ಗುರುವಾರ, ಫೆಬ್ರವರಿ 10, 2011

ಬುಧವಾರ ಮಾರ್ಚ್ ೨೪, ೨೦೦೯

ಬೇಸುವ ತಂಗಾಳಿ ಮಧುರವಾಗಿರಲಿ,
ಸಾಗರಗಳಿಂದ ಮಧು ಹೊರಹೊಮ್ಮಲಿ,

ಸಮಸ್ತ ವನಸ್ಪತಿಗಳೂ ನಮಗೆ ಅನುಕೂಲಕರವಾಗಲಿ
ರಾತ್ರಿಗಳು ಸಿಹಿಯಾಗಿರಲಿ, ಹಗಲುಗಳೂ ಸಿಹಿಯಾಗಿರಲಿ
ಈ ಭೂಮಂಡಲ ಕಣಕಣವೂ ನಮಗೆ ಸವಿಯಾಗಿರಲಿ
ಪರಲೋಕಗಳು, ಪಿತೃಗಳು ನಮಗೆ ಅನುಕೂಲಕರವಾಗಿರಲಿ
ಸಮಸ್ತ ಸಸ್ಯರಾಶಿಗಳೂ ಜೇನು ತುಂಬಿ ತುಳುಕಲಿ
ಸೂರ್ಯನೂ ಸಿಹಿಯಾಗಿರಲಿ,

ನಮ್ಮನ್ನು ಸ್ಪರ್ಶಿಸುವ ಎಲ್ಲ ವಿಕಿರಣಗಳೂ ನಮ್ಮನ್ನು ಪ್ರೀತಿಸಲಿ,
ಎಲ್ಲ ಪ್ರಾಣಿಗಳೂ ನಮಗೆ ಪ್ರಿಯವಾಗಲಿ
ನಮ್ಮ ಅನ್ನವು ಸಿಹಿಯಾಗಿರಲಿ
ನಮ್ಮ ಎಲ್ಲ ಯೋಚನೆಗಳೂ, ಮಾತುಗಳೂ
ಜೇನಿನಂತೆ ಮಧುರವಾಗಿರಲಿ
ನಮ್ಮ ಜೀವನ ಪರಿಶುದ್ಧವಾಗಿರಲಿ, ದಿವ್ಯವಾಗಿರಲಿ
ಜೀವನವು ಜೇನಿನಂತೆ ಮಧುರವಾಗಿರಲಿ.
                          - ಶ್ರೀ ಶ್ರೀ ರವಿಶಂಕರ್