ಬುಧವಾರ, ಜುಲೈ 31, 2013

ಗತಿಸಿದ ಶ್ವಾಸ ಹಿಂದಿರುಗಿದಾಗ

ಬ್ಯಾಡ್ ಅಂಟೊಗಸ್ಟ್, ಜರ್ಮನಿ
೩೧ ಜೂಲೈ ೨೦೧೩


ಪ್ರಶ್ನೆ: ಜೀವ ಮತ್ತು ಆತ್ಮ ಜನನದ ಮುನ್ನ ಎಲ್ಲಿರುವುದು? ಜೀವ ಮತ್ತು ಆತ್ಮಗಳ ನಡುವೆ ಏನು ವ್ಯತ್ಯಾಸ? ಜೀವ ಹೇಗೆ ಜನಿಸುವುದು, ಮತ್ತು ಎಲ್ಲಿಂದ ಬರುವುದು?

ಶ್ರೀ ಶ್ರೀ ರವಿಶಂಕರ್: ಎರಡೂ ಒಂದೇ. ಜೀವ ಗರ್ಭಧಾರಣೆಯ ಸಮಯದಲ್ಲಿ ದೇಹದ ಒಳಗೆ ಬರುತ್ತದೆ, ಮತ್ತು ಕೆಲವೊಮ್ಮೆ ಹುಟ್ಟುವ ಸಮಯದಲ್ಲೂ ಸಹ. ಆತ್ಮವು ಗರ್ಭಧಾರಣೆಯ ಅಥವಾ ಹುಟ್ಟುವ ಸಮಯದಲ್ಲಿ ದೇಹವನ್ನು ಪ್ರವೇಶಿಸುತ್ತದೆ. ಕೆಲವೊಮ್ಮೆ ಒಂದು ಆತ್ಮವು ಜನ್ಮದವೆರೆಗೆ ಇದ್ದು ಮತ್ತೊಂದು ಆತ್ಮ ಹುಟ್ಟುವ ಸಮಯದಲ್ಲಿ ಬರುತ್ತದೆ. ಸಾಮಾನ್ಯವಾಗಿ, ಒಂದೇ ಆತ್ಮ ಸಂಪೂರ್ಣ ಕಾಲದವರೆಗೆ ಇರುತ್ತದೆ.

ಇದು ಐದು ರಹಸ್ಯಗಳಲ್ಲಿ ಒಂದು. ಸಾವಿನ ರಹಸ್ಯ, ಜನ್ಮದ ರಹಸ್ಯ, ಮತ್ತು ರಾಜರಹಸ್ಯ. ಇವು ಐದು ರಹಸ್ಯಗಳಲ್ಲಿ ಕೆಲವು. ನಾನು ಜ್ಞಾನದ ಪುಸ್ತಕಗಳಲ್ಲಿ ಇದರ ಬಗ್ಗೆ ಮಾತನಾಡಿದ್ದೇನೆ. ಕೇವಲ ಆ ಪುಸ್ತಕಗಳನ್ನು ಓದಿ.

ನನಗೆ ಗೊತ್ತು ಅನೇಕರು ‘ಆನ್ ಇಂಟಿಮೇಟ್ ನೋಟ್ ಟು ದ ಸಿನ್ಸಿಯರ್ ಸ್ಪೀಕರ್ (ಆತ್ಮೀಯರಿಗೊಂದು ಕಿವಿಮಾತು)' ಸರಣಿಯ ಏಳು ಸಂಪುಟಗಳನ್ನು ಓದಿಲ್ಲವೆಂದು. ಈ ಏಳು ಸಂಪುಟಗಳನ್ನು ಓದಿ. ಏಳು ವರ್ಷಗಳ ಕಾಲ, ಪ್ರತಿವಾರ ನಾನು ಒಂದು ಜ್ಞಾನದ ಪುಟ ನೀಡುತ್ತಿದ್ದೆನು. ಬುಧವಾರದಂದು, ನಾವೆಲ್ಲರು ಕುಳಿತು ಹೊಸದನ್ನು ಬರೆಯುತ್ತಿದ್ದೆವು. ಮತ್ತು ಇದನ್ನು ಎಲ್ಲಾ ಸಂಗ್ರಹಿಸಿ ‘ಆನ್ ಇಂಟಿಮೇಟ್ ನೋಟ್ ಟು ದ ಸಿನ್ಸಿಯರ್ ಸ್ಪೀಕರ್’ ಎಂದು ಸಂಕಲನ ಮಾಡಲಾಯಿತು.

ನೀವೆಲ್ಲರೂ ಓದಲೇಬೇಕಾಗಿರುವ ಇನ್ನೊಂದು ಪುಸ್ತಕವೆಂದರೆ ಯೋಗವಾಸಿಷ್ಠ (ರಾಜಕುಮಾರ ರಾಮನಿಗೆ ಋಷಿ ವಸಿಷ್ಠರ ಪ್ರವಚನ, ಇದು ರಾಮ ನಿರುತ್ಸಾಹದ ಸ್ಥಿತಿಯಲ್ಲಿದ್ದ ಅವಧಿಯಲ್ಲಿ). ನೀವು ಒಮ್ಮೆ ಓದಿದಾಗ ಅರ್ಥವಾಗದೆ ಇರಬಹುದು. ಮತ್ತೆ ಮತ್ತೆ ಮತ್ತೆ ಓದಿ. ಅರ್ಥವಾದಷ್ಟು ತೆಗೆದುಕೊಳ್ಳಿ. ಮತ್ತು ನಿಮಗೆ ಅರ್ಥವಾಗದಿದ್ದನ್ನು ಬಿಡಿ. ಒಂದು ದಿನ ನೀವು 'ಓ, ಇದು ಹೀಗೆ!' ಎಂದು ಹೇಳುವಿರಿ.

ಅಮೇರಿಕಾದಲ್ಲಿ ಒಬ್ಬರು ವೈದ್ಯರಿರುವರು, ಅವರು ಮೆದುಳಿನ ಶಸ್ತ್ರ-ವೈದ್ಯರು. ಅವರು ಏಳು ದಿನಗಳ ಕಾಲ ಅಸಹಜ ಗಾಢ ನಿದ್ರೆಯಲ್ಲಿ ಇದ್ದರು, ಮತ್ತು ಜನರು ಅವರು ಮೃತ ಪಟ್ಟಿರುವರು, ಮತ್ತು ಅವರ ಜೀವ ಮರಳಿಬರುವುದಿಲ್ಲ ಎಂದು ಭಾವಿಸಿದರು. ಆದರೆ ಇದ್ದಕ್ಕಿದ್ದಂತೆ ಏನೋ ಸಂಭವಿಸಿತು ಮತ್ತು ಅವರು ಮರಳಿ ಬಂದರು.

ಅವರು ’ಸ್ವರ್ಗದ ಪುರಾವೆ’ ಎನ್ನುವ ಕೃತಿಯನ್ನು ಬರೆದರು. ಅವರೊಬ್ಬ ಕ್ರಿಶ್ಚಿಯನ್, ಮತ್ತು ಪೂರ್ವ ತತ್ವಶಾಸ್ತ್ರದ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇರಲಿಲ್ಲ. ಅವರು ಅದರ ಬಗ್ಗೆ ಎಂದೂ ಓದಿರಲಿಲ್ಲ. ಆದರೆ ಅವರು ಮತ್ತೆ ಜೀವಿತರಾದಾಗ, ಅವರು ಬರೆದ ವಿಷಯ ಚಕಿತಗೊಳಿಸುತ್ತದೆ. ಅವರು ಬರೆದ ವಿಷಯ ಸಾಮಾನ್ಯವಾಗಿ ಭಗವದ್ಗೀತೆಯಲ್ಲಿ(ಪುರಾತನ ಭಾರತೀಯ ಗ್ರಂಥ) ಕಲಿಸಲಾಗುತ್ತದೆ. ಅವರು ಹೇಳಿದರು, ಅವರು ದೇಹಬಿಟ್ಟು ಹೊರಟ ಮೇಲೆ, ಅವರಿಗೆ ಭಾಸವಾಗಿದ್ದು ದೊಡ್ಡ ಉಪಸ್ಥಿತಿ ಮಾತ್ರ, ಮತ್ತು ಆ ಉಪಸ್ಥಿತಿಯ ಹೆಸರು ಓಂ. ಅವರು ಇದನ್ನು ಓಂ ಎಂದು ಕರೆದರು.

ಅವರು ಚಿನ್ನದ ಮೊಟ್ಟೆಯ ಬಗ್ಗೆ, ಹಾಗೂ ತಿರುಳ ಬಗ್ಗೆ ಕೂಡ ಮಾತನಾಡುತ್ತಾರೆ. ತಿರುಳ ಅರ್ಥ ಸ್ವಯಂ, ಆತ್ಮ.
ಮತ್ತು ಅವರು ಬೇರುಗಳು ಮೇಲೆ ಇದೆ, ಮತ್ತು ಚಿಗುರುಗಳು ಕೆಳಗೆ ಇದೆ ಎಂದಿದ್ದಾರೆ.  ಭಗವದ್ಗೀತೆಯು ಇದನ್ನೇ ಹೇಳಿದೆ. ಒಂದು ಮರವಿದೆ ಅದರ ಬೇರುಗಳು ಮೇಲೆ, ಆಕಾಶದಲ್ಲಿ ಹೊಂದಿದೆ ಎಂದು.

ಅವರು ಹೇಳಿದ್ದಾರೆ, ಅವರು ದೇಹಬಿಟ್ಟು ಹೊರಟಾಗ, ಅವರು ಬೇರುಗಳ ಮೂಲಕ ಅನ್ಯ ಕಡೆಗೆ ತೆರಳಿದರು. ಅವರು ಹೋದ ಹಾದಿ ಮಣ್ಣಿನ, ಅಸ್ಪಷ್ಟ ಬಾಹ್ಯಾಕಾಶವಾಗಿತ್ತು.

ಇದನ್ನು ಪುರಾಣಗಳು (ಕೇವಲ ಪ್ರಾಚೀನ ಪುರಾಣಗಳು ಆಧುನಿಕ ಭಾಷೆಯಲ್ಲಿ; ವಿಜ್ಞಾನದ ಭಾಷೆಯಲ್ಲಿ) ಪರಿಪೂರ್ಣವಾಗಿ ಮಾತನಾಡುತ್ತವೆ.

ಅದು ಇದೇ ವಿಷಯವನ್ನು ಹೇಳುತ್ತದೆ: ಭಾಷೆ ಇಲ್ಲದೆ ಸಂಪರ್ಕ. ಮತ್ತು ಒಬ್ಬರು ದೇವದೂತ ಬರುತ್ತಾರೆ, ಒಬ್ಬರು ಮಾರ್ಗದರ್ಶಿ ನಿಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಇದನ್ನೇ ಹೇಳಿರುವುದು.

ನಿಮಗೇಕೆ ಜೀವನದಲ್ಲಿ ಗುರು ಬೇಕಾಗಿರುವುದು? ಏಕೆಂದರೆ ನೀವು ಮರಣ ಹೊಂದಿದ ನಂತರ, ನೀವು ಭೇಟಿಮಾಡುವ ಮೊದಲ ವ್ಯಕ್ತಿಯೇ ಗುರು ಆಗಿರುವರು. ಗುರು ನಿಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ; ಮಾರ್ಗದರ್ಶಿಯ ಹಾಗೆ. ಇದು ನೀವು ವಿಮಾನ ನಿಲ್ದಾಣ ತಲುಪಿದಾಗ, ನಿಮ್ಮನ್ನು ಸ್ವಾಗತಿಸಲು ಅಲ್ಲಿ ಯಾರಾದರೂ ಇರುವ ಹಾಗೆ. ಆದುದರಿಂದ ಗುರು ಮುಖ್ಯ.

ಇವೆಲ್ಲ ಪ್ರಾಚೀನ ವಿಚಾರಗಳು, ಇವನ್ನೇ ಈ ವೈದ್ಯರು ಅನುಭವಿಸಿದ್ದು. ಇದು ಬಹಳ ಕುತೂಹಲಕಾರಿ ಸಾವಿನ ಸಮೀಪದ ಅನುಭವಗಳು. ಅನೇಕರು ಅದೇ ರೀತಿಯ ಅನುಭವಗಳನ್ನು ಹೊಂದಿರುವರು, ಒಂದು ಸುರಂಗದ ಇತರ ಭಾಗದಲ್ಲಿ ಬಹಳ ಪ್ರೀತಿಯ ಬೆಳಕು ನೋಡಿದ ಹಾಗೆ. ನರಕಕ್ಕೆ ಹೋಗಿದ್ದ ಹಾಗೆ ಅಥವಾ ಆ ರೀತಿಯ ಯಾವುದೂ ಅಲ್ಲ. ಈ ಅನುಭವಗಳ ಓದುವಿಕೆಯಿಂದ ನಿಮಗೆ ಜೀವನವು ಅರ್ಥವಾಗುವುದು. ಆದ್ದರಿಂದ ನರಕದ ಬಗ್ಗೆ ಭಯ ಅಥವಾ ಸ್ವರ್ಗದ ಬಗ್ಗೆ ಪ್ರಲೋಭನೆ ಮರೆತುಬಿಡಿ.

ಭಾರತದಲ್ಲಿ ಕೂಡ​​,  ಒಬ್ಬ ಮಾನ್ಯರು ಆಶ್ರಮಕ್ಕೆ ನಿಯಮಿತವಾಗಿ ಬರುತ್ತಿರುತ್ತಾರೆ, ಅವರಿಗೂ ಅದೇ ರೀತಿಯ ಅನುಭವ ಆಯಿತೆಂದು ಹೇಳಿದರು. ಅವರನ್ನು ಎಚ್ಚೆತ್ತುಗೊಳ್ಳಿಸುವ ಮುನ್ನ ಏಳು ನಿಮಿಷಗಳ ಕಾಲ ನಿಧನರಾಗಿದ್ದರು.

ಅವರನ್ನುಎಚ್ಚೆತ್ತುಗೊಳ್ಳಿಸಿದನಂತರ, ಅವರು ತಮ್ಮ ಪ್ರಯಾಣವನ್ನು ವಿವರಿಸಿದರು. ಹೇಗೆ ಕೆಲವು ಜನರು ಬಂದು ತಮ್ಮನ್ನು ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋದರು ಎಂದು. ಅವರು ಹೇಳಿದರು ಅಲ್ಲಿ ಜನರು ಬಿಳಿ ದಿರಿಸಲ್ಲಿ, ಗಡ್ಡವನ್ನು ಹೊಂದಿದ್ದು, ಋಷಿಗಳ ಹಾಗಿದ್ದರು.

ಅವರು ತಮ್ಮನ್ನು ತಂದ ಜನರಿಗೆ ಹೇಳಿದರು, ‘ಏಕೆ ನೀವು ಇವರನ್ನು ತಂದಿರಿ? ಇವರು ತಪ್ಪು ವ್ಯಕ್ತಿ, ಇವರು ಇನ್ನೂ ಭೂಮಿಯ ಮೇಲಿರಬೇಕು’.

ತಮ್ಮನ್ನು ತಂದ ಜನರು ಹೇಳಿದರು, 'ಇಲ್ಲ, ಇವರು ಸರಿಯಾದ ವ್ಯಕ್ತಿ', ಮತ್ತು ಅದರಿಂದ ಅವರೆಲ್ಲ ವಾದದಲ್ಲಿ ತೊಡಗಿದರು. ಅವರು ತಮ್ಮ ಅನುಭವವನ್ನು ವಿವರಿಸುತ್ತಿದ್ದು, ಮತ್ತು ನಂತರ ಹೇಳಿದರು ತಮ್ಮನ್ನು ಮರಳಿತಂದು, ತಮ್ಮ ಶವದ ಮೂಗಿನ ಹೊಳ್ಳೆಗಳ ಹತ್ತಿರ ಬಿಟ್ಟುಹೋದರು.

ಅವರು ಹೇಳಿದರು, ‘ನನ್ನನ್ನು ಶಸ್ತ್ರಚಿಕಿತ್ಸೆಯ ಮೇಜಿನ ಮೇಲೆ ಕಂಡೆ.  ನಾನು ನನ್ನನ್ನೆ ಕಂಡೆ ಮತ್ತು ಜನರು ಆಳುವುದನ್ನು ಕಂಡೆ. ವೈದ್ಯರು ನನ್ನನ್ನು ಎಚ್ಚೆತ್ತುಗೊಳ್ಳಿಸಲು ಪ್ರಯತ್ನಿಸುತ್ತಿದ್ದರು ಆದರೆ ನಾನು ಹೊರಟು ಹೋಗಿದ್ದೆ. ನನಗೆ ಒಂದು ಸಣ್ಣ ದಾರದ ಸಂಪರ್ಕವಿತ್ತು. ಮತ್ತು ಅವರು ನನ್ನನ್ನು ಆ ಸಣ್ಣ ದಾರಕ್ಕೆ ಸೇರಿಸಿ ಮೂಗಿನ ಹೊಳ್ಳೆಗಳ ಹತ್ತಿರ ಬಿಟ್ಟು ಹೋದರು. ನಾನು ನಿಧಾನವಾಗಿ ಉಸಿರು ತೆಗೆದುಕೊಂಡು ಪುನಃ ಜೀವಿತನಾದೆ.

ಆದ್ದರಿಂದ ಜೀವನವು ನಾವು ಭಾವಿಸುವುದಕ್ಕಿಂತ ತುಂಬಾ ಹೆಚ್ಚು. ನಾನು ೧೭ ವರ್ಷದವನಿದ್ದಾಗ ಕನ್ನಡದಲ್ಲಿ ಒಂದು ಕವಿತೆ ಬರೆದೆನು. ಆ ಕವಿತೆಯಲ್ಲಿ, ನಾನು ಬರೆದದ್ದು ’ನಾನು ಎಲ್ಲೆಡೆ ಇದ್ದೆನು ಮತ್ತು ನಂತರ ಇದ್ದಕ್ಕಿದ್ದಂತೆ ನಾನು ಒಂದು ಮಿಂಚಿನ ಹಾಗೆ ಈ ಭೂಮಿಯ ಮೇಲೆ ಬಂದೆ’. ಮತ್ತು ಈ ವೈದ್ಯರು ಸಹ ಇದನ್ನೇ ನಿಖರವಾಗಿ ಬರೆದಿದ್ದಾರೆ!

ಪ್ರಶ್ನೆ: ನೀವು, ನಮ್ಮ ಸಮಸ್ಯೆಗಳ ಬಹುಪಾಲು ನಮ್ಮ ಪೋಷಕರೊಂದಿಗಿರುವ ಸಂಬಂಧದಿಂದ ಬರುತ್ತದೆ ಎಂದು ಮನೋವಿಜ್ಞಾನಿಗಳು ಯೋಚಿಸಿದ ಹಾಗೆ ಯೋಚಿಸುವಿರ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಪ್ರಮುಖ ಸಮಸ್ಯೆಗಳು ನಿಮ್ಮ ಸ್ವಂತ ಮನಸ್ಸಿನಿಂದಲೇ ಬರುತ್ತವೆ. ಅದನ್ನು ಪೋಷಕರ ಮೇಲೆ ತೂಗುಹಾಕಬೇಡಿ, ಬಡಪಾಯಿ ಜೀವಿಗಳು.

ಕೆಲವು ವರ್ಷಗಳ ಹಿಂದೆ, ಒಂದು ಎಳೆಯ ಹುಡುಗಿ ತನ್ನ ಪೋಷಕರ ಜೊತೆ ನನ್ನ ಬಳಿ ಬಂದಿದ್ದಳು. ಆ ಹುಡುಗಿ, ತನ್ನ ಹದಿಹರೆಯ ಕಳೆದು ೨೧-೨೨ ಸುಮಾರು ವರ್ಷದವಳಾಗಿದ್ದಳು, ಮತ್ತು ಅವಳು ತನ್ನ ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಳು. ನಂತರ ಮನೋವಿಜ್ಞಾನಿಗಳು ಅವಳ ಜೊತೆ ಮಾತನಾಡಿ ಅವಳ ಕೆಲವು ಸಮಸ್ಯೆಗಳು ಅವಳ ಪೋಷಕರ ಕಾರಣದಿಂದಾಗಿ ಎಂದರು, ಮತ್ತು ಇದ್ದಕ್ಕಿದ್ದಂತೆ ಅವರ ಇಡೀ ಸಂಬಂಧವು ಕುಸಿದುಬಿತ್ತು. ಅವರಲ್ಲಿ ಇದರ ಮೊದಲು ಯಾವುದೇ ಸಮಸ್ಯೆ ಇರಲಿಲ್ಲ.

ನಿಮಗೆ ಗೊತ್ತಾ, ನಾನು ನಿಮಗೆ ಹೇಳುತ್ತೇನೆ, ಮಕ್ಕಳು ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅವರು ಬಲಿಯಾದವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಆರಂಭಿಸುತ್ತಾರೆ. ದುರುಪಯೋಗಕ್ಕೆ ಬಲಿಯಾದ ಮಕ್ಕಳಿರುತ್ತಾರೆ, ಮತ್ತು ಮಕ್ಕಳು ದೂರದರ್ಶನವನ್ನು ನೋಡುತ್ತಾ ಇದ್ದಕಿದ್ದಂತೆ ಯೋಚನೆ ಮಾಡಲು ಪ್ರಾರಂಬಿಸುತ್ತಾರೆ ‘ನಿನಗೆ  ಗೊತ್ತೇ ನನಗೆ ೨ ವರ್ಷ ವಯಸ್ಸಾಗಿದಾಗ, ನನ್ನ ತಂದೆ ನನ್ನನ್ನು ದುರುಪಯೋಗಿಸಿದರು’.

ಆಕೆಯ ತಂದೆ ಹೇಳಿದರು. 'ನಾನು ಆಣೆ ಇಡುವೆ ಅಂತಹ ಕೃತ್ಯವನ್ನು ನಾನು ಎಂದಿಗೂ ಮಾಡಲಾರೆ, ಆದರೆ ನನ್ನ ಮಗು ತನ್ನನ್ನು ನಾನು ಹಿಂಸಿಸಿದೆನು ಎಂದು ಆರೋಪಿಸುತ್ತಿದೆ'.

ಅವರು ತುಂಬಾ ಛಿದ್ರಗೊಂಡಿದ್ದರು. ಇಬ್ಬರೂ ಪೋಷಕರು ನರಕಕ್ಕೆ ಹೋದ ಹಾಗಿತ್ತು, ಆದರೂ ಒಂದು ಮಾತನ್ನು ಹೇಳಲಿಲ್ಲ. ಆ ಮಗು ಕಲ್ಪನೆಯನ್ನು ಪ್ರಾರಂಭಿಸಿತ್ತು.

ಎರಡು ವರ್ಷದ ಮಗು ಏನನ್ನಾದರೂ ಹೇಗೆ ನೆನಪು ಇಟ್ಟುಕೊಳ್ಳುವುದು? ನಿಮಗೆ ನೆನೆಪಿದೆಯೇ ನೀವು ಎರಡು ವರುಷ ವಯಸ್ಸಲ್ಲಿದಾಗ ನಿಮ್ಮನ್ನು ಯಾರು ತೊಟ್ಟಿಲಲ್ಲಿ ತೂಗಿದರು, ಯಾವಾಗ ಕೆಳಗೆ ಹಾಕಿದರು ಎಂದು? ಎರಡು ವರುಷದಿಂದ ನಾಲ್ಕು ವರುಷ ಅಥವಾ ಐದು ವರುಷದವರೆಗೂ ಮುಂದುವರಿಸಿದರೆ ಹೌದು, ನಿಮಗೆ ನೆನಪಿರುತ್ತದೆ. ಆದರೆ ಯಾರಾದರೂ ಎರಡು ವರುಷದ ಮಗುವಿಗೆ ಏನಾದರೂ ಮಾಡಿದರೆ, ಅದು ಅವರ ನೆನೆಪಿನಲ್ಲಿರುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ? ಸ್ವತಃ, ನನಗೆ ಹಾಗೆ ಅನ್ನಿಸುವುದಿಲ್ಲ.

ಸರಿ, ಏನೇ ಸಂಭವಿಸಿದ್ದರೂ ಸಹ, ೨೫ ವರ್ಷಗಳ ಅಥವಾ ೩೦ ವರ್ಷಗಳ ನಂತರ ಅದನ್ನು ನೆನಪಿಸಿಕೊಳ್ಳುವುದರಲ್ಲಿ, ಹಾಗೂ ೫೦ ವರ್ಷಗಳ ಮೇಲಿರುವಂತವರನ್ನು ಆರೋಪಿಸಿ ಮತ್ತು ಅವರ ಜೀವನವನ್ನು ಶೋಚನೀಯ ಮಾಡುವದರಲ್ಲಿ ಏನು ಅಂಶವಿದೆ. ಹೌದು, ನೀವು ಬಲಿಯಾಗಿದ್ದ ವೇಳೆ ಖಂಡಿತವಾಗಿ ನೀವು ಮಾತನಾಡಲೇಬೇಕು ಆದರೆ ಕೆಲವೊಮ್ಮೆ ಜನರು ಬಲಿಯಾಗದೆ ಇದ್ದರೂ ಅವರು ಬಲಿಪಶುಗಳ ಸ್ಥಾನವನ್ನು ಹೇರಿಸಿಕೊಳ್ಳುತ್ತಾರೆ. ಬಲಿಪಶುತನವನ್ನು ತಮ್ಮ ಮೇಲೆ ಹೊರಿಸುಕೊಳ್ಳುತ್ತಾರೆ; ಜನರು ಹೀಗೆ ಮಾಡುವರು.

ಇದು ದೊಡ್ಡ ಸಮಸ್ಯೆ. ಆಧುನಿಕ ಮನೋವಿಜ್ಞಾನ ಪ್ರಾಚೀನ ಜ್ಞಾನದಿಂದ ಕಲಿಯಲು ಬಹಳಷ್ಟು ಇರುವುದು. ಅವರು ಜನರಿಗೆ, ಅವರ ಆಳದಲ್ಲಿ ನೋವು ಇರುವುದೆಂದು ಹೇಳಬಾರದು. ನೀವು ಆಳವಾಗಿ ಒಳಗೆ ಹೋದರೆ, ಯಾವುದೇ ನೋವು ಇಲ್ಲ, ಇರುವುದು ಅತ್ಯಾನಂದ ಮಾತ್ರ. ನೀವು ಎಂದೂ ಒಳಗೆ ಆಳವಾಗಿ ಹೋಗಿಲ್ಲ.

ಪ್ರಶ್ನೆ: ನಾನು ಇಲ್ಲಿ ಉತ್ತಮ ತತ್ವಗಳನ್ನು ಬಹಳಷ್ಟು ಕಲಿತೆ. ನನ್ನ ದೈನಂದಿನ ಜೀವನದಲ್ಲಿ ಇದನ್ನು ಕಾರ್ಯಗತಗೊಳಿಸುವುದು ಹೇಗೆ? ನಾನು ವ್ಯವಹಾರದಲ್ಲಿ ಇರುವುದಕ್ಕೆ ಸ್ವಲ್ಪ ಜಗಳಗಂಟನಾಗಿ ಮತ್ತು ಕಾರ್ಯನಿರತನಾಗಿ ಇರುವ ಅಗತ್ಯವಿದೆ. ಕೇವಲ ಧ್ಯಾನ ಸಾಕಾಗುವುದಿಲ್ಲ.

ಶ್ರೀ ಶ್ರೀ ರವಿ ಶಂಕರ್: ಸರಿ! ಮನಃಸ್ಥಿತಿಯನ್ನು ಮಾಡುವ ಅಗತ್ಯವಿಲ್ಲ. ನೀವು ಇಲ್ಲಿ ಕುಳಿತಾಗ, ನೀವು ಹೀಗೆ(ಅಡ್ಡಕಾಲಿನಲ್ಲಿ) ಕುಳಿತಿರುವಿರಿ. ನಿಮ್ಮ ಕಚೇರಿಗೆ ಹೋದಾಗ, ಇದೇ ರೀತಿ ಕುಳಿತುಕೊಳ್ಳುವ ಅಗತ್ಯವಿಲ್ಲ! ನೀವು ವ್ಯವಹಾರದಲ್ಲಿ ಇರುವಾಗ, ನೀವು ವ್ಯವಹಾರ ಮಾಡಿ.

ನೀವು ಚಳಿಗಾಲದ ಉಡುಗೆಯನ್ನು ಎಲ್ಲಾ ಸಮಯ ತೊಡುವುದಿಲ್ಲ. ನೀವು ಚಳಿಗಾಲದ ಉಡುಗೆಯನ್ನು ತೊಟ್ಟುಕೊಂಡು ನಡೆಯುವುದನ್ನು ಕಲ್ಪಿಸಿಕೊಳ್ಳಿ, ಈ ಹವಾಮಾನದಲ್ಲಿ! ನೀವು ಬದುಕಲು ಸಾಧ್ಯವಿಲ್ಲ. ಚಳಿಗಾಲದ ಉಡುಗೆಯನ್ನು ಚಳಿಗಾಲದಲ್ಲಿ ಮಾತ್ರ ತೊಡಿ. ಹಾಗೂ ನೀವು ಬಿಸಿಲುಗಾಲದ ಉಡುಗೆಯನ್ನು ತೊಟ್ಟು ಚಳಿಗಾಲದಲ್ಲಿ ನಡೆದಾಡಲೂ ಆಗುವುದಿಲ್ಲ.

ನೀವು ಉಡುಗೆಯನ್ನು ಬದಲಾಯಿಸುವ ಹಾಗೆ, ನಿಮ್ಮ ಮನಃಸ್ಥಿತಿಗಳನ್ನು, ನಿಮ್ಮ ವರ್ತನೆ ಬದಲಾಯಿಸುವ  ಸಾಮರ್ಥ್ಯ ನಿಮ್ಮಲ್ಲಿರುವುದು. ನೀವು ಸಾರ್ವಕಾಲಿಕವಾಗಿ ಒಳ್ಳೆ-ಒಳ್ಳೆಯಾಗಿ ಇರುವ ಅಗತ್ಯವಿಲ್ಲ. ನೀವು ವ್ಯವಹಾರದಲ್ಲಿ ಇರುವಾಗ ವ್ಯವಹಾರದ ಮನಃಸ್ಥಿತಿಯಲ್ಲಿರಿ. ನೀವು ಕಾರ್ಯನಿರತರಾಗಿರಬೇಕು, ನೀವು ನಿಧಾನವಾದ ಚಲನೆಯಲ್ಲಿ ಹೋಗಬೇಕಿಲ್ಲ.
ನೀವು ನಿಧಾನವಾದ ಚಲನೆಯಲ್ಲಿ ಧ್ಯಾನ (ಆರ್ಟ್ ಆಫ್ ಲಿವಿಂಗ್‌ನಲ್ಲಿ ಕಲಿಸುವ ಒಂದು ಧ್ಯಾನತಂತ್ರ)ವನ್ನು ಇಲ್ಲಿ ಈ ಹಾಲ್‌ನಲ್ಲಿ ಮಾಡಬಹುದು. ನೀವು ಊಟದ ಹಜಾರದಲ್ಲಿ ಕುಳಿತು ಚಲನೆಯಲ್ಲಿ ಧ್ಯಾನ ಮಾಡಿದರೆ, ನಿಮ್ಮ ಮಧ್ಯಾಹ್ನದ ಊಟ ರಾತ್ರಿಯ ಭೋಜನವಾಗಿ ಪರಿಣಮಿಸುತ್ತದೆ.

ಇಲ್ಲಿ ಕಲಿತದ್ದೆಲ್ಲ ನಿಮ್ಮಲ್ಲಿ ಒಳ ಪರಿವರ್ತನೆ ತರುವಂತಹುದು. ಇವು ಮನಸ್ಸಿನ ಒಂದು ಪರಿಕಲ್ಪನೆ ಅಲ್ಲ. ಇದೆಲ್ಲವೂ  ನಿಮ್ಮ ಭಾಗವಾಗಿದೆ. ವಾಸ್ತವವಾಗಿ ನೀವು ದೈನಂದಿನ ಜೀವನದಲ್ಲಿ ಇದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿಬೇಡಿ. ನೀವು ಸಾಮಾನ್ಯ, ಸಹಜ ವ್ಯಕ್ತಿಯಾಗಿ ಇರಿ. ಈ ಜ್ಞಾನ ಸ್ವಯಂಚಾಲಿತವಾಗಿ ನಿಮ್ಮ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ.
ಅದು ಜ್ಞಾನದ ಕರ್ತವ್ಯ. ಇದನ್ನು ಕಾರ್ಯಗತಗೊಳಿಸಲು ಯಾವುದೇ ಪ್ರಯತ್ನ ಇಲ್ಲ. ಇದು ಸಹಜ, ಇದು ಸ್ವಯಂಚಾಲಿತವಾಗಿ ಪ್ರತಿಬಿಂಬಿಸುತ್ತದೆ.

ಪ್ರಶ್ನೆ: ಇಚ್ಛೆಗಳನ್ನು ಹೇಗೆ ಎದುರಿಸುವುದು? ನಾನು ಮಗು ಹೊಂದಲು ಬಯಸುವೆ, ಅದು ಹಲವಾರು ಯತ್ನಗಳ ನಂತರ ಇನ್ನೂ ಪೂರೈಸಿಲ್ಲ.

ಶ್ರೀ ಶ್ರೀ ರವಿ ಶಂಕರ್: ಬಯಕೆ ಈಡೇರಲಿ ಅತವಾ ಬಿಡಲಿ, ಸಂತೋಷವಾಗಿರಿ. ಬಯಕೆಯನ್ನು ಹಿಡಿದುಕೊಳ್ಳಬೇಡಿ.  ಏಕೆಂದರೆ ಒಂದು ಬಯಕೆ ಈಡೇರಿಸಿದರೆ, ಅದು ನಿಮ್ಮನ್ನು ಬಯಕೆ ಹುಟ್ಟುವ ಮುನ್ನ ಇದ್ದ ಸ್ಥಾನದಲ್ಲೇ ಬಿಡುತ್ತದೆ. ಎಲ್ಲ  ಬಯಕೆಗಳನ್ನು ಈಡೇರಿಸಲಾಗುವುದಿಲ್ಲ. ಕೆಲವು ಈಡೇರುತ್ತವೆ, ಕೆಲವು ಈಡೇರುವುದಿಲ್ಲ.

ಆದರೆ ನೀವು ಒಂದು ನಿಲುವನ್ನು ತೆಗೆದುಕೊಳ್ಳಬೇಕು. ನಿಮಗೆ ಆ ನಿಲುವು ಏನು ಗೊತ್ತೇ?  ಏನೇ ಬಂದರೂ ನಾನು ಸಂತೋಷವಾಗಿರವೆನು. ಒಂಟಿಯಾಗಿ ಅಥವಾ ವಿವಾಹಿತನಾಗಿ, ನಾನು ಸಂತೋಷವಾಗಿರವೆನು. ನಿಮಗೆ ಬೇಕಾದರೆ, ನೀವು ಮದುವೆಯಾಗುವದಕ್ಕೆ ಹೆಚ್ಚು ಅವಕಾಶಗಳಿರುತ್ತವೆ. ಮತ್ತು ನೀವು ಆಗಲೇ ಮದುವೆಯಾಗಿದ್ದರೆ, ಆಗ ಅದು ಒಳ್ಳೆಯದು. ಆದರೂ ಸಂತೋಷವಾಗಿರಿ. ಮಗು ಇದ್ದರೂ ಅಥವಾ ಇಲ್ಲದಿದ್ದರೂ ಕೂಡ, ಸಂತೋಷವಾಗಿರಿ.

ನೀವು ಜೀವನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದೆಂದರೆ ‘ನಾನು ಯಾವುದೇ ಪರಿಸ್ಥಿತಿಯು ನನ್ನ ಸಂತೋಷವನ್ನು ತಗ್ಗಿಸುವುದಕ್ಕೆ ಅನುಮತಿಸುವುದಿಲ್ಲ’. ತಿಳಿಯಿತೆ? ಆ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕು, ಬೇರೆ ಯಾರೂ ಅದನ್ನು ನಿಮ್ಮ ಪರ ತೆಗೆದುಕೊಳ್ಳಲಾಗುವುದಿಲ್ಲ.

ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ, ಸಾವಿನ ನಂತರ ಏನಿರುವುದು? ನೀವು ಪುನರ್ಜನ್ಮವನ್ನು ನಂಬುವಿರಾ?

ಶ್ರೀ ಶ್ರೀ ರವಿ ಶಂಕರ್: ನಾನು ಪುನರ್ಜನ್ಮವನ್ನು ನಂಬುವುದಿಲ್ಲ. ನನಗೆ ಅದು ಇರುವುದು ಗೊತ್ತು. ನೀವು ನಂಬಬೇಕಾಗಿರುವುದು  ಗೊತ್ತಿಲ್ಲದಿದ್ದನ್ನು ಮಾತ್ರ. ನನಗೆ ಅದು ಇರುವುದೆಂದು ಗೊತ್ತಿರುವಾಗ ನಾನು ಏಕೆ ನಂಬಬೇಕು?

ನೀವು ‘ನನ್ನ ವಾಹನ ಹೊರಗಿದೆ ಎಂದು ನಂಬುವೆ’ ಎಂದು ಹೇಳುವುದಿಲ್ಲ. ನಿಮ್ಮ ವಾಹನ ಹೊರಗೆ ನಿಲ್ಲಿಸಿದಾಗ, ನೀವು ಹೇಳುವಿರಿ, ‘ನನ್ನ ವಾಹನ ಹೊರಗಿದೆ’ ಎಂದು. ತಿಳಿಯಿತೆ?

ಈ ಜೀವನ ಒಂದು ವಿಶಾಲವಾದ ಜೀವನದ ಕೇವಲ ಒಂದು ಸಣ್ಣ ಭಾಗವಷ್ಟೇ. ಈ ಜೀವನ ಕೇವಲ ಒಂದು ಸಣ್ಣ ಚೂರು.

ಪ್ರಶ್ನೆ: ನಾನು ನಿಮ್ಮ ಟ್ವಿಟ್ಟರ್‌ ಖಾತೆಯ ಹಿಂಬಾಲಕ, ನೀವು ನಿಮ್ಮ ಟ್ವೀಟ್‌ಗಳನ್ನು ಸ್ವಂತ ಬರೆಯುವಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಈ ಬೆಳಿಗ್ಗೆ ನಾನು ಮೂರು ಬಾರಿ ಟ್ವೀಟ್ ಮಾಡಿದೆನು. ನಾನು ನನ್ನ ಟ್ವೀಟ್‌ಗಳನ್ನು ಸ್ವಂತ ಬರೆಯುವೆನು. ಒಮೊಮ್ಮೆ ನನ್ನ ಕಾರ್ಯದರ್ಶಿ ಅಥವಾ ಅದನ್ನು ಬೇರೊಬ್ಬರು ಮಾಡಲು ಕೇಳುವೆನು, ಆದರೆ ೯೫% ದಷ್ಟು ಸಮಯ ನಾನೇ ಟ್ವೀಟ್ ಮಾಡುವೆನು.

ಪ್ರಶ್ನೆ: ನಾನು ಅನೇಕ ವರ್ಷಗಳಿಂದ ಖಿನ್ನತೆಯನ್ನು ಶಮನಗೊಳಿಸುವ ಶಮನಕಾರಿಗಳನ್ನು ಸೇವಿಸುತ್ತಿದ್ದೆನು. ನಾನು ಈ ೨ ವರ್ಷಗಳಿಂದ  ಶಮನಕಾರಿಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದೇನೆ. ನಾನು ಪ್ರತಿ ದಿನ ನನ್ನ ಸುದರ್ಶನಕ್ರಿಯೆ ಮಾಡುವೆನು, ಆದರೆ ನನ್ನ ಏಕಾಗ್ರತೆ ಮತ್ತು ನಿದ್ರೆ ಸಾಧಾರಣವಾಗಿಲ್ಲ, ಮತ್ತು ಇದು ನನ್ನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ನನಗೆ ಅನ್ನಿಸುವುದು, ನಾನು ಶಮನಕಾರಿಗಳನ್ನು ಸೇವಿಸುತ್ತಿದ್ದ ಕಾಲದಲ್ಲಿ ನನ್ನ ಸ್ಥಿತಿ ಸುಧಾರಿಸಿತ್ತು ಎಂದು. ನನ್ನ ಕೆಲಸ ಪೇಚಿನಲ್ಲಿದೆಯಾದರೆ ವೈದ್ಯರ ಸಲಹೆಯ ಮೇರೆಗೆ ಶಮನಕಾರಿಗಳನ್ನು ತೆಗೆದುಕೊಳ್ಳಲೇ, ಅಥವಾ ಏನೇ ಆದರೂ ತಡೆದುಕೊಳ್ಳಲೇ.

ಶ್ರೀ ಶ್ರೀ ರವಿ ಶಂಕರ್: ನಾನು ಏನೇ ಆದರೂ ತಡೆದುಕೊಳ್ಳಿ ಎಂದು ಹೇಳಲಾರೆ, ಆದರೆ ತಡೆದುಕೊಳ್ಳಿ. ಮತ್ತು ಯೋಗ ಮಾಡಿ. ಬೆಳಗ್ಗೆ ಒಂದು ಗಂಟೆಯ ಕಾಲ ನಿಮ್ಮ ದೇಹವನ್ನು ಚಾಚುವುದರಲ್ಲಿ ಮತ್ತು ದೇಹದ ಸಮತೋಲನೆ ಮಾಡುವುದರಲ್ಲಿ ಕಳೆಯಿರಿ.

ಇಂದು ಚೆನ್ನಾಗಿತ್ತು (ಬೆಳಿಗಿನ ಯೋಗ ಅಧಿವೇಶನ), ಅಲ್ಲವೆ? ನಿಮ್ಮಲ್ಲಿ ಎಷ್ಟು ಜನ ಅದನ್ನು ಆನಂದಿಸಿದಿರಿ? ನೀವು ಇದನ್ನು ಮಾಡಿದಾಗ,  ಏಕಾಗ್ರತೆ ಉತ್ತಮಗೊಳ್ಳುತ್ತದೆ. ಅದಕ್ಕಾಗಿಯೇ ನಾನು ನಿಮಗೆ ತೆರೆದ ಕಣ್ಣಿನ ಧ್ಯಾನ ನೀಡಿದೆನು. ನನಗೆ ಗೊತ್ತು ಅನೇಕ ಬಾರಿ ನಿಮ್ಮ ಕಣ್ಣುಗಳು ಮುಚ್ಚಿದ್ದಾಗ ನೀವು ದೂರ ಹೋಗಲು ಪ್ರಾರಂಭಿಸುವಿರಿ, ಮತ್ತು ನೀವು ಗಾಳಿಯಲ್ಲಿ ಕೋಟೆಗಳನ್ನು ನಿರ್ಮಿಸಲು ಆರಂಭಿಸುವಿರಿ. ಮತ್ತು ನಂತರ ನಾನು ನಿಮ್ಮ ಕಣ್ಣುಗಳು ತೆರೆದು ಇರಿಸಿಕೊಳ್ಳಲು ನೆನಪಿಸಬೇಕಾಗುವುದು!

ಆದ್ದರಿಂದ, ಈ ರೀತಿಯ ಕೆಲವು ನಿಮಿಷಗಳ ಧ್ಯಾನ ಮಾಡಿ ಮತ್ತು ನೀವು ನಿಮ್ಮ ಏಕಾಗ್ರತೆಯ ಶಕ್ತಿಗೆ ಮರಳಿರುತ್ತೀರಿ. ನನ್ನನ್ನು ನೋಡಿ, ಜನರು ಪ್ರತಿದಿನ ನನಗೆ ಅನೇಕ ಪ್ರಶ್ನೆಗಳನ್ನು ಕೇಳುವರು, ನಿಮಗೆ ಅದರ ಕಲ್ಪನೆಯೂ ಇಲ್ಲ.

ನಮ್ಮದು ಒಂದು ಸಣ್ಣ ಕೋರ್ಸ್, ಆದರೆ ಕೆನಡಾದಲ್ಲಿ ೩೦೦೦ ಜನರು, ಮತ್ತು ಅಮೇರಿಕದಲ್ಲಿ ೩೦೦೦ ಜನರಿರುತ್ತಾರೆ, ಮತ್ತು ಎಲ್ಲರೂ ಹೋಗುವಾಗ ಮತ್ತು ಬರುವಾಗ ಅದೇ ಪ್ರಶ್ನೆಯನ್ನು ಐದು ಬಾರಿ ನನ್ನನ್ನು ಕೇಳುತ್ತಾ ಇರುತ್ತಾರೆ, ಮತ್ತು ನಾನು ಅದೇ ಉತ್ತರವನ್ನು ಪ್ರತಿಸಲ ಕೊಡುವೆನು. ಮತ್ತು ನನಗೆ ಅವರು ಐದು ಬಾರಿ ಕೇಳುತ್ತಿರುವರು ಎಂದು ತಿಳಿದಿದೆ ಮತ್ತು ನಾನು ತುಂಬಾ ಎಚ್ಚರಿಕೆಯಿಂದ ಇರಬೇಕು!

ನಾನು ಎಲ್ಲರನ್ನು ನೋಡುವೆನೆಂಬುದನ್ನು ಖಚಿತಪಡಿಸಿಕೊಳ್ಳುವೆನು, ನಾನು ಒಂದು ವ್ಯಕ್ತಿಯನ್ನು ಗಮನಿಸದಿದ್ದಲ್ಲಿ ನಂತರ ಆ ವ್ಯಕ್ತಿ ಬರೆಯುತ್ತಾರೆ ‘ನೀವು ನನ್ನನು ಅಲಕ್ಷ್ಯ ಮಾಡಿದಿರಿ, ನೀವು ನನ್ನನ್ನು ಇಷ್ಟಪಡುವುದಿಲ್ಲ. ನೀವು ನನ್ನನ್ನು ಪ್ರೀತಿಸುವುದಿಲ್ಲ’.
ವಾಸ್ತವವಾಗಿ, ನಾನು ಅವರನ್ನು ತಪ್ಪಿಸಿಲ್ಲ. ನಾನು ಅವರನ್ನು ಗಮನಿಸುವಾಗ, ಅವರು ಬೇರೆ ಎಲ್ಲೋ ನೋಡುತ್ತಿರುವರು! ಆದರೆ ಅವರು ಹೇಳುವರು, ‘ನೀವು ನನ್ನನ್ನು ನೋಡಿ ನಗಲಿಲ್ಲ’.

ನೋಡಿ ನಾನು ಎಲ್ಲರನ್ನೂ ನೂರಕ್ಕೆ ನೂರರಷ್ಟು ಗಮನಿಸುವೆನು. ನೀವು ಸಹ ಹಾಗೆ ಮಾಡಬಹುದು.

ಪ್ರಶ್ನೆ: ಆತ್ಮೀಯ ಗುರುದೇವ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ಜನರು ನಾಲ್ಕನೇ ಆಯಾಮದ ಒಳಗೆ ನಮ್ಮ ಗ್ರಹದ ಪ್ರವೇಶದ ಬಗ್ಗೆ ಮಾತನಾಡಿರುವರು. ನೀವು ಇದರ ಬಗ್ಗೆ ಏನು ಹೇಳುವಿರಿ?

ಶ್ರೀ ಶ್ರೀ ರವಿ ಶಂಕರ್: ನೀವು ಯಾವುದೇ ಆಯಾಮವನ್ನು ಇಲ್ಲಿಯೇ ತಿಳಿದುಕೊಳ್ಳುವವರೆಗೂ, ಇಂತಹ ಮಾತುಗಳಿಂದ ಪ್ರಭಾವಿತರಾಗಬೇಡಿ. ಇದು ರೋಚಕತೆ ಸೃಷ್ಟಿಸಲು ಕೇವಲ ಒಂದು ಮಾರ್ಗ.

ಇದು ಜನರು ಡಿಸೆಂಬರ್ ೨೦೧೨ ರಲ್ಲಿ ಭೂಮಿಯು ಕೊನೆಗೊಳ್ಳುವ ಬಗ್ಗೆ, ನನ್ನನ್ನು ಹಲವು ನೂರು ಸಾವಿರ ಬಾರಿ ಕೇಳಿದ ಹಾಗೆ. ಓ ದೇವರೇ! ನಾನು ಹೋದ ಕಡೆಯಲ್ಲ,  ನಾನು ಕೇಳಿದ್ದು ಭೂಮಿಯು ಕೊನೆಗೊಳ್ಳುತ್ತಿದೆ ಎಂದು.

ನಾನು ಹೇಳಿದ್ದು, ‘ನಿಜವಾಗಿಯೂ ಹಾಗೆ ಆಗುವುದಿಲ್ಲ, ಎಲ್ಲವೂ ಎಂದಿನಂತೆ ಇರುತ್ತದೆ'.

ಎಲ್ಲವೂ ಮುಚ್ಚಿ ಹೋಗುತ್ತದೆ ಎಂದು ಯೋಚಿಸಿ, ಜನರು ಆರು ತಿಂಗಳಿಗಾಗುವಷ್ಟು ಹಾಲಿನ ಪುಡಿ ಮತ್ತು ದಿನಸಿ ಸಾಮಾನುಗಳನ್ನು ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಲು ಆರಂಭಿಸಿದರು.

ಇವೆಲ್ಲ ಜನರು ಬಯಸುವ ಚಿಕ್ಕ ರೋಚಕತೆಗಳು, ಮತ್ತು ಆದ್ದರಿಂದ ಅವರು ಇಂತಹ ಕಲ್ಪನೆಗಳನ್ನು ಮತ್ತೆ ಮತ್ತೆ ಆಚೆ ತರುತ್ತಾರೆ. ಎಲ್ಲಾ ಆಯಾಮಗಳು ಇಲ್ಲಿಯೇ ಇವೆ ಎಂದು ತಿಳಿಯಿರಿ, ಚಿಂತೆ ಮಾಡಬೇಡಿ ಮತ್ತು ಸಂತೋಷವಾಗಿರಿ.