ಶುಕ್ರವಾರ, ಏಪ್ರಿಲ್ 4, 2014

ಕ್ರಿಯಾಶೀಲ ಸ್ವಯಂಸೇವಕರಾಗಿ

೪ ಎಪ್ರಿಲ್ ೨೦೧೪
ವಿದರ್ಭ, ಮಹಾರಾಷ್ಟ್ರ

ಧ್ಯಾತ್ಮಿಕತೆಗೆ ಮಾತ್ರ ಆತ್ಮಹತ್ಯೆಗಳನ್ನು ನಿಲ್ಲಿಸುವ ಮತ್ತು ಅಪರಾಧವನ್ನು ನಿಲ್ಲಿಸುವ ಶಕ್ತಿಯಿರುವುದು.
ನಮ್ಮ ದೇಶವು ಇವತ್ತು ಅಪರಾಧಗಳ ತವರಾಗಿದೆ. ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಮತದಾನದ ಚೀಟಿಗಳನ್ನು ಕೊಡುವ ನಿರ್ಬಂಧತೆಯನ್ನು ಅನುಭವಿಸುವುದು ಯಾಕೆಂದರೆ, ಅವರು ಸಾರ್ವಜನಿಕ ಮತ ಬ್ಯಾಂಕ್‌ಗಳ ಮೇಲೆ ಒಂದು ಹಿಡಿತವನ್ನು ಹೊಂದಿರುವುದರಿಂದಾಗಿ ಮತ್ತು ದೇಶದಲ್ಲಿನ ಎಲ್ಲಾ ಸದಾಚಾರದ ಹಾಗೂ ಸಜ್ಜನರ ದೊಡ್ಡದಾದ ಮತದಾನದ ಬ್ಯಾಂಕ್ ಇಲ್ಲದಿರುವುದರಿಂದಾಗಿ ಮಾತ್ರ.

ಎಲ್ಲಾ ಸದಾಚಾರಿ ಮತ್ತು ಒಳ್ಳೆಯ ಜನರ ಒಂದು ವೋಟ್ ಬ್ಯಾಂಕ್ ಇಂದು ನಮಗೆ ಬೇಕಾಗಿದೆ. ನೀವೆಲ್ಲರೂ ನಾನು ಹೇಳುವುದನ್ನು ಒಪ್ಪುವುದಿಲ್ಲವೇ?

(ಹೌದು)

ದ್ವಾಪರ ಯುಗದಲ್ಲಿ ಪಾಂಡವರು ಕೇವಲ ಐವರು ಮಾತ್ರ ಇದ್ದರು, ಅದೇ ವೇಳೆ ಅವರ ದಾಯಾದಿಗಳಾದ ಕೌರವರು ಸಂಖ್ಯೆಯಲ್ಲಿ ೧೦೦ ಇದ್ದರು. ಆದರೆ ಇವತ್ತು, ಕಲಿಯುಗದಲ್ಲಿ, ಈ ಲೆಕ್ಕವು ಅದಲುಬದಲಾಗಿದೆ. ಇವತ್ತು ೧೦೦ ಪಾಂಡವರಿದ್ದಾರೆ (ಇಲ್ಲಿ ಶಿಷ್ಟ ಜನರು ಎಂಬ ಅರ್ಥ) ಮತ್ತು ಕೇವಲ ಐದು ಕೌರವರಿರುವುದು (ಇಲ್ಲಿ ದುಷ್ಟ ಜನರು ಎಂಬ ಅರ್ಥ). ಇವತ್ತು ನಮ್ಮ ಸಮಾಜವು ಯಾತನೆಯನ್ನು ಅನುಭವಿಸುತ್ತಿರುವುದಾದರೆ ಅದು, ಐದು ದುಷ್ಟ ಜನರ ಬದಲಾಗಿ, ಈ ೧೦೦ ಶಿಷ್ಟ ಜನರ ಮೌನದಿಂದಾಗಿ ಎಂಬುದು ನನ್ನ ನಂಬಿಕೆ.

ಇವತ್ತು ನೀವೆಲ್ಲರೂ ಸಮಾಜಕ್ಕಾಗಿ ಕೆಲಸ ಮಾಡುವ ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಮನೆಮನೆಗೆ ಹೋಗಿ, ಜನರಿಗೆ ಅವರ ಹಕ್ಕುಗಳ ಬಗ್ಗೆ ಹಾಗೂ ಏನಾಗುತ್ತಿದೆಯೆಂಬುದರ ಬಗ್ಗೆ ಅರಿವು ಮೂಡಿಸಿ.

ಒಳ್ಳೆಯ ಜನರು ಸುಮ್ಮನೆ ಮನೆಯೊಳಗೆ ಕುಳಿತುಕೊಂಡು, ಸಮಾಜಕ್ಕಾಗಿ ಏನನ್ನೂ ಮಾಡದಿರಲು ಬಿಡಬೇಡಿ. ನೀವು ಜನರನ್ನು ಜಾಗೃತಗೊಳಿಸಬೇಕು. ಅವರೆಲ್ಲರೂ ತಮ್ಮ ಮನೆಗಳ ಸೌಕರ್ಯಗಳಿಂದ ಹೊರಕ್ಕೆ ಹೆಜ್ಜೆಯಿಡಬೇಕು ಮತ್ತು ಒಂದು ಉತ್ತಮ ಭಾರತಕ್ಕಾಗಿ ಕ್ರಿಯಾಶೀಲ ಸ್ವಯಂಸೇವಕರಾಗಬೇಕು. ನೀವೆಲ್ಲರೂ ಇದನ್ನು ಮಾಡುವಿರೇ?

ಭಾರತಕ್ಕಾಗಿ ನನ್ನದೊಂದು ಕನಸಿದೆ; ಎಲ್ಲೆಡೆಯೂ ಆಧ್ಯಾತ್ಮದ ಒಂದು ಅಲೆಯನ್ನು, ಸಂತಸದ ಒಂದು ಅಲೆಯನ್ನು ತರುವುದು. ಎಲ್ಲೆಲ್ಲಾ ಸಾಧ್ಯವೋ; ಅದು ಹಳ್ಳಿಗಳಾಗಿರಲಿ ಅಥವಾ ನಗರಗಳಾಗಿರಲಿ; ಜನರ ಮುಖಗಳು ಸಂತೋಷದಿಂದ ಬೆಳಗುತ್ತಿರಬೇಕು. ಕೇವಲ ಸಂಪತ್ತನ್ನು ಗಳಿಸುವುದರಿಂದ ಮಾತ್ರ ಇದು ಆಗಲಾರದು.

ಜಗತ್ತಿನಾದ್ಯಂತದ ರಾಷ್ಟ್ರಗಳು ಇವತ್ತು ಇದನ್ನು ಅನುಮೋದಿಸಿದ್ದಾರೆ. ಅದಕ್ಕಾಗಿಯೇ ಸೋವಿಯತ್ ಯೂನಿಯನ್‌ನಲ್ಲಿ ಕೂಡಾ ಪ್ರಪಂಚ ಸಂತೋಷ ದಿನ (ವರ್ಲ್ಡ್ ಹ್ಯಾಪ್ಪಿನೆಸ್ ಡೇ) ವನ್ನು ಆಚರಿಸಲು ಒಂದು ದಿನವನ್ನು ಮೀಸಲಾಗಿಟ್ಟಿದ್ದಾರೆ.
ಒಂದು ದೇಶದ ಜನರು ಎಷ್ಟು ಸಂತೋಷವಾಗಿದ್ದಾರೆ ಹಾಗೂ ತೃಪ್ತರಾಗಿದ್ದಾರೆ ಎಂಬುದನ್ನು ಅಳೆಯಲು  ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಒಟ್ಟು ಸಾಂಸಾರಿಕ ಸಂತೋಷ) ಎಂದು ಕರೆಯಲ್ಪಡುವ ಒಂದು ಸೂಚಕವನ್ನು ಅವರು ಕಂಡುಹಿಡಿದಿದ್ದಾರೆ. ಆದುದರಿಂದ ಬಹಳಷ್ಟು ಹಣವನ್ನು ಹೊಂದಿರುವುದರಿಂದ ಮಾತ್ರ ಯಾವುದೇ ಪ್ರಯೋಜನವಿಲ್ಲ. ಜನರು ಸಂತೋಷವಾಗಿ ಹಾಗೂ ತೃಪ್ತರಾಗಿರುವುದು ಕೂಡಾ ಮುಖ್ಯವಾಗಿದೆ.

ಜಪಾನಿನಲ್ಲಿ ಪ್ರತಿವರ್ಷವೂ ೨೦೦೦ಕ್ಕಿಂತಲೂ ಹೆಚ್ಚು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಅಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚು ಯುವಕರಿಗೆ ಒಂದಲ್ಲ ಒಂದು ಮಾನಸಿಕ ಅಸ್ವಸ್ಥತೆ ಇರುವುದಾಗಿ ಪತ್ತೆಹಚ್ಚಲಾಗಿದೆ. ಯುರೋಪಿನಲ್ಲಿ ಶಾಲಾ ಶಿಕ್ಷಕರಲ್ಲಿ ಸುಮಾರು ೪೦% ಮಂದಿ ಯಾವುದಾದರೂ ಮಾನಸಿಕ ರೋಗಕ್ಕೆ ತುತ್ತಾಗಿದ್ದಾರೆ ಮತ್ತು ಅಲ್ಲಿನ ಜನರಲ್ಲಿ ೩೮% ಮಂದಿ ಆತ್ಮಹತ್ಯೆ ಹಾಗೂ ಇತರ ಸಮಸ್ಯೆಗಳಿಗೆ ಬಲಿಯಾಗುತ್ತಾರೆ.

ಇಂಗ್ಲೇಂಡಿನ ಪ್ರಧಾನ ಮಂತ್ರಿಯವರು ನನ್ನಲ್ಲಿ, "ಗುರುದೇವ, ಸರಕಾರವು ಮನೆಗಳು, ಕಾರುಗಳು, ಮೊದಲಾದ ಸಾಧ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿರುವಾಗ, ಇಲ್ಲಿನ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಯಾಕೆ?" ಎಂದು ಕೇಳಿದರು.

ಅಲ್ಲಿನ ಜನರು ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಸ್ವೀಕರಿಸಿದಾಗ, ಅವರು ತಮ್ಮ ಜೀವನದಲ್ಲಿ ಒಂದು ಅಗಾಧವಾದ ಪರಿವರ್ತನೆಯನ್ನು ಅನುಭವಿಸಿದರು.

ಜೀವನಗಳನ್ನು ಶಾಶ್ವತವಾಗಿ ಪರಿವರ್ತಿಸುವ ಸಾಮರ್ಥ್ಯವಿರುವ ಅಗಾಧವಾದ ಆಧ್ಯಾತ್ಮಿಕ ಜ್ಞಾನವನ್ನು ಭಾರತವು ಹೊಂದಿದೆ. ಆದರೂ ನಾವು ನಮ್ಮ ದೇಶದಲ್ಲಿರುವ ನಮ್ಮದೇ ಆದ ಪರಂಪರೆ ಮತ್ತು ಆಧ್ಯಾತ್ಮಿಕ ಆಸ್ತಿಗೆ ಬೆಲೆ ನೀಡಿಲ್ಲ ಮತ್ತು ಗೌರವಿಸಿಲ್ಲ. ನಾವೊಂದು ಬಂಗಾರದ ಸಂಪತ್ತಿನ ಮೇಲೆ ಕುಳಿತಿದ್ದೇವೆ, ಆದರೂ ನಾವು ಅದರ ಬಗ್ಗೆ ಅಜ್ಞಾನಿಗಳಾಗಿದ್ದೇವೆ. ಅದನ್ನು ಗೌರವದೊಂದಿಗೆ ಎತ್ತಿಹಿಡಿಯುವುದರ ಹಾಗೂ ಅದನ್ನು ಪ್ರಚಾರಪಡಿಸುವುದರ ಬದಲಾಗಿ, ನಾವದನ್ನು ತುಚ್ಛವಾಗಿ ನೋಡುತ್ತೇವೆ.

ಭಾರತವು ಹಲವು ರೀತಿಯ ಸಂಪತ್ತುಗಳಿಗೆ ತವರಾಗಿದೆ.

ಪಶ್ಚಿಮದಲ್ಲಿ ನಾವು, ಬಹಳಷ್ಟು ತೈಲವನ್ನು ಹೊಂದಿರುವ ಮಧ್ಯ-ಪೂರ್ವ ರಾಷ್ಟ್ರವನ್ನು ನಮ್ಮ ನೆರೆಯವರಾಗಿ ಹೊಂದಿದ್ದೇವೆ ಮತ್ತು ಪೂರ್ವದಲ್ಲಿ ಇಂಡೋನೇಷಿಯಾ ಮತ್ತು ಮಲೇಷಿಯಾಗಳಿದ್ದು, ಅವು ತೈಲ ನಿಕ್ಷೇಪ ಹೊಂದಿವೆ. ನಾವು ಮಧ್ಯದಲ್ಲಿದ್ದೇವೆ ಮತ್ತು ನಮ್ಮಲ್ಲಿ ಕೂಡಾ ಬಹಳಷ್ಟು ತೈಲ ಸಂಪತ್ತಿದೆ, ಆದರೂ ನಾವು ತೈಲವನ್ನು ಇತರ ರಾಷ್ಟ್ರಗಳಿಂದ ಹೆಚ್ಚಿನ ಬೆಲೆಗಳಲ್ಲಿ ಆಮದು ಮಾಡಿಕೊಳ್ಳುತ್ತಿದ್ದೇವೆ.

ನಮ್ಮಲ್ಲಿ ಬೃಹತ್ ಕಲ್ಲಿದ್ದಲು ನಿಕ್ಷೇಪಗಳಿವೆ, ಹಾಗಿದ್ದೂ ನಾವು ಕಲ್ಲಿದ್ದಲನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ಬೋಕ್ಸೈಟ್‌ನ ಬೃಹತ್ ನಿಕ್ಷೇಪಗಳಿವೆ, ಆದರೂ ನಾವು ಹೊರಗಿನಿಂದ ಅಲ್ಯುಮಿನಿಯಂನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.

ನಾವು ಕಚ್ಚಾ ಕಬ್ಬಿಣದ ಅದಿರನ್ನು ಕಡಿಮೆ ಬೆಲೆಗಳಲ್ಲಿ ರಫ್ತು ಮಾಡುತ್ತಿದ್ದೇವೆ ಮತ್ತು ಹೆಚ್ಚಿನ ಬೆಲೆಗಳಲ್ಲಿ ಸ್ಟೀಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದನ್ನೆಲ್ಲಾ ಮಾಡುವುದರಿಂದ, ನಾವು ನಮ್ಮ ಆರ್ಥಿಕತೆಗೆ ದೊಡ್ಡ ಹಾನಿಯನ್ನು ಉಂಟುಮಾಡಿದ್ದೇವೆ. ಈ ದೌರ್ಭಾಗ್ಯವು ನಾವೇ ಮಾಡಿಕೊಂಡದ್ದಾಗಿದೆ.

ಇಲ್ಲದಿದ್ದರೆ ನೀವು ನಿಜವಾಗಿಯೂ ಅದರ ಕಡೆಗೆ ನೋಡಿದರೆ, ಭಾರತವು ಇವತ್ತಿಗೂ ಕೂಡಾ ಬಂಗಾರದ ಪಕ್ಷಿಯಾಗಿದೆ. ನಾವು ನಮ್ಮ ದೇಶವನ್ನು ಮತ್ತೊಮ್ಮೆ ಬಂಗಾರದ ಪಕ್ಷಿಯಾಗಿ ನೋಡಲು ಬಯಸುತ್ತೇವೆ. ಇಲ್ಲಿ ಎಷ್ಟು ಮಂದಿಗೆ ಇದೇ ಕನಸಿದೆ? ನಿಮ್ಮ ಕೈಗಳನ್ನು ಮೇಲೆತ್ತಿ. ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕು.

ಭಾರತವು ಯಾವುದೇ ರೀತಿಯಲ್ಲೂ ಒಂದು ಬಲಹೀನ ಅಥವಾ ಒಂದು ಬಡ ದೇಶವಲ್ಲ. ಆದರೆ ನಾವೇ ನಮ್ಮನ್ನು ಈ ಶೋಚನೀಯ ಅವಸ್ಥೆಗೆ ತಂದಿದ್ದೇವೆ.

ನಿಮಗೆ ಗೊತ್ತಾ, ಸುಮಾರು ೧.೪ ಟ್ರಿಲಿಯನ್ ಡಾಲರ್‌ಗಳಷ್ಟು ಮೌಲ್ಯದ ಭಾರತೀಯ ಹಣವು, ಕಪ್ಪು ಹಣದ ರೂಪದಲ್ಲಿ ವಿದೇಶೀ ಬ್ಯಾಂಕುಗಳಲ್ಲಿ ಜಮಾವಣೆಗೊಂಡಿದೆ. ಅದನ್ನು ನಾವು ನಮ್ಮ ಸ್ವಂತ ದೇಶಕ್ಕೆ ಮರಳಿ ತರಬೇಕೆಂದು ನಿಮಗನಿಸುವುದಿಲ್ಲವೇ? ಶ್ರೇಷ್ಠ ರಾಜರ ತಾಯ್ನಾಡಾದ ಒಂದು ನೆಲದಲ್ಲಿ, ಒಂದಾದ ಮೇಲೊಂದರಂತೆ ಭಯಾನಕವಾದ ಹಗರಣಗಳನ್ನು ನೋಡಲು ನಿಮಗೆ ಸಾಕಾಗುತ್ತಿಲ್ಲವೇ ಮತ್ತು ದುಃಖವಾಗುತ್ತಿಲ್ಲವೇ?

ಇವತ್ತು ನಮಗೊಂದು ಭ್ರಷ್ಟಾಚಾರ-ಮುಕ್ತ ಸಮಾಜ ಬೇಕು. ಕೆಲವು ಕಾನೂನುಗಳನ್ನು ಜಾರಿಗೊಳಿಸುವುದರಿಂದ ಮಾತ್ರ ನಾವು ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಬಹುದೆಂದು ನನಗನಿಸುವುದಿಲ್ಲ. ಅದು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು, ನಾವು ಸಮಾಜದಲ್ಲಿ ಆತ್ಮೀಯತೆಯ ಒಂದು ಅಲೆಯನ್ನು ತರಬೇಕಾಗಿದೆ. ಯಾರು ತಮಗೆ ಸೇರಿದವರೋ ಅವರೊಂದಿಗೆ ಒಬ್ಬರು ಯಾವತ್ತೂ ಒಂದು ಭ್ರಷ್ಟ ಅಥವಾ ಅಪ್ರಾಮಾಣಿಕ ರೀತಿಯಲ್ಲಿ ವರ್ತಿಸಲಾರರು. ತಮ್ಮ ಸ್ವಂತ ಸಹೋದರ, ಸಹೋದರ ಸಂಬಂಧಿ ಅಥವಾ ಕುಟುಂಬದ ಸದಸ್ಯರಿಂದ ಯಾರೂ ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ. ಯಾರನ್ನು ತಮ್ಮ ಸ್ವಂತದವರೆಂದು ಪರಿಗಣಿಸುವುದಿಲ್ಲವೋ ಅವರೊಂದಿಗೆ ಜನರು ಒಂದು ಭ್ರಷ್ಟವಾದ ರೀತಿಯಲ್ಲಿ ವರ್ತಿಸುತ್ತಾರೆ.

ಹೀಗಾಗಿ, ಒಂದು ಭ್ರಷ್ಟಾಚಾರ-ಮುಕ್ತ ಸಮಾಜವನ್ನು ಕೇವಲ ಕಾನೂನುಗಳನ್ನು ಮಾಡುವುದರಿಂದ ಮಾತ್ರ ಸಾಧಿಸಲಾಗದು.  ನಮ್ಮ ಸುತ್ತಲಿರುವ ಎಲ್ಲರೊಂದಿಗೂ ನಾವು ನಮ್ಮ ಆತ್ಮೀಯತಾಭಾವವನ್ನು ವಿಸ್ತರಿಸಬೇಕಾಗಿದೆ.

ನಾನು ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ, ಆದರೆ ನಾನೆಲ್ಲೇ ಹೋದರೂ ಅಲ್ಲಿನ ಜನರು, ಅವರು ನನ್ನ ಸ್ವಂತದವರೇನೋ ಎಂಬಂತೆ ಭಾವಿಸಿದ್ದಾರೆ ಮತ್ತು ನಾನು ಕೂಡಾ, ನಾನು ಅವರಿಗೆ ಸೇರಿದವನೆಂದು ಭಾವಿಸಿದೆ. ಯಾರಾದರೂ ನನಗೆ ಅಪರಿಚಿತರು ಎಂದು ನನಗೆ ಯಾವತ್ತೂ ಅನ್ನಿಸಲಿಲ್ಲ. ಮೊದಲಿನಿಂದಲೂ ಇದು ನನ್ನ ಸ್ವಭಾವವಾಗಿತ್ತು.

ಇಲ್ಲಿರುವ ಎಲ್ಲರೂ ಒಬ್ಬ ತೋಟಗಾರನಿಂದ (ದೇವರು) ನೋಡಿಕೊಳ್ಳತಕ್ಕಂತಹ ಹೂವುಗಳಾಗಿದ್ದಾರೆ. ಈಗ ಈ ಹೂಗಳು ಬಾಡಲುತೊಡಗಿದರೆ, ಆಗ ನಾವು ಸುಮ್ಮನಿದ್ದುಕೊಂಡು ನೋಡಲು ಸಾಧ್ಯವೇ? ಇಲ್ಲ, ಅದು ಬೂಟಾಟಿಕೆ ಆಗುವುದು. ಇದಕ್ಕಾಗಿಯೇ, ಯಾವುದೆಲ್ಲಾ ಆ ಸಮಯಕ್ಕೆ ಸರಿಯೆಂದು ಮತ್ತು ಸೂಕ್ತವೆಂದು ನನಗನಿಸುವುದೋ, ಅದನ್ನು ನಾನು ಹೇಳುತ್ತೇನೆ.

ನಿಮಗೆ ಗೊತ್ತಾ, ಒಬ್ಬ ಪತ್ರಕರ್ತ, ಒಂದು ದೇಶದ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ನಾಯಕರು, ಯಾವುದೇ ಒಂದು ನಿರ್ದಿಷ್ಟವಾದ ಪಕ್ಷ ಅಥವಾ ಜನರ ಪಂಗಡಕ್ಕೆ ಸೇರುವುದಿಲ್ಲ. ಅವರು ಎಲ್ಲರಿಗೂ ಸೇರಿದವರಾಗಿರುತ್ತಾರೆ. ಅವರು ಯಾವುದಾದರೂ ಒಂದು ನಿರ್ದಿಷ್ಟ ಪಕ್ಷದೊಂದಿಗೆ ಮೈತ್ರಿ ಹೊಂದಿರುವುದಿಲ್ಲ. ಆದರೆ ಒಬ್ಬ ರಾಜಕಾರಣಿ ಅಥವಾ ಒಂದು ರಾಜಕೀಯ ಪಕ್ಷ ತಪ್ಪು ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಆಗ ಅವರು ಖಂಡಿತವಾಗಿಯೂ, ಅವರು ತಪ್ಪು ಮಾಡಿರುವುದಾಗಿ ಹೇಳಬೇಕು. ಹೀಗಾಗಿ ಹಾಗೆ ಮಾಡುವುದು ಒಬ್ಬ ಆಧ್ಯಾತ್ಮಿಕ ನಾಯಕನ ಕರ್ತವ್ಯ ಹಾಗೂ ಹಕ್ಕು ಎರಡೂ ಆಗಿದೆ. ಅದಕ್ಕಾಗಿಯೇ ಹಾಗೆ ಮಾಡುವುದನ್ನು ನಾನು ಮುಂದುವರಿಸುವೆನು.

ಮಹಾರಾಷ್ಟ್ರದ ಭೂಮಿಯು ಸ್ವಾಮಿ ರಾಮದಾಸರಂತಹ ಮಹಾನ್ ಸಂತರಿಗೆ ಜನ್ಮ ನೀಡಿದೆ. ಇದು ಮಹಾನ್ ಸಂತರ ನೆಲವಾಗಿದೆ. ಇಲ್ಲಿನ ಪ್ರತಿಯೊಂದು ಗ್ರಾಮದಲ್ಲೂ ದೇಶಭಕ್ತಿ ಹಾಗೂ ಪ್ರೇಮ ಆಳವಾಗಿದೆ.  ಆ ಭಾವನೆಯನ್ನು ನಾವು ಎಲ್ಲೆಡೆಯೂ ಮತ್ತೆ ಹಚ್ಚಬೇಕಾಗಿದೆ ಮತ್ತು ಒಂದು ಮಹಾನ್ ಕ್ರಾಂತಿ ಇಲ್ಲಿಂದ ಪ್ರಾರಂಭವಾಗುವುದನ್ನು ಹಾಗೂ ಅದರ ಕಂಪು ದೇಶದಲ್ಲಿ ಎಲ್ಲೆಡೆಯೂ ಹರಡುವುದನ್ನು ನೀವು ಕಾಣುವಿರಿ. ಆ ದಿನ ಬಹಳ ದೂರವಿಲ್ಲವೆಂದು ನನಗನಿಸುತ್ತದೆ, ಅದು ಈಗ ಇನ್ನೇನು ಬರಲಿದೆ. ಇವತ್ತು, ದೇಶದ ಅಧಿಕಾರದ ಚುಕ್ಕಾಣಿಯನ್ನು ನಾವೊಂದು ಹೊಸ ಹಾಗೂ ಅನುಭವವಿಲ್ಲದ ವ್ಯಕ್ತಿಗೆ ಕೊಡಲು ಸಾಧ್ಯವಿಲ್ಲ. ನಮ್ಮ ದೇಶವು ಒಂದು ಸಂಕಟಕಾಲದಲ್ಲಿದೆ. ಅದು ಅಕ್ಷರಶಃ ಕೃತಕ ಉಸಿರಾಟದ ಆಧಾರದಲ್ಲಿದೆ. ದೇಶದ ಚಾಲಕನ ಸ್ಥಾನದಲ್ಲಿ ಒಂದು ವರ್ಷ ವಯಸ್ಸಿನ ಮಗು ಕುಳಿತುಕೊಳ್ಳುವಂತೆ ಮಾಡಲು ನಮಗೆ ಸಾಧ್ಯವಿಲ್ಲ. ಮಗುವಿಗೆ ಸ್ಟಿಯರಿಂಗ್ ವೀಲ್‌ನ್ನು ಹಿಡಿದುಕೊಳ್ಳಲೂ ಸಾಧ್ಯವಿಲ್ಲ, ಅವನ ಕಾಲುಗಳು ಬ್ರೇಕ್ ಮತ್ತು ಏಕ್ಸಲರೇಟರ್ ಪೆಡಲ್‌ಗಳನ್ನು ತಲಪಲಾರವು ಕೂಡಾ. ದೇಶವನ್ನಾಳಲು, ಪ್ರಾಮಾಣಿಕವಾಗಿ ಮಾತನಾಡುವ ಮತ್ತು ಕೆಲಸ ಮಾಡುವ ಒಬ್ಬ ಸಮರ್ಥನಾದ ಹಾಗೂ ಅನುಭವಸ್ಥ ವ್ಯಕ್ತಿಯು ನಮಗೆ ಬೇಕಾಗಿದ್ದಾರೆ.

ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಯುವಕರು ಮುಂದೆ ಬಂದು, ಈ ದೇಶವನ್ನು, ಅವಳ ಧರ್ಮ ಮತ್ತು ಆಧ್ಯಾತ್ಮಿಕತೆಯನ್ನು, ಅವಳ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಪ್ರಶ್ನೆ: ಗುರುದೇವ, ನಾವೆಲ್ಲರೂ ೧೦೦% ಮತದಾನ ಮಾಡಬೇಕು. ಆದರೆ ಚುನಾವಣೆಯಲ್ಲಿನ ಅಭ್ಯರ್ಥಿಗಳಲ್ಲಿ ೧೦೦% ಒಳ್ಳೆಯವರಲ್ಲದಿದ್ದರೆ, ಆಗ ನಾವೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನನಗೆ ನಿನ್ನ ಪ್ರಶ್ನೆ ಅರ್ಥವಾಗುತ್ತದೆ. ನಾನು ಕೂಡಾ ಅದೇ ಸಂದಿಗ್ಧದಲ್ಲಿದ್ದೇನೆ. ದೇಶದಲ್ಲಿ ಬೇರೆ ಬೇರೆ ಜಾಗಗಳಲ್ಲಿ, ತಪ್ಪು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಸಂಸತ್ತಿನೊಳಕ್ಕೆ ಜನರನ್ನು ಚುನಾಯಿತಗೊಳಿಸುವ ವಿಷಯ ಬಂದಾಗ, ನೀವು ದೇಶದ ಹೆಚ್ಚಿನ ಹಿತಾಸಕ್ತಿಗಳ ಮೇಲೆ ಗಮನ ಹರಿಸಬೇಕು. ಆದುದರಿಂದ ಸ್ವಲ್ಪ ನ್ಯೂನತೆಗಳಿರುವ ಒಬ್ಬ ಅಭ್ಯರ್ಥಿಯನ್ನು ನೀವು ನೋಡಿದರೆ, ಆಗ ಕೂಡಾ ಅದು ಪರವಾಗಿಲ್ಲ; ಅವನು ಸಮರ್ಥನಾಗಿಯೂ, ನೈತಿಕವಾಗಿ ನೆಟ್ಟಗಾಗಿಯೂ ಇರುವಲ್ಲಿಯವರೆಗೆ. ಇದು ಯಾಕೆಂದರೆ, ಒಬ್ಬ ಸಮರ್ಥ ನಾಯಕನಿಗೆ, ದೇಶದ ಸಮಸ್ಯೆಗಳನ್ನು ಒಂದು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುವುದು. ನಿಮ್ಮ ರಾಜ್ಯದಲ್ಲಿನ ಚುನಾವಣೆಯ ವಿಷಯಕ್ಕೆ ಬಂದಾಗ, ನಿಮ್ಮ ಗಮನವು ಅಭ್ಯರ್ಥಿಯ ನಡತೆ ಹಾಗೂ ಸಾಧನೆಗಳ ಮೇಲೆ ಇರಬೇಕು. ಅವನು ಬಹಳ ಭ್ರಷ್ಟನಾಗಿದ್ದರೆ, ಆಗ ನೀವು ಅವನಿಗೆ ಅವನ ಯುಕ್ತವಾದ ಸ್ಥಳವನ್ನು ತೋರಿಸಬೇಕು.

ನಿಮ್ಮ ನಗರದ ಪುರಸಭೆಯನ್ನು ಚುನಾಯಿತಗೊಳಿಸುವ ವಿಷಯ ಬಂದಾಗ, ಅವರು ಯಾವುದೇ ಪಕ್ಷಕ್ಕೆ ಸೇರಿರಲಿ, ಒಳ್ಳೆಯ ನಡತೆ ಮತ್ತು ಒಂದು ಶುದ್ಧವಾದ ದಾಖಲೆಯಿರುವ ಒಬ್ಬ ವ್ಯಕ್ತಿಯನ್ನು ಮಾತ್ರ ನೀವು ಚುನಾಯಿಸಬೇಕು. ಇದು ಯಾಕೆಂದರೆ, ನಗರದ ಪುರಸಭೆಯು ನಗರದಲ್ಲಿ ನಿಮ್ಮ ರಸ್ತೆಗಳು, ನೀರಿನ ಪೂರೈಕೆ, ವಿದ್ಯುತ್ ಪೂರೈಕೆ, ಮೊದಲಾದಂತಹ ವಿಷಯಗಳಿಗಾಗಿ ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ. ಸಂಸತ್ತಿನ ಸದಸ್ಯರು ಅಥವಾ ರಾಜ್ಯ ವಿಧಾನಸಭಾ ಸದಸ್ಯರು ನಗರದ ಸಮಸ್ಯೆಗಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ವಿಷಯಗಳನ್ನು ನೋಡಿಕೊಳ್ಳುವುದು ಪುರಸಭೆಯ ಅಧಿಕಾರಿಗಳು.
ಹೀಗಾಗಿ, ಆಡಳಿತದ ವಿವಿಧ ವೇದಿಕೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾಯಿಸಲು ನೀವು ಬೇರೆ ಬೇರೆ ಅಳತೆಗೋಲುಗಳನ್ನು ಬಳಸಬೇಕು.

ಪ್ರಶ್ನೆ: ಗುರುದೇವ, ಇವತ್ತು ಯಾಕೆ ಜನರು ಆಧ್ಯಾತ್ಮ ಮತ್ತು ಹಾಗೆಯೇ ರಾಜಕೀಯದತ್ತಲೂ ಒಲಿಯುತ್ತಿದ್ದಾರೆ?

ಶ್ರೀ ಶ್ರೀ ರವಿ ಶಂಕರ್: ಜನರು ಹೆಚ್ಚು ಆಧ್ಯಾತ್ಮಿಕರಾಗುತ್ತಿರುವುದಾದರೆ, ಆಗ ಅದೊಂದು ಒಳ್ಳೆಯ ವಿಷಯ. ಇವತ್ತು ಸಮಾಜದಲ್ಲಿ ಅಷ್ಟೊಂದು ಸಮಸ್ಯೆಗಳಾಗುತ್ತಿರುವಾಗ, ಒಳ್ಳೆಯ ಹಾಗೂ ಆಧ್ಯಾತ್ಮಿಕ ಜನರು ಒಳಪ್ರವೇಶಿಸಿ ರಾಜಕೀಯ ಪಾತ್ರಗಳನ್ನು ಕೂಡಾ ವಹಿಸಬೇಕು. ಎರಡೂ ಬೇಕಾಗಿದೆ.

ಪ್ರಶ್ನೆ: ವೃತ್ತಿಪರವಾಗಿ ಮತ್ತು ಆಧ್ಯಾತ್ಮಿಕವಾಗಿ ಶಕ್ತಿ ಹಾಗೂ ಅಧಿಕಾರಗಳನ್ನು ಗಳಿಸುವುದು ಒಬ್ಬರಿಗೆ ಮನೆಯಲ್ಲಿ ತನ್ನ ಹೆತ್ತವರೊಂದಿಗೆ ದುರ್ವರ್ತಿಸುವ ಅಧಿಕಾರವನ್ನು ನೀಡುವುದೇ? ಅಂತಹ ಜನರನ್ನು ನೀವು ಅಂಗೀಕರಿಸುತ್ತೀರಾ? 

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇಲ್ಲವೇ ಇಲ್ಲ. ಈ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಮಕ್ಕಳು ಇಬ್ಬರೂ ಅರ್ಥಮಾಡಿಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು.

ಹೆತ್ತವರಿಗೆ ನಾನು ನೀಡುವ ಸಲಹೆಯೆಂದರೆ, ಮಕ್ಕಳೊಂದಿಗೆ ಅತಿಯಾಗಿ ಕಟ್ಟುನಿಟ್ಟಾಗಿರಬೇಡಿ ಎಂದು. ನಮ್ಮ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆಯೋ ಅದನ್ನು ನೆನಪಿಸಿಕೊಳ್ಳಿ. ನೀತಿಶಾಸ್ತ್ರ ಮತ್ತು ಧರ್ಮಶಾಸ್ತ್ರಗಳಲ್ಲಿ ಹೀಗೆಂದು ಹೇಳಲಾಗಿದೆ, ’ಪ್ರಾಪ್ತೇತು ಷೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್ ’.

ನಿಮ್ಮ ಮಗುವಿಗೆ ೧೬ ವರ್ಷ ವಯಸ್ಸಾಗುವಾಗ, ನೀವು ಅವರಿಗೆ ಒಬ್ಬ ಮಿತ್ರನಂತಿರಬೇಕು. ಹೀಗಾಗಿ, ನಿಮ್ಮ ಮಕ್ಕಳಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿ ಮತ್ತು ಅವರು ಮಾಡುವ ಪ್ರತಿಯೊಂದರಲ್ಲೂ ಅವರನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸಬೇಡಿ.
ಆದರೆ ಅತಿಯಾದ ಸ್ವಾತಂತ್ರ್ಯವನ್ನು ಕೂಡಾ ಕೊಡಬೇಡಿ. ನೀವವರಿಗೆ ಅತಿಯಾದ ಸ್ವಾತಂತ್ರ್ಯವನ್ನು ನೀಡಿದರೆ, ಆಗ ಭವಿಷ್ಯದಲ್ಲಿ ತಮ್ಮ ಅವಸ್ಥೆಗಾಗಿ ಅವರೇ ನಿಮ್ಮನ್ನು ದೂಷಿಸುವರು. ಅದು ಹೇಗೆಂದರೆ, ಒಂದು ಕುದುರೆಯ ಲಗಾಮನ್ನು ನೀವು ತುಂಬಾ ಬಿಗಿಯಾಗಿ ಹಿಡಿದುಕೊಂಡರೆ, ಕುದುರೆಗೆ ಓಡಲು ಸಾಧ್ಯವಾಗದು, ಮತ್ತು ನೀವದನ್ನು ಸಂಪೂರ್ಣವಾಗಿ ಸಡಿಲವಾಗಿಟ್ಟರೆ, ಆಗ ಕುದುರೆಯು ತನಗೆ ಬೇಕಾದಲ್ಲಿಗೆಲ್ಲಾ ಓಡುವುದು. ಆದುದರಿಂದ ಇಲ್ಲಿ ಮಧ್ಯದಾರಿಯನ್ನು ಸ್ವೀಕರಿಸಿ.