ಶುಕ್ರವಾರ, ಮಾರ್ಚ್ 26, 2010

ವ್ಯವಹಾರ ಮತ್ತು ಆಧ್ಯಾತ್ಮ

ಗುರುವಾರ, ಮಾರ್ಚ್ ೨೬, ೨೦೦೯

ಆಧ್ಯಾತ್ಮವಾದಿಗಳು ವ್ಯಾಪಾರದ ಕುರಿತು ಸಾಮಾನ್ಯವಾಗಿ ತಿರಸ್ಕಾರವನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯವಹಾರಸ್ಥರು ಆಧ್ಯಾತ್ಮವನ್ನು ಅಪ್ರಯೋಜಕ ಎಂದು ಪರಿಗಣಿಸುತ್ತಾರೆ. ಆದರೆ ನಮ್ಮ ಹಿಂದಿನವರು ಆಧ್ಯಾತ್ಮವನ್ನು ಹೃದಯ ಎಂದು ಪರಿಗಣಿಸಿದರೆ ವ್ಯವಹಾರವನ್ನು ಕಾಲುಗಳು ಎಂದು ಪರಿಗಣಿಸಿದ್ದರು. ಇವೆರಡರಲ್ಲಿ ಯಾವುದೊಂದು ಕೊರತೆಯಾದರೂ ಆ ಸಮಾಜ ಪರಿಪೂರ್ಣವಾಗಲಾರದು. ವ್ಯವಹಾರದಿಂದ ಭೌತಿಕ ಸೌಕರ್ಯಗಳು ಒದಗಿದರೆ ಆಧ್ಯಾತ್ಮವು ಮಾನಸಿಕ ನೆಮ್ಮದಿಯನ್ನು ಉಂಟುಮಾಡುತ್ತದೆ. 

ಆಧ್ಯಾತ್ಮವು ವ್ಯವಹಾರದಲ್ಲಿ ಸನ್ನಡತೆ ಮತ್ತು ಸದಾಚಾರಗಳನ್ನು ಉಂಟುಮಾಡುತ್ತದೆ. ದೇಹ | ಮನಸ್ಸುಗಳ ಸಂಕೀರ್ಣ ವ್ಯವಸ್ಥೆಯಲ್ಲಿ ಯಾವುದೇ ಒಂದಕ್ಕೆ ನೆಮ್ಮದಿಯನ್ನು ತಪ್ಪಿಸಿದರೂ ಎರಡಕ್ಕೂ ಅದರಿಂದ ಹಾನಿಯುಂಟಗುತ್ತದೆ. ಬಡವರ ಜೀವನದ ಮೂಲ ಸೌಕರ್ಯಗಳಾನ್ನು ಗಮನಿಸದೆ ಅವರೊಂದಿಗೆ ಆಧ್ಯಾತ್ಮದ ಮಾತನಾಡಬಾರದು. ಅವರಿಗೆ ಭೌತಿಕವಾಗಿ ಸಹಾಯ ಮಾಡಬೇಕು. ಈ ಜಗತ್ತಿನಲ್ಲಿ ಸೇವೆಯಿಂದ ಹೊರತಾದ ಆಧ್ಯಾತ್ಮವಿಲ್ಲ. ಭೌತಿಕವಾದ ಅವಶ್ಯಕತೆಗಳನ್ನು ಅಲಕ್ಷಿಸಿ ಸೇವೆ ಸಾಧ್ಯವಿಲ್ಲ. ಬಾಯಿ ಮಾತಿನಲ್ಲಿ ಸೇವೆ ಆಗುವುದಿಲ್ಲ. ಸೇವೆಯು ಕಾಯಕವನ್ನು ಬಯಸುತ್ತದೆ.

ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ದೊಷಗಳಿರುತ್ತವೆ. ಬಂಡವಾಳರಾಹಿಯು ಬಡವರನ್ನು ಶೋಷಿಸಿದರೆ ಸಮಾಜವಾದವು ವೈಯಕ್ತಿಕ ಪ್ರತಿಭೆಯನ್ನು ಹಾಗೂ ಸಾಹಸೀ ಪ್ರವೃತ್ತಿಯನ್ನು ನಾಶಮಾಡುತ್ತದೆ. ಆಧ್ಯಾತ್ಮವು ಬಂಡವಾಳರಾಹಿ ಮತ್ತು ಸಮಾಜವಾದದ ನಡುವಣ ಸೇತುವೆ. ಆಧ್ಯಾತ್ಮವು ಬಂಡವಾಳರಾಹಿಗೆ ಸೇವೆ ಮಾಡುವ ಹೃದಯವನ್ನು ಕರುಣಿಸಿದರೆ ಸಮಾಜವಾದಿಗೆ ಸೃಜನಶೀಲತೆಯ ಚೈತನ್ಯವನ್ನು ನೀಡುತ್ತದೆ.