ಮಂಗಳವಾರ, ಜುಲೈ 31, 2012

ಶ್ರೀ ಶ್ರೀ ವಿಶ್ವವಿದ್ಯಾನಿಲಯ

31
2012
Jul
ಬೆಂಗಳೂರು ಆಶ್ರಮ, ಭಾರತ

ವತ್ತು ನಾವು ಒರಿಸ್ಸಾದ ಭುವನೇಶ್ವರದಲ್ಲಿ ನಮ್ಮ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳ ಮೊದಲ ಗುಂಪು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದೆ, ಮತ್ತು ವಿದ್ಯಾರ್ಥಿಗಳ ಈ ಮೊದಲ ಗುಂಪು ನಮ್ಮ ಹೆಮ್ಮೆಯಾಗಿದೆ, ಯಾಕೆಂದರೆ ಅವರು, ಬಹಳ ದೊಡ್ಡ ಮತ್ತು  ಬಹಳ ಉತ್ತಮವಾಗಲಿರುವ ಒಂದರ ಅಡಿಪಾಯವಾಗಿದ್ದಾರೆ.
ಒರಿಸ್ಸಾದ ಶ್ರೀ ಶ್ರೀ ವಿಶ್ವವಿದ್ಯಾನಿಲಯವು, ಮೌಲ್ಯಗಳು ಮತ್ತು ಸಾರ್ವತ್ರಿಕ ಸಹಕಾರವನ್ನು ಆಧರಿಸಿದೆ.  ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪೂರ್ವದ ಅತ್ಯುತ್ತಮವಾದುದು ಮತ್ತು ಪಶ್ಚಿಮದ ಅತ್ಯುತ್ತಮವಾದುದನ್ನು ಒದಗಿಸಲಾಗುವುದು. ಅವರು ಜಾಗತಿಕ ನಾಗರಿಕರಾಗುವರು ಮತ್ತು ತಮ್ಮ ಕುಶಲತೆಗಳನ್ನು ಹಾಗೂ ತಮ್ಮ ಧೀಮಂತಿಕೆಯನ್ನು ಪ್ರಪಂಚದಲ್ಲೆಲ್ಲಾ ಕೊಂಡೊಯ್ಯುವರು.
ನಮ್ಮ ಉಪಕುಲಪತಿಗಳಾದ ಡಾ.ಮಿಶ್ರಾ ಅವರನ್ನು, ನಮ್ಮ ವಿವಿಶ್ವವಿದ್ಯಾನಿಲಯದ ಡಾ.ರಾವ್ ಅವರನ್ನು ಮತ್ತು ಇತರ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಅವರೆಲ್ಲರೂ ಅಲ್ಪಾವಧಿಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಭುವನೇಶ್ವರದ ಮಳೆಯ ಮಧ್ಯೆಯೂ ಅವರು ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಾಗಿ ಬಂತು. ಅವರಿಗೆ ಹಲವಾರು ಸವಾಲುಗಳಿದ್ದವು ಮತ್ತು ಸವಾಲುಗಳ ನಡುವೆ, ವಿಶ್ವವಿದ್ಯಾನಿಲಯವನ್ನು ಹೇಳಿದ ತಾರೀಖಿಗೆ ಸರಿಯಾಗಿ ಪ್ರಾರಂಭಿಸಲು ಅವರಿಗೆ ಸಾಧ್ಯವಾಯಿತು. ನಾವು ಮುಂದೆ ಸಾಗಿದಂತೆಲ್ಲಾ ಉತ್ತಮ ಸೌಕರ್ಯಗಳು ಬರಬಹುದು. ನಾನು ಎಲ್ಲಾ ವಿದ್ಯಾರ್ಥಿಗಳನ್ನೂ ಕೂಡಾ ಅಭಿನಂದಿಸುತ್ತೇನೆ; ನಿಮಗೆಲ್ಲರಿಗೂ ನಿಮ್ಮ ಮುಂದೆ ಒಂದು ಬಹಳ ಉಜ್ವಲ ಭವಿಷ್ಯವಿದೆ!
ವಿಶ್ವವಿದ್ಯಾನಿಲಯವು ಪ್ರಾರಂಭವಾಗುವ ಮೊದಲೇ, ಪ್ರಪಂಚದ ಎಲ್ಲೆಡೆಗಳಿಂದಲೂ ನನಗೆ ಕರೆಗಳು ಬಂದಿದ್ದವು. ವಿಶ್ವವಿದ್ಯಾನಿಲಯದೊಂದಿಗೆ ತಾವು ಹೇಗೆ ಜೊತೆಗೂಡಬಹುದೆಂದು ಜನರು ಸಲಹೆ ನೀಡಿದರು. ಮತ್ತು ಇವತ್ತು, ಬಹಳ ಶುಭದಿನದಂದು, ನಾವು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಮೊದಲ ಗುಂಪಿನ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿ ಸಂಘದ ಮುಂದಾಳುಗಳಾಗಬಹುದು ಎಂಬ ವಿಶ್ವಾಸ ನನಗಿದೆ.
ಜ್ಞಾನ, ವ್ಯಕ್ತಿತ್ವ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಾಜದಲ್ಲಿ ನಾಯಕತ್ವ - ಇವುಗಳೆಲ್ಲಾ ನಾವು ನಮ್ಮ ವಿದ್ಯಾರ್ಥಿಗಳಿಂದ ನಿರೀಕ್ಷಿಸುತ್ತಿರುವುದು. ಅವರು ಒಂದು ಹೊಸ ಭರವಸೆಯನ್ನು ತರಲಿದ್ದಾರೆಂಬುದರ ಬಗ್ಗೆ ನನಗೆ ವಿಶ್ವಾಸವಿದೆ.  ಆರ್ಥಿಕ ಹಿಂಜರಿತ, ನೈತಿಕ  ಅವನತಿ, ಸಾಮಾಜಿಕ ಅನ್ಯಾಯ, ಬಡತನ ಮತ್ತು ಹಲವಾರು ಇತರ ಸವಾಲುಗಳಿರುವಾಗ ಅವರು, ಒಂದು ಹೊಸ ಭರವಸೆಯನ್ನು ತುಂಬುವರು. ಸಮಾಜವು ಇಂದು ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ಪುನಃ ಲೆಕ್ಕ ಮಾಡಲು ನಾನು ಇಚ್ಛಿಸುವುದಿಲ್ಲ. ಆದರೆ, ಲಕ್ಷಾಂತರ ಜನರ ಕಣ್ಣೀರನ್ನು ಒರೆಸಲು ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಸಮೃದ್ಧಿಯನ್ನು ಪುನಃ ಪ್ರಪಂಚದಲ್ಲಿ ತರಲು ಈ ಯುವಜನರು ಸುಸಜ್ಜಿತರಾಗಿರುವರು ಎಂಬ ವಿಶ್ವಾಸ ನನಗಿದೆ.
ವಿದ್ಯಾರ್ಥಿಗಳಾಗಿ ನಿಮ್ಮಲ್ಲಿ ಎರಡು ವಿಷಯಗಳಿರಬೇಕು:
೧) ನಿಮ್ಮಲ್ಲಿ ಒಂದು ದೊಡ್ಡ ಕಲ್ಪನೆಯಿರಬೇಕು, ಮತ್ತು
೨) ಎಷ್ಟು ಸಾಧ್ಯವೋ ಅಷ್ಟು ಜ್ಞಾನದಿಂದ ನಿಮ್ಮನ್ನು ಸುಸಜ್ಜಿತರನ್ನಾಗಿಸಲು ನಿಮ್ಮಲ್ಲಿ ಇಚ್ಛೆಯಿರಬೇಕು. ನಿಮ್ಮನ್ನು ಪಠ್ಯಕ್ರಮಕ್ಕೆ ಸೀಮಿತವಾಗಿಟ್ಟುಕೊಳ್ಳಬಾರದು, ಆದರೆ ಪಠ್ಯಕ್ರಮದಾಚೆಗೂ ನೋಡಬೇಕು. ನೀವು ಏನನ್ನು ಕಲಿಯಲು ಬಯಸುತ್ತೀರೋ ಅದನ್ನು ಶಿಕ್ಷಕರಿಂದ ಕೇಳಿ ಪಡೆಯಬೇಕು. ಬಹಳ ಉತ್ಸಾಹಿಗಳಾಗಿರುವುದು ವಿದ್ಯಾರ್ಥಿಗಳಿಗೆ ಬಹಳ ಅಗತ್ಯವೆಂದು ನನಗನಿಸುತ್ತದೆ.
ಸಂಸ್ಕೃತದಲ್ಲಿ ಒಂದು ಹಳೆಯ ಮಾತಿದೆ, "ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ, ಸುಖಕ್ಕಾಗಿ ತವಕಿಸಬೇಡಿ, ಮತ್ತು ಯಾರು ಸುಖಗಳಿಗೆ ಸಿಕ್ಕಿಹಾಕಿಕೊಂಡಿರುತ್ತಾರೋ ಅವರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದು."
ವಿದ್ಯಾರ್ಥಿನಾ ಕುತೋ ಸುಖಂ; ಸುಖಾರ್ಥಿನಾ ಕುತೋ ವಿದ್ಯಾ.
ಅದರರ್ಥ ನೀವು ಸುಖವಾಗಿರಬಾರದೆಂದಲ್ಲ. ಆದರೆ ಕೇವಲ ಸುಖಗಳ ಮತ್ತು ಮೋಜಿನ ಕಡೆಗೆ ಗಮನ ಹರಿಸುವುದರಿಂದ ಶಿಕ್ಷಣವು ಹಿಂದೆ ಬೀಳುತ್ತದೆ. ಆದುದರಿಂದ, ನೀವು ಜ್ಞಾನವನ್ನು ಮುಂದೆ ಇರಿಸಿದರೆ, ಆಗ ನಿಮ್ಮ ಜೀವನದಲ್ಲಿಡೀ ನಿಮ್ಮ ಬಳಿ ಸುಖ ಬರುತ್ತದೆ.
ಜ್ಞಾನವೆಂಬುದು ಸುಖವನ್ನು ತನ್ನೆಡೆಗೆ ಎಳೆದುಕೊಳ್ಳುವಂತಹುದು; ಆಂತರಿಕ ಸುಖ ಮತ್ತು ಬಾಹ್ಯ ಸುಖ, ಎರಡೂ. ಆದುದರಿಂದ ನಾವು ಜ್ಞಾನದ ಮೇಲೆ ಗಮನ ಹರಿಸಬೇಕು ಮತ್ತು ಸುಖಗಳು ತಮ್ಮಿಂತಾವೇ ನಮ್ಮನ್ನು ಹಿಂಬಾಲಿಸುತ್ತವೆ.
ವಿದ್ಯಾರ್ಥಿಗಳ ಈ ಮೊದಲ ಗುಂಪು, ಪ್ರಪಂಚದ ಬಗ್ಗೆ ನಮಗಿರುವ ದೊಡ್ಡ ಭರವಸೆಯ ಉಜ್ವಲ ಉದಾಹರಣೆಗಳಾಗಬಹುದು ಎಂದು ನನಗೆ ಬಹಳ ಸಂತೋಷವಾಗುತ್ತಿದೆ ಮತ್ತು ಆ ವಿಶ್ವಾಸ ನನಗಿದೆ.
ನೆರೆದಿರುವ ಶಿಕ್ಷಕರ ವರ್ಗವನ್ನೂ ನಾನು ಅಭಿನಂದಿಸಲು ಬಯಸುತ್ತೇನೆ. ಮನುಕುಲಕ್ಕೆ ಒಂದು ಹೊಸ ಅಡಿಪಾಯವನ್ನು ಹಾಕಲು ನೀವು ಸಿದ್ಧತೆ ಮಾಡುತ್ತಿದ್ದೀರಿ.
ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಸ್ಥಿಭೈಷಜ್ಯ (ಆಸ್ಟಿಯೋಪತಿ), ಪ್ರಕೃತಿ ಚಿಕಿತ್ಸೆ, ಯೋಗ, ಆಯುರ್ವೇದ ಮತ್ತು ಹಲವಾರು ಇತರ ಶಾಖೆಗಳು ಬರಲಿವೆ; ವಿಶೇಷವಾಗಿ ದೇಶದಲ್ಲಿ ಲಭ್ಯವಿಲ್ಲದ ಅಪರೂಪವಾದಂತವು.
ಭಾರತದಲ್ಲಿ ಮೊತ್ತಮೊದಲನೆಯ ಬಾರಿಗೆ, ನಾವು ಆಸ್ಟಿಯೋಪತಿಯನ್ನು ಒಂದು ಪಠ್ಯವಾಗಿ  ಪರಿಚಯಿಸಲಿದ್ದೇವೆ. ಭಾರತದಲ್ಲಿ ಯಾರಿಗೂ ಆಸ್ಟಿಯೋಪತಿಯ ಬಗ್ಗೆ ಗೊತ್ತಿಲ್ಲ. ನಮ್ಮಲ್ಲಿ ಅಲೋಪತಿ ಔಷಧಿ ಇರುವಂತೆಯೇ, ನಮ್ಮಲ್ಲಿ ಆಸ್ಟಿಯೋಪತಿಯಿದೆ. ಅದು ಸ್ನಾಯುಮೂಳೆ ಚೌಕಟ್ಟನ್ನು (ಸಂಧಿಗಳು, ಸ್ನಾಯುಗಳು ಮತ್ತು ಬೆನ್ನೆಲುಬು) ಸರಿಪಡಿಸುವುದರತ್ತ ಗಮನಹರಿಸುತ್ತದೆ. ಇದರಿಂದಾಗಿ ಹಲವು ರೋಗಗಳು ವಾಸಿಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಮತ್ತು ಒಬ್ಬ ವ್ಯಕ್ತಿಯ ಒಟ್ಟು ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕೂಡಾ ಸುಧಾರಿಸುತ್ತದೆ. ಆದುದರಿಂದ, ಇದರ ಮೇಲೆ ನಾವೊಂದು ಕೋರ್ಸನ್ನು ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸುತ್ತಿದ್ದೇವೆ.
ನಂತರ, ಉತ್ತಮ ಆಡಳಿತದ ಕಾಲೇಜು (ಕಾಲೇಜ್ ಆಫ್ ಗುಡ್ ಗವರ್ನೆನ್ಸ್) ಕೂಡಾ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾಗಲಿದೆ. ಇವತ್ತು, ಪ್ರತಿಯೊಂದು ಕ್ಷೇತ್ರದ ಜನರಿಗೆ ಒಂದಲ್ಲ ಒಂದು ಅರ್ಹತೆ ಇರಬೇಕಾಗುತ್ತದೆ. ಆದರೆ ರಾಜಕೀಯದಲ್ಲಿ ಅದು ಇಲ್ಲ. ಅದಕ್ಕೇ ಮೊದಲೆಂದೂ ಇಲ್ಲದಂತೆ, ರಾಜಕಾರಣಿಗಳ ಗುಣಮಟ್ಟವು ಅಷ್ಟೊಂದು ಕೆಳಕ್ಕೆ ಹೋಗಿರುವುದು.
ಆಡಳಿತದಲ್ಲಿ ಕೂಡಾ - ಹಳ್ಳಿಗಳ ಪಂಚಾಯತುಗಳ ಹಂತದಿಂದ ಹಿಡಿದು ಸಂಸತ್ತಿನ ವರೆಗೆ, ಸರಿಯಾದ, ಸಮಾಜದ  ಆಡಳಿತಗಾರರನ್ನು ಮತ್ತು ನಾಯಕರನ್ನು ನಾವು ಸೃಷ್ಟಿಸಬೇಕಾದ ಅಗತ್ಯವಿದೆ. ಆದುದರಿಂದ ಉತ್ತಮ ಆಡಳಿತದ ಕಾಲೇಜು ಎಂಬುದು ಕೂಡಾ ಯೋಜನೆಯಲ್ಲಿರುವ ಒಂದು ವಿಷಯ. ಅದು ಬಹಳ ಬೇಗನೆ ಬರಲಿದೆ.
ಈಗ, ವ್ಯವಹಾರ ನಿರ್ವಹಣೆ (ಬ್ಯುಸಿನೆಸ್ ಮ್ಯಾನೇಜ್ ಮೆಂಟ್) ಮತ್ತು ವ್ಯವಹಾರ ಆಡಳಿತ (ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್) ಕುರಿತಾಗಿರುವ ಕೋರ್ಸುಗಳು ಇವತ್ತು ಪ್ರಾರಂಭವಾಗಿವೆ. ಮುಂಬರುವ ದಿನಗಳಲ್ಲಿ ಪ್ರಪಂಚದಾದ್ಯಂತದಿಂದ ಜ್ಞಾನವು ನಮ್ಮ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡುವುದನ್ನು ಕಾಣಬಹುದು. ಮನಸ್ಸಿನಲ್ಲಿ ಇದೇ ಉದ್ದೇಶವನ್ನಿಟ್ಟುಕೊಂಡು ನಾವು ಈ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ.
ನೋಡಿ, ನಾವು ನಮ್ಮ ಮಕ್ಕಳನ್ನು ದೂರದ ದೇಶಗಳಿಗೆ ಕಳುಹಿಸುತ್ತೇವೆ. ನಾವು ಅವರನ್ನು ಆಸ್ಟ್ರೇಲಿಯಾ, ಲಂಡನ್, ಅಮೇರಿಕಾಗಳಿಗೆ ಕಳುಹಿಸುತ್ತೇವೆ ಮತ್ತು ಹೊರದೇಶಗಳಲ್ಲಿ ಅವರ ಶಿಕ್ಷಣಕ್ಕೆ ಖರ್ಚು ಮಾಡಲು ಬಹಳಷ್ಟು ಹಣವನ್ನು ಜೋಡಿಸುತ್ತೇವೆ. ಹಾಗಿದ್ದರೂ ನಮ್ಮ ಮಕ್ಕಳನ್ನು ಅಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳಲಾಗುವುದಿಲ್ಲ. ಅಲ್ಲಿ ಬಹಳಷ್ಟು ಹಿಂಸೆಯನ್ನು ಅವರು ಅನುಭವಿಸಬೇಕಾಗುತ್ತದೆ. ನಮ್ಮ ದೇಶವು ತನ್ನ ಹಲವಾರು ಮಕ್ಕಳನ್ನು ಕಳಕೊಂಡಿದೆ. ನಾವು ಅಂತಹ ದೇಶಗಳಿಗಾಗಿ ನಮ್ಮ ಪ್ರತಿಭಾಶಾಲಿ ಮಕ್ಕಳಲ್ಲಿ ಕೆಲವರನ್ನು ಕಳಕೊಂಡಿದ್ದೇವೆ. ಆದುದರಿಂದ, ನಾನು ಯೋಚಿಸಿದೆ, ಪ್ರಪಂಚದ ಅತ್ಯುತ್ತಮ ಶಿಕ್ಷಕರನ್ನು ಭಾರತಕ್ಕೆ ಕರೆಯಿಸಬಹುದು ಮತ್ತು ಮಕ್ಕಳನ್ನು ನಾವು ಯಾವ ಮಟ್ಟದ ಶಿಕ್ಷಣವನ್ನು ಪಡೆಯಲು ಹೊರದೇಶಗಳಿಗೆ ಕಳುಹಿಸುತ್ತೇವೋ, ಅದನ್ನು ಇಲ್ಲಿಯೇ ಅವರಿಗೆ ಕೊಡಿಸಬಹುದು. ಅಂತಹ ಒಂದು ವಿಶ್ವವಿದ್ಯಾನಿಲಯ ಇಲ್ಲಿದ್ದರೆ, ಆಗ ನಾವು ನಮ್ಮ ಮಕ್ಕಳನ್ನು ಇತರ ದೇಶಗಳಿಗೆ ಕಳುಹಿಸಬೇಕಾಗಿಲ್ಲ. ನಾವು ಬಹಳಷ್ಟು ಖರ್ಚು ವೆಚ್ಚಗಳನ್ನು ಉಳಿಸಬಹುದು ಮತ್ತು ನಮ್ಮ ಮಕ್ಕಳು ಇಲ್ಲಿ ಸುರಕ್ಷಿತವಾಗಿರುವರೆಂಬ  ತೃಪ್ತಿಯನ್ನೂ ಅನುಭವಿಸಬಹುದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಒರಿಸ್ಸಾದಲ್ಲಿ ನಾವು ಜಾಗತಿಕ ಶ್ರೇಣಿಯ  ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ.
ಮುಂಬರುವ ವರ್ಷಗಳಲ್ಲಿ ನೀವೆಲ್ಲರೂ ನಿಮ್ಮ ಮಕ್ಕಳನ್ನು ಈ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಬೇಕು ಎಂದು ಹೇಳಲು ಕೂಡಾ ನಾನು ಬಯಸುತ್ತೇನೆ. ನಿಮ್ಮ ಮಕ್ಕಳು ಇಲ್ಲಿ ಪಡೆಯುವ ಶಿಕ್ಷಣವು, ಅವರು ಕೆಲವು ಹೊರದೇಶಗಳಲ್ಲಿ ಪಡೆಯುವ ಶಿಕ್ಷಣಕ್ಕಿಂತ ಹೆಚ್ಚಿನದಲ್ಲದಿದ್ದರೂ, ಅದಕ್ಕೆ ಸರಿಸಮಾನವಾಗಿರುತ್ತದೆ. ಈ ವಿಶ್ವವಿದ್ಯಾನಿಲಯದ ಮೂಲಕ ಅವರು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸುವರು.
ಮತ್ತೊಮ್ಮೆ, ವಿಶ್ವವಿದ್ಯಾನಿಲಯವನ್ನು ಸೇರಿರುವ ಎಲ್ಲಾ ವಿದ್ಯಾರ್ಥಿಗಳಿಗೆ, ಯುವ ಮನಸ್ಸುಗಳಿಗೆ ನಾನು ಆಶೀರ್ವಾದಗಳನ್ನು ನೀಡುತ್ತೇನೆ. ನಿಮ್ಮ ಓದಿನ ಮೇಲೆ ಗಮನವಿರಿಸಿ ಮತ್ತು ನಾನು ಬೇಗನೇ ಬಂದು ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ!

ಪ್ರಶ್ನೆ: ಪ್ರೀತಿಯ ಗುರುದೇವ, ನಾವು ಈ ಪಥದಲ್ಲಿರುವಾಗ, ಎಷ್ಟರ ಮಟ್ಟಿಗೆ ನಾವು ಇತರ ಗುರುಗಳಿಂದ ಜ್ಞಾನವನ್ನು ಕೇಳಬಹುದು?
ಶ್ರೀ ಶ್ರೀ ರವಿಶಂಕರ್:
ನಾನು ಹೇಳುವುದೇನೆಂದರೆ, ಎಲ್ಲರನ್ನೂ ಗೌರವಿಸಿ. ಒಂದೇ ಒಂದು ಜ್ಞಾನವಿರುವುದು ಮತ್ತು ಅದು ನಿಮಗೆ ಲಭ್ಯವಿದೆ. ಆದರೆ ನೀವು ಇಲ್ಲಿ ಅಲ್ಲಿ ಶಾಪಿಂಗ್ ಮಾಡುತ್ತಾ ಹೋದರೆ, ನೀವು ಹೆಚ್ಚು ಗೊಂದಲಕ್ಕೊಳಗಾಗುವಿರಿ. ನಾವನ್ನುತ್ತೇವೆ, "ಸೋ ಹಂ ಮಾಡಿ" ಎಂದು. ಬೇರೆ ಯಾರೋ ಹೇಳುವರು, "ಇಲ್ಲ! ಸೋ ಹಂ ಸರಿಯಲ್ಲ, ಹಂ ಸಾ ಮಾಡಿ" ಎಂದು ಮತ್ತು ಮೂರನೆಯ ಒಬ್ಬ ವ್ಯಕ್ತಿಯು, "ಹಂ ಸಾ ಸರಿಯಲ್ಲ, ನೀವು ಸದಾ ಸೋ ಹಂ ಮಾಡಬೇಕು" ಎಂದು ಹೇಳುತ್ತಾನೆ. ಆಗ ನೀವು ಇನ್ನೂ ದೊಡ್ಡ ಅವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಆದುದರಿಂದ, ಎಲ್ಲರನ್ನೂ ಗೌರವಿಸಿ ಮತ್ತು ಒಂದು ಜ್ಞಾನಕ್ಕೆ ಬದ್ಧರಾಗಿರಿ. ಅದು ನಿಮಗೆ ಏನಾದರೂ ತೃಪ್ತಿಯನ್ನು ಕೊಟ್ಟಿದ್ದರೆ, ಜೀವನದಲ್ಲಿ ಏನಾದರೂ ಮೇಲೆತ್ತುವಿಕೆಯನ್ನು ನೀಡಿದ್ದರೆ, ನೀವು ಅದರೊಳಕ್ಕೆ ಆಳವಾಗಿ ಹೋಗಬೇಕು. ಹಲವಾರು ಹಳ್ಳಗಳನ್ನು ತೋಡುವುದರಲ್ಲಿ ಅರ್ಥವಿಲ್ಲ. ಒಂದು ಜಾಗದಲ್ಲಿ ಆಳಕ್ಕೆ ಹೋಗಿ.

ಪ್ರಶ್ನೆ: ಗುರುದೇವ, ನೀವು ಅಹಂಕಾರವನ್ನು ಮೀರಿರುವಿರಿ ಮತ್ತು ಅದರಿಂದಾಗಿ ನಿಮಗೆ ಯಾವುದೇ ಕರ್ಮವಿಲ್ಲ.  ಆದರೂ ನೀವು ಮನುಕುಲದ ಲಾಭಕ್ಕಾಗಿ ಬಹಳಷ್ಟು ಕರ್ಮಗಳನ್ನು ಮಾಡುತ್ತಿರುವಿರಿ. ಆದರೆ ಕರ್ಮದ ನಿಯಮದ ಪ್ರಕಾರ, ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ, ನೀವು ಅದನ್ನು ಹೇಗೆ ಮಾಡುತ್ತೀರಿ?
ಶ್ರೀ ಶ್ರೀ ರವಿಶಂಕರ್:
ಬಹಳ ಸುಲಭ! ಅದು ಗರಿಯಷ್ಟು ಹಗುರ.

ಪ್ರಶ್ನೆ: ಗುರುದೇವ, ಹಲವು ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಒಂದು ಬಯಕೆಯಿದೆ.  ಇಷ್ಟರ ವರೆಗೆ ಅದು ನೆರವೇರಲಿಲ್ಲ. ಇದಕ್ಕೆ ಕಾರಣವೇನು?
ಶ್ರೀ ಶ್ರೀ ರವಿಶಂಕರ್:
ಸಮಯ! ಅದು ಅದರದ್ದೇ ಸಮಯವನ್ನು ತೆಗೆದುಕೊಳ್ಳಲಿ. ನೀನು ಯಾವತ್ತೂ, "ಈ ಬಯಕೆಯು ನನಗೆ ಒಳ್ಳೆಯದಾಗಿದ್ದರೆ ಅದು ಆಗಲಿ. ಅಲ್ಲದಿದ್ದರೆ, ಅದು ಆಗದಿರಲಿ" ಎಂದು ಹೇಳಬೇಕು.

ಪ್ರಶ್ನೆ: ಪ್ರೀತಿಯ ಗುರುದೇವ, ಆಧ್ಯಾತ್ಮವು ಕಡ್ಡಾಯವೇ? ಆಧ್ಯಾತ್ಮಿಕ ಪಥವು ಯಾಕೆ ಅಷ್ಟೊಂದು ಜಾರುತ್ತದೆ?
ಶ್ರೀ ಶ್ರೀ ರವಿಶಂಕರ್:
ಹೌದಾ? ಅದು ಕೇವಲ ಹಾಗೆ ಕಾಣುತ್ತದೆ, ಆದರೆ ಹಾಗಿಲ್ಲ. ಆಧ್ಯಾತ್ಮವೆಂದರೆ ಎ.ಸಿ. - ಆಬ್ಸಲ್ಯೂಟ್ ಕಂಫರ್ಟ್ (ಪರಿಪೂರ್ಣ ಸುಖ).

ಪ್ರಶ್ನೆ: ಪ್ರೀತಿಯ ಗುರುದೇವ, ವಿಶ್ವದಲ್ಲಿನ ಎಲ್ಲಾ ಆಗುವಿಕೆಯೂ ದೇವರ ತಿಳುವಳಿಕೆಯಲ್ಲಿಯೇ ಆಗುವುದು ಎಂಬುದು ನನಗೆ ತಿಳಿದಿದೆ.  ಹಾಗಿದ್ದರೆ ಅವನು ಯಾಕೆ ಅಪರಾಧ ಪ್ರಮಾಣವನ್ನು ಹೆಚ್ಚಿಸಿ, ನಂತರ ಅದನ್ನು ಉತ್ತಮ ಮೌಲ್ಯಗಳ ಕ್ರಮಗಳಿಂದ ಪ್ರತಿರೋಧಿಸುತ್ತಾನೆ? ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ಇಂತಹ ಹಲವಾರು ಪ್ರಶ್ನೆಗಳಿವೆ. ದೇವರು ಯಾಕೆ ಎರಡೂ ಕಣ್ಣುಗಳನ್ನು ಮುಂಭಾಗದಲ್ಲಿ ಇಟ್ಟ? ಅವನು, ಒಂದನ್ನು ಮುಂದೆ ಮತ್ತು ಒಂದನ್ನು ಹಿಂದೆ ಇಡಬೇಕಾಗಿತ್ತು. ಆಗ ನಿಮಗೆ ಹಿಂದೆ ತಿರುಗಿ ನೋಡಬೇಕಾಗುವುದಿಲ್ಲ. ನೀವು ಅಡ್ಡವಾಗಿ ಹೋಗಬಹುದು, ಅಲ್ಲವೇ? ದೇವರಲ್ಲಿ ಕೆಲವು ಕಲ್ಪನೆಗಳ ಕೊರತೆಯಿದೆಯೆಂದು ನನಗನಿಸುತ್ತದೆ.
ನೀವೊಬ್ಬ ಸಿನೆಮಾ ನಿರ್ದೇಶಕನಲ್ಲಿ, "ನಾಯಕಿಯನ್ನು ಪಡೆಯಲು ಈ ನಾಯಕನು ಯಾಕೆ ಇಷ್ಟೊಂದು ಕಷ್ಟಪಡಬೇಕು, ಮತ್ತು ಅಲ್ಲೊಬ್ಬ ಖಳನಾಯಕ ಯಾಕಿದ್ದಾನೆ? ನೀನು ಯಾಕೆ ಈ ಎಲ್ಲಾ ನಾಟಕವನ್ನು ಮಾಡುವೆ? ಎಲ್ಲವೂ ಬಹಳ ಸುಗಮವಾಗಿರಬೇಕಿತ್ತು" ಎಂದು ಹೇಳಿದರೆ, ಅವನೇನನ್ನುವನು? ಪತ್ತೆಹಚ್ಚಿ! ನಂತರ ನಿಮಗೆ ನಾನು ಹೇಳುತ್ತೇನೆ. ಯಾಕೆಂದರೆ ಸರಿಯಾಗಿ ಅದನ್ನೇ ದೇವರು ಕೂಡಾ ಹೇಳುವರು!

ಪ್ರಶ್ನೆ: ಪ್ರೀತಿಯ ಗುರುದೇವ, ಗುರು ಮಂಡಲವೆಂದರೇನು, ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ನೀವು ಒಬ್ಬರು ಗುರುವಿನ ಬಳಿಗೆ ಹೋಗಲು ಪ್ರಯತ್ನಿಸುವಾಗ, ದಾರಿಯಲ್ಲಿ ಹಲವಾರು ವಿಷಯಗಳು ಬರುತ್ತವೆ - ಅದು ಗುರು ಮಂಡಲವೆಂದು ಕರೆಯಲ್ಪಡುತ್ತದೆ.
ಮೊದಲಿಗೆ ನಿಮಗೆ ಹಲವಾರು ವಿಕರ್ಷಣೆಗಳು ಎದುರಾಗುತ್ತವೆ, ಮತ್ತು ನೀವು ಅವುಗಳನ್ನು ದಾಟಿದಾಗ ಹಲವಾರು ಆಕರ್ಷಕ ವಸ್ತುಗಳು ಬರುತ್ತವೆ. ಸಿದ್ಧಿಗಳು ಬರುತ್ತವೆ, ಕಡುಬಯಕೆಗಳು ಮತ್ತು ತಿರಸ್ಕಾರಗಳು ಬರುತ್ತವೆ. ನೀವು ಅವುಗಳನ್ನೆಲ್ಲಾ ದಾಟಿದ ನಂತರ ಮಂಡಲದ ಕೇಂದ್ರವನ್ನು ತಲಪುತ್ತೀರಿ. ಮಂಡಲವೆಂದರೆ ವೃತ್ತ ಎಂದು ಅರ್ಥ.
ಹೀಗೆ, ನೀವಿಲ್ಲಿಗೆ ಗುರುವನ್ನು ಭೇಟಿಯಾಗಲು ಮತ್ತು ಸಾಧನೆ ಮಾಡಲು ಬರುತ್ತೀರಿ. ಆಗ ಅಚಾನಕ್ಕಾಗಿ ನಿಮಗೊಬ್ಬಳು ಸುಂದರವಾದ ಹುಡುಗಿ ಅಥವಾ ಒಬ್ಬ ಸುಂದರನಾದ ಹುಡುಗ ಕಾಣಿಸಿದರೆ ನೀವು ಅವರ ಹಿಂದೆ ಹೋಗಲು ಶುರು ಮಾಡುತ್ತೀರಿ. ಅಥವಾ ನೀವು ಜ್ಞಾನ ಪಡೆಯುವ ಉದ್ದೇಶಕ್ಕಾಗಿ ಬರುತ್ತೀರಿ ಮತ್ತು ಅಚಾನಕ್ಕಾಗಿ ನಿಮ್ಮ ಮನಸ್ಸು, "ಓಹ್, ನಾನು ಹಣ ಮಾಡಲು ಬಯಸುತ್ತೇನೆ. ಇದನ್ನು ನಾನು ಹೇಗೆ ಮಾಡಬಹುದು?" ಎಂದು ಹೇಳುತ್ತದೆ.
ಹೀಗೆ ಈ ವಿಕರ್ಷಣೆಗಳು ನಿಮ್ಮಲ್ಲಿರುವ ಏಕಾಗ್ರತೆಯನ್ನು, ನಿಜವಾಗಿ ಕೇಂದ್ರಕ್ಕೆ ಹೋಗಲಿರುವ ನಿಮ್ಮ ಶಕ್ತಿಯನ್ನು ಸೂಚಿಸುತ್ತವೆ. ನಕಾರಾತ್ಮಕತೆ, ಸಂಶಯಗಳು, ಮೋಡಿಗಳು, ಆಕರ್ಷಣೆಗಳು ಮತ್ತು ಈ ಎಲ್ಲಾ ವಿಕರ್ಷಣೆಗಳ ವೃತ್ತವನ್ನು ದಾಟಿ ನೀವು ಕೇಂದ್ರಕ್ಕೆ ಹೇಗೆ ಹೋಗಬಲ್ಲಿರಿ.
ನಂತರ ಅಹಂಕಾರ, "ನಾನು ಗುರುವಿಗಿಂತ ಶ್ರೇಷ್ಠ. ಓ, ಗುರುದೇವ ಏನು ಹೇಳುತ್ತಿರುವರೋ, ಅದು ನನಗೂ ಗೊತ್ತಿದೆ. ನಾನು ಇನ್ನೂ ಉತ್ತಮವಾಗಿ ಮಾಡಬಲ್ಲೆ." ಈ ರೀತಿಯ ಯೋಗ ಮಾಯೆಯು ಬರುತ್ತದೆ. ಅವುಗಳೆಲ್ಲಾ ಇವೆ ಮತ್ತು ಅದೆಲ್ಲಾ ಗುರು ಮಂಡಲವೆಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ಅಣ್ಣಾ ಚಳುವಳಿಯನ್ನು ಬೆಂಬಲಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಆರ್ಟ್ ಆಫ್ ಲಿವಿಂಗ್, ಐ.ಎ.ಸಿ. (ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಭ್ರಷ್ಟಾಚಾರದ ವಿರುದ್ಧ ಭಾರತ) ಚಳುವಳಿಯ ಒಂದು ಸ್ಥಾಪಕ ಸದಸ್ಯನಾಗಿದೆ. ನಾವು ಮೊದಲಿನಿಂದಲೂ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ ಮತ್ತು ನಮ್ಮ ಪ್ರಯತ್ನಗಳು ಮುಂದುವರಿಯುತ್ತಾ ಇವೆ.
ನಾನು ಅಣ್ಣಾ ಅವರಲ್ಲಿ ಮತ್ತು ಅವರ ತಂಡದವರಲ್ಲಿ ಉಪವಾಸವನ್ನು ಕೈಬಿಡುವಂತೆ ಮನವಿ ಮಾಡುತ್ತೇನೆ. ನಿಮ್ಮ ಪ್ರಯತ್ನಗಳು ಈ ದೇಶಕ್ಕೆ ಬಹಳಷ್ಟು ಅಗತ್ಯವಿದೆ. ಸುಮಾರು ೩೫೦ ಯುವಜನರು ಕಳೆದ ಆರು ದಿನಗಳಿಂದ ಅಲ್ಲಿ ಕುಳಿತಿದ್ದಾರೆ ಮತ್ತು ಏಳನೆಯ ದಿನ ಬರಲಿದೆ. ದಯವಿಟ್ಟು ಇನ್ನೂ ಉಪವಾಸ ಮಾಡಬೇಡಿ ಮತ್ತು ನಿಮ್ಮ ಶರೀರಗಳನ್ನು ಇನ್ನೂ ಹೆಚ್ಚಿನ ತೊಂದರೆಗೆ ಸಿಲುಕಿಸಬೇಡಿ. ನೀವು ನಿಮ್ಮ ಉಪವಾಸವನ್ನು ಕೈಬಿಡುವಂತೆ, ಆದರೆ ಹೋರಾಟವನ್ನು ಉಳಿಸಿಕೊಳ್ಳುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಬಹಳಷ್ಟು ಕೆಲಸ ಮಾಡಲಿದೆ ಮತ್ತು ನಾವು ಈ ದೇಶದಲ್ಲಿ ಬಹಳಷ್ಟು ಬದಲಾವಣೆಯನ್ನು ತರಬೇಕು. ಭ್ರಷ್ಟಾಚಾರವನ್ನು ತೊಲಗಿಸಬೇಕು ಮತ್ತು ಈ ಪ್ರಯತ್ನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.
ನಮಗೆಲ್ಲರಿಗೂ ಒಂದೇ ಗುರಿಯಿದೆ. ಅದೇನೆಂದರೆ ಈ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸುವುದು, ಆದರೆ ನಮ್ಮ ದಾರಿಗಳು ಬೇರೆ ಬೇರೆ. ನಾವು ಕೆಲಸ ಮಾಡುವ ರೀತಿಗಳು ಬೇರೆ ಬೇರೆ. ನಮ್ಮ ವಿಧಾನವೆಂದರೆ, ಯಾರನ್ನೂ ಯಾವತ್ತೂ ಅವಮಾನಿಸದೇ ಇರುವುದು ಅಥವಾ ತೆಗಳದೇ ಇರುವುದು. ನಾವು ಯಾರ ಮನೆಗೂ ಹೋಗಿ ಹಿಂಸೆಯನ್ನು ಸೃಷ್ಟಿಸುವುದಿಲ್ಲ. ನಾವು ಯಾವುದೇ ರೀತಿಯ ಹಿಂಸೆ ಅಥವಾ ಆಕ್ರಮಣವನ್ನು ನಂಬುವುದಿಲ್ಲ.
ನಮ್ಮ ಸತ್ಸಂಗದಲ್ಲಿ ಬಹಳ ಹೆಚ್ಚಾದ ಮತ್ತು ಬಹಳ ಸಕಾರಾತ್ಮಕವಾದ ಒಂದು ಶಕ್ತಿಯಿರುತ್ತದೆ; ಮಾತ್ಸರ್ಯ ಮತ್ತು ಕೋಪದ್ದಲ್ಲ, ಆದರೆ ಉತ್ಸಾಹ, ಆಸಕ್ತಿ ಮತ್ತು ಭರವಸೆಯದ್ದು, ಏನಾದರೂ ಮಾಡಲು, ಒಂದು ಬದಲಾವಣೆಯನ್ನು ತರಲು. ನಾವು ಈ ಚೈತನ್ಯದೊಂದಿಗೆ ನಮ್ಮ ಗುರಿಯ ಕಡೆಗೆ ಮುನ್ನಡೆಯುತ್ತೇವೆ.
ತಿಳುವಳಿಕೆ ಮತ್ತು ಉತ್ಸಾಹಗಳೊಂದಿಗೆ ಸಾಗುವುದು ಆರ್ಟ್ ಆಫ್ ಲಿವಿಂಗಿನ ವಿಧಾನ. ನಾವು ಯಾವತ್ತೂ ನಮ್ಮದಾಗಿಸಿಕೊಂಡ ಮಾರ್ಗ ಇದುವೇ. ಆದುದರಿಂದ ನಾವು ಸಂಪೂರ್ಣ ತಿಳುವಳಿಕೆಯೊಂದಿಗೆ, ಸಂಪೂರ್ಣ ಜ್ಞಾನದೊಂದಿಗೆ ಮತ್ತು ಸಂಗೀತದೊಂದಿಗೆ ಪ್ರತಿಭಟಿಸಬೇಕು.
ಅಣ್ಣಾ ಅವರು ಈಗ ಉಪವಾಸ ಮಾಡುತ್ತಿದ್ದಾರೆ ಮತ್ತು ಆ ಸ್ಥಳದಲ್ಲಿ ಕುಳಿತುಕೊಂಡು ಹಾಡುತ್ತಾ ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ನಮ್ಮ ಆರ್ಟ್ ಆಫ್ ಲಿವಿಂಗಿನ ಗಾಯಕರು. ಆದರೆ ದುರದೃಷ್ಟವಶಾತ್, ನಿನ್ನೆ ಅಲ್ಲಿ, ನಿಯಂತ್ರಣದಲ್ಲಿರಿಸಲಾಗದ ಕೆಲವು ಜನರಿದ್ದರು; ಅವರು ಆರ್ಟ್ ಆಫ್ ಲಿವಿಂಗಿನವರಲ್ಲ. ಇದನ್ನು ಮಾಡಬಾರದು ಮತ್ತು ನಾನು ಯಾವುದೇ ರೀತಿಯ ಅಶಿಸ್ತನ್ನು ಒಪ್ಪುವುದಿಲ್ಲ. ನಾವು ಸಂಪೂರ್ಣ ತಿಳುವಳಿಕೆಯೊಂದಿಗೆ ಒಂದು ಕ್ರಾಂತಿಯನ್ನು ತರಬೇಕು. ಆದುದರಿಂದ ನಾವೆಲ್ಲರೂ ಯೋಚಿಸಿ ವರ್ತಿಸಬೇಕು.

ಪ್ರಶ್ನೆ: ಗುರುದೇವ, ನಾನು ಈಗಷ್ಟೇ ನನ್ನ ಟಿ.ಟಿ.ಸಿ.ಯನ್ನು ಮುಗಿಸಿದ್ದೇನೆ. ನಾನು ಪೂರ್ಣಾವಧಿ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿರುವ ಮಾನದಂಡಗಳು ಯಾವುವು?
ಶ್ರೀ ಶ್ರೀ ರವಿಶಂಕರ್:
ನಿನ್ನ ಕೌಟುಂಬಿಕ ಜವಾಬ್ದಾರಿಗಳ ಕಡೆಗೆ ನೋಡು. ನಿನಗೆ ಯಾವುದೇ ಜವಾಬ್ದಾರಿಯಿಲ್ಲದಿದ್ದರೆ, ಆಗ ನೀನು ಪೂರ್ಣಾವಧಿಯ ಶಿಕ್ಷಕನಾಗಲು ನಿರ್ಧರಿಸಬಹುದು. ನಿನಗೆ ಮನೆಯಲ್ಲಿ ಬಹಳಷ್ಟು ಜವಾಬ್ದಾರಿಗಳಿದ್ದರೆ, ನೀನು ನಿನ್ನ ಜವಾಬ್ದಾರಿಗಳನ್ನು ಮುಂದುವರಿಸಿಕೊಂಡು, ಬದಿಯಲ್ಲಿ ಕಲಿಸುವುದನ್ನು ಕೂಡಾ ಶುರು ಮಾಡಬೇಕೆಂದು ನಾನು ಬಯಸುತ್ತೇನೆ. 

ಸೋಮವಾರ, ಜುಲೈ 30, 2012

ತ್ರಿವಿಧ ಭ್ರಾ೦ತಿ

30
2012
Jul
ಬೆ೦ಗಳೂರು ಆಶ್ರಮ, ಭಾರತ



ಪ್ರಶ್ನೆ: ಪ್ರೀತಿಯ ಗುರುದೇವ, ಧ್ಯಾನಿಸಿದಾಗ ಪರಮಾನ೦ದ ನಮಗು೦ಟಾಗುತ್ತದೆ, ಧ್ಯಾನಿಸಿಯೂ ಧ್ಯಾನಿಸದೆಯೂ ಇದೇ ಮನಃಸ್ಥಿತಿಯನ್ನು ಹೊ೦ದಿರುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ಜ್ಞಾನದಿಂದ ಮತ್ತು ವೈರಾಗ್ಯದಿಂದ. ಇಡೀ ಪ್ರಪಂಚವನ್ನು ಒಂದು ಕನಸಿನ೦ತೆ ನೀವು ಕಾಣಲಾರ೦ಭಿಸಿದಾಗ, ಧ್ಯಾನಸ್ಥಿತಿ ನಿಮ್ಮ ಇತರ ಚಟುವಟಿಕೆಗಳನ್ನೂ ಆವರಿಸಿಕೊಳ್ಳುತ್ತದೆ. ಆದರೆ ಆ ಸ್ಥಿತಿಗೆ ಆಪೇಕ್ಷೆ ನಿರಪೇಕ್ಷೆಗಳ ಹಣೆಪಟ್ಟಿಯನ್ನು ಅ೦ಟಿಸಬೇಡಿ.  ಸಹಜವಾಗಿ ಜೀವನಯಾಪನೆ ಮಾಡಿ, ಇತರರೆಲ್ಲರೂ ಜೀವಿಸುವ ಹಾಗೆ; ಸರಳವಾಗಿ, ಸಹಜವಾಗಿ. ಅದೊ೦ದು ದೊಡ್ಡ ಸಾಧನೆಯೆ೦ಬ ಭಾವ ಮನವನ್ನು ಮುಸುಕದ ಹಾಗೆ, ಆಗಬಹುದೆ?
ಹಾಗೂ ಸದಾಕಾಲ ಶಾಂತಿಪ್ರಿಯರಾಗಬೇಡಿ,  ನೀವು ಶಾಂತಿಯನ್ನು ಬಯಸಿದಷ್ಟು ತೊಂದರೆಗಳು ಹೆಚ್ಚುತ್ತವೆ, ಯಾವುದನ್ನೂ ಹತೋಟಿಯಲ್ಲಿಡಲು ಪ್ರಯತ್ನಿಸಬೇಡಿ, ಖಾಲಿಯಾಗಿರಿ, ಕೆಲವೊಮ್ಮೆ ಶಾಂತಿಭಂಗವಾಗುತ್ತದೆ, ಕ್ಷೋಭೆಗೊಳಗಾಗುತ್ತೀರಿ, ಆಗಲಿ ಏನಾಯಿತು! ಯೋಚಿಸಬೇಡಿ. ಹೀಗಾಗುವುದು, ಇವು ಈ ಪ್ರಪಂಚದ ಸಹಜಸ್ವಭಾವಗಳೆಂದು ನೀವು ತಿಳಿಯುವ ತನಕ ಮಾತ್ರ.
ಅಕ್ಕಮಹಾದೇವಿಯವರ ವಚನಗಳ ಬಹು ಸುಂದರವಾದ ಎರಡು ಸಾಲುಗಳು ಹೀಗಿವೆ:
"ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದಡೆಂತಯ್ಯ !
 ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯ !
 ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯ ! "
ಸಂತೆಯ ಒಳಗೆಯೆ ಮನೆಯನ್ನು ಕಟ್ಟಿದ್ದಾನೆ ಮತ್ತು ಶಬ್ದಕ್ಕೆ ಅಂಜುತ್ತಾನೆ, ಆತನಿಗೆ ಏನು ಹೇಳಬೇಕು ?
ಇದೇ ರೀತಿ , ಈ ಭೂಮಿಯಲ್ಲಿ ಹುಟ್ಟಿದ ಬಳಿಕ , ಈ ಲೋಕದಲ್ಲಿ ಹಿತವಾದ ಸನ್ನಿವೇಶಗಳು ಬರುತ್ತವೆ ಮತ್ತು ಅಹಿತವಾದ ಸನ್ನಿವೇಶಗಳೂ ಬರುತ್ತವೆ. ಜನರು ನಿಮ್ಮನ್ನು ಹೊಗಳುತ್ತಾರೆ ಮತ್ತು ಕಾರಣವಿಲ್ಲದೆ ನಿಂದಿಸುತ್ತಾರೆ. ಇವನ್ನೆಲ್ಲಾ ಸುಮ್ಮನೆ ಸ್ವೀಕರಿಸುತ್ತಾ ಮುಂದೆ ಸಾಗಬೇಕು.
ಇದು ಒಳ್ಳೆಯ ನೀತಿಯಲ್ಲವೇನು ?
ಇಂದು ಕೆಲವರು ನಮ್ಮಲ್ಲಿ ಬಂದು, ಒಬ್ಬ ವ್ಯಕ್ತಿಯನ್ನು ಕುರಿತು ಈ ರೀತಿ ಹೇಳಿದರು "ಆತ ತುಂಬಾ ಒರಟ, ಒಳ್ಳೆಯವನಲ್ಲ, ಬಹಳಷ್ಟು ಕೆಟ್ಟ ಗುಣಗಳನ್ನು ಹೊಂದಿದ್ದಾನೆ, ಎಲ್ಲಾ ಸಂದರ್ಭಗಳಲ್ಲೂ ತಾಳ್ಮೆ ಕಳೆದು ಕೊಳ್ಳುತ್ತಾನೆ, ನೀವು ಆತನನ್ನು ಈ ಸಂಸ್ಥೆಯಲ್ಲಿ ಏಕೆ ಇರಿಸುತ್ತೀರಾ?"
ನಾವು ಹೇಳಿದೆವು "ಇಲ್ಲ, ಆತನನ್ನು ಈ ಪ್ರಪಂಚದಲ್ಲಿ ಬೇರೆ ಎಲ್ಲಾದರೂ ಕಳಿಸಿದರೂ ಕೂಡ, ಆತನು ಈ ರೀತಿಯೇ ಮಾಡುತ್ತಾನೆ. ನಿಮಗೀಗ ಆತನು ತೊಂದರೆ ಕೊಡುತ್ತಿದ್ದಾನೆ ಎಂದು ಅನಿಸುತ್ತಿದೆ,  ಆದರೆ ಆತನನ್ನು ಈ ಸಂಸ್ಥೆಯಿಂದ ಹೊರಗೆ ಕಳಿಸಿದರೂ ಕೂಡ ಆತನು ನಿಮ್ಮನ್ನು ಕಾಡಿಸುತ್ತಾನೆ, ಇಲ್ಲಿಯಾದರು ಆತನಿಗೆ ಸುಧಾರಿಸುವ ಅವಕಾಶವಿದೆ ಅಲ್ಲವೆ?"
ನಾವು ತಾಳ್ಮೆಯಿಂದ, ಅವರು ಇಲ್ಲಿಯೇ ಇರಲಿ, ಬೆಳೆಯಲಿ ಎಂದು ಹೇಳಿದೆವು.

ಪ್ರಶ್ನೆ: ಪ್ರೀತಿಯ ಗುರುದೇವ,  ಬೈಬಲ್’ನಲ್ಲಿ ಈ ರೀತಿ ಹೇಳಲಾಗಿದೆ "ಒಬ್ಬ ಶ್ರೀಮಂತನು ಭಗವಂತನಲ್ಲಿ ಪ್ರವೇಶಿಸುವುದಕ್ಕಿಂತಲೂ, ಒಂದು ಒಂಟೆಗೆ ಸೂಜಿಯ ಕಣ್ಣನ್ನು ಪ್ರವೇಶಿಸುವುದು ಹೆಚ್ಚು ಸುಲಭ" ಇದರ ಅರ್ಥ, ಸಿರಿವಂತನಾದ ಮಾತ್ರಕ್ಕೆ ಶ್ರೀಮಂತನು ನರಕಯಾತನೆ ಪಡುತ್ತಾನೆ ಎಂದೆ ?
ಶ್ರೀ ಶ್ರೀ ರವಿ ಶಂಕರ್: ಇಲ್ಲ! ಹಲವು ಸಂತರ ಮತ್ತು ಧರ್ಮೋಪದೇಶಕರ ಈ ವಿಚಾರಧಾರೆಗಳು ಪ್ರತ್ಯೇಕ ಸಂದರ್ಭಗಳಲ್ಲಿ ಪ್ರತ್ಯೇಕ ಜನರಿಗೆ ಕೊಡಲ್ಪಟ್ಟಿವೆ. ಯೇಸುಕ್ರಿಸ್ತನು ಹೇಳುತ್ತಾನೆ "ನಾನು ಶಾಂತಿ ಸ್ಥಾಪಿಸಲು ಬಂದಿಲ್ಲ; ನಾನು ತಾಯಿಯನ್ನು ಮಗಳ ವಿರುದ್ಧ ಮತ್ತು ಮಗನನ್ನು ತಂದೆಯ ವಿರುದ್ಧ ಇರಿಸಲು ಬಂದಿದ್ದೇನೆ" ಎಂದು, ಹಾಗಾದರೆ ಆತನಿಗೆ ಸಂಸಾರಗಳು ಇಷ್ಟವಿರಲಿಲ್ಲ ಅಥವಾ ಕುಟುಂಬಗಳನ್ನು ಒಡೆಯಲು ಬಂದಿದ್ದಾನೆ ಎಂದಲ್ಲ.
ಈ ರೀತಿ ಹೇಳಿರುವುದು, ಜನರಲ್ಲಿ ಅನುಕಂಪ ಮೂಡಬೇಕು ಎಂದು.
ಎಲ್ಲೆಡೆ ಬಡತನವಿದ್ದಾಗ, ಒಬ್ಬ ಮಾತ್ರ ಸುಖಾನುಭಾವದಲ್ಲಿ ನಲಿಯುತ್ತಾ ಏನೂ ಸೇವೆ ಮಾಡದೆಯೆ, ತಾನು ದುಡಿದದ್ದನ್ನೆಲ್ಲಾ ತನಗಾಗಿ ಮಾತ್ರ ಖರ್ಚು ಮಾಡಿದರೆ, ಆ ವ್ಯಕ್ತಿಯ ಹೃದಯವು ಕಲ್ಲಿನ ಹಾಗೆ ಬಹಳ ಕಠಿಣವಾದದ್ದು. ಹೀಗೆ ಯಾರಾದರೂ ಆಂತರ್ಯದಲ್ಲಿ ಕಠಿಣವಾಗಿದ್ದರೆ ಅವರಿಗೆ ಸ್ವರ್ಗವು ಬಹಳ ದೂರ, ಎಂಬುದು ಇದರ ಸಾರಾಂಶ.
ಈಗಷ್ಟೆ ನಮಗೊಂದು ಆಲೋಚನೆ ಬಂತು, ನಾವು ಸುಮಾರು ಐವತ್ತು ಲಕ್ಷಗಳು ಬೆಲೆ ಬಾಳುವ ಔಷಧಗಳನ್ನು ಅಸ್ಸಾಂಗೆ ಕಳಿಸಬೇಕು. ಐವತ್ತು ಲಕ್ಷಗಳು ಬೆಲೆ ಬಾಳುವಷ್ಟು ಆಯುರ್ವೇದ ಔಷಧಗಳನ್ನು ನಾವು ಖರೀದಿಸಬೇಕು. ಆದುದರಿಂದ ನೀವೆಲ್ಲರೂ ಸ್ವಲ್ಪ ಕೊಡುಗೆ ನೀಡಿ ಮತ್ತು ನಾವು ಅಲ್ಲಿಯ ಜನರಿಗೆ ನೀಡಬಹುದು. ನಾವು ಕೂಡಲೆ ಅಸ್ಸಾಂಗೆ ಭೇಟಿ ನೀಡಲು ಯೋಜಿಸುತ್ತಿದ್ದೇವೆ.
ಮೊದಲನೆಯದಾಗಿ ಅವರಿಗೆ ಸ್ವಲ್ಪ ಔಷಧಗಳು ಬೇಕಾಗಬಹುದು, ನಾವೆಲ್ಲ ಏನಾದರೂ ಮಾಡೋಣ. ನಮ್ಮಲ್ಲಿ ಒಬ್ಬೊಬ್ಬರು ಐನೂರು ರೂಪಾಯಿಗಳು ಕೊಟ್ಟರೆ ಏನಾದರೂ ಮಾಡಬಹುದು. ಅವರಿಗೆ ಮೊದಲನೆಯದಾಗಿ ಔಷಧಗಳನ್ನು ಕಳಿಸಬಹುದು ಮತ್ತು ಇಲ್ಲಿಂದ ಸ್ವಲ್ಪ ಆಯುರ್ವೇದ ವೈದ್ಯರೂ ಕೂಡ ಅಸ್ಸಾಂಗೆ ಹೋಗಬೇಕು.


ಪ್ರಶ್ನೆ: ಪ್ರೀತಿಯ ಗುರುದೇವ, ತಿಳಿದವರು ಹೇಳಿದ್ದಾರೆ, ಯಾರಾದರೂ ನಿಮ್ಮ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸಿ ಎಂದು, ಈ ರೀತಿಯಲ್ಲಿ ನಾನು ಎರಡು ಬಾರಿ ಪೆಟ್ಟು ತಿಂದೆ, ಏನು ಮಾಡುವುದು, ಇದು ನನ್ನ ದಡ್ಡತನವೇ?
ಶ್ರೀ ಶ್ರೀ ರವಿ ಶಂಕರ್: ನಿಮಗೆ ಎರಡು ಬಾರಿ ಪೆಟ್ಟಾಗಿರುವುದು ಒಬ್ಬ ವ್ಯಕ್ತಿಯಿಂದಲೇ ಅಥವಾ ಬೇರೆ ವ್ಯಕ್ತಿಗಳಿಂದಲೇ? ಇದರಲ್ಲಿದೆ ವ್ಯತ್ಯಾಸ. ನೋಡಿ ನೀವು ಪ್ರತ್ಯೇಕ ವ್ಯಕ್ತಿಗಳಿಗೆ ನಿಮ್ಮ ಮತ್ತೊಂದು ಕೆನ್ನೆಯನ್ನು ತೋರಿಸಬಹುದು ಮತ್ತು ಅವರು ನಿಮಗೆ ಒಂದೇ ಬಾರಿ ಪೆಟ್ಟು ಕೊಡುತ್ತಾರೆ, ಹಾಗಾದಲ್ಲಿ ನೀವು ಬುದ್ಧಿವಂತರು ಎಂದಲ್ಲ. ನಿಮಗೆ ಪೆಟ್ಟು ಕೊಟ್ಟ ವ್ಯಕ್ತಿಯನ್ನು ಗಮನಿಸಿ. ಅವರು ಸೂಕ್ಷ್ಮ ಮನಸ್ಸುಳ್ಳವರು ಹಾಗೂ ಸುಸಂಸ್ಕೃತರಾಗಿದ್ದರೆ ನಿಮ್ಮ ಮತ್ತೊಂದು ಕೆನ್ನೆಯನ್ನು ತೋರಿಸಿ, ಇದರಲ್ಲಿ ಸಂಶಯಬೇಡ. ಆದರೆ ಆ ವ್ಯಕ್ತಿಯು ಒರಟನಾಗಿದ್ದಲ್ಲಿ ಮೂರನೆಯ ಬಾರಿ ಬೇಡ, ಏಕೆಂದರೆ ನಮ್ಮಲ್ಲಿರುವುದು ಕೇವಲ ಎರಡು ಕೆನ್ನೆಗಳು ಮಾತ್ರ, ತಿಳಿಯಿತೇ?

ಪ್ರಶ್ನೆ: ಗುರುದೇವ, ತಪಶ್ಚರ್ಯ ಎಂದರೇನು ? ನಾವು ತಪಶ್ಚರ್ಯರಾಗಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜೀವನದಲ್ಲಿ ಅಗತ್ಯಗಳನ್ನು ಸ್ಥಿಮಿತಗೊಳಿಸಿ, ಅಪೇಕ್ಷೆಗಳನ್ನು ಕಡಿಮೆಮಾಡಿಕೊಳ್ಳುವುದು. ನನಗೆ ಅದು ಬೇಕು, ನನಗೆ ಇದು ಬೇಕು, ಮತ್ತೊಂದು ಬೇಕು - ಈ ರೀತಿ ಬೇಡ . ನಮ್ಮ ಬಳಿ ಏನಿರುವುದೊ ಅಷ್ಟರಲ್ಲಿ ನಾವು ತೃಪ್ತಿ ಪಡಬೇಕು. ನಿಮ್ಮ ಬಳಿ ಒಂದು ವಾಹನ ಇದ್ದರೆ ಅಷ್ಟು ಸಾಕು. ನನಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನ ಬೇಕು ಎಂದು ಹೇಳುವುದು ಬೇಡ, ಸರಳವಾದ ಒಳ್ಳೆಯ ವಾಹನವಿದ್ದರೆ ಅಷ್ಟು ಸಾಕು.
ಧರಿಸಲು ಯೊಗ್ಯವಾದ ಉಡುಪುಗಳು, ತಿನ್ನಲು ಹಿತವಾದ ಭೋಜನ, ಅಷ್ಟು ಸಾಕು. ತಪಶ್ಚರ್ಯರಾಗಿರುವುದೆಂದರೆ ನಿಮ್ಮನ್ನು ನೀವು ಹಿಂಸಿಸುವುದು ಎಂದಲ್ಲ, ನೀವು ಅರೆಹೊಟ್ಟೆ ಇರಬೇಕು - ಈ ರೀತಿಯಲ್ಲ. ತಪಶ್ಚರ್ಯ ಎಂದರೆ ಸರಳತೆ, ಸ್ವಲ್ಪ ಮಾತ್ರದಲ್ಲಿ ಜೀವಿಸುವುದು, ನಿಮಗೆ ಅಗತ್ಯವಾಗಿ ಬೇಕಾಗಿರುವ ಸ್ವಲ್ಪ ಮಾತ್ರ ಸೌಕರ್ಯಗಳಲ್ಲಿ ಸಂತೋಷದಿಂದ ಬದುಕುವುದು ಎಂದು.

ಪ್ರಶ್ನೆ: ಪ್ರೀತಿಯ ಗುರುದೇವ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ’ಯೋಗಕ್ಷೇಮಂ ವಹಾಮ್ಯಹಂ " ಎಂದು ಹೇಳಿದ್ದಾರೆ, ನಮಗೆಲ್ಲಾ ದೊರೆಯುತ್ತಿರುವುದು ಆ ಭಗವಂತನಿಂದ, ಆದರೆ ನಮಗೆ ಸಕಲವನ್ನು ಕೊಡುವ ಭಗವಂತನೇ ನಮ್ಮಿಂದ ಹೇಗೆ ಕಸಿದುಕೊಳ್ಳುತ್ತಾನೆ ಎಂದು ಅರ್ಥವಾಗುತ್ತಿಲ್ಲ?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು, ಹಾಗೆಯೇ ಯೋಚಿಸುತ್ತಿರಿ. ಇದೀಗ ಈ ಸಂಪೂರ್ಣ ಜಗತ್ತು ನಿಮಗೆ ಕೊಡಲ್ಪಟ್ಟಿದೆ ಮತ್ತು ಒಂದು ದಿನ ಈ ಪ್ರಪಂಚವನ್ನು ನಿಮ್ಮಿಂದ ತೆಗೆದುಕೊಳ್ಳಲಾಗುವುದು. ಇದು ಈ ಸೃಷ್ಟಿಯ ರೀತಿ. ಅಲ್ಲೆಲ್ಲೊ ಮೇಲೆ ಒಬ್ಬ ಭಗವಂತ ಕುಳಿತು ಇವೆಲ್ಲಾ ನೋಡುತ್ತಾನೆ ಎಂದಲ್ಲ. ಈ ಸಮಸ್ತ ಜಗತ್ತು, ಈ ವಿಶ್ವವೇ ಒಂದು ಪ್ರಕ್ರಿಯೆ. ಇದು ಸದಾಕಾಲ ನಡೆಯುತ್ತಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಮ್ಮ ಸಾಮರ್ಥ್ಯ, ನಮ್ಮ ಶಕ್ತಿ ಮತ್ತು ಗುರುವಿನಲ್ಲಿ ನಂಬಿಕೆ ಈ ರೀತಿಯ ವಿಷಯಗಳಲ್ಲಿ ನಮಗಿರುವ ಸಂದೇಹವನ್ನು ಹೇಗೆ ಹೋಗಲಾಡಿಸಬಹುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಪ್ರಾಣವನ್ನು ಹೆಚ್ಚಿಸಿರಿ, ಅಷ್ಟು ಸಾಕು. ನಿಮಗೆ ಪ್ರಾಣ ಕಡಿಮೆಯಾದಾಗ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಸ್ವಸಾಮರ್ಥ್ಯದ ಮೇಲೆ ಅಪನ೦ಬಿಕೆಯು೦ಟಾದಾಗ ಅದರ ಪ್ರಭಾವ ಶಿಕ್ಷಕರ ಎಡೆಗೆ, ಗುರುಗಳೆಡೆಗೆ,  ಸ್ನೇಹಿತರೆಡೆಗೆ, ಕುಟುಂಬ ವರ್ಗದವರೆಡೆಗೆ, ಸಮಸ್ತ ಜಗತ್ತಿನೆಡೆಗೆ ಹರಿಹಾಯುವುದು ಸ್ವಾಭಾವಿಕ. ಆದುದರಿಂದ ನಮ್ಮಲ್ಲಿಯ ಪ್ರಾಣಶಕ್ತಿ, ನಮ್ಮ ಹಿತವಾದ ಕಂಪನಗಳ, ನಮ್ಮ ಶಕ್ತಿ ಸಾಮರ್ಥ್ಯಗಳು ಮತ್ತು ಆತ್ಮ ಬಲವು ನಮ್ಮ ನಂಬಿಕೆಗೆ ಅನುಗುಣವಾಗಿರುತ್ತವೆ!

ಪ್ರಶ್ನೆ: ಪ್ರೀತಿಯ ಗುರುದೇವ, ಮಾಯೆಯೆಂದರೆ ಏನು, ವಿವಿಧ ಬಗೆಯ ಮಾಯೆಗಳಾವುವು? ದಯವಿಟ್ಟು ಈ ವಿಷಯದ ಮೇಲೆ ಬೆಳಕು ಚೆಲ್ಲಿ.
ಶ್ರೀ ಶ್ರ‍ೀ ರವಿ ಶಂಕರ್: ಮಾಯೆಯಲ್ಲಿ ಮೂರು ವಿಧಗಳಿವೆ, ಮೋದಲನೆಯದಾಗಿ ಮೋಹ ಮಾಯೆ, ಕೆಲವರಿಗೆ ಧನ ಅಥವ ಮಕ್ಕಳಲ್ಲಿ ಪ್ರೀತಿ ಎಷ್ಟು ಹೆಚ್ಚಾಗುತ್ತದೆ ಎಂದರೆ ಅದು ಅವರನ್ನು ಕುರುಡರನ್ನಾಗಿರಿಸುತ್ತದೆ, ಇದನ್ನು ಮೋಹ ಮಾಯೆಯೆಂದು ಕರೆಯುತ್ತಾರೆ. ಬಹಳಷ್ಟು ಜನರು ಹಣ, ಹಣ ಎಂದು ಹಣವನ್ನು ಹಿಂಬಾಲಿಸುತ್ತಾರೆ. ಅವರು ತಮ್ಮ ಹೆಂಡತಿ, ಮಕ್ಕಳು, ತಾಯಿ, ತಂದೆ, ಸ್ನೆಹಿತರು ಅಥವಾ ಯಾವ ಸಂಬಂಧಗಳನ್ನೂ ಲೆಕ್ಕಿಸುವುದಿಲ್ಲ. ಅವರಿಗೆ ಕೇವಲ ಹಣ ಮಾತ್ರ ಮುಖ್ಯವಾಗಿರುತ್ತದೆ, ಹಣಕ್ಕಾಗಿ ಅವರು ಯಾರನ್ನಾದರೂ ಕಾನೂನು ವ್ಯಾಜ್ಯಗಳಲ್ಲಿ ಸಿಲುಕಿಸಲು ಲೆಕ್ಕಿಸುವುದಿಲ್ಲ. ತಮ್ಮ ತಾಯಿ ತಂದೆಯರ ವಿರುದ್ಧ ಕಾನೂನು ಮೊಕದ್ದಮೆಗಳನ್ನು ಹೂಡುತ್ತಾರೆ. ಅವರುಗಳು ಮಾನಸಿಕವಾಗಿ ದುರ್ಬಲರೆಂದು ನಿರೂಪಿಸುತ್ತಾರೆ ಮತ್ತು ಎಲ್ಲರೊಡನೆ ಹಣಕ್ಕಾಗಿ ಜಗಳವಾಡುತ್ತಾರೆ, ಕೊಲೆ ಮಾಡುವ ಹಂತಕ್ಕೂ ಹೋಗುತ್ತಾರೆ. ಇದು ಮೋಹ ಮಾಯೆ.
ಇದೇ ರೀತಿ ಕೆಲವರು ತಮ್ಮ ಮಕ್ಕಳಿಗಾಗಿ ಅಳುತ್ತಾರೆ. ಅವರಿಗೆ ಮಕ್ಕಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತಮ್ಮೊಂದಿಗೇ ಇರಬೇಕು, ತಮ್ಮ ಮಕ್ಕಳಿಗೆ ಯಾವುದು ಒಳಿತು ಎಂದು ಕೂಡ ಅವರು ಅರ್ಥಮಾಡಿಕೊಳ್ಳುವುದಿಲ್ಲ. ಈ ರೀತಿ ತಮ್ಮ ಮಕ್ಕಳ ಜೀವನವನ್ನು ಹಾಳು ಮಾಡುತ್ತರೆ. ಇದು ಮೋಹ ಮಾಯೆ. ಅದು ಯಾವುದು? ಅದರಿಂದ ನಿಮಗೆ ಮಹತ್ವದ ಸಂತೋಷವಾಗದಿದ್ದರೂ, ಅದು ಇಲ್ಲದಿದ್ದಾಗ ನೀವು ವ್ಯಥೆ ಪಡುತ್ತೀರಿ. ಅದು ಮೋಹ ಮಾಯೆ.
ಎರಡನೆಯದಾಗಿ ಮಹಾ ಮಾಯೆ, ಮಹಾ ಮಾಯೆಯು ಪ್ರಕೃತಿಯಿಂದ ಉಂಟಾಗುತ್ತದೆ. ಅದು ನಮ್ಮ ದೃಷ್ಟಿಯನ್ನು ಮಬ್ಬಾಗಿಸುತ್ತದೆ, ಆದ್ದರಿಂದ ನಮಗೆ ಯಾವುದೂ ಕೂಡ ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ನಾವು ಜಡತ್ವದಿಂದ ಆವೃತಗೊಂಡಿರುತ್ತೇವೆ, ನಾವು ಭಾವನಾಶೂನ್ಯರಾಗಿರುತ್ತೇವೆ ಮತ್ತು ಸಂವೇದನೆಗಳು ಬರಿದಾಗುತ್ತವೆ, ಒಂದು ಕಲ್ಲಿನಹಾಗೆ.
ಮೂರನೆಯದಾಗಿ ಯೋಗ ಮಾಯೆ, ಯೋಗದಲ್ಲಿಯೂ ಕೂಡ ಮಾಯೆಯಿದೆ, ಇದು ಅತ್ಯಂತ ಅದ್ಬುತವಾಗಿದೆ. ನೀವು ಇತ್ತೀಚಿಗೆ ನಿರ್ಮಲ್ ಬಾಬಾರವರ ಪರಿಸ್ಥಿತಿಯನ್ನು ಗಮನಿಸಿರಬೇಕು (ಇವರು ಭಾರತದ ಒಬ್ಬ ಆಧ್ಯತ್ಮ ನಾಯಕ, ಆಧ್ಯಾತ್ಮದ ಹೆಸರಿನಲ್ಲಿ ಮೋಸ ಮತ್ತು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಲ್ಪಟ್ಟಿದ್ದಾರೆ). ಇವರು ಜನರನ್ನು ಆಶೀರ್ವದಿಸುತ್ತಿದ್ದರು. ಆದರೆ ಜನರು ಇವರನ್ನು ಮೋಸಗಾರ, ವಂಚಕ ಎಂದರು. ಅವರು ಆ ರೀತಿಯವರಲ್ಲ, ಅವರೊಬ್ಬ ಮುಗ್ಧ ಮತ್ತು ಒಳ್ಳೆಯ ವ್ಯಕ್ತಿ, ಆದರೆ ಅವರು ಯೋಗ ಮಾಯೆಯಲ್ಲಿ ಸಿಲುಕ್ಕಿದ್ದಾರೆ.
ಕೆಲವೊಮ್ಮೆ ಈ ರೀತಿಯಾಗುತ್ತದೆ, ಸತತವಾಗಿ ಯೋಗ ಮತ್ತು ಸಾಧನೆ (ಆಧ್ಯಾತ್ಮಿಕ ಆಚರಣೆ) ಮಾಡುವುದರಿಂದ ಕೆಲವು ದೈವಿಕ ಶಕ್ತಿಗಳು  ಜಾಗೃತವಾಗುತ್ತವೆ. ಈ ರೀತಿಯಾದಾಗ, ಭವಿಷ್ಯದ ಆಗು ಹೋಗುಗಳನ್ನು ಊಹಿಸಲು ಸಾಧ್ಯವಾಗುತ್ತದೆ. ಭವಿಷ್ಯದ ಸಂಗತಿಗಳು ಮತ್ತು ಆಗು ಹೋಗುಗಳ ಒಳ ಅರಿವು ಅವರಿಗಾಗುತ್ತದೆ. ಈ ಅವಸ್ಥೆಯಲ್ಲಿ ಅವರ ಆಂತರ್ಯವು ಸಂಪೂರ್ಣವಾಗಿ ನಿಷ್ಕಪಟ ಮತ್ತು ಬರಿದಾಗದಿದ್ದಲ್ಲಿ, ತಮ್ಮಲ್ಲಿ ಹಂಬಲಗಳು ಮತ್ತು ತಿರಸ್ಕಾರ ಭಾವನೆಗಳು ಇದ್ದಲ್ಲಿ, ಅವುಗಳು ಅವರ ಒಳ ಅರಿವಿಗೆ ಅಡ್ಡವಾಗುತ್ತವೆ. ಆದಕಾರಣ ಅವರ ಒಳ ಅರಿವು ಶತ ಪ್ರತಿ ಶತ ಸರಿಯಾಗಿರುವುದಿಲ್ಲ. ಸುಮಾರು ಐವತ್ತರಿಂದ ಅರುವತ್ತರಷ್ಟು ಸರಿಯಿದ್ದರೆ ಇನ್ನುಳಿದವುಗಳು ಸುಳ್ಳಾಗುತ್ತವೆ.
ಇದೇ ರೀತಿ ಯೋಗ ಮಾಯೆಯಲ್ಲಿ ಸಿಲುಕಿದ ಓರ್ವ ಯುವತಿಯನ್ನು ನಾವು ಕಂಡಿದ್ದೇವೆ. ಆಕೆಯು ಇಪ್ಪತೈದು ಮೂವತ್ತು ವರ್ಷಗಳ ಕಾಲ ತೀವ್ರವಾಗಿ ಸಾಧನೆ ಮಾಡಿ ಸಿದ್ಧಿ ಪಡೆದಿದ್ದರು. ದೇವಿ ಮಾತೆಯು ಅವರ ಬಳಿ ಇರುವರೆಂದು ಮತ್ತು ಅವರಿಗೆ ಯಾವ ಕಾರ್ಯಗಳನ್ನು ಮಾಡಬೇಕು ಎಂದು ಮಾರ್ಗದರ್ಶನ ನೀಡುತ್ತಿರುವಂತೆ ಅವರಿಗೆ ಅನಿಸುತ್ತಿತ್ತು . ಒಮ್ಮೆ ಅವರು ತಮ್ಮ ಪತಿಯ ಬಳಿ ಇದ್ದಾಗ, ದೇವಿ ಮಾತೆಯು ಅವರಿಗೆ ನಿನ್ನ ಪತಿಗೆ ಡಯಾಬಿಟಿಸ್ ಔಷಧಗಳನ್ನು ಕೊಡಬೇಡ ಎಂದು ಹೇಳಿದಂತೆ ಅನಿಸಿತು, ’ಅವರು ಗುಣಮುಖರಾಗುತ್ತಾರೆ, ಅವರಿಗೆ ಆಶೀರ್ವಾದಗಳನ್ನು ಮಾತ್ರ ಕೊಡುತ್ತಿರು’, ಅವರು ಕೇಳಿಸಿಕೊಂಡಿದ್ದು ಇದನ್ನು. ಆದ್ದರಿಂದ ಅವರು ಪತಿಗೆ ಹರಸುತ್ತಾ ಬಂದರು ಮತ್ತು ತಮ್ಮ ಪತಿಯವರಿಗೆ ಈ ರೀತಿ ಹೇಳುತ್ತಿದ್ದರು, "ಸ್ವತಃ ದೇವಿ ಮಾತೆಯು ನನ್ನ ಬಳಿ ಬಂದು ನನ್ನಲ್ಲಿ ಡಯಾಬಿಟಿಸ್ ಔಷಧಗಳನ್ನು ಕೊಡಬಾರದು ಎಂದು ಹೇಳಿದ್ದಾರೆ". ಆದ್ದರಿಂದ ಅವರು ಔಷಧಗಳನ್ನು ಕೊಡಲಿಲ್ಲ, ನಂತರ ಅವರ ಪತಿಯು ದೃಷ್ಟಿಹೀನರಾದರು. ಅವರು ತಮ್ಮ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. ಆಕೆಯು ಜನರೊಂದಿಗೆ ಮಾತನಾಡಿದಾಗ, ಅ ಜನರಿಗೆ ಬಹಳ ಸಂತೊಷವಾಗುತ್ತಿತ್ತು. ಆಕೆಯು ಹೇಳಿದ್ದು ಬಹಳಷ್ಟು ಸತ್ಯವಾಗುತ್ತಿತ್ತು, ಆದರೆ ಈ ಘಟನೆಯ ಬಳಿಕ ಆಕೆಯು ಕ್ಷೋಭೆಗೊಳಗಾಗಿ ನಂತರ ನಮ್ಮಲ್ಲಿ ಬಂದು ಕೇಳಿದರು, ’ಗುರುದೇವ ನನಗೆ ಏಕೆ ಹೀಗಾಗಿದೆ? ನನ್ನ ಪತಿಯು ಏಕೆ ದೃಷ್ಟಿಹೀನರಾದರು?  ನಾವು ಹೇಳಿದೆವು, ’ನೀವು ಯೋಗ ಮಾಯೆಯಲ್ಲಿ ಸಿಲುಕಿರುವಿರಿ’. ನಿರ್ಮಲ್ ಬಾಬಾ ಅವರಿಗೂ ಕೂಡ ಇದೇ ರೀತಿ ಆಗಿದೆ. ನೋಡಿ, ಕೆಲವು ವಿಷಯಗಳನ್ನು ನೀವು ಅರ್ಥಮಾಡಿಕೊಳ್ಳಬಹುದು ಮತ್ತು ಕೆಲವು ವಿಷಯಗಳನ್ನು ನಿಮಗೆ ಅರ್ಥಮಾಡಿಕೊಳ್ಳಲಾಗುವುದಿಲ್ಲ. ನಮ್ಮಲ್ಲಿ ಕುಂಡಲಿನಿ ಶಕ್ತಿಯು ಮೂಡಿದಾಗ, ಜನರನ್ನು ಹರಸುವ ಶಕ್ತಿಯುಂಟಾಗುತ್ತದೆ ಮತ್ತು ನಿಮ್ಮ ಆಶೀರ್ವಾದಗಳು  ಜನರಿಗೆ ಒಳ್ಳೆಯದು ಮತ್ತು ಹಿತವನ್ನುಂಟುಮಾಡುತ್ತವೆ, ಆದರೆ ನಮ್ಮೊಳಗಿನ ಹಂಬಲಗಳು; ಉದಾಹರಣೆಗೆ ರುಚಿಯಾದ ಭೋಜನಗಳಿಗೆ ಹಂಬಲಿಸುವುದು, ಈ ಹಂಬಲಗಳು ನಮ್ಮ ಒಳ ಅರಿವಿಗೆ ಅಡ್ಡಿಯಾಗುತ್ತವೆ. ಈ ರೀತಿಯಾದಾಗ ನಮ್ಮ ಆಶೀರ್ವಾದಗಳು ಮತ್ತು ನಮ್ಮ ಸಂದೇಶಗಳೂ ಕೂಡ ಅದೇ ರೀತಿಯ ಗುಣಗಳನ್ನು ಹೊಂದಿರುತ್ತವೆ. ಇದು ಸ್ವಲ್ಪ ಕಾಲ ಮು೦ದುವರೆದು ನ೦ತರ ಕಾಣೆಯಾಯಿತು. ಅವರು ಯೋಗ ಮಾಯೆಯಲ್ಲಿ ಸಿಲುಕಿಕೊಂಡರು ಮತ್ತು ಅವರಿಗೆ ಈ ವಿಷಯವನ್ನು ತಿಳಿಸುವಂತಹ ಅಥವಾ ಅರ್ಥಮಾಡಿಸುವಂತಹ ಜನರು ಇರಲಿಲ್ಲ, ಆತನಿಗೂ ಅದು ಅರ್ಥವಾಗಲಿಲ್ಲ.
ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡವರು ಸಿದ್ಧಿಗಳನ್ನು ಪಡೆದು ಅದರಿಂದ ಮೋಸಹೋಗುವುದಿಲ್ಲ ಅಥವಾ ಸಿಲುಕುವುದಿಲ್ಲ, ಅವರು ತಮ್ಮಲ್ಲಿ ಹಾಗೂ ಜ್ಞಾನದಲ್ಲಿ ಕೇಂದ್ರೀಕೃತರಾಗಿರುತ್ತಾರೆ. ಈ ರೀತಿ ಇರುವವರಲ್ಲಿ ಆಶೀರ್ವಾದಗಳು ನೈಸರ್ಗಿಕವಾಗಿ ಹರಿಯುತ್ತವೆ. ನಮ್ಮಲ್ಲಿ ಬಹಳ ಮಂದಿ ಹರಸುವವರಿದ್ದಾರೆ, ಇಲ್ಲಿ ಎಷ್ಟು ಜನ ಹರಸುವವರಿದ್ದೀರಿ? ಕೈಗಳನ್ನು ಮೇಲಕ್ಕೆ ಎತ್ತಿ! ನಿಮ್ಮ ಆಶೀರ್ವಾದಗಳು ಫಲಕಾರಿಯಲ್ಲವೇನು? (ಹರಸಬಲ್ಲ ಸಭಿಕರು ಕೂಗಿದರು, "ಹೌದು!")
ನೋಡಿ, ನೀವು ಕೂಡ ಜನರನ್ನು ಆಶಿರ್ವದಿಸಬಹುದು. ನೀವು ಭಕ್ತಿಯುಳ್ಳವರಾದಾಗ ಮತ್ತು ನಿಮ್ಮ ಸಾಧನೆಗಳಲ್ಲಿ ಸ್ಥಾಪಿತರಾದಾಗ, ನಿಮಗೂ ಕೂಡಾ ಜನರನ್ನು ಆಶೀರ್ವದಿಸುವ ಶಕ್ತಿಯುಂಟಾಗುತ್ತದೆ ಮತ್ತು ಜನರು ವ್ಯಾಧಿಗಳಿಂದ ಗುಣಮುಖರಾಗುತ್ತಾರೆ, ಆಸೆ ಆಕಾಂಕ್ಷೆಗಳು ಮತ್ತು ಕೋರಿಕೆಗಳು ನೆರೆವೇರುತ್ತವೆ. ಯೋಗಾಭ್ಯಾಸ ಮತ್ತು ಆಧ್ಯಾತ್ಮ ಸಾಧನೆಗಳಿಂದ ಖಂಡಿತವಾಗಿಯೂ ಇಂತಹ ಸಿದ್ಧಿಯುಂಟಾಗುತ್ತದೆ. ಆದರೆ ಇದನ್ನು ಮೂಢನಂಬಿಕೆಗಳಿಗೆ ಹೋಲಿಸುವುದು; ಉದಾಹರಣೆಗೆ ಹತ್ತು ಮಂದಿಗೆ ಊಟ ಕೊಟ್ಟರೆ ಅಥವಾ ನಾಯಿಗಳಿಗೆ ರೊಟ್ಟಿ ಕೊಟ್ಟಾಗ ಮಾತ್ರ ಆಶೀರ್ವಾದಗಳು ಉಂಟಾಗುತ್ತವೆ - ಈ ರೀತಿ ದಾರಿ ತಪ್ಪಿಸುವುದು ಸರಿಯಲ್ಲ.
ಅನುಗ್ರಹವು ಕಾರಣರಹಿತ, ಯೋಗ್ಯತೆ ಅರ್ಹತೆಗಳು ಬೇಕಿಲ್ಲ (ಅಹೇತು ಕೀ ಕೃಪಾ). ಯಾವ ಕಾರಣಗಳಿಂದ ಅಥವಾ ಅರ್ಹತೆಗಳಿಂದ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಅನುಗ್ರಹವು ಯಾವುದೇ ಕಾರಣವಿಲ್ಲದೆ ಸಿಗುತ್ತದೆ. ಯಾವುದೊಂದು ಆಚರಣೆಯಿಂದ ಅನುಗ್ರಹ ಉಂಟಾಗುತ್ತದೆ ಎಂಬುದು ಸರಿಯಲ್ಲ, ಹಾಗಾದರೆ ಅದು ಅನುಗ್ರಹವಲ್ಲ,  ಅದು ವ್ಯಾಪಾರ.
ನಿಮಗೆ ಅನುಗ್ರಹ, ಆಶೀರ್ವಾದಗಳು ಯಾವ ಕಾರಣವಿಲ್ಲದೆ ಉಂಟಾಗುತ್ತವೆ. ಭಗವಂತನ ಅನುಗ್ರಹವು ನಿರಂತರವಾಗಿದೆ, ಇದನ್ನು ನೀವು ಅರಿಯಿರಿ ಮತ್ತು ಭಗವಂತನ ಅನುಗ್ರಹ ಧಾರೆಯು ನಿಮ್ಮ ಮೇಲು೦ಟಾಗುತ್ತಿದೆ ಎಂಬುದನ್ನು ತಿಳಿಯಿರಿ.
ನಾವು ಹೆಚ್ಚು ಕೃತಜ್ಞರಾದಷ್ಟು ನಮ್ಮ ಜೀವನದಲ್ಲಿ ಹೆಚ್ಚು ಅನುಗ್ರಹದ ಅನುಭವವಾಗುತ್ತದೆ. ಸದಾಕಾಲ ಆಕ್ಷೇಪಿಸುವ ಮನಸ್ಸಿಗೆ ಅನುಗ್ರಹವನ್ನು ಅನುಭವಿಸಲಾಗುವುದಿಲ್ಲ. ಹೆಚ್ಚು ಕೃತಜ್ಞರಾಗಿರಿ ಮತ್ತು ಸ್ಮರಿಸಿರಿ. ನೀವು ಹೆಚ್ಚು ಸಂತೃಪ್ತರಾದಷ್ಟು ಹೆಚ್ಚು ಅನುಗ್ರಹವನ್ನು ಅನುಭವಿಸುವಿರಿ.
ಯಾವುದೋ ಒಂದು ವಿಶೇಷವಾದ ಅನುಗ್ರಹವಿದೆ ಎಂದು ತಿಳಿಯಬೇಡಿರಿ, ಅನುಗ್ರಹವು ನಿರಂತರವಾಗಿದೆ, ಅದರ ಮೌಲ್ಯವನ್ನು ನಾವು ಅರಿಯುತ್ತೇವಷ್ಟೆ, ಅನುಗ್ರಹವು ಮುಚ್ಚಿದ ಹಣದ ಚೀಲದಲ್ಲೂ ಪ್ರವೇಶಿಸಬಹುದು. ಅನುಗ್ರಹ ಪಡೆಯಲು ನೀವು ನಿಮ್ಮ ಹಣದ ಚೀಲವನ್ನು ತೆರೆಯುವ ಅಗತ್ಯವಿಲ್ಲ. ಯಾರಾದರೂ ನಿಮಗೆ ಅನುಗ್ರಹವನ್ನು ಹಣದಿಂದ ಪಡೆಯಬಹುದು ಎಂದು ಹೇಳಿದರೆ, ಖಚಿತವಾಗಿಯೂ ಅಲ್ಲಿ ಎನೋ ಲೋಪವಿದೆ ಎಂದು ತಿಳಿಯಿರಿ. ಭಗವಂತನು ಯಾವಾಗಲೂ ನಿಮ್ಮನ್ನು ಧಾರಾಳವಾಗಿಯೇ ಆಶೀರ್ವದಿಸುತ್ತಾನೆ. ಆಶೀರ್ವಾದ ಪಡೆಯಲು ನಿಮ್ಮ ಜೇಬಿನಿಂದ ಹಣ ತಗೆಯಬೇಕಿಲ್ಲ. ಇಂತಹ ತಪ್ಪುಭಾವನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿದರೆ ಅದನ್ನು ಯೋಗ ಮಾಯೆ ಎಂದು ಹೇಳಲಾಗುವುದು. ಇದಕ್ಕೆ ಯಾರನ್ನೂ ನಿಂದಿಸಲಾಗದು. ಆಧ್ಯಾತ್ಮ ಮಾರ್ಗದಲ್ಲಿರುವ, ಈ ಬಗೆಯ ಅಭ್ಯಾಸಗಳನ್ನು ರೂಢಿಸಿಕೊಂಡಿರುವಂತವರನ್ನೂ ಕೂಡ ನಾವು ದೂಷಿಸುವಂತಿಲ್ಲ. ಎಲ್ಲರನ್ನು ಹಾರೈಸುವಂತಹ ಮನಸ್ಸುಳ್ಳ ಅವರ ಹೃದಯದಲ್ಲಿ ದ್ವೇಷ ಇರುವುದಿಲ್ಲ. ಆದರೆ ಇಂತಹ ನಾಯಕರು ಅಥವಾ ಆಧ್ಯಾತ್ಮ ಮಾರ್ಗಾನುಯಾಯಿಗಳು ಇದರಿಂದ ಹಣ ಪಡೆಯುವ ವ್ಯವಹಾರದಲ್ಲಿ ತೊಡಗಿದಾಗ, ಅವರಲ್ಲಿಯ ಹರಸುವ ಚೈತನ್ಯವೂ ಕೂಡ ಮಾಯವಾಗುತ್ತದೆ, ಇದನ್ನು ನೀವು ಅರಿತುಕೊಂಡಿರಾ? ಅವರು ಸದ್ಬುದ್ಧಿಯನ್ನು ಕಳೆದುಕೊಂಡವರಾಗುತ್ತಾರೆ.
ಆದಕಾರಣ ನೀವು ಯಾರನ್ನಾದರೂ ಆಶೀರ್ವದಿಸುವಾಗ, ವ್ಯಾಪಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಡಿ. ನೀವು ಆಶೀರ್ವಾದಗಳನ್ನು ಧಾರಾಳವಾಗಿ ನೀಡಬೇಕು, ಹಣವನ್ನು ತೆಗೆದುಕೊಳ್ಳಬಾರದು. ಆದರೆ ಭಕ್ತಿ ಭಾವದಿಂದ ನಿಮಗೆ ಅವರು ಕಾಣಿಕೆ ನೀಡಿದರೆ, ನೀವು ಸ್ವೀಕರಿಸಿರಿ ಮತ್ತು ಆ ಹಣವನ್ನು ಒಳ್ಳೆಯ ಮಹತ್ವವುಳ್ಳ ಕಾರ್ಯಗಳಿಗೆ ಉಪಯೋಗಿಸಿರಿ. ಈ ರೀತಿ ಆಶೀರ್ವಾದಗಳಿಗೆ ಹಣ ಪಡೆಯುವ ಪದ್ದತಿಯು, ಯಾವುದೋ ಬಗೆಯಲ್ಲಿ ಎಲ್ಲಾ ಧರ್ಮಗಳಲ್ಲಿಯೂ ಕೂಡ ಆವರಿಸಿದೆ. ಇದು ಸರಿಯಲ್ಲ. ಆಶೀರ್ವಾದಗಳು ಯಾವುದೇ ಕಾರಣವಿಲ್ಲದೆ ನಿಮ್ಮಲ್ಲಿಗೆ ಧಾವಿಸುತ್ತವೆ.
ಇದೀಗ ನೀವು ಕೇಳಬಹುದು, ಜೀವನ ಕಲೆ ಶಿಬಿರಗಳಿಗೆ ಏಕೆ ಹಣ ಕೊಡಬೇಕು ಎಂದು. ಯಾರ ಮನಸ್ಸಿನಲ್ಲೋ ಈ ಮತ್ತೊಂದು ಪ್ರಶ್ನೆ ಮೂಡಿರಬಹುದು. ಇದಕ್ಕೆ ಕಾರಣವೇನೆಂದರೆ, ಶಿಕ್ಷಣ ಅಥವಾ ಜ್ಞಾನವು, ದಕ್ಷಿಣೆ ಕೊಡದೆ ಪಡೆಯಲಾಗುವುದಿಲ್ಲ. ನೋಡಿ ಆಶೀರ್ವಾದಗಳನ್ನು ಉಚಿತವಾಗಿ ಕೊಡಲಾಗುವುದು, ಆದರೆ ವಿದ್ಯಾರ್ಥಿಯಾಗಿ ಏನಾದರೂ ಕಲಿಯುವ ಇಚ್ಛೆಯುಳ್ಳವರಾದಾಗ, ದಕ್ಷಿಣೆ ಕೊಡದಿದ್ದರೆ, ಆ ಕೃತ್ಯವು ತಾಮಸಿಕ ಯಜ್ಞವಾಗುತ್ತದೆ (ಅನಿರ್ದೇಶಿತ ಅಥವಾ ನಕಾರಾತ್ಮಕತೆಯಿ೦ದ ಪ್ರೇರಿತ ಪ್ರಕ್ರಿಯೆ).
ಜ್ಞಾನಾರ್ಜನೆಯು ಒಂದು ಯಜ್ಞ. ನಾವಿಲ್ಲಿ ಕಲ್ಲಿಯುತ್ತಿದ್ದೇವೆ, ಜ್ಞಾನಾರ್ಜನೆಗೆ ಏನಾದರೂ ಕೊಡಬೇಕಾಗುತ್ತದೆ. ನಮಗೆ ಜ್ಞಾನವು ಲಭ್ಯವಾಗಲು ನಾವು ದಕ್ಷಿಣೆಯನ್ನು ಅಥವಾ ಬದಲಾಗಿ ಏನಾದರೂ ಅರ್ಪಣೆ ಮಾಡಬೇಕು. ಇದು ಶಾಸ್ತ್ರಗಳಲ್ಲಿ ಮತ್ತು ಪವಿತ್ರ ಗ್ರಂಥಗಳಲ್ಲಿನ ವಿಷಯ. ಇದನ್ನು ಸ್ವಲ್ಪ ಸಮಯ ಬದಿಗಿಡೋಣ. ಸಾಮಾನ್ಯವಾಗಿ ನಮ್ಮ ಅನುಭವದಿಂದ ಅರಿತಿರುವುದೇನು? ಶುಲ್ಕ ಪಾವತಿಸಿದ ನಂತರ ನೀವು ತರಗತಿಗಳಲ್ಲಿ ಕುಳಿತಾಗ, ನೀವು ಗಮನವಿಟ್ಟು ನಿಷ್ಠೆಯಿಂದ ಕಲಿಯಲು ಸಾಧ್ಯವಾಗುತ್ತದೆ. ನಾವು ಶುಲ್ಕವಿಲ್ಲದೆ ಶಿಬಿರಗಳನ್ನು ಆಯೋಜಿಸಿದರೆ, ಜನರು ಒಂದೆರೆಡು ದಿನಗಳು ಬಂದು ಮೂರನೆಯ ದಿನ ಓಡಿ ಹೋಗುತ್ತಾರೆ.  ಅವರು ಸಂಪೂರ್ಣ ಗಮನವಿಡುವುದಿಲ್ಲ ಮತ್ತು ತದೇಕಚಿತ್ತರಾಗುವುದಿಲ್ಲ.
ಆದುದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾವು ಶುಲ್ಕ ಪಡೆಯುತ್ತೇವೆ. ಆದರೆ, ನಿಮಗೆ ಯಾರಾದರೂ, ನೀವು ದುಡ್ಡು ಕೊಟ್ಟರೆ ಮಾತ್ರ ಆಶೀರ್ವಾದ ಪಡೆಯಬಹುದು ಎಂದು ಹೇಳಿದರೆ,  ಅಂತಹ ಜನರಿಂದ ನೀವು ದೂರವಿರಬೇಕು. ಅವರು ಯೋಗ ಮಾಯೆಯಲ್ಲಿ ಸಿಲುಕಿರುತ್ತಾರೆ.
ಮಾಧ್ಯಮದವರು ಮತ್ತು ಜನರು ನಿರ್ಮಲ್ ಬಾಬಾರವರನ್ನು ಕಪಟಿಗ ಮಾತ್ತು ಮೋಸಗಾರ ಎಂದು ಕರೆಯುತ್ತಿದ್ದಾರೆ. ಹೀಗೆಲ್ಲಾ ನಡೆಯುತ್ತಿರುವುದನ್ನು ಅರ್ಥಮಾಡಿಕೊಳ್ಳಲಾಗದೆ ಆತನಿಗೆ ಸ್ಮೃತಿತಪ್ಪಿದಂತಾಗಿರಬೇಕು. ಹಿಂದೆ ಫಲಿಸಿದ ಆಶೀರ್ವಾದಗಳು ಈಗ ಏನಾಗಿದೆ? ಆ ಶಕ್ತಿಯು ಇದ್ದಕ್ಕಿದಂತೆ ಈಗ ಎಲ್ಲಿ ಮಾಯವಾಯಿತು? ಸಾಧನೆಯ ಹಾದಿಯಲ್ಲಿ ಹೀಗಾಗುತ್ತದೆ. ಆದುದರಿಂದಲೇ ಈ ರೀತಿ ಹೇಳಲಾಗಿದೆ, ’ಶ್ರೋತ್ರಿಯಾಮ್ ಬ್ರಹ್ಮನಿಷ್ಠಂ’ (ಒಬ್ಬ ಗುರುವು ಶ್ರೋತ್ರಿಯ ಮತ್ತು ಬ್ರಹ್ಮನಿಷ್ಠನಾಗಿರಬೇಕು ), ಶ್ರೋತ್ರಿಯ ಎಂದರೆ - ಶಾಸ್ತ್ರಗಳಲ್ಲಿ ಪರಿಪೂರ್ಣವಾದ ಒಳನೋಟ ಮತ್ತು ಅತ್ಯುತ್ತಮ ಭಾಷೆಯಲ್ಲಿ ಅದನ್ನು ಸ್ಪಷ್ಟವಾಗಿ ತಿಳಿಸುವ ನೈಪುಣ್ಯತೆ ಹೊಂದಿರುವವನು. ಬ್ರಹ್ಮನಿಷ್ಠ ಎಂದರೆ - ಸತ್ಯದ ಜ್ಞಾನದಲ್ಲಿ ಸ್ಥಾಪಿತನಾಗಿರುವವನು.
ಶ್ರೋತ್ರಿಯ ಮತ್ತು ಬ್ರಹ್ಮನಿಷ್ಠನಾಗುವವರೆಗೂ ಇಂತಹ ಚಮತ್ಕಾರಗಳು ಮತ್ತು ಸಾಮರ್ಥ್ಯವು ಸ್ವಲ್ಪ ದಿನಗಳ ಕಾಲ ಮಾತ್ರ ಫಲಿಸುತ್ತದೆ, ನಂತರ ಇವುಗಳು ಕೊನೆಗೊಳ್ಳುತ್ತವೆ. ಇದು ಯೋಗ ಮಾಯೆಯ ಆಟ.
ನಮ್ಮಲ್ಲಿ ಓರ್ವ ಮಹಿಳೆ ಬಂದಿದ್ದರು ಮತ್ತು ಆಕೆಯನ್ನು ಕಂಡ ಜನರು, ಇವರು ದೇವಿ ಮಾತೆಯ ಅವತಾರವೆಂದು ಹೇಳ ತೊಡಗಿದರು, ನಾವು ಆಕೆಗೆ ಗೌರವಾನ್ವಿತವಾಗಿ ಅವರ ಸ್ಥಾನವನ್ನು ಅಲಂಕರಿಸುವಂತೆ ಹೇಳಿದೆವು.
ಹೌದು, ಇದನ್ನೆಲ್ಲಾ ನೋಡಿದಾಗ ಕೋಪವುಂಟಾಗುತ್ತದೆ, ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವುದು ಸಹಜವೇ, ಆದರೆ ಕೋಪಗೊಂಡು ಏನಾದರೂ ಹೇಳುವುದು ಅಥವಾ ಪ್ರತಿಕ್ರಿಯೆ ಮಾಡುವುದರಿಂದ  ನಿಮ್ಮ ಶಕ್ತಿಯು ಕ್ಷೀಣಿಸುತ್ತದೆ.
ನಿಮಗೆ ಗೊತ್ತಾ, ಒಬ್ಬ ವ್ಯಕ್ತಿಯಲ್ಲಿ ಸಿದ್ಧಿಗಳು ಅಥವಾ ಶಕ್ತಿ ಸಾಮರ್ಥ್ಯಗಳು ವ್ಯಕ್ತವಾದಾಗ, ಅದು ಆತನನ್ನು ಬೇರೆ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಈ ಸಂದರ್ಭಗಳಲ್ಲಿ ಅವರಿಗೆ ಇಲ್ಲಿಯ ಸಂಪರ್ಕ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ಮನಸ್ಸು ತನ್ನ ಆಟಗಳನ್ನು ತೋರಿಸುತ್ತದೆ. ಆದಕಾರಣ, ಅವರು ದುಷ್ಟರು, ಅಪ್ರಾಮಾಣಿಕರು ಎಂದಲ್ಲ. ಕೆಲವರು ಅಪ್ರಾಮಾಣಿಕರಿದ್ದಾರೆ, ಆದರೆ ಬಹಳಷ್ಟು ಜನರು ಯೋಗ ಮಾಯೆಯಲ್ಲಿ ಸಿಲುಕಿದ್ದಾರೆ.
ಆದುದರಿಂದ ಯೋಗ ಸಾಧನೆಯಲ್ಲಿ ಕೂಡ ಯೋಗ ಮಾಯೆಯನ್ನು ಜಯಿಸಬೇಕಾಗುತ್ತದೆ, ತದನಂತರವೇ ಪರಿಪೂರ್ಣತೆ ಮತ್ತು ಸಿದ್ಧಿಗಳು ಲಭಿಸಲು ಸಾಧ್ಯ. ಅಲ್ಲಿಯವರೆಗೂ ಜೀವನದಲ್ಲಿ ಪರಿಪೂರ್ಣತೆಯು ಗೋಚರವಾಗಲು ಸಾಧ್ಯವಾಗುವುದಿಲ್ಲ.
ನೀವು ಸಾಧನೆಯ ಹಾದಿಯಲ್ಲಿರುವಾಗ, ನೀವು ಗಮನಿಸಿದರೆ, ಸಾಧಕರು ಮೊದಲು ಜನರನ್ನು ಶಪಿಸುವ ಶಕ್ತಿಯನ್ನು ಹೊಂದುತ್ತಾರೆ.  ಆದಕಾರಣ ಯಾರಿಗೂ ಕೆಟ್ಟದನ್ನು ಹೇಳಬಾರದು, ನಿಮ್ಮ ಮನಸ್ಸಿನಲ್ಲಿ ಅನ್ಯರಿಗೆ ಕೆಟ್ಟ ಆಲೋಚನೆಗಳು ಅಥವಾ ಕೋಪ ಬಂದರೆ, ಅವರಿಗೆ ತಕ್ಷಣವೇ ಏನಾದರೂ ತೊಂದರೆಯಾಗುತ್ತದೆ, ಅಲ್ಲವೆ?
ನಿಮ್ಮಲ್ಲಿ ಎಷ್ಟು ಜನರಿಗೆ ಈ ರೀತಿಯ ಅನುಭವವಾಗಿದೆ? ನಿಮಗೆ ಬೇರೊಬ್ಬರಲ್ಲಿ ಕೋಪ ಬಂತು ಮತ್ತು ಅವರು ತಕ್ಷಣವೇ ನಷ್ಟ ಅನುಭವಿಸಿದರು, ನಿಮಗೆ ಈ ರೀತಿಯ ಅನುಭವವಾಗಿಲ್ಲವೇ? (ಸಭಿಕರಲ್ಲಿ ಬಹಳ ಮಂದಿ ತಮ್ಮ ಕೈಗಳನ್ನು ಮೇಲಕ್ಕೆ ಎತ್ತಿದರು). ಆದುದರಿಂದ ಯಾರಿಗೂ ಕೂಡಾ ಕೆಟ್ಟದನ್ನು ಬಯಸಬೇಡಿರಿ. ಎಲ್ಲರನ್ನೂ ಆಶೀರ್ವದಿಸಿರಿ, ಆಶೀರ್ವಾದಗಳನ್ನು ಕೊಡುವುದರಲ್ಲಿ ಜಿಪುಣರಾಗಬೇಡಿ. ಆಶೀರ್ವಾದ ಮಾಡುವುದರಿಂದ ನಿಮ್ಮ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಯಬೇಡಿ. ಕೆಲವರಿಗೆ ಈ ರೀತಿಯ ತಪ್ಪು ಅಭಿಪ್ರಾಯಗಳಿರುತ್ತವೆ. ಇದು ಕೂಡ ಯೋಗ ಮಾಯೆ.
ಹಲವು ಬಗೆಯ ಯೋಗ ಮಾಯೆಗಳಿವೆ. ಕೆಲವರು ಅವರನ್ನು ಯಾರಾದರೂ ಮುಟ್ಟಿದರೆ ಸಹನೆ ಕಳೆದುಕೊಂಡು ಕೋಪಗೊಳ್ಳುತ್ತಾರೆ, ನಮ್ಮ ಶಕ್ತಿಯನ್ನು ಅವರು ತೆಗೆದುಕೊಂಡರೆಂದು ಅವರು ತಿಳಿಯುತ್ತಾರೆ. ನೀವು ಏಕೆ ಭಯ ಪಡುವಿರಿ? ಪ್ರಜ್ಞಾ ಸಾಗರದಲ್ಲಿ ನಾವು ಮುಳುಗಿದ್ದೇವೆ. ಹೌದು , ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಶಿಸ್ತಿನಿಂದ ಇರಬೇಕು; ಅದು ಮುಖ್ಯ.
ಆದುದರಿಂದ, ಕೆಲವೇ ಸಿದ್ಧಿಗಳಲ್ಲಿ ಒಲವುಹೊಂದುವ ಪ್ರವೃತಿಯನ್ನು ಯೊಗ ಮಾಯೆ ಎಂದು ಹೇಳಬಹುದು. ಇದನ್ನು ನೀವು ದಾಟಿದಾಗ, ನೀವು ಸ್ವಾಭಾವಿಕವಾಗಿಯೇ ಸಿದ್ಧಿಗಳನ್ನು ಗಳಿಸುವಿರಿ. ನಂತರ ನೀವು ಜನರನ್ನು ಆಶೀರ್ವದಿಸಿರಿ, ಅವರ ಆಸೆ ಆಕಾಂಕ್ಷೆಗಳು ಕೂಡಾ ಸ್ವಾಭಾವಿಕವಾಗಿ ನೆರೆವೇರುತ್ತವೆ. 

ಪ್ರಶ್ನೆ: ಅಹಂಕಾರ,  ಗರ್ವ ಮತ್ತು ಆತ್ಮ ಗೌರವ ಇವುಗಳ ನಡುವಿರುವ ವ್ಯತ್ಯಾಸವೇನು?
ಶ್ರೀ ಶ್ರೀ ರವಿ ಶಂಕರ್: ಅಹಂಕಾರ ಮತ್ತು ಗರ್ವ ಇವುಗಳಲ್ಲಿ ವ್ಯತ್ಯಾಸವಿಲ್ಲ,  ’ನಾನು’ ಅನ್ನುವುದು ಅಹಂಕಾರ. ನಾನು ಮಾತ್ರ ಒಳ್ಳಯವ, ಬೇರೆ ಯಾರೂ ಕೂಡ ಒಳ್ಳೆಯವರಲ್ಲ; ಇದು ಗರ್ವ. ವಿವಿಧ ಬಗೆಯ ಗರ್ವಗಳಿವೆ. ಆತ್ಮ ಗೌರವವು ನೀವು ಎಂದೂ ಕಳೆದುಕೊಳ್ಳಲಾರದಂತದ್ದು,  ಆತ್ಮವನ್ನು ನೀವು ಅರಿತಾಗ, ನಿಮಗೆ ಆತ್ಮನಲ್ಲಿ ಗೌರವ ಇರುತ್ತದೆ ಮತ್ತು ಅದೇ ಆತ್ಮ ಗೌರವ.
ಯಾರಾದರೂ ನಿಮ್ಮನ್ನು ಅವಮಾನಿಸುತ್ತಿದ್ದರೆ, ನೀವು ಅಲ್ಲಿಂದ ದೂರ ಸರಿಯಿರಿ. ನಿಮ್ಮನ್ನು ಯಾರಾದರೂ ಕೆಟ್ಟ ಶಬ್ದಗಳಿಂದ ದೂಷಿಸಿದಾಗ, ಅದನೆಲ್ಲಾ ನೀವು ಕೇಳಿಸಿಕೊಳ್ಳುತ್ತಾ ಅದನ್ನು ಯೋಚಿಸುತ್ತಿದ್ದರೆ, ನಿಮ್ಮ ಆತ್ಮಕ್ಕೆ ನೋವಾಗುತ್ತದೆ ಮತ್ತು ನಿಮ್ಮ ಉತ್ಸಾಹ ಕಡಿಮೆಯಾಗುತ್ತದೆ. ಆದುದರಿಂದ ಯಾರದರೂ ನಿಮ್ಮನ್ನು ಕೆಟ್ಟ ಶಬ್ದಗಳಿಂದ ನಿಂದಿಸುವುದನ್ನು ಅಥವಾ ಅವಮಾನಗೊಳಿಸುವುದನ್ನು ನೀವು ಕೇಳಿಸಿಕೊಳ್ಳಬಾರದು.
ಇದು ಇಂದು ನಾವು ಕಲಿತ ಹೊಸ ವಿಷಯ.

ಪ್ರಶ್ನೆ: ಅಹಂಭಾವವಿಲ್ಲದೆ ಸ್ವಪ್ರಯತ್ನವಾಗುವುದಿಲ್ಲ ಎಂದು ಹೇಳಲಾಗಿದೆ, ಹಾಗೂ ನಮಗೆ ಅಹಂಭಾವ ಇರಬಾರದು ಎಂದು ಕೂಡಾ ಹೇಳಲಾಗಿದೆ. ಇದು ಸ್ವಲ್ಪ ಗೊಂದಲಮಯವಾಗಿದೆ.
ಶ್ರೀ ಶ್ರೀ ರವಿ ಶಂಕರ್: ಹೌದು, ಎರಡೂ ನಿಜ. ನೀವು ’ಆತ್ಮಿಯರಿಗೊಂದು ಕಿವಿಮಾತು’ ಈ ಪುಸ್ತಕವನ್ನು ಓದಿರಿ, ಇವೆಲ್ಲಾ ವಿಷಯಗಳನ್ನು ನಾವು ವಿವರವಾಗಿ ಹೇಳಿದ್ದೇವೆ.

ಆನ೦ದ ಗುಚ್ಛ

30
2012
Jul
ಅಮೃತಬಿ೦ದು’ ಸರಣಿಯ ಬರಹಗಳು


ನಾಲ್ಕನೆಯ ಕ೦ತು

ಆನಂದ

ಜೀವನದಲ್ಲಿರುವ ಒಂದೇ ಆಕರ್ಷಣೆ ಎಂದರೆ ಆನಂದದ್ದು. ಆನಂದಕ್ಕೆ ಆಕರ್ಷಿಸುವ ಗುಣವಿದೆ.ಕೆಲವರು ಬೆಳ್ಳಗೆ ನೋಡಲು ಸುಂದರವಾಗಿದ್ದರೂ ಆಕರ್ಷಕರಾಗಿರುವುದಿಲ್ಲ, ಇನ್ನು ಕೆಲವರು ನೋಡಲು ಚೆನ್ನಾಗಿರುವುದಿಲ್ಲ, ಆದರೆ ಆಕರ್ಷಣೆ ತುಂಬಾ ಇರುತ್ತೆ. ಹೌದಾ? ಏಕೆ ಎಂದರೆ ಅವರಲ್ಲಿರುವ ತರಂಗಗಳಿಂದ, ಸ್ವಾತ್ಮಾನಂದಪ್ರಕಾಶ!

ಒಂದು ಮಗು ನೋಡಿ, ಅದು ಯಾವುದೇ ದೇಶಕ್ಕೆ ಸೇರಿದ್ದಾಗಿರಲಿ ಮಗುವಿನಲ್ಲಿ ಆಕರ್ಷಣೆ ಇದೆ. ಆ ಮನಸ್ಸು ಮುಗ್ಧವಾಗಿದೆ, ಪ್ರಸನ್ನವಾಗಿದೆ, ಆ ಚೇತನ ಅರಳಿಕೊಂಡಿದೆ. ಇದೇ ಜೀವನದ ಲಕ್ಷಣ. ಜೀವನ ಆನಂದದಿಂದ ಪ್ರಾರಂಭವಾಗುತ್ತದೆ. ’ಆನಂದೇನ ಜಾತಾನಿ ಜೀವಂತಿ’ ಎಂದು ತೈತ್ತರೀಯ ಉಪನಿಷತ್ತಿನಲ್ಲಿ ಹೇಳಿದ್ದಾರೆ. ಆನಂದದಲ್ಲೇ ಜೀವನವೆಲ್ಲವೂ ನಡೀತಾ ಇದೆ, ಆ ಆನಂದದಲ್ಲೇ ಪೂರ್ಣವಾಗುತ್ತೆ. ಎಲ್ಲಿಂದ ಪ್ರಾರಂಭವಾಯ್ತೋ ಅಲ್ಲೇ ಮುಕ್ತಾಯ, ಅದುವೇ ಜೀವನದ ಲಕ್ಷಣ.

ಕೆಲವರು ಸಾಧನೆ ಮಾಡ್ತಾರೆ - ಬೆಳಗ್ಗಿನಿಂದ ಸಂಜೆಯವರೆಗೂ. ಎಲ್ಲರ ಮೇಲೆ, ಮಕ್ಕಳ ಮೇಲೂ ರೇಗಾಟ, ಕೋಪ ತಾಪ ಬಿಟ್ಟಿಲ್ಲ, ಇದು ಸಾಧನೆಯ ಲಕ್ಷಣವಾ? ಇಂತಹ ಸಾಧನೆ ’ನಮಗೆ ಯಾರಿಗೂ ಬೇಡಪ್ಪಾ’ ಅಂತ ಎಲ್ಲರೂ ದೂರ ಓಡ್ತಾರೆ.

ತುಂಬಾ ಜನ ಯುವಕರು ದೂರ ಹೋಗಿರುವುದು ಇದಕ್ಕೇ, ಮನೇಲಿ  ಅಣ್ಣ, ಅಮ್ಮ, ತಾತ, ಅಜ್ಜಿ, ಎಲ್ಲಾ ಪೂಜೆ ಮಾಡಿದ್ದೂ, ಮಾಡಿದ್ದೇ, ಘಂಟೆ ಬಾರಿಸಿದ್ದೂ ಬಾರಿಸಿದ್ದೇ, ಗಂಧ ತೇದದ್ದೂ ತೇದದ್ದೇ, ನಾಮ ಹಾಕಿದ್ದೂ ಹಾಕಿದ್ದೇ! ಭಕ್ತಿಯ ಭ್ರಮೆ -ಕೋಪ ತಾಪ ಮಾತ್ರ ಕಡಿಮೆಯಾಗಿಲ್ಲ. ಇದನ್ನು ನೋಡಿ ಜನಗಳಿಗೆ ಬೇಸರಿಕೆ ಬಂದುಬಿಡುತ್ತದೆ.

ಎಷ್ಟೋ ಮಠದ ಸ್ವಾಮಿಗಳು ಹೀಗೇ ಮಾಡ್ತಾರೆ. ಸಿಕ್ಕಾಪಟ್ಟೆ ಕೋಪ ತಾಪ! ಜನಗಳು ಭಕ್ತಿಭಾವಗಳಿಂದ ಬರ್ತಾರೆ. ಮಠಾಧಿಪತಿಯ ವರ್ತನೆ - ಅಹಂಕಾರ, ದರ್ಪ, ಕ್ರೋಧ ಕ೦ಡು ಭಾರೀ ಬೇಸರಿಕೆ, ಭಯ ಉಂಟಾಗಿಬಿಡುತ್ತದೆ ಜನಗಳಿಗೆ.

ಆನಂದಮಯವಾಗಿರಬೇಕು ಚೇತನ.ಆ ಆನಂದ ನಮಗೆ ಮಾತ್ರವಲ್ಲ...ನಮ್ಮ ಹತ್ತಿರ ಬಂದವರಲ್ಲೆಲ್ಲಾ ಆ ಆನಂದದ ಸ೦ಚಲನವಾಗಬೇಕು. ಅ೦ಥ ಆನಂದದ ಪ್ರಾಪ್ತಿಯೇ ನಿಜವಾದ ಸಾಧನೆಯ ಲಕ್ಷಣ, ಜೀವನದ ಲಕ್ಷ್ಯ.

* * * * *

ಸಂಪತ್ತು
ಸಂಪತ್ತು ಯಾರಿಗೆ ಬೇಡ? ಐಶ್ವರ್ಯವನ್ನು ಬಯಸದವರಿಲ್ಲ. ಆದರೆ ಎಂತಹ ಸಿರಿವ೦ತಿಕೆಯನ್ನು ಬಯಸುವುದು ಒಳಿತು?

ಕೆಲವು ಸಲ ಸಂಪತ್ತು ಬರುತ್ತೆ. ಅದರ ಹಿಂದೆಯೇ ವಿಪತ್ತು ಬಂದುಬಿಡುತ್ತೆ!.ದೊಡ್ಡ ದೊಡ್ಡ ಶ್ರೀಮಂತರು ಹೊರಗಡೆ ನಗುನಗುತ್ತಾ ಇರಬಹುದು, ನಿಜವಾಗಲೂ ಒಳಗಡೆ ಇಣುಕಿ ನೋಡಿ -.ಅವರ ಮನಸ್ಸಿನಲ್ಲಿ ಪ್ರಸನ್ನತೆಯೇ ಇಲ್ಲ. ಮನಸ್ಸು ಪ್ರಸನ್ನವಾಗಿಲ್ಲದಿದ್ದ ಮೇಲೆ ಆ ಸಂಪತ್ತು, ಆ ಜೀವನ ಯಾತಕ್ಕೆ ಬೇಕಾಗಿದೆ? ಕೊರಗು, ಕೊರಗು, ಆ ಕೊರಗಿನಲ್ಲೇ ಸಾಯೋದು!

ನಮ್ಮ ಮಾಜಿ ಪ್ರಧಾನಮಂತ್ರಿ ಒಂದು ಸಾರಿ ಭೇಟಿ ಮಾಡಿದಾಗ ಅಂದರು, ‘ನೋಡಿ ಗುರುಗಳೇ ನಾನು ಪ್ರಧಾನಮಂತ್ರಿ ಆಗುವುದಕ್ಕೆ ಮೊದಲು ಬಿಸಿಲುಕಾಲದಲ್ಲಿ ಇಲ್ಲೇ ಹೊರಗಡೆ ಮಂಚ ಹಾಕಿಕೊಂಡು ನಮ್ಮಗಾರ್ಡನ್ನಿನಲ್ಲೇ ನಿದ್ದೆ ಮಾಡ್ತಾ ಇದ್ದೆ. ಈಗ ನೋಡಿ ಐವತ್ತು ಜನ ಸುತ್ತಮುತ್ತ ಇದ್ದಾರೆ, ಎಲ್ಲಾ ಕಡೆ ಸೆಕ್ಯೂರಿಟಿ! ತಿಹಾರ್ ಜೈಲಿನಲ್ಲಿರುವ ಕೈದಿಗಿಂತ ದೊಡ್ಡ ಕೈದಿ ಆಗಿಬಿಟ್ಟಿದ್ದೀನಿ ಈಗ!’

ಶಾಂತಿ ತಂದು ಕೊಡತಕ್ಕಂಥ ಧನ ಸಂಪತ್ತಾಗಬೇಕು. ಎಷ್ಟೋ ಸಲ ಸಂಪತ್ತು ಬರುತ್ತೆ, ಅದರ ಹಿಂದೆಯೇ ಬೇಕಾದಷ್ಟು ಸಮಸ್ಯೆಗಳು ಬಂದುಬಿಡುತ್ತವೆ. ಇವತ್ತಿನ ದಿನ ಕೋರ್ಟಿನಲ್ಲಿರುವ ಶೇಕಡಾ ಎಪ್ಪತ್ತೈದು ಎಂಭತ್ತು ಕೇಸುಗಳಿಗೆ ಮೂಲ ಕಾರಣ ಸಂಪತ್ತೇ! ಜನಗಳ ಮಧ್ಯೆ, ಆಪ್ತ ಬಂಧುಗಳ ಮಧ್ಯೆಯೂ ಸಂಘರ್ಷ ಉಂಟಾಗುವುದು ಸಂಪತ್ತಿನಿಂದಲೇ!

ಕೆಲವು ಸಲ ಸಂಪತ್ತು ಬರುತ್ತೆ, ಜೊತೆಗೆ ರೋಗವೂ ಬರುತ್ತೆ. ಅಲ್ಸರ್, ಡಯಾಬಿಟೀಸ್, ಹಾರ್ಟ್ಅಟ್ಯಾಕ್, ಇನ್ನೂ ಏನೇನೋ!

ಸಂಪತ್ತಿನಿಂದ ನಮ್ಮ ತಲೆ ತಿರುಗಿತು, ಕೊಬ್ಬಾಯ್ತು, ವೈಮನಸ್ಯ ಉಂಟಾಯ್ತು, ಬೇಸರಿಕೆ ಉಂಟಾಯ್ತು...ಆ ತರಹ ಸಂಪತ್ತು ಬಂದು ಏನು ಪ್ರಯೋಜನ? ನಿಜವಾದ ಸಂಪತ್ತು ಆನಂದದಿಂದ, ಪ್ರೇಮದಿಂದ ತುಂಬಿರತಕ್ಕಂಥಹುದು, ಪ್ರಸನ್ನತೆಯಿಂದಿರುವುದು.ದೈವಿಕ ಗುಣಗಳ ನಿಜವಾದ ಸಂಪತ್ತು, ನಮ್ಮೊಳಗೇ ಇದೆ. ಅದು ನಮ್ಮ ಅಸ್ತಿತ್ತ್ವವೇ ಆಗಿದೆ. ನಾವು ಗುರುತಿಸಬೇಕಾಗಿದೆ ಅಷ್ಟೆ.

* * * * *

ಪ೦ಡ ಉ೦ಡು ಸುಸ್ತಾದ!
ತುಂಬಾ ತಿಂದ ದಿನ ಏನೂ ಉತ್ಸಾಹವೇ ಇರುವುದಿಲ್ಲ ಹೌದಲ್ಲ?
ತಿಥಿ ಊಟ ಮಾಡುವ ಬ್ರಾಹ್ಮಣರು ಇರುತ್ತಾರೆ (ಮಥುರಾ ಕ್ಷೇತ್ರದಲ್ಲಿ ಇವರು ಸಾಮಾನ್ಯ). ಅವರನ್ನು ’ಪಂಡ’ ಅಂತ ಕರೀತಾರೆ. ಎಲ್ಲಿ ತಿಥಿಯೋ ಅಲ್ಲಿ ಊಟ ಮಾಡೋದು. ಅವರಿಗಿದೇ ಕೆಲಸ. ಕೆಲವು ಸಾರಿ ತುಂಬಾ ಜನ ಸಾಯ್ತಾ ಇದ್ದಾಗ ಇವರಿಗೆ ಬೇಡಿಕೆ ಹೆಚ್ಚಾಗಿರುತ್ತೆ. ಒಂದೇ ದಿನ ಐದಾರು ಜನ ಸತ್ತರೆ, ಐದಾರು ಕಡೆ ಹೋಗಬೇಕಲ್ಲ! ಒಂದು ಸಲ ಈ ರೀತಿ ಹೋದಾಗ ತಂದೆ ಮಗನನ್ನು ಕರೆದುಕೊಂಡು ಹೋಗಿದ್ದರು - ಯಾರು ಹೆಚ್ಚು ತಿಂತಾರೆ ಅಂತ...
ಮಗ ತಿನ್ನುತ್ತಿದ್ದ ಹಾಗೆ ಮಧ್ಯೆ ಒಂದು ಗ್ಲಾಸ್ ನೀರು ಕುಡಿದುಬಿಟ್ಟ. ತಂದೆಗೆ ಸಿಟ್ಟು ಬಂತು. ಎತ್ತಿ ಅವನಿಗೊಂದು ಕಪಾಳಕ್ಕೆ ಹೊಡೆದರು, ’ನೀರು ಯಾಕೆ ಕುಡೀತೀಯ ಊಟ ಮಾಡು’ ಅಂತ. ಬೇರೆ ಏನೂ ಹೆಚ್ಚು ಮಾತಾಡುವುದಕ್ಕೆ ಆಗಲಿಲ್ಲ. ಮನೆಗೆ ಬಂದ ಮೇಲೆ ಆತನನ್ನು ಕೇಳಿದರು, ’ಯಾಕೆ ನೀರು ಕುಡಿದೆ ನೀನು?’ ಅಂತ.
’ಏನಪ್ಪಾ ತಿಂದದ್ದೆಲ್ಲಾ ಚೆನ್ನಾಗಿ ಸೆಟ್ಲ್ ಆಗ್ಲಿ ಅಂತ. ಅದರಿ೦ದ ಇನ್ನೂ ಹೆಚ್ಚು ತಿನ್ನಲು ಸಾಧ್ಯವಾಯಿತು’ ಅಂತ ಉತ್ತರಿಸಿದ ಮಗ.
ಅದಕ್ಕೆ ತಂದೆ ಇನ್ನೂ ಒಂದು ಕಪಾಳಕ್ಕೆ ಬಾರಿಸಿ,.’ಮೊದಲೇ ಯಾಕೆ ಹೇಳ್ಲಿಲ್ಲಾ, ನಾನೂ ಆ ತರಹ ಮಾಡ್ತಾ ಇದ್ದೆ’ ಅಂತ.
ಅದೇ ಸ೦ದರ್ಭದಲ್ಲಿ (ಮಧ್ಯಾಹ್ನ ಒಂದು ಘಂಟೆಯಿರಬಹುದು) ಮನೆಯಲ್ಲಿ ಆ ತ೦ದೆ-ಮಗನ ಮನೆಯ ಯಜಮಾನಿ ಹಾಸಿಗೆ ಹಾಸುತ್ತಾ ಇದ್ದದ್ದನ್ನು ಕ೦ಡ ಪಕ್ಕದ ಮನೆಯಾಕೆ, ’ಏನಮ್ಮಾ ಇಷ್ಟು ಹೊತ್ತಿಗೇ ಹಾಸಿಗೆ ಹಾಸ್ತಾ ಇದ್ದೀಯ’ ಎಂದು ಪ್ರಶ್ನಿಸಿದರು.
’ಅವರು ಶ್ರಾದ್ಧದ ಊಟಕ್ಕೆ ಹೋಗಿದಾರೆ, ಬಂದ ತಕ್ಷಣ ಮಲಗಿಬಿಡ್ತಾರೆ, ಸುಸ್ತಾಗಿರ್ತಾರೆ. ಹಾಸಿಗೆ ಹಾಸಿರುವ ದೃಶ್ಯ ಇಲ್ಲದಿದ್ದರೆ ಕೋಪ ಬಂದುಬಿಡುತ್ತೆ, ಆದ್ದರಿಂದ ಎಲ್ಲ ರೆಡಿ ಮಾಡಿರ್ತೀನಿ’ ಎ೦ಬ ಉತ್ತರ ಈಕೆಯದಾಗಿತ್ತು.
ಆ ಮಾತಿಗೆ ಪಕ್ಕದ ಮನೆಯಾಕೆ, ’ಪರವಾಗಿಲ್ಲ ನಿಮ್ಮೆಜಮಾನರಾದರೆ ಇಲ್ಲಿಗೆ ಬಂದು ಮಲಗ್ತಾರೆ, ನಮಗಂತೂ ಹಾಸಿಗೆ ಅಲ್ಲಿಗೇ ಕಳಿಸಬೇಕಾಗುತ್ತೆ, ಅವರು ಅಲ್ಲೇ ಮಲಗಿಬಿಡ್ತಾರೆ, ಬರುವುದಕ್ಕೂ ಆಗಲ್ಲ ಅವರಿಗೆ’ ಎ೦ದು ಪ್ರತಿಕ್ರಿಯಿಸಿದರು!

ಶನಿವಾರ, ಜುಲೈ 28, 2012

ತೀರದ ಬಾಯಾರಿಕೆಯೇ ಭಕ್ತಿ

28
2012
Jul
ಬೆಂಗಳೂರು ಆಶ್ರಮ, ಭಾರತ


ಪ್ರ: ಬಹಳ ಕಷ್ಟ ಅನುಭವಿಸಿದ ನಂತರ ನಾನು ನಿಮ್ಮನ್ನು ಗುರುವಾಗಿ ಪಡೆದೆ. ನನ್ನ ಮುಂದಿನ ಜನ್ಮದಲ್ಲಿ ಎಲ್ಲೋ ದಿಕ್ಕೆಟ್ಟು ನಂತರ ಗುರುವಿನಿಂದ ಆರಿಸುವಂತಾಗಬಾರದು.ಇದರಿಂದ ಪಾರಾಗಲು ಮಾರ್ಗವಿದೆಯೇ?
ಶ್ರೀ ಶ್ರೀ:
ಈ ಕ್ಷಣದಲ್ಲಿ ಚಿಂತಿಸಬೇಕಾದದ್ದು ಬಹಳಷ್ಟಿದೆ. ನೀವು ಮುಂದಿನ ಜನ್ಮಕ್ಕೇಕೆ ಮುಂದೂಡುತ್ತಿದ್ದೀರಿ?ಈ ಕ್ಷಣದಲ್ಲಿ, ಇಲ್ಲಿ ನಿಮಗೊಂದು ಅವಕಾಶವಿದೆ. ಮುಕ್ತರಾಗಿ, ಸಂತುಷ್ಟರಾಗಿ ಮತ್ತು ಸೇವೆ ಮಾಡಿ!
ಮುಂದಿನ ಜನ್ಮದ ಬಗ್ಗೆ ನಾವು ಆಮೇಲೆ ಯೋಚಿಸೋಣ.

ಪ್ರ: ಸತ್ಸಂಗಗಳಲ್ಲಿ ಮತ್ತು ಕೆಲವು ಜೀವನ ಕಲಾ ಶಿಬಿರಗಳಲ್ಲಿ ನಾನೇಕೆ ಅಳುತ್ತೇನೆ?
ಶ್ರೀ ಶ್ರಿ:
ನೀವೇಕೆ ಅಳುತ್ತೀರಿ? ನನಗನ್ನಿಸುತ್ತದೆ ನೀವು ನಗಬೇಕು, ಅಲ್ಲ್ಲವೇ? ಮುಗುಳ್ನಗೆ ಬೀರಿ! ಉಪನಿಶತ್ತಿನಲ್ಲಿ ಒಂದು ಶ್ಲೋಕವಿದೆ-
"ಬಿಧ್ಯಂತಿ ಹೃದಯ ಗ್ರಂಥಿ ಛಿದ್ಯಂತೇ ಸರ್ವ ಸಂಶಯಃ| ಕ್ಷೀಣತೇಚಾಸ್ಯ ಕರ್ಮಾಣಿ ಯಸ್ಮಿನ್ ದೃಷ್ಟೇ ಪರಾವರೇ||” - (ಮಾಂಡೂಕ್ಯೋಪನಿಷತ್)

ನೀವು ನಿಮಗೆ ಪ್ರಿಯವಾದವರನ್ನು ಕಂಡಾಗ, ನಿಮ್ಮ ಹೃದಯದಲ್ಲಿನ ಗಂಟುಗಳು ತೆರೆದು ಕಣ್ಣೀರು ಉಕ್ಕುತ್ತದೆ.ಮನಸ್ಸಿನ ಎಲ್ಲಾ ಸಂಶಯಗಳು ಮತ್ತು ಪ್ರಶ್ನೆಗಳು ಮಾಯವಾಗುತ್ತವೆ ಮತ್ತು ಎಲ್ಲಾ ದುಷ್ಕರ್ಮಗಳು ಮಾಯವಾಗುತ್ತವೆ. ಉಪನಿಷತ್ತುಗಳಲ್ಲಿ ಹೀಗೆ ಹೇಳಲ್ಪಟ್ಟಿದೆ.

ಹಾಗಾಗಿ ನೀವೇಕೆ ಅಳುತ್ತಿದ್ದೀರಿ ಎಂಬುದು ನಿಮಗೆ ತಿಳಿಯದು, ನಿಮ್ಮ ಹುದಯಲ್ಲಿನ ಒಂದು ಗಂಟು ತೆರೆಯುತ್ತಿರುವುದರಿಂದ-ಇದು ಒಂದು ಆಯಾಮ. ಮತ್ತೆ ಅದರಲ್ಲಿ ತಪ್ಪೇನಿಲ್ಲ, ಹೃದಯ ಅರಳಿದಾಗ ಭಾವನೆಗಳು ಉಕ್ಕಿ ಕಣ್ಣೀರು ಹರಿಯುತ್ತೆ. ಕೃತಜ್ಞತೆ ಮತ್ತು ಪ್ರೀತಿಯೂ ಕಣ್ಣೀರುಗಳೊಂದಿಗೆ ಸಂಬಂಧಿತವಾಗಿವೆ, ದುಃಖವಷ್ಟೇ ಅಲ್ಲ. ಇವುಗಳನ್ನು ಮಧುರ ಭಾಷ್ಪ ಎಂದು ಕರೆಯುತ್ತಾರೆ.
ಭಕ್ತಿ ಸೂತ್ರಗಳಲ್ಲಿ ಹೇಳಲಾಗಿದೆ, ದೇವತೆಗಳು ಪಿತಿಯಿಂದ ಬರುವಂಥಹ ಕಣ್ಣೀರುಗಳಿಗಾಗಿ ಕಾತರಿಸುತ್ತಿರುತ್ತಾರೆ.
ಹಾಗಾಗಿ ಇಂಥ ಕಣ್ಣೀರುಗಳನ್ನು ಪಡೆಯಲು ನೀವು ಭಾಗ್ಯವಂತರು.
ಈಗ ಕೆಲವರಿಗೆ ಕಣ್ಣೀರು ಬಾರದಿದ್ದರೆ ’ನಾನು ಭಾಗ್ಯವಂತನಲ್ಲ, ನನಗೆ ಅಳು ಬರುತ್ತಿಲ್ಲ.’ ಎಂದು ಅಂದುಕೊಳ್ಳಬೇಡಿ. ಹಾಗೇನೂ ಇಲ್ಲ.!ನಿಮಗೆ ಕಣ್ಣೀರು ಬಂದರೆ ಮಾತ್ರ ನೀವು ವಿಕಾಸವಾಗಿರುವುದು ಎಂದೇನೂ ಇಲ್ಲ. ಇದು ಕೆಲವರ ರಚನೆಯಷ್ಟೇ.ಕೆಲವರಿಗೆ ಭಾವುಕತೆ ಹೆಚ್ಚು ಮನದಲ್ಲಿ ಕಾಲಿ ಮತ್ತು ಟೊಳ್ಳುತನದ ಅನುಭವ ವಿಶಾಲವಾಗಿರುತ್ತದೆ.ಕೆಲವರನ್ನು ಹೆಚ್ಚು ಭಾವನೆಯ ಅಲೆಗಳು ಆಳುತ್ತವೆ.
ಇವು ವಿವಿಧ ಅನುಭವಗಳು.ವಿವಿಧ ಸಮಯಗಳಲ್ಲಿ ಜನರು ಈ ವಿವಿಧ ಅನುಭವಗಳನ್ನು ಪಡೆಯುತ್ತಾರೆ.ಎಲ್ಲರೂ ಅದನ್ನು ಪಡೆಯಬೇಕಾಗಿಲ್ಲ. ಮತ್ತು ಅದು ವಿಕಾಸದ ಒಂದು ನಿರ್ದಿಷ್ಟ ಚಿಹ್ನೆಯಲ್ಲ. ಇದು ಹಲವು ಚಿಹ್ನೆಗಳಲ್ಲಿ ಒಂದು, ಆದರೆ ಏಕಮಾತ್ರ ಚಿಹ್ನೆಯಲ್ಲ.

ಪ್ರ: ಗುರೂಜಿ, ದಯವಿಟ್ಟು ಅಹಿಂಸೆಯ ಬಗ್ಗೆ ಮಾತನಾಡುತ್ತೀರಾ? ಮಾಂಸಾಹಾರಿಗಳು ’ನೀವು ಸಸ್ಯಾಹಾರಿಗಳೂ ಗಿಡಗಳನ್ನು ಕೊಲ್ಲುತ್ತೀರಿ ಹಾಗೂ ಸಸ್ಯಗಳಿಗೂ ನೋವಾಗಿ ಚೀರಾಡುತ್ತವೆ!’ ಎಂದಾಗ, ಸಸ್ಯಾಹಾರಿಗಳು ಹೇಗೆ ಉತ್ತರ ನೀಡುವುದು.
ಶ್ರೀ ಶ್ರೀ:
ಆ ಮಾಂಸಾಹಾರಿಗಳನ್ನು ಕೇಳಿ, ಅವರ ಮನೆಯಲ್ಲಿ ನಾಯಿ ಮರಿ ಇದೆಯೇ, ಇದ್ದರೆ ಅವರು ಅದನ್ನು ಊಟದಲ್ಲಿ ಬಳಸುವರೇ? ಇಲ್ಲ, ಅವರು ಹಾಗೆ ಮಾಡುವುದಿಲ್ಲ! ಯಾರೂ ಮಾಡುವುದಿಲ್ಲ.
ನೋಡಿ ನಮ್ಮ ಮಾನವ ಶರೀರ ರಚನೆಯು ಶಾಖಾಹಾರ ಸೇವನೆಗೆಂದು ಮಾಡಲಾಗಿದೆ. ಇದರ ಬಗ್ಗೆ ಹಲವು ಸಂಶೋಧನೆಗಳಿವೆ, ಅಂತರ್ಜಾಲದಲ್ಲಿ ಹುಡುಕಿ- ’ನಾನೇಕೆ ಸಸ್ಯಾಹಾರಿಯಾಗಬೇಕು?’ ನಿಮಗೆ ಇದರ ಮೇಲೆ ಹಲವು ವಿವಿಧ ಉತ್ತರಗಳು ದೊರೆಯುತ್ತವೆ. ಎಲ್ಲಾ ಉತ್ತರಗಳೂ ’ಗೂಗ್ಲ್’ನಲ್ಲಿ ದೊರೆಯುತ್ತವೆ.
ಅಹಿಂಸೆಯು ಮನೋಗತ ಉದ್ದೇಶ. ಏನನ್ನಾದರೂ ನಶಿಸುವ ಉದ್ದೇಶದಿಂದ ಮಾಡುವ ಕೆಲಸದಲ್ಲಿರುವ ಮನಃಸ್ಥಿತಿ ಹಿಂಸೆ.ಅಹಿಂಸೆಯೆಂದರೆ ಸಂಪೂರ್ಣವಾಗಿ ಶಾಂತವಾಗಿರುವ ಮನಸ್ಸು, ಅದು ಏನನ್ನೂ ನಶಿಸಲು ಅಥವಾ ಕೊಲ್ಲಲು ಇಚ್ಚಿಸುವುದಿಲ್ಲ. ಅದು ಅಹಿಂಸೆ.
ಕಾನಡರೆಂಬ ಒಬ್ಬ ಋಷಿಗಳಿದ್ದರು.ಅವರು ಬೆಳೆಗಳನ್ನು ಕೀಳುತ್ತಿರಲಿಲ್ಲ; ಅವರು ಗದ್ದೆಗೆ ಹೋಗಿ ಬೀಜಗಳನ್ನು ಆರಿಸುತ್ತಿದ್ದರು.ಹಾಗಾಗಿ ವಸ್ತುಗಳನ್ನು ಅರ್ಥ್ಮಾಡಿಕೊಳ್ಳಬೇಕು ಎಂದು ಕಾನಡ ಮಹರ್ಷಿಗಳು ಹೇಳಿದ್ದರು.ಪದಾರ್ಥ ಜ್ಞಾನಾತ್ ಮೋಕ್ಷಃ - ಜಗತ್ತಿನ ರಚನೆಯಲ್ಲೊಳಗೊಂಡ ವಸ್ತುಗಳನ್ನು ನಿಮಗೆ ಅರ್ಥಮಾಡಿಕೊಳ್ಳುವುದು ಸಾಧ್ಯವಾದರೆ, ನಿಮಗೆ ಮುಕ್ತಿಯ ಅನುಭವವಾಗುತ್ತದೆ.
ಸಸ್ಯಗಳಲ್ಲಿ ನೀವು ಹಣ್ಣುಗಳನ್ನೋ ತರಕಾರಿಗಳನ್ನೋ ಕೇವಲ ಕೀಳುತ್ತಿದ್ದೀರಿ.ಹೋಲಿಕೆಯಲ್ಲಿ ಕನಿಷ್ಟ ಕೇಡನ್ನು ನಿರ್ಧರಿಸುವುದು.

ಪ್ರ: ಪ್ರೀತಿಯಗುರೂಜಿ, ವಿಶಾಲಾಕ್ಷಿ ಮಂಟಪವನ್ನು ಕಮಲದ ಆಕಾರದಲ್ಲಿ ಏಕೆ ರಚಿಸಲಾಗಿದೆ? ನಿಮಗೆ ಕಮಲ ಹೂವು ಪ್ರಿಯವಾದ್ದರಿಂದಲೇ?ವಿಶಾಲಾಕ್ಷಿ ಮತ್ತು ಸುಮೇರು ಎಂಬ ಪದಗಳ ಅರ್ಥವೇನು?
ಶ್ರೀ ಶ್ರೀ:
ಅದು ಚೆನ್ನಾಗಿದೆಯಲ್ಲವೇ? (ನಗು).
ನೀವು ನೂರು ವಿವಿಧ ಕಾರಣಗಳನ್ನು ಕಂಡುಕೊಳ್ಳಬಹುದು. ನಾವು ಇಂಥದ್ದೊಂದನ್ನು ಮಾಡಲು ನಿರ್ಧರಿಸಿದೆವು, ಮತ್ತೆ ಅದು ಸುಂದರವಾಗಿ ಕಾಣುತ್ತದೆ, ಅಷ್ಟೇ!
ನಾನದಕ್ಕೆ ದಾಸವಾಳದ ಆಕಾರ ನೀಡಿದ್ದರೆ, ನೀವಿದೇ ಪ್ರಶ್ನೆಯನ್ನು ಕೇಳುತ್ತಿದ್ದಿರಿ! ದಾಸವಾಳವೇಕೆ?ಹಾಗಾಗಿ ಈ ಹೂವು ಏಕೆ, ಆ ಹೂವೇಕೆ ಎಂದು ಸಮರ್ಥಿಸುವ ಅಗತ್ಯವಿಲ್ಲ. ಬೇರೆ ಯಾವುದೇ ಹೂವನ್ನೂ ಸಿಟ್ಟುಗೊಳಿಸಲು ಅಥವಾ ಮತ್ಸರಗೊಳಿಸಲು ನಾನು ಇಚ್ಛಿಸುವುದಿಲ್ಲ. (ನಗು).
ವಿಶಾಲ ಎಂದರೆ ವಿಸ್ತಾರವಾದ, ಅಕ್ಷಿ ಎಂದರೆ ಕಣ್ಣುಗಳು; ಹಾಗೆ ಅದರರ್ಥ ವಿಸ್ತಾರವಾದ ದೃಷ್ಟಿ.ಹಾಗಾಗಿ ಅಲ್ಲಿಗೆ ಹೋದವರ ದೃಷ್ಟಿಯು ವಿಶಾಲವಗುತ್ತದೆ ಮತ್ತು ಅವರು ವಿಷಯಗಳನ್ನು ದೊಡ್ಡದಾಗಿ ನೋಡಲಾರಂಭಿಸುತ್ತಾರೆ.ಅಲ್ಲವೆ?(ನೆರೆದ ಜನರು ಚಪ್ಪಾಳೆಗಳೊಂದಿಗೆ ಉತ್ತರಿಸಿದರು).
ಧ್ಯಾನವು ಅದನ್ನೇ ಮಾಡುವುದು- ನಿಮ್ಮ ದೃಷ್ಟಿಯನ್ನು ವಿಸ್ತರಿಸಿ, ನಿಮ್ಮ ಬೇರು(ಆಧಾರ)ಗಳನ್ನು ಆಳ(ವೃದ್ಧಿ)ಗೊಳಿಸುತ್ತದೆ.

ಪ್ರ:ಗುರೂಜಿ, ನಾನು ಬಹಳ ಭಕ್ತಿಯನ್ನು ಅನುಭವಿಸುತ್ತಿದ್ದೆ, ಆದರೆ ಅದು ಸಮಯದೊಂದಿಗೆ ಕುಂದಿದಂತೆ ಕಾಣುತ್ತಿದೆ. ಪತಂಜಲಿ ಯೋಗ ಸೂತ್ರಗಳ ಬಗ್ಗೆ ನಿಮ್ಮ ಪ್ರವಚನಗಳನ್ನು ಕೇಳಿದ ಮೇಲೆ, ಅದು ನನ್ನ ಸ್ವಭವವಲ್ಲ ಎಂದು ಅರಿತೆ.ನಾನು ಮತ್ತೆ ಅದೇ ಭಕ್ತಿಯನ್ನು ಹೇಗೆ ಅನುಭವಿಸಲಿ ಎಂದು ದಯವಿಟ್ಟು ತಿಳಿಸುತ್ತೀರಾ?
ಶ್ರೀ ಶ್ರೀ:
ಭಕ್ತಿ ಎಂದಿಗೂ ಇದೆ, ಆದರೆ ಕೆಲವೊಮ್ಮೆ ಮೋಡಗಳು ಕವಿಯುತ್ತವೆ. ನಿಷ್ಠೆಯು ಸಮಯದೊಂದಿಗೆ ಮೇಲೆ ಮತ್ತೆ ಕೆಳಗೆ ಸಾಗುತ್ತದೆ.ಆದರೆ ಅದು ಕೆಳಗೆ ಹೋದಾಗ ಅದು ಎಂದಿಗೂ ಕೆಳಗೆಯೇ ಉಳಿಯುತ್ತದೆ ಎಂದು ಯೋಚಿಸಬೇಡ. ಅದು ಮತ್ತೆ ಮೇಲೆ ಹೋಗುತ್ತದೆ.
ಇದು ಮನಸ್ಸಿನ ಸ್ವಭಾವ, ಅದು ಮೇಲೆ ಕೆಳಗೆ ಹೋಗುತ್ತದೆ ಮತ್ತು ಪ್ರೀತಿ ಹಾಗೂ ನಿಷ್ಠೆ ಮೇಲೆ ಕೆಳಗೆ ಹೋಗುತ್ತಿವೆಯೋ ಎಂಬಂತೆ ಕಾಣಿಸುತ್ತದೆ.ಹಾಗೆಯೇ ಅದು ಪ್ರಾಣ ಶಕ್ತಿಗೆ ಸಂಬಂಧಿಸಿದೆ.ಪ್ರಾಣವು ಮೇಲ್ಮಟ್ಟದಲ್ಲಿರುವಾಗ ನಿಷ್ಠೆಯು ಉನ್ನತವಾಗಿರುತ್ತದೆ.ಪ್ರಾಣ ಕೆಳಮುಖವಾಗಿರುವಾಗ ’ಓ, ಇದೇನು?ನಾನು ಸರಿಯಾದ ಸ್ಥಳದಲ್ಲಿದ್ದೇನೆಯೇ?ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆಯೇ?’ ಎಂದು ಮನಸ್ಸಿನಲ್ಲಿ ನೂರಾರು ಸಂಶಯಗಳು ಬರುತ್ತವೆ.ಹಾಗಾಗಿ ನೀವು ನಿಮ್ಮ ಆತ್ಮನಲ್ಲಿ ಭದ್ರವಾಗಿ ನೆಲೆಗೊಂಡಿರುವಾಗ, ನೀವು ಜ್ಞಾನದಲ್ಲಿ ಭದ್ರವಾಗಿ ನೆಲೆಗೊಂಡಿರುವಾಗ, ಆಗ ಮಾತ್ರ ಸ್ಥಿರತೆ ಉಂಟಾಗುತ್ತದೆ.ಆದ್ದರಿಂದಲೇ ಹಿಂದಿನ ಸಂತರು ದೇವರಲ್ಲಿ ಅಚಲ ಶ್ರದ್ಧೆಗಾಗಿ ಪ್ರಾರ್ಥಿಸುತ್ತಿದ್ದರು.
ಬಹಳ ಸಂತರು ಅಚಲ ಶ್ರದ್ಧೆ, ನಿರಂತರ ಭಕ್ತಿ, ಸತತವಾದ ಪ್ರೀತಿಯನ್ನು ಹಾಡಿ ಕೇಳಿಕೊಂಡಿದ್ದಾರೆ.
ನಾವು ಇಷ್ಟನ್ನೇ ಕೇಳಿಕೊಳ್ಳಬಹುದು ಯಾಕೆಂದರೆ ಇದೂ ಒಂದು ಕೊಡುಗೆ! ನಿಮಲ್ಲಿ ಪ್ರೀತಿ ಹಾಗೂ ಭಕ್ತಿ ಇದ್ದಾಗ ನೋಡಿ ನಿಮ್ಮ ಜೀವನದಲ್ಲಿ ಎಂತಹ ಪರಿವರ್ತನೆಗಳುಂಟಾಗುತ್ತವೆ.ಅವು ಮುರಿದು ಬಿದ್ದಾಗ, ನೋಡಿ ಏನಾಗುತ್ತದೆ - ಒಂದು ರೀತಿಯ ಜಡತೆ ಪ್ರಾರಂಭವಾಗುತ್ತದೆ.ನಿರಾಶೆಯ ಭಾವನೆ ಬಂದು ಜೀವನ ನಿರರ್ಥಕವೆಂಬಂತೆ ಕಾಣಿಸುತ್ತದೆ.ಪ್ರತಿ ಬಾಗಿಲೂ ಮುಚ್ಚಿರುವಂತೆ ಕಾಣುತ್ತದೆ ಹಾಗೂ ಎಲ್ಲೆಡೆಯೂ ಅವರು ಕತ್ತಲನ್ನು ಕಾಣುತ್ತಾರೆ.ಕ್ರೈಸ್ತ ಸಂಪ್ರದಾಯದಲ್ಲಿ ಅದನ್ನು ಆತ್ಮದ ಕತ್ತಲ ರಾತ್ರಿ ಎಂದು ಕರೆಯುತ್ತಾರೆ.ಆತ್ಮವು ಅಂಥ ಕತ್ತಲ ರಾತ್ರಿಯನ್ನು ಕಳೆಯಬೇಕು. ಆದರೆ ನಾನು ಹೇಳುತ್ತೇನೆ, ನೀವೊಬ್ಬ ಯೋಗಿಯಾಗಿದ್ದರೆ(ಆಧ್ಯಾತ್ಮಿಕ ಪಥದಲ್ಲಿನ ಜ್ಞಾನಾರ್ಥಿ), ನಿಮಗೆ ಅದನ್ನು ಕಳೆಯಬೇಕಾಗಿಲ್ಲ.
ಯೋಗ ಸೂತ್ರಗಳಲ್ಲಿ, ನಾನು ಯೋಗದ ಪಥದಲ್ಲಿನ ಒಂಭತ್ತು ತೊಡಕುಗಳ ಬಗ್ಗೆ ಮಾತನಾಡಿದ್ದೇನೆ.ಮತ್ತು ನೀವು ಅವುಗಳನ್ನು ಹೇಗೆ ದಾಟಿಬರಬಹುದು?
ಏಕತತ್ತ್ವ ಅಭ್ಯಾಸ - ನೀವು ಒಂದು ತತ್ತ್ವವನ್ನು ತಪ್ಪದೆ ಪಾಲಿಸುತ್ತಿದ್ದರೆ ಆಗ ನೀವು ಈ ಒಂಭತ್ತು ತೊಡಕುಗಳನ್ನು ಅಥವಾ ತೊಡಕುಗಳಂತೆ ತೋರುವಂಥವನ್ನು ದಾಟಿ ಸಾಗಬಹುದು.

ಪ್ರ: ಪ್ರೀತಿಯ ಗುರೂಜಿ, ನಾನು ಗಾಢ ಪ್ರೀತಿ ಅಥವಾ ಭಕ್ತಿಯನ್ನು ಅನುಭವಿಸುವಾಗ ನನ್ನ ಅರಿವನ್ನು ಕಳೆದುಕೊಳ್ಳುತ್ತೇನೆ. ನಾನು ಅರಿವಿನಲ್ಲಿರುವಾಗ ಭಕ್ತಿಯ ಆಳವನ್ನು ಕಳೆದುಕೊಳ್ಳುತ್ತೇನೆ.ಗಾಢತೆ ಮತ್ತು ಅರಿವು, ಇವೆರಡನ್ನೂ ನಾನು ಹೇಗೆ ಉಳಿಸಿಕೊಳ್ಳಬಹುದು?
ಶ್ರೀ ಶ್ರೀ:
ನಿಮಗೆ ಏನಾಗುತ್ತಿದೆ ಎಂದು ಆಲೋಚಿಸಲು ಮತ್ತು ನೋಡಲು ಬಿಡುವಿನ ಸಮಯ ಹೆಚ್ಚಾಗಿರಬೇಕೆಂದು ಕಾಣುತ್ತದೆ. ಕಾರ್ಯನಿರತರಾಗಿರಿ, ಕರ್ಮ ಯೋಗವನ್ನು ಮಾಡಿ(ಕೆಲಸಗಳಲ್ಲಿ ನಿರತವಾಗಿರುವ ಮಾರ್ಗ). ನೀವು ಸೇವೆಯಲ್ಲಿ ನಿರತರಾಗಿದಾಗ, ಕುಳಿತು ಆಲೋಚಿಸುವುದಿಲ್ಲ’ನನಗೆ ಏನನ್ನಿಸುತ್ತಿದೆ? ನನಗೆ ಏನನಿಸುತ್ತಿಲ್ಲ?’ ಭಾವನೆಗಳೆಲ್ಲ ಜೀವನದ ಭಾಗ, ಅವುಗಳೊಂದಿಗೆ ಮುನ್ನಡೆಯಿರಿ!
ನಮ್ಮ ಶರೀರದಲ್ಲಿ 1,72,೦೦೦ ನಾಡಿಗಳಿವೆ. ಕೆಲವೊಮ್ಮೆ ಜ್ಞಾನ ನಾಡಿ ತೆರೆದುಕೊಳ್ಳುತ್ತದೆ, ಕೆಲವೊಮ್ಮೆ ಸಂಗೀತ ನಾಡಿ ತೆರೆದುಕೊಳ್ಳುತ್ತದೆ.ವಿವಿಧ ನಾಡಿಗಳು ತೆರೆದುಕೊಂಡಾಗ ವಿವಿಧ ಅನುಭವಗಳನ್ನು ಪಡೆಯುತ್ತೀರಿ.ನಿಮ್ಮ ಭಾವನೆಗಳಿಂದ ಅಷ್ಟೊಂದು ಮನಸ್ಸಿನಲ್ಲಿ ಆವೃತ್ತರಾಗದಿರಿ.ತಿಳಿಯಿತಾ?
ನಿಮಗೇನನ್ನಿಸುತ್ತಿದ್ದರೂ ಏನಂತೆ?ಎಲ್ಲರೂ ನೀವೇನು ಮಾಡುತ್ತೀರಿ ಎಂದು ಮುಂದೆ ನೋಡುತ್ತಿರುತ್ತಾರೆ.ಈ ಭೂಗ್ರಹಕ್ಕೆ ನೀವು ಹೇಗೆ ಸಹಾಯವಾಗಬಹುದು, ಬೇಕಾದುದನ್ನು ಒದಗಿಸಬಹುದು?
ನಾನೇನು ಒಳ್ಳೆಯದನ್ನು ಮಾಡಬಹುದು - ಅದರಲ್ಲಿ ಗಮನವಿಡಿ.ನಡೆಯುತ್ತಿರುವುದರ ಮೇಲೆ ಕೇಂದ್ರೀಕರಿಸಬೇಡಿ.ನೀವೇನು ಮಾಡಬಹುದು ಮತ್ತು ನೀವೇನು ಮಾಡಬೇಕು ಎಂಬುದರ ಮೇಲೆ ಗಮನವಿಡಿ.
ಹಲವು ಬಾರಿ, ನಾವೇನು ಮಾಡಬೇಕಾಗಿದೆಯೋ ಅದರ ಮೇಲೆ ಗಮನವಿರಿಸುವುದಿಲ್ಲ ಆದರೆ ನಡೆಯುತ್ತಿರುವುದರ ಬಗ್ಗೆ ಕುಳಿತು ಆಲೋಚನೆಗಿಳಿಯುತ್ತೇವೆ.ನಾವು ಮಾಡುತ್ತಿರುವ ವಿಷಯಗಳಿಗಿಂತ, ನಡೆಯುತ್ತಿರುವ ವಿಷಯಗಳ ಮೇಲೆ ಬಹಳ ಗಮನವಿಡುತ್ತೇವೆ.ನೀವೇನು ಮಾಡುತ್ತೀರೋ ಅದರ ಮೇಲೆ ಗಮನ ಹಾಕಿ ಮತ್ತು ನಡೆಯುತ್ತಿರುವುದನ್ನು ಪ್ರಕೃತಿಗೆ ಬಿಡಿ.ಏನೇ ನಡೆಯುತ್ತಿದ್ದರೂ ಪ್ರಕೃತಿಯು ನಿಮ್ಮನ್ನು ಅದರ ಮೂಲಕ ಸಾಗಿಸುತ್ತದೆ.
ನಾನು ಹೇಳುತ್ತೇನೆ, ಅದು ಆಲೋಚನೆಗಳಾಗಿರಲಿ ಅಥವಾ ಭಾವನೆಗಳಗಿರಲಿ, ಅದೊಂದು ಪ್ರತ್ಯೇಕ ಘಟನೆಯಲ್ಲ. ಅದು ಜಾಗತಿಕ ಸಂಗತಿ. ಉದಾಹರಣೆಗೆ, ನೀವು ಬೇರೊಂದು ದೇಶದಲ್ಲಿದ್ದು ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಥವಾ ಒಂದು ರಾಷ್ಟ್ರೀಯ ದಿನಾಚರಣೆಯಗುತ್ತಿದ್ದರೆ, ಎಲ್ಲರೂ ದೇಶಭಕ್ತಿಗೀತೆಗಳನ್ನು ಹಾಡುತ್ತಾ ದೇಶಾಭಿಮಾನದಿಂದಿರುವಾಗ ನೀವು ಒಮ್ಮೆಲೇ ದೇಶಭಕ್ತಿಯನ್ನು ಅನುಭವಿಸಲು ಆರಂಭಿಸುವುದಿಲ್ಲವೇ?
(ಬಹಳ ಮಂದಿ ಕೈ ಎತ್ತಿದರು)
ಕಣ್ಣೀರುಗಳು ಹರಿಯುತ್ತವೆ.
ಹಾಗೆಯೇ ನೀವು ದೂರದರ್ಶನದಲ್ಲಿ ಒಬ್ಬ ರಾಜಕಾರಾಣಿಯಿಂದ ಅನ್ಯಾಯಕ್ಕೆ ತುತ್ತಾದ ವ್ಯಕ್ತಿಯು ತನ್ನ ಕಥೆಯನ್ನು ಹೇಳುತ್ತಿರುವುದನ್ನು ನೋಡಿದರೆ, ನೀವು ಒಮ್ಮೆಲೇ ಕ್ರೋಧ ಅನುಭವಿಸುತ್ತೀರಿ.ನಿಮ್ಮಲ್ಲೆಷ್ಟು ಜನ ಇದನ್ನು ಅನುಭವಿಸಿದ್ದೀರಿ? (ಬಹಳ ಮಂದಿ ಕೈ ಎತ್ತಿದರು)
ನೀವು ಬಹಳ ಸಿಟ್ಟುಗೊಂಡಿರಿ.ಎಲ್ಲರೂ ಒಂದು ರೀತಿಯ ದೇಶಭಕಿಯನ್ನು ಅನುಭವಿಸುತ್ತಾರೆ, ಅದು ನಿಮ್ಮಲಿ ಉಕ್ಕುತ್ತದೆ.ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ನಿಮ್ಮಲ್ಲಿ ಈ ಭಾವನೆಗಳನ್ನು ಹೇಗೆ ಆವಾಹಿಸುವುದು, ಮತ್ತು ಅಲ್ಲಿ ಯಾವ ರಾಗ-ಸಂಗೀತ ಸರಿಹೊಂದುತ್ತದೆ ಎಂದು ಬಲ್ಲರು.ನಿಮಗೆ ಗೊತ್ತೇ ಭಾವನೆಗಳು ಸಂಗೀತದೊಂದಿಗೆ ಸಂಬಧಿತವಾಗಿವೆ ಹಾಗೂ ಭಾವನೆಗಳನ್ನು ಪ್ರಚೋದಿಸಬಹುದು. ಈ ದೊಡ್ಡ ತುಮುಲ(ದಂಗೆ)ಗಳು ಹೇಗೆ ಉಂಟಾಗುತ್ತವೆ? ಭಾವನೆಗ್ಳನ್ನು ಪ್ರಛೋದಿಸಲಾಗುತ್ತದೆ.ಮತ್ತು ಅಸ್ಥಿರವಾಗಿರುವವರು ಅಷ್ಟರಲ್ಲೆ ಅದಕ್ಕೆ ಧುಮುಕುತ್ತಾರೆ.ಅರಿವಿಲ್ಲದ ಜನರು ಅದಕ್ಕೆ ಧುಮುಕಿ ಸ್ವೇಚ್ಚೆಯಿಂದ ಅದನ್ನು ಮಾಡುತ್ತಾರೆ, ಚಪಲ ತೀರಿಸಿಕೊಳ್ಳುತ್ತಾರೆ.
ಅಸ್ಸಾಂನಲ್ಲಿ ದಂಗೆಗಳು ನಡೆಯುತ್ತಿವೆ ಮತ್ತು ಸಮೀಪ 2,೦೦,೦೦೦ ಜನರು ಬೀಡುಗಳನ್ನು(ಚಮ್ಪ್) ಸೇರಿದ್ದಾರೆಂದು ಇವತ್ತು ನನಗೆ ವರದಿಯಾಯಿತು. ಅವರು ತಮ್ಮ ಮನೆಗಳನ್ನು ಬಿಟ್ಟು ಓಡಬೇಕಾಯಿತು.೫೦೦ ಗ್ರಾಮಗಳ ಮೇಲೆ ಪರಿಣಾಮವಾಯಿತು.ಆದರೆ ಇದರ ನಡುವಿನಲ್ಲಿ, ೩ ಗ್ರಾಮಗಳು ಪರಿಣಮಕ್ಕೊಳಗಾಗಲಿಲ್ಲ. ಯಾಕೆ ಗೊತ್ತೇ? ಆ ಮೂರು ಗ್ರಾಮಗಳಲ್ಲಿ ಜೀವನ ಕಲೆಯ ಬಹಳ ಪ್ರಬಲವಾದ ಉಪಸ್ಥಿತಿಯಿತ್ತು!
ಸವಿತಾ ಮತ್ತು ಆಶಿಶ್ ಭೂತಾನಿ(ಅಸ್ಸಾಂನಲ್ಲಿ ಪರಿಹಾರ ಹಾಗೂ ಪ್ರಗತಿಗಾಗಿ ಕೆಲಸ ಮಾಡುತ್ತಿರುವ ಭಕ್ತರು) ಇಲ್ಲಿದ್ದಾರೆ. ಸವಿತಾ ಆ ಹಳ್ಳಿಗಳ ಹೆಸರನ್ನೂ ಹೇಳುತ್ತಿದ್ದಳು.
ಹಾಗಾಗಿ ಆ ಮೂರೂ ಗ್ರಾಮಗಳು ಸೇರಿದವು ಮತ್ತೆ ಆ ಗ್ರಾಮಗಳಲ್ಲಿ ಯಾವುದೇ ಹಿಂಸಾಚಾರ ನಡೆಯಲು ಬಿಡಲಿಲ್ಲ. ಯಾರಿಗೂ ಯಾರ ಮನೆಯನ್ನೂ ಸುಡಲು ಬಿಡಲಿಲ್ಲ. ಆ ಪೂರ್ತಿ ಹಳ್ಳಿಯನ್ನು ಕಾಯ್ದಿರಿಸಲಾಗಿತ್ತು, ಏಕೆಂದರೆ ಅವರಲ್ಲಿ ವಸುಧೈವಕುಟುಂಬಕಂ(ಈ ಜಗತ್ತು ಒಂದು ಪರಿವಾರ) ಎಂಬ ಪರಿಜ್ಞಾನವಿತ್ತು. ಮುಸಲ್ಮಾನರು, ಕ್ರೈಸ್ತರು, ಹಿಂದೂಗಳು, ಎಲ್ಲರೂ ಸೇರಿ ನಿಂತರು ಮತ್ತು ಮಸಲ್ಮಾನರು ಹಿಂದೂಗಳನ್ನು ಹಿಂಸಿಸದಂತೆ ಹಾಗೂ ಹಿಂದೂಗಳು ಮುಸಲ್ಮಾನರನ್ನು ಹಿಂಸಿಸದಂತೆ ನೋಡಿಕೊಂಡರು.ಅವರು ಯಾವುದೇ ದಿಕ್ಕಿನಿಂದ ಹಿಂಸೆಯಾಗಲು ಬಿಡಲಿಲ್ಲ.
ಸವಿತಾ, ನಮಗೆ ಆ ಗ್ರಾಮಗಳ ಹೆಸರನ್ನು ಹೇಳು.(ಸವಿತಾ ಅಸ್ಸಾಂನ ಆ ಮೂರು ಹಳ್ಳಿಗಳ ಹೆಸರನ್ನು ತಿಳಿಸಿದರು).

ಸವಿತಾ: ಒಂದು ಗ್ರಾಮದಲ್ಲಿ ಎಲ್ಲಾ ಮೂರೂ ಮತಗಳಿವೆ - ಬೋಡೋ, ಅಸ್ಸಾಂ ಜನಾಂಗ ಹಾಗೂ ಮುಸಲ್ಮಾನರು. ಆದರೂ, ಅವರೆಲ್ಲರೂ ಜೊತೆಗೂಡಿ ಯಾವುದೇ ಗ್ರಾಮದಲ್ಲಿ ಯಾವುದೇ ಹಿಂಸೆ ನಡೆಯದಂತೆ ಖಾತ್ರಿಪಡಿಸುವ ನಿಲುವು ತೆಗೆದುಕೊಂಡರು. ಇದೆಲವೂ ಜೀವನ ಕಲೆಯ ಉಪಸ್ಥಿತಿಯಿಂದ ಆಯಿತು, ಯಾಕೆಂದರೆ ಬಹಳ ಜನರು ಭಾಗ ೧ ಮತ್ತು ವೈ.ಎಲ್.ಟಿ.ಪಿ.(ಗ್ರಾಮಗಳಲ್ಲಿ ಯುವ ಮುಖಂಡರ ತರಬೇತಿಗಾಗಿ ಶಿಬಿರ) ಶಿಬಿರಗಳನ್ನುಮಾಡಿದ್ದರು. ಹಾಗಾಗಿ ಈ ಮೂರು ಹಳ್ಳಿಗಳಲ್ಲಿ ಯಾವುದೇ ಹಿಂಸೆ ನಡೆಯಲಿಲ್ಲ, ಯಾರೂ ಕೊಲೆಯಾಗಲಿಲ್ಲ. ಈ ಗ್ರಾಮಗಳ 1 ಅಥವಾ 2ಕಿ.ಮೀ ಸಮೀಪದಷ್ಟು ಪಕ್ಕದ ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗುವಂತೆ ಸುಡಲ್ಪಟ್ಟಿದ್ದವು.ಆದರೆ ಈ ಮೂರು ಹಳ್ಳಿಗಳು ಜೀವನ ಕಲೆಯಿಂದಾಗಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದವು."
ಬಹಳ ಒಳ್ಳೆಯದು, ಬಹಳ ಒಳ್ಳೆಯದು! ಜೈ ಗುರುದೇವ.
ಈ ಜ್ಞಾನವನ್ನು ಎಲ್ಲರಿಗೂ ತಲುಪಿಸುವುದು ಏಷ್ಟು ಮುಖ್ಯವೆಂದು ಕಾಣುತ್ತಿದ್ದೀರಾ?ಈ ಜ್ಞಾನವನ್ನು ಹರಡುವುದು ನಮಗೆ ಬಹಳ ಮುಖ್ಯವೆಂದು, ಅದರಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ಮುಖ್ಯವೆಂದು ಎಷ್ಟು ಮಂದಿ ಯೋಚಿಸುತ್ತೀರಿ? ಎಲ್ಲಿ ಶಾಂತಿ ನಾಜೂಕಾಗಿದೆಯೋ, ಅಲ್ಲಿ ನಾವು ಹೆಜ್ಜೆಯಿಟ್ಟು ಏನಾದರೂ ಕೆಲಸ ಮಾಡಬೇಕು!

ಪ್ರ: ಜೈ ಗುರುದೇವ, ನಾನು 2014 ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದುಕೊಂಡಿದ್ದೇನೆ. ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ.ಗೆಲ್ಲಬೇಕಾದರೆ, ಈ ಎರಡು ವರ್ಷಗಳಲ್ಲಿ ನಾನು ಕ್ಷೇತ್ರದಲ್ಲಿ ಏನು ಕೆಲಸ ಮಾಡಬೇಕು?
ಶ್ರೀ ಶ್ರೀ:
ಬಹಳ ಒಳ್ಳೆಯದು. ಮೊದಲು ಕ್ಷೇತ್ರ ಮತ್ತು ಪ್ರಾಂತ್ಯವನ್ನು ಆಯ್ಕೆ ಮಾಡಿ ನಂತರ ಅಲ್ಲಿ ಬಹಳ ಕೆಲಸ ಮಾಡಿ.ಶಿಬಿರಗಳನ್ನು ನಡೆಸಿ ಅಲ್ಲಿ ಹೆಚ್ಚು ಸ್ವಯಂಸೇವಕರನ್ನು ಪೋಷಿಸಿ.ಅಲ್ಲಿ ಟಿ.ಟಿ.ಸಿ.-ಪೂರ್ವ ಸ್ವಯಂಸೇವಕ ತರಬೇತಿ ಶಿಬಿರವನ್ನು ಏರ್ಪಡಿಸಿ.ಎಲ್ಲರನ್ನೂ ಜೊತಗೂಡಿಸಿ ಮತ್ತು ಅವರು ಒಂದು ಆಧ್ಯಾತ್ಮಿಕ ಸಮಾಜ ಅಂದರೆ ಕಾನೂನು ಪಾಲಿಸುವ ಮತ್ತು ಭ್ರಷ್ಟ ಮುಕ್ತ ಸಮಾಜದ ನಿರ್ಮಾಣದಲ್ಲಿ ಹೇಗೆ ನೆರವಾಗಬಹುದು ಎಂಬ ಅರಿವು ಅವರಲ್ಲಿ ಮೂಡಿಸಿ.
ಇದನ್ನು ಖಂಡಿತವಾಗಿ ಮಾಡಿ.

ಪ್ರ: ಗುರೂಜಿ, ಸಾಯದೆ ಸ್ವರ್ಗವಿಲ್ಲ ಎಂದು ಹೇಳುತ್ತಾರೆ. ಮೋಕ್ಷ ಪಡೆಯಲು ಸಾಯುವುದು ಮುಖ್ಯವೇ?
ಶ್ರೀ ಶ್ರೀ:
ಹಾಗೆ ಯಾರೆಂದರು? ಬದುಕಿರುವಾಗ ನಿಮಗೆ ಸ್ವರ್ಗದ ಅನುಭವವಾಗದಿದ್ದರೆ, ಸತ್ತ ಮೇಲೆ ನೀವು ಅದನ್ನು ಹೇಗೆ ಅನುಭವಿಸಬಹುದು?ಸತ್ತ ಮೇಲೂ ನೀವದನ್ನು ಅನುಭವಿಸುವುದಿಲ್ಲ. ಜೀವಿಸುತ್ತಿರುವಾಗ ನಿಮಗೆ ನಗಲು, ಸಂತೋಷದಿಂದಿರಲು ಮತ್ತು ಆನಂದದಿಂದಿರಲು ಕಲಿಯಲು ಆಗದಿದ್ದರೆ, ಮರಣದ ನಂತರ ನೀವೇನು ಕಲಿಯುತ್ತೀರಿ? ಸಾಧ್ಯವೇ ಇಲ್ಲ! ಹಾಗೆ ಯಾರೆಂದರು?
ಮತ್ತೆ ನೀವೇಕೆ ಇಲ್ಲಿ ಬಂದಿದ್ದೀರಿ?ನೀವು ಇಲ್ಲಿ ನಿಮ್ಮ ಕರ್ಮಗಳನ್ನು ಕಳೆಯಲು ಬಂದಿದ್ದೀರಿ, ನೀವು ಇಲ್ಲೇ ಸ್ವರ್ಗವನ್ನು ಅನುಭವಿಸುವುದು ಸಾಧ್ಯವಾಗಲೆಂದು.

ಪ್ರ: ಗುರೂಜಿ, ಭಕ್ತಿ ಮತ್ತು ಸಮರ್ಪಣೆ ಬುದ್ಧಿವಂತಿಕೆಯ ಚಿಹ್ನೆಗಳೆನ್ನಲ್ಪಡುತ್ತವೆ. ಆದರೆ ಭಕ್ತಿ ಮತ್ತು ಸಮರ್ಪಣೆಗಳೆರಡೂ ಬುದ್ಧಿಯನ್ನು ಮೀರಿದವು.ಮತ್ತೆ ಅವು ಹೇಗೆ ಅದನ್ನು ಗುರುತಿಸುವ ಚಿಹ್ನೆಗಳಾಗಿರಬಹುದು?
ಶ್ರೀ ಶ್ರೀ:
ನೋಡಿ, ಸತ್ಯ ಒಂದೇ ಬಗೆಯದ್ದಾಗಿಲ್ಲ. ಸತ್ಯಕ್ಕೆ ಹಲವು ಮುಖಗಳಿವೆ. ಹಾಗಾಗಿ ನೀವು ಯಾವುದೇ ಸಿದ್ಧಾಂತವನ್ನು ಸಾಬೀತುಪಡಿಸಬಹುದು ಅಥವಾ ಅಬದ್ಧವೆಂದು ಸಾಧಿಸಬಹುದು.ಯಾವುದೇ ಸಿದ್ಧಾಂತವನ್ನು ತೆಗೆದುಕೊಳ್ಳಿ, ನಿವದನ್ನು ಎರಊ ರೀತಿ ಸಾಧಿಸಬಹುದು, ಸರಿ ಮತ್ತು ತಪ್ಪು ಎಂದೂ ಸಾಧಿಸಬಹುದು. ಎರಡೂ ಸಾಧ್ಯ, ಆಯಿತೇ!
ಅದರ ಬಗ್ಗೆ ಯೋಚಿಸಿ! ನಿಮಗದು ಸರಿಯೆನಿಸಿದರೆ ಸ್ವೀಕರಿಸಿ ಇಲ್ಲವಾದರೆ ಬಿಟ್ಟುಬಿಡಿ.ಇದನ್ನು ನಿಮ್ಮದೇ ಚಿತ್ತದೊಂದಿಗೆ ಚರ್ಚಿಸಿ.ನೀವು ಚರ್ಚಿಸಿದಾಗ, ಅದು ಒಂದು ದೃಷ್ಟಿಯಿಂದ ಸರಿಯೆಂದು ಕಾಣುತ್ತದೆ ಹಾಗೂ ಇನ್ನೊಂದು ದೃಷ್ಟಿಯಿಂದ ಅದು ತಪ್ಪೆಂದು ಕಾಣುತ್ತದೆ ಎಂಬುದನ್ನು ತಿಳಿಯುತ್ತೀರಿ.

ಪ್ರ: ಗುರೂಜಿ, ನಾವು ಭಗವಂತನಿಗೆ ಹೇಗೆ ಸಂಪೂರ್ಣವಾಗಿ ಶರಣಾಗಬಹುದು? ದಯವಿಟ್ಟು ವಿವರವಾಗಿ ಹೇಳಿ.
ಶ್ರೀ ಶ್ರೀ:
ಎಚ್ಚೆತ್ತು ನೋಡಿ ನಿಮ್ಮದೇನೂ ಇಲ್ಲ ಎಂದು; ನಿಮ್ಮಲ್ಲಿರುವ ಏನೂ ನಿಮಗೆ ಸೇರಿದ್ದಲ್ಲ, ಆಗ ನೀವು ಸಂಪೂರ್ಣವಾಗಿ ಶರಣಾಗುತ್ತೀರಿ.
ಅಥವಾ ನಿಮಗೆ ಸಿಕ್ಕಿರುವುದನ್ನೆಲ್ಲಾ ನೋಡಿ, ನಿಮಗೆ ಅರ್ಹತೆ ಇಲ್ಲದಾಗಲೂ ನಿಮಗೆ ದೊರಕಿರುವುದನ್ನು ನೋಡಿ, ಆಗ ನೀವು ಸಂಪೂರ್ಣವಾಗಿ ಶರಣಾಗುತ್ತೀರಿ.
’ನಾನು ಇಷ್ಟೊಂದಕ್ಕೆ ಅರ್ಹನಲ್ಲ,ಆದರೂ ನಾನು ಇಷ್ಟೆಲ್ಲಾ ಪಡೆದಿದ್ದೇನೆ’, ಎಂದು ಯೋಚಿಸುವುದರಿಂದ ನೀವು ಸಂಪೂರ್ಣ ಶರಣಾಗುತ್ತೀರಿ ಮತ್ತು ನಿಮ್ಮಲ್ಲಿ ಕೃತಜ್ಞತೆ ತಾನಾಗಿ ತುಳುಕುತ್ತದೆ.

ಪ್ರ: ಗುರೂಜಿ, ನಿಮ್ಮನ್ನು ಭೇಟಿಯಾದ ಮೇಲೂ ನಾನು ಸಂತೃಪ್ತನಾಗಿಲ್ಲ. ನಿಮ್ಮನ್ನು ಮತ್ತೆ ಮತ್ತೆ ಭೇಟಿಯಾಗಬೇಕೆಂದು ಇನ್ನೂ ಇಚ್ಚಿಸುತ್ತೇನೆ. ಮತ್ತೆ ಯಾವತ್ತೂ ನಿಮ್ಮನ್ನು ಭೇಟಿಯಾಗುವ ಇಚ್ಚೆ ಬಾರದಂತೆ ಹೇಗೆ ನನ್ನ ತುಂಬೆಲ್ಲಾ ನಿಮ್ಮನ್ನು ಇರಿಸಲಿ?
ಶ್ರೀ ಶ್ರೀ:
ಓ! ಇದನ್ನು ಹೇಗೆ ಮಾಡುವುದೆಂದು ನನಗೆ ತಿಳಿದಿಲ್ಲ. ಇವತ್ತಿನವರೆಗೆ ಇದು ಎಲ್ಲರೊಂದಿಗೂ ಆಗುತ್ತಿರುವುದನ್ನು ನಾನು ಕಂಡಿದ್ದೇನೆ; ಅದು ಭಕ್ತಿಯ ಚಿಹ್ನೆ.
ನೀವು ಒಂದು ರೀತಿಯಲ್ಲಿ ನೋಡಿದರೆ, ಭಕ್ತಿಯಲ್ಲಿ ತೃಪ್ತಿಯೆಂಬುದು ಇಲ್ಲ, ಮತ್ತೆ ಇನ್ನೊಂದು ರೀತಿಯಲ್ಲಿ ನೋಡಿದರೆ, ಈ ಜಗತ್ತಿನಲ್ಲಿ ಭಕ್ತಿಯಷ್ಟು ತೃಪ್ತಿ ನೀಡುವಂಥದ್ದು ಮತ್ತೊಂದಿಲ್ಲ.
ಅದಕ್ಕೆ ಕೊನೆಯಿಲ್ಲ, ಯಾಕೆಂದರೆ ಭಕ್ತಿಯ ಅರ್ಥವೇ ಎಂದೂ ಕ್ಷೀಣಗೊಳ್ಳದ ಪ್ರೀತಿ. ಆದ್ದರಿಂದ, ಅದು ಎಂದೂ ತೀರದ ತೃಷೆ ಹಾಗೂ ಎಂದು ಕೊನೆಗೊಳ್ಳದ ಪ್ರೀತಿ!

ಪ್ರ: ಪ್ರೀತಿಯ ಗುರೂಜಿ, ಅನಾದಿ ಕಾಲದಿಂದ ಇಂದಿನವರೆಗೆ ಇರುವುದು ಒಂದೇ ಪ್ರಜ್ಞೆಯಾಗಿರುವಾಗ, ಅದರಿಂದ ಮನುಷ್ಯ ಹೇಗೆ ಸೃಷ್ಟಿಯಾದ ಮತ್ತು ಏಕೆ? ಅದಕ್ಕೆ ಒಂದು ಕಾರಣವಿರಬೇಕು.
ಶ್ರೀ ಶ್ರೀ:
ಓ! ಅದು(ಪ್ರಜ್ಞ್ನೆ) ಒಂಟಿಯಾಗಿ ತನ್ನಷ್ಟಕ್ಕೇ ಇರುತ್ತಾ ಬೇಸರಗೊಂಡಿತು!ಹಾಗಾಗಿ ಅದು ಯ್ಚಿಸಿತು, ’ನಾನ ಅನೇಕವಾಗುತ್ತೇನೆ’. ಆ ಒಂದು ಪ್ರಜ್ಞೆಗೆ ಈ ಯೋಚನೆ ಬಂದು ಮತ್ತೆ ಎಲ್ಲವೂ ಇರುವಿಕೆಗೆ ಬಂತು.
ಈಗ ಇದು ಸರಿಯೋ ತಪ್ಪೋ, ನೀನು ನಿರ್ಧರಿಸು!

ಮಂಗಳವಾರ, ಜುಲೈ 17, 2012

ಶಿವಾನ೦ದ

ಜುಲೈ ೧೭, ೨೦೧೨

’ಅಮೃತಬಿ೦ದು’ ಸರಣಿಯ ಬರಹಗಳು

ಮೂರನೆಯ ಕ೦ತು

ವರ್ಣರಂಜಿತವಾದ ಆನಂದದಿಂದ ನಿಮ್ಮ ಚೈತನ್ಯವನ್ನು ಹೆಚ್ಚಿಸಿಕೊಳ್ಳಿ
(ಈ ಬರಹದ ಪ್ರಕಟಣೆ ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೭.೦೩.೦೩ರ೦ದು ಆರ೦ಭಗೊ೦ಡು ೩೦.೦೩.೦೩ರ೦ದು ಮುಕ್ತಾಯವಾಯಿತು)

ಪುರಾಣ ಎಂಬ ಶಬ್ದದ ಮೂಲ ಸಂಸ್ಕೃತದಲ್ಲಿ ’ಪುರೇ-ನವ’ ಎಂಬುದಾಗಿದೆ. ಎಂದರೆ ಪುರದಲ್ಲಿ (ನಗರದಲ್ಲಿ) ಯಾವುದು ಹೊಸದೋ (ನವ) ಅದು ಎಂಬುದು ಇದರ ಅರ್ಥ. ವಿಚಾರಗಳನ್ನು ತಿಳಿಸಲು ಅದೊಂದು ನವೀನವಾದ ಮಾರ್ಗ. ಪುರಾಣಗಳು ವರ್ಣರಂಜಿತ ದೃಷ್ಟಾಂತಗಳಿಂದ ಹಾಗೂ ಕಥೆಗಳಿಂದ ತುಂಬಿವೆ. ಮೇಲ್ನೋಟಕ್ಕೆ ಅವು ಕಾಲ್ಪನಿಕ ಕಟ್ಟುಕಥೆಗಳಂತೆ ಕಂಡುಬಂದರೂ, ಅವುಗಳಲ್ಲಿ ಸೂಕ್ಷ್ಮವಾದ ತತ್ವ (ಸತ್ಯ) ಅಡಗಿದೆ.
ಅಸುರರ ದೊರೆಯಾದ ಹಿರಣ್ಯಕಶಿಪುವು ಪ್ರತಿಯೊಬ್ಬರೂ ತನ್ನನ್ನು ಪೂಜಿಸಬೇಕೆಂದು ಬಯಸುತ್ತಿದ್ದ. ಅವನ ಮಗ ಪ್ರಹ್ಲಾದನಾದರೋ, ದೊರೆಯ ಆಜನ್ಮ ವೈರಿಯಾದ ನಾರಾಯಣನ ಪರಮ ಭಕ್ತನಾಗಿದ್ದ. ಇದರಿಂದಾಗಿ ಕೋಪಗೊಂಡ ದೊರೆಯು ಪ್ರಹ್ಲಾದನನ್ನು ನಿವಾರಿಸಿಕೊಳ್ಳಬೇಕೆಂದು ಇಚ್ಚಿಸಿ, ತನ್ನ ತಂಗಿಯಾದ ಹೋಲಿಕಾಗೆ ಅಗ್ನಿಯನ್ನೆದುರಿಸಿ ನಿಲ್ಲುವ ಶಕ್ತಿಯನ್ನು ನೀಡಿದ. ಅದರಂತೆ ಹೋಲಿಕಾ ತನ್ನ ಮಡಿಲಲ್ಲಿ ಪ್ರಹ್ಲಾದನನ್ನು ಕುಳ್ಳಿರಿಸಿಕೊಂಡು ಉರಿಯುತ್ತಿರುವ ಚಿತೆಯಲ್ಲಿ ಕುಳಿತು ಭಸ್ಮವಾದಳು. ಪ್ರಹ್ಲಾದ ಏನೂ ಆಗದವನ೦ತೆ, ಪೂರ್ಣ ಸುರಕ್ಷಿತನಾಗಿ, ಅಗ್ನಿಕು೦ಡದಿ೦ದೆದ್ದು ಹೊರಗೆ ಬಂದ.
ಈ ಕಥೆಯಲ್ಲಿ ಹಿರಣ್ಯಕಶಿಪುವು ಜಡವಾದ ಸ್ಥೂಲವಾದ ಐಹಿಕತೆಯ ಪ್ರತೀಕವೆನಿಸಿದರೆ, ಪ್ರಹ್ಲಾದನು ಮುಗ್ಧತೆಯ, ಶ್ರದ್ಧೆ ನಂಬಿಕೆ ಸಂತೋಷ ಆನಂದಗಳ ಸಾಕಾರನಾಗುತ್ತಾನೆ. ಚೇತನವು ಐಹಿಕವಾದುದರಲ್ಲಿ ಮಾತ್ರ ರುಚಿಯನ್ನು, ಪ್ರೀತಿಯನ್ನು ಕಾಣುವಂತಹ ಮಿತಿಗೊಳಪಡಲು ಸಾಧ್ಯವೇ ಇಲ್ಲ . ಹಿರಣ್ಯಕಶಿಪುವೇನೋ ಎಲ್ಲಾ ಸಂತೋಷಗಳನ್ನೂ ಐಹಿಕ ಪ್ರಪಂಚದಿಂದಲೇ ಬಯಸಿದ. ಆದರೆ ಅದು ಆ ರೀತಿ ನಡೆಯಲಿಲ್ಲ.
(ಇದು ೨೭.೦೩.೦೩ ರ೦ದು ಪ್ರಕಟವಾದ ಭಾಗ)

ಹಿಕವಾದುದು (ನಶ್ವರವಾದುದು) ಯಾವುದೇ ಒಂದು ಜೀವಾತ್ಮನನ್ನು ಸದಾಕಾಲಕ್ಕೂ ಪರಿಮಿತಿಗೊಳಪಡಿಸಲು ಸಾಧ್ಯವಿಲ್ಲ. ಕಟ್ಟಕಡೆಗೆ ನಾರಾಯಣನ (ಭಗವಂತನ) ಕಡೆಗೆ ಸಾಗುವುದು, ಯಾವುದೇ ಒಂದು ಉನ್ನತಾತ್ಮಕ್ಕಾದರೂ ತೀರಾ ಸಹಜವಾದುದು.
ಇಲ್ಲಿ ಹೋಲಿಕಾ ಭೂತಕಾಲದಲ್ಲಿ ಅನುಭವದ ಹೊರೆಗಳ ಪ್ರತೀಕವಾಗುತ್ತಾಳೆ. ಅದು ಪ್ರಹ್ಲಾದನನ್ನು ಎಂದರೆ ಮುಗ್ಧತೆ ಸಂತೋಷಗಳನ್ನು ನಾಶಮಾಡಲು ಪ್ರಯತ್ನಿಸುತ್ತದೆ. ಆದರೆ ಪ್ರಹ್ಲಾದನ ಅಂತರಾಳದಲ್ಲಿ ಬೇರೂರಿದ್ದ ಅಪಾರವಾದ ನಾರಾಯಣನ ಭಕ್ತಿಯು ಅವನ ಎಲ್ಲಾ ಪೂರ್ವ ಸಂಸ್ಕಾರಗಳನ್ನು ಭಸ್ಮ ಮಾಡಿ, ವರ್ಣರಂಜಿತವಾದ ಹೊಸ ಆನಂದದ ಚಿಲುಮೆಯು ಚಿಮ್ಮುವಂತೆ ಮಾಡಲು ಶಕ್ತವಾಗಿತ್ತು. ಜೀವನವೇ ಸಂಭ್ರಮದಿಂದ ತುಂಬಿದ ಉತ್ಸವವಾಯಿತು.
ಗತ ಸಂಸ್ಕಾರಗಳು ಭಸ್ಮವಾಗುತ್ತಿದ್ದಂತೆ ಜೀವನದಲ್ಲಿ ನೀನು ಶುಭಾರಂಭಕ್ಕೆ ಅಣಿಯಾಗಿಬಿಡುತ್ತೀಯ. ನಿನ್ನ ಭಾವೋದ್ವೇಗಗಳು ಅಗ್ನಿಯಂತೆ ನಿನ್ನನ್ನು ಸುಡುತ್ತವೆ. ಆದರೆ ಅವು ವರ್ಣರಂಜಿತ ಕಾರಂಜಿಯಾದಾಗ ಅವು ನಿನ್ನ ಜೀವನವನ್ನು ಚೆಲುವಾಗಿಸುತ್ತವೆ. ಅಜ್ಞಾನದಲ್ಲಿದ್ದಾಗ ಮನಸ್ಸಿನ ಭಾವನೆಗಳು ಹಿಂಸಿಸುತ್ತವೆ; ಸುಜ್ಞಾನದಿಂದ ತುಂಬಿದ್ದಾಗ ಅದೇ ಭಾವನೆಗಳು ರಂಗುರಂಗಾಗಿ ಮುದಗೊಳಿಸುತ್ತವೆ.
ನಮ್ಮ ಪ್ರತಿಯೊಂದು ಮನೋಭಾವನೆಯೂ ಒಂದೊಂದು ಬಣ್ಣದೊಂದಿಗೆ ಸಂಬಂಧವನ್ನು ಹೊಂದಿದೆ. ಕೋಪ - ಕೆಂಪು ವರ್ಣ, ಅಸೂಯೆ - ಹಸಿರು, ಚೈತನ್ಯ ಹಾಗೂ ಸಂತೋಷ - ಹಳದಿ, ಪ್ರೀತಿ- ಗುಲಾಬಿ ವರ್ಣ, ವೈಶಾಲ್ಯತೆ - ನೀಲಿ, ಶಾಂತಿ - ಬಿಳಿ, ತ್ಯಾಗ - ಕೇಸರಿ ಹಾಗೂ ಜ್ಞಾನ - ನೇರಳೆ ಬಣ್ಣ ಇತ್ಯಾದಿ.
ಜೀವನವು ಹೋಳಿಯಂತೆ ವರ್ಣಮಯವಾಗಿರಬೇಕು; ನೀರಸವಾಗಿರಬಾರದು. ಪ್ರತಿಯೊಂದು ಬಣ್ಣವೂ ನಿಚ್ಚಳವಾಗಿ ಕಾಣುವಂತಿದ್ದಾಗ ಅದು ವರ್ಣರಂಜಿತವಾಗಿರುತ್ತದೆ. ಎಲ್ಲಾ ಬಣ್ಣಗಳೂ ಮಿಶ್ರವಾಗಿಬಿಟ್ಟಾಗ ಕೊನೆಗೆ ಕಪ್ಪು (ಕತ್ತಲು) ನಿಮಗುಳಿಯುತ್ತದೆ.
(ಇದು ೨೮.೦೩.೦೩ ರ೦ದು ಪ್ರಕಟವಾದ ಭಾಗ) 

ದೇ ರೀತಿ ಜೀವನದಲ್ಲಿಯೂ ನಾವು ವಿಭಿನ್ನ ಪಾತ್ರ ನಿರ್ವಹಿಸುತ್ತೇವೆ. ಪ್ರತಿಯೊಂದು ಪಾತ್ರವೂ ಹಾಗೂ ಮನೋಭಾವವೂ ಶುದ್ಧವಾಗಿ, ಸ್ಪಷ್ಟವಾಗಿ ನಿರೂಪಿಸುವಂತಿರಬೇಕಾದುದು ಅತ್ಯವಶ್ಯಕ. ಭಾವನಾತ್ಮಕ ಗೊಂದಲಗಳು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ನೀನು ತಂದೆ ಆಗಿದ್ದಾಗ ತಂದೆಯ ಪಾತ್ರವನ್ನು ನಿರ್ವಹಿಸಬೇಕು. ನೀನು ಕಛೇರಿಯಲ್ಲಿದ್ದಾಗ ತಂದೆಯಂತೆ ಇರಲಾಗುವುದಿಲ್ಲ. ನಿನ್ನ ಜೀವನದಲ್ಲಿ ಈ ರೀತಿಯಾದ ನಿನ್ನ ವಿಭಿನ್ನ ಪಾತ್ರಗಳನ್ನು ಮಿಶ್ರ ಮಾಡಿಕೊಂಡಾಗ ನೀನು ತಪ್ಪುಗಳನ್ನು ಮಾಡಲು ಪ್ರಾರಂಭಿಸಿಬಿಡುವೆ. ಜೀವನದಲ್ಲಿ ನೀನು ಯಾವುದೇ ಪಾತ್ರ ಮಾಡುವಾಗಲೂ ನಿನ್ನನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೋ, ಅದನ್ನು ಪರಿಪೂರ್ಣವಾಗಿ ಮಾಡು.
ಎಲ್ಲಾ ವಿಭಿನ್ನತೆಯ ನಡುವೆಯೂ ಏರ್ಪಡುವ ಸಾಮರಸ್ಯವು ಜೀವನವನ್ನು ಚೈತನ್ಯಪೂರ್ಣ, ವರ್ಣರ೦ಜಿತ, ಸಂತೋಷಯುಕ್ತವನ್ನಾಗಿಸುತ್ತದೆ.
(ಇದು ೨೯.೦೩.೦೩ ರ೦ದು ಪ್ರಕಟವಾದ ಭಾಗ)

ಪುರಾಣದ ಒಂದು ಕಥೆ ಈ ರೀತಿಯಾಗಿದೆ.
ಶಿವನು ಸಮಾಧಿಯಲ್ಲಿ ಮಗ್ನನಾಗಿದ್ದು, ಪಾರ್ವತಿಯು ತಪಸ್ಸನ್ನಾಚರಿಸುತ್ತಿದ್ದ ಸನ್ನಿವೇಶ. ಎರಡು ದಿವ್ಯತೆಗಳ ದೈವಿಕವಾದ ಸಂಯೋಗವನ್ನು ಸುಗಮಗೊಳಿಸುವುದಕ್ಕಾಗಿ ಪ್ರೀತಿಯ ಅಧಿದೇವತೆಯಾದ ಮನ್ಮಥನು ಶಿವನಿಂದ ಭಸ್ಮಗೊಳಿಸಲ್ಪಟ್ಟು ಹತನಾಗುತ್ತಾನೆ. ಶಿವನು ಪಾರ್ವತಿಯನ್ನು ಸೇರುವುದಕ್ಕಾಗಿ ಹಾಗೂ ಸೃಷ್ಟಿಯಲ್ಲಿ ಸಂಭ್ರಮ ಉತ್ಸಾಹಗಳುಂಟಾಗುವಂತೆ ಮಾಡುವುದಕ್ಕಾಗಿ ತನ್ನ ಸಮಾಧಿ ಅವಸ್ಥೆಯಿಂದ ಹೊರಬರುತ್ತಾನೆ.
ಪರ್ವ ಎಂದರೆ ಹಬ್ಬ. ಪಾರ್ವತಿ ಎಂದರೆ ಹಬ್ಬ ಅಥವಾ ಸಂಭ್ರಮದಿಂದ ಜನಿಸಿದ್ದು ಎಂದರ್ಥ.
ಸಮಾಧಿಯು ಸಂಭ್ರಮದೊಡನೆ ಸಂಯೋಗ ಹೊಂದಲು (ಸೇರಲು) ಆಸೆಯು ಅವಶ್ಯಕ. ಆದ್ದರಿಂದ ಆಸೆಯು (ಕಾಮ) ಆಹ್ವಾನಿತವಾಯಿತು. ಆದರೆ ಮತ್ತೆ ಉತ್ಸಾಹ ಸಂಭ್ರಮಗಳಿಂದಿರಲು ಆಸೆಯನ್ನು ಗೆಲ್ಲಬೇಕಾದ ಅವಶ್ಯಕತೆಯಿದೆ. ಆದ್ದರಿಂದ ಶಿವ ತನ್ನ ಮೂರನೆಯ ಕಣ್ಣನ್ನು ತೆರೆದು ಕಾಮನನ್ನು ಭಸ್ಮಗೊಳಿಸಿದ. ಯಾವಾಗ ಮನದಲ್ಲಿ ಆಸೆ (ಬಯಕೆ) ಸುಟ್ಟುಹೋಯಿತೋ ಉತ್ಸಾಹ ಸಂಭ್ರಮಗಳು ತಾನೇ ತಾನಾಗಿ ಏರ್ಪಟ್ಟವು.
ವಿರಾಗ (ವೈರಾಗ್ಯ) ಅವಸ್ಥೆಯೆಂದರೆ ರಸವಿಹೀನವಾಗುವುದಲ್ಲ; ವರ್ಣಮಯತೆಯನ್ನು ಕಳೆದುಕೊಳ್ಳುವುದಲ್ಲ. ಎಷ್ಟೋ ಸಲ ಅದು ನೀರಸವೆಂದೋ, ಏಕತಾನತೆಯೆಂದೋ ತಿಳಿಯಲ್ಪಟ್ಟಿದೆ. ಆದರೆ, ವಾಸ್ತವವಾಗಿ ಅದು ಎಲ್ಲಾ ವರ್ಣಗಳಿಂದ ತುಂಬಿ ನವರಸಭರಿತವಾಗಿದೆ.
(ಇದು ೩೦.೦೩.೦೩ ರ೦ದು ಪ್ರಕಟವಾದ ಭಾಗ)

ಒಟ್ಟಾರೆಯಾಗಿ ಇದು ಒ೦ದು ಆ೦ಗ್ಲ ಲೇಖನದ ಕನ್ನಡಾನುವಾದ. ಆ೦ಗ್ಲ ಲೇಖನ ೨೦೦೩ರ ಮಾರ್ಚ್ ತಿ೦ಗಳಿನ ಹೋಳೀ ಹಬ್ಬದ ಸಂದರ್ಭದಲ್ಲಿ ’ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯಲ್ಲಿ ಪೂಜ್ಯ ಗುರೂಜಿಯವರ ಜ್ಞಾನಪತ್ರ ರೂಪದಲ್ಲಿ ಪ್ರಕಟವಾಗಿತ್ತು.

ಶನಿವಾರ, ಜುಲೈ 14, 2012

ಜ್ಞಾನ ಮಾರ್ಗ, ಸಾಕ್ಷೀಭಾವ, ಅಂತರ್ಮುಖಿ


14
2012............................... ’ಅಮೃತಬಿ೦ದು’ ಸರಣಿಯ ಬರಹಗಳು
Jul

ಎರಡನೆಯ ಕ೦ತು

ಜ್ಞಾನ  ಮಾರ್ಗ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೪.೦೩.೦೩ರ೦ದು ಪ್ರಕಟವಾಗಿತ್ತು)

ಜೀವನ ಅಂದರೆ ವಿವಿಧ ರೀತಿಯ ಅನುಭವಗಳು. ಈ ಅನುಭವಗಳ ಸರಣಿಯನ್ನೇ ಜೀವನ ಅನ್ನುತ್ತೀವಿ. ನದಿಯಲ್ಲಿ ಪ್ರತಿಕ್ಷಣಕ್ಕೂ ಹೊಸ ಹೊಸ ನೀರು ಹರಿಯುವ ಹಾಗೆ ಜೀವನದಲ್ಲಿ ಹೊಸ ಹೊಸ ಅನುಭವಗಳು ಪ್ರತಿಕ್ಷಣ ಬರುತ್ತೆ, ಹೋಗುತ್ತೆ, ಬರುತ್ತೆ, ಹೋಗುತ್ತೆ ಅಲ್ವಾ? ನಾವೇನು ಮಾಡ್ತೀವಿ, ಅನುಭವಗಳಲ್ಲೇ ಸಿಕ್ಕಿಹಾಕಿಕೊಂಡು ಬಿಡ್ತೀವಿ. ನೀರಿನಲ್ಲಿ ಸುಳಿ ಸುತ್ತುತ್ತಾ ಸುತ್ತುತ್ತಾ ಸಿಕ್ಕಿಹಾಕಿಕೊಂಡಂತೆ ನಮ್ಮ ಅನುಭವದ ಜೊತೆಗೇ ತಾದಾತ್ಮ್ಯ ಮಾಡಿಕೊಂಡು ಬಿಡುತ್ತೀವಿ. ಅನುಭವದ ಕರ್ತಾ ಯಾರು? ಯಾರು ಅನುಭವಿಸುತ್ತಾ ಇದ್ದಾರೆ? ಎನ್ನುವುದರ ಬಗ್ಗೆ ನೀವು ದೃಷ್ಟಿ ಹರಿಸಬೇಕು.
ಈಗ ನಿಮಗೆ ಚಿಂತೆ ಆಗಿದ್ದರೆ ಒಂದು ನಿಮಿಷ ಸುಮ್ಮನೆ ಕುಳಿತು, ಚಿಂತೆ ಆಗ್ತಾ ಇದೆ, ಯಾರಿಗೆ ಆಗ್ತಾ ಇದೆಯಪ್ಪ ಈ ಚಿಂತೆ ಎಂದು ಚಿಂತಿಸುವುದರಿ೦ದ ಆತ್ಮನ ಕಡೆಗೆ ಮನಸ್ಸು ಹರಿಯುತ್ತದೆ.
ಜಾಗೃತ ಅವಸ್ಥೆಯಲ್ಲಿ ನಮಗೆ ಚಿಂತೆ ಗೊತ್ತಾಗುವಂತೆ, ನಿದ್ರಾವಸ್ಥೆಯಲ್ಲಿ ಗೊತ್ತಾಗುವುದಿಲ್ಲ ಅಲ್ಲವೆ? ಏಕೆಂದರೆ, ನಿದ್ರೆಯಲ್ಲಿ ನಾವು ಅನುಭವದಿಂದ ಹೊರಬಿದ್ದು ಅನುಭವಕರ್ತಾನಲ್ಲಿ - ಎಂದರೆ ನಮ್ಮ ಕೇಂದ್ರದಲ್ಲಿರ್ತೀವಿ. ಅಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತೀವಿ. ಇದನ್ನು ಜಾಗೃತ ಅವಸ್ಥೆಯಲ್ಲೂ ನಾವು ಅರಿವಿಗೆ ತಂದುಕೋಬೇಕು.

* * * * *

ಸಾಕ್ಷೀಭಾವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೫.೦೩.೦೩ರ೦ದು ಪ್ರಕಟವಾಗಿತ್ತು)

ಗ ಹಸಿವಾಗ್ತಾ ಇದೆ. 'ಯಾರಿಗೆ ಆಗ್ತಾ ಇದೆ ಹಸಿವು?' ಎಂದುಕೊಂಡಾಗ ಏನಾಗುತ್ತೆ? ನಮ್ಮ ಹಸಿವಿಗೂ ನಮಗೂ ಸಾಕ್ಷೀಭಾವ ಉಂಟಾಗುತ್ತೆ. 'ಶರೀರದಲ್ಲಿ ಹಸಿವಾಗ್ತಾ ಇದೆ. ನನಗೇನು ಆಗುತ್ತಾ ಇಲ್ಲಪ್ಪ' ಅನ್ನಿಸುತ್ತೆ.
ಎಷ್ಟೋ ಸಲ ಏನನಿಸುತ್ತೆ? 'ಎಲ್ಲರಿಗೂ ವಯಸಾಗ್ತಾ ಇದೆ, ನಾನು ಹೇಗಿದ್ದೆನೋ ಹಾಗೆಯೇ ಇದ್ದೇನೆ. ನಮ್ಮ ಕಣ್ಣೆದುರಿಗಿನ ಚಿಕ್ಕ ಮಕ್ಕಳೆಲ್ಲಾ ದೊಡ್ಡವರಾಗ್ತಾ ಇದ್ದಾರೆ, ಮಿಕ್ಕವರಿಗೆಲ್ಲಾ ವಯಸ್ಸಾಗ್ತಿದೆ. ಅದೇ ನನಗೆ ಮಾತ್ರ ವಯಸ್ಸಾಗಿಲ್ಲ, ಏನೂ ಆಗಿಲ್ಲ...ನಾನು ಇರುವಂತೆಯೇ ಇದ್ದೀನಿ'.
ಇಂತಹ ಅನುಭವ ನಿಮಗೆ ಆಗಿದೆಯೋ ಇಲ್ಲವೋ?
ನಮ್ಮಲ್ಲಿರುವ ಚೇತನಕ್ಕೆ ವಯಸ್ಸಾಗುವುದಿಲ್ಲ, ಅದು ಅಜರ. ಹಾಗೆಯೇ ಯಾರೋ ಸತ್ತರು ಎಂದರೆ ’ಅಯ್ಯೋ ಪಾಪ ಹೋಗಿ ಬಿಟ್ಟರು’ ಅನಿಸುತ್ತದೆ. ಅದೇ ರೀತಿ 'ಒಂದು ದಿನ ನಾನೂ ಸಾಯ್ತೀನಿ' ಎಂಬ ಅನಿಸಿಕೆಯೇ ಉಂಟಾಗೋದಿಲ್ಲ.
ಏಕೆ? ನಮಗೆ ಸಾವಿಲ್ಲ, ಅಜರ, ಅಮರ. 'ಆ ನಾನು ಯಾರು' ಅಂತ ಮತ್ತೆ ಮತ್ತೆ ಕೇಳಿಕೊಳ್ಳಿ.
ದುಃಖಿಯಾಗಿದ್ದರೆ..'ಯಾರು ದುಃಖಿಯಾಗಿದ್ದಾರೆ? ಯಾರಿಗೆ ಈ ಅನುಭವ ಆಗ್ತಾ ಇದೆ?' ಅಂತ ಕೇಳಿಕೊಳ್ಳಿ. ಆಗ ನೀವು ಸಾಕ್ಷಿತ್ವಕ್ಕೆ ಬರುತ್ತೀರಿ.ದುಃಖದಿಂದ ದೂರವಾಗ್ತೀರಿ. ಅನೇಕ ಮಾರ್ಗಗಳಲ್ಲಿ ಅದೊಂದು ಮಾರ್ಗ, ಇದು ಜ್ಞಾನದ ಮಾರ್ಗ.

* * * * *

ಅಂತರ್ಮುಖಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೬.೦೩.೦೩ರ೦ದು ಪ್ರಕಟವಾಗಿತ್ತು)

ನಿಮ್ಮ ಪ್ರಜ್ಞೆಯನ್ನು ’ಅನುಭವ’ದ ಕಡೆಯಿಂದ ಅನುಭವಿಸುವವನ ಕಡೆಗೆ ವರ್ಗಾಯಿಸಿಕೊಳ್ಳಿ. ಎಲ್ಲಾ ಅನುಭವಗಳೂ ವೃತ್ತದ ಮೇಲಿನ ಪರಿಧಿಯಲ್ಲಿರುವುವು, ಅವು ಬದಲಾಗುತ್ತಲೇ ಇರುತ್ತವೆ. ಯಾವುದೇ ಬದಲಾವಣೆಗೊಳಗಾಗದ ಭೋಕ್ತಾ (ಅನುಭವಿಸುವವನು) ಕೇಂದ್ರದಲ್ಲಿರುತ್ತಾನೆ. ಮತ್ತೆ ಮತ್ತೆ ನಿಮ್ಮದೇ ಕೇಂದ್ರದಲ್ಲಿರುವ ಅನುಭವಿಯ ಕಡೆಗೆ ಹಿಂದಿರುಗಿ.
ಒಂದು ವೇಳೆ ಹತಾಶರಾಗಿದ್ದರೆ ಆ ಹತಾಶೆಯ ಅನುಭವದಲ್ಲಿಯೇ ನಿಮ್ಮ ವೇಳೆಯನ್ನೆಲ್ಲಾ ಕಳೆಯದೆ, ಅದರ ಬದಲು "ಹತಾಶೆ ಯಾರಿಗಾಗಿದೆ?" ಎಂದು ಪ್ರಶ್ನಿಸಿಕೊಳ್ಳಿ.
ನೀವು ದುಃಖಿಗಳಾಗಿದ್ದಾಗ ಪ್ರಶ್ನಿಸಿಕೊಳ್ಳಿ "ದುಃಖ ಯಾರಿಗಾಗಿದೆ?" ಎಂದು.
ನಿಮಗೆ ಏನಾದರೂ ಗೊತ್ತು ಎಂದುಕೊಂಡಾಗ ಕೇಳಿಕೊಳ್ಳಿ "ಯಾರಿಗೆ ಗೊತ್ತು?" ಎಂದು.
ನೀವು ಆತ್ಮಜ್ಞಾನಿ ಎಂದು ಅನಿಸಿದಾಗ ಪ್ರಶ್ನಿಸಿಕೊಳ್ಳಿ "ಯಾರದು ಆತ್ಮಜ್ಞಾನಿಯಾಗಿರುವವನು?" ಎಂದು. ನೀವು ಅಜ್ಞಾನಿಯೆಂದು ಚಿಂತಿಸಿದಾಗ ಕೇಳಿಕೊಳ್ಳಿ "ಯಾರು ಅಜ್ಞಾನಿ?" ಎಂದು.
ನಿಮ್ಮ ಬಗ್ಗೆಯೇ ನಿಮಗೆ ಅಯ್ಯೋಪಾಪ! ಎನಿಸಿದಾಗ ನಿಮ್ಮನ್ನೇ ಕೇಳಿಕೊಳ್ಳಿರಿ "ಯಾರದು ’ಪಾಪದವರು’" ಎಂದು. ನೀವು ತುಂಬಾ ಭಕ್ತರೆಂದುಕೊಂಡಾಗ ಪ್ರಶ್ನಿಸಿಕೊಳ್ಳಿ “ಯಾರು ಭಕ್ತಿಯುಳ್ಳವರು?” ಎಂದು.
ಈ ರೀತಿಯಾಗಿ ನಿಮ್ಮ ವಿಭಿನ್ನ ರೀತಿಯ ಮುಖಗಳಿಂದ ಮುಕ್ತರಾಗಿ (ಕಳಚಿಕೊಂಡು) ಆತ್ಮನನ್ನು ಸಂಧಿಸಿ. ಆಗ ನಿಜವಾಗಿಯೂ ನೀವು (ಭಗವಂತನ ಜೊತೆಯಲ್ಲಿರುತ್ತೀರಿ) ಅಂತರ್ಮುಖಿಗಳಾಗಿ ನಿಮ್ಮ ಕೇಂದ್ರದಲ್ಲಿರುತ್ತೀರಿ.

ಶುಕ್ರವಾರ, ಜುಲೈ 13, 2012

ಕಲೆಯನ್ನು ಅರ್ಥೈಸೋಣ

13
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ತ್ತಲೆ ಕುರಿತು ಮಾತನಾಡಲು ನೀವೇಕೆ ಇಚ್ಚಿಸುತ್ತೀರಿ?
ಬ್ರಹ್ಮಾಂಡವೆಲ್ಲಾ ಕತ್ತಲಿನಿಂದ ಆವರಿಸಲ್ಪಟ್ಟಿದೆ - ನಿಗೂಢ ಶಕ್ತಿ(ಡಾರ್ಕ್ ಎನರ್ಜಿ) ಮತ್ತು ನಿಗೂಢದ್ರವ್ಯ(ಡಾರ್ಕ್ ಮ್ಯಾಟರ್). ಇಂದಿನ ವಿಜ್ಞಾನಿಗಳು ಹೇಳುತ್ತಾರೆ, ನಿಮಗೆ ಇಂದು ಕಾಣುವ ಬೆಳಕು ಕೇವಲ ಒಂದು ಚುಕ್ಕೆ; ಅದು ನೀರಿನ ಬಾಟಲಿಯಲ್ಲಿನ ಗುಳ್ಳೆಯಂತೆ.ಬೆಳಕು ನೀರಿನ ಬಾಟಲಿಯಲ್ಲಿನ ಗುಳ್ಳೆಯಂತೆ.ಆದರೆ ನೀರು ನಿಜವಾದ ವಸ್ತು.ಗುಳ್ಳೆ ಸುಮ್ಮನೆ ಕಾಣಿಸಿಕೊಳ್ಳುವುದಷ್ಟೆ.ಅದು ನಿಜವಾದ ವಸ್ತುವಲ್ಲ.
ಹಾಗಾಗಿ ನಮಗೆ ಕಾಣಿಸುವ ಸೂರ್ಯ ಖಂಡಿತ ಶಕ್ತಿಯ ಮೂಲ. ಆದರೆ ವಿಜ್ಞಾನಿಗಳು ಹೇಳುವುದು, ಆ ಸೂರ್ಯನನ್ನು ಧೃಢವಾಗಿ, ಗೋಲಾಕಾರದಲ್ಲಿ ಇಡುವಂಥದ್ದು ಅದರ ಸುತ್ತಲಿನ ನಿಗೂಢಶಕ್ತಿ.ಹಾಗೆ ನಿಗೂಢದ್ರವ್ಯ ಮತ್ತು ನಿಗೂಢಶಕ್ತಿ ಸೂರ್ಯನಿಗಿಂತ ಮಿಲಿಯಗಟ್ಟಲೆ ಪಾಲು ಹೆಚ್ಚು ಶಕ್ತಿಯುತ.

ನೀರಿನ ಬಾಟಲಿಯೊಳಗಿನ ಗಾಳಿಯ ಗುಳ್ಳೆಯು ನೀರಿನ ಎಲ್ಲಾ ಕಣಗಳ ಒತ್ತಡದಿಂದ ಬಂಧಿಸಲ್ಪಟ್ಟಂತೆ, ಪೂರ್ಣ ಬ್ರಹ್ಮಾಂಡವು ನಿಮಗೆ ಅರಿವಿಲ್ಲದ, ಗೋಚರವಾಗದ ಶಕ್ತಿಯಿಂದ ತುಂಬಿದೆ.ಮತ್ತೆ ನೀವು ಅಲ್ಲಿ ಏನೂ ಇಲ್ಲ ಅಂದುಕೊಳ್ಳುತ್ತೀರಿ.

ವಿಜ್ಞಾನಿಗಳು ಹೇಳುವಂತೆ ಕಪ್ಪು ಕುಳಿಗಳು(ಬ್ಲ್ಯಾಕ್ ಹೋಲ್ಸ್) ಸೂರ್ಯನನ್ನೇ ನುಂಗಿ ಬಿಡಬಹುದು.  ನಮ್ಮ ಭೂಮಿ, ಆ ಸೂರ್ಯ ಮತ್ತು ಸೌರವ್ಯೂಹ ಬೃಹತ್ ಕಪ್ಪು ಕುಳಿಗಳಿಂದ ತಪ್ಪಿಸಿ ಅವುಗಳ ನಡುವಿನ ಸಂಧಿಯಲ್ಲಿ ಚಲಿಸುತ್ತಿವೆ.
ಬ್ರಹ್ಮಾಂಡದಲ್ಲಿ ಹಲವಾರು ಕಪ್ಪು ಕುಳಿಗಳಿವೆ, ಸೂರ್ಯ ಸ್ವಲ್ಪವಾದರೂ ಅದರ ಹತ್ತಿರ ಸುಳಿದರೆ, ಅದು ಸೂರ್ಯನನ್ನು ಪೂರ್ತಿಯಾಗಿ ಸೆಳೆದುಕೊಳ್ಳುತ್ತದೆ ಮತ್ತೆ ಅದು ಎಲ್ಲಿ ಮರೆಯಾಗುತ್ತದೆಂಬುದು ಯಾರಿಗೂ ತಿಳಿಯದು. ಹಾಗೆ ಸಂಪೂರ್ಣ ಜಗತ್ತು ಈ ಅಗೋಚರ ಶಕ್ತಿಯಿಂದ ತುಂಬಿದೆ, ಆದ್ದರಿಂದ ಅದನ್ನು ನಿಗೂಢಶಕ್ತಿ ಅಥವಾ ನಿಗೂಢದ್ರವ್ಯ ಎಂದು ಕರೆಯುವುದು.

ಪ್ರ: ಕಲೆ ಎಂದರೇನು? ಕವಿತೆ ಎಲ್ಲಿಂದ ಸೃಜನವಾಗುವುದು ಮತ್ತು ಅದು ಏನು ಮಾಡುತ್ತದೆ?
ಶ್ರೀ ಶ್ರೀ:
ಓ! ನೀವು ಮೆಚ್ಚಿಕೊಳ್ಳುವಂಥದ್ದೆಲ್ಲಾ ಕಲೆಯಾಗುತ್ತದೆ.ನೀವೆಲ್ಲೋ ಕಲ್ಲುಗಳ ರಾಶಿಯನ್ನು ನೋಡಿ ಅದು ಕೇವಲ ಕಲ್ಲುಗಳ ರಾಶಿ ಎಂದು ಯೋಚಿಸುತ್ತೀರಿ.ಆದರೆ ಅದು ಸ್ವಲ್ಪ ಕ್ರಮವಾಗಿಡಲ್ಪಟ್ಟರೆ, ನೀವು ಅದನ್ನು ಮೆಚ್ಚಲಾರಂಭಿಸುತ್ತೀರಿ.ಆಗ ಅದು ಒಂದು ಕಲೆಯಾಗುತ್ತದೆ.
ಒಂದು ಕಾಗದದ ಹಾಳೆಯಲ್ಲಿ ನೀವು ಬಣ್ಣಗಳನ್ನು ಚಿಮುಕಿಸಿ ಅಥವಾ ಎರಚಿ ಮತ್ತೆ ಅದನ್ನು ಚಿತ್ರಕಲೆಯೆಂದು ಮೆಚ್ಚಿಕೊಂಡಾಗ ಅದು ಒಂದು ಕಲೆಯಾಗುತ್ತದೆ.ಅದು ನಿಮಗೊಂದು ಅರ್ಥ ನೀಡುತ್ತದೆ ಅಲ್ಲವೇ?ಮತ್ತೆ ಕವಿತೆಯು ಮನಸ್ಸಿನ ಒಂದು ಸೂಕ್ಷ್ಮ ಮಟ್ಟದಿಂದ ಬರುತದೆ.ನಿಮ್ಮ ಉಸಿರು ಒಂದು ನಿರ್ದಿಷ್ಠ ಲಯದಲ್ಲಿ ಹರಿದಾಗ, ನಿಮ್ಮಲ್ಲಿನ ಒಂದು ನಿರ್ದಿಷ್ಠ ನಾಡಿ ತೆರೆದಾಗ, ಆ ನಿರ್ದಿಷ್ಠ ಕ್ಷಣದಲ್ಲಿ, ನಿಮ್ಮೊಳಗೆ ಸೃಜನವಾಗಿ ನೀವು ಬರೆಯುತ್ತೀರಿ.ಹಾಗಿರುವಾಗ ಪದಗಳು ಪ್ರಾಸವಾಗುತ್ತವೆ. ಹಾಗಾಗಿ ಅದೊಂದು ವರ! ಕಲ್ಪನೆಯೊಂದು ವರ.

ಇದೆಲ್ಲಾ ಪ್ರಜ್ಞೆಯು ಹೇಗೆ ತನ್ನನ್ನು ಅಭಿವ್ಯಕ್ತಪಡಿಸುತ್ತದೆ ಎಂಬುದರಲ್ಲಿದೆ; ನಿಮ್ಮ ಮನಸ್ಸು ಹೇಗೆ ತನ್ನನ್ನು ಅಭಿವ್ಯಕ್ತಪಡಿಸುತ್ತದೆ.ಮತ್ತೆ ನೀವು ಅದನ್ನು ಮೆಚ್ಚಿದಾಗ, ಅದು ಕಲೆಯಾಗುತ್ತದೆ.
ನಿವು ಅದನ್ನು ಮೆಚ್ಚದೇ ಸುಮ್ಮನೆ ಕೆಲವು ಪದಗಳನ್ನು ಹೇಳಿದರೆ, ಅದು ಕಲೆಯಲ್ಲ. ನೋಡಿ ಆಧ್ಹುನಿಕ ಕವಿತೆಯನ್ನು ಮೆಚ್ಚಲು ಒಂದು ಮಟ್ಟದ ಬುದ್ಧಿಮತ್ತೆ ಅವಶ್ಯಕ.
ನೀವು ಆಧುನಿಕ ಕವಿತೆಯನ್ನು ಓದಿದ್ದೀರಾ?ನಿಮಗಾಗಿ ಒಂದು ಕವಿತೆ ಓದೋಣ.

ಎಲೆಯು ನೆಲದಿ ಕದಡಿತು; ನೀರು ಅದನೆತ್ತಿ ಸಾಗಿತು.

ಅಷ್ಟೇ. (ನಗು)

ನೀವು ಅದರಲ್ಲಿ ಪದಗಳನ್ನು ಜೋಡಿಸುವ ರೀತಿ - ಎಲೆಯು ನೆಲದಿ ಕದಡಿತು; ನೀರು ಅದನೆತ್ತಿ ಸಾಗಿತು - ಇದು ಕವಿತೆ.

ಈಗ ಇದರಲ್ಲಿ ಒಂದೇ ಸಲಕ್ಕೆ ಹಲವಾರು ಅರ್ಥಗಳನ್ನು ಕಾಣಬಹುದು.
ಎಲೆಯೊಂದು ನೆಲದ ಮೇಲಿತ್ತೋ ಅಥವಾ ಗಾಳಿಯಲ್ಲಿ ತೇಲಿ ನೆಲಕ್ಕೆ ಬಂತೋ..ಅಂದರೆ ಅದು ನಿರ್ಜೀವವಾಗುತ್ತಿರಬಹುದು.ಅದು ನೆಲಕ್ಕೆ ಬಿದ್ದಾಗ ಅದನ್ನು ಪ್ರೇಮ ಎತ್ತಿ ಸಾಗುತ್ತಿದೆ- ನೀರು ಪ್ರೇಮಕ್ಕೆ ಸಮಾನಾರ್ಥಕವಾಗಿದೆ.
ನೀರು ಅದನೆತ್ತಿ ಸಾಗುತ್ತಿದೆ, ಹೌದು! ಅಂದರೆ ಪ್ರತಿ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾಕಿರಣವಿದೆ ಎಂಬ ಅರ್ಥವಿರಬಹುದು.
ಆದ್ದರಿಂದ ನೀವು ಇದನ್ನು ವಿಧ ವಿಧವಾಗಿ ಅರ್ಥೈಸಿಕೊಳ್ಳಬಹುದು.ಕವಿತೆಯ ಗುಣವದು.ಪದಗಳು ಭಾವನೆಗಳನ್ನು ಸ್ವಲ್ಪ ತೆರೆದಿಟ್ಟು, ಸ್ವಲ್ಪ ಗೂಢವಾಗಿಟ್ಟು ಸಾಗುತ್ತವೆ.
ಕವಿತೆ ಎಂಬುದು ಭಾವನೆಗಳು ಧರಿಸಿದ ಪದಗಳು, ಸ್ವಲ್ಪ ತೆರೆದಿಟ್ಟ ಮತ್ತು ಸ್ವಲ್ಪ ಮರೆಯಲ್ಲಿರುವ ಭಾವನೆಗಳು..ಸ್ವಲ್ಪ ಸ್ಥೂಲ, ಸ್ವಲ್ಪ ಸೂಕ್ಷ್ಮ.

ಒಬ್ಬ ಕವಿ ದೇವರಿಗೆ ಹೇಳಿದನು, ’ನೀನು ಪ್ರಪಂಚವನ್ನು ಆಳುತ್ತಿದ್ದಿ.ಆದರೆ ಅದನ್ನು ಇನ್ನೂ ಸ್ಪಷ್ಟಪಡಿಸು’(ನಗು).
ಯಾರಿಗೆ ಇದು ವ್ಯಕ್ತವೋ ಅವರು ಸನ್ಯಾಸಿ(ಸಾಧು)ಗಳಾದರು. ಯಾರಿಗೆ ನೀನು(ದೇವರು) ಪ್ರಪಂಚವನ್ನು ಆಳುತ್ತಿರುವುದು ಅರಿಯದೋ, ಅವರು ಒದ್ದಾಡುತ್ತಾರೆ. ಇದನ್ನು ನೀವು ಈ ರೀತಿ ಅರ್ಥಮಾಡಿಕೊಳ್ಳಬಹುದು ಅಲ್ಲವೆ?!

ನಿಮ್ಮನ್ನು ಯಾರಾದರೂ ಮೆಚ್ಚಿದರೆ ’ಓ, ಆ ವ್ಯಕ್ತಿ ನನಗೆ ಗಾಳಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳುತ್ತೀರಿ.ಅವರು ನಿಮ್ಮನ್ನು ಮೆಚ್ಚದಿದ್ದರೆ, ’ಅವರಿಗೆ ಹೊಟ್ಟೆ ಕಿಚ್ಚು’ ಎಂದು ಭಾವಿಸುತ್ತೀರಿ.ಅದೇ ರೀತಿ ನೀವು ಶ್ರೀಮಂತರಾಗಿದ್ದರೆ, ನೀವು ಯೋಚಿಸುತ್ತೀರಿ, ’ನಾನು ಶ್ರೀಮಂತನಾಗಿರುವುದರಿಂದ ಅವರು ನನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ಅವರು ನನ್ನ ಜೇಬಿನ ಮೇಲೆ ಆಸಕ್ತರು.’ ಅವರು ನಿಮ್ಮನ್ನು ಸತ್ಕರಿಸದಿದ್ದರೆ, ಅವರಿಗೆ ಅಹಂಕಾರ, ಅಸೂಯೆ ಎಂದು ನೀವು ಹೇಳುತ್ತೀರಿ.ಅಬ್ಬಾ ದೇವರೇ!ಮನಸ್ಸು ಎಷ್ಟೊಂದು ಸಂಚುಗಳನ್ನಾಡುತ್ತದೆ.

ಹಾಗೆಯೇ ಒಬ್ಬರು ಕಾರ್ಮಿಕ ಸಂಘ ಮನೋಭಾವಕ್ಕೆ ಹೋಗಬಹುದು.ಕಾರ್ಮಿಕ ಸಂಘ ಮನೋಭಾವ ಎಂದರೇನು ಗೊತ್ತಾ? ’ನಾನು ಯಾರ ಮಾತನ್ನೂ ಕೇಳುವುದಿಲ್ಲ! ಎಲ್ಲರೂ ನನ್ನ ವಿರುದ್ಧ ನಿಂತಿದ್ದಾರೆ.’ ಯಾರು ನಿಮ್ಮ ವಿರುದ್ಧವಾಗಿದ್ದರೆ?!ಮನಸ್ಸು ಅದರ ಬಗ್ಗೆ ಒಂದು ದೊಡ್ಡ ಭ್ರಮೆಯನ್ನೇ ರಚಿಸುತ್ತದೆ. ’ಯಾರೋ ನನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ನನ್ನನ್ನು ಆಳಲು ಮತ್ತು ಪೀಡಿಸಲು  ಪ್ರಯತ್ನಿಸುತ್ತಿದ್ದಾರೆ.’

ಒಮ್ಮೆ ಒಬ್ಬರು ನನ್ನ ಬಳಿ ಬಂದು ಹೇಳಿದರು ’ಕಛೇರಿಯಲ್ಲಿ ಎಲ್ಲರೂ ನನ್ನನ್ನು ಪೀಡಿಸುತ್ತಿದ್ದಾರೆ.’ ಎಲ್ಲರೂ ನಿಮ್ಮನ್ನು ಹೇಗೆ ಪೀಡಿಸಬಹುದು? ನೀವು ನಿಜವಾಗಿ ಏನೋ ಘೋರ(ಅಸಹನೀಯ)ವಾದದ್ದು ಮಾಡುತ್ತಿರಬೇಕು. ’ಕಛೇರಿಯಲ್ಲಿ ಎಲ್ಲರೂ ನನ್ನನ್ನು ಪೀಡಿಸುತ್ತಿದ್ದಾರೆ’- ಇದು ಕಾರ್ಮಿಕ ಸಂಘ ಮನೋಭಾವ. ಒಬ್ಬರಿಗೆ ತಮ್ಮ ಬಗ್ಗೆ ನೆಮ್ಮದಿ ಅನಿಸುವುದಿಲ್ಲ, ಹಾಗಾಗಿ ಅವರು ಅದನ್ನು ಉಳಿದವರ ಮೇಲೆ ಹೇರುತ್ತಾರೆ, ’ಎಲ್ಲರೂ ಕೆಟ್ಟವರು. ಎಲ್ಲರೂ ನನ್ನನ್ನು ಗುರಿಪಡಿಸುತ್ತಿದ್ದಾರೆ!’ ಯಾರು ನಿಮ್ಮನ್ನು ಗುರಿಪಡಿಸುತ್ತಿದ್ದಾರೆ?ನಿಮ್ಮನ್ನು ಪೀಡಿಸಿ, ದುಃಖಿಸಿ ಅವರಿಗೇನು ಸಿಗುತ್ತದೆ?ನಿಮ್ಮನ್ನು ನೀವೇ ದೀನತೆಗೆ,ಸಂಕಷ್ಟಕ್ಕೆ ಈಡು ಮಾಡುತ್ತಿದ್ದೀರಿ. ತಿಳಿಯಿತೇ?

ಬಹಳ ಸಂಸ್ಥೆಗಳಲ್ಲಿ, ಇಂಥ ಒಂದು ನಿರ್ವಾಹಕ ಕೂತಿರುವುದರಿಂದ, ಅಲ್ಲಿಯ ಸಿಬಂದಿ ವರ್ಗ ಕಷ್ಟ ಅನುಭವಿಸುತ್ತದೆ.ಅವನು ತನ್ನ ಶಕ್ತಿಯನ್ನು ತೋರಿಸಬೇಕೆಂದು ಎಲ್ಲಾ ರೀತಿಯ ಸಂಚುಗಳನ್ನು ಆಡುತ್ತಾನೆ.ತಾನು ಕುಳಿತಿರುವಂಥ ಮರವನ್ನು ಕಡಿಯುತ್ತಿದ್ದೇನೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ.

ಇಂಥ ಜನರಿದ್ದಾರೆ.ವರ್ಲ್ಡ್ ಬ್ಯಾಂಕ್.ಗೆ ಜೀವನ ಕಲೆಯ ಇಬ್ಬರು ಶಿಕ್ಷಕರು ಹೋಗಿ ಟಿ.ಎಲ್.ಇ.ಎಕ್ಸ್(TLEX) ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ಇಂಥ ಹಲವು ವಿಷಯಗಳು ಮೂಡಿ ಬಂದವು.ಅಲ್ಲವೇ?ಈಗ ಅವರಲ್ಲಿ ಸಂಪೂರ್ಣ ಬದಲಾವಣೆ ಇದೆ, ಕೇವಲ 3 ದಿನಗಳಲ್ಲಿ, 3 ಘಂಟೆ ಪ್ರತಿದಿನದಂತೆ.ಮತ್ತು ವರ್ಲ್ಡ್ ಬ್ಯಾಂಕ್.ನ ಎಲ್ಲಾ ಸಿಬಂದಿಗಳು ಈ ಶಿಬಿರವನ್ನು ಮಾಡಬೇಕು ಎಂದು ಹೇಳಿದ್ದಾರೆ.ಜೀವನ ಕಲೆಯ TLEX ಕಾರ್ಯಕ್ರಮವನ್ನು ಅವರು ತಮ್ಮ ಮುಖಂಡ ತರಬೇತಿ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.

ಅವರು ಆಫ಼್ರಿಕಾ ಮತ್ತು ವಿವಿಧ ದೇಶಗಳಲ್ಲಿ, ಮುಖಂಡರು ಸುದರ್ಶನಕ್ರಿಯೆಯನ್ನು ಮಾಡಬೇಕೆಂದೂ ಹೇಳಿದ್ದಾರೆ.ಅದಕ್ಕೆ ದೀರ್ಘ(ಶಿಬಿರದಲ್ಲಿ ಮಾಡಿಸುವಂಥ) ಕ್ರಿಯಾ ಅಜೀರ್ಣವಾಗುವುದರಿಂದ, ಲಘು (ಮನೆಯಲ್ಲಿ ಮಾಡುವಂಥ) ಸುದರ್ಶನ ಕ್ರಿಯೆಯನ್ನು ಅಳವಡಿಸಿದ್ದೇನೆ.ಇದು ಜನರ ಮನಮುಟ್ಟಿ ಅವರನ್ನು ಜಾಗೃತಗೊಳಿಸುತ್ತಿದೆ.ಇದಿಲ್ಲದೆ ಬಹಳ ದೇಶಗಳಲ್ಲಿ ಜನರು ಅನ್ಯರಿಂದ ಮೋಸಕ್ಕೊಳಗಾಗಿರುವ ಪ್ರಜ್ಞೆ ಹೊಂದಿದ್ದಾರೆ.

ಮೋಸಕ್ಕೆ ತುತ್ತಾದ ಪ್ರಜ್ಞೆ ಈ ಜಗತ್ತನ್ನು ಮತ್ತೆ ಮತ್ತೆ ಕಾಡುತ್ತದೆ ಮತ್ತು ಅದರಿಂದಾಗಿಬಹಳ ದೇಶಗಳು ಬಡವಾಗಿ ಉಳಿಯುತ್ತವೆ.ಯಾಕೆಂದರೆ ಅಲ್ಲಿ ಜನರು ’ನಾನು ಬಲಿಪಶು’ ಎಂದು ಯೋಚಿಸುತ್ತಾರೆ.ನೀವೊಬ್ಬ ಮೋಸಕ್ಕೀಡಾದ ವ್ಯಕ್ತಿ ಎಂದು ನೀವು ಯೋಚಿಸಿದಾಗ ನಿಮ್ಮಲ್ಲಿ ಬಲವಿರುವುದಿಲ್ಲ ಮತ್ತು ನಿಶ್ಶಕ್ತ ಭಾವನೆ ಮೂಡುತ್ತದೆ.

ಮಹಿಳಾ ಸಶಕ್ತೀಕರಣದಲ್ಲೂ ಇದೇ.ನಿಮ್ಮನ್ನು ಸಶಕ್ತೀಕರಿಸಲು ಯಾರನ್ನೂ ಕೇಳಿಕೊಳ್ಳಬೇಡಿ.ನಿಮಗೊಂದು ಸ್ಥಾನವಿದೆ, ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಿ.ಜನರಲ್ಲಿ ಹೋಗಿ ’ನೀವು ನಮ್ಮನ್ನು ಸಶಕ್ತೀಕರಿಸಬೇಕು’ ಎಂದು ಕೇಳಿಕೊಳ್ಳಬೇಡಿ.ಹಲವು ಮಹಿಳಾ ಕ್ರಾಂತಿಕಾರಿಗಳು ಬಹಳ ಸಿಟ್ಟಿನಿಂದಿರುತ್ತಾರೆ ಅಲ್ಲವೇ?ಅವರು ಬಹಳ ಗಾಬರಿಗೊಂಡ ಮತ್ತು ಕೋಪಿಷ್ಠರಾಗಿರುತ್ತಾರೆ. ಅವರಲ್ಲಿ ಯಾವತ್ತೂ ಬಂಡಾಯ ಮತ್ತು ಸಿಟ್ಟಿರುತ್ತದೆ, ಅದು ಎಲ್ಲೂ ಮುಂದುವರಿಸುವುದಿಲ್ಲ. ಎಲ್ಲರೂ ಹಾಗೆ ಎಂದು ನಾನು ಹೇಳುತ್ತಿಲ್ಲ, ಆದರೆ ಕೆಲವು ಮಹಿಳಾ ಕಾರ್ಯಕರ್ತರು ಬಹಳ ಬಂಡಾಯ ಮತ್ತು ಕೋಪದಿಂದಿರುತ್ತಾರೆ. ನಾನು ಹೇಳುತ್ತೇನೆ, ಸಿಟ್ಟು ನಿಮ್ಮನ್ನು ಎಲ್ಲೂ ಮುಂದುವರಿಸುವುದಿಲ್ಲ. ನಿಶ್ಚಲ ಹಾಗೂ ಪ್ರಶಾಂತ ಮನಸ್ಸಿನಿಂದ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಿ. ನಿಮಗೊಂದು ಸ್ಥಾನಮಾನವಿದೆ, ಅದನ್ನೇರಿ! ಇದೆಲ್ಲಾ ನಿಮ್ಮ ಮನಸ್ಸಿನಲ್ಲೇ ಇರುವುದು.

ನೋಡಿ, ನೀವು ಸುಂದರವಾಗಿ ಕಾಣಿಸಿಕೊಳ್ಳದಿದ್ದರೆ, ಇನ್ನೊಬ್ಬರು ಸುಂದರವಾಗಿದ್ದಾರೆ ಎಂದು ಬೇಸರಪಟ್ಟುಕೊಳ್ಳಬೇಡಿ.ಅವರಲ್ಲಿ ಸುಂದರ ಶರೀರವಿರಬಹುದು, ನಿಮ್ಮಲ್ಲಿ ಸುಂದರ ಮನವಿದೆ.ಅದನ್ನು ನೆನಪಿನಲ್ಲಿಟ್ಟುಕೊಳ್ಳಿ.ಬಾಹ್ಯ ಸೌಂದರ್ಯವಿರುವವರಲ್ಲೆಲ್ಲಾ ಸುಂದರವಾದ ಮನಸ್ಸಿಲ್ಲ. ಕೆಲವೊಮ್ಮೆ ಅವರ ಮುಖವನ್ನು ನೋಡಿದಾಗ, ಅದು ಎಷ್ಟೊಂದು ಬಾಡಿರುತ್ತದೆ.ಒಬ್ಬರಮನಸ್ಸು ಸುಂದರವಾಗಿರಬಹುದು, ಆದರೆ ಅವರ ಬುದ್ಧಿ ಚುರುಕಿಲ್ಲದಿರಬಹುದು.ನಿಮ್ಮಲ್ಲಿ ಚುರುಕಾದ ಬುದ್ಧಿಯಿದೆ.ಹಾಗಾಗಿ ನಿಮ್ಮಲ್ಲಿರುವುದನ್ನು ನೋಡಿಕೊಳ್ಳಿ.

ಒಬ್ಬರಲ್ಲಿ ಬಹಳ ಹಣವಿರಬಹುದು, ಅದಕ್ಕೇನು?ನಿಮ್ಮಲ್ಲಿ ಪ್ರತಿಭೆಯಿದೆ, ನಿಮ್ಮಲ್ಲಿ ಒಳ್ಳೆಯ ಹೃದಯವಿದೆ, ನಿಮ್ಮಲ್ಲೇನೋ ಇದೆ.ಹಾಗಾಗಿ ಇನ್ನೊಬ್ಬರೊಂದಿಗಾದರೂ ತಮ್ಮ ತುಲನೆ ಮಾಡಿಕೊಳ್ಳುವಾಗ, ನಿಮ್ಮೊಳಗೆ ಎಲ್ಲದಕ್ಕಿಂತಲೂ ದೊಡ್ಡದಾದ ಒಂದು ಆಯಾಮವಿದೆಯೆಂದು ನೀವು ಮರೆಯುತ್ತೀರಿ, ಅದು ಎಲ್ಲರಿಗೂ ಪ್ರತಿಯೊಂದನ್ನು ಕೊಡುವಂಥದ್ದು. ನೀವು ಅದನ್ನರಿತು ಜೀವಿಸುವಾಗ, ಈ ಎಲ್ಲಾ ಮನೋಸಂಕೀರ್ಣಗಳನ್ನು ದಾಟಿಬರುತ್ತೀರಿ.ನಾನು ಹೇಳುತ್ತಿರುವುದನ್ನು ನೀವು ಅರಿಯುತ್ತಿದ್ದೀರಾ?

ಜಗತ್ತಿನ ತುಂಬೆಲ್ಲಾ ಮನಸ್ಸಿನ ಅನೇಕ ಸಂಕೀರ್ಣಗಳಿವೆ.ನೀವು ಆ ಸಂಕೀರ್ಣಗಳನ್ನು ದಾಟಿ ಬರಬೇಕು.ಮತ್ತು ನಿಮ್ಮಿಂದ ಸಂಕೀರ್ಣಗಳನ್ನು ಏನು ದಾಟಿಸಬಹುದು?ಅದು ಮನೋಚಿಕಿತ್ಸೆಯಲ್ಲ, ಆದರೆ ಆಧ್ಯಾತ್ಮಿಕತೆ.ನಿಮ್ಮ ಆಂತರ್ಯದೊಂದಿಗೆ ಸಂಪರ್ಕದಲ್ಲಿರುವುದರಿಂದ ನಿಮ್ಮ ಎಲ್ಲಾ ಮನೋಸಂಕೀರ್ಣಗಳಿಂದ, ರೇಗಾಟದಿಂದ ಮೇಲಕ್ಕೇಳಬಹುದು. ’ಆಹಾ! ಎಷ್ಟೊಂದುಸೊಗಸು, ಎಷ್ಟು ಪ್ರಶಾಂತ’ ಎಂದು ಕಾಣುತ್ತೀರಿ.

ಹಿಂದಿಯ ಒಂದು ನುಡಿಮುತ್ತಿದೆ- ಮನ್ ಮೀಠಾ ತೊ ಜಗ್ ಮೀಠಾ. ನಿಮ್ಮೊಳಗೆ ಮಾಧುರ್ಯವಿದ್ದಾಗ, ನಿಮ್ಮ ಸುತ್ತಎಲ್ಲವೂ ಮಧುರವಾಗಿರುತ್ತದೆ.

ನೋಡಿ, ಜೀವನವು ಸ್ವಯಂಒಂದು ಕಲೆ! ಜೀವನ ಕಲೆ.
ಕಲೆ ಒಂದು ವ್ಯಾಪಾರವಾಗಿರಬಹುದು, ಆದರೆ ವ್ಯಾಪಾರ ಒಂದು ಕಲೆಯೆಂದು ಯೋಚಿಸಬೇಡಿ.ವ್ಯವಹಾರವನ್ನು ಕ್ರಮಬದ್ಧವಾಗಿ ಹೇಗೆ ನಿಭಾಯಿಸುವುದು ಎಂಬ ಅರ್ಥದಲ್ಲಿ ನೀವು ವ್ಯವಹಾರ ಒಂದು ಕಲೆ ಎಂದು ಹೇಳಬಹುದು.ಬಹಳ ಸಂಕೀರ್ಣ ಹಾಗೂ ಭ್ರಷ್ಟ ಜಗತ್ತಿನಲ್ಲಿ ನೀತಿ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡೂ ಹೇಗೆ ವ್ಯಾಪಾರ ಮಾಡುವುದು - ಇದು ಒಂದು ಕಲೆ. ಆ ಅರ್ಥದಲ್ಲಿ! ಈಗ ವ್ಯಾಪಾರದಲ್ಲಿ ಮತ್ತೊಂದು ಪ್ರಕ್ರಿಯೆ.ನೀವು ಮಾರುಕಟ್ಟೆಯನ್ನು ಅರಿತು ಪರೀಕ್ಷಿಸಬೇಕು. ’ಮಾರುಕಟ್ಟೆ ಯಾವ ಸ್ಥಿತಿಯಲ್ಲಿದ್ದರೂ ನನಗೇನು, ನಾನು ನನ್ನ ಸ್ವಂತ ವ್ಯಾಪರವನ್ನು ನಿರ್ಮಿಸುತ್ತೇನೆ’ ಎಂದು ಹೇಳಲಾಗುವುದಿಲ್ಲ. ವ್ಯಾಪಾರವೊಂದು ಬೇರೆ ಕಲೆ, ಅದು ಕುಶಲಕಲೆಯಂತಲ್ಲ. ಕುಶಲಕಲೆಯಲ್ಲಿ ನೀವು ಇನ್ನೊಬ್ಬರನ್ನು ನೋಡುವುದಿಲ್ಲ, ನಿಮ್ಮ ಸೃಜನಶೀಲತೆಯನ್ನು ಹೊರಸೂಸುತ್ತೀರಿ.
ವ್ಯಾಪಾರವೆಂದರೆ ಲೋಕದೊಂದಿಗೆ, ಮಾರುಕಟ್ಟೆಯೊಂದಿಗೆ ವ್ಯವಹರಿಸುವುದು.ಹಾಗಾಗಿ ಅಲ್ಲಿ ಇನ್ನುಳಿದವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಬೇಕು.ನೀವು ಒಂದು ಉತ್ಪನ್ನವನ್ನು ಮಾರುತ್ತಿರುವುದರಿಂದ, ಬೇರೆಯವರು ತಮ್ಮ ಉತ್ಪನ್ನಗಳನ್ನು ಹೇಗೆ ಮಾರುತ್ತಿದ್ದಾರೆ ಮತ್ತು ಅವರ ಮೌಲ್ಯ ಕ್ರಮ ಏನು ಎಂಬುದನ್ನು ಅರಿತಿರಬೇಕು.ಅದನ್ನೆಲ್ಲಾ ನೀವು ನೋಡಿಕೊಳ್ಳಬೇಕು.

ಪ್ರ: ನಾಡಿ ನಮಗೆ ಯಾವುದಾದರೂ ಸೂಚನೆಗಳನ್ನು ನೀಡುತ್ತದೆಯೇ? ಅದು ಈಗ ಏನು ಹೇಳುತ್ತಿದೆ?
ಶ್ರೀ ಶ್ರೀ:
ಹೌದು, ಈಗ ನಾಡಿಯು (ತಮ್ಮ ನಾಸಾಪುಟಗಳಲ್ಲಿ ಉಸಿರನ್ನು ನೋಡಿಕೊಂಡು)’ಸುಮ್ಮನಿರು’ ಎನ್ನುತ್ತಿದೆ.  ಎರಡೂ ನಾಡಿಗಳು ಸಕ್ರಿಯವಾಗಿರುವಾಗ, ಅದರರ್ಥ ಸುಮ್ಮನಿರು, ಏನೂ ಹೇಳಬೇಡ, ಕೇವಲ ಧ್ಯಾನಸ್ಥನಾಗು ಎಂದು.ಆದರೆ ಅದು ಸದಾ ಬದಲಾಗುತ್ತಿರುತ್ತದೆ.ಬ್ರಹ್ಮಾಂಡವೆಲ್ಲಾ ಬದಲಾವಣೆಯಿಂದ ತುಂಬಿದೆ.

ಪ್ರ: (ನೆರೆದಿದ್ದ ಜನರಲ್ಲಿ ಒಬ್ಬ ಸ್ವಯಂಪ್ರೇರಿತವಾಗಿ ಒಂದು  ಪ್ರಶ್ನೆ ಕೇಳಿದ್ದು, ಅದು ಧ್ವನಿಮುದ್ರಣದಲ್ಲಿ ಕೇಳಿಬಂದಿಲ್ಲ)

ಶ್ರೀ ಶ್ರೀ:
ನಿಮಗೆ ಆಯ್ಕೆಯಿಲ್ಲ. ನಿಮಗೆ ಯಾವುದಾದರೂ ಆಯ್ಕೆಯಿದೆಯೇ? ಇವತ್ತಲ್ಲ ನಾಳೆ ಪ್ರತಿಯೊಬ್ಬರೂ ಅದನ್ನು ಮಾಡಬೇಕು.ನೀವು ನಿಮ್ಮ ಸದ್ಗುಣಗಳಿಗೆ ಮನ್ನಣೆಯನ್ನು ಅಪೇಕ್ಷಿಸುವಂತಿಲ್ಲ ಯಾಕೆಂದರೆ ನೀವು ಇರುವುದೇ ಹಾಗೆ.ಈ ಸೂರ್ಯಕಾಂತಿ ಹೂವು ’ನಾನು ಹಳದಿ’ ಎಂದು ಹೇಳಿಕೊಳ್ಳಲಾಗುವುದಿಲ್ಲ. ಹಳದಿಯಾಗಲು ಅದು ಏನನ್ನೂ ಮಾಡಲಿಲ್ಲ, ಅದು ಹಳದಿಯಾಗಿ ಸೃಷ್ಟಿಸಲ್ಪಟ್ಟಿದೆ.
ಗುಲಾಬಿಯು ’ನೋಡು ನಾನೆಷ್ಟು ನಸುಗೆಂಪಗಿದ್ದೇನೆ! ನಾನು ನನ್ನನ್ನು ನಸುಗೆಂಪಗೆ ಮಾಡಿಕೊಂಡೆ’ ಎಂದು ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮಲ್ಲಿ ಯಾವುದೇ ಸದ್ಗುಣಗಳು, ಪ್ರತಿಭೆ ಇರಲಿ, ನೀವು ಅದಕ್ಕೆ ಗೌರವ ಅಪೇಕ್ಷಿಸುವುದು ಸಾಧ್ಯವಿಲ್ಲ, ನಿಮ್ಮನ್ನು ಮಾಡಿರುವುದೇ ಹಾಗೆ. ಮತ್ತೆ ನಾನಿರುವ ರೀತಿ, ನನ್ನನ್ನು ಮಾಡಿರುವುದೇ ಹಾಗೆ.
ಹಾಗೆಯೇ ನೀವು ನಿಮ್ಮ ನಕಾರಾತ್ಮಕ ಗುಣಗಳಿಗೂ ಅಗೌರವವನ್ನು/ನಿಂದನೆಯನ್ನು ಖಂಡಿತ ಅಪೇಕ್ಷಿಸಬಾರದು.ಮತ್ತು, ನಿಮ್ಮ ಧನಾತ್ಮಕ ಗುಣಗಳಿಗೆ ಗೌರವ ಅಪೇಕ್ಷಿಸಬಾರದು.ಹಾಗಾಗಿ ನೀವು ಹೇಗೆ ಇದ್ದರೂ ನೀವಿರುವುದು ಹಾಗೆ.

ನೀವು ಇದಿರುನಿಲ್ಲುವವರಾಗಿದರೆ ನಿಮ್ಮ ಬಂಡಾಯಗಾರತನವನ್ನು ಸದುಪಯೋಗಪಡಿಸಿ. ಅನ್ಯಾಯವಿರುವಲ್ಲಿ ಹೋರಾಡಿ! ಆದರೆ ಮುಗುಳ್ನಗೆಯೊಂದಿಗೆ ಹೋರಾಡಿ. ನನ್ನ ಜೊತೆಗೂಡಿ ಹೋರಾಡಿ!(ನಗು).
ಅನಕ್ಷರತೆಯ ವಿರುದ್ಧ ಹೋರಾಡಿ.ಅನ್ಯಾಯದ ವಿರುದ್ಧ, ಕೊರತೆಯ ವಿರುದ್ಧ ಹೋರಾಡಿ. ಹೋರಾಟಕ್ಕೆ ಮುನ್ನಡೆಯಿರಿ! ಹೋರಾಟದ ಮಾರ್ಗದಲ್ಲಿ ಸಾಗುತ್ತಿರುವಾಗ ಎಂದೂ ಏರುಪೇರುಗಳಿರುತ್ತವೆ.ಯೋಚಿಸದಿರಿ.ನೀವು ಅದರ ಚಿಂತೆ ಮಾಡಬಾರದು.’ಸರಿ, ಏನೇ ಬರಲಿ, ಹೋರಾಡು!’ ಎಂದು ಯೋಚಿಸಿ.

ಆದ್ದರಿಂದಲೇ ನೀವು ನಿಮ್ಮ ಧರ್ಮ(ಕರ್ತವ್ಯ)ವನ್ನು ಗುರುತಿಸಬೇಕಾಗಿರುವುದು.ನಿಮ್ಮ ಧರ್ಮ ಕಲಿಸುವುದಾಗಿದ್ದರೆ, ಅಥವಾ ಹೋರಾಡುವುದು, ಅಥವಾ ಮನ ಒಪ್ಪಿಸುವುದು, ಅಥವಾ ಸೇವೆ ಮಾಡುವುದಾಗಿದ್ದರೆ; ನಿಮ್ಮ ಧರ್ಮವೇನೋ ಮತ್ತು ಆ ಕ್ಷಣದಲ್ಲಿ ನಿಮ್ಮ ಸಹಜ ಗುಣದಂತೆ ನೀವು ನಡೆಯಬೇಕು.

ನೀವು ಈ ನಾಲ್ಕನ್ನೂ ಮಾಡಬಹುದು, ಪ್ರಯತ್ನಿಸಬಹುದು.ಮೊದಲು ಕಲಿಸಿ ಅರಿವು ಮೂಡಿಸಬೇಕು.ಅದು ಸಾಧ್ಯವಾಗದಿದ್ದರೆ ಮನ ಒಪ್ಪಿಸಲು ನೋಡಿ; ವ್ಯಾಪಾರ ಕೌಶಲಗಳನ್ನು ಉಪಯೋಗಿಸಿ.ಹಾಗಾಗಿ ಅವರನ್ನು ನಿರ್ಬಂಧಗೊಳಿಸಿ, ಪುಸಲಾಯಿಸಿ ಇತ್ಯಾದಿಗಳಿಂದ ಮನ ಒಪ್ಪಿಸಿ. ಇದು ಪ್ರಯೋಜನವಾಗದಿದ್ದರೆ ಅವರ ಸೇವೆ(ಸಹಾಯ) ಮಾಡಿ. ಮತ್ತೆ ಇದು ಯಾವುದೂ ಪ್ರಯೋಜನವಾಗದಿದ್ದರೆ, ಹೋರಾಡಿ! ತಿಳಿಯಿತೇ? ಎಲ್ಲಾ ವಿಧಾನಗಳನ್ನು ಉಪಯೋಗಿಸಿ, ಸರಿಯಾ!

ನಿಮಗೆ ಏನು ಸಹಜವೋ, ಅದು ನಿಮ್ಮ ಧರ್ಮ. ಉದಾಹರಣೆಗೆ, ಅವಳು ಇದಿರುನಿಲ್ಲುವುದು ತನಗೆ ಸ್ವಾಭಾವಿಕ ಎಂದು ಹೇಳುತ್ತಾಳೆ, ಅವಳು ಹೋರಾಡಬಹುದು(ನೆರೆದವರಲ್ಲಿಒಬ್ಬರನ್ನು ಸೂಚಿಸುತ್ತ). ಪ್ರತಿ ಕ್ಷಣ ಅವಳು ಯಾವುದರ ವಿರುದ್ಧವೂ, ಎಲ್ಲಾದರು ಹೋರಾಡಬಹುದು.ಹಾಗೆ ಅದು ಅವಳ ಧರ್ಮ.
ಹಾಗೆ ನೀವು ನಿಮ್ಮ ಧರ್ಮವನ್ನು ಗುರುತಿಸಿ.ಅದು ಸ್ಪಷ್ಟವಾಗುತ್ತದೆ.ನೀವು ಅದನ್ನು ಮಾಡುತ್ತಿದ್ದಂತೆ ಪರಿಪೂರ್ಣ ಶಾಂತಿ ಹಾಗೂ ತ್ರೂಪ್ತಿಯನ್ನು ಅನುಭವಿಸುವಿರಿ.

ನೋಡಿ, ಇವೆಲ್ಲವೂ ಕಷ್ಟಕರ.ಕಲಿಸುವುದು ಸುಲಭವೆಂದುಕೊಂಡಿರಾ?ಅಬ್ಬಾ ದೇವರೇ, ಅದೊಂದು ದೊಡ್ಡ ತಲೆನೋವು.ತೆಲುಗಿನಲ್ಲಿ ಒಂದು ನುಡಿಮುತ್ತಿದೆ - ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಕಲಿಸಬೇಕು ಮತ್ತು ತಾನು ಕಲಿತಿರುವುದನ್ನು ಮರೆಯಬೇಕು, ಯಾಕೆಂದರೆ ತಾನು ಕಲಿತಿರುವುದನ್ನು ಮರೆಯದೇ ಶಿಕ್ಷಕನಿಗೆ ಮುಕ್ತಿಯಿಲ್ಲ.
ನೀವು ಕಲಿಯಬೇಕು, ಆದರೆ ಅದನ್ನೆಲ್ಲಾ ಮರೆತು ಸಂಪೂರ್ಣವಾಗಿ ಖಾಲಿ ಮತ್ತು ಟೊಳ್ಳಾಗಬೇಕು. ಹಾಗಾಗಿ ಒಬ್ಬ ಶಿಕ್ಷಕ ಕಲಿಯಬೇಕು ಮತ್ತು ತಾನು ಯಾವುದೇ ಕ್ಷೇತ್ರದಲ್ಲಿ ಏನೇ ಕಲಿತಿದ್ದರೂ  ಅದನ್ನು ಶಿಷ್ಯರಿಗೆ ನೀಡಿ ಮತ್ತೆ ಅದರ ಬಗ್ಗೆ ಮರೆತುಬಿಡಬೇಕು. ಅವನು ಮೊದಲೇ ಅದನ್ನು ಮರೆಯಲಾಗುವುದಿಲ್ಲ. ಹಾಗಾಗಿ ಇದೂ ಒಬ್ಬ ಶಿಕ್ಷಕನ ನಿಯಮ- ಕಲಿ, ಕಲಿಸು ಮತ್ತೆ ಮರೆತುಬಿಡು.

ಹೇಗೂ ಪ್ರಕೃತಿಯು ನಿಮ್ಮಿಂದ ಅದನ್ನು ಮಾಡಿಸುತ್ತದೆ.ನೀವು ಪ್ರೊಢರಾಗುತ್ತಿದ್ದಂತೆ ನೀವು ಎಲ್ಲವನ್ನೂ ಮರೆಯಲಾರಂಭಿಸುತ್ತೀರಿ, ಹಾಗಾಗುವುದಿಲ್ಲವೇ?ನಿಮಗೆ ಇನ್ನೂ ಹೆಚ್ಚು ಹೆಚ್ಚು ವಯಸ್ಸಾಗುತ್ತಿದ್ದಂತೆ ನೀವು ಎಲ್ಲವನ್ನೂ ಮರೆಯುತ್ತೀರಿ.

ಈಗ ತೆಲುಗಿನಲ್ಲಿ ಒಂದು ಬಹಳ ಹಾಸ್ಯಮಯ ಮಾತಿದೆ - ನಿನ್ನನ್ನು ನನ್ನ ಶಿಷ್ಯನನ್ನಾಗಿ ಮಾಡಿ, ನಿನಗೆ ಕಲಿಸಿ, ನಾನು ನನ್ನ ಕೀರ್ತಿಯನ್ನು ಕಳೆದುಕೊಂಡೆ. ನಿನಗೆ ಎಂದೂ ಕಲಿಯಲಾಗಲಿಲ್ಲ ಮತ್ತು ನನಗೆ ಎಂದೂ ಮರೆಯಲಾಗಲಿಲ್ಲ! (ನಗು)
ಯಾಕೆಂದರೆ ಯಾರಾದರೂ ನಿಮ್ಮನ್ನು ’ನಿನ್ನ ಗುರು ಯಾರು, ನಿನ್ನ ಶಿಕ್ಶಕ ಯಾರು?’ ಎಂದು ಕೇಳಿದರೆ , ನೀವು ಇಂಥವರು ನನ್ನು ಶಿಕ್ಶಕರು ಎಂದು ಹೇಳುತ್ತೀರಿ. ಮತ್ತೆ ಅವರು ನಿನಗೆ ಏನು ಕಲಿಸಿದ್ದಾರೆ?ಹಾಗಾಗಿ ನಿನ್ನನ್ನು ನನ್ನ ಶಿಷ್ಯನನ್ನಾಗಿಸಿ, ನಾನು ನನ್ನ ಕೀರ್ತಿಯನ್ನು ಕಳೆದುಕೊಂಡೆ.ನಿನಗೆಂದು ಕಲಿಯಲಾಗಲಿಲ್ಲ, ನನಗೆಂದೂ ಮರೆಯಲಾಗಲಿಲ್ಲ.

ಹಾಗಾಗಿ ಕಲಿಸುವುದು ಒಂದು ಸುಲಭದ ಕೆಲಸವಲ್ಲ. ಮತ್ತೆ ಹೋರಾಡುವುದೂ ಒಂದು ಸುಲಭದ ಕೆಲಸವಲ್ಲ, ಅದು ಕಠಿಣವಾದ ಕೆಲಸ.ಮನ ಒಪ್ಪಿಸುವುದು ಮತ್ತು ಪುಸಲಾಯಿಸುವುದು ಸುಲಭದ ಕೆಲಸವಲ್ಲ. ಮತ್ತು ಸೇವೆ ಮಾಡುವುದೂ ಒಂದು ದೊಡ್ಡ ಸವಾಲು. ಜನರ ಸೇವೆ ಮಾಡಲು ನೀವು ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ ಆದರೂ ಅವರು ನಿಮ್ಮನ್ನು ದೂಷಿಸುತ್ತಾರೆ, ಹೌದು!

ನಿಮ್ಮಿಂದ ಆಗುವುದನ್ನೆಲ್ಲಾ, ಒಳ್ಳೆಕೆಲಸಗಳನ್ನೆಲ್ಲಾ ನೀವು ಮಾಡುತ್ತೀರಿ; ನೀವೇನು ಮಾಡಿದರೂ ನಿಮಗೆ ಒಬ್ಬರನ್ನು ಸಂತೈಸಲಾಗುವುದಿಲ್ಲ. ಹಾಗಾಗಿ ಸೇವೆ ಮಾಡುವುದೂ ಒಂದು ಸುಲಭದ ಕೆಲಸವಲ್ಲ.

ಹೀಗೆ ನೀವೇನನ್ನಾದರೂ ಪರಿಗಣಿಸಿ, ಒಂದು ದೃಷ್ಟಿಕೋನದಿಂದ ನೋಡಿದರೆ ಅದೆಲ್ಲವೂ ಬಹಳ ಕಷ್ಟಕರ.ಅದಕ್ಕೆನೀವು ’ಸರಿ ಎಲ್ಲವೂ ಕಷ್ಟಕರ, ಆದರೂ ನಾನದನ್ನು ಮಾಡಿ ಸುಮ್ಮನಿರುವೆ.’ ಎಂದು ಯೋಚಿಸಿ.ಆದರೆ ಅದು ಸುಲಭವೇ?ಅದು ಇನ್ನೂ ಕಷ್ಟ. ಆದ್ದರಿಂದ ಏನನ್ನಾದರೂ ಮಾಡುವುದು ಸುಲಭವಲ್ಲ ಮತ್ತು ಏನನ್ನಾದರೂ ಮಾಡದಿರುವುದೂ ಸುಲಭವಲ್ಲ.

ಹಾಗಾಗಿ, ಜೈ ಜೈ ರಾಧಾ ರಮಣ ಹರಿ ಬೋಲ್!

ಗುರುವಾರ, ಜುಲೈ 12, 2012

ಸಾವಿನ ನಂತರ ಏನಾಗುವುದು?

12
2012
Jul
ಬಾಡ್ ಆಂತೋಗಾಸ್ತ್, ಜರ್ಮನಿ

ಪ್ರಶ್ನೆ: ಗುರೂಜಿ, ದಯವಿಟ್ಟು ನಮಗೆ ಜ್ಞಾನವನ್ನು ನೀಡಿ
ಶ್ರೀ ಶ್ರೀ ರವಿಶಂಕರ್:
ಅದಕ್ಕೆ ನೀನು ಪ್ರಶ್ನೆಗಳನ್ನು ಕೇಳಬೇಕು. ಜ್ಞಾನವೆಂದರೆ ನೀನು ಅದನ್ನು ಹೊರಕ್ಕೆಳೆಯಬೇಕು.
ಪ್ರಶ್ನೆ: ಪ್ರೀತಿಯೆಂದರೇನು?
ಶ್ರೀ ಶ್ರೀ ರವಿಶಂಕರ್:
ಎಲ್ಲಾ ಅಸ್ತಿತ್ವದ ತಳಹದಿ.
ನಿನ್ನ ಶರೀರದಲ್ಲಿರುವ ಎಲ್ಲಾ ಕೋಶಗಳೂ ಪರಸ್ಪರ ಪ್ರೀತಿಸುತ್ತವೆ, ಅದಕ್ಕೇ ಅವುಗಳು ಜೊತೆಯಲ್ಲಿರುವುದು. ಅವುಗಳು ಪರಸ್ಪರ ಪ್ರೀತಿಸುವುದನ್ನು ನಿಲ್ಲಿಸಿದ ದಿನ, ಅವೆಲ್ಲವೂ ಬೇರೆಬೇರೆಯಾಗುತ್ತವೆ. ತಿಳಿಯಿತಾ?
ಯಾವುದರಿಂದ ಎಲ್ಲವೂ ಜೊತೆಯಲ್ಲಿರಿಸಲ್ಪಟ್ಟಿದೆಯೋ, ಅಂತಹ ಒಂದು ವಸ್ತುವಿದ್ದರೆ ಮತ್ತು ನೀವದಕ್ಕೆ ಒಂದು ಹೆಸರನ್ನು ಕೊಡಲು ಬಯಸಿದರೆ, ನೀವದನ್ನು ಪ್ರೀತಿಯೆಂದು ಕರೆಯಬಹುದು. ಪ್ರೀತಿಯು ತಿರುಚಿದ ಭಾವನೆಯಲ್ಲ, "ಓಹ್, ನನಗೆ ನಿನ್ನನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ", ಮತ್ತು ಹೀಗೆಲ್ಲಾ. ಅದು ಪ್ರೀತಿಯಲ್ಲ. ಅದು ಕೇವಲ ಏನೋ ಭಾವನಾತ್ಮಕವಾದುದು. ಪ್ರೀತಿಯೆಂದರೆ (ಮೌನ) ..... ಅಷ್ಟೆ.
ಪ್ರೀತಿಯು ವರ್ಣನಾತೀತವಾದುದು. ನಿಮಗೆ ಅದನ್ನು ವಿವರಿಸಲು ಸಾಧ್ಯವಿಲ್ಲ, ಮತ್ತು ಅದನ್ನು ತಿಳಿಯದೇ ಇರುವ ಒಂದೇ ಒಂದು ಜೀವಿಯೂ ಈ ಭೂಮಿಯ ಮೇಲಿಲ್ಲ. ತಿಳಿಯಿತಾ? ಸಮುದ್ರದಿಂದ ಹಿಡಿದು ಪಕ್ಷಿಗಳ ವರೆಗೆ, ಒಂದು ಕೋಳಿಮರಿಯಿಂದ ಹಿಡಿದು ಒಬ್ಬ ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ವರೆಗೆ, ಪ್ರತಿಯೊಬ್ಬರೂ ಪ್ರೀತಿಯನ್ನು ಅನುಭವಿಸಿದ್ದಾರೆ. ಅದು ಜೀವನಕ್ಕಾಗಿರುವ ಪ್ರೀತಿಯೆಂದು ನಾವು ಯೋಚಿಸುವುದು, ಆದರೆ ಜೀವನವೇ ಪ್ರೀತಿಯಾಗಿದೆ. ಆದುದರಿಂದ, ಈ ಸಂಪೂರ್ಣ ವಿಶ್ವವು ಪ್ರೀತಿ - ಈ ಜ್ಞಾನದ ಮೂಲಕ ನೋಡಿ.
ಪ್ರೀತಿಯೆಂಬುದು ಒಂದು ಅಸ್ತಿತ್ವ, ಕೇವಲ ಒಂದು ಭಾವನೆಯಲ್ಲ. ಭಾವನೆ ಕೂಡಾ ಪ್ರೀತಿಯೇ, ಆದರೆ ಅಸ್ತಿತ್ವವೇ ಪ್ರೀತಿಯಾಗಿದೆ. ಭೂಮಿಯು ಸೂರ್ಯನನ್ನು ಪ್ರೀತಿಸುತ್ತದೆ. ಅದಕ್ಕೇ ಅದು ಸೂರ್ಯನ ಸುತ್ತಲೂ ತಿರುಗುತ್ತಾ ಇರುವುದು. ಚಂದ್ರನು ಭೂಮಿಯನ್ನು ಪ್ರೀತಿಸುತ್ತದೆ. ಅದಕ್ಕೇ ಚಂದ್ರನು ಭೂಮಿಯ ಸುತ್ತಲೂ ತಿರುಗುವುದು. ಎಲ್ಲೆಲ್ಲಾ ಒಂದು ಬಲ ಅಥವಾ ಶಕ್ತಿ ಅಥವಾ ಒಂದು ಸೆಳೆತ ಅಥವಾ ಆಕರ್ಷಣೆ ಇರುವುದೋ, ಅದನ್ನು ನೀವು ಪ್ರೀತಿಯೆಂದು ಕರೆಯುವಿರಿ ಮತ್ತು ಎಲ್ಲೆಲ್ಲಾ ವಿಕರ್ಷಣೆ ಇರುವುದೋ, ಅದು ಕೂಡಾ ವಿರುದ್ಧ ದಿಕ್ಕಿನಲ್ಲಿರುವ ಪ್ರೀತಿಯಾಗಿದೆ. ತಿಳಿಯಿತಾ?
ನೀವು ಯಾರ ಕಡೆಗಾದರೂ ಅಥವಾ ಯಾವುದಾದರ ಕಡೆಗಾದರೂ ಎಳೆಯಲ್ಪಡುತ್ತೀರಿ, ಯಾಕೆ? ಯಾಕೆಂದರೆ ನೀವದನ್ನು ಪ್ರೀತಿಸುತ್ತೀರಿ. ನೀವೊಂದು ಚೀಸ್ ಕೇಕನ್ನು ನೋಡುತ್ತೀರಿ ಮತ್ತು ಅದರ ಕಡೆಗೆ ಎಳೆಯಲ್ಪಡುತ್ತೀರಿ, ಯಾಕೆ? ಅಲ್ಲೊಂದು ಸೆಳೆತವಿದೆ. ನೀವೊಬ್ಬಳು ಸುಂದರವಾದ ಹುಡುಗಿಯನ್ನು ನೋಡುತ್ತೀರಿ ಅಥವಾ ಒಬ್ಬಳು ಹುಡುಗಿಯು ಒಬ್ಬ ಸುಂದರನಾದ ಹುಡುಗನನ್ನು ನೋಡುತ್ತಾಳೆ, ಅಲ್ಲೊಂದು ಸೆಳೆತವಿದೆ ಮತ್ತು ನೀವದನ್ನು ಏನೆಂದು ಕರೆಯುವಿರಿ? ನೀವದನ್ನು ಪ್ರೀತಿಯೆಂದು ಕರೆಯುತ್ತೀರಿ! ಯಾಕೆ? ಅದು ಯಾಕೆಂದರೆ ಅಲ್ಲೊಂದು ಸೆಳೆತವಿದೆ, ಅಲ್ಲೊಂದು ಆಕರ್ಷಣೆಯಿದೆ, ಅಲ್ಲೊಂದು ಬಲವಿದೆ ಮತ್ತು ಆ ಬಲವೇ ಸಂಪೂರ್ಣ ವಿಶ್ವವನ್ನು ನಡೆಸುತ್ತಿರುವುದು. ಕೆಲವು ಜಾಗಗಳಲ್ಲಿ ಇದು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಕೆಲವು ಬೇರೆ ಜಾಗಗಳಲ್ಲಿ, ಇದು ಸ್ಪಷ್ಟವಾಗಿರುವುದಿಲ್ಲ.
ಭೂಮಿಯು ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸಿದ ದಿನ, ನೀವು ಹಾರಾಡಲು ಶುರು ಮಾಡುವಿರಿ. ಭೂಮಿಯು ನಿಮ್ಮನ್ನು ಎಷ್ಟು ಪ್ರೀತಿಸುತ್ತದೆಯೆಂದರೆ, ಗುರುತ್ವಾಕರ್ಷಣ ಶಕ್ತಿಯು, ನೀವು ಭೂಮಿಗೆ ಅಂಟಿಕೊಂಡಿರುವಂತೆ ಮಾಡುತ್ತದೆ. ನಿಮಗಿದು ತಿಳಿಯಿತೇ?
ಆದುದರಿಂದ, ಪ್ರೀತಿಯೆಂದರೆ, ಮಾನವ ಜೀವನದಲ್ಲಿರುವ ಆ ಬಲ. ಎಲ್ಲಾ ನಕಾರಾತ್ಮಕ ಭಾವನೆಗಳು ಕೂಡಾ, ಪ್ರೀತಿಯ ಒಂದು ತಿರುಚಿದ ರೂಪವೇ ಆಗಿದೆ. ಕೋಪದಲ್ಲಿ ಪ್ರೀತಿಯಿದೆ. ಹೇಗೆಂದು ನನ್ನಲ್ಲಿ ಕೇಳಿ. ನೀವು ಸಂಪೂರ್ಣತೆಯನ್ನು ಪ್ರೀತಿಸುತ್ತೀರಿ ಮತ್ತು ಅದಕ್ಕೇ ನೀವು ಕೋಪಗೊಳ್ಳುವುದು. ಲೋಭವು ಪ್ರೀತಿಯಾಗಿದೆ. ಲೋಭವೆಂದರೆ, ನೀವು ಯಾವುದನ್ನಾದರೂ ಜೀವನಕ್ಕಿಂತಲೂ ಬಹಳ ಹೆಚ್ಚಾಗಿ ಪ್ರೀತಿಸುವಾಗ ಆಗುವುದು. ನೀವು ವಸ್ತುಗಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವಾಗ, ಅದು ಲೋಭವೆಂದು ಕರೆಯಲ್ಪಡುತ್ತದೆ. ದ್ವೇಷವೆಂದರೆ ಪ್ರೀತಿಯು ತಲೆಕೆಳಗಾದುದು. ಭಯವೆಂದರೆ ಪ್ರೀತಿ ತಲೆಕೆಳಗಾದುದು.
ಪ್ರಶ್ನೆ: ಗುರೂಜಿ, ನನ್ನ ತಾಯಿಯು ಕ್ರಿಸ್ಮಸ್ ದಿನದಂದು ತೀರಿಹೋದರು. ಇದಕ್ಕೆ ಏನಾದರೂ ವಿಶೇಷ ಅರ್ಥವಿದೆಯೇ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಪ್ರಪಂಚದಾದ್ಯಂತ ಹಲವಾರು ಜನರು ಕ್ರಿಸ್ಮಸ್ ದಿನ ಅಥವಾ ಹೊಸವರ್ಷದ ದಿನದಂದು ಸಾಯುತ್ತಾರೆ. ಸಾವಿಗೆ ಯಾವುದೇ ತಾರೀಖು ಗೊತ್ತಿಲ್ಲ. ತಿಳಿಯಿತಾ?
ನೀನು ಯಾವ ದಿನವನ್ನು ಆಚರಿಸುತ್ತೀಯೋ, ಆ ದಿನದಂದು ಅವಳು ತೀರಿಹೋದುದರಿಂದ ನಿನಗೆ ಕಸಿವಿಸಿಯಾಗುತ್ತದೆ. ಆದರೆ ಇದನ್ನು ನೋಡುವ ಇನ್ನೊಂದು ರೀತಿಯೆಂದರೆ - ಆ ದಿನದಂದು ಅವಳು ಇನ್ನೂ ವಿಶಾಲವಾದಳು. ಶರೀರದಲ್ಲಿರುವಾಗಿನ ದುಃಖಗಳಿಂದ, ರೋಗಗಳಿಂದ ಅವಳು ಹೊರಬಂದಳು. ಅವಳು ಮುಕ್ತಳಾದಳು. ಆದುದರಿಂದ ಅವಳಿಗೆ ಅದೊಂದು ಒಳ್ಳೆಯ ಸಂಗತಿ. ಅದು ಅವಳಿಗೆ ಪ್ರಕೃತಿಯಿಂದ, ದೇವರಿಂದ ದೊರೆತ ಒಂದು ಕ್ರಿಸ್ಮಸ್ ಉಡುಗೊರೆ. ಆ ರೀತಿಯಲ್ಲಿ ಯೋಚಿಸು, ಆಗ ನಿನ್ನ ಮನಸ್ಸು ಶಾಂತವಾಗಿರುತ್ತದೆ ಮತ್ತು ನಿನಗೆ ಕ್ರಿಸ್ಮಸ್ಸನ್ನು ಆಚರಿಸಲು ಸಾಧ್ಯವಾಗುತ್ತದೆ. ಅವಳು ಕ್ರಿಸ್ಮಸ್ ದಿನದಂದು ಮುಕ್ತಳಾದಳು ಮತ್ತು ಕ್ರಿಸ್ಮಸ್ ದಿನದಂದು ಅವಳು ಉನ್ನತಿಗೇರಿದಳು. ಇದಲ್ಲವೇ ನೋಡುವ ಉತ್ತಮ ರೀತಿ? ಆದುದರಿಂದ ಅವಳ ಮುಕ್ತಿ ಮತ್ತು ಬಿಡುಗಡೆಯನ್ನು ಆಚರಿಸು.
ಪ್ರಶ್ನೆ: ನನ್ನ ಸುತ್ತಲಿರುವ ಜನರು ಯಾವತ್ತೂ ತುಂಬಾ ನಕಾರಾತ್ಮಕವಾಗಿದ್ದರೆ ಏನು ಮಾಡುವುದು? ಎಲ್ಲದರ ಬಗ್ಗೆಯೂ ವಿಪರೀತವಾಗಿ ನಕಾರಾತ್ಮಕವಾಗಿರುವ ಒಬ್ಬ ಗೆಳೆಯ ನನಗಿದ್ದಾನೆ ಮತ್ತು ಸಮಯದೊಂದಿಗೆ ಆತನು ಇನ್ನೂ ಬಿಗಡಾಯಿಸುತ್ತಿರುವಂತೆ ಕಾಣಿಸುತ್ತಿದೆ.
ಶ್ರೀ ಶ್ರೀ ರವಿಶಂಕರ್:
ನೋಡು, ಯಾರಾದರೊಬ್ಬರು ಅಷ್ಟೊಂದು ಮಟ್ಟಿಗೆ ಸಂಪೂರ್ಣ ನಕಾರಾತ್ಮಕತೆಯ ಕಡೆಗೆ ಹೋದರೆ, ಅದು ಒಬ್ಬ ಮನುಷ್ಯನಿಗೆ ಅಷ್ಟು ಸುಲಭವಲ್ಲ. ಅಷ್ಟೊಂದು ನಕಾರಾತ್ಮಕವಾಗಿರುವುದು ಬಹುತೇಕ ಅಮಾನುಷವಾದುದು ಮತ್ತು ಅವನು ಅಷ್ಟು ದೂರ ಹೋಗಿರುವಾಗ, ಇನ್ನೂ ಮುಂದಕ್ಕೆ ಹೋಗಲು ಅವನಿಗೆ ಸಾಧ್ಯವಿಲ್ಲ, ಅವನು ಹಿಂದಕ್ಕೆ ಬರಲೇಬೇಕು ಯಾಕೆಂದರೆ ಎಲ್ಲವೂ ಒಂದು ಆವರ್ತನೆ. ತಿಳಿಯಿತಾ?
ನೀವು ತಳಭಾಗಕ್ಕೆ ಹೋದಾಗ, ಅಲ್ಲಿಂದ ಕೆಳಕ್ಕೆ ಹೋಗಲು ನಿಮಗೆ ಸಾಧ್ಯವಿಲ್ಲ. ನೀವು ಮೇಲಕ್ಕೆ ಬರಲೇಬೇಕು ಮತ್ತು ಅದನ್ನೇ ಅವನು ಹೇಳಿದುದು. ಅವನು ಎಷ್ಟೊಂದು ಕೆಟ್ಟುಹೋಗಿರುವನೆಂದರೆ, ಈಗ ಅವನು ಹಿಂದಕ್ಕೆ ಬರಲೇಬೇಕು. ಅದು, ಯಾರೂ ಮೂಲತಃ ಕೆಟ್ಟವರಲ್ಲ, ಕೆಟ್ಟದಾಗಿರುವುದು ಕೇವಲ ಆ ಕ್ರಿಯೆ ಎಂಬುದನ್ನು ರುಜುವಾತು ಪಡಿಸಲು ಇರುವುದು. ಆತ್ಮವು ಯಾವತ್ತೂ ಕೆಟ್ಟದಾಗಿರುವುದಿಲ್ಲ. ಆತ್ಮವು ಯಾವತ್ತೂ ಮುಕ್ತವಾಗಿರುತ್ತದೆ ಮತ್ತು ಅತ್ಯಾನಂದಭರಿತವಾಗಿರುತ್ತದೆ.
ಕಾರ್ಯಗಳಿಗೆ ಒಂದು ಸೀಮಿತ ವಲಯ ಮತ್ತು ಸಮಯವಿರುತ್ತದೆ. ನೋಡಿ, ನೀವೊಂದು ಕೆಟ್ಟ ಕೆಲಸವನ್ನು ಮಾಡಿದರೆ, ನೀವು ಯಾವತ್ತೂ ತೆಗೆಳಲ್ಪಡುವುದಿಲ್ಲ. ನಿಮಗೆ ಕೊಡುವ ಒಂದು ಶಿಕ್ಷೆ ಕೂಡಾ ಕೇವಲ ಕೆಲವೇ ವರ್ಷಗಳಿಗೆ ಮಾತ್ರ, ಮತ್ತು ಆ ಕೆಲವು ವರ್ಷಗಳಲ್ಲಿ ಕೂಡಾ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ, ಅಲ್ಲವೇ?
ಒಬ್ಬ ಖೈದಿ, ಅವನು ಯಾವುದೇ ಅಪರಾಧ ಮಾಡಿರಲಿ, ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆಯೇ? ಇಲ್ಲ, ಅವನನ್ನು ಸಹಾನುಭೂತಿಯಿಂದ ನೋಡಿಕೊಳ್ಳಲಾಗುತ್ತದೆ. ಇದನ್ನೇ ಪುರಾಣದಲ್ಲೂ ಹೇಳಲಾಗಿತ್ತು - ಅತ್ಯಂತ ಹೆಚ್ಚಿನ ಮಟ್ಟದ ಅಪರಾಧವನ್ನು ಮಾಡಿದ ಒಬ್ಬ ವ್ಯಕ್ತಿಯೂ, ಪವಿತ್ರರಾದವರೊಬ್ಬರ, ಜ್ಞಾನಿಗಳಾದವರೊಬ್ಬರ, ಸಕಾರಾತ್ಮಕ ಶಕ್ತಿ ತುಂಬಿದವರೊಬ್ಬರ ಸಂಪರ್ಕಕ್ಕೆ ಬಂದಾಗ, ಆ ಸಕಾರಾತ್ಮಕ ಶಕ್ತಿಯ ಪ್ರಭಾವವು ಎಷ್ಟು ಶಕ್ತಿಯುತವಾಗಿರುತ್ತದೆಯೆಂದರೆ, ಅದು ಕತ್ತಲಿನಲ್ಲೂ ಬೆಳಕನ್ನು ತರಬಹುದು. ನೋಡಿ, ಅತ್ಯಂತ ಕತ್ತಲಿರುವ ಜಾಗದಲ್ಲಿ ಬೆಳಕನ್ನು ತರಲು ಒಂದು ಮೇಣದ ಬತ್ತಿ ಸಾಕು.
ಪ್ರಶ್ನೆ: ಸಾವಿನ ನಂತರ ಏನಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಸಾವಿನ ನಂತರ ಏನಾಗುತ್ತದೆಯೆಂದರೆ, ಮನಸ್ಸು ಶರೀರದಿಂದ, ಆತ್ಮದಿಂದ ಬಿಡುಗಡೆಗೊಳ್ಳುತ್ತದೆ. ಮನಸ್ಸಿನಲ್ಲಿ ಸ್ಮರಣೆ ಮತ್ತು ಬುದ್ಧಿಯಿದೆ. ಈ ಎರಡು ಸಂಗತಿಗಳು ಒಂದು ಬುಗ್ಗೆಯಂತಾಗುತ್ತವೆ. ಕರ್ಮ, ಆಳವಾದ ಅಚ್ಚುಗಳು ಒಂದು ಬುಗ್ಗೆಯನ್ನು ರೂಪಿಸುತ್ತವೆ. ಅದು ನಿದ್ರೆಯಲ್ಲಿರುವಂತೆ. ಸಾವೆಂದರೆ ಒಂದು ಉದ್ದನೆಯ ನಿದ್ರೆಯಲ್ಲದೆ ಬೇರೇನೂ ಅಲ್ಲ. ನಿದ್ರಿಸಲು ಹೋಗುವ ಮೊದಲು ನಿಮಗೆ ಬರುವ ಕೊನೆಯ ಯೋಚನೆಯನ್ನು ನೋಡಿ ಮತ್ತು ನೀವು ಎದ್ದ ಕೂಡಲೇ ಬರುವ ಮೊದಲನೆಯ ಯೋಚನೆ ಯಾವುದೆಂದು ನೋಡಿ. ನೀವು ಗಮನಿಸಿದ್ದೀರಾ? ಅದು ಸುಮಾರಾಗಿ ಒಂದೇ ಆಗಿರುತ್ತದೆ.
ಆದುದರಿಂದ, ಭೌತಿಕ ಶರೀರವು ನಾಶವಾಗುತ್ತದೆ ಮತ್ತು ಸೂಕ್ಷ್ಮ ಶರೀರವು ಎಲ್ಲಾ ಅಚ್ಚುಗಳೊಂದಿಗೆ ಒಂದು ಬುಗ್ಗೆಯನ್ನು ರೂಪಿಸುತ್ತದೆ ಹಾಗೂ ಶರೀರವನ್ನು ಬಿಟ್ಟು ಅಡ್ಡಾಡುತ್ತಿರುತ್ತದೆ. ಒಂದು ಬುಗ್ಗೆಯು ತೂಗಾಡುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಅದೊಂದು ಪ್ರಕಾಶ; ಒಂದು ಶಕ್ತಿ.
ನಾನು ನಿಮಗೆ ಅತ್ಯುತ್ತಮವಾದ ಉದಾಹರಣೆಯನ್ನು ಕೊಡುತ್ತೇನೆ. ಒಂದು ದೂರದರ್ಶನ ಕೇಂದ್ರದಲ್ಲಿ, ಅವರೊಂದು ಕಾರ್ಯಕ್ರಮವನ್ನು ನಡೆಸುತ್ತಾರೆ ಮತ್ತು ನಂತರ ಅವರು ಅದನ್ನು ಡಿಶ್ ಮೂಲಕ ಪ್ರಸಾರ ಮಾಡುತ್ತಾರೆ. ಕಾರ್ಯಕ್ರಮವು ವಾತಾವರಣದಲ್ಲಿ ಉಳಿಯುತ್ತದೆ - ಇದು ಅದೇ ರೀತಿ. ನೀವು ಕಂಪ್ಯೂಟರಿನಿಂದ ಒಂದು ಇ-ಮೈಲನ್ನು ಕಳುಹಿಸುವಾಗ, ನೀವು ಎಲ್ಲಾ ಅಕ್ಷರಗಳನ್ನು ಟೈಪ್ ಮಾಡುತ್ತೀರಿ ಮತ್ತು ನಂತರ ’ಕಳುಹಿಸು’ ಎಂಬ ಗುಂಡಿಯನ್ನು ಒತ್ತುತ್ತೀರಿ. ಏನಾಗುತ್ತದೆ? ಅದು ಆಕಾಶದೊಳಕ್ಕೆ ಹೋಗುತ್ತದೆ. ಡೌನ್ ಲೋಡ್ ಮಾಡುವಲ್ಲಿಯ ವರೆಗೆ ನಿಮ್ಮ ಇ-ಮೈಲ್ ಆಕಾಶದಲ್ಲಿ ಉಳಿಯುತ್ತದೆಯೇ? ಹಲವಾರು ದಿನಗಳ ಬಳಿಕ ಕೂಡಾ ನಿಮಗೆ ನಿಮ್ಮ ಇ-ಮೈಲನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಒಂದು ವರ್ಷದ ಬಳಿಕ ಅಥವಾ ಹತ್ತು ವರ್ಷಗಳ ಬಳಿಕ ಕೂಡಾ ನಿಮಗೆ ಒಂದು ಇ-ಮೈಲನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತದೆ. ಅದಕ್ಕೆ ಯಾವುದೇ ಅಂತಿಮ ದಿನಾಂಕವಿರುವುದಿಲ್ಲ, ಅಲ್ಲವೇ? ಕೆಲವೊಮ್ಮೆ ಜನರು ನಿಮಗೆ, ೨೪ ಗಂಟೆಗಳಲ್ಲಿ ಕೊನೆಯಾಗುವ ಶುಭಾಶಯ ಪತ್ರಗಳನ್ನು ಕಳುಹಿಸುತ್ತಾರೆ. ಇದು ಹಾಗಲ್ಲ. ನೀವು ಕಳುಹಿಸುವ ಸಂದೇಶಗಳು ಅಥವಾ ಪತ್ರಗಳು ಆಕಾಶದಲ್ಲಿ ಪತ್ರಗಳಾಗಿ ನೇತಾಡುತ್ತಾ ಇರುವುದಿಲ್ಲ, ಅದು ಆಕಾಶದಲ್ಲಿ ಶಕ್ತಿಯಾಗಿ ಉಳಿಯುತ್ತದೆ. ಅದರಂತೆ, ಪ್ರತಿಯೊಂದು ಆತ್ಮವೂ ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಯಾಗಿದೆ ಮತ್ತು ಪ್ರತಿಯೊಂದು ಹೆಬ್ಬೆರಳೂ ವಿಭಿನ್ನವಾಗಿದೆ ಯಾಕೆಂದರೆ, ಒಂದು ಹೆಬ್ಬೆರಳು ಒಂದು ನಿರ್ದಿಷ್ಟ ಸೆಲ್ ಫೋನ್ ಚಿಪ್ ನ ಹಾಗೆ.
ಆದುದರಿಂದ ಸಾವಿನ ಬಳಿಕ, ಪ್ರತಿಯೊಂದು ವೈಯಕ್ತಿಕ ಶಕ್ತಿಯು ಮತ್ತು ಅದು ತೆಗೆದುಕೊಂಡ ಅಚ್ಚುಗಳು ಉಳಿದುಕೊಳ್ಳುತ್ತವೆ. ಇದರಂತೆ ಅದು ಅಲ್ಲಿ ಆ ಘಟ್ಟಗಳನ್ನು ಅನುಭವಿಸುತ್ತದೆ. ಆದರೆ, ನಂತರ ಕೆಲವು ಸಮಯದ ಬಳಿಕ ಆ ಆತ್ಮವು ತಿರುಗಿ ಬರುತ್ತದೆ. ಆತ್ಮವು ಶರೀರವನ್ನು ಮೂರು ಸಮಯಗಳಲ್ಲಿ ಪ್ರವೇಶಿಸುತ್ತದೆ - ಇದೆಲ್ಲವೂ ಒಂದು ರಹಸ್ಯ. ಇದು ಜನ್ಮ ರಹಸ್ಯ ಮತ್ತು ಮೃತ್ಯು ರಹಸ್ಯ ಎಂದು ಕರೆಯಲ್ಪಡುತ್ತದೆ.
ಆತ್ಮವು, ಗರ್ಭ ಧರಿಸುವ ಕ್ಷಣದಲ್ಲಿ ಪ್ರವೇಶಿಸುತ್ತದೆ ಅಥವಾ ಅದು ಐದನೆಯ ತಿಂಗಳಿನಲ್ಲಿ ಪ್ರವೇಶಿಸುತ್ತದೆ ಅಥವಾ ಹುಟ್ಟುವ ಸಮಯದಲ್ಲಿ. ಹೀಗೆ ಮೂರು ಭಾಗಗಳಿವೆ, ಆದರೆ ಅದು ಯಾವಾಗ ಪ್ರವೇಶಿಸುತ್ತದೆ ಎಂದು ನಿರ್ಧರಿಸಲು ಯಾವುದೇ ಮಾರ್ಗವಿಲ್ಲ.
ಹಾಗಾದರೆ, ಗರ್ಭಧರಿಸುವ ಸಮಯದಲ್ಲಿ ಅದು ಬಂದರೆ, ಅದರ ಬಗ್ಗೆ ಜಾಗ್ರತೆ ವಹಿಸಲು ಒಬ್ಬರು ಏನು ಮಾಡಬೇಕು? ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಿ. ಸಾಧಾರಣವಾಗಿ ಭಾರತದಲ್ಲಿ ಗರ್ಭಿಣಿ ಸ್ತ್ರೀಯರನ್ನು ಬಹಳ ಸಂತೋಷವಾಗಿಟ್ಟುಕೊಳ್ಳುತ್ತಾರೆ. ಅವಳು ಏನನ್ನೆಲ್ಲಾ ಬಯಸುತ್ತಾಳೋ ಅವುಗಳನ್ನೆಲ್ಲಾ ಅವಳಿಗೆ ಒದಗಿಸಲಾಗುತ್ತದೆ. ನಾನು ಹೇಳುವುದೇನೆಂದರೆ, ಈ ಎಲ್ಲಾ ಹಿಂಸಾತ್ಮಕ ಸಿನೆಮಾಗಳನ್ನು, ಭಯಗೊಳಿಸುವ ಹಾಡುಗಳನ್ನು ಮತ್ತು ಭಯಗೊಳಿಸುವ ವಿಷಯಗಳನ್ನು ನೋಡಬೇಡಿ. ಸಾಮಾನ್ಯವಾಗಿ, ಹಗುರವಾದ ಕೊಳಲಿನ ಸಂಗೀತವು ಒಳ್ಳೆಯದು ಯಾಕೆಂದರೆ ಅದು ಹಿತವಾಗಿರುತ್ತದೆ. ಸಂಗೀತವನ್ನು, ಜ್ಞಾನವನ್ನು ಕೇಳುವುದು ಒಳ್ಳೆಯದು. ಈ ಎಲ್ಲಾ ವಿಷಯಗಳಿಗೆ ಆದ್ಯತೆ ನೀಡಬೇಕು.
ಆತ್ಮವು, ಎಲ್ಲಿ ಹುಟ್ಟಬೇಕು, ಹುಟ್ಟಿ ಬರಬೇಕಾದ ಜಾಗವನ್ನು ಕೂಡಾ ಆಯ್ಕೆ ಮಾಡುತ್ತದೆ. ಅದರ ಇಚ್ಛೆಯ ಪ್ರಕಾರ ಅದು ಅಲ್ಲಿಗೆ ಸುಮ್ಮನೇ ಬರುತ್ತದೆ.
ಪ್ರಶ್ನೆ: ಆತ್ಮವು ಯಾವತ್ತಾದರೂ ಸಾಯುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಆತ್ಮವು ಯಾವತ್ತೂ ಸಾಯುವುದಿಲ್ಲ. ಅದು ಹೇಗೆಂದರೆ, ನೀನು ಒಂದು ರೈಲಿನೊಳಕ್ಕೆ ಹತ್ತುವೆ ಮತ್ತು ಆ ರೈಲು ಹಾಳಾಯಿತು. ನಂತರ ನೀನು ಹೊರಕ್ಕೆಬಂದೆ ಮತ್ತು ಇನ್ನೊಂದು ರೈಲಿನೊಳಕ್ಕೆ ಹತ್ತಿದೆ. ಅಷ್ಟೆ.
ಪ್ರಶ್ನೆ: (ಸಭಿಕರಲ್ಲೊಬ್ಬನು ಕೂಡಲೇ ಒಂದು ಪ್ರಶ್ನೆಯನ್ನು ಕೇಳಿದನು ಮತ್ತು ಅದು ರೆಕಾರ್ಡಿಂಗಿನಲ್ಲಿ ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಹೌದು, ಮಾನವ ಜೀವನವು, ಹಿತಕರ ಮತ್ತು ಅಹಿತಕರ ದಿನಗಳ ಮಿಶ್ರಣವಾಗಿದೆ. ಶ್ರೀರಾಮ, ಕೃಷ್ಣ, ಯೇಸು, ಬುದ್ಧ, ಮಹಾವೀರ ಅಥವಾ ಗುರು ನಾನಕ್ ಇವರನ್ನೊಳಗೊಂಡಂತೆ ನೀನು ಯಾರ ಜೀವನವನ್ನಾದರೂ ತೆಗೆದುಕೋ. ಚರಿತ್ರೆಯಲ್ಲಿ ಯಾರನ್ನಾದರೂ ತೆಗೆದುಕೋ, ಅವರೆಲ್ಲರಿಗೂ ಕೆಲವು ಕೆಟ್ಟ ದಿನಗಳಿದ್ದವು, ಹಾಗೆಯೇ ಕೆಲವು ದಿನಗಳು ಒಳ್ಳೆಯದಾಗಿದ್ದವು. ಪ್ರಧಾನವಾದುದೇನೆಂದರೆ, ಕೆಟ್ಟ ದಿನಗಳಲ್ಲಿ ಕೆಳಗಿಳಿದು ಹೋಗಬೇಡ ಮತ್ತು ಒಳ್ಳೆಯ ದಿನಗಳಲ್ಲಿ ಆಕಾಶಕ್ಕೇರಬೇಡ. ನಿನ್ನ ಸಮಚಿತ್ತತೆ ಮತ್ತು ಘನತೆಯನ್ನು ಕಾಪಾಡು. ಇದನ್ನೇ ನಿನಗೆ ಜ್ಞಾನವು ಕಲಿಸುವುದು. ಹೌದು, ಕೆಲವು ಕೆಟ್ಟ ದಿನಗಳಿರುತ್ತವೆ, ಆದರೆ ನಿನ್ನಲ್ಲಿ ಜ್ಞಾನವಿದ್ದರೆ, ನೀನು ಸುಮ್ಮನೇ ಅವುಗಳ ಮೂಲಕ ತೇಲಿಹೋಗುವೆ ಮತ್ತು ಅವುಗಳಿಂದ ಹೊರ ಬರುವೆ. ಅದು ನಿನ್ನ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ.
ಕರ್ಮದ ನಿಯಮವು ಬಹಳ ಆಸಕ್ತಿಕರವಾಗಿದೆ ಮತ್ತು ಬಹಳ ವಿಚಿತ್ರವಾಗಿದೆ. ಮಳೆ ಬರಬೇಕೆಂದಿದ್ದರೆ, ಮಳೆ ಬರುತ್ತದೆ. ಆದರೆ ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಆಯ್ಕೆ. ನೀವು ರೈನ್ ಕೋಟ್ ಹಾಕಿಕೊಂಡು ಮಳೆಯಲ್ಲಿ ನಡೆದರೆ, ಅಷ್ಟೊಂದು ಒದ್ದೆಯಾಗುವುದಿಲ್ಲ, ಕೇವಲ ಕೆಲವೇ ಹನಿಗಳು ನಿಮ್ಮ ಮುಖದ ಮೇಲೆ ಬೀಳುತ್ತವೆ. ಆದರೆ ನೀವು ಛತ್ರಿಯಿಲ್ಲದೇ ನಡೆದರೆ, ಸಂಪೂರ್ಣವಾಗಿ ಒದ್ದೆಯಾಗುತ್ತೀರಿ ಮತ್ತು ನೀವು ಬಂದು ನಿಮ್ಮ ಬಟ್ಟೆಗಳನ್ನು ಬದಲಾಯಿಸಬೇಕಾಗುತ್ತದೆ. ಇವುಗಳೆಲ್ಲಾ - ಸಾಧನೆ, ಧ್ಯಾನ, ಸತ್ಸಂಗ, ಹಾಡು, ಜ್ಞಾನ, ಇವುಗಳೆಲ್ಲಾ ಛತ್ರಿಗಳು ಹಾಗೂ ರೈನ್ ಕೋಟುಗಳು.
ಆದುದರಿಂದ ಜನರನ್ನುತ್ತಾರೆ, "ಓ, ನಿನಗೀಗ ಕೆಟ್ಟಕಾಲವಾಗಿದ್ದರೆ, ಟೊಳ್ಳು ಮತ್ತು ಖಾಲಿ ಧ್ಯಾನವನ್ನು ಮಾಡು, ಸ್ವಲ್ಪ ಓಂ ನಮಃ ಶಿವಾಯ ಜಪವನ್ನು ಮತ್ತು ಹಾಡುವುದನ್ನು ಮಾಡು."
ನೀವು ಮನಸ್ಸಿನಲ್ಲಿ ಸ್ವಲ್ಪ ನಕಾರಾತ್ಮಕತೆಯನ್ನು ಅನುಭವಿಸಬಹುದು, ಆದರೆ ಅವುಗಳು ಕೇವಲ ಬರುತ್ತವೆ ಮತ್ತು ಮಾಯವಾಗುತ್ತವೆ. ನೀವು ಅದರೊಳಕ್ಕೆ ಆಳವಾಗಿ ಹೋದಾಗ, ಅವುಗಳು ನಿಮ್ಮನ್ನು ಮುಟ್ಟದೇ ಇರುವ ಒಂದು ಸಮಯ ಬರುತ್ತದೆ ಮತ್ತು ಅವುಗಳು ನಿಮ್ಮ ಹತ್ತಿರಕ್ಕೆ ಕೂಡಾ ಬರುವುದಿಲ್ಲ. ಅದು ಆತ್ಮಸಾಕ್ಷಾತ್ಕಾರ.
ಪ್ರಶ್ನೆ: ಜ್ಯೋತಿಷ್ಯದ ಬಗ್ಗೆ ನಿಮ್ಮ ಅನಿಸಿಕೆಯೇನು?
ಶ್ರೀ ಶ್ರೀ ರವಿಶಂಕರ್:
ಅದಕ್ಕೇ ನಾನು ಹೇಳುವುದು, ಇದು ಒಂದು ರೀತಿಯಲ್ಲಿ ಕಳೆದುಹೋದ ವಿಜ್ಞಾನ. ಜ್ಯೋತಿಷ್ಯವು ಒಂದು ವಿಜ್ಞಾನವಾಗಿದೆ ಆದರೆ ಜ್ಯೋತಿಷಿಗಳಲ್ಲ. ಅವರು ಕೇವಲ ಕಥೆಕಟ್ಟಿ ಹೇಳುತ್ತಾರೆ. ನೀವು ನಿಮ್ಮ ಅಂತಃಸ್ಫುರಣೆಯನ್ನು ಅನುಸರಿಸಬೇಕು. ಈ ವಿಷಯಗಳ ಬಗ್ಗೆ ನೀವು ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಅದರ ಬಗೆಗಿನ ಒಂದು ಸಾಮಾನ್ಯ ಕಲ್ಪನೆ ಪರವಾಗಿಲ್ಲ. ಉದಾಹರಣೆಗೆ, ಒಂದು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ, ಚಂದ್ರನ ಪ್ರಭಾವ ನಿಮ್ಮ ಮನಸ್ಸಿನ ಮೇಲಾಗುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? ನಿಮ್ಮಲ್ಲಿ ಎಷ್ಟು ಮಂದಿಗೆ ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ನಿದ್ರಿಸಲು ಸಾಧ್ಯವಾಗುವುದಿಲ್ಲ? ಚಂದ್ರ ಮತ್ತು ಮನಸ್ಸಿನ ನಡುವೆ ಬಹಳಷ್ಟು ಸಂಬಂಧವಿದೆ. ಆದುದರಿಂದ ಈ ರೀತಿ ಆಗುತ್ತದೆ. ಕೇವಲ ಜಾಗ್ರತೆಯಾಗಿರಿ, ಅಷ್ಟೆ, ಭ್ರಮೆಗೊಳಗಾಗಬೇಡಿ. ಭ್ರಮೆಗೊಳಗಾಗುವುದು ಮತ್ತು ಕೇವಲ ಒಂದು ಕಲ್ಪನೆಯನ್ನು ಹೊಂದಿರುವುದರ ನಡುವೆ ದೊಡ್ಡ ವ್ಯತ್ಯಾಸವಿದೆ. ಅದರ ಬಗ್ಗೆ ಜಾಗ್ರತೆಯಾಗಿರಿ.
ಪ್ರಶ್ನೆ: ಗುರೂಜಿ, ನಾನು ಬಹಳಷ್ಟು ಜ್ಞಾನವನ್ನು ಓದುತ್ತೇನೆ ಮತ್ತು ಕೇಳುತ್ತೇನೆ. ಆದರೆ, ನಾನು ಕೇಳಿದುದನ್ನು ಬಹುತೇಕವಾಗಿ ಕೂಡಲೇ ಮರೆತುಬಿಡುತ್ತೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಚಿಂತಿಸಬೇಡ; ನಾನು ನಿನ್ನೊಂದಿಗೆ ಮಾತನಾಡುತ್ತಾ ಇರುತ್ತೇನೆ. ಒಂದು ನೂರು ಸಲ ನೀನು ಮರೆತು ಬಿಟ್ಟರೂ ಪರವಾಗಿಲ್ಲ, ನನ್ನಲ್ಲಿ ಸಾಕಷ್ಟು ತಾಳ್ಮೆಯಿದೆ. ನಾನು ಹೇಳಿದ ವಿಷಯಗಳನ್ನೇ ಹೇಳುತ್ತಾ ಇರುತ್ತೇನೆ.
ನಿನ್ನೊಂದಿಗೆ ಮಾತನಾಡುವವರು ಕೂಡಾ ಅದೇ ಪರಿಸ್ಥಿತಿಯಲ್ಲಿದ್ದಾರೆ. ಇಲ್ಲಿರುವ ಹಲವಾರು ಜನರು, ಅವರು ಹೇಳುತ್ತಾರೆ, ಆದರೆ ಇನ್ನೊಂದು ಬದಿಯಲ್ಲೇ ಇರುತ್ತಾರೆ. ಪರವಾಗಿಲ್ಲ! ನೀನು ಯಾವತ್ತಾದರೂ ಅಷ್ಟಾವಕ್ರ ಗೀತೆಯನ್ನು ಕೇಳಿದ್ದೀಯಾ? ಮರೆತುಬಿಟ್ಟಿರುವೆ, ಸರಿಯಾ?! ಅದರಲ್ಲಿರುವ ಒಂದು ಮಾತನ್ನು ಕೇಳಿದ್ದೀಯಾ, "ಭಾಗ್ಯವಂತರು ಯಾರೆಂದರೆ, ಯಾರು ಮರೆತುಬಿಟ್ಟಿರುವರೋ ಅವರು."
ಆದುದರಿಂದ ನೀನು ಅದಕ್ಕೆ ಸೇರಬೇಕು. ಅಷ್ಟಾವಕ್ರ ಗೀತೆಯಲ್ಲಿ ಒಂದು ಮಾತಿದೆ. ಅಲ್ಲಿ ಅಷ್ಟಾವಕ್ರನು ಹೇಳುತ್ತಾನೆ, "ಯಾರು ಎಲ್ಲವನ್ನೂ ಮರೆಯಬಲ್ಲರೋ ಅವರು ಭಾಗ್ಯವಂತರು." ಆದುದರಿಂದ ನೀನು ಆ ವರ್ಗಕ್ಕೆ ಸೇರಿದವನೆಂದು ಕಾಣುತ್ತದೆ. ಆದರೆ ಕನಿಷ್ಠಪಕ್ಷ, ನೀನು ಭಾಗ್ಯವಂತನೆಂಬುದನ್ನು ಮರೆಯಬೇಡ. "ನಾನು ಭಾಗ್ಯವಂತನು", ಕೇವಲ ಇದೊಂದು ವಿಷಯವನ್ನು ನೀನು ನೆನಪಿನಲ್ಲಿಟ್ಟುಕೊಂಡರೆ ಸಾಕು.
ಪ್ರಶ್ನೆ: ಗುರೂಜಿ, ನಾನು ನನ್ನ ಅಂತಃಸ್ಫುರಣೆಯನ್ನು ಕಳೆದುಕೊಂಡಿದ್ದೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ನೀನು ಸರಿಯಾದ ಜಾಗದಲ್ಲಿರುವೆ, ತೊಂದರೆಯಿಲ್ಲ. ನೋಡು, ನಿನ್ನೆ ನಾವು ಮಾಳಿಗೆಯಲ್ಲಿ, ಕೃಷ್ಣ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದೆವು ಮತ್ತು ಅಚಾನಕ್ಕಾಗಿ, ನಾನು ನೆಲಮಾಳಿಗೆಗೆ ಹೋಗಿ ಅದನ್ನು ನೋಡಬೇಕು ಎಂದು ನಾನಂದೆ. ಬಹುಶಃ ನಾನು ನೆಲಮಾಳಿಗೆಗೆ ಹೋಗಿ ಒಂದು ವರ್ಷಕ್ಕಿಂತಲೂ ಮೇಲಾಯಿತು. ಹಾಗೆ ನಾನಂದೆ, ನಾನು ನೆಲಮಾಳಿಗೆಗೆ ಹೋಗಲು ಬಯಸುತ್ತೇನೆಂದು ಮತ್ತು ನಾವೆಲ್ಲರೂ ಅಲ್ಲಿಗೆ ಹೋದೆವು. ನೆಲಮಾಳಿಗೆಯಲ್ಲಿ ನಾನು ಅಚಾನಕ್ಕಾಗಿ ಒಂದು ಕೋಣೆಗೆ ಹೋಗಿ ಕೇಳಿದೆ, "ಈ ಕೋಣೆಯಲ್ಲಿ ಯಾರು ವಾಸಿಸುತ್ತಿದ್ದಾರೆ?" ಅವರಂದರು, "ನಮಗೆ ತಿಳಿಯದು, ಯಾರೋ ವಾಸಿಸುತ್ತಿದ್ದಾರೆ."
ನಾನಂದೆ, "ಬಾಗಿಲನ್ನು ತೆರೆಯಿರಿ." ನಾವು ಬಾಗಿಲನ್ನು ತೆರೆದೆವು ಮತ್ತು ಅಲ್ಲೊಂದು ಮೇಣದ ಬತ್ತಿಯು ಉರಿಯುತ್ತಿರುವುದು ನಮಗೆ ಕಾಣಿಸಿತು. ಮೇಣದ ಬತ್ತಿಯು ಬಹುತೇಕ ಉರಿದು ಮುಗಿದಿತ್ತು ಮತ್ತು ಬೆಂಕಿಯು, ಹಾಸಿಗೆ ಮತ್ತು ಮಂಚಕ್ಕೆ ತಗಲುವುದರಲ್ಲಿತ್ತು. ಅಲ್ಲೊಂದು ಅಗ್ನಿ ದುರಂತ ಸಂಭವಿಸುವುದರಲ್ಲಿತ್ತು ಯಾಕೆಂದರೆ, ಮೇಣದಬತ್ತಿಯ ಜ್ವಾಲೆಯು ಎಲ್ಲೆಡೆ ಹರಡಿತ್ತು. ನಾವು ಹತ್ತು ನಿಮಿಷ ಕಳೆದು ಅಲ್ಲಿಗೆ ಹೋಗಿರುತ್ತಿದ್ದರೆ, ಬಹುಶಃ ಹಾಸಿಗೆಗೆ ಬೆಂಕಿ ಹಿಡಿಯುತ್ತಿತ್ತು. ಯಾರೋ ಮೇಣದಬತ್ತಿಯನ್ನು ಹೊತ್ತಿಸಿ, ಮರೆತುಬಿಟ್ಟಿದ್ದರು. ಅಲ್ಲಿಗೆ, ಆ ಕೋಣೆಗೆ ಹೋಗಲು ನನಗೆ ಯಾವುದೇ ಕಾರ್ಯವಿರಲಿಲ್ಲ.
ಅದು ಅಂತಃಸ್ಫುರಣೆ. ನಾನಲ್ಲಿಗೆ ಹೋಗಬೇಕೆಂದು ನನಗನ್ನಿಸಿತು ಮತ್ತು ನಾನು ಅದೇ ಕೋಣೆಯನ್ನು ತೆರೆದೆ. ನಾನು ಯಾವತ್ತೂ ಹೋಗಿ ಒಬ್ಬರ ಕೋಣೆಯನ್ನು ತೆರೆಯುವುದಿಲ್ಲ. ಆದರೆ ಈಗ ನಿಮಗೆ ತಿಳಿದಿರಬಹುದು, ಎಲ್ಲವೂ ಸಾಧ್ಯವಿದೆ. ನಾನು ಯಾರ ಕೋಣೆಗೆ ಬೇಕಾದರೂ ನುಗ್ಗಬಹುದು. ಹೀಗೆ ನಾನು ಆ ಕೋಣೆಯೊಳಕ್ಕೆ ನುಗ್ಗಿದೆ ಮತ್ತು ಅಲ್ಲಿ ಯಾರೂ ಇರಲಿಲ್ಲವೆಂಬುದು ತಿಳಿಯಿತು ಹಾಗೂ ಮೇಣದಬತ್ತಿಯು ಉರಿಯುತ್ತಿತ್ತು.
ಆದುದರಿಂದ, ಅಂತಃಸ್ಫುರಣೆಯೆಂಬುದು ಎಲ್ಲರೂ ಹುಟ್ಟುವಾಗಲೇ ಪಡಕೊಂಡು ಬಂದುದು ಮತ್ತು ಎಲ್ಲರ ಬಳಿಯೂ ಅದು ಇದೆ. ನೀವು ಹೆಚ್ಚು ಟೊಳ್ಳು ಮತ್ತು ಖಾಲಿಯಾದಷ್ಟೂ, ನೀವು ಹೆಚ್ಚು ಧ್ಯಾನಸ್ತರಾದಷ್ಟೂ, ಅದು ತುಂಬಾ ಸ್ಪಷ್ಟವಾಗುತ್ತದೆ. ಅಲ್ಲವೇ?
ಆದುದರಿಂದ, ನಿಮ್ಮ ಕೋಣೆಯಲ್ಲಿ ಮೇಣದ ಬತ್ತಿಯನ್ನು ಹೊತ್ತಿಸಿ ಅಲ್ಲಿಂದ ಮಾಯವಾಗಿಬಿಡಬೇಡಿ, ಸರಿಯಾ!
ಪ್ರಶ್ನೆ: ಆತ್ಮದ ಪ್ರಪಂಚವು ಎಲ್ಲಿದೆ?
ಶ್ರೀ ಶ್ರೀ ರವಿಶಂಕರ್:
ಅದು ಎಲ್ಲೋ ಇಲ್ಲ, ಅದು ಇಲ್ಲಿಯೇ ಇದೆ.