ಬೂನ್, ನಾರ್ತ್ ಕೆರೊಲಿನ
ಜೀವನವು ಒಂದು ಉತ್ಸವ. ನೀವು ಎಲ್ಲಾ ಅವಕಾಶಗಳನ್ನು ಸೆಳೆದುಕೊಂಡು ಉಪಯೋಗಿಸಿ, ಪ್ರತಿದಿನ, ಸಂಭ್ರಮಿಸಿ ಹಾಗು ಕೃತಜ್ಞರಾಗಿರಿ.
ಉತ್ಸವ ಹೇಗೆ ಉಂಟಾಗುತ್ತದೆ? ಬರಿ ಬಲೂನು ಹಾಗು ಹೂವುಗಳನ್ನು ಇಡುವುದರಿಂದ ಉತ್ಸವವಾಗುವುದಿಲ್ಲ; ಅದು ನಿಮ್ಮೊಳಗಿಂದ ಉಂಟಾಗಬೇಕು. ಉತ್ಸವ ಉಂಟಾಗಲು ಅರ್ಹತೆ ಹಾಗು ನಿಯಮಗಳೇನು? ನೀವು ಇದರ ಬಗ್ಗೆ ಯೋಚಿಸಿರುವಿರಾ?
(ಸಭಿಕರು: ಕೃತಜ್ಞತೆ ಹಾಗು ಸಂತಸ ತುಂಬಿದೆ)
ಇದೊಂದು ಕೊಂಡಿಯಂತೆ: ನೀವು ಆಚರಿಸಿದರೆ, ಸಂತಸದಿಂದಿರುವಿರಿ; ನೀವು ಸಂತಸದಿಂದಿದ್ದರೆ, ಆಚರಿಸುವಿರಿ.
(ಸಭಿಕರು: ಸಂತುಷ್ಟಿ;ಒಳ್ಳೆಯ ಒಡನಾಟ; ಸಂಭ್ರಮಿಸಲು ಒಬ್ಬರ ಗೆಳೆತನ; ಮನೆಯಂತೆ ಅನುಭವ, ಸುಭಧ್ರತೆ.)
ಹೌದು, ಭಯವಂತರಾದರೆ ಸಂಭ್ರಮಿಸಲು ಸಾಧ್ಯವಿಲ್ಲ. ಪ್ರೀತಿಯಲ್ಲಿರಲು; ಜೊತೆಗಿದ್ದಂತ ಅನುಭವ.
(ಸಭಿಕರು: ಒಳ್ಳೆಯ ಭೋಜನ)
ಖಂಡಿತ, ಭೋಜನವು ಸಂಭ್ರಮದ ಒಂದು ಭಾಗ. ನೀವು ಹಸಿವಿಂದಿದ್ದರೆ, ಸಂಭ್ರಮಿಸಲು ಸಾಧ್ಯವಿಲ್ಲ.
(ಸಭಿಕರು; ಭೋಜನ ಹಾಗು ಪಾನೀಯದ ವಿನಿಮಯ?)
ಆಲಿಸಿ. ಭೋಜನ ಹಾಗು ಪಾನೀಯ ವಿನಿಮಯ ಮಾಡುವವರು ನಿಜವಾಗಿಯೂ ಸಂತಸದಿಂದಿರುವರೆ? ಅಥವಾ ಆಚರಣೆಯಲ್ಲಿ? ಅವರ ಮುಖಗಳನ್ನು ನೋಡಿರಿ!
ನಮಗೆ ಶುದ್ಧತೆಯ ಅರಿವು ಬೇಕು.
ನೀವು ಶುದ್ಧವಾಗಿದ್ದರೆ, ಉತ್ಸವಿಸುವಿರಿ. ನೀವು ಅಶುದ್ಧದಿಂದಿದ್ದರೆ, ಉತ್ಸವಿಸುವಿರ?
ಒಂದು ವೇಳೆ ನೀವು ಒಳಚರಂಡಿಯಲ್ಲಿ ಕೆಲಸ ಮಾಡುತ್ತಿರುವಾಗ ಯಾರಾದರು ನಿಮ್ಮನ್ನು ಉತ್ಸವಕ್ಕೆ ಕರೆದರೆ, ನೀವು ಹೇಳುವಿರಿ "ಇಲ್ಲ. ನಾನು ಕೊಳೆಯಾಗಿದ್ದೇನೆ. ಸ್ನಾನ ಮಾಡಿ ಬರುತ್ತೇನೆ" ಎಂದು. ಹೌದಲ್ಲವೇ?
ಹಾಗಾದರೆ ನಿಮಗೆ ಸಂಭ್ರಮಿಸಲು ಏನು ಬೇಕು? ಶುದ್ಧತೆಯ ಅರಿವು; ಶುದ್ಧತೆ. ಸಂಭ್ರಮವು ನೀವು ಒಳಗಿಂದ ಹಾಗು ಹೊರಗಿಂದ ಶುದ್ದರು ಎಂದು ಅರಿವಾದಾಗ ಉಂಟಾಗುತ್ತದೆ. ಜನರು ತಮ್ಮನು ತಾವು ನಾಸ್ತಿಕರು ಎಂದುಕೊಳ್ಳುತ್ತಾರೋ ಅವರು ಸಂಭ್ರಮಿಸಲು ಸಾಧ್ಯವಿಲ್ಲ, ಅವರ ನಾಸ್ತಿಕತೆ ಹಾಗು ಅಪನಂಬಿಕೆ ಅವರನ್ನೇ ತಿನ್ನುತ್ತದೆ. ಆದ್ದರಿಂದ ಶುದ್ದತೆ ಒಳಗೆ ಹಾಗು ಹೊರಗೆ.
ಈ ಗುರುಪೂರ್ಣಿಮದಂದು ನಿಮಗೆ ಒಂದನ್ನು ನೆನಪಿಸಲು ಇಷ್ಟಪಡುತ್ತೇನೆ. ನೀವು ಒಂದು ವಜ್ರ; ಬಹುಶ: ಕಸದ ಬುಟ್ಟಿಯಲ್ಲಿ!.
ಆದ್ದರಿಂದ ನಿಮಗೆ ಯಾವಾಗ ನೀವು ಅಶುದ್ದರು ಎನಿಸುತ್ತದೋ, ತಿಳಿಯಿರಿ ನೀವು ಒಂದು ವಜ್ರ. ವಜ್ರವು ಎಂದಿಗೂ ಅಶುದ್ದವಾಗಲು ಸಾಧ್ಯವಿಲ್ಲ, ಆದರೆ ಕಸದ ಬುಟ್ಟಿಯಲ್ಲಿರಲು ಸಾಧ್ಯ.
ವಜ್ರವು ಕಸದ ಬುಟ್ಟಿಯಲ್ಲಿದ್ದರೆ ನೀವದನ್ನು ಎಸೆಯುವಿರ? ಇಲ್ಲ. ಅದನ್ನು ಹೊರತೆಗೆದು ತೊಳೆಯುವಿರಿ. ಈ ನಿಮ್ಮ ಎಲ್ಲಾ ಅನುಸರಣೆ, ವಜ್ರವನ್ನು ತೊಳೆಯುವುದು ಮಾತ್ರ. ಅಷ್ಟೇ.
ವಜ್ರವನ್ನು ತೊಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ನೀವು ಅದನ್ನು ಜೋರಾಗಿ ಉಜ್ಜಬೇಕೆ? ಇಲ್ಲ. ಸ್ವಲ್ಪವೇ ನೀರು; ಸ್ವಲ್ಪ ಸೋಪು.ಇದೇ ರೀತಿ 'ಸೋ ಹಮ್ ಸೋ ಹಮ್' ಅಷ್ಟೆ. ವಜ್ರವು ಶುದ್ದವಾಗಿಬಿಡುತ್ತದೆ.
ನಿಮಗೆ ಗೊತ್ತಾದಾಗ ನಿತ್ಯ ಶುದ್ದೋಹಮ್; ನಾನು ಎಂದಿಗೂ ಶುದ್ದ, ಸಂಭ್ರಮವು ಎಂದಿಗೂ ನಿಮ್ಮ ಜೀವನದಿಂದ ಹೋಗುವುದಿಲ್ಲ.
ಸಹಜವಾಗಿ ನಾವು ಶುದ್ದರು. ಇದನ್ನು ನೀವು ಯಾವಾಗ ಅನುಭವಿಸುತ್ತೀರೋ ನೀವು ಶುದ್ಧರು, ನಿಮ್ಮ ಹೃದಯ ಶುದ್ಧತೆಯಿಂದ ಕೂಡಿದೆ. ಆಗ ನೀವು ಯಾರಿಗೂ, ಈ ಗ್ರಹದ ಅಥವಾ ಯಾವುದೇ ಗ್ರಹದವರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನಂತರ ನೀವೇ ಪ್ರೀತಿಯಾಗುತ್ತೀರ.
ಯಾವಾಗ ನಿಮಗೆ ನೀವು ಶುದ್ಧರು, ನೀವೇ ಪ್ರೀತಿ ಅನ್ನಿಸುತ್ತದೋ ಆಗ ನೀವು ಅರಳುತ್ತೀರ. ನಿಮ್ಮಲ್ಲಿ ಒಂದು ಎಚ್ಚರಿಕೆ, ಜಾಗರೂಕತೆ ಉಂಟಾಗುತ್ತದೆ.
ನೀವು ಸಹಜ ಶುದ್ಧರು, ಮೌನವು ಶುದ್ಧತೆಯ ಪರಿಮಳವಿದ್ದಂತೆ. ಮೌನ, ನಾನು ಎಂದಿಗೂ ಶುದ್ಧ ಎಂಬ ಅರಿವು ಸಂಭ್ರಮಿಸಲು ಕಾರಣವಾಗುತ್ತದೆ. ಮೌನದಿಂದ ಉಂಟಾಗುವ ಸಂಭ್ರಮವು ನಿಜವಾದುದು ಏಕೆಂದರೆ ಅದು ಆಳದಿಂದ ಬಂದುದಾಗಿದೆ.
ಸೋಪು ನೀರು ಮತ್ತೆಲ್ಲವನ್ನು ಉಪಯೋಗಿಸಿ ವಜ್ರವನ್ನು ತೊಳೆಯಲು ಆರಂಭಿಸಿದಂದಿನಿಂದ (ಆರ್ಟ್ ಆಫ್ ಸೈಲೆನ್ಸ್ ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ ) ಈಗ ವಜ್ರವು ಹೊಳೆಯುತ್ತಿದೆ, ಇದೇ ಸಂಭ್ರಮ. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ನಿಮ್ಮ ಪ್ರಾಮಾಣಿಕತೆಯು ನಗುವಿನಿಂದ ಹೊರಹೊಮ್ಮುತ್ತದೆ. ಕೆಲವರ ನಗುವನ್ನು ನೋಡಿದ್ದೀರ? ಅದು ಒಳಗಿನಿಂದ ಬರುವುದಿಲ್ಲ; ಅದು ಕೃತಕ ನಗು. ಜನರು ಹೇಳುತ್ತಾರೆ 'ಸುಸ್ವಾಗತ' ಆದರೆ ಅದು ಕೃತಕ ಸ್ವಾಗತ.
ಜನರು ಹೇಳುತ್ತಾರೆ 'ವಂದನೆಗಳು' ಆದರೆ ಅದು ಕೃತಕ ವಂದನೆ. ಅದು ಹೊರಗಿನಿಂದ ಬಂದುದು. ಏಕೆಂದರೆ ಒಳಗೆ ಮೌನವಿಲ್ಲ. ಒಳಗೆ ಬಂಡಾಯ, ಪಾಪ, ಅಶುದ್ಧತೆ ಕುದಿಯುತ್ತಿದೆ.
ಮನುಷ್ಯ ಜನ್ಮವು ಸಂಭ್ರಮಾಚರಣೆಗೆ ತಕ್ಕುದಾಗಿದೆ. ನಮ್ಮ ಈ ಎಲ್ಲಾ ರಗಳೆಗಳಿಂದ ಹೊರಬರುವುದು ಮುಖ್ಯವಾಗಿದೆ.
ನಾವೇನು ಮಾಡುತ್ತೇವೆ ಅಂದರೆ ಕಸವನ್ನು ಆಭರಣ ಪೆಟ್ಟಿಗೆಯಲ್ಲಿಡುತ್ತೇವೆ. ಕಸದ ಬುಟ್ಟಿಯಲ್ಲಿರುವುದು ಆಭರಣ ಪೆಟ್ಟಿಗೆಯಲ್ಲ. ಆದರೆ ನಾವೇ ಕಸವನ್ನು ಆಭರಣ ಪೆಟ್ಟಿಗೆಯಲ್ಲಿ ಹಾಕುತ್ತಿದ್ದೇವೆ. ಅದನ್ನು ಸುಮ್ಮನೆ ತೆಗೆದು ಹಾಕಬೇಕು.
ನೀವು ಶುದ್ಧ ಪ್ರೀತಿ ಎಂದು ಅರಿತುಕೊಳ್ಳಿ. ನಮ್ಮನ್ನು ನಾವು ಕೆಟ್ಟವರು, ಪಾಪಿಗಳು ಎಂದು ತಿಳಿದುಕೊಂಡಿದ್ದೇವೆ. ಈ ಕಟ್ಟಳೆಗಳನ್ನೆಲ್ಲ ನಮಗೇ ಹೇರಿಕೊಂಡಿದ್ದೇವೆ. ನಮಗೆ ನಾವೇ ಕಟುವಾಗಿರುವುದರಿಂದ, ನಮ್ಮ ಒಳ್ಳೆಯ ಗುಣಗಳು, ವರಗಳು ಅನುಭವಿಸಲು ಆಗುತ್ತಿಲ್ಲ.
ಪ್ರಪಂಚದಲ್ಲಿರುವ ಪ್ರತಿಯೊಬ್ಬನು ಈ ಎಲ್ಲ ಒಳ್ಳೆಯ ಗುಣಗಳೊಂದಿಗೆ ಬಂದಿದ್ದಾನೆ. ಆದರೆ ಅದನ್ನು ನಾವು ಗುರುತಿಸಲು ಆಗುತ್ತಿಲ್ಲ.
ಗುರುಪೂರ್ಣಿಮವು ನಿಮ್ಮ ಒಳ್ಳೆಯ ಗುಣಗಳನ್ನು ಗುರುತಿಸಿ ಆಚರಿಸುವ ಒಂದು ಸಂಭ್ರಮಾಚರಣೆ. ನೀವು ಯಾವಾಗ ಈ ಸುಂದರತೆಯನ್ನು ಗುರುತಿಸುತ್ತೀರೊ, ಮತ್ತು ನೀವು ಪಡೆದುಕೊಂಡ ವರಗಳು, ನಿಮ್ಮ ಕೃತಜ್ಞತೆಯನ್ನು ಸೂಚಿಸುತ್ತವೆ.
ನಿಮ್ಮ ಕೃತಜ್ಞತೆಯನ್ನು ಗುರುಗಳಿಗೆ ಅರ್ಪಿಸುವುದೇ ಗುರುಪೂರ್ಣಿಮ.
ಅದೇ ನಿಜವಾದ ಸಂಭ್ರಮಾಚರಣೆ.
ನಾವು ಮೌನದಿಂದ ಹೊರಬಂದರೂ (ಆರ್ಟ್ ಆಫ್ ಸೈಲೆನ್ಸ್ ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ) ಮತ್ತೊಂದು ಮೌನವನ್ನು ನಮ್ಮೊಂದಿಗೆ ಹೊತ್ತೊಯ್ಯುತ್ತೇವೆ. ಈಗ ಗುರುತಿಸಿ, ನೀವು ಒಂದು ಕಸದ ಬುಟ್ಟಿಯಲ್ಲಿರುವ ವಜ್ರ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ.
ಇದರ ಅರ್ಥ ನೀವು ಬೇಜಾರು ಮಾಡಿಕೊಳ್ಳಬಾರದು. ಕೋಪ ಮಾಡಿಕೊಳ್ಳಬಾರದು, ಈ ಹಿಂದೆ ಮಾಡುತ್ತಿದ್ದ ಯಾವುದನ್ನು ಮಾಡಬಾರದು ಎಂದಲ್ಲ. ಅಥವಾ ಮುಸಿ-ಮುಸಿ, ಅವಿಧೇಯತೆಯಿಂದಿರಬೇಕೆಂದಲ್ಲ. ಇಲ್ಲ. ಇದನ್ನೆಲ್ಲಾ ನೀವು ಮಾಡಬಹುದು!!. ದಿನ ನಿತ್ಯದಲ್ಲಿ ಮಾಡಬೇಕಾದೆಲ್ಲವನ್ನು ಮಾಡಬಹುದು.
ಆದಾಗ್ಯೂ, ತಿಳಿಯಿರಿ ನೀವು, ನೀವು ಮಾಡುವ ಕೆಲಸಕ್ಕಿಂತ ಎತ್ತರದಲ್ಲಿದ್ದೀರಿ. ನೀವು ನಿಮ್ಮ ಪರಿಸ್ಥಿತಿ, ಸುತ್ತ-ಮುತ್ತ, ಆಲೋಚನೆ, ಭಾವನಾತ್ಮಕತೆ ಎಲ್ಲಕ್ಕಿಂತ ಎತ್ತರದಲ್ಲಿದ್ದೀರಿ. ನೀವು, ನೀವು ತಿಳಿದಿರುವುದಕ್ಕಿಂತ ಉತ್ತಮರು. ಮತ್ತೆ ಮತ್ತೆ ತಿಳಿಯಿರಿ 'ನಾನು ಒಂದು ವಜ್ರ, ದುರಾದೃಷ್ಟವಷಾತ್ ಕಸದ ಬುಟ್ಟಿಯಲ್ಲಿ ಬಿದ್ದಿದ್ದೆ, ಈಗ ಅದರಿಂದ ಹೊರಬಂದು ನನ್ನನ್ನು ನಾನು ಶುಚಿ ಮಾಡುತ್ತಿದ್ದೇನೆ!'
ಅದು ವಾರ್ಷಿಕ ಶುಚಿತ್ವವಿರಬಹುದು, ವರ್ಷದಲ್ಲಿ ಎರಡು ಬಾರಿ ಶುಚಿತ್ವವಿರಬಹುದು, ನಂತರ ನಿಮಗೆ ತಿಳಿಯುತ್ತದೆ ನೀವು ಹೊತ್ತಿರುವ ಹೊರೆ ನೀವಲ್ಲ ಎಂದು. ನೀವು ಎಂದಿಗೂ ಶುದ್ಧರು.
ಇದನ್ನು ಗುರುತಿಸಲು ಅಥವಾ ನಂಬಲು ಕಷ್ಟವಾಗುತ್ತಿದೆಯೇ? ಇದಕ್ಕಾಗಿಯೇ ನಾವು ಸುದರ್ಶನ ಕ್ರಿಯಾ ಹಾಗು ಮತ್ತಿತರೆ ಪ್ರಕ್ರಿಯೆ ಮಾಡುವುದು, ನೀವು ಶುದ್ದರು ಹಾಗು ಅದ್ಬುತವಾದಂತವರು ಎಂದು ತಿಳಿಯಲು. ನಿಮ್ಮಲ್ಲಿ ಎಷ್ಟು ಮಂದಿ ನೀವೊಂದು ವಜ್ರ, ಶುದ್ಧರು ಎಂದು ತಿಳಿಯಲು ಕಷ್ಟಪಟ್ಟಿರಿ?
(ಸಭಿಕರಲ್ಲಿ ಕೆಲವರು ಕೈ ಎತ್ತುತ್ತಾರೆ)
ಓಹ್ ಹೌದಾ? ಹಾಗಾದರೆ ನಿಮಗೆ ಎರಡು ಅಡ್ವಾನ್ಸ್ ಕೋರ್ಸ್ ಬೇಕಾಗಬಹುದು; ಬಹುಶ: ಮತ್ತೊಂದು ಬಾರಿಯೂ ಬೇಕಾಗಬಹುದು. ನಿಮ್ಮಲ್ಲಿ ಯಾರಿಗಾದರು ನಾನು ಮೇಲೆ ಹೇಳಿದ ವಿಷಯ ಸಂಬಂಧಪಟ್ಟಿದೆಯೆ?
(ಕೆಲವು ಸಭಿಕರು ಕೈ ಎತ್ತುತ್ತಾರೆ)
ಸಧ್ಯ ಕೆಲವರಿಗಾದರೂ ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯಲ್ಲ! ಒಳ್ಳೆಯದು.
ಗುರುಪೂಜೆಯ ಮೊದಲಲ್ಲಿ ನಾವೊಂದು ಮಂತ್ರ ಪಠಣ ಮಾಡಿದೆವು
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋ ಪಿವ
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯ ಅಭ್ಯಂತರ ಶುಚಿಃ
ಶುದ್ದವೋ ಅಶುದ್ದವೋ, ಹೇಗೇ ಇರು (ನೀನು ಕೆಳಗಡೆ ಬಿದ್ದಿರಬಹುದು, ಬಹುಶ: ತುಂಬಾ ತಳಮುಟ್ಟಿರಬಹುದು) ಆದರು, ಕಮಲದ ನೆನಪನ್ನು ತಂದುಕೋ (ಕಮಲದ ಪುಷ್ಪವು ಮಣ್ಣಿನಲ್ಲಿ ಬೆಳೆದರೂ, ಅದು ಮಣ್ಣಿಗೆ ಅಂಟಿಕೊಂಡಿರುವುದಿಲ್ಲ.) ಇರುವಿಕೆ ಕಮಲದಂತೆ ಇರಬೇಕು.
(ಪುಂಡರೀಕ ಅಂದರೆ ಕಮಲದಂತೆ ಅರಳುವುದು)
ಇರುವಿಕೆಯು ಸಾಕ್ಷಿ ಇದ್ದಂತೆ. ನಿಮಗೆ ಯಾವಾಗ ಅರಿವಾಗುತ್ತದೋ ನೀವೇ ಸಾಕ್ಷಿ ಎಂದು, ಆಗ ಹೊರಗೆ ಹಾಗು ಒಳಗೆ ಶುದ್ಧತೆಯನ್ನು ತರುತ್ತದೆ. (ಸ ಬಾಹ್ಯ ಅಭ್ಯಂತರ)
ಯಃ ಸ್ಮರೇತ್ ಪುಂಡರೀಕಾಕ್ಷಂ: ಇದು ಒಬ್ಬರನ್ನು ಕಮಲದ ಕಣ್ಣಿನಿಂದ ನೆನಪಿಟ್ಟುಕೊಳ್ಳುವುದಲ್ಲ.
ಇಲ್ಲಿ ಎರಡು ವಿಷಯವಿದೆ. ಅಕ್ಷಮ್: ಕಣ್ಣು ಹಾಗು ಸಾಕ್ಷಿ. ಪುಂಡರೀಕ: ಕಮಲಾ ಹಾಗು ಅರಳುವಿಕೆ. ಮಣ್ಣಿನ ಕಲೆಇಲ್ಲದೆ, ಅಂಟಿಕೊಳ್ಳದೆ ಇರುವುದು.
ಯಾವಾಗ ಅರಿವು ಅರಳುತ್ತದೊ, ಅದು ಕಲೆಯಿಲ್ಲದೆ, ಮಣ್ಣಿನ ಸಂಪರ್ಕವಿಲ್ಲದೆ ಇರುತ್ತದೆ. ಇದೇ ಹೊತ್ತಿನಲ್ಲಿ ಸಾಕ್ಷಿಯಾಗುತ್ತದೆ, ಅರಿವಿಗಾಗಿ.
ಅರಿವಿನ ನೆನಪೇ ನಿಮ್ಮನ್ನು ಶುದ್ಧರನ್ನಾಗಿಸುತ್ತದೆ.
ನಿಮಗೆ ಯಾವಾಗ ತಿಳಿಯುತ್ತದೋ ನಿಮ್ಮ ಅನುಬಂಧ ಗುರುವಿನೊಂದಿಗೆ ಎಂದು, ಅರಿವು ಉದಯಿಸಲು ಆರಂಭಿಸುತ್ತದೆ.
ನೀವು ಪ್ರೀತಿಸುವವರನ್ನು ನೆನಪಿಸಿಕೊಂಡರೆ, ಪ್ರೀತಿಯು ಪ್ರೇರಣೆಗೊಳ್ಳುತ್ತದೆ. ನಮ್ಮ ಶತ್ರುವನ್ನು ನೆನಪಿಸಿಕೊಂಡರೆ ಅಹಿತ ಭಾವನೆ ನಿಮ್ಮಲ್ಲಿ ಮೂಡುತ್ತದೆ; ದೇಹದ ಕಣ-ಕಣವು ಅಶಾಂತತೆಯಿಂದ ಬಳಲುತ್ತದೆ. ಏನಾದರು ಯಾರ ಬಗ್ಗೆಯಾದರು ಚಿಂತಿಸಿದರೆ ಅದೇ ದೇಹದಲ್ಲಿ ಉಂಟಾಗುತ್ತದೆ. ಆದ್ದರಿಂದ ಅರಿವುಂಟಾದವರ ಬಗ್ಗೆ ಚಿಂತಿಸಿದರೆ ನಿಮ್ಮಲ್ಲಿ ಶುದ್ಧತೆ ಉದಯಿಸುತ್ತದೆ.
ನೀವು ಆಸೆಬುರುಕರೊಂದಿಗೆ ಅಥವಾ ಮಹತ್ವಾಕಾಂಕ್ಷಿಗಳೊಂದಿಗೆಯಿದ್ದರೆ ನಿಮಗೂ ಅದೇ ಭಾವ ಉಂಟಾಗುತ್ತದೆ. ನೀವು ಶಾಂತತೆ ಹಾಗು ಉಲ್ಲಾಸದ ವ್ಯಕ್ತಿ ಗಳೊಂದಿಗಿದ್ದರೆ ನೀವು ಅದೇ ಆಗುತ್ತೀರ. ಅದೇ ಭಾವ ನಿಮ್ಮಲ್ಲೂ ಉಂಟಾಗುತ್ತದೆ.
ನೀವು ಯಾರನ್ನೂ ದ್ವೇಷಿಸುವುದಿಲ್ಲ ಯಾಕೆ? ಅದು ಯಾಕೆಂದರೆ, ನೀವು ಯಾರನ್ನು ದ್ವೇಷಿಸುತ್ತೀರೋ ಆ ವ್ಯಕ್ತಿಯು ನಿಮ್ಮ ಮನಸ್ಸಿನಲ್ಲಿ ಬಹುದೊಡ್ಡದಾಗಿ ನೆಲಸುತ್ತಾರೆ. ನೀವು ಯಾರ ಬಗ್ಗೆ ಯೋಚಿಸುತ್ತೀರೊ ಅವರ ಗುಣವನ್ನೇ ಹೀರಿಕೊಳ್ಳುತ್ತೀರ. ಇದುವೇ ವಿಜ್ಞಾನ ಹಾಗು ಸತ್ಯ.
ನಿಮಗೆ ಗೊತ್ತಾ, ಬುದ್ಧನ ಮೂರ್ತಿಯನ್ನು ಏಕೆ ಧ್ಯಾನಕ್ಕಾಗಿ ಬಳಸುತ್ತಿದ್ದರು?
ಬುದ್ದ ದೇಹವನ್ನು ತೊರೆದ ನಂತರ, ಅವರು ಬುದ್ದನ ಮೂರ್ತಿಯನ್ನು ಬಳಸುತ್ತಿದ್ದರು. ನೀವು ಬುದ್ದನ ಮೂರ್ತಿಯ ಮುಂದೆ ಕುಳಿತಾಗ, ಬುದ್ದನಂತೆಯೇ ಕುಳಿತುಕೊಳ್ಳುತ್ತೀರ. ನೀವು ನಿಮ್ಮ ಕಣ್ಣನ್ನು ಮುಚ್ಚಿ ಹಾಗು ಆ ನಿಶ್ಚಲತೆಯನ್ನು ನೀವು ಸೆಳೆದುಕೊಳ್ಳುತ್ತೀರ. ಇದು ಬುದ್ದನ ಮೂರ್ತಿಯನ್ನು ಹೊಂದುವುದರ ಉದ್ದೇಶವಾಗಿತ್ತು. ಇಂದು, ಬುದ್ದನ ದೊಡ್ಡ ದೊಡ್ಡ ಮೂರ್ತಿಯನ್ನು ಹೊಂದುವುದು ಫ್ಯಾಷನ್ ಆಗಿದೆ.
ಇಲ್ಲಿ ಮಹತ್ವವಾದುದು ಮೂರ್ತಿಯಲ್ಲ, ನೀವು ಮೂರ್ತಿಯ ಹಾಗೆ ಕೂರುವುದು, ಒಂದು ಮುಗುಳ್ನಗೆಯ ಜೊತೆಗೆ. ವಿಶ್ರಮಿಸಿ, ನೀವು ಹೊತ್ತಿರುವ ಎಲ್ಲ ಅನವಶ್ಯಕ ವಸ್ತುಗಳು ಹೊರಹೋಗಲಿ. ಅರಿಯಿರಿ, "ನಾನು ವಜ್ರ, ಎಂದಿಗೂ ಶುದ್ಧ". ನಂತರ ನೀವು ಆ ಗುಣಗಳನ್ನು ಹೀರಿಕೊಳ್ಳುತ್ತೀರ.
ಎಲ್ಲರ ಜ್ಞಾನವು, ಶ್ರೀಮಂತಿಕೆಯಿಂದ ಹಾಗು ಎಲ್ಲಾ ಒಳ್ಳೆಯ ಗುಣಗಳಿಂದ ಕೂಡಿದೆ. ಇದನ್ನು ನೀವು ಹೊರಗಿನಿಂದ ತರುವ ಅವಶ್ಯಕತೆ ಇಲ್ಲ, ನಿಮ್ಮೊಳಗೇ ಇದೆ. ಅದಕ್ಕೆ ಬೇಕಾಗಿರುವುದು ಪೋಷಣೆ ಅಷ್ಟೆ. ಕಮಲದ ಹಾಗೆ; ಎಲ್ಲಾ ದಳಗಳು ಇವೆ, ಅದು ಅರಳಬೇಕಷ್ಟೆ. ತೆರೆದುಕೊಂಡು ತನ್ನ ಕೀರ್ತಿಯನ್ನು ಹರಡಬೇಕು. ಇದೇ ರೀತಿ ಎಲ್ಲಾ ವ್ಯಕ್ತಿಗಳೂ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ.
ಗುರುಪೂರ್ಣಿಮೆಯಂದು, ವರ್ಷದಲ್ಲಿ ಒಂದು ಬಾರಿ, ಆ ಎಲ್ಲಾ ಒಳ್ಳೆಯ ಗುಣಗಳನ್ನು ಹೀರಿಕೊಳ್ಳಿರಿ, ಹಾಗು ಕೃತಜ್ಞತೆಯಿಂದಿರಿ. ನೀವು ಕೃತಜ್ಞತೆಯಿಂದ ಇದ್ದಷ್ಟು ಒಳ್ಳೆಯ ಅನುಗ್ರಹ ಉಂಟಾಗುತ್ತದೆ. ಆದ್ದರಿಂದ, ಸಂಭ್ರಮಾಚರಣೆ ಉಂಟಾಗುವುದು ಮೌನದಲ್ಲಿ, ಶುದ್ದತೆಯ ಅರಿವಿನಲ್ಲಿ, ಹಂಚಿಕೊಳ್ಳುವುದರ ಮೂಲಕ.
ಸೇವಾ ಗುಂಪಿನಲ್ಲಿರುವ ಜನರು ತಮ್ಮ ಒಳ್ಳೆಯ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ನೀವು ಹಂಚಿಕೊಂಡಾಗ, ಖುಷಿಯು ದ್ವಿಗುಣಗೊಳ್ಳುತ್ತದೆ, ಅದೇ ಸಂಭ್ರಮಾಚರಣೆ. ಇದಕ್ಕಿಂತ ಹೆಚ್ಚಿನದಿದ್ದರೆ ಹೇಳಿ, ಇದಕ್ಕೆ ಜೋಡಿಸೋಣ.
(ಸಭಿಕರು: ಹೌದು, ಸಂಭ್ರಮಾಚರಣೆ ದೇವರ ಜೊತೆಗೂ ಇದೆ)
೨೭ ಜುಲೈ ೨೦೧೩
.jpg)
ಉತ್ಸವ ಹೇಗೆ ಉಂಟಾಗುತ್ತದೆ? ಬರಿ ಬಲೂನು ಹಾಗು ಹೂವುಗಳನ್ನು ಇಡುವುದರಿಂದ ಉತ್ಸವವಾಗುವುದಿಲ್ಲ; ಅದು ನಿಮ್ಮೊಳಗಿಂದ ಉಂಟಾಗಬೇಕು. ಉತ್ಸವ ಉಂಟಾಗಲು ಅರ್ಹತೆ ಹಾಗು ನಿಯಮಗಳೇನು? ನೀವು ಇದರ ಬಗ್ಗೆ ಯೋಚಿಸಿರುವಿರಾ?
(ಸಭಿಕರು: ಕೃತಜ್ಞತೆ ಹಾಗು ಸಂತಸ ತುಂಬಿದೆ)
ಇದೊಂದು ಕೊಂಡಿಯಂತೆ: ನೀವು ಆಚರಿಸಿದರೆ, ಸಂತಸದಿಂದಿರುವಿರಿ; ನೀವು ಸಂತಸದಿಂದಿದ್ದರೆ, ಆಚರಿಸುವಿರಿ.
(ಸಭಿಕರು: ಸಂತುಷ್ಟಿ;ಒಳ್ಳೆಯ ಒಡನಾಟ; ಸಂಭ್ರಮಿಸಲು ಒಬ್ಬರ ಗೆಳೆತನ; ಮನೆಯಂತೆ ಅನುಭವ, ಸುಭಧ್ರತೆ.)
ಹೌದು, ಭಯವಂತರಾದರೆ ಸಂಭ್ರಮಿಸಲು ಸಾಧ್ಯವಿಲ್ಲ. ಪ್ರೀತಿಯಲ್ಲಿರಲು; ಜೊತೆಗಿದ್ದಂತ ಅನುಭವ.
(ಸಭಿಕರು: ಒಳ್ಳೆಯ ಭೋಜನ)
ಖಂಡಿತ, ಭೋಜನವು ಸಂಭ್ರಮದ ಒಂದು ಭಾಗ. ನೀವು ಹಸಿವಿಂದಿದ್ದರೆ, ಸಂಭ್ರಮಿಸಲು ಸಾಧ್ಯವಿಲ್ಲ.
(ಸಭಿಕರು; ಭೋಜನ ಹಾಗು ಪಾನೀಯದ ವಿನಿಮಯ?)
ಆಲಿಸಿ. ಭೋಜನ ಹಾಗು ಪಾನೀಯ ವಿನಿಮಯ ಮಾಡುವವರು ನಿಜವಾಗಿಯೂ ಸಂತಸದಿಂದಿರುವರೆ? ಅಥವಾ ಆಚರಣೆಯಲ್ಲಿ? ಅವರ ಮುಖಗಳನ್ನು ನೋಡಿರಿ!
ನಮಗೆ ಶುದ್ಧತೆಯ ಅರಿವು ಬೇಕು.
ನೀವು ಶುದ್ಧವಾಗಿದ್ದರೆ, ಉತ್ಸವಿಸುವಿರಿ. ನೀವು ಅಶುದ್ಧದಿಂದಿದ್ದರೆ, ಉತ್ಸವಿಸುವಿರ?
ಒಂದು ವೇಳೆ ನೀವು ಒಳಚರಂಡಿಯಲ್ಲಿ ಕೆಲಸ ಮಾಡುತ್ತಿರುವಾಗ ಯಾರಾದರು ನಿಮ್ಮನ್ನು ಉತ್ಸವಕ್ಕೆ ಕರೆದರೆ, ನೀವು ಹೇಳುವಿರಿ "ಇಲ್ಲ. ನಾನು ಕೊಳೆಯಾಗಿದ್ದೇನೆ. ಸ್ನಾನ ಮಾಡಿ ಬರುತ್ತೇನೆ" ಎಂದು. ಹೌದಲ್ಲವೇ?
ಹಾಗಾದರೆ ನಿಮಗೆ ಸಂಭ್ರಮಿಸಲು ಏನು ಬೇಕು? ಶುದ್ಧತೆಯ ಅರಿವು; ಶುದ್ಧತೆ. ಸಂಭ್ರಮವು ನೀವು ಒಳಗಿಂದ ಹಾಗು ಹೊರಗಿಂದ ಶುದ್ದರು ಎಂದು ಅರಿವಾದಾಗ ಉಂಟಾಗುತ್ತದೆ. ಜನರು ತಮ್ಮನು ತಾವು ನಾಸ್ತಿಕರು ಎಂದುಕೊಳ್ಳುತ್ತಾರೋ ಅವರು ಸಂಭ್ರಮಿಸಲು ಸಾಧ್ಯವಿಲ್ಲ, ಅವರ ನಾಸ್ತಿಕತೆ ಹಾಗು ಅಪನಂಬಿಕೆ ಅವರನ್ನೇ ತಿನ್ನುತ್ತದೆ. ಆದ್ದರಿಂದ ಶುದ್ದತೆ ಒಳಗೆ ಹಾಗು ಹೊರಗೆ.
ಈ ಗುರುಪೂರ್ಣಿಮದಂದು ನಿಮಗೆ ಒಂದನ್ನು ನೆನಪಿಸಲು ಇಷ್ಟಪಡುತ್ತೇನೆ. ನೀವು ಒಂದು ವಜ್ರ; ಬಹುಶ: ಕಸದ ಬುಟ್ಟಿಯಲ್ಲಿ!.
ಆದ್ದರಿಂದ ನಿಮಗೆ ಯಾವಾಗ ನೀವು ಅಶುದ್ದರು ಎನಿಸುತ್ತದೋ, ತಿಳಿಯಿರಿ ನೀವು ಒಂದು ವಜ್ರ. ವಜ್ರವು ಎಂದಿಗೂ ಅಶುದ್ದವಾಗಲು ಸಾಧ್ಯವಿಲ್ಲ, ಆದರೆ ಕಸದ ಬುಟ್ಟಿಯಲ್ಲಿರಲು ಸಾಧ್ಯ.
ವಜ್ರವು ಕಸದ ಬುಟ್ಟಿಯಲ್ಲಿದ್ದರೆ ನೀವದನ್ನು ಎಸೆಯುವಿರ? ಇಲ್ಲ. ಅದನ್ನು ಹೊರತೆಗೆದು ತೊಳೆಯುವಿರಿ. ಈ ನಿಮ್ಮ ಎಲ್ಲಾ ಅನುಸರಣೆ, ವಜ್ರವನ್ನು ತೊಳೆಯುವುದು ಮಾತ್ರ. ಅಷ್ಟೇ.
ವಜ್ರವನ್ನು ತೊಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ನೀವು ಅದನ್ನು ಜೋರಾಗಿ ಉಜ್ಜಬೇಕೆ? ಇಲ್ಲ. ಸ್ವಲ್ಪವೇ ನೀರು; ಸ್ವಲ್ಪ ಸೋಪು.ಇದೇ ರೀತಿ 'ಸೋ ಹಮ್ ಸೋ ಹಮ್' ಅಷ್ಟೆ. ವಜ್ರವು ಶುದ್ದವಾಗಿಬಿಡುತ್ತದೆ.
ನಿಮಗೆ ಗೊತ್ತಾದಾಗ ನಿತ್ಯ ಶುದ್ದೋಹಮ್; ನಾನು ಎಂದಿಗೂ ಶುದ್ದ, ಸಂಭ್ರಮವು ಎಂದಿಗೂ ನಿಮ್ಮ ಜೀವನದಿಂದ ಹೋಗುವುದಿಲ್ಲ.
ಸಹಜವಾಗಿ ನಾವು ಶುದ್ದರು. ಇದನ್ನು ನೀವು ಯಾವಾಗ ಅನುಭವಿಸುತ್ತೀರೋ ನೀವು ಶುದ್ಧರು, ನಿಮ್ಮ ಹೃದಯ ಶುದ್ಧತೆಯಿಂದ ಕೂಡಿದೆ. ಆಗ ನೀವು ಯಾರಿಗೂ, ಈ ಗ್ರಹದ ಅಥವಾ ಯಾವುದೇ ಗ್ರಹದವರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನಂತರ ನೀವೇ ಪ್ರೀತಿಯಾಗುತ್ತೀರ.
ಯಾವಾಗ ನಿಮಗೆ ನೀವು ಶುದ್ಧರು, ನೀವೇ ಪ್ರೀತಿ ಅನ್ನಿಸುತ್ತದೋ ಆಗ ನೀವು ಅರಳುತ್ತೀರ. ನಿಮ್ಮಲ್ಲಿ ಒಂದು ಎಚ್ಚರಿಕೆ, ಜಾಗರೂಕತೆ ಉಂಟಾಗುತ್ತದೆ.
ನೀವು ಸಹಜ ಶುದ್ಧರು, ಮೌನವು ಶುದ್ಧತೆಯ ಪರಿಮಳವಿದ್ದಂತೆ. ಮೌನ, ನಾನು ಎಂದಿಗೂ ಶುದ್ಧ ಎಂಬ ಅರಿವು ಸಂಭ್ರಮಿಸಲು ಕಾರಣವಾಗುತ್ತದೆ. ಮೌನದಿಂದ ಉಂಟಾಗುವ ಸಂಭ್ರಮವು ನಿಜವಾದುದು ಏಕೆಂದರೆ ಅದು ಆಳದಿಂದ ಬಂದುದಾಗಿದೆ.
ಸೋಪು ನೀರು ಮತ್ತೆಲ್ಲವನ್ನು ಉಪಯೋಗಿಸಿ ವಜ್ರವನ್ನು ತೊಳೆಯಲು ಆರಂಭಿಸಿದಂದಿನಿಂದ (ಆರ್ಟ್ ಆಫ್ ಸೈಲೆನ್ಸ್ ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ ) ಈಗ ವಜ್ರವು ಹೊಳೆಯುತ್ತಿದೆ, ಇದೇ ಸಂಭ್ರಮ. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ನಿಮ್ಮ ಪ್ರಾಮಾಣಿಕತೆಯು ನಗುವಿನಿಂದ ಹೊರಹೊಮ್ಮುತ್ತದೆ. ಕೆಲವರ ನಗುವನ್ನು ನೋಡಿದ್ದೀರ? ಅದು ಒಳಗಿನಿಂದ ಬರುವುದಿಲ್ಲ; ಅದು ಕೃತಕ ನಗು. ಜನರು ಹೇಳುತ್ತಾರೆ 'ಸುಸ್ವಾಗತ' ಆದರೆ ಅದು ಕೃತಕ ಸ್ವಾಗತ.
ಜನರು ಹೇಳುತ್ತಾರೆ 'ವಂದನೆಗಳು' ಆದರೆ ಅದು ಕೃತಕ ವಂದನೆ. ಅದು ಹೊರಗಿನಿಂದ ಬಂದುದು. ಏಕೆಂದರೆ ಒಳಗೆ ಮೌನವಿಲ್ಲ. ಒಳಗೆ ಬಂಡಾಯ, ಪಾಪ, ಅಶುದ್ಧತೆ ಕುದಿಯುತ್ತಿದೆ.
ಮನುಷ್ಯ ಜನ್ಮವು ಸಂಭ್ರಮಾಚರಣೆಗೆ ತಕ್ಕುದಾಗಿದೆ. ನಮ್ಮ ಈ ಎಲ್ಲಾ ರಗಳೆಗಳಿಂದ ಹೊರಬರುವುದು ಮುಖ್ಯವಾಗಿದೆ.
ನಾವೇನು ಮಾಡುತ್ತೇವೆ ಅಂದರೆ ಕಸವನ್ನು ಆಭರಣ ಪೆಟ್ಟಿಗೆಯಲ್ಲಿಡುತ್ತೇವೆ. ಕಸದ ಬುಟ್ಟಿಯಲ್ಲಿರುವುದು ಆಭರಣ ಪೆಟ್ಟಿಗೆಯಲ್ಲ. ಆದರೆ ನಾವೇ ಕಸವನ್ನು ಆಭರಣ ಪೆಟ್ಟಿಗೆಯಲ್ಲಿ ಹಾಕುತ್ತಿದ್ದೇವೆ. ಅದನ್ನು ಸುಮ್ಮನೆ ತೆಗೆದು ಹಾಕಬೇಕು.
ನೀವು ಶುದ್ಧ ಪ್ರೀತಿ ಎಂದು ಅರಿತುಕೊಳ್ಳಿ. ನಮ್ಮನ್ನು ನಾವು ಕೆಟ್ಟವರು, ಪಾಪಿಗಳು ಎಂದು ತಿಳಿದುಕೊಂಡಿದ್ದೇವೆ. ಈ ಕಟ್ಟಳೆಗಳನ್ನೆಲ್ಲ ನಮಗೇ ಹೇರಿಕೊಂಡಿದ್ದೇವೆ. ನಮಗೆ ನಾವೇ ಕಟುವಾಗಿರುವುದರಿಂದ, ನಮ್ಮ ಒಳ್ಳೆಯ ಗುಣಗಳು, ವರಗಳು ಅನುಭವಿಸಲು ಆಗುತ್ತಿಲ್ಲ.
ಪ್ರಪಂಚದಲ್ಲಿರುವ ಪ್ರತಿಯೊಬ್ಬನು ಈ ಎಲ್ಲ ಒಳ್ಳೆಯ ಗುಣಗಳೊಂದಿಗೆ ಬಂದಿದ್ದಾನೆ. ಆದರೆ ಅದನ್ನು ನಾವು ಗುರುತಿಸಲು ಆಗುತ್ತಿಲ್ಲ.
ಗುರುಪೂರ್ಣಿಮವು ನಿಮ್ಮ ಒಳ್ಳೆಯ ಗುಣಗಳನ್ನು ಗುರುತಿಸಿ ಆಚರಿಸುವ ಒಂದು ಸಂಭ್ರಮಾಚರಣೆ. ನೀವು ಯಾವಾಗ ಈ ಸುಂದರತೆಯನ್ನು ಗುರುತಿಸುತ್ತೀರೊ, ಮತ್ತು ನೀವು ಪಡೆದುಕೊಂಡ ವರಗಳು, ನಿಮ್ಮ ಕೃತಜ್ಞತೆಯನ್ನು ಸೂಚಿಸುತ್ತವೆ.
ನಿಮ್ಮ ಕೃತಜ್ಞತೆಯನ್ನು ಗುರುಗಳಿಗೆ ಅರ್ಪಿಸುವುದೇ ಗುರುಪೂರ್ಣಿಮ.
ಅದೇ ನಿಜವಾದ ಸಂಭ್ರಮಾಚರಣೆ.
ನಾವು ಮೌನದಿಂದ ಹೊರಬಂದರೂ (ಆರ್ಟ್ ಆಫ್ ಸೈಲೆನ್ಸ್ ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ) ಮತ್ತೊಂದು ಮೌನವನ್ನು ನಮ್ಮೊಂದಿಗೆ ಹೊತ್ತೊಯ್ಯುತ್ತೇವೆ. ಈಗ ಗುರುತಿಸಿ, ನೀವು ಒಂದು ಕಸದ ಬುಟ್ಟಿಯಲ್ಲಿರುವ ವಜ್ರ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ.
ಇದರ ಅರ್ಥ ನೀವು ಬೇಜಾರು ಮಾಡಿಕೊಳ್ಳಬಾರದು. ಕೋಪ ಮಾಡಿಕೊಳ್ಳಬಾರದು, ಈ ಹಿಂದೆ ಮಾಡುತ್ತಿದ್ದ ಯಾವುದನ್ನು ಮಾಡಬಾರದು ಎಂದಲ್ಲ. ಅಥವಾ ಮುಸಿ-ಮುಸಿ, ಅವಿಧೇಯತೆಯಿಂದಿರಬೇಕೆಂದಲ್ಲ. ಇಲ್ಲ. ಇದನ್ನೆಲ್ಲಾ ನೀವು ಮಾಡಬಹುದು!!. ದಿನ ನಿತ್ಯದಲ್ಲಿ ಮಾಡಬೇಕಾದೆಲ್ಲವನ್ನು ಮಾಡಬಹುದು.
ಆದಾಗ್ಯೂ, ತಿಳಿಯಿರಿ ನೀವು, ನೀವು ಮಾಡುವ ಕೆಲಸಕ್ಕಿಂತ ಎತ್ತರದಲ್ಲಿದ್ದೀರಿ. ನೀವು ನಿಮ್ಮ ಪರಿಸ್ಥಿತಿ, ಸುತ್ತ-ಮುತ್ತ, ಆಲೋಚನೆ, ಭಾವನಾತ್ಮಕತೆ ಎಲ್ಲಕ್ಕಿಂತ ಎತ್ತರದಲ್ಲಿದ್ದೀರಿ. ನೀವು, ನೀವು ತಿಳಿದಿರುವುದಕ್ಕಿಂತ ಉತ್ತಮರು. ಮತ್ತೆ ಮತ್ತೆ ತಿಳಿಯಿರಿ 'ನಾನು ಒಂದು ವಜ್ರ, ದುರಾದೃಷ್ಟವಷಾತ್ ಕಸದ ಬುಟ್ಟಿಯಲ್ಲಿ ಬಿದ್ದಿದ್ದೆ, ಈಗ ಅದರಿಂದ ಹೊರಬಂದು ನನ್ನನ್ನು ನಾನು ಶುಚಿ ಮಾಡುತ್ತಿದ್ದೇನೆ!'
ಅದು ವಾರ್ಷಿಕ ಶುಚಿತ್ವವಿರಬಹುದು, ವರ್ಷದಲ್ಲಿ ಎರಡು ಬಾರಿ ಶುಚಿತ್ವವಿರಬಹುದು, ನಂತರ ನಿಮಗೆ ತಿಳಿಯುತ್ತದೆ ನೀವು ಹೊತ್ತಿರುವ ಹೊರೆ ನೀವಲ್ಲ ಎಂದು. ನೀವು ಎಂದಿಗೂ ಶುದ್ಧರು.
ಇದನ್ನು ಗುರುತಿಸಲು ಅಥವಾ ನಂಬಲು ಕಷ್ಟವಾಗುತ್ತಿದೆಯೇ? ಇದಕ್ಕಾಗಿಯೇ ನಾವು ಸುದರ್ಶನ ಕ್ರಿಯಾ ಹಾಗು ಮತ್ತಿತರೆ ಪ್ರಕ್ರಿಯೆ ಮಾಡುವುದು, ನೀವು ಶುದ್ದರು ಹಾಗು ಅದ್ಬುತವಾದಂತವರು ಎಂದು ತಿಳಿಯಲು. ನಿಮ್ಮಲ್ಲಿ ಎಷ್ಟು ಮಂದಿ ನೀವೊಂದು ವಜ್ರ, ಶುದ್ಧರು ಎಂದು ತಿಳಿಯಲು ಕಷ್ಟಪಟ್ಟಿರಿ?
(ಸಭಿಕರಲ್ಲಿ ಕೆಲವರು ಕೈ ಎತ್ತುತ್ತಾರೆ)
ಓಹ್ ಹೌದಾ? ಹಾಗಾದರೆ ನಿಮಗೆ ಎರಡು ಅಡ್ವಾನ್ಸ್ ಕೋರ್ಸ್ ಬೇಕಾಗಬಹುದು; ಬಹುಶ: ಮತ್ತೊಂದು ಬಾರಿಯೂ ಬೇಕಾಗಬಹುದು. ನಿಮ್ಮಲ್ಲಿ ಯಾರಿಗಾದರು ನಾನು ಮೇಲೆ ಹೇಳಿದ ವಿಷಯ ಸಂಬಂಧಪಟ್ಟಿದೆಯೆ?
(ಕೆಲವು ಸಭಿಕರು ಕೈ ಎತ್ತುತ್ತಾರೆ)
ಸಧ್ಯ ಕೆಲವರಿಗಾದರೂ ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯಲ್ಲ! ಒಳ್ಳೆಯದು.
ಗುರುಪೂಜೆಯ ಮೊದಲಲ್ಲಿ ನಾವೊಂದು ಮಂತ್ರ ಪಠಣ ಮಾಡಿದೆವು
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋ ಪಿವ
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯ ಅಭ್ಯಂತರ ಶುಚಿಃ
ಶುದ್ದವೋ ಅಶುದ್ದವೋ, ಹೇಗೇ ಇರು (ನೀನು ಕೆಳಗಡೆ ಬಿದ್ದಿರಬಹುದು, ಬಹುಶ: ತುಂಬಾ ತಳಮುಟ್ಟಿರಬಹುದು) ಆದರು, ಕಮಲದ ನೆನಪನ್ನು ತಂದುಕೋ (ಕಮಲದ ಪುಷ್ಪವು ಮಣ್ಣಿನಲ್ಲಿ ಬೆಳೆದರೂ, ಅದು ಮಣ್ಣಿಗೆ ಅಂಟಿಕೊಂಡಿರುವುದಿಲ್ಲ.) ಇರುವಿಕೆ ಕಮಲದಂತೆ ಇರಬೇಕು.
(ಪುಂಡರೀಕ ಅಂದರೆ ಕಮಲದಂತೆ ಅರಳುವುದು)
ಇರುವಿಕೆಯು ಸಾಕ್ಷಿ ಇದ್ದಂತೆ. ನಿಮಗೆ ಯಾವಾಗ ಅರಿವಾಗುತ್ತದೋ ನೀವೇ ಸಾಕ್ಷಿ ಎಂದು, ಆಗ ಹೊರಗೆ ಹಾಗು ಒಳಗೆ ಶುದ್ಧತೆಯನ್ನು ತರುತ್ತದೆ. (ಸ ಬಾಹ್ಯ ಅಭ್ಯಂತರ)
ಯಃ ಸ್ಮರೇತ್ ಪುಂಡರೀಕಾಕ್ಷಂ: ಇದು ಒಬ್ಬರನ್ನು ಕಮಲದ ಕಣ್ಣಿನಿಂದ ನೆನಪಿಟ್ಟುಕೊಳ್ಳುವುದಲ್ಲ.
ಇಲ್ಲಿ ಎರಡು ವಿಷಯವಿದೆ. ಅಕ್ಷಮ್: ಕಣ್ಣು ಹಾಗು ಸಾಕ್ಷಿ. ಪುಂಡರೀಕ: ಕಮಲಾ ಹಾಗು ಅರಳುವಿಕೆ. ಮಣ್ಣಿನ ಕಲೆಇಲ್ಲದೆ, ಅಂಟಿಕೊಳ್ಳದೆ ಇರುವುದು.
ಯಾವಾಗ ಅರಿವು ಅರಳುತ್ತದೊ, ಅದು ಕಲೆಯಿಲ್ಲದೆ, ಮಣ್ಣಿನ ಸಂಪರ್ಕವಿಲ್ಲದೆ ಇರುತ್ತದೆ. ಇದೇ ಹೊತ್ತಿನಲ್ಲಿ ಸಾಕ್ಷಿಯಾಗುತ್ತದೆ, ಅರಿವಿಗಾಗಿ.
ಅರಿವಿನ ನೆನಪೇ ನಿಮ್ಮನ್ನು ಶುದ್ಧರನ್ನಾಗಿಸುತ್ತದೆ.
ನಿಮಗೆ ಯಾವಾಗ ತಿಳಿಯುತ್ತದೋ ನಿಮ್ಮ ಅನುಬಂಧ ಗುರುವಿನೊಂದಿಗೆ ಎಂದು, ಅರಿವು ಉದಯಿಸಲು ಆರಂಭಿಸುತ್ತದೆ.
ನೀವು ಪ್ರೀತಿಸುವವರನ್ನು ನೆನಪಿಸಿಕೊಂಡರೆ, ಪ್ರೀತಿಯು ಪ್ರೇರಣೆಗೊಳ್ಳುತ್ತದೆ. ನಮ್ಮ ಶತ್ರುವನ್ನು ನೆನಪಿಸಿಕೊಂಡರೆ ಅಹಿತ ಭಾವನೆ ನಿಮ್ಮಲ್ಲಿ ಮೂಡುತ್ತದೆ; ದೇಹದ ಕಣ-ಕಣವು ಅಶಾಂತತೆಯಿಂದ ಬಳಲುತ್ತದೆ. ಏನಾದರು ಯಾರ ಬಗ್ಗೆಯಾದರು ಚಿಂತಿಸಿದರೆ ಅದೇ ದೇಹದಲ್ಲಿ ಉಂಟಾಗುತ್ತದೆ. ಆದ್ದರಿಂದ ಅರಿವುಂಟಾದವರ ಬಗ್ಗೆ ಚಿಂತಿಸಿದರೆ ನಿಮ್ಮಲ್ಲಿ ಶುದ್ಧತೆ ಉದಯಿಸುತ್ತದೆ.
ನೀವು ಆಸೆಬುರುಕರೊಂದಿಗೆ ಅಥವಾ ಮಹತ್ವಾಕಾಂಕ್ಷಿಗಳೊಂದಿಗೆಯಿದ್ದರೆ ನಿಮಗೂ ಅದೇ ಭಾವ ಉಂಟಾಗುತ್ತದೆ. ನೀವು ಶಾಂತತೆ ಹಾಗು ಉಲ್ಲಾಸದ ವ್ಯಕ್ತಿ ಗಳೊಂದಿಗಿದ್ದರೆ ನೀವು ಅದೇ ಆಗುತ್ತೀರ. ಅದೇ ಭಾವ ನಿಮ್ಮಲ್ಲೂ ಉಂಟಾಗುತ್ತದೆ.
ನೀವು ಯಾರನ್ನೂ ದ್ವೇಷಿಸುವುದಿಲ್ಲ ಯಾಕೆ? ಅದು ಯಾಕೆಂದರೆ, ನೀವು ಯಾರನ್ನು ದ್ವೇಷಿಸುತ್ತೀರೋ ಆ ವ್ಯಕ್ತಿಯು ನಿಮ್ಮ ಮನಸ್ಸಿನಲ್ಲಿ ಬಹುದೊಡ್ಡದಾಗಿ ನೆಲಸುತ್ತಾರೆ. ನೀವು ಯಾರ ಬಗ್ಗೆ ಯೋಚಿಸುತ್ತೀರೊ ಅವರ ಗುಣವನ್ನೇ ಹೀರಿಕೊಳ್ಳುತ್ತೀರ. ಇದುವೇ ವಿಜ್ಞಾನ ಹಾಗು ಸತ್ಯ.
ನಿಮಗೆ ಗೊತ್ತಾ, ಬುದ್ಧನ ಮೂರ್ತಿಯನ್ನು ಏಕೆ ಧ್ಯಾನಕ್ಕಾಗಿ ಬಳಸುತ್ತಿದ್ದರು?
ಬುದ್ದ ದೇಹವನ್ನು ತೊರೆದ ನಂತರ, ಅವರು ಬುದ್ದನ ಮೂರ್ತಿಯನ್ನು ಬಳಸುತ್ತಿದ್ದರು. ನೀವು ಬುದ್ದನ ಮೂರ್ತಿಯ ಮುಂದೆ ಕುಳಿತಾಗ, ಬುದ್ದನಂತೆಯೇ ಕುಳಿತುಕೊಳ್ಳುತ್ತೀರ. ನೀವು ನಿಮ್ಮ ಕಣ್ಣನ್ನು ಮುಚ್ಚಿ ಹಾಗು ಆ ನಿಶ್ಚಲತೆಯನ್ನು ನೀವು ಸೆಳೆದುಕೊಳ್ಳುತ್ತೀರ. ಇದು ಬುದ್ದನ ಮೂರ್ತಿಯನ್ನು ಹೊಂದುವುದರ ಉದ್ದೇಶವಾಗಿತ್ತು. ಇಂದು, ಬುದ್ದನ ದೊಡ್ಡ ದೊಡ್ಡ ಮೂರ್ತಿಯನ್ನು ಹೊಂದುವುದು ಫ್ಯಾಷನ್ ಆಗಿದೆ.
ಇಲ್ಲಿ ಮಹತ್ವವಾದುದು ಮೂರ್ತಿಯಲ್ಲ, ನೀವು ಮೂರ್ತಿಯ ಹಾಗೆ ಕೂರುವುದು, ಒಂದು ಮುಗುಳ್ನಗೆಯ ಜೊತೆಗೆ. ವಿಶ್ರಮಿಸಿ, ನೀವು ಹೊತ್ತಿರುವ ಎಲ್ಲ ಅನವಶ್ಯಕ ವಸ್ತುಗಳು ಹೊರಹೋಗಲಿ. ಅರಿಯಿರಿ, "ನಾನು ವಜ್ರ, ಎಂದಿಗೂ ಶುದ್ಧ". ನಂತರ ನೀವು ಆ ಗುಣಗಳನ್ನು ಹೀರಿಕೊಳ್ಳುತ್ತೀರ.
ಎಲ್ಲರ ಜ್ಞಾನವು, ಶ್ರೀಮಂತಿಕೆಯಿಂದ ಹಾಗು ಎಲ್ಲಾ ಒಳ್ಳೆಯ ಗುಣಗಳಿಂದ ಕೂಡಿದೆ. ಇದನ್ನು ನೀವು ಹೊರಗಿನಿಂದ ತರುವ ಅವಶ್ಯಕತೆ ಇಲ್ಲ, ನಿಮ್ಮೊಳಗೇ ಇದೆ. ಅದಕ್ಕೆ ಬೇಕಾಗಿರುವುದು ಪೋಷಣೆ ಅಷ್ಟೆ. ಕಮಲದ ಹಾಗೆ; ಎಲ್ಲಾ ದಳಗಳು ಇವೆ, ಅದು ಅರಳಬೇಕಷ್ಟೆ. ತೆರೆದುಕೊಂಡು ತನ್ನ ಕೀರ್ತಿಯನ್ನು ಹರಡಬೇಕು. ಇದೇ ರೀತಿ ಎಲ್ಲಾ ವ್ಯಕ್ತಿಗಳೂ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ.
ಗುರುಪೂರ್ಣಿಮೆಯಂದು, ವರ್ಷದಲ್ಲಿ ಒಂದು ಬಾರಿ, ಆ ಎಲ್ಲಾ ಒಳ್ಳೆಯ ಗುಣಗಳನ್ನು ಹೀರಿಕೊಳ್ಳಿರಿ, ಹಾಗು ಕೃತಜ್ಞತೆಯಿಂದಿರಿ. ನೀವು ಕೃತಜ್ಞತೆಯಿಂದ ಇದ್ದಷ್ಟು ಒಳ್ಳೆಯ ಅನುಗ್ರಹ ಉಂಟಾಗುತ್ತದೆ. ಆದ್ದರಿಂದ, ಸಂಭ್ರಮಾಚರಣೆ ಉಂಟಾಗುವುದು ಮೌನದಲ್ಲಿ, ಶುದ್ದತೆಯ ಅರಿವಿನಲ್ಲಿ, ಹಂಚಿಕೊಳ್ಳುವುದರ ಮೂಲಕ.
ಸೇವಾ ಗುಂಪಿನಲ್ಲಿರುವ ಜನರು ತಮ್ಮ ಒಳ್ಳೆಯ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ನೀವು ಹಂಚಿಕೊಂಡಾಗ, ಖುಷಿಯು ದ್ವಿಗುಣಗೊಳ್ಳುತ್ತದೆ, ಅದೇ ಸಂಭ್ರಮಾಚರಣೆ. ಇದಕ್ಕಿಂತ ಹೆಚ್ಚಿನದಿದ್ದರೆ ಹೇಳಿ, ಇದಕ್ಕೆ ಜೋಡಿಸೋಣ.
(ಸಭಿಕರು: ಹೌದು, ಸಂಭ್ರಮಾಚರಣೆ ದೇವರ ಜೊತೆಗೂ ಇದೆ)