ಸೋಮವಾರ, ಮಾರ್ಚ್ 29, 2010

ಮನಸ್ಸಿನ ಕ್ಷುದ್ರತೆಯನ್ನು ನಿವಾರಿಸಲು ಆಧ್ಯಾತ್ಮ ಜ್ಞಾನದಿಂದ ಮಾತ್ರ ಸಾಧ್ಯ.

ಬೆಂಗಳೂರು ಆಶ್ರಮ : ಮಾರ್ಚ್ ೨೯ (ಭಾನುವಾರ) ಸಂಜೆ ೫.೩೦. 

ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ೫೦೦೦ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಸತ್ಸಂಗದಲ್ಲಿ ಗುರೂಜಿಯವರು ಕನ್ನಡ, ಹಿಂದಿ, ತಮಿಳು, ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು. ರಾಜಕೀಯ, ಮುಂಬರುವ ಚುನಾವಣೆ, ಭಯೋತ್ಪಾದನೆಗೆ ಪರಿಹಾರ, ಯುವಜನರ ಪಾತ್ರ, ಆಧ್ಯಾತ್ಮದ ಮಹತ್ವ....... ಹೀಗೆ ಅನೇಕ ವಿಷಯಗಳ ಕುರಿತು ಗುರೂಜಿ ಸಂವಾದ ನಡೆಸಿದರು. 

ರಾಜಕೀಯದ ಕುರಿತಾದ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಗುರೂಜಿಯವರು ಸಚ್ಚಾರಿತ್ರ್ಯವಿರುವ ಹಾಗೂ ಕರ್ತವ್ಯನಿಷ್ಠ ಅಭ್ಯರ್ಥಿಗಳಿಗೆ ಮತನೀಡಬೇಕು. ಜನಸೇವೆಯೇ ಜನಾರ್ದನ ಸೇವೆ. ನೀವೆಲ್ಲರೂ ಹಳ್ಳಿಗಳಿಗೆ ತೆರಳಿ ಬದಲಾವಣೆಯನ್ನು ತರುವಂತೆ ಜನರಿಗೆ ತಿಳಿಹೇಳಬೇಕು ಎಂದು ಕರೆನೀಡಿದರು. ಹೃದಯಗಳು ಮಿಲನವಾದಾಗ ಆಡುವ ಮಾತೆಲ್ಲವೂ ಸಂಗೀತವೇ ಆಗಿರುತ್ತದೆ. ಆದುದರಿಂದಲೇ ಪ್ರೇಮಿಗಳು ಅದೇ ವಿಷಯಗಳನ್ನು ಪದೇ ಪದೇ ಹೇಳಿದರೂ ಇನ್ನೂ ಕೇಳಿಸಿಕೊಳ್ಳುವ ಉತ್ಸುಕತೆ ಹೊಂದಿರುತ್ತಾರೆ. ಹೃದಯಗಳ ಮೂಲಕ ಸಂಬಂಧ ಬೆಳೆದಿರುವುದೇ ಇದಕ್ಕೆ ಕಾರಣ. ಮನಸ್ಸಿನಲ್ಲಿ ಮಾಧುರ್ಯವಿಲ್ಲದಿದ್ದರೆ ಸುಂದರವಾದ ಮಾತುಗಳೂ ಚಡಪಡಿಕೆಯನ್ನು ಉಂಟುಮಾಡಬಲ್ಲವು. ಮನಸ್ಸು ಮಧುರವಾಗಿದ್ದರೆ ಇಡೀ ಜಗತ್ತೇ ಮಧುರವಾಗಿರುತ್ತದೆ.

ನಾವು ಮೂರು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು
೧. ನಾವು ಸಮಾಜಕ್ಕಾಗಿ ಏನಾದರೂ ಮಾಡಬೇಕು
೨. ನಾವು ಜೀವನದಲ್ಲಿ ಗಳಿಸಿದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕು
೩. ನಮ್ಮ ಎಷ್ಟು ಕೆಲಸಗಳು ಇತರರಿಗೆ ಸಂತೋಷವನ್ನುಂತು ಮಾಡಿವೆ?
ಎಷ್ಟು ಜನರು ನಮ್ಮನ್ನು ಸಂತೋಷಪಡಿಸಿದ್ದಾರೆ? ನಾವು ನಮ್ಮ ಸಂತೋಷಕ್ಕಾಗಿ ಮಾಡುವ ಈ ಕೆಲಸ ಇತರರಿಗೆ ದುಃಖವನ್ನು ನೀಡುತ್ತದೆ. ಇತರರ ಸಂತೋಷಕ್ಕಾಗಿಯೇ ಕೆಲಸ ಮಾಡಿದರೆ ಅದರಿಂದ ನಮಗೆ ಬೇಸರವಾಗಬಹುದು. ಈ ವಿಷಯದಲ್ಲಿ ಸಮತೋಲನವನ್ನು ಕಾಯಿದುಕೊಳ್ಳುವುದು ಅಗತ್ಯ.

ನಮ್ಮ ದೇಶ ನಾಲ್ಕು ದಿಕ್ಕುಗಳಿಂದ ಹೊತ್ತಿ ಉರಿಯುತ್ತಿದೆ. ದೇಶದಲ್ಲಿ ಜಾತಿ ಮತ್ತು ಧರ್ಮಗಳ ಆದಾರದ ಮೇಲೆ ವಿಷಮತೆ ಇದೆ. ನಮ್ಮ ನೆರೆಹೊರೆಯ ದೇಶಗಳೂ ಉರಿಯುತ್ತಿವೆ. ನಾವು ನಮ್ಮ ಸಮಾಜವನ್ನು ಸಂರಕ್ಷಿಸಬೇಕು. ಎದ್ದೇಳಿ ದೇಶದ ಯುವಕರೇ ಎದ್ದೇಳಿ.

ನಾವು ಸ್ವಾಭಿಮಾನವನ್ನು ಎಚ್ಚರಿಸಬೇಕು. ನೀವು ನಿಮ್ಮನ್ನು ಗೌರವಿಸ ಬಲ್ಲಿರಾದರೆ ಮಾತ್ರ ಇತರರನ್ನು ಗೌರವಿಸಬಲ್ಲಿರಿ ಇದು ನಿಮ್ಮಲ್ಲಿ ಸ್ವಾಭಿಮಾನ ಇದ್ದಾಗ ಮಾತ್ರ ಸಾಧ್ಯ. ಸಾಧನೆಯಿಂದ ಸ್ವಾಭಿಮಾನ ಜಾಗೃತವಾಗುತ್ತದೆ. ಧ್ಯಾನವು ನಿಮ್ಮಲ್ಲಿ ಹಿಂಸೆಯಂತಹ ಅನಪೇಕ್ಷಿತ ಭಾವನೆಗಳು ಹುಟ್ಟದಂತೆ ತಡೆಯುತ್ತದೆ.
ನಮ್ಮ ನೆರೆಹೊರೆಯ ದೇಶಗಳಲ್ಲಿ ಹಿಂಸೆ ತಾಂಡವವಾಡುತ್ತದೆ. ಕಳೆದ ವರ್ಷ ಬಾಂಗ್ಲದೇಶದಲ್ಲಿ ನಾನೂರು ಬಾಂಬುಗಳು ಏಕಕಾಲದಲ್ಲಿ ಸಿಡಿದವು. ನಮ್ಮ ದೇಶದಲ್ಲಿ ಹತ್ತು ಭಯೋತ್ಪಾದಕ ದಾಳಿಗಳು ಸಂಭವಿಸಿದವು. ಅಮೇರಿಕಾದಲ್ಲಿ ೯/೧೧ ಒಂದೇ ಘಟನೆ ಯಾದರೆ ನಮ್ಮ ದೇಶದಲ್ಲಿ ತಿಂಗಳಿಗೊಮ್ಮೆಯಾದರೂ  ಭಯೋತ್ಪಾದಕರ ದಾಳಿ ನಡೆದಿತ್ತು.

ಆಧ್ಯಾತ್ಮಿಕ ಜ್ಞಾನದ ಮಹತ್ವ ಮನಗಾಣದಿದ್ದರೆ ಭಯೋತ್ಪಾದನೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಆಧ್ಯಾತ್ಮಿಕ ಜ್ಞಾನವೊಂದೇ ಮನಸ್ಸಿನ ಕ್ಷುದ್ರತೆಗಳನ್ನು ನಿವಾರಿಸಬಲ್ಲದು. ಇದನ್ನರಿಯದೆ ಪಾಕಿಸ್ತಾನಕ್ಕೆ ಮಿಲಿಯಗತ್ತಲೆ ಡಾಲರುಗಳ ನೆರವು ನೀಡಿದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ಆ ದೇಶಕ್ಕೆ ಸಾಧ್ಯವಾಗುವುದಿಲ್ಲ.

ಹಣವೊದರಿದಲೇ ಪರಿವರ್ತನೆ ಸಾಧ್ಯವಾಗುವುದಿಲ್ಲ, ಮನಸ್ಸುಗಳು ಪರಿವರ್ತನೆಯಾಗಬೇಕು. ನಾವು ಮೌಲಿಕವಾದ ವಿದ್ಯಾಭ್ಯಾಸ ಪದ್ಧತಿಯನ್ನು ರೂಡಿಸಬೇಕು. ಅಹಿಂಸೆ, ಪ್ರೇಮ ಮತ್ತು ಸಹಾನುಭೂತಿಯ ಸಂದೇಶವನ್ನು ಎಲ್ಲಕಡೆ ಸಾರಬೇಕು. ಆಗಲೇ ಇಂದು ಕಾಣುತ್ತಿರುವ ಹಿಂಸೆಯ ಪ್ರಾಧಾನ್ಯ ಕಡಿಮೆಯಾಗುತ್ತದೆ.
ಇಂದು ಧಾರ್ಮಿಕ ಶಿಕ್ಷಣದ ಅಗತ್ಯವಿದೆ; ಆದರೆ ಅವೈಜ್ಞಾನಿಕ ಶಿಕ್ಷಣವಲ್ಲ. ಧರ್ಮದಲ್ಲಿ ವೈಜ್ಞಾನಿಕವಾದುದನ್ನು ಮಾತ್ರ ತೆಗೆದುಕೊಳ್ಳಿ. ಮೌಲ್ಯಾಧಾರಿತ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ಅಂಧಾಭಿಮಾನರಹಿತವಾದ ಧಾರ್ಮಿಕ ಶಿಕ್ಷಣದ ಅಗತ್ಯವಿದೆ. ನಮ್ಮ ಏಷಿಯಾ ಖಂಡ ಅತ್ಯಂತ ಕಠಿಣ ಕಾಲವನ್ನು ಎದುರಿಸುತ್ತಿದೆ, ಇದೂ ಸಹ ಬದಲಾಗುತ್ತದೆ.

ಈ ದೆಸೆಯಲ್ಲಿ ನಾವು ಈ ಕೆಳಗಿನ  ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
೧. ಪ್ರತಿಯೊಬ್ಬರೂ ದಿನದ ಸ್ವಲ್ಪ ಕಾಲ ಧ್ಯಾನಮಾಡಬೇಕು.
೨. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
೩. ಮತದಾನ ಮಾಡಬೇಕು, ಇತರರಿಗೂ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು.
( ಸಭಿಕರಲ್ಲೊಬ್ಬರು ಎದ್ದು ನಿಂತು ಪ್ರಶ್ನೆ ಕೇಳಿದರು)

ಪ್ರಶ್ನೆ : ಆಧುನಿಕ ಯುಗದ ವಿವೇಕಾನಂದರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ನಾನು ಭಾಗ್ಯಶಾಲಿ. ಆದರೆ ನಾವು ಯಾವ ರೀತಿಯ ಸೇವೆಗೆ  ಸಮರ್ಥರು ಎಂದು ತಿಳಿಯುವುದು ಹೇಗೆ?
ಶ್ರೀ ಶ್ರೀ : ನಿಜ ಸೇವೆ ಮಾಡುವ ಉತ್ಸುಕತೆ ಇದ್ದು  ಮಾರ್ಗದರ್ಶನವನ್ನು ಬಯಸುವ ಎಲ್ಲರೂ ಇಲ್ಲಿಗೆ ಬನ್ನಿ. ಎಲ್ಲರೂ ತಂಡಗಳನ್ನು ಮಾಡಿಕೊಳ್ಳಿ. ನಿಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಿ. ಬೆಂಗಳೂರಿನ ೩೮ ಕೊಳೆಗೇರಿಗಳನ್ನು ನಾವು ದತ್ತು ತೆಗೆದುಕೊಂಡಿದ್ದೇವೆ. ನಿಮ್ಮಲ್ಲಿ ಅನೇಕರು ಅಲ್ಲಿಗೆ ಹೋಗಿ ನಮ್ಮ ಸ್ವಯಂಸೇವಕರಿಗೆ ಸಹಯ ಮಾಡಬಹುದು, ಉತ್ತೇಜನ ನೀಡಬಹುದು.
(ಇನ್ನೊಬ್ಬ ಭಕ್ತರು ಪೋಲೀಸ್ ಠಾಣೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದಗ ಠಾಣೆಯಿಂದ 'ಆರ್ಟ್ ಆಫ಼್ ಲಿವಿಂಗ್'ನ ಭಜನೆಗಳನ್ನು ಕೇಳಿಸಿಕೊಂಡ ಅನುಭವವನ್ನು ವಿವರಿಸಿದರು. ಆಗ ಶ್ರೀ ಶ್ರೀ : ಜೈಲುಗಳಲ್ಲಿ ಸಹಾ ಖೈದಿಗಳು ಈ ಭಜನೆಗಳನ್ನು ಯಾವಾಗಲೂ ಹಾಡುತ್ತಿದ್ದಾರೆ")

ಪ್ರಶ್ನೆ : ದೇಶ ದೇಶಗಳ ನಡುವಣ ಗಡಿರೇಖೆಗಳು ಅಳಿಸಿ ಹೋಗುವುದು ಯಾವಾಗ?
ಶ್ರೀ ಶ್ರೀ : ಪ್ರತಿಯೊಬ್ಬರೂ ಸುದರ್ಶನ ಕ್ರಿಯೆಯಲ್ಲಿ ತೊಡಗಿಕೊಂಡಾಗ ( ಸಭಿಕರಿಂದ ಕಿವಿಗಡಚಿಕ್ಕುವ ಚಪ್ಪಳೆ, ಹರ್ಷೋದ್ಗಾರ )