಆದ್ದರಿಂದ ಅದ್ಭುತಗಳಿಗೆ ನೆರವೇರಲು ಅವಕಾಶ ಕೊಡಿ.
ಇದೆಲ್ಲವೂ ಯಾವಾಗ ಸಾಧ್ಯ? ಇದು ನೀವು ಖಾಲಿ ಮತ್ತು ಟೊಳ್ಳಾಗಿದ್ದಾಗ ಸಾಧ್ಯ. ನಿಮ್ಮ ಹೃದಯ ಮತ್ತು ಮನಸ್ಸು ಶುದ್ಧ ಹಾಗೂ ಪ್ರಶಾಂತವಾಗಿದ್ದಾಗ, ಅಂಥ ಸ್ಥಿತಿಯಲ್ಲಿ  ಧನಾತ್ಮಕ ಶಕ್ತಿ ನಿಮ್ಮಲ್ಲಿ ಉದಯಿಸುತ್ತದೆ. ಆದರೆ ನಿಮ್ಮ ಮನಸ್ಸು ನೇತ್ಯಾತ್ಮಕತೆಯಿಂದ ತುಂಬಿದ್ದಾಗ, ಮತ್ತು ನೀವು ಮಾಮಸಿಕ ಒತ್ತಡದಲ್ಲಿದ್ದರೆ; ಅಥವಾ ನೀವು ಇದರ ಕುರಿತೂ ಅದರ ಕುರಿತೂ ದೂರುತ್ತಿದ್ದರೆ, ಆಗ ಯಾವುದೇ ಅದ್ಭುತ ಸಾಧ್ಯವಿಲ್ಲ. ನಿತ್ಯ ನಡೆಯಬೇಕಾದ ಕೆಲಸಗಳೂ ಆಗುವುದಿಲ್ಲ. ಸಾಮಾನ್ಯ ಕೆಲಸಗಳು ನಡೆಯುವುದಿಲ್ಲ ಏಕೆಂದರೆ ಶಕ್ತಿಯು ಕೆಳಮಟ್ಟದಲ್ಲಿದೆ ಮತ್ತು ನೇತ್ಯಾತ್ಮಕವಾಗಿದೆ.
ಶಕ್ತಿಯು ಮೇಲ್ಮಟ್ಟದಲ್ಲಿದ್ದಾಗ, ನೀವು ಅಸಾಧ್ಯವೆಂದುಕೊಂಡದ್ದು ನೆರವೇರಲು ಪ್ರಾರಂಭವಾಗುತ್ತದೆ.

ಒಬ್ಬ ವಿಜ್ಞಾನಿಯ ದ್ರೃಷ್ಟಿಕೋನದಿಂದಲೂ, ಅದ್ಭುತಗಳು ನಡೆಯುವುದು ಖಂಡಿತ ಸಾಧ್ಯ.
ಯಾವುದೂ ಅಸಾಧ್ಯವಲ್ಲ. ನೀವು ಸುಮ್ಮನೆ ಇವೆಲ್ಲವೂ ಹೇಗೆ ನೆರವೇರುತವೆ ಎಂಬುದರ ಗತಿಜ್ಞಾನವನ್ನು, ಮತ್ತು ಚೈತನ್ಯದ ಯಾವ ಸ್ಥಿತಿಯಲ್ಲಿ ಇವೆಲ್ಲವೂ ಸಾಧ್ಯ ಎಂದು ತಿಳಿದಿರಬೇಕು.

ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ಒಂದು ಅದ್ಭುತದ ಆ ಅನುಭವವಾಗಿದೆ?(ಹಲವರು ಕೈ ಎತ್ತುವರು).
ನೋಡಿ! ಇಲ್ಲಿ ನೀವೆಲ್ಲರೂ ಒಂದಿಲ್ಲ ಇನ್ನೊಂದು ಅದ್ಭುತವನ್ನು ಅನುಭವಿಸಿದ್ದೀರಿ.ಹಾಗೆ ನಾವು ಆ ಆಳವಾದ ಸಂಪರ್ಕವನ್ನು ಅನುಭವಿಸುತ್ತಿದ್ದಾಗ, ನಾವು ಆ ಪ್ರೀತಿ ಮತ್ತು ಭಕ್ತಿಯನ್ನು ಅನುಭವಿಸುತ್ತಿದ್ದಾಗ, ಇದೆಲ್ಲವು ಅನಾಯಾಸವಾಗಿ ನಡೆಯುತ್ತವೆ.

ಈಗ ನೀವು, "ನನ್ನ ಭಕ್ತಿಯನ್ನು ನಾನು ಹೇಗೆ ಹೆಚ್ಚಿಸಿಕೊಳ್ಳಲಿ?" ಎಂದು ಕೇಳಿದರೆ, ನಾನು ಹೇಳುತ್ತೇನೆ, ಅದನ್ನು ಹೆಚ್ಚಿಸಲು ಯಾವುದೇ ದಾರಿಯಿಲ್ಲ. ಅದನ್ನು ಮಾಡಲು ಪ್ರಯತ್ನಿಸಬೇಡಿ, ಸುಮ್ಮನೆ ವಿಶ್ರಮಿಸಿ.
ಇದುವೇ ನಿಜವಾದ ತೊಂದರೆ.
ಬಹಳ ಮಂದಿ ನನ್ನನ್ನು ಕೇಳುತ್ತಾರೆ, ’ನಾನು ಹೇಗೆ ಶರಣಾಗಲಿ? ನಾನು ಹೇಗೆ ನನ್ನ ಭಕ್ತಿಯನ್ನು ಹೆಚ್ಚಿಸಲಿ?’ ನಾನು ಹೇಳುತ್ತೇನೆ, ಅದನ್ನು ಮಾಡಲು ಯಾವುದೇ ದಾರಿಯಿಲ್ಲ. ಆದರೆ, ನೀವು ಈದನ್ನು ಕೇಳಿದರೆ, ’ನಾನು ನನ್ನ ನೇತ್ಯಾತ್ಮಕತೆಯಿಂದ ಹೇಗೆ ಮುಕ್ತಿ ಪಡೆಯಬಹುದು?’ ನಾನಾಗ ಹೇಳಬಹುದು, ’ಹೌದು, ಒಂದು ಮಾರ್ಗವಿದೆ.’
ಹೇಗೆ? ಕೇವಲ ಎಚ್ಚೆತ್ತು ನೋಡಿ! ಎದ್ದೇಳಿ! ನೇತ್ಯಾತ್ಮಕತೆಯನ್ನು ಹೋಗಬಿಡಿ. ಯೋಚಿಸಿ, ’ಸೋಹಂ ಮತ್ತು ಅದಕ್ಕೇನು(ಆಂಗ್ಲದಲ್ಲಿ "ಸೋ ವಾಟ್")!’ ಈ ಎರಡು ವಿಷಯಗಳಿವೆ.

ಮೊದಲು, ತೊಂದರೆಯಲ್ಲಿದ್ದಾಗ ಅಥವಾ ನೇತ್ಯಾತ್ಮಕತೆಯನ್ನು ಎದುರಿಸುವಾಗ, ಇಷ್ಟನ್ನು ಯೋಚಿಸಿ , ’ಅದಕ್ಕೇನು? ಇದೂ ಸರಿ.’
ಮತ್ತೆ, ’ಸೋಹಂ’(ಶಬ್ದಾರ್ಥದಲ್ಲಿ ’ನಾನು ಆ ತತ್ತ್ವ’ ಅಂದರೆ ಆತ್ಮನನ್ನು ದಿವ್ಯ ಚೈತನ್ಯದೊಂದಿಗೆ ಗುರುತಿಸಿಕೊಳ್ಳುವುದು).
ಈ ರೀತಿ ನೀವು ನೇತ್ಯಾತ್ಮಕತೆಯಿಂದ ಮುಕ್ತರಾಗಿ ನಿಮ್ಮ ಚೈತನ್ಯವನ್ನು ಉನ್ನತ ಸ್ಥರದಲ್ಲಿ ಇಟ್ಟುಕೊಳ್ಳಬಹುದು.

ನಿಮಗೆ ಗೊತ್ತೇ, ಯಾರಾದರೂ ಬೇಸರದಲ್ಲಿದ್ದರೆ ಅವರು ತಮ್ಮ ಸುತ್ತಲಿನ ಎಲ್ಲರನ್ನೂ ಕೆಳಗೆಳೆಯುತ್ತಾರೆ.ನೀವು ಅವರೊಡನೆ ಮಾತನಾಡಿದರೆ, ನಿಮಗೆ ತಿಳಿಯುತ್ತದೆ ಅವರು ಕೇವಲ ತಮ್ಮ ಬಗ್ಗೆ ಬೇಸರದಲ್ಲಿರುವುದಲ್ಲದೇ ತಮ್ಮ ಸುತ್ತಲಿನ ಎಲ್ಲರನ್ನೂ ಕೆಳಗೆಳೆಯಲು ಪ್ರಯತ್ನಿಸುತ್ತಾರೆ.ಇದು ಅವರ ಕೆಲಸ.ನೀವ ಯಾರನ್ನಾದರೂ ಇಷ್ಟಪಡದಿದ್ದರೆ ನೀವು ಅವರನ್ನು ದೂರುತ್ತಾ ಹೋಗುತ್ತೀರಿ, ಮತ್ತು ಬೇರೆ ಯಾರಾದರೂ ಅವರನ್ನು ಇಷ್ಟಪಟ್ಟರೆ, ನೀವು ಅವರಿಗೂ ಹೇಳುತ್ತೀರಿ, ’ನೋಡಿ ಆ ವ್ಯಕ್ತಿ ಒಳ್ಳೆಯವರಲ್ಲ’.

ಅದಲ್ಲದೇ, ಕೆಲವು ಮಂದಿಯಿದ್ದಾರೆ, ಅವರು ಯಾವ ರೀತಿಯಲ್ಲಿ ಹೇಳುತ್ತಾರೆಂದರೆ ನೀವು ಅವರ ನೇತ್ಯಾತ್ಮಕತೆಗೆ ಮರುಳಾಗಬಹುದು. ಅವರು ಹೇಳುತ್ತಾರೆ, ’ನೋಡಿ, ನಾನು ಆ ವ್ಯಕ್ತಿಯ ಬಗ್ಗೆ ಕೆಟ್ಟ ಅಭಿಪ್ರಾಯ ರಚಿಸಲು ಇಷ್ಟಪಡುವುದಿಲ್ಲ, ಹಾಗಾಗಿ ನಾನು ಅವರ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ನಾನು ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ತಿಳುವಳಿಕೆಯನ್ನು ಹಾಳುಮಾಡಲು ಇಚ್ಚಿಸುವುದಿಲ್ಲ.’ ಆದರೆ ಆಗಲೇ ಕೇಡು ಉಂಟಾಗಿದೆ.
ಏನಾಗಿದೆಯೆಂದು ನೀವು ನೋಡುತ್ತಿದ್ದೀರಾ?ಆ ಸಂಶಯವನ್ನು ಆಗಲೇ ನಿಮ್ಮ ಮನಸ್ಸಿನಲ್ಲಿ ಬಿತ್ತಾಗಿದೆ.
ಹಾಗಾಗಿ ಹೆಚ್ಚು ಶಕ್ತಿಯಿಲ್ಲದ ಜನರು ತಾವು ದುಃಖದಲ್ಲಿದ್ದಾಗ ಎಲ್ಲರನ್ನೂ ಕೆಳಗೆಳೆಯಲು ಪ್ರಯತ್ನಿಸುತ್ತಾರೆ, ಮತ್ತೆ ಎಲ್ಲರೂ ದುಃಖದಲ್ಲಿರುವುದನ್ನು ನೋಡಿ ಅವರು ಸಂತೋಷ ಪಡುತ್ತಾರೆ.
ಅವರು ಇದನ್ನು ಅರಿವಿಲ್ಲದೇ ಮಾಡುತ್ತಾರೆ.ಅವರಿಗೆ ಇದರ ಅರಿವಿಲ್ಲ, ಅವರು ಇದನ್ನು ಮಾಡುತ್ತಿದ್ದಾರೆ ಎಂಬುದರ ಅರಿವು ಅವರಿಗಿಲ್ಲ.

ರಾಮಾಯಣದಲ್ಲಿ ಒಂದು ಕಥೆಯಿದೆ.
ಭಗವಾನ್ ರಾಮನ ಸೈನ್ಯದಲ್ಲಿದ್ದ ವಾನರರಿಗೆ ಭಾರತ ಮತ್ತು ಶ್ರೀಲಂಕೆಯ ನಡು ಒಂದು ಸೇತುವೆ ಕಟ್ಟಬೇಕಾಗಿತ್ತು ಮತ್ತು ಎಲ್ಲಾ ತಂಡಗಳು ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದವು.ಹಾಗಾಗಿ ಅವರೇನು ಮಾಡಿದರೆಂದರೆ, ಪ್ರತಿಯೊಂದು ಕಲ್ಲಿನ ಮೇಲೂ ’ಶ್ರೀ ರಾಮ’ ಎಂದು ಬರೆದು ಮತ್ತೆ ಆ ಕಲ್ಲುಗಳನ್ನು ನೀರಿನಲ್ಲಿ ಹಾಕುತಿದ್ದರು, ಆಗ ಆ ಕಲ್ಲು ತೇಲುತ್ತಿತ್ತು.
ಈಗ ಭಗವಾನ್ ರಾಮ ತಾನೇ ಅಲ್ಲಿ ಬಂದಾಗ, ಎಲ್ಲರೂ ತನ್ನ ಹೆಸರನ್ನು ಕಲ್ಲಿನಲ್ಲಿ ಬರೆದು ನೀರಿಗೆ ಹಾಕಿದಾಗ ಅದು ತೇಲುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡ. ಹಾಗಾಗಿ ಅವರಿಗೆ ಅದನ್ನು ಮಾಡಲು ಪ್ರಯತ್ನಿಸಬೇಕೆನಿಸಿತು. ಹೀಗೆ ಅವರೊಂದು ಕಲ್ಲನ್ನೆತ್ತಿ ಅದರ ಮೇಲೆ ’ಶ್ರೀ ರಾಮ’ ಎಂದು ಅದರ ಮೇಲೆ ಬರೆದು ಅದನು ನೀರಿಗೆ ಹಾಕಿದರು, ಆದರೆ ಆ ಕಲ್ಲು ಮುಳುಗಿ ಹೋಯಿತು, ಅದು ತೇಲಲಿಲ್ಲ. ಹಾಗಾಗಿ ಭಕ್ತರು ಅವರಿಗೆ ಹೇಳಿದರು, ’ನಿಮಗೆ ಭಕ್ತಿ ಎಂದರೆ ಏನೆಂದು ಗೊತ್ತಿಲ್ಲ. ನಮಗೆ ಮಾಡಲು ಆಗುತ್ತಿರುವುದು ನಿಮಗೆ ಆಗುವುದಿಲ್ಲ.’
ಹಾಗಾಗಿ ಭಕ್ತ ಒಂದು ಹೆಜ್ಜೆ ಮೇಲಿದ್ದಾನೆ ಎಂದು ಹೇಳಲಾಗುತ್ತದೆ ಮತ್ತು ಅವರಲ್ಲಿ ಅಪಾರ ಶಕ್ತಿಯಿದೆ.

ಈ ಭೂಮಿಯಲ್ಲಿ ಪ್ರೀತಿಯು ಅತ್ಯಂತ ಶಕ್ತಿಯುತವಾದುದು.ಯಾರಿಗೂ, ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೆ, ಯಾವುದೇ ವಸ್ತುಸ್ಥಿತಿಯಲ್ಲಿ ಅದನ್ನು ನಶಿಸಲು ಬಿಡಬೇಡಿ.
ನಮ್ಮ ಪ್ರೀತಿಯು ಬಹಳ ಸೂಕ್ಷ್ಮವಾದುದು, ಅದರಲ್ಲೂ ನಾವು ಅದನ್ನು ಎಷ್ಟು ದುರ್ಬಲ ಮಾಡುತ್ತೇವೆಂದರೆ ಕೇವಲ ಇತರರ ನೇತ್ಯಾತ್ನಕ ಮಾತುಗಳನ್ನು ಕೇಳಿ, ಅವರ ನೇತ್ಯಾತ್ಮಕ್ತೆ ನಮ್ಮ ಮನಸ್ಸನ್ನು ತುಂಬಿಕೊಂಡು ನಾವು ನಮ್ಮ ಸ್ವಂತ  ಉನ್ನತ ಶಕ್ತಿಯನ್ನು ನಾಶ ಮಾಡಿಕೊಳ್ಳಲು ಆರಂಭಿಸುತ್ತೇವೆ.
ಈಗ ಅದರ ಅರ್ಥ ನೀವು ಕುರುಡರಾಗಿರಬೇಕೆಂದಲ್ಲ. ನಾವು ಬೌದ್ಧಿಕವಾಗಿ ಚುರುಕಾಗಿರಬೇಕು ಮತ್ತು ವಿವೇಚನೆಯಲ್ಲಿ ಸರಿಯಾಗಿರಬೇಕು, ಮತ್ತು ಅದೇ ಸಮಯದಲ್ಲಿ ನಮಗೆ ಸಿಕ್ಕಿರುವಂಥ ಪ್ರೀತಿ ಎಂಬ ರಮಣೀಯವಾದ ಉಡುಗೊರೆಯನ್ನು ಕಾದಿರಿಸಿಕೊಳ್ಳಬೇಕು. ನೀವೊಂದು ಮಗುವನ್ನು ಹೇಗೆ ಕಾಪಾಡುತ್ತೀರೋ ಅದೇ ರೀತಿ ಇದನ್ನು ಕಾಪಾಡಬೇಕು.ನೀವೊಂದು ಮಗುವನ್ನು ಕೆಳಗೆ ಬೀಳುವುದರಿಂದ ಅಥವಾ ಕಳೆದುಹೋಗದಂತೆ ಹೇಗೆ ಕಾಪಾಡುತ್ತೀರಿ?ನೀವು ಆ ಮಗುವನ್ನು ಯಾವಾಗಲೂ ಗಮನಿಸಿಕೊಂಡು ಅದನ್ನು ಕಾಪಾಡುತ್ತೀರಿ- ಆ ಮಗು ಎಲ್ಲಿ ಹೊರಳುತ್ತಿದೆ, ಎತ್ತ ಹೋಗುತ್ತಿದೆ ಮತ್ತು ಏನು ಮಾಡುತ್ತಿದೆ ಎಂದು.ಅದೇ ರೀತಿ ನಾವು ಈ ಆಂತರ್ಯದ ಸಂಪತ್ತನ್ನು ಕಾಪಾಡಿಕೊಳ್ಳಬೇಕು.ಇದು ಬಹಳ ಮುಖ್ಯವಾದುದು.
ಅದ್ಭುತಗಳಿಗೆ ನಡೆಯಲು ಒಂದು ಅವಕಾಶ ನೀಡಿ. ನೀವು ಸುಮ್ಮನೆ ಕುಳಿತುಕೊಂಡು ’ಒಂದು ಅದ್ಭುತವು ಈಗ ನಡೆಯಬೇಕೆಂದು ನಾನು ಇಚ್ಚಿಸುತ್ತೇನೆ’ ಎಂದು ಹೇಳಿ ಅದನ್ನು ನಡೆಸಬೇಕೆಂದಲ್ಲ. ಅದು ಹಾಗಲ್ಲ. ನಾನು ನಿಮಗೆ ಹೇಳುತ್ತೇನೆ, ನೀವು ಒಂದು ಅದ್ಭುತ ನಡೆಯಲೇ ಬೇಕೆಂದು ಇಟ್ಟುಕೊಂಡಿದ್ದರೆ ಅದು, ಯಾರಾದರೂ ಅದ್ಭುತಗಳು ಸಾಧ್ಯ ಎಂದು ನಿಮ್ಮನ್ನು ನಂಬಿಸಲು ಹೊರಟಷ್ಟೇ ಮೂರ್ಖತನ.

ನಿಮ್ಮನ್ನು ಅದ್ಭುತಗಳತ್ತ ನಂಬಿಸಲು ಹೊರಟು ’ನಾನು ಶೂನ್ಯದಿಂದ ಏನನ್ನಾದರೂ ಸೃಷ್ಟಿಸುತ್ತೇನೆ.’ ಎಂದು ಹೇಳುವವರ ಬಳಿ ಎಂದೂ ಹೋಗಬೇಡಿ.ಇದು ಸರಿಯಾದ ವಿಚಾರವೇ ಅಲ್ಲ.
ಅದ್ಭುತಗಳ ಹಿಂದೆ ಓಡಬೇಡಿ, ಆದರೆ ಅದೇ ಸಮಯದಲ್ಲಿ ಅವುಗಳನ್ನು ನಡೆಯುವುದರಿಂದ ತಡೆಯಬೇಡಿ.ಯಾರಾದರೂ ತಮ್ಮ ಕೇಂದ್ರದಲ್ಲಿರುವವರು, ಜ್ಞಾನೋದಯವಾದವರು ಎಂದೂ ಪವಾಡಗಳನ್ನು ನಡೆಸಲು ಪ್ರಯತ್ನಿಸುವುದಿಲ್ಲ. ಪವಾಡಗಳು ಸುಮ್ಮನೆ ನಡೆದು ಹೋಗುತ್ತವೆ; ಅವು ಜೀವನದ ಒಂದು ಭಾಗ. ಸುಮ್ಮನೆ ಅವುಗಳನ್ನು ಉಂಟಾಗಲು ಬಿಡಿ.ಯಾರನ್ನಾದರೂ ಮನದಟ್ಟು ಮಾಡಲು ಅಥವಾ ಏನನ್ನಾದರೂ ಸೃಷ್ಟಿಸಲು ಪ್ರಯತ್ನಿಸಬೇಡಿ, ಅದು ಒಳ್ಳೆಯದಲ್ಲ. ನಾನು ಏನು ಹೇಳುತ್ತಿದ್ದೇನೆಂಬುದನ್ನು ನೀವು ಕಾಣುತ್ತಿದ್ದೀರಾ?
ಅದು ನಿಮ್ಮ ಪ್ರೌಡತೆ ಮತ್ತು ಚೈತನ್ಯದ ಅರಳುವಿಕೆಯನ್ನು ತೋರಿಸುವುದಿಲ್ಲ.
ನಾವು ಯಾರನ್ನೇ ಆಗಲಿ ಮನದಟ್ಟು ಮಾಡಬೇಕಾಗಿಯೇ ಇಲ್ಲ. ಯಾರಾದರೂ ಅದನ್ನು ಮಾಡಲು ಪ್ರಯತ್ನಿಸಿದರೆ, ಅವರು ತಾವು ಏನು ಎಂದು ಯೋಚಿಸುತ್ತಿದ್ದಾರೋ ಅದು ಆಗಿಲ್ಲ, ಅಥವಾ ಏನಾಗಬೇಕೆಂದು ಇಚ್ಚಿಸುತ್ತಾರೋ ಅದು ಆಗಿಲ್ಲ.

ಪ್ರೀತಿ ಮತ್ತು ಭಕ್ತಿಯ ಶಕ್ತಿ ಅಷ್ಟೊಂದು.ಮತ್ತು ಈ ಸತ್ಸಂಗ, ಸೇವೆ ಮತ್ತು ಸಾಧನೆಗಳು ಇದನ್ನು ನೆರವೇರಿಸಲು ಕೇವಲ ಒಂದು ಬೆಂಬಲ.ಸತ್ಸಂಗದಲ್ಲಿ ಕುಳಿತುಕೊಳ್ಳಿ ಮತ್ತು ನೋಡಿ ನಿಮ್ಮಲ್ಲಿನ ಶಕ್ತಿ ಹೇಗೆ ಹೊಮುತ್ತದೆ.ಬಹಳಷ್ಟು ಸ್ಫೂರ್ತಿದಾಯಕ ಕಥೆಗಳು ನಿಮಗೆ ಕೇಳಿಬರುತ್ತವೆ.
ನೀವೆಲ್ಲರೂ ಯಾವುದಾದರೂ ಸ್ಫುರ್ತಿದಾಯಕ ಅನುಭವಗಳನ್ನು ಹೊಂದಿದ್ದೀರಿ, ಮತ್ತು ನೀವದನ್ನು ಬರೆಯಬೇಕು ಮತ್ತು ಹಂಚಿಕೊಳ್ಳಬೇಕು ಏಕೆಂದರೆ ಅದು ಇತರರಿಗೆ ಸ್ಫೂರ್ತಿ ನೀಡುತ್ತದೆ.
ನಾನಿದನ್ನು ಏಕೆ ಹೇಳುತ್ತಿದ್ದೇನೆಂದರೆ ನೀವು ಬೇರೆ ಯಾರಿಗಾದರೂ ಒಳ್ಳೆಯದಾಗುತ್ತಿದೆ ಎಂದು ಕೇಳಿದರೆ, ಅದು ನಿಮ್ಮನ್ನೂ ಮೇಲೆತ್ತುತ್ತದೆ.
ಇಂದಿನ ಜಗತ್ತಿನಲ್ಲಿ ನೀವು ಬಹಳಷ್ಟು ನೇತ್ಯಾತ್ಮಕ ಕಥೆಗಳನ್ನು ಯಾವಾಗಲೂ ಕೇಳುತ್ತೀರಿ.ನೀವು ಕಳ್ಳತನದ ಬಗ್ಗೆ ಅಥವಾ ಬಲಾತ್ಕಾರ ನೆಡೆದ ಬಗೆ ಕೇಳುತ್ತೀರಿ.ನೀವು ಯಾರೋ ಇನ್ನೊಬ್ಬರಿಗೆ ಮೋಸ ಮಾಡಿದ ಬಗ್ಗೆ ಕೇಳುತ್ತೀರಿ ಮತ್ತು ಇನ್ನೂ ಹಲವು ಅಪರಾಧಗಳು ನಿಮ್ಮ ಸುತ್ತ ನಡೆಯುತ್ತಿರುವುದರ ಬಗ್ಗೆ ಕೇಳುತ್ತೀರಿ.
ನೀವು ಇದನ್ನೆಲ್ಲ ಕೇಳಿದಾಗ ನೀವು ಜೀವನದ ಉತ್ಸಾಹವನ್ನು ಕಳೆದುಕೊಳ್ಳುತ್ತೀರಿ.ಬಹಳ ಯುವ ಜನರು ಕೇವಲ ನೇತ್ಯಾತ್ಮಕ ಕಥೆಗಳನ್ನು ಕೇಳುವುದರಿಂದ ಜೀವನದ ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ.

ಬೇಸಿಗೆಯಲ್ಲಿ ನಾನು ಕೆನಡಾದಲ್ಲಿದ್ದಾಗ ಒಂದು ದಂಪತಿ ನನ್ನನ್ನು ಕಾಣಲು ಬಂದರು.
ಅವರು ಹೇಳಿದರು, ’ನಮ್ಮ ೧೮ ಹರೆಯದ ಮಗ ಆತ್ಮಹತ್ಯೆ ಮಾಡಿಕೊಂಡ. ಅವನು ಬಹಳ ಬುದ್ಧಿವಂತ ಹುಡುಗನಾಗಿದ್ದ. ಅವನು ಒಂದು ಕಾಗದ ಬರೆದಿಟ್ಟು ಹೋದ, ’ಅಮ್ಮ, ಅಪ್ಪ,  ಈ ಜಗತ್ತು ಬದುಕಲು ಯೋಗ್ಯವಾದ ಸ್ಥಳವೆಂದು ನನಗೆ ಕಾಣುವುದಿಲ್ಲ. ಪ್ರತಿ ದಿನ ಎಷ್ಟೊಂದು ಅಪರಾಧಗಳು ನಡೆಯುತ್ತಿವೆ. ನನಗೆ ಇಲ್ಲ ಇರಲು ಬಯಕೆಯಿಲ್ಲ ಮತ್ತು ನಾನಿದರಿಂದ ಬೇಸತ್ತು ಹೋಗಿದ್ದೇನೆ.’ ಅವನು ಈ ಮನೋಭಾವವನ್ನು ಹೇಗೆ ಬೆಳೆಸೊಕೊಂಡನು ಗೊತ್ತೇ?ಕೇವಲ ವಾರ್ತೆಗಳನ್ನು ನೋಡುವುದರಿಂದ.
ಅವನ ಕಾಗದದಲ್ಲಿ ಅವನು ಇನ್ನೂ ಬರೆದ,
’ನಾನು ನಿಮಗೆ ಕಷ್ಟ ಹಾಗೂ ದುಃಖ ತರುತ್ತಿರುವುದಕ್ಕಾಗಿ ನನ್ನನ್ನು ಕ್ಷಮಿಸಿ, ಆದರೆ ನನಗೆ ಬದುಕಿರಲು ಇಷ್ಟವಿಲ್ಲ.’
ಹಾಗೆ ಈ ಹುಡುಗ ಈ ಕಾಗದವನ್ನು ಬರೆದು ನಂತರ ಆತ್ಮಹತ್ಯೆ ಮಾಡಿಕೊಂಡ.
ನಾವೆಲ್ಲರೂ ನಮ್ಮ ಸುತ್ತಲಿರುವ ಎಲ್ಲರಿಗೂ ಧನಾತ್ಮಕ ಸುದ್ದಿಯನ್ನು ತರುವ ಸಂಕಲ್ಪ ತೆಗೆದುಕೊಳ್ಳಬೇಕು ಏಕೆಂದರೆ ಈ ಜಗತ್ತು ಪ್ರೀತಿಯಿಂದ ಆಳಲ್ಪಟ್ಟಿದೆ; ಆ ಜ್ಯೋತಿಯಿಂದ.
ಆ ಜ್ಯೋತಿಯು ನಿಮಗೆ ಅಷ್ಟೊಂದು ಉಡುಗೊರೆಗಳನ್ನು ತರುತ್ತದೆ ಮತ್ತು ಅಷ್ಟೊಂದು ಅದ್ಭುತಗಳು ಸಾಧ್ಯವಾಗಿವೆ.
ಪ್ರತಿ ದಿನ ನಾನು ಜಗತ್ತಿನಾದ್ಯಂತದಿಂದ ಜನರು ಕೃತಜ್ಞ್ನತೆ ಸಲ್ಲಿಸುವ ಮತ್ತು ಅವರ ಜೀವನಗಳಲ್ಲಿ ನಡೆಯುತ್ತಿರುವ ಅದ್ಭುತಗಳನ್ನು ವಿವರಿಸುವಂಥ ಸಾವಿರಾರು ಈಮೇಲ್.ಗಳನ್ನು ಪಡೆಯುತ್ತೇನೆ ಪಡೆಯುತ್ತೇನೆ.
ನಾನು ಆ ಎಲ್ಲಾ ಕಾಗದಗಳನ್ನು ಹೊರಗೆ ನಿಮ್ಮೆಲ್ಲರ ಮುಂದೆ ತಂದರೆ ಚೆನ್ನಾಗಿರುವುದಿಲ್ಲ, ಆದರೆ ನಾನು ಹೇಳುತ್ತೇನೆ, ನೀವು ನಿಮ್ಮ ಅನುಭವಗಳನ್ನು ಬರೆಯಬೇಕು ಮತ್ತು ಉಳಿದವರೊಂದಿಗೆ ಹಂಚಿಕೊಳ್ಳಬೇಕು.ಅದರ ತೀವ್ರ ಅಗತ್ಯವಿರುವವರಿಗೆಲ್ಲ ಒಂದು ಆಶಾ ಕಿರಣವನ್ನು ತನ್ನಿ.

ನೀವು ಕಥೆಗಳನ್ನು ಕಟ್ಟಬೇಕಾಗಿಲ್ಲ. ತಪ್ಪು ಕಥೆಗಳನ್ನು ಕಟ್ಟುವುದು ಸಂಪೂರ್ಣವಾಗಿ ಇನ್ನೊಂದು ವಿಪರೀತ.ಅದು ಒಳ್ಳೆಯದಲ್ಲ. ಆದರೆ ನಿಮ್ಮ ಜೀವನದಲ್ಲಿ ಏನೇ ಒಳ್ಳೆಯದು ನಡೆಯುತ್ತಿದ್ದರೆ, ಕನಿಷ್ಟ ಅದನ್ನು ನೀವು ಉಳಿದವರ ಜೀವನದಲ್ಲಿ ತರಬೇಕು.ನೀವು ಜನರಲ್ಲಿ ಅದರ ಅರಿವು ಮೂಡಿಸಬೇಕು.ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಅದ್ಭುತಗಳನ್ನು ಬರೆಯಿರಿ.
ಆದರೂ ಅದನ್ನು ಚಿಕ್ಕದಾಗಿ ಇಡಿ, ಬಹಳ ದೊಡ್ಡದಾಗಿ ಅಲ್ಲ. ಕೆಲವೊಮ್ಮೆ ಜನ ಅಂಥ ದೊಡ್ಡ ಕಥೆಗಳನ್ನು ಬರೆಯುತ್ತಾರೆಂದರೆ ನಿಮಗೆ ಅದನ್ನು ಪೂರ್ತಿಯಾಗಿ ಓದಲು ಮನಸ್ಸೇ ಆಗುವುದಿಲ್ಲ. ಬರೇ ಒಂದು ಖಂಡ ಓದುತ್ತಲೇ ನಿಮಗೆ ಅದನ್ನು ಮುಚ್ಚಬೇಕನಿಸುತ್ತದೆ. ಹಾಗೆ ನಿಮ್ಮ ಅನುಭವಗಳನ್ನು ಬರೆಯಿರಿ ಆದರೆ ಅದು ಚಿಕ್ಕದಾಗಿ ಮತ್ತು ಜೀವತುಂಬಿರಬೇಕು.ನೀವು ತಿಳಿದಿರುವ ಮತ್ತು ಹಂಚಬೇಕೆಂದಿರುವ ನಿಮ್ಮ ಯಾವುದೇ ವಾಸ್ತವ ಅನುಭವಗಳನ್ನು ಬರೆಯಬೇಕು.ಅದುವೇ ನಿಜವಾಗಿ ಸ್ಫೂರ್ತಿ ನೀಡಬಲ್ಲದ್ದು.
ನಿಮಗೆ ಗೊತ್ತೇ, ನಾವು ಏನಾದರೂ ವಾಸ್ತವವಾದುದನ್ನು ಹಂಚಿಕೊಂಡಾಗ, ಅದು ಇತರರ ಜೀವನದಲ್ಲಿ ಒಂದು ಬಹಳ ಧನಾತ್ಮಕ ಪರಿಣಾಮವನ್ನು ಬೀರುತ್ತೀರಿ.ನಾವು ಜನರನ್ನು ಬೆಳಕಿನತ್ತ, ಜೀವನದತ್ತ ಮತ್ತು ಪ್ರೀತಿಯತ್ತ ಮುನ್ನಡೆಸಬೇಕಾದ ರೀತಿ ಇದು.
ಇದು ಎಂದಿಗಿಂತಲೂ ಹೆಚ್ಚಾಗಿ ಇಂದು ಅಗತ್ಯವಾಗಿದೆ.

ಪ್ರತಿ ದಿನ ನಾನು ಜನರಿಂದ ಬಹಳಷ್ಟು ಪತ್ರಗಳನ್ನು ಪಡೆಯುತ್ತೇನೆ.
ಆಶಾವಾದ ಕಳೆದುಕೊಂಡಿದ್ದ ವೈದ್ಯರು, ಯಾರೋ ಆರು ತಿಂಗಳೊಳಗೆ ಜೀವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದೂ ಆದರೂ ಇನ್ನೂ, ಆ ಘಟನೆಯಾಗಿ ವರ್ಷಗಳು ಕಳೆದಿದ್ದರೂ ಬದುಕಿದ್ದಾರೆ.

ಹಲವಾರು ತೊಂದರೆಗಳು ವಾಸಿಯಾಗಿವೆ.ಅಂಥ ಸಾವಿರಾರು ಕಾಗದಗಳಿವೆ.

ಇಂದು, ನಮ್ಮ ಮನಃಸ್ಥಿತಿ ಹೇಗಾಗಿದೆಯೆಂದರೆ ನಾವು ಈ ಶಕ್ತಿಯ ಕ್ಷೇತ್ರವನ್ನು ನಂಬುವುದನ್ನೇ ಬಿಟ್ಟುಬಿಟ್ಟಿದ್ದೇವೆ.ನಾವು ನಮಗೆ ಗೊತ್ತುಮಾಡಿಸಿದ ರಾಸಾಯನಿಕ ಗುಳಿಗೆಗಳನ್ನು ಹೆಚ್ಚು ನಂಬಬಯಸುತ್ತೇವೆ.

ಹೇಗಿದ್ದರೂ, ನೀವು ಯಾವುದೇ ವಿಪರೀತದತ್ತ ತೂಗಬಾರದು. ’ಓ, ಗುರೂಜಿ ಶಕ್ತಿಯ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ, ಹಾಗಾಗಿ ನನಗೆ ಗೊತ್ತುಮಾಡಿರುವ ಯಾವುದೇ ಔಷಧಿಗಳನ್ನು ನಾನು ತೆಗೆದುಕೊಳ್ಳುವುದಿಲ್ಲ. ನಾನು ಅವುಗಳನ್ನು ಎಸೆದು ಬಿಡುತ್ತೇನೆ.’ ಅಲ್ಲ! ನಾವು ಈ ರೀತಿ ನಡೆದುಕೊಳ್ಳಬಾರದು.
ನಾವು ವೈದ್ಯರ ಸಲಹೆ ತೆಗೆದುಕೊಳ್ಳಬೇಕು, ಆದರೆ ಅದೇ ಸಮಯದಲ್ಲಿ, ನಾನು ನಿಮಗೆ ಹೇಳುತ್ತಿರುವುದೇನೆಂದರೆ, ಪವಾಡಗಳಿಗೆ ನಡೆಯಲು ಒಂದು ಅವಕಾಶ ನೀಡಿ.
ಅದು ಇದರ ರಸಸತ್ತ್ವ.

ಗುರುವಾರ, ಡಿಸೆಂಬರ್ 27, 2012

ಪುನರ್ಜನ್ಮ


೨೭ ದಶಂಬರ ೨೦೧೨
ಬಾಡ್ ಅಂತೋಗಸ್ಟ್, ಜರ್ಮನಿ

ಪ್ರಶ್ನೆ: ನಾವು ಪುನರ್ಜನ್ಮವನ್ನು ಯಾಕೆ ತಪ್ಪಿಸಬೇಕೆಂದು ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ನೀವು ಎಚ್ಚೆತ್ತು ನೋಡಿದರೆ, ಜೀವನದಲ್ಲಿ ಬಹಳಷ್ಟು ದುಃಖವಿದೆ, ಮತ್ತು ನೀವು ಇಷ್ಟಪಡದೇ ಇರುವುದು ದುಃಖವನ್ನು. ನೀವು ದುಃಖವನ್ನು ಬಯಸುವುದಿಲ್ಲ. ನಾವು ಯಾವುದನ್ನು ಹೊಂದಲು ಬಯಸುವುದಿಲ್ಲವೋ ಅದು ದುಃಖವೆಂದು ಕರೆಯಲ್ಪಡುತ್ತದೆ ಮತ್ತು ಅದು ಜೀವನದಲ್ಲಿದೆ. ಪತಿ ಮತ್ತು ಪತ್ನಿಯ ನಡುವೆ, ತಂದೆ ಮತ್ತು ತಾಯಿಯ ನಡುವೆ, ತಾಯಿ ಮತ್ತು ಮಗಳ ನಡುವೆ, ಮಗಳು ಮತ್ತು ಮಗನ ನಡುವೆ, ಸ್ನೇಹಿತರೊಂದಿಗೆ ಮತ್ತು ಶತ್ರುಗಳೊಂದಿಗೆ, ದುಃಖವಿದೆ. ನಿಮ್ಮ ಶರೀರ ಕೂಡಾ ನಿಮಗೆ ಇನ್ನೂ ಹೆಚ್ಚಿನ ದುಃಖವನ್ನು ತರುತ್ತದೆ. ನೀವೇನೇ ಮಾಡಿದರೂ, ಅಲ್ಲಿ ಸ್ವಲ್ಪ ದುಃಖವಿದೆ.
ನೀವು ಈ ಜಗತ್ತಿನಲ್ಲಿ ಹುಟ್ಟುವಾಗ, ನೀವು ಅವಲಂಬಿತರಾಗುತ್ತೀರಿ. ನೀವೊಂದು ಶಿಶುವಾಗಿರುವಾಗ, ನಿಮಗೆ ನೀವೇ ಆಗಿ ಎದ್ದು ನಿಲ್ಲಲೂ ಸಾಧ್ಯವಿರುವುದಿಲ್ಲ, ಯಾರಾದರೂ ನಿಮ್ಮನ್ನು ಎತ್ತಬೇಕು ಮತ್ತು ಯಾರಾದರೂ ನಿಮ್ಮನ್ನು ಒರೆಸಬೇಕು. ನೀವು ಹುಟ್ಟಿದಂದಿನಿಂದ ನೀವು ಅವಲಂಬಿತರಾಗಿರುವಿರಿ, ಮತ್ತು ವಯಸ್ಸಾಗುವಾಗ ಕೂಡಾ ನೀವು ಅವಲಂಬಿತರಾಗುವಿರಿ, ಆದರೆ ಹಣವು, ನೀವು ನಿರಾವಲಂಬಿಗಳೆಂಬ ಒಂದು ಸುಳ್ಳು ಅಭಿಪ್ರಾಯವನ್ನು ನಿಮಗೆ ನೀಡುತ್ತದೆ. ಅದಕ್ಕಾಗಿಯೇ ಅದು ಮಾಯೆಯೆಂದು ಕರೆಯಲ್ಪಡುವುದು. ಮಾಯೆಯೆಂದರೆ ಅದೊಂದು ಛಾಪನ್ನು ಸೃಷ್ಟಿಸುತ್ತದೆಯೆಂದು ಅರ್ಥ.
ನೀವು ಯಾರಿಗಾದರೂ ಕೆಲವು ಡಾಲರ್ ನೋಟುಗಳನ್ನು ನೀಡಿದರೆ, ಅವರು ಬಂದು ನಿಮಗಾಗಿ ಕೆಲಸ ಮಾಡುತ್ತಾರೆ, ಮತ್ತು ಅದು ನಿಮಗೆ ನೀವು ನಿರಾವಲಂಬಿಗಳೆಂಬ ಭಾವನೆಯನ್ನು ನೀಡುತ್ತದೆ. ಜೀವನದಲ್ಲಿ ಅವಲಂಬನೆಯಿದೆ. ಎಲ್ಲಿ ಅವಲಂಬನೆಯಿರುವುದೋ ಅಲ್ಲಿ ದುಃಖವಿದೆ. ಯಾವುದು ದುಃಖದಾಯಕವಾಗಿರುವುದೋ ಅದು ಹಿತವಾಗಿರುವುದಿಲ್ಲ ಮತ್ತು ಅದನ್ನು ಹೊಂದಲು ನೀವು ಬಯಸುವುದಿಲ್ಲ. ಆದುದರಿಂದ ಜನರು, "ನನಗೆ ಇನ್ನು ಪುನರ್ಜನ್ಮ ಬೇಡ. ಸಾಕಪ್ಪಾ ಸಾಕು" ಎಂದು ಹೇಳುತ್ತಾರೆ.
ಸುಮ್ಮನೇ ಕಲ್ಪಿಸಿಕೊಳ್ಳಿ, ನೀವು ಪುನಃ ಶಾಲೆಗೆ ಹೋಗಬೇಕಾಗುತ್ತದೆ, ಹೊಡೆಸಿಕೊಳ್ಳಬೇಕಾಗುತ್ತದೆ. ನಂತರ ಕಾಲೇಜಿಗೆ ಹೋಗಬೇಕಾಗುತ್ತದೆ ಮತ್ತು ಪುನಃ ಎಲ್ಲಾ ಹದಿಹರೆಯದ ಬಿಕ್ಕಟ್ಟುಗಳ ಮೂಲಕ ಹಾದುಹೋಗಬೇಕಾಗುತ್ತದೆ. ಆ ಎಲ್ಲಾ ಹದಿಹರೆಯದ ಮಕ್ಕಳ ಕಡೆಗೊಮ್ಮೆ ನೋಡಿ, ಅವರ ಮುಖಗಳು ಊದಿಕೊಂಡು; ಬಹಳ ಕೋಪದಲ್ಲಿ. ಅವರು ತಮ್ಮ ಹೆತ್ತವರಲ್ಲಿ ಕೋಪಗೊಂಡಿರುತ್ತಾರೆ ಮತ್ತು ಏನು ಮಾಡಬೇಕೆಂಬುದು ಅವರಿಗೆ ತಿಳಿದಿರುವುದಿಲ್ಲ.
ನೋಡಿ, ನಿಮಗೆ ತೊಂದರೆಯನ್ನುಂಟುಮಾಡುವುದು ಕೇವಲ ನಿಮ್ಮ ಶತ್ರುಗಳಲ್ಲ, ನಿಮ್ಮ ಮಿತ್ರರು ಕೂಡಾ ನಿಮಗೆ ತೊಂದರೆಯನ್ನುಂಟುಮಾಡುತ್ತಾರೆ. ಎಲ್ಲವೂ ಒಂದು ತೊಂದರೆ. ನಿಮ್ಮ ಮನಸ್ಸು ನಿಮ್ಮ ಶತ್ರುಗಳಿಂದ ಎಷ್ಟು ತುಂಬಿ ಹೋಗಿರುವುದೋ ಅಷ್ಟೇ ನಿಮ್ಮ ಮಿತ್ರರಿಂದಲೂ ತುಂಬಿಹೋಗಿರುತ್ತದೆ. ಆದುದರಿಂದ ಅವರೆಲ್ಲರೂ ನಿಮಗೆ ತೊಂದರೆಯನ್ನುಂಟುಮಾಡುತ್ತಾರೆ. ಮೇಲಾಗಿ, ಎಲ್ಲಾ ತೊಂದರೆಗಳನ್ನು ಒಂದು ಬದಿಯಲ್ಲಿರಿಸಿ, ನಿಮ್ಮ ಮನಸ್ಸೇ ನಿಮ್ಮ ದೊಡ್ದ ತೊಂದರೆ.
ನಾನು ಹೇಳುವುದೇನೆಂದರೆ, ನಿಮ್ಮ ಸ್ವಂತ ಮನಸ್ಸು ನಿಮಗೆ ತೊಂದರೆಯುಂಟು ಮಾಡುವಷ್ಟು ಜಗತ್ತಿನಲ್ಲಿ ಬೇರೆ ಯಾವುದೂ ಮಾಡಲಾರದು. ವಾಸ್ತವವಾಗಿ, ಇತರರು ನಿಮಗೆ ತೊಂದರೆಯುಂಟು ಮಾಡುತ್ತಿರುವಂತೆ ತೋರುತ್ತದೆ, ಆದರೆ ಅದು ಇತರರಲ್ಲ, ಅದು ನಿಮ್ಮದೇ ಮನಸ್ಸು.
ನಿಮಗೆ ನಿಮ್ಮದೇ ಮನಸ್ಸಿನಿಂದ ಮುಕ್ತಿ ಬೇಕಾಗಿದೆ ಮತ್ತು ಹಾಗಾಗಿ ನೀವು, "ನನಗೆ ಇನ್ನೊಂದು ಜನ್ಮ ಬೇಡ" ಎಂದು ಹೇಳುತ್ತೀರಿ. ಆದರೆ ನಿಮಗೆ ತೊಂದರೆಯುಂಟುಮಾಡುತ್ತಿರುವುದು ನಿಮ್ಮದೇ ಮನಸ್ಸು, ಬೇರೆ ಯಾರೋ ಅಲ್ಲ ಎಂಬುದು ಒಮ್ಮೆ ನಿಮಗೆ ಗೊತ್ತಾದರೆ, ಆಗ ಅದು ಜ್ಞಾನ, ಮತ್ತು ಜ್ಞಾನವು ಉದಯಿಸಿದಾಗ ನೀವು, "ನಾನು ಹತ್ತು ಸಲ ಅಥವಾ ಒಂದು ನೂರು ಸಲ ಅಥವಾ ಒಂದು ಸಾವಿರ ಸಲ ಜನ್ಮವೆತ್ತಬೇಕಾಗಿ ಬಂದರೂ ಪರವಾಗಿಲ್ಲ, ನಾನು ಬರುವೆನು" ಎಂದು ಹೇಳುವಿರಿ. ಆಗ, ಜೀವನವು ಆನಂದ, ಜೀವನವು ಪರಮಾನಂದವೆಂಬುದು ನಿಮಗೆ ತಿಳಿಯುತ್ತದೆ. ಇದು ಜ್ಞಾನ!
ನಿನ್ನೆ ನಾನಂದೆ, ಮನಸ್ಸು ನಮ್ಮ ಅತ್ಯುತ್ತಮ ಮಿತ್ರ ಮತ್ತು ಮನಸ್ಸು ನಮ್ಮ ಅತ್ಯಂತ ಕೆಟ್ಟ ಶತ್ರುವೆಂದು. ಅದು ಒಬ್ಬ ಮಿತ್ರನಲ್ಲಿ ಒಬ್ಬ ಶತ್ರುವನ್ನು ಮತ್ತು ಒಬ್ಬ ಶತ್ರುವಿನಲ್ಲಿ ಒಬ್ಬ ಮಿತ್ರನನ್ನು ನೋಡುತ್ತದೆ. ನಿಮ್ಮ ಮನಸ್ಸು ತಿರುಚಬಹುದು, ವಿಕಾರವಾಗಬಹುದು, ತನ್ನದೇ ಆದ ನರಕವನ್ನು, ತನ್ನದೇ ಆದ ಸ್ವರ್ಗವನ್ನು ಸೃಷ್ಟಿಸಬಹುದು.
ಆದುದರಿಂದ ನಮಗೆ ನಿಜವಾಗಿ ಬೇಕಾದುದೇನೆಂದರೆ ಮನಸ್ಸಿನಿಂದ ಮುಕ್ತಿ, ಆದರೆ ನೀವು, "ನಾನು ಪುನಃ ಹುಟ್ಟಿಬರಲು ಬಯಸುವುದಿಲ್ಲ" ಎಂದು ಹೇಳುತ್ತೀರಿ.

ಪ್ರಶ್ನೆ: ಒಂದು ಬಹಳ ದೊಡ್ಡದಾದ ಅಹಂಕಾರವಿರುವ ಜನರೊಂದಿಗೆ ವ್ಯವಹರಿಸುವುದು ಹೇಗೆ, ವಿಶೇಷವಾಗಿ ಅವರ ವರ್ತನೆಯು ಜೀವನದ ಮೇಲೆ ಮತ್ತು ಇತರರ ಮೇಲೆ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತಿರುವಾಗ?
ಶ್ರೀ ಶ್ರೀ ರವಿ ಶಂಕರ್: ಅವರಲ್ಲಿ ದೊಡ್ಡ ಅಹಂಕಾರವಿರಲಿ, ನೀನು ಯಾಕೆ ಚಿಂತಿಸುವೆ? ನೀನು ಅವರಲ್ಲಿರುವುದಕ್ಕಿಂತ ದೊಡ್ಡದಾದ ಅಹಂಕಾರವನ್ನು ಪೋಷಿಸು, ಅಲ್ಲಿಗೆ ಕಥೆ ಮುಗಿಯಿತು. ನಾನು ಹೇಳುವುದೇನೆಂದರೆ, ವಾಸ್ತವವಾಗಿ ನಿನ್ನಲ್ಲಿ ಅದಕ್ಕಿಂತ ದೊಡ್ಡದಾದ ಅಹಂಕಾರವಿದೆಯೆಂಬುದು ನಿನಗೆ ಕಂಡುಬರುತ್ತದೆ. ಇತರರಲ್ಲಿ ಒಂದು ಅಹಂಕಾರವಿರಲಿ, ಅದರಿಂದೇನಾಯಿತು? ಎಲ್ಲರ ಅಹಂಕಾರವನ್ನು ನಾಶಗೊಳಿಸುವ ಅಥವಾ ಎಲ್ಲರ ಅಹಂಕಾರವನ್ನು ಚಿಕ್ಕದಾಗಿಸುವ ಒಂದು ಒಪ್ಪಂದಕ್ಕೆ ನೀನು ಯಾಕೆ ಸಹಿ ಹಾಕುತ್ತಿರುವೆ? ಒಬ್ಬರಲ್ಲಿ ಒಂದು ದೊಡ್ಡ ಅಹಂಕಾರವಿದ್ದರೆ, ಪ್ರಕೃತಿಯು ಅವರಿಗೆ ಕಲಿಸುತ್ತದೆ. ಒಂದಲ್ಲ ಒಂದು ದಿನ ಅವರು ದುಃಖಿತರಾಗುವರು. ಅದನ್ನು ಅವರಿಗೆ ಬಿಡು. ಅವರು ಸಂಗೀತವನ್ನು ಆನಂದಿಸಲಿ ಬಿಡು.
ಇತರರ ಅಹಂಕಾರದ ಕಡೆಗೆ ನೋಡಿ ನೀನು ಯಾಕೆ ಅಷ್ಟೊಂದು ದುಃಖಿಯಾಗುವೆ? ನನಗದು ಅರ್ಥವಾಗುತ್ತಿಲ್ಲ. ನೀನೇನು ಮಾಡಬೇಕೋ ಅದನ್ನು ನೀನು ಮಾಡು; ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ನೀನು ಮಾಡು ಮತ್ತು ಮುಂದೆ ಸಾಗು. ಅಷ್ಟೇ. ಜೀವನದಲ್ಲಿ ನಾವು ಕೇವಲ ಮುಂದೆ ಸಾಗಬೇಕು.
ಯಾರಾದರೂ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ, ನೀವು ಎದ್ದು ನಿಂತು ಅವರ ಮೇಲೆ ರೇಗಾಡಬಹುದು ಅಥವಾ ಅವರ ಮೇಲೆ ಚೀರಬಹುದು, "ನೀನು ಯಾಕೆ ನನಗೆ ನಿನ್ನೆ; ಮೊನ್ನೆ ಮತ್ತು ಹತ್ತು ವರ್ಷಗಳ ಹಿಂದೆ ಈ ರೀತಿ ಮಾಡಿದೆ?"
ಆದರೆ ನಾನು ಹೇಳುವುದೇನೆಂದರೆ, ನಿನ್ನೆ ಅಥವಾ ಒಂದು ತಿಂಗಳು ಮೊದಲು ಆದ ಒಂದು ತಪ್ಪಿನ ಬಗ್ಗೆ ಮಾತನಾಡುವುದರಿಂದ ನೀವು ಖಂಡಿತವಾಗಿಯೂ ಈ ಕ್ಷಣವನ್ನು ಕೂಡಾ ಹಾಳು ಮಾಡುತ್ತೀರಿ. ಈ ಕ್ಷಣದ ಸೌಂದರ್ಯವನ್ನು ನೀವು ಹಾಳು ಮಾಡುತ್ತಿರುವಿರಿ.
ನೀವು ಈಗಲೇ ಒಂದು ನಿರ್ಧಾರವನ್ನು ಮಾಡಬೇಕೆಂದು ನಾನು ಬಯಸುತ್ತೇನೆ, ’ಹಿಂದೆ ಏನಾಯಿತೆಂಬುದರ ಬಗ್ಗೆ ನಾನು ಚಿಂತಿಸುವುದಿಲ್ಲ, ಇದೀಗ ಈ ಕ್ಷಣವನ್ನು ನಾನು ಹಾಳು ಮಾಡುವುದಿಲ್ಲ’, ಮುಗಿಯಿತು.
ಜಗತ್ತು ಒಂದು ಸಾಗರದಂತೆ, ಈ ರೀತಿಯ ವಿಷಯಗಳು ಆಗುತ್ತವೆ. ಅವುಗಳು ಆಗುತ್ತವೆ ಮತ್ತು ಅವುಗಳು ಹೋಗುತ್ತವೆ ಕೂಡಾ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ.
ಕೆಲವು ಜನರಿಗೆ ನೀವು ಕೇವಲ ಒಳ್ಳೆಯದನ್ನು ಮಾತ್ರ ಮಾಡಿದ್ದರೂ, ಯಾವುದೇ ಕಾರಣವಿಲ್ಲದೆಯೇ ಅವರು ನಿಮ್ಮ ಶತ್ರುಗಳಾಗಿದ್ದಾರೆ, ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೀವು ಅಚ್ಚರಿ ಪಡುತ್ತೀರಿ, "ಓ ದೇವರೇ, ಈ ವ್ಯಕ್ತಿಗೆ ನಾನು ಕೇವಲ ಒಳ್ಳೆಯದನ್ನು ಮಾತ್ರ ಮಾಡಿದೆ, ಅವನು ಯಾಕೆ ನನ್ನನ್ನು ದೂಷಿಸುತ್ತಿದ್ದಾನೆ? ಈ ವ್ಯಕ್ತಿಯು ಯಾಕೆ ಒಬ್ಬ ಶತ್ರುವಾದನು?"
ಹಾಗೆಯೇ, ಕೆಲವು ಜನರಿದ್ದಾರೆ, ಅವರಿಗೆ ನೀವು ಯಾವುದೇ ಉಪಕಾರವನ್ನು ಮಾಡಲಿಲ್ಲ ಮತ್ತು ಹಾಗಿದ್ದರೂ ಅವರು ನಿಮಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೋಡಿ, ಒಬ್ಬರು ನಿಮ್ಮ ಮಿತ್ರರಾದರೂ ಅಥವಾ ನಿಮ್ಮ ಶತ್ರುವಾದರೂ, ಅದೆಲ್ಲವೂ ಕರ್ಮದ ವಿಚಿತ್ರವಾದ ನಿಯಮಗಳಿಂದ ಆಗುತ್ತದೆ. ಅದಕ್ಕಾಗಿಯೇ, ಅದೆಲ್ಲವನ್ನೂ ಒಂದು ಬುಟ್ಟಿಯಲ್ಲಿ ಹಾಕಿ ಮತ್ತು ವಿಶ್ರಾಮ ಮಾಡಿ. ಇದನ್ನು ನಾನು ನನ್ನ ಕಾರ್ಯನೀತಿಯಾಗಿ ಅಳವಡಿಸಿಕೊಂಡಿದ್ದೇನೆ.
ಒಬ್ಬ ವ್ಯಕ್ತಿಗೆ ನೀವು ಬಹಳಷ್ಟು ಒಳ್ಳೆಯದನ್ನು ಮಾಡುತ್ತೀರಿ ಮತ್ತು ಆದರೂ ಆ ವ್ಯಕ್ತಿಯು ನಿಮ್ಮಲ್ಲಿ ಕೋಪಿಸಿಕೊಂಡಿದ್ದರೆ ಅಥವಾ ಅವರು ನಿಮ್ಮನ್ನು ದೂಷಿಸಿದರೆ, ನೀವೇನು ಮಾಡಲು ಸಾಧ್ಯ?
ಆದುದರಿಂದ, ಅದನ್ನೇ ಜಗಿಯುತ್ತಾ ಹೋಗಬೇಡಿ ಮತ್ತು ಹಿಂದಿನದರೊಂದಿಗೆ ವರ್ತಮಾನದ ಕ್ಷಣವನ್ನು ಹಾಳು ಮಾಡಬೇಡಿ.
ಅದೊಂದು ಒಳ್ಳೆಯ ವಿಚಾರವಲ್ಲವೇ? ಈ ಕ್ಷಣವನ್ನು ನಾವು ಆಚರಿಸೋಣ.
ಹಿಂದೆ ನಾನು ಜನರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೆ, ಅವರೆಲ್ಲರ ಕಥೆಗಳು ಮತ್ತು ಅವರು ಒಬ್ಬರು ಇನ್ನೊಬ್ಬರನ್ನು ದೂಷಿಸುವುದು. ಇದ್ದಕ್ಕಿದ್ದಂತೆ ನಾನು ಅರಿತುಕೊಂಡೆ, "ಇಲ್ಲ, ಇನ್ನು ಮುಂದೆ ನಾನು ಯಾರದ್ದೇ ದೂರನ್ನು ಕೇಳಿಸಿಕೊಳ್ಳುವುದಿಲ್ಲ. ಈ ಕ್ಷಣದ ಶಕ್ತಿಯನ್ನು ನಾನು ಹಾಳು ಮಾಡಲು ಬಯಸುವುದಿಲ್ಲ."
ನಿಮ್ಮ ವಿಷಯಗಳೊಂದಿಗೆ ವ್ಯವಹರಿಸಿ, ಅದು ನಿಮ್ಮ ಕರ್ಮ. ಪ್ರಾಚೀನ ಜನರು ಹೇಳುತ್ತಿದ್ದುದು ಇದನ್ನೇ.
ಅವರು ಸಲಹೆಗಾರರಂತೆ ಕುಳಿತುಕೊಂಡು ನಿಮ್ಮೆಲ್ಲಾ ಕಥೆಗಳನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಅವರು ಹೇಳುತ್ತಿದ್ದರು, "ಬಾ, ಈ ಕ್ಷಣ ಎಚ್ಚೆತ್ತುಕೋ; ಈಗ (ತಮ್ಮ ಬೆರಳುಗಳನ್ನು ಚಿಟಿಕೆ ಹೊಡೆಯುತ್ತಾ)", ಮತ್ತು ಅದು ಮನಸ್ಸಿನಲ್ಲಿ, ಶಕ್ತಿಯಲ್ಲಿ ಹಾಗೂ ಸಮಯದಲ್ಲಿ ಒಂದು ಬಹುದೊಡ್ಡ ಬದಲಾವಣೆಯನ್ನು ತರುತ್ತಿತ್ತು.
ಆದರೆ ನೀವದನ್ನು ಒಮ್ಮಿಂದೊಮ್ಮೆಗೇ ಮಾಡಲು ಶುರು ಮಾಡಬೇಡಿ, ಆಗ ನೀವು ಅತ್ಯಂತ ಅಸಂವೇದನಾಶೀಲ ಮತ್ತು ಒರಟು ವ್ಯಕ್ತಿಯೆಂದು ಕರೆಯಿಸಿಕೊಳ್ಳುವಿರಿ. ತಿಳಿಯಿತೇ?
ಅದನ್ನು ನಿಧಾನವಾಗಿ ಮಾಡಿ. ನೀವು ಜನರು ಹೇಳುವುದನ್ನು ಕೇಳಿಸಿಕೊಳ್ಳಬೇಕು, ಅದನ್ನು ನಾನು ಕೂಡಾ ಹಲವಾರು ವರ್ಷಗಳ ವರೆಗೆ ಮಾಡಿದ್ದೇನೆ. ಆದರೆ ಒಂದು ಹಂತ ಬರಬೇಕು, ವಿಶೇಷವಾಗಿ ಜನರೊಂದಿಗೆ, ಆಗ ನೀವು ಹೇಳಬೇಕು, "ಸರಿ, ಈಗ ಇನ್ನಿಲ್ಲ."
ಕೆಲವೊಮ್ಮೆ ಹಾಗಾಗುತ್ತದೆ, ಮನೆಯಲ್ಲಿರುವ ವಯಸ್ಸಾದವರು ಹೇಳುತ್ತಾ ಹೋಗುತ್ತಾರೆ. ದೂರುವುದನ್ನು ಅವರು ಆನಂದಿಸುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಅನುಭವಿಸಿರುವಿರಿ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೋಡಿ! ಅವರು ದೂರುವುದನ್ನು ಆನಂದಿಸುತ್ತಾರೆ ಮತ್ತು ಒಬ್ಬರು ಕೇಳಿಸಿಕೊಳ್ಳುವಾಗ, ಅವರು ಇನ್ನೂ ಹೆಚ್ಚು ದೂರುತ್ತಾರೆ. ಅಂತಹ ಕ್ಷಣಗಳಲ್ಲಿ ನೀವು ಸುಮ್ಮನೇ ಸಂಗೀತವನ್ನು ಹಾಕಬೇಕು ಮತ್ತು, "ಬನ್ನಿ, ನಾವು ನೃತ್ಯ ಮಾಡೋಣ. ದೂರುವುದನ್ನು ನಿಲ್ಲಿಸಿ" ಎಂದು ಹೇಳಬೇಕು.

ಪ್ರಶ್ನೆ: ಗುರುದೇವ, ೨೦೧೨ ’ನಂದ’ ವರ್ಷವಾಗಲಿದೆಯೆಂದು ನೀವು ಹೇಳಿದ್ದಿರಿ. ಅದು ಹೇಗೆ ಇದು ಅಷ್ಟೊಂದು ಕಠಿಣವಾದ ವರ್ಷವಾಯಿತು?
ಶ್ರೀ ಶ್ರೀ ರವಿ ಶಂಕರ್: ನಂದ ವರ್ಷವು ಇನ್ನೂ ಮುಗಿದಿಲ್ಲ, ಅದು ಮಾರ್ಚ್ ಕೊನೆಯಲ್ಲಿ ಮುಗಿಯುವುದು. ಇನ್ನೂ ಮೂರು ತಿಂಗಳುಗಳಿವೆ.
ನಿಮಗೆ ಗೊತ್ತಾ, ವಿಷಯಗಳು ನಿಮ್ಮೊಳಗೆ ಮಂಥನವಾಗುವಾಗ, ಅದು ಒಳ್ಳೆಯದು. ಆಗ ನೀವು ಎಚ್ಚೆತ್ತುಕೊಳ್ಳುವಿರಿ. ಅದು ಹೊರಜಗತ್ತಿನಲ್ಲಿ ಮಾತ್ರ ಆಗುತ್ತದೆಯೆಂದಲ್ಲ, ಆದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೂಡಾ ಅದು ಆಗುತ್ತದೆ.
ಜನರು ಇಲ್ಲಿಗೆ ಆಧ್ಯಾತ್ಮಕ್ಕೋಸ್ಕರ ಬರುತ್ತಾರೆ, ಆದರೆ ಅವರು ಹಲವಾರು ಇತರ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
ಒಂದು ದಿನ ಒಬ್ಬ ವ್ಯಕ್ತಿಯು ನನ್ನ ಬಳಿ ಬಂದನು ಮತ್ತು ನಾನಂದೆ, "ನೀನು ಯಾಕೆ ನನ್ನ ಬಳಿಗೆ ಬಂದೆ? ನೀನು ಜ್ಞಾನಕ್ಕಾಗಿ ನನ್ನ ಬಳಿಗೆ ಬಂದೆ ಮತ್ತು ನೀನು ಜ್ಞಾನವನ್ನು ಬಿಟ್ಟು ಇತರ ಎಲ್ಲಾ ವಿಷಯಗಳ ಬಗ್ಗೆ ಯೋಚಿಸುತ್ತಿರುವೆ."
ಆ ವ್ಯಕ್ತಿ ಅಂದನು, "ಈ ವ್ಯಕ್ತಿಯು ನನಗೆ ಈ ರೀತಿ ಹೇಳಿದನು."
ಅರೆ! ಜಗತ್ತು ಕೆಟ್ಟದಾಗಿದ್ದರೆ, ಅದೊಂದು ಒಳ್ಳೆಯ ಕಾರಣಕ್ಕಾಗಿ; ನೀವು ನಿಮ್ಮನ್ನೇ ಸರಿಪಡಿಸಿಕೊಳ್ಳಿರೆಂದು. ನೀವು ನಿಮ್ಮ ಸ್ವಂತ ನ್ಯೂನತೆ ನೋಡದಿರುವಾಗ, ನೀವು ಇತರ ಎಲ್ಲರಲ್ಲೂ ನ್ಯೂನತೆಗಳನ್ನು ನೋಡುವಿರಿ ಮತ್ತು, "ಎಲ್ಲರೂ ಕೆಟ್ಟವರು, ನಾನು ಮಾತ್ರ ಒಳ್ಳೆಯವನು" ಎಂದು ಯೋಚಿಸುವಿರಿ.
ನಾನು ಹೇಳುವುದೇನೆಂದರೆ, ಹಾಗೆ ಯೋಚಿಸುವ ಜನರು ತುಂಬಾ ತಪ್ಪಾಗಿರುತ್ತಾರೆ. ಅವರು ಸಾಧಕರಲ್ಲ (ಆಧ್ಯಾತ್ಮಿಕ ಅನ್ವೇಷಕರು). ಒಬ್ಬ ಸಾಧಕನಾಗುವುದೆಂದರೆ, ತನ್ನ ಕಡೆಗೆ ನೋಡಿ, "ನನ್ನಲ್ಲಿ ನಾನು ಏನನ್ನು ತಿದ್ದಿಕೊಳ್ಳಬೇಕು, ನಾನದನ್ನು ತಿದ್ದಿಕೊಳ್ಳುತ್ತೇನೆ" ಎಂದು ಹೇಳುವವನು.
ಛಳಿಗಾಲದಲ್ಲಿ ಜರ್ಮನಿಯಲ್ಲಿ ಛಳಿಯಿದೆಯೆಂದು ನೀವು ದೂರಲು ಸಾಧ್ಯವಿಲ್ಲ. ಅದು ಹಾಗೆಯೇ ಇರುತ್ತದೆ. ಒಳಗೆ ಕುಳಿತುಕೊಳ್ಳುವುದು ಒಳ್ಳೆಯದು.
ಆದುದರಿಂದ, ಜ್ಞಾನವನ್ನು ಹಿಡಿದುಕೊಳ್ಳಿ. ಇರುವ ಸತ್ಯವೆಂದರೆ ಅದೊಂದೇ ಮತ್ತು ಅದೊಂದೇ ವಾಸ್ತವ. ಮತ್ತು ಅದಕ್ಕಾಗಿಯೇ ಈ ಎಲ್ಲಾ ಜ್ಞಾನ, ಧ್ಯಾನ ಹಾಗೂ ಸಾಧನೆಗಳಿರುವುದು. ಅದು ನಿಮಗೆ ಎಷ್ಟೊಂದು ಆಂತರಿಕ ಶಕ್ತಿಯನ್ನು ನೀಡುತ್ತದೆಯೆಂದರೆ, ಯಾವುದೇ ಪರಿಸ್ಥಿತಿಯಲ್ಲೂ ನೀವೊಂದು ನಗೆಯೊಂದಿಗೆ ಮುನ್ನಡೆಯಬಹುದು. ಅದಕ್ಕಾಗಿಯಲ್ಲವೇ ಎಲ್ಲರೂ ಹಂಬಲಿಸುತ್ತಿರುವುದು? ಎಂತಹ ಆಂತರಿಕ ಶಕ್ತಿಯೆಂದರೆ, ಏನೇ ಬರಲಿ ಯಾರಿಗೂ ನಿಮ್ಮ ನಗೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಅತ್ಯಂತ ಅಗತ್ಯವಾದುದು.

ಪ್ರಶ್ನೆ: ಒಬ್ಬರು ಆಂತರಿಕ ಶಕ್ತಿಯನ್ನು ಸಾಧಿಸುವುದು ಮತ್ತು ಕಾಪಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಈ ಜ್ಞಾನದ ಕಡೆಗೆ ಎಚ್ಚೆತ್ತುಕೊಳ್ಳುವುದರಿಂದ. ನೀವು ವರ್ಷಕ್ಕೊಮ್ಮೆ  ಬಂದು ಸ್ವಲ್ಪ ಜ್ಞಾನವನ್ನು ಕೇಳಿಸಿಕೊಂಡು ಹೋಗುವುದೆಂದು ಆಗಬಾರದು. ಇದನ್ನು ಕಾಪಾಡಿಕೊಳ್ಳುವುದಕ್ಕಾಗಿ, ಇದನ್ನು ನಿಮ್ಮ ದೈನಂದಿನ ದಿನಚರಿಯ ಭಾಗವನ್ನಾಗಿ ಮಾಡಿ.
ಹಾಗೆಯೇ, ವಿನಯತೆಯು ಮುಖ್ಯವಾದುದು. ಕೆಲವೊಮ್ಮೆ, ಜನರು ಜ್ಞಾನದ ಕಡೆಗೆ ಬಹಳ ಜಡರಾಗಿ ಬಿಡುತ್ತಾರೆ. ಅವರು, "ನನಗೆ ಅದೆಲ್ಲಾ ಗೊತ್ತಿದೆ" ಎಂದು ಯೋಚಿಸುತ್ತಾರೆ. "ನನಗೆ ಜ್ಞಾನ ತಿಳಿದಿದೆ, ತಿಳಿಯಲು ಅಲ್ಲೇನಿದೆ" ಒಬ್ಬರು ಆ ದುರಹಂಕಾರಕ್ಕೆ ಬೀಳಬಾರದು.
ಜ್ಞಾನದ ನಿರಂತರವಾದ ಪುನರುಜ್ಜೀವನ; ನಿಮಗೆ ತಿಳಿದಿರುವ ಅದೇ ಅಂಶಗಳ ಬಗ್ಗೆ; ಮತ್ತು ಅದನ್ನು ಪುನಃ ಜೀವಿಸುವುದು ಮುಖ್ಯವಾದುದು.
ಇದೊಂದು ಬಹಳ ಕಠಿಣವಾದ ಅಥವಾ ಕಷ್ಟವಾದ ಕೆಲಸವಲ್ಲ, ಮತ್ತು ಒಂದು ಕ್ಷಣ ನೀವು ಜ್ಞಾನವನ್ನು ಕಳೆದುಕೊಂಡರೂ ಕೂಡಾ, ಅದು ಹಾಗೆಯೇ ಹಿಂದಿರುಗಿ ಬರುತ್ತದೆ. ಅದು ಹಿಂದಿರುಗಿ ಬರುವುದೆಂಬುದನ್ನು ತಿಳಿದುಕೊಂಡು, ನೀವದನ್ನು ನಿಜವಾಗಿ ಕಳಕೊಳ್ಳುವುದಿಲ್ಲ, ಅದು ಅಲ್ಲಿರುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾವು ಸುರಕ್ಷತೆಯನ್ನು ಅನುಭವಿಸುವ ಸೌಕರ್ಯ ವಲಯದಿಂದ ಹೊರಬಂದು, ನಾವು ಮಾಡಲು ಇಷ್ಟಪಡದಿರುವ ಅಥವಾ ಮಾಡಲು ನಮಗೆ ಹಿತವೆನಿಸದ ಕಾರ್ಯಗಳನ್ನು ಮಾಡುವುದು ಯಾಕೆ ಒಳ್ಳೆಯದೆಂದು ನೀವು ನಮಗೆ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ಸಮಯದಿಂದ ಸಮಯಕ್ಕೆ ಮತ್ತೆ ಮತ್ತೆ ನಿಮ್ಮ ಸೌಕರ್ಯ ವಲಯದಿಂದ ಹೊರಬರುವುದರಿಂದ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಶಕ್ತಿಗಳು ವಿಸ್ತಾರವಾಗುತ್ತವೆ; ನೀವು ಹೆಚ್ಚು ಶಕ್ತಿಶಾಲಿಗಳಾಗುವಿರಿ.
ನೀವು ನಿಮ್ಮ ಸೌಕರ್ಯ ವಲಯದಲ್ಲಿ ಬಹಳವಾಗಿ ಸಿಕ್ಕಿಹಾಕಿಕೊಂಡಿರುವಿರಿ. ಅದುವೇ ನಿಮ್ಮ ಭಯ, ನಿಮ್ಮ ಆತಂಕ ಮತ್ತು ನಿಮ್ಮ ಬಂಧನಗಳ ಕಾರಣ. ನಿಮ್ಮ ಸೌಕರ್ಯ ವಲಯವು ನಿಮ್ಮ ಬಂಧನವಾಗಿದೆ.
ಕೆಲವೊಮ್ಮೆ ನೀವು ಎದ್ದುನಿಂತು, "ನಾನಿದರಿಂದ ಹೊರಬರುತ್ತೇನೆ" ಎಂದು ಹೇಳುವಾಗ, ಅದು ನಿಮಗೆ ಆ ಶಕ್ತಿಯನ್ನು ಹಿಂದೆ ತರುತ್ತದೆ.

ಪ್ರಶ್ನೆ: ನಾವು ಪ್ರೀತಿಸುವ ಜನರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಅವರಿಗೆ ನಮ್ಮ ಪ್ರೀತಿಯ ಅನುಭವವಾಗುವುದಿಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಅದು ಯಾಕೆಂದರೆ ಅವರು ಜ್ಞಾನಕ್ಕೆ ಒಡ್ಡಲ್ಪಡಲಿಲ್ಲ ಮತ್ತು ಜೀವಂತವಾಗಿರುವುದೆಂದರೇನು ಅಥವಾ ಸಾಯುವುದೆಂದರೇನೆಂಬುದು ಅವರಿಗೆ ತಿಳಿಯದು.
ತಮ್ಮ ಪ್ರಾಣದ ಬಗ್ಗೆ ಅಥವಾ ತಮ್ಮ ಜೀವನದ ಬಗ್ಗೆ ಅವರಿಗೆ ಯಾವುದೇ ತಿಳುವಳಿಕೆಯಿಲ್ಲ. ಅವರು ತಮ್ಮ ಸೌಕರ್ಯದ ಬಗ್ಗೆ ಬಹಳ ಗೀಳು ಹಚ್ಚಿಕೊಂಡಿರುತ್ತಾರೆ, ಆದುದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವುದು ಯಾರೆಂದರೆ, ಯಾರಿಗೆ ಅತಿಯಾದ ಸೌಕರ್ಯದ ಬಯಕೆಯಿರುತ್ತದೋ ಅವರು. ಅವರಲ್ಲಿ ಯಾವುದೇ ತಾಳ್ಮೆಯಿರುವುದಿಲ್ಲ; ಸ್ವಲ್ಪ ಅಸೌಕರ್ಯವನ್ನೂ ಅವರು ಸಹಿಸಲಾರರು. ಅಲ್ಲಿಯೇ ನಿಮಗೆ ಹೆಚ್ಚು ಪ್ರಾಣ ಮತ್ತು ಹೆಚ್ಚು ಶಕ್ತಿ ಬೇಕಾಗಿರುವುದು.
ಒಬ್ಬರಲ್ಲಿ ನೀವು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೆಚ್ಚು ಹೇಳಿದಷ್ಟೂ ಅವರು, "ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುತ್ತೇನೆ" ಎಂದು ಹೇಳುತ್ತಾರೆ. ಕೆಲವೊಮ್ಮೆ ನಾನವರಿಗೆ ಹೇಳುತ್ತೇನೆ, "ಸರಿ, ಆತ್ಮಹತ್ಯೆ ಮಾಡಿಕೋ, ಆದರೆ ಎವರೆಸ್ಟ್ ಶಿಖರವನ್ನು ಹತ್ತು ಮತ್ತು ಅಲ್ಲಿಂದ ನೀನು ಜಿಗಿ. ಮನೆಯಲ್ಲಿ ನೇಣು ಹಾಕಿಕೊಳ್ಳಬೇಡ. ಯಾವುದಾದರೂ ಸಾಹಸ ಮಾಡಲು ಹೋಗು ಮತ್ತು ನೀನು ಸತ್ತರೆ ಸಾಯುವೆ. ಒಳ್ಳೆಯದಾಗಲಿ."
ಆತ್ಮಹತ್ಯೆ ಮಾಡುವುದು ಮೂರ್ಖತನವಾಗಿದೆ. ಅವರು ಈ ಸುಂದರವಾದ ಜ್ಞಾನಕ್ಕೆ ತೆರೆಯಲ್ಪಡಲಿಲ್ಲ ಮತ್ತು ಅವರಿಗೆ ಜೀವನದ ಮೌಲ್ಯವು ತಿಳಿಯದು. ಅದಕ್ಕಾಗಿಯೇ ನಾವು ಎಲ್ಲರಿಗೂ ಅವರ ಉಸಿರಿನ ಬಗ್ಗೆ ಕಲಿಸಿಕೊಡುವುದು ಬಹಳ ಮುಖ್ಯವಾದುದು. ಪ್ರಾಣದ ಮಟ್ಟವು ನಿಜವಾಗಿ ಕಡಿಮೆಯಿರುವಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ಏಳುವುದು. ಪ್ರಾಣವು ಹೆಚ್ಚಿರುವಾಗ, ಈ ಯೋಚನೆಯು ಬಾರದು. ಪ್ರಾಣವು ಹೆಚ್ಚಿದ್ದರೆ ಯಾವುದೇ ಅಪರಾಧವೂ ಆಗುವುದಿಲ್ಲ. ನಿಮ್ಮ ಪ್ರಾಣವು ಹೆಚ್ಚಿರುವಾಗ ನೀವು ನಿಮ್ಮ ಕಡೆಗಾಗಲೀ ಅಥವಾ ಇತರರ ಕಡೆಗಾಗಲೀ ಹಿಂಸಾತ್ಮಕವಾಗಿ ಇರುವುದಿಲ್ಲ. ಅದಕ್ಕಾಗಿಯೇ ಸುದರ್ಶನ ಕ್ರಿಯೆ, ಪ್ರಾಣಾಯಾಮ, ಧ್ಯಾನ, ಈ ಎಲ್ಲಾ ಅಭ್ಯಾಸಗಳನ್ನು ಜನರಿಗೆ ಕಲಿಸಬೇಕಾಗಿರುವುದು.
ಹಾಗೆಯೇ, ಯಾರಲ್ಲಿ ಅಂತಹ ಪ್ರವೃತ್ತಿಗಳಿರುವುದೋ ಅಂತಹ ಜನರು ತಮ್ಮನ್ನು ಇತರರ ಸೇವೆ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು.
ಪ್ರಾಚೀನ ಭಾರತದಲ್ಲಿ, ಸ್ವಲ್ಪ ಸೇವೆ ಮಾಡಲು ತಮ್ಮ ಮೂಳೆಗಳನ್ನು ಮುರಿಸಿಕೊಳ್ಳದ ಹೊರತು ಯಾರಿಗೂ ಜ್ಞಾನವನ್ನು ನೀಡಲಾಗುತ್ತಿರಲಿಲ್ಲ. ೧೦ರಿಂದ ೧೨ ವರ್ಷಗಳು, ಜನರು ಒಂದು ಆಶ್ರಮದಲ್ಲಿರುತ್ತಿದ್ದರು ಮತ್ತು ಅವರು ಬಹಳಷ್ಟು ಸೇವೆ ಮಾಡುತ್ತಿದ್ದರು. ಆಗ ಮಾತ್ರ ಅವರಿಗೆ ಸ್ವಲ್ಪ ಜ್ಞಾನವನ್ನು ನೀಡಲಾಗುತ್ತಿತ್ತು.
ಅಷ್ಟೊಂದು ಸೇವೆ, ಅಷ್ಟೊಂದು ಕೆಲಸವನ್ನು ಮಾಡಿ ಶರೀರವು ಯೋಗ್ಯವಾದಾಗ, ಮನಸ್ಸು ಯೋಗ್ಯವೂ ನಮ್ರವೂ ಆಗುವುದು. ಅದು ಸಮರಕಲೆ (ಮಾರ್ಷಿಯಲ್ ಆರ್ಟ್ಸ್) ಯಲ್ಲಿ ತರಬೇತಿ ನೀಡುವಂತೆ. ಮಾರ್ಷಿಯಲ್ ಆರ್ಟ್ ತರಬೇತಿಯನ್ನು ನೀವು ನೋಡಿರುವಿರೇ? ಮನಸ್ಸು ಮತ್ತು ಶರೀರಗಳು ಸಂಘಟಿತಗೊಳ್ಳುತ್ತವೆ. ನಿಮ್ಮ ಭಾವನೆಗಳು ಚೆಲ್ಲಾಪಿಲ್ಲಿಯಾಗದಿರಲೆಂದು ಮತ್ತು ನೀವು ಯಾವತ್ತೂ ’ನನ್ನ’ ಬಗ್ಗೆ ಚಿಂತಿಸದಿರಲೆಂದು ಸೇನೆಯಲ್ಲಿ ಕೂಡಾ ನೀವು ಅದೇ ರೀತಿ ತರಬೇತಿಗೊಳಿಸಲ್ಪಡುವಿರಿ.
 
ಪ್ರಶ್ನೆ: ಪ್ರೀತಿಯ ಗುರುದೇವ, ನಮಗೆ ಕೆಲವು ಸಮಸ್ಯೆಗಳಿರುವಾಗ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವಾಗ ಮತ್ತು ನಮ್ಮೊಳಗಿರುವ ದನಿಯಿಂದ ನಾವು ಉತ್ತರವನ್ನು ಪಡೆಯುವಾಗ, ಯಾರು ಮಾತನಾಡುತ್ತಿರುವುದೆಂದು ನಮಗೆ ತಿಳಿಯುವುದು ಹೇಗೆ? ಅದು ನಮ್ಮ ಮನಸ್ಸೇ, ಅಂತಃಸ್ಫುರಣೆಯೇ ಅಥವಾ ದೇವರೇ?
ಶ್ರೀ ಶ್ರೀ ರವಿ ಶಂಕರ್: ಅದೆಲ್ಲವೂ ಒಂದೇ, ಅದರ ಬಗ್ಗೆ ಚಿಂತಿಸಬೇಡ. ಅದನ್ನು ಅತಿಯಾಗಿ ವಿಶ್ಲೇಷಿಸುವ ಅಗತ್ಯವಿಲ್ಲ, ಕೇವಲ ನಿರಾತಂಕವಾಗಿರು. ನಾವು ನಿರಾತಂಕವಾಗಿರುವಾಗ, ಸರಿಯಾದ ಉತ್ತರವು ಸಿಗುತ್ತದೆ. ನಮ್ಮನ್ನೇ ಬಲವಂತಪಡಿಸುವುದರಿಂದ ಅಂತಃಸ್ಫುರಣೆಯು ಬರಲು ಸಾಧ್ಯವಿಲ್ಲ. ಅದೊಂದು ಸಹಜ ಪ್ರಕ್ರಿಯೆಯಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಕ್ರೋಧದಂತಹ ಶಕ್ತಿಶಾಲಿ ಭಾವನೆಗಳು ಏಳುವಾಗ, ಅವುಗಳನ್ನು ನಿಯಂತ್ರಿಸುವುದು ಕಷ್ಟ ಮತ್ತು ನಂತರ ನಾನು ಮರುಗುವಂತಹ ಕೆಲಸಗಳನ್ನು ನಾನು ಮಾಡುತ್ತೇನೆ. ಅದರೊಂದಿಗೆ ವ್ಯವಹರಿಸುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ಅದು ಮೊದಲಿಗಿಂತ ಉತ್ತಮವಾಗಿಲ್ಲವೇ? ಮೊದಲು ಕೂಡಾ ನೀನು ಕೋಪಗೊಳ್ಳುತ್ತಿದ್ದೆ, ಆದರೆ ಈಗ ಅದು ಸುಧಾರಿಸಿದೆ. ಯೋಗ ಮಾಡುತ್ತಾ ಇರು, ಎಲ್ಲಾ ಅಭ್ಯಾಸಗಳನ್ನು ಮಾಡುತ್ತಾ ಇರು. ಅದು ನಿನ್ನ ಕೋಪವನ್ನು ಕಡಿಮೆ ಮಾಡುತ್ತದೆ. ಅದು ನಿನ್ನ ಕೋಪವನ್ನು ಕಡಿಮೆ ಮಾಡದಿದ್ದರೆ, ಆಗ ದೇವರು ಮಾತ್ರ ನಿನಗೆ ಸಹಾಯ ಮಾಡಲು ಸಾಧ್ಯ; ಒಳ್ಳೆಯದಾಗಲಿ! ಆಗಲೂ ನೀನು ಕೋಪಗೊಂಡಿದ್ದರೆ, ಕೋಪಗೊಂಡಿರು. ನೀನು ಬೆಲೆ ತೆತ್ತು, ಅದು ಇತರರಿಗೆ ಸ್ವಲ್ಪ ಮನೋರಂಜನೆಯಾಗಬಹುದು. ಜಗತ್ತಿನಲ್ಲಿ ಅದು ಕೂಡಾ ಬೇಕು. ಅಲ್ಲಿ ಇಲ್ಲಿ ಸ್ವಲ್ಪ ಮಸಾಲೆ, ಅಲ್ಲಿ ಇಲ್ಲಿ ಸ್ವಲ್ಪ ಉಪ್ಪಿನಕಾಯಿ, ಅಲ್ಲಿ ಇಲ್ಲಿ ಸ್ವಲ್ಪ ಮೆಣಸು. ಎಲ್ಲಿಯವರೆಗೆ ಅದು ನಿಮ್ಮ ಕಣ್ಣುಗಳೊಳಕ್ಕೆ ಹೋಗುವುದಿಲ್ಲವೋ, ಮೆಣಸು ಕೂಡಾ ಆಗಬಹುದು.

ಬುಧವಾರ, ಡಿಸೆಂಬರ್ 26, 2012

ಮನಸ್ಸು ಮಿತ್ರನೇ ಅಥವಾ ಶತ್ರುವೇ?

೨೬ ಡಿಸೆಂಬರ್ ೨೦೧೨
ಬಾಡ್ ಆಂಟಗಾಸ್ಟ್, ಜರ್ಮನಿ

ಪ್ರಶ್ನೆ: ನನಗೆ ತೊಂದರೆಯನ್ನುಂಟುಮಾಡುವ ಮನಸ್ಸನ್ನು ಸೋಲಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದು ಅದರ ಸ್ವಭಾವ. ನೀನು ಮನಸ್ಸಿಗಿಂತ ದೊಡ್ಡವನು ಎಂಬುದು ನಿನಗೆ ತಿಳಿದಿದೆಯೇ? ಎಚ್ಚೆತ್ತುಕೋ. ಮನಸ್ಸು ಅಲ್ಲಿರಲಿ ಬಿಡು.

ಪ್ರಶ್ನೆ: ಗುರುದೇವ, ನಾನು ನನ್ನ ಆತ್ಮ-ಸಂಗಾತಿಯನ್ನು ಗುರುತಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲು ನೀನು ನಿನ್ನ ಆತ್ಮವನ್ನು ಗುರುತಿಸಿಕೊಳ್ಳಬೇಕು ಮತ್ತು ನಂತರ ನಿನ್ನ ಆತ್ಮ-ಸಂಗಾತಿಯನ್ನು. ನಿನಗೆ ನಿನ್ನ ಬಗ್ಗೆ ತಿಳಿದಿಲ್ಲ, ನೀನು ಯಾರೆಂಬುದು ನಿನಗೆ ತಿಳಿಯದು. ನಿನಗೆ ನಿನ್ನ ಬಗ್ಗೆ ಏನೂ ತಿಳಿಯದು. ನಿನಗೆ ನಿನ್ನ ಮನಸ್ಸು ತಿಳಿಯದು; ನಿನ್ನದೇ ಮನಸ್ಸು ನಿನ್ನನ್ನು ಹುಚ್ಚನನ್ನಾಗಿಸುತ್ತದೆ. ಒಂದು ನಿಮಿಷ ಅದು ಏನನ್ನೋ ಬಯಸುತ್ತದೆ ಮತ್ತು ಮುಂದಿನ ನಿಮಿಷ ಅದು ಬೇರೇನನ್ನೋ ಬಯಸುತ್ತದೆ. ಮನಸ್ಸು ತನ್ನ ಮನಸ್ಸನ್ನು ಎಲ್ಲಾ ಸಮಯದಲ್ಲೂ ಬದಲಾಯಿಸುತ್ತಾ ಇರುತ್ತದೆ ಮತ್ತು ಅದು ಸಿಕ್ಕಿಹಾಕಿಕೊಳ್ಳುತ್ತದೆ.
ಅದಕ್ಕಾಗಿಯೇ ಭಗವದ್ಗೀತೆಯಲ್ಲಿ ಒಂದು ಮಾತಿದೆ, "ನಿನ್ನ ಬಂಧನ ಮತ್ತು ನಿನ್ನ ಮೋಕ್ಷಕ್ಕೆ ಜವಾಬ್ದಾರವಾಗಿರುವುದು ನಿನ್ನದೇ ಮನಸ್ಸು, ಬೇರೇನೂ ಅಲ್ಲ."
ನಿಮ್ಮದೇ ಮನಸ್ಸು, ಅದು ನಿಮ್ಮ ಮಿತ್ರನಂತೆ ವರ್ತಿಸಿದರೆ, ಅದು ನಿಮ್ಮ ಶತ್ರುವಿನಂತೆ ಕೂಡಾ ವರ್ತಿಸುತ್ತದೆ. ಸಾಧನೆಯ (ಆಧ್ಯಾತ್ಮಿಕ ಅಭ್ಯಾಸಗಳು) ಮೂಲಕ ನಿಮ್ಮ ಮನಸ್ಸನ್ನು ಚೆನ್ನಾಗಿ ತರಬೇತುಗೊಳಿಸಿದರೆ, ಅದು ನಿಮ್ಮ ಸ್ನೇಹ ಬೆಳೆಸುತ್ತದೆ ಮತ್ತು ಅದು ನಿಮಗೆ ಸಹಾಯ ಮಾಡುತ್ತದೆ. ಅಲ್ಲದಿದ್ದರೆ ನಿಮ್ಮ ಸ್ವಂತ ಮನಸ್ಸು ಒಂದು ಶತ್ರುವಿನಂತೆ ವರ್ತಿಸುತ್ತದೆ. ಇದು ಬಹಳ ಸರಿಯಾದುದು ಅಲ್ಲವೇ? ಇದು ಎಷ್ಟೊಂದು ನಿಜ!
ಕಳೆದ ವಾರ, ನಾನು ಇಲ್ಲಿಗೆ ಬರುವುದರ ಸ್ವಲ್ಪ ಮೊದಲು ನಡೆದ ಘಟನೆಯೊಂದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಆಶ್ರಮದ ಎದುರು ನಮ್ಮದೊಂದು ಆಶ್ರಮದ ನಾಮಫಲಕವಿದೆ. ಏನಾಯಿತೆಂದರೆ, ಒಂದು ನಿರ್ದಿಷ್ಟ ರಾಜಕೀಯ ಪಕ್ಷದವರು, ಅವರ ಜನರು ಬಂದು ಆ ನಾಮಫಲಕದ ಮೇಲೆ ತಮ್ಮ ಭಿತ್ತಿಪತ್ರಗಳನ್ನು ಹಾಕಿದರು, ಕೇವಲ ತುಂಟತನ ಸೃಷ್ಟಿಸಲು. ಅವರು ದೊಡ್ಡ ಭಿತ್ತಿಪತ್ರಗಳನ್ನು ಹಾಕಿದ್ದರು, ಯಾಕೆಂದರೆ ಆ ರಾಜಕೀಯ ಪಕ್ಷದ ಮುಖಂಡನ ಜನ್ಮದಿನಾಚರಣೆಯಿತ್ತು. ಆದುದರಿಂದ ನಮ್ಮ ಭದ್ರತೆಯವರು ಮತ್ತು ಇತರರು ಸಹಜವಾಗಿ ಅದನ್ನು ಕೆಳಕ್ಕೆಳೆದರು ಯಾಕೆಂದರೆ, ಆಶ್ರಮಕ್ಕೆ ಬರುವ ಜನರಿಗೆ ನಾಮಫಲಕ ಕಾಣಿಸುತ್ತಿರಲಿಲ್ಲ ಮತ್ತು ಎಲ್ಲಿಗೆ ಹೋಗಬೇಕೆಂಬುದು ತಿಳಿಯುತ್ತಿರಲಿಲ್ಲ.
ಈಗ, ಪಕ್ಷದ ಸ್ಥಳೀಯ ನಾಯಕನು ಬಹಳ ಕೋಪಗೊಂಡನು ಮತ್ತು ಅವನು, "ನಾನು ಬಹಳ ಜನರನ್ನು ಕರೆದುಕೊಂಡು ಬರುತ್ತೇನೆ ಮತ್ತು ನಾವೊಂದು ಧರಣಿ ಮಾಡುತ್ತೇವೆ. ಅದರ ಮುಂದೆ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ" ಎಂದು ಚೀರಾಡಲು ಮತ್ತು ನಮ್ಮ ಶಿಕ್ಷಕರಲ್ಲೊಬ್ಬರನ್ನು ಹೆದರಿಸಲು ತೊಡಗಿದನು, ಹಾಗೂ ದೊಡ್ಡ ವಾಗ್ಯುದ್ಧವೇ ನಡೆಯಿತು. ನಮ್ಮ ಭದ್ರತಾ ಸಿಬ್ಭಂದಿಗಳೂ ಕೂಡಾ ಹೇಳಿದರು, "ಸರಿ, ನೀವು ಬನ್ನಿ. ನೋಡೋಣ, ನಾವು ಕೂಡಾ ಬಹಳ ಬಲಶಾಲಿಗಳು."
ಹಾಗೆ, ಇನ್ನೊಂದು ಕಾರ್ಯಕ್ರಮಕ್ಕಾಗಿ ನಾನು ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ನನ್ನ ಕಾರ್ಯದರ್ಶಿಯು ನನಗೆ ಈ ಕಥೆಯನ್ನು ಹೇಳಿದನು. ನಾನು ಅವನಿಗಂದೆ, "ಈ ಸ್ಥಳೀಯ ನಾಯಕನನ್ನು ಕರೆದು ಅವನೊಂದಿಗೆ ಮಾತನಾಡು."
ಹಾಗೆ ನನ್ನ ಕಾರ್ಯದರ್ಶಿಯು ಅವನನ್ನು ಕರೆದು, ಅವನಿಗೆ ಹೇಳಿದನು, "ಗುರುದೇವ ಈಗಷ್ಟೇ ಬಂದಿದ್ದಾರೆ, ನೀನು ಬುಟ್ಟಿ ತುಂಬಾ ಹಣ್ಣುಗಳನ್ನು, ಒಂದು ಹೂವಿನ ಹಾರವನ್ನು ಮತ್ತು ಒಂದು ಶಾಲನ್ನು ಜನ್ಮದಿನವನ್ನಾಚರಿಸುತ್ತಿರುವ ವ್ಯಕ್ತಿಗೆ ತೆಗೆದುಕೊಂಡು ಹೋಗಿ, ಅವನಿಗೆ ಗುರುದೇವರ ಕಡೆಯಿಂದ ಆಶೀರ್ವಾದಗಳನ್ನು ನೀಡಬೇಕೆಂದು ಗುರುದೇವರು ಬಯಸುತ್ತಾರೆ", ಮತ್ತು ಅವನು ಒಪ್ಪಿದನು.
ನಂತರ ಅವನು ಕೇಳಿದನು, "ಅವರು ಯಾಕೆ ನಮ್ಮ ಭಿತ್ತಿಪತ್ರಗಳನ್ನು ಹೊರಕ್ಕೆಳೆದರು?"
ನನ್ನ ಕಾರ್ಯದರ್ಶಿಯು ಮುಗ್ಧನಂತೆ ನಟಿಸುತ್ತಾ ಹೇಳಿದನು, "ಓ, ನಿಮಗೇನಾದರೂ ಕಷ್ಟವಾಯಿತೇ?! ನೀವು ಯಾಕೆ ನನಗೆ ಹೇಳಲಿಲ್ಲ? ನೀವು ನನಗೆ ತಿಳಿಸಬೇಕಿತ್ತು. ಗುರುದೇವರು ಈಗಷ್ಟೇ ಬಂದಿದ್ದಾರೆ, ಅವರೊಂದು ಯಾತ್ರೆಯಲ್ಲಿದ್ದರು. ಒಂದು ಜನ್ಮದಿನಾಚರಣೆಯಿದೆಯೆಂಬುದಾಗಿ ಅವರು ಕೇಳಿದರು ಮತ್ತು ಅವರು ಆಶೀರ್ವಾದವನ್ನು ಕಳುಹಿಸಲು ಬಯಸುತ್ತಾರೆ. ಆದುದರಿಂದ ನೀವು ಹೋಗಿ ಈ ವಸ್ತುಗಳನ್ನು ನಿಮ್ಮ ಮುಖಂಡರಿಗೆ ಕೊಡಿ ಮತ್ತು ಅವರಿಗೆ ಆಶೀರ್ವಾದಗಳನ್ನು ನೀಡಿ."
ಸಂಪೂರ್ಣ ಪರಿಸ್ಥಿತಿಯು ತಿಳಿಯಾಯಿತು ಮತ್ತು ತಾನು ಬಹಳ ಶಕ್ತನಾಗಿರುವಂತೆ ಅವನಿಗನ್ನಿಸಿತು. ಈಗ ಅವನು, ನನ್ನಿಂದ ಒಂದು ಹಾರ ಮತ್ತು ಆಶೀರ್ವಾದವನ್ನು ತೆಗೆದುಕೊಂಡು ತನ್ನ ಮುಖಂಡನ ಬಳಿಗೆ ಹೋಗಬಹುದಿತ್ತು ಮತ್ತು ಪಕ್ಷದ ತನ್ನ ಮುಖಂಡನ ಬಳಿಗೆ ಹೋಗಲು ಪ್ರವೇಶಾಧಿಕಾರವೂ ಕೂಡಾ ಲಭಿಸಿತು.
ಅವನು ಮಾಡಲು ಹೊರಟಿದ್ದ ಎಲ್ಲಾ ದೊಡ್ಡ ನಾಟಕವೂ ಒಂದು ದೂರವಾಣಿ ಕರೆಯೊಂದಿಗೆ ಅಂತ್ಯವಾಯಿತು. ಅವನು ತನ್ನ ಪಕ್ಷದ ಮುಖಂಡನ ಬಳಿಗೆ ಹೆಮ್ಮೆಯಿಂದ ಹೋಗಿ, "ಗುರುದೇವರು ನಿಮಗೆ ಒಂದು ಹೂವಿನ ಹಾರವನ್ನು ಕೊಡಲು ನನ್ನನ್ನು ಕಳುಹಿಸಿದ್ದಾರೆ" ಎಂದು ಹೇಳಲು ಸಾಧ್ಯವಾಯಿತು.
ಹೀಗೆ, ತಾನು ಪ್ರಬಲನೆಂದು ಅವನಿಗನ್ನಿಸಿತು ಮತ್ತು ನಮ್ಮ ಜನರಿಗೆ ನಿರಾಳವಾಯಿತು.
ನೋಡಿ, ಘರ್ಷನೆಗಳನ್ನು ತಿಳಿ ಮಾಡುವುದು ಹೇಗೆಂಬುದು ನಿಮಗೆ ತಿಳಿದಿರುವಾಗ, ಅದು ಸುಲಭ. ಬೆಲೆತೆರಬೇಕಾಗಿ ಬಂದುದು ಕೇವಲ ದೂರವಾಣಿ ಕರೆಯದ್ದು ಮಾತ್ರ. ಆದರೆ ಒಂದು ಉಪಾಯವು ಎಲ್ಲೆಡೆಯೂ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ನೀವು ಬೇರೆ ಬೇರೆ ರೀತಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ನೀವು ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ, ನಿಮ್ಮ ಧೃಡವಾಗಿ, ಇಲ್ಲವೆಂದು  ಹೇಳಬೇಕಾಗುತ್ತದೆ. ಕೆಲವೊಮ್ಮೆ ನೀವು ವ್ಯಾವಹಾರಿಕ ಕುಶಲತೆಯಿಂದ ಮತ್ತು ಜಾಣ್ಮೆಯಿಂದಿರಬೇಕಾಗುತ್ತದೆ.
ಯಾವತ್ತೂ ಉಪಟಳ ಸೃಷ್ಟಿಸುವ ಜನರಿರುತ್ತಾರೆ. ಅಂತಹ ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಕುಶಲತೆಯು ನಿಮ್ಮಲ್ಲಿರಬೇಕು.
ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾಲ್ಕು ಮಾರ್ಗಗಳಿವೆ ಎಂದು ಪ್ರಾಚೀನ ಜನರು ಹೇಳಿದ್ದಾರೆ - ಸಾಮ, ದಾನ, ಭೇದ ಮತ್ತು ದಂಡ.
೧. ಸಾಮ ಎಂದರೆ, ಮಾತುಕತೆಯೊಂದಿಗೆ, ಮನವೊಲಿಕೆಯೊಂದಿಗೆ, ಸ್ವಲ್ಪ ಚರ್ಚೆ ಮತ್ತು ಸಂಪರ್ಕದೊಂದಿಗೆ.
೨. ದಾನ ಎಂದರೆ ಕ್ಷಮಿಸುವುದು. ’ಪರವಾಗಿಲ್ಲ, ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ’, ಮತ್ತು ಹಾಗೆ ನೀವು ಅವರಿಗೆ ಒಂದು ಅವಕಾಶವನು ನೀಡುವಿರಿ.
೩. ಭೇದ ಅಂದರೆ ಸಮಭಾವದಲ್ಲಿರುವುದು. ಸ್ವಲ್ಪ ಖಡಾಖಂಡಿತವಾಗಿ ಒಂದು ವಿಷಯವನ್ನು ತಿಳಿಸುವುದು.
೪.  ದಂಡ ಎಂದರೆ ಒಂದು ಕೋಲನ್ನು ತೆಗೆದುಕೊಳ್ಳುವುದು. ಅದು ಕಡೆಯ ಆಶ್ರಯ. ಸಾಧಾರಣವಾಗಿ ನಾವು ಕಡೆಯ ಎರಡು ಮಾರ್ಗಗಳನ್ನು ಪ್ರಾರಂಭದಲ್ಲೇ ಉಪಯೋಗಿಸುತ್ತೇವೆ. ನಾವು ಸಾಮರಸ್ಯದ ಪಥದೊಂದಿಗೆ ಹೋಗುವುದಿಲ್ಲ. ನೀವು ಮೊದಲು ಸಾಮರಸ್ಯದ ಪಥವನ್ನು ತೆಗೆದುಕೊಳ್ಳಬೇಕು ಮತ್ತು ನಂತರ ಒಂದು ಅವಕಾಶವನ್ನು ಕೊಡಬೇಕು, ಮತ್ತು ನಂತರ ವಿವೇಚಿಸಬೇಕು ಮತ್ತು ಅಂತಿಮವಾಗಿ, ಯಾವುದೂ ಕೆಲಸ ಮಾಡದಿದ್ದರೆ, ದಂಡ, ಅಂದರೆ ಕೋಲು ಹಿಡಿಯುವುದು.
ಇವುಗಳು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಿರುವ ನಾಲ್ಕು ಕುಶಲತೆಯ ಮಾರ್ಗಗಳೆಂದು ಕರೆಯಲ್ಪಡುತ್ತವೆ.

ಪ್ರಶ್ನೆ: ಗುರುದೇವ, ನಾವು ಜನರಿಗೆ ವಿವರಣೆಗಳನ್ನು ನೀಡಬಾರದೆಂದು ನೀವು ಹೇಳಿರುವಿರಿ. ಆದರೆ ನಮ್ಮ ಹೃದಯದಲ್ಲಿ ಭಾರವಾದುದೇನಾದರೂ ಇದ್ದು ಅದರ ಬಗ್ಗೆ ಮಾತನಾಡುವುದು ಅಗತ್ಯವೆಂದು ಅನ್ನಿಸಿದರೆ, ಆಗ ಏನು ಮಾಡುವುದು?
ಶ್ರೀ ಶ್ರೀ ರವಿ ಶಂಕರ್: ಅದಕ್ಕಾಗಿ ಒಂದು ನಿಯಮವಿಲ್ಲ. ಕೆಲವೊಮ್ಮೆ ನೀವು ಮಾತನಾಡಲು ಬಯಸುವಿರಿ ಮತ್ತು ಶಾಂತರಾಗುವಿರಿ ಹಾಗೂ ಕೆಲವೊಮ್ಮೆ ಮಾತನಾಡುವುದರಿಂದ ಯಾವುದೇ ರೀತಿಯ ಸಹಾಯವೂ ಆಗುವುದಿಲ್ಲ.
ಎಚ್ಚೆತ್ತುಕೊಳ್ಳಿ ಮತ್ತು ನೋಡಿ, ಸಂಪೂರ್ಣ ಜಗತ್ತು ಒಂದು ಕನಸಿನಂತೆ. ಆ ಎಲ್ಲಾ ಯೋಚನೆಗಳು ಹೋಗಿವೆ, ಜನರ ವರ್ತನೆಗಳು ಮಾಯವಾಗುವುವು. ಕೆಲವು ಜನರು ಚೆನ್ನಾಗಿ ವರ್ತಿಸುತ್ತಾರೆ ಮತ್ತು ಕೆಲವರು ಕೆಟ್ಟದಾಗಿ ವರ್ತಿಸುತ್ತಾರೆ, ಆದರೆ ಪ್ರತಿಯೊಬ್ಬರೂ ಸಾಯಲಿದ್ದಾರೆ ಮತ್ತು ಜಗತ್ತು ಮುಕ್ತಾಯವಾಗಲಿದೆ.
ಈ ಜನರ ಗುಂಪೆಲ್ಲಾ ದೂರ ಹೋಗಲಿದೆ. ನಂತರ ಹೊಸ ಜನರು ಬರುವರು ಮತ್ತು ಅವರೆಲ್ಲಾ ಸಾಯುವರು. ನಂತರ ಇನ್ನೊಂದು ಜನರ ಗುಂಪು ಬರುವುದು, ಅವರು ತಮ್ಮೊಳಗೆ ಜಗಳ ಮಾಡುವರು, ಅವರು ತಬ್ಬಿಕೊಳ್ಳುವರು, ಪ್ರೀತಿಸುವರು, ಚುಂಬಿಸುವರು, ಎಲ್ಲವನ್ನೂ ಮಾಡುವರು ಮತ್ತು ಅವರೆಲ್ಲರೂ ಸಾಯುವರು.
ಇವತ್ತು ಭೂಗ್ರಹದ ಮೇಲೆ ಏಳು ಬಿಲಿಯನ್ ಜನರಿದ್ದಾರೆ ಮತ್ತು ಈ ಎಲ್ಲಾ ಏಳು ಬಿಲಿಯನ್ ಜನರು ಸಾಯಲಿದ್ದಾರೆ. ಅದು ಕೇವಲ ಕೆಲವೇ ವರ್ಷಗಳ ಮಾತಷ್ಟೆ. ಇನ್ನೊಂದು ನೂರು ವರ್ಷಗಳಲ್ಲಿ, ಅದೇ ಜನರು ಇಲ್ಲಿರುವರೆಂದು ನಿಮಗನಿಸುತ್ತದೆಯೇ? ಇವತ್ತು ಇಲ್ಲಿರುವವರಲ್ಲಿ ಒಬ್ಬ ವ್ಯಕ್ತಿಯೂ ಕೂಡಾ ಜೀವಂತವಾಗಿರುವುದಿಲ್ಲ, ಮತ್ತು ಇನ್ನೂರು ವರ್ಷಗಳ ನಂತರ, ಮೊಮ್ಮಕ್ಕಳು ಕೂಡಾ ಇರುವುದಿಲ್ಲ.
ನೋಡಿ, ಪ್ರಪಂಚವು ಒಂದು ನದಿಯಂತೆ, ಈ ನದಿಯಲ್ಲಿ ಪ್ರತಿಕ್ಷಣವೂ ತಾಜಾ ನೀರು ಹರಿಯುತ್ತಿರುತ್ತದೆ. ನೀವು ಯಾವುದರ ಬಗ್ಗೆ ಅಷ್ಟೊಂದು ಚಿಂತೆ ಮಾಡುವುದು?
ನೀವು ಏನನ್ನಾದರೂ ಹಿಂದೆ ಬಿಟ್ಟು ಹೋಗಲು ಬಯಸುವುದಾದರೆ, ಅದು ಯಾರಿಗಾದರೂ ಸಹಾಯ ಮಾಡಬಹುದಾದ, ಯಾರಿಗಾದರೂ ಪ್ರಯೋಜನವಾಗುವ ಸ್ವಲ್ಪ ಜ್ಞಾನವಾಗಿರಬೇಕು. ಅವನೇನಂದನು, ಅವಳೇನಂದಳು, ಮತ್ತು ಇಂತಿಂತಹ ಪರಿಸ್ಥಿಯ ಬಗ್ಗೆ ನೀವೇನು ಯೋಚಿಸುವಿರಿ - ಇದಲ್ಲ. ಇದೆಲ್ಲಾ ಅವಿವೇಕ! ಅವುಗಳನ್ನೆಲ್ಲಾ ಕಿಟಿಕಿಯಾಚೆಗೆ ಬಿಸಾಡಿ. ಅದಕ್ಕೆ ಯಾವುದೇ ಅರ್ಥವಿಲ್ಲ.
ಗಂಟೆಗಟ್ಟಲೆ ಕಾಲವನ್ನು ನೀವು ವಿವರಣೆ ನೀಡುವುದರಲ್ಲಿ ವ್ಯರ್ಥ ಮಾಡುತ್ತೀರಿ: ನಿಮಗೆ ಅನ್ನಿಸಿದ ರೀತಿಯಲ್ಲಿ ನಿಮಗೆ ಯಾಕೆ ಅನ್ನಿಸಿತು ಹಾಗೂ ಇತರರಿಗೆ ಅನ್ನಿಸುವ ರೀತಿಯಲ್ಲಿ ಅವರಿಗೆ ಹೇಗೆ ಮತ್ತು ಯಾಕೆ ಅನ್ನಿಸಿತು.
ನಿಮಗೆ ಗೊತ್ತಾ, ಸಮಯವು ಬದಲಾಗುವಾಗ, ಮನಸ್ಸು ಕೂಡಾ ಬದಲಾಗುತ್ತದೆ. ಇದರ ಬಗ್ಗೆ ಒಂದು ಸುಂದರವಾದ ವಿಜ್ಞಾನವಿದೆ. ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ಕೂಡಾ, ಮನಸ್ಸು ಹೇಗೆ ಸಮಯದೊಂದಿಗೆ ಸಂಬಂಧ ಹೊಂದಿದೆ ಎಂಬುದರ ಬಗ್ಗೆ ಒಂದು ಸುಳಿವು ಸಿಗುತ್ತದೆ.
ಮನಸ್ಸು, ಸಮಯ ಮತ್ತು ಗ್ರಹಗಳ ನಡುವಿನ ಸಂಬಂಧದ ಬಗ್ಗೆ ಯಾವಾಗಲಾದರೂ ನಾವೊಂದು ಶಿಬಿರವನ್ನು ಪ್ರಾರಂಭಿಸೋಣ. ನೋಡಿ, ಜ್ಯೋತಿಷ್ಯ ಶಾಸ್ತ್ರ ಎಂದು ಹೇಳಲು ನಾನು ಬಯಸುವುದಿಲ್ಲ ಯಾಕೆಂದರೆ, ಬಹಳಷ್ಟು ಸಲ ಅದನ್ನು ದುರುಪಯೋಗ ಮಾಡಲಾಗಿದೆ ಮತ್ತು ಅಪಾರ್ಥ ಮಾಡಲಾಗಿದೆ. ಇವತ್ತು ಇದು, ಅತೀ ಹೆಚ್ಚು ಅವ್ಯವಸ್ಥಿತವಾದ ವಿಜ್ಞಾನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯ ಶಾಸ್ತ್ರವು ಒಂದು ವಿಜ್ಞಾನವೆಂಬುದರಲ್ಲಿ ಸಂದೇಹವಿಲ್ಲ ಆದರೆ ಅದನ್ನು ಎಷ್ಟೊಂದು ತಿರುಚಲಾಗಿದೆಯೆಂದರೆ, ಅದರ ಮೂಲ ಯಾವುದು ಎಂಬುದನ್ನು ಕೂಡಾ ನಿಮಗೆ ನೋಡಲು ಸಾಧ್ಯವಿಲ್ಲ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ತಾರಾಪುಂಜಗಳು ಮತ್ತು ಒಂಭತ್ತು ಗ್ರಹಗಳಿವೆ. ಗುರುಗ್ರಹವು, ನೀವು ಹುಟ್ಟಿದ ಸಮಯದಿಂದ ಹಿಡಿದು ಎಂಟನೆಯ ಮನೆಯಲ್ಲಿ ಸಾಗುವಾಗ, ನಿಮ್ಮ ಮನಸ್ಸಿನ ಮೇಲೆ ಅದರ ಪ್ರಭಾವವಾಗುತ್ತದೆ ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ, ಶನಿಯು ಎಂಟನೆಯ ಮನೆಯಲ್ಲಿ ಸಾಗುವಾಗ ಅದು, ನಿಮ್ಮ ಭಾವನೆಗಳು ತಲೆಕೆಳಗಾಗುವಂತೆ ಮಾಡುತ್ತದೆ. ಗುರು ಗ್ರಹವು ಎಂಟನೆಯ ಮನೆಯಲ್ಲಿರುವಾಗ, ನೀವು ನಿಮ್ಮೆಲ್ಲಾ ವಿವೇಕವನ್ನು ಕಳೆದುಕೊಳ್ಳುತ್ತೀರಿ. ಆದರೆ ಅದು ಕೇವಲ ಹನ್ನೊಂದು ತಿಂಗಳ ವರೆಗೆ ಮಾತ್ರ, ಮತ್ತು ಈ ಹನ್ನೊಂದು ತಿಂಗಳುಗಳಲ್ಲಿ, ಕೇವಲ ಮೂರು ತಿಂಗಳುಗಳ ವರೆಗೆ ಮಾತ್ರ ಅದು ನಿಮ್ಮನ್ನು ಬಹಳ ದುಃಖಿತರನ್ನಾಗಿ ಮಾಡುವುದು. ನೀವು ಆಳವಾದ ಆಧ್ಯಾತ್ಮಿಕ ಜ್ಞಾನದಲ್ಲಿ ಇಲ್ಲದಿದ್ದಲ್ಲಿ ಮತ್ತು ಅಲ್ಲಿಯವರೆಗೆ ಅಥವಾ ನಿಮಗೆ ಜ್ಞಾನೋದಯವಾಗಿರದೇ ಇದ್ದಲ್ಲಿ, ಇದು ಖಂಡಿತವಾಗಿಯೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದು. ಆದರೆ, "ಈ ಮೂರು ತಿಂಗಳುಗಳು ನನ್ನ ಮನಸ್ಸಿನ ಮತ್ತು ಭಾವನೆಗಳ ಮೇಲೆ ಸ್ವಲ್ಪ ಕಷ್ಟವನ್ನು ಹಾಕಲಿವೆ" ಎಂಬುದು ನಿಮಗೆ ತಿಳಿದಿದ್ದರೆ, ಆಗ ನೀವು ಆ ತಿಂಗಳುಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಏನಾದರೂ ಮಾಡುವುದಿಲ್ಲ.
ಅದೇ ರೀತಿಯಲ್ಲಿ, ಪ್ರತಿ ಎರಡೂವರೆ ದಿನಗಳಿಗೊಮ್ಮೆ ಮನಸ್ಸಿನ ಸ್ಥಿತಿ ಬದಲಾಗುತ್ತದೆ. ನೀವು ದುಖಿತರಾಗಿದ್ದರೆ, ಅದು ಎರಡೂವರೆ ದಿನಗಳಿಗಿಂತ ಜಾಸ್ತಿಯಿರುವುದಿಲ್ಲ. ಅಲ್ಲೊಂದು ವಿರಾಮವಿರುತ್ತದೆ ಮತ್ತು ನಂತರ ಅದು ಪುನಃ ಬರಲೂಬಹುದು.
ಈ ರೀತಿಯಲ್ಲಿ, ಬ್ರಹ್ಮಾಂಡದ ಪ್ರಭಾವವು ಮನಸ್ಸಿನ ಮೇಲಾಗುತ್ತದೆ. ಈ ಪ್ರಭಾವದಿಂದ ನಿಮ್ಮನ್ನು ಯಾವುದು ರಕ್ಷಿಸಬಲ್ಲದೆಂದರೆ, ಅದು ಸತ್ಸಂಗ, ಧ್ಯಾನ, ಮಂತ್ರ ಪಠಣ. ಇವುಗಳೆಲ್ಲಾ ಒಂದು ಕವಚವನ್ನು ತೊಡುವಂತೆ. ಒಂದು ಬಾಣ ಬರುತ್ತಿತ್ತು, ಆದರೆ ನಿಮ್ಮಲ್ಲೊಂದು ಕವಚವಿದೆ, ಆದುದರಿಂದ ಅದು ನಿಮ್ಮನ್ನು ನಿಜವಾಗಿ ಚುಚ್ಚಲಿಲ್ಲ.
ಆದುದರಿಂದ, ಹಲವು ಸಲ ’ಓಂ ನಮಃ ಶಿವಾಯ’ ಎಂದು ಜಪಿಸುವುದು ಮತ್ತು ಹಾಡುವುದು ನಿಮ್ಮ ಸುತ್ತಲೂ ಒಂದು ಕವಚವನ್ನು ಸೃಷ್ಟಿಸುತ್ತದೆ ಮತ್ತು ಈ ಎಲ್ಲಾ ಹುಚ್ಚು ಸಂಗತಿಗಳಿಂದ ನೀವು ಪ್ರಭಾವಿತರಾಗುವುದರಿಂದ ನಿಮ್ಮನ್ನು ರಕ್ಷಿಸುತ್ತದೆ.
ಸಂಪೂರ್ಣ ಪ್ರಪಂಚದ ಕ್ಷೇಮಕ್ಕಾಗಿ ಮತ್ತು ನಮ್ಮೆಲ್ಲಾ ಭಕ್ತರಿಗಾಗಿ ನಾವು ಬೆಂಗಳೂರು ಆಶ್ರಮದಲ್ಲಿ ಯಜ್ಞಗಳನ್ನು ಮಾಡುತ್ತೇವೆ. ಪ್ರತಿ ತಿಂಗಳೂ ಆರು ಸಲ ಒಂದು ಚಿಕ್ಕ ಯಜ್ಞವನ್ನು ಮಾಡಲಾಗುತ್ತದೆ ಮತ್ತು ನವರಾತ್ರಿಯ ಕಾಲದಲ್ಲಿ, ಪ್ರಪಂಚಕ್ಕೆ ಮತ್ತು ನಮ್ಮೆಲ್ಲಾ ಭಕ್ತರಿಗೆ ಶಾಂತಿ, ಸಮೃದ್ಧಿ ಮತ್ತು ರಕ್ಷಣೆಗಳನ್ನು ತರುವುದಕ್ಕಾಗಿ ನಾವೊಂದು ದೊಡ್ಡ ಯಜ್ಞವನ್ನು ಮಾಡುತ್ತೇವೆ.
ಇವುಗಳು ಪ್ರಾಚೀನ ಜನರ ರೀತಿಗಳಾಗಿದ್ದವು. ಭವಿಷ್ಯದಲ್ಲಿ ನಾವು ಇವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಮತ್ತು ಕೋರ್ಸುಗಳನ್ನು ನಡೆಸೋಣ.

ಪ್ರಶ್ನೆ: ಆಲೋಚನೆಗಳು ಬರುವುದು ಎಲ್ಲಿಂದ?
ಶ್ರೀ ಶ್ರೀ ರವಿ ಶಂಕರ್: ಈ ಆಲೋಚನೆ ನಿನಗೆ ಈಗಷ್ಟೇ ಬಂತೇ? ಈ ಆಲೋಚನೆ ಎಲ್ಲಿಂದ ಬಂತು? ಅದು ನಿನ್ನಲ್ಲಿ ಬಂತು, ಆದುದರಿಂದ ಅದು ಎಲ್ಲಿಂದ ಬರುವುದೆಂಬುದನ್ನು ನೀನು ಯಾಕೆ ಕುಳಿತುಕೊಂಡು ನೋಡಬಾರದು?
ಆಲೋಚನೆಯ ಮೂಲವು ಯಾವುದೆಂಬುದನ್ನು ನೀವು ಕುಳಿತುಕೊಂಡು ಯೋಚಿಸಿದ ಕ್ಷಣವೇ ಮನಸ್ಸು ಖಾಲಿಯಾಗುತ್ತದೆ. ಆಲೋಚನೆಗಳು ಎಲ್ಲಿಂದ ಬರುವುವು ಎಂಬುದನ್ನು ಅದು ಸೂಚಿಸುತ್ತದೆ. ಆಲೋಚನೆಗಳು, ಉಪಾಯಗಳು ಮತ್ತು ಭಾವನೆಗಳು ಎಲ್ಲಿಂದ ಬರುವುವೋ ಅವುಗಳ ಮೂಲಸ್ಥಾನವು ನೀವೇ ಆಗಿರುವಿರಿ - ಆ ಆಂತರಿಕ ಆಕಾಶ. ಇದು, "ಮೋಡಗಳು ಬರುವುದು ಎಲ್ಲಿಂದ?" ಎಂದು ಯಾರಾದರೂ ಕೇಳುವಂತೆ. ಮೋಡಗಳು ಆಕಾಶದಲ್ಲಿ ಹಾಗೆಯೇ ತೇಲಾಡುತ್ತಿರುತ್ತವೆ. ಅದೇ ರೀತಿಯಲ್ಲಿ, ನಮ್ಮ ಆಂತರಿಕ ಆಕಾಶದಲ್ಲಿ ಮೂರು ಆಕಾಶಗಳಿವೆ - ಒಂದನೆಯದು ಬಾಹ್ಯ ಆಕಾಶ, ಎರಡನೆಯದು ಆಲೋಚನೆಗಳು ಹಾಗೂ ಭಾವನೆಗಳು ಬರುವ ಆಂತರಿಕ ಆಕಾಶ ಮತ್ತು ಒಂದು ಸಾಕ್ಷಿಯಾಗಿರುವ ಮೂರನೆಯ ಆಕಾಶವಿದೆ. ಅಲ್ಲಿ ಏನೂ ಇಲ್ಲ, ಕೇವಲ ಆನಂದ.

ಪ್ರಶ್ನೆ: ಯಾವತ್ತಿಗೂ ಅಚಲ ನಂಬಿಕೆಯನ್ನು ಪಡೆಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದು ನಿಜವಾದ ನಂಬಿಕೆಯಾದರೆ, ಅಲುಗಾಡಲಿ ಬಿಡು. ಸತ್ಯವು ಯಾವತ್ತಿಗೂ ಹೋಗಲಾರದು ಮತ್ತು ನಂಬಿಕೆಯು ಸತ್ಯದ ಜೊತೆಗಿದ್ದರೆ, ಅದು ಅಲುಗಾಡಲಿ ಬಿಡು. ಅದು ಯಾವತ್ತಿಗೂ ಕಾಣೆಯಾಗಲಾರದು. ವಾಸ್ತವವಾಗಿ, ನೀವು ಎಷ್ಟು ಸಾಧ್ಯವೋ ಅಷ್ಟು ಸಂಶಯಿಸಬೇಕು.
ಒಂದು ವಸ್ತುವು ಅಪ್ಪಟವಾಗಿಲ್ಲದಿರುವಾಗ ಮಾತ್ರ ನಿಮಗೆ, "ಸಂಶಯಿಸಬೇಡ" ಎಂದು ಹೇಳಲು ಸಾಧ್ಯ. ಅದು ಅಪ್ಪಟ ಬಂಗಾರವಾಗಿದ್ದರೆ, ಎಷ್ಟು ಸಾಧ್ಯವೋ ಅಷ್ಟು ಕೆರೆಯುತ್ತಾ ಹೋಗಿ ಎಂದು ನಾನು ಹೇಳುತ್ತೇನೆ. ಆದರೆ ಅದು ಕೇವಲ ಬಂಗಾರದಲ್ಲಿ ಸುತ್ತಿರುವುದಾಗಿದ್ದರೆ ಅಥವಾ ಬಂಗಾರದ ಮೆರುಗು ಹಾಕಿರುವುದಾಗಿದ್ದರೆ, ಆಗ ನೀವು, "ಅತಿಯಾಗಿ ಕೆರೆಯಬೇಡ ಯಾಕೆಂದರೆ ಅದು ಮಾಯವಾಗಬಹುದು" ಎಂದು ಹೇಳುವಿರಿ. ನಿಜವಾದ ಬಂಗಾರದೊಂದಿಗೆ, ಎಷ್ಟೇ ಕೆರೆದರೂ ಅದು ಹೋಗುವುದಿಲ್ಲ.
ಸಂಶಯವೆಂದರೆ ಕೇವಲ ಶಕ್ತಿಯ ಕೊರತೆ. ನಿಮ್ಮಲ್ಲಿ ಶಕ್ತಿಯು ಹೆಚ್ಚಿರುವಾಗ, ಸಂಶಯವೆಲ್ಲಿದೆ? ಸಂಶಯ ಬರುವುದು ಶಕ್ತಿಯು ಕಡಿಮೆಯಾಗಿರುವಾಗ. ನಿಜವಾದ ನಂಬಿಕೆಯೆಂದರೆ, ಯಾವುದನ್ನು ನೀವು ನೂರು ಸಲ ಅಲುಗಾಡಿಸಿದರೂ ಉಳಿಯುವುದೋ ಅದು. ಅದು ನಿಜವಾದ ನಂಬಿಕೆ ಮತ್ತು ಅದು ಉಳಿಯುವುದು.

ಪ್ರಶ್ನೆ: ನಾವು ಆಶ್ರಮಕ್ಕೆ ಬಂದು ಪುನರುಜ್ಜೀವನ ಹೊಂದುತ್ತೇವೆ ಎಂದು ನೀವು ಹೇಳಿರುವಿರಿ - ಪ್ರಪಂಚವು ಯಾಕೆ ಒಂದು ಆಶ್ರಮವಲ್ಲ?
ಶ್ರೀ ಶ್ರೀ ರವಿ ಶಂಕರ್: ನನಗೆ, ಪ್ರಪಂಚವೇ ನನ್ನ ಆಶ್ರಮ. ಯಾವಾಗಲೂ ಧ್ಯಾನಗಳು ನಡೆಯುವ ಒಂದು ಭೌತಿಕ ಸ್ಥಳ ಅಥವಾ ಒಂದು ಆಶ್ರಮವು ಆ ತರಂಗಗಳನ್ನು ಹಿಡಿದಿರಿಸುತ್ತದೆ. ನೋಡಿ ನಿಮ್ಮ ಮನೆಯಲ್ಲಿ, ಊಟ ಮಾಡಲು ಒಂದು ಜಾಗ, ವಿಶ್ರಾಂತಿ ತೆಗೆದುಕೊಳ್ಳಲು ಒಂದು ಜಾಗ ಮತ್ತು ಕಸ ಹಾಕಲು ಒಂದು ಜಾಗವಿದೆ. ಅದರಂತೆಯೇ, ಪ್ರಪಂಚದಲ್ಲಿ, ಎಲ್ಲದಕ್ಕೂ ಒಂದು ಜಾಗವಿದೆ.
ನಿಮ್ಮಲ್ಲಿನ ಪ್ರತಿಯೊಬ್ಬರೂ ನಿಮ್ಮ ಮನೆಯನ್ನು ಒಂದು ಆಶ್ರಮವನ್ನಾಗಿ ಮಾಡಿದರೆ ನನಗೆ ಸಂತೋಷವಾಗುತ್ತದೆ ಮತ್ತು ಆಶ್ರಮವೆಂದರೇನು? ಅದು, ಎಲ್ಲಿ ಜ್ಞಾನವಿರುವುದೋ ಮತ್ತು ಎಲ್ಲಿ ಪ್ರೀತಿಯಿರುವುದೋ ಅಂತಹ ಸ್ಥಳ. ಅದು, ಯಾರು ಬೇಕಾದರೂ ಬಂದು ವಿಶ್ರಾಮ ಮಾಡಲು ಸಾಧ್ಯವಾಗಲು, ಅವರನ್ನು ಸ್ವಾಗತಿಸಿ ಅವರಿಗೆ ಸ್ವಲ್ಪ ಆಹಾರವನ್ನು ಕೊಡುವಂತಹ ಒಂದು ಸ್ಥಳ.
ನಿಮಗೆ ಅಂತಹ ಒಂದು ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಾದರೆ, ಆಗ ಸಂಪೂರ್ಣ ಪ್ರಪಂಚವು ಒಂದು ಆಶ್ರಮವಾಗುತ್ತದೆ. ವಾಸ್ತವವಾಗಿ, ನೀವು ಹೋಗಿ ಕಾಡಿನಲ್ಲಿ ಪ್ರಕೃತಿಯ ಜೊತೆಗಿರುವಾಗ, ಅದೆಲ್ಲವೂ ಒಂದು ಆಶ್ರಮವೇ ಆಗಿದೆ.
ಪ್ರಪಂಚದಲ್ಲಿರುವ ಪ್ರತಿಯೊಂದು ಮರವೂ ನನ್ನದೇ ತೋಟದಲ್ಲಿ; ನನ್ನದೇ ಆಶ್ರಮದಲ್ಲಿದೆಯೆಂದು ನಾನು ಹೇಳುತ್ತೇನೆ. ಇದು ನಿಜಸ್ಥಿತಿ, ಆದರೆ ಕೆಲವೊಮ್ಮೆ, ಇದು ಸಹಾಯಮಾಡುವುದಿಲ್ಲವೆಂದು; ಹೋಗಿ ನಿಮ್ಮಲ್ಲಿ ಶಕ್ತಿ ತುಂಬಲು ನಿಮಗೊಂದು ಸ್ಥಳದ ಅಗತ್ಯವಿದೆಯೆಂದು  ನಿಮಗನ್ನಿಸುವಾಗ, ನೀವು ಇಲ್ಲಿಗೆ (ಆಶ್ರಮ) ಬನ್ನಿ.
ಇಲ್ಲಿನ ಶಕ್ತಿಯು ಅನುಭವಕ್ಕೆ ಬರುವುದು ನಿಮಗೆ ಬಹಳ ಸ್ಪಷ್ಟವಾಗುವುದು. ನಿಮ್ಮ ಮನೆಯಲ್ಲಿರುವಂತೆಯೇ, ನೀವು ಎಲ್ಲಿ ಬೇಕಾದರೂ ಇರಬಹುದು, ಆದರೆ ಭೋಜನದ ಸುವಾಸನೆಯನ್ನು ಅನುಭವಿಸಬೇಕಿದ್ದರೆ, ನೀವು ಅಡುಗೆಮನೆಯೊಳಕ್ಕೆ ನಡೆಯಬೇಕು. ನೀವು ಎಲ್ಲಿ ಬೇಕಾದರೂ ತಿನ್ನಬಹುದು, ಆದರೆ ಅಡುಗೆಮನೆಯಲ್ಲಿ ಅಥವಾ ಭೋಜನಶಾಲೆಯಲ್ಲಿ, ಸುವಾಸನೆ ಇರುತ್ತದೆ.

ಪ್ರಶ್ನೆ: ಆತ್ಮಕ್ಕೆ ಒಂದು ಗುರಿಯಿರುವುದೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಆತ್ಮಕ್ಕೆ ಖಂಡಿತವಾಗಿಯೂ ಒಂದು ಗುರಿಯಿದೆ; ಪರಮಾತ್ಮನೊಡನೆ ಒಂದಾಗುವುದು. ಚಿಕ್ಕ ಮನಸ್ಸಿನ ಗುರಿಯೆಂದರೆ, ದೊಡ್ಡ ಮನಸ್ಸಿನೊಂದಿಗೆ ಒಂದಾಗುವುದು. ಪ್ರತಿಯೊಂದು ಅಲೆಯೂ ತೀರವನ್ನು ಅಪ್ಪಳಿಸಿ ತೀರವನ್ನು ತೊಳೆದು, ಅದು ಈಗಾಗಲೇ ಆಗಿರುವ ಸಮುದ್ರದೊಂದಿಗೆ ಒಂದಾಗಲು ಬಯಸುತ್ತದೆ!

ಪ್ರಶ್ನೆ: ಸಮಯವೆಂದರೇನು?
ಶ್ರೀ ಶ್ರೀ ರವಿ ಶಂಕರ್: ಎರಡು ಘಟನೆಗಳ ನಡುವಿನ ದೂರ. ದೂರವೆಂದರೇನೆಂದು ನೀನು ನನ್ನಲ್ಲಿ ಕೇಳಿದರೆ, ಅದು ಎರಡು ವಸ್ತುಗಳ ನಡುವಿನ ಜಾಗ.

ಪ್ರಶ್ನೆ: ಮೂಲಕ್ಕೆ ಮರಳಿ ಹೋಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕೇವಲ ಮೌನವಾಗಿರುವುದರಿಂದ, ಕಲಿತಿದ್ದನ್ನು ಮನಸ್ಸಿನಿಂದ ತೆಗೆದುಹಾಕುವುದರಿಂದ ಮತ್ತು ವಿಶ್ರಮಿಸುವುದರಿಂದ ನೀವು ಮೂಲಕ್ಕೆ ತಿರುಗಿ ಬರುವಿರಿ.

ಪ್ರಶ್ನೆ: ನೀವು ನಮಗೆ ಕಲಿ ಯುಗದ ಬಗ್ಗೆ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ನಾಲ್ಕು ಯುಗಗಳಿವೆ; ಸಮಯವು ನಾಲ್ಕು ಮಗ್ಗಲುಗಳಾಗಿ ವಿಭಜಿಸಲ್ಪಟ್ಟಿದೆ.
೧. ಸತ್ಯ ಯುಗ, ಯಾವಾಗ ಬಹಳಷ್ಟು ಸಕಾರಾತ್ಮಕತೆಯಿರುವುದೋ ಆಗ.
೨. ತ್ರೇತಾ ಯುಗ, ಯಾವಾಗ ಸಕಾರಾತ್ಮಕತೆಯು ಸ್ವಲ್ಪ ಕೆಳಗಿಳಿಯುವುದೋ ಆಗ.
೩. ದ್ವಾಪರ ಯುಗ, ಯಾವಾಗ ಸಕಾರಾತ್ಮಕತೆಯು ಇನ್ನೂ ಸ್ವಲ್ಪ ಹೆಚ್ಚು ಕೆಳಗಿಳಿಯುವುದೋ ಆಗ, ಮತ್ತು
೪. ಕಲಿ ಯುಗ, ಯಾವಾಗ ಸಕಾರಾತ್ಮಕತೆಯು ಇನ್ನೂ ಹೆಚ್ಚು ಕೆಳಗಿಳಿಯುವುದೋ ಆಗ.
ಕಲಿಯುಗದ ಬಗ್ಗೆ ಹೇಳಲಾಗಿರುವುದು ಇದನ್ನೇ. ಆದರೆ, ಕಲಿಯುಗದ ಒಳಗೆ ಸತ್ಯಯುಗವಿದೆಯೆಂದು ನಾನು ಹೇಳುತ್ತೇನೆ.
ನೀವು ಸಂತೋಷವನ್ನು ಅನುಭವಿಸುವ ದಿನಗಳಲ್ಲಿ, ನೀವು ಸತ್ಯ ಯುಗದಲ್ಲಿರುವಿರಿ ಎಂಬುದನ್ನು ತಿಳಿಯಿರಿ, ಮತ್ತು ನೀವು ಸಂಪೂರ್ಣವಾಗಿ ದುಃಖಿತರಾಗಿರುವಾಗ, ನೀವು ಕಲಿಯುಗದಲ್ಲಿರುತ್ತೀರಿ. ಆ ಅರ್ಥದಲ್ಲಿ, ದೊಡ್ಡ ಕಲಿಯುಗದ ಒಳಗೆ ಕೂಡಾ, ಒಳ್ಳೆಯ ಸಮಯಗಳಿವೆ.

ಪ್ರಶ್ನೆ: ಸತ್ಯವು ವಿರೋಧಾತ್ಮಕವಾದುದು ಎಂದು ನೀವು ಹೇಳಿದ್ದೀರಿ. ಇದನ್ನು ಅರ್ಥ ಮಾಡಿಕೊಳ್ಳಲಿರುವ ಒಂದು ಸುಲಭವಾದ ಮಾರ್ಗವನ್ನು ನೀವು ನಮಗೆ ತೋರಿಸಬಲ್ಲಿರೇ?
ಶ್ರೀ ಶ್ರೀ ರವಿ ಶಂಕರ್: ಹಾಲು ಒಳ್ಳೆಯದು ಮತ್ತು ಹಾಲು ಕೆಟ್ಟದು. ನೀವು ಒಂದು ಲೋಟ ಕುಡಿದರೆ, ಹಾಲು ಒಳ್ಳೆಯದು. ನೀವು ಎರಡು ಲೀಟರ್ ಕುಡಿದರೆ, ಅದು ಕೆಟ್ಟದು. ತಿಳಿಯಿತಾ?!
ನೀವು ಫ್ರೂದೆನ್ಸ್ಟಾಟಿನಿಂದ ಬಾಡ್ ಆಂಟಗಾಸ್ಟಿಗೆ ಬರಬೇಕಾದರೆ, ನೀವು ನೇರವಾಗಿ ಕೆಳಗೆ ಹೋಗಿ ನಿಮ್ಮ ಬಲಕ್ಕೆ ತಿರುಗಬೇಕು. ಆದರೆ ಒಪ್ಪೆನೌನಿಂದಾದರೆ, ನೀವು ನೇರವಾಗಿ ಹೋಗಿ ಎಡಕ್ಕೆ ತಿರುಗಬೇಕು.
ಎರಡೂ ಸೂಚನೆಗಳು ಸರಿ, ಆದರೆ ಅವುಗಳು ವಿರೋಧಾತ್ಮಕವಾಗಿವೆ.
ಸತ್ಯವು ಗೋಳಾತ್ಮಕವಾದುದು, ಅದು ರೇಖಾತ್ಮಕವಲ್ಲ. ಯಾವುದಾದರೂ ಗೋಳಾತ್ಮಕವಾಗಿರುವಾಗ, ಅದನ್ನು ತಲುಪಲು ಅನೇಕ ಮಾರ್ಗಗಳಿರುತ್ತವೆ.

ಪ್ರಶ್ನೆ: ಭಾರತವು, ೨,೦೦೦ ವರ್ಷಗಳ ಮೊದಲು ಹೇಗಿತ್ತೋ ಅಂತಹ ದೇಶವಾಗುವ ಅಂಚಿನಲ್ಲಿದೆಯೇ?
ಶ್ರೀ ಶ್ರೀ ರವಿ ಶಂಕರ್: ರಾಜಕಾರಣಿಗಳು ಹಾಗಾಗಲು ಬಿಟ್ಟರೆ, ಆಗಬಹುದು. ಇಟೆಲಿಯಲ್ಲಿ, ಭಾರತದಲ್ಲಿ ಮತ್ತು ಗ್ರೀಸಿನಲ್ಲಿ ರಾಜಕಾರಣಿಗಳು ಒಂದು ಸಮಸ್ಯೆಯಾಗಿದ್ದಾರೆ. ದೇಶವನ್ನು ದಿವಾಳಿತನದ ಕಡೆಗೆ ಕೊಂಡೊಯ್ಯುತ್ತಿರುವುದು ರಾಜಕಾರಣಿಗಳು. ಪ್ರತಿಯೊಂದು ದೇಶವೂ ಸಾಕಷ್ಟು ಸಂಪನ್ಮೂಲಗಳನ್ನು ಮತ್ತು ಒಳ್ಳೆಯ ಜನರನ್ನು ಹೊಂದಿದೆ. ಅಲ್ಲಿ  ಕ್ರಿಯಾಶೀಲತೆಯಿದೆ, ಆದರೆ ಭ್ರಷ್ಟಾಚಾರವು ದೇಶಗಳನ್ನು ಒಂದು ಆದಿಕಾಲದ, ಮಧ್ಯಕಾಲೀನ ಯುಗದ ಕಡೆಗೆ ಕರೆದೊಯ್ಯುತ್ತಿದೆ.