ಬುಧವಾರ, ಮೇ 15, 2013

ಏಕೈಕ ಚೇತನ

ಬೆಂಗಳೂರು, ಭಾರತ
೧೫ ಮೇ ೨೦೧೩

ವತ್ತು ಶಂಕರ ಜಯಂತಿಯಾಗಿದೆ. ಅಂದರೆ ಆದಿ ಶಂಕರಾಚಾರ್ಯರ ಜನ್ಮ ದಿನ. ಆದಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಬೋಧನೆಗಳನ್ನು ಪ್ರಚಾರ ಮಾಡಿದರು. ಅದ್ವೈತದ ಪ್ರಕಾರ, ಎಲ್ಲವೂ ಒಂದೇ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ. ಅದ್ವೈತದಲ್ಲಿ, ’ಸರ್ವಂ ಖಲ್ವಿದಂ ಬ್ರಹ್ಮಂ’ ಎಂದು ಹೇಳಲಾಗಿದೆ, ಅಂದರೆ, ಎಲ್ಲವೂ ಬ್ರಹ್ಮನ್ ಅಥವಾ ಒಂದು ಚೇತನದಿಂದ ಮಾತ್ರ ಮಾಡಲ್ಪಟ್ಟಿದೆ; ಅದೆಲ್ಲವೂ ವಾಸುದೇವ (ಕೃಷ್ಣ ಪರಮಾತ್ಮನಿಗಿರುವ ಇನ್ನೊಂದು ಹೆಸರು) ಎಂದು ಅರ್ಥ.

ಹಾಗಾಗಿ, ನೀವು ನೋಡುವ ವೈವಿಧ್ಯತೆಯು ವಾಸ್ತವವಲ್ಲ. ವಾಸ್ತವವೆಂದರೆ, ಯಾವುದು ಕಾಣಿಸುವುದಿಲ್ಲವೋ ಅದು.
ಅದು ನಮಗೆ ಸಿಗುತ್ತಿದ್ದ, ಪ್ರಾಣಿಗಳ ಆಕಾರದ ಬಿಸ್ಕತ್ತುಗಳಂತೆ. ಆ ಬಿಸ್ಕತ್ತುಗಳನ್ನು ನೀವು ನೋಡಿರುವಿರಾ? ಅವುಗಳೆಲ್ಲಾ ಬೇರೆ ಬೇರೆ ಆಕಾರಗಳಲ್ಲಿರುತ್ತವೆ - ಒಂದು ಬೆಕ್ಕು, ನಾಯಿ, ಕುದುರೆ, ಆನೆ. ಅಂತಹ ಬಿಸ್ಕತ್ತುಗಳೊಂದಿಗೆ ಆಟವಾಡಲು ಮಕ್ಕಳು ಇಷ್ಟಪಡುತ್ತಾರೆ. ಬೇರೆ ಬೇರೆ ಗಾತ್ರಗಳ ಮತ್ತು ಆಕಾರಗಳ ಈ ಬೇರೆ ಬೇರೆ ಬಿಸ್ಕತ್ತುಗಳನ್ನು ತಯಾರಿಸಲು ಅವೇ ಸಾಮಾನುಗಳನ್ನು ಬಳಸಲಾಗುತ್ತದೆ. ಇವತ್ತು ಚಾಕೊಲೇಟ್‌ನಲ್ಲಿ ಕೂಡಾ ವಿವಿಧ ಪ್ರಾಣಿಗಳ ಆಕಾರಗಳನ್ನು ಮಾಡಿರುವುದನ್ನು ನೀವು ನೋಡುತ್ತೀರಿ. ಆದರೆ ಕೊನೆಯದಾಗಿ ಅವೆಲ್ಲವೂ ಒಂದೇ ಚಾಕೋಲೇಟ್‌ನಿಂದಲೇ ಮಾಡಲ್ಪಟ್ಟಿರುತ್ತವೆ, ಅಲ್ಲವೇ? ಮತ್ತು ಅವುಗಳಲ್ಲಿ ಎಲ್ಲವೂ ಹೆಚ್ಚು ಕಡಿಮೆ ಒಂದೇ ರುಚಿಯನ್ನು ಹೊಂದಿರುತ್ತವೆ. ಆದರೆ ಈ ಚಾಕೊಲೇಟುಗಳಲ್ಲಿರುವ ವೈವಿಧ್ಯತೆಯನ್ನು ನೋಡಿ ಮಕ್ಕಳು ಆನಂದಿಸುತ್ತಾರೆ. ಹೀಗೆ, ಅವುಗಳೆಲ್ಲವೂ ಬೇರೆ ಬೇರೆಯಾಗಿ ಕಂಡರೂ ಕೂಡಾ,
ಮೂಲಭೂತವಾಗಿ ಅವುಗಳು ಒಂದೇ. ನಾವು ನೋಡುವುದೆಲ್ಲವೂ ಪರಸ್ಪರ ಭಿನ್ನವಾಗಿ ಕಾಣಿಸುವುದು ಮಾಯೆಯಿಂದಾಗಿ, ಆದರೆ ಅದು ನಿಜವಲ್ಲ.

ಆದಿಶಂಕರರ ಒಂದು ಕಥೆಯಿದೆ.

ಒಮ್ಮೆ ಆದಿಶಂಕರರು ಹೇಳುತ್ತಿದ್ದರು, ’ಈ ಸಂಪೂರ್ಣ ಪ್ರಪಂಚ, ಅಂದರೆ ಎಲ್ಲವೂ ಏನೂ ಅಲ್ಲ.’ ಹೀಗೆ ಅವರು, ’ಇದೆಲ್ಲವೂ ಏನೂ ಅಲ್ಲ’ ಎಂದು ಹೇಳುತ್ತಿದ್ದರು. ಆಧುನಿಕ ಕಾಲದ ವಿಜ್ಞಾನಿಗಳು, ’ಈ ಎಲ್ಲಾ ವಸ್ತುಗಳು ಏನೂ ಅಲ್ಲ, ಯಾಕೆಂದರೆ ಅವುಗಳೆಲ್ಲವೂ ಕೇವಲ ತರಂಗಗಳು’ ಎಂದು ಹೇಳುವಂತೆ. ಅವರು ’ಎಲ್ಲವೂ ಏನೂ ಅಲ್ಲ’ ಎಂದು ಹೇಳುತ್ತಿರುವಂತೆಯೇ ಒಂದು ಹುಚ್ಚು ಹಿಡಿದ ಆನೆಯು ಅವರ ಕಡೆಗೆ ಓಡಲು ಪ್ರಾರಂಭಿಸಿತು. ಹೀಗಾಗಿ ಶಂಕರರು ರಕ್ಷಣೆ ಪಡೆಯಲು ಓಡಿದರು.

ಆಗ ಯಾರೋ ಹೇಳಿದರು, ’ಓ, ಆ ಆನೆಯು ಏನೂ ಅಲ್ಲ. ನೀವು ಯಾಕೆ ಓಡುತ್ತಿರುವಿರಿ?’

ಆಗ ಶಂಕರರು ಹೇಳಿದರು, ’ಆನೆಯು ಏನೂ ಅಲ್ಲ ಮತ್ತು ನನ್ನ ಓಟ ಕೂಡಾ ಏನೂ ಅಲ್ಲ.’

ಅಂತಹುದಾಗಿತ್ತು ಆದಿ ಶಂಕರಾಚಾರ್ಯರ ಅಗಾಧವಾದ ಬುದ್ಧಿಶಕ್ತಿ ಮತ್ತು ಇಂತಹವರು ನಿಮಗೆ ವಿರಳವಾಗಿ ಸಿಗುವರು.

ಸಾವಿರ ವರ್ಷಗಳ ಮೊದಲು ಅವರು ಏನನ್ನು ಹೇಳಿದರೋ ಅದು, ಇವತ್ತು ಆಧುನಿಕ ವಿಜ್ಞಾನವು ನಮಗೆ ಏನನ್ನು ಹೇಳುವುದೋ ಅದರೊಂದಿಗೆ ಸರಿಯಾಗಿ ಹೊಂದುತ್ತದೆ. ಇದನ್ನು ನಾವು, ಸಾಪೇಕ್ಷತಾ ಸಿದ್ಧಾಂತಗಳಂತಹ ಬೇರೆಯ ಹೆಸರುಗಳು ಮತ್ತು ಸಿದ್ಧಾಂತಗಳಿಂದ ತಿಳಿದಿದ್ದೇವೆ. ಆದರೆ ಅದು ಒಂದೇ ವಿಷಯ. ಎಲ್ಲವೂ ಆ ಒಂದು ವಿಷಯದ ವಿಸ್ತರಣೆಯೇ ಆಗಿದೆ.

ಇತ್ತೀಚೆಗೆ ಇಲ್ಲಿಗೆ ಪ್ರೊಫೆಸರ್. ಡಿ ಹೂರೆ ಎಂಬ ಒಬ್ಬರು ಮಹಾನ್ ವಿಜ್ಞಾನಿ ಬಂದಿದ್ದರು. ತಾನು ಕಳೆದ ೪೫ ವರ್ಷಗಳಿಂದ ವಸ್ತುವಿನ ಬಗ್ಗೆ ಅಧ್ಯಯನ ನಡೆಸುತ್ತಿರುವುದಾಗಿ ಅವರು ನನ್ನಲ್ಲಿ ಹೇಳಿದರು. ಅವರಂದರು, ’ಗುರುದೇವ, ನಾನು ವಸ್ತುವಿನ ಬಗ್ಗೆ ೪೫ ವರ್ಷಗಳ ಕಾಲ ಅಧ್ಯಯನ ನಡೆಸಿದೆ, ತಿಳಿದಿದ್ದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು! ಹಾಗಾಗಿ ಇವತ್ತು, ನಾನೊಂದು ಭಾಷಣವನ್ನು ಮಾಡುವಾಗ, ವಸ್ತುವು ಅಸ್ತಿತ್ವದಲ್ಲಿಲ್ಲವೆಂದೂ, ಅಸ್ತಿತ್ವದಲ್ಲಿರುವುದು ಕೇವಲ ತರಂಗಗಳೆಂದೂ ನಾನು ಹೇಳುವುದರಿಂದ, ನಾನು ಬೌದ್ಧ ಧರ್ಮ ಅಥವಾ ಯಾವುದೋ ಪೌರಾತ್ಯ ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿರುವೆನೆಂದು ಜನರು ಅಂದುಕೊಳ್ಳುತ್ತಾರೆ.’

ಇವತ್ತು ವಿಜ್ಞಾನವು ಅದೇ ತೀರ್ಮಾನಕ್ಕೆ ತಲುಪಿದೆ, ಅಂದರೆ, ಏನು ಕಾಣಿಸುವುದೋ ಅದು ನಿಜವಲ್ಲ ಮತ್ತು ಯಾವುದು ಕಾಣಿಸುವುದಿಲ್ಲವೋ ಅದು ನಿಜವಾದುದು ಹಾಗೂ ಅದುವೇ ಎಲ್ಲವೂ. ಆದುದರಿಂದ ಎಲ್ಲವೂ ವಾಸುದೇವನೇ.

ಈಗ, ಎಲ್ಲವೂ ವಾಸುದೇವನೆಂದು ನಾನು ಹೇಳುವಾಗ, ಇದರರ್ಥ ಒಂದು ನವಿಲುಗರಿಯ ಕಿರೀಟದೊಂದಿಗೆ, ಗಾಢ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ, ರಾಧಾಳ ಬದಿಯಲ್ಲಿ ಒಂದು ಮರದ ಕೆಳಗೆ ಒಂದು ಕೊಳಲನ್ನು ಹಿಡಿದುಕೊಂಡು ನಿಂತಿರುವ ಯಾರೋ ಒಬ್ಬನಿರುವನೆಂದು ಯೋಚಿಸಬೇಡಿ. ನೀವು ಹೀಗೆ ಯೋಚಿಸಿದರೆ, ಮುಂದೆ ನೀವು, ಕೈಯಲ್ಲಿ ಕೊಳಲು ಹಿಡಿದುಕೊಂಡು ಅವನು ಎಷ್ಟು ವರ್ಷಗಳಿಂದ ಹೀಗೆ ನಿಂತಿರುವನೆಂದೂ, ಯಾವತ್ತೂ ಕೊಳಲನ್ನು ಹಿಡಿದು ನಿಂತಿರುವುದರಿಂದ ಅವನ ಕೈಕಾಲುಗಳು ನೋಯುತ್ತಿರಬಹುದೆಂದೂ ಅಚ್ಚರಿಪಡುವಿರಿ (ನಗು). ಆದುದರಿಂದ ಅದನ್ನು ಈ ರೀತಿಯಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.

ಇದಕ್ಕಾಗಿಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ I
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ II’  (೯.೧೧)

ಅವನು ಅರ್ಜುನನಿಗೆ ಹೇಳುತ್ತಾನೆ, ’ಜನರು ನನ್ನನ್ನು ಒಬ್ಬ ಮಾನವನೆಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ, ನನ್ನನ್ನು ಗುರುತಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಯಾವುದರಿಂದ ಎಲ್ಲವೂ ಬಂದಿರುವುದೋ ಮತ್ತು ಯಾವುದರಿಂದಾಗಿ ಎಲ್ಲವೂ ಅಸ್ತಿತ್ವದಲ್ಲಿರುವುದೋ ಆ ಶುದ್ಧ ಚೇತನ ನಾನು.’

ಎಲ್ಲದರಲ್ಲೂ ಮತ್ತು ಎಲ್ಲರಲ್ಲೂ ವಾಸುದೇವನನ್ನು ನೋಡುವ ಅಂತಹ ಮಹಾತ್ಮರು ನಿಜಕ್ಕೂ ವಿರಳ.

’ವಾಸುದೇವನು ಎಲ್ಲದರಲ್ಲೂ ಇರುವನು, ಆದರೆ ನನ್ನಲ್ಲಲ್ಲ. ನಾನು ಕೇವಲ ಒಬ್ಬ ಸೇವಕ. ನಾನು ಏನೂ ಅಲ್ಲ, ಪರಮಾತ್ಮನ ಪಾದ ಧೂಳಿಗೂ ಅರ್ಹನಲ್ಲದವನು. ನಾನು ಬಹಳ ಅಲ್ಪನು’ ಎಂದು ಯೋಚಿಸುವ ಕೆಲವು ಜನರಿದ್ದಾರೆ. ಇಲ್ಲ, ಈ ರೀತಿ ಯೋಚಿಸಬೇಡಿ. ಎಲ್ಲವೂ ವಾಸುದೇವನಾಗಿದ್ದರೆ, ಆಗ ನೀವು ಕೂಡಾ ವಾಸುದೇವ. ನೀವು, ವಾಸುದೇವನಾಗಿರುವ ಎಲ್ಲದರ ಒಂದು ಭಾಗವಾಗಿರುವಿರಿ. ವಾಸುದೇವನನ್ನು ಮೀರಿದುದು ಏನೂ ಇಲ್ಲ.

ತಮ್ಮ ಅಂತರಾತ್ಮದೊಂದಿಗೆ ಆಳವಾಗಿ ಸಂಬಂಧ ಹೊಂದಿದ ಅಂತಹ ಜ್ಞಾನಿ ಆತ್ಮಗಳು ಬಹಳ ವಿರಳ.

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇನ್ಯದೇವತಾಃ I
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ II’  (೭.೨೦)

ತಮ್ಮ ಬಯಕೆಗಳನ್ನು ಈಡೆರಿಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ದೇವ ದೇವತೆಯರನ್ನು ಪೂಜಿಸುವ ಹಲವಾರು ಜನರಿದ್ದಾರೆ. ಕೆಲವರು ಭಗವಾನ್ ಹನುಮಂತನನ್ನು ಪೂಜಿಸುತ್ತಾರೆ, ಕೆಲವರು ಭಗವಾನ್ ಶಿವನ ಬಳಿಗೆ ಹೋಗುತ್ತಾರೆ ಮತ್ತು ಕೆಲವರು ಸಂತೋಷಿ ಮಾತೆಯ ಆಶೀರ್ವಾದವನ್ನು ಬೇಡುತ್ತಾರೆ, ಹೀಗೆ. ಅವರು ಎಲ್ಲಾ ಬೇರೆ ಬೇರೆ ದೇವತೆಗಳನ್ನು ಪೂಜಿಸುತ್ತಾರೆ ಮತ್ತು ಅವರು ಹಾಗೆ ಮಾಡುವುದರ ಹಿಂದೆ ಬೇರೆ ಬೇರೆ ಬಯಕೆಗಳಿರುತ್ತವೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ತಮ್ಮ ಬಯಕೆಗಳ ಈಡೇರುವಿಕೆಗಾಗಿ ಜನರು ವಿವಿಧ ದೇವತೆಗಳನ್ನು ಆರಾಧಿಸುತ್ತಾರೆ.
ಆದರೆ ಈ ಎಲ್ಲಾ ದೇವತೆಗಳ ಮೂಲಕ ಈ ಬಯಕೆಗಳನ್ನು ಈಡೇರಿಸುವ ಶಕ್ತಿಯು ನಾನು ಮತ್ತು ನಾನು ಮಾತ್ರವಾಗಿರುವೆನು. ಮತ್ತು ಯಾವ ಭಕ್ತಿಯಿಂದ ಜನರು ಈ ದೇವತೆಗಳನ್ನು ಆರಾಧಿಸುವರೋ ಅದು ಕೂಡಾ ನಾನಾಗಿರುವೆನು.’

ಪ್ರಪಂಚದಲ್ಲಿ ಇವತ್ತು ಹಲವಾರು ವಿವಿಧ ಧಾರ್ಮಿಕ ಸಮುದಾಯಗಳಿವೆ, ಕೇವಲ ಒಂದಲ್ಲ. ಮತ್ತು ಪ್ರತೀ ಧರ್ಮದ ಒಳಗೆ ಹಲವಾರು ಪಂಗಡಗಳಿವೆ. ಬೇರೆ ಬೇರೆ ಜನರು ಬೇರೆ ಬೇರೆ ಪಂಗಡಗಳಲ್ಲಿ ಶ್ರದ್ಧೆ ಹೊಂದಿದ್ದಾರೆ ಮತ್ತು ಆರಾಧಿಸುತ್ತಾರೆ. ಅದರಿಂದಾಗಿ ಅವರು ಸ್ವಲ್ಪ ಪುಣ್ಯವನ್ನೂ ಕೂಡಾ ಪಡೆಯುತ್ತಾರೆ.

ಕೆಲವರು ಯೇಸು ಕ್ರಿಸ್ತನನ್ನು ನಂಬುತ್ತಾರೆ, ಕೆಲವರು ಅಲ್ಲಾನನ್ನು ನಂಬುತ್ತಾರೆ, ಕೆಲವರು ಗುರು ಗ್ರಂಥ ಸಾಹಿಬ್‌ನಲ್ಲಿ (ಸಿಖ್ ಧರ್ಮದ ಪವಿತ್ರ ಗ್ರಂಥ), ಕೆಲವರು ಜೆಹೋವಾಹ್‌ನಲ್ಲಿ ನಂಬಿಕೆಯಿಡುತ್ತಾರೆ. ಯಾರು ಬೇಕಾದರೂ ಯಾವುದೇ ಧರ್ಮದಲ್ಲಿ ಶ್ರದ್ಧೆಯಿರಿಸಲಿ, ಅವರು ಖಂಡಿತವಾಗಿಯೂ ಅದರಿಂದ ಏನನ್ನಾದರೂ ಪಡೆಯುತ್ತಾರೆ. ಅವರಿಗೆ ಅದರಿಂದ ಏನೂ ಸಿಕ್ಕಿಲ್ಲದೇ ಇದ್ದರೆ, ಮೊದಲನೆಯದಾಗಿ ಅವರು ಶ್ರದ್ಧೆಯನ್ನು ಏಕೆ ಇಟ್ಟಿರುತ್ತಾರೆ?

ಅದೇ ರೀತಿಯಲ್ಲಿ, ಕೆಲವು ಜನರು ಕಾಳಿ ದೇವಿಯನ್ನು, ಕೆಲವರು ವೈಷ್ಣೋ ದೇವಿಯನ್ನು ನಂಬುತ್ತಾರೆ, ಅದೇ ವೇಳೆ ಕೆಲವು ಭಕ್ತರು, ತಮ್ಮ ಇಚ್ಛೆಗಳು ಅಮರನಾಥದಲ್ಲಿ (ಉತ್ತರ ಭಾರತದಲ್ಲಿರುವ ಶಿವಾರಾಧನೆಗಿರುವ ಪವಿತ್ರ ಸ್ಥಳಗಳಲ್ಲಿ ಒಂದು) ಈಡೇರುತ್ತವೆಯೆಂದು ತಿಳಿಯುತ್ತಾರೆ.

ಅಮರನಾಥ ಗುಡಿಯು, ಪ್ರಕೃತಿಯ ಯಾವುದೋ ನಿಯಮಕ್ಕನುಸಾರವಾಗಿ ರೂಪುಗೊಳ್ಳುವ ಹಿಮದ ಒಂದು ಗಟ್ಟಿಯಲ್ಲದೆ ಬೇರೇನೂ ಅಲ್ಲವೆಂದು, ಅಲ್ಲಿಗೆ ಹೋಗುವುದಾದರೂ ಯಾಕೆಂದು ಯಾರಾದರೂ ಯೋಚಿಸಬಹುದು. ಇಲ್ಲ, ಜನರು ಅಲ್ಲಿಗೆ ತಮ್ಮೆಲ್ಲಾ ಭಕ್ತಿಯೊಂದಿಗೆ ಹೋಗುತ್ತಾರೆ. ಭಕ್ತರಿಗೆ, ಆ ದೇವಾಲಯವು ದೈವತ್ವವನ್ನು ಪ್ರತಿನಿಧಿಸುತ್ತದೆ ಮತ್ತು ಅದು ಕೇವಲ ಒಂದು ಹಿಮದ ಗಟ್ಟಿಯಲ್ಲ. ಅವರು ಅದರಲ್ಲಿ ಭಗವಾನ್ ಶಿವನನ್ನು ನೋಡುತ್ತಾರೆ ಮತ್ತು ಅದನ್ನು ಭಕ್ತಿಯ ಒಂದು ಭಾವನೆಯೊಂದಿಗೆ ಪೂಜಿಸುತ್ತಾರೆ. ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಯಾರಾದರೂ ಯಾವುದೇ ದೇವತೆಯನ್ನು ಪೂಜಿಸಲಿ, ಅವರಿಗೆ ಅವರ ಪೂಜೆಯ ಫಲಗಳನ್ನು ನೀಡುವುದು ನಾನೇ.’

ಎಲ್ಲರಿಗೂ ಎಲ್ಲವನ್ನೂ ಕೊಡುತ್ತಿರುವುದು ಒಂದು ಶುದ್ಧ ಚೇತನ. ಯಾರಾದರೂ ಹಜ್‌ನಂತಹ ಪವಿತ್ರ ಯಾತ್ರೆಗೆ ಹೋಗುವಾಗ, ಅವರಿಗೆ ಖಂಡಿತವಾಗಿ ಅದರಿಂದ ಸ್ವಲ್ಪ ಆನಂದ ಸಿಗುತ್ತದೆ. ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಈ ಆನಂದವನ್ನು ಕೊಡುವವನು ನಾನು ಈ ಆನಂದವು ಬರುವುದು ನನ್ನಿಂದ ಮತ್ತು ನನ್ನಿಂದ ಮಾತ್ರ.’

ನಾನು ನಿಮಗೆ ಮತ್ತೆ ಹೇಳುತ್ತೇನೆ, ’ನಾನು’ ಎಂದರೆ, ಒಂದು ನವಿಲುಗರಿಯ ಕಿರೀಟದೊಂದಿಗೆ, ಗಾಢ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿರುವ ಯಾರೋ ಒಬ್ಬರಲ್ಲ. ಇದನ್ನು ಹೇಳುತ್ತಿರುವುದು ಒಂದು ಶುದ್ಧ ಚೇತನ ಮತ್ತು ಅದು ಎಲ್ಲೆಡೆಯೂ, ಎಲ್ಲದರಲ್ಲೂ ಇದೆ. ಅದುವೇ ವಾಸುದೇವ.

ಅಪರ ಪ್ರಕೃತಿ ಮತ್ತು ಪರ ಪ್ರಕೃತಿ ಎರಡನ್ನೂ ಜೊತೆಯಲ್ಲಿ ತನ್ನೊಳಗೆಯೇ ಹಿಡಿದಿಟ್ಟುಕೊಳ್ಳುವ ಆ ತತ್ವವು ವಾಸುದೇವ ಆಗಿದೆ. ಮತ್ತು,

’ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ I
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ II’  (೭.೨೧)

ಹೀಗೆಂದು ಹೇಳುತ್ತಿರುವುದು ಆ ವಾಸುದೇವ.

’ಯಾರೇ ಆಗಿರಲಿ ಮತ್ತು ಯಾವುದೇ ಶ್ರದ್ಧೆಯ ಮೂಲಕ ನನ್ನ ಬಳಿಗೆ ಬಂದಿರಲಿ, ಅವರ ಪೂಜೆಯ ಫಲಗಳನ್ನು ಅವರ ಭಕ್ತಿಗನುಸಾರವಾಗಿ ನಾನು ಅನುಗ್ರಹಿಸುತ್ತೇನೆ. ಮತ್ತು ಈ ಭಕ್ತಿಯನ್ನು ಕೊಡುವವನು ಕೂಡಾ ನಾನೇ. ಹೀಗೆ, ಭಕ್ತಿಯೂ ನಾನೇ, ಆರಾಧನೆಯೂ ನಾನೇ, ಮತ್ತು ಫಲವೂ ಕೂಡಾ ನನ್ನಿಂದಲೇ ಬರುತ್ತದೆ. ಆದರೆ ಈ ಫಲಗಳು ಕೇವಲ ತಾತ್ಕಾಲಿಕ. ಹೀಗಿದ್ದರೂ, ಜ್ಞಾನಿಯಾದವನೊಬ್ಬನು ನನ್ನನ್ನು ನನ್ನ ನಿಜವಾದ ಸ್ವಭಾವದಿಂದ ತಿಳಿಯುವನು ಮತ್ತು ಆದ್ದರಿಂದ ಎಲ್ಲಾ ನಾಲ್ಕು ವಿಧದ ಜನರಲ್ಲಿ ಅವನು ಶ್ರೇಷ್ಠನು.’

ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಿರುವ ಯಾರೇ ಆದರೂ ಇದನ್ನೇ ಹೇಳಿರುವರು; ಒಂದೇ ಒಂದು ಇರುವುದು (ಚೇತನ). ಅಂತಹ ಜನರಿಗೆ ಎಲ್ಲದರಲ್ಲೂ ಇರುವ ಏಕತ್ವವನ್ನು ಕಾಣಲು ಸಾಧ್ಯವಾಗುತ್ತದೆ.

ಇದನ್ನು ನೋಡದಿರುವವರು ಯಾರೆಂದರೆ, ಪ್ರಪಂಚದಲ್ಲಿ ಜಗಳಗಳು ಮತ್ತು ಬಾಂಧವ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವವರು. ಅವರು ಧರ್ಮಗ್ರಂಥಗಳನ್ನು ಎತ್ತುತ್ತಾರೆ ಮತ್ತು, ’ನಾನು ಹೇಳಿದ್ದೇ ಸರಿ’ ಅಥವಾ ’ನನ್ನ ಧರ್ಮವೇ ಶ್ರೇಷ್ಠ’ ಎಂದು ಯೋಚಿಸುತ್ತಾ ತಮ್ಮ ತಮ್ಮಲ್ಲಿಯೇ ವಾದಿಸುತ್ತಾರೆ. ಆದರೆ, ಭಕ್ತಿಯ ಪರಾಕಾಷ್ಠೆಯನ್ನು ತಲುಪಿದ ಜ್ಞಾನಿಯೊಬ್ಬನು ಎಲ್ಲದರಲ್ಲೂ ದೇವರನ್ನು ಮಾತ್ರ ಕಾಣುತ್ತಾನೆ.