ಶನಿವಾರ, ಜುಲೈ 27, 2013

ಕ್ಷಮಿಸುವ ಗುಣವಿಲ್ಲದೆ ನೀವು ಹರ್ಷದಿಂದಿರಬಲ್ಲಿರಾ?

ಬೂನ್, ನಾರ್ತ್ ಕೆರೊಲಿನ
೨೭ ಜುಲೈ, ೨೦೧೩

ಪ್ರ: ಗುರುದೇವ್, ನಾನು ತುಂಬಾ ಇಷ್ಟಪಡುವ ವ್ಯಕ್ತಿಯು ನನಗೆ ನೋವುಂಟುಮಾಡಿದ್ದಾರೆ. ಅವರನ್ನು ಕ್ಷಮಿಸುವುದು ಕಷ್ಟವಾಗುತ್ತಿದೆ. ನಾನೇನು ಮಾಡಲಿ?

ಶ್ರೀ ಶ್ರೀ ರವಿಶಂಕರ್: ನಿನ್ನ ಮುಂದಿರುವ ಆಯ್ಕೆಗಳೇನು?
ಒಂದು, ನೀನು  ಅವರನ್ನು ಕ್ಷಮಿಸಲಾರೆ. ಕ್ಷಮಿಸುವುದು ತುಂಬಾ ಕಷ್ಟಕರವಾದುದರಿಂದ, ಕ್ಷಮಿಸದಿರು.
ನನ್ನ ಕಳಕಳಿಯೆಂದರೆ, ನೀವು ಸಂತೋಷದಿಂದ ಹಾಗು ಶಾಂತಿಯಿಂದ ಇರಲು ಸಾಧ್ಯವೇ?
ನೀವು ಸಂತೋಷ, ತೃಪ್ತಿ ಹಾಗು ಶಾಂತಿಯಿಂದ ಇರಲು ಸಾಧ್ಯವೇ? ಇಲ್ಲ!. ಹಾಗಿದ್ದರೆ ಬಿಟ್ಟು ಬಿಡಿ!.
ಅಂತಹ ಕೆಲವು ಜನರಿದ್ದಾರೆ; ಇಲ್ಲಿ ತುಂಬಾ ಮುಳ್ಳುಗಳಿವೆ. ಅದರ ಗುಣವೇ ನಿಮ್ಮ ಕಾಲಿಗೆ ಚುಚ್ಚುವುದು.
ಈಗ ಮುಳ್ಳನ್ನು ತೆಗೆಯಿರಿ, ಎಸೆಯಿರಿ ಹಾಗು ನಿಮ್ಮ ದಾರಿಯಲ್ಲಿ ನಡೆಯಿರಿ. ನೀವು ಮುಳ್ಳನ್ನಿಟ್ಟುಕೊಂಡು, "ನೀನು ಏಕೆ ಚುಚ್ಚಿದೆ? ಇದು ನಿನ್ನ ನೀಚ ಸ್ವಭಾವ. ನೀನು ನನ್ನ ಚುಚ್ಚಿದುದರಿಂದ ನಾನು ನಿನ್ನ ಕ್ಷಮಿಸುವುದಿಲ್ಲ"! 
ಮುಳ್ಳು ಹೇಳುತ್ತದೆ, "ಹೇ ಇದುವೇ ನನ್ನ ಸ್ವಭಾವ. ಇದನ್ನು ಬಿಟ್ಟು ಹಾಗು ಇದೊಂದನ್ನೇ ನಾನು ಮಾಡುವುದು. ನಾನು ನಿನಗೇಕೆ ಚುಚ್ಚಿದೆ? ನಾನು ನಿನಗೇಕೆ ನೋಯಿಸಿದೆ? ಜನರಿಗೆ ನೋಯಿಸುವುದೇ  ನನ್ನ ಗುಣ. ನೀನು ನನ್ನ ದಾರಿಗೆ ಬಂದೆ ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾದೆವು!.
ಈಗ ಇದನ್ನು ಬಿಟ್ಟುಬಿಡಬೇಕಾ? ಅಥವಾ ಅದರ ಹಿಂದೆ ಹೋಗಬೇಕಾ?
ನಿಮ್ಮನ್ನು ನೋಯಿಸಿದವರ ಹಿಂದೆ ನೀವ್ಯಾಕೆ ಹೋಗುತ್ತೀರ? ನಿಮ್ಮನ್ನು ನೋಯಿಸಿದವರ ಬಗ್ಗೆ ಏಕೆ ಚಿಂತಿಸುತ್ತೀರ? ಅವರನ್ನು ದೂರ ತಳ್ಳಿ. ನಿಮ್ಮ ಜೀವನದಿಂದಲೇ ಅವರನ್ನು ಹೊರಗಿಡಿ!. 
ಕ್ಷಮಿಸಲು ಸಾಧ್ಯವಿಲ್ಲದಾಗ, ಅವರನ್ನು ಮುಗಿಸಿ ಬಿಡಿ!. ನೀವು ನಿಜವಾಗಿಯೂ ಬಂದೂಕಿನಿಂದ ಅವರನ್ನು ಮುಗಿಸಿದರೆ, ನೀವೂ ಇಲ್ಲವಾದಂತಯೆ. ನೀವು ಜೈಲಿನಲ್ಲಿರಬೇಕಾಗುತ್ತದೆ. ತುಂಬಾ ಜನರು ಅದನ್ನೇ ಮಾಡುತ್ತಾರೆ.
ಬುದ್ಧಿವಂತರು ಅವರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುತ್ತಾರೆ. ಅಥವಾ ಅವರ ಬಗ್ಗೆ ಅನುಕಂಪದಿಂದ, 'ಎಂಥಾ ಅಜ್ಞಾನಿ ಇವನು, ಜ್ಞಾನದ ಒಂದು ಹನಿಯೂ ಇವನ ಜೀವನದಲ್ಲಿ ಸಿಕ್ಕಿಲ್ಲ. ಒಬ್ಬರನ್ನು ನೋಯಿಸಿದರೆ ಅದು ಹತ್ತು ಪಟ್ಟು ಹಿಂದಿರುಗಿ ಬರುತ್ತದೆ ಎಂಬುದು ಇವರಿಗೆ ತಿಳಿದಿಲ್ಲ. ಇಂಥಹ ಮಂದಿ ತುಂಬಾ ತೊಂದರೆಗೊಳಗಾಗುತ್ತಾರೆ. ಅವರು ಅಜ್ಞಾನಿಗಳು, ಅಜ್ಞಾನದಿಂದಿರುವುದು ಅವರ ಗುಣ'.
ತಿಳಿಯಿರಿ, ಅದು ಅವರ ಗುಣ. ಅವರು ಅವಿವೇಕಿಗಳು. ಅವರಿಗೆ ತಿಳಿದಿಲ್ಲ ಅವರೇನು ಮಾಡುತ್ತಿದ್ದಾರೆಂದು. ಹೇಳಿ 'ನನಗೆ ಇಂಥಹವರಿಂದ ಏನೂ ಆಗಬೇಕಾಗಿಲ್ಲ. ಇವರ ಬಗ್ಗೆ ಚಿಂತಿಸಲು ಸಮಯವೂ ಇಲ್ಲ'. ನಿಮ್ಮನ್ನು ನೀವು ಕಾರ್ಯನಿರತರನ್ನಾಗಿಸಿಕೊಳ್ಳಿ. 
ನೀವು ವಿಶಾಲ ಹೃದಯದವರಾಗಿದ್ದರೆ, ಅವರು ಅಜ್ಞಾನಿಗಳೆಂದು ತಿಳಿದುಕೊಳ್ಳುತ್ತೀರ. ಅವರಿಗೆ ತಿಳಿದಿರಲಿಲ್ಲ ಅವರೇನು ಮಾಡುತ್ತಿದ್ದಾರೆಂದು. ಆಸೆಬುರುಕತನ ಹಾಗು ಹೊಟ್ಟೆಕಿಚ್ಚಿನಿಂದ ಅದನ್ನು ಮಾಡಿದ್ದಾರೆ. ನೀವು ಅವರಿಗಾಗಿ ಸಹಾನುಭೂತಿ ಹೊಂದುತ್ತೀರ.
ಇದು ಸರಿ ಎನಿಸುತ್ತದೆಯೇ?

ಪ್ರ. ಗುರುದೇವ್, ನಾನು ತುಂಬ ದುಃಖದಲ್ಲಿದ್ದೇನೆ. ಮತ್ತೊಮ್ಮೆ ನಿಮ್ಮಿಂದ ಭೌತಿಕವಾಗಿ  ದೂರವಾಗುತ್ತಿದ್ದೇನೆ. ನಾನು ಈ ಅಗಲುವಿಕೆಯಿಂದ ಹೇಗೆ ಹೊರಬರಲಿ?

ಶ್ರೀ.ಶ್ರೀ. ರವಿಶಂಕರ್: ಇಲ್ಲ,ಇಲ್ಲ,ಇಲ್ಲ. ನಾನು ಗಾಳಿ, ಸೂರ್ಯ, ಚಂದ್ರನಿದ್ದ ಹಾಗೆ. ನೀನು ನನ್ನ ಒಂದು ಭಾಗ. ನಾನು ನಿನ್ನ ಒಂದು ಭಾಗವೇ. ಸಂತೋಷದಿಂದಿರು ಹಾಗು ಸಮಾಜಕ್ಕೆ ಒಳ್ಳೆಯದಾಗುವ ಕೆಲಸವನ್ನು ಮಾಡು. ನಿನ್ನಲ್ಲಿ ಏನಿದೆಯೋ ಅದನ್ನು ನಿನ್ನ ಸುತ್ತಲಿರುವವರಿಗೆ ಹಂಚು. ತುಂಬಾ ಜನರ ಕಣ್ಣೀರನ್ನು ಒರೆಸಬೇಕಿದೆ; ಸುಮ್ಮನೆ ಕುಳಿತು ನಿನ್ನ ಬಗ್ಗೆಯೇ ಚಿಂತಿಸಬೇಡ. ಸಮಾಜದಲ್ಲಿ ಹೆಚ್ಚಿನ ದುಃಖಿತರಿದ್ದಾರೆ. ಅವರ ದುಃಖವನ್ನು ಕಡಿಮೆ ಮಾಡುವುದು ನಮ್ಮ ಕೆಲಸ. ಅಲ್ಲವೇ?
ನಾವು ಸಂತೋಷದ ಅಲೆಗಳನ್ನು ಕಲ್ಪಿಸಬೇಕು. ನೀವೆಲ್ಲೇ ಇದ್ದರೂ ನಿಮ್ಮೆಲ್ಲ ಸ್ನೇಹಿತರು, ಬಂಧುಗಳನ್ನು ತಳಮನೆಗೆ ಕರಿಯಿರಿ, ಅಥವಾ ಎಲ್ಲಿ ಜಾಗವಿದೆಯೋ ಅಲ್ಲಿ, ಎಲ್ಲರೂ ಸೇರಿ ಭಾಸ್ತ್ರಿಕ, ಲಘು ವ್ಯಾಯಾಮ, ಹಾಡು, ನೃತ್ಯ, ೧೦-೧೫ ನಿಮಿಷದ ಧ್ಯಾನ ಮಾಡಿ. ಧ್ಯಾನದ ಕ್ಯಾಸೆಟ್ಟು ಅಥವಾ ಸಿಡಿಗಳು ತುಂಬಾ ಇವೆ. ಎಲ್ಲರು ಆ ಸಿಡಿಗಳಿಂದ ತಮ್ಮ ಮನೆಯಲ್ಲಿಯೇ ಧ್ಯಾನವನ್ನು ನಡೆಸಬಹುದು. ಅಥವಾ ಟೀಚರ್ರನ್ನು ಮನೆಗೆ ಕರೆಸಿ ಪ್ರಾಸ್ತಾವಿಕ ತರಗತಿ ತೆಗೆದುಕೊಳ್ಳಬಹುದು. ನೀವು ಸಂಭ್ರಮ ಹಾಗು ಸಂತೋಷದ ಅಲೆಯನ್ನು ಸೃಷ್ಟಿಸಬಹುದು. 

ಪ್ರ. ಗುರುದೇವ್, ಧ್ಯಾನದ ಮೂರು ಮಜಲುಗಳನ್ನು ವಿವರಿಸುತ್ತೀರ?

ಶ್ರೀ.ಶ್ರೀ. ರವಿಶಂಕರ್: ಹೌದು, ಧ್ಯಾನದಲ್ಲಿ ಮೂರು ಮಜಲುಗಳಿವೆ.
ಮೊದಲನೆಯ ಮಜಲು 'ಅನ್ವ ಉಪಾಯ'.ಇದು ಪ್ರಾಣಾಯಾಮ, ಧ್ಯಾನ, ಮಂತ್ರೋಚ್ಚಾರಣೆ, ವ್ಯಾಯಾಮ ಮತ್ತು  ಯೋಗವನ್ನು ಒಳಗೊಂಡಿದೆ.
ಎರಡನೆಯ ಮಜಲು 'ಶಕ್ತ ಉಪಾಯ'. ಇದು ತುಂಬಾ ಸೂಕ್ಷ್ಮವಾದುದು. ಇದೊಂದು ನಿಶ್ಚಲತೆ, ಇದನ್ನು ನೀವು ಮೇಲಿನ ಎಲ್ಲಾ ವ್ಯಾಯಾಮಗಳನ್ನು ಮಾಡಿದ ಮೇಲೆ ದೊರೆಯುವಂತಹುದು. ಇದು ತುಂಬ ಆಂತರಿಕವಾದುದು.
ನೀವು ಸ್ವಲ್ಪವೇ ಮಾಡುತ್ತಿದ್ದರೂ, ವಸ್ತುತಃ ಎಲ್ಲವೂ ಆಗುತ್ತಿರುತ್ತದೆ. ಅಲ್ಲಿ ಮಾಡುತ್ತಿರುವವರು ಯಾರೂ ಇರುವುದಿಲ್ಲ. ಆದರೂ ಎಲ್ಲವು ಆಗುತ್ತಿರುತ್ತದೆ. 'ಶಕ್ತ ಉಪಾಯ' ತುಂಬಾ ಆಂತರಿಕವಾದುದು ಎಂಬುದು ಅರಿವಾಗುತ್ತದೆ.
ಮೂರನೆಯ ಮಜಲು 'ಶಂಭವ ಉಪಾಯ'. ಇದು ಶಕ್ತ ಉಪಾಯಕ್ಕೆ ಅತೀತವಾದುದು. ಇದೊಂದು ಗುರುತಿಸುವಿಕೆ, ತಿಳಿವು. ಆಕಸ್ಮಾತ್ತಾಗಿ ಇದು ಉದಯಿಸುತ್ತದೆ. ಅದರ ಕುರುಹು ನಿಮಗೆ ತಿಳಿಯುವುದಿಲ್ಲ, ಹೇಳಲು ಹಾಗು ಮಾಡಲು ಏನೂ ಇರುವುದಿಲ್ಲ.
ನೀವು ನಡೆಯುತ್ತಿರುತ್ತೀರಿ, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿರುತ್ತೀರಿ, ಅಚಾನಕ್ಕಾಗಿ ಏನೋ ಘಟಿಸುತ್ತದೆ, ಏನೋ ತೆರೆದುಕೊಳ್ಳುತ್ತದೆ. ನೀವು ಯಾರನ್ನೋ ಭೇಟಿ ಮಾಡುತ್ತೀರಿ, ಅಚಾನಕ್ಕಾಗಿ ಒಂದು ತರಹದ ಔನ್ನತ್ಯ, ಸಂತೋಷ ಅನುಭವಿಸುತ್ತೀರಿ.
ನೀವು ಧ್ಯಾನ, ನಿದ್ರೆ ಅಥವಾ ಏನೇ ಮಾಡುತ್ತಿದ್ದರೂ ಆಕಸ್ಮತ್ತಾಗಿ ಒಂದು ತಿಳಿವು, ಎಚ್ಚರಿಕೆ ಉದಯಿಸುತ್ತದೆ.  ಇದೇ 'ಶಂಭವ ಉಪಾಯ'. ಇದು ಅನುಗ್ರಹ, ಆಶೀರ್ವಾದ, ಪ್ರೀತಿ ಅಥವಾ ಯಾವುದರಿಂದಲೋ ಉಂಟಾಗುತ್ತದೆ.
ಮೊದಲ ಮಜಲು 'ಅನ್ವ ಉಪಾಯ' ಅನಿವಾರ್ಯವಾದುದು. ಎರಡನೆಯ ಮಜಲು 'ಶಕ್ತ ಉಪಾಯ' ಸ್ಪಷ್ಟವಾದುದು. 'ಶಂಭವ ಉಪಾಯ'ವು ಉಡುಗೊರೆ.

ಪ್ರ. ಗುರುದೇವ್, ಒಂದು ಮಗುವು ಆರ್ಟ್ ಎಕ್ಸೆಲ್ ಕೋರ್ಸ್ ನಲ್ಲಿ ಕೇಳಿದ ಪ್ರಶ್ನೆ. ಒಬ್ಬರು ಪ್ರಸಿದ್ಧಿ  ಹಾಗು ಮಹತ್ವ ಪಡೆದರೆ ಅದರ ಅನುಭವವು ಹೇಗಿರುತ್ತದೆ?

ಶ್ರೀ.ಶ್ರೀ. ರವಿಶಂಕರ್: ನಾನು ಒಂದು ಮಗುವಾಗಬೇಕು ಹಾಗು ಮಗುವಾಗಿಯೇ ಮುಂದುವರಿಯಬೇಕು. ಮಗುವಾಗಿರುವ ಸಂತೋಷವನ್ನು ಯಾವುದೂ ಕೊಡುವುದಿಲ್ಲ. ಎಲ್ಲರು ತಿಳಿಯಬೇಕು, ನೀವು ಬೆಳೆಯಲು ಸಾಧ್ಯವಿಲ್ಲವೆಂದು. ನನಗನ್ನಿಸುತ್ತದೆ, ನಾನು ಬೆಳೆಯಲು ನಿರಾಕರಿಸುತ್ತಿದ್ದೇನೆಂದು. ನನಗೆ ಮಗುವಾಗಿರಲು ಇಷ್ಟ ಹಾಗು ಹಾಗೆಯೇ ಇರುತ್ತೇನೆ. ನಾವು ಹಾಗೆಯೇ ಇರಬೇಕು. ಬೆಳೆಯುವುದು, ಪ್ರಸಿದ್ಧಿ ಪಡೆಯುವುದು ಇವುಗಳ ಬಗ್ಗೆ ಗಮನ ಹರಿಸಬಾರದು. ಮುಗ್ಧ ಮಕ್ಕಳು. ಇದು ತುಂಬ ಸಣ್ಣ ಸಣ್ಣ ಪ್ರಪಂಚ.

ಪ್ರ. ಗುರುದೇವ್, ದೇಹದ ಬಗೆಗಿನ ಮೋಹವನ್ನು ಹೇಗೆ ತ್ಯಜಿಸಲಿ? ಇದು ನನಗೆ ಅರಿಯಲು ಕಷ್ಟವಾಗುತ್ತಿದೆ, ನಾನೇ ದೇಹವಲ್ಲ ನಾನು ದೇಹದೊಳಗಿದ್ದೇನೆಂದು.

ಶ್ರೀ.ಶ್ರೀ. ರವಿಶಂಕರ್: ನೀವು ಯಾವುದೇ ಕಷ್ಟಪಡಬೇಕಿಲ್ಲ. ಸ್ವಲ್ಪ ತಾಳಿರಿ. ದೇಹವು ನಿಮ್ಮಿಂದ ಅಗಲುತ್ತದೆ, ನೀವು ದೇಹದಿಂದ ಅಗಲಬೇಕಾಗಿಲ್ಲ. ವಿರಮಿಸಿ. ನನಗನ್ನಿಸುತ್ತಿದೆ, ನಿಮಗೆ ನಿಮ್ಮ ಬಗ್ಗೆ ಚಿಂತಿಸಲು ಮುಕ್ತ ಸಮಯ ಸಿಕ್ಕಿದೆ ಎಂದು. ಹೊರಗೆ ಹೋಗಿ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಿರಿ, ಪ್ರಪಂಚಕ್ಕೆ ಮತ್ತು ಜನರಿಗೆ ನೀವು ಬೇಕಾಗಿದ್ದೀರಿ.
ಪ್ರತಿಯೊಬ್ಬರೂ ಒಂದಿಲ್ಲೊಂದು ಪ್ರತಿಭೆಯನ್ನು ವರವಾಗಿ ಪಡೆದಿದ್ದಾರೆ. ಈ ಪ್ರತಿಭೆಯು ನಮಗಾಗಿ ಅಲ್ಲ. ಒಬ್ಬ ಸಂಗೀತಗಾರನಿಗೆ ಒಳ್ಳೆಯ ದನಿಯಿದೆ. ಅದು ಬಚ್ಚಲು ಮನೆಯಲ್ಲಿ ಹಾಡಲು ಅಲ್ಲ, ಅವನ ದನಿಯು ಎಲ್ಲರನ್ನು ರಂಜಿಸಲು ಇದೆ. ಒಬ್ಬ ಬರಹಗಾರನಿಗೆ ಒಳ್ಳೆಯ ಭಾಷಾಪ್ರೌಢಿಮೆ ಇದೆ. ಅದನ್ನು ಅಕ್ಷರಿಸಿ ತಾನೇ  ಓದುವುದಕ್ಕಾಗಿ ಅಲ್ಲ. ಇನ್ನೊಬ್ಬರನ್ನು ಸಂತೋಷಿಸಲು ಹಾಗು ಉತ್ತೇಜಿಸಲು ಇದೆ.
ಅದೇ ರೀತಿ ನಿಮಗೆ ಉಲ್ಲಾಸದ ಅರಿವು ಇದ್ದರೆ, ಅದರಿಂದ ನಿಮಗೆ ನೀವೇ ನಗುವುದಕ್ಕಾಗುವುದಿಲ್ಲ. ಆ ಉಲ್ಲಾಸದ ಅರಿವಿನಿಂದ ನಿಮಗೇನು ಉಪಯೋಗವಾಗುವುದಿಲ್ಲ. ಅದು ಬೇರೆಯವರಿಗಾಗಿಯೇ ಪ್ರಯೋಜನವಾಗುತ್ತದೆ. ನೀವೇನನ್ನು ಕೊಡುಗೆಯಾಗಿ ಪಡೆದಿದ್ದೀರೋ ಅದು ಬೇರೆಯವರಿಗೆ ಹಾಗು ಸಮಾಜಕ್ಕಾಗಿ. ನೀವು ಒಳ್ಳೆಯ ಸರ್ಜನ್ ಆಗಿದ್ದರೆ, ನಿಮಗೆ ನೀವೇ ಆಪರೇಷನ್ ಮಾಡಿಕೊಳ್ಳಲಾಗುವುದಿಲ್ಲ. ಒಳ್ಳೆಯ ಸರ್ಜನ್ ನ ಕುಶಲತೆ ಹಾಗು ಜ್ಞಾನವು ಅವನಿಗೆ ಅಗತ್ಯವಿದ್ದಾಗ ಉಪಯೋಗಕ್ಕೆ ಬರುವುದಿಲ್ಲ. ಅವನು ಬೇರೆಯ ಸರ್ಜನ್ ಬಳಿಗೆ ಹೋಗಬೇಕು.

ಪ್ರ. ಗುರುದೇವ್, ನಾನು ನನ್ನ ಜೀವನದಲ್ಲಿ ಜ್ಞಾನಾರ್ಜನೆ, ಅನ್ವೇಷಣೆ ಹಾಗು ವಿಶ್ಲೇಷಣೆಯಲ್ಲಿ ತೊಡಗುತ್ತಿದ್ದೆ. ನಾನು ಆರ್ಟ್ ಆಫ್ ಲಿವಿಂಗ್ ಗೆ ಬಂದಾಗ ಆಲೋಚನೆ ಹಾಗು ವಿಶ್ಲೇಷಣೆ ಮಾಡುವುದನ್ನು ನಿಲ್ಲಿಸಿ ಧ್ಯಾನ ಮಾತ್ರ ಮಾಡಲು ಹೇಳಿದರು. ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯಮಾಡಿ ನೆರವಾಗಿ.

ಶ್ರೀ.ಶ್ರೀ. ರವಿಶಂಕರ್: ನೋಡಿಲ್ಲಿ ನಾವೀಗ ಚಿಂತನೆ ಹಾಗು ವಿಶ್ಲೇಷಣೆ ಮಾಡುತ್ತಿದ್ದೇವೆ. ನೀವು ವಿಶ್ಲೇಷಿಸಬೇಕು, ಆದರೆ ಯಂತ್ರೋಪಕರಣಗಳನ್ನು ಜಾಸ್ತಿ ಉಪಯೋಗಿಸಬೇಡಿ. ಅವುಗಳನ್ನು ಪೂರ್ಣ ದುರಸ್ತಿಗೊಳಿಸುವಿಕೆಯ ಅಗತ್ಯವಿದೆ. ದೀರ್ಘ ಪ್ರಯಾಣದ ನಂತರ ನೀವು ಕಾರನ್ನು ದುರಸ್ತಿಗೆ ಕೊಡುವುದಿಲ್ಲವೆ? ಧ್ಯಾನವು, ನಿಮ್ಮ ಮನಸ್ಸನ್ನು ರಿಪೇರಿಗೆ ಕರೆದೊಯ್ಯುವಂತೆ. ಈ ಯಂತ್ರವನ್ನು ಬಹುವಾಗಿ ಉಪಯೋಗಿಸಿದರೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಆದುದರಿಂದ ಸಮತೋಲನವನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ಧ್ಯಾನವು ಬೌದ್ದಿಕ ಯಂತ್ರವನ್ನು ನಿರ್ವಹಿಸುವ ಸಾಧನದಂತೆ. ಅದನ್ನು ಅಲಕ್ಷಿಸಬೇಡಿ. ನಿಮ್ಮ ಬೌದ್ದಿಕ ಬುದ್ದಿಯನ್ನು ಉಪಯೋಗಿಸಬೇಡಿ ಎಂದು ಹೇಳುವುದಿಲ್ಲ. ನೀವು ಬೌದ್ದಿಕ ಬುದ್ದಿಯನ್ನು ಎಷ್ಟು ಸಾಧ್ಯವೋ ಅಷ್ಟೂ ಉಪಯೋಗಿಸಿ, ಆದರೆ ಅದರ ನಿರ್ವಹಣೆಯನ್ನು ಮಾಡುತ್ತಿರಿ.
ಕರ್ಮದ ನಿಯಮದಂತೆ, ವಿಷಯಗಳು ನಿಮ್ಮ ಹಿಂದಿನ ಕೆಲಸದ ಮೇಲೆ ನಿರ್ಧಾರವಾಗಿರುತ್ತವೆ. 

ಪ್ರ. ಗುರುದೇವ್, ಆಕರ್ಷಣ ನಿಯಮದಂತೆ ನಿಮ್ಮ ಅನುಭವಗಳನ್ನು ನೀವೇ ನಿರ್ಧಾರ ಮಾಡುತ್ತಿರ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ. ನಾನು ಗಲಿಬಿಲಿಗೊಳಗಾಗಿದ್ದೇನೆ. ದಯವಿಟ್ಟು ವಿವರಿಸಿ.

ಶ್ರೀ.ಶ್ರೀ. ರವಿಶಂಕರ್:  ಕೆಲವು ಕರ್ಮಗಳಿವೆ, ಅವುಗಳನ್ನು ನೀವು ಅಳಿಸಬಹುದು. ಮತ್ತೆ ಕೆಲವು ಕರ್ಮಗಳಿವೆ ಅವುಗಳನ್ನು ನೀವು ಅಳಿಸಲಾಗದು. ಅವುಗಳು ಎಗ್ಸಿಟ್ ಪಾಯಿಂಟ್ ಇದ್ದ ಹಾಗೆ. ನೀವು ಇದರಿಂದ ನಿರ್ಗಮಿಸುವುದು ಮಾತ್ರ ಸಾಧ್ಯ. ಈ ದಾರಿಯಿಂದ ನೀವು ತಪ್ಪಿಸಿಕೊಂಡರೆ  ತಿರುಗಿ ಹೋಗುವ ಅವಕಾಶ ಇಲ್ಲ, ಮುಂದಿನ ಎಗ್ಸಿಟ್ ಪಾಯಿಂಟ್ ಗಾಗಿ ಕಾಯಬೇಕಾಗುತ್ತದೆ. ಜೀವನವು ಹಾಗೆಯೇ. ಮಾಡುವಂತಹ ಆಯ್ಕೆಗಳು ತುಂಬಾ ಇರುತ್ತವೆ.  ತಿರುವುಗಳು ತುಂಬಾ ಇರುತ್ತವೆ. ಅದು ತಪ್ಪಿಹೋದರೆ ಮುಂದಿನದಕ್ಕಾಗಿ ಕಾಯಬೇಕಾಗುತ್ತದೆ. ಚಿಂತಿಸಬೇಡಿ, ದಾರಿಯಲ್ಲಿ ಹಲವಾರು ತಿರುವುಗಳು ಬರುತ್ತವೆ. ಈಗ ನೀವು ಎರಡು ತಿರುವುಗಳ ನಡುವೆ ಇದ್ದರೆ ನೀವು ಕಂಗಾಲಾಗುತ್ತೀರಿ. ಮತ್ತು ಅದೇ ವಿಧಿ.

ಪ್ರ. ಗುರುದೇವ್, ನನಗೆ ಅನ್ನಿಸುತ್ತಿದೆ ಜೀವನವು ಒಂದು ಭ್ರಮೆ ಇದ್ದಂತೆ. ಜೀವನದಲ್ಲಿ ಮೇಲ್ಮೈ  ಸಾಧಿಸಲು ಏನಾದರು ಉಪದೇಶವಿದೆಯೇ? ಹುಟ್ಟು - ಸಾವುಗಳು ನಮ್ಮ ನಿಯಂತ್ರಣಕ್ಕೆ ಬರಬಹುದೇ. ದಯವಿಟ್ಟು ವಿವರಿಸಿ.

ಶ್ರೀ . ಶ್ರೀ  . ರವಿಶಂಕರ್: ಹೌದು. ನಮಗೆ ನಿಯಂತ್ರಣ ಸಾಧ್ಯ.  ನಮಗೆ ಯಾವುದರಲ್ಲೂ ನಿಯಂತ್ರಣ ಇಲ್ಲದಿದ್ದರೆ, ಈ ಪ್ರಶ್ನೆ ಕೇಳಲೂ ಆಗುತ್ತಿರಲಿಲ್ಲ. ಜೀವನಕ್ಕೆ ಒಂದು ಸುಂದರವಾದ ಉದ್ದೇಶ ಹಾಗು ಅಂತ್ಯ ಇದೆ. ತುಂಬಾ ಕೆಲಸಗಳನ್ನು ನೀನು ಮಾಡಬಹುದು ಮತ್ತು ಕೆಲವನ್ನು ಹಾಗೆಯೇ ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ನಿನ್ನ ಅಳತೆಗೆ ಮೀರಿದ್ದು.  ಇವೆಲ್ಲವನ್ನೂ ನಾನು ' ಸೆಲೆಬ್ರೇಟಿಂಗ್ ಸೈಲೆನ್ಸ್' ಹಾಗು ಇತರ ಪುಸ್ತಕದಲ್ಲಿ ಹೇಳಿದ್ದೇನೆ. ಆ ಪುಟಗಳನ್ನು ತಿರುಗಿಸಿ.