ಶನಿವಾರ, ಫೆಬ್ರವರಿ 9, 2013

ವಿಶ್ವಾಸವೇ ವ್ಯಾಪಾರದ ಬೆನ್ನೆಲುಬು

೯ನೇ ಫೆಬ್ರವರಿ ೨೦೧೩
ಬೆಂಗಳೂರು, ಭಾರತ

ವೇದಿಕೆಯ ಮೇಲೆ ಹಾಗೂ ಸಭಾಂಗಣದಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯರೇ,

ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿದೆ; ಹಾಗೂ ಪ್ರತಿಯೊಂದು ಅಂತ್ಯಕ್ಕೂ ಒಂದು ಆರಂಭವಿದೆ; ಇದು ಹಳೆಯ ಗಾದೆ ಮಾತು. ಆದ್ದರಿಂದ, ಇದು ಅಂತ್ಯವಲ್ಲ, ನಿಜವಾಗಿಯೂ ಇದೊಂದು ಹೊಸ ಆರಂಭ.

ಈಗ, ಈ ಸಮಾವೇಶದಲ್ಲಿ ಭಾಗವಹಿಸಿರುವ ನಿಮಗೆಲ್ಲರಿಗೂ ಸಂತೋಷವಾಗಿದೆಯೆಂದು, ಹಾಗೂ ಸಮಾಜಕ್ಕೆ ಲಾಭದಾಯಕವಾಗುವ  ಯೋಜನೆಯೊಂದಿಗೆ ಹೊರಬಂದಿರುವಿರೆಂದು ನಮಗೆ ಭರವಸೆಯಿದೆ.

ಮೂರ್ತ ರೂಪದಲ್ಲಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಮುನ್ನಡೆಯಲು ಈ ರೀತಿಯ ಸಮಾಲೋಚನೆಗಳು ಕಾಲಕಾಲಕ್ಕೆ ನಡೆದರೆ ಬಹಳ ಪ್ರಯೋಜನವಾಗುವುದು.

ಈ ಎರಡು ದಿನಗಳಲ್ಲಿ ವ್ಯಾಪಾರ ಸಮುದಾಯವು ಭಾರತದ ಹಾಗೂ ಪ್ರಪಂಚದ ನಾನಾ ಭಾಗಗಳಿಂದ ಒಟ್ಟಾಗಿ ಸೇರಿರುವುದು ನಮಗೆ ತುಂಬಾ ಸಂತೋಷವಾಗಿದೆ.

ಸಮಯವು ಬಹಳ ಕಡಿಮೆಯಿತ್ತು, ಹಲವಾರು ಕೋರಿಕೆಗಳು ಬಂದಿದ್ದವು. ದಕ್ಷಿಣಾ ಅಮೇರಿಕಾ, ದಕ್ಷಿಣ ಆಫ್ರಿಕಾ ಮಾತ್ತು ಆಫ್ರಿಕಾದ ನಾನಾ ಭಾಗಗಳಿಂದ ಬರಲಿಚ್ಛಿಸಿದ್ದರು. ಮುಂಚಿತವಾಗಿಯೇ ಇದನ್ನು ಯೋಜಿಸಲು ಸಾಧ್ಯವಿಲ್ಲವೆಂದು ಅನಿಸುತ್ತದೆ; ಭವಿಷ್ಯತ್ತಿನಲ್ಲಿ ಯೋಜಿಸಬಹುದು.

ಸಾಮಾನ್ಯ ಜನರಿಗೆ ಸಮಾಜದಲ್ಲಿ ನೈತಿಕತೆಯನ್ನು ತರಲು ಈ ನಿಮ್ಮ ಪರಿಶ್ರಮವು ಭರವಸೆಯನ್ನು ನೀಡಿದೆ.
ವಿಶ್ವಾಸವೇ ವ್ಯಾಪಾರದ ಬೆನ್ನೆಲುಬು. ವಿಶ್ವಾಸವಿಲ್ಲದಿದ್ದರೆ, ವ್ಯಾಪಾರವಿರುವುದಿಲ್ಲ. ವಿಶ್ವಾಸವು ನಶಿಸುತ್ತಾ ಹೋದರೆ, ಅದನ್ನು ಪುನರ್‍ಸ್ಥಾಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ನಮ್ಮ ಮನೆಯತ್ತ ಸಾಗುವ ದಾರಿಯು ಒಡೆದಿದ್ದರೆ ಅಥವಾ ಹಿಮದಿಂದ ತುಂಬಿದ್ದರೆ, ಅದನ್ನು ತೆಗೆಯಬೇಕಾಗುತ್ತದೆ; ಆಗಲೇ ನಿಮ್ಮ ಕಾರನ್ನು ಆ ರಸ್ತೆಯಲ್ಲಿ ಓಡಿಸಲು ಸಾಧ್ಯ. ಬಹಳ ಸಮಯದವರೆಗೂ ಕಾರನ್ನು ರಸ್ತೆಯಲ್ಲೇ ಬಿಡಲು ಸಾಧ್ಯವಿಲ್ಲ. ಹಾಗೆಯೇ, ವ್ಯಾಪಾರದಲ್ಲಿ ಸಾಮಾನ್ಯ ಜನರ ವಿಶ್ವಾಸವನ್ನು ಸ್ಥಾಪಿಸುವುದರಿಂದ, ತಮಗಾಗಿ ಸಜ್ಜನರು ಇರುವರೆಂದು ಅವರಿಗೆ ಸ್ಥೈರ್ಯವನ್ನು ನೀಡುತ್ತದೆ.

ನಾವು ಯೂರೋಪಿಗೆ ವ್ಯಾಪಕವಾಗಿ ಪ್ರಯಾಣ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಜನರು ಬ್ಯಾಂಕುಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ.

ಜನರು ಹೇಳುತ್ತಾರೆ, ‘ಬ್ಯಾಂಕಿನಲ್ಲಿ ನಮ್ಮ ಹಣವನ್ನಿಡಲು ಬಯಸುವುದಿಲ್ಲ; ಯಾವ ಬ್ಯಾಂಕ್, ಎಂದು ಪಾಪರ್ ಆಗುವುದೋ ನಮಗೆ ಗೊತ್ತಾಗುವುದಿಲ್ಲ.’

ನಾವು ಹೇಳುತ್ತಿರುವುದು ಬಡ ಜನರ ಬಗ್ಗೆ, ಶ್ರೀಮಂತರಲ್ಲ. ಸಾಮಾನ್ಯ ಜನರು, ಅಥವಾ ಸರಾಸರಿ ಮಧ್ಯಮ ವರ್ಗದವರು ಮತ್ತು ಕೆಳಮಧ್ಯಮ ವರ್ಗದವರು. ಆದ್ದರಿಂದ ಸಮಾಜದಲ್ಲಿ ನೈತಿಕತೆಯಿದೆ, ವ್ಯಾಪರದಲ್ಲಿ ನೈತಿಕತೆಯಿದೆ ಮತ್ತು ಮಾನವೀಯತೆಯಿದೆಯೆಂಬ ಪುನರ್ ವಿಶ್ವಾಸವು ಮುಖ್ಯ.

ನೋಡಿ, ಮಾನವೀಯತೆಯಿಲ್ಲದಿದ್ದರೆ ಬಂಡವಾಳಶಾಹಿತನವಾಗಲಿ, ಕೋಮುವಾದಿತನವಾಗಲಿ ಅಥವಾ ಜಾತ್ಯಾತೀತತೆ ಯಾವುದೂ ಕಾರ್ಯಗತವಾಗುವುದಿಲ್ಲ. ಕೋಮುವಾದಿತನವು ಕುಸಿಯಿತು, ಬಂಡವಾಳಶಾಹಿತನವು ಕುಸಿಯಿತು, ಜಾತ್ಯಾತೀತತೆ ಕುಸಿಯಿತು, ಕಾರಣ ಮಾನವೀಯ ಮೌಲ್ಯಗಳ ಕುರಿತು ಗಮನವನ್ನು ನೀಡಿಲ್ಲ; ಸಮಾಜದಲ್ಲಿನ ಮಾನವೀಯತೆ.

ಇಂತಹ ಸಮಾಲೋಚನೆಗಳಲ್ಲಿ, ಸಾಮಾಜಿಕ ಕಳಕಳಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಬದ್ಧತೆಯೊಂದಿಗೆ ವ್ಯಾಪಾರವನ್ನು ಮುಂದೆ ನಡೆಸಿದರೆ, ವಿಶ್ವವನ್ನು ಭರವಸೆಯ ಮತ್ತು ಆನಂದದ ಹೊಸ ಆಯಾಮಕ್ಕೆ ತೆಗೆದುಕೊಂಡೊಯ್ಯುತ್ತದೆ.

ಹಿಂದೆ ಜಿ.ಡಿ.ಪಿ.ಯ ಬಗ್ಗೆ ಜನರು ಮಾತನಾಡುತ್ತಿದ್ದರು. ಇಂದು ಸಮಗ್ರ ಒಕ್ಕೂಟದ ರಾಷ್ಟ್ರಗಳಲ್ಲೂ ಜಿ.ಡಿ.ಎಚ್.ನ ಬಗ್ಗೆ ಚರ್ಚಿಸುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ಆ ಸಂತೋಷವೇ ನಮ್ಮ ಗುರಿ.

ಆಧ್ಯಾತ್ಮದ ಗುರಿಯು ಯಾರೂ ಕಸಿದುಕೊಳ್ಳಲಾಗದ ಸಂತೋಷವನ್ನು ತರುವುದಾಗಿದೆ. ಮಾಸದ ಆನಂದ, ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಸ್ಥೈರ್ಯ, ಅನುಕಂಪಯುಕ್ತ ಹೃದಯ ಮತ್ತು ವಿನಾಶಕಾರಿ ಧೋರಣೆಗಿಂತ ಹೆಚ್ಚಾಗಿ ಸೃಜನಶೀಲರಾಗುವುದೇ ಆಧ್ಯಾತ್ಮದ ಉದ್ದೇಶ.

ಈ ಸಂದರ್ಭಗಳಲ್ಲಿ, ಇಂದಿನ ಜಗತ್ತಿನಲ್ಲಿ ಆಧ್ಯಾತ್ಮವು ಎಷ್ಟರ ಮಟ್ಟಿಗೆ ಸಮರ್ಪಕವಾಗಿದೆಯೆಂದು ತಿಳಿಯುವೆವು.

ಶ್ರೀಮಂತ ವರ್ಗದವರಲ್ಲಿ, ಮಕ್ಕಳು ಹಿಂಸಾ ಪ್ರವೃತ್ತರಾಗಿರುವುದನ್ನು ಗಮನಿಸಬಹುದು. ಮಗುವೊಂದು ಗನ್ ತೆಗೆದುಕೊಂಡು ಅನೇಕರನ್ನು ಗುಂಡಿಟ್ಟು ಕೊಂದಿತು. ಇದಕ್ಕೆ ಕಾರಣ ಆ ಹುಡುಗನಿಗೆ ವಚ್ರ್ಯುಅಲ್ ಜಗತ್ತು ಮತ್ತು ವಾಸ್ತವ ಜಗತ್ತುಗಳ ನಡುವಿನ ವ್ಯತ್ಯಾಸದ ಅರಿವೇ ಇರಲಿಲ್ಲ.

ಮಕ್ಕಳು ಕಂಪ್ಯೂಟರ್‍ನಲ್ಲಿ ಹಿಂಸಾತ್ಮಕ ಆಟಗಳನ್ನು ಆಡುತ್ತಾರೆ; ಜನರನ್ನು ಕೊಂದರೂ, ಅವರು ಮತ್ತೆ ಬದುಕುತ್ತಾರೆ. ನಿಜ ಜೀವನದಲ್ಲಿ ಯಾರನ್ನಾದರು ಗುಂಡಿಕ್ಕಿದರೆ, ಅವರು ಮತ್ತೆ ಕಾಲ ಮೇಲೆ ನಿಂತು ಓಡಾಡುವುದಿಲ್ಲವೆಂಬುದನ್ನು ಅವರು ಅರಿತಿಲ್ಲ.
ಹೀಗೆ ಬೆಳೆಯುತ್ತಿರುವ ಹಿಂಸೆ, ಅತೃಪ್ತಿ, ಅಪನಂಬಿಕೆ ಮತ್ತು ಖಿನ್ನತೆಯ ಕಡೆ ನಾವು ಗಮನಹರಿಸಬೇಕಾಗಿದೆ. ಇವೆಲ್ಲಕ್ಕೂ ಆಧ್ಯಾತ್ಮದಲ್ಲಿ ಉತ್ತರವಿದೆ. ಹಿಂಸೆಯ ಮೂಲ ಕಾರಣವನ್ನು ಆಧ್ಯಾತ್ಮವು ತೊಡೆದುಹಾಕಬಲ್ಲದು. ಜನರಿಗೆ ಆಂತರಿಕ ಶಾಂತಿಯನ್ನು ತಂದುಕೊಡಬಲ್ಲದು.

ನಾವು ವಿಶ್ವ ಶಾಂತಿಯ ಬಗ್ಗೆ ಮಾತನಾಡುತ್ತೇವೆ; ಆದರೆ ನಿಮ್ಮೊಳಗೇ ಶಾಂತಿಯಿಲ್ಲದಿದ್ದರೆ, ನಿಮ್ಮ ಪರಿವಾರದವರೊಂದಿಗೆ, ಸಮುದಾಯದೊಂದಿಗೆ ಮತ್ತು ನಿಮ್ಮ ಪರಿಸರದಲ್ಲಿ ಶಾಂತಿಯಿರದಿದ್ದರೆ, ವಿಶ್ವ ಶಾಂತಿಯನ್ನು ಹೇಗೆ ಬಯಸುವಿರಿ? ಅದು ಅಸಾಧ್ಯ!

ಆದ್ದರಿಂದ ವ್ಯಕ್ತಿಯು ಶಾಂತಿಯನ್ನು ಕಂಡುಕೊಂಡು, ಸಂಪರ್ಕವು ಸುಧಾರಿಸಿ, ಆತನ ಅನುಕಂಪವು ಅಭಿವ್ಯಕ್ತಿಯನ್ನು ಹೊಂದುವುದಕ್ಕೆ ಅವಕಾಶ ಕಲ್ಪಿಸಬೇಕು. ಎಲ್ಲರಲ್ಲೂ ಅನುಕಂಪದ ತತ್ವವಿದೆ ಆದರೆ ಸಮಾಜದಲ್ಲಿ ಅಭಿವ್ಯಕ್ತವಾಗುವುದಿಲ್ಲ. ಸೇವಾಕಾರ್ಯಗಳ ಮೂಲಕ ಅನುಕಂಪ ಅಭಿವ್ಯಕ್ತವಾಗುವುದು; ಮತ್ತು ಹಿಂಸಾಚಾರವನ್ನು ಅಂತ್ಯಗೊಳಿಸಬಹುದು.

ಸಮಾಜದಲ್ಲಿ ಹಿಂಸಾ ಪ್ರವೃತ್ತಿಯನ್ನು ನಾಶಗೊಳಿಸುವಲ್ಲಿ ಕಾರ್ಪೊರೇಟ್ ಕ್ಷೇತ್ರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಇಂದು ಶ್ರೀ ಆರೋಂಡೇಕರ್ಹಡ್ ಕೇಳಿದರು, ‘ವ್ಯಾಪಾರ ಅಥವಾ ಆಧ್ಯಾತ್ಮದ ಬಗ್ಗೆ ನನ್ನದೇನು ಪಾತ್ರ?’

ನಾವು ಹೇಳಿದೆವು, ‘ನೀವು ಬಹಳ ಕೆಲಸ ಮಾಡಬೇಕಾಗಿದೆ. ಏಕೆಂದರೆ ನೀವೊಬ್ಬ ಪೊಲೀಸ್ ಅಧಿಕಾರಿ. ಶಾಂತಿ ನೆಲೆಸಿದ್ದರೆ, ಆಗಲೇ ಸಮೃದ್ಧಿಯಾಗಲು ಸಾಧ್ಯ. ಸಮಾಜದಲ್ಲಿ ಕಾನೂನು ಮತ್ತು ಶಿಸ್ತಿದ್ದರೆ, ಆಗಲೇ ವ್ಯಾಪಾರವು ಅಭಿವೃದ್ಧಿಯಾಗುವುದು; ಇಲ್ಲದಿದ್ದರೆ ವ್ಯಾಪಾರವನ್ನು ಮುಂದುವರಿಸುವುದು ಅಸಾಧ್ಯ.

ಆದ್ದರಿಂದ, ಕರ್ನಾಟಕ ವಾಣಿಜ್ಯ ಮಂಡಳಿಯು ಈ ಸಮಾವೇಶದಲ್ಲಿ ಪ್ರತಿಷ್ಠಿತ ಪೆÇೀಲೀಸ್ ಅಧಿಕಾರಿಗಳನ್ನು ಆಹ್ವಾನಿಸಿರುವುದು ಸೂಕ್ತವಾಗಿದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರತೆಯ ಅವಶ್ಯಕತೆಯಿದೆ. ರಾಜಕೀಯದಲ್ಲಿ, ಗೌರವಾನ್ವಿತ ರಾಜಕಾರಣಿಗಳ ಅಗತ್ಯತೆಯಿದೆ; ಜನ ಸೇವೆ ಮಾಡಲು ಬಂದಿರುವರೆಂದು, ತಮ್ಮಸ್ವಾರ್ಥ ಸೇವೆ ಮಾಡುವುದಕ್ಕಲ್ಲವೆಂದು ಜನರಿಗೆ ತಿಳಿದಿರುವಂತಹವರು. ಇಂತಹ ಅನೇಕ ರಾಜಕಾರಣಿಗಳಿರುವರು, ಇಲ್ಲಿ ವೇದಿಕೆಯ ಮೇಲೆ ಮತ್ತು ಸಭೆಯಲ್ಲಿ, ಉತ್ತಮ ಜಗತ್ತಿಗಾಗಿ ಬದ್ಧತೆಯುಳ್ಳವರು ಇಲ್ಲಿ ನೆರೆದಿರುವರು. ನಾವು ಹೇಳುವುದು, ಇವೆಲ್ಲವೂ ಆಧ್ಯಾತ್ಮದ ಅಂಶ, ಅಂದರೆ ಸಂತೋಷ. ನಮಗೆಲ್ಲರಿಗೂ ಒಂದೇ ಗುರಿಯಿರುವುದು, ಈ ಭೂಮಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜನರ ಮುಖದಲ್ಲಿ ಮುಗುಳ್ನಗೆಯನ್ನು ನೋಡುವುದು.

ಈ ಕೆಲವು ಮಾತುಗಳೊಂದಿಗೆ, ನಾವು ನಿಮ್ಮೆಲ್ಲರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ.