೨೬ ಮೇ ೨೦೧೩

ಶ್ರೀ ಶ್ರೀ ರವಿ ಶಂಕರ್: ಕೇಳು, ಶ್ರದ್ಧೆಯೆಂಬುದು ಒಂದು ಬೆಟ್ಟದಂತೆ ಮತ್ತು ಸಂಶಯಗಳು ಮೋಡಗಳಂತೆ. ಯಾವುದೇ ಮೋಡಕ್ಕೆ ಯಾವತ್ತಾದರೂ ಒಂದು ಬೆಟ್ಟವನ್ನು ಅಲುಗಾಡಿಸಲು ಸಾಧ್ಯವೇ? ಅದು ಅಸಾಧ್ಯ. ಅದು ಕೆಲವೊಮ್ಮೆ ಬೆಟ್ಟವನ್ನು ಆವರಿಸುತ್ತದೆ ಮತ್ತು ನಿಮಗೆ ಬೆಟ್ಟವನ್ನು ನೋಡಲು ಸಾಧ್ಯವಾಗುವುದಿಲ್ಲ. ಅಷ್ಟೇ. ಆದರೆ ಒಂದು ಬೆಟ್ಟವು ಚಲಿಸುತ್ತಿರುವ ಮೋಡಗಳಿಂದಾಗಿ ಬೀಳಲು ಯಾವತ್ತೂ ಸಾಧ್ಯವಿಲ್ಲ. ಅವುಗಳು ಅದನ್ನು ಕೇವಲ ಸ್ವಲ್ಪ ಹೊತ್ತಿನವರೆಗೆ ಮಂಕುಗೊಳಿಸುತ್ತವೆ. ಚಿಂತಿಸಬೇಡ!
ಪ್ರಶ್ನೆ: ಗುರುದೇವ, ಮುಕ್ತಿಯನ್ನು ಹೊಂದಬೇಕಾದರೆ ಪ್ರತಿಯೊಬ್ಬ ಮನುಷ್ಯನೂ ಒಂದು ಸಲವಾದರೂ ಭಾರತದಲ್ಲಿ ಜನ್ಮ ತಾಳಬೇಕೆಂಬ ಒಂದು ಹೇಳಿಕೆಯಿದೆ. ಅದು ಯಾಕೆ ಹಾಗೆ?
ಶ್ರೀ ಶ್ರೀ ರವಿ ಶಂಕರ್: ಇಲ್ಲ, ಈ ರೀತಿಯೇನೂ ಎಲ್ಲೂ ಬರೆದಿಲ್ಲ. ಸಂಪೂರ್ಣ ಪ್ರಪಂಚವು ನಿಮ್ಮದು, ಆಧ್ಯಾತ್ಮದಲ್ಲಿ ಯಾವುದೇ ಸೀಮೆಯಿಲ್ಲ. ’ಸ್ಕ್ರುನ್ವಂತೋ ವಿಶ್ವಮಾರ್ಯಂ’, ಸಂಪೂರ್ಣ ಪ್ರಪಂಚವನ್ನು ನಾವು ಒಂದು ಶ್ರೇಷ್ಠವಾದ ಹಾಗೂ ಆದರ್ಶ ಸಮಾಜವನ್ನಾಗಿ ಮಾಡೋಣ.
ಪ್ರಶ್ನೆ: ಗುರುದೇವ, ನನ್ನ ಹೆತ್ತವರು ಜ್ಯೋತಿಷ್ಯವನ್ನು ಆಳವಾಗಿ ಅನುಸರಿಸುತ್ತಾರೆ ಮತ್ತು ಅದನ್ನು ಮಾಡಲು ನನ್ನನ್ನೂ ಬಲವಂತಪಡಿಸುತ್ತಾರೆ. ನಾನದನ್ನು ಅನುಸರಿಸಬೇಕೇ ಅಥವಾ ನಕಾರಾತ್ಮಕತೆಯನ್ನು ತೊಡೆದುಹಾಕಲು ಸುದರ್ಶನ ಕ್ರಿಯೆ ಸಾಕೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಇದು ಸಾಕು. ಜ್ಯೋತಿಷ್ಯವೆಂಬುದು ಒಂದು ವಿಜ್ಞಾನ, ಪ್ರಪಂಚಕ್ಕೆ ಒಂದು ಪ್ರಾಚೀನ ಕೊಡುಗೆ, ಆದರೆ ಅದನ್ನು ಅತಿಯಾಗಿ ನಂಬುವುದು ಕೂಡಾ ಅಜ್ಞಾನವಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಕೂಡಾ ಅಜ್ಞಾನವಾಗಿದೆ. ಅದರ ಬಗೆಗಿನ ಜ್ಞಾನವು ಒಳ್ಳೆಯದು, ಆದರೆ ಎಲ್ಲಾ ಜ್ಯೋತಿಷ್ಯದ ಸಮಸ್ಯೆಗಳಿಗೆ ’ಓಂ ನಮಃ ಶಿವಾಯ’ ಎಂಬುದು ಅತ್ಯುತ್ತಮ ಪರಿಹಾರವಾಗಿದೆ.
ಪ್ರಶ್ನೆ: ಯೆಸ್! ಕೋರ್ಸ್ ಮಾಡಿದ ಬಳಿಕ ನಾನು ಮಾಂಸಾಹಾರವನ್ನು ತ್ಯಜಿಸಿದೆ, ಆದರೆ ನನ್ನ ಹೆತ್ತವರು ಮತ್ತು ಇತರರು ಅದನ್ನು ತಿನ್ನುವಂತೆ ನನ್ನನ್ನು ಒತ್ತಾಯಪಡಿಸುತ್ತಿರುತ್ತಾರೆ. ನಾನೇನು ಮಾಡಬೇಕು? ನಿಜವಾಗಿಯೂ ನಾನು ಇದನ್ನು ಮಾಡಲು ಬಯಸುವುದಿಲ್ಲ.
ಶ್ರೀ ಶ್ರೀ ರವಿ ಶಂಕರ್: ಹೌದು, ನೀನು ಏನನ್ನು ಮಾಡಲು ಬಯಸುವುದಿಲ್ಲವೋ, ಮಾಡಬೇಡ. ಅದಕ್ಕೆ ಬದ್ಧನಾಗಿರು. ಈ ವಿಷಯದಲ್ಲಿ ನೀನು ನಿನ್ನ ಹೆತ್ತವರ ಮಾತನ್ನು ಕೇಳಬೇಡ. ಅವರು ಹೇಳುವ ಇತರ ವಿಷಯಗಳನ್ನು ಕೇಳು.
ಪ್ರಶ್ನೆ: ಗುರುದೇವ, ಕೆಲವು ಕ್ಷಿಪ್ರ ಪ್ರಶ್ನೆಗಳು (ರಾಪಿಡ್ ಫಯರ್ ಕ್ವೆಶ್ಚನ್ಸ್)
ಆರ್ಟ್ ಎಕ್ಸೆಲ್?
ಎಕ್ಸೆಲ್ಲೆಂಟ್ ಆರ್ಟ್ (ಅತ್ಯುತ್ತಮ ಕಲೆ).
ಗುರು?
ಅನಿವಾರ್ಯ.
ಸುದರ್ಶನ ಕ್ರಿಯೆ?
ಮನುಕುಲಕ್ಕೆ ಉಡುಗೊರೆ.
ಒಬ್ಬ ಆರ್ಟ್ ಆಫ್ ಲಿವಿಂಗ್ ಶಿಕ್ಷಕ?
ನಡತೆಗೆ ಉದಾಹರಣೆ.
ಹೃದಯದ ಒಡೆತ?
ಇಲ್ಲಿ ಆಗುವುದಿಲ್ಲ!
ಕಲಿಯುವಿಕೆ?
ಜೀವನಪರ್ಯಂತ ಮಾಡಲಿರುವ ವಿಷಯ.
ದೇಶಭಕ್ತಿ?
ಈ ಸಮಯದಲ್ಲಿ ಮತ್ತು ಈ ಕ್ಷಣದಲ್ಲಿ ಅತ್ಯಂತ ಹೆಚ್ಚು ಅಗತ್ಯವಿರುವುದು.
ಒಂದು ವಿಶಾಲ ದೃಷ್ಟಿ?
ಯಾವುದನ್ನು ಶಿಕ್ಷಣವು ನಿಮಗೆ ಕೊಡಬೇಕೋ ಅದು.
ಧೂಮಪಾನ?
ಜೀವನವನ್ನು ಸುಡುವ ಅಸ್ವಸ್ಥತೆ.
ಓಜಸ್ವೀಟಾ?
ಸುಮ್ಮನೆ ಅದನ್ನು ಕುಡಿಯಿರಿ!
ಕ್ರಿಕೆಟ್?
ಇವತ್ತು ದೊಡ್ಡ ತೊಂದರೆಯಲ್ಲಿದೆ!
ಹೆತ್ತವರು?
ಅವರನ್ನು ಗೌರವಿಸಿ.
ಸೇವೆ?
ಅದನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿ.
ಮುಗುಳ್ನಗೆ?
ಅದನ್ನು ಇಟ್ಟುಕೊಳ್ಳಿ ಮತ್ತು ಎಲ್ಲರಲ್ಲೂ ಅದನ್ನು ಮೂಡಿಸಿ.
ಹದಿಹರೆಯದವರು?
ಹೆತ್ತವರಿಗೆ ಸವಾಲು, ತಮಗೆ ಸಮಸ್ಯೆ! ಆದರೆ ನೀವದನ್ನು ದಾಟುವಿರಿ.
ಯಶಸ್ಸು?
ಪ್ರಪಂಚವು ಅದರ ಹಿಂದೆ ಒಡುತ್ತಿದೆ, ಆದರೆ ಅದು ನಮ್ಮ ಹಿಂದೆ ಓಡುತ್ತದೆ!
ಕೋಪ?
ಕೆಲಸವನ್ನು ಶೀಘ್ರವಾಗಿ ಮಾಡಲು ಒಂದು ಒಳ್ಳೆಯ ಸಲಕರಣೆಯಾಗಿ ಉಪಯೋಗಿಸಲ್ಪಡಬೇಕು.
ದುಡುಕಿನ ವಾಹನ ಚಾಲನೆ?
ದುರದೃಷ್ಟಕರ.
ಗುರಿಗಳು?
ಅವುಗಳನ್ನು ಇಟ್ಟುಕೊಳ್ಳಿ ಮತ್ತು ನಂತರ ಅವುಗಳನ್ನು ಬದಲಾಯಿಸಿ. ಒಂದು ಗುರಿಯನ್ನಿಟ್ಟುಕೊಂಡು, ನಂತರ ಅದನ್ನು ಬದಲಾಯಿಸಿ, ಯಾಕೆಂದರೆ ಅದೊಂದು ಬಹಳ ಚಿಕ್ಕ ಗುರಿಯಾಗಿ ನಿಮಗೆ ಕಂಡುಬರುತ್ತದೆ, ಆಗ ನೀವು ಇನ್ನೂ ದೊಡ್ಡದಾದ ಒಂದು ಗುರಿಯತ್ತ ದೃಷ್ಟಿಯಿರಿಸಿ.
ಭಕ್ತಿ?
ಭಾಗ್ಯವಂತರು ಹೊಂದಿರುವುದು.
ಸ್ನೇಹಿತರು?
ನಿಮ್ಮ ನ್ಯೂನತೆಗಳ ಕಡೆಗೆ ಬೆರಳು ಮಾಡಿ ತೋರಿಸುವವರು.
ಪರೀಕ್ಷೆಗಳು?
ಒಂದು ನಿರಾಳವಾದ ಮನಸ್ಸಿನಿಂದ ಅವುಗಳನ್ನು ಚೆನ್ನಾಗಿ ಮಾಡಿ!
ಟೀಮ್ ವರ್ಕ್?
ವೇಗವಾದ ಪ್ರಗತಿ ಮತ್ತು ಉತ್ಪಾದಕತೆಗೆ ಅಗತ್ಯವಾದುದು.
ಆಟಗಳು?
ಒಬ್ಬರು ಆಟವಾಡಬೇಕು. ಕೆಲವೊಮ್ಮೆ ಗೆಲ್ಲಬೇಕು ಮತ್ತು ಕೆಲವೊಮ್ಮೆ ಇತರರು ಗೆಲ್ಲುವಂತೆ ಮಾಡಬೇಕು.
ಶ್ರೀ ಶ್ರೀ?
ಯಾವತ್ತೂ ನಿಮ್ಮೊಂದಿಗೆ ಮತ್ತು ನಿಮಗಾಗಿ ಇರುವರು!
ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಪುಸ್ತಕ ಯಾವುದು?
ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಓದುವುದಿಲ್ಲ. ಮನುಷ್ಯನ ಮನಸ್ಸು ಅಥವಾ ವಿಶ್ವವು ನನ್ನ ಅಚ್ಚುಮೆಚ್ಚಿನ ಪುಸ್ತಕವಾಗಿದೆ.
ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಯಾರು?
ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದು ಮಗು!
ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಹಾಡು ಯಾವುದು?
ಶ್ರೀ ಶ್ರೀ ರವಿ ಶಂಕರ್: ವಂದೇ ಮಾತರಂ
ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಹೂ ಯಾವುದು?
ಶ್ರೀ ಶ್ರೀ ರವಿ ಶಂಕರ್: ಅರಳುವ ಪ್ರತಿಯೊಂದು ಹೂ!
ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ದೇಶ ಯಾವುದು?
ಶ್ರೀ ಶ್ರೀ ರವಿ ಶಂಕರ್: ಈ ಭೂಮಿಯ ಮೇಲೆ ನಾನು ಎಲ್ಲೆಲ್ಲಾ ಇರುತ್ತೇನೋ, ಆ ಸಮಯದಲ್ಲಿ ಆ ದೇಶವು ನನಗೆ ಅಚ್ಚುಮೆಚ್ಚು, ಅದಕ್ಕಾಗಿಯೇ ನಾನು ಅಲ್ಲಿರುವುದು!