ಶುಕ್ರವಾರ, ಮಾರ್ಚ್ 26, 2010

ನಾದದಿಂದ ಸಾಮರಸ್ಯ ಜನಿಸುತ್ತದೆ

ಬೆಂಗಳೂರು ಆಶ್ರಮ, ಮಾರ್ಚ್ ೨೬ ( ಶುಕ್ರವಾರ ) ರಾತ್ರಿ ೮.೩೦

೭೦೦ ಜನ ನೆರೆದಿದ್ದ ಸತ್ಸಂಗದಲ್ಲಿ ಗುರೂಜಿಯವರು " ನಾದದಿಂದ ಸಾಮರಸ್ಯ ಜನಿಸುತ್ತದೆ " ಎಂದು ಹೇಳಿದರು. ದೇಹದ ಕಣಕಣಗಳ ಮೇಲೆ ಶಬ್ದದ ಪ್ರಭಾವವನ್ನು ವಿವರಿಸುತ್ತ ಅವರು "ಸತ್ಸಂಗದಲ್ಲಿ ಉಂಟಾಗುವ ಸತ್ಪರಿಣಾಮ ಇದು, ನಿಮ್ಮ ದೇಹವು ಸೂಕ್ಷ್ಮವಾದ ಕಣಗಳಿಂದ ಮಾಡಲ್ಪಟ್ಟಿದೆ. ಇವುಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ. ಇದರಿಂದಾಗಿಯೇ ನಾವು ಸತ್ಸಂಗಕ್ಕೆ ಮಹತ್ವ ನೀಡುತ್ತೇವೆ. ನೀವು ಸತ್ಸಂಗದಲ್ಲಿದ್ದಾಗ ಅದರಲ್ಲಿ ಮುಳುಗಿಬಿಡಿ. ಅದು ನಿಮ್ಮ ದೇಹದ ಕಣಕಣಗಳನ್ನೂ ಬದಲಾಯಿಸುತ್ತದೆ. ನಿಮ್ಮ ದೇಹವ್ಯವಸ್ಥೆಯನ್ನು ಪುನರ್ವ್ಯವಸ್ಥೆ ಮಾಡುತ್ತದೆ. ವಿಜ್ಞಾನಿಗಳು ಸೀಮೆಸುಣ್ಣದ ಧೂಳು, ಕಬ್ಬಿಣದ ರಜ ಮುಂತಾದವುಗಳು ಸಂಗೀತದ ಲಯಕ್ಕೆ ನರ್ತಿಸುತ್ತ ಸುಂದರ ವಿನ್ಯಸಗಳಾಗಿ ಸಜ್ಜಾಗುತ್ತವೆ" ಎಂದು ಅವರು ಹೇಳಿದರು.

" ಈ ಎಲ್ಲವೂ ಏನೂ ಅಲ್ಲ " ಎನ್ನುವ ಅದ್ವೈತ ತತ್ವವನ್ನು ಜರ್ಮನಿಯ ವಿಜ್ಞಾನಿ ಶ್ರೀ ಹ್ಯಾನ್ಸ್ ಪೀಟರ್ ಅವರ ಅಧ್ಯಯನಗಳು ಸಾಬೀತುಪಡಿಸಿವೆ ಎಂದೂ ಗುರೂಜಿ ತಿಳಿಸಿದರು.