ಸೋಮವಾರ, ಅಕ್ಟೋಬರ್ 22, 2012

ನೀವು ಪ್ರಿಯರು


೨೨ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ, ಭಾರತ

ಗ ದೈವಿಕತೆಯ ಸಂದೇಶವೆಂದರೆ - ನೀವು ಭಗವಂತನಿಗೆ ಬಲು ಪ್ರಿಯರು. ಅಷ್ಟೊಂದು ಪ್ರಿಯರು ಎಂಬುದನ್ನು ನೀವು ಕೇವಲ ಗುರುತಿಸಬೇಕಾಗಿದೆ.

ನೀವು ಭಗವಂತನಿಗೆ ಎಷ್ಟೊಂದು ಪ್ರಿಯರು ಎಂಬುದನ್ನು ನಿಮಗೆ ಊಹಿಸಲು ಸಾಧ್ಯವಿಲ್ಲ. ಅಷ್ಟೊಂದು ಪ್ರೀತಿಯಿದೆ. ಒಬ್ಬ ತಾಯಿ ತನ್ನ ಮಗುವನ್ನು ಪ್ರೀತಿಸಿದಂತೆ, ಆ ಮಗು ಏನು ಮಾಡುತ್ತದೆ ಎಂಬುದನ್ನು ಪರಿಗಣಿಸದೆ ಪ್ರೀತಿಸಿದಂತೆ. ಆ ಮಗು ಹೊಲಸು ಮಾಡಬಹುದು, ಆದರೆ ತಾಯಿ ಅದರಿಂದ ಬೇಸರಗೊಳ್ಳುವುದಿಲ್ಲ. ಅವಳು ನಗುತ್ತ ಆ ಹೊಲಸನ್ನು ಶುಚಿಗೊಳಿಸಿ ಮತ್ತೆ ಆ ಮಗುವನ್ನುಪ್ರೀತಿಸಲು ಮುಂದುವರೆಯುತ್ತಾಳೆ.

ಇದೇ ರೀತಿ, ನೀವು ದೈವಿಕತೆಗೆ ಅತ್ಯಂತ ಪ್ರಿಯರು. ನಾವು ನಮ್ಮ ಮನಸ್ಸಿನಲ್ಲಿ ಇಡಬೇಕಾದದ್ದು ಇದನ್ನು.
ನಾನಿಲ್ಲಿರುವುದು ನಿಮಗಿದನ್ನು ಹೇಳುವುದಕ್ಕಾಗಿಯಷ್ಟೇ, ಮತ್ತೇನೂಅಲ್ಲ! ನೀವಿದನ್ನು ಅರ್ಥಮಾಡಿಕೊಂಡರೆ, ಮತ್ತೆ ನನ್ನ ಕೆಲಸ ಮುಗಿಯಿತು!

ನಾನು ದೈವಿಕತೆಗೆ ಅಷ್ಟೊಂದು ಪ್ರಿಯ’, ಮತ್ತುದೈವಿಕತೆಯು ಇಲ್ಲಿದೆ, ಇದೀಗ’, ಇವೆರಡು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದವು.

ನಮ್ಮಲ್ಲಿನ ನಾನು ಕರಗಿದಾಗ ಮತ್ತು ಅದು ಕೇವಲ ಶಕ್ತಿಯಾಗಿ ಉಳಿದಾಗ, ಆನಂದವು ಅಂಥ ಸಮಯದಲ್ಲಿ ಉಕ್ಕುವುದು. ಇಲ್ಲವಾದರೆ, ’ನನಗೆ ಮುಕ್ತಿ ಬೇಕಾಗಿದೆಅಥವಾನಾನಿದನ್ನು ಅನುಭವಿಸಬೇಕಾಗಿದೆಎಂದು ನೀವು ಯೋಚಿಸುತ್ತೀರಿ. ಮತ್ತೆ ಸಂಶಯವು ಆನಾನುಎಂಬುದರೊಳಗೆ ಸೇರಿಕೊಂಡಾಗ, ಅದು ಅತಿ ನಿಕೃಷ್ಟವಾದುದು.

ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು ಹೇಳಿದ್ದಾನೆ, ’ಸಂಶಯವು ಒಬ್ಬನ ಹೃದಯವನ್ನು ಸೇರಿಕೊಂಡಾಗ, ಅವನು ಸಂಪೂರ್ಣವಾಗಿ ಕಳೆದುಹೋಗಿರುತ್ತಾನೆ, ಮತ್ತು ಅವನು ಆರ್ತನಾಗಿಬಿಡುತ್ತಾನೆ’.

ಹಾಗಾಗಿ ನೀವು ದೈವಿಕತೆಗೆ ಬಹಳ ನೆಚ್ಚಿನವರು ಮತ್ತು ಬಹಳ ಪ್ರೀತಿಸಲ್ಪಟ್ಟವರು ಎಂದು ಗುರುತಿಸಿಕೊಂಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಷ್ಟೇ. ಅದನ್ನು ನಿಮ್ಮ ಮನಸ್ಸಿನಲ್ಲಿ ಮುದ್ರಿಸಿಕೊಳ್ಳಿಅದರ ಬಗ್ಗೆ ಇನ್ನೇನೂ ಸಂಶಯಗಳಿಲ್ಲ, ಅಥವಾ ಇನ್ನು ಆತ್ಮಸಂಶಯವಿಲ್ಲ.

ನಾನು ಪ್ರೀತಿಸಲ್ಪಟ್ಟಿದ್ದೇನೋ ಇಲ್ಲವೋ ಎಂಬ ಪ್ರಶ್ನೆಗಳು ಇನ್ನಿಲ್ಲ. ನೀವು ಪ್ರಶ್ನಿಸಕೂಡದು.

ಮೊದಲು ಭಗವಂತ ನಿಮಗೆ ಹೇಳುತ್ತಾನೆ, ’ನೀನು ನನಗೆ ಬಹಳ ಪ್ರಿಯ’,  ಮತ್ತೆ ಭಕ್ತ ಹೇಳುತ್ತಾನೆ, ’ಹೌದು, ನಾನೂ ನಿನ್ನನ್ನು ಪ್ರೀತಿಸುತ್ತೇನೆ!’

ಹಾಗಾಗಿ, ದೈವಿಕತೆಯು ನಿಮಗೆ ಹೇಳುತ್ತಿರುವ ಈ ಪದಗಳನ್ನು ಮೊದಲು ಕೇಳಿಕೊಳ್ಳಿ, ಭಗವಂತ ನಿಮ್ಮನ್ನು ಆಪ್ತವಾಗಿ ಪ್ರೀತಿಸುತ್ತಾನೆ ಎಂಬುದನ್ನು. ಅವನು ನಿಮ್ಮನ್ನು ಎಂದೂ ಮುಳುಗಲು ಬಿಡುವುದಿಲ್ಲ - ಇದು ಮೊದಲನೆಯದು.

ಎರಡನೆಯದು ಆ ನಂಬಿಕೆ, ನನ್ನನ್ನು ಎಂದೂ ಮುಳುಗಲು ಬಿಡುವುದಿಲ್ಲ ಎಂದು. ನಾನು ಮೂಗಿನ ತನಕ ನೀರಿನಲ್ಲಿ ಇರಬಹುದು, ಆದರೆ ಮೂಗಿನಿಂದ ಮೇಲಲ್ಲ.

ಮತ್ತೆ ಮೂರನೆಯದೆಂದರೆ ನಾವು ನಮ್ಮ ಮನಸ್ಸನ್ನು ಸಂತೋಷದಿಂದ ಮತ್ತು ತೃಪ್ತಿಯಿಂದ ಇಟ್ಟುಕೊಳ್ಳಬೇಕು. ಏನೇಬರಲಿ, ನಾವೊಂದು ತೃಪ್ತ ಮನಸ್ಸನ್ನು ಇಟ್ಟುಕೊಳ್ಳಬೇಕು.

ಒಂದು ಅತೃಪ್ತ ಮತ್ತು ಗೊಣಗಾಡುತ್ತಿರುವ ಮನಸ್ಸು, ತನಗೆ ಈ ಗ್ರಹದ ಮೇಲಿರುವುದೆಲ್ಲ ದೊರೆತರೂ, ಆಗಲೂ ಅದು ಆರ್ತವಾಗಿರುತ್ತದೆ. ಬ್ರಹ್ಮಾಂಡದಲ್ಲಿ ಅಂಥ ಯಾವುದೂ ನಿಮಗೆ ಎಂದೂ ತೃಪ್ತಿ ನೀಡಲಾರದು. ನೀವದನ್ನು ನಿಮ್ಮಲ್ಲಿ ತಂದುಕೊಳ್ಳಬೇಕು. ಮತ್ತೆ ಅದು ಯಾವಾಗ ನಡೆಯುತ್ತದೆ? ನೀವು ಬಿಟ್ಟುಬಿಟ್ಟಾಗ(ತ್ಯಾಗಹೊಂದಿದಾಗ) ಮತ್ತು ಅರ್ಥ ಮಾಡಿಕೊಂಡಾಗ ಅದು ನೆರವೇರುತ್ತದೆ. ಶುದ್ಧತೆ, ಸ್ಪಷ್ಟತೆ(ವಿವೇಕ) ಮತ್ತು ತೃಪ್ತಿ, ಇದು ಸಂತೋಷಕ್ಕೆ ಸೂತ್ರ.

ಬೈಬಲ್.ನಲ್ಲೂ ಹೀಗೊಂದು ಮಾತಿದೆ, ’ಯಾರಲ್ಲಿ ಇದೆಯೋ ಅವರಿಗೆ ಇನ್ನೂ ಕೊಡಲಾಗುತ್ತದೆ, ಯಾರಲ್ಲಿ ಇಲ್ಲವೋ ಅವರಲ್ಲಿ ಇರುವ ಸ್ವಲ್ಪವನ್ನೂ ತೆಗೆದುಕೊಳ್ಳಲಾಗುತ್ತದೆ.’

ಅದು ತುಂಬಾ ನಿಜ. ಮನಸ್ಸಿನಲ್ಲಿ ತೃಪ್ತಿಯ ಅಭಾವವಿದ್ದಾಗ ಮತ್ತು ನೀವು ದೂರುತ್ತಾ ಗೊಣಗಾಡುತ್ತಿದ್ದರೆ, ಆಗ ನಿಮಗದು ಅರಿವಾಗಬೇಕು ಮತ್ತು ನೀವು ಆ ಸ್ಥಿತಿಯಿಂದ ಹೊರ ನುಗ್ಗಬೇಕು. ನೀವು ಅದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅದು ಬಹಳ ಮುಖ್ಯ.

ತೃಪ್ತಿ ಮತ್ತು ಸಂತೋಷ! ಎಲ್ಲವನ್ನೂ ಸಂತೋಷದಿಂದ ಮಾಡಿ. ಓಡಾಡುವುದಾಗಲಿ, ಮಾತನಾಡುವುದನ್ನು, ಕುಳಿತುಕೊಳ್ಳುವುದನ್ನು ಸಂತಸದಿಂದ ಮಾಡಿ; ನೀವು ಯಾರದಾದರೂ ವಿರುದ್ಧ ದೂರುತ್ತಿದ್ದರೂ, ಅದನ್ನು ಸಂತೋಷದಿಂದ ಮಾಡಿ. ನನಗನ್ನಿಸುತ್ತದೆ ನಾವದನ್ನು ಈ ಆಶ್ರಮದಲ್ಲಿ ಒಂದಿಷ್ಟು ಸಲ ಮಾಡುತ್ತೀವಿ! (ಶ್ರೀಶ್ರೀ ನಗುತ್ತಾರೆ)

ನಿಮಗೆ ಗೊತ್ತೆ, ಮೊನ್ನೆಯ ದಿನ ಖರೀದಿ ವಿಭಾಗದ ಒಬ್ಬ ಮಂದಿ ನನಗೆ ಮಧ್ಯರಾತ್ರಿಯ ಸಮಯದಲ್ಲಿ ಕರೆನೀಡಿ ಹೇಳಿದರು, ’ಗುರೂಜಿ, ನಾಳೆಗಾಗಿ ನಾವು ಸ್ವಲ್ಪ ಸಾಮಾನುಗಳನ್ನು ಖರೀದಿಸಬೇಕಾಗಿದೆ.’

ನಾನೆಂದೆ, ’ಏನು?’

ಅವನು ಹೇಳಿದ, ’ಸಿಹಿತಿನಿಸು ಮಾಡುವುದಕ್ಕಾಗಿ ನಮಗೆ ೩000ಕೆ.ಜಿ. ಸಕ್ಕರೆ ಮತ್ತು ೨000ಕೆ.ಜಿ. ಹೆಸರುಬೇಳೆ ಬೇಕಾಗಿದೆ.’
ನಾನು ಹೇಳಿದೆ, ’ಏನು? (ಆಶ್ಚರ್ಯದಿಂದ), ನೀನು ಹೇಳಿದೆ ಕೇವಲ ಸ್ವಲ್ಪ ಸಾಮಾನುಗಳು ಬೇಕಾಗಿವೆ ಎಂದು.’

ಹಾಗಾಗಿ ಖರೀದಿ ವಿಭಾಗ ಇಡೀ ಮಾರಾಟ (ಹೋಲ್ಸೇಲ್) ಕೇಂದ್ರಗಳಿಗೆ ಧಾವಿಸಿ ಅಲ್ಲಿ ಜನರನ್ನು ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಬ್ಬಿಸಿ, ಮತ್ತೆ ಎಲ್ಲವನ್ನೂ ಬೆಳಗ್ಗೆ ೨ ಘಂಟೆಗೆ ಆಶ್ರಮಕ್ಕೆ ತಲುಪಿಸಲಾಯಿತು.

ಅವರು ಹಲವು ಅಂಗಡಿಯವರನ್ನು ಎಬ್ಬಿಸಬೇಕಾಯಿತು, ಅವರನ್ನು ಅವರ ಅಂಗಡಿಗೆ ಕರೆದುಕೊಂಡು ಹೋಗಿ, ಉಗ್ರಾಣವನ್ನು ತೆರೆದು ಸಾಮಾನುಗಳನ್ನು ತರಬೇಕಾಯಿತು. ಆದರೆ ಅವರೆಲ್ಲರೂ ಸಂತುಷ್ಟರಾಗಿದ್ದರು. ಮಾರಿದವನೂ ಖುಷಿಯಾಗಿದ್ದ, ಖರೀದಿಸಿದವನೂ ಖುಷಿಯಾಗಿದ್ದ, ಅಡುಗೆಯವನೂ ಖುಷಿಯಾಗಿದ್ದ ಮತ್ತು ಉಂಡವರೂ ಖುಷಿಯಾಗಿದ್ದರು.

ನಿಮಗೆ ಗೊತ್ತೇ, ಈ ಸಂಪೂರ್ಣ ಕೆಲಸ ಬಹಳ ಒತ್ತಡದಾಯಕ ಆಗಿರಬಹುದಿತ್ತು.

ಆ ವ್ಯಕ್ತಿ ನನಗಿದನ್ನು ಕೊನೆಯ ಕ್ಷಣದಲ್ಲಿ ಹೇಳುತ್ತಿದ್ದರು. ಕೊನೆ ಳಿಗೆಯಲ್ಲಿ ನಾವೆಲ್ಲಿಗೆ ಹೋಗುವುದು?

ಇದರಲ್ಲಿ ಬಹಳ ಗೊಣಗಾಟ ಮತ್ತು ದೂರುಗಳು ನಡೆಯಬಹುದಿತ್ತು, ಮತ್ತೆ ಅವರು, "ಛೆ, ಈ ಕೆಲಸವಾಗಲಿಲ್ಲ" ಎಂದು ಹಾಗೆಯೇ ಮರಳಿಬರಬಹುದಿತ್ತು. ಆದರೆ ನಡೆದದ್ದು ಅದಲ್ಲ.

ನೋಡಿ, ಎಲ್ಲಿ ಸತ್ವವಿದೆಯೋ ಮತ್ತು ಸಕಾರಾತ್ಮಕತೆಯಿದೆಯೋ, ಆಗ ಸವಾಲುಗಳೂ ಮಧುರವಾಗಿರುತ್ತವೆ.
ಅದಕ್ಕಾಗಿಯೇ ಸಂತೋಷ ಮತ್ತು ತೃಪ್ತಿ ಬಹಳ ಮುಖ್ಯವಾಗಿರುವುದು.

ನೋಡಿ, ಅದೊಂದು ಸಣ್ಣಪುಟ್ಟ ವಿಷಯವಾಗಿದ್ದರೆ, ಆಗ ಪರವಾಗಿಲ್ಲ. ನೀವು ಹೋಗಿ ಒಂದು ಅಂಗಡಿಯನ್ನು ತೆರೆಯಬಹುದು. ಆದರೆ ೩೦೦೦ಕೆ.ಜಿ. ಸಕ್ಕರೆ ಒಂದು ಅಂಗಡಿಯಿಂದ ನಿಮಗೆ ಸಿಗಲು ಸಾಧ್ಯವಿಲ್ಲ.

ಹಾಗೆ ಎಲ್ಲರ ಜೀವನದಲ್ಲಿ, ನಾವು ಕೆಲವೊಮ್ಮೆ ಅಸಾಧ್ಯವೆಂದು ಪರಿಗಣಿಸುವಂಥ ಬಹಳ ವಿಷಯಗಳಿವೆ. ಅದು ಯಾಕೆಂದು ನಿಮಗೆ ಗೊತ್ತಾ?ಅದು ಯಾಕೆಂದರೆ ನಾವು ನಮ್ಮನ್ನು ಗುರುತಿಸಿಕೊಳ್ಳುವುದಿಲ್ಲ.

ನಿಮಗೆ ಗೊತ್ತೇ, ಆ ಆನೆಯು ಇಲ್ಲಿಗೆ(ಯಜ್ಞಶಾಲೆಗೆ) ಬಂದಾಗ ಯಾಕೆ ಅಷ್ಟೊಂದು ಬೆಚ್ಚಿಬಿದ್ದದ್ದು? (ಚಂಡಿಕಾಹೋಮದಲ್ಲಿ ಪಾಲ್ಗೊಳ್ಳಲು ಕರೆತರಲ್ಪಟ್ಟಿದ್ದ ಇಂದ್ರಾಣಿ, ಆಶ್ರಮದ ಆನೆಯ ಬಗ್ಗೆ ಹೇಳುತ್ತಿರುವುದು)

ಅವಳು ತನ್ನನ್ನೇ ಪರದೆಯ (ವೇದಿಕೆಯ ಪಕ್ಕದ ನೇರಪ್ರಸಾರದ ವಿಶಾಲಪರದೆ) ಮೇಲೆ ನೋಡಿದ್ದಕ್ಕಾಗಿ ಭಯಗೊಂಡಳು, ಅವಳು ಅಲ್ಲಿ ಇನ್ನೊಂದು ಆನೆ ನಿಂತಿದೆ ಎಂದು ಭಾವಿಸಿದಳು. ಅದು ತನ್ನದೇ ಪ್ರತಿಬಿಂಬವೆಂದು ಅವಳು ಅರಿತುಕೊಳ್ಳಲಿಲ್ಲ. ಹಾಗಾಗಿ ನಮಗೆ ಆ ಪರದೆಯ ಮೇಲಿನ ಪ್ರಸಾರವನ್ನು ನಿಲ್ಲಿಸಬೇಕಾಯಿತು.

ಆಗ ನಾನಂದುಕೊಂಡೆ, ಅವಳು ನಮಗಿಂದು ಒಂದು ದೊಡ್ಡ ಪಾಠವನ್ನು ಹೇಳಿಕೊಟ್ಟಿದ್ದಾಳೆ. ಜನರೊಂದಿಗೆ ನಡೆಯುತ್ತಿರುವುದು ಇದೇ. ಅವರು ತಮ್ಮನ್ನು ಗುರುತಿಸಿಕೊಳ್ಳುವುದಿಲ್ಲ. ಎಲ್ಲರೂ ಕೇವಲ ನಿಮ್ಮ ಪ್ರತಿಬಿಂಬವಾಗಿದ್ದಾರೆ.

ನೀವು ನಿಮ್ಮನ್ನು ಗುರುತಿಸಿಕೊಳ್ಳದಿದ್ದಾಗ, ಅಥವಾ ನಿಮ್ಮನ್ನೇ ನೋಡಲು ಅಷ್ಟೊಂದು ಹೆದರಿಕೊಂಡಿದ್ದಾಗ, ಅಂಥಲ್ಲಿ ಜ್ಞಾನವು ಈ ವಿಷಯವನ್ನು ಪ್ರತಿಬಿಂಬಿಸಲು, ಅರಿತುಕೊಳ್ಳಲು ಸಹಾಯವಾಗುತ್ತದೆ.

ನಿಮ್ಮೊಳಗೇ ನೋಡಿಕೊಳ್ಳಿ, ಏನಿದೆ, ಏನು ಕಾಡಿಸುತ್ತಿದೆ, ಏನು ಚುಚ್ಚುತ್ತಿದೆ?

ನಿಮ್ಮಲ್ಲಿ ಕೆಲವು ನಕಾರಾತ್ಮಕ ಪ್ರವೃತ್ತಿಗಳಿವೆಯೆಂದು ನಿಮಗೆ ಕಂಡುಬಂದರೆ, ನಾನು ಹೇಳುತ್ತೇನೆ, ಅದರ ಬಗ್ಗೆ ಚಿಂತಿಸಬೇಡಿ, ಯಾಕೆಂದರೆ ನಿಮಗೆ ಅದರಿಂದ ಪಾರುಗೊಳ್ಳಲು ಆಗುವುದಿಲ್ಲ. ಅದರ ಬಗ್ಗೆ ಕಾಳಜಿವಹಿಸಲು ಒಬ್ಬರಿದ್ದಾರೆ. ಇದು ಆ ಸೂಚನೆ!

ದುರ್ಗಾಸಪ್ತಶತಿಯಲ್ಲಿ ಹೇಳಿದ್ದಾರೆ, ’ಯಾ ದೇವೀ ಸರ್ವಭೂತೇಷು ಭ್ರಾಂತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಓ ತಾಯಿ, ನೀನು ಎಲ್ಲಾ ಜೀವಿಗಳಲ್ಲಿ ಶಾಂತಿಯಾಗಿ ಮತ್ತು ಭ್ರಾಂತಿಯಾಗಿ ಸ್ಥಿತಳಾಗಿರುವೆ; ಜ್ಞಾನವಾಗಿ ಮತ್ತು ಭ್ರಾಂತಿಯಾಗಿ ವಾಸವಾಗಿರುವೆ. ನಾನು ಗೌರವದಿಂದ ನಿನಗೆ ಶಿರ ಬಾಗಿಸುವೆ!

ಹಾಗಾಗಿ ದೈವಿಕತೆಯು ತುಮುಲವಾಗಿಯೂ ಇರುವುದು.

ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ನೋಡಿ, ಅವು ಅಷ್ಟೊಂದು ತುಮುಲಗೊಂಡಿವೆ. ಆ ಆನೆಯು ಸ್ವಲ್ಪ ಸಮಯಕ್ಕೆ ಎಷ್ಟೊಂದು ಗಲಿಬಿಲಿಗೊಂಡಿತ್ತು.

ಅದು ಏನಾಗಿತ್ತು? ಅದು ಪ್ರಜ್ಞೆಯಾಗಿತ್ತು; ಭ್ರಾಂತಿಯ ರೂಪವಾಗಿ ಸ್ಥಿತವಾಗಿರುವ ಚೈತನ್ಯ, ಮತ್ತು ಜ್ಞಾನದ ರೂಪವಾಗಿ ಮತ್ತು ಅಜ್ಞಾನದ ರೂಪವಾಗಿ ಸ್ಥಿತವಾಗಿರುವ ಆ ಶುದ್ಧ ಶಕ್ತಿ.

ಹಾಗಾಗಿಯೇ ಎಲ್ಲವನ್ನೂ ಪರಿಪೂರ್ಣತೆಯಿಂದ ಪ್ರೀತಿಸಿ. ಎಲ್ಲವನ್ನೂ ಜೊತೆಗೆ ತೆಗೆದುಕೊಳ್ಳಿ. ಆರಿಸಲು ಅಥವಾ ಪ್ರತ್ಯೇಕಿಸಲು ಪ್ರಯತ್ನಿಸಬೇಡಿ, ಎಲ್ಲವನ್ನೂ ಸಂಪೂರ್ಣವಾಗಿ ತೆಗೆದುಕೊಳ್ಳಿ ಆಗ ನೀವು ಶಾಂತಿಯಿಂದಿರುತ್ತೀರಿ, ಪರಿಪೂರ್ಣ ಶಾಂತಿ.

ಇದು ಆ ಸಂಪೂರ್ಣಸಾರ. ಆಗ ದುಃಖದಿಂದ ಮುಕ್ತಿ, ಶಾಂತಿಯ ಉಪಸ್ಥಿತಿ, ಹೊರಹೊಮ್ಮುತ್ತಿರುವ ಪ್ರೀತಿ ಮತ್ತು ಆನಂದ, ಭಕ್ತಿ ಮತ್ತು ಮನಸ್ಸಿನಲ್ಲಿ ಸ್ವಾತಂತ್ರ್ಯ-ಇವು ಬೆಳೆದುಕೊಳ್ಳುತ್ತವೆ.

ಈ ಸಂಪೂರ್ಣ ಬ್ರಹ್ಮಾಂಡವು ಒಂದೇ ಚೈತನ್ಯವಾಗಿದೆ. ನೀವೆಲ್ಲರೂ ಇವತ್ತು ಅದನ್ನು ಅನುಭವಿಸಲಿಲ್ಲವೇ?

ಹಲವಾರು ಶರೀರಗಳಿದ್ದು, ಕೇವಲ ಒಂದು ಮನಸ್ಸಿರುವಂತೆ ಅದು.

ಹಲವಾರು ಶರೀರಗಳಿದ್ದರೂ ಒಂದು ಶರೀರ, ಈ ಸಂಪೂರ್ಣ ವ್ಯಾಪ್ತಿಯಲ್ಲಿ ಒಂದು ಉಪಸ್ಥಿತಿ.

ನಾವೆಲ್ಲರೂ ಆ ಒಂದರ ಭಾಗವಾಗಿದ್ದೇವೆ - ಈ ಅರಿವು ಒಂದು ಆಳವಾದ ಅನುಭವವಾಗಿ ಉಂಟಾಗುತ್ತದೆ.

ಈಗ, ’ಆ ಅರಿವು ನನಗೆ ಯಾವಾಗ ಬರುತ್ತದೆ ಗುರೂಜಿ? ಅದು ನನಗೆ ಈಗ ಬೇಕು.’ ಎಂದು ಕೇಳಬೇಡಿ.
ಕೇವಲ ವಿಶ್ರಮಿಸಿ! ಏನನ್ನೂ ಮಾಡದಿರಿ!

ನೀವು ಭಗವಂತನಿಗೆ ನೆಚ್ಚಿನವರು ಮತ್ತು ಆ ದೈವಿಕತೆಯು ಇಲ್ಲಿದೆ, ಈ ಕ್ಷಣ ನಿಮ್ಮೊಳಗಿದೆ ಎಂದು ತಿಳಿದಿರಿ.

ಇವತ್ತಿಗೆ ಇಷ್ಟು ಸಾಕು.