ಮಂಗಳವಾರ, ಫೆಬ್ರವರಿ 5, 2013

ನಿಮ್ಮ ಮನೆಗೆ ಕೊಂಚ ಬಣ್ಣ ತುಂಬಿ


ಫ಼ೆಬ್ರವರಿ ೦೫, ೨೦೧೩
ಬೆಂಗಳೂರು, ಭಾರತ

ಪ್ರ: ದೇವರು ಸರ್ವಾಂತರ್ಯಾಮಿಯಾಗಿದ್ದು, ನನಗೆ ಗುರುಗಳೊಂದಿಗೆ ಸಂಪರ್ಕದ ದೃಢ ಅನುಭವವಿದ್ದರೆ, ಆಗಲೂ ದೇವಸ್ಥಾನಗಳಿಗೆ ಹೋಗುವುದು ಅವಶ್ಯಕವೇ, ಶಾಸ್ತ್ರಗಳ ಮಹತ್ವವೇನು?

ಶ್ರೀ ಶ್ರೀ :ನೋಡಿ, ನೀವು ಯಾವುದೇ ದೇವಸ್ಥಾನ, ಮಸೀದಿ ಅಥವಾ ಇಗರ್ಜಿಗಳಿಗೆ ಅಥವಾ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ. ನೀವೆಲ್ಲೇ ಇದ್ದರೂ, ಕುಳಿತು ಧ್ಯಾನ ಮಾಡಿ, ಆಗ ನೀವು ದೈವತ್ವದ ಅಸ್ತಿತ್ವವನ್ನು ಅನುಭವಿಸುತ್ತೀರಿ. ಆದರೆ ಸ್ವಲ್ಪ ಶಾಸ್ತ್ರಗಳು ಜೀವನದಲ್ಲಿ ಇರುವುದು ಒಳ್ಳೆಯದು, ಅತಿಯಾಗಿ ಅಲ್ಲ.

ಶಾಸ್ತ್ರಗಳಿಲ್ಲದೆ, ಜೀವನವು ಒಣಕಲು ಮತ್ತು ಏಕತಾನಮಯವಾಗುತ್ತದೆ.ಅದು ಈ ಶಾಸ್ತ್ರಗಳು ಜೀವನಕ್ಕೆ ಒಂದು ನಿರ್ದಿಷ್ಟ ರಸ, ಒಂದು ನಿರ್ದಿಷ್ಟ ಹುರುಪು, ಒಂದು ನಿರ್ದಿಷ್ಟ ರಂಗನ್ನು ತರುವಂಥದ್ದು.ಹಾಗಾಗಿ ನಾನು ಹೇಳುತ್ತೇನೆ, ನಾವು ಕಾಲ ಕಾಲಕ್ಕೆ ಕೆಲವೂ ಶಾಸ್ತ್ರಗಳನ್ನು ಇಟ್ಟುಕೊಳ್ಳಬೇಕು; ಅದು ಒಳ್ಳೆಯದು.

ನೋಡಿ, ಯಾವುದೇ ಸಂಪ್ರದಾಯಗಳೇ ಇಲ್ಲದ ಮನೆಯೊಳಗೆ ಹೋಗಿ ಮತ್ತು ಪ್ರತಿ ದಿನ ಒಂದು ದೀಪವೋ, ಅಗರ್ಬತ್ತಿಯನ್ನೋ ಉರಿಸುವ ಒಂದು ಮನೆಯೊಳಗೆ ನಡೆಯಿರಿ; ಎಲ್ಲಿ ಆ ಪಾವನತ್ವ ಇದೆಯೋ, ಅಲ್ಲಿನ ಪರಿಸರದಲ್ಲಿ ಆ ವ್ಯತ್ಯಾಸವಿದೆ. ನಿಮ್ಮಲ್ಲೆಷ್ಟು ಮಂದಿ ಇದನ್ನು ಗಮನಿಸಿದ್ದೀರಿ?

ಒಂದು ನಿರ್ದಿಷ್ಟ ವ್ಯತ್ಯಾಸವಿದೆ.ಅದು ಒಂದು ರೀತಿಯ ವಾತವರಣವನ್ನು ಸೃಷ್ಟಿಸುತ್ತದೆ.ಸೂಕ್ಷ್ಮವಾದುದು ಅಲ್ಲಿ ಇನ್ನೂ ಜೀವಂತವಾಗುತ್ತದೆ, ಅಲ್ಲವೇ?

ಹಾಗಾಗಿ ದಿನ ನಿತ್ಯ ಜೀವನದಲ್ಲಿ ಕೊಂಚ ಸಂಪ್ರದಾಯ ಒಳ್ಳೆಯದು.ಬೆಳಗ್ಗೆ ನೀವು ಎದ್ದಾಗ, ಕುಳಿತು ಧ್ಯಾನಿಸಿ.ಧ್ಯಾನದ ಜೊತೆಗೆ ಪ್ರಾಣಾಯಾಮಗಳನ್ನೂ ನೀವು ಖಂಡಿತ ಮಾಡಬೇಕು.

ಮನೆಯಲ್ಲಿ ಕೇವಲ ಒಬ್ಬರು ಎಲ್ಲಾದರೂ ದೀಪ ಬೆಳಗಿದರೆ, ಎಲ್ಲರೂ ಅದನ್ನು ಮಾಡಬೇಕಾಗಿಲ್ಲ, ಒಂದು ಮನೆಯಲ್ಲಿ ಒಬ್ಬರು ದೀಪ ಬೆಳಗಿದರೆ ಅದು ಸಂಪೂರ್ಣ ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ಇದು ನಾನು ಕಾರ್ಯರೂಪದಲ್ಲಿ ನೋಡಿರುವಂಥದ್ದು.

ನಾನು ಬಹಳ ಮನೆಗಳಿಗೆ ಭೇಟಿ ನೀಡಿದ್ದೇನೆ; ಚಿಕ್ಕವು, ದೊಡ್ಡವು, ಗುಡಿಸಲುಗಳು, ಬಂಗಲೆಗಳು, ಮತ್ತು ಪ್ರತಿ ಸ್ಥಳದಲ್ಲೂ ನಾನು ಒಂದು ವಿಷಯ ಖಂಡಿತವಾಗಿ ಇರುವುದನ್ನು ನೋಡಿದ್ದೇನೆ, ಒಂದು ಚಿಕ್ಕ ಗುಡಿಸಲಿನಲ್ಲೂ ಅವರು ಒಂದು ಸಣ್ಣ ಪೂಜಾ ಕೊಟಡಿ ಇಟ್ಟುಕೊಂಡು ಅಲ್ಲಿ ದೀಪ ಇತ್ಯಾದಿ ಇಡುತ್ತಾರೆ, ಮತ್ತು ಅಲ್ಲಿನ ಸಂಪೂರ್ಣ ಪರಿಸರದಲ್ಲಿ ಒಂದು ಸೂಕ್ಷ್ಮತ್ವವಿದೆ, ಅದರಲ್ಲಿ ಏನೋ ಒಳ್ಳೆಯದಿದೆ. ಏನೂ ಇಲ್ಲದ, ಪಾವಿತ್ರ್ಯದ ಯಾವುದೇ ಪ್ರತೀಕವಿಲ್ಲದ ಅಥವಾ ದೀಪವನ್ನು ಹಚ್ಚದಿರುವಂಥ ಮನೆಯೊಳಗೆ ನೀವು ಹೋಗಿ, ಆಗ ಏನೋ ಒಂದು ಜಡತ್ವವಿರುತ್ತದೆ.ನಾನು ಇದನ್ನು ಗಮನಿಸಿದ್ದೇನೆ.ಅದಕ್ಕೇ ನಾನು ಹೇಳುವುದು, ಮನೆಯಲ್ಲಿ ಒಂದು ಚಿಕ್ಕ ಪೂಜಾ ಕೊಟಡಿ ಮತ್ತು ಸ್ವಲ್ಪ ಸಂಪ್ರದಾಯಗಳು ಒಳ್ಳೆಯದು.ಯಾರಾದರೂ ಒಬ್ಬರು ಅದನ್ನು ಮಾಡಬಹುದು; ಮನೆಯ ಮಹಿಳೆ ಮಾಡಬಹುದು, ಅಥವಾ ಗೃಹದ ಪುರುಷ ಅದನ್ನು ಮಾಡಬಹುದು.ಮತ್ತು ಅದು ಮಕ್ಕಳಿಗೂ ಒಳ್ಳೆಯದು, ಅವರಿಗೆ ಧಾರ್ಮಿಕ ಅಥವಾ ಆಧ್ಯಾತ್ಮಿಕತೆಯ ಆ ಸವಿಯನ್ನು ಪಡೆಯಲು ಅವರು ಮಾಡಬೇಕಾದುದು ಏನೋ ಇದೆ ಎಂದು ನೋಡಿ ಕಲಿಯಲು ಮಕ್ಕಳಿಗೂ ಅದು ಒಳ್ಳೆಯದು.

ಈ ದೇಶದಲ್ಲಿ ನೀವು ಇದನ್ನು ಬಸ್ಸುಗಳಲ್ಲೂ ನೋಡುತ್ತೀರಿ.ಪ್ರತಿ ಬಸ್ ಚಾಲಕ, ಟ್ಯಾಕ್ಸೀ ಚಾಲಕ, ಕಾರ್ ಚಾಲಕ, ಆಟೊ ಚಾಲಕರು, ಮುಂಜಾನೆ ಮೊದಲನೆಯದಾಗಿ ಹೂವನ್ನಿಟ್ಟು ಅಥವಾ ಅಗರ್ಬತ್ತಿಯನ್ನು ಉರಿಸು ವಂದಿಸುತ್ತಾರೆ.ಮತ್ತು ಅವರು ಮಾಡುವ ಈ ಸಣ್ಣ ಚಟುವಟಿಕೆ ಅವರ ಜೀವನಗಳಲ್ಲಿ ಗುಣಮಟ್ಟದ ವ್ಯತ್ಯಾಸವನ್ನು ಉಂಟುಮಾಡುತ್ತದೆ.ಭಾರತದಲ್ಲಿ ಅಂಗಡಿಗಳಲ್ಲೂ ಮತ್ತು ಹೋಟೆಲ್.ಗಳಲ್ಲೂ ಪೂಜೆಗಾಗಿ ದೇವರ ಪೀಠ ಇಟ್ಟಿರುವರು.

ನೀವು ಅವರನ್ನು ಕೇಳಬಹುದು, ’ನೀವು ಇದನ್ನು ಯಾಕೆ ಮಾಡುತ್ತೀರಿ?’ ಯಾರಾದರೂ ಇದರ ಬಗ್ಗೆ ಸಂಶೋಧನೆ ಮಾಡಬಹುದು.ಇದು ಅವರಿಗೆ ಒಂದು ರೀತಿಯ ಮಾನಸಿಕ ಶಕ್ತಿಯನ್ನು ನೀಡುತ್ತದೆ.ಒಂದು ಸೂಕ್ಷ್ಮ ರೀತಿಯಲ್ಲಿ ಇದು ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ನನಗೆ ಹೀಗೆ ಅನಿಸುತ್ತದೆ.

ಭಾರತದಲ್ಲಿ, ಸರ್ಕಾರೀ ಕಛೇರಿಗಳಲ್ಲಿ ಇದನ್ನು ಮಾಡುತ್ತಾರೆ.ಅವರ ಕಛೇರಿಯ ಪ್ರತಿ ಅಧಿಕಾರಿಯು ಒಂದು ಪೂಜಾ ಪೀಠವನ್ನು ಇಟ್ಟುಕೊಂಡಿರುತ್ತಾರೆ.ಕರ್ನಾಟಕದಲ್ಲಿ ಇದು ಸ್ವಲ್ಪ ಜಾಸ್ತಿ ಇದೆ.ಮುಖ್ಯ ಮಂತ್ರಿ ಪ್ರಮಾಣ ತೆಗೆದುಕೊಳ್ಳಬೇಕಿದ್ದರೆ, ಅಥವಾ ಹೊಸ ಕಛೇರಿಯನ್ನು ಪ್ರವೇಶಿಸಬೇಕಿದ್ದರೆ, ಅವ್ವರು ಅಲ್ಲಿ ಒಂದು ಆಮೂಲಾಗ್ರ ಪೂಜಾವಿಧಿ, ಎಲ್ಲವನ್ನೂ ಮಾಡುತ್ತಾರೆ.

ಜಗತ್ತಿನಾದ್ಯಂತ ಇದು ಇದೆ.ಅಮೆರಿಕಾದ ಶಸನ ಸಭೆ ಮತ್ತು ಕ್ಯಾನಡಾದ ಸಂಸತ್ತಿನಲ್ಲಿ ಪ್ರತಿ ದಿನ ಅವರು ಒಂದು ನಿಮಿಷ ಪ್ರಾರ್ಥನೆ ಇಟ್ಟುಕೊಳ್ಳುತ್ತಾರೆ. ಪ್ರತಿ ಸಂಸತ್ತಿಗೂ ಒಬ್ಬ ಅರ್ಚಕ(ಪ್ಯಾಸ್ಟರ್) ಬಂದು ದೈವೀ ಬೈಬಲ್.ನಿಂದ ಓದಿ ಹೇಳುವವರಿರುತ್ತಾರೆ. ಭಾರತದಲ್ಲಿ ಮಾತ್ರ ನಾವು ಜಾತ್ಯತೀತತೆಯ ಬಗ್ಗೆ ಮಾತನಾಡುವುದು.ನಾವು ಎಲ್ಲಾ ವಿವೇಕ, ಜ್ಞಾನ ಮತ್ತು ಪುರಾತನ ಸಂಪ್ರದಾಯಗಳಿಂದ ದೂರವಿರಲು ಪ್ರಯತ್ನಿಸುದು ಒಂದು ರೀತಿಯ ಖಾಯಿಲೆ.ಜನರು ಇದನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಅದು ನಿಜಾವಗಿಯೂ ಆಗುವುದಿಲ್ಲ. ಇದು ಅಷ್ಟು ಆಳವಾಗಿ ಪ್ರತಿಯೊಬ್ಬರಲ್ಲಿ ಸಮಗ್ರಗೊಂಡಿದೆ.

ಪ್ರ: ಯಾವುದೇ ರೀತಿಯ ಅನ್ಯಾಯದೊಂದಿಗೆ ವ್ಯವಹರಿಸಲು ಅತ್ಯುತ್ತಮ ಮಾರ್ಗ ಯಾವುದು?

ಶ್ರೀ ಶ್ರೀ: ಕೆಲವೊಮ್ಮೆ ನೀವು ಯಾವುದನ್ನು ಅನ್ಯಾಯ ಅಂದುಕೊಳ್ಳುತ್ತೀರೋ, ಅದು ಇನ್ನೊಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಹಾಗಲ್ಲದೇ ಇರಬಹುದು. ಅದು ಅನ್ಯಾಯವೇ ಅಲ್ಲದಿರಬಹುದು.

ನೀವು ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು ಅಗತ್ಯ, ಆದರೆ ವಿವೇಕದೊಂದಿಗೆ ಮತ್ತು ಅರಿವಿನೊಂದಿಗೆ, ಯಾಕಂದರೆ ಪೀಡಿತ ಅಥವಾ ಸಿಟ್ಟಾದ ಎಲ್ಲರೂ ಯಾವಾಗಲೂ ಹೇಳುವುದು, ’ನಾನು ಅನ್ಯಾಯವನ್ನು ತಡೆಯುತ್ತಿದ್ದೇನೆ’ ಎಂದು.

ಕ್ರೋಧದ ಜ್ವಾಲೆಯ ಹಿಂದೆ, ನ್ಯಾಯಕ್ಕಾಗಿ ಒಂದು ಮೊರೆಯಿದೆ, ಅಥವಾ ನ್ಯಾಯಕ್ಕಾಗಿ ಒಂದು ತಗಾದೆ ಇದೆ.ಆದರೆ ನೀವು ವಿಮರ್ಶಿಸಿದಾಗ, ಅದರ ಆಳಕ್ಕೆ ಹೋದಾಗ, ಅದು ಸರಿಯೇ ಅಲ್ಲದಿರಬಹುದು.ಅದು ನ್ಯಾಯವೇ ಅಲ್ಲದಿರಬಹುದು.ಹಾಗಾಗಿ ನಾನು ಹೇಳುತ್ತೇನೆ, ನೀವು ಮೊದಲು ಕೂಲಂಕುಷವಾಗಿ ಶಾಂತ ಮನಸ್ಸಿನಿಂದ ವಿಮರ್ಶಿಸಿ ನೋಡಬೇಕು, ಅದಾದ ನಂತರ ಅನ್ಯಾಯದ ವಿರಿದ್ಧ ಒಂದು ನಿಲುವನ್ನು ಇಟ್ಟುಕೊಳ್ಳಬೇಕು.

ಪ್ರ: ಗುರೂಜಿ, ಆಧ್ಯಾತ್ಮಿಕ ಪಥದಲ್ಲಿ ಬ್ರಹ್ಮಚರ್ಯವು ಒಂದು ಮುಖ್ಯ ಭಾಗ ಎಂದು ಹೇಳಲಾಗುತ್ತದೆ. ಮನಸ್ಸಿನ ಬ್ರಹ್ಮಚರ್ಯವನ್ನು ಹೇಗೆ ಬೆಳೆಸಿಕೊಳ್ಳುವುದು?ಬ್ರಹ್ಮಚರ್ಯವೆಂಬುದು ಶಾರೀರಿಕ ವ್ರತವೇ ಅಥವಾ ಮನಸ್ಸಿಗೆ ಹೆಚ್ಚು ಸಂಬಂಧಿಸಿದ್ದೇ?

ಶ್ರೀ ಶ್ರೀ: ಅದು ಎರಡೂ ಆಗಿದೆ. ಬ್ರಹ್ಮಚರ್ಯವು ತಾನಾಗಿ ಆಗುತ್ತದೆ, ನೀವು ಅದನ್ನು ತಮ್ಮ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ನೋಡಿ, ನಿಮಗೆ ಪರೀಕ್ಷೆಯಿದ್ದು ನೀವು ಅದಕ್ಕೆ ಓದುತ್ತಿದ್ದರೆ, ಅಂಥ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಅನಿವಾರ್ಯವಾಗಿ ಹೇಳುತ್ತಾರೆ, ’ನಮಗೆ ಕಾಮದ ಆಲೋಚನೆಗಳೇ ಇಲ್ಲ, ನಮ್ಮ ಪರೀಕ್ಷೆಗಳಲ್ಲಿ ನಾವು ಬಿಡುವಿಲ್ಲದೆ ಅಷ್ಟು ಮಗ್ನರಾಗಿದ್ದೇವೆ.’

ಹಾಗೆಯೇ, ನಿಮಗೆ ಒಂದು ಬಹಳ ಮುಖ್ಯವಾದ ಪ್ರಾಜೆಚ್ಟ್ ಮುಗಿಸಬೇಕಿದೆ ಎಂದು ನೀವು ಶ್ರಮದಿಂದ ಕೆಲಸ ಮಾಡುತ್ತಿದ್ದೀರಿ, ಆಗಲೂ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.

ಧ್ಯಾನದ ಮೂಲಕವೂ; ನಿಮ್ಮಲ್ಲಿನ ಶಕ್ತಿ ಉದಯಿಸಿದಾಗ, ನೀವು ಅಂಥ ಆನಂದವನ್ನು, ಅಂಥ ಪುಳಕವನ್ನು, ಮತ್ತು ಅಂಥ ಹರ್ಷೋನ್ಮಾದವನ್ನು ನಿಮ್ಮೊಳಗೆ ಕಾಣುತ್ತೀರೆಂದರೆ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.ವಾಸ್ತವದಲ್ಲಿ, ಬಹಿರ್ಮುಖಿಯಾಗಿರುವುದು ಒಂದು ಬೇನೆ. ಬ್ರಹ್ಮಚರ್ಯವು ಅಂತರ್ಮುಖವಾಗಿರುವ ಮನಸ್ಸಿನ ಪ್ರಭಾವ, ಅದು ಆಗುವುದು ನೀವು ಯಾವುದೂ ಏನೂ ಅಲ್ಲ, ಇದೆಲ್ಲವೂ ಏನೂ ಅಲ್ಲ ಎಂದು ಕಂಡಾಗ. ಒಂದು ವೇಳೆ ಏನಾದರೂ ಆಗುತ್ತಿದ್ದರೆ, ಅದು ಆ ಸೂಕ್ಷ್ಮ ಸ್ಥರದಿಂದ ಆಗುತ್ತಿದೆ. ಆ ಸೂಕ್ಷ್ಮ ಸ್ಥರದೊಂದಿಗಿನ ಸಂಪರ್ಕವು ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಹುಮಟ್ಟಿಗೆ ಕ್ಷುಲಕವಾಗಿಸುತ್ತದೆ, ಮತ್ತು ಅಂಥ ಸಮಯದಲ್ಲಿ ಬ್ರಹ್ಮಚರ್ಯ ಉಂಟಾಗುವುದು. ’ಓ, ಅದು ಆದಾಗ ಆಗುತ್ತದೆ, ಈಗ ನನ್ನ ಚಪಲ ತೀರಿಸಿಕೊಳ್ಳೋಣ’ ಎಂದಲ್ಲ ಅದರ ಅರ್ಥ. ಅಲ್ಲ!

ಅರಬ್ಬೀ ಪ್ರಾಂತ್ಯದ ಒಬ್ಬ ಪ್ರಾಧ್ಯಾಪಕರು ಒಂದು ಕುತೂಹಲಕಾರಿ ವಿಷಯವನ್ನು ಹೇಳಿದರು.ಅವರು ಹೇಳಿದರು, ಶರೀರದಲ್ಲಿನ ಪ್ರತಿ ದ್ರವವು ಮಿದುಳಿನ ದ್ರವದೊಂದಿಗೆ ಸಂಪರ್ಕ ಹೊಂದಿದೆ, ಯಾವುದೇ ಕಳೆದುಕೊಂಡ ದ್ರವದಿಂದ ಶೇಕಡ ೨೦ರಷ್ಟು ಮಿದುಳಿನ ದ್ರವವು ಇಳಿಯುತ್ತದೆ.ಇದು ಅವರು ಮಾಡುತ್ತಿರುವ ಒಂದು ದೊಡ್ಡ ಸಂಶೋಧನೆ. ಆದ್ದರಿಂದಲೇ ಹಿಂದಿನ ಜನರು ಹೇಳಿರುವುದು, ನೀವು ವಿದ್ಯಾರ್ಥಿಯಾಗಿದ್ದರೆ, ಮತ್ತು ಮಿದುಳಿಗೆ ಕೆಲಸ ಕೊಡಬೇಕಿದ್ದರೆ, ನೀವು ಅದಕ್ಕೆ ಬ್ರಹ್ಮಚರ್ಯವನ್ನು ಸೇರಿಸಬೇಕು.

ಹಾಗೆ, ಮೊದಲ ೨೫ ವರ್ಷಗಳ ಕಾಲ ನೀವು ಬ್ರಹ್ಮಚರ್ಯವನ್ನು ಪಾಲಿಸಬೇಕು, ನಂತರ ೨೫ರಿಂದ ೫೦ರ ವಯಸ್ಸಿನ ತನಕ ನೀವು ಗೃಹಸ್ಥಾಶ್ರಮದಲ್ಲಿದ್ದು, ಕೌಟುಂಬಿಕ ಜೀವನದ ಹರ್ಶೋಲ್ಲಾಸಗಳನ್ನು ಪಡೆಯಬಹುದು, ಆದರೆ ೫೦ರ ಬಳಿಕವಲ್ಲ.
೫೦ರ ನಂತರ, ನೀವು ನಿಧಾನವಾಗಿ ಕೆಳಗಿಳಿಯಬೇಕು, ಇಲ್ಲದಿದ್ದರೆ ಅದು ನಿಮಗೊಂದು ಚಟವಾಗಿಬಿಡುತ್ತದೆ.

ಜನರಿಗೆ ಈ ಚಟವಿದ್ದಾಗ, ಶರೀರಕ್ಕೆ ನಿರ್ವಹಿಸಲಾಗುವುದಿಲ್ಲ, ಆದರೆ ಮನಸ್ಸು ಅದರ ಬಗ್ಗೆ ಜ್ವರತೆ ಇರುತದೆ.ಶರೀರ ಮತ್ತು ಮನಸ್ಸು ಜೊತೆಗೆ ಸಾಗಬೇಕು.ಇಲ್ಲವಾದರೆ, ಇದು ಬುಲೀಮಿಯಾದಂತೆ ಒಂದು ಖಾಯಿಲೆಯೆಂದು ನಾನು ಹೇಳುತ್ತೇನೆ.ದೇಹ ಇನ್ನೂ ಆಹಾರ ಬೇಡವೆನ್ನುತ್ತದೆ, ಆದರೆ ಮನಸ್ಸು ಇಲ್ಲ, ಇನ್ನೂ ತುಂಬಿಸು ಎನ್ನುತ್ತದೆ.

ಹೀಗೆ, ೭೦-೮೦ ವಯಸ್ಸಿನವರೂ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ, ಏನನ್ನೂ ಮಾಡಲು ನಿಶ್ಶಕ್ತರಾಗಿದ್ದರೂ! ಇದು ಶೋಚನೀಯ ಸ್ಥಿತಿ.ಇದು ಬ್ರಹ್ಮಚರ್ಯವಲ್ಲ. ಇದು ಮನಸ್ಸು ಸರಿಯಾದ ಸ್ಥಿತಿಯಲ್ಲಿ ಇಲ್ಲದಿರುವುದು.
ಮಧ್ಯಮ ಮಾರ್ಗ (ಸಂಯಮ) ಎಂಬುದನ್ನು ಬ್ರಹ್ಮಚರ್ಯ ಎಂದು ಕರೆಯುವುದು; ಸಂಯಮವು ಬ್ರಹ್ಮಚರ್ಯ ವ್ರತ.

ಪ್ರ: ಪ್ರಿಯ ಗುರೂಜಿ, ಇಂದು ನಾವು ಸೇವಿಸುವ ಆಹಾರದಲ್ಲಿ ಬಹಳಷ್ಟು ರಾಸಾಯನಿಕ ಪದಾರ್ಥಗಳಿವೆ ಮತ್ತು ಸರಕಾರದ ಕಾರ್ಯನೀತಿ, ಧೋರಣೆ ಇದನ್ನು ಪ್ರಚೋದಿಸುತ್ತವೆ. ಇದನ್ನು ಹೇಗೆ ನಿರ್ವಹಿಸುವುದು?ಅಲ್ಲದೇ ಸಾವಯವ ಕೃಷಿಯಿಂದ ಲಭಿಸುವ ಆಹಾರ ಮತ್ತು ಸಾವಯವ ಕೃಷಿಯ ಬಗ್ಗೆಯೂ ದಯವಿಟ್ಟು ಹೇಳಬೇಕು.

ಶ್ರೀ ಶ್ರೀ: ಸಾವಯವ ಕೃಷಿಯು ಈ ಭೂಮಿಯ ಭವಿಷ್ಯ.

ನಮಗೆ ಈ ಭೂಮಿಯು ಜೀವಂತವಾಗಿರಬೇಕಿದ್ದರೆ, ನಾವು ಸಾವಯವ ಮಾರ್ಗವನ್ನು ಅಳವಡಿಸಬೇಕು. ಬೇರೊಂದು ಮಾರ್ಗವಿಲ್ಲ. ಕೆಲವು ಜನ ಎಷ್ಟು ಲೋಭಿ ಮತ್ತು ಸ್ವಾರ್ಥರಾಗಿರುತ್ತಾರೆಂದರೆ ಅವರು ಈ ಭೂಮಿಗಾಗಿ ಕಳವಳ ಪಡುವುದಿಲ್ಲ, ಮತ್ತು ಹಾಗಾಗಿ ಅವರು  ಅಪಾಯಕಾರಿ ವಿಷಯಗಳನ್ನು ರೈತರಿಗೆ ಉತ್ತೇಜಿಸುತ್ತಾರೆ. ಒಂದೋ ಎರಡೋ ಬೆಳೆಗಳು ಚೆನ್ನಾಗಿ ಬರುತ್ತವೆ, ಹಾಗೆ ಅದು ರೈತರನ್ನು ಆಕರ್ಷಿಸಿ ಅವರು ಅದನ್ನು ತೆಗೆದುಕೊಳ್ಳುತ್ತಾಎ. ಒಮ್ಮೆ ಅವರು ಅದನ್ನು ತೆಗೆದುಕೊಂಡ ನಂತರ, ಮೂರನೆ ಅಥವಾ ನಾಲ್ಕನೇ ಫಸಲಿನಿಂದ ಎಲ್ಲವೂ ಇಳಿದುಹೋಗುತ್ತದೆ ಮತ್ತು ನೆಲವೂಕೆಟ್ಟು ಹೋಗುತ್ತದೆ. ಭೂಮಿಯು ವ್ಯವಸಾಯಕ್ಕೆ ಅಯೋಗ್ಯವಾಗಿಬಿಡುತ್ತದೆ.ಇದುವೇ ಸಮಸ್ಯೆ.ಅದಕ್ಕಾಗಿಯೇ ನಾವು ರೈತರಿಗೆ ಸಾವಯವ ಕೃಷಿ; ಪ್ರಾಚೀನ ರೀತಿಯ ವ್ಯವಸಾಯವ್ಯನ್ನು ಕಲಿಸಲಿಕ್ಕಾಗಿ ಒಂದು ಕೃಷಿ ವಿದ್ಯಾನಿಲಯವನ್ನು ಸ್ಥಾಪಿಸಿದ್ದೇವೆ.

ಹಿಂದಿನ ದಿನಗಳಲ್ಲಿ, ಜನರು ಮೂರು ಬೆಳೆಗಳನ್ನು ಬೆಳೆಸುತ್ತಿದ್ದರು.ಹಾಗೆ ಒಂದು ಬೆಳೆ ಸತ್ತರೂ ಇನ್ನೆರಡು ಬೆಳೆಗಳಿವೆ.ಹಾಗೆ ಜನರು ಎಂದೂ ಹಸಿವಿನಿಂದ ಬಳಲುತ್ತಿರಲಿಲ್ಲ. ಅವರು ಎಂದೂ ದಿವಾಳಿಯಾಗಲಿಲ್ಲ ಅಥವಾ ನಷ್ಟದಲ್ಲಿ ಮುಳುಗಲಿಲ್ಲ.

ಉದಾಹರಣೆಗೆ ಅವರು ಯಾವುದಾದರೂ ಧಾನ್ಯಗಳೊಂದಿಗೆ ಕಬ್ಬು ಇತರೆಯನ್ನು ಬೆಳೆಸುತ್ತಿದ್ದರು, ಹಾಗೆ ಒಂದು ಬೆಳೆ ಬರದಿದ್ದರೆ, ಇನ್ನೆರಡು ಇರುತ್ತಿದ್ದವು.ಸಾಮಾನ್ಯವಾಗಿ ಎಲ್ಲಾ ಮೂರು ಬೆಳೆಗಳು ಬರುತ್ತಿದ್ದವು ಮತ್ತು ಅವುಗಳ ವೈವಿಧ್ಯದಿಂದ ತಾನಾಗಿಯೇ ಮಣ್ಣಿನಲ್ಲಿ ಸಾರಜನಕದ ಅಂಶವನ್ನು ಹೊಂದಿಸುತ್ತಿತ್ತು.ಈ ರೀತಿಯ ವ್ಯವಸಾಯಕ್ಕೆ ಪ್ರತಿಯೊಬ್ಬರು ಮರಳಬೇಕಾಗಿರುವುದು.

ನಾವು ಅಗ್ನಿಹೋತ್ರ (ಒಂದು ವಿಧದ ವೈದಿಕ ಯಜ್ಞ)ವನ್ನು ಮಾಡಬೇಕು, ಆಗ ಅದು ಹಾನಿಕಾರಕ ಹುಳಜಂತುಗಳನ್ನು ತಡೆಗಟ್ಟುತ್ತದೆ. ಹಾಗೆ ನೀವು ಕ್ರಿಮಿನಾಶಕಗಳನ್ನು ಹಾಕಬೇಕಾಗಿಲ್ಲ. ಮತ್ತೆ ಪ್ರಾಕೃತಿಕ ಕ್ರಿಮಿನಾಶಕಗಳಿವೆ: ಗೋಮೂತ್ರ, ಕಹಿಬೇವಿನೆಲೆ ಮತ್ತು ಹಲವಾರು ಅಂಥ ಪದಾರ್ಥಗಳು.

ಹಾಗೆ ನಾವು ನೀರನ್ನು, ಈ ಭೂಮಿಯನ್ನು ಮತ್ತು ಜನರ ಆರೋಗ್ಯವನ್ನು ಕೆಡಿಸದಂಥ ಈ ಬಗೆಯ ವ್ಯವಸಾಯಕ್ಕೆ ಮರಳಬೇಕಾಗಿದೆ.

ಪ್ರ: ಗುರೂಜಿ, ನಾವು ಮೂರು ಅಸಮರ್ಥ ವೈದ್ಯರ ಬಳಿಗೆ ಹೋದ್ದರಿಂದ ನಾನು ನನ್ನ ಕುಟುಂಬದ ಮೂರು ಮಂದಿಯನ್ನು ಕಳೆದುಕೊಂಡೆ. ನಾವು ವೈದ್ಯಕೀಯ ಸೇವಾಕ್ಷೇತ್ರದಲ್ಲಿ ಏನು ತಪ್ಪು ಮಾಡುತ್ತಿದ್ದೇವೆ, ಮತ್ತು ನಾವದನ್ನು ಹೇಗೆ ಸುಧಾರಿಸಬಹುದು?

ಶ್ರೀ ಶ್ರೀ: ಇದನ್ನು ವೈದ್ಯರು ಕುಳಿತು ಚರ್ಚಿಸಬೇಕು.

ಮೊತ್ತಮೊದಲನೆಯದಾಯಿ ನಾನು ಹೇಳುವುದು, ವೈದ್ಯರು ಧ್ಯಾನ ಮಾಡಬೇಕು, ಅವರ ಮನಸ್ಸು ತಿಳಿಯಾಗುತ್ತದೆ ಮತ್ತು ಅವರು ತಮ್ಮೊಳಗಿನ ಆಳದಲ್ಲಿರುವ ಅಂತರ್ದೃಷ್ಟಿಯ(ಒಳ ಅರಿವು)  ಸಾಮರ್ಥ್ಯವನ್ನು ಹೊರತೆಗೆಯಬಹುದು.

ಆಯುರ್ವೇದ ವೈದ್ಯರು ಮಾಡುವುದು ಇದನ್ನೇ, ಅವರು ನಿಮ್ಮ ನಾಡಿಯನ್ನು ಹಿಡಿದು ನಿಮ್ಮಲ್ಲಿ ಏನು ತೊಂದರೆ ಇದೆ ಎಂದು ಗುರುತಿಸಿ ನಿರ್ಣಯಿಸುತ್ತಾರೆ.ಇದನ್ನು ಮಾಡುವುದಕ್ಕೂ ಅವರು ಧ್ಯಾನ ಮಾಡಬೇಕು, ಅದು ಬಹಳ ಮುಖ್ಯ. ಮನಸ್ಸಿನ ಒಳಗಿನ ಅಂತರ್ದೃಷ್ಟಿಯ ಮೂಲವನ್ನು ಶೋಧಿಸುವುದಕ್ಕಾಗಿ ಮನಸ್ಸು ಸಪಂದನಶೀಲವಾಗಿ ಮಿಡಿಯುತ್ತಿರಬೇಕು.

ನೋಡಿ ಅವರಿಗೆ ಅಂತರ್ದೃಷ್ಟಿಯಿಲ್ಲದಿದ್ದರೆ, ಅವರು ಕತ್ತಲಿನಲ್ಲಿ ಏನು ಔಷಧ ಕೊಡುವುದು ಎಂದು ತಡಕಾಡುತ್ತಿದ್ದಾರೆ. ಆದ್ದರಿಂದಲೇ , ಬಹಳ ವೈದ್ಯರು ಇದ್ದರೂ, ಕೆಲವು ವೈದ್ಯರಷ್ಟೇ ಜನರನ್ನು ಗುಣಮುಖಗೊಳಿಸುವವರಲ್ಲಿ ಗಣಿಸಲ್ಪಡುತ್ತಾರೆ. ಯಾಕೆ?ಇದು ಸಾಧ್ಯವಾಗುವುದು ಹೇಗೆಂದರೆಅವರಲ್ಲಿ ತಮ್ಮ ಅಂತರ್ದೃಷ್ಟಿಯ ಸಾಮರ್ಥ್ಯವನ್ನು ಉಪಯೋಗಿಸುವ ಮತ್ತು ರೋಗಿಗಳಿಗೆ ಸರಿಯಾದ ಔಷಧಿಯನ್ನು ಕೊಡುವ ವರವಿದೆ.

ವೈದ್ಯರು ಧ್ಯಾನ ಮಾಡಬೇಕು ಮತ್ತು ಪ್ರಶಾಂತ ಮನಸ್ಸಿನಿಂದ ವೈದ್ಯಕೀಯ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.

ಇತ್ತೀಚೆಗೆ ಏ.ಐ.ಎಂ.ಎಸ್.(ಏಮ್ಸ್) ನಡೆಸಿದ ಸಮೀಕ್ಷೆಯನ್ನು ಓದಿ ತಿಳಿದೆ- ಶೇಕಡಾ ೬೦ರಷ್ಟು ವೈದ್ಯರೇ ಅಸ್ವಸ್ಥರು ಎಂದು. ಅವರ ಗಮನ ವ್ಯಾಪ್ತಿ ಬಹಳ ಕಡಿಮೆಯಿರುತ್ತದೆ, ಅದಕ್ಕಾಗಿಯೇ ನರ್ಸ್ ಅವರಿಗೆ ಶಸ್ತ್ರಕ್ರಿಯೆಯ ಮೊದಲು ವೈದ್ಯರಿಗೆ ಕೊಡುವ ಉಪಕರಣಗಳನ್ನು ಎಣಿಸಬೇಕು, ಮತ್ತೆ ಇನ್ನೊಮ್ಮೆ ಮರಳಿ ಪಡೆದ ಉಪಕರಣಗಳನ್ನು ಎಣಿಸಬೇಕು.ಹಲವು ಸಲ ಅವರು ಚಾಕು ಅಥವಾ ಸೂಜಿ ಉದಕರಣಗಳನ್ನು ದೇಹದೊಳಗೆ ಬಿಟ್ಟು ಹೊಲಿಗೆ ಹಾಕುತ್ತಾರೆ.

ಅದಕ್ಕಾಗಿ ಅವರು ಎಷ್ಟು ಉಪಕರಣಗಳು ಹೋದವು ಮತ್ತು ಎಷ್ಟು ಮರಳಿ ಬಂದವು ಎಂದು ಪಟ್ಟಿ ಮಾಡುತ್ತಾರೆ.ಹಾಗಾಗಿ ಪ್ರತಿ ವೈದ್ಯನೂ ಸ್ವಲ್ಪ ಕಾಲ ತೆಗೆದುಕೊಂಡು ವಿಶ್ರಮಿಸಬೇಕು, ಅವರು ಒತ್ತಡಕ್ಕೊಳಗಾಗುವುದು ದುಬಾರಿಯಾಗುತ್ತದೆ.

ಪೈಲಟ್.ಗಳು, ವಾಯು ಸಂಚಾರ ನಿಯಂತ್ರಣ ಗೋಪುರಗಳಲ್ಲಿ ಕೆಲಸ ಮಾಡುವವರು, ವೈದ್ಯರು - ಈ ಉದ್ಯೋಗದಲ್ಲಿರುವವರಿಗೆ ಬಹಳ ಮಾನಸಿಕ ಶಕ್ತಿಯು ಅಗತ್ಯ.ಅವರು ಯಾವಗಲೂ ತುದಿಗಾಲಲ್ಲಿ ನಿಂತಿರಬೇಕಾಗುತ್ತದೆ, ಜಾಗೃತರಾಗಿರಬೇಕಾಗುತ್ತದೆ.ಅವರು ಒಂದು ಸಣ್ಣ ತಪ್ಪನ್ನು ಮಾಡಿದರೂ ನಿರ್ವಹಿಸಲಾಗುವುದಿಲ್ಲ.

ವಾಯು ಸಂಚಾರ ನಿಯಂತ್ರಣ ಗೋಪುರದಲ್ಲಿ ಕೆಲಸ ಮಾಡುವವರು , ಒಂದು ನಿಮಿಷಕ್ಕೂ ಕಿರಿದಾಗಿ ನಿದ್ರಿಸಲಾಗುವುದಿಲ್ಲ, ಅವರು ಬಹಳ ನಿಖರ ಮತ್ತು ಎಚ್ಚರವಾಗಿರಬೇಕು. ಆದರೆ ಮಾನಸಿಕ ಶಕ್ತಿಯಿಲ್ಲದೇ ಅಥವಾ ಧ್ಯಾನಸ್ಥ ಅರಿವಿಲ್ಲದೆ ಅವರು  ಅದನ್ನು ಮಾಡುವುದು ಹೇಗೆ ಸಾಧ್ಯ? ಹಾಗಾಗಿ ಅತಿ ಒತ್ತಡ ಮತ್ತು ಅತಿ ಅಪಾಯ-ಸಂಬಂಧಿಸಿದ ಕೆಲಸದಲ್ಲಿರುವವರು ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು.

ಪ್ರ: ಗುರೂಜಿ, ಪ್ರಯತ್ನವಿಲ್ಲದಿರುವುದು(ನಿರಾಯಾಸವಾಗಿರುವುದು) ನನ್ನನ್ನು ಜೀವನದಲ್ಲಿ ಹೇಗೆ ಯಶಸ್ವಿಯಾಗಿಸಬಹುದು? ದಯವಿಟ್ಟು ಬಿಡಿಸಿ ಹೇಳಿ.

ಶ್ರೀ ಶ್ರೀ: ಒಂದು ಬಾಣವು ಮುಂದೆ ಹೋಗಬೇಕಾದರೆ ಅದನ್ನು ಹಿಂದೆ ಎಳೆಯಬೇಕಗಿರುವಂತೆ, ಅಲ್ಲ?

ಹಾಗೆಯೇ, ನಿರಾಯಾಸವಾಗಿರುವುದು ನಿಮಗೆ ಗಾಢ ವಿಶ್ರಾಂತಿಯನ್ನು ನೀಡುತ್ತದೆ, ಮತ್ತು ಅದು ನಿಮ್ಮ ಅಂತರ್ದೃಷ್ಟಿಯ, ಸೃಜನಾತ್ನಕತೆಯ ಮತ್ತು ಶಕ್ತಿಯ ಮೂಲವನ್ನು ಹೊರತೆಗೆಯಲು ಸಹಾಯವಾಗುತ್ತದೆ.ಆಗ ನೀವು ಹೊರಬಂದು ಅದರ ಅರಿವಿನಿಂದ ಕಾರ್ಯನಿರ್ವಹಿಸುತ್ತೀರಿ.

’ನಾನು ಸಿತಾರ್ ನುಡಿಸುವುದನ್ನು ಕಲಿಯಲು ಯಾವುದೇ ಪರಿಶ್ರಮ ಹಾಕುವುದಿಲ್ಲ ಆದರೆ ನನಗೆ ಮಹಾನ್ ಸಿತಾರ್ ವಾದಕನಾಗಬೇಕು’, ಎಂದು ನಿಮಗೆ ಹೇಲಲಾಗುವುದಿಲ್ಲ. ನೀವು ಪರಿಶ್ರಮ ಹಾಕಬೇಕು.ಅದರೊಂದಿಗೆ ನಿರಾಯಾಸವಾಗಿರುವುದು ನಿಮಗೆ ಪರಿಶ್ರಮ ಹಾಕಲು ಸಹಾಯವಾಗುತ್ತದೆ.

ಪ್ರ: ಪ್ರತಿ ಆತ್ಮವೂ ಒಂದು ದಿನ ಮೋಕ್ಷ ಪಡೆಯುವುದೇ? ಈ ಭೂಮಿ ಇನ್ನೆಷ್ಟು ಕಾಲ ಇರುತ್ತದೆ ಮತ್ತು ನಾವೆಲ್ಲರೂ ಮುಂದಿನ ಜನ್ಮದಲ್ಲೂ ಕೃಪೆಯನ್ನು ಪಡೆಯುತ್ತೇವೋ?

ಶ್ರೀ ಶ್ರೀ: ನೀವು ನಿಮ್ಮ ಬಗ್ಗೆ ಕೇಳಿ. ನೀವು ಜಗತ್ತಿನ ಎಲ್ಲಾ ಆತ್ಮಗಳ ಬಗ್ಗೆ ಕೇಳುತ್ತೀರಿ?ಮೊದಲನೆಯದಾಗಿ ಎಲ್ಲಾ ಆತ್ಮಗಳಿಗೂ ಮೋಕ್ಷ ಬೇಕೆಂದಿದೆಯೇ? ಅವುಗಳಿಗೆ ಬೇಕೆಂದನಿಸದೇ ಇದ್ದಿರಬಹುದು; ಸರಿಯೇ!

ನಿಮಗೆ ಗೊತ್ತೇ.ಕೆಲವೊಮ್ಮೆ ನಾವು ಸಾಮಾನ್ಯೀಕರಿಸಿದ ವಾಕ್ಯಗಳನ್ನು ಹೇಳುತ್ತೇವೆ ಮತ್ತು ಈ ಸಾಮಾನ್ಯೀಕರಿಸಿದ ಪ್ರಶ್ನೆಗಳನ್ನೂ ಕೇಳುತ್ತೇವೆ.ಎಲ್ಲಾ ಆತ್ಮಗಳೂ ಮೋಕ್ಷವನ್ನು ಹೊಂದುತ್ತವೋ ಎಂಬುದು ನನಗೆ ಗೊತ್ತಿಲ್ಲ, ಆದರೆ ನಿಮಗೆ ಅದು ಬೇಕಿದ್ದರೆ, ಹೌದು, ಅದು ಸಾಧ್ಯ. ನಿಮಗೆ ಎಲ್ಲಾ ಅವಕಾಶಗಳಿವೆ.

ನಾವು ಇದೆಲ್ಲವನ್ನೂ ಈ ಜನ್ಮದಲ್ಲೇ ಮುಗಿಸೋಣ, ನೀವು ನನ್ನನ್ನು ಮುಂದಿನ ಜನ್ಮಕ್ಕೂ ಏಕೆ ಎಳೆಯುತ್ತೀರಿ.

ದೇವರು ಎಲ್ಲ ರೂಪಗಳಲ್ಲೂ ಇದ್ದಾನೆ.ಭಗವಂತನಿಲ್ಲದ ಸ್ಥಳವಿಲ್ಲ. ಹಾಗಾಗಿ ಭಗವಂತ ಎಲ್ಲೆಲ್ಲೂ ಇದ್ದಾನೆ.