ಸೋಮವಾರ, ಏಪ್ರಿಲ್ 15, 2013

ಕೆಲಸ ಸದಾ ಆಯಾಸದಾಯಕ ಎನಿಸುತ್ತಿದೆಯೇ?

ರೆಜೀನಾ, ಕ್ಯಾನಡಾ
೧೫.೦೪.೧೩

ಲ್ಲಿರಲು ಬಹಳ ಆನಂದವಾಗಿದೆ!

ರೆಜೀನಾ ಒಂದು ಶಾಂತ ಮನಸ್ಕರ ಮತ್ತು ಸಹೃದಯಿಗಳ ಸ್ಥಳವೆಂದು ಕಾಣಿಸುತ್ತದೆ. ಸಾಮಾನ್ಯವಾಗಿ ದೊಡ್ಡ ಪಟ್ಟಣಗಳಲ್ಲಿ ಜನರು ಬಿಸಿಯಾದ ಮನಸ್ಸುಳ್ಳವರಾಗಿ ನಿರ್ದಯಿಗಳಾಗಿರುತ್ತಾರೆ. ಸ್ವಲ್ಪ ಸಣ್ಣ ಪಟ್ಟಣಗಳಲ್ಲಿ, ಏಕತೆ ಇದೆ, ಜನರು ಒಂದಾಗಿ ಬೆರೆತುಕೊಳ್ಳುತ್ತಾರೆ. ನಾವು ಈ ಸಹೃದಯವಂತಿಕೆಯನ್ನು ಹಬ್ಬುವ ಸಂಸ್ಕೃತಿಯನ್ನು ಇಟ್ಟುಕೊಳ್ಳಬೇಕು.

ಹಿಂಸಾ-ಮುಕ್ತ ಸಮಾಜ, ರೋಗ-ಮುಕ್ತ ಶರೀರ, ದ್ವಂದ-ಮುಕ್ತ ಮನಸ್ಸು, ಹಿಂಜರಿಕೆ-ಮುಕ್ತ ವಿಚಾರವಂತಿಕೆ, ಆತಂಕ-ಮುಕ್ತ ನೆನಪು ಮತ್ತು ದುಃಖ-ಮುಕ್ತ ಆತ್ಮ ಇವು ಪ್ರತಿ ಓರ್ವರ ಜನ್ಮಸಿದ್ಧ ಹಕ್ಕು. ಜೀವನ ಕಲೆ ಸಂಸ್ಥಾನವು ಇದರಲ್ಲೇ ನಿರತವಾಗಿರುವುದು; ಸಂಘ-ಭಾವನೆಯನ್ನು ಸೃಷ್ಟಿಸುವುದು. ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿರುವೆವು.
ನಾವು ಪ್ರಾರ್ಥಿಸುವ ರೀತಿ ಬೇರೆಯಾಗಿರಬಹುದು, ನಾವು ಜೀವನದಲ್ಲಿ ಆಚರಿಸುವ ಥರ ಬೇರೆಯಾಗಿರಬಹುದು, ನಮ್ಮ ಭಾಷೆ ಮತ್ತು ನಮ್ಮ ರೀತಿಗಳು ಬೇರೆಯದಾಗಿರಬಹುದು, ಆದರೆ ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿದವರು. ನಾವಿದನ್ನು ಮರೆತಾಗ, ಮಾನವ ಸಂಕುಲ ಅನಾಹುತದೆಡೆಗೆ ಸಾಗುತ್ತದೆ.

ನೋಡಿ ಲೋಕದಲ್ಲಿ ಸುತ್ತಲೂ ಏನಾಗುತ್ತಿದೆ? ಪಾಠಶಾಲೆಗಳಲ್ಲಿ ಹಿಂಸಾಚಾರ ನಡೆಯುತ್ತದೆ. ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸುವಾಗಲೂ ಜನರು ಅರಕ್ಷಿತತೆ ಅನುಭವಿಸುತ್ತಾರೆ. ಕೇವಲ ಅಮೆರಿಕಾದಲ್ಲಿ ಒಂದು ವರ್ಷಕ್ಕೆ ದಶಲಕ್ಷ ಹಿಂಸಾ ಕೃತ್ಯಗಳು ನಡೆಯುತ್ತವೆ ಎಂದು ಕೇಳಿದಾಗ,ಪ್ರತಿಯೊಂದು ಹಿಂಸಾ ಕೃತ್ಯಕ್ಕೆ ಪ್ರತಿಯಾಗಿ ನೂರುಕೋಟಿ ಅಹಿಂಸಾ ಕೃತ್ಯ ಎಸಗುವುದು ಎಂಬ ವಿಚಾರ ನನಗೆ ಬಂತು. ನಾವು ಈಗಿನ ಪರಿಸ್ಥಿತಿಯನ್ನು ಬದಲಾಯಿಸಬೇಕು; ಅದನ್ನು ಪರಿವರ್ತಿಸಬೇಕು. ಹಿಂಸೆಯ ಪ್ರತಿಯೊಂದು ಕೃತ್ಯಕ್ಕೂ ನಾವು ನೂರು ಅಹಿಂಸಾ ಕೃತ್ಯಗಳಿಂದ ಪರಿಹಾರ ನೀಡಬೇಕು.

ಕನೆಕ್ಟಿಕಟ್.ನ ದುರದೃಷ್ಟಕರ ಘಟನೆಯ ಬಗ್ಗೆ ಕೇಳಿದಾಗ, ನಾನು ಯೋಚಿಸಿದೆ, ನಾನು ಸುತ್ತಲೂ ಪರ್ಯಟನ ಮಾಡಿ ಎಲ್ಲರಲ್ಲೂ ಮಾತನಾಡಿ, ನಾವೆಲ್ಲರೂ ಹಿಂಸೆಯನ್ನು ಹೇಗೆ ಕಡಿಮೆಗೊಳಿಸಬಹುದೆಂದು ನೋಡಲು ಪ್ರತಿಯೊಬ್ಬರಲ್ಲೂ ಪ್ರಮಾಣ ತೆಗೆದುಕೊಳ್ಳಲು ಹೇಳಬೇಕು. ನೀವೆಲ್ಲರೂ ಏನನ್ನುತ್ತೀರಿ?

ನಮಗೆ ಈ ತೊಂದರೆಗಳು; ಖಿನ್ನತೆ, ಸಾಂಸಾರಿಕ(ಗೃಹಸಂಬಂಧೀ) ಹಿಂಸೆ, ಮತ್ತು ಸಾಮಾಜಿಕ ಹಿಂಸೆ; ಲೋಕದ ಎಲ್ಲೆಡೆಯಲ್ಲೂ ಇವೆ. ಯಾಕೆಂದರೆ ನಾವು ನಮ್ಮೊಳಗೇ ಮತ್ತು ನಮ್ಮ ಸುತ್ತಲಿನ ಎಲ್ಲರೊಂದಿಗೆ ಸಂಪರ್ಕ ಹೊಂದುವುದನ್ನು ಮರೆತಿದ್ದೇವೆ. ನಮ್ಮ ಜೀವನವನ್ನು ಸಾರ್ಥಕವಾಗಿಸುವುದು ಕೇವಲ ಇದು ಒಂದೇ ಒಂದು ವಿಷಯ.

ಜೀವನದಲ್ಲಿ ಪ್ರೀತಿ ಇದ್ದಾಗ ಮಾತ್ರ ಅದು ಯೋಗ್ಯವಾಗಿರುತ್ತದೆ. ಪ್ರೀತಿ, ಸಹಾನುಭೂತಿ ಮತ್ತು ಬಂಧುತ್ವ ಇಲ್ಲದ ಜೀವನವನ್ನು ಒಮ್ಮೆ ಕಲ್ಪನೆ ಮಾಡಿ. ಮನುಷ್ಯತ್ವವು ಖಿನ್ನತೆಯಲ್ಲಿ ಮುಳುಗುತ್ತಿತ್ತು. ನಾವು ಈ ಉತ್ಸವ ಮತ್ತು ಜೊತೆಗಿರುವಿಕೆಯ ಭಾವವನ್ನು ಸಮುದಾಯಗಳಲ್ಲಿ ಮತ್ತು ಕುಟುಂಬಗಳಲ್ಲಿ ಸೃಷ್ಟಿಸಬೇಕು. ನಾವು ನಮ್ಮ ಕಾರ್ಯಕ್ರಮವನ್ನು (ಪ್ರತಿಯೊಂದು ಹಿಂಸಾ ಕೃತ್ಯಕ್ಕೆ ಪ್ರತಿಯಾಗಿ ನೂರು ಕೋಟಿ ಅಹಿಂಸಾ ಕೃತ್ಯ ಎಸಗುವುದು) ಇದನ್ನೇ ಗಮನದಲ್ಲಿಟ್ಟು ಪ್ರಾರಂಭಿಸಿರುವುದು. ಎಲ್ಲಿ ಅತ್ಯಗತ್ಯವಾಗಿತ್ತೋ ಅಂಥಲ್ಲಿ ಅದು ನಿಜವಾಗಿಯೂ ಮನಮುಟ್ಟಿದೆ; ಸೆರೆಮನೆಗಳಲ್ಲಿ, ಶಾಲೆ ಮತ್ತು ತರಗತಿಗಳಲ್ಲಿ. ಅಷ್ಟೊಂದು ಸ್ವಯಂಸೇವಕರು ಜಗತ್ತಿನಾದ್ಯಂತದಿಂದಲೂ ಈ ಕಾರ್ಯಕ್ರಮಕ್ಕಾಗಿ ಕೆಲಸಕ್ಕಿಳಿದಿರುವುದು ನಾನು ಸಂತುಷ್ಟನಾಗಿದ್ದೇನೆ.

ಜೀವನಕಲೆಯು ಐದು ಸಿದ್ಧಾಂತಗಳ ಮೇಲೆ ಆಧರಿಸಿದೆ:

೧. ವಿರುದ್ಧಾತ್ಮಕ ಮೌಲ್ಯಗಳು ಪರಸ್ಪರ ಪೂರಕವಾಗಿವೆ: ಜೀವಮದಲ್ಲಿ ಎಲ್ಲವೂ ನಮಗೆ ಬೇಕಾದಂತೆ ನಡೆಯುವುದಿಲ್ಲ, ಕೆಲವೊಮ್ಮೆ ಕೆಲಸ ಕೆಟ್ಟುಹೋಗುತ್ತವೆ. ನಾವದನ್ನು ಸ್ವೀಕರಿಸಬೇಕು, ಅದರಿಂದ ಕಲಿತುಕೊಳ್ಳಬೇಕು ಮತ್ತು ಮುನ್ನಡೆಯಬೇಕು. ನಾವು ಸಮಚಿತ್ತತೆ ಉಳಿಸಿಕೊಳ್ಳಬೇಕು, ಪರಿಸ್ಥಿತಿ ಹಿತಕರವಾಗಿರಲಿ ಅಥವಾ ಅಹಿತಕರವಾಗಿರಲಿ. ಇದು ಮನುಷತ್ವಕ್ಕೆ ಇರಬೇಕಾದ ಮೂಲಭೂತ ಸಿದ್ಧಾಂತಗಳಲ್ಲೊಂದು ಎಂದು ನನ್ನ ಸಲಹೆ.

ನಾವು ನಮ್ಮ ವಿವೇಕ ಮತ್ತು ಯುಕ್ತಾಯುಕ್ತತೆಗಳ ಅರಿವನ್ನು ಯಾವುದೇ ಪರಿಸ್ಥಿತಿಯಲ್ಲಿ ಕಳೆದುಕೊಳ್ಳಬಾರದು. ನಾವದನ್ನು ಹೇಗೆ ಮಾಡಬಹುದು?

ಯಾವುದರಿಂದ ಮನಸ್ಸು ಒತ್ತಡದಿಂದ ಮುಕ್ತವಾಗಿ ವರ್ತಮಾನ ಕ್ಷಣದಲ್ಲಿ ಇರುವಂತೆ ಮಾಡಬಹುದೋ ಅಂಥ ಕೆಲವೊಂದು ಉಸಿರಾಟದ ಪ್ರಕ್ರಿಯೆಗಳನ್ನು ಮತ್ತು ವ್ಯಾಯಾಮಗಳನ್ನು ನಾವು ರೂಪಿಸಿದ್ದೇವೆ.

೨. ಜನರನ್ನು ಮತ್ತು ಪರಿಸ್ಥಿತಿಗಳನ್ನು ಅವು ಇರುವಂತೆ ಸ್ವೀಕರಿಸಿ: ನಾವು ಪರಿಸ್ಥಿ ಸ್ವೀಕರ ಮಾಡದೇ ಇದ್ದರೆ ಪರಿಸ್ಥಿತಿಗಳು ಬದಲಾಗುವುದಿಲ್ಲ, ಅಲ್ಲವೇ? ನೀವು ಸ್ವೀಕರಿಸಿದಾಗ, ಕನಿಷ್ಟ ಪಕ್ಷ, ನಿಮ್ಮ ಮನಸ್ಸು ಹೆಚ್ಚು ಏಕಾಗ್ರವಾಗುತ್ತದೆ. ಆಗ, ನೀವು ಬದಲಾವಣೆ ಉಂಟಾಗಲು ಸಹಾಯವಾಗುತ್ತೀರಿ.

೩. ಇತರರ ತಪ್ಪುಗಳ ಹಿಂದೆ ಉದ್ದೇಶ ಹುಡುಕಬೇಡಿ: ಒಬ್ಬ ಅತಿ ದುಷ್ಟ ಅಪರಾಧಿಯಲ್ಲೂ, ಒಬ್ಬ ನೊಂದ ಬಲಿಪಶು ಅಂತರಾಳದಲ್ಲಿ ಸಹಾಯಕ್ಕಾಗಿ ಅಳುತ್ತಿರುವುದನ್ನು ನೀವು ಪಡೆಯುತ್ತೀರಿ. ನಿಮಗಿದನ್ನು ನೋಡಲು ಸಾಧ್ಯವಾದಾಗ, ನಿಮ್ಮಲ್ಲಿ ದ್ವೇಷವಿರದೆ ಸಹಾನುಭೂತಿ ಇರುತ್ತದೆ.

೪. ಇತರರ ಅಭಿಪ್ರಾಯದ ಕಾಲ್ಚೆಂಡಾಗಬೇಡಿ.

೫. ವರ್ತಮಾನ ಕ್ಷಣದಲ್ಲಿ ಬದುಕಿ.

ಇವು ಕೆಲವು ಬಹಳ ಮೂಲಭೂತವಾದ ಸಿದ್ಧಾಂತಗಳು, ಇವು ನಮ್ಮೊಳಗೆಯೇ ಮತ್ತು ಕುಟುಂಬದೊಳಗೆ ಶಾಂತಿಯನ್ನು ಸೌಹಾರ್ದ ಭಾವವನ್ನು ತಂದುಕೊಳ್ಳಲು ಅಗತ್ಯ, ಅಲ್ಲವೇ? ಇದು ಯಾಕೆಂದರೆ ಕುಟುಂಬದೊಳಗೆ ನಾವು ಸರಿ ಅಂದುಕೊಂಡ ರೀತಿಯಲ್ಲಿ ಎಲ್ಲವೂ ನಡೆಯಬೇಕು ಎಂದು ನಮಗಿರುತ್ತದೆ. ಹೇಗಿದ್ದರೂ, ಇದು ಯಾವತ್ತೂ ನಡೆಯುವುದಿಲ. ನಾವು ಯಾವತ್ತೂ ಉಳಿದವರ ದೃಷ್ಟಿಕೋನಗಳಿಗೆ ಅವಕಾಶ ಕಲ್ಪಿಸಿಕೊಡಬೇಕು.

ಇದನ್ನು ಸಾಧಿಸುವುದಕ್ಕಾ ಉಸಿರಾಟ ಒಂದು ಮುಖ್ಯ ಉಪಕರಣವಾಗಿದೆ. ಪ್ರತಿಯೊಂದು ಭಾವನೆಗೂ ಒಂದು ನಿರ್ದಿಷ್ಟ ಉಸಿರಾಟದ ಲಯವಿದೆ.

ಪುರಾತನ ದಿನಗಳಲ್ಲಿ, ಈ ಜ್ಞಾನವನ್ನು ಅತ್ಯಂತ ಸಂರಕ್ಷಣೆಯಿಂದ ಒಂದು ರಹಸ್ಯವಾಗಿ ಕಾಪಾಡಿದ್ದರು. ಅದನ್ನು ಕೇವಲ ರಾಜ ಕುಟುಂಬದವರಿಗೆ ಮತ್ತು ಕೆಲವು ವಿಶಿಷ್ಟ ವ್ಯಕ್ತಿಗಳಿಗೆ ಕೊಡುತ್ತಿದ್ದರು. ನನ್ನ ಅಭಿಪ್ರಾಯದಲ್ಲಿ, ಇದನ್ನು ಸಂಪೂರ್ಣ ಜನಸಮುದಾಯಕ್ಕೆ, ಮೊಬೈಲ್ ಫೋನ್ ಗಳಂತೆ ಒದಗಿಸಬೇಕು. ನಾವು ಎಲ್ಲರಿಗೂ ತಮ್ಮ ಮನಸ್ಸನ್ನು ಹೇಗೆ ನಿಭಾಯಿಸುವುದು ಎಂಬ ಜ್ಞಾನವನ್ನು ನೀಡಬೇಕು; ಇದು ಅವಷ್ಯಕವಾಗಿದೆ. ಮತ್ತು ನಾವಿದನ್ನು ಮೂವತ್ತೆರಡು ವರ್ಷಗಳಿಂದ ಮಾಡುತ್ತಿದ್ದೇವೆ.

ನಾವೊಂದು ಹಿಂಸಾ-ಮುಕ್ತ ಸಮಾಜವನ್ನು ಸೃಷ್ಟಿಸಬೇಕು, ಇಂದು ನಾವೆಲ್ಲರೂ ಇದನ್ನು ನಮ್ಮ ಹೃದಯದಲ್ಲಿ ಸ್ಥಾಪಿಸೋಣ.
ನಮ್ಮ ಸಂಸ್ಕೃತಿ, ಕ್ರೀಡೆ, ವ್ಯವಹಾರ ಮತ್ತು ನಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಅಹಿಂಸೆಯ ಜ್ಞಾನವನ್ನು ನಾವು ಸಮಗ್ರವಾಗಿಸಬೇಕು. ಇವೆಲ್ಲವುಗಳಲ್ಲೂ ಇದು ಇರಬೇಕಾಗಿದೆ. ಘರ್ಷಣೆಗೊಳಗಾದಾಗ ನಮ್ಮ ಮನಸ್ಸನ್ನು ಹೇಗೆ ಶಾಂತಗೊಳಿಸುವುದು ಎಂದು ನಾವೆಲ್ಲರೂ ಕಲಿಯಬೇಕು.

ಈಗ ನೀವೆನ್ನಬಹುದು, ’ಹೌದು, ಇದು ನನ್ನ ಮನಸ್ಸಿನಲ್ಲಿದೆ, ಆದರೆ ಇದನ್ನು ದಿನನಿತ್ಯ ಜೀವನದಲ್ಲಿ ಕಾರ್ಯರೂಪಕ್ಕೆ ಹೇಗೆ ತರುವುದು. ಅಸಮಾಧಾನಗೊಳ್ಳುವುದು, ಸಿಟ್ಟಾಗುವುದು ಅಥವಾ ಖಿನ್ನವಾಗುದು ಒಳ್ಳೆಯದಲ್ಲ ಎಂದು ನನಗೆ ಗೊತ್ತು. ಅದನ್ನು ನಾನು ಹೇಗೆ ಮಾಡದೇ ಇರುವುದು/ತಪ್ಪಿಸುವುದು?’

ಇಲ್ಲಿಯೇ ಧ್ಯಾನ ಮತ್ತು ಉಸಿರಾಟದ ಪ್ರಕ್ರಿಯೆಗಳು ಉಪಯುಕ್ತವಾಗುವುದು. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯವಾಗುವುದು ಈ ಉಪಕರಣಗಳು, ಇದರಿಂದ ನೀವು ಒಳಗಿನಿಂದ ಸಂತುಷ್ಟರಾಗಿರುತ್ತೀರಿ. ನೀವು ಸಂತುಷ್ಟರಾಗಿದ್ದಾಗ, ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗುವಂಥ ಕೆಲಸಗಳೇ ನಡೆಯುವುದು ಸಾಧ್ಯ.

ಯಾರು ಅಸಂತುಷ್ಟರಾಗಿರುತ್ತಾರೋ, ಅವರು ತಮಗೆ ಮತ್ತು ಉಳಿದವರಿಗೆ ಕೆಟ್ಟದಾದ ಕೃತ್ಯಗಳನ್ನೇ ಮಾಡಲಾಗುತ್ತದೆ. ಇದುವೇ ನಡೆಯುವಂಥದ್ದು. ಅವರಿಗೆ ಆ ಉದ್ದೇಶವಿದೆಯೋ ಇಲ್ಲವೋ, ಯಾರಾದರೂ ಅಸಂತುಷ್ಟವಾಗಿದ್ದರೆ, ಅವರು ಜೀವನಕ್ಕೆ ಪೂರಕವಲ್ಲದ ಚಟುವಟಿಕೆಗಳನ್ನು ಮಾಡಲು ಬದ್ಧರಾಗುತ್ತಾರೆ. ಇದು ನಾನು ಗಮನಿಸಿದಂಥದ್ದು. ಆನಂದ ನಮ್ಮ ನಿಜವಾದ ಸ್ವಭಾವ. ನಾವು ಸಂತೋಷದ ಅಲೆಗಳನ್ನೆಬ್ಬಿಸಬೇಕು. ಇದು ಕೇವಲ ಹೆಚ್ಚುಗೆಯಿಂದ ಬರುವುದಲ್ಲ.

ಪ್ರ: ಗುರುದೇವ, ನಾನು ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕೆಂದಿದ್ದರೆ, ನಾನು ಬಹಳ ಒತ್ತಡಕ್ಕೊಳಗಾಗುತ್ತೇನೆ, ಉದಾಹರಣೆ ಉದ್ಯೋಗದಲ್ಲಿ. ನನಗೆ ತಪ್ಪಿಸಲಾಗದ ನಿರಂತರ ಒತ್ತಡ ಉಂಟಾಗುತ್ತದೆ, ಅದರಿಂದ ನನಗೆ ಚೆನ್ನಾಗಿ ನಿದ್ದೆ ಮಾಡಲಾಗುವುದಿಲ್ಲ. ಹೇಗೆ ಶಾಂತಿ ಪಡೆಯುವುದು?

ಶ್ರೀ ಶ್ರೀ: ಒತ್ತಡ ಎಂದರೇನು ಎಂದು ನಿಮಗೆ ಗೊತ್ತೇ? ತುಂಬಾ ಕೆಲಸ, ಬಹಳ ಕಡಿಮೆ ಸಮಯ ಮತ್ತು ನಿಶ್ಶಕ್ತಿ, ಅದನ್ನು ಒತ್ತಡ ಎನ್ನುವುದು.

ಹಾಗಾಗಿ ನೀವು ಒಂದಾ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಅಥವಾ ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ನಿಸ್ಸಂಶಯವಾಗಿ ನಿಮಗೆ ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಲಾಗುವುದಿಲ್ಲ, ಅಥವಾ ಸಮಯವನ್ನು ಹೆಚ್ಚಿಸಲಾಗುವುದಿಲ್ಲ, ಆದರೆ ನಿಮಗೆ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ನಿಮ್ಮ ಶಕ್ತಿಯ ಮಟ್ಟ ಇನ್ನೂ ಏರಿದರೆ, ಆಗ ನಿಮಗೆ ನಿಮ್ಮ ಕೆಲಸವನ್ನು ಸುಲಭದಲ್ಲಿ ಮಾಡಬಹುದು.

ಈ ಎಲ್ಲಾ ಉಸಿರಾಟದ ಪ್ರಕ್ರಿಯೆಗಳು ಶಕ್ತಿಯ ಮಟ್ಟವನ್ನೇರಿಸಲು ಸಹಾಯವಾಗುತ್ತವೆ. ಕೇವಲ ಹತ್ತು ನಿಮಿಷ ಕಾಲ ಪ್ರಾಣಾಯಾಮ ಉಸಿರಾಟವನ್ನು ಬೆಳಗ್ಗೆ ಮಾಡಿ, ಮತ್ತೆ ನೀವು ಹೋಗಿ ಯಾವುದೇ ಕೆಲಸವನ್ನು ಮಾಡಬಹುದು. ನೀವು ಕೆಲಸದಿಂದ ಮರಳಿ ಬಂದಾಗ, ಇನ್ನೊಂದು ಹತ್ತು ನಿಮಿಷ ಮಾಡಿ.

ಪ್ರ: ಗುರೂಜಿ, ಚಳಿಗಾಲದಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಲು ನಾವೇನು ಮಾಡಬಹುದು?

ಶ್ರೀ ಶ್ರೀ: ಚಳಿಗಾಲದಲ್ಲಿ ನೀವು ಖಂಡಿತವಾಗಿ ಕೆಲವು ಪ್ರಾಣಾಯಾಮ, ಕೆಲವು ಉಸಿರಾಟದ ಪ್ರಕ್ರಿಯೆಗಳನ್ನು ಮಾಡಬಹುದು. ಶರೀರದಲ್ಲಿ ಎಷ್ಟೊಂದು ಶಕ್ತಿಯಿದೆ ಎಂದರೆ ಅದು ಸಂಪೂರ್ಣ ನ್ಯೂ ಯಾರ್ಕ ಪಟ್ಟಣಕ್ಕೆ ಆರು ತಿಂಗಳ ಕಾಲ, ಅಡಚಣೆಯಿಲ್ಲದೆ ವಿದ್ಯುತ್ ಉತ್ಪಾದನೆ ನೀಡಬಹುದು. ಆ ಶಕ್ತಿಯನ್ನು ಬೆಳೆಸಲು, ನಾವು ಮಾಡಬೇಕಾದದ್ದು ಪ್ರಾಣಾಯಾಮ, ಭಸ್ತ್ರಿಕಾ ಅಷ್ಟೇ.
ನಿಮಗೆ ಗೊತ್ತೇ ನಮ್ಮ ಹೆಬ್ಬೆರಳಲ್ಲಿ ನಮಗೊಂದು ರಹಸ್ಯವಿದೆ?

ನೀವು ಗಮನಿಸಿದ್ದೀರಾ, ಜಗತ್ತಿನಾದ್ಯಂತ ಜನರು ಚಳಿಯಿರುವಾಗ ತಮ್ಮ ಹೆಬ್ಬೆರಳನ್ನು ಕಂಕುಳ ಸಂಧಿಯಲ್ಲೋ, ಜೇಬಿನಲ್ಲೋ ಮುಚ್ಚಿಕೊಳ್ಳುತ್ತಾರೆ? ಇದು ಸ್ವಾಭಾವಿಕ ಪ್ರವೃತ್ತಿ. ನಿಮ್ಮ ಹೆಬ್ಬೆರಳನ್ನು ಬೆಚ್ಚಗಿಟ್ಟರೆ ನಿಮ್ಮ ಶರೀರ ಸ್ವಲ್ಪ ಹೆಚ್ಚು ಉಷ್ಣವನ್ನು ಅನುಭವಿಸುತ್ತದೆ, ಸಂಪೂರ್ಣವಾಗಿ ಅಲ್ಲ, ಸುಮಾರು ಶೇಕಡಾ 6೦ರಷ್ಟು.

ಮಕ್ಕಳ ಆದಿ ಮುದ್ರೆ (ಹೆಬ್ಬೆರಳು ಒಳಕ್ಕೆ ಕಿರುಬೆರಳ ಮೂಲವನ್ನು ಮುಟ್ಟುವಂತೆ ಮಡಚಿಕೊಂಡು, ಉಳಿದ ನಾಲ್ಕು ಬೆರಳು ಅದರ ಮೇಲೆ ಮುಷ್ಟಿಯಾಗಿ ಮಡಚಿಕೊಳ್ಳುವುದು) ಧರಿಸಿಕೊಂಡು ಹುಟ್ಟುತ್ತಾರೆ. ಜನಿಸಿದ ಸಮಯದಿಂದ ಮೂರರ ವಯಸ್ಸಿನ ತನಕ ಮಗುವೊಂದನ್ನು ನೀವು  ಗಮನಿಸಿದರೆ, ಅದು ಎಲ್ಲಾ ಯೋಗಾಸನಗಳನ್ನು ಮಾಡುತ್ತದೆ. ನಿಮಗೆ ಯೋಗ ಶಿಕ್ಷಕರ ಅಗತ್ಯವಿಲ್ಲ; ನೀವು ಒಂದು ಮಗುವನ್ನು ಕೇವಲ ನೋಡಬೇಕು.

ಒಂದು ನವಜಾತ ಶಿಶು ಹೇಗೆ ಮಲಗುತ್ತದೆಂದು ನೀವು ನೋಡಿದ್ದೀರಾ? ಅದು ಚಿನ್ ಮುದ್ರೆ(ತೋರ್ಬೆರಳು ಸೂಕ್ಷ್ಮವಾಗಿ ಹೆಬ್ಬೆರಳನ್ನು ಮುಟ್ಟಿ, ಉಳಿದ ಬೆರಳು ನೇರವಾಗಿರುತ್ತವೆ) ಧರಿಸಿ ನಿದ್ರಿಸುತ್ತದೆ. ಈ ಮುದ್ರೆಯಲ್ಲಿ ಚೈತನ್ಯವು ಜಾಗೃತಿಯಲ್ಲಿದ್ದು ಪ್ರಾಣವು ಹೃದಯಭಾಗದತ್ತ ಹರಿಯುತ್ತದೆ. ಮಕ್ಕಳು ಚಿನ್ಮುದ್ರೆ ಅಥವಾ ಚಿನ್ಮಯೀ ಮುದ್ರೆಯಲ್ಲಿ(ತೋರ್ಬೆರಳ ಹದವಾಗಿ ಹೆಬ್ಬೆರಳನ್ನು ಮುಟ್ಟುತ್ತಿದ್ದು ಉಳಿದ ಬೆರಳುಗಳು ಮಡಚಿರುವುದು) ಮಲಗುತ್ತಾರೆ. ಆದಿ ಮುದ್ರೆಯು ನಿಮ್ಮ ಶರೀರ ತುಂಬ ತಂಪಾಗಿದ್ದಾಗ ನಿಮಗೆ ಪ್ರಯೋಜನವಾಗುತ್ತದೆ. ಈ ಸ್ಥಿತಿಯಲ್ಲಿ ಸ್ವಲ್ಪ ಉಸಿರಾಟ ಮಾಡಿ.

ಚಳಿಗಾಲದಲ್ಲಿ ನಿಮ್ಮಷ್ಟಕ್ಕೆ ನಿಮ್ಮ ವಾಸ್ತವ ಅಸ್ತಿತ್ವವಿಲ್ಲದ "ಇ" ಲೋಕದಲ್ಲಿ, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ನೊಂದಿಗೆ ಕುಳಿತಿರಬೇಡಿ. ನಿಮ್ಮ ಮನೆಗಳ ಹೊರಗೆ ಬನ್ನಿ, 2೦-4೦ ಜನರ ಜೊತೆಗೆ ಕುಳಿತುಕೊಳ್ಳಿ, ಹಾಡಿ ಮತ್ತು ಆಚರಿಸಿ. ಆಗ ನೀವು ಬೇಸರಗೊಳ್ಳಲು ಅಥವಾ ಖಿನ್ನತೆಗೊಳಗಾಗಲು ಸಾಧ್ಯವೇ ಇಲ್ಲ. ಅದು ಅವಶ್ಯಕವಾಗಿದೆ ಎಂದು ನನ್ನ ಅಭಿಪ್ರಾಯ. ಪ್ರಾಚೀನ ಕಾಲದಲ್ಲಿ ಜನರು ಮಾಡುತ್ತಿದ್ದುದು ಅದು. ಒಂದು ಬಯಲುರಿ ಸಿದ್ಧಪಡಿಸಿ, ಅದರ ಸುತ್ತ ಕುಳಿತು ಮಾತುಕತೆ ಮತ್ತು ಹರಟೆ ನಡೆಸುತ್ತಿದ್ದರು.

ಚಳಿ ಹವೆ ಧ್ಯಾನಕ್ಕೂ ಒಳ್ಳೆಯದು. ಪ್ರಾಕೃತಿಯೂ ಸ್ಥಿರವಾಗಿರುವುದರಿಂದ, ಮನಸ್ಸು ಬಹಳ ಸ್ಥಿರವಾಗುತ್ತದೆ.
ಜನರು ಧ್ಯಾನಕ್ಕೆಂದು ಹಿಮಾಲಯಕೆ ಹೋಗುತ್ತಿದ್ದುದು ಯಾಕೆಂದರೆ ಪ್ರಕೃತಿಯು ನಿಶ್ಶಬ್ದ ಮತ್ತು ಶಾಂತವಾಗಿರುತ್ತದೆ. ಛಟುವಟಿಕೆ ಸ್ವಾಭಾವಿಕವಾಗಿ ಶಾಂತವಾಗುತ್ತಿದಂತೆ, ತಪ್ಪುಗಳು ಆಗುವುದಿಲ್ಲ. ಮನಸ್ಸು ಬಹಳ ಶಾಂತವಾಗಿ, ಅದು ಒಳಗಿನಿಂದ ಪ್ರಸನ್ನವಾಗುತ್ತದೆ.

ಪ್ರ: ನಾವು ಏತಕ್ಕೆ ಜನಿಸಿದ್ದೇವೆ? ನಾವು ತಿನ್ನುತ್ತೇವೆ, ಕುಡಿಯುತ್ತೇವೆ, ಮತ್ತು ಟಿ.ವಿ. ನೋಡುತ್ತೇವೆ; ಸಂಬಂಧಗಳ ಒಳಗೂ ಹೊರಗೂ ಹೋಗುತ್ತೇವೆ. ಜೀವನದ ಅರ್ಥವೇನು?

ಶ್ರೀ ಶ್ರೀ: ಇದೊಂದು ಬಹಳ ಮುಖ್ಯ ಪ್ರಶ್ನೆ. ಇದರ ಉತ್ತರ ಯಾರಿಗೆ ಗೊತ್ತಿದೆಯೋ ಅವರು ನಿಮಗೆ ಉತ್ತರ ನೀಡುವುದಿಲ್ಲ. ನಿಮಗೆ ಯಾರಾದರೂ ಉತ್ತರ ನೀಡಿದರೆ, ಅವರಿಗೆ ಅದು ತಿಳಿದಿಲ್ಲ. ಯಾಕೆ ಗೊತ್ತಾ? ಯಾಕೆಂದರೆ ಈ ಮೂಲ ಪ್ರಶ್ನೆಯೇ ಒಂದು ಗಾಡಿಯಂತೆ, ಅದು ನಿಮ್ಮನ್ನು ಮನೆಗೆ ಕರೆದೊಯ್ಯುವಂಥದ್ದು. ಇದು ನಿಮ್ಮ ಜೀವನಕ್ಕೆ ಇಂಧನ. ನೀವು ಮತ್ತೆ ಮತ್ತೆ ಕೇಳುತ್ತಿದ್ದಾಗ, ’ಜೀವನದ ಅರ್ಥವೇನು? ಜೀವನದ ಉದ್ದೇಶವೇನು?’ ಆಗ ಅಸಂಗತವಾದುದ್ದೆಲ್ಲಾ ಬೇರ್ಪಡೆಯಾಗುತ್ತದೆ, ಮತ್ತು ನಿಮಗೆ ಮುನ್ನಡೆಯಲು ಎಲ್ಲವೂ ಇನ್ನೂ ಸ್ಪಷ್ಟವಾಗುತ್ತದೆ. ಹಾಗಾಗಿ, ನಾನು ನಿಮಗೆ ಈ ಉತರ ಕೊಡದಿರುವುದೇ ಲೇಸು, ಆದರೆ ಇದೊಂದು ಬಹಳ ಮುಖ್ಯ ಪ್ರಶ್ನೆ.

ಈ ಮೂಲ ಪ್ರಶ್ನೆಯೇ ನಿಮ್ಮನ್ನು ಜೀವನದ ನಿಜವಾದ ಪ್ರಯಾಣಕ್ಕೆ ಹೊರಡಿಸುತ್ತದೆ. ಅದಕ್ಕಿಂತ ಮೊದಲು, ನೀವು ಕೇವಲ ಅಸ್ತಿತ್ವದಲ್ಲಿರುವುದಷ್ಟೆ, ಆದರೆ ಈ ಪ್ರಶ್ನೆ ನಿಮ್ಮನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ತೊಡಗಿಸುತ್ತದೆ.

ಪ್ರ: ನಮ್ಮ ಆಹಾರವನ್ನು ಸುಧಾರಿಸಿದಾಗ ಮತ್ತು ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ಮಾಡಿದಾಗ, ಕನಸುಗಳು ಇನ್ನೂ ಸ್ಪಷ್ಟವಾಗುತ್ತವೆಯೇ?

ಶ್ರೀ ಶ್ರೀ: ಹೌದು. ಕನಸುಗಳ ಗುಣಮಟ್ಟ ಖಂಡಿತ ಸುಧಾರಿಸುತ್ತದೆ.

ಪ್ರ: ನಮಗೆ ಕೆಲವೊಮ್ಮೆ ನಮ್ಮ ಕನಸನ್ನು ನೆನಪುಮಾಡಿಕೊಳ್ಳಲು ಆಗುವುದಿಲ್ಲ, ಯಾಕೆ? ಅದು ನಮ್ಮ ಆಹಾರದ ಗುಣವೇ, ಅಥವಾ ನಾವು ಧ್ಯಾನ ಮಾಡುತ್ತಿಲ್ಲವೇ?

ಶ್ರೀ ಶ್ರೀ: ನಮಗೆ ಎಲ್ಲಾ ಕನಸುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ. ನಮಗವು ನೆನಪಾಗದೇ ಇರುವುದು ಒಳ್ಳೆಯದು. ಆಗ, ನಾವು ಇನ್ನೂ ಹೆಚ್ಚು ವರ್ತಮಾನ ಕ್ಷಣದಲ್ಲಿ ಇರುತ್ತೇವೆ. ಒಂದು ಕನಸು ಒಂದು ಕನಸಷ್ಟೆ, ಅದು ಹೋಗಿಬಿಟ್ಟಿದೆ.

ಪ್ರ: ನಾವು ಹಲವು ಮಕ್ಕಳಿಗೆ ಒಗ್ಗದಿಕೆ (ಅಲರ್ಜಿ) ಮತ್ತು ದಣಿದು ಹೋದ ರೋಗ ನಿರೋಧಕ ಶಕ್ತಿ ಇರುವುದನ್ನು ನೋಡುತ್ತೇವೆ. ನಮ್ಮ ಜೀವನ ಶೈಲಿಯಲ್ಲಿ ಏನನ್ನಾದರೂ ಬದಲಾಯಿಸಿ ಅವರಿಗೆ ಸಹಾಯವಾಗಬಹುದಾದದ್ದು ಏನಾದರೂ ಇದೆಯೆ?

ಶ್ರೀ ಶ್ರೀ: ಖಂಡಿತ. ಮಕ್ಕಳನ್ನು ಟಿ.ವಿ. ಮತ್ತು ವಿಡಿಯೋ ಗೇಮ್ ಗಳ ಮುಂದೆ ಬಹಳ ಹೊತ್ತು ಕೂರಿಸಬೇಡಿ. ಅವರ ಪುಟ್ಟ ಮಿದುಳುಗಳು ಆ ಛಾಪುಗಳ ಸುರಿಮಳೆಯಿಂದ ಬಹಳ ಕಾಲ ಪ್ರಭಾವಿತಗೊಳ್ಳುತ್ತದೆ. ಅದು ಅವರ ಕಣ್ಣಿನ ದೃಷ್ಟಿಯನ್ನು ಪ್ರಭಾವಿಸುತ್ತದೆ ಮತ್ತು ಅಟ್ಟೆನ್ಶನ್ ಡೆಫಿಯೆನ್ಸಿ ಸಿನ್ಡ್ರೋಂ ಹಾಗೂ ಇತರ ತೊಂದರೆಗಳನ್ನು ಉಂಟುಮಾಡುತ್ತೆದೆ.
ಹಾಗಾಗಿ ಮಕ್ಕಳು ತುಂಬಾ ಸಮಯ ಟಿ.ವಿ.ಯಮುಂದೆ ಕಳೆಯಬಾರದು, ಹೆಚ್ಚೆಂದರೆ ದಿನಕ್ಕೆ ಒಂದು ಘಂಟೆ ಕಾಲ ಕಳೆಯಬಹುದೇನೋ. ಈಗ, ಅವರು ಎದ್ದ ಕ್ಷಣ ಟಿ.ವಿ. ಆನ್ ಆಗುತ್ತದೆ, ಅವರು ಕೂತು ಕಾರ್ಟೂನ್ ನೋಡುತ್ತಾರೆ. ಅವರು ಶಾಲೆಗೆ ಹೋಗುತ್ತಾರೆ, ಮರಳಿ ಬರುತ್ತಾರೆ, ಪುನಃ ಕಾರ್ಟೂನ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರು ರಾತ್ರಿಯ ಊಟವನ್ನು ಕಾರ್ಟೂನ್ ಗಳ ಮುಂದೆ ಮಾಡುತ್ತಾರೆ. ನಾನು ಹೇಳಿದ್ದು ಸರಿಯೇ?

ನಮ್ಮ ಮಕ್ಕಳಿಗಾಗಿ ನಾವಿದನ್ನು ತಪ್ಪಿಸಬೇಕು. ಇದು ನನ್ನ ಅಭಿಪ್ರಾಯ, ಮತ್ತು ಬಹಳ ಬಾಲ ಮನೋವಿಜ್ಞಾನಿಗಳೂ ಇದನ್ನು ಒಪ್ಪುತ್ತಾರೆ.

ಪ್ರ: ಗುರೂಜಿ, ಮಕ್ಕಳು ವಿಡಿಯೋ ಗೇಮ್ ಗಳನ್ನು ಆಡಬಾರದು ಎಂದು ನೀವು ಹೇಳುತ್ತಿದ್ದೀರೇ?

ಶ್ರೀ ಶ್ರೀ: ಅವರು ಎಂದೂ ಯಾವುದೇ ವಿಡಿಯೋ ಗೇಮ್ ಗಳನ್ನು ಆಡಬಾರದು ಎಂದು ನಾನು ಹೇಳುತ್ತಿಲ್ಲ. ಮಕ್ಕಳು ಆಡಬೇಕಾದ ಬಹಳ ಬುದ್ಧಿ-ಕೆರಳಿಸುವ ಆಟಗಳಿವೆ. ನನ್ನ ಸಲಹೆಯೆಂದರೆ ನಾವು ಹಿಂಸಾತ್ಮಕ ವಿಡಿಯೋ ಗೇಮ್ ಗಳನ್ನು ನಿವಾರಿಸಬೇಕು. ಅವರ ಪುಟ್ಟ ಮನಸ್ಸಿಗೆ ಕಂಪ್ಯೂಟರ್ ನ ಅಸ್ತಿತ್ವವಿಲ್ಲದ ಜಗತ್ತಿಗೂ ವಾಸ್ತವ ಜಗತ್ತಿಗೂ ವ್ಯತ್ಯಾಸ ತಿಳಿದಿಲ್ಲ. ಕಂಪ್ಯೂಟರ್ ನ ಜಗತ್ತಿನಲ್ಲಿ ಶುಟ್ ಮಾಡುತ್ತಿದಂತೆ ಜನರು ಮತ್ತೆ ಎದ್ದು ಬರುತ್ತಾರೆ. ಹಾಗೆ, ಕಂಪ್ಯೂಟರ್ ಜಗತ್ತಿನಲ್ಲಿ ನಡೆದಂತೆ ನಿಜವಾದ ಜಗತ್ತಿನಲ್ಲಿ ಅವರು ಶೂಟ್ ಮಾಡಿದರೆ ಜನರು ಮತ್ತೆ ಏಳುತ್ತಾರೆ ಎಂದು ಅವರು ಯೋಚಿಸುತ್ತಾರೆ. ಬಹಳ ಅಪರಾಧಗಳು ನಡೆಯುವುದು ಯಾಕೆಂದರೆ ಅವರ ಯೋಚನಾ ಸಂಸ್ಕಾರವು ಕಲ್ಪನಾ ಲೋಕ ಹಾಗೂ ನಿಜವಾದ ಜಗತ್ತಿನ ನಡುವಿನಲ್ಲಿ ಅಸ್ಪಷ್ಟಗೊಳ್ಳುತ್ತದೆ.

ನಾನು ಆಟೋಟಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ. ಮಕ್ಕಳು ಆಟಗಳನ್ನು ಕಲಿಯಬೇಕು. ನಾನು ಮಕ್ಕಳು ವಿಡಿಯೋ ಗೇಮ್ ಗಳನ್ನು ಆಡುವುದಾಗಲಿ ಅಥವಾ ಟಿ.ವಿ. ನೋಡುವುದರ ವಿರುದ್ಧವಾಗಿಲ್ಲ, ಆದರೆ ಬಹಳ ಹೊತ್ತು ಅಲ್ಲ; ದಿನ್ನಕ್ಕೊಂದು ಗಂಟೆ ಮಾತ್ರ.


a