ಮಂಗಳವಾರ, ಜನವರಿ 15, 2013

ಸತ್ಸಂಗ


೧೫ ಜನವರಿ ೨೦೧೩
ಬೆಂಗಳೂರು

ಪ್ರ: ಗುರೂಜೀ, ಇವತ್ತು ಸೇನಾ ದಿನ. ದಯವಿಟ್ಟು ನಮ್ಮ ಸೇನೆಯ ಅಥವಾ ರಕ್ಷಣಾಪಡೆಯ ಬಗ್ಗೆ ಮಾತನಾಡುವಿರಾ?
ಶ್ರೀಶ್ರೀರವಿಶಂಕರ್: ಭಾರತದ ಸೇನಾಪಡೆಯು ಜಗತ್ತಿನ ಉತ್ತಮ ಸೇನಾಪಡೆಗಳಲ್ಲಿ ಒಂದು; ಬಹಳ ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವುದು.
ಅವರ ಶಿಸ್ತು, ಬದ್ಧತೆ, ಸಮಾನತೆ ಮತ್ತು ನ್ಯಾಯಪರತೆ ಅನುಸರಿಸಲು ಯೋಗ್ಯವಾಗಿದೆ. ಸೇನಾಪಡೆಯು ಶಿಸ್ತನ್ನು ಅತ್ಯುತ್ತಮವಾಗಿ ಪಾಲಿಸಿದ್ದಾರೆ. ಸೈನ್ಯದ ಯೋಧರಂತೆ ನಮ್ಮ ದೇಶದ ಯುವಕರೂ ಸಹ ಶಿಸ್ತನ್ನು ಗ್ರಹಿಸಬೇಕೆಂಬುದು ನನ್ನ ಆಶೆ.
ಅವರಲ್ಲಿ ಸಮಗ್ರತೆ, ಬದ್ಧತೆ ಮತ್ತು ಚೈತನ್ಯವನ್ನು ಕಾಣಬಹುದು. ಅದೃಷ್ಟವಶಾತ್, ಸೇನಾ ತರಬೇತಿಯು ಯೋಧರಲ್ಲಿ ಸಹಿಷ್ಣುತೆ, ಘನತೆ ಮತ್ತು ಬದ್ಧತೆಯಂತಹ ಗುಣಗಳನ್ನು ಮೈಗೂಡಿಸಿದೆ. ಅವರಲ್ಲಿ ಕೆಲಸ ಮತ್ತು ಶಿಸ್ತಿಗೆ ಸಂಬಂಧಿಸಿದಂತೆ ದೃಢವಾದ ಬದ್ಧತೆಯಿದೆ.
ವಿಶ್ವದ ಅನೇಕ ರಾಷ್ಟ್ರಗಳಲ್ಲಿ, ಯುವಕರಿಗೆ ಒಂದು ಅಥವಾ ಎರಡು ವರ್ಷ ಕಡ್ಡಾಯ ಮಿಲಿಟರಿ ತರಬೇತಿಯಿದೆ. ಭಾರತದಲ್ಲೂ ಈ ರೀತಿಯ ತರಬೇತಿ ಆವಶ್ಯಕವಾಗಿದೆ. ಇಂತಹ ಉಪಕ್ರಮಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕು.
ಯೋಧರು ಮತ್ತು ಅವರ ಕುಟುಂಬದವರು ನಿಜವಾಗಲೂ ಕೃತಜ್ಞತೆಗೆ ಅರ್ಹರು. ಈ ಸಂದರ್ಭದಲ್ಲಿ, ಇತ್ತೀಚೆಗೆ ಪಾಕಿಸ್ತಾನದಿಂದ ತಲೆ ಕಡಿತಗೊಳಿಸಲಾದ ಇಬ್ಬರು ಯೋಧರಿಗೂ ಸಂತಾಪವನ್ನು ಸೂಚಿಸೋಣ. ಪಾಕಿಸ್ತಾನದ ಸೇನೆಯು ಅಸಹನೀಯ ರೀತಿಯಲ್ಲಿ ಮತ್ತು ಹೇಡಿತನದಿಂದ ಇಬ್ಬರು ಶೂರರ ತಲೆಗಳನ್ನು ಕಡಿದಿದ್ದಾರೆ, ಇಂತಹ ಕೃತ್ಯವನ್ನೆಸಗಿದ ಅವರಿಗೆ ನಾಚಿಕೆಯಾಗಬೇಕು. ಅವರಿಬ್ಬರ ಕುಟುಂಬದವರು ಇನ್ನೂ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರಿಗೆ ಆ ತಲೆಗಳು ಬೇಕಾಗಿದೆ. ಅವರೀರ್ವರ ಕುಟುಂಬದವರಿಗೆ ನಮ್ಮ ಅನುಕಂಪ ಮತ್ತು ಪ್ರಾರ್ಥನೆಯಿದೆ.

ಪ್ರ: ಪ್ರೀತಿಯ ಗುರೂಜೀ, ‘ಉತ್ತಮ ಶಿಕ್ಷಣ ಮತ್ತು ಆರೋಗ್ಯದ ನೆರವು ಸಿಗುವುದರಿಂದ ಜನರು ಮತಾಂತರಗೊಂಡರೆ ತಪ್ಪೇನು’ ಎಂದು ಕೇಳುವವರಿಗೆ ನಾವು ಹೇಗೆ ಉತ್ತರಿಸಬೇಕು?
ಶ್ರೀಶ್ರೀರವಿಶಂಕರ್: ಒಳ್ಳೆಯ ಶಿಕ್ಷಣ ಮತ್ತು ಸ್ವಲ್ಪ ಹಣವನ್ನು ನೀಡಿ ಮತಾಂತರಗೊಳಿಸುವುದು ಮಹಾಪರಾಧವೆಂದು ಮಹಾತ್ಮ ಗಾಂಧೀಜೀಯು ಹೇಳಿದ್ದಾರೆ. ಇದು ದೊಡ್ಡ ಅಪರಾಧ. ಇದನ್ನೆಂದೂ ಮಾಡಬಾರದು.
ಪ್ರತಿಯೊಬ್ಬ ವ್ಯಕ್ತಿಗೂ ಸ್ವಯಂ ನಿರ್ಣಯಿಸುವ ಹಕ್ಕಿದೆ. ಇನ್ನೊಬ್ಬರನ್ನು ಮತಾಂತರಿಸಲು ಆಮಿಷಗಳನ್ನೊಡ್ಡಬಾರದು.
ಇತರರನ್ನು ಮತಾಂತರಗೊಳಿಸಲು ನೀವೇಕೆ ಬಯಸುತ್ತೀರಿ? ನಿಮ್ಮ ಸಂಖ್ಯೆಯನ್ನು ಹೆಚ್ಚಿಸಲು ಹೀಗೆ ಮಾಡುತ್ತೀರ? ನಿಮ್ಮ ಸಂಖ್ಯೆಯನ್ನು ಏಕೆ ಹೆಚ್ಚಿಸಬೇಕೆಂದು ಬಯಸುತ್ತೀರ? ಏಕೆಂದರೆ ನೀವು ರಾಜಕೀಯ ಬಲವನ್ನು ಆಶಿಸುತ್ತೀರ.
ನೀವು ಜನರನ್ನು ಮತಾಂತರಿಸುತ್ತಿರುವುದು ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ; ಇದೊಂದು ದುಷ್ಕೃತ್ಯ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ.
ಮತಾಂತರದಿಂದ, ಒಂದು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದೀರ, ಆ ಸಮಾಜದ ಜನಸಂಖ್ಯೆಯನ್ನು ನಾಶಪಡಿಸುತ್ತಿದ್ದೀರ. ಹೀಗಾಗಬಾರದು, ಇದನ್ನು ನಾವು ಅಂತ್ಯಗೊಳಿಸಬೇಕು.
‘ನಮ್ಮ ದೇವರು ನಿಮ್ಮ ದೇವರಿಗಿಂತ ಉತ್ತಮ’ ಎನ್ನುವುದೂ ಮತ್ತೊಂದು ರೀತಿಯ ಭಯೋತ್ಪಾದನೆ. ವಾಸ್ತವವಾಗಿ, ಅದು ಭಯೋತ್ಪಾದನೆಯ ಬೀಜ. ಆದ್ದರಿಂದ, ಇತರರನ್ನು ಮತಾಂತರಗೊಳಿಸುತ್ತಿರುವ ಜನರಿಗೆ ನಾವು ಹೇಳುವುದೇನೆಂದರೆ, ಭಯೋತ್ಪಾದಕರಂತೆ ಕೆಲಸ ಮಾಡುತ್ತಿದ್ದೀರ, ಆದರೆ ಮಾರುವೇಷದಲ್ಲಿ.

ಪ್ರ: ನೀವು ನಮಗೆ ದೈನಂದಿನ ಜೀವನಕ್ಕೆ ಲಾಭವಾಗುವಂತಹ ವಾಸ್ತವಿಕ ಜ್ಞಾನವನ್ನು ನೀಡುತ್ತಿರುವ ಹಾಗೆ, ಧಾರ್ಮಿಕ ಸಂಸ್ಥೆಗಳು ಮತ್ತು ಗುರುಗಳು ಜ್ಞಾನವನ್ನು ನೀಡಿದರೆ, ಜನರೂ ಸಹ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ಅನುಭವಿಸುವರು. ಇದನ್ನು ಸಾರ್ಥಕಗೊಳಿಸಿದರೆ, ಇಂದಿನ ಸಮಾಜವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಕಣ್ಮರೆಯಾಗುವುದೆಂದು ನನ್ನ ಅನಿಸಿಕೆ.
ನಾನು ಸುದರ್ಶನ ಕ್ರಿಯೆಯನ್ನು ಮಾಡುತ್ತೇನೆ ಮತ್ತು ನಿಮ್ಮನ್ನು ಅನುಸರಿಸುತ್ತೇನೆ, ಆದರೆ ಇತರ ಎಲ್ಲ ಗುರುಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ಬಗ್ಗೆ ನನಗೆ ಗೌರವವಿದೆ. ನಾನು ದೇವಸ್ಥಾನಗಳಿಗೆ ಹಾಗೂ ಮಸೀದಿಗಳಿಗೂ ಹೋಗುತ್ತೇನೆ.
ಶ್ರೀಶ್ರೀರವಿಶಂಕರ್: ಬಹಳ ಒಳ್ಳೆಯದು! ಹಾಗೆಯೇ ಇರಬೇಕು.
ಜನರನ್ನು ಮರುಳುಗೊಳಿಸಿ ದೇವಸ್ಥಾನಗಳಿಗೆ ಹೋಗಲು ಪುಸಲಾಯಿಸುವುದು, ಅಥವಾ ನಮಾeóï ಮಾಡಲು ಬಲವಂತ ಮಾಡುವುದು ಸರಿಯಲ್ಲ. ಜನರಿಗೆ ಬೇಕಾಗಿರುವುದು ಆಧ್ಯಾತ್ಮದ ಅನುಭವ; ಒಬ್ಬನೇ ದೇವನಿರುವನೆಂಬ ಅನುಭವ. ನಾವೆಲ್ಲರೂ ಒಂದೇ ದೈವದ ಮಕ್ಕಳು. ನಮ್ಮಲ್ಲಿರುವ ಪ್ರೀತಿಯನ್ನು ಹಂಚಬೇಕೇ ಹೊರತು ದ್ವೇಷವನ್ನಲ್ಲ.
ಇದನ್ನೇ ನಾನು ಪಾಕಿಸ್ತಾನದವರಿಗೂ ಹೇಳುತ್ತಿರುವುದು. ಅಲ್ಲಿನ ಜನರು ಬಹಳ ಒಳ್ಳೆಯವರು. ಇವತ್ತೂ ಸಹ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲಿ ನಮ್ಮ ಮೂರು ಕೇಂದ್ರಗಳಿವೆ. ಅವರು ಸುದರ್ಶನ ಕ್ರಿಯೆಯ ನಂತರ ಅತೀವ ಸಂತೋಷವನ್ನು ಅನುಭವಿಸಿದ್ದಾರೆ. ಅವರೆಲ್ಲರ ದುಃಖ ಮತ್ತು ಸಮಸ್ಯೆಗಳು ತೊಡೆದುಹೋಗಿವೆ. ಅನೇಕರು ನನ್ನನ್ನು ಕನಸಿನಲ್ಲಿ ಕಂಡಿರುವುದಾಗಿ ತಿಳಿಸಿದ್ದಾರೆ!
ಪಾಕಿಸ್ತಾನವಾದರೋ ನಮ್ಮ ನೆರೆಯ ದೇಶ, ಆದರೆ ನೀವು ಇರಾನಿಗೆ ಹೋದರೂ ಕೂಡ, ಅಲ್ಲಿಯೂ ಜನರು ಇಂತಹುದೇ ಅನುಭವವನ್ನು ಹಂಚಿಕೊಳ್ಳುತ್ತಾರೆ.
ನಿಮಗೆ ಗೊತ್ತೇ, ಇರಾನಿನಲ್ಲಿ 60 ರಿಂದ 65 ಜೀವನ ಕಲೆ ಶಿಬಿರದ ಶೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಅಲ್ಲಿಯ ವಾತಾವರಣ ಬಹಳ ಕಠಿಣ ಮತ್ತು ನಿಷ್ಕೃಷ್ಟವಾಗಿದೆ, ಯೋಗಾಭ್ಯಾಸವನ್ನು ಮಾಡಲು ಅನುಮತಿ ನೀಡುವುದಿಲ್ಲ. ಮುಸ್ಲಿಮರೇ ಆದ ಅಲ್ಲಿನ ಶಿಕ್ಷಕರ ಮನೆಯಲ್ಲಿ ನನ್ನ ಭಾವಚಿತ್ರವನ್ನು ನೋಡಿದಾಗ, ಧಾರ್ಮಿಕ ಪೆÇೀಲೀಸರು, ‘ಎಲ್ಲವನ್ನು ಕಲಿಸಿದಂತಹ ನಮ್ಮ ತಾತನಂತೆ ಗುರೂಜೀಯು ಕಾಣುತ್ತಾರೆ! ನಮಗೆ ಶಿಕ್ಷಣ ಮತ್ತು ದೀಕ್ಷೆಯನ್ನು ನೀಡಿರುವ ನಮ್ಮ ಸ್ವಂತ ಧಾರ್ಮಿಕ ಗುರುವಿನಂತೆ ಕಾಣುತ್ತಾರೆ’ ಎಂದರು. ಹೀಗಾಗಿ ಅವರೂ ಸಹ ನಮ್ಮ ಕೆಲಸ-ಕಾರ್ಯಗಳಿಗೆ ಅಡ್ಡಿ ಮಾಡದೆ, ಸುಸೂತ್ರವಾಗಿ ಸಾಗಲು ಅನುವು ಮಾಡಿದರು.
ಹಲವಾರು ಯುವಕರು ಜೀವನ ಕಲೆಯ ಶಿಬಿರದಲ್ಲಿ ಭಾಗವಹಿಸಿ, ಮರಳಿ ಬಂದು ಹೇಳಿದ್ದಾರೆ, ‘ಓಹ್, ಜೀವನದಲ್ಲಿ ಬಹಳ ದೊಡ್ಡದೊಂದನ್ನು ಕಳೆದುಕೊಳ್ಳುತ್ತಿದ್ದೆವು!  ಇದಕ್ಕೂ ಮೊದಲೇ ನಾವೇನಾದರೂ ಇಂತಹ ಅನುಭವವನ್ನು ಪಡೆದಿದ್ದರೆ, ಈಗ ಅತ್ಯಂತ ಸಂತೋಷ ಮತ್ತು ಸಮೃದ್ದಿಯನ್ನು ಹೊಂದಿರುತ್ತಿದ್ದೆವು. ನೆರೆಯ ದೇಶದೊಂದಿಗೆ ಘರ್ಷಣೆ ಮತ್ತು ಕದನವೆರಡೂ ನಿಶ್ಚಿತವಾಗಿ ಕೊನೆಗೊಳ್ಳುತ್ತಿತ್ತು. ದ್ವೆಷವೆಲ್ಲವೂ ಕೊನೆಗೊಳ್ಳುತ್ತಿತ್ತು.’
ಕೆಲವು ಧಾರ್ಮಿಕ ಮುಖಂಡರು, ಮಠಾಧೀಶರು ಮತ್ತು ನಾಯಕರು, ಮುಸ್ಲಿಮರಷ್ಟೇ ಅಲ್ಲ, ಹಿಂದುಗಳೂ ಸಹ, ಇಂತಹ ಪರಿವರ್ತನೆಯುಂಟಾಗಲು ಆಶಿಸುತ್ತಿಲ್ಲ. ಜನರು ಈ ರೀತಿಯ ಅನುಭವವನ್ನು ಪಡೆದರೆ ತಮ್ಮ ವ್ಯವಹಾರವನ್ನು ಅಂತ್ಯಗೊಳಿಸಬೇಕಾಗುತ್ತದೆಂಬ ಭಯ ಆ ಮುಖಂಡರಿಗೆ. ಹೌದು, ಇದು ನಿಜ!
ಹಿಂದುಗಳಲ್ಲೂ ಕೆಲವು ಧಾರ್ಮಿಕ ಮುಖಂಡರು, ಸುದರ್ಶನ ಕ್ರಿಯೆಯನ್ನು ಖಂಡಿಸಿ, ಓಪಿಯಮ್ ನಂತಹ ಮಾದಕ ವಸ್ತುಗಳಿಗೆ ಇದರ ಪರಿಣಾಮವನ್ನು ಹೋಲಿಸುತ್ತಾ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೀವನ ಕಲೆ ಶಿಬಿರಕ್ಕೆ ಹೋಗಲು ಸಂಪೂರ್ಣವಾಗಿ ತಡೆಯುತ್ತಿದ್ದಾರೆ.
ಹಾಗೆಯೇ, ಜೀವನ ಕಲೆ ಶಿಬಿರದಲ್ಲಿ ಕಲಿಯಲು ಅಥವಾ ಶಿಬಿರಕ್ಕೆ ಸೇರಲು, ಪರಧರ್ಮವೆಂಬ ಕಾರಣವೊಡ್ಡಿ ಇಮಾಮರು (ಮುಸ್ಲಿಮರ ಧಾರ್ಮಿಕ ಗುರುಗಳು) ತಮ್ಮವರನ್ನು ತಡೆಯುತ್ತಿದ್ದಾರೆ. ಜೀವನ ಕಲೆಯು ನಿಮ್ಮನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಾರೆಂದು ಹೇಳುತ್ತಿದ್ದಾರೆ.
 ವ್ಯಕ್ತಿಯೊಬ್ಬನ ಪ್ರಗತಿ ಮತ್ತು ಉನ್ನತಿಯನ್ನು ಹೀಗೆ ತಡೆದು ಅಡ್ಡಿ ಮಾಡುವ ಜನರ ವಿರುದ್ಧ ನಾವು ಹೋರಾಡಬೇಕು. ಸಂತೋಷ ಮತ್ತು ಪರಿಪೂರ್ಣತೆಯನ್ನು ತರುವ ಜ್ಞಾನ ಅಥವಾ ಅಭ್ಯಾಸಗಳನ್ನು ತಡೆಯುವ ಅಥವಾ ನಿಷೇಧಿಸುವಂತಹ ಜನರೊಂದಿಗೆ ನಿಭಾಯಿಸಬೇಕು. ಅವರು ಸರಿಯಾದುದನ್ನು ಮಾಡುತ್ತಿಲ್ಲ, ಇಂತಹುದನ್ನು ನಿಲ್ಲಿಸಬೇಕಾಗಿದೆ.
ಈ ರೀತಿಯ ಕೃತ್ಯ ಕೇವಲ ಮುಸ್ಲಿಮ್ ಅಥವಾ ಕ್ರೈಸ್ತರಲ್ಲಿ ನಡೆಯುತ್ತಿದೆಯೆಂದು ಅನ್ಯಥಾ ಭಾವಿಸಬೇಡಿ. ಕೆಲವು ಹಿಂದೂ ಧಾರ್ಮಿಕ ಮುಖಂಡರೂ ಕೂಡ ಹೀಗೆ ಮಾಡುತ್ತಿದ್ದಾರೆ. ಇದು ಕೇವಲ ಅಜ್ಞಾನವಷ್ಟೇ. ಜೀವನ ಕಲೆಯಲ್ಲಿ ನಾವು ಎಲ್ಲರಿಗೂ ಉದಾರವಾಗಿ ಪ್ರೀತಿಯನ್ನು ನೀಡುತ್ತೇವೆ ಮತ್ತು ಅಂತಹ ಜನರಿಗೆ ಶುದ್ಧ ಮತ್ತು ಪ್ರಾಮಾಣಿಕ ಬುದ್ಧಿಯನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ಪ್ರ: ಗುರೂಜೀ, ರಾಷ್ಟ್ರಾಭಿಮಾನ ಮತ್ತು ಆಧ್ಯಾತ್ಮ ಎರಡೂ ಒಟ್ಟಿಗೆ ಸಾಗಬಹುದೇ? ರಾಷ್ಟ್ರಾಭಿಮಾನವು ನಮ್ಮನ್ನು ಸೀಮಿತಗೊಳಿಸುವುದಿಲ್ಲವೇ?
ಶ್ರೀಶ್ರೀರವಿಶಂಕರ್: ಖಂಡಿತ ಇಲ್ಲ. ಇವೆರಡೂ ಒಟ್ಟಿಗೆ ಸಾಗಬಹುದು, ಮತ್ತು ಇವೆರಡರ ಮಧ್ಯೆ ಯಾವುದೇ ಗೊಂದಲಕ್ಕೂ ಅವಕಾಶವಿಲ್ಲ.
ನೋಡಿ, ನೀವು ಪ್ರಜಾಪ್ರಭುತ್ವದ ಒಂದು ಭಾಗ. ಒಂದು ಪ್ರತ್ಯೇಕ ದೇಶದ ಮತ್ತು ಜನತಂತ್ರದ ಪಾಲುದಾರರು. ಆದ್ದರಿಂದ ದೇಶದ ವ್ಯವಹಾರಗಳಲ್ಲಿ ನಿಮಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ, ಸಮರ್ಥಿಸಬೇಕು ಮತ್ತು ಅಭಿವ್ಯಕ್ತಪಡಿಸಬೇಕು. ಇದರಿಂದ ನಿಮ್ಮ ವಿಶ್ವ ಭ್ರಾತೃತ್ವಕ್ಕೆ ಅಥವಾ ಏಕತೆಗೆ ಅಡ್ಡಿಯಾಗುವುದಿಲ್ಲ.
ಉದಾಹರಣೆಗೆ, ನೀವೊಬ್ಬ ಸಮಾಜ ಸೇವಕ. ನಿಮ್ಮ ಮನೆಯಲ್ಲೇ ಕಸ ತುಂಬಿದ್ದರೆ, ಮೊದಲು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬೇಕು.
ನೀವು ‘ನನ್ನ ಮನೆಯನ್ನು ಸ್ವಚ್ಛಗೊಳಿಸಿದರೆ, ರಸ್ತೆಗಳನ್ನು ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಗೊಂದಲವಾಗುವುದಿಲ್ಲವೇ?’ ಎಂದು ಕೇಳಿದರೆ, ‘ಇಲ್ಲ! ನೀವು ವಿಶ್ವವನ್ನು ಸ್ವಚ್ಛಗೊಳಿಸುತ್ತಿರುವಾಗ, ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವುದೂ ಅಗತ್ಯ.’
ನಿಮ್ಮ ಮನೆಗಿಂತ ಸ್ವಲ್ಪ ವಿಸ್ತಾರವಾದುದು ದೇಶ, ನಂತರ ಇಡೀ ವಿಶ್ವದಲ್ಲಿ ಶಾಂತಿ.
ನೀವು ಯಾವುದೇ ದೇಶಕ್ಕೆ ಸೇರದಿದ್ದರೆ, ಆ ದೇಶದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆಗ ಅಲ್ಲಿನ ಜನರು, ‘ಇದು ನಮ್ಮ ಆಂತರಿಕ ವ್ಯವಹಾರ. ಇದನ್ನು ಕೇಳಲು ನೀವು ಯಾರು?’ ಎನ್ನುವರು.
ನಿಮ್ಮ ಮನೆಯನ್ನು ಶುಚಿಗೊಳಿಸಲು ನಿಮಗೆ ಅಧಿಕಾರವಿದೆ, ಆದರೆ ನೆರೆಮನೆಯವರಿಗೆ ಹೋಗಿ, ‘ನಾಳೆ ನಾನು ನಿಮ್ಮ ಮನೆಗೆ ಬಂದು ಶುಚಿಗೊಳಿಸುತ್ತೇನೆ. ನಿಮ್ಮೊಂದಿಗೂ ನನಗೆ ಸ್ವಕೀಯ ಭಾವವಿದೆ’ ಎಂದರೆ, ಅವರೆನ್ನುವರು, ‘ಧನ್ಯವಾದ, ಆದರೆ ನಿಮಗೆ ಸ್ವಾಗತವಿಲ್ಲ. ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ, ಅದು ಉತ್ತಮ.’
 ನಿಮ್ಮ ಮನೆಯಲ್ಲಿ ನೀವು ಬಯಸಿದಂತೆ ಮಾಡುವ ಅಧಿಕಾರವಿದೆ. ಆದರೆ ಅದೇ ಅಧಿಕಾರವನ್ನು ನಿಮ್ಮ ನೆರೆಹೊರೆಯವರ ಮೇಲೆ ಬಳಸಲು ಸಾಧ್ಯವಿಲ್ಲ.
ಈಗ ನಿಮ್ಮ ನೆರೆಮನೆಯವರು ನಿಮ್ಮನ್ನು ಸ್ವಾಗತಿಸಿ, ‘ದಯವಿಟ್ಟು ಬನ್ನಿ, ನಿಮ್ಮ ಸಹಾಯದ ಅವಶ್ಯಕತೆಯಿದೆ. ನಮ್ಮ ಮನೆಯನ್ನೂ ಶುಚಿಗೊಳಿಸೋಣ’ ಎಂದರೆ, ಆಗ ನೀವು ಸಂತೋಷವಾಗಿ ಆ ಕೆಲಸವನ್ನು ಮಾಡಬಹುದು.
ನೀವೊಂದು ದೇಶದ ನಿವಾಸಿಯಾಗಿರದೇ, ಪ್ರವಾಸಿಯಾಗಿದ್ದರೆ, ಆ ದೇಶದ ವ್ಯವಹಾರಗಳ ನಡುವೆ ಪ್ರವೇಶಿಸುವುದು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಅದು ಸರಿಯಲ್ಲ.
ಹೀಗೆ ಮೂರ್ತ ಮತ್ತು ಅಮೂರ್ತ ಸ್ತರದಲ್ಲಿ ಗೊಂದಲವುಂಟಾಗುತ್ತದೆ.
ಅಮೂರ್ತ ಸ್ತರದಲ್ಲಿ, ಎಲ್ಲರೊಂದಿಗೂ ನೀವು ಬಾಂಧವ್ಯವನ್ನು ಹೊಂದಿದ್ದೀರ. ಭಾವನಾತ್ಮಕ ಮಟ್ಟದಲ್ಲಿ, ನಿಮಗನಿಸುವುದು, ‘ಭಾರತ ಮತ್ತು ಪಾಕಿಸ್ತಾನ ಅಥವಾ ಅಮೇರಿಕಾ ಅಥವಾ ಯೂರೋಪ್ ನಡುವೆ ವ್ಯತ್ಯಾಸವೇನಿದೆ? ನಾನೆಲ್ಲಿಗೆ ಹೋಗುವೆನೋ ಅದು ನನ್ನ ಸ್ಥಳವೆಂಬ ಭಾವನೆಯುಂಟಾಗುವುದು. ನನ್ನ ಮನೆಯಂತೆ ಭಾಸವಾಗುವುದು.’
ಅದೇ ವೇಳೆಗೆ, ಎಲ್ಲಾ ಸ್ಥಳಗಳಲ್ಲೂ ಒಂದೇ ರೀತಿ ವರ್ತಿಸಲಾಗದು. ಪ್ರತಿಯೊಂದು ದೇಶ ತನ್ನದೇ ಆದ ನೀತಿ ಸಂಹಿತೆಯನ್ನು ಹೊಂದಿದ್ದು, ಅದನ್ನು ಅನುಸರಿಸಬೇಕಾಗಿದೆ.’

ಪ್ರ: ರಾಷ್ಟ್ರಾಭಿಮಾನವೆಂದರೇನು ಮತ್ತು ಅದು ವಿಶ್ವ ಭ್ರಾತೃತ್ವಕ್ಕೆ ವಿರುದ್ದಾರ್ಥಕವಾಗಿದೆಯೇ? ವಿಶ್ವದ ಭ್ರಾತೃತ್ವವನ್ನು ರಾಷ್ಟ್ರಾಭಿಮಾನವನ್ನು ಹೇಗೆ ವಿಸ್ತಾರಗೊಳಿಸಬೇಕು?
ಶ್ರೀಶ್ರೀರವಿಶಂಕರ್: ಮೊಟ್ಟ ಮೊದಲಿಗೆ ವಿಶ್ವ ಭ್ರಾತೃತ್ವದ ಭಾವನೆ ಉದ್ದೀಪನಗೊಳ್ಳುತ್ತದೆ. ನೀವು ಇಡೀ ವಿಶ್ವದ ಮೇಲೆ ಹಕ್ಕನ್ನು ಹೊಂದದಿದ್ದರೂ, ನಿಮ್ಮ ದೇಶದಲ್ಲಿ ಖಂಡಿತ ಮತದಾರರಾಗಿರುವಿರಿ. ನಿಮ್ಮ ದೇಶದಲ್ಲಿ ಮತದಾರರಾಗಿರುವಾಗ, ದೇಶದತ್ತ ನಿಮಗೆ ಕೆಲವು ಜವಾಬ್ದಾರಿ.